Upload folder using huggingface_hub
Browse filesThis view is limited to 50 files because it contains too many changes.
See raw diff
- BKMurli/BKMurli/page_1.txt +8 -0
- BKMurli/BKMurli/page_10.txt +10 -0
- BKMurli/BKMurli/page_100.txt +6 -0
- BKMurli/BKMurli/page_1000.txt +6 -0
- BKMurli/BKMurli/page_1001.txt +6 -0
- BKMurli/BKMurli/page_1002.txt +7 -0
- BKMurli/BKMurli/page_1003.txt +8 -0
- BKMurli/BKMurli/page_1004.txt +12 -0
- BKMurli/BKMurli/page_1005.txt +8 -0
- BKMurli/BKMurli/page_1006.txt +7 -0
- BKMurli/BKMurli/page_1007.txt +6 -0
- BKMurli/BKMurli/page_1008.txt +7 -0
- BKMurli/BKMurli/page_1009.txt +9 -0
- BKMurli/BKMurli/page_101.txt +12 -0
- BKMurli/BKMurli/page_1010.txt +8 -0
- BKMurli/BKMurli/page_1011.txt +13 -0
- BKMurli/BKMurli/page_1012.txt +10 -0
- BKMurli/BKMurli/page_1013.txt +7 -0
- BKMurli/BKMurli/page_1014.txt +6 -0
- BKMurli/BKMurli/page_1015.txt +7 -0
- BKMurli/BKMurli/page_1016.txt +7 -0
- BKMurli/BKMurli/page_1017.txt +8 -0
- BKMurli/BKMurli/page_1018.txt +9 -0
- BKMurli/BKMurli/page_1019.txt +6 -0
- BKMurli/BKMurli/page_102.txt +9 -0
- BKMurli/BKMurli/page_1020.txt +8 -0
- BKMurli/BKMurli/page_1021.txt +9 -0
- BKMurli/BKMurli/page_1022.txt +7 -0
- BKMurli/BKMurli/page_1023.txt +7 -0
- BKMurli/BKMurli/page_1024.txt +8 -0
- BKMurli/BKMurli/page_1025.txt +9 -0
- BKMurli/BKMurli/page_1026.txt +8 -0
- BKMurli/BKMurli/page_1027.txt +7 -0
- BKMurli/BKMurli/page_1028.txt +6 -0
- BKMurli/BKMurli/page_1029.txt +8 -0
- BKMurli/BKMurli/page_103.txt +6 -0
- BKMurli/BKMurli/page_1030.txt +8 -0
- BKMurli/BKMurli/page_1031.txt +7 -0
- BKMurli/BKMurli/page_1032.txt +12 -0
- BKMurli/BKMurli/page_1033.txt +7 -0
- BKMurli/BKMurli/page_1034.txt +8 -0
- BKMurli/BKMurli/page_1035.txt +6 -0
- BKMurli/BKMurli/page_1036.txt +8 -0
- BKMurli/BKMurli/page_1037.txt +8 -0
- BKMurli/BKMurli/page_1038.txt +7 -0
- BKMurli/BKMurli/page_1039.txt +15 -0
- BKMurli/BKMurli/page_104.txt +7 -0
- BKMurli/BKMurli/page_1040.txt +8 -0
- BKMurli/BKMurli/page_1041.txt +6 -0
- BKMurli/BKMurli/page_1042.txt +5 -0
BKMurli/BKMurli/page_1.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಕ್ಕಳಿಗೆ ಯೋಗವನ್ನು ಕಲಿಸಿದೆನು. ಮತ್ತೆಲ್ಲಾ ಸೆಂಟರ್ಗಳಲ್ಲಿ ಎಲ್ಲರೂ ತಾವೇ ಕಲಿಯುತ್ತಾರೆ. ಕಲಿಸುವವರು ತಂದೆಯಾಗಿರುವುದಿಲ್ಲ. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ತಾವೇ ಕಲಿಸುತ್ತಾರೆ. ಆದರೆ ಇಲ್ಲಿ (ಮಧುಬನ)ತಂದೆಯೇ ಕುಳಿತು ಮಕ್ಕಳಿಗೆ ಕಲಿಸಿಕೊಡುತ್ತಾರೆ. ರಾತ್ರಿ-ಹಗಲಿನ ಅಂತರವಿದೆ. ಸೇವಾಸ್ಥಾನ(ಸೆಂಟರ್)ಗಳಲ್ಲಿ ಬಹಳ ಮಿತ್ರಸಂಬಂಧಿಗಳು ನೆನಪಿಗೆ ಬರುತ್ತಿರುತ್ತಾರೆ. ಆದ್ದರಿಂದ ಇಷ್ಟೊಂದು ನೆನಪು ಮಾಡಲು ಆಗುವುದಿಲ್ಲ. ಆ ಕಾರಣ ಆತ್ಮಾಭಿಮಾನಿಯಾಗುವುದು ಬಹಳ ಕಷ್ಟವಾಗುತ್ತದೆ.ಮಧುಬನದಲ್ಲಿ ನೀವು ಬಹಳಷ್ಟು ಬೇಗ ಆತ್ಮಾಭಿಮಾನಿಗಳಾಗಬೇಕು. ಆದರೆ ಅನೇಕರಿಗೆ ಏನೂ ಅರ್ಥವಾಗುವುದಿಲ್ಲ. ಶಿವತಂದೆಯು ನಮ್ಮ ಸೇವೆ ಮಾಡುತ್ತಿದ್ದಾರೆ. ನಮಗೆ ತಿಳಿಸುತ್ತಿದ್ದಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಯಾವ ತಂದೆಯು ಈ ಬ್ರಹ್ಮಾರವರಲ್ಲಿ ವಿರಾಜಮಾನನಾಗಿದ್ದಾರೆ. ಇಲ್ಲಿ ವಿರಾಜಮಾನವಾಗಿದ್ದಾರೆಂಬ ನಿಶ್ಚಯವು ಅನೇಕರಿಗೆ ಇರುವುದೇ ಇಲ್ಲ. ನಾವು ಹೇಗೆ ನಿಶ್ಚಯವಿಡುವುದು ಎಂದು ಅನ್ಯರು ಹೇಳುತ್ತಾರೆಯೋ ಅಂತಹವರು ಇಲ್ಲಿಯೂ ಸಹ ಇದ್ದಾರೆ. ಒಂದುವೇಳೆ ಪೂರ್ಣ ನಿಶ್ಚಯವಿದ್ದರೆ ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ತಮ್ಮಲ್ಲಿ ಶಕ್ತಿಯನ್ನು ತುಂಬಿಕೊಳ್ಳುತ್ತಾ ಬಹಳಷ್ಟು ಸೇವೆ ಮಾಡುತ್ತಾರೆ. ಏಕೆಂದರೆ ಇಡೀ ವಿಶ್ವವನ್ನು ಪಾವನ ಮಾಡಬೇಕಲ್ಲವೆ. ಯೋಗದಲ್ಲಿ ಕೊರತೆಯಿದ್ದರೆ ಜ್ಞಾನದಲ್ಲಿಯೂ ಕೊರತೆಯಿರುತ್ತದೆ. ಕೇಳುವುದಂತೂ ಕೇಳುತ್ತಾರೆ ಆದರೆ ಧಾರಣೆಯಾಗುವುದಿಲ್ಲ. ಒಂದುವೇಳೆ ಧಾರಣೆಮಾಡಿದರೆ ಮತ್ತೆ ಅನ್ಯರಿಗೂ ಧಾರಣೆ ಮಾಡಿಸುತ್ತಾರೆ. ತಂದೆಯು ತಿಳಿಸಿದ್ದರು- ಹೇಗೆ ಅವರು ಸಮ್ಮೇಳನ ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ. ವಿಶ್ವದಲ್ಲಿ ಶಾಂತಿಸ್ಥಾಪನೆಯಾಗಲೆಂದು ಇಚ್ಛಿಸುತ್ತಿರುತ್ತಾರೆ. ವಿಶ್ವದಲ್ಲಿ ಶಾಂತಿಯು ಯಾವಾಗ ಇತ್ತು ಯಾವ ಪ್ರಕಾರವಾಗಿ ಸ್ಥಾಪನೆಯಾಗಿತ್ತು ಎಂಬುದೇನೂ ತಿಳಿದುಕೊಂಡಿಲ್ಲ. ಯಾವ ಪ್ರಕಾರದ ಶಾಂತಿಯಿತ್ತೋ ಅದೇ ಬೇಕಲ್ಲವೆ ಇದನ್ನಂತೂ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ವಿಶ್ವದಲ್ಲಿ ಸುಖ-ಶಾಂತಿಯ ಸ್ಥಾಪನೆಯು ಈಗಲೇ ಆಗುತ್ತಿದೆ. ತಂದೆಯು ಬಂದಿದ್ದಾರೆ ಹೇಗೆ ಈ ದಿಲ್ವಾಡಾ ಮಂದಿರವಿದೆ. ಆದಿದೇವನೂ ಇದ್ದಾರೆ. ಮತ್ತೆ ಮೇಲೆ ವಿಶ್ವದಲ್ಲಿ ಶಾಂತಿಯ ಚಿತ್ರವೂ ಇದೆ. ಎಲ್ಲಿಯೇ ಸಮ್ಮೇಳನಕ್ಕೆ ನಿಮಗೆ ನಿಮಂತ್ರಣ ನೀಡುತ್ತಾರೆಂದರೆ ನೀವು ಅವರಿಗೆ ಕೇಳಿ- ವಿಶ್ವದಲ್ಲಿ ಯಾವ ಪ್ರಕಾರದ ಶಾಂತಿಯು ಬೇಕು? ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ವಿಶ್ವದಲ್ಲಿ ಶಾಂತಿಯಿತ್ತು, ದಿಲ್ವಾಡಾ ಮಂದಿರದಲ್ಲಿ ಇದರ ಪೂರ್ಣ ನೆನಪಾರ್ಥವಿದೆ. ವಿಶ್ವದಲ್ಲಿ ಶಾಂತಿಯಿತ್ತೆಂದು ಸಾಕ್ಷ್ಯಾಧಾರವು ಬೇಕಲ್ಲವೆ. ಲಕ್ಷ್ಮೀ-ನಾರಾಯಣ ಚಿತ್ರದಿಂದ ಜನರು ತಿಳಿದುಕೊಳ್ಳುವುದಿಲ್ಲ. ಕಲ್ಲುಬುದ್ಧಿ���ವರಾಗಿದ್ದಾರಲ್ಲವೆ, ಆದ್ದರಿಂದ ಅವರಿಗೆ ನೀವೇ ತಿಳಿಸಿರಿ- ವಿಶ್ವದಲ್ಲಿ ಶಾಂತಿಯ ಸಾಕ್ಷಿ ಈ ಲಕ್ಷ್ಮೀ-ನಾರಾಯಣ ಮತ್ತು ಇವರ ರಾಜಧಾನಿಯನ್ನು ತೋರಿಸಲಾಗುತ್ತದೆಯಲ್ಲವೆ. ಅದನ್ನು ಅಬುಪರ್ವತದಲ್ಲಿ ಬಂದು ನೋಡಿ, ಅದರ ಮಾದರಿಯನ್ನೇ ತಿಳಿದುಕೊಂಡಿಲ್ಲ ಅವರೇ ಕುಳಿತು ಈ ನೆನಪಾರ್ಥ ಮಂದಿರವನ್ನು ಮಾಡಿದ್ದಾರೆ ಇದಕ್ಕೆ ದಿಲ್ವಾಡಾ ಮಂದಿರವೆಂದು ಹೆಸರಿಟ್ಟಿದ್ದಾರೆ ಆದಿದೇವನನ್ನೂ ಕೂರಿಸಿದ್ದಾರೆ ಮೇಲೆ ಸ್ವರ್ಗವನ್ನೂ ತೋರಿಸಿದ್ದಾರೆ. ಹೇಗೆ ಅದು ಜಡವಾಗಿದೆಯೋ ಹಾಗೆಯೇ ನೀವು ಚೈತನ್ಯವಾಗಿದ್ದೀರಿ. ಇದಕ್ಕೆ (ಮಧುಬನ) ಚೈತನ್ಯ ದಿಲ್ವಾಲ ಮಂದಿರವೆಂದು ಹೆಸರಿನ್ನಿಡಬಹುದು. ಆದರೆ ಇದು ಎಲ್ಲರಿಗೆ ತಿಳಿದರೆ ಎಷ್ಟು ಜನರ ಗುಂಪಾಗುತ್ತದೋ ಗೊತ್ತಿಲ್ಲ! ಇದೇನೆಂದು ಮನುಷ್ಯರೇ ತಬ್ಬಿಬ್ಬಾಗುತ್ತಾರೆ. ತಿಳಿಸುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ. ಇದನ್ನು ಕೆಲವರು ಮಕ್ಕಳೂ ಸಹ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಭಲೇ ಇದೇ ಸ್ಥಾನದಲ್ಲಿ ಕುಳಿತಿದ್ದಾರೆ, ಹತ್ತಿರದಲ್ಲಿದ್ದಾರೆ ಆದರೆ ಸತ್ಯವನ್ನೇ ತಿಳಿದುಕೊಂಡಿಲ್ಲ. ಪ್ರದರ್ಶನಿಯಲ್ಲಿ ಅನೇಕ ಪ್ರಕಾರದ ಮನುಷ್ಯರು ಹೋಗುತ್ತಾರೆ. ಅನೇಕ ಮಠ-ಪಂಥಗಳಿವೆ ವೈಷ್ಣವ ಧರ್ಮದವರೂ ಇದ್ದಾರೆ ವೈಷ್ಣವ ಧರ್ಮದ ಅರ್ಥವನ್ನೇ ತಿಳಿದುಕೊಂಡಿಲ್ಲ. ಕೃಷ್ಣನ ರಾಜಧಾನಿ ಎಲ್ಲಿದೆ ಎಂದು ತಿಳಿದುಕೊಂಡೇ ಇಲ್ಲ. ಕೃಷ್ಣನ ರಾಜಧಾನಿಗೆ ಸ್ವರ್ಗ, ವೈಕುಂಠವೆಂದು ಹೇಳಲಾಗುತ್ತದೆ.
|
2 |
+
ತಂದೆಯು ತಿಳಿಸಿದ್ದರು- ನಿಮಗೆ ಎಲ್ಲಿಂದಲೇ ನಿಮಂತ್ರಣ ಸಿಗಲಿ, ಅಲ್ಲಿಗೆ ಹೋಗಿ ತಿಳಿಸಿ- ವಿಶ್ವದಲ್ಲಿ ಶಾಂತಿಯು ಯಾವಾಗ ಇತ್ತು? ಈ ಅಬುಪರ್ವತವು ಎಲ್ಲದಕ್ಕಿಂತ ಶ್ರೇಷ್ಠಸ್ಥಾನವಾಗಿದೆ. ಏಕೆಂದರೆ ತಂದೆಯು ವಿಶ್ವದ ಸದ್ಗತಿ ಮಾಡುತ್ತಿದ್ದಾರೆ. ಅಬುಪರ್ವತದ ಮೇಲೆ ಅದರ ಮಾದರಿಯನ್ನು ನೋಡಬೇಕೆಂದರೆ ಹೋಗಿ ದಿಲ್ವಾಡಾ ಮಂದಿರವನ್ನು ನೋಡಿ, ವಿಶ್ವದಲ್ಲಿ ಶಾಂತಿಯನ್ನು ಹೇಗೆ ಸ್ಥಾಪನೆ ಮಾಡಲಾಗಿತ್ತು ಎಂಬುದರ ಮಾದರಿಯಿದೆ. ಇದನ್ನು ಕೇಳಿ ಬಹಳ ಖುಷಿಯಾಗುತ್ತಾರೆ. ಜೈನರೂ ಸಹ ಖುಷಿಯಾಗುತ್ತಾರೆ. ಈ ಪ್ರಜಾಪಿತ ಬ್ರಹ್ಮಾರವರು ನಮ್ಮ ತಂದೆ ಆದಿದೇವನಾಗಿದ್ದಾರೆ ಎಂದು ನೀವು ಹೇಳುತ್ತೀರಿ. ನೀವು ತಿಳಿಸಿದರೂ ಸಹ ಅವರು ತಿಳಿದುಕೊಳ್ಳುವುದಿಲ್ಲ. ಈ ಬ್ರಹ್ಮಾಕುಮಾರಿಯರು ಏನೂ ಹೇಳುತ್ತಾ ಗೊತ್ತಿಲ್ಲ ಎನ್ನುತ್ತಾರೆ. ಆದ್ದರಿಂದ ಈಗ ನೀವು ಮಕ್ಕಳು ಅಬುವಿನ ಬಹಳ ಮಹಿಮೆ ಮಾಡಿ ತಿಳಿಸಬೇಕು. ಅಬುಪರ್ವತವು ದೊಡ್ಡದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ಬಾಂಬೆಯಲ್ಲಿಯೂ ಸಹ ನೀವು ತಿಳಿಸಬಹುದು- ಅಬುಪರ್ವತವು ಅತಿದೊಡ್ಡ ತೀರ್ಥಸ್ಥಾನವಾಗಿದೆ. ಏಕೆಂದರೆ ಪರಮಪಿತ ಪರಮಾತ್ಮನು ಅಬುವಿನಲ್ಲಿ ಬಂದು ಸ್ವರ್ಗಸ್ಥಾಪನೆ ಮಾಡಿದ್ದಾರೆ. ಇದನ್ನು ಯಾವುದೇ ಮನುಷ್ಯರು ಅರಿತುಕೊಂಡಿಲ್ಲ. ಈಗ ನಾವು ತಿಳಿದುಕೊಂಡಿದ್ದೇವೆ- ನಿಮಗಿದು ಗೊತ್ತಿಲ್ಲ ಆದ್ದರಿಂದ ನಾವು ನಿಮಗೆ ತಿಳಿಸುತ್ತೇವೆ. ವಿಶ್ವದಲ್���ಿ ಯಾವ ಪ್ರಕಾರದ ಶಾಂತಿಯನ್ನು ಬಯಸುತ್ತೀರಿ. ಅದನ್ನು ಎಂದಾದರೂ ನೋಡಿದ್ದೀರಾ? ಎಂದು ಮೊಟ್ಟಮೊದಲಿಗೆ ನೀವು ಅವರನ್ನು ಕೇಳಿ. ವಿಶ್ವದಲ್ಲಿ ಶಾಂತಿಯು ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಒಂದೇ ಆದಿಸನಾತನ ದೇವಿ-ದೇವತಾಧರ್ಮವಿತ್ತು, ಇವರ ವಂಶಾವಳಿಯ ರಾಜ್ಯವಿತ್ತು. ನೀವು ಬಂದರೆ ಇವರ ರಾಜಧಾನಿಯ ಮಾದರಿಯನ್ನು ಅಬುಪರ್ವತದಲ್ಲಿ ನಿಮಗೆ ತೋರಿಸುತ್ತೇವೆ. ಇದಂತೂ ಹಳೆಯ ಪತಿತ ಪ್ರಪಂಚವಾಗಿದೆ. ಇದಕ್ಕೆ ಹೊಸಪ್ರಪಂಚವೆಂದಂತೂ ಹೇಳುವುದಿಲ್ಲ. ಹೊಸಪ್ರಪಂಚದ ಮಾದರಿಯಂತೂ ಅಬುವಿನಲ್ಲಿದೆ ಹೊಸ ಪ್ರಪಂಚವು ಈಗ ಸ್ಥಾಪನೆಯಾಗುತ್ತಾ ಇದೆ. ನೀವು ಮಕ್ಕಳಿಗೆ ಗೊತ್ತಿದೆ ಆದ್ದರಿಂದಲೇ ತಿಳಿಸುತ್ತೀರಿ. ಎಲ್ಲರಿಗೂ ತಿಳಿದೂ ಇಲ್ಲ, ಅವರು ತಿಳಿಸುವುದೂ ಇಲ್ಲ ಅರ್ಥವಾಗುವುದೂ ಇಲ್ಲ ಬಹಳ ಸಹಜಮಾತಾಗಿದೆ. ಮೇಲೆ ಸ್ವರ್ಗದ ರಾಜಧಾನಿಯು ನಿಂತಿದೆ. ಕೆಳಗೆ ಆದಿದೇವನು ಕುಳಿತಿದ್ದಾರೆ. ಇವರಿಗೆ ಆಡಂ ಎಂತಲೂ ಹೇಳುತ್ತಾರೆ. ಅವರು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುತ್ತಾರೆ. ಹೀಗೆ ನೀವು ಮಹಿಮೆಯನ್ನು ತಿಳಿಸುತ್ತೀರೆಂದರೆ ಕೇಳಿ ಬಹಳ ಖುಷಿಯಾಗುತ್ತಾರೆ. ಅಂತೆಯೇ ಇದು ಬಹಳ ನಿಖರವಾಗಿದೆ. ಹೇಳಿ-ನೀವು ಕೃಷ್ಣನ ಮಹಿಮೆಯನ್ನು ಮಾಡುತ್ತೀರಿ. ಆದರೆ ನೀವು ಏನನ್ನೂ ತಿಳಿದುಕೊಂಡಿಲ್ಲ. ಕೃಷ್ಣನ ವೈಕುಂಠದ ಮಹಾರಾಜ, ವಿಶ್ವದ ಮಾಲೀಕನಾಗಿದ್ದಾನೆ. ಅದರ ಮಾದರಿಯನ್ನು ನೀವು ನೋಡಬೇಕೆಂದರೂ ನಡೆಯಿರಿ, ಅಬುಪರ್ವತದಲ್ಲಿ ನಿಮಗೆ ವೈಕುಂಠದ ಮಾದರಿಯನ್ನು ತೋರಿಸುತ್ತೇವೆ. ಹೇಗೆ ಪುರುಷೋತ್ತಮ ಸಂಗಮಯುಗದಲ್ಲಿ ರಾಜಯೋಗವನ್ನು ಕಲಿತು ವಿಶ್ವದ ಮಾಲೀಕರಾಗುತ್ತಾರೆ- ಆ ಮಾದರಿಯನ್ನೂ ತೋರಿಸುತ್ತೇವೆ. ಸಂಗಮಯುಗದ ತಪಸ್ಸನ್ನು ತೋರಿಸುತ್ತೇವೆ. ಪ್ರತ್ಯಕ್ಷಜೀವನದಲ್ಲಿ ಏನಾಗಿತ್ತೋ ಅದರ ನೆನಪಾರ್ಥವನ್ನು ತೋರಿಸುತ್ತೇವೆ. ಯಾವ ತಂದೆಯು ಲಕ್ಷ್ಮೀ-ನಾರಾಯಣರ ರಾಜ್ಯವನ್ನು ಸ್ಥಾಪನೆ ಮಾಡುವರೋ ಅವರದೂ ಚಿತ್ರವಿದೆ. ಜಗದಂಬೆಯ ಚಿತ್ರವೂ ಇದೆ. ಜಗದಂಬೆ 10-20 ಭುಜಗಳೂ ಇಲ್ಲ, ಎರಡೇ ಭುಜಗಳಿರುತ್ತವೆ. ನೀವು ಬಂದರೆ ನಿಮಗೆ ತೋರಿಸುತ್ತೇವೆ. ವೈಕುಂಠವನ್ನೂ ಅಬುವಿನಲ್ಲಿ ತೋರಿಸುತ್ತೇವೆ. ಅಬುಪರ್ವತದಲ್ಲಿಯೇ ತಂದೆಯು ಬಂದು ಇಡೀ ವಿಶ್ವವನ್ನು ಸ್ವರ್ಗವನ್ನಾಗಿ ಮಾಡಿದ್ದಾರೆ. ಸದ್ಗತಿಯನ್ನು ಕೊಟ್ಟಿದ್ದಾರೆ. ಅಬುಪರ್ವತವು ಎಲ್ಲದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ಎಲ್ಲಾ ಧರ್ಮದವರ ಸದ್ಗತಿ ಮಾಡುವಂತಹ ತಂದೆಯು ಒಬ್ಬರೇ ಆಗಿದ್ದಾರೆ. ನೀವು ಬಂದರೆ ಅದರ ನೆನಪಾರ್ಥವನ್ನು ಅಬುನಲ್ಲಿ ತೋರಿಸುತ್ತೇವೆ. ನೀವು ಮಕ್ಕಳಂತೂ ಅಬುವಿನ ಮಹಿಮೆಯನ್ನು ಬಹಳಷ್ಟು ಮಾಡಬಹುದು. ಕ್ರಿಶ್ಚಿಯನ್ನರೂ ಸಹ ಭಾರತದ ಪ್ರಾಚೀನ ರಾಜಯೋಗವನ್ನು ಯಾರು ಕಲಿಸಿದರು, ಅದು ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಬಹಳ ಬಯಸುತ್ತಾರೆ. ಅವರಿಗೆ ಹೇಳಿ, ನಾವು ನಿಮಗೆ ಅಬುವಿನಲ್ಲಿ ತೋರಿಸುತ್ತೇವೆ. ವೈಕುಂಠದ ಪೂರ್ಣದೃಶ್ಯಗಳನ್ನು ಮಂದಿರದ ಮೇಲ���ಭಾಗದಲ್ಲಿ ತೋರಿಸುತ್ತಾರೆ. ನೀವು ಈ ರೀತಿ ಮಾಡಲು ಸಾಧ್ಯವಿಲ್ಲವೆಂಬುದನ್ನು ಬಹಳ ಚೆನ್ನಾಗಿ ತಿಳಿಸಬೇಕು. ಯಾತ್ರಿಕರು ಬಹಳಷ್ಟು ಸುತ್ತಾಡುತ್ತಾರೆ, ಅವರೂ ಸಹ ಬಂದು ತಿಳಿದುಕೊಳ್ಳಲಿ. ನಿಮ್ಮ ಅಬುವಿನ ಹೆಸರು ಪ್ರಸಿದ್ಧವಾಗಿಬಿಟ್ಟರೆ ಅನೇಕರು ಬರುತ್ತಾರೆ. ಅಬುಪರ್ವತವು ಬಹಳ ಹೆಸರುವಾಸಿಯಾಗಿಬಿಡುತ್ತದೆ. ವಿಶ್ವದಲ್ಲಿ ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂಬುದು ಯಾರಾದರೂ ಕೇಳಿದರೆ ಅಥವಾ ಸಮ್ಮೇಳನಕ್ಕಾಗಿ ನಿಮಗೆ ನಿಮಂತ್ರಣ ಕೊಟ್ಟರೆ ಆಗ ಅಲ್ಲಿ ಕೇಳಬೇಕು. ವಿಶ್ವದಲ್ಲಿ ಶಾಂತಿಯು ಯಾವಾಗ ಇತ್ತು, ಅದನ್ನು ತಿಳಿದುಕೊಂಡಿದ್ದೀರಾ? ವಿಶ್ವದಲ್ಲಿ ಶಾಂತಿಯು ಹೇಳಿತ್ತೆಂಬುದನ್ನು ನಡೆಯಿರಿ ನಾವು ತಿಳಿಸುತ್ತೇವೆ ಮತ್ತು ಅದರ ಎಲ್ಲಾ ಮಾದರಿಗಳನ್ನು ತೋರಿಸುತ್ತೇವೆ. ಇಂತಹ ಮಾದರಿಯು ಮತ್ತೆಲ್ಲಿಯೂ ಇಲ್ಲ. ಅಬುಪರ್ವತವು ಎಲ್ಲದಕ್ಕಿಂತ ದೊಡ್ಡದಕ್ಕಿಂತ ದೊಡ್ಡ ತೀರ್ಥಸ್ಥಾನವಾಗಿದೆ. ಇಲ್ಲಿ ತಂದೆಯು ಬಂದು ವಿಶ್ವದಲ್ಲಿ ಶಾಂತಿ, ಸರ್ವರ ಸದ್ಗತಿ ಮಾಡಿದ್ದಾರೆ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಭಲೇ ದೊಡ್ಡ-ದೊಡ್ಡ ಮಹಾರಥಿಗಳು, ಮ್ಯೂಸಿಯಂ ಇತ್ಯಾದಿಗಳನ್ನು ಸಂಭಾಲನೆ ಮಾಡುವವರಿದ್ದಾರೆ. ಆದರೆ ಅನ್ಯರಿಗೆ ಸರಿಯಾದ ರೀತಿಯಲ್ಲಿ ತಿಳಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡುತ್ತಾರಲ್ಲವೆ. ತಂದೆಗೆ ಎಲ್ಲವೂ ಗೊತ್ತಿದೆ, ಯಾರು ಯಾರು ಎಲ್ಲೆಲ್ಲಿಯೇ ಇರಲಿ ಎಲ್ಲರನ್ನೂ ತಿಳಿದುಕೊಂಡಿದ್ದಾರೆ. ಒಂದು ವೇಳೆ ಶರೀರವನ್ನು ಬಿಟ್ಟರೆ ಏನೂ ಪದವಿಯನ್ನು ಪಡೆಯುವುದಿಲ್ಲ. ನೆನಪಿನ ಯಾತ್ರೆಯ ಪರಿಶ್ರಮವನ್ನು ಅವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯು ಪ್ರತಿನಿತ್ಯವೂ ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ- ಹೀಗೀಗೆ ತಿಳಿಸಿ ಕರೆದುಕೊಂಡು ಬನ್ನಿ. ಇಲ್ಲಂತೂ ನೆನಪಾರ್ಥವೂ ಸ್ಥಿರವಾಗಿದೆ.
|
3 |
+
ತಂದೆಯು ತಿಳಿಸುತ್ತಾರೆ- ನಾನೂ ಸಹ ಇಲ್ಲಿಯೇ ಇದ್ದೇನೆ. ಆದಿದೇವನೂ ಇಲ್ಲಿದ್ದಾರೆ, ವೈಕುಂಠವೂ ಇಲ್ಲಿಯೇ ಇದೆ. ಮುಂದೆ ಅಬುಪರ್ವತದ ಬಹಳಷ್ಟು ಮಹಿಮೆಯಾಗಿಬಿಡುತ್ತದೆ. ಹೇಗೆ ನೋಡಿ, ಕುರುಕ್ಷೇತ್ರವನ್ನು ಚೆನ್ನಾಗಿ ಮಾಡಲು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿರುತ್ತಾರೆ. ಎಷ್ಟು ಮಂದಿ ಮನುಷ್ಯರು ಹೋಗಿ ಅಲ್ಲಿ ಸೇರುತ್ತಾರೆ. ಇಷ್ಟೊಂದು ದುರ್ಗಂಧವಾಗಿಬಿಡುತ್ತದೆ. ಅದರ ಮಾತೇ ಕೇಳಬೇಡಿ. ಎಷ್ಟೊಂದು ಗುಂಪು ಸೇರುತ್ತದೆ. ಭಜನಾ ಮಂಡಳಿಯ ಒಂದು ಬಸ್ಸು ನದಿಯಲ್ಲಿ ಮುಳುಗಿಹೋಯಿತೆಂದು ಸಮಾಚಾರವು ಬಂದಿತ್ತು. ಇದೆಲ್ಲವೂ ದುಃಖವಲ್ಲವೇ! ಅಕಾಲಮೃತ್ಯವಾಗುತ್ತಾ ಇರುತ್ತದೆ. ಸತ್ಯಯುಗದಲ್ಲಂತೂ ಇಂತಹದೇನೂ ಆಗುವುದಿಲ್ಲ. ಇವೆಲ್ಲಾ ಮಾತುಗಳನ್ನು ನೀವು ತಿಳಿಸಬಹುದು. ಸಂಭಾಷಣೆ ಮಾಡುವವರು ಬಹಳ ಬುದ್ಧಿವಂತರಾಗಿರಬೇಕು. ತಂದೆಯು ಜ್ಞಾನವನ್ನು ಬುದ್ಧಿಯಲ್ಲಿ ಕೂರಿಸುತ್ತಿದ್ದಾರೆ. ಈ ಮಾತುಗಳನ್ನು ಪ್ರಪಂಚದವರು ತಿಳಿ���ುಕೊಳ್ಳುತ್ತಾರೆಯೇ! ನಾವು ಹೊಸ ಪ್ರಪಂಚವನ್ನು ನೋಡಿಕೊಂಡು ಬರಲು ಹೋಗುತ್ತೇವೆಂದು ಅವರು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ- ಈ ಹಳೆಯ ಪ್ರಪಂಚವು ಈಗ ಹೋಯಿತ್ತೆಂದರೆ ಹೋಯಿತು. ಇದು ಇನ್ನೂ 40 ಸಾವಿರ ವರ್ಷಗಳಿದೆಯೆಂದು ಹೇಳುತ್ತಾರೆ. ನೀವು ತಿಳಿಸುತ್ತೀರಿ- ಇಡೀ ಕಲ್ಪದ ಆಯಸ್ಸು 5000 ವರ್ಷಗಳೇ ಆಗಿದೆ. ಹಳೆಯ ಪ್ರಪಂಚದ ಮೃತ್ಯು ಸಮ್ಮುಖದಲ್ಲಿ ನಿಂತಿದೆ. ಇದಕ್ಕೆ ಘೋರ ಅಂಧಕಾರವೆಂದು ಹೇಳುತ್ತಾರೆ. ಕುಂಭಕರ್ಣನ ನಿದ್ರೆಯಲ್ಲಿ ಮಲಗಿಬಿಟ್ಟಿದ್ದಾರೆ. ಕುಂಭಕರ್ಣನು ಅರ್ಧಕಲ್ಪ ಮಲಗುತ್ತಿದ್ದನು. ಇನ್ನರ್ಧಕಲ್ಪ ಜಾಗೃತನಾಗಿರುತ್ತಿದ್ದನು. ಅಂದರೆ ನೀವು ಕುಂಭಕರ್ಣರಾಗಿದ್ದೀರಿ, ಈ ಆಟವು ಬಹಳ ಅದ್ಭುತವಾಗಿದೆ. ಈ ಮಾತುಗಳನ್ನು ಎಲ್ಲರೂ ಅರಿತುಕೊಳ್ಳುವುದಿಲ್ಲ. ಕೆಲವರಂತೂ ಕೇವಲ ಭಾವನೆಯಲ್ಲಿ ಬಂದುಬಿಡುತ್ತಾರೆ. ಇಂತಿಂತಹವರೆಲ್ಲರೂ ಹೋಗುತ್ತಿದ್ದಾರೆ ಎಂಬುದನ್ನು ಕೇಳಿ ಅವರೂ ಸಹ ಹೊರಟುಹೋಗುತ್ತಾರೆ. ನಾವು ಶಿವತಂದೆಯ ಬಳಿ ಹೋಗುತ್ತೇವೆ. ಶಿವತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಆ ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆಯೆಂದು ಅವರಿಗೆ ಹೇಳುತ್ತಾರೆ. ಮತ್ತೆ ಅವರೂ ಸಹ ಹೇಳುತ್ತಾರೆ- ಬಾಬಾ, ನಾವು ತಮ್ಮ ಮಕ್ಕಳಾಗಿದ್ದೇವೆ, ತಮ್ಮಿಂದ ಆಸ್ತಿಯನ್ನು ಅವಶ್ಯವಾಗಿ ತೆಗೆದುಕೊಳ್ಳುತ್ತೇವೆ. ಇಷ್ಟು ಮಾತ್ರವಿದ್ದರೂ ದೋಣಿಯು ಪಾರಾಗುತ್ತದೆ. ಭಾವನೆಯ ಫಲ ನೋಡಿ, ಎಷ್ಟೊಂದು ಸಿಗುತ್ತದೆ. ಭಕ್ತಮಾರ್ಗದಲ್ಲಂತೂ ಅಲ್ಪಕಾಲದ ಸುಖವಿದೆ. ಇಲ್ಲಿ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಅಲ್ಲಂತೂ ಭಾವನೆಯ ಅಲ್ಪಕಾಲದ ಸುಖದ ಪ್ರಾಪ್ತಿಯು ಸಿಗುತ್ತದೆ. ಇಲ್ಲಿ ನಿಮಗೆ 21 ಜನ್ಮಗಳಿಗಾಗಿ ಭಾವನೆಯ ಫಲವು ಸಿಗುತ್ತದೆ ಬಾಕಿ ಸಾಕ್ಷಾತ್ಕಾರದಲ್ಲಿ ಏನೂ ಇಲ್ಲ. ನಮಗೂ ಸಾಕ್ಷಾತ್ಕಾರವಾಗಬೇಕೆಂದು ಕೆಲವರು ಹೇಳುತ್ತಾರೆ. ಆಗ ತಂದೆಯು ಇವರು ಏನೂ ತಿಳಿದುಕೊಂಡಿಲ್ಲವೆಂದು ತಿಳಿಯುತ್ತಾರೆ. ಸಾಕ್ಷಾತ್ಕಾರವನ್ನು ನೋಡಬೇಕೆಂದರೆ ಹೋಗಿ ನೌಧಾಭಕ್ತಿಯನ್ನು ಮಾಡಿ. ಅದರಿಂದ ಏನೂ ಸಿಗುವುದಿಲ್ಲ. ಭಲೇ ಇನ್ನೊಂದು ಜನ್ಮದಲ್ಲಿ ಚೆನ್ನಾಗಿರಬಹುದಷ್ಟೇ. ಒಳ್ಳೆಯ ಭಕ್ತರಾಗಿದ್ದರೆ ಒಳ್ಳೆಯ ಜನ್ಮ ಸಿಗುತ್ತದೆ. ಆದರೆ ಇಲ್ಲಂತ ಈ ಮಾತೇ ಭಿನ್ನವಾಗಿದೆ. ಈ ಹಳೆಯ ಪ್ರಪಂಚವು ಪರಿವರ್ತನೆಯಾಗುತ್ತಿದೆ. ತಂದೆಯು ಪ್ರಪಂಚವನ್ನು ಪರಿವರ್ತನೆ ಮಾಡುವವರಾಗಿದ್ದಾರೆ. ನೆನಪಾರ್ಥವು ನಿಂತಿದೆಯಲ್ಲವೆ. ಆದರೆ ಆ ಶೋಭೆಯಂತೂ ಕಡಿಮೆಯಾಗಿಯೇ ಬಿಡುತ್ತದೆ ಅಲ್ಲವೆ. ಇವೆಲ್ಲವೂ ವಿನಾಶಿ ವಸ್ತುಗಳಾಗಿವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಒಂದಂತೂ ತಮ್ಮ ಕಲ್ಯಾಣಕ್ಕಾಗಿ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಇದು ವಿದ್ಯಾಭ್ಯಾಸದ ಮಾತಾಗಿ��ೆ. ಬಾಕಿ ಮಥುರಾದಲ್ಲಿ ಮಧುಬನ, ಕೂಂಜ್ಗಲ್ಲಿ ಇತ್ಯಾದಿ ಏನು ಕುಳಿತು ಮಾಡಿದ್ದಾರೆ ಅದೇನೂ ಇಲ್ಲ. ಯಾವುದೇ ಗೋಪ-ಗೋಪಿಕೆಯರ ಆಟವೂ ಇಲ್ಲ. ಇದನ್ನು ತಿಳಿಸುವುದರಲ್ಲಿ ಬಹಳ ಪರಿಶ್ರಮಪಡಬೇಕಾಗುತ್ತದೆ. ಕುಳಿತು ಒಂದೊಂದು ಪಾಯಿಂಟನ್ನು ಚೆನ್ನಾಗಿ ತಿಳಿಸಿ. ಸಮ್ಮೇಳನದಲ್ಲಿಯೂ ಸಹ ಬಹಳ ಯೋಗಯುಕ್ತರಾಗಿರುವವರು ಬೇಕು. ಜ್ಞಾನದ ಕತ್ತಿಯಲ್ಲಿ ಯೋಗದ ಹರಿತವಿಲ್ಲವೆಂದರೆ ಬಾಣವು ಯಾರಿಗೂ ನಾಟುವುದಿಲ್ಲ. ಆದ್ದರಿಂದಲೇ ತಂದೆಯೂ ತಿಳಿಸುತ್ತಾರೆ- ಈಗ ಇನ್ನೂ ಸಮಯವಿದೆ. ಪರಮಾತ್ಮನು ಸರ್ವವ್ಯಾಪಿಯಲ್ಲವೆಂದು ಎಲ್ಲರೂ ನಂಬಿದರೆ ಈಗ ಇಲ್ಲಿ ಸಾಲು-ಸಾಲಾಗಿ ನಿಂತುಬಿಡುತ್ತದೆ. ಆದರೆ ಈಗ ಸಮಯವಿಲ್ಲ. ಒಂದು ಮಾತನ್ನು ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕು. ರಾಜಯೋಗವನ್ನು ತಂದೆಯು ಕಲಿಸಿದ್ದರು. ಮತ್ತೆ ಅದನ್ನು ಈ ಸಮಯದಲ್ಲಿ ಕಲಿಸುತ್ತಿದ್ದಾರೆ. ಆ ತಂದೆಗೆ ಬದಲಾಗಿ ಯಾರು ಶ್ಯಾಮನಾಗಿದ್ದಾರೆಯೋ ಅವರ ಹೆಸರನ್ನು ಹಾಕಿಬಿಟ್ಟಿದ್ದಾರೆ. ಎಷ್ಟು ತಪ್ಪಾಗಿದೆ! ಇದರಿಂದಲೇ ನಿಮ್ಮ ದೋಣಿಯು ಮುಳುಗಿದೆ.
|
4 |
+
ಈಗ ತಂದೆಯು ತಿಳಿಸುತ್ತಾರೆ- ಈ ವಿದ್ಯೆಯು ಆದಾಯದ ಮೂಲವಾಗಿದೆ. ಸ್ವಯಂ ತಂದೆಯೇ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವುದಕ್ಕಾಗಿ ಓದಿಸಲು ಬರುತ್ತಾರೆ. ಇದರಲ್ಲಿ ಅವಶ್ಯವಾಗಿ ಪವಿತ್ರರೂ ಆಗಬೇಕು. ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಯಾವುದೆಲ್ಲಾ ಸೇವಾಕೇಂದ್ರಗಳಿವೆಯೋ ಎಲ್ಲಾ ಕಡೆಯೂ ನಂಬರ್ವಾರ್ ಇದ್ದಾರೆ. ಈಗ ರಾಜಧಾನಿಯು ಸ್ಥಾಪನೆಯಾಗುತ್ತದೆ. ಇದೇನೂ ಚಿಕ್ಕಮ್ಮನ ಮನೆಯಂತಲ್ಲ. ತಿಳಿಸಿ, ಸ್ವರ್ಗವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಆದರೆ ಅಲ್ಲಿಯ ರಾಜ್ಯವು ಹೇಗೆ ನಡೆಯುತ್ತದೆ ಮತ್ತು ದೇವತೆಗಳ ಸಮೂಹವನ್ನು ನೋಡಬೇಕೆಂದರೆ ಅಬುಪರ್ವತಕ್ಕೆ ನಡೆಯಿರಿ. ಮತ್ತೆಲ್ಲಿಯೂ ಹೀಗೆ ಛಾವಣಿ ಭಾಗದಲ್ಲಿ ರಾಜಧಾನಿಯನ್ನು ತೋರಿಸಿರುವಂತಹ ಚಿತ್ರ (ಸ್ಥಾನ) ಮತ್ತೆಲ್ಲಿಯೂ ಇಲ್ಲ. ಭಲೇ ಅಜ್ಮೀರ್ನಲ್ಲಿ ಸ್ವರ್ಗದ ಮಾದರಿಯಿದೆ ಆದರೆ ಅದು ಬೇರೆ ಮಾತಾಗಿದೆ. ಇಲ್ಲಂತೂ ಆದಿದೇವನೂ ಇದ್ದಾರಲ್ಲವೆ. ಸತ್ಯಯುಗವನ್ನು ಯಾರು ಮತ್ತು ಹೇಗೆ ಸ್ಥಾಪನೆ ಮಾಡಿದರು, ಇದು ಸರಿಯಾದ ನೆನಪಾರ್ಥವಾಗಿದೆ. ಈಗ ನಾವು ಚೈತನ್ಯ ದಿಲ್ವಾಡಾ ಎಂಬ ಹೆಸರನ್ನು ಬರೆಯಲು ಆಗುವುದಿಲ್ಲ. ಯಾವಾಗ ಮನುಷ್ಯರು ತಾವೇ ಬಂದು ಅರಿತುಕೊಳ್ಳುವರೋ ಆಗ ನೀವು ಈ ರೀತಿ ಬರೆಯಿರಿ ಎಂದು ತಾವಾಗಿಯೇ ಹೇಳುತ್ತಾರೆ. ಈಗಿನ್ನೂ ಆ ಮಾತಿಲ್ಲ. ಈಗಂತೂ ನೋಡಿ- ಸ್ವಲ್ಪ ಮಾತಿನಲ್ಲಿಯೇ ಏನೇನು ಮಾಡಿಬಿಡುತ್ತಾರೆ! ಕ್ರೋಧಿಗಳು ಅನೇಕರಿರುತ್ತಾರೆ. ದೇಹಾಭಿಮಾನವಿದೆಯಲ್ಲವೆ. ನೀವು ಮಕ್ಕಳ ವಿನಃ ಮತ್ತ್ಯಾರೂ ಆತ್ಮಾಭಿಮಾನಿಗಳಾಗಿರಲು ಸಾಧ್ಯವಿಲ್ಲ. ಪುರುಷಾರ್ಥ ಮಾಡಬೇಕಾಗಿದೆ. ಅದೃಷ್ಟದಲ್ಲಿದ್ದರೆ ಆಗುವುದೆಂದು ತಿಳಿಯಬಾರದು. ಪುರುಷಾರ್ಥಿಗಳು ಈ ರೀತಿ ಹೇಳುವುದಿಲ್ಲ. ಅವರಂತೂ ಪುರುಷಾರ್ಥವನ್ನು ಮಾಡುತ್ತಾ ಇರು��್ತಾರೆ. ಅಂತಿಮದಲ್ಲಿ ಅನುತ್ತೀರ್ಣರಾದಾಗ ಅದೃಷ್ಟದಲ್ಲಿ ಏನಿತ್ತೋ ಅದಾಯಿತೆಂದು ಹೇಳುತ್ತಾರೆ. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ದೇಹೀ-ಅಭಿಮಾನಿಯಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಅದೃಷ್ಟದಲ್ಲಿದ್ದರೆ ಆಗುತ್ತದೆ ಎಂದು ಎಂದಿಗೂ ಯೋಚಿಸಬಾರದು. ಬುದ್ಧಿವಂತರಾಗಬೇಕಾಗಿದೆ.
|
8 |
+
2. ಜ್ಞಾನವನ್ನು ಕೇಳಿ ಅದನ್ನು ಸ್ವರೂಪದಲ್ಲಿ ತರಬೇಕಾಗಿದೆ. ನೆನಪಿನ ಹರಿತವನ್ನು ಧಾರಣೆ ಮಾಡಿ ನಂತರ ಸೇವೆ ಮಾಡಬೇಕಾಗಿದೆ. ಎಲ್ಲರಿಗೂ ಅಬು ಮಹಾನ್ ತೀರ್ಥಸ್ಥಾನದ ಮಹಿಮೆಯನ್ನು ತಿಳಿಸಬೇಕಾಗಿದೆ.
|
BKMurli/BKMurli/page_10.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಏಕವ್ರತದವರಾಗಿ ಪವಿತ್ರತೆಯ ಧಾರಣೆಯ ಮುಖಾಂತರ ಆತ್ಮೀಯತೆಯಲ್ಲಿದ್ದು ಮನಸ್ಸಾ ಸೇವೆ ಮಾಡಿರಿ
|
2 |
+
ಇಂದು ಆತ್ಮೀಯ ತಂದೆ ನಾಲ್ಕಾರು ಕಡೆಯ ಆತ್ಮೀಯ ಮಕ್ಕಳ ಆತ್ಮೀಯತೆಯನ್ನು ನೋಡುತ್ತಿದ್ದರು. ಪ್ರತಿಯೊಬ್ಬ ಮಕ್ಕಳಲ್ಲಿ ಆತ್ಮೀಯತೆಯ ಹೊಳಪು ಎಷ್ಟಿದೆ? ಆತ್ಮೀಯತೆ ನಯನಗಳಿಂದ ಪ್ರತ್ಯಕ್ಷವಾಗುತ್ತದೆ. ಆತ್ಮೀಯತೆಯ ಶಕ್ತಿಯಿರುವ ಆತ್ಮ ಸದಾ ನಯನಗಳಿಂದ ಅನ್ಯರಿಗೂ ಸಹ ಆತ್ಮೀಯತೆಯ ಶಕ್ತಿಯನ್ನು ನೀಡುತ್ತಾರೆ. ಆತ್ಮೀಯತೆಯ ಮುಗುಳ್ಳಗೆ ಅನ್ಯರಿಗೂ ಸಹ ಖುಷಿಯ ಅನುಭವವನ್ನು ಮಾಡಿಸುತ್ತದೆ. ಅವರ ಚಲನೆ, ಮುಖಪುಟವು ಫರಿಸ್ಥೆಗಳ ಸಮಾನ ಡಬ್ಬಲ್ ಲೈಟ್ ರೂಪದಲ್ಲಿ ಕಾಣಿಸುತ್ತದೆ. ಈ ರೂಪದ ಆತ್ಮೀಯತೆಗೆ ಅಧಾರವಾಗಿದೆ ಪವಿತ್ರತೆ ಎಷ್ಟು-ಎಷ್ಟು ಮನ, ವಚನ, ಕರ್ಮದಲ್ಲಿ ಕಾಣಿಸುತ್ತದೆ, ಅಷ್ಟು ಆತ್ಮೀಯತೆ ಕಂಡುಬರುತ್ತದೆ. ಪವಿತ್ರತೆ ಬ್ರಾಹ್ಮಣ ಜೀವನದ ಶೃಂಗಾರವಾಗಿದೆ. ಪವಿತ್ರತೆ ಬ್ರಾಹ್ಮಣ ಜೀವನದ ಮರ್ಯಾದೆಯಾಗಿದೆ. ಆದ್ದರಿಂದ ಬಾಪ್ದಾದಾ ಪ್ರತಿಯೊಬ್ಬ ಮಗುವಿನ ಪವಿತ್ರತೆಯ ಆಧಾರದಿಂದ ಕೂಡಿದ ಆತ್ಮೀಯತೆಯನ್ನು ನೋಡುತ್ತಿದ್ದರು. ಆತ್ಮೀಯತೆಯ ಶಕ್ತಿಯಿರುವ ಆತ್ಮ ಈ ಲೋಕದಲ್ಲಿ ಅಲೌಕಿಕ ಫರಿಸ್ಥೆಗಳಂತೆ ಕಾಣುತ್ತಾರೆ.
|
3 |
+
ಆದ್ದರಿಂದ ತನ್ನನ್ನು ತಾವೇ ನೋಡಿಕೊಳ್ಳಿರಿ, ಚೆಕ್ ಮಾಡಿಕೊಳ್ಳಿ-ನನ್ನ ಸಂಕಲ್ಪ, ಮಾತಿನಲ್ಲಿ ಎಷ್ಟು ಆತ್ಮೀಯತೆಯಿದೆ? ಆತ್ಮೀಯತೆಯ ಸಂಕಲ್ಪ ತನ್ನಲ್ಲಿಯೂ ಶಕ್ತಿ ತುಂಬುವಂತಹದ್ದಾಗಿದೆ ಮತ್ತು ಅನ್ಯರಿಗೂ ಶಕ್ತಿಯನ್ನು ನೀಡುತ್ತದೆ. ಇದನ್ನೇ ಬೇರೆ ಶಬ್ದಗಳಲ್ಲಿ ಹೇಳಲಾಗುತ್ತದೆ - ಆತ್ಮೀಯತೆಯ ಸಂಕಲ್ಪ ಮನಸ್ಸಾ ಸೇವೆಗೆ ನಿಮಿತ್ತವಾಗುತ್ತದೆ. ಆತ್ಮೀಯ ಮಾತು ಸ್ವಯಂಗೆ ಮತ್ತು ಅನ್ಯರಿಗೆ ಸುಖದ ಅನುಭವವನ್ನು ಮಾಡಿಸುತ್ತದೆ. ಶಾಂತಿಯ ಅನುಭವವನ್ನು ಮಾಡಿಸುತ್ತದೆ. ಒಂದು ಆತ್ಮೀಯ ಮಾತು ಅನ್ಯ ಆತ್ಮಗಳ ಜೀವನದಲ್ಲಿ ಮುಂದುವರೆಯಲ್ಲಿಕ್ಕೆ ಆಧಾರವಾಗುತ್ತದೆ. ಆತ್ಮೀಯ ಮಾತನ್ನಾಡುವವರು ವರದಾನಿ ಆತ್ಮಗಳಾಗುತ್ತಾರೆ. ಆತ್ಮೀಯ ಕರ್ಮ ಸಹಜವಾಗಿ ಸ್ವಯಂಗೆ ಕರ್ಮಯೋಗಿ ಸ್ಥಿತಿಯನ್ನು ಅನುಭವ ಮಾಡಿಸುತ್ತದೆ ಮತ್ತು ಅನ್ಯರಿಗು ಕರ್ಮಯೋಗಿಗಳಾಗುವಂತಹ ಸ್ಯಾಂಪಲ್ (ಮಾದರಿ) ಆಗುತ್ತಾರೆ. ಆದರೆ ಆತ್ಮೀಯತೆಯ ಬೀಜವಾಗಿದೆ ಪವಿತ್ರತೆ ಪವಿತ್ರತೆ ಸ್ವಪ್ನದಲ್ಲಿಯೂ ಭಂಗ ಆಗಬಾರದು, ಆಗ ಆತ್ಮೀಯತೆಯ ಶಕ್ತಿಯು ಕಂಡುಬರುತ್ತದೆ. ಪವಿತ್ರತೆ ಕೇವಲ ಬ್ರಹ್ಮಚರ್ಯ ಮಾತ್ರವಲ್ಲ, ಆದರೆ ಪ್ರತಿ ಮಾತಿನಲ್ಲಿ, ಪ್ರತಿ ಸಂಕಲ್ಪದಲ್ಲಿ, ಪ್ರತಿ ಕರ್ಮದಲ್ಲಿ ಬ್ರಹ್ಮಾಚಾರಿಗಳು. ಹೇಗೆ ಲೌಕಿಕದಲ್ಲಿ ಕೆಲವು-ಕೆಲವು ಮಕ್ಕಳ ಮುಖವು ತಂದೆಯಂತೆ ಇರುತ್ತದೆ. ಆಗ ಹೇಳುತ್ತಾರೆ ಇವರಲ್ಲಿ ಆ ತಂದೆಯು ಕಾಣುತ್ತಾರೆ. ಅದೇ ರೀತಿ ಬ್ರಹ್ಮಾಚಾರಿ ಬ್ರಾಹ್ಮಣ ಆತ್ಮಗಳ ಮುಖದಿಂದ ಆತ್ಮೀಯತೆಯ ಆಧಾರದಿಂದ ಬ್ರಹ್ಮಾತಂದೆ ಸಮಾನ ಅನುಭವವಾಗಲಿ, ಸಂಪರ್ಕದಲ್ಲಿ ಬರುವ ಆತ್ಮಗಳು ಅನುಭವ ಮಾಡಲಿ - ಇವರು ತಂದೆಯ ಸಮಾ���ರಾಗಿದ್ದಾರೆ. ಆದರೆ ನೂರು ಪ್ರತಿಶತ (%) ಇಲ್ಲದಿದ್ದರೂ ಸಮಯ ಅನುಸಾರ ಎಷ್ಟು ಪ್ರತಿಶತ (%) ಕಂಡುಬರುತ್ತಿದೆ? ಎಲ್ಲಿಯವರೆಗು ತಲುಪಿದ್ದೀರಾ? 75%, 80%, 90% ಎಲ್ಲಿಯವರೆಗು ಮರ ತಲುಪಿದ್ದೀರಾ? ಮುಂದೆ ಕುಳಿತಿರುವವರು ತಿಳಿಸಿ, ನೋಡಿ ಕುಳಿತುಕೊಳ್ಳಲು ಮುಂದಿನ ಲೈನ್ ಪಡೆದಿದ್ದೀರಿ, ಅದೇ ರೀತಿ ಬ್ರಹ್ಮಾಚಾರಿಗಳಾಗುವುದರಲ್ಲಿಯೂ ಮುಂದಿನ ನಂಬರ್ ಪಡೆಯುತ್ತೀರಲ್ಲವೇ! ಮುಂದಿನ ನಂಬರ್ ಪಡೆಯುತ್ತೀರಿ ತಾನೆ?
|
4 |
+
ಬಾಪ್ದಾದಾ ಪ್ರತಿ ಮಕ್ಕಳ ಪವಿತ್ರತೆಯ ಆಧಾರದ ಮೇಲೆ ಆತ್ಮೀಯತೆಯನ್ನು ನೋಡಲು ಬಯಸುತ್ತಾರೆ. ಬಾಪ್ದಾದಾರವರ ಬಳಿ ಎಲ್ಲರ ಚಾಟರ್ಂತೂ ಇದೆ. ತಿಳಿಸುವುದಿಲ್ಲ. ಆದರೆ ಚಾರ್ಟ್ ಇದೆ, ಏನೇನು ಮಾಡುತ್ತೀರಾ? ಹೇಗೆ ಮಾಡುತ್ತೀರಾ, ಎಲ್ಲರದು ಚಾರ್ಟ್ ಬಾಪ್ದಾದಾರವರ ಬಳಿ ಇದೆ. ಪವಿತ್ರತೆಯಲ್ಲಿ ಈಗಲೂ ಕೆಲವು-ಕೆಲವು ಮಕ್ಕಳಲ್ಲಿ ತುಂಬಾ ಕಡಿಮೆ % ಇದೆ. ಸಮಯದ ಅನುಸಾರ ವಿಶ್ವದ ಆತ್ಮಗಳು ನೀವು ಆತ್ಮಗಳ ಆತ್ಮೀಯತೆಯ ಉದಾಹರಣೆ ನೋಡಲು ಬಯಸುತ್ತಾರೆ. ಇದರ ಸಹಜ ಸಾಧನೆ ಆಗಿದೆ ಒಂದೇ ಒಂದು ಶಬ್ದದ ಬಗ್ಗೆ ಗಮನ ಇಡುವುದು. ಪದೇ-ಪದೇ ಈ ಒಂದು ಶಬ್ದವನ್ನು ತನಗೆ ತಾನೇ ಅಂಡರ್ಲೈನ್ ಮಾಡಿಕೊಳ್ಳುವುದು, ಆ ಒಂದು ಶಬ್ದವಾಗಿದೆ ಏಕವ್ರತಾ ಭವ ಎಲ್ಲಿ ಒಂದಿದೆ ಅಲ್ಲಿ. ಏಕಾಗ್ರತೆ ಸ್ವತಃವಾಗಿ ಬರುತ್ತದೆ. ಅಚಲ, ಅಡೋಲರು ಸ್ವತಃವಾಗಿ ಆಗುತ್ತೇವೆ. ಏಕವ್ರತ ಆಗುವುದರಿಂದ ಏಕಮತದಲ್ಲಿಯೇ ನಡೆಯುವುದು ಸಹಜವಾಗುತ್ತದೆ. ಇರುವುದೇ ಒಂದೇ ವ್ರತ, ಹಾಗಾಗೆ ಒಂದೇ ಮತದಿಂದ ಸದ್ಗತಿ ಸಹಜವಾಗುತ್ತದೆ. ಏಕರಸ ಸ್ಥಿತಿ ಸ್ವತಹವಾಗಿ ಆಗುತ್ತದೆ. ಆದ್ದರಿಂದ ಚೆಕ್ ಮಾಡಿಕೊಳ್ಳಿ - ಏಕವ್ರತ ಇದೆಯೇ? ಇಡೀ ದಿನದಲ್ಲಿ ಮನಸ್ಸು, ಬುದ್ಧಿಯಲ್ಲಿ ಏಕವ್ರತ ಇರುತ್ತದೆಯೇ? ಲೆಕ್ಕಾಚಾರದಲ್ಲಿಯೂ ಆದಿಯ ಲೆಕ್ಕಾಚಾರ ಒಂದರಿಂದ ಶುರುವಾಗುತ್ತದೆ. ಒಂದು ಬಿಂದು ಮತ್ತು ಒಂದು ಒಂದು ಶಬ್ದ, ಒಂದರ ಮುಂದೆ ಸೊನ್ನೆ ಹಾಕುತ್ತಾ ಹೋಗಿ, ಎಷ್ಟು ಹೆಚ್ಚುತ್ತಾ ಹೋಗುತ್ತದೆ. ಬೇರೆ ಏನೂ ನೆನಪಿರದಿದ್ದರೂ ಒಂದು ಶಬ್ದ ನೆನಪಿರುತ್ತದೆ ಅಲ್ಲವೇ! ಸಮಯ, ಆತ್ಮಗಳು, ನಾವು ಏಕವ್ರತಾ ಆತ್ಮಗಳನ್ನು ಕೂಗುತ್ತಿದ್ದಾರೆ. ಸಮಯದ ಕೂಗು, ಆತ್ಮಗಳ ಕೂಗು - ಹೇ ದೇವಾತ್ಮಗಳೇ ಎಂಬ ಕೂಗು ಕೇಳಿಸುವುದಿಲ್ಲವೇ? ಪ್ರಕೃತಿಯೂ ಸಹ ತಾವು ಪ್ರಕೃತಿಪತಿಯರನ್ನು ನೋಡಿ-ನೋಡಿ ಕರೆಯುತ್ತಿದೆ - ಹೇ! ಪ್ರಕೃತಿ ಪತಿ ಆತ್ಮಗಳೇ ಈಗಲೇ ಪರಿವರ್ತನೆ ಮಾಡಿ. ಇದಂತೂ ಮಧ್ಯ-ಮಧ್ಯದಲ್ಲಿ ಚಿಕ್ಕ-ಚಿಕ್ಕ ವಿಕೋಪಗಳು ಆಗುತ್ತಿರುತ್ತವೆ. ಇದರಿಂದ ಆತ್ಮಗಳಿಗೆ ಮತ್ತೆ-ಮತ್ತೆ ದುಃಖ, ಭಯಭೀತರನ್ನಾಗಿ ಮಾಡಬೇಡಿ. ನೀವು ಮುಕ್ತಿಯನ್ನು ನೀಡುವಂತಹ ಮಾಸ್ಟರ್ ಮುಕ್ತಿದಾತ ಆತ್ಮರು ಯಾವಾಗ ಈ ಎಲ್ಲಾ ಆತ್ಮರಿಗೆ - ಮುಕ್ತಿಯನ್ನು ನೀಡುತ್ತೀರಿ? ಮನಸ್ಸಿನಲ್ಲಿ ದಯೆ ಬರುವುದಿಲ್ಲವೇನು? ಸಮಾಚಾರವನ್ನು ಕೇಳಿ, ಆಗಿಹೋಯಿತೆಂದು ಸುಮ್ಮನಾಗಿಬಿಡುತ್ತೀರೇನು? ಅದ್ದರಿಂದ ಬಾಪ್ದಾದಾ ಪ್ರತಿಯೊಬ್ಬ ಮಗುವಿನ ದಯಾ ಸ್ವರೂಪವನ್��ು ನೋಡಲು ಬಯಸುತ್ತಾರೆ. ತಮ್ಮ ಹದ್ದಿನ ಮಾತನ್ನು ಬಿಟ್ಟುಬಿಡಿ. ದಯಾಹೃದಯಿಗಳಾಗಿ ಮನಸ್ಸಾ ಸೇವೆಯಲ್ಲಿ ತೊಡಗಿರಿ. ಸಕಾಶ, ಶಾಂತಿ ಆಶ್ರಯ ನೀಡಿ. ದಯಾಹೃದಯಿಗಳಾಗಿ ಅನ್ಯರಿಗೆ ಆಶ್ರಯ ಕೊಡುವುದರಲ್ಲಿ ತತ್ಪರರಾಗಿದ್ದಾರೆ, ಹದ್ದಿನ ಆಕರ್ಷಣೆಗಳಿಂದ, ಹದ್ದಿನ ಮಾತುಗಳಿಂದ ಸ್ವಯಂ ದೂರವಾಗಿರುತ್ತೀರಿ. ಶ್ರಮ ಪಡುವುದರಿಂದ ಮುಕ್ತರಾಗುತ್ತೀರಿ. ವಾಣಿಯ ಸೇವೆಯಲ್ಲಿ ಬಹಳ ಸಮಯ ನೀಡಿದ್ದೀರಿ, ಸಮಯ ಸಫಲಗೊಳಿಸಿದ್ದಿರಿ, ಸಂದೇಶ ನೀಡಿದ್ದೀರಿ. ಆತ್ಮಗಳಿಗೆ ಸಂಬಂಧ-ಸಂಪರ್ಕದಲ್ಲಿ ತಂದಿದ್ದೀರಿ. ಏನು ನಾಟಕನುಸಾರ ಮಾಡಿದ್ದೀರಿ ಅದು ಬಹಳ ಚೆನ್ನಾಗಿ ಮಾಡಿದ್ದೀರಿ. ಆದರೆ ಈಗ ವಾಣಿಯ ಜೊತೆಗೆ ಮನಸ್ಸಾ ಸೇವೆಯ ಆವಶ್ಯಕತೆ ಬಹಳ ಇದೆ. ಮತ್ತು ಈ ಮನಸ್ಸಾ ಸೇವೆಯನ್ನು ಪ್ರತಿಯೊಬ್ಬ ಹೊಸ ಮಕ್ಕಳು, ಹಳೆಯ ಮಕ್ಕಳು, ಮಹಾರಥಿಗಳು, ಕುದರೆ ಸವಾರರು, ಕಾಲಾಳುಗಳು ಎಲ್ಲರೂ ಮಾಡಬಹುದಾಗಿದೆ. ಇದನ್ನು ದೊಡ್ಡವರು ಮಾಡುತ್ತಾರೆ, ನಾವಂತೂ ಚಿಕ್ಕವರು, ನಾವು ರೋಗಿಗಳು, ನಾವು ಸಾಧನೆವುಳ್ಳವರಲ್ಲ, ಇಂತಹ ಯಾವುದೇ ಆಧಾರ ಬೇಕಾಗಿಲ್ಲ. ಮನಸ್ಸಾ ಸೇವೆಯನ್ನು ಚಿಕ್ಕ-ಚಿಕ್ಕ ಮಕ್ಕಳೂ ಸಹ ಮಾಡಬಹುದಾಗಿದೆ. ಮಕ್ಕಳೇ ಮಾಡಬಹುದಲ್ಲವೇ? (ಹೌದು) ಮನಸ್ಸಾ ಸೇವೆಯನ್ನು ಮಾಡಬಹುದಲ್ಲವೇ. ಆದ್ದರಿಂದ ಈಗ ಮಾತು ಮತ್ತು ಮನಸ್ಸಾ ಸೇವೆಯ ಸಮತೋಲನ ಇರಲಿ ಮನಸ್ಸಾ ಸೇವೆ ಮಾಡುವವರಿಗೂ ಸಹ ಬಹಳ ಲಾಭವಿದೆ. ಏಕೆ? ಯಾವ ಅತ್ಮಗಳಿಗೆ ಮನಸ್ಸಾ ಸೇವೆ ಅರ್ಥಾತ್ ಸಂಕಲ್ಪದ ಮೂಲಕ ಶಕ್ತಿ ಮತ್ತು ಸಕಾಶವನ್ನು ಕೊಡುತ್ತೀರಿ ಆ ಆತ್ಮ ತಮಗೆ ಆಶೀರ್ವಾದ ನೀಡುತ್ತದೆ. ಹಾಗೂ ತಮ್ಮ ಖಾತೆಯಲ್ಲಿ ಸ್ವಯಂನ ಪುರುಷಾರ್ಥವಂತೂ ಇದ್ದೇ ಇದೆ. ಜೊತೆಗೆ ಆಶೀರ್ವಾದದ ಖಾತೆಯು ಜಮಾ ಆಗುತ್ತವೆ. ಇದರಿಂದ ತಮ್ಮ ಜಮಾದ ಖಾತೆ ಡಬಲ್ ರೀತಿಯಲ್ಲಿ ಹೆಚ್ಚುತ್ತಾ ಹೋಗುತ್ತದೆ. ಆದುದರಿಂದ ಹೊಸ ಮಕ್ಕಳೇ ಆಗಲಿ, ಹಳೆಯ ಮಕ್ಕಳೇ ಆಗಲಿ, ಏಕೆಂದರೆ ಬಹಳ ಹೊಸ ಮಕ್ಕಳೇ ಬಂದಿದ್ದೀರಲ್ಲವೇ! ಹೊಸ ಮಕ್ಕಳು ಯಾರು ಮೊದಲನೇ ಬಾರಿಗೆ ಬಂದಿದ್ದೀರಿ, ಅವರು ಕೈ ಎತ್ತಿರಿ. ಮೊದಲನೇ ಬಾರಿ ಬಂದಿರುವ ಮಕ್ಕಳೊಂದಿಗೂ ಸಹ ಬಾಪ್ದಾದಾ ಕೇಳುತ್ತಾರೆ. ತಾವು ಆತ್ಮಗಳು ಮನಸ್ಸು ಸೇವೆಯನ್ನು ಮಾಡಬಹುದಲ್ಲವೇ? (ಬಾಪ್ದಾದಾ ಪಾಂಡವರೊಂದಿಗೆ, ಮಾತೆಯರೊಂದಿಗೆ - ನಿಮಗೂ ಸಹ ಮನಸ್ಸಾ ಸೇವೆಯನ್ನು ಮಾಡಲು ಸಾಧ್ಯವಿದೆಯೇ?) ಎಲ್ಲರೂ ಬಹಳ ಚೆನ್ನಾಗಿ ಕೈ ಎತ್ತಿದ್ದೀರಿ. ಈಗ ಬಾಪ್ದಾದಾ ಟಿ.ವಿಯಲ್ಲಿ ನೋಡುತ್ತಿರುವವರಿಗೆ ಮತ್ತು ಸಮ್ಮುಖದಲ್ಲಿ ಕೇಳುತ್ತಿರುವವರಿಗೆ, ಎಲ್ಲಾ ಮಕ್ಕಳಿಗೂ ಜವಾಬ್ದಾರಿ ಕೊಡುತ್ತಾರೆ, ಏನೆಂದರೆ ಇಡೀ ದಿನದಲ್ಲಿ ಎಷ್ಟು ಗಂಟೆಗಳು ಮನಸ್ಸು ಸೇವೆಯನ್ನು ಯಥಾರ್ಥ ರೀತಿಯಿಂದ ಮಾಡಿದಿರಿ. ಕೇವಲ ಮಾಡಿದೆವೆಂದು ಹೇಳಬಾರದು. ಯಥಾರ್ಥ ರೂಪದಲ್ಲಿ ಎಷ್ಟು ಗಂಟೆಗಳು ಮನಸ್ಸಾ ಸೇವೆಯನ್ನು ಮಾಡಿದಿರಿ? ಇದರ ಚಾರ್ಟ್ನ್ನು ಪ್ರತಿಯೊಬ್ಬರೂ ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿದೆ. ನಂತರ ಬಾಪ್ದಾದಾ ಅಚಾನಕ ಚಾರ್ಟ್ ಕೇಳುತ್ತಾರೆ. ಇವರ ದಿನಾಂಕ ತಿಳಿಸುವುದಿಲ್ಲ. ಅಚಾನಕ ಕೇಳುತ್ತಾರೆ, ನೋಡೋಣ ಜವಾಬ್ದಾರಿಯ ಕಿರೀಟ ತೊಟ್ಟುಕೊಳ್ಳುವವರೋ ಅಥವಾ ಅಲುಗಾಡುತ್ತಿರುತ್ತದೆಯೋ? ಜವಾಬ್ದಾರಿಯ ಕಿರೀಟ ತೊಟ್ಟುಕೊಳ್ಳಬೇಕಲ್ಲವೇ! ಶಿಕ್ಷಕಿಯರು ಜವಾಬ್ದಾರಿಯ ಕಿರೀಟ ತೊಟ್ಟುಕೊಂಡಿದ್ದೀರಲ್ಲವೇ! ಈಗ ಅದರಲ್ಲಿ ಇದನ್ನು ಸೇರಿಸಿಕೊಳ್ಳಿ. ಸರಿಯಲ್ಲವೇ! ಡಬ್ಬಲ್ ವಿದೇಶದವರು ಕೈ ಎತ್ತಿ. ಈ ಜವಾಬ್ದಾರಿಯ ಕಿರೀಟ ಚೆನ್ನಾಗಿದೆಯಲ್ಲವೇ? ಆದ್ದರಿಂದ ಚಾರ್ಟ್ ಇಡುತ್ತೀರಲ್ಲವೇ? ಒಳ್ಳೆಯದು ಬಾಪ್ದಾದಾ ಆಚಾನಕ್ ಒಂದು ದಿವಸ ಕೇಳುತ್ತಾರೆ, ತಮ್ಮ ತಮ್ಮ ಚಾರ್ಟ್ ಬರೆದು ಕಳುಹಿಸಿ ಎಂದು, ನಂತರ ನೋಡುತ್ತಾರೆ. ಏಕೆಂದರೆ ವರ್ತಮಾನ ಸಮಯ ಬಹಳ ಅವಶ್ಯಕತೆ ಇದೆ. ತಮ್ಮದೇ ಪರಿವಾರದ ದುಃಖವನ್ನು ಈ ನೋಡುತ್ತಿದ್ದೀರಲ್ಲವೇ! ನೋಡಬಹುದಲ್ಲವೇ? ದುಃಖಿ ಆತ್ಮಗಳಿಗೆ ಆಶ್ರಯವನ್ನು ನೀಡಿ. ಒಂದು ಹನಿಗಾಗಿ ಬಾಯಾರಿದ್ದೇವೆ ನಾವು ಎಂದು ಯಾವ ಗೀತೆ ಇದೆ, ಅದರ ಅರ್ಥ ಈಗಿನ ಸಮಯದಲ್ಲಿ ಸುಖ, ಶಾಂತಿಯ ಒಂದು ಹನಿಗೋಸ್ಕರ ಆತ್ಮಗಳು ಬಾಯಾರಿದ್ದಾರೆ ಎಂದು. ಒಂದು ಸುಖ, ಶಾಂತಿಯ ಅಮೃತದ ಹನಿ ಸಿಗುವುದರಿಂದ ಖುಷಿಯಾಗುತ್ತಾರೆ. ಬಾಪ್ದಾದಾ ಪದೇ-ಪದೇ - ತಿಳಿಸುತ್ತಾರೆ ಸಮಯ ನಿಮ್ಮನ್ನು ಕಾಯುತ್ತಿದೆ. ಬ್ರಹ್ಮಾ ತಂದೆ ನಮ್ಮ ಮನೆಯ ಬಾಗಿಲು ತೆರೆಯಲು ಕಾಯುತ್ತಿದ್ದಾರೆ. ಪ್ರಕೃತಿ ತೀವ್ರಗತಿಯಿಂದ ಸ್ವಚ್ಚ ಮಾಡಲು ಕಾಯುತ್ತಿದೆ. ಹೇ! ಫರಿಸ್ತೆಗಳೇ ಈಗ ನಿಮ್ಮ ಡಬಲ್ ಲೈಟ್ನ ಮುಖಾಂತರ ಕಾಯುವುದನ್ನು ಸಮಾಪ್ತಿ ಮಾಡಿ. ಎವರ್ರೆಡಿ ಎನ್ನುವ ಶಬ್ದವನ್ನು ಎಲ್ಲರೂ ಹೇಳುತ್ತಾರೆ, ಆದರೆ ಸಂಪನ್ನ ಮತ್ತು ಸಂಪೂರ್ಣ ಆಗುವುದರಲ್ಲಿ ಎವರ್ರೆಡಿ ಆಗಿದ್ದೀರಾ? ಶರೀರವನ್ನು ಬಿಡುವುದರಲ್ಲಿ ಮಾತ್ರ ಎವರ್ರೆಡಿ ಆಗುವುದಿಲ್ಲ, ಆದರೆ ತಂದೆಯ ಸಮಾನವಾಗಿ ಹೋಗುವುದರಲ್ಲಿ ಎವರ್ರೆಡಿ ಆಗಬೇಕಾಗಿದೆ.
|
5 |
+
ಇಲ್ಲಿ ಮಧುಬನದಲ್ಲಿ ಎಲ್ಲರೂ ಮುಂದೆ, ಮುಂದುವರೆಯುತ್ತಾರೆ, ಒಳ್ಳೆಯದು. ಸೇವೆಯನ್ನು ಚೆನ್ನಾಗಿ ಮಾಡುತ್ತೀರಿ. ಮಧುಬನದವರು ಎವರ್ರೆಡಿ ಆಗಿದ್ದೀರಾ? ಮುಗುಳ್ನಗುತ್ತಿದ್ದರು, ಭಲೇ ಮೊದಲನೆಯ ಸಾಲಿನಲ್ಲಿ ಕುಳಿತಿರುವ ಮಹಾರಥಿಗಳೇ ಎವರ್ರೆಡಿ ಆಗಿದ್ದೀರಾ? ತಂದೆಯ ಸಮಾನವಾಗುವುದರಲ್ಲಿ ಎವರ್ರೆಡಿ ಆಗಿದ್ದೀರಾ? ಈ ರೀತಿ ತಿಳಿದರೆ ಅಡ್ವಾನ್ಸ್ ಪಾರ್ಟಿಯಲ್ಲಿ ಹೋಗುತ್ತೀರಿ. ಅಡ್ವಾನ್ಸ್ ಪಾರ್ಟಿ ಬಯಸದ್ದಿದ್ದರೂ ಹೆಚ್ಚುತ್ತದೆ. ಹಾಗಾದರೆ ಇದರಲ್ಲಿ ತತ್ಪರ (ಬಿಜಿ) ಆಗುತ್ತೀರಲ್ಲವೇ! ವಾಣಿ ಮತ್ತು ಮನಸ್ಸಾ ಸೇವೆಯಲ್ಲಿ ಸಮತೋಲನ ಇದ್ದರೆ ಆಶೀರ್ವಾದ ಸಿಗುತ್ತದೆ. ಡಬ್ಬಲ್ ಖಾತೆ ಜಮಾ ಆಗುತ್ತದೆ. ಪುರುಷಾರ್ಥ ಮತ್ತು ಆಶೀರ್ವಾದದ ಸಂಕಲ್ಪ, ಮಾತು, ವಾಣಿ, ಕರ್ಮ, ಸಂಬಂಧ ಮತ್ತು ಸಂಪರ್ಕದ ಮುಖಾಂತರ ಆಶೀರ್ವಾದ ನೀಡಿ ಮತ್ತು ಆಶೀರ್ವಾದ ಪಡೆಯಿರಿ. ಒಂದೇ ವಿಚಾರ ಇರಲಿ - ಆಶೀರ್ವಾದ ನೀಡುವುದು. ಭಲೆ ನಿಮಗೆ ಶಾಪವನ್ನು ಹಾಕಲಿ ಆದರೆ ಅವರಿಗೂ ಸಹ ಆಶೀರ್ವಾದವನ್ನೇ ನೀಡಿ. ಏಕೆಂದರೆ ನೀವ�� ಆಶೀರ್ವಾದದ ಸಾಗರನ ಮಕ್ಕಳು ಬೇರೆಯವರು ಮುನಿಸಿಕೊಂಡರೂ ಸಹ ನೀವು ಮುನಿಸಿಕೊಳ್ಳಬೇಡಿ. ನೀವು ರಹಸ್ಯ ಯುಕ್ತರಾಗಿರಲು ಸಾಧ್ಯವೇ? ಆಗುತ್ತದೆಯೇ? ಆಗುತ್ತದೆಯೇ? ಎರಡೆನೆಯ ಸಾಲಿನಲ್ಲಿ ಕುಳಿತಿರುವವರಿಗೆ ಆಗುತ್ತದೆಯೇ? ನೋಡುತ್ತೀರಿ ಈಗ ಇನ್ನು ಹೆಚ್ಚು ಬೇಜಾರು ಪಡೆಸುತ್ತಾರೆ! ಪರೀಕ್ಷೆಗಳು ಇನ್ನೂ ಅನೇಕ ಬರಲಿದೆ. ಮಾಯೆ ಕೇಳಿಸಿಕೊಳ್ಳುತ್ತಿದೆ! ಈಗ ಪತ್ರ ತೆಗೆದುಕೊಳ್ಳಿ. ದೃಢ ಸಂಕಲ್ಪ ಮಾಡಿ ನಾನು ಆಶೀರ್ವಾದವನ್ನೇ ನೀಡಿ ಮತ್ತು ಆಶೀರ್ವಾದವನ್ನೇ ಪಡೆಯಬೇಕಾಗಿದೆ ಆಗುತ್ತದೆಯೇ? ಮಾಯೆಯು ಭಲೆ ಬೇಜಾರು ಪಡೆಸಿದರೂ ನೀವು ರಹಸ್ಯಯುಕ್ತರಾಗಿರುತ್ತೀರಲ್ಲವೇ? ಬೇಜಾರಾಗಬಾರದು ಹಾಗೂ ಬೇರೆಯವರನ್ನು ಪಡೆಸಬಾರದು - ಇದು ಒಂದೇ ಕಾರ್ಯವನ್ನು ಮಾಡಿ. ಬೇರೆಯವರು ಭಲೆ ಬೇಜಾರಾದರೂ ತಾವು ಆಗಬಾರದು. ನಾವು ಬೇಜಾರು ಮಾಡದಿದ್ದರೂ ನಾವು ಬೇಜಾರು ಆಗಬಾರದು. ಪ್ರತಿಯೊಬ್ಬರು ಈ ಜವಾಬ್ದಾರಿ ತೆಗೆದುಕೊಳ್ಳಿ. ಬೇರೆಯವರನ್ನು ನೋಡಬೇಡಿ. ಅವರು ಮಾಡುತ್ತಾರೆ, ಇವರು ಮಾಡುತ್ತಾರೆ, ನಾವು ಸಾಕ್ಷಿಯಾಗಿದ್ದು ಆಟವನ್ನು ನೋಡಬೇಕಾಗಿದೆ. ಕೇವಲ ರಹಸ್ಯಯುಕ್ತ ಆಟವನ್ನೇ ನೋಡುತ್ತೀರಾ, ಬೇಜಾರು ಪಡೆಸುವಂತಹ ಆಟವನ್ನು ಮಧ್ಯ-ಮಧ್ಯ ನೋಡಿ, ಆದರೆ ಪ್ರತಿಯೊಬ್ಬರು ತಮಗೆ ತಾವೇ ರಾಜಿ ಮಾಡಿಕೊಳ್ಳಿ.
|
6 |
+
ಹೇ! ಮಾತೆಯರೇ ಆಗುತ್ತದೆಯೇ? ಪಾಂಡವರೇ ಆಗುತ್ತದೆಯೇ? ಬಾಪ್ದಾದಾ ನಕ್ಷೆಯನ್ನು ನೋಡುತ್ತಾರೆ. ಬಾಪ್ದಾದಾರವರ ಬಳಿ ತುಂಬಾ ದೊಡ್ಡದಾದ ಟಿ.ವಿ ಇದೆ. ಪ್ರತಿಯೊಬ್ಬರನ್ನು ನೋಡಬಹುದಾಗಿದೆ. ಯಾವುದೇ ಸಮಯದಲ್ಲಿ ಯಾರೇ ಆದರೂ ಏನೇ ಮಾಡುತ್ತಿದ್ದರೂ ಬಾಪ್ದಾದಾ ನೋಡುತ್ತಾರೆ. ಆದರೆ ಏನೇನು ಮಾಡುತ್ತೀರಿ ಅದನ್ನೂ ಸಹ ನೋಡುತ್ತಾರೆ. ಮಕ್ಕಳೂ ಸಹ ಬಹಳ ಬುದ್ಧಿವಂತಿಕೆಯನ್ನು ತೋರಿಸುತ್ತಾರೆ. ಒಂದುವೇಳೆ ನಿಮ್ಮ ಚಲಾಕಿತನವನ್ನು ಬಾಪ್ದಾದಾ ಹೇಳಿದರೆ ನೀವು ಕೇಳಿ ಸ್ವಲ್ಪ ಚಿಂತಿತರಾಗುತ್ತೀರಾ! ನಿಮ್ಮನ್ನು ಏಕೆ ಚಿಂತಿತಗೊಳಿಸಲಿ. ಆದರೆ ಬಹಳ ಬುದ್ಧಿವಂತಿಕೆಯಿಂದ ಮಾಡುತ್ತೀರಿ. ಒಂದುವೇಳೆ ಬುದ್ಧಿವಂತಿಕೆಯನ್ನು ನೋಡಬೇಕೆಂದರೆ ಬ್ರಾಹ್ಮಣರಲ್ಲಿಯೇ ನೋಡಿ. ಆದರೆ ಈಗ ಯಾವುದರಲ್ಲಿ ಬುದ್ಧಿವಂತರಾಗಬೇಕಾಗಿದೆ? ಮನಸ್ಸಾ ಸೇವೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಿರಿ. ಹಿಂದೆ ಬೀಳಬೇಡಿರಿ. ಇದಕ್ಕೆ - ಸಮಯ ಸಿಗುವುದಿಲ್ಲ, ಅವಕಾಶ ಸಿಗುವುದಿಲ್ಲ, ಆರೋಗ್ಯ ಸರಿಯಿರುವುದಿಲ್ಲ, ಯಾರೂ ಕೇಳಲೇಯಿಲ್ಲ, ಇತ್ಯಾದಿ ಯಾವ ನೆಪಹೇಳಬೇಡಿ, ಎಲ್ಲರೂ ಮಾಡಬೇಕಾಗಿದೆ. ಮಕ್ಕಳು ಓಡುವ ಆಟವನ್ನು ಆಡಿದ್ದೀರಲ್ಲವೇ! ಈಗ ಮನಸ್ಸಾ ಸೇವೆಯಲ್ಲಿ ಓಡಬೇಕಾಗಿದೆ. ಒಳ್ಳೆಯದು.
|
7 |
+
ಕರ್ನಾಟಕದ ಸೇವಾಧಾರಿಯೊಂದಿಗೆ: ಕರ್ನಾಟಕದವರು ಯಾರು ಸೇವೆಯಲ್ಲಿ ಬಂದಿದ್ದೀರಿ ಎದ್ದು ನಿಲ್ಲಿರಿ. ಇಷ್ಟೊಂದು ಜನರು ಸೇವೆಯಲ್ಲಿ ಬಂದಿದ್ದೀರಾ, ಪಾರ್ಟಿಯಲ್ಲಿ ಬಂದಿರುವವರಲ್ಲ, ಸೇವಾಧಾರಿಯಾಗಿ ಬಂದಿರುವವರು. ಒಳ್ಳೆಯದು, ಇದೂ ಸಹ ಸಹಜವಾಗಿ ಶ್ರೇಷ್ಠ ಪುಣ್ಯವನ್ನು ಜಮಾ ಮಾಡಿಕೊಳ್ಳುವ ಸುವರ್ಣವಕಾಶ ಸಿಕ್ಕಿದೆ. ಭಕ್ತಿಯಲ್ಲಿ ಹೇಳಲಾಗುತ್ತದೆ, ಒಬ್ಬ ಬ್ರಾಹ್ಮಣರ ಸೇವೆಯನ್ನು ಮಾಡುವುದರಿಂದ ಬಹಳ ಪುಣ್ಯ ಪ್ರಾಪ್ತಿಯಾಗುತ್ತದೆ. ಇಲ್ಲಿ ಎಷ್ಟೊಂದು ಶ್ರೇಷ್ಠ ಸತ್ಯ ಬ್ರಾಹ್ಮಣರ ಸೇವೆಯನ್ನು ಮಾಡುತ್ತೀರಿ. ಇಂತಹ ಒಳ್ಳೆಯ ಚಾನ್ಸ್ ಸಿಗುತ್ತದೆಯಲ್ಲವೇ! ಚೆನ್ನಾಗಿದೆಯೇ, ಧಣಿವಾಯಿತೇ? ಧಣಿವಾಗಲಿಲ್ಲವೇ! ಮಜಾ ಇದೆಯೇ! ಒಂದುವೇಳೆ ಸತ್ಯ ಹೃದಯದಿಂದ ಪುಣ್ಯ ಎಂದು ತಿಳಿದು ಸೇವೆ ಮಾಡಿದರೆ ಅದರ ಪ್ರತ್ಯೇಕ ಫಲ ಧಣಿವಾಗುವುದಿಲ್ಲ, ಖುಷಿಯಾಗುತ್ತದೆ. ಈ ಪ್ರತ್ಯೇಕ ಫಲ ಪುಣ್ಯದ ಜಮಾದ ಅನುಭವ ಮಾಡಿಸುತ್ತದೆ. ಆದರೆ ಸ್ವಲ್ಪವೂ ಯಾವುದೇ ಕಾರಣದಿಂದ ಸುಸ್ತಾದರೇ ಅಥವಾ ಸ್ವಲ್ಪ ಮಾತ್ರವೂ ಅನುಭವಾದರೆ ತಿಳಿದುಕೊಳ್ಳಿ, ಸತ್ಯಹೃದಯದಿಂದ ಸೇವೆ ಮಾಡಲಿಲ್ಲ. ಸೇವೆಯೆಂದರೆ ಪ್ರತ್ಯೇಕ ಫಲ - ಮೇವಾ. ಸೇವೆ ಮಾಡುವುದಿಲ್ಲ ಆದರೆ ಫಲ ತಿನ್ನುತ್ತಾರೆ. ಆದರೆ ಕರ್ನಾಟಕದ ಸರ್ವ ಸೇವಾಧಾರಿಗಳು ತಮ್ಮ ಒಳ್ಳೆಯ ಸೇವೆಯ ಪಾತ್ರ ಮಾಡಿದಿರಿ. ಹಾಗೂ ಸೇವೆಯ ಫಲವನ್ನು ತಿಂದಿರಿ.
|
8 |
+
ಒಳ್ಳೆಯದು ಎಲ್ಲಾ ಶಿಕ್ಷಕಿಯರು ಚೆನ್ನಾಗಿದ್ದೀರಾ? ಶಿಕ್ಷಕಿಯರಿಗಂತೂ ಅನೇಕ ಬಾರಿ ತಂದೆಯ ಮಿಲನದ ಅವಕಾಶ ಸಿಗುತ್ತದೆ. ಇದೂ ಸಹ ಭಾಗ್ಯದ ಗುರುತಾಗಿದೆ. ಈಗ ಶಿಕ್ಷಕಿಯರು ಮನಸ್ಸಾ ಸೇವೆಯಲ್ಲಿ ರೇಸ್ ಮಾಡಬೇಕಾಗಿದೆ. ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಇಡೀ ದಿವಸ ಅದರಲ್ಲೇ ಕುಳಿತುಬಿಡುವುದಿಲ್ಲ. ಯಾರಾದರು ಕೋರ್ಸ್ಗೆ ಬಂದಾಗ ನಾನು ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಕಳುಹಿಸಿಬೇಡಿರಿ. ಏನಾದರೂ ಕರ್ಮಯೋಗದ ಸಮಯ ಬಂದಾಗ ನಾನು ಮನಸ್ಸಾ ಸೇವೆ ಮಾಡುತ್ತಿದ್ದೇನೆಂದು ಹೇಳುವುದು ಸರಿಯಲ್ಲ. ಸಮತೋಲನ ಇರಬೇಕು. ಕೆಲವರಿಗೆ ಹೆಚ್ಚು ನಶೆ ಏರಿಬಿಡುತ್ತದೆಯಲ್ಲವೇ! ಈ ರೀತಿಯ ನಶೆಯನ್ನು ಏರಿಸಿಕೊಳ್ಳಬಾರದು. ಸಮತೋಲನದಲ್ಲಿ ಆಶೀರ್ವಾದ ಇದೆ. ಸಮತೋಲನೆ ಇಲ್ಲವೆಂದರೆ ಆಶೀರ್ವಾದ ಇಲ್ಲ. ಒಳ್ಳೆಯದು.
|
9 |
+
ಈಗ ಒಂದು ಸೆಕೆಂಡಿನಲ್ಲಿ ಎಲ್ಲರೂ ಮನಸ್ಸಾ ಸೇವೆಯ ಅನುಭವವನ್ನು ಮಾಡಿ. ಆತ್ಮಗಳಿಗೆ ಶಾಂತಿ ಮತ್ತು ಶಕ್ತಿಯ ದಾನವನ್ನು ನೀಡಿ. ಒಳ್ಳೆಯದು ನಾಲ್ಕೂ ಕಡೆಯ ಸರ್ವ ಶ್ರೇಷ್ಠ ಆತ್ಮೀಯತೆಯ ಅನುಭವ ಮಾಡಿಸುವಂತಹ ಆತ್ಮಗಳಿಗೆ, ಸರ್ವ ಸಂಕಲ್ಪ ಮತ್ತು ಸ್ನೇಹದಲ್ಲಿಯೂ ಸಹ ಪವಿತ್ರತೆಯ ಪಾಠವನ್ನು ಕಲಿಯುವಂತಹ ಬ್ರಹ್ಮಾಚಾರಿ ಮಕ್ಕಳಿಗೆ, ಎಲ್ಲಾ ದೃಢ ಸಂಕಲ್ಪಧಾರಿ, ಮನಸ್ಸಾ ಸೇವಾಧಾರಿ, ತೀವ್ರ ಪುರುಷಾರ್ಥಿ ಆತ್ಮಗಳಿಗೆ, ಸದಾ ಆಶೀರ್ವಾದವನ್ನು ನೀಡಿ ಮತ್ತು ಆಶೀರ್ವಾದವನ್ನು ಪಡೆಯುವಂತಹ ಪುಣ್ಯ ಆತ್ಮಗಳಿಗೆ ಬಾಪ್ದಾದಾರವರ ಹೃದಯರಾಮ ತಂದೆಯ ಅತೀ ಪ್ರೀತಿಯ ನೆನಪು ಪ್ರೀತಿ ಹಾಗೂ ನಮಸ್ತೆ.
|
10 |
+
ದಾದೀಜಿ, ಜಾನಕಿ ದಾದೀಜಿಯವರೊಂದಿಗೆ ವ್ಯಕ್ತಿಗತ ಮಿಲನ:- ಬಾಪ್ದಾದಾ ತ್ರಿಮೂರ್ತಿ ಬ್ರಹ್ಮನ ದೃಶ್ಯವನ್ನು ತೋರಿಸಿದರು. ನೀವೆಲ್ಲರೂ ನೋಡಿದಿರಲ್ಲವೇ? ಏಕೆಂದರೆ ತಂದೆ ಸಮಾನ ತಂದೆಯ ಪ್ರತಿ ಕಾರ್ಯದಲ್ಲಿ ಜೊತೆಗಾರರಲ್ಲವೇ! ಆದುದರಿಂದ ಈ ದೃ��್ಯವನ್ನು ತೋರಿಸಲಾಯಿತು. ಬಾಪ್ದಾದಾ ನೀವಿಬ್ಬರಿಗೂ ವಿಶೇಷ ಶಕ್ತಿಗಳನ್ನು ವಿಲ್ ಮಾಡಿದ್ದಾರೆ. ವಿಲ್ ಪವರ್ನ್ನೂ ಸಹ ಕೊಟ್ಟಿದ್ದಾರೆ ಹಾಗೂ ಎಲ್ಲಾ ಶಕ್ತಿಗಳನ್ನು ವಿಲ್ ಮಾಡಿದ್ದೇವೆ ಆದುದರಿಂದ ಆ ಎಲ್ಲಾ ಶಕ್ತಿಗಳು ತಮ್ಮ ಕೆಲಸವನ್ನು ಮಾಡುತ್ತಿವೆ. ಮಾಡಿ ಮಾಡಿಸುವವರು ಮಾಡಿಸುತ್ತಿದ್ದಾರೆ ಹಾಗೂ ನಿಮಿತ್ತರಾಗಿ ಮಾಡುತ್ತಿದ್ದೀರಿ ಆ ಈ ರೀತಿ ಮಾಡಲು ಮಜಾ ಅನಿಸುತ್ತದೆಯಲ್ಲವೇ! ಮಾಡಿ ಮಾಡಿಸುವವರ ಮಾಡಿಸುತ್ತಿದ್ದಾರೆ. ಆದುದರಿಂದ ಮಾಡಿ ಮಾಡಿಸುವವರು ಮಾಡಿಸುತ್ತಿರುವ ಕಾರಣ ನೀವು ನಿಶ್ಚಿಂತರಾಗಿ ಮಾಡುತ್ತಿದ್ದೀರಿ. ಚಿಂತೆ ಇರುವುದಿಲ್ಲವಲ್ಲವೇ! - ನೀವು ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ. ಮಾಸ್ಟರ್ ಡಿಗ್ರಿಯನ್ನು ಆರ್ಥಾತ್ - ತಂದೆ ಸಮಾನ ಸ್ಥಾನವನ್ನು ಪಾಸ್ ಮಾಡಿದ್ದೀರಿ, ಕೇವಲ ಈಗ ಪುನರಾವರ್ತನೆ ಮಾಡಬೇಕು. ಪುನರಾವರ್ತನೆ ಮಾಡುವಾಗ ಕಷ್ಟವಾಗುವುದಿಲ್ಲ. ಇಲ್ಲವಾದರೆ ಮಾಸ್ಟರ್ ಡಿಗ್ರಿಯನ್ನು ಯಾರು ತೆಗೆದುಕೊಳ್ಳುತ್ತಿದ್ದರು! ಬೇರೆ ಮಾಸ್ಟರ್ ಡಿಗ್ರಿ ತೆಗೆದುಕೊಳ್ಳುವವರೂ ಸಹ ನಿಮ್ಮ ಜೊತೆಗಾರರಾಗಿರುತ್ತಾರೆ. ಜೊತಗಾರರೂ ಬೇಕಲ್ಲವೇ! ಆದರೆ ಆಗಲೇಬೇಕಾಗಿದೆ. ಅರ್ಥಾತ್ ನೀವು ತೇರ್ಗಡೆ ಆಗಿಯೇ ಇದ್ದೀರಿ. ತೇರ್ಗಡೆ ಆಗಿಲ್ಲವೇ! ಎಷ್ಟೊಂದು ಸಾರಿ ತೇರ್ಗಡೆ ಆಗಿದ್ದೀರಿ.....! ಎಷ್ಟೊಂದು ಸಾರಿ ತೇರ್ಗಡೆ ಆಗಿದ್ದೀರಿ.....! (ಅನೇಕ ಸಾರಿ) ಅನೇಕ ಸಾರಿ ಮಾಡಿರುವ ಕಾರಣ ಅದು ಆಗಿಯೇ ಇದೆ. ಒಳ್ಳೆಯದು. ಆರೋಗ್ಯವನ್ನು ಕುರಿತು ಜ್ಞಾನಪೂರ್ಣರಾಗಿರಬೇಕು. ಸ್ವಲ್ಪ ಏರು-ಪೇರು ಆಗುತ್ತದೆ. ಇದರಲ್ಲಿಯೂ ನಾಲೆಡ್ಜ್ಫುಲ್ ಆಗಬೇಕಾಗುತ್ತದೆ. ಏಕೆಂದರೆ ಇನ್ನೂ ಬಹಳ ಸೇವೆ ಮಾಡಬೇಕಾಗಿದೆ. ಹೀಗೆ ಆರೋಗ್ಯವೂ ಸಹಯೋಗ ಕೊಡುತ್ತದೆ. ಈ ರೀತಿ ಡಬಲ್ ನಾಲೆಡ್ಜ್ಫುಲ್ ಆಗಿದ್ದೀರಿ. ಒಳ್ಳೆಯದು.
|
BKMurli/BKMurli/page_100.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಿದ್ದಾರೆ, ಓದಿಸುತ್ತಲೂ ಇದ್ದಾರೆ. ಏನು ತಿಳಿಸುತ್ತಿದ್ದಾರೆ? ಮಧುರ ಮಕ್ಕಳೇ ನಿಮಗೆ ಮೊದಲನೆಯದಾಗಿ ಧೀರ್ಘಾಯಷ್ಯ ಬೇಕು ಏಕೆಂದರೆ ನಿಮ ಅಯುಷ್ಯ ಬಹಳ ದೀರ್ಘವಾಗಿತ್ತು, 150 ವರ್ಷ ಅಯಷ್ಯವಿತ್ತು, ದೀರ್ಘಾಯಸ್ಸು ಹೇಗೆ ಸಿಗುತ್ತದೆ? ತಮೊಪ್ರಧಾನದಿಂದ ಸತೋಪ್ರಧಾನರಾಗುವುದರಿಂದ, ಯಾವಗ ನೀವು ಸತೋಪ್ರಧಾನರಾಗಿದ್ದಿರೋ ಆಗ ನಿಮ್ಮದು ಬಹಳ ದಿರ್ಘಾಯಸ್ಸಾಗಿತ್ತು, ಈಗ ನೀವು ಮೇಲೇರುತಿದ್ದೀರಿ. ನಿಮಗೆ ಗೊತ್ತಿದೆ, ನಾವು ತಮೋಪ್ರಧಾನರಾಗಿದ್ದರಿಂದ ನಮ ಆಯಸ್ಸು ಚಿಕ್ಕದಾಗಿಬಿಟ್ಟಿತು. ಆರೊಗ್ಯವು ಸರಿಯಿರಲಿಲ್ಲ, ಸಂಪೂರ್ಣ ರೊಗಿಗಳಾಗಿದ್ದೆವು. ಈ ಜೀವನ ಹಳೆಯದಾಗಿದೆ, ಹೊಸದರೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಈಗ ನಿಮಗೆ ತಿಳಿದಿದೆ-ತಂದೆಯು ನಿಮಗೆ ಆಯಸ್ಸು ದೀರ್ಘವನ್ನಾಗಿ ಮಾಡಿಕೊಳ್ಳುವ ಯುಕ್ತಿಯನ್ನು ತಿಳಿಸುತ್ತಾರೆ. ಮಧುರಾತಿ ಮಧುರ ಮಕ್ಕಳೆ, ನನ್ನನ್ನು ನೆನಪು ಮಾಡುವಿರೆಂದರೆ ನೀವು ಮೊದಲು ಹೇಗೆ ಸತೋಪ್ರಧಾನರಾಗಿದ್ದಿರಿ, ದೀರ್ಘಾಯಸ್ಸುಳ್ಳವರು, ಆರೋಗ್ಯವಂತರಾಗಿದ್ದಿರೋ ಅದೇ ರೀತಿ ಪುನಃ ಆಗಿಬಿಡುವಿರಿ, ಕಡಿಮೆ ಆಯಿಸ್ಸಿದ್ದರೆ ಸಾಯುವ ಭಯವಿರುತ್ತದೆ. ನಿಮಗಂತೂ ಗ್ಯಾರಂಟಿ ಸಿಗುತ್ತದೆ - ಸತ್ಯಯುಗದಲ್ಲಿ ಹೀಗೆ ಅಕಸ್ಮಿಕವಾಗಿ ಎಂದೂ ಸಾಯುವುದಿಲ್ಲ ತಂದೆಯನ್ನು ನೆನಪು ಮಾಡುತಿದ್ದರೆ ದಿರ್ಘಾಯುಸ್ಸುವಾಗುತ್ತೇವೆ ಮತ್ತು ಎಲ್ಲ ದುಃಖಗಳು ದೂರವಾಗಿಬಿಡುತ್ತದೆ. ಯಾವುದೇ ಪ್ರಕಾರದ ದುಃಖವಿರುವದಿಲ್ಲ. ಅಂದ ಮೇಲೆ ನಿಮಗೆ ಇನ್ನೇನು ಬೇಕು. ಶ್ರೇಷ್ಠ ಪದವಿಯು ಬೇಕೆಂದು ನೀವು ಹೆಳುತ್ತೀರಿ. ಇಂತಹ ಪದವಿಯು ಸಿಗುತ್ತದೆಂದು ನಿಮಗೆ ತಿಳಿದಿರಲಿಲ್ಲ. ಈಗ ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ- ಮಕ್ಕಳೇ, ಈ ರೀತಿ ಮಾಡಿ ಎಂದು, ಗುರಿ ಉದ್ದೇಶವು ಸನ್ಮುಖದಲ್ಲಿದೆ. ನೀವು ಇಂತಹ ಪದವಿಯನ್ನು ಪಡೆಯುತ್ತಿದ್ದೀರಿ, ಇಲ್ಲಿಯೇ ದೈವಿ ಗುಣಗಳನ್ನು ಧಾರಣೆ ಮಾಡಬೇಕಾಗಿದೆ, ತಮ್ಮನ್ನು ಕೇಳಿಕೊಳ್ಳಬೇಕು- ನಮ್ಮಲ್ಲಿ ಯಾವುದೇ ಆವಗುಣಗಳಿಲ್ಲವೆ? ಅವಗುಣಗಳು ಅನೇಕ ಪ್ರಕಾರವಾಗಿವೆ. ಸಿಗರೇಟ್ ಸೇದುವುದು, ಕೊಳಕು ಪದಾರ್ಥಗಳನ್ನು ತಿನ್ನುವದು ಇದು ಅವಗುಣವಾಗಿದೆ. ಎಲ್ಲಕ್ಕಿಂತ ದೊಡ್ದ ಆವಗುಣವು ವಿಕಾರದ್ದಾಗಿದೆ. ಇದಕ್ಕೆ ಕೆಟ್ಟಚಾರಿತ್ರ್ಯವೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ವಿಕಾರಿಗಳಾಗಿಬಿಟ್ಟದ್ದೀರಿ, ಈಗ ನಿಮಗೆ ನಿರ್ವಿಕಾರಿಗಳಾಗುವ ಯುಕ್ತಿಯನ್ನು ತಿಳಿಸುತ್ತೇನೆ ಇದರಲ್ಲಿ ಈ ವಿಕಾರಗಳನ್ನು, ಅವಗುಣಗಳನ್ನು ತೆಗೆದು ಬಿಡಬೇಕಾಗಿದೆ. ಎಂದೂ ವಿಕಾರಿಗಳಾಗಬಾರದು. ಈ ಜನ್ಮದಲ್ಲಿ ಯಾರು ಸುಧಾರಣೆ ಯಾಗುವರೊ ಆ ಸುಧಾರಣೆಯು 21 ಜನ್ಮಗಳವರಗೆ ನಡೆಯುತ್ತದೆ. ಎಲ್ಲದಕ್ಕಿಂತ ಅವಶ್ಯಕ ಮಾತೆಂದರೆ ನಿರ್ವಿಕಾರಿಯಾಗುವುದು, ಜನ್ಮ-ಜನ್ಮಾಂತರದ ಹೊರೆಯು ಯಾವುದು ತಲೆಯ ಮೇಲೆ ಏರಿದೆಯೊ ಅ���ು ಯೋಗಬಲದಿಂದಲೇ ಇಳಿಯುತ್ತದೆ. ಮಕ್ಕಳಿಗೂ ಗೊತ್ತಿದೆ - ನಾವು ಜನ್ಮಜನ್ಮಾಂತರದಿಂದ ವಿಕಾರಿಗಳಗಿದ್ದೆವು, ಈಗ ತಂದೆಯೊಂದಿಗೆ ನಾವು ಪ್ರತಿಜ್ಞೆ ಮಾಡುತ್ತೇವೆ-ಮತ್ತೆಂದೂ ವಿಕಾರಿಗಳಾಗುವದಿಲ್ಲ. ತಂದೆಯು ಹೆಳಿದ್ದಾರೆ- ಒಂದು ವೇಳೆ ಪತಿತರಾದರೆ ಒಂದಕ್ಕೆ ನೂರರಷ್ಟು ಶಿಕ್ಷೆಯನ್ನು ಅನುಭವಿಸಬೇಕಾಗುವುದು, ಪದವಿಯೂ ಭ್ರಷ್ಟವಾಗುವುದು ಏಕೆಂದರೆ ನಿಂದನೆ ಮಾಡಿಸಿದಿರಲ್ಲವೆ! ಆಂದರೆ ಆಕಡೆ (ವಿಕಾರಿ ಮನುಷ್ಯರ ಕಡೆ) ಹೋದಿರಿ ಎಂದರ್ಥ. ಹೀಗೆ ಅನೇಕರು ಹೊರಟು ಹೋಗುತ್ತಾರೆ ಅಂದರೆ ಸೋತುಹೋಗುತ್ತಾರೆ ಈ ವಿಕಾರದ ವ್ಯಾವಹಾರವನ್ನು ಮಾಡಬಾರದೆಂದು ನಿಮಗೆ ಮೊದಲು ತಿಳಿದಿರಲಿಲ್ಲ. ಕೆಲ ಕೆಲವರು ಒಳ್ಳೆಯ ಮಕ್ಕಳಿರುತ್ತಾರೆ. ನಾವು ಬ್ರಹ್ಮಚರ್ಯದಲ್ಲಿರುತ್ತೇವೆಂದು ಹೇಳುತ್ತಾರೆ. ಸನ್ಯಾಸಿಗಳನ್ನು ನೋಡಿ ಪವಿತ್ರತೆಯು ಒಳ್ಳೆಯದೆಂದು ತಿಳಿಯುತ್ತಾರೆ. ಪವಿತ್ರರು ಮತ್ತು ಅಪವಿತ್ರರು, ಪ್ರಪಂಚದಲ್ಲಿ ಅಪವಿತ್ರರು ಬಹಳ ಇದ್ದಾರೆ. ಪಾಯಖಾನೆಗೆ ಹೋಗುವುದೂ ಸಹ ಒಂದು ರೀತಿಯ ಅಪವಿತ್ರತೆ ಆದ್ದರಿಂದ ತಕ್ಷಣ ಸ್ನಾನ ಮಾಡಬೇಕು. ಅಪವಿತ್ರತೆ ಅನೇಕ ಪ್ರಕಾರದಿರುತ್ತದೆ. ಅನ್ಯರಿಗೆ ದುಃಖ ಕೊಡುವುದು, ಹೊಡೆಯುವುದು-ಜಗಳವಾಡುವುದು ಅಪವಿತ್ರ ಕರ್ತವ್ಯವಾಗಿದೆ. ತಂದೆ ಹೇಳುತ್ತಾರೆ ಜನ್ಮ-ಜನ್ಮಾಂತರದಿಂದಲೂ ನೀವು ಪಾಪ ಮಾಡಿದ್ದೀರಿ. ಅವೆಲ್ಲ ಹವ್ಯಾಸಗಳು ಈಗ ತೆಗೆಯಬೇಕು. ಈಗ ನೀವು ಸತ್ಯ ಸತ್ಯ ಮಾಹನ್ ಆತ್ಮರಾಗಬೇಕು. ಸತ್ಯ-ಸತ್ಯ ಮಹಾನ್ ಆತ್ಮರಂತೂ ಲಕ್ಷೀ ನಾರಾಯಣರಾಗಿದ್ದಾರೆ. ಮತ್ಯಾರೂ ಇಲ್ಲಿ ಆಗಲು ಸಾಧ್ಯವಿಲ್ಲ. ಏಕೆಂದರೆ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಬಹಳ ನಿಂದನೆಯನ್ನು ಮಾಡುತ್ತಾರಲ್ಲವೆ! ನಾವೇನು ಮಾಡುತ್ತೇವೆಂದು ಅವರಿಗೆ ತಿಳಿಯುವುದೇ ಇಲ್ಲ. ಒಂದು ಗುಪ್ತ ಪಾಪವಾಗಿದೆ. ಇನ್ನೊಂದು ಪ್ರತ್ಯಕ್ಷ ಪಾಪವಾಗಿದೆ. ಇದು ತಮೋಪ್ರಧಾನ ಪ್ರಪಂಚವಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆ ನಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತಾರೆ ಆದ್ದರಿಂದ ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ. ಎಲ್ಲರಿಗಿಂತ ಒಳ್ಳೆಯ ತಿಳುವಳಿಕೆ ನಿಮಗೆ ಸಿಕ್ಕಿದೆ. ಪಾವನರಾಗಬೇಕು ಮತ್ತು ಗುಣಗಳೂ ಬೇಕು. ದೇವತೆಗಳ ಮುಂದೆ ನೀವು ಮಹಿಮೆ ಮಾಡುತ್ತಾ ಬಂದಿದ್ದೀರಿ. ಈಗ ನೀವು ಅವರಂತೆ ಆಗಬೇಕು. ಮಧುರಾತಿ ಮಧುರ ಮಕ್ಕಳೇ ನೀವು ಎಷ್ಟೊಂದು ಮಧುರ ಹೂಗಳಾಗಿದ್ದಿರಿ. ನಂತರ ಮುಳ್ಳುಗಳಾದಿರಿ. ಈಗ ತಂದೆಯನ್ನು ನೆನಪು ಮಾಡಿರಿ, ಆ ನೆನಪಿನಿಂದ ನಿಮ್ಮದು ದೀರ್ಘಾಯುಸ್ಸಾಗುತ್ತದೆ, ಪಾಪಗಳೂ ಭಸ್ಮವಾಗುತ್ತದೆ. ತಲೆಯ ಮೇಲಿರುವ ಹೊರೆಯು ಹಗುರವಾಗುತ್ತದೆ. ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಏನೇನು ಅವಗುಣಗಳಿವೆಯೋ ಅವನ್ನು ತೆಗೆಯ ಬೇಕು. ಹೇಗೆ ನಾರದನ ಉದಾಹರಣೆಯಿದೆ, ನೀನು ಯೋಗ್ಯನಾಗಿರುವೆಯಾ ಎಂದು ಕೇಳಿದರು ಆಗ ನಾರದರು ಮುಖವನ್ನು ನೋಡಿಕೊಂಡಾಗ ನಾನು ಅವಶ್ಯ ಯೋಗ್ಯನಿಲ್ಲ ಎಂದು ತಿಳ���ಯಿತು. ತಂದೆಗೆ ನೀವು ಮಕ್ಕಳಾಗಿದ್ದೀರಿ ಅಲ್ಲವೆ, ತಂದೆ ರಾಜನಾಗಿದ್ದರೆ ಮಕ್ಕಳು ನಶೆಯಿಂದ ಹೇಳಿಕೊಳ್ಳುತ್ತಾರಲ್ಲವೆ. ತಂದೆಯು ಬಹಳ ಸುಖ ನೀಡುವವರಾಗಿದ್ದಾರೆ. ಯಾರು ಒಳ್ಳೆಯ ಸ್ವಭಾವದ ಮಹಾರಾಜರಿರುತ್ತಾರೆ ಅವರಿಗೆ ಎಂದೂ ಕ್ರೋಧ ಬರುವುದಿಲ್ಲ. ಈಗಂತೂ ಇಳಿಯುತ್ತಾ ಹೋದಂತೆ ಎಲ್ಲರ ಕಲೆಗಳು ನಿಧಾನ ನಿಧಾನವಾಗಿ ಕಡಿಮೆಯಾಗಿವೆ. ಎಲ್ಲ ಅವಗುಣಗಳು ಪ್ರವೇಶವಾಗಿವೆ, ಕಲೆಗಳೂ ಕಡಿಮೆಯಾಗಿವೆ. ತಮೋ ಆಗುತ್ತ ಹೋಗಿದ್ದಾರೆ. ತಮೋಪ್ರಧಾನತೆಯೂ ಸಹ ಅಂತ್ಯವನ್ನು ತಲುಪಿದೆ. ಎಷ್ಟೊಂದು ದುಃಖಿಯಾಗಿದ್ದಾರೆ. ನೀವು ಎಷ್ಟೊಂದು ಸಹನೆ ಮಾಡಬೇಕಾಗುತ್ತದೆ. ಈಗ ಅವಿನಾಶಿ ಸರ್ಜನ್ ಮೂಲಕ ನಿಮ್ಮ ಚಿಕಿತ್ಸೆಯಾಗುತ್ತಿದೆ. ತಂದೆ ತಿಳಿಸುತ್ತಾರೆ - ಮಕ್ಕಳೇ, ಈ ಪಂಚ ವಿಕಾರಗಳಂತೂ ಪದೇ ಪದೇ ನಿಮ್ಮನ್ನು ಸತಾಯಿಸುತ್ತವೆ. ನೀವು ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಮಾಯೆ ನಿಮ್ಮನ್ನು ಕೆಳಗಿಳಿಸುವ ಪ್ರಯತ್ನ ಮಾಡುತ್ತದೆ. ನಿಮ್ಮ ಸ್ಥಿತಿ ಇನ್ನೂ ಶಕ್ತಿಶಾಲಿಯಾಗಬೇಕು, ಯಾವ ಮಾಯೆಯ ಬಿರುಗಾಳಿ ಅಲುಗಾಡಿಸಲು ಸಾಧ್ಯವಾಗಿರಬಾರದು. ರಾವಣನು ಯಾವುದೇ ವಸ್ತುವಲ್ಲ, ಅಥವಾ ಯಾವ ಮನುಷ್ಯನಲ್ಲ, ಪಂಚ ವಿಕಾರರೂಪಿ ರಾವಣನಿಗೆ ಮಾಯೆಯೆಂದು ಹೇಳುತ್ತಾರೆ. ಆಸುರೀ ರಾವಣ ಸಂಪ್ರದಾಯದವರು ನಿಮ್ಮನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ. ಕೊನೆಗೂ ಇವರು ಯಾರು? ಈ ಬ್ರಹ್ಮಾ ಕುಮಾರ-ಕುಮಾರಿಯರು ಏನು ಹೇಳುತ್ತಾರೆ? ಸ್ಪಷ್ಟ ರೀತಿಯಲ್ಲಿ ಯಾರೂ ತಿಳಿದುಕೊಂಡಿಲ್ಲ, ಇವರು ಬಿ.ಕೆ.ಗಳೆಂದು ಏಕೆ ಕರೆಸಿಕೊಳ್ಳುತ್ತಾರೆ, ಬ್ರಹ್ಮಾರವರು ಯಾರ ಸಂತಾನರಾಗಿದ್ದಾರೆ. ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ, ನಾವು ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈಗ ತಂದೆಯು ಕುಳಿತು ನೀವು ಮಕ್ಕಳಿಗೆ ಶಿಕ್ಷಣ ಕೊಡುತ್ತಾರೆ ಆಯುಷ್ಯವಾನ್ ಭವ, ಧನ್ವಾನ್ ಭವ..... ನಿಮ್ಮ ಎಲ್ಲಾ ಕಾಮನೆಗಳನ್ನು ಪೂರ್ಣಮಾಡುತ್ತಾರೆ ವರದಾನ ಕೊಡುತ್ತಾರೆ. ಆದರೆ ಕೇವಲ ವರದಾನದಿಂದ ಏನೂ ಕೆಲಸವಾಗುವುದಿಲ್ಲ. ಶ್ರಮಪಡಬೇಕಾಗುತ್ತದೆ. ಪ್ರತಿಯೊಂದು ಮಾತು ಅರಿತುಕೊಳ್ಳುವುದಾಗಿದೆ. ತಮಗೆ ರಾಜತಿಲಕ ಕೊಟ್ಟುಕೊಳ್ಳಲು ಅಧಿಕಾರಿಗಳಾಗಬೇಕಾಗಿದೆ. ತಂದೆಯು ಅಧಿಕಾರಿಗಳನ್ನಾಗಿ ಮಾಡುತ್ತಾರೆ. ಮಕ್ಕಳೇ ಹೀಗೆ ಹೀಗೆ ಮಾಡಿರಿ ಎಂದು ನೀವು ಮಕ್ಕಳಿಗೆ ಶಿಕ್ಷಣ ಕೊಡುತ್ತಾರೆ. ಮೊಟ್ಟ ಮೊದಲಿನ ಶಿಕ್ಷಣ ಆಗಿದೆ - ನನ್ನೊಬ್ಬನನ್ನು ನೆನಪು ಮಾಡಿ, ಮನುಷ್ಯರು ನೆನಪು ಮಾಡುವುದೇ ಇಲ್ಲ ಏಕೆಂದರೆ ಅವರಿಗೆ ಗೊತ್ತೇ ಇಲ್ಲ ಆದ್ದರಿಂದ ಅವರು ಮಾಡುವ ನೆನಪು ತಪ್ಪಾಗಿದೆ. ಈಶ್ವರ ಸರ್ವವ್ಯಾಪಿ ಎಂದು ಹೇಳುತ್ತಾರೆ ಅಂದ ಮೇಲೆ ಶಿವಬಾಬ ನನ್ನು ನೆನಪು ಹೇಗೆ ಮಾಡುತ್ತಾರೆ? ಶಿವನ ಮಂದಿರಕ್ಕೆ ಹೋಗಿ ಪೂಜೆ ಮಾಡುತ್ತಾರೆ. ನೀವು ಅವರನ್ನು ಕೇಳಿ - ಇವರ ಬಗ್ಗೆ ನಿಮಗೆ ತಿಳಿದಿದಿಯೇ? ಅದಕ್ಕೆ ಭಗವಂತನು ಸರ್ವವ್ಯಾಪಿ ಎಂದು ಹೇಳುತ್ತಾರೆ. ಪೂಜೆ ಮಾಡುತ್ತಾರೆ ಅವರಿಂದ ಕೃಪೆ ಬೇಡುತ್ತಾರೆ. ಬೇ���ುತ್ತಿದ್ದರೂ ಪರಮಾತ್ಮ ಎಲ್ಲಿದ್ದಾರೆ ಎಂದರೆ ಸರ್ವವ್ಯಾಪಿ ಎಂದು ಹೇಳುತ್ತಾರೆ. ಭಕ್ತಿಯಲ್ಲಿ ಎಷ್ಟು ತಪ್ಪುಗಳನ್ನು ಮಾಡುತ್ತಾರೆ. ಆದರೂ ಭಕ್ತಿಯೆಂದರೆ ಪ್ರೀತಿ ಇದೆ. ಕೃಷ್ಣನಿಗಾಗಿ ನಿರ್ಜಲ ಉಪವಾಸ, ವ್ರತಗಳನ್ನು ಮಾಡುತ್ತಾರೆ. ನೀವಿಲ್ಲಿ ಭಗವಂತನಿಂದ ಓದುತ್ತಿದ್ದೀರಿ. ನಿಮಗೀಗ ನಗು ಬರುತ್ತದೆ. ನಾಟಕದನುಸಾರ ಭಕ್ತಿಯನ್ನು ಮಾಡುತ್ತಾ ಇಳಿಯುತ್ತಲೇ ಬಂದಿದ್ದಾರೆ. ಮೇಲಂತೂ ಏರಲು ಯಾರಿಂದಲೂ ಸಾಧ್ಯವಿಲ್ಲ.
|
2 |
+
ಈಗ ಇದು ಪುರುಷೋತ್ತಮ ಸಂಗಮ ಯುಗವಾಗಿದೆ, ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ಈಗ ನೀವು ಪುರುಷೋತ್ತಮರಾಗಲು ಪುರುಷಾರ್ಥ ಮಾಡುತ್ತಿರುವಿರಿ. ಹೇಗೆ ಶಿಕ್ಷಕರು ವಿದ್ಯಾರ್ಥಿಯ ಸೇವಕರಾಗಿರುತ್ತಾರಲ್ಲವೆ, ವಿದ್ಯಾರ್ಥಿಗಳ ಸೇವೆ ಮಾಡುತ್ತಾರೆ. ಸರ್ಕಾರಿ ಸೇವಕರಾಗಿದ್ದಾರೆ, ಹಾಗೆಯೇ ತಂದೆಯೂ ಹೇಳುತ್ತಾರೆ - ನಾನು ನಿಮ್ಮ ಸೇವೆ ಮಾಡುತ್ತೇವೆ, ಓದಿಸುತ್ತೇನೆ ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ, ಶಿಕ್ಷರೂ ಆಗುತ್ತಾರೆ ಸೃಷ್ಟಿಯ ಆದಿ, ಮಧ್ಯ, ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಈ ಜ್ಞಾನವು ಮತ್ತ್ಯಾವ ಮನುಷ್ಯರಲ್ಲಿ ಇಲ್ಲ. ಯಾರೂ ಕಲಿಸಲು ಸಾಧ್ಯವುಲ್ಲ. ನಾವು ದೇವತೆಗಳಾಗಬೇಕೆಂದು ಪುರುಷಾರ್ಥ ಮಾಡುತ್ತೀರಿ. ಪ್ರಪಂಚದಲ್ಲಿ ಮನುಷ್ಯರು ಎಷ್ಟು ತಮೋ ಬುದ್ಧಿಯವರಾಗಿದ್ದಾರೆ, ಇದು ಬಹಳ ಭಯಾನಕಪ್ರಪಂಚವಾಗಿದೆ. ಮನುಷ್ಯರು ಯಾವುದನ್ನು ಮಾಡಬಾರದೋ ಅದನ್ನೇ ಮಾಡುತ್ತಾರೆ, ಎಷ್ಟೋಂದು ಕೊಲೆ, ಸುಲಿಗೆ ಮೊದಲಾದುದನ್ನು ಮಾಡುತ್ತಾರೆ. ಏನು ತಾನೇ ಮಾಡುವುದಿಲ್ಲ? 100% ತಮೋಪ್ರಧಾನರಾಗಿದ್ದಾರೆ, ಈಗ ನೀವು 100% ಸತೋಪ್ರಧಾನರಾಗುತ್ತಿದ್ದೀರಿ, ಅದಕ್ಕಾಗಿ ತಂದೆ ಯುಕ್ತಿಯನ್ನು ತಿಳಿಸಿದ್ದಾರೆ - ನೆನಪಿನ ಯಾತ್ರೆ. ನೆನಪಿನಿಂದಲೇ ವಿಕರ್ಮಗಳು ವಿನಾಶ ಆಗುತ್ತವೆ. ತಂದೆಯೊಂದಿಗೆ ಮಿಲನ ಮಾಡುತ್ತೀರಿ. ಭಗವಂತ ತಂದೆ ಹೇಗೆ ಬರುತ್ತಾರೆ ಎನ್ನುವುದನ್ನು ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ಈ ರಥದಲ್ಲಿ ಬಂದಿದ್ದಾರೆ. ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ ಇದನ್ನು ನೀವು ಧಾರಣೆ ಮಾಡಿ ಅವರಿಗೆ ತಿಳಿಸಿದಾಗ ಅವರಿಗೆ ನಾವೂ ನೇರವಾಗಿ ಕೇಳೋಣ, ತಂದೆಯ ಪರಿವಾರದಲ್ಲಿ ಹೋಗೋಣ ಎನ್ನುವ ಮನಸ್ಸಾಗುತ್ತದೆ. ಇಲ್ಲಿ ತಂದೆಯೂ ಇದ್ದಾರೆ, ತಾಯಿಯೂ ಇದ್ದಾರೆ, ಮಕ್ಕಳೂ ಇದ್ದಾರೆ. ಪರಿವಾರದಲ್ಲಿ ಬಂದುಬಿಡುತ್ತಾರೆ. ಅದಂತೂ ಆಸುರೀ ಪ್ರಪಂಚವಾಗಿದೆ ಆದ್ದರಿಂದ ಆಸುರೀ ಪರಿವಾರದಿಂದ ನೀವು ಬೇಸತ್ತು ಹೋಗುತ್ತೀರಿ. ಆ ಕಾರಣ ಉದ್ಯೋಗ ವ್ಯವಹಾರ ಬಿಟ್ಟು ತಂದೆಯ ಬಳಿ ರಿಫ್ರೆಶ್ ಆಗಲು ಬರುತ್ತೀರಿ. ಇಲ್ಲಿ ಬ್ರಾಹ್ಮಣರೇ ಇರುತ್ತಾರೆ. ಅದರಿಂದ ಈ ಪರಿವಾರದಲ್ಲಿ ಬಂದು ಕುಳಿತುಕೊಳ್ಳುತ್ತೀರಿ. ಮನೆಗೆ ಹೋದಾಗ ಇಂತಹ ಪರಿವಾರವಿರುವುದಿಲ್ಲ. ಅಲ್ಲಿ ದೇಹಧಾರಿಗಳಾಗಿಬಿಡುತ್ತಾರೆ. ವ್ಯಾಪಾರ ವ್ಯವಹಾರ ಜಂಜಾಟದಿಂದ ಬಿಡಿಸಿಕೊಂಡು ನೀವು ಇಲ್ಲಿಗೆ ಬರುತ್ತೀರಿ. ಈಗ ತಂದೆ ತಿಳಿಸುತ್ತಾರೆ - ಮಕ್ಕಳೇ, ದೇಹದ ಎಲ್���ಾ ಸಂಬಂಧಗಳನ್ನು ಬಿಡಿ. ನೀವೀಗ ಸುಗಂಧ ಭರಿತಹೂಗಳಾಗಬೇಕಗಿದೆ. ಹೂಗಳಲ್ಲಿ ಸುಗಂಧವಿರುತ್ತದೆ. ಎಲ್ಲರೂ ಅದನ್ನು ತೆಗೆದುಕೊಂಡು ಅದರ ಸುವಾಸನೆಯನ್ನು ನೋಡುತ್ತಾರೆ, ಎಕ್ಕದ ಹೂವನ್ನು ಯಾರೂ ತೆಗೆದುಕೊಳ್ಳುವುದಿಲ್ಲ, ಅಂದಾಗ ಹೂಗಳಾಗಲು ಪುರುಷಾರ್ಥ ಮಾಡಬೇಕು. ಆದ್ದರಿಂದ ಬಾಬಾರವರೂ ಸಹ ಹೂಗಳನ್ನು ತೆಗೆದುಕೊಂಡು ಬರುತ್ತಾರೆ. ಈ ಹೂವಿನ ಸಮಾನ ಆಗಬೇಕು. ಗೃಹಸ್ಥದಲ್ಲಿದ್ದು ಒಬ್ಬ ತಂದೆಯನ್ನು ನೆನಪು ಮಾಡಬೇಕು. ನಿಮಗೆ ಗೊತ್ತಿದೆ, ಈ ದೇಹದ ಸಂಬಂಧಿಗಳಂತೂ ಸಮಾಪ್ತಿಯಾಗುವವರಾಗಿದ್ದಾರೆ. ನೀವಿಲ್ಲಿ ಗುಪ್ತ ಸಂಪಾದನೆ ಮಾಡಿಕೊಳ್ಳುತ್ತಿರುವಿರಿ. ನೀವು ಶರೀರವನ್ನು ಬಿಡಬೇಕಾಗಿದೆ. ಸಂಪಾದನೆ ಮಾಡಿ ಬಹಳ ಖುಷಿಯಿಂದ ಹರ್ಷಿತ ಮುಖರಾಗಿ ಶರೀರ ಬಿಡಬೇಕು. ನಡೆದಾಡುತ್ತಾ ತಿರುಗಾಡುತಲೂ ತಂದೆಯ ನೆನಪಿನಲ್ಲಿದ್ದರೆ ನಿಮಗೆ ಎಂದೂ ಸುಸ್ತಾಗುವುದಿಲ್ಲ. ತಂದೆಯ ನೆನಪಿನಲ್ಲಿ ಅಶರೀರಿ ಆಗಿ ಎಷ್ಟೆ ಸುತ್ತಾಡಿದರೂ, ಇಲ್ಲಿಂದ ಅಬುರೋಡಿನವರೆಗೆ ನಡೆದುಕೊಂಡು ಹೋದರೂ ಸಹ ಸುಸ್ತಾಗುವುದಿಲ್ಲ. ಪಾಪಗಳು ತುಂಡಾಗುತ್ತವೆ. ಹಗುರರಾಗಿಬಿಡುತ್ತೀರಿ. ನೀವು ಮಕ್ಕಳಿಗೆ ಏಷ್ಟು ಲಾಭವಿದೆ. ಇದನ್ನು ಮತ್ತ್ಯಾರೂ ತಿಳಿಯಲಾರರು. ಇಡೀ ಪ್ರಪಂಚದ ಮನುಷ್ಯರು ಪತಿತ ಪಾವನ ತಂದೆಯೇ ಬಂದು ಪಾವನ ಮಾಡಿ ಎಂದು ಕರೆಯುತ್ತಾರೆ. ಅಂದ ಮೇಲೆ ಅವರಿಗೆ ಮಹಾತ್ಮರೆಂದು ಹೇಗೆ ಹೇಳುತ್ತೀರಿ. ಹಾಗಿರುವಾಗ ಪತಿತರಿಗೆ ತಲೆ ಬಾಗುತ್ತಾರೇನು ಪಾವನರ ಮುಂದೆಯೇ ತಲೆಬಾಗುತ್ತಾರೆ. ಕನ್ಯೆಯ ಉದಾಹರಣೆಯೂ ಇದೆ. ಯಾವಾಗ ಕನ್ಯೆಯು ವಿಕಾರಿಯಾಗುತ್ತಾಳೋ ಆಗ ಎಲ್ಲರ ಮುಂದೆ ತಲೆಬಾಗುತ್ತಾಳೆ. ನಂತರ ಹೇ ಪತಿತ ಪಾವನ ಬನ್ನಿ ಎಂದು ಕೂಗುತ್ತಾಳೆ. ಅರೆ! ಪತಿತರಾಗಿ ಪರಮಾತ್ಮನನ್ನು ಕರೆಯುವುದಾದರೂ ಎಕೆ! ಎಲ್ಲರ ಶರೀರಗಳು ವಿಕಾರದಿಂದಲೇ ರಚನೆಯಾಗಿವೆ. ಏಕೆಂದರೆ ರಾವಣನ ರಾಜ್ಯವಿದೆ. ಈಗ ನೀವು ರಾವಣನಿಂದ ಬಿಡಿಸಿಕೊಂಡು ಬಂದಿದ್ದೀರಿ. ಇದಕ್ಕೆ ಪುರುಷೋತ್ತಮ ಸಂಗಮ ಯುಗವೆಂದು ಹೇಳುತ್ತಾರೆ. ಈಗ ನೀವು ರಾಮರಾಜ್ಯಕ್ಕೆ ಹೋಗುವ ಪುರುಷಾರ್ಥ ಮಾಡುತ್ತಿದ್ದೀರಿ. ಸತ್ಯ ಯುಗವು ರಾಮರಾಜ್ಯವಾಗಿದೆ. ತ್ರೇತಾಯುಗವನ್ನು ಮಾತ್ರ ರಾಮರಾಜ್ಯವೆಂದು ಹೇಳುವುದಾದರೆ ಸೂರ್ಯವಂಶಿ ಲಕ್ಷ್ಮೀ ನಾರಾಯಣರರಾಜ್ಯ ಎಲ್ಲಿಗೆ ಹೋಯಿತು! ಈಗ ಈ ಎಲ್ಲ ಜ್ಞಾನ ನೀವು ಮಕ್ಕಳಿಗೆ ಸಿಗುತ್ತಿದೆ. ಹೊಸ ಹೊಸ ಮಕ್ಕಳು ಬರುತ್ತಾರೆ ಅವರಿಗೆ ನೀವು ಜ್ಞಾನವನ್ನು ತಿಳಿಸುತ್ತೀರಿ, ಯೋಗ್ಯರನ್ನಾಗಿ ಮಾಡುತ್ತೀರಿ ಕೆಲವರಿಗೆ ಈ ರೀತಿ ಸಂಗವು ಸಿಗುತ್ತದೆ, ಅದರಿಂದ ಯೋಗ್ಯರಾದವರೂ ಸಹ ಯೋಗ್ಯತೆ ಕಳೆದುಕೊಳ್ಳುತ್ತಾರೆ. ತಂದೆಯು ಪಾವನರನ್ನಾಗಿ ಮಾಡುತ್ತಾರೆ. ಅಂದಾಗ ಈಗ ಪತಿತರಾಗಲೇಬಾರದು. ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ಮಾಯೆ ಎಷ್ಟು ಶಕ್ತಿಶಾಲಿ ಆಗಿದೆ, ಅದು ಪತಿತರನ್ನಾಗಿ ಮಾಡುತ್ತದೆ. ಸೋಲಿಸಿಬಿಡುತ್ತದೆ. ಆಗ ಬಾಬಾ ರಕ್ಷಣೆ ಮಾಡಿ ಎಂದು ಕರೆಯುತ್ತಾರೆ. ವಾಹ! ಯು��್ಧದ ಮೈದಾನದಲ್ಲಿ ಅನೇಕರು ಸಾವನ್ನಪ್ಪುತ್ತಾರೆ ಅಂದ ಮೇಲೆ ರಕ್ಷಣೆ ಮಾಡಲಾಗುತ್ತದೆಯೇನು! ಈ ಮಾಯೆಯ ಗುಂಡುಬಂದೂಕಿನ ಗುಂಡಿಗಿಂತಲೂ ಗಟ್ಟಿಯಾಗಿದೆ. ಕಾಮದ ಪೆಟ್ಟನ್ನು ತಿಂದರೆ ಮೇಲಿಂದ ಬೀಳುತ್ತಾರೆ. ಸತ್ಯಯುಗದಲ್ಲಿ ಎಲ್ಲರೂ ಪವಿತ್ರ, ಗೃಹಸ್ಥ ಧರ್ಮದವರಾಗಿರುತ್ತಾರೆ, ಅವರಿಗೆ ದೇವತೆಗಳೆಂದು ಹೇಳುತ್ತಾರೆ. ಈಗ ನಿಮಗೆ ಗೊತ್ತಿದೆ, ತಂದೆಯು ಹೇಗೆ ಬಂದಿದ್ದಾರೆ, ಎಲ್ಲಿರುತ್ತಾರೆ, ಹೇಗೆ ಬಂದು ರಾಜಯೋಗವನ್ನು ಕಲಿಸುತ್ತಾರೆ? ಅರ್ಜುನನ ರಥದಲ್ಲಿ ಕುಳಿತು ಜ್ಞಾನವನ್ನು ಕೊಟ್ಟರು ಎಂದು ತಿಳಿಸುತ್ತಾರೆ. ಅಂದ ಮೇಲೆ ಅವರನ್ನು ಸರ್ವವ್ಯಾಪಿಯೆಂದು ಹೇಗೆ ಹೇಳುತ್ತಾರೆ? ಸ್ವರ್ಗ ಸ್ಥಾಪನೆ ಮಾಡುವ ತಂದೆಯನ್ನೇ ಮರೆತಿದ್ದಾರೆ. ಈಗ ಸ್ವಯಂ ತಂದೆ ತಮ್ಮ ಪರಿಚಯ ಕೊಡುತ್ತಾರೆ. ಒಳ್ಳೆಯದು.
|
3 |
+
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
|
4 |
+
ಧಾರಣೆಗಾಗಿ ಮುಖ್ಯಸಾರ:
|
5 |
+
1. ಮಹಾನ ಆತ್ಮರಾಗುವುದಕ್ಕಾಗಿ ಯಾವ ಯಾವ ಅಪವಿತ್ರ ಕೆಟ್ಟ ಚಟಗಳಿವೆ ಅವುಗಳನ್ನು ಅಳಿಸಿಹಾಕಬೇಕು. ದುಃಖ ಕೊಡುವುದು, ಹೊಡೆಯುವುದು, ಜಗಳಾಡುವುದು. . . ಇದೆಲ್ಲವೂ ಅಪವಿತ್ರ ಕರ್ತವ್ಯವಾಗಿವೆ, ಯಾವುದನ್ನು ನೀವು ಮಾಡಬಾರದು. ನಿಮಗೆ ನೀವು ರಾಜ ತಿಲಕವನ್ನು ಕೊಟ್ಟುಕೊಳ್ಳಲು ಅಧಿಕಾರಿಗಳನ್ನಾಗಿ ಮಾಡಿಕೊಳ್ಳಬೆಕು.
|
6 |
+
2. ಬುದ್ಧಿಯನ್ನು ಎಲ್ಲ ಉದ್ಯೋಗ ವ್ಯವಹಾರಗಳ ಜಂಜಾಟದಿಂದ, ದೇಹಧಾರಿಗಳಿಂದತೆಗೆದು ಸುಗಂಧಭರಿತ ಹೂಗಳಾಗಬೇಕು. ಗುಪ್ತ ಸಂಪಾದನೆ ಜಮಾ ಮಾಡಿಕೊಳ್ಳಲು ನಡೆಯುತ್ತಾ ತಿರುಗಾಡುತ್ತಾ ಅಶರೀರಿಯಾಗಿರುವ ಅಭ್ಯಾಸ ಮಾಡಬೇಕು.
|
BKMurli/BKMurli/page_1000.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ವಾಸ್ತವದಲ್ಲಿ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯ ಗುಡ್ಮಾರ್ನಿಂಗ್ ಎಂದು ಹೇಳಬೇಕು ಏಕೆಂದರೆ ಮಕ್ಕಳಿಗೆ ಗೊತ್ತಿದೆ, ತಂದೆಯು ಬರುವುದೇ ರಾತ್ರಿಯನ್ನು ದಿನವನ್ನಾಗಿ ಮಾಡಲು. ಇದನ್ನೂ ಲೆಕ್ಕ ಮಾಡಲಾಗುತ್ತದೆ. ಕೊನೆಗೂ ತಂದೆಯು ಯಾವ ಸಮಯದಲ್ಲಿ ಬರುತ್ತಾರೆ? ಯಾವುದೇ ತಿಥಿ-ತಾರೀಖು ಇಲ್ಲ ಆದರೆ ಯಾವುದೋ ಸಮಯದಲ್ಲಿ ಬರುತ್ತಾರೆ, ಅವಶ್ಯವಾಗಿ 12 ಗಂಟೆಯಾದ ಒಂದು ನಿಮಿಷವಾಗಿರಬಹುದು ಆಗ ತಂದೆಯು ಈ ಶರೀರದಲ್ಲಿ ಪ್ರವೇಶ ಮಾಡಿರುವರು. ಅಂದರೆ ಇದು ಬೇಹದ್ದಿನ ಹಗಲು-ರಾತ್ರಿಯ ಮಾತಾಗಿದೆ. ತಿಥಿ-ತಾರೀಖನ್ನು ತಿಳಿಸಲಾಗುವುದಿಲ್ಲ. ತಂದೆಯು ತಮ್ಮ ಮಕ್ಕಳೊಂದಿಗೇ ಹೇಳುತ್ತಾರೆ - ನಾನು ಬಂದು ರಾತ್ರಿಯನ್ನು ದಿನ, ನರಕವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ ಅಥವಾ ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡುತ್ತೇನೆ. ಇದು ಅರ್ಥವಾಗುತ್ತದೆ- ತಂದೆಯು ರಾತ್ರಿಯಲ್ಲಿಯೇ ಬರುತ್ತಾರೆಂದು ಹೇಳಲಾಗುತ್ತದೆ ಆದ್ದರಿಂದಲೇ ಶಿವರಾತ್ರಿಯೆಂದೇ ಹೇಳುತ್ತಾರಲ್ಲವೆ. ಅವರು ಬರುವುದೇ ರಾತ್ರಿಯನ್ನು ದಿನವನ್ನಾಗಿ ಮಾಡಲು. ಅವರಿಗೆ ಯಾವುದೇ ಜನ್ಮ ಪತ್ರಿಕೆಯಿದೆಯೇ? ಕೃಷ್ಣ ಜಯಂತಿಗೂ ತಿಥಿ-ತಾರೀಖು ಏನೂ ಇಲ್ಲ ಏಕೆಂದರೆ ಕೃಷ್ಣನನ್ನು ಬಹಳ ದೂರ ತೆಗೆದುಕೊಂಡು ಹೋಗಿದ್ದಾರೆ. ಇದು ಯಾರಿಗೂ ತಿಳಿದಿಲ್ಲ. ಕೃಷ್ಣನ ಜನ್ಮವು ಯಾವಾಗ ಆಯಿತು? ಸಂವತ್ಸರ, ತಿಥಿ-ತಾರೀಖು ಏನೂ ಇಲ್ಲ. ಕೇವಲ ರಾತ್ರಿಯನ್ನು ಆಚರಿಸುತ್ತಾರೆ. ವಾಸ್ತವದಲ್ಲಿ ಶಿವ ತಂದೆಯು ರಾತ್ರಿಯಲ್ಲಿ ಬರುವವರಾಗಿದ್ದಾರೆ ಆದ್ದರಿಂದ ನೀವು ಮಕ್ಕಳು ಶಿವ ತಂದೆಯ ರಾತ್ರಿಯೆಂದು ಹೇಳುತ್ತೀರಿ. ಭಾರತದಲ್ಲಿ ಶಿವರಾತ್ರಿಯನ್ನು ಆಚರಿಸುತ್ತಾರೆ, ಶಿವ ಜಯಂತಿಯೆಂದೂ ಹೇಳುತ್ತಾರೆ ಆದರೆ ವಾಸ್ತವದಲ್ಲಿ ಶಿವ ಜಯಂತಿಯೆಂದು ಹೇಳಬಾರದು ಏಕೆಂದರೆ ಅವರು ಎಂದೂ ಮರಣ ಹೊಂದುವುದಿಲ್ಲ. ಮನುಷ್ಯರು ಜನಿಸುತ್ತಾರೆ ಮತ್ತು ಸಾಯುತ್ತಾರೆ ಆದರೆ ತಂದೆಯು ಎಂದೂ ಮರಣ ಹೊಂದುವುದಿಲ್ಲ. ಆದ್ದರಿಂದ ಶಿವಜಯಂತಿಯೆಂದು ಹೇಳುವುದೂ ತಪ್ಪಾಗಿದೆ. ಶಿವರಾತ್ರಿಯೆಂದು ಹೇಳುವುದು ಸರಿಯಿದೆ. ಇದನ್ನು ಶಿವ ತಂದೆಯೇ ತಿಳಿಸುತ್ತಾರೆ, ಹೀಗೆ ಹೇಳಲು ಸಾಧ್ಯವಿಲ್ಲ. ಭಲೆ ಶಿವೋಹಂ ಎಂದು ಹೇಳುತ್ತಾರೆ ಆದರೆ ತಿಳಿಸಲು ಸಾಧ್ಯವಿಲ್ಲ, ನಾನು ಯಾವಾಗ ಬರುತ್ತೇನೆ? ಬಂದು ಏನು ಮಾಡುತ್ತೇನೆ? ಶಿವ ತಂದೆಯೇ ತಿಳಿಸುತ್ತಾರೆ- ಈಗ ಅರ್ಧಕಲ್ಪದ ರಾತ್ರಿಯು ಮುಕ್ತಾಯವಾಗಿ ದಿನವು ಆರಂಭವಾಗುತ್ತದೆ. ಈ ಗೀತಾಭಾಗವು ಪುನರಾವರ್ತನೆಯಾಗುತ್ತಿದೆ. ಮೃತ್ಯುವಿನ ಬಿರುಗಾಳಿಯೂ ಸನ್ಮುಖದಲ್ಲಿದೆ. ಪತಿತ ಪ್ರಪಂಚವೂ ಆಗಿದೆ, ಕಲಿಯುಗದ ಅಂತ್ಯವಾಗಿದೆ. ಕಷ್ಟಗಳು ಮುಂದೆ ನಿಂತಿವೆ. ಇದು ಅದೇ ಮಹಾಭಾರತ ಯುದ್ಧವೆಂದು ತಿಳಿಯುತ್ತಾರೆ. ಇದಕ್ಕಾಗಿಯೇ ಶಾಸ್ತ್ರಗಳಲ್ಲಿ ಪ್ರಾಕೃತಿಕ ವಿಕೋಪಗಳ ಮೂಲಕ ಹಳೆಯ ಪ್ರಪಂಚದ ವಿನಾಶವಾಗುವುದು ಎಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಗೀತೆಯ ಭ��ವಂತನೂ ಬಂದಿರುವರು. ಅವರು ಬರುವುದೇ ಕಲಿಯುಗದ ಅಂತ್ಯದಲ್ಲಿ. ಸತ್ಯಯುಗದಲ್ಲಿ ಮೊದಲ ರಾಜಕುಮಾರನಾಗಿದ್ದಾರೆ ಅಂದಮೇಲೆ ಅವರು ದ್ವಾಪರದಲ್ಲಿರಲು ಸಾಧ್ಯವಿಲ್ಲ. ಮನುಷ್ಯರಿಗೆ 84 ಶರೀರಗಳು ಸಿಗುತ್ತವೆ. ಪ್ರತಿಯೊಂದು ಜನ್ಮದಲ್ಲಿ ರೂಪವು ಬದಲಾಗುತ್ತದೆ. ಒಬ್ಬರದು ಇನ್ನೊಬ್ಬರಿಗೆ ಹೋಲುವುದಿಲ್ಲ. ಭಲೆ ಈಗ ಕೃಷ್ಣನ ಗಾಯನ, ಪೂಜೆ ಇದೆ ಆದರೆ ಕೃಷ್ಣನ ಅದೇ ಆಕ್ಯೂರೇಟ್ ರೂಪವು ಇಲ್ಲಿಲ್ಲ. ಅವರ ಫೋಟೊ ತೆಗೆಯಲೂ ಸಾಧ್ಯವಿಲ್ಲ. ಕೇವಲ ಹಾಗೆಯೇ ಮಣ್ಣಿನಿಂದ ಅಥವಾ ಕಾಗದದಿಂದ ಮಾಡಿ ಬಿಡುತ್ತಾರೆ. ನಿಖರವಾದ ಮುಖ ಲಕ್ಷಣಗಳನ್ನು ನೀವು ಧ್ಯಾನದಲ್ಲಿ ಹೋದಾಗಲೇ ನೋಡಬಲ್ಲಿರಿ. ಭಾವಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ. ಮೀರಾ ಕೃಷ್ಣನೊಂದಿಗೆ ನರ್ತನ ಮಾಡುತ್ತಿದ್ದಳು. ಬಹಳ ಪ್ರಸಿದ್ಧರಾಗಿದ್ದಾರೆ, ಭಕ್ತರಲ್ಲಿ ಶಿರೋಮಣಿಯೆಂದು ಗಾಯನವಿದೆ. ಕೃಷ್ಣನನ್ನು ನೆನಪು ಮಾಡುತ್ತಿದ್ದಳು ಆಗ ಕೂಡಲೇ ಅವಳಿಗೆ ಸಾಕ್ಷಾತ್ಕಾರವಾಗುತ್ತಿತ್ತು. ಕೃಷ್ಣನೊಂದಿಗೆ ಪ್ರೀತಿಯಿತ್ತು. ಸಾಕ್ಷಾತ್ಕಾರದಲ್ಲಿ ನೋಡುತ್ತಿದ್ದಳು ಆದ್ದರಿಂದ ಪವಿತ್ರವಾಗಿರಲು ಬಯಸುತ್ತಿದ್ದಳು. ತಿಳಿದಿದೆ, ಅಲ್ಲಿ ವಿಕಾರವಂತೂ ಇರುವುದಿಲ್ಲ. ಕೃಷ್ಣನೊಂದಿಗೆ ಪ್ರೀತಿಯುಂಟಾಯಿತೆಂದರೆ ಅವಶ್ಯವಾಗಿ ಪವಿತ್ರವಾಗಿರಬೇಕಾಗುತ್ತದೆ. ಪತಿತರಂತೂ ಕೃಷ್ಣನ ಜೊತೆ ಮಿಲನ ಮಾಡಲು ಸಾಧ್ಯವಿಲ್ಲ. ಮೀರಾ ಪಾವನವಾಗಿದ್ದಳು ಆದ್ದರಿಂದ ಮೀರಾಳ ಮಹಿಮೆಯಿದೆ. ಇದೆಲ್ಲಾ ರಹಸ್ಯವನ್ನು ತಂದೆಯೇ ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಂತೂ ಅವಳ ಅಲ್ಪಕಾಲದ ಕ್ಷಣಭಂಗುರ ಭಾವನೆಯು ಈಡೇರಿತು, ಸಾಕ್ಷಾತ್ಕಾರವಾಯಿತೆಂದರೆ ಯಾವ ಮನೋಭಾವನೆಯನ್ನು ಇಟ್ಟುಕೊಳ್ಳುವರೋ ಅದು ಅಲ್ಪಕಾಲಕ್ಕಾಗಿ ಪೂರ್ಣವಾಗುತ್ತದೆ. ಅನೇಕ ಪ್ರಕಾರದ ದೇವತೆಗಳಿದ್ದಾರೆ, ಅವರ ಸಾಕ್ಷಾತ್ಕಾರವನ್ನೂ ಬಯಸುತ್ತಾರೆ ಆದ್ದರಿಂದ ಡ್ರಾಮಾನುಸಾರ ಅವರ ಮನೋಕಾಮನೆಯು ಈಡೇರುತ್ತದೆ. ಭಕ್ತಿಮಾರ್ಗವೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ವೇದಶಾಸ್ತ್ರಗಳನ್ನು ಓದುತ್ತಾ ತಲೆ ಕೆಡಿಸಿಕೊಳ್ಳುತ್ತಿದ್ದರೂ ಸಹ ಮುಕ್ತಿ-ಜೀವನ್ಮುಕ್ತಿಯಲ್ಲಿ ಹೋಗಲು ಸಾಧ್ಯವಿಲ್ಲ. ಮೊದಲು ಕಾಶಿಯಲ್ಲಿ ಹೋಗಿ ಬಲಿಯಾಗುತ್ತಿದ್ದರು, ಇದರಿಂದ ಶಿವಪುರಿ ಅರ್ಥಾತ್ ಮುಕ್ತಿಯಲ್ಲಿ ಹೋಗುತ್ತೇವೆಂದು ತಿಳಿಯುತ್ತಿದ್ದರು ಆದರೆ ಹೋಗಲು ಸಾಧ್ಯವಿಲ್ಲ. ಮುಕ್ತಿಗೆ ಕರೆದುಕೊಂಡು ಹೋಗುವವರು ಒಬ್ಬ ತಂದೆಯೇ ಆಗಿದ್ದಾರೆ, ಅವರನ್ನೇ ಮುಕ್ತಿ-ಜೀವನ್ಮುಕ್ತಿದಾತ ಎಂದು ಹೇಳಲಾಗುತ್ತದೆ. ಮತ್ತ್ಯಾರೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಜೀವನ್ಮುಕ್ತಿಯಿತ್ತು, ಜೀವನ ಬಂಧನವಿರಲಿಲ್ಲ. ಬಹಳ ಕೆಲವೇ ಮಂದಿಯಿದ್ದರು. ಈ ಸಮಯದಲ್ಲಿ ಎಷ್ಟು ಕೋಟಿ ಮನುಷ್ಯರಿದ್ದಾರೆ! ಸತ್ಯಯುಗದಲ್ಲಿ ಇಷ್ಟೂ ಇರಲಿಲ್ಲ ಅಂದಮೇಲೆ ಉಳಿದೆಲ್ಲರೂ ಆ ಸಮಯದಲ್ಲಿ ಎಲ್ಲಿದ್ದರು? ಇದೂ ಸಹ ಈಗ ನಿಮಗ�� ಅರ್ಥವಾಗಿದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಈಗ ನಿಮಗೆ ಸಿಗುತ್ತದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಈ ಪತಿತ ಸೃಷ್ಟಿಯ ಅಂತ್ಯವಾಗಿದೆ. ಕಲಿಯುಗವು ಇನ್ನೂ 40 ಸಾವಿರ ವರ್ಷಗಳು ನಡೆಯುವುದು ಎಂದು ಅವರು ತಿಳಿದುಕೊಳ್ಳುತ್ತಾರೆ ಆದರೆ ನೀವು ತಿಳಿದುಕೊಂಡಿದ್ದೀರಿ, ಈಗ ಕಲಿಯುಗದ ಅಂತ್ಯವಾಗಲಿದೆ ಆದ್ದರಿಂದಲೇ ತಂದೆಯು ಬಂದು ಸಂಪೂರ್ಣ ಜ್ಞಾನವನ್ನು ತಿಳಿಸುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ಅವರ ಜನ್ಮವು ಇಲ್ಲಿಯೇ ಆಗುತ್ತದೆ. ಸಂಗಮದಲ್ಲಿಯೇ ಬರುತ್ತಾರೆ ಮತ್ತು ಇದು ಅಂತ್ಯವಾಗುವ ಸೂಚನೆ ನೀಡುತ್ತಾರೆ. ವಿನಾಶದ ಸಾಕ್ಷಾತ್ಕಾರವನ್ನೂ ಮಾಡಿಸಿದ್ದಾರೆ. ಅರ್ಜುನನಿಗೂ ಸಾಕ್ಷಾತ್ಕಾರವಾಯಿತೆಂದು ತೋರಿಸಿದ್ದಾರಲ್ಲವೆ. ನೀವು ಮಕ್ಕಳಲ್ಲಿಯೂ ಅನೇಕರು ಸಾಕ್ಷಾತ್ಕಾರ ಮಾಡಿದ್ದಾರೆ. ಎಷ್ಟುಷ್ಟು ಸಮೀಪ ಬರುತ್ತೀರೋ ಅಷ್ಟು ಸ್ಪಷ್ಟವಾಗಿ ಕಾಣುವುದು. ಹೇಗೆ ಮನುಷ್ಯರು ಮನೆಯ ಸಮೀಪ ತಲುಪುವಾಗ ಎಲ್ಲಾ ಮಾತುಗಳು ನೆನಪಿಗೆ ಬರುತ್ತವೆಯಲ್ಲವೆ. ನಿಮಗೂ ಸಹ ಬಹಳ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ. ಮುಕ್ತಿಧಾಮದಲ್ಲಿ ಹೋಗಿ ನಂತರ ಜೀವನ್ಮುಕ್ತಿಯಲ್ಲಿ ಬರಬೇಕಾಗಿದೆ. ಅವಶ್ಯವಾಗಿ ಭಾರತವು ವಿಶ್ವದ ಮಾಲೀಕನಾಗಿತ್ತು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ಪ್ರತೀ 5000 ವರ್ಷಗಳ ನಂತರ ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಈಗ ಭವಿಷ್ಯ ಹೊಸ ಪ್ರಪಂಚಕ್ಕಾಗಿ ಸ್ಥಾಪನೆಯಾಗುತ್ತಿದೆ. ಸಂಗಮದಲ್ಲಿಯೇ ಸ್ಥಾಪನೆಯಾಗುತ್ತದೆ, ನೀವು ಬ್ರಾಹ್ಮಣರು ಸಂಗಮಯುಗದಲ್ಲಿದ್ದೀರಿ. ಅವರು ಶೂದ್ರರು, ನೀವು ಬ್ರಾಹ್ಮಣರಾಗಿದ್ದೀರಿ, ಇವರು ದೇವತೆಗಳಾಗಿದ್ದಾರೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಯಾವುದಕ್ಕೆ ಸಂಗಮವೆಂದು ಹೇಳಲಾಗುತ್ತದೆ ಎಂದು ಮನುಷ್ಯರು ತಿಳಿದುಕೊಂಡಿಲ್ಲ. ಇದಕ್ಕೆ ಕಲ್ಯಾಣಕಾರಿ ಸುಂದರ ಸಂಗಮಯುಗವೆಂದು ಹೇಳಲಾಗುತ್ತದೆ ಎಲ್ಲಿಂದ ಪತಿತ ಭಾರತವು ಪಾವನವಾಗುತ್ತದೆ. ತಂದೆಯು ಕಲ್ಯಾಣಕಾರಿಯಾಗಿದ್ದಾರೆ, ಭಾರತದಲ್ಲಿಯೇ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಈಗ ನಿಮ್ಮ 84 ಜನ್ಮಗಳು ಮುಕ್ತಾಯವಾಯಿತು, ನೀವೀಗ ಪತಿತರಾಗಿದ್ದೀರಿ, ಒಬ್ಬರೂ ಪಾವನರಿಲ್ಲ. ಎಲ್ಲರೂ ಭ್ರಷ್ಠಾಚಾರಿಗಳಾಗಿದ್ದಾರೆ, ವಿಕಾರದಿಂದ ಜನಿಸುತ್ತಾರೆ. ನೀವು ಶ್ರೇಷ್ಠ ದೇವಿ-ದೇವತೆಗಳಾಗಿದ್ದಿರಿ, ನಂತರ ಕ್ಷತ್ರಿಯ ವೈಶ್ಯ ಶೂದ್ರರಾದಿರಿ. ಈಗ ಬ್ರಾಹ್ಮಣರಾಗಿದ್ದೀರಿ ಮತ್ತೆ ದೇವತೆಗಳಾಗುತ್ತೀರಿ. ಅಂತ್ಯದಲ್ಲಿ ಬಂದು ಪ್ರಜಾಪಿತ ಬ್ರಹ್ಮನ ಮುಖದ ಮೂಲಕ ತಂದೆಯು ಸ್ಥಾಪನೆ ಮಾಡುತ್ತಾರೆ. ಯಾವುದರ ಸ್ಥಾಪನೆ? ಸ್ವರ್ಗದ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ನೀವಿಲ್ಲಿ ದೇವಿ-ದೇವತೆಗಳಾಗಲು, ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಲು ಬಂದಿದ್ದೀರಿ. ಇದಂತೂ ನೀವು ಮಕ್ಕಳಿಗೆ ಗೊತ್ತಿದೆ, ಯಾವುದೇ ವಿಕಾರಿಗಳಿಗೆ ಇಲ್ಲಿ ಅನುಮತಿ ನೀಡಲಾಗುವುದಿಲ್ಲ. ಮೊಟ್ಟ ಮೊದಲು ಪವಿತ್ರತೆಯ ಪ್ರತಿಜ್ಞೆ ತೆಗೆದುಕೊಳ್ಳಲಾಗುತ್ತದೆ. ಒಂದು ಬಾರಿ ಪ್ರತಿಜ್ಞೆ ಮಾಡಿ ಮತ್ತೆ ಒಂದುವೇಳೆ ಉಲ್ಲಂಘನೆ ಮಾಡಿದರೆ ಒಮ್ಮೆಲೆ ರಸಾತಳದಲ್ಲಿ ಹೊರಟು ಹೋಗುತ್ತೀರಿ, ಚಂಡಾಲ ಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿ ತಂದೆಯ ಮುಂದೆ ಪತಿತರೂ ಬರುವಂತಿಲ್ಲ. ಒಂದುವೇಳೆ ಬ್ರಾಹ್ಮಿಣಿಯು ಏನಾದರೂ ಕರೆ ತಂದರೂ ಅವರಮೇಲೆ ಬಹಳ ದೊಡ್ಡ ದೋಷವಾಗುತ್ತದೆ. ಇಬ್ಬರೂ ಚಂಡಾಲರಾಗಿ ಬಿಡುತ್ತಾರೆ. ಯಾರು ಪಾವನರಾಗುವುದಿಲ್ಲವೋ ಅವರಿಗೆ ಇಲ್ಲಿ ಬರಲು ಆಜ್ಞೆಯಿಲ್ಲ. ಬಂದು ವ್ಯಕ್ತಿಗತವಾಗಿ ಎಲ್ಲವನ್ನೂ ತಿಳಿದುಕೊಳ್ಳಬಹುದಾಗಿದೆ ಆದರೆ ತಂದೆಯ ಸಭೆಯಲ್ಲಿ ಬರಲು ಸಾಧ್ಯವಿಲ್ಲ. ಒಂದುವೇಳೆ ತಪ್ಪಾಗಿ ಕರೆತಂದರೆ ಅವರಿಗೆ ದೊಡ್ಡ ಪೆಟ್ಟು ಬೀಳುತ್ತದೆ. ಅನೇಕರು ಬರುತ್ತಾರೆ, ಎಲ್ಲರಿಗೆ ತಿಳಿದಿರುತ್ತದೆ - ಬೇಹದ್ದಿನ ತಂದೆಯ ಬಳಿ ಹೋಗುತ್ತೇವೆ ಅಂದಮೇಲೆ ನಾವು ಪವಿತ್ರರಾಗಬೇಕಾಗಿದೆ. ಮೀರಾ ಪವಿತ್ರವಾಗಿದ್ದಳು ಆದ್ದರಿಂದ ಎಷ್ಟು ಮಾನ್ಯತೆಯಿದೆ! ಈಗ ನೀವು ಜ್ಞಾನಾಮೃತವನ್ನು ಕುಡಿಸುತ್ತೀರಿ ಆದರೂ ಸಹ ಅವರು ನಮಗೆ ವಿಷವೇ ಬೇಕೆಂದು ಹೇಳುತ್ತಾರೆ. ವಿಕಾರಕ್ಕಾಗಿ ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರ ಮಾಡುತ್ತಾರೆ! ಕೃಷ್ಣನ ಮಾತಂತೂ ಇಲ್ಲ, ಇದಂತೂ ದೊಡ್ಡ ತಪ್ಪಾಗಿದೆ, ಭಗವಂತನ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ತಂದೆಯು ತಿಳಿಸುತ್ತಾರೆ - ಭಕ್ತಿಯ ನಂತರ ಭಗವಂತನು ಫಲ ಕೊಡಲು ಬರುತ್ತಾರೆಂದು ಹೇಳುತ್ತಾರೆ ಅಂದಮೇಲೆ ಭಕ್ತಿಯು ನಿಷ್ಫಲವಾಯಿತಲ್ಲವೆ. ಆದರೆ ಏನನ್ನೂ ತಿಳಿದುಕೊಂಡಿಲ್ಲ. ಭಾರತವೇ ಸತೋಪ್ರಧಾನವಾಗಿತ್ತು, ಈಗ ತಮೋಪ್ರಧಾನವಾಗಿದೆ. ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ ಅಂದಮೇಲೆ ಪತಿತರಾದರಲ್ಲವೆ ಆದರೆ ನೀವು ನರಕವಾಸಿ ಪತಿತರಾಗಿದ್ದೀರಿ ಎಂದು ಯಾರಿಗಾದರೂ ಹೇಳಿದರೆ ಅವರಿಗೆ ಅರ್ಥವಾಗುವುದಿಲ್ಲ. ತಂದೆಯು ಯಾವಾಗ ಬುದ್ಧಿವಂತರನ್ನಾಗಿ ಮಾಡಿದ್ದರೋ ಆಗ ಸ್ವರ್ಗವಿತ್ತು, ಈಗ ಬುದ್ಧಿಹೀನರಾಗಿರುವುದರಿಂದ ಕಂಗಾಲರಾಗಿದ್ದಾರೆ. ದೇವಿ-ದೇವತೆಗಳ ರಾಜ್ಯವಿದ್ದಾಗ ಭಾರತವು ಎಷ್ಟು ಶ್ರೇಷ್ಠವಾಗಿತ್ತು! ಭಾರತವು ಸ್ವರ್ಗವಾಗಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತೆಂದು ಹೇಳುತ್ತಾರೆ. ಆದರೆ ಶಾಸ್ತ್ರಗಳಲ್ಲಿ ಇಂತಿಂತಹ ಮಾತುಗಳನ್ನು ಬರೆದಿದ್ದಾರೆ ಯಾವುದರಿಂದ ಅಲ್ಲಿಯೂ ಅಸುರರಿದ್ದರೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಯಾವುದೇ ಶಾಸ್ತ್ರಗಳು ಸದ್ಗತಿಗಾಗಿ ಇರುವುದಲ್ಲ. ತಂದೆಯು ಬಂದಾಗಲೇ ಸರ್ವರ ಸದ್ಗತಿ ಮಾಡುತ್ತಾರೆ. ಇದು ರಾವಣ ರಾಜ್ಯವಾಗಿದೆ ಆದ್ದರಿಂದಲೇ ರಾಮ ರಾಜ್ಯ ಬೇಕೆಂದು ಬಯಸುತ್ತಾರೆ. ರಾವಣ ರಾಜ್ಯವು ಯಾವಾಗಿನಿಂದ ಆರಂಭವಾಗಿದೆ ಎಂಬುದನ್ನು ತಿಳಿದುಕೊಂಡಿಲ್ಲ, ಜ್ಞಾನಸಾಗರ ತಂದೆಯು ಎಲ್ಲರನ್ನೂ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಪ್ರತಿಯೊಬ್ಬ ಆತ್ಮನಿಗೆ ಅವಿನಾಶಿ ಪಾತ್ರವು ದೊರೆತಿದೆ. ಆತ್ಮವು ಶಾಂತಿಧಾಮದಿಂದ ಈ ಪೃಥ್ವಿಯ ಮೇಲೆ ಪಾತ್ರವನ್ನು ಅಭಿನಯಿಸಲು ಬರುತ್ತದೆ, ಆತ್ಮವೂ ಅವಿನಾಶಿ, ನಾಟಕವೂ ಅವಿನಾಶಿಯಾಗಿದೆ. ಅದರಲ್ಲಿ ಆತ್ಮವು ಅವಿನಾಶಿ, ಪಾತ್ರಧಾರಿಯಾಗಿದೆ, ಪರಮಧಾಮದ ನಿವಾಸಿಯಾಗಿದೆ. 84 ಜನ್ಮಗಳೆಂದು ಗಾಯನವಿದೆ, ಮನುಷ್ಯರಂತೂ 84 ಲಕ್ಷ ಜನ್ಮಗಳೆಂದು ಹೇಳಿ ಬಿಡುತ್ತಾರೆ. ಪರಮಾತ್ಮನನ್ನು ಕಲ್ಲು-ಮುಳ್ಳಿನಲ್ಲಿ ಇದ್ದಾರೆಂದು ಹೇಳಿ ಬಿಡುತ್ತಾರೆ ಅಂದಮೇಲೆ ಇದು ನಿಂದನೆಯಾಯಿತಲ್ಲವೆ. ತಂದೆಯು ಭಾರತದ ಮೇಲೆ ಉಪಕಾರ ಮಾಡಿ ಸ್ವರ್ಗವನ್ನಾಗಿ ಮಾಡುತ್ತಾರೆ. ರಾವಣನು ಬಂದು ಅಪಕಾರ ಮಾಡಿ ನರಕವನ್ನಾಗಿ ಮಾಡುತ್ತಾರೆ. ಇದು ಸುಖ-ದುಃಖದ ಆಟವಾಗಿದೆ. ಮುಳ್ಳಿನ ಕಾಡಾಗಿದೆ. ತಂದೆಯು ಬಂದು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ, ಅತಿ ದೊಡ್ಡ ಮುಳ್ಳು ಕಾಮ ವಿಕಾರವಾಗಿದೆ. ಈಗ ತಂದೆಯು ತಿಳಿಸುತ್ತಾರೆ- ನಾನು ಪಾವನರನ್ನಾಗಿ ಮಾಡಲು ಬಂದಿದ್ದೇನೆ. ಯಾರು ಪಾವನರಾಗುವರೋ ಅವರೇ ಪಾವನ ಪ್ರಪಂಚದ ಮಾಲೀಕರಾಗುವರು. ತಂದೆಯು ಸಹಜ ಯೋಗವನ್ನು ಕಲಿಸಲು ಬಂದಿದ್ದಾರೆ. ಪ್ರಿಯತಮನಾದ ನನ್ನನ್ನು ನೆನಪು ಮಾಡಿರಿ ಎಂದು ಹೇಳುತ್ತಾರೆ. ಎಲ್ಲಾ ಆತ್ಮರು ಒಬ್ಬ ಪ್ರಿಯತಮನಿಗೆ ಪ್ರಿಯತಮೆಯರಾಗಿದ್ದೇವೆ. ಅವರು ಬಂದು ಎಲ್ಲರನ್ನೂ ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ನೀವು ಪತಿತರು ಹೋಗಲು ಸಾಧ್ಯವಿಲ್ಲ ಆದ್ದರಿಂದ ನನ್ನನ್ನು ನೆನಪು ಮಾಡಿರಿ ಆಗ ತುಕ್ಕು ಬಿಟ್ಟು ಹೋಗುವುದು.
|
2 |
+
ಡ್ರಾಮಾನುಸಾರ ಸಮಯವು ಬಂದಾಗಲೇ ನಾನು ನೀವು ಮಕ್ಕಳನ್ನು ಪಾವನ ಮಾಡಲು ಬರುತ್ತೇನೆ. ಇದು ಅದೇ ಮಹಾಭಾರತ ಯುದ್ಧವಾಗಿದೆ. ಮೃತ್ಯುಲೋಕದಲ್ಲಿ ಇದು ಅಂತಿಮ ಯುದ್ಧವಾಗಿದೆ, ಅಮರಲೋಕದಲ್ಲಿ ಯುದ್ಧವಿರುವುದಿಲ್ಲ ಅಲ್ಲಿ ರಾಮ ರಾಜ್ಯವಿರುತ್ತದೆ. ಧರ್ಮಾತ್ಮರಿರುತ್ತಾರೆ, ಇಲ್ಲಿ ಪಾಪಾತ್ಮರಿದ್ದಾರೆ, ಪಾಪ ಮಾಡುತ್ತಾ ಇರುತ್ತಾರೆ. ಪುಣ್ಯಾತ್ಮರ ಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ನಾನು ಒಂದು ಸೆಕೆಂಡಿನಲ್ಲಿ ನಿಮ್ಮನ್ನು ಏರುವ ಕಲೆಯಲ್ಲಿ ಕರೆದುಕೊಂಡು ಹೋಗುತ್ತೇನೆಂದು ತಂದೆಯು ತಿಳಿಸುತ್ತಾರೆ, ಇದರಲ್ಲಿ ಕೇವಲ ಇದೊಂದೇ ಅಂತಿಮ ಜನ್ಮವು ಹಿಡಿಸುತ್ತದೆ ಮತ್ತು ಇಳಿಯುವ ಕಲೆಯಲ್ಲಿ 84 ಜನ್ಮಗಳು ಹಿಡಿಸುತ್ತವೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಏಳುತ್ತಾ-ಕುಳಿತುಕೊಳ್ಳುತ್ತಾ ನನ್ನನ್ನು ನೆನಪು ಮಾಡಿರಿ. ಈ ಸಾಧುಗಳ ಉದ್ಧಾರ ಮಾಡಲು ನಾನೇ ಬರಬೇಕಾಗುತ್ತದೆ. ತಮೋಪ್ರಧಾನ ಬುದ್ಧಿಯ ಮನುಷ್ಯರು ಏನನ್ನು ಕೇಳುವರೋ ಅದನ್ನೇ ಸತ್ಯ, ಸತ್ಯ ಎಂದು ಹೇಳುತ್ತಾ ಇರುತ್ತಾರೆ. ಅಂಧ ಶ್ರದ್ಧಾಳುಗಳಾಗಿದ್ದಾರೆ, ಇದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ. ಗೊಂಬೆಗಳ ಪೂಜೆ ಮಾಡುತ್ತಾ ಇರುತ್ತಾರೆ, ಅವರ ಚರಿತ್ರೆಯನ್ನೇ ತಿಳಿದುಕೊಂಡಿಲ್ಲ. ಈಗ ತಂದೆಯೇ ಬಂದು ಇದೆಲ್ಲದರ ಜ್ಞಾನವನ್ನು ಕೊಡುತ್ತಾರೆ. ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ, ಅದಂತೂ ಶಾಸ್ತ್ರಗಳ ಜ್ಞಾನವಾಗಿದೆ. ಆದರೆ ಈ ಜ್ಞಾನವನ್ನು ತಂದೆಯೇ ಬಂದು ಮಕ್ಕಳಿಗೆ ತಿಳಿಸುತ್ತಾರೆ. ಪ್ರಪಂಚದಲ್ಲಿ ಪರಮಪಿತ ಪರಮಾತ್ಮನನ್ನು ಯಥಾರ್ಥವಾಗಿ ಅರಿತುಕೊಂಡಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ಮನುಷ್ಯರಾಗಿಯೂ ತಂದೆಯನ್ನು ಅರಿತುಕೊಳ್ಳದಿದ್ದರೆ ಪ್ರಾಣಿಗಳಿಗಿಂತಲೂ ಕೀಳಾದರು. ತಾವು ಸರ್ವಗುಣ ಸಂಪನ್ನರು.... ಎಂದು ದೇವತೆಗಳ ಮುಂದೆ ಹೋಗಿ ಮಹಿಮೆ ಮಾಡುತ್ತಾರೆ. ವಾಸ್ತವದಲ್ಲಿ ಇಬ್ಬರೂ ಮನುಷ್ಯರೇ ಅಲ್ಲವೆ ಆದರೆ ಇದು ಮುಳ್ಳಿನ ಕಾಡಾಗಿದೆ. ತಂದೆಯು ನಿಮ್ಮನ್ನು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಾರೆ. ಭಾರತವು ಸತ್ಯ ಖಂಡವಾಗಿತ್ತು, ನಂತರ ರಾವಣನು ಬಂದು ಅಸತ್ಯಖಂಡವನ್ನಾಗಿ ಮಾಡುತ್ತಾನೆ. ಸತ್ಯಖಂಡವನ್ನಾಗಿ ಮಾಡುವವರು ಪರಮಪಿತ ಪರಮಾತ್ಮನಾಗಿದ್ದಾರೆ. ತಂದೆಯು ಬಂದು ಪರಿಚಯ ಕೊಡುತ್ತಾರೆ, ಅದರಲ್ಲಿಯೂ ಬ್ರಾಹ್ಮಣ ಮಕ್ಕಳಿಗೆ ತಿಳಿಸುತ್ತಾರೆ ನಂತರ ಈ ಜ್ಞಾನವಿರುವುದಿಲ್ಲ. ನೀವು ಮಕ್ಕಳು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಬಾಹುಬಲದಿಂದ ಎಂದೂ ಯಾರಿಗೂ ವಿಶ್ವದ ರಾಜ್ಯಭಾಗ್ಯ ಸಿಗಲು ಸಾಧ್ಯವಿಲ್ಲ. ಭಾರತವು ವಿಶ್ವದ ಮಾಲೀಕನಾಗಿತ್ತು ಅದು ಈಗ ಕಂಗಾಲಾಗಿದೆ. ಮನುಷ್ಯರ ಬುದ್ಧಿಯು ಈ ರೀತಿಯಾಗಿ ಬಿಟ್ಟಿದೆ- ಹೊರಗಡೆ ಬೋರ್ಡನ್ನೂ ನೋಡುತ್ತಾರೆ, ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಬರೆಯಲ್ಪಟ್ಟಿದೆ ಆದರೂ ಇದೊಂದು ಈಶ್ವರೀಯ ಪರಿವಾರವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇಷ್ಟೊಂದು ಬಿ.ಕೆ.,ಗಳಿದ್ದಾರೆ, ಇದರಲ್ಲಿ ಅಂಧಶ್ರದ್ಧೆಯ ಮಾತಂತೂ ಇಲ್ಲ ಅಲ್ಲವೆ. ಇದು ಈಶ್ವರೀಯ ಮನೆಯಾಗಿದೆ, ಇದೂ ಸಹ ಯಾವುದೋ ಒಂದು ಸಂಸ್ಥೆಯಾಗಿದೆ ಎಂದು ತಿಳಿದುಕೊಳ್ಳುತ್ತಾರೆ, ಅರೆ! ಇದು ಪರಿವಾರವಲ್ಲವೆ. ಕುಮಾರ-ಕುಮಾರಿಯರು...... ಇದು ಮನೆಯಾಯಿತಲ್ಲವೆ. ಇಷ್ಟೊಂದು ಪ್ರದರ್ಶನಿಗಳನ್ನು ಇಡುತ್ತೀರಿ, ತಿಳಿಸುತ್ತೀರಿ ಆದರೂ ಸಹ ತಿಳಿದುಕೊಳ್ಳುವುದಿಲ್ಲ. ಯಾವಾಗ 7 ದಿನಗಳ ಕೋರ್ಸನ್ನು ಚೆನ್ನಾಗಿ ತಿಳಿದುಕೊಳ್ಳುವರೊ ಆಗಲೇ ತಂದೆಯು ಪುನಃ ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆಂದು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಒಳ್ಳೆಯದು.
|
3 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
4 |
+
ಧಾರಣೆಗಾಗಿ ಮುಖ್ಯಸಾರ:
|
5 |
+
1. ಏರುವ ಕಲೆಯಲ್ಲಿ ಹೋಗುವುದಕ್ಕಾಗಿ ಏಳುತ್ತಾ-ಕುಳಿತುಕೊಳ್ಳುತ್ತಾ ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ತಂದೆಯ ಸಮಾನ ಎಲ್ಲರಿಗೆ ಉಪಕಾರ ಮಾಡಬೇಕಾಗಿದೆ.
|
6 |
+
2. ಜ್ಞಾನಾಮೃತವನ್ನು ಸೇವಿಸಬೇಕು ಹಾಗೂ ಕೊಡಬೇಕಾಗಿದೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
|
BKMurli/BKMurli/page_1001.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ವಾಸ್ತವದಲ್ಲಿ ಈ ಗೀತೆಯು ತಪ್ಪಾಗಿದೆ. ಈ ಪ್ರಪಂಚದಲ್ಲಿ ನೀವು ಏನೆಲ್ಲವನ್ನು ಕೇಳುತ್ತೀರೋ ಅದೆಲ್ಲವೂ ಅಸತ್ಯವಾಗಿದೆ. ತಂದೆಯು ತಿಳಿಸುತ್ತಾರೆ - ಹೇ ಭಾರತವಾಸಿ ಮಕ್ಕಳೇ ಎಂದು ಯಾರು ಸನ್ಮುಖದಲ್ಲಿದ್ದಾರೆಯೋ ಅವರಿಗೇ ಹೇಳುತ್ತಾರೆ. ಈಗ ನಿಮಗೆ ಅರ್ಥವಾಗಿದೆ, ಅದು ಭಕ್ತಿಮಾರ್ಗವಾಗಿದೆ. ವೇದ-ಶಾಸ್ತ್ರ, ಉಪನಿಷತ್ತು ಇತ್ಯಾದಿಗಳನ್ನು ಭಕ್ತಿಮಾರ್ಗದಲ್ಲಿ ಜನ್ಮ-ಜನ್ಮಾಂತರದಿಂದಲೂ ಬಹಳ ಓದುತ್ತಾ ಬರುತ್ತಾರೆ, ಗಂಗಾಸ್ನಾನ ಮಾಡುತ್ತಾ ಬಂದಿದ್ದಾರೆ ಅಂದಾಗ ಈ ಕುಂಭಮೇಳವು ಯಾವಾಗಿನಿಂದ ನಡೆಯುತ್ತಾ ಬಂದಿದೆ ಎಂದು ಕೇಳಿರಿ, ಇದು ಅನಾದಿಯಾಗಿದೆಯೆಂದು ಹೇಳುತ್ತಾರೆ. ಯಾವಾಗಿನಿಂದ ಮಾಡುತ್ತಾ ಬಂದಿದ್ದೀರಿ ಎಂದು ಕೇಳಿದರೆ ಅವರು ತಿಳಿಸಲು ಸಾಧ್ಯವಿಲ್ಲ. ಭಕ್ತಿಮಾರ್ಗವು ಯಾವಾಗಿನಿಂದ ಆರಂಭವಾಗುತ್ತದೆ ಎಂಬುದು ಅವರಿಗೆ ತಿಳಿದೇ ಇಲ್ಲ. ಕಲ್ಪದ ಆಯಸ್ಸನ್ನು ಉಲ್ಟಾ ಬರೆದು ಬಿಟ್ಟಿದ್ದಾರೆ. ಹೇಳುತ್ತಾರೆ - ಶಾಸ್ತ್ರಗಳಲ್ಲಿ ಬರೆಯಲ್ಪಟ್ಟಿದೆ, ಬ್ರಹ್ಮನ ದಿನ ಮತ್ತು ಬ್ರಹ್ಮನ ರಾತ್ರಿ - ಇದು ಒಂದು ಗೀತೆಯಲ್ಲಿ ಮಾತ್ರವೇ ಇದೆ. ಈಗ ತಂದೆಯು ತಿಳಿಸುತ್ತಾರೆ - ನೀವು ಬ್ರಾಹ್ಮಣರ ದಿನ ಮತ್ತು ರಾತ್ರಿ ಬೇಹದ್ದಿನದಾಗಿದೆ. ಅರ್ಧಕಲ್ಪ ದಿನ, ಅರ್ಧಕಲ್ಪ ರಾತ್ರಿ. ಎರಡು ಸಮ ಭಾಗಗಳಿರಬೇಕಲ್ಲವೆ. ಅರ್ಧಕಲ್ಪದಿಂದ ಭಕ್ತಿಮಾರ್ಗವು ಆರಂಭವಾಗುತ್ತದೆ, ಇದು ಯಾರಿಗೂ ತಿಳಿದಿಲ್ಲ. ಸೋಮನಾಥನ ಮಂದಿರವು ಯಾವಾಗ ಆಯಿತು? ಮೊಟ್ಟ ಮೊದಲು ಅವ್ಯಭಿಚಾರಿ ಭಕ್ತಿಗಾಗಿ ಸೋಮನಾಥನ ಮಂದಿರವೇ ಸ್ಥಾಪಿಸಲ್ಪಟ್ಟಿತ್ತು. ನಿಮಗೆ ತಿಳಿದಿದೆ - ಅರ್ಧಕಲ್ಪ ಮುಗಿಯುತ್ತದೆ ಆಗಿನಿಂದ ಬ್ರಹ್ಮನ ರಾತ್ರಿಯು ಆರಂಭವಾಗುತ್ತದೆ. ಲಕ್ಷಾಂತರ ವರ್ಷಗಳ ಮಾತಿರಲು ಸಾಧ್ಯವಿಲ್ಲ. ಮಹಮ್ಮದ್ ಘಜೀನಿಯು ಮಂದಿರದಿಂದ ಖಜಾನೆಗಳನ್ನು ಲೂಟಿ ಮಾಡಿ ತೆಗೆದುಕೊಂಡು ಹೋದನು. ಇಲ್ಲಿಗೆ 1300-1400 ವರ್ಷಗಳಾಗಿರಬಹುದು ಎಂದು ಹೇಳುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚದೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ, ಅನ್ಯ ಧರ್ಮದವರು ಯಾರೆಲ್ಲರೂ ಬರುತ್ತಾರೆಯೋ ಅವರು ಮಧ್ಯ-ಮಧ್ಯದ ಶಾಖೆಗಳಾಗಿದ್ದಾರೆ. ಈಗ ಅವರದೂ ಸಹ ಅಂತ್ಯವಾಗಿದೆ, ತಮೋಪ್ರಧಾನವಾಗಿದೆ, ಎಷ್ಟೊಂದು ವಿಭಿನ್ನತೆಯಿದೆ. ಸೂರ್ಯವಂಶಿಯ ನಂತರ ಚಂದ್ರವಂಶಿಯರಾದರು, ಎರಡು ಕಲೆಗಳು ಕಡಿಮೆಯಾಯಿತು, ಅನಂತರ ಅನ್ಯ ವಿಭಿನ್ನ ಧರ್ಮದವರು ಬರತೊಡಗಿದರು. ಈ ಸಮಯದಲ್ಲಿ ಭಕ್ತಿಮಾರ್ಗವಿದೆ. ಜ್ಞಾನದಿಂದ ದಿನ ಮತ್ತು ಸುಖವಾಗುತ್ತದೆ. ಭಕ್ತಿಯಿಂದ ರಾತ್ರಿ ಮತ್ತು ದುಃಖವಾಗುತ್ತದೆ. ಭಕ್ತಿಯು ಪೂರ್ಣವಾದಾಗಲೇ ಜ್ಞಾನ ಸಿಗುವುದು. ಜ್ಞಾನವನ್ನು ಕೊಡುವವರು ಒಬ್ಬರೇ ಜ್ಞಾನಸಾಗರ ತಂದೆಯಾಗಿದ್ದಾರೆ. ಅವರು ಯಾವಾಗ ಬರುತ್ತಾರೆ, ಯಾವಾಗ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಈಗ ಭಕ್ತಿಯು ಎಷ್ಟು ಸಮಯ ನಡೆಯುತ್ತದೆ ಮತ್ತು ಜ್ಞ���ನವು ಯಾವಾಗ ಸಿಗುತ್ತದೆಯೆಂದು ನಿಮಗೆ ತಂದೆಯು ತಿಳಿಸುತ್ತಾರೆ. ಅರ್ಧಕಲ್ಪದಿಂದ ಈ ಭಕ್ತಿಮಾರ್ಗವು ನಡೆಯುತ್ತಲೇ ಬಂದಿದೆ. ಸತ್ಯ-ತ್ರೇತಾಯುಗದಲ್ಲಿ ಈ ಭಕ್ತಿಮಾರ್ಗದ ಚಿತ್ರಗಳೇನೂ ಇರುವುದಿಲ್ಲ. ಭಕ್ತಿಯ ಅಂಶವೂ ಇರುವುದಿಲ್ಲ. ಈಗ ಕಲಿಯುಗದ ಅಂತ್ಯವಾಗಿದೆ ಆದ್ದರಿಂದ ಭಗವಂತನೇ ಬರಬೇಕಾಯಿತು, ಮಧ್ಯದಲ್ಲಿ ಯಾರಿಗೂ ಭಗವಂತನು ಸಿಗುವುದಿಲ್ಲ. ಭಗವಂತನು ಯಾವ ರೂಪದಲ್ಲಿ ಸಿಗುವರೋ ಗೊತ್ತಿಲ್ಲವೆಂದು ಹೇಳುತ್ತಾರೆ. ಗೀತೆಯ ಭಗವಂತನು ಒಂದುವೇಳೆ ಕೃಷ್ಣನಾಗಿದ್ದರೆ ಅವರು ಮತ್ತೆ ರಾಜಯೋಗವನ್ನು ಕಲಿಸಲು ಯಾವಾಗ ಬರುತ್ತಾರೆ? ಮನುಷ್ಯರಿಗೆ ಏನೂ ಗೊತ್ತಿಲ್ಲ. ಭಕ್ತಿಮಾರ್ಗವೇ ಸಂಪೂರ್ಣ ಬೇರೆಯಾಗಿದೆ, ಜ್ಞಾನವೇ ಬೇರೆಯಾಗಿದೆ. ಗೀತೆಯಲ್ಲಿ ಭಗವಾನುವಾಚ ಇದೆ. ಹೇ ಪತಿತ-ಪಾವನ ಬನ್ನಿ ಎಂದು ಹಾಡುತ್ತಾರೆ ಮತ್ತು ಇನ್ನೊಂದು ಕಡೆ ಕರೆಯುತ್ತಾ ಇರುತ್ತಾರೆ ಮತ್ತೊಂದು ಕಡೆ ಗಂಗಾಸ್ನಾನ ಮಾಡಲು ಹೋಗುತ್ತಾರೆ. ಪತಿತ-ಪಾವನ ಯಾರೆಂಬ ನಿಶ್ಚಯವು ಸ್ವಲ್ಪವೂ ಇಲ್ಲ. ನೀವು ಮಕ್ಕಳಿಗೆ ಈಗ ಜ್ಞಾನ ಸಿಕ್ಕಿದೆ. ನೀವು ತಿಳಿದುಕೊಂಡಿದ್ದೀರಿ - ನಾವೀಗ ಯೋಗಬಲದಿಂದ ಸದ್ಗತಿಯನ್ನು ಪಡೆಯುತ್ತೇವೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ಅದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನಾನು ಗ್ಯಾರಂಟಿ ಕೊಡುತ್ತೇನೆ - ಪತಿತ-ಪಾವನ ತಂದೆಯೇ ತಿಳಿಸುತ್ತಾರೆ, ನಾನು 5000 ವರ್ಷಗಳ ಮೊದಲೂ ಸಹ ಇದನ್ನು ತಿಳಿಸಿದ್ದೆನು - ಹೇ ಮಕ್ಕಳೇ, ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆದು ನನ್ನನ್ನು ನೆನಪು ಮಾಡಿರಿ. ಇದು ಗೀತೆಯ ಮಹಾವಾಕ್ಯವಾಗಿದೆ ಆದರೆ ನಾನು ಗೀತೆಯನ್ನು ಯಾವಾಗ ತಿಳಿಸಿದೆನು ಎಂಬುದು ಯಾರಿಗೂ ತಿಳಿದಿಲ್ಲ. ನಾನು ತಿಳಿಸುತ್ತೇನೆ - 5000 ವರ್ಷಗಳ ಮೊದಲು ನಿಮಗೆ ಗೀತೆಯನ್ನು ತಿಳಿಸಿದ್ದೆನು, ಈ ಸಮಯದಲ್ಲಿ ಇಡೀ ಮನುಷ್ಯ ಸೃಷ್ಟಿರೂಪಿ ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ನಿಮಗೂ ಸಹ ಈಗ ತಂದೆಯು ಬಂದು ಡ್ರಾಮಾದ ಆದಿ-ಮಧ್ಯ-ಅಂತ್ಯ, ಇಡೀ ಚಕ್ರದ ರಹಸ್ಯವನ್ನು ತಿಳಿಸಿದ್ದಾರೆ. ತಂದೆಯಂತೂ ಅವಶ್ಯವಾಗಿ ಅಂತ್ಯದಲ್ಲಿಯೇ ಬರುವರಲ್ಲವೇ! ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶವು ಹೇಗಾಗುತ್ತಿದೆ ಎಂಬುದು ನಿಮಗೆ ತಿಳಿದಿದೆ. ಈಗ ನಿಮ್ಮ ಬುದ್ಧಿಯಲ್ಲಿದೆ - ನಾವು ಹೊಸ ಪ್ರಪಂಚ, ಸ್ವರ್ಗದ ಮಾಲೀಕರಾಗುತ್ತೇವೆ, ಇದು ರಾಜಯೋಗವಾಗಿದೆ ಅಂದಮೇಲೆ ನಾವೇಕೆ ಪ್ರಜೆಗಳಾಗುವುದು! ನಮ್ಮ ಮಮ್ಮಾ-ಬಾಬಾರವರು ರಾಜ-ರಾಣಿಯರಾಗುತ್ತಾರೆ ಅಂದಮೇಲೆ ನಾವೂ ಸಹ ಏಕೆ ರಾಜ-ರಾಣಿಯಾಗಬಾರದು! ಮಮ್ಮಾರವರಾದರೂ ಯುವತಿಯಾಗಿದ್ದರು ಆದರೆ ಬ್ರಹ್ಮಾ ತಂದೆಯು ವೃದ್ಧನಾಗಿದ್ದಾರೆ, ಆದರೂ ಸಹ ಎಲ್ಲರಿಗಿಂತ ಚೆನ್ನಾಗಿ ಓದುತ್ತಾರಲ್ಲವೆ. ಯುವಕರು ಎಲ್ಲರಿಗಿಂತ ತೀವ್ರವಾಗಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ಎಷ್ಟು ಸಾಧ್ಯವೋ ನನ್ನನ್ನು ನೆನಪು ಮಾಡಿ, ಉಳಿದೆಲ್ಲವನ್ನು ಮರೆತು ��ಿಡಿ. ಹಳೆಯ ಪ್ರಪಂಚದಿಂದ ವೈರಾಗ್ಯವಿರಲಿ. ಹೇಗೆ ಹೊಸ ಮನೆಯು ತಯಾರಾದರೆ ಬುದ್ಧಿಯು ಅದರ ಕಡೆಯೇ ಹೋಗುತ್ತದೆಯಲ್ಲವೆ. ಅದನ್ನೇ ಕಣ್ಣುಗಳಿಂದ ನೋಡಲಾಗುತ್ತದೆ, ಇದನ್ನು ಬುದ್ಧಿಯಿಂದ ತಿಳಿದುಕೊಳ್ಳುತ್ತೀರಿ. ಅನೇಕರಿಗೆ ಸಾಕ್ಷಾತ್ಕಾರವೂ ಆಗುತ್ತದೆ, ವೈಕುಂಠ, ಪ್ಯಾರಡೈಸ್, ಸ್ವರ್ಗವೆಂದೂ ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಯಾವಾಗಲೋ ಇತ್ತಲ್ಲವೆ. ಈಗ ಇಲ್ಲ. ಈಗ ಪುನಃ ನೀವು ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ರಾಜ್ಯವನ್ನು ಕಲಿಯುತ್ತಿದ್ದೀರಿ. ಮೊಟ್ಟ ಮೊದಲು ಮುಖ್ಯ ಮಾತೇ ಇದಾಗಿದೆ – ಶಿವ ಭಗವಾನುವಾಚ. ಕೃಷ್ಣನಂತೂ ಭಗವಂತನಾಗಲು ಸಾಧ್ಯವಿಲ್ಲ, ಕೃಷ್ಣನು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಭಗವಂತನು ಜನನ-ಮರಣದಲ್ಲಿ ಬರಲು ಸಾಧ್ಯವಿಲ್ಲ. ಇದು ಬಹಳ ಸ್ಪಷ್ಟವಾಗಿದೆ, ಕೃಷ್ಣನ ಆ ರೂಪವು ಯಾವುದು ಸತ್ಯಯುಗದಲ್ಲಿತ್ತೋ ಅದು ನಂತರವಿರಲು ಸಾಧ್ಯವಿಲ್ಲ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನಾಮ-ರೂಪವು ಬದಲಾಗುತ್ತಾ ಹೋಗುತ್ತದೆ. ಈ ಸಮಯದಲ್ಲಿ ಆ ಆತ್ಮನೂ ತಮೋಪ್ರಧಾನವಾಗಿದೆ. ಕೃಷ್ಣನು ದ್ವಾಪರದಲ್ಲಿದ್ದನೆಂದು ಯಾರಾದರೂ ಹೇಳಬಹುದು ಆದರೆ ಆ ರೂಪವು ದ್ವಾಪರದಲ್ಲಿರಲು ಸಾಧ್ಯವಿಲ್ಲ. ದ್ವಾಪರದಲ್ಲಿ ಪತಿತರಿಂದ ಪಾವನರನ್ನಾಗಿ ಮಾಡಲು ಬರಲು ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದಲ್ಲಿಯೇ ಇರುತ್ತಾನೆ. ಕೃಷ್ಣನಿಗೆ ಪತಿತ-ಪಾವನನೆಂದು ಹೇಳಲು ಸಾಧ್ಯವಿಲ್ಲ. ಗೀತೆಯ ಭಗವಂತನು ಕೃಷ್ಣನಲ್ಲ, ಶಿವನಾಗಿದ್ದಾರೆ. ಅವರು ಅವಶ್ಯವಾಗಿ ಬರುತ್ತಾರೆ. ಶಿವ ಜಯಂತಿಯೂ ಇದೆ ಅಂದಮೇಲೆ ಅವಶ್ಯವಾಗಿ ಯಾವುದೋ ರಥದಲ್ಲಿ ಪ್ರವೇಶ ಮಾಡುತ್ತಾರೆ. ಅವರೇ ಸ್ವಯಂ ಹೇಳುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆ, ಅವರಿಗೆ ನಾನು ಬ್ರಹ್ಮನೆಂದು ಹೆಸರನ್ನಿಡುತ್ತೇನೆ. ಬ್ರಹ್ಮನ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗುತ್ತದೆ. ಮಹಾಭಾರತ ಯುದ್ಧವು ಸನ್ಮುಖದಲ್ಲಿದೆ. ಈ ಜ್ಞಾನವನ್ನು ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕಾಗಿದೆ. ಇದು ಬುದ್ಧಿಯಲ್ಲಿ ನೆನಪಿರಲಿ - ನಾವು ವಿದ್ಯಾರ್ಥಿಗಳಾಗಿದ್ದೇವೆ, ತಂದೆಯು ಓದಿಸುತ್ತಿದ್ದಾರೆ. ಇನ್ನು ಸ್ವಲ್ಪವೇ ಸಮಯವಿದೆ ನಂತರ ತಂದೆಯು ನಮ್ಮನ್ನು ಮರಳಿ ಕರೆದುಕೊಂಡು ಹೋಗುತ್ತಾರೆ. ಯಾರು ತಮ್ಮನ್ನು ಶ್ರೇಷ್ಠರನ್ನಾಗಿ ಮಾಡಿಕೊಳ್ಳುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಆದರೆ ಮಾಯೆಯು ಒಮ್ಮೆಲೆ ತವೆಯಂತೆ ಮಾಡಿ ಬಿಡುತ್ತದೆ. ಕೆಲವು ಮಕ್ಕಳಿಗೆ ಸರ್ವೀಸಿನ ಬಹಳ ಉಮ್ಮಂಗವಿದೆ, ಚಿಕ್ಕ-ಚಿಕ್ಕ ಹಳ್ಳಿಗಳಲ್ಲಿ ಪ್ರೊಜೆಕ್ಟರ್ ತೆಗೆದುಕೊಂಡು ಹೋಗಿ ಸರ್ವೀಸ್ ಮಾಡುತ್ತಿದ್ದಾರೆ. ಅನೇಕ ಪ್ರಜೆಗಳನ್ನು ತಯಾರು ಮಾಡುತ್ತೀರೆಂದರೆ ಅವರು ಅವಶ್ಯವಾಗಿ ರಾಜರಾಗುವಿರಿ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರಬೇಕಾಗಿದೆ, ಬಹಳ ಪರಿಶ್ರಮ ಪಡಬೇಕಾಗಿದೆ. ಮಾತೆಯರು ಪವಿತ್ರರಾಗುತ್ತಾರೆಂದರೆ ಪತಿಯು ಪವಿತ���ರರಾಗಿರಲು ಬಿಡುವುದಿಲ್ಲ, ಅಲ್ಲಿ ಜಗಳವೂ ನಡೆಯುತ್ತದೆ. ಸನ್ಯಾಸಿಗಳು ಸ್ವಯಂ ಪವಿತ್ರರಾಗುತ್ತಾರೆಂದರೆ ಅವರು ಸ್ತ್ರೀಯನ್ನು ಬಿಟ್ಟು ಹೊರಟು ಹೋಗುತ್ತಾರೆ ಅಂದಮೇಲೆ ತಮ್ಮ ರಚನೆಯನ್ನು ಬಿಟ್ಟು ಏಕೆ ಓಡಿ ಹೋಗುತ್ತಾರೆ! ಅವರನ್ನಂತು ಯಾರು ಏನೂ ಹೇಳುವುದಿಲ್ಲ. ಅವರು ಪವಿತ್ರರಾಗಿರಲು ಯಾರೂ ನಿರಾಕರಿಸುವುದಿಲ್ಲ. ನಾವು ಯಾರಿಗೂ ಗೃಹಸ್ಥವನ್ನು ಬಿಡುವುದಕ್ಕಾಗಿ ಹೇಳುವುದಿಲ್ಲ, ಕೇವಲ ಪವಿತ್ರರಾಗಿರಬೇಕು ಎಂದು ಹೇಳುತ್ತೇವೆ ಅಂದಮೇಲೆ ಇದನ್ನೇಕೆ ನಿರಾಕರಿಸಬೇಕು! ಆದರೆ ಇದರಲ್ಲಿ ಮಾತನಾಡುವ ಶಕ್ತಿಯಿರಬೇಕು. ಭಗವಾನುವಾಚ - ನೀವು ಪವಿತ್ರರಾದರೆ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ಇದರಲ್ಲಿ ಸ್ಥಿತಿಯು ಬಹಳ ಶಕ್ತಿಶಾಲಿಯಾಗಿರಬೇಕು. ಮೋಹವಿರಬಾರದು ಯಾವುದು ಮತ್ತೆ ನೆನಪಿಗೆ ಬರುತ್ತಾ ಇರುತ್ತದೆ. ಬುದ್ಧಿಯೋಗವು ಕುಟುಂಬದ ಕಡೆ ಹೋಗುತ್ತಾ ಇದ್ದರೆ ಅಂತಹವರು ಸರ್ವೀಸ್ ಮಾಡಲು ಯೋಗ್ಯರಾಗುವುದಿಲ್ಲ. ಇಲ್ಲಂತೂ ಬೇಹದ್ದಿನ ಸನ್ಯಾಸ ಮಾಡಬೇಕಾಗಿದೆ, ಇದು ಸ್ಮಶಾನವಾಗಿದೆ. ನಾವೀಗ ತಂದೆಯನ್ನು ನೆನಪು ಮಾಡಬೇಕಾಗಿದೆ, ಅವರೇ ಸ್ವರ್ಗದಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ. ಈ ಬ್ರಾಹ್ಮಣ ಕುಲದಲ್ಲಿ ಯಾರು ಚೆನ್ನಾಗಿ ಸೇವೆ ಮಾಡುವರೋ ಅವರೇ ದೊಡ್ಡವರಾಗಿದ್ದಾರೆ. ಅವರಿಗೆ ಬಹಳ ಗೌರವವನ್ನಿಡಬೇಕು. ಅವರಂತೆ ಸೇವೆ ಮಾಡಬೇಕು ಆಗಲೇ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಈಗಂತೂ ತಮ್ಮ ಉನ್ನತಿಯ ಚಿಂತೆಯಿರಬೇಕು. ತಮ್ಮನ್ನು ನೋಡಿಕೊಳ್ಳಿ - ನಾವು ತಂದೆಯಿಂದ ಆಸ್ತಿಯನ್ನು ಪಡೆಯಲು ಯೋಗ್ಯರಾಗಿದ್ದೇವೆಯೇ ! ತಂದೆಯು ಪಾವನರನ್ನಾಗಿ ಮಾಡಿ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆ ಅಂದಮೇಲೆ ತಂದೆಯು ಹೇಗೆ ತಿರಸ್ಕರಿಸುತ್ತಾರೆ? ತಂದೆಯು ಎಲ್ಲರೊಂದಿಗೆ ಕೇಳಿದಾಗ ನಾವು ಮಹಾರಾಜಾ-ಮಹಾರಾಣಿಯಾಗುತ್ತೇವೆಂದು ಎಲ್ಲರೂ ಹೇಳುತ್ತಾರೆ ಆದರೆ ಅದೇರೀತಿ ಚಲನೆಯೂ ಇರಬೇಕಲ್ಲವೆ. ಕೆಲವರಂತೂ ಬಹಳ ಒಳ್ಳೆಯ ಮಕ್ಕಳಿದ್ದಾರೆ ಆದರೆ ಯಾರು ಪುರುಷಾರ್ಥವನ್ನೇ ಮಾಡುವುದಿಲ್ಲವೋ ಅವರೇನು ಪದವಿಯನ್ನು ಪಡೆಯುವರು! ಪ್ರತೀ ಮಾತಿನಲ್ಲಿ ಪುರುಷಾರ್ಥದಿಂದಲೇ ಪ್ರಾಲಬ್ಧ ಸಿಗುತ್ತದೆ. ಯಾರಾದರೂ ಕಾಯಿಲೆಗೊಳಗಾಗುತ್ತಾರೆ ಮತ್ತೆ ಅದು ಸರಿ ಹೊಂದುತ್ತಲೇ ದಿನ-ರಾತ್ರಿ ಪುರುಷಾರ್ಥದಲ್ಲಿ ತೊಡಗಿ, ವಿದ್ಯೆಯಲ್ಲಿ ಮುಂದುವರೆದು ಬಿಡುತ್ತಾರೆ. ಇಲ್ಲಿಯೂ ಸಹ ಸರ್ವೀಸಿನಲ್ಲಿ ತೊಡಗಬೇಕಾಗಿದೆ. ತಂದೆಯು ಸರ್ವೀಸಿನ ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ಪ್ರದರ್ಶನಿಯಲ್ಲಿ ತಿಳಿಸುವ ಅಭ್ಯಾಸ ಮಾಡಿರಿ.
|
2 |
+
ತಮ್ಮ ಉನ್ನತಿ ಮಾಡಿಕೊಂಡು ಜೀವನವನ್ನು ರೂಪಿಸಿಕೊಳ್ಳಿರಿ. ನಾನು ಎಷ್ಟು ಸರ್ವೀಸ್ ಮಾಡಿದೆನು, ಎಷ್ಟು ಜನರನ್ನು ತನ್ನ ಸಮಾನರನ್ನಾಗಿ ಮಾಡಿದೆನು ಎಂದು ಚಿಂತೆಯಿರಬೇಕು. ತಮ್ಮ ಸಮಾನ ಯಾರನ್ನೂ ತಯಾರು ಮಾಡದಿದ್ದರೆ ಶ್ರೇಷ್ಠ ಪದವಿಯೆಂದು ಹೇಗೆ ಹೇಳುವಿರಿ? ಅಂತಹವರು ಪ್ರಜೆಗಳಲ್ಲಿ ಹೋಗುತ್ತಾರೆ ಅ��ವಾ ದಾಸ-ದಾಸಿಯಾಗುತ್ತಾರೆಂದು ತಿಳಿಯಲಾಗುತ್ತದೆ. ಬಹಳಷ್ಟು ಸೇವೆಯಿದೆ, ಈಗಿನ್ನೂ ನಿಮ್ಮದು ಚಿಕ್ಕ ವೃಕ್ಷವಾಗಿದೆ. ಶಕ್ತಿಶಾಲಿಯಾಗಿಲ್ಲ, ಬಿರುಗಾಳಿ ಬರುತ್ತಿದ್ದಂತೆಯೇ ಕಚ್ಚಾ ಇರುವವರು ಬಿದ್ದು ಹೋಗುತ್ತಾರೆ. ಮಾಯೆಯು ಬಹಳ ತೊಂದರೆ ಕೊಡುತ್ತದೆ. ಮಾಯೆಯ ಕೆಲಸವೇ ಆಗಿದೆ - ತಂದೆಯೊಂದಿಗೆ ವಿಮುಖರನ್ನಾಗಿ ಮಾಡುವುದು. ನಡೆಯುತ್ತಾ-ನಡೆಯುತ್ತಾ ಗ್ರಹಚಾರವು ಯಾವಾಗ ಇಳಿಯುತ್ತದೆಯೋ ಆಗ ನಾವಂತೂ ಈಗ ತಂದೆಯಿಂದ ಪೂರ್ಣ ಆಸ್ತಿ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ತನು-ಮನ-ಧನದಿಂದ ಪೂರ್ಣ ಸೇವೆ ಮಾಡುತ್ತಾರೆ. ಕೆಲವರಿಂದ ಮಾಯೆಯು ತಪ್ಪು ಮಾಡಿಸಿ ಬಿಡುತ್ತದೆ ನಂತರ ಶ್ರೀಮತದಂತೆ ನಡೆಯುವುದನ್ನೇ ಬಿಟ್ಟು ಬಿಡುತ್ತಾರೆ ನಂತರ ಯಾವಾಗ ಸ್ಮೃತಿಗೆ ಬರುತ್ತದೆಯೋ ಆಗ ಶ್ರೀಮತದಂತೆ ನಡೆಯುತ್ತಾರೆ. ಈ ಸಮಯದ ಪ್ರಪಂಚದಲ್ಲಿ ರಾವಣ ಸಂಪ್ರದಾಯದವರಿದ್ದಾರೆ. ಈ ದೇವತೆಗಳು ರಾಮ ಸಂಪ್ರದಾಯದವರಾಗಿದ್ದಾರೆ. ರಾವಣ ಸಂಪ್ರದಾಯದವರು ರಾಮ ಸಂಪ್ರದಾಯದವರ ಮುಂದೆ ತಲೆ ಬಾಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಾವು ವಿಶ್ವದ ಮಾಲೀಕರಾಗಿದ್ದೆವು, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಯಾವ ಗತಿಯಾಗಿ ಬಿಟ್ಟಿದೆ! ತಂದೆಯು ಈಗ ಎಲ್ಲರಿಂದ ಪುರುಷಾರ್ಥ ಮಾಡಿಸುತ್ತಾರೆ ಇಲ್ಲದಿದ್ದರೆ ನಾವು ಭಗವಂತನ ಶ್ರೀಮತದಂತೆ ನಡೆಯಲಿಲ್ಲವೆಂದು ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ಆದ್ದರಿಂದ ತಂದೆಯು ನಿತ್ಯವೂ ತಿಳಿಸುತ್ತಾರೆ - ಮಕ್ಕಳೇ, ತಪ್ಪು ಮಾಡಬೇಡಿ, ಸರ್ವೀಸ್ ಮಾಡುವವರನ್ನು ನೋಡುತ್ತೀರಿ. ಎಷ್ಟು ಚೆನ್ನಾಗಿ ಸರ್ವೀಸ್ ಮಾಡುತ್ತಾರೆ. ಕೆಲವರು ಫಸ್ಟ್ಗ್ರೇಡ್, ಕೆಲವರು ಸೆಕೆಂಡ್ ಗ್ರೇಡ್ನಲ್ಲಿ ಮಾಡುವವರಿದ್ದಾರೆ. ವ್ಯತ್ಯಾಸವಂತೂ ಇರುತ್ತದೆಯಲ್ಲವೆ. ತಂದೆಯು ಮಕ್ಕಳಿಗೆ ಸರಿಯಾದುದನ್ನೇ ತಿಳಿಸುತ್ತಾರಲ್ಲವೆ. ಲೌಕಿಕದಲ್ಲಿ ಕೆಲವರು ಮಕ್ಕಳನ್ನು ಹೊಡೆಯುತ್ತಾರೆ. ಇಲ್ಲಿ ಈ ಬೇಹದ್ದಿನ ತಂದೆಯಂತೂ ಪ್ರೀತಿಯಿಂದ ತಿಳಿಸುತ್ತಾರೆ - ತಮ್ಮ ಉನ್ನತಿ ಮಾಡಿಕೊಳ್ಳಿ. ಎಷ್ಟು ಸಾಧ್ಯವೋ ಪುರುಷಾರ್ಥ ಮಾಡಬೇಕು. ನಾನು 5000 ವರ್ಷಗಳ ನಂತರ ಬಂದು ಮಕ್ಕಳೊಂದಿಗೆ ಮಿಲನ ಮಾಡಿದ್ದೇನೆ. ರಾಜಯೋಗವನ್ನು ಕಲಿಸುತ್ತಿದ್ದೇನೆಂದು ತಂದೆಗೆ ಖುಷಿಯಾಗುತ್ತದೆ. ಗೀತೆಯೂ ಇದೆಯಲ್ಲವೆ - ನೀವೂ ಅವರೇ ಆಗಿದ್ದೀರಿ ಮತ್ತು ನಾವು ಅವರೇ ಕಲ್ಪದ ಮೊದಲಿನವರಾಗಿದ್ದೇವೆ. ಹಾಗೆಯೇ ತಂದೆಯು ತಿಳಿಸುತ್ತಾರೆ - ನೀವು ಮಕ್ಕಳೂ ಸಹ ಅದೇ ಕಲ್ಪದ ಹಿಂದಿನ ಮಕ್ಕಳಾಗಿದ್ದೀರಿ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಒಳ್ಳೆಯದು.
|
3 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
4 |
+
ಧಾರಣೆಗಾಗಿ ಮುಖ್ಯಸಾರ:
|
5 |
+
1. ಸ್ವಯಂನ್ನು ಸೇವೆಗೆ ಯೋಗ್ಯನನ್ನಾಗಿ ಮಾಡಿಕೊಳ್ಳ��ೇಕಾಗಿದೆ. ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಯೋ ಅವರಿಗೆ ಸಂಪೂರ್ಣ ಗೌರವ ಕೊಡಬೇಕಾಗಿದೆ. ತಮ್ಮ ಉನ್ನತಿಯ ಚಿಂತನೆ ಮಾಡಬೇಕಾಗಿದೆ.
|
6 |
+
2. ತನು-ಮನ-ಧನದಿಂದ ಪೂರ್ಣ ಸೇವೆ ಮಾಡಬೇಕಾಗಿದೆ. ಶ್ರೀಮತದಂತೆ ನಡೆಯಬೇಕು, ತಪ್ಪು (ಹುಡುಗಾಟಿಕೆ) ಮಾಡಬಾರದು.
|
BKMurli/BKMurli/page_1002.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಕ್ಕಳು ಯಾರ ಮಹಿಮೆಯನ್ನು ಕೇಳಿದಿರಿ? ಬ್ರಹ್ಮನದೋ ಅಥವಾ ಸರಸ್ವತಿಯದೋ ಅಥವಾ ಶಿವನದೋ? ಯಾವಾಗ ನಿಮ್ಮನ್ನು ಬಿಟ್ಟು ಮತ್ತ್ಯಾರೂ ಇಲ್ಲವೆಂದು ಹೇಳುತ್ತಾರೆ ಅಂದಮೇಲೆ ಮತ್ತೆ ಅನ್ಯ ಯಾರ ಮಹಿಮೆಯನ್ನು ಮಾಡಲಾಗುತ್ತದೆ? ಭಲೆ ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದಾರೆ ಆದರೆ ಅವರಿಗೂ ಮೇಲೆ ಶಿವ ತಂದೆಯಿದ್ದಾರಲ್ಲವೆ. ಅವರ ವಿನಃ ಮತ್ತ್ಯಾರಿಗೂ ಮಹಿಮೆಯಿಲ್ಲ. ಈಗಂತೂ ಅನೇಕರಿಗೆ ಶಾಂತಿಯ ಪಾರಿತೋಷಕಗಳನ್ನು ಕೊಡುತ್ತಾರೆ, ಈ ಪ್ರಪಂಚದ ಸಮಾಚಾರವನ್ನೂ ಕೇಳಬೇಕು. ನಿಮಗೆ ಹೊಸ ಪ್ರಪಂಚದ ಸಮಾಚಾರವು ಬುದ್ಧಿಯಲ್ಲಿದೆ. ನಾವೀಗ ಹೊಸ ಪ್ರಪಂಚದಲ್ಲಿ ಹೋಗುತ್ತೇವೆ ಅಂದಾಗ ಒಬ್ಬ ತಂದೆಯ ವಿನಃ ಮತ್ತ್ಯಾರ ಮಹಿಮೆಯೂ ಇಲ್ಲವೆಂಬುದು ಮಕ್ಕಳಿಗೆ ಅರ್ಥವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ನೀವು ಪತಿತರನ್ನು ಪಾವನ ಮಾಡುವವನಾಗಿದ್ದೇನೆ, ನಾನು ಇಲ್ಲದಿದ್ದರೆ ನೀವು ಬ್ರಾಹ್ಮಣರೂ ಇರುವುದಿಲ್ಲ. ನೀವು ಬ್ರಾಹ್ಮಣರು ಈಗ ಕಲಿಯುತ್ತಿದ್ದೀರಿ, ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೀರಿ, ಶೂದ್ರರು ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ ಅಂದಮೇಲೆ ಬಲಿಹಾರಿಯು ಒಬ್ಬ ತಂದೆಯದಾಗಿದೆ. ಭಲೆ ಆತ್ಮಿಕ ಸೇವಾಧಾರಿಗಳೆಂದು ಬ್ರಾಹ್ಮಣರ ಗಾಯನವೂ ಇದೆ, ದೇವಿ-ದೇವತೆಗಳ ಗಾಯನವೂ ಇದೆ ಆದರೆ ಒಂದುವೇಳೆ ಶಿವ ತಂದೆಯಿಲ್ಲದಿದ್ದರೆ ಇವರಿಗೂ ಗಾಯನವು ಎಲ್ಲಿಂದ ಬಂದಿತು? ನನ್ನವರು ಒಬ್ಬ ಶಿವ ತಂದೆಯ ವಿನಃ ಯಾರೂ ಇಲ್ಲವೆಂದು ಹಾಡುತ್ತಾರೆ ಆಸ್ತಿಯೂ ಸಹ ಅವರಿಂದಲೇ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನನಗೆ ಯಾವುದೇ ಶಾಂತಿಯ ಬಹುಮಾನವು ಸಿಗುವುದಿಲ್ಲ, ನಾನಂತೂ ನಿಷ್ಕಾಮ ಸೇವಾಧಾರಿಯಾಗಿದ್ದೇನೆ, ನನಗೆ ಯಾವುದೇ ಪದಕವನ್ನು ಕೊಡುತ್ತೀರಾ! ನಾನು ಬಹುಮಾನವನ್ನೇನು ಕೊಡಲಿ. ಯಾರಾದರೂ ಚಿನ್ನದ ಪದಕವನ್ನು ಮಾಡಿಸಿಕೊಟ್ಟರೆ ಪತ್ರಿಕೆಗಳಲ್ಲಿ ಹಾಕುತ್ತಾರೆ. ನನಗಾಗಿ ಏನು ಮಾಡುವಿರಿ? ಮಕ್ಕಳೇ, ನಾನಂತೂ ತಂದೆಯಾಗಿದ್ದೇನೆ, ಪತಿತರನ್ನು ಪಾವನ ಮಾಡುವುದು ತಂದೆಯ ಕರ್ತವ್ಯವಾಗಿದೆ. ಡ್ರಾಮಾನುಸಾರ ನಾನು ಎಲ್ಲರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡಬೇಕಾಗಿದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ. ಹೇಗೆ ಜನಕನ ಹೆಸರಿದೆ ಅವರೇ ನಂತರ ಅನುಜನಕನಾದರು. ಹಾಗೆಯೇ ಇಲ್ಲಿಯೂ ಹೆಸರಿದೆ, ಹೇಗೆ ಯಾರ ಹೆಸರಾದರೂ ಲಕ್ಷ್ಮಿ ಎಂದಿರುತ್ತದೆ ಆದರೆ ಅವರು ಜೀವನ ಬಂಧನದಲ್ಲಿರುತ್ತಾರೆ ಮತ್ತು ನೀವೀಗ ಸತ್ಯ ಲಕ್ಷ್ಮಿ, ಸತ್ಯ ನಾರಾಯಣ ಆಗುತ್ತಿದ್ದೀರಿ. ಭಾರತದಲ್ಲಿಯೇ ಹೀಗೆ ಅನೇಕ ಹೆಸರುಗಳಿವೆ, ಅನ್ಯ ಧರ್ಮದವರ ಹೆಸರುಗಳು ಈ ರೀತಿ ಇರುವುದಿಲ್ಲ, ಭಾರತದಲ್ಲಿಯೇ ಏಕೆ ಇಡುತ್ತಾರೆ? ಏಕೆಂದರೆ ಇದು ದೊಡ್ಡವರ ನೆನಪಾರ್ಥವಾಗಿದೆ ಇಲ್ಲದಿದ್ದರೆ ವ್ಯತ್ಯಾಸವು ನೋಡಿ ಎಷ್ಟಿದೆ! ಇಲ್ಲಿನ ಲಕ್ಷ್ಮೀ ನಾರಾಯಣ ಎಂಬ ಹೆಸರಿನವರು ಮಂದಿರಗಳಿಗೆ ಹೋಗಿ ಸತ್ಯಯುಗೀ ಲಕ್ಷ್ಮೀನಾರಾಯಣರಿಗೆ ತಲೆ ಬಾಗುತ್ತಾರೆ, ಪೂಜೆ ಮಾಡುತ್ತಾ��ೆ. ಅವರಿಗೆ ಶ್ರೀಲಕ್ಷ್ಮೀ-ಶ್ರೀನಾರಾಯಣ ಎಂದು ಹೇಳುತ್ತಾರೆ ಆದರೆ ತಮಗೆ ಶ್ರೀ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಪತಿತರು ಶ್ರೇಷ್ಠರಾಗಲು ಹೇಗೆ ಸಾಧ್ಯ! ನಾವು ವಿಕಾರಿ ಪತಿತರಾಗಿದ್ದೇವೆ, ಅವರು ನಿರ್ವಿಕಾರಿ ಪಾವನರಾಗಿದ್ದಾರೆ ಎಂದು ಹೇಳುತ್ತಾರೆ. ಅವರೂ ಮನುಷ್ಯರೇ, ಅವರೂ ಸಹ ಇದ್ದು ಹೋಗಿದ್ದಾರೆ. ಇವೆಲ್ಲಾ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ, ನಿಮಗೆ ತಂದೆಯು ತಿಳಿಸುತ್ತಾರೆ ಮತ್ತು ಪ್ರತಿಯೊಂದು ಪ್ರಕಾರದ ಸಲಹೆಯನ್ನೂ ನೀಡುತ್ತಾರೆ. ಈಗ ವಿರಾಟರೂಪದ ಚಿತ್ರವೂ ಸಹ ಅವಶ್ಯವಾಗಿ ಇರಬೇಕು. ದೇವತೆಗಳೇ ಅಂತ್ಯದಲ್ಲಿ ಬಂದು ಶೂದ್ರರಾಗುತ್ತಾರೆ. ವಿಭಿನ್ನತೆಯಿದೆಯಲ್ಲವೆ. ಮತ್ತ್ಯಾರದೂ ಹೀಗೆ ವಿರಾಟರೂಪವು ಮಾಡಲ್ಪಟ್ಟಿಲ್ಲ, 84 ಜನ್ಮಗಳನ್ನು ನೀವೇ ತೆಗೆದುಕೊಳ್ಳುತ್ತೀರಿ. ಪೂಜ್ಯರು, ಪೂಜಾರಿಗಳು ನೀವೇ ಆಗುತ್ತೀರಿ. ಇಷ್ಟು ಮಂದಿ ಪೂಜಾರಿಗಳಿಗಾಗಿ ಪೂಜ್ಯರು ಬಹಳಮಂದಿ ಬೇಕಲ್ಲವೆ. ಆದ್ದರಿಂದ ಕುಳಿತು ಎಷ್ಟೊಂದು ಚಿತ್ರಗಳನ್ನು ರಚಿಸಿದ್ದಾರೆ! ಹನುಮಂತನನ್ನೂ ಪೂಜ್ಯನನ್ನಾಗಿ ಮಾಡಿಬಿಟ್ಟಿದ್ದಾರೆ ಆದ್ದರಿಂದ ವಿರಾಟ ರೂಪದ ಚಿತ್ರವು ಅವಶ್ಯಕವಾಗಿದೆ. ಲೆಕ್ಕವು ಬೇಕಲ್ಲವೆ. ಯಾವ ಲೆಕ್ಕದಿಂದ ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ಮೇಲೆ ಶಿಖೆಯನ್ನೂ ಅವಶ್ಯವಾಗಿ ತೋರಿಸಬೇಕಾಗಿದೆ. ವಿಷ್ಣುವಿನ ರೂಪವು ಸರಿಯಾಗಿದೆ ಏಕೆಂದರೆ ಪ್ರವೃತ್ತಿ ಮಾರ್ಗವಲ್ಲವೆ. ಬ್ರಾಹ್ಮಣರ ಶಿಖೆಯನ್ನೂ ಸಹ ಸ್ಪಷ್ಟ ಮಾಡಿ ತಿಳಿಸಬೇಕಾಗಿದೆ. ಚಿತ್ರಗಳನ್ನು ಇಷ್ಟು ದೊಡ್ಡದಾಗಿ ಮಾಡಿಸಬೇಕು ಅದರಲ್ಲಿ ಬರವಣಿಗೆಯೂ ಬಂದು ಬಿಡಬೇಕು. ನೀವು ಬಹಳ ಸಹಜವಾಗಿ ಇದನ್ನು ತಿಳಿಸಬಹುದು. ವಾಸ್ತವದಲ್ಲಿ ತಂದೆಗೆ ಯಾವ ಬಹುಮಾನವೂ ಸಿಗುವುದಿಲ್ಲ, ಬಹುಮಾನವು ನಿಮಗೆ ಸಿಗುತ್ತದೆ. ಪವಿತ್ರತೆ, ಸುಖ-ಶಾಂತಿಯ ರಾಜ್ಯವನ್ನು ನೀವೇ ಸ್ಥಾಪನೆ ಮಾಡುತ್ತೀರಿ. ನಾವಿದನ್ನು ಸ್ಥಾಪನೆ ಮಾಡುತ್ತಿದ್ದೇವೆ, ನಾವು ಯಾವ ಇಷ್ಟೊಂದು ಸೇವೆ ಮಾಡುತ್ತಿದ್ದೇವೆಯೋ ಅದರ ಬಹುಮಾನವಾಗಿ ವಿಶ್ವದ ರಾಜ್ಯಭಾಗ್ಯವು ನಮಗೇ ಸಿಗುತ್ತದೆ ಎಂಬುದನ್ನು ನೀವು ಯಾರಿಗಾದರೂ ತಿಳಿಸಬಹುದು. ಎಷ್ಟು ಒಳ್ಳೆಯ ತಿಳಿದುಕೊಳ್ಳುವ ಮಾತುಗಳಾಗಿವೆ ಬಾಕಿ ಇಲ್ಲಿ ಯಾರಿಗಾದರೂ ಶಾಂತಿಯ ಬಹುಮಾನವು ಏನು ಸಿಗಬಹುದು? ನೀವು ಇದನ್ನೂ ಬರೆಯಿರಿ, ನಾವು 2500 ವರ್ಷಗಳಿಗಾಗಿ ಪವಿತ್ರತೆ, ಸುಖ, ಶಾಂತಿಯನ್ನು ಶ್ರೀಮತದ ಅನುಸಾರ ಸ್ಥಾಪನೆ ಮಾಡುತ್ತಿದ್ದೇವೆ ಆದರೆ ಮಕ್ಕಳಿಗೆ ಇನ್ನೂ ಅಷ್ಟು ನಶೆಯೇರಿಲ್ಲ. ನಶೆಯು ಯಾರಿಗೆ ಇರುವುದು? ಶಿವ ತಂದೆಗೇನು? ಯಾರಿಗೆ ಪೂರ್ಣ ನಶೆಯಿರುತ್ತದೆಯೋ ಅವರು ಆ ನಶೆಯಿಂದ ತಿಳಿಸುತ್ತಾರೆ. ಮೊದಲು ಬ್ರಹ್ಮಾರವರಿಗೆ ನಶೆಯಿರುತ್ತದೆ ಆದ್ದರಿಂದ ಶಿವ ತಂದೆಯು ಫಾಲೋಫಾದರ್ ಎಂದು ಹೇಳುತ್ತಾರೆ. ನೀವೂ ಸಹ ಇಷ್ಟು ಶ್ರೇಷ್ಠ ಪುರುಷಾರ್ಥ ಮಾಡಿ ಈ ರೀತಿ ಆಗಬೇಕಾಗಿದೆ. ಈ ತಂದೆಯು ಹೇಳುತ್ತಾರೆ - ನನಗೆ ತಂದೆಯಿಂದ ಶಿಕ್ಷಣ ಸಿಗುತ್ತಿದೆ, ನೀವೂ ಸಹ ಶಿವ ತಂದೆಯನ್ನು ನೆನಪು ಮಾಡಿರಿ, ನಾನಂತೂ ಪುರುಷಾರ್ಥಿಯಾಗಿದ್ದೇನೆ. ಶಿವ ತಂದೆಯು ತಿಳಿಸುತ್ತಾರೆ - ಪಾವನರನ್ನಾಗಿ ಮಾಡುವುದೇ ನನ್ನ ಕರ್ತವ್ಯವಾಗಿದೆ ಅಂದಮೇಲೆ ಇದರಲ್ಲಿ ನನ್ನ ಮಹಿಮೆಯನ್ನೇನು ಮಾಡುತ್ತೀರಿ? ನನಗೆ ಬಹುಮಾನವನ್ನೇನು ಕೊಡುತ್ತೀರಿ? ಯಾರೂ ಸಹ ನನ್ನ ಈ ಕರ್ತವ್ಯವನ್ನು ಮಾಡಲು ಸಾಧ್ಯವಿಲ್ಲ. ಇತ್ತೀಚೆಗೆ ಅನೇಕರಿಗೆ ಶಾಂತಿಯ ಬಹುಮಾನವು ಸಿಗುತ್ತಾ ಇರುತ್ತದೆ ಅಂದಾಗ ನೀವು ಸಲಹೆ ನೀಡಬಹುದು - ತಾವು ಶಾಂತಿಯನ್ನು ಸ್ಥಾಪನೆ ಮಾಡಬಲ್ಲಿರಾ? ಶಾಂತಿ ಸ್ಥಾಪನೆ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ, ಮೊದಲು ಪವಿತ್ರತೆ ಬೇಕಾಗಿದೆ. ಶಾಂತಿಯು ಶಾಂತಿಧಾಮ ಸುಖಧಾಮದಲ್ಲಿಯೇ ಇರುತ್ತದೆ. ನಿರಾಕಾರಿ ಪ್ರಪಂಚದಲ್ಲಿ ಹಾಗೂ ಸಾಕಾರಿ ಪ್ರಪಂಚ ಸ್ವರ್ಗದಲ್ಲಿ. ಇದನ್ನೂ ಸಹ ತಿಳಿಸಬೇಕಾಗಿದೆ. ಶಾಂತಿಯನ್ನು ಸ್ಥಾಪನೆ ಮಾಡುವವರು ಯಾರು? ಬಂದು ಪಾವನ ಪ್ರಪಂಚವನ್ನು ಸ್ಥಾಪನೆ ಮಾಡಿ ಎಂದು ನೀವು ಕರೆಯುತ್ತೀರಿ. ಇದನ್ನು ಯಾರು ತಿಳಿಸುತ್ತಾರೆ? ಇಬ್ಬರು ಒಟ್ಟಿಗೆ ಇದ್ದಾರಲ್ಲವೆ. ಇಬ್ಬರ ಹೆಸರನ್ನಾದರೂ ತೆಗೆದುಕೊಳ್ಳಿ, ಒಬ್ಬರ ಹೆಸರನ್ನಾದರೂ ತೆಗೆದುಕೊಳ್ಳಿ. ತಂದೆ ರಾಜ ಮಗ ಮಂತ್ರಿ. ನೀವು ಏನು ತಿಳಿದುಕೊಳ್ಳುತ್ತೀರಿ? ಯಾರು ವಿಚಾರ ಸಾಗರ ಮಂಥನ ಮಾಡುತ್ತಾರೆ? ಶಿವ ತಂದೆಯೋ ಅಥವಾ ಬ್ರಹ್ಮನೋ? ಇಬ್ಬರು ಒಟ್ಟಿಗೆ ಇದ್ದಾರಲ್ಲವೆ. ಈ ಮಾತುಗಳು ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು. ಚಿತ್ರಗಳನ್ನು ಮಾಡಿಸಲು ಮತ್ತು ತಿಳಿಸಲು ಯಾರು ಸಲಹೆ ನೀಡುತ್ತಿದ್ದಾರೆ ಎಂಬುದು ನಿಮಗೆ ಅರ್ಥವಾಗುವುದಿಲ್ಲ. ನಾವು ಯಾವ ಆತ್ಮಿಕ ಸೇವೆ ಮಾಡುತ್ತಿದ್ದೇವೆಯೋ ಅದೂ ಸಹ ಡ್ರಾಮಾ ಅನುಸಾರವಾಗಿದೆ. ಓದುವ ಮತ್ತು ಓದಿಸುವವರು ಎಂದೂ ಗುಪ್ತವಾಗಿರಲು ಸಾಧ್ಯವಿಲ್ಲ. ಹಾ! ಬಿರುಗಾಳಿಗಳು ಅವಶ್ಯವಾಗಿ ಬರುತ್ತವೆ, ಈ ಪಂಚ ವಿಕಾರಗಳೇ ತೊಂದರೆ ಕೊಡುತ್ತವೆ. ರಾವಣ ರಾಜ್ಯದಲ್ಲಿ ಬುದ್ಧಿಯು ತಪ್ಪು ಕರ್ಮವನ್ನೇ ಮಾಡಿಸುತ್ತದೆ ಏಕೆಂದರೆ ಬುದ್ಧಿಗೆ ಬೀಗ ಬೀಳುತ್ತದೆ ಮಾಯೆಯು ಎಲ್ಲರಿಗೆ ಬೀಗ ಹಾಕಿ ಬಿಟ್ಟಿದೆ. ಜ್ಞಾನದ ಮೂರನೇ ನೇತ್ರವು ಈಗ ಸಿಕ್ಕಿದೆ.
|
2 |
+
ನೀವು ಭಾರತವಾಸಿಗಳು ಏನಾಗಿ ಬಿಟ್ಟಿದ್ದೀರಿ ಎಂಬುದನ್ನು ತಂದೆಯು ಕುಳಿತು ತಿಳಿಸುತ್ತಾರೆ. ಈ ಬ್ರಹ್ಮನೂ ಸಹ ತಿಳಿದುಕೊಳ್ಳುತ್ತಾರೆ - ನಾನು ಹೇಗಿದ್ದೆನು ಮತ್ತೆ 84 ಜನ್ಮಗಳ ನಂತರ ಏನಾಗುತ್ತೇನೆ? ಭಾರತದಲ್ಲಿ ಲಕ್ಷ್ಮೀ-ನಾರಾಯಣರದೆ 84 ಜನ್ಮಗಳೆಂದು ಎಣಿಕೆ ಮಾಡಲಾಗುತ್ತದೆ. ತಂದೆಯೂ ಸಹ ಇಲ್ಲಿಯೇ ಬಂದಿದ್ದಾರೆ. ಶಿವ ಜಯಂತಿಯೂ ಸಹ ಇಲ್ಲಿಯೇ ಆಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಪತಿತ ಶರೀರದಲ್ಲಿ ಪ್ರವೇಶ ಮಾಡಿ ಪತಿತ ಪ್ರಪಂಚದಲ್ಲಿಯೇ ಬರುತ್ತೇನೆ. ನಂಬರ್ವನ್ ಪಾವನನೇ ಮತ್ತೆ ನಂಬರ್ವನ್ ಪತಿತ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರಲ್ಲವೆ. ಸೇವಾಧಾರಿ ಮಕ್ಕಳ ಬುದ್ಧಿಯಲ್ಲಿ ಇಡೀ ದಿನ ಇದೇ ಜ್ಞಾನವಿರುತ್ತದೆ. ತಂ��ೆಯು ತಿಳಿಸುತ್ತಾರೆ- ಗೃಹಸ್ಥ ವ್ಯವಹಾರದಲ್ಲಿರುತ್ತಾ ಮೊದಲು ಪವಿತ್ರರಾಗಿರಿ ಮತ್ತು ತಂದೆಯನ್ನು ನೆನಪು ಮಾಡಿರಿ. ಸತ್ಸಂಗವೂ ಸಹ ಬೆಳಗ್ಗೆ ಮತ್ತು ಸಾಯಂಕಾಲ ಇರುತ್ತದೆ. ದಿನದಲ್ಲಿ ವ್ಯವಹಾರದಲ್ಲಿರುತ್ತಾರೆ, ಭಕ್ತಿ ಮಾಡುತ್ತಾರೆ. ಒಬ್ಬೊಬ್ಬರು ಒಬ್ಬೊಬ್ಬರ ಪೂಜೆ ಮಾಡುತ್ತಾರೆ. ವಾಸ್ತವದಲ್ಲಿ ಸ್ತ್ರೀಗೆ ಪತಿಯೇ ನಿಮಗೆ ಸರ್ವಸ್ವ ಎಂದು ಹೇಳುತ್ತಾರೆ. ಅಂದಮೇಲೆ ಮತ್ತೆ ಅವರು ಯಾರಿಗೂ ಪೂಜೆ ಮಾಡಬೇಕಾಗಿಲ್ಲ. ಪತಿಯನ್ನೇ ಗುರು ಈಶ್ವರನೆಂದು ತಿಳಿಯುತ್ತಾಳೆ ಆದರೆ ಇದನ್ನು ವಿಕಾರಿಗಳಿಗಾಗಿ ಹೇಳಲಾಗುವುದಿಲ್ಲ. ಪತಿಯರಿಗೂ ಪತಿ, ಗುರುಗಳಿಗೂ ಗುರು ಒಬ್ಬರೇ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ನೀವೆಲ್ಲರೂ ವಧುಗಳು, ಅವರೊಬ್ಬರೇ ವರನಾಗಿದ್ದಾರೆ. ಅವರು ಇದನ್ನು ಪತಿಗೆ ಸದ್ಗುರುವೆಂದು ತಿಳಿದುಕೊಳ್ಳುತ್ತಾರೆ. ವಾಸ್ತವದಲ್ಲಿ ತಂದೆಯು ಬಂದು ಮಾತೆಯರ ಗೌರವವನ್ನು ಹೆಚ್ಚಿಸುತ್ತಾರೆ. ಗಾಯನವಿದೆ - ಮೊದಲು ಲಕ್ಷ್ಮೀ ನಂತರ ನಾರಾಯಣ ಅಂದಮೇಲೆ ಲಕ್ಷ್ಮಿಯ ಗೌರವ ಹೆಚ್ಚಾಯಿತು. ಈಗ ನಿಮಗೆ ಸ್ವರ್ಗದ ಮಾಲೀಕರಾಗುವ ಎಷ್ಟೊಂದು ನಶೆಯಿರಬೇಕು! ಕಲ್ಪದ ಮೊದಲೂ ಸಹ ಶಿವ ಜಯಂತಿಯನ್ನು ಆಚರಿಸಿದ್ದಿರಿ. ತಂದೆಯು ಬಂದಿದ್ದರು, ಸ್ವರ್ಗದ ಸ್ಥಾಪನೆ ಮಾಡಿದ್ದರು. ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ. ನಾವೂ ಸಹ ರಾಜ್ಯವನ್ನು ತೆಗೆದುಕೊಳ್ಳುತ್ತೇವೆ ಮತ್ತು ಹಳೆಯ ಪ್ರಪಂಚದ ವಿನಾಶವೂ ಆಗಲಿದೆ, ಮತ್ತ್ಯಾರ ಬುದ್ಧಿಯಲ್ಲಿಯೂ ಈ ಮಾತುಗಳಿರಲು ಸಾಧ್ಯವಿಲ್ಲ. ಬುದ್ಧಿಯಲ್ಲಿ ಇವೆಲ್ಲಾ ಮಾತುಗಳು ಧಾರಣೆಯಿದ್ದಾಗ ಖುಷಿಯಾಗಿರುವರು. ಧೈರ್ಯ ಮತ್ತು ಶಕ್ತಿ ಬೇಕಾಗಿದೆ. ಇದರಲ್ಲಿ ಮಾತನಾಡುವ ಅಭ್ಯಾಸ ಮಾಡಿಕೊಳ್ಳಲಾಗುತ್ತದೆ, ಬಾಕಿ ಎಲ್ಲರೂ ಸಹ ಅಭ್ಯಾಸ ಮಾಡುವುದರಿಂದ ಒಳ್ಳೆಯ ವಕೀಲರಾಗಿ ಬಿಡುತ್ತಾರೆ. ನಂಬರ್ವಾರಂತೂ ಅವಶ್ಯವಾಗಿ ಇರುತ್ತಾರೆ. ಪ್ರಥಮದರ್ಜೆ, ದ್ವಿತಿಯ, ತೃತಿಯ ಹೀಗೆ ಇದ್ದೇ ಇರುತ್ತಾರೆ. ಮಕ್ಕಳ ಸ್ಥಿತಿಗಳೂ ಸಹ ಹಾಗೆಯೇ ಇವೆ. ಮಕ್ಕಳಲ್ಲಿ ಬಹಳ ಮಧುರತೆ ಬೇಕಾಗಿದೆ. ಮಧುರತೆ ಮತ್ತು ಸ್ಪಷ್ಟ ಶಬ್ಧಗಳಲ್ಲಿ ಮಾತನಾಡುವುದರಿಂದ ಪ್ರಭಾವ ಬೀರುವುದು ಅಂದಾಗ ಶಾಂತಿ ಸ್ಥಾಪನೆ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ. ಅವರನ್ನೇ ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನನಗೆ ಯಾವ ಬಹುಮಾನವನ್ನು ಕೊಡುತ್ತೀರಿ! ನಾನಂತೂ ನೀವು ಮಕ್ಕಳಿಗೆ ಬಹುಮಾನವನ್ನು ಕೊಡುತ್ತೇನೆ. ನೀವು ಸುಖ-ಶಾಂತಿಯನ್ನು ಸ್ಥಾಪನೆ ಮಾಡುತ್ತೀರಿ ಆದರೆ ನೀವು ಗುಪ್ತವಾಗಿದ್ದೀರಿ. ಮುಂದೆ ಹೋದಂತೆ ಪ್ರಭಾವ ಹೆಚ್ಚುತ್ತಾ ಹೋಗುವುದು. ಈ ಬಿ.ಕೆ.,ಗಳು ಬಹಳ ದೊಡ್ಡ ಕಮಾಲ್ ಮಾಡುತ್ತಾರೆಂದು ತಿಳಿದುಕೊಳ್ಳುತ್ತಾರೆ. ದಿನ-ಪ್ರತಿದಿನ ಸುಧಾರಣೆಯಾಗುತ್ತಾ ಹೋಗುತ್ತಾರೆ. ಯಾರ ಬಳಿಯಾದರೂ ಹೆಚ್ಚು ಹಣವಿದ್ದರೆ ಬಹಳ ಒಳ್ಳೊಳ್ಳೆಯ ಮಾರ್ಬಲ್ನ ಮನೆಗಳನ್ನು ಕಟ್ಟಿಸುತ್ತಾರೆ. ನೀವೂ ಸಹ ಹೆಚ್ಚು ಕಲಿಯುತ್ತಾ ಹೋಗು���್ತೀರೆಂದರೆ ಮತ್ತೆ ಈ ಚಿತ್ರಗಳೆಲ್ಲವೂ ಬಹಳ ಆಧುನಿಕ ಮತ್ತು ಬಹಳ ಸುಂದರವಾಗಿ ತಯಾರಾಗುತ್ತಾ ಹೋಗುತ್ತವೆ. ಪ್ರತೀ ಮಾತಿನಲ್ಲಿ ಸಮಯ ಹಿಡಿಸುತ್ತದೆ, ಇದಂತೂ ಬಹಳ ದೊಡ್ಡ ಪರೀಕ್ಷೆಯಾಗಿದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ, ಮತ್ತ್ಯಾವುದರೊಂದಿಗೂ ನಮಗೆ ಸಂಬಂಧವಿಲ್ಲ. ತಮೋಪ್ರಧಾನರಿಂದ ಹೇಗೆ ಸತೋಪ್ರಧಾನರಾಗಬೇಕು ಎಂಬ ಯುಕ್ತಿಯನ್ನು ತಂದೆಯು ತಿಳಿಸುತ್ತಾರೆ. ಗೀತೆಯಲ್ಲಿಯೂ ಇದೆ - ಮನ್ಮನಾಭವ ಆದರೆ ಇದರ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಈಗ ತಂದೆಯು ಸನ್ಮುಖದಲ್ಲಿ ಕುಳಿತು ತಿಳಿಸುತ್ತಾರೆ. ಮಕ್ಕಳಿಗೆ ತಿಳಿದಿದೆ - ಅರ್ಧಕಲ್ಪ ಭಕ್ತಿ, ಅರ್ಧಕಲ್ಪ ಜ್ಞಾನವಿದೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯಿರುವುದಿಲ್ಲ. ಜ್ಞಾನವು ದಿನ, ಭಕ್ತಿಯು ರಾತ್ರಿಯಾಗಿದೆ. ಮನುಷ್ಯರಿಗೆ ದಿನ ಮತ್ತು ರಾತ್ರಿಯಾಗುತ್ತದೆ. ಇದು ಬೇಹದ್ದಿನ ಮಾತಾಗಿದೆ. ಬ್ರಹ್ಮನ ದಿನ, ಬ್ರಹ್ಮನ ರಾತ್ರಿ. ದಿನದಲ್ಲಿ ನೋಡಿ, ಲಕ್ಷ್ಮೀ-ನಾರಾಯಣರ ರಾಜಧಾನಿಯಿರುತ್ತದೆಯಲ್ಲವೆ. ಈಗ ರಾತ್ರಿಯಾಗಿದೆ, ಈ ರಹಸ್ಯವು ಎಷ್ಟು ಚೆನ್ನಾಗಿದೆ. ಬ್ರಹ್ಮನಾಗುವುದರಲ್ಲಿ 5000 ವರ್ಷಗಳು ಹಿಡಿಸುತ್ತವೆ, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರಲ್ಲವೆ. ನಾವೇ ದೇವತೆಗಳಾಗುತ್ತೇವೆಂದು ನೀವು ಹೇಳುತ್ತೀರಿ, ಇದನ್ನಂತೂ ಚೆನ್ನಾಗಿ ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕು. ಸೃಷ್ಟಿಚಕ್ರವು ಬುದ್ಧಿಯಲ್ಲಿರಲಿ, ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು ನೋಡಿ ಬಹಳ ಖುಷಿಯಾಗಬೇಕು. ಇದು ಗುರಿ-ಧ್ಯೇಯವಾಗಿದೆ. ನರನಿಂದ ನಾರಾಯಣನಾಗುವುದಕ್ಕಾಗಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ. ಅಲ್ಲಿ ಗೀತೆ ಇತ್ಯಾದಿಗಳನ್ನು ತಿಳಿಸುವುದಿಲ್ಲ. ಎಷ್ಟು ತಪ್ಪಾಗಿದೆ! ಈ ತಪ್ಪನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಮತ್ತೆಲ್ಲರೂ ವಿಷಯ ಸಾಗರದಲ್ಲಿ ಮುಳುಗುತ್ತಾ ಇರುತ್ತಾರೆ. ಅನೇಕರನ್ನು ಮಾಯೆಯು ಒಮ್ಮೆಲೆ ಕುತ್ತಿಗೆಯನ್ನು ಹಿಡಿದುಕೊಂಡು ಗುಣಿಯಲ್ಲಿ ಬೀಳಿಸುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಚರಂಡಿಯಲ್ಲಿ ಬೀಳಬೇಡಿ, ನಂತರ ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ಪಶ್ಚಾತ್ತಾಪ ಪಡಬಾರದೆಂದು ಹೇಳಿ ತಂದೆಯು ತಿಳಿಸುತ್ತಾರೆ. ಕೆಲವರಿಗಂತೂ ಬಹಳ ಚಲ ಬರುತ್ತದೆ, ಕೂಡಲೇ ಅದನ್ನು ಒಪ್ಪಿಕೊಳ್ಳುತ್ತಾರೆ. ಇನ್ನೂ ಕೆಲವರು ಬಾಬಾ, ಮೊದಲೇ ನಮಗೆ ನಿಶ್ಚಿತಾರ್ಥವಾಗಿದೆ ಈಗ ಏನು ಮಾಡುವುದು? ಎಂದು ಬರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಕಮಾಲ್ ಮಾಡಿ ತೋರಿಸಿರಿ, ಅವರಿಗೆ ಮೊದಲೇ ಹೇಳಿ ಬಿಡಿ - ನೀವು ನಂತರ ಪತಿಯ ಆಜ್ಞೆಯಂತೆ ನಡೆಯಬೇಕಾಗುವುದು. ನಾನು ಪವಿತ್ರವಾಗಿಯೇ ಇರುತ್ತೇನೆಂದು ಗ್ಯಾರಂಟಿ ಕೊಡಬೇಕಾಗುವುದು. ಇದನ್ನು ಮೊದಲೇ ಬರೆದುಕೊಡಿ - ತಾವು ಹೇಳಿದಂತೆ ನಾನು ಕೇಳುತ್ತೇನೆಂದು. ಬರೆಸಿಕೊಳ್ಳಿ ನಂತ��� ಯಾವುದೇ ಏರುಪೇರಾಗುವುದಿಲ್ಲ. ಕನ್ಯೆಯಂತೂ ಬರೆಸಿಕೊಳ್ಳಲು ಸಾಧ್ಯವಿಲ್ಲ, ಕನ್ಯೆಯರಂತೂ ನಾವು ವಿವಾಹ ಮಾಡಿಕೊಳ್ಳಬಾರದೆಂದು ಪುರುಷಾರ್ಥ ಮಾಡಬೇಕು. ಕನ್ಯೆಯರು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ.
|
3 |
+
ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ಏನು ತಿಳಿದುಕೊಂಡಿರಿ, ಹೇ ಪತಿತ-ಪಾವನ ಬಂದು ಪಾವನ ಮಾಡಿ ಎಂದು ಹೇಳುತ್ತೀರಿ ಅಂದಮೇಲೆ ನನ್ನದು ಇದೇ ಕೆಲಸವೇನು!! ಹೀಗೆ ತಂದೆಯು ಕೆಲವೊಮ್ಮೆ ಮಕ್ಕಳೊಂದಿಗೆ ಹಾಸ್ಯ ಮಾಡುತ್ತಾರೆ. ಬಾಬಾ, ನಾವು ಪತಿತರಾಗಿ ಬಿಟ್ಟಿದ್ದೇವೆ ಬಂದು ಪಾವನ ಮಾಡಿ ಎಂದು ನೀವು ಕರೆಯುತ್ತೀರಿ. ತಂದೆಯು ಪರದೇಶದಲ್ಲಿ ಬರುತ್ತಾರೆ. ಇದು ಪತಿತ ಪ್ರಪಂಚ ಅಲ್ಲವೆ. ನಾನು ಇವರಲ್ಲಿ ಪ್ರವೇಶ ಮಾಡಿ ಪಾವನರನ್ನಾಗಿ ಮಾಡಬೇಕಾಗಿದೆ. ಇವರು ನಂತರ ಸತ್ಯಯುಗದಲ್ಲಿ ಪಾವನ ಶರೀರವನ್ನು ತೆಗೆದುಕೊಳ್ಳುತ್ತಾರೆ ಆದರೆ ನನ್ನ ಅದೃಷ್ಟದಲ್ಲಿ ಇದೂ ಇಲ್ಲ, ನಾನಂತೂ ಪತಿತ ಶರೀರದಲ್ಲಿಯೇ ಬರಬೇಕಾಗುತ್ತದೆ. ಈ ಜ್ಞಾನವನ್ನು ಕೇಳಿ ಅನೇಕ ಮಕ್ಕಳಿಗೆ ಖುಷಿಯಾಗುತ್ತದೆ. ಇದು ಎಷ್ಟು ದೊಡ್ಡ ಜ್ಞಾನವಾಗಿದೆ! ಅಂದಮೇಲೆ ಪೂರ್ಣ ಪುರುಷಾರ್ಥವನ್ನೂ ಮಾಡಬೇಕಲ್ಲವೆ. ಒಳ್ಳೆಯ ಪುರುಷಾರ್ಥಿಗಳ ಹೆಸರನ್ನು ತಂದೆಯು ಗಾಯನ ಮಾಡುತ್ತಾರೆ. ಮನುಷ್ಯರಂತೂ ಮಜಾ ಮಾಡುತ್ತಾರೆ, ನಾವು ಇಲ್ಲಿಯೇ ಸ್ವರ್ಗದಲ್ಲಿದ್ದೇವೆಂದು ತಿಳಿದುಕೊಳ್ಳುತ್ತಾರೆ. ಇಲ್ಲಂತೂ ಸಹನೆ ಮಾಡಬೇಕಾಗುತ್ತದೆ. ತಂದೆಯು ಏನಾದರೂ ತಿನ್ನಿಸಲಿ, ಕುಡಿಸಲಿ, ಎಲ್ಲಿಯಾದರೂ ಕೂರಿಸಲಿ, ಹೆಜ್ಜೆ-ಹೆಜ್ಜೆಯಂತೆ ಶ್ರೀಮತದಂತೆ ನಡೆಯಬೇಕಾಗಿದೆ. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ಶಿವ ತಂದೆಯನ್ನು ನೆನಪು ಮಾಡಬೇಕು, ಬ್ರಹ್ಮಾ ತಂದೆಯನ್ನು ಫಾಲೋ ಮಾಡಬೇಕಾಗಿದೆ. ಬ್ರಹ್ಮಾ ತಂದೆಯ ಸಮಾನ ಶ್ರೇಷ್ಠ ಪುರುಷಾರ್ಥ ಮಾಡಬೇಕಾಗಿದೆ. ಈಶ್ವರೀಯ ನಶೆಯಲ್ಲಿ ಇರಬೇಕಾಗಿದೆ.
|
7 |
+
2. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ ಮತ್ತ್ಯಾವುದೇ ಮಾತಿನ ಚಿಂತೆ ಮಾಡಬಾರದು. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಬೇಕಾಗಿದೆ.
|
BKMurli/BKMurli/page_1003.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಹೇಗೆ 5000 ವರ್ಷಗಳ ಮೊದಲು ತಿಳಿಸಿದ್ದರೋ ಹಾಗೆಯೇ ಹಳೆಯ ಪ್ರಪಂಚದ ವಿನಾಶ ಮತ್ತು ಹೊಸ ಪ್ರಪಂಚ ಸತ್ಯಯುಗದ ಸ್ಥಾಪನೆ ಹೇಗಾಗುತ್ತದೆ ಎಂಬುದನ್ನು ಚಾಚೂ ತಪ್ಪದೆ ತಿಳಿಸುತ್ತಿದ್ದಾರೆ. ಈಗ ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದ ಸಂಗಮಯುಗವಾಗಿದೆ. ತಂದೆಯು ತಿಳಿಸಿದ್ದಾರೆ - ಹೊಸ ಪ್ರಪಂಚ ಸತ್ಯಯುಗದಿಂದ ಹಿಡಿದು ಈಗ ಕಲಿಯುಗದ ಅಂತ್ಯದವರೆಗೆ ಏನೇನು ಆಗುತ್ತಿದೆ! ಯಾವ-ಯಾವ ಸಾಮಗ್ರಿಯಿದೆ! ಏನೇನು ನೋಡುತ್ತೀರಿ! ಯಜ್ಞ, ತಪ, ದಾನ, ಪುಣ್ಯ ಇತ್ಯಾದಿ ಏನೇನು ಮಾಡುತ್ತಾರೆ. ಇದು ಏನೆಲ್ಲವೂ ಕಾಣುತ್ತಿದೆಯೋ ಯಾವುದೂ ಉಳಿಯುವುದಿಲ್ಲ. ಹಳೆಯ ಯಾವುದೇ ವಸ್ತು ಉಳಿಯುವುದಿಲ್ಲ. ಹೇಗೆ ಹಳೆಯ ಮನೆಯನ್ನು ಬೀಳಿಸುತ್ತಾರೆಂದರೆ ಮಾರ್ಬಲ್ ಕಲ್ಲು ಮೊದಲಾದ ಒಳ್ಳೆಯ ವಸ್ತುಗಳಿರುತ್ತವೆಯೋ ಅವನ್ನು ಇಟ್ಟುಕೊಳ್ಳುತ್ತಾರೆ, ಉಳಿದನ್ನು ಬೀಳಿಸಿ ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈ ಹಳೆಯದೆಲ್ಲವೂ ಸಮಾಪ್ತಿಯಾಗಲಿದೆ ಬಾಕಿ ಯಾವ ವೈಜ್ಞಾನಿಕ ಕಲೆಯಿದೆಯೋ ಅದು ಶಾಶ್ವತವಾಗಿರುವುದು. ಈ ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆ, ಸತ್ಯಯುಗದಿಂದ ಕಲಿಯುಗದ ಅಂತ್ಯದವರೆಗೆ ಏನೇನು ಆಗುತ್ತದೆ ಎಂಬುದೆಲ್ಲವನ್ನೂ ನೀವು ತಿಳಿದುಕೊಂಡಿದ್ದೀರಿ. ಈ ವಿಜ್ಞಾನವೂ ಸಹ ಒಂದು ವಿದ್ಯೆಯಾಗಿದೆ ಅದರಿಂದ ವಿಮಾನ, ವಿದ್ಯುತ್ ಇತ್ಯಾದಿಗಳೆಲ್ಲವೂ ಆಗಿದೆ. ಮೊದಲು ಇವು ಇರಲಿಲ್ಲ, ಈಗ ಬಂದಿವೆ. ಪ್ರಪಂಚವಂತೂ ನಡೆಯುತ್ತಿರುತ್ತದೆ, ಭಾರತವು ಅವಿನಾಶಿ ಖಂಡವಾಗಿದೆ. ಪ್ರಳಯವಂತೂ ಆಗುವುದಿಲ್ಲ. ವಿಜ್ಞಾನದಿಂದ ಈಗ ಇಷ್ಟೊಂದು ಸುಖ ಸಿಗುತ್ತದೆ, ಈ ಕಲೆಯು ಸತ್ಯಯುಗದಲ್ಲಿಯೂ ಇರುತ್ತದೆ. ಕಲಿತಿರುವ ಕಲೆಗಳು ಇನ್ನೊಂದು ಜನ್ಮದಲ್ಲಿಯೂ ಕೆಲಸಕ್ಕೆ ಬರುತ್ತದೆ. ಅಲ್ಪಸ್ವಲ್ಪ ಉಳಿದಿರುತ್ತದೆ, ಇಲ್ಲಿಯೂ ಸಹ ಭೂಕಂಪ ಆಗುತ್ತದೆಯೆಂದರೆ ಬಹು ಬೇಗನೆ ಎಲ್ಲವನ್ನು ಹೊಸದಾಗಿ ಮಾಡಿಬಿಡುತ್ತಾರೆ. ಅಲ್ಲಿ ಹೊಸ ಪ್ರಪಂಚದಲ್ಲಿ ವಿಮಾನಗಳನ್ನು ತಯಾರಿಸುವವರೂ ಇರುತ್ತಾರೆ, ಸೃಷ್ಟಿಯು ನಡೆಯುತ್ತಲೇ ಇರುತ್ತದೆ. ಇವುಗಳನ್ನು ತಯಾರಿಸುವವರೂ ಸಹ ಬರುತ್ತಾರೆ, ಅಂತ್ಯಮತಿ ಸೋ ಗತಿಯಾಗುತ್ತದೆ. ಭಲೆ ಅವರಲ್ಲಿ ಈ ಜ್ಞಾನವಿಲ್ಲ ಆದರೆ ಅವರು ಅವಶ್ಯವಾಗಿ ಬರುತ್ತಾರೆ ಮತ್ತು ಹೊಸ, ಹೊಸ ವಸ್ತುಗಳನ್ನು ತಯಾರಿಸುತ್ತಾರೆ. ಈ ವಿಚಾರಗಳು ಈಗ ನಿಮ್ಮ ಬುದ್ಧಿಯಲ್ಲಿದೆ. ಇದೆಲ್ಲವೂ ಸಮಾಪ್ತಿಯಾಗುತ್ತದೆ, ಕೇವಲ ಭಾರತ ಖಂಡವೇ ಉಳಿಯುತ್ತದೆ. ನೀವು ಯೋಧರಾಗಿದ್ದೀರಿ. ತಮಗಾಗಿ ಯೋಗಬಲದಿಂದ ಸ್ವರಾಜ್ಯದ ಸ್ಥಾಪನೆ ಮಾಡುತ್ತಿದ್ದೀರಿ. ಅಲ್ಲಿ ಎಲ್ಲವೂ ಹೊಸದಾಗಿರುವುದು, ತತ್ವಗಳೂ ಸಹ ಯಾವುದು ತಮೋಪ್ರಧಾನವಾಗಿದೆಯೋ ಅವು ಸತೋಪ್ರಧಾನವಾಗಿ ಬಿಡುತ್ತದೆ. ನೀವೂ ಸಹ ಹೊಸ ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಈಗ ಪವಿತ್ರರಾಗುತ್ತಿದ್ದೀರಿ. ನಾವು ಮಕ್ಕಳು ಇದನ್ನು ಕಲಿತು ಬಹಳ ಬು���್ಧಿವಂತರಾಗುತ್ತೇವೆ. ಬಹಳ ಮಧುರ ಹೂಗಳಾಗುತ್ತೇವೆಂದು ನಿಮಗೆ ತಿಳಿದಿದೆ. ನೀವು ಯಾರಿಗಾದರೂ ಈ ಮಾತುಗಳನ್ನು ತಿಳಿಸುತ್ತೀರೆಂದರೆ ಅವರು ಬಹಳ ಖುಷಿಯಾಗುತ್ತಾರೆ. ಯಾರೆಷ್ಟು ಚೆನ್ನಾಗಿ ತಿಳಿಸುವರೋ ಅದರಂತೆ ಬಹಳ ಖುಷಿ ಪಡುತ್ತಾರೆ. ಇವರು ಬಹಳ ಚೆನ್ನಾಗಿ ತಿಳಿಸುತ್ತಾರೆಂದು ಹೇಳುತ್ತಾರೆ ಆದರೆ ಅಭಿಪ್ರಾಯವನ್ನು ಬರೆದುಕೊಡಲು ಹೇಳಿದಾಗ ವಿಚಾರ ಮಾಡುತ್ತೇವೆ, ಇಷ್ಟರಲ್ಲಿಯೇ ನಾವು ಹೇಗೆ ಬರೆಯುವುದು ಎಂದು ಹೇಳುತ್ತಾರೆ. ಒಂದು ಬಾರಿ ಕೇಳಿದೊಡನೆ ತಂದೆಯ ಜೊತೆ ಹೇಗೆ ಬುದ್ಧಿಯೋಗವನ್ನು ಇಡುವುದು ಎಂಬುದನ್ನು ಕಲಿಯುವುದಿಲ್ಲ. ಇಷ್ಟವಂತೂ ಆಗುತ್ತದೆ. ನೀವು ಇದನ್ನು ಅವಶ್ಯವಾಗಿ ತಿಳಿಸುತ್ತೀರಿ - ಈಗ ಹಳೆಯ ಪ್ರಪಂಚದ ವಿನಾಶವಾಗಲಿದೆ, ಪಾಪಗಳ ಹೊರೆಯು ತಲೆಯ ಮೇಲೆ ಬಹಳಷ್ಟಿದೆ, ಇದು ಪತಿತ ಪ್ರಪಂಚವಾಗಿದೆ, ಬಹಳ ಪಾಪಗಳನ್ನು ಮಾಡಿದ್ದಾರೆ, ರಾವಣ ರಾಜ್ಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದಲೇ ಪತಿತ-ಪಾವನ ತಂದೆಯನ್ನು ಕರೆಯುತ್ತಾರೆ. ಈ ಜ್ಞಾನವು ನಿಮಗೆ ಈಗ ಇದೆ. ಸತ್ಯಯುಗದಲ್ಲಿ ಇದರ ನಂತರ ತ್ರೇತಾಯುಗವು ಬರುವುದು ಎಂಬುದೇನೂ ತಿಳಿದಿರುವುದಿಲ್ಲ. ಅಲ್ಲಂತೂ ಪ್ರಾಲಬ್ಧವನ್ನು ಭೋಗಿಸುತ್ತೀರಿ.
|
2 |
+
ಈಗ ನೀವು ಮಕ್ಕಳು ಎಷ್ಟು ಬುದ್ಧಿವಂತರಾಗುತ್ತೀರಿ, ತಿಳಿದುಕೊಂಡಿದ್ದೀರಿ - ನಮಗೆ ಆತ್ಮಿಕ ತಂದೆಯು ಓದಿಸುತ್ತಾರೆ. ತಂದೆಯು ವಿಶ್ವದ ಆಲ್ಮೈಟಿ ಅಥಾರಿಟಿಯಾಗಿದ್ದಾರೆ. ಆ ಮನುಷ್ಯರು ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ. ಆ ಶಾಸ್ತ್ರಗಳನ್ನು ಓದುವವರಿಗೆ ಆಲ್ಮೈಟಿ ಎಂದು ಹೇಳಲಾಗುವುದಿಲ್ಲ. ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ಬಾಕಿ ಈ ವಿದ್ಯೆಯನ್ನು ತಂದೆಯು ನಿಮಗೆ ಓದಿಸುತ್ತಿದ್ದಾರೆ, ಇವು ಹೊಸ ಪ್ರಪಂಚಕ್ಕಾಗಿ ಹೊಸ ಮಾತುಗಳಾಗಿವೆ ಆದ್ದರಿಂದ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಬುದ್ಧಿಯಲ್ಲಿ ಇಡೀ ದಿನ ಈ ಜ್ಞಾನವು ಹನಿಯುತ್ತಿರಲಿ, ವಿದ್ಯಾರ್ಥಿಗಳು ಯಾರು ಓದುತ್ತಾರೆಯೋ ಅವರು ಮತ್ತೆ ರಿವೈಜ್ ಮಾಡುತ್ತಾರೆ. ಅದನ್ನೇ ವಿಚಾರ ಸಾಗರ ಮಂಥನವೆಂದು ಹೇಳಲಾಗುತ್ತದೆ. ನೀವಿದನ್ನು ತಿಳಿದುಕೊಳ್ಳುತ್ತೀರಿ - ತಂದೆಯು ನಮಗೆ ಬೇಹದ್ದಿನ ವಿದ್ಯೆ ಅಥವಾ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ ಯಾವುದನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ನಿಮಗೆ ಬಹಳ ಖುಷಿಯಿರಬೇಕು. ನೀವು ಬಹಳ ದೊಡ್ಡ ವ್ಯಕ್ತಿಗಳಾಗಿದ್ದೀರಿ, ನಿಮಗೆ ಓದಿಸುವವರೂ ಸಹ ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ ಅಂದಮೇಲೆ ನಿಮಗೆ ಸದಾ ಖುಷಿಯ ನಶೆಯೇರಿರಬೇಕು. ಸದಾ ಬುದ್ಧಿಯಲ್ಲಿ ಈ ಮಾತುಗಳನ್ನು ರಿವೈಜ್ ಮಾಡಿಕೊಳ್ಳಿ – ಮೊಟ್ಟ ಮೊದಲು ನಾವು ಪಾವನರಾಗಿದ್ದೆವು ನಂತರ 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿ ಬಿಟ್ಟೆವು. ಈಗ ಡ್ರಾಮಾ ಪ್ಲಾನನುಸಾರ ತಂದೆಯು ಪಾವನರನ್ನಾಗಿ ಮಾಡುತ್ತಿದ್ದಾರೆ. ನಾವು ರಚಯಿತ ತಂದೆ ಮತ್ತು ರಚನೆಯ ��ದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೆಂದು ಸಾಧು-ಸಂತರೆಲ್ಲರೂ ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ಕ್ರಿಸ್ತನು ಮತ್ತೆ ತನ್ನ ಸಮಯದಲ್ಲಿ ಬರುವರು. ಕ್ರಿಶ್ಚಿಯನ್ನರದು ಇಡೀ ಪೃಥ್ವಿಯ ಮೇಲೆ ರಾಜ್ಯವಿತ್ತು, ಈಗ ಎಲ್ಲರೂ ಬೇರೆ-ಬೇರೆಯಾಗಿ ಬಿಟ್ಟಿದ್ದಾರೆ. ಪರಸ್ಪರ ಜಗಳ-ಕಲಹ ಮಾಡುತ್ತಿದ್ದಾರೆ. ಈಗ ಒಂದು ರಾಜ್ಯ, ಒಂದು ಭಾಷೆ ಬರಲಿ, ಮತಭೇದ ಇರಬಾರದೆಂದು ಹೇಳುತ್ತಾರೆ ಆದರೆ ಇದು ಹೇಗೆ ಸಾಧ್ಯ! ಈಗಂತೂ ಪರಸ್ಪರ ಹೊಡೆದಾಡಿ ಇನ್ನೂ ಪಕ್ಕಾ ಆಗಿ ಬಿಟ್ಟಿದ್ದಾರೆ ಅಂದಮೇಲೆ ಇವರೆಲ್ಲರದೂ ಒಂದು ದೈವೀ ಮತವಾಗಲು ಸಾಧ್ಯವಿಲ್ಲ. ಭಲೆ ರಾಮ ರಾಜ್ಯ ಬೇಕೆಂದು ಹೇಳುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ನಿಮಗೂ ಸಹ ಮೊದಲು ಏನೂ ತಿಳಿದಿರಲಿಲ್ಲ. ನೀವೀಗ ಬ್ರಾಹ್ಮಣರಾಗಿದ್ದೀರಿ, ನಮ್ಮ ಯುಗವೇ ಬೇರೆಯಾಗಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಈ ಸಂಗಮಯುಗದಲ್ಲಿ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣ ಧರ್ಮದ ಸ್ಥಾಪನೆಯಾಗುತ್ತದೆ. ನೀವು ಬ್ರಾಹ್ಮಣರು ರಾಜ ಋಷಿಗಳಾಗಿದ್ದೀರಿ. ನೀವು ಪವಿತ್ರರೂ ಆಗಿದ್ದೀರಿ ಮತ್ತು ಶಿವ ತಂದೆಯಿಂದ ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಅವರು ಬ್ರಹ್ಮ ತತ್ವದೊಂದಿಗೆ ಬುದ್ಧಿಯೋಗವನ್ನು ಇಡುತ್ತಾರೆ. ಒಬ್ಬ ತಂದೆಯೊಂದಿಗೆ ಇಡುವುದಿಲ್ಲ. ಕೆಲವರು ಕೆಲವರೊಂದಿಗೆ ಬುದ್ಧಿಯೋಗವನ್ನು ಇಡುತ್ತಾರೆ. ಒಬ್ಬರು ಒಂದು ದೇವತೆಯ ಪೂಜಾರಿಯಾದರೆ ಇನ್ನೊಬ್ಬರು ಇನ್ನೊಂದು ದೇವತೆಗೆ ಪೂಜಾರಿಯಾಗಿದ್ದಾರೆ. ಸರ್ವಶ್ರೇಷ್ಠನು ಯಾರೆಂಬುದು ಯಾರಿಗೂ ತಿಳಿದಿಲ್ಲ ಆದ್ದರಿಂದ ತಂದೆಯು ಹೇಳಿದ್ದಾರೆ- ಇವರೆಲ್ಲರೂ ಆಸುರೀ ಸಂಪ್ರದಾಯದವರು, ತುಚ್ಛ ಬುದ್ಧಿಯವರಾಗಿದ್ದಾರೆ, ರಾವಣನ ಶಿಷ್ಯರಾಗಿದ್ದಾರೆ. ನೀವೀಗ ಶಿವ ತಂದೆಯ ಮಕ್ಕಳಾಗಿದ್ದೀರಿ, ನಿಮಗೆ ತಂದೆಯಿಂದ ಹೊಸ ಪ್ರಪಂಚ ಸತ್ಯಯುಗದ ಆಸ್ತಿಯು ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ಹೇ ಆತ್ಮರೆ, ನೀವೀಗ ತಮೋಪ್ರಧಾನರಿಂದ ಸತೋಪ್ರಧಾನರು ಅವಶ್ಯವಾಗಿ ಆಗಬೇಕಾಗಿದೆ ಆದ್ದರಿಂದ ಕೇವಲ ನನ್ನನ್ನು ನೆನಪು ಮಾಡಿರಿ. ಎಷ್ಟು ಸಹಜ ಮಾತಾಗಿದೆ! ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ ಮತ್ತು ಕೃಷ್ಣನನ್ನು ದ್ವಾಪರ ಯುಗದಲ್ಲಿ ತೋರಿಸಿದ್ದಾರೆ, ಇದು ಬಹಳ ದೊಡ್ಡ ತಪ್ಪಾಗಿದೆ ಆದರೆ ಈ ಮಾತುಗಳು ಯಾರು ಇಲ್ಲಿಗೆ ಸದಾ ಬರುತ್ತಾರೆಯೋ ಅವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುತ್ತವೆ. ಮೇಳಗಳಲ್ಲಿ ಬಹಳ ಮಂದಿ ಬರುತ್ತಾರೆ ಆದರೆ ಅವರಲ್ಲಿ ಕೆಲವೇ ಸಸಿಗಳು ಉಳಿದುಕೊಳ್ಳುತ್ತದೆ. ಅನೇಕ ಧರ್ಮದವರು ಬರುತ್ತಾರೆ ಅದರಲ್ಲಿಯೂ ಹೆಚ್ಚು ಹಿಂದೂ ಧರ್ಮದವರು ಯಾರು ದೇವಿ-ದೇವತೆಗಳ ಪೂಜಾರಿಗಳಾಗಿರುವರೋ ಅವರೇ ಬರುತ್ತಾರೆ. ತಾವೇ ಪೂಜ್ಯ, ತಾವೇ ಪೂಜಾರಿ.... ಇದರ ಅರ್ಥವನ್ನು ತಿಳಿಸಬೇಕಾಗುತ್ತದೆ. ಮೇಳ, ಪ್ರದರ್ಶನಿಗಳಲ್ಲಿ ಅಷ್ಟು ಹೆಚ್ಚಿನದಾಗಿ ತಿಳಿಸಲು ಸಾಧ್ಯವಾಗುವುದಿಲ್ಲ. ಕೆಲವರಂತೂ ನಾಲ್ಕೈದು ತಿಂಗಳವ���ೆಗೆ ಬರುತ್ತಾರೆ. ತಿಳಿದುಕೊಳ್ಳುತ್ತಾರೆ - ಇನ್ನು ಕೆಲವರು ಸ್ವಲ್ಪ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ನೀವು ಎಷ್ಟು ಹೆಚ್ಚಿನದಾಗಿ ಪ್ರದರ್ಶನಿ ಮೇಳಗಳನ್ನು ಇಡುತ್ತೀರೋ ಅಷ್ಟು ಹೆಚ್ಚು ಮಂದಿ ಬರುತ್ತಾರೆ. ಈ ಜ್ಞಾನವು ಬಹಳ ಚೆನ್ನಾಗಿದೆ, ಹೋಗಿ ತಿಳಿದುಕೊಳ್ಳೋಣವೆಂದು ಬರುತ್ತಾರೆ. ಸೇವಾಕೇಂದ್ರದಲ್ಲಿ ಇಷ್ಟು ಚಿತ್ರಗಳಿರುವುದಿಲ್ಲ, ಪ್ರದರ್ಶನಿಯಲ್ಲಿ ಬಹಳ ಚಿತ್ರಗಳಿರುತ್ತವೆ. ನೀವು ತಿಳಿಸಿದಾಗ ಅವರಿಗೆ ಇಷ್ಟವೂ ಆಗುತ್ತದೆ ಆದರೆ ಹೊರಗಡೆ ಹೋಗುತ್ತಿದ್ದಂತೆಯೇ ಮಾಯೆಯ ವಾಯುಮಂಡಲವಿರುತ್ತದೆ, ತಮ್ಮ ಉದ್ಯೋಗ-ವ್ಯವಹಾರಗಳಲ್ಲಿ ತೊಡಗುತ್ತಾರೆ. ಈಗ ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಹೊಸದಾಗುವುದು ಮತ್ತು ತಂದೆಯು ನಮಗಾಗಿ ಸ್ವರ್ಗದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ನಾವು ಹೋಗಿ ಹೊಸ ಪ್ರಪಂಚದಲ್ಲಿ ಹೊಸ ಮಹಲುಗಳನ್ನು ಕಟ್ಟುತ್ತೇವೆ, ಕೆಳಗಿನಿಂದ ಮಹಲುಗಳು ಮೇಲೆ ಬರುತ್ತವೆಯೆಂದಲ್ಲ. ಮೊಟ್ಟ ಮೊದಲು ಮುಖ್ಯವಾಗಿ ಈ ಮಾತನ್ನು ನಿಶ್ಚಯ ಮಾಡಿಕೊಳ್ಳಬೇಕು- ಅವರು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ. ಅವರಲ್ಲಿ ಸಂಪೂರ್ಣ ಜ್ಞಾನವಿದೆ ಆದ್ದರಿಂದಲೇ ಜ್ಞಾನ ಸಾಗರ.... ಎಂದು ಮಹಿಮೆಯನ್ನು ಹಾಡುತ್ತಾರೆ. ಆ ಬೀಜವು ಜಡವಾಗಿರುತ್ತದೆ, ಅದು ಮಾತನಾಡಲು ಸಾಧ್ಯವಿಲ್ಲ. ಇವರು ಚೈತನ್ಯವಾಗಿದ್ದಾರೆ, ತಂದೆಯು ಅನ್ಯರಿಗೆ ತಿಳಿಸುವುದಕ್ಕಾಗಿ ಸಂಪೂರ್ಣ ಜ್ಞಾನವನ್ನು ನಿಮಗೆ ಕಲಿಸಿದ್ದಾರೆ. ಮೇಳ, ಪ್ರದರ್ಶನಿಗಳಲ್ಲಿಯೂ ಬಹಳ ಮಂದಿ ಬರುತ್ತಾರೆ ಆದರೆ ಕೋಟಿಯಲ್ಲಿ ಕೆಲವರೇ ಉಳಿದುಕೊಳ್ಳುತ್ತಾರೆ. 7-8 ದಿನಗಳ ಕಾಲ ಬಂದು ಮತ್ತೆ ಮಾಯವಾಗಿ ಬಿಡುತ್ತಾರೆ. ಹೀಗೆ ಮಾಡುತ್ತಾ-ಮಾಡುತ್ತಾ ಯಾರಾದರೂ ಪಕ್ಕಾ ಆಗಿಯೇ ಆಗುವರು. ಸಮಯವು ಕಡಿಮೆಯಿದೆ, ವಿನಾಶವು ಸನ್ಮುಖದಲ್ಲಿ ನಿಂತಿದೆ. ಕರ್ಮಾತೀತ ಸ್ಥಿತಿಯನ್ನು ಅವಶ್ಯವಾಗಿ ಪಡೆಯಬೇಕಾಗಿದೆ. ಪತಿತರಿಂದ ಪಾವನರಾಗುವುದಕ್ಕಾಗಿ ನೆನಪು ಮಾಡುವುದು ಅತ್ಯವಶ್ಯಕವಾಗಿದೆ. ತಮ್ಮ ಸಂಭಾಲನೆ ಮಾಡಿಕೊಳ್ಳಬೇಕು, ನಾನು ಸತೋಪ್ರಧಾನನಾಗಬೇಕೆಂಬ ಚಿಂತೆಯಿರಲಿ ಏಕೆಂದರೆ ತಲೆಯ ಮೇಲೆ ಜನ್ಮ-ಜನ್ಮಾಂತರದ ಹೊರೆಯಿದೆ. ರಾವಣ ರಾಜ್ಯವಾದಾಗಿನಿಂದ ಏಣಿಯನ್ನಿಳಿಯುತ್ತಲೇ ಬಂದಿದ್ದೀರಿ. ಈಗ ಯೋಗಬಲದಿಂದ ಮೇಲೇರಬೇಕಾಗಿದೆ. ಹಗಲು-ರಾತ್ರಿ ಇದೇ ಚಿಂತೆಯಿರಲಿ - ನಾನು ಸತೋಪ್ರಧಾನನಾಗಬೇಕು ಮತ್ತು ಸೃಷ್ಟಿಚಕ್ರದ ಜ್ಞಾನವು ಬುದ್ಧಿಯಲ್ಲಿರಲಿ. ಶಾಲೆಯಲ್ಲಿಯೂ ಸಹ ನಾವು ಇಂತಿಂತಹ ವಿಷಯದಲ್ಲಿ ತೇರ್ಗಡೆಯಾಗಬೇಕೆಂಬುದೇ ಇರುತ್ತದೆ. ಇಲ್ಲಿ ಮುಖ್ಯವಾದುದು ನೆನಪಿನ ಸಬ್ಜೆಕ್ಟ್ ಆಗಿದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವೂ ಇರಬೇಕಾಗಿದೆ. ನಿಮ್ಮ ಬುದ್ಧಿಯಲ್ಲಿ ಏಣಿಯ ಜ್ಞಾನವಿದೆ - ನಾವೀಗ ತಂದೆಯ ನೆನಪಿನಿಂದ ಸತ್ಯಯುಗೀ ಸೂರ್ಯವಂಶಿ ಮನೆತನದ ಏಣಿಯನ್ನು ಹತ್ತುತ್ತೇವೆ. 84 ಜನ್ಮಗಳನ್ನು ತೆಗೆದ���ಕೊಳ್ಳುತ್ತಾ ಏಣಿಯನ್ನಿಳಿಯುತ್ತಾ ಬಂದೆವು. ಈಗ ಸ್ವಲ್ಪವೇ ಸಮಯದಲ್ಲಿ ಮೇಲೇರಬೇಕಾಗಿದೆ. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆಯಲ್ಲವೆ. ಈ ಜನ್ಮದಲ್ಲಿಯೇ ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯನ್ನು ಪಡೆದು ದೇವತೆಗಳಾಗಿ ಬಿಡುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವೇ ಸೂರ್ಯವಂಶಿಯರಾಗಿದ್ದಿರಿ. ನಂತರ ಚಂದ್ರವಂಶಿ, ವೈಶ್ಯವಂಶಿಯರಾದಿರಿ. ಈಗ ನಿಮ್ಮನ್ನು ಬ್ರಾಹ್ಮಣರನ್ನಾಗಿ ಮಾಡುತ್ತೇನೆ. ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ ಪರಮಪಿತ ಪರಮಾತ್ಮನು ಬಂದು ಬ್ರಾಹ್ಮಣ, ದೇವತಾ, ಕ್ಷತ್ರಿಯ ಮೂರು ಧರ್ಮಗಳ ಸ್ಥಾಪನೆ ಮಾಡುತ್ತಾರೆ. ನಾವೀಗ ಬ್ರಾಹ್ಮಣ ವರ್ಣದಲ್ಲಿದ್ದೇವೆ ನಂತರ ದೇವತಾ ವರ್ಣದಲ್ಲಿ ಬರುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಮಕ್ಕಳಿಗೆ ನಿತ್ಯವೂ ಬುದ್ಧಿಯಲ್ಲಿ ಎಷ್ಟೊಂದು ಜ್ಞಾನವನ್ನು ತುಂಬಿಸುತ್ತಾ ಇರುತ್ತಾರೆ. ಅದನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ, ಇಲ್ಲದಿದ್ದರೆ ತಮ್ಮ ಸಮಾನರನ್ನಾಗಿ ಹೇಗೆ ಮಾಡಿಕೊಳ್ಳುವಿರಿ! ಸೂರ್ಯವಂಶಿ ಮನೆತನದಲ್ಲಿ ಬಹಳ ಕೆಲವರೇ ಬರುತ್ತಾರೆ, ಯಾರು ಚೆನ್ನಾಗಿ ಓದುತ್ತಾರೆ ಮತ್ತು ಓದಿಸುತ್ತಾರೆ.
|
3 |
+
ಈ ಸಮಯದಲ್ಲಿ ನಿಮ್ಮ ಗತಿಮತವು ಪ್ರಪಂಚಕ್ಕಿಂತ ಬಹಳ ಭಿನ್ನವಾಗಿದೆ. ಹೇಗೆ ಈಶ್ವರನ ಗತಿಮತವು ಭಿನ್ನವಾಗಿದೆ ಎಂದು ಹೇಳುತ್ತಾರೆ. ನಿಮ್ಮ ವಿನಃ ಯಾರೂ ತಂದೆಯೊಂದಿಗೆ ಯೋಗವನ್ನು ಇಡುವುದಿಲ್ಲ. ಪ್ರದರ್ಶನಿಯಲ್ಲಿ ಬರುತ್ತಾರೆ, ಹೊರಟು ಹೋಗುತ್ತಾರೆ. ಅಂತಹವರು ಪ್ರಜೆಗಳಾಗುತ್ತಾರೆ ಆದರೆ ಯಾರು ಚೆನ್ನಾಗಿ ಓದಿ-ಓದಿಸುವರೋ ಅವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ ಮತ್ತೆ ನಿಮ್ಮ ಈ ಮೆಷಿನರಿಯು ಪ್ರಭಾವಶಾಲಿಯಾಗುತ್ತಾ ಹೋಗುವುದು. ಅನೇಕರಿಗೆ ಆಕರ್ಷಣೆಯಾಗುತ್ತದೆ, ಬರತೊಡಗುತ್ತಾರೆ. ಹೊಸ ಮಾತು ಹರಡುವುದರಲ್ಲಿ ಸಮಯವು ಹಿಡಿಸುತ್ತದೆಯಲ್ಲವೆ. ಚಿತ್ರಗಳೂ ಸಹ ಸ್ವಲ್ಪವೇ ಸಮಯದಲ್ಲಿ ಬಹಳಷ್ಟು ತಯಾರಾಗುತ್ತವೆ. ದಿನ-ಪ್ರತಿ ದಿನ ಮನುಷ್ಯರೂ ಸಹ ವೃದ್ಧಿಯಾಗುತ್ತಾ ಹೋಗುತ್ತಾರೆ.
|
4 |
+
ನೀವು ತಿಳಿದುಕೊಂಡಿದ್ದೀರಿ - ಯಾವ ಬಾಂಬು ಇತ್ಯಾದಿಗಳ ಯುದ್ಧವಾಗುವುದೋ ಇದರಿಂದ ಯಾವ ಗತಿಯಾಗಬಹುದು! ದಿನ-ಪ್ರತಿದಿನ ದುಃಖವು ಹೆಚ್ಚುತ್ತಾ ಹೋಗುವುದು. ಕೊನೆಗೆ ಈ ದುಃಖದ ಪ್ರಪಂಚವೇ ಸಮಾಪ್ತಿಯಾಗುತ್ತದೆ. ಸಂಪೂರ್ಣ ವಿನಾಶವಾಗುವುದಿಲ್ಲ, ಶಾಸ್ತ್ರಗಳಲ್ಲಿ ಗಾಯನವಿದೆ, ಈ ಭಾರತವು ಅವಿನಾಶಿ ಖಂಡವಾಗಿದೆ. ನೀವು ತಿಳಿದುಕೊಂಡಿದ್ದೀರಿ, ನಮ್ಮ ಸ್ಪಷ್ಟ ನೆನಪಾರ್ಥವು ಅಬುನಲ್ಲಿದೆ. ಅದರ ಬಗ್ಗೆ ತಿಳಿಸಬೇಕು, ಅದು ಜಡ ನೆನಪಾರ್ಥವಾಗಿದೆ ಇಲ್ಲಿ ಪ್ರತ್ಯಕ್ಷದಲ್ಲಿ ಸ್ಥಾಪನೆಯಾಗುತ್ತಿದೆ. ವೈಕುಂಠಕ್ಕಾಗಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ದಿಲ್ವಾಡಾ ಮಂದಿರವು ಎಷ್ಟು ಚೆನ್ನಾಗಿ ಮಾಡಲ್ಪಟ್ಟಿದೆ. ನಾವೂ ಸಹ ಇಲ್ಲಿ ಬಂದು ಕುಳಿತಿದ್ದೇವೆ, ಮೊದಲೇ ನಮ್ಮ ನೆನಪಾರ್ಥವು ಇಲ್ಲಿ ಮಾಡಲ್ಪಟ್ಟಿ��ೆ. ನೀವು ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುವುದಕ್ಕಾಗಿ ಇಲ್ಲಿ ಕುಳಿತಿದ್ದೀರಿ. ಬಾಬಾ, ತಮ್ಮಿಂದ ನಾವು ರಾಜ್ಯವನ್ನು ಪಡೆದೇ ತೀರುತ್ತೇವೆಂದು ಹೇಳುತ್ತಾರೆ. ಯಾರು ಚೆನ್ನಾಗಿ ಇಡೀ ದಿನ ಸ್ಮರಣೆ ಮಾಡುತ್ತಾ, ಮಾಡಿಸುತ್ತಾ ಇರುವರೋ ಅವರಿಗೆ ಖುಷಿಯಿರುತ್ತದೆ. ವಿದ್ಯಾರ್ಥಿಯು ನಾನು ತೇರ್ಗಡೆಯಾಗುತ್ತೇನೆಯೇ, ಇಲ್ಲವೆ ಎಂಬುದನ್ನು ಸ್ವಯಂ ತಿಳಿದುಕೊಳ್ಳುತ್ತಾರೆ. ಲಕ್ಷಾಂತರ ಮಂದಿಯಲ್ಲಿ ಕೆಲವರಿಗೇ ವಿದ್ಯಾರ್ಥಿ ವೇತನವು ದೊರೆಯುತ್ತದೆ. ಮುಖ್ಯ ಬಹುಮಾನಗಳು 8 ಚಿನ್ನದ್ದು, ನಂತರ 108 ಬೆಳ್ಳಿಯದು, ಬಾಕಿ 16000 ತಾಮ್ರದ್ದು. ಹೇಗೆ ನೋಡಿ, ಪೋಪರು ಪದಕಗಳನ್ನು ಕೊಡುತ್ತಿದ್ದರು, ಅಂದಾಗ ಎಲ್ಲರಿಗೆ ಚಿನ್ನದ ಪದಕವನ್ನು ಕೊಡುವರೇ? ಕೆಲವರಿಗೆ ಚಿನ್ನದ್ದು, ಕೆಲವರಿಗೆ ಬೆಳ್ಳಿಯದು. ಮಾಲೆಯೂ ಸಹ ಇದೇ ರೀತಿ ಆಗುತ್ತದೆ. ನೀವು ಚಿನ್ನದ ಬಹುಮಾನವನ್ನು ಪಡೆಯಬೇಕೆಂದು ಇಚ್ಛಿಸುತ್ತೀರಿ, ಬೆಳ್ಳಿಯ ಬಹುಮಾನ ಪಡೆಯುವುದರಿಂದ ಚಂದ್ರವಂಶದಲ್ಲಿ ಬರುತ್ತೀರಿ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ, ಮತ್ತ್ಯಾವುದೇ ಉಪಾಯವೇ ಇಲ್ಲ. ತೇರ್ಗಡೆಯಾಗಬೇಕೆಂಬ ಚಿಂತೆಯನ್ನು ಇಟ್ಟುಕೊಳ್ಳಿ, ಯುದ್ಧದ ಸ್ವಲ್ಪ ಏರುಪೇರುಗಳು ಹೆಚ್ಚಾದರೆ ಸಾಕು ಬಹಳ ಜೋರಾಗಿ ಪುರುಷಾರ್ಥ ಮಾಡತೊಡಗುವರು. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳೂ ಸಹ ಚೆನ್ನಾಗಿ ಓದುವ ಪುರುಷಾರ್ಥದಲ್ಲಿ ತೊಡಗುತ್ತಾರೆ, ಇದು ಬೇಹದ್ದಿನ ಶಾಲೆಯಾಗಿದೆ, ಪ್ರದರ್ಶನಿಯಲ್ಲಿ ಹೆಚ್ಚು ಅಭ್ಯಾಸ ಮಾಡುತ್ತಾ ಇರಿ. ಎಷ್ಟು ಪ್ರದರ್ಶನಿಯನ್ನು ನೋಡಿ ಪ್ರಭಾವಿತರಾಗುತ್ತಾರೆಯೋ ಅಷ್ಟು ಪ್ರೋಜೆಕ್ಟರ್ನಿಂದ ಪ್ರಭಾವಿತರಾಗುವುದಿಲ್ಲ. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ಹಳೆಯ ಪ್ರಪಂಚದ ವಿನಾಶವಾಗುವ ಮೊದಲು ತಮ್ಮ ಕರ್ಮಾತೀತ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ, ನೆನಪಿನಲ್ಲಿದ್ದು ಸತೋಪ್ರಧಾನರಾಗಬೇಕಾಗಿದೆ.
|
8 |
+
2. ಸದಾ ಇದೇ ಖುಷಿಯಿರಲಿ - ನಮಗೆ ಓದಿಸುವವರು ಸ್ವಯಂ ಸರ್ವಶ್ರೇಷ್ಠ ತಂದೆಯಾಗಿದ್ದಾರೆ. ವಿದ್ಯೆಯನ್ನು ಚೆನ್ನಾಗಿ ಓದಬೇಕು ಮತ್ತು ಓದಿಸಬೇಕಾಗಿದೆ. ಕೇಳಿರುವುದನ್ನು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.
|
BKMurli/BKMurli/page_1004.txt
ADDED
@@ -0,0 +1,12 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ದಿವ್ಯ ಬ್ರಾಹ್ಮಣ ಜನ್ಮದ ಭಾಗ್ಯದ ರೇಖೆಗಳು
|
2 |
+
ಇಂದು ವಿಶ್ವದ ರಚಯಿತ ಬಾಪ್ದಾದಾ ತನ್ನ ವಿಶ್ವದ ಸರ್ವ ಮನುಷ್ಯಾತ್ಮ ರೂಪಿ ಮಕ್ಕಳನ್ನು ನೋಡುತ್ತಿದ್ದಾರೆ. ಸರ್ವ ಆತ್ಮರಲ್ಲಿ ಅರ್ಥಾತ್ ಸರ್ವ ಮಕ್ಕಳಲ್ಲಿಯೂ ಎರಡು ಪ್ರಕಾರದ ಮಕ್ಕಳಿದ್ದಾರೆ. ಒಬ್ಬರು ತಂದೆಯನ್ನು ಗುರುತಿಸುವವರಾಗಿದ್ದಾರೆ, ಮತ್ತೊಬ್ಬರು ಕೂಗುವವರು ಅಥವಾ ಗುರುತಿಸುವ ಪ್ರಯತ್ನ ಪಡುವವರಾಗಿದ್ದಾರೆ ಆದರೆ ಎಲ್ಲರೂ ಮಕ್ಕಳಾಗಿದ್ದಾರೆ ಆದ್ದರಿಂದ ಇಂದು ಎರಡೂ ಪ್ರಕಾರದ ಮಕ್ಕಳನ್ನು ನೋಡುತ್ತಿದ್ದೇವೆ. ಸರ್ವ ಮಕ್ಕಳಲ್ಲಿ ಗುರುತಿಸುವವರು ಅಥವಾ ಪ್ರಾಪ್ತಿ ಮಾಡಿಕೊಳ್ಳುವ ಮಕ್ಕಳು ಬಹಳ ಕಡಿಮೆಯಿದ್ದಾರೆ ಮತ್ತು ತಂದೆಯನ್ನು ಅರಿತುಕೊಳ್ಳುವ ಪ್ರಯತ್ನ ಪಡುವವರು ಅನೇಕರಿದ್ದಾರೆ. ಅರಿತುಕೊಂಡಿರುವ ಮಕ್ಕಳ ಮಸ್ತಕದಲ್ಲಿ ಶ್ರೇಷ್ಠ ಭಾಗ್ಯದ ರೇಖೆಯು ಹೊಳೆಯುತ್ತಿದೆ. ಎಲ್ಲದಕ್ಕಿಂತ ಶ್ರೇಷ್ಠ ಭಾಗ್ಯದ ರೇಖೆಯಾಗಿದೆ - ತಂದೆಯ ಮೂಲಕ ದಿವ್ಯಬ್ರಾಹ್ಮಣ ಜನ್ಮದ ರೇಖೆ. ದಿವ್ಯ ಜನ್ಮದ ರೇಖೆಯು ಅತೀ ಶ್ರೇಷ್ಠವಾಗಿ ಹೊಳೆಯುತ್ತಿದೆ. ಕೂಗುವಂತಹ ತಂದೆಯನ್ನು ಅರಿತುಕೊಂಡಿರದ ಮಕ್ಕಳೂ ಸಹ ಇದನ್ನೇ ನಂಬುತ್ತಾರೆ - ಭಗವಂತನು ನಮ್ಮನ್ನು ರಚಿಸಿದ್ದಾರೆ ಆದರೆ ಅಪರಿಚಿತರಾಗಿರುವ ಕಾರಣ ದಿವ್ಯ ಜನ್ಮದ ಅನುಭೂತಿ ಮಾಡಲು ಸಾಧ್ಯವಾಗುತ್ತಿಲ್ಲ. ತಾವೂ ಸಹ ಹೇಳುತ್ತೀರಿ - ನಮಗೆ ಬಾಪ್ದಾದಾರವರು ದಿವ್ಯ ಜನ್ಮವನ್ನು ಕೊಟ್ಟರೆಂದು ಹೇಳುತ್ತಾರೆ. ಅವರೂ ಸಹ ಹೇಳುತ್ತಾರೆ - ಭಗವಂತನು ರಚಿಸಿದರು, ಭಗವಂತನೇ ರಚಯಿತನಾಗಿದ್ದಾರೆ, ಭಗವಂತನೇ ಪಾಲಕನಾಗಿದ್ದಾರೆ ಆದರೆ ಇಬ್ಬರ ಹೇಳಿಕೆಯಲ್ಲಿ ಎಷ್ಟೊಂದು ಅಂತರವಿದೆ! ತಾವು ಅನುಭವದಿಂದ, ನಶೆಯಿಂದ, ಜ್ಞಾನದಿಂದ ಹೇಳುತ್ತೀರಿ - ನಮ್ಮನ್ನು ಬಾಪ್ದಾದಾ ಮಾತಾಪಿತರು ರಚಿಸಿದರು ಅರ್ಥಾತ್ ಬ್ರಾಹ್ಮಣ ಜನ್ಮ ನೀಡಿದರು. ರಚಯಿತನನ್ನೂ, ಜನ್ಮವನ್ನು, ಜನ್ಮ ಪತ್ರಿಕೆಯನ್ನು, ದಿವ್ಯ ಜನ್ಮದ ವಿಧಿ ಮತ್ತು ಸಿದ್ಧಿ ಎಲ್ಲವನ್ನೂ ಅರಿತುಕೊಂಡಿದ್ದೀರಿ. ಪ್ರತಿಯೊಬ್ಬರಿಗೆ ತಮ್ಮ ದಿವ್ಯ ಜನ್ಮದ ಜಯಂತಿಯು ನೆನಪಿದೆಯಲ್ಲವೆ? ಈ ದಿವ್ಯ ಜನ್ಮದ ವಿಶೇಷತೆ ಏನಾಗಿದೆ? ಸಾಧಾರಣ ಜನ್ಮಧಾರಿ ಆತ್ಮಗಳು ತಮ್ಮ ಜನ್ಮ ದಿನವನ್ನು ಬೇರೆಯಾಗಿ ಆಚರಣೆ ಮಾಡುತ್ತಾರೆ. ಫ್ರೆಂಡ್ಸ್ ಡೇ - ಇದನ್ನು ಪ್ರತ್ಯೇಕವಾಗಿ ಆಚರಿಸುತ್ತಾರೆ. ವಿದ್ಯಾಭ್ಯಾಸದ ದಿನವನ್ನು ಬೇರೆ ಆಚರಿಸುತ್ತಾರೆ ಮತ್ತು ತಾವೇನು ಹೇಳುತ್ತೀರಿ? ತಮ್ಮ ಜನ್ಮ ದಿನವೂ ಅದೇ ಮತ್ತು ಮ್ಯಾರೇಜ್ ಡೇ, ವಿದ್ಯಾಭ್ಯಾಸದ ದಿನವೂ ಅದೇ ಆಗಿದೆ, ಮದರ್ ಡೇ ಎಂದಾದರೂ ಹೇಳಿ, ಫಾದರ್ ಡೇ ಎಂದಾದರೂ ಹೇಳಿ, ಎಂಗೇಜ್ಮೆಂಟ್ ಡೇ ಎಂದಾದರೂ ಹೇಳಿ, ಎಲ್ಲವೂ ಒಂದೇ ಆಗಿದೆ. ಇಂತಹ ದಿವ್ಯಜನ್ಮದಿನವನ್ನು ಎಂದಾದರೂ ಕೇಳಿದ್ದೀರಾ! ಇಡೀ ಕಲ್ಪದಲ್ಲಿ ತಾವಾತ್ಮರ ಇಂತಹ ದಿನ ಮತ್ತೆಂದೂ ಬರುವುದಿಲ್ಲ. ಸತ್ಯಯುಗದಲ್ಲಿಯೂ ಸಹ ಬರ್ತ್ ಡೇ ಮತ್ತು ಮ್ಯಾರೇಜ್ ಡೇ ಒಂದೇ ಆಗಿರುವುದಿಲ್ಲ ಆದರೆ ಈ ���ಂಗಮಯುಗದ ಈ ಮಹಾನ್ ಜನ್ಮದ ಇದು ವಿಶೇಷತೆಯೂ ಆಗಿದೆ ಮತ್ತು ವಿಚಿತ್ರತೆಯೂ ಆಗಿದೆ. ಹಾಗೆ ನೋಡಿದರೆ ಯಾವ ದಿನ ಬ್ರಾಹ್ಮಣರಾದಿರೋ ಅದೇ ಜನ್ಮದಿನ, ಅದೇ ವಿವಾಹದ ದಿನವೂ ಆಗಿದೆ ಏಕೆಂದರೆ ಆ ದಿನದಂದು ಎಲ್ಲರೂ ಇದೇ ಪ್ರತಿಜ್ಞೆಯನ್ನು ಮಾಡುತ್ತೀರಿ - ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಈ ಧೃಡಸಂಕಲ್ಪವನ್ನು ಮೊದಲೇ ಮಾಡುತ್ತೀರಲ್ಲವೆ. ನಿಮ್ಮೊಂದಿಗೇ ತಿನ್ನುವೆನು, ನಿಮ್ಮೊಂದಿಗೇ ಕುಳಿತುಕೊಳ್ಳುವೆನು, ನಿಮ್ಮೊಂದಿಗೇ ಸರ್ವ ಸಂಬಂಧಗಳನ್ನು ನಿಭಾಯಿಸುವೆನು, ಇದನ್ನು ಎಲ್ಲರೂ ಪ್ರತಿಜ್ಞೆ ಮಾಡಿದಿರಲ್ಲವೆ. ಪಾಂಡವರು, ಮಾತೆಯರು, ಕುಮಾರಿಯರು, ಎಲ್ಲರೂ ಪ್ರತಿಜ್ಞೆ ಮಾಡಿದ್ದೀರಿ ಅಂದಮೇಲೆ ಮತ್ತೆಲ್ಲಿಯೂ ಸ್ವಪ್ನದಲ್ಲಿಯೂ ಸಹ ಮನಸ್ಸು ಹೋಗಲು ಸಾಧ್ಯವಿಲ್ಲ. ಇಷ್ಟು ಪಕ್ಕಾ ಇದ್ದೀರಲ್ಲವೆ ಅಥವಾ ಮತ್ತ್ಯಾರಾದರೂ ಜೊತೆಗಾರರು ಬೇಕೇ? ಸೇವೆಗಾಗಿ ಯಾರಾದರೂ ವಿಶೇಷ ಜೊತೆಗಾರರು ಬೇಕೇ? ಫ್ರೆಂಡ್ಸ್ ಡೇ ಯಾರದನ್ನು ಆಚರಿಸುತ್ತೀರಿ? ಸೇವಾಧಾರಿ ಜೊತೆಗಾರರದೋ ಅಥವಾ ತಂದೆಯು ಜೊತೆಗಾರನಾಗಿದ್ದಾರೆ ಅಂದಮೇಲೆ ಅವರ ದಿವಸವನ್ನು ಆಚರಿಸುತ್ತೀರೋ? ಭಲೆ ಸೇವೆ ಮಾಡುವವರಾಗಿರಬಹುದು ಅಥವಾ ಸೇವೆಯನ್ನು ತೆಗೆದುಕೊಳ್ಳುವವರಿರಬಹುದು ಆದರೆ ಸೇವೆಯ ಸಮಯದಲ್ಲಿ ಸೇವೆ ಮಾಡಿದಿರಿ ನಂತರ ಇಷ್ಟು ಭಿನ್ನ ಮತ್ತು ಪ್ರಿಯರಾದಿರಿ, ಅವರಲ್ಲಿ ಸ್ವಲ್ಪವೂ ವಿಶೇಷ ಸೆಳೆತವಿರಬಾರದು. ಯಾರು ಸೇವೆಯಲ್ಲಿ ಸಹಯೋಗ ನೀಡಿದರೋ ಅವರು ವಿಶೇಷವಾದರಲ್ಲವೆ! ಸಹೋದರರಾಗಿರಲಿ, ಸಹೋದರಿಯಾಗಿರಲಿ ಯಾರು ವಿಶೇಷ ಸೇವೆ ಮಾಡುವರೋ ಅವರು ವಿಶೇಷ ಅಧಿಕಾರವನ್ನೂ ಇಡುವರು! ಅಂದಮೇಲೆ ಸೇವೆಯಲ್ಲಿ ಜೊತೆಗಾರರಾಗಿ ಆದರೆ ಸಾಕ್ಷಿಯಾಗಿದ್ದು ಸಾತಿಗಳಾಗಿ (ಜೊತೆಗಾರರಾಗಿ). ಸಾಕ್ಷಿತನವು ಮರೆತು ಹೋಗುತ್ತದೆ ಆದ್ದರಿಂದ ಕೇವಲ ಜೊತೆಗಾರರಾಗುವುದರಲ್ಲಿ ತಂದೆಯು ಮರೆತು ಹೋಗುತ್ತಾರೆ. ಸಾಕ್ಷಿಯಾಗಿ ಪಾತ್ರವನ್ನು ಅಭಿನಯಿಸುವ ಅಭ್ಯಾಸ ಮಾಡಿರಿ.
|
3 |
+
ಪ್ರತಿಯೊಬ್ಬ ಮಗುವಿನ ಮಸ್ತಕದಲ್ಲಿ ವಿಶೇಷವಾಗಿ ನಾಲ್ಕು ಭಾಗ್ಯದ ರೇಖೆಗಳು ಹೊಳೆಯುತ್ತವೆ. 1. ದಿವ್ಯ ಜನ್ಮದ ರೇಖೆ, 2. ಪರಮಾತ್ಮ ಪಾಲನೆಯ ರೇಖೆ. 3. ಪರಮಾತ್ಮ ವಿದ್ಯೆಯ ರೇಖೆ. 4. ನಿಸ್ವಾರ್ಥ ಸೇವೆಯ ರೇಖೆ. ಎಲ್ಲರ ಮಸ್ತಕದಲ್ಲಿ ನಾಲ್ಕೂ ಭಾಗ್ಯದ ರೇಖೆಗಳು ಹೊಳೆಯುತ್ತಿವೆ ಆದರೆ ಹೊಳಪಿನಲ್ಲಿ ಮತ್ತು ಸದಾ ಏಕರಸ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿ ಅಂತರವಾಗುವ ಕಾರಣ ಹೊಳಪಿನಲ್ಲಿ ವ್ಯತ್ಯಾಸವು ಕಂಡು ಬರುತ್ತದೆ. ಆದಿಯಿಂದ ಇಲ್ಲಿಯವರೆಗೆ ನಾಲ್ಕೂ ರೇಖೆಗಳು ಸದಾ ಯಥಾರ್ಥ ರೂಪದಿಂದ ನಡೆಯುತ್ತಾ ಬರುತ್ತಿರುವುದು - ಇದು ಬಹಳ ಕೆಲವರಿಗಷ್ಟೇ ಇದೆ. ಮಧ್ಯ-ಮಧ್ಯದಲ್ಲಿ ಯಾವುದಾದರೊಂದು ಮಾತಿನಲ್ಲಿ ಭಾಗ್ಯದ ರೇಖೆಯು ತುಂಡಾಗುತ್ತದೆ, ಇಲ್ಲವೆ ಹೊಳಪು ಕಡಿಮೆಯಾಗುತ್ತದೆ, ಸ್ಪಷ್ಟವಾಗಿರುವುದಿಲ್ಲ. ಹೇಗೆ ಹಸ್ತರೇಖೆಗಳನ್ನೂ ಸಹ ನೋಡುತ್ತಾರಲ್ಲವೆ - ಕೆಲವರ ರೇಖೆಗಳು ಖಂಡನೆಯಾಗಿರುತ್ತವೆ, ಕೆಲವರದು ಏಕರಸವಾಗಿರುತ್ತದೆ, ಕೆಲವರದು ಸ್ಪಷ್ಟವಾಗಿರುತ್ತದೆ, ಕೆಲವರದು ಸ್ಪಷ್ಟವಾಗಿರುವುದಿಲ್ಲ. ಬಾಪ್ದಾದಾರವರೂ ಸಹ ಮಕ್ಕಳ ಭಾಗ್ಯದ ರೇಖೆಯನ್ನು ನೋಡುತ್ತಾ ಇರುತ್ತಾರೆ. ದಿವ್ಯ ಜನ್ಮವನ್ನಂತೂ ಎಲ್ಲರೂ ಪಡೆದುಕೊಂಡಿರಿ ಆದರೆ ದಿವ್ಯ ಜನ್ಮದ ರೇಖೆಯು ಖಂಡನೆಯಾಗುತ್ತದೆ ಅಥವಾ ಸ್ಪಷ್ಟವಾಗಿರುವುದಿಲ್ಲ ಏಕೆಂದರೆ ತನ್ನ ಜನ್ಮವೆಂಬ ಧರ್ಮದಲ್ಲಿ ಅಖಂಡವಾಗಿ ನಡೆಯುವುದಿಲ್ಲ ಆದ್ದರಿಂದ ಅವರ ಭಾಗ್ಯದ ರೇಖೆಯು ಖಂಡನೆಯಾಗುತ್ತದೆ. ಧರ್ಮವೆಂದರೇನು, ಕರ್ಮವೆಂದರೇನು ಎಂಬುದನ್ನು ತಿಳಿದುಕೊಂಡಿದ್ದೀರಲ್ಲವೆ. ಹಾಗೆಯೇ ಪರಮಾತ್ಮ ಪಾಲನೆಯಲ್ಲಿ ಎಲ್ಲಾ ಬ್ರಾಹ್ಮಣರು ನಡೆಯುತ್ತಿದ್ದೀರಿ, ಸಮರ್ಪಿತರಿರಲಿ, ಪ್ರವೃತ್ತಿಯಲ್ಲಿರಲಿ ಆದರೆ ತಂದೆಯ ಆದೇಶದಂತೆ ನಡೆಯುತ್ತಿದ್ದೀರಿ. ಪ್ರವೃತ್ತಿಯವರು ಏನು ಹೇಳುತ್ತೀರಿ? ತಾವು ಸಂಪಾದಿಸಿರುವುದನ್ನು ತಿನ್ನುತ್ತೀರೋ ಅಥವಾ ತಂದೆಯು ಕೊಟ್ಟಿರುವುದನ್ನು ತಿನ್ನುತ್ತೀರೋ? ತಂದೆಯ ಭಂಡಾರದಿಂದಲೇ ಸೇವಿಸುತ್ತೀರಲ್ಲವೆ ಏಕೆಂದರೆ ತಮ್ಮದೆಲ್ಲವನ್ನೂ ತಂದೆಗೆ ಕೊಟ್ಟು ಬಿಟ್ಟಿರಿ ಅಂದಮೇಲೆ ಅದೆಲ್ಲವೂ ತಂದೆಯದಾಯಿತಲ್ಲವೆ. ಭಲೆ ಸಂಪಾದಿಸುತ್ತೀರಿ ಆದರೆ ಸಂಪಾದಿಸಿದ ಹಣವನ್ನು ತಂದೆಗೆ ಅರ್ಪಣೆ ಮಾಡುತ್ತೀರೋ ಅಥವಾ ತನ್ನ ಕಾರ್ಯದಲ್ಲಿ ತೊಡಗಿಸುತ್ತೀರೋ? ಟ್ರಸ್ಟಿಗಳಾಗಿದ್ದೀರಲ್ಲವೆ. ಟ್ರಸ್ಟಿಗಳಿಗೆ ತಮ್ಮದು ಎನ್ನುವುದು ಏನೂ ಇರುವುದಿಲ್ಲ. ಗೃಹಸ್ಥಿಗಳಿಗೆ ತನ್ನತನವಿರುತ್ತದೆ. ಟ್ರಸ್ಟಿಗಳು ಎಂದರೆ ಎಲ್ಲವೂ ತಂದೆಯದಾಗಿದೆ. ತನ್ನ ಕೈಯಿಂದ ಆಹಾರವನ್ನು ತಯಾರಿಸುತ್ತೀರೆಂದರೂ ಸಹ ಬ್ರಹ್ಮಾಭೋಜನವನ್ನು ತಿನ್ನುತ್ತಿದ್ದೇವೆಂದು ತಿಳಿದುಕೊಳ್ಳುತ್ತೀರಲ್ಲವೆ. ಮೊದಲು ಯಾರಿಗೆ ನೈವೇದ್ಯವನ್ನು ಇಡುತ್ತೀರಿ? ತಂದೆಗೆ ಅರ್ಪಣೆ ಮಾಡುತ್ತೀರಲ್ಲವೆ? ಅರ್ಪಣೆ ಮಾಡುವುದು ಅರ್ಥಾತ್ ತಂದೆಯ ಪ್ರಸಾದವನ್ನು ಸ್ವೀಕರಿಸುವುದು ಅಂದಮೇಲೆ ಬ್ರಹ್ಮಾ ಭೋಜನವನ್ನು ತಿನ್ನುತ್ತೀರಿ. ಭಲೆ ಮಕ್ಕಳ ಅರ್ಥವಾಗಿಯೇ ಇಡುತ್ತೀರಿ, ಆದರೂ ಸಹ ಆದೇಶದ ಅನುಸಾರ ಇಡುತ್ತೀರಿ. ಹೇಗೆ ಸಮರ್ಪಿತ ಸಹೋದರ ಅಥವಾ ಸಹೋದರಿಯರು ಭಿನ್ನ-ಭಿನ್ನ ಕಾರ್ಯಗಳಲ್ಲಿ ತನು-ಮನವನ್ನೂ ತೊಡಗಿಸುತ್ತಾರೆ ಮತ್ತು ಧನವನ್ನೂ ತೊಡಗಿಸುತ್ತಾರೆ. ಹಾಗೆಯೇ ಪ್ರವೃತ್ತಿಯಲ್ಲಿ ಇರುವವರೂ ಸಹ ತನುವನ್ನು ತೊಡಗಿಸುತ್ತೀರೋ, ಧನವನ್ನು ತೊಡಗಿಸುತ್ತೀರೋ ಎಲ್ಲವನ್ನೂ ತಂದೆಯ ಶ್ರೀಮತದ ಪ್ರಮಾಣವೇ ತಂದೆಯದೆಂದು ತಿಳಿದು ಕಾರ್ಯದಲ್ಲಿ ತೊಡಗಿಸುತ್ತೀರಿ, ಈ ರೀತಿ ಮಾಡುತ್ತೀರಲ್ಲವೆ? ತಂದೆಯು ಕೊಟ್ಟಿರುವುದರಲ್ಲಿ ಎಂದೂ ಮನಮತವನ್ನು ಸೇರಿಸುವುದಿಲ್ಲ ತಾನೆ. ಅಂದಾಗ ಪರಮಾತ್ಮನ ಪಾಲನೆಯು ಎಲ್ಲಾ ಬ್ರಾಹ್ಮಣ ಆತ್ಮರಿಗೆ ಸಿಗುತ್ತಿದೆ, ಪಾಲನೆ ಮಾಡುವುದೇ ಶಕ್ತಿಶಾಲಿಗಳನ್ನಾಗಿ ಮಾಡಲು. ತಾಯಿಯ ಪಾಲನೆಯ ಪ್ರತ್ಯಕ್ಷರೂಪವು ಏನಾಗಿರುತ್ತದೆ? ಅದರಿಂದ ಮಗುವು ಶಕ್ತಿಶಾಲಿಯಾಗುತ್ತದೆ ಅಂದಮೇಲೆ ಬ್ರಹ್ಮಾ ತಾಯಿಯ ಪಾಲನೆಯ ಮೂಲಕ ಎಲ್ಲರೂ ಮಾ|| ಸರ್ವಶಕ್ತಿವಂತರಾಗಿದ್ದೀರಿ ಆದರೆ ಕೆಲವು ಮಕ್ಕಳು ಶಕ್ತಿಗಳನ್ನು ಸದಾ ಕಾರ್ಯದಲ್ಲಿ ತೊಡಗಿಸುತ್ತಾರೆ, ಇನ್ನೂ ಕೆಲವು ಮಕ್ಕಳು ಪ್ರಾಪ್ತಿಯಾಗಿರುವ ಶಕ್ತಿಗಳನ್ನು ಅರ್ಥಾತ್ ಪಾಲನೆಯನ್ನು ಕಾರ್ಯದಲ್ಲಿ ತೊಡಗಿಸುವುದಿಲ್ಲ ಅಂದರೆ ಪಾಲನೆಯನ್ನು ಪ್ರತ್ಯಕ್ಷದಲ್ಲಿ ತರುವುದಿಲ್ಲ ಆದ್ದರಿಂದ ಶ್ರೇಷ್ಠ ಪಾಲನೆ ಸಿಗುತ್ತಿದ್ದರೂ ಸಹ ನಿರ್ಬಲರಾಗಿ ಉಳಿಯುತ್ತಾರೆ ಮತ್ತು ಭಾಗ್ಯದ ರೇಖೆಯು ಖಂಡನೆಯಾಗಿ ಬಿಡುತ್ತದೆ.
|
4 |
+
ಹಾಗೆಯೇ ವಿದ್ಯೆಯ ರೇಖೆ - ವಿದ್ಯೆಯ ಗುರಿ-ಧ್ಯೇಯವೇ ಆಗಿದೆ, ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದು. ಶಿಕ್ಷಕ ತಂದೆಯು ಎಲ್ಲರಿಗೆ ಒಂದೇ ರೀತಿಯ ವಿದ್ಯೆಯನ್ನು ಓದಿಸುತ್ತಾರೆ, ಒಂದೇ ಸಮಯದಲ್ಲಿ ಓದಿಸುತ್ತಾರೆ ಆದರೆ ಯಾವ ಶ್ರೇಷ್ಠ ಬ್ರಾಹ್ಮಣ ಜೀವನದ ಹಾಗೂ ವಿದ್ಯೆಯ ಪದವಿ ಅಥವಾ ನಶೆಯಿದೆಯೋ ಅದು ಎಲ್ಲರಿಗೂ ಒಂದೇ ರೀತಿಯಾಗಿರುವುದಿಲ್ಲ. ಫರಿಶ್ತಾ ಸೋ ದೇವತಾ ಪದವಿಯನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳುವುದಿಲ್ಲ ಆದ್ದರಿಂದ ಭಾಗ್ಯದ ರೇಖೆಯಲ್ಲಿ ಅಂತರವಾಗಿ ಬಿಡುತ್ತದೆ.
|
5 |
+
ನಾಲ್ಕನೆಯದು ಸೇವೆಯ ರೇಖೆ - ಸೇವೆಯ ವಿಶೇಷತೆಯಾಗಿದೆ ಯಾವುದನ್ನು ಬ್ರಹ್ಮಾ ತಂದೆಯು ಸಾಕಾರ ರೂಪದಲ್ಲಿ, ಅಂತಿಮ ವರದಾನ ರೂಪದಲ್ಲಿ ಸ್ಮೃತಿಗೆ ತರಿಸಿದರು - ನಿರಾಕಾರಿ, ನಿರ್ವಿಕಾರಿ ಮತ್ತು ನಿರಹಂಕಾರಿ. ನಿರಾಕಾರಿ ಸ್ಥಿತಿಯಲ್ಲಿ ಸ್ಥಿತರಾಗದೇ ಯಾವುದೇ ಆತ್ಮನಿಗೆ ಸೇವೆಯ ಫಲವನ್ನು ಕೊಡಲು ಸಾಧ್ಯವಿಲ್ಲ ಏಕೆಂದರೆ ಆತ್ಮದ ಬಾಣವು ಆತ್ಮಕ್ಕೆ ನಾಟುತ್ತದೆ. ಸ್ವಯಂ ಸದಾ ಈ ಸ್ಥಿತಿಯಲ್ಲಿ ಸ್ಥಿತರಾಗಿಲ್ಲವೆಂದರೆ ಯಾರ ಸೇವೆ ಮಾಡುವರೋ ಅವರೂ ಸಹ ಸದಾ ಸ್ಮೃತಿ ಸ್ವರೂಪರಾಗಲು ಸಾಧ್ಯವಿಲ್ಲ. ಹಾಗೆಯೇ ನಿರ್ವಿಕಾರಿ - ಯಾವುದೇ ವಿಕಾರದ ಅಂಶವು ಅನ್ಯ ಆತ್ಮನ ಶೂದ್ರ ವಂಶವನ್ನು ಪರಿವರ್ತನೆ ಮಾಡಿ ಬ್ರಾಹ್ಮಣ ವಂಶಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಆ ಆತ್ಮನಿಗೂ ಸಹ ಪರಿಶ್ರಮ ಪಡಬೇಕಾಗುತ್ತದೆ ಆದ್ದರಿಂದ ಪ್ರೀತಿಯ ಫಲವನ್ನು ಸದಾ ಅನುಭವ ಮಾಡಲು ಸಾಧ್ಯವಾಗುವುದಿಲ್ಲ. ನಿರಹಂಕಾರಿ ಸೇವೆಯ ಅರ್ಥವೇ ಆಗಿದೆ – ಫಲ ಸ್ವರೂಪರಾಗಿ ಬಾಗುವುದು. ನಿರ್ಮಾನರಾಗದೇ ನಿರ್ಮಾಣರಾಗಲು ಸಾಧ್ಯವಿಲ್ಲ ಅರ್ಥಾತ್ ಸೇವೆಯಲ್ಲಿ ಸಫಲತೆ ಸಿಗಲು ಸಾಧ್ಯವಿಲ್ಲ ಅಂದಾಗ ನಿರಾಕಾರಿ, ನಿರ್ವಿಕಾರಿ, ನಿರಹಂಕಾರಿ - ಈ ಮೂರೂ ವರದಾನಗಳನ್ನು ಸದಾ ಸೇವೆಯಲ್ಲಿ ಪ್ರತ್ಯಕ್ಷದಲ್ಲಿ ತನ್ನಿರಿ. ಇದಕ್ಕೆ ಅಖಂಡ ಭಾಗ್ಯದ ರೇಖೆಯೆಂದು ಹೇಳಲಾಗುತ್ತದೆ. ಈಗ ನಾಲ್ಕು ಭಾಗ್ಯದ ರೇಖೆಗಳನ್ನು ಪರಿಶೀಲನೆ ಮಾಡಿಕೊಳ್ಳಿ - ಅಖಂಡವಾಗಿದೆಯೇ ಅಥವಾ ಖಂಡನೆಯಾಗಿದೆಯೇ, ಸ್ಪಷ್ಟವಾಗಿದೆಯೇ ಅಥವಾ ಅಸ್ಪಷ್ಟವಾಗಿದೆಯೇ? ಕೋಟಿಯಲ್ಲಿ ಕೆಲವರಂತೂ ಆಗಿ ಬಿಟ್ಟಿದ್ದೀರಿ ಆದರೆ ಆ ಕೆಲವರಲ್ಲಿಯೂ ಕೆಲವರಾಗಬೇಕಾಗಿದೆ. ಯಾರು ಕೆಲವರಲ್ಲಿಯೂ ಕೆಲವರಾಗುವರೋ ಅವರೇ ಈಗ ಸರ್ವರ ಮಾನ್ಯನೀಯ ಮತ್ತು ಭವಿಷ್ಯದಲ್ಲಿ ಪೂಜ್ಯನೀಯರಾಗುವರು. ಯಾರು ಅಖಂಡ ಭಾಗ್ಯದ ರೇಖೆಯನ್ನು ಹೊಂದಿದ್ದಾರೆಯೋ ಅವರ ಚಿಹ್ನೆಯಾಗಿದೆ - ಅವರು ಈಗಲೂ ಸರ್ವ ಬ್ರಾಹ್ಮಣ ಪರಿವಾರಕ್ಕೆ ಪ್ರಿಯರಾಗಿರುವರು. ಮಾನ್ಯನೀಯರಾಗಿರುವ ಕಾರಣ ಸರ್ವರ ಆಶೀರ್ವಾದಗಳು, ಶ್ರೇಷ್ಠಾತ್ಮರ ಭಾಗ್ಯದ ರೇಖೆಯನ್ನು ಹೊಳೆಯುವಂತೆ ಮಾಡುತ್ತದೆ ಅಂದಾಗ ತಮ್ಮೊಂದಿಗೆ ತಾವು ಕೇಳಿಕೊಳ್ಳಿ - ನಾನು ಯಾರು? ಅಂದಾಗ ಕೇಳಿದಿರಾ? ಇಂದು ಏನನ್ನು ನೋಡಿದೆವು!
|
6 |
+
ಭಗವಂತನು ಪಾಲಕನಾಗಿದ್ದಾರೆ, ಜನ್ಮದಾತನಾಗಿದ್ದಾರೆ ಎಂದು ಪ್ರಪಂಚದವರು ಹೇಳುತ್ತಾರೆ ಆದರೆ ಜನ್ಮದಾತನ ಪರಿಚಯವೇ ಇಲ್ಲ ಮತ್ತು ತಾವು ನಶೆಯಿಂದ ಹೇಳುತ್ತೀರಿ - ಪರಮಾತ್ಮನು ನಮ್ಮ ಜನ್ಮದಾತನು ಹೇಗೆ ಮತ್ತು ಹೇಗೆ ಪಾಲಕನಾಗಿದ್ದಾರೆ! ಬ್ರಹ್ಮಾ ತಾಯಿಯ ಪಾಲನೆಯೂ ಸಿಗುತ್ತಿದೆ ಮತ್ತು ತಂದೆಯ ಶ್ರೇಷ್ಠ ಮತದಂತೆ ಯೋಗ್ಯ ಆತ್ಮರಾಗಿ ಬಿಟ್ಟಿರಿ. ತಂದೆಯು ಮಕ್ಕಳನ್ನು ಯೋಗ್ಯರನ್ನಾಗಿ ಮಾಡುತ್ತಾರೆ ಮತ್ತು ತಾಯಿಯು ಶಕ್ತಿಶಾಲಿಯನ್ನಾಗಿ ಮಾಡುತ್ತಾರೆ. ಎರಡೂ ಅನುಭವಗಳಿವೆಯಲ್ಲವೆ. ಒಳ್ಳೆಯದು.
|
7 |
+
ಗೀತಾ ಪಾಠಶಾಲೆಯವರು ಹೆಚ್ಚಿಗೆ ಬಂದಿದ್ದಾರೆ. ಗೀತಾ ಪಾಠಶಾಲೆಯವರು ಯಾರಾದರು? ಗೀತಾಜ್ಞಾನವನ್ನು ಕೇಳುವಂತಹ ``ಹೇ ಅರ್ಜುನ್'' ಆಗಿದ್ದಾರೆ. ``ಅರ್ಜುನ್'' ಎಂದು ತಿಳಿದುಕೊಂಡು ಗೀತಾಜ್ಞಾನವನ್ನು ಕೇಳುತ್ತೀರೋ ಅಥವಾ ಯಾರಾದರೂ ಬೇರೆ ಅರ್ಜುನ ಇದ್ದಾರೆಯೋ? ``ನಾನು ಅರ್ಜುನನಾಗಿದ್ದೇನೆ'' ಎಂದು ತಿಳಿದುಕೊಳ್ಳುತ್ತೀರಾ? ಸದಾ ಇದನ್ನು ಅನುಭವ ಮಾಡಿ ಕೇಳಿರಿ - ನಾನು ಅರ್ಜುನನಾಗಿದ್ದೇನೆ, ನನಗೆ ವಿಶೇಷವಾಗಿ ಭಗವಂತನು ಗೀತಾಜ್ಞಾನವನ್ನು ತಿಳಿಸುತ್ತಿದ್ದಾರೆ. ಗೀತಾ ಪಾಠಶಾಲೆಯವರು ಎಲ್ಲರಿಗಿಂತ ನಂಬರ್ವನ್ ಬರುತ್ತೀರಿ. ಈ ವಿಧಿಯಿಂದ ಕೇಳಿದ್ದೇ ಆದರೆ ಮುಂದೆ ಹೊರಟು ಹೋಗುವಿರಿ. ಶಿಕ್ಷಕಿ ಸಹೋದರಿಯರು ಬ್ಯುಜಿಯಾಗಿರಲು ಗೀತಾ ಪಾಠಶಾಲೆಗಳು ಚೆನ್ನಾಗಿದೆ. ಗೀತಾ ಪಾಠಶಾಲೆಯು ಚಕ್ರವರ್ತಿಯನ್ನಾಗಿಯೂ ಮಾಡುತ್ತದೆ, ಬ್ಯುಜಿಯಾಗಿಯೂ ಇಡುತ್ತದೆ, ಚೆನ್ನಾಗಿ ವೃದ್ಧಿಯೂ ಆಗುತ್ತದೆ. ಕಡಿಮೆ ಪರಿಶ್ರಮ, ಹೆಚ್ಚು ಸಹಯೋಗಿಗಳಾಗುತ್ತಾರೆ. ಬಲಿಹಾರಿಯು ಗೀತಾ ಪಾಠಶಾಲೆಯವರದಾಗಿದೆ ಅಲ್ಲವೆ. ಆದ್ದರಿಂದ ಹಳ್ಳಿಯವರು ತಂದೆಗೆ ಪ್ರಿಯರೆನಿಸುತ್ತಾರೆ. ದೊಡ್ಡ ಸ್ಥಾನಗಳಲ್ಲಿ ಮಾಯೆಯು ದೊಡ್ಡ ರೂಪದಿಂದ ಬರುತ್ತದೆ, ಹಳ್ಳಿಯವರಿಗೆ ಮಾಯೆಯೂ ಸಹ ಚಿಕ್ಕದಾಗಿ ಬರುತ್ತದೆ ಆದ್ದರಿಂದ ಹಳ್ಳಿಯವರು ಬಹಳ ಚೆನ್ನಾಗಿದ್ದೀರಿ. ಹೆಚ್ಚು ಸಂಖ್ಯೆ ಎಲ್ಲಿಯದಾಗಿದೆ? ಆದರೆ ಈಗಂತೂ ಎಲ್ಲರೂ ಮಧುಬನ ನಿವಾಸಿಗಳಾಗಿದ್ದೀರಿ.
|
8 |
+
ಎಲ್ಲಾ ಟೀಚರ್ಸ್ನ ಶಾಶ್ವತ ವಿಳಾಸವು ಯಾವುದಾಗಿದೆ? ಮಧುಬನವಲ್ಲವೆ. ಇದು ಮನೆಯಾಗಿದೆ, ಅದು ಅಂಗಡಿಯಾಗಿದೆ. ಹೆಚ್ಚು ಯಾವುದು ನೆನಪಿರುತ್ತದೆ? ಮನೆಯೋ ಅಥವಾ ಅಂಗಡಿಯೋ? ಕೆಲಕೆಲವರಿಗೆ ಅಂಗಡಿಯು ಹೆಚ್ಚು ನೆನಪು ಬರುತ್ತದೆ, ಮಲಗುವಾಗಲೂ ಅಂಗಡಿಯ ನೆನಪು ಬರುತ್ತದೆ. ತಾವಂತೂ ಎಲ್ಲಿ ಬೇಕೋ ಅಲ್ಲಿ ಬುದ್ಧಿಯನ್ನು ಸ್ಥಿತ ಮಾಡಬಲ್ಲಿರಿ. ಸೇವಾಕೇಂದ್ರದಲ್ಲಿದ್ದರೂ ಸಹ ಮಧುಬನ ನಿವಾಸಿಗಳಾಗಬಲ್ಲಿರಿ ಮತ್ತು ಮಧುಬನದಲ್ಲಿದ್ದರೂ ಸೇವಾಧಾರಿಗಳಾಗಬಲ್ಲಿರಿ. ಈ ಅಭ್ಯಾಸವಿದೆಯಲ್ಲವೆ. ಸೆಕೆಂಡಿನಲ್ಲಿ ಯೋಚಿಸಿದಿರಿ ಮತ್ತು ಸ್ಥಿತರಾದಿರಿ. ಇದು ಟೀಚರ್ಸ್ನ ಸ್ಥಿತಿಯ ವಿಶೇಷತೆಯಾಗಿದೆ. ಬುದ್ಧಿಯು ಸಮರ್ಪಿತವಾಗಿದೆಯಲ್ಲವೆ ಅಥವಾ ಕೇವಲ ಸೇವೆಗಾಗಿ ಸಮರ್ಪಿತರಾಗಿದ್ದೀರಾ? ಸಮರ್ಪಿತ ಬುದ್ಧಿ ಅರ್ಥಾತ್ ಎಲ್ಲಿ ಬೇಕೋ ಯಾವಾಗ ಬೇಕೋ ಅಲ್ಲಿ ಸ್ಥಿತವಾಗಿ ಬಿಡಬೇಕು. ಇದು ವಿಶೇಷತೆಯ ಚಿಹ್ನೆಯಾಗಿದೆ. ಬುದ್ಧಿಯ ಸಹಿತವಾಗಿ ಸಮರ್ಪಿತರಾಗಿದ್ದೀರಲ್ಲವೆ ಅಥವಾ ಬುದ್ಧಿಯಿಂದ ಅರ್ಧ ಸಮರ್ಪಿತರಾಗಿದ್ದೀರಾ ಮತ್ತು ಇಡೀ ಶರೀರದಿಂದ ಸಮರ್ಪಿತರಾಗಿದ್ದೀರಾ?
|
9 |
+
ಕೆಲಕೆಲವರು ಶಿಕ್ಷಕಿಯರು ಹೇಳುತ್ತಾರೆ - ಯೋಗದಲ್ಲಿ ಕುಳಿತುಕೊಂಡಾಗ ಆತ್ಮಾಭಿಮಾನದಲ್ಲಿ ಆಗುವ ಬದಲು ಸೇವೆಯ ನೆನಪು ಬರುತ್ತದೆ ಆದರೆ ಈ ರೀತಿ ಆಗಬಾರದು ಏಕೆಂದರೆ ಒಂದುವೇಳೆ ಅಂತಿಮ ಸಮಯದಲ್ಲಿ ಅಶರೀರಿಯಾಗುವ ಬದಲು ಸೇವೆಯ ಸಂಕಲ್ಪ ನಡೆದರೂ ಸಹ ಸೆಕೆಂಡಿನ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಬಿಡುತ್ತೀರಿ. ಆ ಸಮಯದಲ್ಲಿ ತಂದೆಯ ನಿರಾಕಾರಿ, ನಿರ್ವಿಕಾರಿ, ನಿರಹಂಕಾರಿಯ ವಿನಃ ಮತ್ತೇನೂ ನೆನಪು ಬರಬಾರದು. ಬ್ರಹ್ಮಾ ತಂದೆಯು ಅಂತಿಮ ಸ್ಥಿತಿಯನ್ನು ಇದೇ ಮಾಡಿಕೊಂಡರಲ್ಲವೆ - ಸಂಪೂರ್ಣ ನಿರಾಕಾರಿ. ಸೇವೆಯಲ್ಲಾದರೂ ಸಾಕಾರದಲ್ಲಿ ಬಂದು ಬಿಡುತ್ತಾರೆ ಆದ್ದರಿಂದ ಈ ಅಭ್ಯಾಸ ಮಾಡಿ - ಯಾವ ಸಮಯದಲ್ಲಿ ಹೇಗೆ ಬೇಕೋ ಆ ಸ್ಥಿತಿಯಿರಲಿ ಇಲ್ಲವೆಂದರೆ ಮೋಸ ಹೋಗುವಿರಿ. ಸೇವೆಯದೇ ಸಂಕಲ್ಪ ಬಂದಿತು, ಕೆಟ್ಟ ಸಂಕಲ್ಪ-ವಿಕಲ್ಪವಂತೂ ಬರಲಿಲ್ಲವಲ್ಲ ಎಂದು ಯೋಚಿಸಬೇಡಿ ಆದರೆ ಇದೂ ನಿಯಂತ್ರಣ ಶಕ್ತಿಯಾಗಲಿಲ್ಲವಲ್ಲವೆ. ನಿಯಂತ್ರಣ ಶಕ್ತಿಯಿಲ್ಲವೆಂದರೆ ಆಡಳಿತ ಶಕ್ತಿಯೂ ಬರುವುದಿಲ್ಲ ಮತ್ತು ಅಧಿಕಾರಿಯೂ ಆಗಲು ಸಾಧ್ಯವಿಲ್ಲ. ಆದ್ದರಿಂದ ಅಭ್ಯಾಸ ಮಾಡಿರಿ. ಈಗಿನಿಂದ ಬಹಳ ಕಾಲದ ಅಭ್ಯಾಸ ಬೇಕಾಗಿದೆ. ಇದನ್ನು ಹಾಗೆಯೇ ಬಿಟ್ಟು ಬಿಡಬೇಡಿ ಅಂದಾಗ ಟೀಚರ್ಸ್ ಯಾವ ಅಭ್ಯಾಸ ಮಾಡಬೇಕೆಂದು ಕೇಳಿಸಿಕೊಂಡಿರಾ? ಆಗಲೇ ಟೀಚರ್ಸ್ ತಂದೆಯನ್ನು ಫಾಲೋ ಮಾಡುವವರೆಂದು ಹೇಳಲಾಗುವುದು. ಸದಾ ಬ್ರಹ್ಮಾ ತಂದೆಯನ್ನು ಸನ್ಮುಖದಲ್ಲಿ ಇಟ್ಟುಕೊಳ್ಳಿ ಮತ್ತು ಮೂರು ವರದಾನಗಳನ್ನು ನೆನಪಿಟ್ಟುಕೊಳ್ಳಿ ಮತ್ತು ಫಾಲೋ ಮಾಡಿರಿ. ಇದು ಸಹಜವಲ್ಲವೆ. ಈ ಅಂತಿಮ ವರದಾನವು ಬಹಳ ಶಕ್ತಿಶಾಲಿಯಾಗಿದೆ. ಈ ಮೂರೂ ವರದಾನಗಳನ್ನು ಒಂದುವೇಳೆ ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾ ಕಾರ್ಯದಲ್ಲಿ ಬರುತ್ತೀರೆಂದರೆ ತಂದೆಯ ಹೃದಯ ಸಿಂಹಾಸನ ಮತ್ತು ರಾಜ್ಯ ಸಿಂಹಾಸನಕ್ಕೆ ಅಧಿಕಾರಿಗಳು ಅವಶ್ಯವಾಗಿ ಆಗುವಿರಿ. ಒಳ್ಳೆಯದು.
|
10 |
+
ಸರ್ವ ತಂದೆಯ ಸಮಾನ, ಸದಾ ಜ್ಞಾನಪೂರ್ಣ ಶಕ್ತಿಶಾಲಿ ಮಕ್ಕಳಿಗೆ, ಸದಾ ಭಾಗ್ಯವಿದಾತನ ಮೂಲಕ ಶ್ರೇಷ್ಠ ಭಾಗ್ಯದ ಸ್ಪಷ್ಟ ರೇಖೆಗಳನ್ನು ಹೊಂದಿರುವ ಭಾಗ್ಯವಂತ ಮಕ್ಕಳು, ಸದಾ ತಂದೆಯ ಸಮಾನ ತ್ರಿ-ವರದಾನಗಳನ್ನು ಪ್ರಾಪ್ತಿ ಮಾಡಿಕೊಂಡಿರುವ ವಿಶೇಷ ಆತ್ಮಗಳಿಗೆ, ಸದಾ ಬ್ರಾಹ್ಮಣ ಜನ್ಮದ ಪಾಲನೆ ಮತ್ತು ವಿದ್ಯೆಯನ್ನು ಹೆಚ್ಚಿಸಿಕೊಳ್ಳುವಂತಹ ಅಖಂಡ ಭಾಗ್ಯಶಾಲಿ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
|
11 |
+
ಮಹಾರಾಷ್ಟ್ರ ಗ್ರೂಪ್:
|
12 |
+
ತಮ್ಮನ್ನು ಸದಾ ಸರ್ವ ಪ್ರಾಪ್ತಿಗಳಿಂದ ಸಂಪನ್ನರೆಂದು ಅನುಭವ ಮಾಡುತ್ತೀರಾ? ಕೆಲವೊಮ್ಮೆ ಖಾಲಿಯಂತು ಆಗುವುದಿಲ್ಲವೇ? ಏಕೆಂದರೆ ತಂದೆಯು ಇಷ್ಟೆಲ್ಲಾ ಪ್ರಾಪ್ತಿಗಳನ್ನು ಮಾಡಿಸಿದ್ದಾರೆ. ಒಂದುವೇಳೆ ತಮ್ಮಲ್ಲಿ ಸರ್ವ ಪ್ರಾಪ್ತಿಗಳನ್ನು ಜಮಾ ಮಾಡಿಕೊಳ್ಳುತ್ತೀರೆಂದರೆ ಎಂದಿಗೂ ಖಾಲಿಯಾಗಲು ಸಾಧ್ಯವಿಲ್ಲ. ಈ ಜನ್ಮದ ಮಾತಷ್ಟೇ ಅಲ್ಲ ಆದರೆ ಅನೇಕ ಜನ್ಮಗಳಿಗಾಗಿಯೂ ಇಲ್ಲಿಂದ ಸಂಪನ್ನರಾಗಿ ಇರುತ್ತೀರಿ. ಅಂದಮೇಲೆ ಯಾವಾಗ ಇಷ್ಟೆಲ್ಲಾ ಕೊಡಲಾಗಿದೆ ಅಂದಮೇಲೆ ಭವಿಷ್ಯದಲ್ಲಿಯೂ ಉಪಯೋಗವಾಗುವುದು, ಅಂದಮೇಲೆ ಈಗ ಹೇಗೆ ಖಾಲಿಯಾಗಿರುತ್ತೀರಿ? ಒಂದುವೇಳೆ ಬುದ್ಧಿಯು ಖಾಲಿಯಾಗಿರುತ್ತದೆಯೆಂದರೆ ಏರುಪೇರಾಗುತ್ತಿರುತ್ತದೆ. ಯಾವುದೇ ವಸ್ತುವೇನಾದರೂ ತುಂಬಿರದಿದ್ದರೆ ಏರುಪೇರಾಗುತ್ತದೆ. ಹಾಗಾದರೆ ಸಂಪನ್ನರಾಗಿರುವ ಚಿಹ್ನೆಯಾಗಿದೆ- ಮಾಯೆಯು ಬರುವ ಅವಕಾಶವೇ ಇರುವುದಿಲ್ಲ. ಮಾಯೆಯೇ ಅಲುಗಾಡುತ್ತಿರುತ್ತದೆ. ಹಾಗಾದರೆ ಮಾಯೆಯು ಬರುತ್ತದೆಯೇ ಅಥವಾ ಇಲ್ಲವೇ? ಸಂಕಲ್ಪದಲ್ಲಾದರೂ ಬರುತ್ತದೆಯೇ? ಮಾಯೆಯ ರಾಜ್ಯದಲ್ಲಂತು ಅರ್ಧಕಲ್ಪ ಅನುಭವ ಮಾಡಿದಿರಿ ಮತ್ತು ಈಗ ತಮ್ಮ ರಾಜ್ಯದಲ್ಲಿ ಹೋಗುತ್ತಿದ್ದೀರಿ. ಯಾವಾಗ ಮಾಯಾಜೀತರು ಆಗುವಿರೋ ಆಗಲೇ ಪುನಃ ತಮ್ಮ ರಾಜ್ಯವು ಬರುತ್ತದೆ. ಮಾಯಾಜೀತರಾಗುವ ಸಹಜ ಸಾಧನವೆಂದರೆ - ಸದಾ ಪ್ರಾಪ್ತಿಗಳಿಂದ ಸಂಪನ್ನರಾಗಿರಿ. ಯಾವುದೊಂದು ಪ್ರಾಪ್ತಿಯಿಂದಲೂ ವಂಚಿತರಾಗಬಾರದು, ಸರ್ವ ಪ್ರಾಪ್ತಿಗಳಿರಲಿ. ಆದರೆ ಇದಂತು ಇದೆಯಲ್ಲವೆ, ಇದೊಂದು ಇರದಿದ್ದರೂ ಪರವಾಗಿಲ್ಲ ಅಲ್ಲ. ಒಂದುವೇಳೆ ಸ್ವಲ್ಪ ಕೊರತೆಯಿದ್ದರೂ ಮಾಯೆಯು ಬಿಡುವುದಿಲ್ಲ, ಅಲ್ಲಿಂದಲೇ ಅಲುಗಾಡಿಸುತ್ತದೆ. ಆದ್ದರಿಂದ ಮಾಯೆಯು ಬರಲು ಅವಕಾಶವೇ ಇರಬಾರದು. ಮಾಯೆಯು ಬಂದಿತು ನಂತರ ಓಡಿಸುತ್ತೀರೆಂದರೆ ಅದರಲ್ಲಿಯೇ ಸಮಯವು ಹೊರಟು ಹೋಗುತ್ತದೆ. ಹಾಗಾದರೆ ಮಾಯಾಜೀತರಾಗಿದ್ದೀರಾ? ಈ ರೀತಿ ಯೋಚಿಸಬಾರದು - 2 ವರ್ಷ ಅಥವಾ 3 ವರ್ಷಗಳಲ್ಲಿ ಆಗಿ ಬಿಡುತ್ತೇವೆ. ಬ್ರಾಹ್ಮಣರಿಗಾಗಿ ಸ್ಲೋಗನ್ ಇದೆ - ``ಈಗಿಲ್ಲದಿದ್ದರೆ ಮತ್ತೆಂದಿಗೂ ಇಲ್ಲ''. ಈಗ ಸಮಯದ ತೀವ್ರತೆಯನುಸಾರ ಯಾವುದೇ ಸಮಯದಲ್ಲಿ ಏನಾದರೂ ಆಗಬಹುದು ಆದ್ದರಿಂದ ತೀವ್ರ ಪುರುಷಾರ್ಥಿ ಆಗಿರಿ. ಒಳ್ಳೆಯದು!
|
BKMurli/BKMurli/page_1005.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಒಬ್ಬರು ಸದಾ ಪರಮಧಾಮದಲ್ಲಿರುವ ಸರ್ವಶ್ರೇಷ್ಠ ತಂದೆಯಾಗಿದ್ದಾರೆ, ಆ ಶಿವತಂದೆಯ ಕೆಳಗಡೆ ವಿಷ್ಣುವಿನ ಚಿತ್ರವಿದೆ. ನಮ್ಮನ್ನು ಶಿವತಂದೆಯು ವಿಷ್ಣುಪುರಿಯ ಮಾಲೀಕರನ್ನಾಗಿ ಮಾಡುತ್ತಿದ್ದಾರೆಂದು ನೀವೀಗ ತಿಳಿದುಕೊಂಡಿದ್ದೀರಿ. ವಿಷ್ಣು ಅರ್ಥಾತ್ ಲಕ್ಷ್ಮೀ-ನಾರಾಯಣ, ಇವರಿಬ್ಬರ ಕಂಬೈಂಡ್ರೂಪವು ವಿಷ್ಣುವಾಗಿದ್ದಾರೆ. ಯಾರಿಗಾದರೂ ತಿಳಿಸುವುದಕ್ಕೆ ಇದು ನಮ್ಮ ಗುರಿ-ಧ್ಯೇಯವಾಗಿದೆ. ಬುದ್ಧಿಯಲ್ಲಿರಬೇಕು- ತಂದೆಯು ನಿರಾಕಾರನಾಗಿದ್ದಾರೆ ಅಂದಮೇಲೆ ನಮಗೆ ಹೇಗೆ ಓದಿಸುವರು! ಆದ್ದರಿಂದ ಬ್ರಹ್ಮನ ಚಿತ್ರವನ್ನು ತೋರಿಸಿದ್ದಾರೆ. ತಂದೆಯು ನಮ್ಮನ್ನು ಬ್ರಹ್ಮಾರವರ ಮೂಲಕ ವಿಷ್ಣುಪುರಿಯ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ನಿಮಗೆ ಈ ನಿಶ್ಚಯವೂ ಇದೆ ಆದರೂ ಸಹ ನಾವು ವಿದ್ಯಾರ್ಥಿಗಳಾಗಿದ್ದೇವೆ, ನಮಗೆ ಶಿವತಂದೆಯು ಓದಿಸುತ್ತಿದ್ದಾರೆ ಎಂಬುದನ್ನು ಮರೆತುಹೋಗುತ್ತೀರಿ. ತಂದೆಯು ಭಾರತವನ್ನು ವಿಷ್ಣುಪುರಿಯನ್ನಾಗಿ ಮಾಡುತ್ತಿದ್ದಾರೆ. ಒಂದುವೇಳೆ ಇದು ಬುದ್ಧಿಯಲ್ಲಿದ್ದರೂ ಸಹ ಎಷ್ಟೊಂದು ಖುಷಿಯಿರುತ್ತದೆ! ಈ ತ್ರಿಮೂರ್ತಿಯ ಚಿತ್ರವು ಎಷ್ಟು ಪ್ರಸಿದ್ಧವಾಗಿದೆ, ತ್ರಿಮೂರ್ತಿಯಲ್ಲಿ ಅವರು ಬ್ರಹ್ಮಾ-ವಿಷ್ಣು-ಶಂಕರನನ್ನು ತೋರಿಸುತ್ತಾರೆ ಆದರೆ ಶಿವನನ್ನು ಮರೆತುಹೋಗಿದ್ದಾರೆ, ಎಷ್ಟು ದೊಡ್ಡ ತಪ್ಪಾಗಿದೆ! ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಶಿವತಂದೆಯು ನಮ್ಮನ್ನು ವಿಷ್ಣುಪುರಿಯ ಮಾಲೀಕರನ್ನಾಗಿ ಮಾಡುತ್ತಿದ್ದಾರೆ ಮತ್ತು ಇವರ ಬಹಳ ಜನ್ಮಗಳ ಅಂತಿಮದಲ್ಲಿಯೂ ಅಂತ್ಯದಲ್ಲಿ ಬಂದು ಪ್ರವೇಶ ಮಾಡಿದ್ದಾರೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ ಮತ್ತು ಭಾರತವನ್ನೇ ವಿಶ್ವದ ಮಾಲೀಕನನ್ನಾಗಿ ಮಾಡುತ್ತಾರೆ.
|
2 |
+
ನೀವು ಮಕ್ಕಳಿಗೆ ಇದು ನಿಶ್ಚಯವಿದೆ- ಪ್ರತೀ 5000 ವರ್ಷಗಳ ನಂತರ ಸಂಗಮಯುಗದಲ್ಲಿಯೇ ಬರುತ್ತೇವೆ. ನೀವು ಮಕ್ಕಳು ರಾಜ್ಯಭಾಗ್ಯವನ್ನು ಪಡೆಯಲು ಅರ್ಥಾತ್ ಸ್ವರ್ಗದ ಮಾಲೀಕರಾಗಲು ಇಲ್ಲಿ ಬಂದಿದ್ದೀರಿ. ಇದು ನೀವು ಮಕ್ಕಳಿಗೆ ತಿಳಿದಿದೆ- ಭಾರತದಲ್ಲಿ ಕೇವಲ ಒಂದು ಧರ್ಮವಿತ್ತು, ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ ಅಂದಮೇಲೆ ಎಷ್ಟೊಂದು ನಶೆಯೇರಬೇಕು ಮತ್ತು ದೈವೀಗುಣಗಳ ಧಾರಣೆಯನ್ನೂ ಮಾಡಿಕೊಳ್ಳಬೇಕು. ಒಂದುವೇಳೆ ತಂದೆಯು ನೋಡುತ್ತಾರೆ, ಮಕ್ಕಳು ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳದಿದ್ದರೆ ಇವರು ದುರಾದೃಷ್ಟವಂತರೆಂದು ಹೇಳುತ್ತಾರಲ್ಲವೆ. ಓದದಿದ್ದರೆ ತಿಳಿದುಕೊಳ್ಳಿ, ತಮ್ಮ ಕಾಲಿನ ಮೇಲೆ ತಾವೇ ಕೊಡಲಿಯನ್ನು ಹಾಕಿಕೊಳ್ಳುವಂತೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ. ನಿಮಗೆ ತಿಳಿದಿದೆ- ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ ಆದ್ದರಿಂದ ಮಕ್ಕಳು ಇಲ್ಲಿಯೇ ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಸತ್ಯಯುಗದಲ್ಲಿ ಹೋಗಿ ಮಾಡಿಕೊಳ್ಳುವುದಿಲ್ಲ. ಯಾರು ಧಾರಣೆ ಮಾಡುವರೋ ಮತ್ತು ಅನ್ಯರಿಗೆ ಮಾಡಿಸುವರೋ ಅವರಿಗೆ ಬಹಳ ಖುಷಿಯೂ ಇರುತ್ತದೆ. ತಂದೆಯು ಸರ್ವಶ್ರೇಷ್ಠ, ಮೂಲವತನದ ನಿವಾಸಿಯಾಗಿದ್ದಾರೆ. ಸೂಕ್ಷ್ಮವತನವಾಸಿಗಳಿಗೆ ದೇವತೆಗಳೆಂದು ಹೇಳಲಾಗುತ್ತದೆ ಮತ್ತು ಇಲ್ಲಿ ಮನುಷ್ಯರಿದ್ದಾರೆ. ಪರಮಾತ್ಮನು ಎಲ್ಲಾ ಆತ್ಮರ ತಂದೆ ಅಥವಾ ಸ್ವರ್ಗದ ರಚಯಿತನಾಗಿದ್ದಾರೆ. ಈ ಜ್ಞಾನವು ನಿಮಗೆ ಈಗಲೇ ಸಿಗುತ್ತದೆ. ನೀವು ತಿಳಿದುಕೊಂಡಿದ್ದೀರಿ- ನಾವೂ ಸಹ ಮೊದಲು ಕಲ್ಲುಬುದ್ಧಿಯವರಾಗಿದ್ದೆವು, ತಂದೆಯ ಮೂಲಕ ನಾವೂ ಪಾವನರಾಗುತ್ತಿದ್ದೇವೆ. ಮೊಟ್ಟಮೊದಲು ಭಾರತದಲ್ಲಿ ಭಗವಾನ್-ಭಗವತಿಯ ರಾಜ್ಯವಿತ್ತು, ಅದಕ್ಕೆ ಭಗವತಿ ಶ್ರೀಲಕ್ಷ್ಮೀ, ಭಗವಾನ್ ಶ್ರೀನಾರಾಯಣನ ರಾಜ್ಯವೆಂದು ಹೇಳಲಾಗುತ್ತದೆ ಅಂದಾಗ ಈಗ ಅವರು ಎಲ್ಲಿ ಹೋದರು? ಅವರನ್ನು ಈ ರೀತಿ ಮಾಡಿದವರು ಯಾರು? ಇದನ್ನು ಯಾರೂ ತಿಳಿಸುವುದಿಲ್ಲ. ಈ ಮಾತುಗಳು ಯಾರ ಗಮನದಲ್ಲಿಯೂ ಬರುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ- ಈ ಸಾಕಾರ ಸೃಷ್ಟಿಯಲ್ಲಿಯೇ ಅವರ ರಾಜ್ಯವಿತ್ತು, ಈಗಲೂ ಸಹ ಅವರು ಭಿನ್ನ ನಾಮ-ರೂಪದಿಂದ ಇಲ್ಲಿಯೇ ಇದ್ದಾರೆ, ಇವೆಲ್ಲಾ ಮಾತುಗಳನ್ನು ತಿಳಿದುಕೊಂಡು ಮಕ್ಕಳಿಗೆ ಬಹಳ ಖುಷಿಯಾಗಬೇಕು. ತಂದೆಯು ನಮಗೆ ಓದಿಸಿ ಈ ರೀತಿ ಮಾಡುತ್ತಿದ್ದಾರೆ, ನಂಬರ್ವನ್ ಹೀರೋ-ಹೀರೋಯಿನ್ ಇವರಾಗಿದ್ದಾರೆ. ಸೂಕ್ಷ್ಮವತನದಲ್ಲಿಯೂ ನೀವು ಇವರನ್ನು ನೋಡುತ್ತೀರಿ. ಇವರಿಗೂ ಸಹ (ಬ್ರಹ್ಮಾ) ನಾವು ಈ ರೀತಿ ಆಗುತ್ತಿದ್ದೇವೆಂದು ನಿಶ್ಚಯವಿದೆ, ಜ್ಞಾನಪೂರ್ಣ ಶ್ರೀ ಶ್ರೀ ತಂದೆಯು ಇವರಿಗೆ ಓದಿಸಿ ಇಂತಹ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಿದ್ದಾರೆ. ಇವರ ಮಕ್ಕಳಾದ ನೀವೂ ಸಹ ಭಗವಾನ್-ಭಗವತಿಯರಾಗುತ್ತೀರಿ. ಭಗವಂತನ ಮೂಲಕ ನೀವು ಈ ಭಗವಾನ್-ಭಗವತಿಯರಾಗುತ್ತಿದ್ದೀರಿ. ಪ್ರಜೆಗಳೂ ಆಗುತ್ತಿದ್ದೀರಿ ಆದರೆ ಅವರಿಗೆ ಭಗವಾನ್-ಭಗವತಿಯೆಂದು ಹೇಳಲು ಸಾಧ್ಯವಿಲ್ಲ ಆದ್ದರಿಂದ ದೇವಿ-ದೇವತೆಗಳೆಂದು ಹೇಳಲಾಗುತ್ತದೆ. ಆದರೂ ಮುಖ್ಯವಾಗಿ ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿಯೆಂದು ಹೇಳಿಬಿಡುತ್ತಾರೆ. ಇವರು ಎಲ್ಲರಿಗಿಂತ ಶ್ರೇಷ್ಠ ಪುರುಷಾರ್ಥ ಮಾಡಿ ಈ ಪದವಿಯನ್ನು ಪಡೆದರು. ಎಲ್ಲರಿಗೂ ಭಗವಾನ್-ಭಗವತಿಯೆಂದು ಹೇಳುವುದಿಲ್ಲ ಅಲ್ಲವೆ. ನಂಬರ್ವನ್ ಇರುವವರ ಗಾಯನವೇ ಹಾಡಲಾಗುತ್ತದೆ- ಸರ್ವಗುಣ ಸಂಪನ್ನರು.... ಮತ್ತ್ಯಾವುದೇ ಧರ್ಮದವರಿಗೆ ಈ ಮಹಿಮೆಯಿಲ್ಲ. ಇದು ಮಾಡಿ-ಮಾಡಲ್ಪಟ್ಟಿರುವ ನಾಟಕವಾಗಿದೆ ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ. ಮೊದಲು ದೈವೀ ಮನೆತನವಿರುತ್ತದೆ ನಂತರ ಅನ್ಯಧರ್ಮದವರು ಬರುತ್ತಾರೆ. ನೀವು ಮಕ್ಕಳಿಗೂ ಸಹ ಪುರುಷಾರ್ಥ ಮಾಡಿಸಲಾಗುತ್ತದೆ. ಯಾರ ಪಾತ್ರವಿದೆಯೋ ಅವರೇ ಸ್ವರ್ಗದಲ್ಲಿ ಬರುತ್ತಾರೆ. ಉಳಿದೆಲ್ಲರೂ ಶಾಂತಿಧಾಮಕ್ಕೆ ಹೊರಟುಹೋಗುತ್ತಾರೆ. ಇದರಲ್ಲಿ ಯಾರಿಗೂ ಪ್ರಶ್ನೆ ಉದ್ಭವಿಸಲು ಸಾಧ್ಯವಿಲ್ಲ. ನಮಗೆ ಶಾಂತಿ ಬೇಕೆಂದು ಕೇಳುತ್ತಾರೆ, ಸ್ವರ್ಗವನ್ನು ಅವರು ತಿಳಿದುಕೊಂಡೇ ಇಲ್ಲ ಆದ್ದರಿಂದ ತಂದೆಯು ಅವರ ಆಸೆಯನ್ನು ಈಡೇರಿಸುತ್ತಾರೆ ಮತ್ತು ಭಾರತವಾಸಿಗಳು ಸ್ವರ್ಗವನ್ನು ನೆನಪು ಮಾಡುತ್ತಾರೆ. ಆದರೆ ಸ್ವರ್ಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತೆಂಬುದನ್ನು ತಿಳಿದುಕೊಂಡಿಲ್ಲ. ಭಗವಾನ್-ಭಗವತಿಯರನ್ನಾಗಿ ಮಾಡಲು ನಮಗೆ ಭಗವಂತನೇ ಓದಿಸುತ್ತಾರೆಂದು ಈಗ ನಿಮ್ಮ ಬುದ್ಧಿಯಲ್ಲಿದೆ. ವಿದೇಶಿಗಳಂತೂ ಶಾಂತಿಧಾಮವನ್ನೇ ಸ್ವರ್ಗವೆಂದು ತಿಳಿಯುತ್ತಾರೆ, ಅಲ್ಲಿ ಪರಮಾತ್ಮನು ಇರುತ್ತಾರೆಂದು ತಿಳಿದುಕೊಳ್ಳುತ್ತಾರೆ ಆದರೆ ನಿಮಗೆ ತಿಳಿದಿದೆ- ಸ್ವರ್ಗವೇ ಬೇರೆ, ಶಾಂತಿಧಾಮವೇ ಬೇರೆಯಾಗಿದೆ, ನೀವೇ ಸ್ವರ್ಗದಲ್ಲಿ ಬರುತ್ತೀರಿ. ಮೊದಲು ಶಾಂತಿಧಾಮ ನಂತರ ಸುಖಧಾಮ, ಅನಂತರ ದುಃಖಧಾಮ ಮತ್ತೆ ಶಾಂತಿಧಾಮದಲ್ಲಿ ಹೋಗಬೇಕಾಗಿದೆ.... ಈ ಆಟವು ಮಾಡಲ್ಪಟ್ಟಿದೆ. ಎಲ್ಲಾ ಆತ್ಮರು ಸತ್ಯಯುಗದಲ್ಲಿ ಬರಲು ಸಾಧ್ಯವಿಲ್ಲ. ಇದು ವಿಭಿನ್ನ ಧರ್ಮಗಳ ಸೃಷ್ಟಿಚಕ್ರವಾಗಿದೆ. ಮೊದಲು ಸೂರ್ಯವಂಶಿ ನಂತರ ಅನ್ಯಧರ್ಮದವರು ಬರುತ್ತಾರೆ. ಈ ಡ್ರಾಮಾದಲ್ಲಿ ಅಂತರವಾಗಲು ಸಾಧ್ಯವಿಲ್ಲ. ಅದೇ ಚರಿತ್ರೆ-ಭೂಗೋಳವು ಮತ್ತೆ ಪುನರಾವರ್ತನೆಯಾಗುತ್ತದೆ ಆದರೆ ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಬೇಕು. ಸತ್ಯಯುಗದಲ್ಲಿ ನಿಮ್ಮ ರಾಜ್ಯವಿತ್ತು, ಈಗ ಪುನಃ ಸತ್ಯಯುಗದಲ್ಲಿ ಹೋಗುವುದಕ್ಕಾಗಿ ನಿಮಗೂ ಕಲ್ಪದ ಹಿಂದಿನತರಹ ಪುರುಷಾರ್ಥ ನಡೆಯುತ್ತಿದೆ.
|
3 |
+
ನೀವು ಮಕ್ಕಳು ಪ್ರತಿಯೊಂದು ಧರ್ಮದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ- ಕ್ರಿಶ್ಚಿಯನ್ ಧರ್ಮವು ಯಾವಾಗ ಸ್ಥಾಪನೆಯಾಗುತ್ತದೆ, ಹೇಗೆ ಆಗುತ್ತದೆ, ಹೇಗೆ ವೃದ್ಧಿಯಾಗುತ್ತದೆ. ಈ ವೃಕ್ಷದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ- ಹೊಸಬರು ಬರುತ್ತಾರೆಂದರೆ ಅವರು ರೆಂಬೆ-ಕೊಂಬೆಗಳಿದ್ದಂತೆ. ಅದರಲ್ಲಿ ಎಷ್ಟು ಎಲೆಗಳಿರಬಹುದು? ಬಹಳ ಕಡಿಮೆಯಿರುತ್ತದೆ. ಪ್ರಜಾಪಿತ ಬ್ರಹ್ಮನನ್ನು ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ ಎಂದು ಹೇಳುತ್ತಾರೆ. ಮೊದಲು ದೇವಿ-ದೇವತಾ ಧರ್ಮವಿರುತ್ತದೆ ನಂತರ ಅನ್ಯಮನೆತನಗಳು ಹುಟ್ಟಿಕೊಳ್ಳುತ್ತವೆ. ಈಗ ಅಂತ್ಯದಲ್ಲಿ ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ಹೊಂದುತ್ತದೆ. ಮನುಷ್ಯರಿಗೆ ಈ ಸೃಷ್ಟಿರೂಪಿ ವೃಕ್ಷದ ಬಗ್ಗೆ ತಿಳಿದೇ ಇಲ್ಲ. ನಿಮಗೆ ತಿಳಿದಿದೆ- ಇದು ಅನಾದಿ, ಅವಿನಾಶಿ ನಾಟಕವಾಗಿದೆ, ಇದರಲ್ಲಿ ಒಂದು ಸೆಕೆಂಡಿನ ವ್ಯತ್ಯಾಸವೂ ಆಗಲು ಸಾಧ್ಯವಿಲ್ಲ. ಈ ವೃಕ್ಷದ ಆಯಸ್ಸು ನಿಖರವಾಗಿದೆ, ಇದು ಮನುಷ್ಯ ಸೃಷ್ಟಿರೂಪಿ ಬೇಹದ್ದಿನ ನಾಟಕವಾಗಿದೆ. ಇಲ್ಲಿ ನಾವು ಪಾತ್ರವನ್ನು ಅಭಿನಯಿಸಲು ಬರುತ್ತೇವೆ. ಈ ಜ್ಞಾನವನ್ನು ತಂದೆಯೇ ತಿಳಿಸುತ್ತಾರೆ. ಈ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಭಕ್ತಿಮಾರ್ಗವು ಅರ್ಧಕಲ್ಪ ನಡೆಯುತ್ತದೆ, ಅದರಲ್ಲಿ ಒಂದುಕ್ಷಣವೂ ಅಂತರವಾಗಲು ಸಾಧ್ಯವಿಲ್ಲ. ಈ ಜ್ಞಾನದ ಪ್ರಾಲಬ್ಧವು ನಿಖರವಾಗಿ ಅರ್ಧಕಲ್ಪ ನಡೆಯುತ್ತದೆ, ಯಾರು ಯಾವ ಪಾತ್ರವನ್ನು ಅಭಿನಯಿಸಿದ್ದಾರೆಯೋ ಅದನ್ನೇ ಅಭಿನಯಿಸುತ್ತಾರೆ. ಈಗ ನಿಮ್ಮ ಬುದ್ಧಿಯು ಬೇಹದ್ದಿನದಾಗಿಬಿಟ್ಟಿದೆ. ಅನ್ಯರದನ್ನೂ ಸಹ ಬೇಹದ್ದಿನಲ್ಲಿ ತರಬೇಕಾಗಿದೆ ಆಗಲೇ ನೀವು ಬೇಹದ್ದ್ ವಿಶ್ವದ ಮಾಲೀಕರಾಗುತ್ತೀರಿ. ನಿರಾಕಾರಿ ಪ್ರಪಂಚದಲ್ಲಿ ನಿರಾಕಾರ ತಂದೆ ಮತ್ತು ನಿರಾಕಾರಿ ಆತ್ಮರೆಲ್ಲರೂ ಮಕ್ಕಳಿರುತ್ತಾರೆ. ಸೂಕ್ಷ್ಮವತನದ ಪಾತ್ರವಂತೂ ಬಹಳ ಕಡಿಮೆ ಸಮಯದ್ದಾಗಿದೆ. ಈಗ ಈ ಸಾಕಾರಿ ಪ್ರಪಂಚದಲ್ಲಿ ಎಲ್ಲರಿಗಿಂತ ನಂಬರ್ವನ್ ಸುಪ್ರೀಂ ಯಾರು? ಲಕ್ಷ್ಮೀ-ನಾರಾಯಣ. ಸುಪ್ರೀಂ ತಂದೆಯೇ ಸುಪ್ರೀಂ ಧರ್ಮದ ಸ್ಥಾಪನೆ ಮಾಡುತ್ತಾರೆ. ಮತ್ತ್ಯಾವುದೇ ಧರ್ಮಕ್ಕೆ ನೀವು ಸುಪ್ರೀಂ ಎಂದು ಹೇಳಲು ಸಾಧ್ಯವಿಲ್ಲ, ಈಗಂತೂ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಒಬ್ಬ ತಂದೆಯೇ ಸದಾಪವಿತ್ರ ಸದಾಶ್ರೇಷ್ಠನಾಗಿದ್ದಾರೆ. ಉಳಿದೆಲ್ಲರೂ ಸತೋ, ರಜೋ, ತಮೋದಲ್ಲಿ ಬರಬೇಕಾಗಿದೆ. ಈಗಂತೂ ತಮೋಪ್ರಧಾನ ಪ್ರಪಂಚದ ವಿನಾಶವಾಗಲೇಬೇಕಾಗಿದೆ, ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಎಲ್ಲವೂ ವಿನಾಶವಾಗಬೇಕಾಗಿದೆ. ಯಾವಾಗ ಹೊಸಮನೆಯು ತಯಾರಾಗುತ್ತದೆಯೋ ಆಗ ಹಳೆಯ ಮನೆಯನ್ನು ಸಮಾಪ್ತಿ ಮಾಡಬೇಕಾಗುತ್ತದೆ. ನೀವು ಮಕ್ಕಳು ಹೊಸ ಪ್ರಪಂಚದ ಸಾಕ್ಷಾತ್ಕಾರವನ್ನೂ ಮಾಡುತ್ತೀರಿ. ಈಗ ಹಳೆಯದರಿಂದ ಮನಸ್ಸನ್ನು ತೆಗೆಯಬೇಕಾಗಿದೆ. ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ... ಎಂದು ಗೀತೆಯಿದೆಯಲ್ಲವೆ. ತಂದೆಯು ನಿಮಗೆ ಅರ್ಥವನ್ನು ತಿಳಿಸುತ್ತಾರೆ- ಮಕ್ಕಳೇ, ಈಗ ಹೊಸಪ್ರಪಂಚವು ಸ್ಥಾಪನೆಯಾಗುತ್ತಿದೆ ಆದ್ದರಿಂದ ಈಗ ನಿಮ್ಮ ಬುದ್ಧಿಯಲ್ಲಿ ಸ್ಮೃತಿಯು ಬಂದುಬಿಟ್ಟಿದೆ- ನಮ್ಮದು ಈ ಡ್ರಾಮಾದಲ್ಲಿ ಅವಿನಾಶಿ ಪಾತ್ರವಿದೆ. ನಾವು ಪುನಃ ಬರಬೇಕಾಗಿದೆ. ಆದಿಯಿಂದ ಅಂತ್ಯದವರೆಗೆ ನಮ್ಮದೇ ಪಾತ್ರವಿದೆ. ಅರ್ಧಕಲ್ಪದ ನಂತರ ಅನ್ಯ ರೆಂಬೆ-ಕೊಂಬೆಗಳು ಬರುತ್ತಿರುತ್ತವೆ. ಯಾವಾಗ ಚಿಗುರುವಿಕೆಯು ನಿಂತು ಹೋಗುವುದೋ ಆಗ ತಿಳಿದುಕೊಳ್ಳಿ- ಪರಮಧಾಮದಿಂದ ಬರುವುದು ನಿಂತುಹೋಗಿದೆ. ನಂತರ ಇಲ್ಲಿಂದ ಮರಳಿ ಹೋಗುವುದು ಆರಂಭವಾಗುತ್ತದೆ ಅಂದಮೇಲೆ ಇಷ್ಟು ಮಂದಿ ಆತ್ಮರು ಎಲ್ಲಿಗೆ ಹೋಗುತ್ತಾರೆ? ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ, ಒಂದು ಮನೆತನದಿಂದ ನಂತರ ಎಷ್ಟೊಂದು ವೃದ್ಧಿಯಾಗುತ್ತದೆ, ಎಷ್ಟು ದೊಡ್ಡ ವೃಕ್ಷವಾಗುತ್ತದೆ! ಈಗ ಎಲ್ಲಾ ತಮೋಪ್ರಧಾನ ಮನುಷ್ಯರ ನಾಟಕವಾಗಿದೆ ಅಥವಾ ಮುಳ್ಳಿನ ಕಾಡಾಗಿದೆ. ಈ ಮನುಷ್ಯಸೃಷ್ಟಿ ವೃಕ್ಷವು ಒಮ್ಮೆಲೆ ವಿನಾಶವಾಗಿಬಿಡುವುದಿಲ್ಲ. ಭಲೆ ಎಷ್ಟೇ ಬಿರುಗಾಳಿಯು ಬರಲಿ ಆದರೆ ಒಮ್ಮೆಲೆ ವಿನಾಶವಾಗುವುದಿಲ್ಲ, ಪರಿವರ್ತನೆಯು ಅವಶ್ಯವಾಗಿ ಆಗುತ್ತದೆ.
|
4 |
+
ಈಗ ನೀವು ಮಕ್ಕಳು ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ, ಈ ಮಾತನ್ನು ಉದ್ಯೋಗ-ವ್ಯವಹಾರಗಳಲ್ಲಿ ತೊಡಗಿದಾಗ ಮರೆತುಹೋಗುತ್ತೀರಿ. ಯಾರಿಗೆ ಧಾರಣೆಯಾಗುತ್ತದೆಯೋ ಅವರು ಇಡೀ ದಿನ ಹೇಗೆ ನಾವು ಸರ್ವೀಸ್ ಮಾಡುವುದು ಅಥವಾ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವುದು ಎಂದು ವಿಚಾರ ಸಾಗರ ಮಂಥ��� ಮಾಡುತ್ತಾ ಇರುತ್ತಾರೆ. ತಂದೆಯು ಎಲ್ಲರಿಗಿಂತ ದೊಡ್ಡ ಧರ್ಮಾತ್ಮನಾಗಿದ್ದಾರೆ, ಅವರು ಸಾಧು-ಸಂತರ ಉದ್ಧಾರವನ್ನು ಮಾಡುವವರಾಗಿದ್ದಾರೆ. ತಂದೆಯು ಎಲ್ಲಿಯವರೆಗೆ ಸಾಕಾರದಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಮನುಷ್ಯರ ಉದ್ಧಾರವು ಹೇಗಾಗುತ್ತದೆ? ಪ್ರೇರಣೆಯಿಂದ ಆಗುವುದಿಲ್ಲ ಆದ್ದರಿಂದ ತಂದೆಯು ಬಂದು ಪೂರ್ಣಜ್ಞಾನವನ್ನು ಕೊಟ್ಟು ನಿಮ್ಮನ್ನು ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ ಅಂದಮೇಲೆ ನೀವು ಮಕ್ಕಳಿಗೆ ಎಷ್ಟೊಂದು ನಶೆಯಿರಬೇಕು! ತಂದೆಯು ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ- ಇಂತಿಂತಹ ಸರ್ವೀಸ್ ಮಾಡುತ್ತೀರೆಂದರೆ ಅನೇಕರ ಕಲ್ಯಾಣವಾಗುವುದು ಎಂದು. ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಚಕ್ರವನ್ನು ನೆನಪು ಮಾಡುವುದರಿಂದ ಚಕ್ರವರ್ತಿ ರಾಜರಾಗುತ್ತೀರಿ. ಅನ್ಯರನ್ನೂ ಮಾಡುತ್ತಾ ಹೋಗಿ, ಹೇಗೆ ವಿದ್ಯೆಯಿಂದ ಮನುಷ್ಯರು ವಕೀಲರು ಇತ್ಯಾದಿ ಆಗುತ್ತಾರೆ ಹಾಗೆಯೇ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ. ತಂದೆಯು ಹೇಳುತ್ತಾರೆ- ಒಂದುವೇಳೆ ನೀವು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳದಿದ್ದರೆ ಸೇವಾಧಾರಿಗಳಲ್ಲ ಎಂದರ್ಥ. ಯಾರದೇ ಸರ್ವೀಸ್ ಗುಪ್ತವಾಗಿರಲು ಸಾಧ್ಯವಿಲ್ಲ. ನಿಮ್ಮದೂ ಸಹ ಅಂತ್ಯದಲ್ಲಿ ಪ್ರಭಾವ ಬೀರುವುದು. ಈಗಿನ್ನೂ ಮಕ್ಕಳ ಸ್ಥಿತಿಯು ಏರಿಳಿತವಾಗುತ್ತಿರುತ್ತದೆ. ಸ್ವಲ್ಪ ಪರೀಕ್ಷೆಗಳು ಬಂದರೆ ಸಾಕು ಮುದುಡಿ ಹೋಗುತ್ತಾರೆ. ನಿಮಗೂ ಸಹ ಅನಿಸುತ್ತಿರಬಹುದು- ಇಂದು ನಮ್ಮ ಸ್ಥಿತಿಯು ನೆನಪಿನಲ್ಲಿ ನಿಲ್ಲುತ್ತಿಲ್ಲ ಎಂದು. ದೆಶೆಗಳಂತೂ ಬದಲಾಗುತ್ತಿರುತ್ತಾ ಇರುತ್ತವೆಯಲ್ಲವೆ. ಬೃಹಸ್ಪತಿಯ ದೆಶೆಯು ಇಳಿಯುತ್ತದೆಯೆಂದರೆ ಒಮ್ಮೆಲೆ ಕೆಳಗೆ ಬೀಳಿಸಿಬಿಡುತ್ತದೆ. ಕಾಯಿಲೆಯೂ ಸಹ ಕರ್ಮಭೋಗವಾಗಿದೆ, ಅವರು ಸರ್ವೀಸ್ ಮಾಡಲು ಸಾಧ್ಯವಿಲ್ಲ. ಪರಿಪೂರ್ಣರಂತೂ ಅಂತ್ಯದಲ್ಲಿಯೇ ಆಗುತ್ತೀರಿ ಆದರೆ ಸದಾ ಈ ನಶೆಯಿರಲಿ- ನಮ್ಮನ್ನು ಭಗವಾನ್-ಭಗವತಿಯರನ್ನಾಗಿ ಮಾಡಲು ನಮಗೆ ಪರಮಪಿತ ಪರಮಾತ್ಮನೇ ಓದಿಸುತ್ತಿದ್ದಾರೆ. ಈಗ ಒಂದುವೇಳೆ ಅನುತ್ತೀರ್ಣರಾದರೆ ಕಲ್ಪ-ಕಲ್ಪಾಂತರವೂ ನಿಮ್ಮದು ಇದೇ ಪಾತ್ರವಾಗಿಬಿಡುವುದು. ತಂದೆಯೂ ಸಹ ಸಾಕ್ಷಿಯಾಗಿ ನೋಡುತ್ತಿದ್ದಾರೆ ಮತ್ತು ತಮ್ಮನ್ನು ನೋಡಿಕೊಳ್ಳಿ- ನಾವು ಎಂತಹ ಸೇವೆ ಮಾಡುತ್ತೇವೆ. ಕೆಲಕೆಲವೊಮ್ಮೆ ಮಾಯೆಯು ಮಕ್ಕಳಿಗೆ ಪೆಟ್ಟು ಕೊಡುತ್ತದೆ, ಶ್ರೀಮತದಂತೆ ನಡೆಯದ ಕಾರಣ ಮಾಯೆಯು ಪೆಟ್ಟನ್ನು ಕೊಟ್ಟು, ಕೊಟ್ಟು ಬೀಳಿಸಿಬಿಡುತ್ತದೆ. ಅಂತಹವರು ಸೇವೆಯನ್ನು ಮಾಡಲು ಆಗುವುದಿಲ್ಲ. ಇಲ್ಲವೆಂದರೆ ನೋಡುತ್ತಿದ್ದೀರಿ- ಮಾತೆಯರು ಎಷ್ಟೊಂದು ಸರ್ವೀಸ್ ಮಾಡುತ್ತಾರೆ. ಕೆಲವರಂತೂ ದೇಹಾಭಿಮಾನದಲ್ಲಿ ಬಂದು ನಾವು ಇವರಿಗೆ ಜ್ಞಾನ ಕೊಟ್ಟೆವು ಎಂದು ಹೇಳುತ್ತಾರೆ ಆದರೆ ಮಕ್ಕಳ ಹೆಸರನ್ನು ಪ್ರಸಿದ್ಧ ಮಾಡುವುದಕ್ಕಾಗಿ ತಂದೆಯೇ ಇವರ ಬುದ್ಧಿಗೆ ಪ್ರೇರಣೆ ನೀಡಿದ್ದಾರೆ ಎಂಬುದನ್ನು ಮರೆತುಹೋಗುತ್��ಾರೆ. ದೇಹಾಭಿಮಾನವಿರುವ ಕಾರಣ ಯಾವ ಸೇವೆಯಾಗಬೇಕೋ ಅದು ಆಗುವುದಿಲ್ಲ. ಬಾಬಾ, ತಪ್ಪಾಯಿತೆಂದು ಹೇಳುತ್ತಾರೆ. ತಂದೆಯು ತಿಳಿಸಿದ್ದಾರೆ- ಹಿರಿಯ ವ್ಯಕ್ತಿಗಳಿಗೆ ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ ಏಕೆಂದರೆ ಅವರಿಂದಲೇ ಪ್ರಭಾವ ಬೀರುವುದು ಮತ್ತು ವಾಹ್ ವಾಹ್ ಆಗುವುದು. ಆದರೆ ಮಕ್ಕಳು ಇನ್ನೂ ಯೋಗದ ಶಕ್ತಿಯನ್ನು ತುಂಬಿಸಿಕೊಳ್ಳಬೇಕಾಗಿದೆ. ಈಗ ತಂದೆಯು ಬಂದು ಪುರುಷಾರ್ಥ ಮಾಡಿಸುತ್ತಾರೆ ಆದರೂ ಸಹ ಅದೃಷ್ಟದಲ್ಲಿಲ್ಲದಿದ್ದರೆ ಶ್ರೀಮತದಂತೆ ನಡೆಯುವುದೇ ಇಲ್ಲ. ಓದುತ್ತೀರಿ, ಬರೆಯುತ್ತೀರೆಂದರೆ ನವಾಬರಾಗುತ್ತೀರಿ ಮತ್ತು ತಂದೆಯ ಹೃದಯವನ್ನೇರುತ್ತೀರಿ. ನೋಡಿ, ಎಲ್ಲಾ ಮಕ್ಕಳು ತಂದೆಯನ್ನು ಏಕೆ ಕರೆಯುತ್ತಾರೆ? ಆ ತಂದೆಯೂ ಸಹ ಮಕ್ಕಳ ಹೃದಯವನ್ನೇರಿದ್ದಾರೆ. ತಂದೆಯು ಸೇವೆ ಮಾಡಿ ಮಕ್ಕಳನ್ನು ಎಷ್ಟು ಪವಿತ್ರರನ್ನಾಗಿ ಮಾಡಿದ್ದಾರೆ. ಸೇವೆ ಮಾಡುವುದಂತೂ ಕರ್ತವ್ಯವಾಗಿದೆ, ಮ್ಯಾಗಜಿನ್ನಲ್ಲಿ ಬರೆಯಬಹುದು- ಇಂತಹವರು ಮರಣ ಹೊಂದಿದರು ನತಿಂಗ್ನ್ಯೂ. ಈ ಡ್ರಾಮಾದ ರಹಸ್ಯವನ್ನು ಬ್ರಾಹ್ಮಣರೇ ತಿಳಿದುಕೊಳ್ಳುತ್ತೀರಿ, ಶೂದ್ರರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಅವರಿಗೆ ಸಂಶಯ ಬರುತ್ತಾ ಇರುತ್ತದೆ. ಮ್ಯಾಗಜೀನ್ನಲ್ಲಿಯೂ ನೀವು ತಿಳಿಸುತ್ತೀರಿ ಅವರು ತೆಗೆದುಕೊಳ್ಳುತ್ತಾರೆ, ಓದುತ್ತಾರೆ. ಒಂದುವೇಳೆ ಅರ್ಥವಾಗದಿದ್ದರೆ ಎಸೆಯುತ್ತಾರೆ. ಒಂದುವೇಳೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಪುರುಷಾರ್ಥವನ್ನೇನು ಮಾಡುವರು! ಸ್ವಲ್ಪವೂ ಧಾರಣೆ ಮಾಡಿಕೊಳ್ಳಲು ಆಗುವುದಿಲ್ಲ. ಇಂತಹವರಿಗೆ ಈ ಮಂತ್ರವನ್ನು ಕೊಡೋಣವೆಂಬ ಮನಸ್ಸೂ ಬರುವುದಿಲ್ಲ. ಮನ್ಮನಾಭವ, ಇದಕ್ಕೆ ಮಹಾಮಂತ್ರವೆಂದು ಹೇಳಲಾಗುತ್ತದೆ. ಒಳ್ಳೆಯದು- ಒಂದುವೇಳೆ ತಾನೂ ನೆನಪು ಮಾಡದಿದ್ದರೆ ಅನ್ಯರ ಕಲ್ಯಾಣವನ್ನಾದರೂ ಮಾಡಿರಿ. ಮನೆ-ಮನೆಗೆ ಈ ಸಂದೇಶ ನೀಡಿರಿ- ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿರಿ, ನಾನೇ ಪತಿತ-ಪಾವನನಾಗಿದ್ದೇನೆ. ಸರ್ವೀಸಿಗಾಗಿ ತಲೆ ಓಡಿಸಬೇಕು. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ತಮ್ಮ ಬುದ್ಧಿಯನ್ನು ಹದ್ದಿನಿಂದ ತೆಗೆದು ಬೇಹದ್ದಿನಲ್ಲಿ ಇಟ್ಟುಕೊಳ್ಳಬೇಕಾಗಿದೆ, ಅನ್ಯರನ್ನೂ ಬೇಹದ್ದಿನಲ್ಲಿ ತರಬೇಕಾಗಿದೆ. ಈ ಹಳೆಯ ಪ್ರಪಂಚದಿಂದ ಮನಸ್ಸನ್ನು ತೆಗೆಯಬೇಕಾಗಿದೆ.
|
8 |
+
2. ಸದಾ ಖುಷಿಯಲ್ಲಿರಲು ಧಾರಣೆ ಮಾಡಬೇಕು ಮತ್ತು ಮಾಡಿಸಬೇಕಾಗಿದೆ. ನಮಗೆ ಭಗವಂತ ಓದಿಸುತ್ತಾರೆ ಎಂಬ ನಶೆಯನ್ನಿಟ್ಟುಕೊಳ್ಳಬೇಕಾಗಿದೆ.
|
BKMurli/BKMurli/page_1006.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಕ್ಕಳು ಗೀತೆಯ ಸಾಲನ್ನು ಕೇಳಿದಿರಾ? ಈಗ ತಂದೆಯು ಬಂದು ಪುರುಷೋತ್ತಮರಾಗುವ ಎಷ್ಟು ಒಳ್ಳೆಯ ಮಾರ್ಗವನ್ನು ತಿಳಿಸುತ್ತಾರೆ. ಪ್ರಪಂಚದಲ್ಲಿಯೂ ಅನೇಕ ಪ್ರಕಾರದ ಕಾಲೇಜು, ವಿಶ್ವ ವಿದ್ಯಾಲಯಗಳಿವೆ, ಅಲ್ಲಿಯೂ ಪದವಿಗಾಗಿ ಓದುತ್ತಾರೆ. ಕೆಲವರು ಕಾರ್ಯದರ್ಶಿ, ಕೆಲವರು ನ್ಯಾಯಾಧೀಶರು, ಕೆಲವರು ದಂಡಾಧಿಕಾರಿಗಳಾಗುತ್ತಾರೆ. ಉತ್ತಮ ಪದವಿಯನ್ನೂ ಪಡೆಯುತ್ತಾರೆ ಆದರೆ ಅವೆಲ್ಲವೂ ಕಲಿಯುಗಕ್ಕಾಗಿ ಉತ್ತಮ ಪದವಿಗಳಾಗಿವೆ, ತಂದೆಯು ಬಂದು ಸತ್ಯಯುಗಕ್ಕಾಗಿ ಉತ್ತಮ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. ಇದು ಸಂಗಮಯುಗವಾಗಿದೆ, ಇದರಲ್ಲಿ ಉತ್ತಮರಿಗಿಂತ ಉತ್ತಮರಾಗಬೇಕಾಗಿದೆ. ಮನುಷ್ಯರು ಏನೆಲ್ಲಾ ವಿದ್ಯೆಯನ್ನು ಓದುವರೋ ಅದು ಉತ್ತಮರಾಗುವುದಕ್ಕಾಗಿ ಆದರೆ ಈ ಆತ್ಮಿಕ ವಿದ್ಯೆಯು ಭವಿಷ್ಯಕ್ಕೋಸ್ಕರವಾಗಿದೆ. ಈ ಸಂಗಮಯುಗವೇ ಪುರುಷೋತ್ತಮಯುಗವಾಗಿದೆ. ಚಿತ್ರಗಳಲ್ಲಿ ಸಂಗಮಯುಗದ ಕಡೆ ಪುರುಷೋತ್ತಮ ಎಂಬುದು ಅವಶ್ಯವಾಗಿ ಬರೆಯಬೇಕು. ಪ್ರತಿಯೊಂದು ವಸ್ತುವನ್ನು ಉತ್ತಮವನ್ನಾಗಿ ಮಾಡಲಾಗುತ್ತದೆ. ನಿಮಗೆ ತಿಳಿದಿದೆ, ಈ ಲಕ್ಷ್ಮೀ-ನಾರಾಯಣರು ಎಷ್ಟೊಂದು ಪುರುಷೋತ್ತಮರಾಗಿದ್ದಾರೆ, ಅವರ ಆಭರಣ-ವೇಷಭೂಷಣಗಳು ಎಷ್ಟೊಂದು ಶೋಭನೀಕವಾಗಿರುತ್ತದೆ ಅಂದಮೇಲೆ ಇಷ್ಟು ಶೋಭಾಯಮಾನವಾದ ಚಿತ್ರಗಳನ್ನು ಮಾಡಿಸಬೇಕು. ತಂದೆಯಂತೂ ಸೂಚನೆ ನೀಡುತ್ತಾರೆ ಆದರೆ ಮಕ್ಕಳು ನಗರಗಳಲ್ಲಿ ಸುತ್ತುತ್ತಾ ಇರುತ್ತೀರಿ ಅಂದಮೇಲೆ ನಿಮಗೇ ಇದು ಗಮನದಲ್ಲಿ ಬರಬೇಕು - ಹೇಗೆ ಶೋಭಾಯಮಾನವಾದ ಆಕರ್ಷಣೆಯುಳ್ಳ ಚಿತ್ರಗಳನ್ನು ಮಾಡಿಸಬೇಕು, ಯಾವುದರಿಂದ ಅದು ಬಹಳ ಸುಂದರವಾಗಿ ಆಡಂಬರವಾಗಿ ಕಾಣಬೇಕು. ಬುದ್ಧಿಯಲ್ಲಿ ಇಡೀ ದಿನ ಇದೇ ನೆನಪಿರಲಿ - ನಾವು ಉತ್ತಮರಿಗಿಂತ ಉತ್ತಮ ಪುರುಷರಾಗುತ್ತಿದ್ದೇವೆ. ಯಾರು ಮಾಡುತ್ತಾರೆ? ಎಲ್ಲರಿಗಿಂತ ಉತ್ತಮ ಅಂದರೆ ಸರ್ವೋತ್ತಮ ತಂದೆ. ಅಂದಮೇಲೆ ಒಬ್ಬ ತಂದೆಯದೇ ಶ್ರೇಷ್ಠಾತಿ ಶ್ರೇಷ್ಠ ಶ್ರೀಮತವಾಗಿದೆ ಅದನ್ನು ತಂದೆಯೇ ತಿಳಿಸುತ್ತಾರೆ. ಶ್ರೀ ಎಂಬುದರ ಅರ್ಥವಾಗಿದೆ ಶ್ರೇಷ್ಠ. ಶ್ರೀ ಎಂಬ ಬಿರುದನ್ನು ಕೇವಲ ದೇವತೆಗಳಿಗೆ ಕೊಡಲಾಗುತ್ತದೆ ಏಕೆಂದರೆ ಅವರ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿದೆ, ಅವರ ಜನ್ಮವೂ ಸಹ ಪವಿತ್ರತೆಯಿಂದಲೇ ಆಗುತ್ತದೆ. ಇಲ್ಲಿ ಯಾರದೇ ಜನ್ಮವು ಪವಿತ್ರತೆಯಿಂದ ಆಗುವುದಿಲ್ಲ. ಕೊಳಕಾದ ಬಟ್ಟೆಗಳನ್ನು ಒಗೆದರು ಎಂದು ಸಿಖ್ಖರು ಹಾಡುತ್ತಾರೆ ಅಂದರೆ ತಂದೆಯು ಬಂದು ಬಹಳ ಕೊಳಕಾದ ಬಟ್ಟೆಗಳನ್ನು (ಆತ್ಮ) ಸ್ವಚ್ಛ ಮಾಡುತ್ತಾರೆ ಮತ್ತು ಅವರನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ದೇವತೆಗಳು ವಿಕಾರದಿಂದ ಜನಿಸುವುದಿಲ್ಲ ಆದರೆ ವಿಕಾರವಿಲ್ಲದೇ ಪ್ರಪಂಚವು ಹೇಗೆ ನಡೆಯುತ್ತದೆಯೆಂದು ಮನುಷ್ಯರು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಸ್ವರ್ಗದಲ್ಲಿ ವಿಕಾರದ ಜನ್ಮವಿರುವುದಿಲ್ಲ. ನೀವೀಗ ವಿದ್ಯಾರ್ಥಿಗಳು ತಿಳಿದುಕೊಂಡಿದ್ದೀರಿ - ನಾವು ನರನಿಂದ ನಾರಾಯಣನಾಗುವುದಕ್ಕಾಗಿ ಬಂದಿದ್ದೇವೆ. ಈ ರಾಜಯೋಗದ ಮೂಲಕ ನಾವು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೇವೆ ಒಂದುವೇಳೆ ಯಾರಾದರೂ ಅನುತ್ತೀರ್ಣರಾದರೆ ಅವರು ಚಂದ್ರವಂಶದಲ್ಲಿ ಬರುವರು. ನಿಮ್ಮ ಯುದ್ಧವು ರಾವಣನ ಜೊತೆಯಿದೆ ಆದರೆ ರಾವಣನು ನಮ್ಮ ಹಳೆಯ ಶತ್ರುವಾಗಿದ್ದಾನೆ ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಹತ್ತು ತಲೆಗಳು ಏಕೆ ಇದೆ ಎಂದು ರಾವಣನ ಅರ್ಥವನ್ನೇ ತಿಳಿದುಕೊಂಡಿಲ್ಲ, ನೀವು ಮಕ್ಕಳಿಗೇ ತಿಳಿದಿದೆ - ವಿಕಾರಗಳ ಪ್ರವೇಶತೆಯಾಗುವುದರಿಂದಲೇ ಮನುಷ್ಯರು ಭ್ರಷ್ಟಾಚಾರಿಗಳಾಗಿ ಬಿಡುತ್ತಾರೆ. ಸತ್ಯಯುಗದಲ್ಲಿ ಎಲ್ಲರೂ ಶ್ರೇಷ್ಠಾಚಾರಿಗಳಾಗಿರುತ್ತಾರೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನ ಬುದ್ಧಿಯವರಾಗಿದ್ದಾರೆ, ಸಂಪೂರ್ಣ ಅಂಧಕಾರದಲ್ಲಿದ್ದಾರೆ, ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆಂದೂ ಹೇಳಲಾಗುತ್ತದೆ. ಯಾವಾಗ ವಿಶ್ವಕ್ಕೆ ಬೆಂಕಿ ಬೀಳುವುದೋ ಆಗ ಎಚ್ಚರಗೊಳ್ಳುವರು. ನೋಡಿ, ನೀವು ಎಷ್ಟೊಂದು ಜಾಗೃತಗೊಳಿಸುತ್ತೀರಿ ಆದರೂ ಮತ್ತೆ ಮಲಗಿ ಬಿಡುತ್ತಾರೆ. ಮೇಳಗಳಲ್ಲಿ ನೀವು ಎಷ್ಟೊಂದು ಪರಿಶ್ರಮ ಪಡುತ್ತೀರಿ ಆದರೆ ಕೋಟಿಯಲ್ಲಿ ಕೆಲವರೇ ನಿಲ್ಲುತ್ತಾರೆ. ಮುಂದೆ ಹೋದಂತೆ ಬಹಳಷ್ಟು ವೃದ್ಧಿಯಾಗುವುದು, ಆಗ ಮನುಷ್ಯರ ಬುದ್ಧಿಯ ಬೀಗವು ತೆರೆಯುವುದು. ಅನ್ಯ ಧರ್ಮಗಳಂತೂ ಬಹಳ ಸಮಯದಿಂದ ಇರುವ ಕಾರಣ ಮತ್ತು ಹಳೆಯದಾಗಿರುವ ಕಾರಣ ಅವರದು ವೃದ್ಧಿಯಾಗುತ್ತದೆ. ನಿಮ್ಮದು ಇದು ಬಹಳ ಚಿಕ್ಕ ವೃಕ್ಷವಾಗಿದೆ, ಅವರಂತೂ ಮಾಂಸ-ಮಧ್ಯಗಳೆಲ್ಲವನ್ನೂ ಸೇವಿಸುತ್ತಾರೆ. ವಿಕಾರದಲ್ಲಿಯೂ ಹೋಗುತ್ತಾರೆ. ಸತ್ಸಂಗ ಮೇಲೇತ್ತುವುದು, ಕೆಟ್ಟ ಸಂಗ ಕೆಳಗೆ ಬೀಳಿಸುವುದು ಎಂದು ಹೇಳಲಾಗುತ್ತದೆ. ಸತ್ಯ ಸಂಗವು ಒಬ್ಬ ತಂದೆಯದೇ ಆಗಿದೆ, ಆದರೆ ಯಾವ ಸಂಗವು ಮೇಲೆತ್ತುವುದು ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ಅಂಬಿಗನೇ ನನ್ನ ದೋಣಿಯನ್ನು ಪಾರು ಮಾಡು ಮತ್ತು ಹೇ ಮಾಲೀಕನೇ, ಮುಳ್ಳುಗಳಿಂದ ಹೂಗಳನ್ನಾಗಿ ಮಾಡು, ಈ ಮುಳ್ಳಿನ ಕಾಡಿನಿಂದ ದೂರ ಕರೆದುಕೊಂಡು ಹೋಗು ಎಂದು ಹಾಡುತ್ತಾರೆ ಅಂದಮೇಲೆ ಇಲ್ಲಿಯೇ ಹೂಗಳಾಗಬೇಕಾಗಿದೆ, ದೈವೀ ಗುಣಗಳನ್ನೂ ಧಾರಣೆ ಮಾಡಿಕೊಳ್ಳಬೇಕು, ಪುರುಷೋತ್ತಮರಾಗಬೇಕಾಗಿದೆ. ಆಹಾರ-ಪಾನೀಯಗಳು ಬಹಳ ಶುದ್ಧವಾಗಿರಲಿ, ಯಾವ ಪದಾರ್ಥಗಳನ್ನು ದೇವತೆಗಳಿಗೆ ಸ್ವೀಕಾರ ಮಾಡಿಸುವುದಿಲ್ಲವೋ, ತಮೋಗುಣಿ ಪದಾರ್ಥಗಳಾಗಿವೆಯೋ ಅವನ್ನು ನೀವೂ ಸೇವಿಸಬಾರದು. ತರಕಾರಿಗಳಲ್ಲಿಯೂ ಸತೋ, ರಜೋ, ತಮೋ ಇರುತ್ತದೆ. ಇತ್ತೀಚೆಗಂತೂ ಮನುಷ್ಯರು ಬಡವರಾಗಿದ್ದಾರಲ್ಲವೆ, ಜ್ಞಾನವನ್ನೂ ಸಹ ಬಡವರೇ ತೆಗೆದುಕೊಳ್ಳುವರು. ಸಾಹುಕಾರರಂತೂ ಹೆಚ್ಚು ಹಣವನ್ನು ಉಡಾಯಿಸುತ್ತಾರೆ.
|
2 |
+
ಸಿನಿಮಾ ನೋಡುವುದು ಬಹಳ ಕೆಟ್ಟದ್ದಾಗಿದೆ. ಪತ್ರಿಕೆಗಳಲ್ಲಿಯೂ ಬಂದಿತ್ತು - ಸಿನಿಮಾ ನೋಡಲು ಹೋಗುವುದು ಎಂದರೆ ನರಕದಲ್ಲಿ ಬೀಳುವುದು. ಎಷ್ಟು ದೊಡ್ಡ ವ್ಯಕ್ತಿಗಳಿರುವರೋ ಅಷ್ಟೇ ಕೊಳಕು ಮಾಡುತ��ತಾರೆ. ಈ ಸಮಯದಲ್ಲಿ ಸಂಪೂರ್ಣ ವೇಶ್ಯಾಲಯವಾಗಿದೆ. ತಂದೆಯು ಬಂದು ಶಿವಾಲಯವನ್ನಾಗಿ ಮಾಡುತ್ತಾರೆ, ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ. ಪವಿತ್ರತೆಯಿದ್ದಾಗ ಸುಖ, ಶಾಂತಿ, ಪವಿತ್ರತೆಯು ಇರುತ್ತದೆ, ರಾವಣ ರಾಜ್ಯದಲ್ಲಿ ಯಾರೂ ಪವಿತ್ರರಾಗಿರುವುದಿಲ್ಲ, ಇಲ್ಲಿಯೇ ಯುದ್ಧದ ಮಾತಿದೆ. ಯೋಗಬಲದಿಂದಲೇ ನೀವು ರಾವಣನ ಮೇಲೆ ವಿಜಯ ಗಳಿಸುತ್ತೀರಿ. ಇಲ್ಲಿ ಎಷ್ಟೊಂದು ಮಂದಿರಗಳಿವೆ ಆದರೆ ಯಾರ ಚರಿತ್ರೆಯನ್ನೂ ತಿಳಿದುಕೊಂಡಿಲ್ಲ. ಶಿವನ ಚರಿತ್ರೆಯನ್ನು ತಿಳಿಸಿ ಎಂದು ಶಿವನ ಮಂದಿರದಲ್ಲಿ ಹೋಗಿ ಕೇಳಿರಿ, ಅವರು ಏನನ್ನೂ ತಿಳಿಸುವುದಿಲ್ಲ ಮತ್ತು ತಿಳಿಸಲು ಸಾಧ್ಯವೂ ಇಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ಜ್ಞಾನವನ್ನು ಅರಿತುಕೊಂಡಿದ್ದಾರೆ. ಉತ್ತಮ, ಮಧ್ಯಮ, ಕನಿಷ್ಟರಂತೂ ಇರುತ್ತಾರೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ನಾನಂತೂ ನರನಿಂದ ನಾರಾಯಣನಾಗುತ್ತೇನೆಂದು ಆತ್ಮವೇ ಹೇಳುತ್ತದೆ. ನಾನು ಎಲ್ಲರಿಗೂ ರಾಜಯೋಗವನ್ನು ಕಲಿಸುತ್ತೇನೆ. ಆದರೂ ಪುರುಷಾರ್ಥದನುಸಾರ ಉತ್ತಮ, ಮಧ್ಯಮ, ಕನಿಷ್ಟರಾಗುತ್ತಾರೆ ಆದ್ದರಿಂದ ನೀವು ಮಕ್ಕಳು ವಿದ್ಯೆಯ ಮೇಲೆ ಬಹಳ ಗಮನ ಕೊಡಬೇಕು. ಶಿವ ಭಗವಾನುವಾಚ - ಯೋಗಾಗ್ನಿಯಿಂದಲೇ ನಿಮ್ಮ ಪಾಪಗಳು ಭಸ್ಮವಾಗುತ್ತದೆ ಮತ್ತು ಸತೋಪ್ರಧಾನರಾಗುತ್ತೀರಿ ಆದ್ದರಿಂದ ಮಕ್ಕಳೇ, ನೆನಪಿನ ಯಾತ್ರೆಯನ್ನು ಮರೆಯಬೇಡಿ. ತಮ್ಮ ಹೃದಯದಿಂದ ಕೇಳಿಕೊಳ್ಳಿ - ನಾವು ಪ್ರದರ್ಶನಿಯಲ್ಲಿ ಜ್ಞಾನವನ್ನಂತೂ ಬಹಳ ಚೆನ್ನಾಗಿ ತಿಳಿಸುತ್ತೇವೆ ಆದರೆ ನೆನಪಿನ ಯಾತ್ರೆಯಲ್ಲಿ ಇರುತ್ತೇವೆಯೇ? ಅನೇಕರು ನೆನಪಿನಲ್ಲಿ ಅನುತ್ತೀರ್ಣರಾಗಿದ್ದಾರೆ ಆದ್ದರಿಂದ ಆ ಸ್ಥಿತಿ, ಆ ಖುಶಿಯು ಸ್ಥಿರವಾಗಿ ಇರುವುದಿಲ್ಲ. ಈ ಸಬ್ಜೆಕ್ಟ್ನಲ್ಲಿ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು, ಚಿತ್ರಗಳನ್ನೂ ಸಹ ಬಹಳ ಶೋಭಾಯಮಾನವಾಗಿ ಮಾಡಿಸಬೇಕು. ಅದನ್ನು ಯಾರು ಬೇಕಾದರೂ ಬಂದು ಓದುತ್ತಿದ್ದಂತೆಯೇ ಜ್ಞಾನವು ಅರ್ಥವಾಗಲಿ. ವಸ್ತು ಚೆನ್ನಾಗಿದ್ದರೆ ನೋಡಲು ಅನೇಕರು ಬರುತ್ತಾರೆ, ಈ ಚಿತ್ರಗಳನ್ನು ಮಾಡಿಸುವವರಿಗೆ ಎಷ್ಟೊಂದು ಬಹುಮಾನ ಸಿಗುತ್ತದೆ! ದೇವತೆಗಳ ಚಿತ್ರಗಳನ್ನು ವಿಶೇಷವಾಗಿ ಹಳೆಯ ಚಿತ್ರಗಳನ್ನು ಮಾರಾಟ ಮಾಡುತ್ತಾರೆ ಏಕೆಂದರೆ ಹಳೆಯದನ್ನು ಮನುಷ್ಯರು ಬಹಳ ಇಷ್ಟ ಪಡುತ್ತಾರೆ. ಎಷ್ಟು ಹಣವನ್ನು ಕೊಟ್ಟಾದರೂ ಖರೀದಿಸುತ್ತಾರೆ. ದೇವತೆಗಳು ಸತೋಪ್ರಧಾನರಾಗಿದ್ದರು ಆದ್ದರಿಂದ ಅವರ ಚಿತ್ರಗಳಿಗೂ ಎಷ್ಟೊಂದು ಮಾನ್ಯತೆಯಿದೆ ಆದರೆ ಭಾರತವೇ ಅತಿ ಹಳೆಯದಾಗಿದೆ, ಎಲ್ಲರಿಗಿಂತ ಅತೀ ಹಳಬರು ಶಿವ ತಂದೆಯಾಗಿದ್ದಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಮೊಟ್ಟ ಮೊದಲು ಶಿವನೇ ಬರುತ್ತಾರೆ, ತಿಳಿಯದ ಕಾರಣ ಮನುಷ್ಯರು ಈ ಮಾತಿನಲ್ಲಿ ತಬ್ಬಿಬ್ಬಾಗಿದ್ದಾರೆ. ನೀವೂ ಸಹ ಈಗ ತಿಳಿದುಕೊಳ್ಳುತ್ತೀರಿ - ಮೊದಲು ನಾವು ತುಚ್ಛ ಬುದ್ಧಿಯವರಾಗಿದ್ದೆವು, ಈಗ ಹೇಗಿದ್ದವರು ಏನಾಗಿ ಬಿಟ್ಟಿದ್ದೇವೆ! ನ���ವು ವಿಶ್ವದ ಮಾಲೀಕರಾಗಿದ್ದೆವು, ಬಹಳ ಧನವಂತರಾಗಿದ್ದೆವು ಆದರೆ ನಿಮ್ಮಲ್ಲಿಯೂ ನಿಶ್ಚಯ ಬುದ್ಧಿಯವರು ಬಹಳ ಕೆಲವರೇ ಇದ್ದಾರೆ. ಇಲ್ಲವೆಂದರೆ ವಾಹ್! ನಾವು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಎಷ್ಟು ಆಂತರಿಕ ಖುಷಿಯಿರಬೇಕು. ಕಡಿಮೆ ಓದುವವರಿಗೆ ಕಡಿಮೆ ಜನ್ಮಗಳು ಸಿಗುತ್ತವೆ. ಯಾರು ಸೂರ್ಯವಂಶದಲ್ಲಿ ಬರುವರೋ ಅವರು ಅವಶ್ಯವಾಗಿ ವಿದ್ಯೆಯನ್ನು ಚೆನ್ನಾಗಿ ಓದಿರುವರು. ಈ ವಿದ್ಯೆಯು ಎಷ್ಟು ಚೆನ್ನಾಗಿದೆ, ರಚಯಿತ ತಂದೆಯೇ ಬಂದು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ನೀವು ತ್ರಿಕಾಲದರ್ಶಿಗಳಾಗುತ್ತೀರಿ. ಯಾರೊಂದಿಗಾದರೂ ಕೇಳಿರಿ, ನೀವು ತ್ರಿಕಾಲದರ್ಶಿಗಳಾಗಿದ್ದೀರಾ? ನಿಮಗೆ ಮೂರೂ ಕಾಲಗಳ ಜ್ಞಾನವಿದೆಯೇ? ಇದಕ್ಕೆ ಅವರು ಇದೆಲ್ಲವೂ ಕಲ್ಪನೆಯಾಗಿದೆ ಎಂದು ಹೇಳುತ್ತಾರೆ. ಯಾರಾದರೂ ಒಬ್ಬರು ಹೇಳಿದರೆ ಅನ್ಯರೂ ಹೇಳತೊಡಗುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ ಮತ್ತು ಪರಮಾತ್ಮ ತಂದೆಯಾಗಿದ್ದಾರೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಪರಮಾತ್ಮನು ಕೋಟಿ ಸೂರ್ಯ ತೇಜೋಮಯನೆಂದು ಗೀತೆಯಲ್ಲಿ ಬರೆದಿದ್ದಾರೆ ಆದರೆ ಈ ರೀತಿಯಿಲ್ಲ, ತಂದೆಯು ಬಹಳ ಶೀತಲವಾಗಿದ್ದಾರೆ. ಮಕ್ಕಳನ್ನೂ ಸಹ ಬಂದು ಶೀತಲರನ್ನಾಗಿ ಮಾಡುತ್ತಾರೆ. ತಂದೆಯು ಹೇಗೆ ಜ್ಯೋತಿರ್ಬಿಂದುವಾಗಿದ್ದಾರೆಯೋ ಹಾಗೆಯೇ ಆತ್ಮವೂ ಜ್ಯೋತಿರ್ಬಿಂದುವಾಗಿದೆ. ಹೇಗೆ ಮಿಂಚುಳ್ಳಿ ಇರುತ್ತದೆ ಅದಾದರೂ ಕಣ್ಣಿಗೆ ಕಾಣುತ್ತದೆ ಆದರೆ ತಂದೆಯನ್ನು ದಿವ್ಯ ದೃಷ್ಟಿಯ ವಿನಃ ನೋಡಲು ಸಾಧ್ಯವಿಲ್ಲ ನಿಮಗೆ ತಿಳಿದಿದೆ - ಪರಮಾತ್ಮನು ಜ್ಞಾನ ಸಾಗರನಾಗಿದ್ದಾರೆ, ನೀವು ಮಕ್ಕಳೂ ಸಹ ಮಾ|| ಜ್ಞಾನ ಸಾಗರರಾಗುತ್ತಿದ್ದೀರಿ. ಆತ್ಮವು ಎಷ್ಟು ಸೂಕ್ಷ್ಮ ಬಿಂದುವಾಗಿದೆ. ಅದರಲ್ಲಿ ಇಡೀ ಜ್ಞಾನವು ಅಡಕವಾಗಿದೆ. ಆತ್ಮವೇ ಕೇಳಿಸಿಕೊಳ್ಳುತ್ತದೆ, ಆತ್ಮವೇ ಧಾರಣೆ ಮಾಡುತ್ತದೆ, ಆತ್ಮವೇ ಶರೀರದ ಮೂಲಕ ತಿಳಿಸುತ್ತದೆ. ಈ ಮಾತುಗಳನ್ನು ತಿಳಿಸಲು ಯಾರಿಗೂ ಬರುವುದಿಲ್ಲ. ನೀವೂ ಸಹ ತಂದೆಯ ಮುಖಾಂತರ ತಿಳಿದುಕೊಂಡು ಮತ್ತೆ ತಿಳಿಸುತ್ತೀರಿ. ಪರಮಪಿತ ಪರಮಾತ್ಮನೇ ಪತಿತ-ಪಾವನ ಜ್ಞಾನಸಾಗರನಾಗಿದ್ದಾರೆ. ಕೃಷ್ಣನಿಗೆ ಪತಿತ-ಪಾವನ ಹಾಗೂ ಜ್ಞಾನಸಾಗರನೆಂದು ಹೇಳಲು ಸಾಧ್ಯವಿಲ್ಲ. ಹೇ ಪತಿತ-ಪಾವನ ಬನ್ನಿ ಎಂದು ಒಬ್ಬ ತಂದೆಗೇ ಹೇಳುತ್ತಾರೆ. ಕೃಷ್ಣನಿಗಾಗಲಿ, ರಾಮನಿಗಾಗಲಿ ಹೇಳುವುದಿಲ್ಲ. ಸೀತಾರಾಮನು ಪತಿತ-ಪಾವನನಾಗಿರಲಿಲ್ಲ. ನೀವೆಲ್ಲರೂ ಭಕ್ತಿನಿಯರಾಗಿದ್ದೀರಿ, ಭಗವಂತ ಒಬ್ಬರೇ ಆಗಿದ್ದಾರೆ. ನೀವೆಲ್ಲರೂ ವಧುಗಳಾಗಿದ್ದೀರಿ, ನಾನು ನಿಮ್ಮ ವರನಾಗಿದ್ದೇನೆ. ನಿಮ್ಮನ್ನು ಶೃಂಗಾರ ಮಾಡಲು ಬರುತ್ತೇನೆ. ನಾನು ಬಂದು ಎಲ್ಲಾ ಆತ್ಮರಿಗೆ ಭಕ್ತಿಯ ಫಲವನ್ನೂ ಕೊಡುತ್ತೇನೆ. ಈ ವಿದ್ಯೆಯು ಎಷ್ಟು ದೊಡ್ಡದಾಗಿದೆ, ನರನನ್ನು ನಾರಾಯಣನನ್ನಾಗಿ ಮಾಡುತ್ತದೆ ಅಂದಮೇಲೆ ಎಷ್ಟೊಂದು ನಶೆಯಿರಬೇಕು. ತಂದೆಯು ಬಂದಿರುವುದೇ ಅವಿನಾಶಿ, ಜ್ಞಾನ ರತ್ನಗಳ ದಾನ ಮಾಡಲು. ಇದು ಬಹಳ ಒಳ್ಳೆಯ ದಾನವಾಗಿದೆ. ಶಿವನ ಮುಂದೆ ಹೋಗಿ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ. ನಿಮ್ಮ ಬುದ್ಧಿಯಲ್ಲಿ ಈಗ ಸಂಪೂರ್ಣ ಜ್ಞಾನವಿದೆ - ನಾವೇ ಈಗ ಸಂಗಮದಲ್ಲಿದ್ದೇವೆ. ನಮ್ಮನ್ನು ಶಿವ ತಂದೆಯು ಶಿವಪುರಿಯ ಮಾಲೀಕರನ್ನಾಗಿ ಮಾಡುತ್ತಾರೆ. ಈಗ ನಾವು ಬ್ರಾಹ್ಮಣರಾಗಿದ್ದೇವೆ, ನಂತರ ನಾವು ದೇವತೆಗಳಾಗುತ್ತೇವೆ ಅನಂತರ ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೇವೆ. ಇದು ಹಮ್ ಸೋ, ಸೋ ಹಮ್ನ ರಹಸ್ಯವಾಗಿದೆ. ಮನುಷ್ಯರು ಆತ್ಮವೇ ಪರಮಾತ್ಮನೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಪೂಜ್ಯನಿಂದ ಹೇಗೆ ಪೂಜಾರಿಯಾಗುವೆನು? ನೀವು ಸತೋಪ್ರಧಾನರಿಂದ ಹೇಗೆ ಸತೋ, ರಜೋ, ತಮೋದಲ್ಲಿ ಬರುತ್ತೀರಿ ಎಂಬ ರಹಸ್ಯವನ್ನು ನೀವು ತಿಳಿದುಕೊಂಡಿದ್ದೀರಿ. ಇವು ಧಾರಣೆ ಮಾಡಿಕೊಳ್ಳುವ ಮಾತುಗಳಾಗಿವೆ. ಈ ವಿದ್ಯೆಯಿಂದ ಎಷ್ಟು ಬೇಹದ್ದಿನ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ನೀವು ನಂಬರ್ವಾರ್ ಪುರುಷಾರ್ಥದನುಸಾರ ಭವಿಷ್ಯ 21 ಜನ್ಮಗಳಿಗಾಗಿ ಓದುತ್ತಿದ್ದೀರಿ. ಕೆಲವರು ರಾಜ, ಕೆಲವರು ರಾಣಿ, ಕೆಲವರು ಪ್ರಜೆಗಳಾಗುತ್ತಾರೆ. ಅಲ್ಲಿ ಎಲ್ಲರಿಗೆ ಸುಖವೇ ಸುಖವಿರುತ್ತದೆ. ಇಲ್ಲಂತೂ ಕರ್ಮಗಳನುಸಾರ ದುಃಖ ಸಿಗುತ್ತದೆ. ಇದು ದುಃಖಧಾಮ, ಅದು ಸುಖಧಾಮವಾಗಿದೆ.
|
3 |
+
ಈಗ ತಂದೆಯು ಹೇಳುತ್ತಾರೆ - ಮಕ್ಕಳೇ, ಇಂತಹ ಯಾವುದೇ ಕೆಟ್ಟ ಕರ್ಮ ಮಾಡಬೇಡಿ, ಯಾವುದರಿಂದ ಶಿಕ್ಷೆಯನ್ನನುಭವಿಸಬೇಕಾಗುವುದು. ಆದರೂ ಅಂತಹ ಕರ್ಮ ಮಾಡುತ್ತೀರೆಂದರೆ ಪದವಿಯೂ ಅಂತಹುದೇ ಸಿಗುವುದು. ಒಂದುವೇಳೆ ಚೆನ್ನಾಗಿ ಓದುತ್ತೀರೆಂದರೆ ಕಲ್ಪ-ಕಲ್ಪಾಂತರದ ಪ್ರಾಲಬ್ಧವಾಗುವುದು. ಈಗ ಜ್ಞಾನವಿರುತ್ತದೆ ನಂತರ ಪ್ರಾಯಲೋಪವಾಗಿ ಬಿಡುವುದು. ನೀವೀಗ ಪುರುಷಾರ್ಥ ಮಾಡದಿದ್ದರೆ ಬಹಳ ಪಶ್ಚಾತ್ತಾಪ ಪಡುತ್ತೀರಿ. ದೈವೀ ಗುಣಗಳನ್ನು ಧಾರಣೆ ಮಾಡಿಕೊಂಡಿರಿ, ಇಲ್ಲದಿದ್ದರೆ ಕರ್ಮಗಳು ವಿಕರ್ಮಗಳಾಗುವವು. ಇಲ್ಲಿ ಎಲ್ಲಾ ಮನುಷ್ಯರ ಕರ್ಮಗಳು ವಿಕರ್ಮಗಳಾಗುತ್ತವೆ. ಇದು ನಿಮ್ಮ ವಿನಃ ಯಾರಿಗೂ ಗೊತ್ತಿಲ್ಲ. ಗೀತೆಯ ಭಗವಂತನು ಯಾವಾಗ ಬಂದರು? ಇದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ದ್ವಾಪರದಲ್ಲಿ ಬಂದರೆಂದು ಹೇಳುತ್ತಾರೆ, ವೇದಶಾಸ್ತ್ರಗಳೆಲ್ಲವೂ ದ್ವಾಪರದಲ್ಲಿಯೇ ರಚಿಸಲ್ಪಟ್ಟವು ಮತ್ತು ದ್ವಾಪರದಲ್ಲಿಯೇ ಆಸುರೀ ಸಂಪ್ರದಾಯದವರಾಗಿ ಬಿಟ್ಟರು ಎಂದು ಹೇಳುತ್ತಾರೆ. ಬಾಬಾ, ನಮ್ಮನ್ನು ಈ ಪಾಪದ ಪ್ರಪಂಚದಿಂದ ಕರೆದುಕೊಂಡು ಹೋಗಿ ಎಂದು ಮಕ್ಕಳು ಹೇಳುತ್ತಾರೆ. ಇದರ ಅರ್ಥವಾಗಿದೆ - ನೀವು ಮೃತ್ಯುವನ್ನು ಕರೆಯುತ್ತೀರಿ ಆದ್ದರಿಂದ ತಂದೆಗೆ ಕಾಲರ ಕಾಲನೆಂದು ಹೇಳಲಾಗುತ್ತದೆ. ಅವರಂತೂ ಕೇವಲ ಅಕಾಲ ಸಿಂಹಾಸನವೆಂದು ಹೆಸರನ್ನಿಟ್ಟು ಬಿಟ್ಟಿದ್ದಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಯಾರು ಬಹಳ ಶ್ರೇಷ್ಠರಾಗುವರೋ ಅವರೇ ಬಂದು ಕೆಳಗಿಳಿಯುತ್ತಾರೆ. ನೀವು ಮಕ್ಕಳಿಗೆ ಈಗ ಪೂರ್ಣ ಜ್ಞಾನವು ಅರ್ಥವಾಗಿದೆ, ಇದು ಬಹಳ ಅದ್ಭುತವಾದ ಜ್ಞಾನವಾಗಿದೆ, ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಯಾರೂ ಕೊಡಲು ಸಾಧ್ಯವಿಲ್ಲ. ಇಲ್ಲದಿದ್ದರೆ ನಿರಾಕಾರನನ್ನು ಜ್ಞಾನಪೂರ್ಣನೆಂದು ಹೇಳುವುದರಿಂದ ಲಾಭವಾದರೂ ಏನು! ಎಲ್ಲಿಯವರೆಗೆ ಅವರು ಬಂದು ಜ್ಞಾನವನ್ನು ಕೊಡುವುದಿಲ್ಲವೋ ಅಲ್ಲಿಯವರೆಗೆ ಯಾರಿಗೂ ತಿಳಿಯುವುದಿಲ್ಲ ಮತ್ತು ಎಲ್ಲಾ ಆತ್ಮರು ನಿರಾಕಾರಿ ಪ್ರಪಂಚದಿಂದ ಇಲ್ಲಿ ಬಂದು ಪಾತ್ರವನ್ನಭಿನಯಿಸುತ್ತಾರೆ, ಈಗ ಭಗವಂತನನ್ನೂ ಕರೆಯುತ್ತಾರೆ. ಅವರಿಗೆ ತನ್ನ ಶರೀರವಿಲ್ಲ, ಎಲ್ಲಾ ಆತ್ಮರಿಗೂ ತನ್ನದೇ ಆದ ಶರೀರವಿದೆ ಅಂದಮೇಲೆ ಒಬ್ಬ ಭಗವಂತನು ನಿರಾಕಾರನಾದರಲ್ಲವೆ. ತಂದೆಯು ತಿಳಿಸುತ್ತಾರೆ - ನನ್ನ ಹೆಸರು ಶಿವ ಎಂದು, ನಾನು ಇವರ ಶರೀರದಲ್ಲಿ, ಇವರ ಭೃಕುಟಿಯಲ್ಲಿ ಬಂದು ವಿರಾಜಮಾನನಾಗುತ್ತೇನೆ. ಹೇಗೆ ಆತ್ಮವು ಕರ್ಮೇಂದ್ರಿಯಗಳ ಮೂಲಕ ಮಾತನಾಡುತ್ತದೆಯೋ ಹಾಗೆಯೇ ತಂದೆಯೂ ಸಹ ಇವರ ಕರ್ಮೇಂದ್ರಿಯಗಳ ಮೂಲಕ ತಿಳಿಸುತ್ತಾರೆ. ಭೃಕುಟಿಯ ನಡುವೆ ಹೊಳೆಯುವ ನಕ್ಷತ್ರವೆಂದು ಗಾಯನವಿದೆ. ಈಗ ಈ ಗುಹ್ಯ ರಹಸ್ಯಗಳನ್ನು ನೀವೇ ತಿಳಿದುಕೊಂಡಿದ್ದೀರಿ. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ತಮ್ಮ ಶ್ರೇಷ್ಠ ಪ್ರಾಲಬ್ಧವನ್ನು ರೂಪಿಸಿಕೊಳ್ಳಲು ವಿದ್ಯೆಯನ್ನು ಚೆನ್ನಾಗಿ ಓದಬೇಕಾಗಿದೆ. ಯಾವುದೇ ಕೆಟ್ಟ ಕರ್ಮ ಮಾಡಬಾರದು.
|
7 |
+
2. ತಮ್ಮ ಆಹಾರ-ಪಾನೀಯಗಳು ಬಹಳ ಶುದ್ಧವಾಗಿರಲಿ. ದೇವತೆಗಳಿಗೆ ಯಾವ ಪದಾರ್ಥಗಳನ್ನು ಸ್ವೀಕಾರ ಮಾಡಿಸುತ್ತಾರೆಯೋ ಅಂತಹ ಪಧಾರ್ಥಗಳನ್ನೇ ಸೇವಿಸಬೇಕು. ಪುರುಷೋತ್ತಮರಾಗುವ ಪುರುಷಾರ್ಥ ಮಾಡಬೇಕಾಗಿದೆ.
|
BKMurli/BKMurli/page_1007.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಕ್ಕಳಿಗೆ ಗುಡ್ಮಾರ್ನಿಂಗ್. ಇಂದು ಗುರುವಾರವಾಗಿದೆ, ನೀವು ಮಕ್ಕಳಿಗಾಗಿ ಈ ವೃಕ್ಷಪತಿ ದಿನ ಅಥವಾ ಬೃಹಸ್ಪತಿ ವಾರವು ಉತ್ತಮವಾಗಿದೆ. ಸಪ್ತಾಹದಲ್ಲಿ ಎಲ್ಲದಕ್ಕಿಂತ ಉತ್ತಮವಾದ ದಿನವು ಇದಾಗಿದೆ. ವೃಕ್ಷಪತಿಯ ಹೆಸರು ಗಾಯನವಿದೆ. ಬೃಹಸ್ಪತಿಯ ದೆಶೆಯು ಕುಳಿತಿದೆ. ವೃಕ್ಷಪತಿ ತಂದೆಯು ಪುನಃ ನಮಗೆ ತಮ್ಮ ಬೇಹದ್ದಿನ ಸುಖದ ಆಸ್ತಿಯನ್ನು ಕೊಡುತ್ತಿದ್ದಾರೆ, ಬೇಹದ್ದಿನ ಸನ್ಯಾಸವನ್ನೂ ಮಾಡುತ್ತಾರೆ. ನಿವೃತ್ತಿ ಮಾರ್ಗದವರದು ಹದ್ದಿನ ಸನ್ಯಾಸವಾಗಿದೆ. ಎಲ್ಲರೂ ಸನ್ಯಾಸ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ – ಮುಂದೆ ಹೋದಂತೆ ಅನೇಕರು ಬಂದು ಕೇಳುತ್ತಾರೆ. ಯಾರು ಪತಿತ-ಪಾವನ ತಂದೆ, ಮುಕ್ತಿದಾತ ಮಾರ್ಗದರ್ಶಕನಾಗಿದ್ದಾರೆಯೋ ಅವರೇ ತಿಳಿಸುತ್ತಾರೆ- ನಾನು ಎಲ್ಲರನ್ನೂ ಮುಕ್ತಿಧಾಮಕ್ಕೆ ಕರೆದುಕೊಂಡು ಹೋಗಲು ಬಂದಿದ್ದೇನೆ. ಭಕ್ತಿಯಲ್ಲಿ ಮುಕ್ತಿಗಾಗಿಯೇ ಪುರುಷಾರ್ಥ ಮಾಡುತ್ತಾರೆ. ಭಕ್ತಿಯ ಫಲ ಸಿಗಬೇಕಾದರೆ ಎಷ್ಟೊಂದು ಸಮಯ ಭಕ್ತಿಯಲ್ಲಿ ಇರಬೇಕಾಗುತ್ತದೆ. ಇದು ನಿಮ್ಮ ವಿನಃ ಯಾರಿಗೂ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಪೂರ್ಣ 2500 ವರ್ಷಗಳು ಹಿಡಿಸುತ್ತವೆ, ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಇದು ಮಾಡಿ-ಮಾಡಲ್ಪಟ್ಟಿರುವ ಆಟವಾಗಿದೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಪಾತ್ರವನ್ನಭಿನಯಿಸುತ್ತಾ ಇರುತ್ತಾರೆ. ನೀವೂ ಸಹ ಕಲ್ಪ-ಕಲ್ಪವೂ ಇದೇ ಪಾತ್ರವನ್ನಭಿನಯಿಸುತ್ತೀರಿ. ಎಷ್ಟೊಂದು ಖುಷಿಯ ಮಾತಾಗಿದೆ, ನಮ್ಮ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆ. ನಾವು 21 ಜನ್ಮಗಳಿಗಾಗಿ ಸ್ವರ್ಗದ ಮಾಲೀಕರಾಗುತ್ತೇವೆ. ಈಗ ನಮ್ಮದು ಏರುವ ಕಲೆಯಾಗಿದೆ. ನರಕವು ವಿನಾಶವಾಗಿ ಸ್ವರ್ಗದ ವಿಜಯವಾಗುತ್ತದೆ. ಸುಖ-ದುಃಖದ ಆಟವೂ ಸಹ ನೀವು ಮಕ್ಕಳಿಗಾಗಿ ಇದೆ. ತಂದೆಯು ತಿಳಿಸುತ್ತಾರೆ- ಈ ಆದಿ ಸನಾತನ ದೇವಿ-ದೇವತಾ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ, ಅದು ಹೊಸ ಪ್ರಪಂಚವಾಗಿದೆ. ಅಲ್ಲಿ ಗಣಿಗಳೂ ಸಹ ಹೊಸದಾಗಿರುತ್ತವೆ. ಅಲ್ಲಿ ಏನೆಲ್ಲವೂ ತಯಾರಾಗುತ್ತದೆಯೋ ಎಲ್ಲವೂ ಹೊಸದಾಗಿರುವುದು. ಹಳೆಯ ವಸ್ತುವಾದ ಮೇಲೆ ಆ ಸತ್ವವಿರುವುದಿಲ್ಲ ಆದ್ದರಿಂದ ಈಗ ಪ್ರಪಂಚದಲ್ಲಿಯೂ ಯಾವುದೇ ಸಾರವಿಲ್ಲ. ತಂದೆಗೆ ಸರ್ವಶಕ್ತಿವಂತನೆಂದು ಹೇಳುತ್ತಾರೆ ಅಂದಮೇಲೆ ಯಾವ ಶಕ್ತಿಯನ್ನು ತೋರಿಸುತ್ತಾರೆ? ಅದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಪತಿತ-ಪಾವನ ಸದ್ಗತಿದಾತ ಮುಕ್ತಿದಾತ ತಂದೆಯು ಬಂದು ನಿಮಗೆ ಇಷ್ಟು ಶಕ್ತಿಯನ್ನು ಕೊಡುತ್ತಾರೆ. ಅನೇಕ ಧರ್ಮಗಳ ವಿನಾಶ ಮಾಡಿಸಿ ಒಂದು ಧರ್ಮ, ಒಂದು ರಾಜ್ಯದ ಸ್ಥಾಪನೆ ಮಾಡುವುದು, ಇದು ಶಕ್ತಿಯ ಕೆಲಸವಲ್ಲವೇನು? ಈ ಶ್ರೇಷ್ಠ ಕಾರ್ಯವನ್ನು ನೀವು ಮಕ್ಕಳ ಮೂಲಕ ಮಾಡಿಸುತ್ತಾರೆ. ನಿಮಗೆ ಎಷ್ಟೊಂದು ಶಕ್ತಿ ಸಿಗುತ್ತದೆ, ಯಾವುದರಿಂದ ನಿಮ್ಮ ಎಲ್ಲಾ ಪಾಪಗಳು ಕಳೆಯುತ್ತವೆ. ನೀವು ಪುಣ್ಯಾತ್ಮರಾಗಿ ಬಿಡುತ್ತೀರಿ. ಯಾರೆಷ್ಟು ಪರಿಶ್ರಮ ಪಡುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವರು. ಆದರೂ ಸ್ವರ್ಗಕ್ಕೆ ಯೋಗ್ಯರಂತೂ ಆಗಿಯೇ ಆಗುತ್ತಾರೆ. ಮೊದಲು ಹೊಸ ಪ್ರಪಂಚವಿತ್ತು, ಈಗ ಹಳೆಯ ಪ್ರಪಂಚವಾಗಿದೆ, ಇದನ್ನೂ ತಿಳಿದುಕೊಳ್ಳುವುದಿಲ್ಲ, ಸಂಪೂರ್ಣ ಅಂಧಶ್ರದ್ಧೆಯಿದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಮೊದಲು ನಾವು ಬುದ್ಧಿಹೀನರಾಗಿದ್ದೆವು. ಅಂಧರ ಮಕ್ಕಳು ಅಂಧರೆಂದು ಗಾಯನವಿದೆ, ಎಲ್ಲರೂ ಭಗವಂತನನ್ನು ಹುಡುಕುತ್ತಲೇ ಇರುತ್ತಾರೆ. ಅಲೆದಾಡುತ್ತಾ ಇರುತ್ತಾರೆ, ಸಿಗುವುದೇನೂ ಇಲ್ಲ. ಬಹಳ ಪರಿಶ್ರಮ ಪಡುತ್ತಾರೆ. ಪಾಪ! ಕೆಲವರಂತೂ ಪ್ರಾಣ ತ್ಯಾಗ ಮಾಡುತ್ತಾರೆ. ದೇವತೆಗಳನ್ನು ಖುಷಿ ಪಡಿಸುವುದಕ್ಕಾಗಿ ಬಲಿಯನ್ನೂ ಕೊಡುತ್ತಾರೆ, ಅದನ್ನು ಮಹಾಪ್ರಸಾದವೆಂದು ತಿಳಿಯುತ್ತಾರೆ. ಗೋಹತ್ಯೆಯು ಅಪರಾಧವೆಂದು ಘೋಷಣೆ ಮಾಡುತ್ತಾರೆ, ಗೋವು ಮಾತೆಯಾಗಿದೆ ಹಾಲನ್ನು ಕೊಡುತ್ತದೆ ಎಂದು ತಿಳಿಯುತ್ತಾರೆ. ಹಾಗೆಯೇ ಮೇಕೆಗಳೂ ಸಹ ಹಾಲು ಕೊಡುತ್ತದೆ ಅಂದಮೇಲೆ ಅವುಗಳ ರಕ್ಷಣೆಯನ್ನೇಕೆ ಮಾಡುವುದಿಲ್ಲ? ಕೃಷ್ಣನಿಗೆ ಗೋವಿನ ಜೊತೆ ಪ್ರೀತಿಯಿತ್ತು ಎಂದು ಹೇಳುತ್ತಾರೆ ಆದರೆ ಅಂತಹ ಮಾತಿಲ್ಲ, ತಂದೆಯು ತಿಳಿಸುತ್ತಾರೆ - ನೀವು ಸತ್ಯಯುಗದ ರಾಜಕುಮಾರ-ಕುಮಾರಿಯರಾಗಿದ್ದಿರಿ. ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ತಮೋಪ್ರಧಾನರಾಗಿದ್ದೀರಿ. ಈಗ ಮತ್ತೆ ಪುರುಷಾರ್ಥ ಮಾಡಿ ಸತೋಪ್ರಧಾನ ರಾಜಕುಮಾರ-ಕುಮಾರಿಯರಾಗಬೇಕಾಗಿದೆ, ಇದು ಡಬಲ್ ಕಿರೀಟಧಾರಿ ರಾಜಕುಮಾರ-ಕುಮಾರಿಯರಾಗುವ ಪಾಠಶಾಲೆಯಾಗಿದೆ. ಭಲೆ ಗೀತಾಪಾಠಶಾಲೆಗಳಂತೂ ಬಹಳಷ್ಟಿದೆ ಆದರೆ ನೀವು ಸ್ವರ್ಗದಲ್ಲಿ ಹೇಗೆ ಕೃಷ್ಣನಂತಹ ರಾಜಕುಮಾರ-ಕುಮಾರಿಯರಾಗಬಲ್ಲಿರಿ ಎಂದು ಅಲ್ಲಿ ತಿಳಿಸುವುದಿಲ್ಲ. ಈ ರೀತಿ ಯಾವುದೇ ಗೀತಾಪಾಠಿಗಳು ತಿಳಿಸುತ್ತಾರೆಯೇ? ಇಲ್ಲಂತೂ ತಂದೆಯು ತಿಳಿಸುತ್ತಾರೆ. ಇದು ರಾಜಕುಮಾರ-ಕುಮಾರಿಯರಾಗುವ ಪರೀಕ್ಷೆಯಾಗಿದೆ ಅದರಲ್ಲಿಯೂ ಬಹಳ ಸಂಖ್ಯೆಗಳಿವೆ. 16,108ರ ಮಾಲೆಯೆಂದು ಗಾಯನವಿದೆ, ಕೇವಲ 108 ಮಂದಿಯೇ ಇರುವರೇ? ಈಗಂತೂ ಲೆಕ್ಕವಿಲ್ಲದಷ್ಟು ಜನಸಂಖ್ಯೆಯಿದೆ. ಇದು ಕಡಿಮೆಯಾಗಲೇಬೇಕಾಗಿದೆ. ನೀವು ಕೆಲಕೆಲವು ಮಾತುಗಳನ್ನು ಪತ್ರಿಕೆಗಳಲ್ಲಿಯೂ ಹಾಕಿಸಬಹುದು, ಈ ಗೋಹತ್ಯೆಗಾಗಿ ಯಾವ ಉಪವಾಸ ಸತ್ಯಾಗ್ರಹ ಇತ್ಯಾದಿಗಳನ್ನು ಮಾಡುತ್ತಿದ್ದಾರೆಯೋ ಇದನ್ನು ಕಲ್ಪದ ಮೊದಲೂ ಮಾಡಿದ್ದರು, ನತಿಂಗ್ನ್ಯೂ. ಈ ಸಮಯದಲ್ಲಿ ನಮ್ಮನ್ನು ಪಾವನ ಪ್ರಪಂಚಕ್ಕೆ ಕರೆದುಕೊಂಡು ಹೋಗಿ ಎಂದು ಪರಮಾತ್ಮನನ್ನು ಕರೆಯುತ್ತಾರೆ. ಹೇಗೆ ಕರೆದುಕೊಂಡು ಹೋಗುತ್ತಾರೆಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಆದರೆ ಆ ದೈವೀ ಗುಣಗಳು ಈಗಿನ್ನೂ ಬಂದಿಲ್ಲ. ದೈವೀ ಗುಣಗಳ ಧಾರಣೆಯು ಬಹಳ ಕಡಿಮೆಯಿದೆ. ಜ್ಞಾನವು ಬಹಳಮಂದಿಗೆ ಇಷ್ಟವಾಗುತ್ತದೆ. ಈ ಬಿ.ಕೆ.,ಗಳು ಪವಿತ್ರರಾಗಿರುತ್ತಾರೆ, ಸಾಧಾರಣವಾಗಿರುತ್ತಾರೆ. ಆಭರಣ ಇತ್ಯಾದಿಗಳನ್ನು ಧರಿಸುವುದಿಲ್ಲವೆಂದು ತಿಳಿದುಕೊಳ್ಳುತ್ತಾರೆ ಆದರೆ ಚಲನೆಯು ಚೆನ್ನಾಗಿರಬೇಕಲ್ಲವ��. ಯಾರು ಮನೆಯಲ್ಲಿರುತ್ತೀರೋ ಅವರು ಎಂದೂ ಪತಿಗೆ ಅಥವಾ ತಂದೆ-ತಾಯಿಗಳಿಗೆ ನಮಗೆ ಒಳ್ಳೆಯ ಆಭರಣ, ಒಳ್ಳೆಯ ಬಟ್ಟೆಗಳನ್ನು ಕೊಡಿಸಿ ಎಂದು ಹೇಳುವಂತಿಲ್ಲ ಏಕೆಂದರೆ ನೀವು ತಿಳಿದುಕೊಂಡಿದ್ದೀರಿ - ನಾವೀಗ ವನವಾಸದಲ್ಲಿ ಕುಳಿತುಕೊಂಡಿದ್ದೇವೆ. ಈ ಹಳೆಯ ಶರೀರ, ಈ ವಸ್ತ್ರಗಳನ್ನು ಬಿಟ್ಟು ನಾವು ವಿಷ್ಣುಪುರಿಗೆ ಹೋಗುತ್ತಿದ್ದೇವೆ. ತಂದೆಯು ನಮ್ಮ ಪತಿಯರಿಗೂ ಪತಿ, ಗುರುಗಳಿಗೂ ಗುರುವಾಗಿದ್ದಾರೆ ಆದ್ದರಿಂದಲೇ ಎಲ್ಲರೂ ಅವರನ್ನು ಹೇ ಪತಿತ-ಪಾವನ ಬನ್ನಿ ಎಂದು ನೆನಪು ಮಾಡುತ್ತಾರೆ. ತಂದೆಯೇ ಬಂದು ಎಲ್ಲರಿಗೆ ಸದ್ಗತಿ ಕೊಡುತ್ತಾರೆ. ಸಿಖ್ಖರೂ ಸಹ ಅಕಾಲಮೂರ್ತಿ, ಸತ್ಶ್ರೀ ಅಕಾಲ್ ಎಂದು ಹೇಳುತ್ತಾರೆ. ಆತ್ಮವನ್ನು ಕಾಲವೆಂದೂ ಕಬಳಿಸುವುದಿಲ್ಲ. ಶರೀರವು ವಿನಾಶವಾಗಿ ಬಿಡುತ್ತದೆ, ಆತ್ಮವು ವಿನಾಶವಾಗುವುದಿಲ್ಲ. ಆದ್ದರಿಂದ ಬಂದು ನಮಗೆ ಸದ್ಗತಿ ನೀಡಿ ಮನೆಗೆ ಕರೆದುಕೊಂಡು ಹೋಗಿ, ಎಲ್ಲಿಂದ ನಾವು ಬಂದಿದ್ದೇವೆಯೋ ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ಆ ಸದ್ಗುರು, ಅಕಾಲಮೂರ್ತಿಯನ್ನು ನೆನಪು ಮಾಡುತ್ತಾರೆ ಅಂದಾಗ ನೀವು ಮಕ್ಕಳು ಇದನ್ನು ತಿಳಿಸಬೇಕಾಗಿದೆ - ಸದ್ಗುರು ಅಕಾಲಮೂರ್ತಿಯು ಅವರೊಬ್ಬರೇ ಆಗಿದ್ದಾರೆ, ಅಂದಮೇಲೆ ನೀವು ತಮ್ಮನ್ನು ಗುರುಗಳೆಂದು ಹೇಗೆ ಕರೆಸಿಕೊಳ್ಳುತ್ತೀರಿ? ತಂದೆಯು ತಿಳಿಸುತ್ತಾರೆ - ಈ ಭಕ್ತಿಮಾರ್ಗದ ಗುರುಗಳು ಅನೇಕರಿದ್ದಾರೆ. ಜ್ಞಾನಸಾಗರನು ಒಬ್ಬರೇ ತಂದೆಯಾಗಿದ್ದಾರೆ, ಅವರಿಂದ ನೀವು ನದಿಗಳು ಹೊರಟಿದ್ದೀರಿ. ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಲೌಕಿಕ ಶಿಕ್ಷಕರೂ ಸಹ ವಿದ್ಯಾಭ್ಯಾಸದ ಆಸ್ತಿಯನ್ನು ಕೊಡುತ್ತಾರೆ. ಈಗ ತಂದೆಯು ಬಂದು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತದೆ. ತಲೆಯ ಮೇಲೆ ಪಾಪಗಳ ಹೊರೆಯಿದೆಯಲ್ಲವೆ. ತಂದೆಯನ್ನು ನೆನಪು ಮಾಡುವುದರಿಂದ ಬುದ್ಧಿಯು ಸತೋಪ್ರಧಾನವಾಗುವುದು. ಈಗಂತೂ ಎಲ್ಲರ ಬುದ್ಧಿಯು ಛೀ ಛೀ ತಮೋಪ್ರಧಾನವಾಗಿದೆ. ಮೂರ್ತಿಯ ಮುಂದೆ ಹೋಗಿ ನಾವು ಛೀ ಛೀ ಆಗಿದ್ದೇವೆ, ತಾವು ವಾಹ್ ವಾಹ್ ಆಗಿದ್ದೀರಿ ಎಂದು ಹೇಳುತ್ತಾರೆ.
|
2 |
+
ನೀವೇ ಪಾವನ, ಶ್ರೇಷ್ಠರಾಗಿದ್ದೀರಿ, ನೀವು ಪತಿತರಾಗಿ ಕೆಳಗೆ ಬಂದಿದ್ದೀರಿ. ನಾಟಕವೇ ಭಾರತದ ಮೇಲಿದೆ. 84 ಜನ್ಮಗಳ ಕಥೆಯು ನಿಮ್ಮೊಂದಿಗೆ ಅನ್ವಯಿಸುತ್ತದೆ. ಯಾರು ಕೃಷ್ಣನ ರಾಜಧಾನಿಯಲ್ಲಿ ಮೊದಲಿಗೆ ಬರುವರೋ ಅವರೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಈಗ ಸ್ವರ್ಗ, ಕೃಷ್ಣ ಪುರಿಯು ಸ್ಥಾಪನೆಯಾಗುತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ. ನೀವು ಸ್ಪಷ್ಟ ಮಾಡಿ ಬರೆಯಬಹುದು. ನಾವು ಯೋಗಬಲದಿಂದ ಭಾರತವನ್ನು ಶ್ರೇಷ್ಠಾಚಾರಿಯನ್ನಾಗಿ ಮಾಡುತ್ತೇವೆ. ಮನುಷ್ಯರು ಜನಸಂಖ್ಯಾ ನಿಯಂತ್ರಣಕ್ಕಾಗಿ ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ ಆದರೆ ಇದು ತಂದೆಯ ಕರ್ತವ್ಯವೇ ಆಗಿದೆ. ವಿನಾಶದ ನಂತರ ಕೇವಲ 9 ಲಕ್ಷ ಜನಸಂಖ್ಯೆ ಮಾತ್ರವೇ ಉಳಿಯುತ್ತದೆ, ಇದರಲ್ಲಿ ತಂದೆಯು ಏನೂ ಖರ್ಚು ಮಾಡುವುದಿಲ್ಲ ಅಥವಾ ಯಾವುದೇ ಆಶೀರ್ವಾದದ ಮಾತೂ ಇಲ್ಲ ಆದರೆ ಈ ಹಳೆಯ ಪ್ರಪಂಚದ ವಿನಾಶವಾಗಲೇಬೇಕಾಗಿದೆ, ಇದು ಸಂಗಮವಾಗಿದೆ. ಬ್ರಹ್ಮನ ಮೂಲಕ ಸ್ಥಾಪನೆಯೆಂದು ಗಾಯನವಿದೆ ಅಂದಮೇಲೆ ಅವಶ್ಯವಾಗಿ ಇಲ್ಲಿಯೇ ಬೇಕಲ್ಲವೆ ಆದ್ದರಿಂದ ಬ್ರಹ್ಮನನ್ನು ತೋರಿಸಲಾಗಿದೆ. ಈ ದಾದಾರವರನ್ನು ಏಕೆ ಇಲ್ಲಿ ಕೂರಿಸಿದ್ದೀರಿ ಎಂದು ಮನುಷ್ಯರು ಕೇಳುತ್ತಾರೆ. ಯಾರನ್ನೇ ಆ ಸ್ಥಾನದಲ್ಲಿ ಇಟ್ಟರೂ ಸಹ ಇವರನ್ನು ಏಕೆ ಇಟ್ಟಿದ್ದೀರಿ ಎಂದೇ ಕೇಳುತ್ತಾರೆ. ಬ್ರಹ್ಮನಂತು ಬಹಳ ಸಾಧಾರಣವಾಗಿದ್ದಾರೆ, ಬ್ರಹ್ಮನೇ ಎಲ್ಲರಿಗಿಂತ ಹಿರಿಯರಾಗಲು ಸಾಧ್ಯ! ಬಹಳ ಸಹಜವಾದ ಮಾತಾಗಿದೆ ಆದರೆ ಎಷ್ಟೊಂದು ತಿಳಿಸಬೇಕಾಗಿದೆ. ಭಗವಂತನು ಬರುವುದೇ ಪತಿತ ಶರೀರ ಮತ್ತು ಪತಿತ ಪ್ರಪಂಚದಲ್ಲಿ ಇಲ್ಲಿ ಯಾರಿಗೂ ಪಾವನ ಶರೀರವಂತೂ ಸಿಗಲು ಸಾಧ್ಯವಿಲ್ಲ. ಏಣಿಯ ಚಿತ್ರದಲ್ಲಿಯೂ ತೋರಿಸಿದ್ದಾರೆ, ಎಲ್ಲರೂ ಮುಳ್ಳಿನ ಕಾಡಿನಲ್ಲಿ ನಿಂತಿದ್ದಾರೆ, ಇದು ಪತಿತ ಪ್ರಪಂಚವಾಗಿದೆಯಲ್ಲವೆ. ಭಗವಂತನು ಪತಿತ, ಸಾಧಾರಣ ತನುವಿನಲ್ಲಿ ಬರುತ್ತಾರೆ. ಮತ್ತೆ ಅವರಿಗೆ ಬ್ರಹ್ಮನೆಂದು ಹೆಸರಿಟ್ಟಿದ್ದಾರೆ. ಈ ಮಾತುಗಳೆಲ್ಲವನ್ನೂ ಬುದ್ಧಿಯಲ್ಲಿಟ್ಟುಕೊಳ್ಳಬೇಕು. ಮನುಷ್ಯರು ಅನೇಕ ಪ್ರಕಾರದ ಪ್ರಶ್ನೆಗಳನ್ನು ಕೇಳುತ್ತಾರೆ. ಏಣಿಯ ಚಿತ್ರದಲ್ಲಿ ತಿಳಿಸುವವರ ಬುದ್ಧಿಯು ಬಹಳ ಚೆನ್ನಾಗಿರಬೇಕು ಆದರೆ ಯಾರದು ಇಲ್ಲಿ ಬರುವ ಪಾತ್ರವೇ ಇಲ್ಲ, ಅವರು ಬಂದು ವ್ಯರ್ಥ ಪ್ರಶ್ನೆಗಳನ್ನು ಕೇಳುತ್ತಾರೆ. 84 ಜನ್ಮಗಳ ಚಕ್ರವೆಂದು ಗಾಯನವಿದೆ ಅದನ್ನೂ ಸಹ ಎಲ್ಲರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾರು ಪೂಜ್ಯರಾಗಿದ್ದರೋ ಅವರೇ ಪೂಜಾರಿಯಾಗುತ್ತಾರೆ. ಜ್ಞಾನವು ಅತಿ ಸಹಜವಾಗಿದೆ, ಕೇವಲ ತಂದೆಯನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ದೇವಿ-ದೇವತೆಗಳಾಗುತ್ತೀರಿ. ಬ್ರಾಹ್ಮಣರೇ ನಂತರ ದೇವತೆಗಳಾಗುತ್ತಾರೆ, ವಿರಾಟ ರೂಪದ ಚಿತ್ರ, ಗೋಲ, ಏಣಿಯ ಚಿತ್ರ, ತ್ರಿಮೂರ್ತಿ, ಇವೆಲ್ಲಾ ಚಿತ್ರಗಳು ಪರಸ್ಪರ ಸಂಬಂಧವಿದೆ. ತಂದೆಯು ಅನ್ಯರಿಗೆ ತಿಳಿಸಲು ಎಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾರೆ, ಕೆಲವರಂತೂ ಧಾರಣೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡುತ್ತಾರೆ. ನಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ನೀವೀಗ ಸಂಗಮಯುಗದಲ್ಲಿದ್ದೀರಿ, ಆತ್ಮರು ಪರಮಾತ್ಮನಿಂದ ಬಹಳ ಕಾಲ ಅಗಲಿ ಹೋಗಿದ್ದಾರು ಎಂಬುದು ಸಂಗಮಯುಗದ ಗಾಯನವೇ ಆಗಿದೆ. ನಾವೇ ಮೊದಲು ಸತ್ಯಯುಗದಲ್ಲಿ ಬರುತ್ತೇವೆ. ಉಳಿದೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ಯಾರು ಕಲ್ಪದ ಮೊದಲು ಬಂದಿದ್ದರೋ ಮತ್ತು ಚೆನ್ನಾಗಿ ಓದುವರೋ ಅವರೇ ಮೊದಲು ಬರುತ್ತಾರೆ. ಯಾರು ಓದುವುದಿಲ್ಲವೋ ಅವರು ಕೊನೆಯಲ್ಲಿ ಬರುತ್ತಾರೆ. ಎಲ್ಲವೂ ಲ���ಕ್ಕವಿದೆ. ಈ ಮಾತುಗಳು ಸೇವಾಧಾರಿ ಮಕ್ಕಳ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಧನ ದಾನ ಮಾಡಿದರೆ ಅದೆಂದೂ ಮುಗಿಯುವುದಿಲ್ಲವೆಂದು ಗಾಯನವಿದೆ. ದಾನ ಮಾಡುವುದಿಲ್ಲವೆಂದರೆ ಅರ್ಥ ಓದುವುದಿಲ್ಲ. ಯಾರು ಭಾರತದ ಆತ್ಮಿಕ ಸೇವಾಧಾರಿಗಳಾಗಿದ್ದಾರೆ ಎಂಬುದನ್ನು ತಂದೆಯು ನೋಡುತ್ತಾರೆ. ಅಂತಹವರು ತಮ್ಮದೇ ಕಲ್ಯಾಣ ಮಾಡಿಕೊಂಡಂತೆ. ತಂದೆಯು ವಿದ್ಯೆಯನ್ನು ಓದಿಸುತ್ತಾರೆ ಮತ್ತು ಯಾರು ತಮ್ಮ ಜೀವನವನ್ನು ಶ್ರೇಷ್ಠ ಮಾಡಿಕೊಳ್ಳುತ್ತಾರೆ ಮತ್ತು ತೇರ್ಗಡೆಯಾಗುತ್ತಾರೆಂದು ಸಾಕ್ಷಿಯಾಗಿ ನೋಡುತ್ತಾರೆ. ನೀವೂ ಸಹ ನೋಡುತ್ತೀರಿ - ಎಲ್ಲರಿಗಿಂತ ಶ್ರೇಷ್ಠ ಸೇವಾಧಾರಿಗಳು ಯಾರು? ಪ್ರದರ್ಶನಿಯಲ್ಲಿಯೂ ಅಂತಹ ಮಕ್ಕಳನ್ನೇ ಕರೆಸುತ್ತಾರೆ. ಕೆಲವರಂತೂ ಹಾಗೆಯೇ ಹೊರಟು ಹೋಗುತ್ತಾರೆ. ಈ ಜ್ಞಾನದಲ್ಲಿ ಬಹಳ ಒಳ್ಳೆಯ ನಡವಳಿಕೆಯಿರಬೇಕು. ಮುನಿಸಿಕೊಳ್ಳಬಾರದು, ಮುಟ್ಟಿದರೆ ಮುನಿ ಎಂಬ ಒಂದು ಮೂಲಿಕೆಯಿರುತ್ತದೆ. ಮುಟ್ಟಿದರೆ ಸಾಕು ಅದು ಮುದುಡಿಕೊಳ್ಳುತ್ತದೆ. ಎಷ್ಟು ವಿಚಿತ್ರವಾದ ಸಸ್ಯವಾಗಿದೆ. ಇನ್ನೊಂದು ಸಂಜೀವಿನಿ ಮೂಲಿಕೆಯಾಗಿದೆ, ಅದು ಪರ್ವತಗಳಲ್ಲಿರುತ್ತದೆ. ವಾಸ್ತವದಲ್ಲಿ ತಂದೆಯು ಬಂದು ಮನ್ಮನಾಭವದ ಸಂಜೀವಿನಿ ಮೂಲಿಕೆಯನ್ನು ಕೊಡುತ್ತಾರೆ ಬಾಕಿ ಶಾಸ್ತ್ರಗಳಲ್ಲಿ ಏನೇನು ಬರೆದು ಬಿಟ್ಟಿದ್ದಾರೆ! ನೀವೇ ನಂಬರ್ವಾರ್ ಪುರುಷಾರ್ಥದನುಸಾರ ಮಹಾವೀರ, ಮಹಾವೀರಿಣಿಯರಾಗಿದ್ದೀರಿ. ನೀವೂ ಸಹ ಮಾಯೆಯ ಮೇಲೆ ವಿಜಯ ಗಳಿಸುತ್ತೀರಿ. ನೀವು ಗುಪ್ತ ಯೋಧರಾಗಿದ್ದೀರಿ. ಕಾಮ ಕಟಾರಿಯನ್ನು ನಡೆಸುವುದು ಅತಿ ದೊಡ್ಡ ಹಿಂಸೆಯಾಗಿದೆ. ಎರಡನೆಯದಾಗಿದೆ - ಕ್ರೋಧ ಮಾಡುವುದು, ಕಟುವಾಗಿ ಮಾತನಾಡುವುದೂ ಸಹ ಹಿಂಸೆಯಾಗಿದೆ. ನೀವು ಮಕ್ಕಳಿಗೆ ಸದಾ ಖುಷಿಯ ನಶೆಯೇರಿರಬೇಕು. ಯಾವ ಮಕ್ಕಳು ಸರ್ವೀಸಿನಲ್ಲಿ ತತ್ಫರರಾಗಿದ್ದಾರೆ ಅದರಲ್ಲಿಯೂ ಮಾತೆಯರ ಹೆಸರು ಮೊದಲು ಇದೆ. ನೀವು ಶಿವಶಕ್ತಿ ಸೇನೆಯಾಗಿದ್ದೀರಿ. ಮಾತೆಯರು ಯಾವ ಕಾರ್ಯವನ್ನು ಮಾಡುತ್ತಿದ್ದಾರೆಯೋ ಇದು ಬಹಳ ಚೆನ್ನಾಗಿದೆ ಎಂದು ರಾಜ್ಯಪಾಲರೂ ಸಹ ಹೇಳಿದರು. ಆದರೆ ಇದು ಎಲ್ಲರಿಗಾಗಿ ಜ್ಞಾನವಾಗಿದೆ. ಹಾ! ಮಾತೆಯರು ಇಲ್ಲಿ ಬಹಳ ಮಂದಿ ಇದ್ದಾರೆ. ಪ್ರಜಾಪಿತ ಬ್ರಹ್ಮನ ಮೂಲಕ ಕೇವಲ ಕುಮಾರಿಯರಷ್ಟೇ ಆದರೆ? ಕುಮಾರರೂ ಇದ್ದಾರಲ್ಲವೆ. ಇಬ್ಬರೂ ಜ್ಞಾನವನ್ನು ತೆಗೆದುಕೊಂಡಾಗಲೇ ಪ್ರವೃತ್ತಿಯು ಸರಿಯಾಗಿ ನಡೆಯುವುದು. ಯಾರ ಮನೆಯಲ್ಲಿ ಹೆಣ್ಣು ಮಕ್ಕಳಿರುವರು ಅಲ್ಲಿ ಲಕ್ಷ್ಮಿಯು ಬಂದಳೆಂದು ತಿಳಿದುಕೊಳ್ಳುತ್ತಾರೆ. ಎಲ್ಲಿ ಹೆಣ್ಣು ಮಕ್ಕಳಿರುವುದಿಲ್ಲವೋ ಆ ಮನೆಯು ಕಳೆಯಿಲ್ಲವೆಂದು ಹೇಳುತ್ತಾರೆ. ನೋಡಿ, ಲಕ್ಷ್ಮಿಯ ಪೂಜೆ ಮಾಡುತ್ತಾರೆ, ಸ್ತ್ರೀ ಮನೆಯ ಶೃಂಗಾರವೆಂದು ಹೇಳಲಾಗುತ್ತದೆ. ಲಕ್ಷ್ಮಿಯಿದ್ದರೆ ಅವರ ಜೊತೆ ನಾರಾಯಣನೂ ಇರುವರು. ಇತ್ತೀಚೆಗೆ ಮಾತೆಯರಿಗೆ ಬಹಳ ಗೌರವ ಕೊಡುತ್ತಾರೆ, ಎಲ್ಲರಿಗಿಂತ ಹೆಚ್ಚು ಗೌರವವನ್ನು ತಂದೆಯೇ ಬಂದು ಕೊಡುತ್ತಾರೆ. ಮೊದ��ು ಲಕ್ಷ್ಮಿ ನಂತರ ನಾರಾಯಣ. ಇತ್ತೀಚೆಗಂತೂ ಮಿಸ್ಟರ್ ಮತ್ತು ಮಿಸಸ್ ಶಬ್ಧವನ್ನು ತೆಗೆದು ಶ್ರೀ ಎಂದು ಇಟ್ಟುಕೊಂಡಿದ್ದಾರೆ, ಇದು ಮಾಯೆಯ ಮತವಾಗಿದೆ. ಮತ್ತ್ಯಾವುದೇ ಖಂಡಗಳಲ್ಲಿ ಶ್ರೀ ಎಂಬ ಶಬ್ಧವಿಲ್ಲ. ಎಂದೂ ಸಹ ಶ್ರೀಕ್ರೈಸ್ಟ್ ಎಂದು ಹೇಳುವುದಿಲ್ಲ. ಶ್ರೀಮತವು ಒಬ್ಬ ಭಗವಂತನದಾಗಿದೆ ಯಾವ ಶ್ರೀಮತದಿಂದ ಬಂದು ಶ್ರೇಷ್ಠಾಚಾರಿಯನ್ನಾಗಿ ಮಾಡುತ್ತಾರೆ. ನೀವು ಮಕ್ಕಳು ಬಹಳ ಪುರುಷಾರ್ಥ ಮಾಡಬೇಕು ಆದರೆ ಕೆಲವರು ದೇಹಾಭಿಮಾನದಲ್ಲಿ ಬಂದು ತಮ್ಮ ಪದವಿಯನ್ನು ಭ್ರಷ್ಟ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಎಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ಪರಮಾತ್ಮನೇ ಕುಳಿತು ಆತ್ಮರಿಗೆ ಓದಿಸಿ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ ಎಂದು ಹೇಳುವಂತಹ ಪಾಠಶಾಲೆ ಮತ್ತೆಲ್ಲಿಯೂ ಇಲ್ಲ. ಡ್ರಾಮಾದಲ್ಲಿ ಇಂತಹ ಪಾತ್ರವು ಮತ್ತ್ಯಾರದೂ ಇಲ್ಲ. ಆತ್ಮದಲ್ಲಿಯೇ 84 ಜನ್ಮಗಳ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಏಣಿಚಿತ್ರವು ಬಹಳ ಸ್ಪಷ್ಟಗೊಳಿಸುತ್ತದೆ. ಇದನ್ನು ನೀವು ತಿಳಿದುಕೊಂಡಿದ್ದೀರಿ - ಯಾರು 84 ಜನ್ಮಗಳನ್ನು ತೆಗೆದುಕೊಂಡಿರುವರೋ ಅವರೇ ಬರುತ್ತಾರೆ. ಉಳಿದೆಲ್ಲರೂ ಕೊನೆಯಲ್ಲಿ ಬರುವವರೆಂದು ತಿಳಿದುಕೊಳ್ಳಬೇಕು. ಈಗ ಮಕ್ಕಳು ಬಹಳ ಬುದ್ಧಿವಂತರಾಗಬೇಕಾಗಿದೆ, ಚೆನ್ನಾಗಿ ಓದಬೇಕಾಗಿದೆ. ಯಾರು ಚೆನ್ನಾಗಿ ಓದುವರೋ ಮತ್ತು ಓದಿಸುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ತಂದೆಯು ಬಹಳ ಒಳ್ಳೆಯ ತಿಳುವಳಿಕೆಯನ್ನು ನೀಡುತ್ತಾರೆ – ದೇಹ ಸಹಿತವಾಗಿ ಎಲ್ಲವನ್ನೂ ಮರೆಯಿರಿ, ತಮ್ಮನ್ನು ಆತ್ಮನೆಂದು ತಿಳಿಯಿರಿ. ಈಗ ಈ ಹಳೆಯ ಪ್ರಪಂಚವನ್ನು ಮರೆಯಬೇಕಾಗಿದೆ, ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ನೆನಪಿನಿಂದಲೇ ತಂದೆಯ ಆಸ್ತಿಯನ್ನು ಪಡೆಯುತ್ತೀರಿ. ಇತ್ತೀಚೆಗೆ ಭಗವಂತನನ್ನು ನೆನಪು ಮಾಡಿ ಎಂದು ಮೇಲೆ ತೋರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಒಬ್ಬರೇ ತಂದೆಯಿದ್ದಾರಲ್ಲವೆ. ಉಳಿದೆಲ್ಲರೂ ಮಕ್ಕಳಾಗಿದ್ದೀರಿ. ಸರ್ವಶ್ರೇಷ್ಠನು ಶಿವ ತಂದೆಯಾಗಿದ್ದಾರೆ ನಂತರ ಬ್ರಹ್ಮಾ, ವಿಷ್ಣು, ಶಂಕರ ಅನಂತರ ಜಗದಂಬಾ.... ಭಕ್ತಿಮಾರ್ಗದ ವಿಸ್ತಾರವು ವೃಕ್ಷವಾಗಿದೆ, ಜ್ಞಾನವು ಬೀಜವಾಗಿದೆ. ಒಳ್ಳೆಯದು.
|
3 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
4 |
+
ಧಾರಣೆಗಾಗಿ ಮುಖ್ಯಸಾರ:
|
5 |
+
1. ಈ ಸಮಯದಲ್ಲಿ ಸ್ವಯಂನ್ನು ವನವಾಸದಲ್ಲಿದ್ದೇವೆಂದು ತಿಳಿದುಕೊಳ್ಳಬೇಕು. ಒಳ್ಳೆಯ ಉಡುಗೆ, ಆಭರಣಗಳನ್ನು ತೊಡುವ ಆಸಕ್ತಿಯನ್ನು ಬಿಡಬೇಕಾಗಿದೆ. ಸಾಧಾರಣವಾಗಿದ್ದರೂ ಚಲನೆಯನ್ನು ಬಹಳ ರಾಯಲ್ ಆಗಿ ಇಟ್ಟುಕೊಳ್ಳಬೇಕಾಗಿದೆ.
|
6 |
+
2. ಎಂದೂ ಮುಟ್ಟಿದರೆ ಮುನಿಯಾಗಬಾರದು. ಬಾಯಿಂದ ಕಟುವಾದ ಮಾತುಗಳನ್ನು ಮಾತನಾಡಬಾರದು. ಸಂಜೀವಿನಿ ಮೂಲಿಕೆಯಿಂದ ಮಾಯಾಜೀತರಾಗಬೇಕಾಗಿದೆ.
|
BKMurli/BKMurli/page_1008.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಗುಡ್ಮಾರ್ನಿಂಗ್. ತಂದೆಯು ಇಷ್ಟು ನಶೆಯಿಂದ ಮಕ್ಕಳಿಗೆ ಗುಡ್ಮಾರ್ನಿಂಗ್ ಹೇಳಿದರೆ ಆದರೆ ಮಕ್ಕಳು ಪ್ರತ್ಯುತ್ತರ ನೀಡಲಿಲ್ಲ. ಮಕ್ಕಳಂತೂ ಇನ್ನೂ ಮೇರು ಧ್ವನಿಯಿಂದ ಹೇಳಬೇಕಾಗಿದೆ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಗುಡ್ಮಾರ್ನಿಂಗ್ ಹೇಳುತ್ತಾರೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ, ನಾವು ಈ ಶರೀರದ ಮೂಲಕ ಆತ್ಮಿಕ ತಂದೆಗೆ ಗುಡ್ಮಾರ್ನಿಂಗ್ ಹೇಳುತ್ತೇವೆ ಅಂದಮೇಲೆ ಮಕ್ಕಳು ಅಷ್ಟು ಉಲ್ಲಾಸದಿಂದ ಹೇಳಬೇಕಲ್ಲವೆ - ವಾಹ್ ಬಾಬಾ! ಕೊನೆಗೂ ಆ ದಿನ ಇಂದು ಬಂದಿತು, ಯಾರನ್ನು ಇಡೀ ಪ್ರಪಂಚವು ಕರೆಯುತ್ತಿತ್ತೋ ಆ ತಂದೆಯು ಸನ್ಮುಖದಲ್ಲಿ ನಮ್ಮೊಂದಿಗೆ ಗುಡ್ಮಾರ್ನಿಂಗ್ ಹೇಳುತ್ತಾರೆ ನಂತರ ಯಾವಾಗ ಸತೋಪ್ರಧಾನರಾಗಿ ಬಿಡುತ್ತಾರೆಯೋ ಆಗ ಪತಿತ-ಪಾವನನನ್ನು ನೆನಪು ಮಾಡುವುದೇ ಇಲ್ಲ. ಈಗ ತಮೋಪ್ರಧಾನರಾಗಿರುವ ಕಾರಣ ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ ಎಂದು ನೆನಪು ಮಾಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಪತಿತ-ಪಾವನ ತಂದೆಯೇ ಬರಬೇಕಾಗುತ್ತದೆ. ಅವರೇ ಪಾರಲೌಕಿಕ ತಂದೆ ಪರಮಪಿತನಾಗಿದ್ದಾರೆ. ಕ್ರೈಸ್ಟ್ನ್ನು ಪರಮಪಿತನೆಂದು ಹೇಳುವುದಿಲ್ಲ. ಅವರನ್ನು ಎಲ್ಲರೂ ಭಗವಂತನ ಸಂದೇಶ ಪುತ್ರನೆಂದು ಹೇಳುತ್ತಾರೆ, ಎಲ್ಲರಿಗಿಂತ ಶ್ರೇಷ್ಠ ಒಬ್ಬ ತಂದೆಯೇ ಆಗಿದ್ದಾರೆ. ಇದನ್ನೂ ತಿಳಿದುಕೊಳ್ಳುತ್ತಾರೆ - ಆ ಭಗವಂತನೇ ಈ ಪೈಗಂಬರನನ್ನು ಕಳುಹಿಸುತ್ತಾರೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಇದಂತೂ ಅವಶ್ಯವಾಗಿದೆ - ಪತಿತರನ್ನು ಪಾವನ ಮಾಡಲು ಪರಮಾತ್ಮನೇ ಬರಬೇಕಾಗಿದೆ, ಅವರು ನಿರಾಕಾರನಾಗಿದ್ದಾರೆ. ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆ ಎಂಬುದನ್ನು ಹೇಳುತ್ತಾರೆ ಅಂದರೆ ಬ್ರಹ್ಮಾ ಮತ್ತು ವಿಷ್ಣುವಿನಲ್ಲಿ ಪರಸ್ಪರ ಸಂಬಂಧವೇನೆಂಬುದು ಯಾರಿಗೂ ತಿಳಿದಿಲ್ಲ. ನಿರಾಕಾರನಿಗೆ ಮುಖವು ಅವಶ್ಯವಾಗಿ ಬೇಕಾಗಿದೆ ಆದ್ದರಿಂದ ಇವರಿಗೆ ಭಗೀರಥನೆಂದು ಹೇಳಲಾಗುತ್ತದೆ. ಮುಖದ ಮೂಲಕವೇ ತಿಳಿಸುತ್ತಾರಲ್ಲವೆ. ಮನ್ಮನಾಭವ ಎಂದು ಆದೇಶ ನೀಡುತ್ತಾರೆ ಅಂದಮೇಲೆ ಮುಖದ ಮೂಲಕವೇ ಹೇಳುತ್ತಾರಲ್ಲವೆ. ಇದರಲ್ಲಿ ಪ್ರೇರಣೆಯ ಮಾತಿಲ್ಲ. ತಂದೆಯು ಬ್ರಹ್ಮಾರವರ ಮೂಲಕ ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಪ್ರತಿಯೊಂದರ ಸಾರವನ್ನು ತಿಳಿಸುತ್ತಾರಲ್ಲವೆ. ನೀವು ಮಾತಾಪಿತಾ ನಾನು ನಿಮ್ಮ ಬಾಲಕ ಎಂದು ಹಾಡುತ್ತಾರೆ. ಅವರೇ ಇವರಲ್ಲಿ ಪ್ರವೇಶ ಮಾಡಿ ನಿಮಗೆ ಜ್ಞಾನ ಕೊಡುತ್ತಾರೆ. ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಪ್ರಜಾಪಿತ ಬ್ರಹ್ಮನಿಗೂ ಪಿತನೆಂದು ಹೇಳುತ್ತಾರೆ ಅಂದಮೇಲೆ ಮಾತೆ ಎಲ್ಲಿ? ತಂದೆಯು ತಿಳಿಸುತ್ತಾರೆ - ಇವರು ಪ್ರಜಾಪಿತನೂ ಆಗಿದ್ದಾರೆ, ಮಾತೆಯೂ ಆಗಿದ್ದಾರೆ. ನಾನಂತೂ ಎಲ್ಲಾ ಆತ್ಮರ ತಂದೆಯಾಗಿದ್ದೇನೆ, ನನ್ನನ್ನು ಗಾಡ್ ಫಾದರ್ ಎಂದು ಹೇಳುತ್ತಾರೆ. ನೀವು ಮಾತಾಪಿತಾ ಎಂದು ಭಾರತ��ಾಸಿಗಳು ಕರೆಯುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ನಿರಾಕಾರನಿಗೆ ತಾಯಿಯೆಂದು ಹೇಳಲು ಹೇಗೆ ಸಾಧ್ಯ! ಆ ತಂದೆಯು ಇವರಲ್ಲಿ ಪ್ರವೇಶ ಮಾಡಿ ದತ್ತು ಮಾಡಿಕೊಳ್ಳುತ್ತಾರೆ ಆದ್ದರಿಂದ ಈ ಬ್ರಹ್ಮನು ತಾಯಿಯಾಗಿ ಬಿಡುತ್ತಾರೆ. ಇವರ ಮೂಲಕವೇ ದೈವೀ ರಚನೆಯನ್ನು ರಚಿಸುತ್ತಾರೆ. ಇವರೂ ಸಹ ದತ್ತು ತಾಯಿಯಾಗಿದ್ದಾರೆ. ಅವರು ತಂದೆಯಾಗಿದ್ದಾರೆ. ಈ ಬ್ರಹ್ಮನನ್ನು ನಂದೀಗಣ, ಎತ್ತಾಗಿಯೂ ತೋರಿಸುತ್ತಾರೆ ಆದರೆ ಹಸುವನ್ನೆಂದೂ ತೋರಿಸುವುದಿಲ್ಲ. ಇವು ಬಹಳ ಅದ್ಭುತ ಮಾತುಗಳಾಗಿವೆ. ಯಾರಾದರೂ ಹೊಸಬರು ಬಂದರೆ ಅವರಿಗೆ ವಿವರವಾಗಿ ತಿಳಿಸಬೇಕಾಗುತ್ತದೆ, ಇಲ್ಲದಿದ್ದರೆ ಈ ಮಾತುಗಳು ಅವರಿಗೆ ಅರ್ಥವಾಗುವುದಿಲ್ಲ. ಯಾರಾದರೂ ಸೂಕ್ಷ್ಮ ಬುದ್ಧಿಯವರಾಗಿದ್ದರೆ ಕೂಡಲೇ ಅರ್ಥ ಮಾಡಿಕೊಳ್ಳುತ್ತಾರೆ. ಮೂವತ್ತು ವರ್ಷಗಳ ಹಳಬರಿಗಿಂತಲೂ ಒಂದು ತಿಂಗಳಿನವರು ಮುಂದೆ ಹೊರಟು ಹೋಗುತ್ತಾರೆ ಆದ್ದರಿಂದ ಬಹಳ ತಡವಾಗಿ ಬಂದಿದ್ದೇವೆಂದು ತಿಳಿದುಕೊಳ್ಳಬಾರದು. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಪುರುಷಾರ್ಥ ಮಾಡಿರಿ, ಹೇಗೆ ಕಾಲೇಜಿಗೆ ಬರುವವರು ವಿದ್ಯಾಭ್ಯಾಸ ಮಾಡಿ ಮುಂದುವರೆಯುತ್ತಾರೆ. ಇಲ್ಲಿಯೂ ಹಾಗೆಯೇ. ಎಲ್ಲವೂ ವಿದ್ಯೆ ಮತ್ತು ನೆನಪಿನ ಮೇಲೆ ಆಧಾರಿತವಾಗಿದೆ. ಮಕ್ಕಳಿಗೇ ಗೊತ್ತಿದೆ - ಮೂಲವತನದಲ್ಲಿ ಆತ್ಮರು ಸತೋಪ್ರಧಾನರಾಗಿರುತ್ತದೆ, ತಮೋಪ್ರಧಾನ ಆತ್ಮರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ನಂತರ ಎಲ್ಲಾ ಪಾತ್ರಧಾರಿಗಳು ತಮ್ಮ-ತಮ್ಮ ಪಾತ್ರದನುಸಾರ ಸ್ಟೇಜಿನ ಮೇಲೆ ಬರುತ್ತಾರೆ. ನಾಟಕವೇ ಹೀಗೆ ಮಾಡಲ್ಪಟ್ಟಿದೆ, ಹದ್ದಿನ ನಾಟಕದಲ್ಲಂತೂ 50-60 ಮಂದಿ ಪಾತ್ರಧಾರಿಗಳಿರುತ್ತಾರೆ. ಇಲ್ಲಿ ಎಷ್ಟು ದೊಡ್ಡ ಬೇಹದ್ದಿನ ನಾಟಕವಾಗಿದೆ. ತಂದೆಯು ನಮ್ಮ ಬುದ್ಧಿಯ ಬೀಗವನ್ನು ತೆರೆದಿದ್ದಾರೆ ಆದ್ದರಿಂದ ಈಗ ತಿಳಿದುಕೊಳ್ಳುತ್ತೀರಿ, ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು, ಎಷ್ಟು ಸಾಹುಕಾರರಾಗಿದ್ದರು. ಅರ್ಧಕಲ್ಪ ವಿಶ್ವದ ಮಾಲೀಕರಾಗಿದ್ದರು, ಅದಕ್ಕೆ ಅದ್ವೈತ ರಾಜ್ಯವೆಂದು ಹೇಳಲಾಗುತ್ತದೆ. ಅಲ್ಲಿ ಒಂದೇ ಧರ್ಮವಿರುತ್ತದೆ, ಅದು ರಾಮ ರಾಜ್ಯ ಇದು ರಾವಣ ರಾಜ್ಯವಾಗಿದೆ. ರಾಮ ರಾಜ್ಯದಲ್ಲಿ ವಿಕಾರ ಇರುವುದಿಲ್ಲ. ವಾಸ್ತವದಲ್ಲಿ ಇದಕ್ಕೆ ಈಶ್ವರೀಯ ರಾಜ್ಯವೆಂದು ಹೇಳುತ್ತಾರೆ. ಈಶ್ವರನಿಗೆ ರಾಮನೆಂದು ಹೇಳಲಾಗುವುದಿಲ್ಲ. ಬಹಳ ಮಂದಿ ರಾಮ-ರಾಮ ಎಂದು ಮಾಲೆಯನ್ನು ಜಪಿಸುತ್ತಾರೆ ಆದರೆ ನೆನಪು ಭಗವಂತನನ್ನೇ ಮಾಡುತ್ತಾರೆ. ರಾಮ ನಾಮವು ಸರಿಯಾಗಿದೆ. ಏಕೆಂದರೆ ಈಶ್ವರನ ನಾಮ-ರೂಪವೇನು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಮನುಷ್ಯರು ಬಹಳ ಗೊಂದಲದಲ್ಲಿದ್ದಾರೆ, ರಾವಣ ಯಾರೆಂಬುದನ್ನು ತಿಳಿದುಕೊಂಡಿಲ್ಲ. ರಾವಣನನ್ನು ಸುಡಲು ಎಷ್ಟು ಖರ್ಚು ಮಾಡುತ್ತಾರೆ! ಹಿಂದಿನ ಕಾಲದಲ್ಲಿ ದಶಹರವನ್ನು ತೋರಿಸಲು ವಿದೇಶದವರನ್ನು ಕರೆಸುತ್ತಿದ್ದರು. ವಿಜ್ಞಾನವೂ ಸಹ ನೋಡಿ, ಈಗ ಎಷ್ಟು ಪ್ರಭಾವಶಾಲಿಯಾಗಿದೆ. ಈ ವಿ���್ಞಾನವು ಸುಖಕ್ಕಾಗಿಯೂ ಇದೆ, ದುಃಖಕ್ಕಾಗಿಯೂ ಇದೆ. ಸುಖವಂತೂ ಇದರಿಂದ ಅಲ್ಪಕಾಲದ್ದೇ ಸಿಗುತ್ತದೆ. ಇದರಿಂದಲೇ ಈ ಪ್ರಪಂಚದ ವಿನಾಶವೂ ಆಗುತ್ತದೆ ಅಂದಮೇಲೆ ಇದು ದುಃಖವಾಯಿತಲ್ಲವೆ. ನಿಮ್ಮದು ಶಾಂತಿಯ ಶಕ್ತಿಯಾಗಿದೆ, ಅವರದು ವೈಜ್ಞಾನಿಕ ಶಕ್ತಿಯಾಗಿದೆ. ನೀವು ಶಾಂತಿಯಿಂದ ತಮ್ಮ ಸ್ವಧರ್ಮದಲ್ಲಿರುತ್ತೀರಿ. ಇದರಿಂದ ಪವಿತ್ರರಾಗಿ ಬಿಡುತ್ತೀರಿ. ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ. ನೀವು ಯೋಗಬಲದಿಂದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ, ಇದರಲ್ಲಿ ಯುದ್ಧದ ಮಾತಿಲ್ಲ. ನೀವು ತಂದೆಯಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಬಾಹುಬಲದ ಮಾತೇ ಬೇರೆಯಾಗಿದೆ. ಕಲ್ಪ-ಕಲ್ಪವೂ ನೀವು ಮಕ್ಕಳೇ ಪತಿತರಿಂದ ಪಾವನರಾಗುತ್ತೀರಿ ಮತ್ತೆ ಪಾವನರಿಂದ ಪತಿತರಾಗುತ್ತೀರಿ. ಇದು ಸೋಲು-ಗೆಲುವಿನ ನಾಟಕವಾಗಿದೆ ಆದರೆ ಈ ಮಾತುಗಳು ಎಲ್ಲರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ, ಎಲ್ಲರೂ ಸತ್ಯಯುಗದಲ್ಲಿ ಬರುವುದಿಲ್ಲ ಬೇಹದ್ದಿನ ತಂದೆಯು ತನ್ನ ಮಕ್ಕಳಿಗೇ ತಿಳಿಸುತ್ತಾರೆ. ಅನ್ಯ ಧರ್ಮದವರು ಬರುವುದೇ ನಂತರದಲ್ಲಿ. ಇದು ಹಳೆಯ ಪ್ರಪಂಚವಾಗಿದೆ. ದೇವತಾ ಧರ್ಮದ ಬುಡವೇ ಸಡಿಲವಾಗಿ ಬಿಟ್ಟಿದೆ. ಬುಡವು ಇರಲೇ ಇಲ್ಲವೆಂದು ಹೇಳುವುದಿಲ್ಲ. ಇತ್ತು ಆದರೆ ಈಗ ಇಲ್ಲ, ಪ್ರಾಯಲೋಪವಾಗಿ ಬಿಟ್ಟಿದೆ. ಈಗ ಅನೇಕ ಧರ್ಮಗಳಿವೆ, ಇದಕ್ಕೆ ರಾವಣ ರಾಜ್ಯವೆಂದು ಹಾಡುತ್ತಾರೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದು ಹೇಳುತ್ತಾರೆ, ಈ ಚಿತ್ರದ ಅರ್ಥವೇನು ಎಂದು ಯಾರಿಗೊಂದಿಗಾದರೂ ಕೇಳಿದರೆ ಯಾರೂ ತಿಳಿಸುವುದಿಲ್ಲ. ಆತ್ಮವು ಒಂದೇ ಆಗಿದೆ, ಅವರನ್ನು ವಿಷ್ಣುವೆಂದು ಹೇಳುತ್ತಾರೆ, ವಿಷ್ಣು ಪುರಿಯನ್ನೂ ತೋರಿಸುತ್ತಾರೆ, ಇದು ಸಂಗಮ-ಬ್ರಹ್ಮನ ಪುರಿಯಾಗಿದೆ. ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಬೇಕು. ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ, ಈ ವಿರಾಟ ರೂಪದ ಚಿತ್ರವು ವಿಶೇಷ ಭಾರತವಾಸಿಗಳಿಗಾಗಿ ಇದೆ ಮತ್ತು ಭಾರತದಲ್ಲಿ ಅನೇಕ ಧರ್ಮದವರಿರುತ್ತಾರೆ ಆದ್ದರಿಂದ ಇದಕ್ಕೆ ವಿಭಿನ್ನ ಧರ್ಮಗಳ ವೃಕ್ಷವೆಂದೂ ಹೇಳಲಾಗುತ್ತದೆ. ಇದು ಮನುಷ್ಯ ಸೃಷ್ಟಿಯ ವೃಕ್ಷವಾಗಿದೆ ಆದರೆ ಇದರಲ್ಲಿ ವಿಭಿನ್ನ ಧರ್ಮಗಳಿವೆ. ಮೊದಲು ದೇವತಾ ಧರ್ಮ ನಂತರ ಇಸ್ಲಾಂ ಧರ್ಮ, ಇದು ಬ್ರಾಹ್ಮಣ ಧರ್ಮವಾಗಿದೆ. ಈ ಸಂಗಮವನ್ನು ಕುರಿತು ಯಾರಿಗೂ ಗೊತ್ತಿಲ್ಲ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಪುರುಷೋತ್ತಮ ಬ್ರಾಹ್ಮಣ ಧರ್ಮವಾಗಿದೆ ಅಂದರೆ ಸಮಾಜ ಸೇವೆ ಮಾಡುತ್ತೀರಿ. ನೀವು ಮಕ್ಕಳಿಗೆ ಆತ್ಮಿಕ ಸಮಾಜ ಸೇವಕರೆಂದು ಹೇಳಲಾಗುತ್ತದೆ. ಭಾರತದಲ್ಲಿ ಸಮಾಜ ಸೇವಕರು ಅನೇಕರಿದ್ದಾರೆ. ಅವರಿಗೂ ಸಹ ನಮ್ರತಾ ಭಾವದಿಂದ ಸೇವೆ ಮಾಡಿರಿ ಎಂದು ಕಲಿಸಿ ಕೊಡುತ್ತಾರೆ. ಯಾರು ಪಕ್ಕಾ ಕಾಂಗ್ರೆಸ್ಸಿನವರಾಗಿದ್ದರೋ ಅವರು ಕಸವನ್ನೂ ಗುಡಿಸುತ್ತಿದ್ದರು. ಕೂಲಿ ಕೆಲಸವನ್ನೂ ಮಾಡುತ್ತಿದ್ದರು. ಮೊದಲು ಯಾರು ಪಕ್ಕಾ ಆಗಿದ್ದರೋ ಅವರು ಚೀನಿಯರ ಪಾತ್ರೆಗ���ಲ್ಲಿ ಊಟವನ್ನೂ ಮಾಡುತ್ತಿರಲಿಲ್ಲ. ಯಾವುದು ಕಳೆದುಹೋಯಿತೋ ಅದು ಡ್ರಾಮಾ ಮತ್ತೆ ಅದೇ ಪುನರಾವರ್ತನೆಯಾಗುವುದು. ಈ ಮಾತುಗಳನ್ನು ಅರ್ಥವಾಗದಿದ್ದರೆ ತಬ್ಬಿಬ್ಬಾಗುತ್ತಾರೆ ಆದ್ದರಿಂದ ಡ್ರಾಮಾದ ರಹಸ್ಯವನ್ನು ಮೊದಲೇ ಯಾರಿಗೂ ತಿಳಿಸಬಾರದು. ಒಂದುವೇಳೆ ಡ್ರಾಮಾದಲ್ಲಿ ನಿಗಧಿಯಾಗಿದ್ದರೆ ನಮಗೆ ತಾನಾಗಿಯೇ ರಾಜ್ಯ ಸಿಗುವುದು ಮತ್ತು ತಾನಾಗಿಯೇ ಪುರುಷಾರ್ಥ ಮಾಡುತ್ತೇವೆ ಎಂದು ಹೇಳುತ್ತಾರೆ. ಹೀಗೆ ಉಲ್ಟಾ ಆಗಿ ಬಿಡುತ್ತಾರೆ, ಜ್ಞಾನದ ರಹಸ್ಯಗಳನ್ನು ಪೂರ್ಣ ತಿಳಿದುಕೊಳ್ಳುವುದಿಲ್ಲ. ಅರೆ! ಪುರುಷಾರ್ಥವಿಲ್ಲದೆ ನೀರೂ ಸಿಗುವುದಿಲ್ಲ. ನೀರು ಬಂದು ತಾನಾಗಿಯೇ ಬಂದು ಬಾಯಲ್ಲಿ ಬೀಳುತ್ತದೆಯೇ?
|
2 |
+
ತಂದೆಯು ಪತಿತರನ್ನು ಪಾವನ ಮಾಡುವುದಕ್ಕಾಗಿ ಬರುತ್ತಾರೆ. ಅವರು ಬಂದು ಸಹಜ ಮಾರ್ಗವನ್ನು ತಿಳಿಸುತ್ತಾರೆ - ಆತ್ಮವನ್ನು ಪಾವನ ಮಾಡಿಕೊಳ್ಳಲು ನನ್ನನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯೇ ಪಾವನರನ್ನಾಗಿ ಮಾಡಲು ಶ್ರೀಮತ ಕೊಡುತ್ತಾರೆ, ನನ್ನನ್ನು ನೆನಪು ಮಾಡಿರಿ. ಆದರೆ ಅವರು ನಿರಾಕಾರನಾಗಿರುವುದರಿಂದ ಅವಶ್ಯವಾಗಿ ಸಾಕಾರದಲ್ಲಿ ಬಂದು ಶ್ರೀಮತ ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ಈ ನನ್ನ ಶರೀರವು ನಿಶ್ಚಿತವಾಗಿದೆ, ಇದು ಬದಲಾಗಲು ಸಾಧ್ಯವಿಲ್ಲ. ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ಸ್ವರ್ಗದ ಸ್ಥಾಪನೆ ಮಾಡಿಸುತ್ತಾನೆಂದು ಗಾಯನವಿದೆ. ಇದು ಭಗವಾನುವಾಚ ಅಲ್ಲವೆ. ಅಂದಮೇಲೆ ಮಾತನಾಡುವುದಕ್ಕಾಗಿ ಮುಖ ಬೇಕು. ಪ್ರೇರಣೆಯಿಂದ ಓದಿಸಲಾಗುವುದಿಲ್ಲ. ತಂದೆಯು ಬಂದು ಇವರ ಮೂಲಕ ಸೂಚನೆ ನೀಡುತ್ತಾರೆ. ಈ ಚಿತ್ರ ಮೊದಲಾದುವುಗಳನ್ನು ಬ್ರಹ್ಮಾ ಮಾಡಿಸಿಲ್ಲ, ಇವರೂ ಸಹ ಪುರುಷಾರ್ಥಿಯಲ್ಲವೆ. ಇವರು ಜ್ಞಾನಪೂರ್ಣರಲ್ಲ, ಇವರೂ ಭಕ್ತಿಮಾರ್ಗದಲ್ಲಿದ್ದರು, ಭಕ್ತರ ಉದ್ಧಾರವನ್ನು ಭಗವಂತನೇ ಮಾಡಬೇಕಾಗಿದೆ. ಅವರು ಬಂದು ಭಕ್ತಿಯ ಫಲವನ್ನು ಕೊಡುತ್ತಾರೆ. ನೀವು ಮಕ್ಕಳನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ತಂದೆಯು ಇವರಲ್ಲಿ ಪ್ರವೇಶ ಮಾಡಿ ರಾಜಯೋಗವನ್ನು ಕಲಿಸುತ್ತಾರೆ. ಇವರ ಹೆಸರಾಗಿದೆ-ಶಿವಬಾಬಾ. ಅವರು ತಿಳಿಸುತ್ತಾರೆ- ನನ್ನ ಜನ್ಮವು ದಿವ್ಯ ಜನ್ಮ ಅಲೌಕಿಕವಾಗಿದೆ. ನಾನು ಬರುವ ಪಾತ್ರವು ಒಂದೇ ಬಾರಿ ಈ ಸಂಗಮದಲ್ಲಿದೆ. ನೀವಾತ್ಮರು ಕರೆಯುವುದರಿಂದ ಬರುತ್ತೇನೆಂದಲ್ಲ. ಯಾವಾಗ ನನ್ನ ಬರುವಿಕೆಯ ಸಮಯವಾಗುತ್ತದೆಯೋ ಆಗ ಒಂದು ಕ್ಷಣವು ವ್ಯತ್ಯಾಸವಾಗುವುದಿಲ್ಲ. ನಿಖರವಾದ ಸಮಯದಲ್ಲಿ ಬಂದು ಬಿಡುತ್ತೇನೆ. ನಾನು ನಿಮ್ಮ ಕರೆಯನ್ನು ಕೇಳಿಸಿಕೊಳ್ಳಲು ನನಗೆ ಕರ್ಮೇಂದ್ರಿಯಗಳಾದರೂ ಎಲ್ಲಿದೆ? ಈ ನಾಟಕವು ಮಾಡಿ-ಮಾಡಲ್ಪಟ್ಟಿದೆ, ಸಮಯವು ಬಂದಾಗ ನಾನು ಬಂದು ಪತಿತರನ್ನು ಪಾವನ ಮಾಡುತ್ತೇನೆ. ನಮ್ಮ ಅರಚುವಿಕೆಯನ್ನು ಭಗವಂತನು ಕೇಳಿಸಿಕೊಳ್ಳುತ್ತಾರೆ ಎಂದಲ್ಲ, ಬಹಳ ಮಂದಿ ಮಕ್ಕಳು ಬಾಬಾ, ತಾವಂತೂ ಸರ್ವಜ್ಞನಾಗಿದ್ದೀರಿ ಅಂದಮೇಲೆ ತಿಳಿಸಿ, ನಾವು ಪರೀಕ್��ೆಯಲ್ಲಿ ತೇರ್ಗಡೆಯಾಗುತ್ತೇವೆಯೇ? ಈ ಕೆಲಸವು ಆಗುತ್ತದೆಯೇ? ಎಂದು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಅರೆ! ನಾನಂತೂ ಪತಿತರನ್ನು ಪಾವನ ಮಾಡುವ ಮಾರ್ಗವನ್ನು ತಿಳಿಸಲು ಬರುತ್ತೇನೆ. ನನ್ನ ಪಾತ್ರವು ಏನಿದೆಯೋ ಅದನ್ನೇ ಅಭಿನಯಿಸುತ್ತೇನೆ. ಏನನ್ನು ತಿಳಿಸಬಾರದೋ ಅದನ್ನು ತಿಳಿಸುವುದಿಲ್ಲ. ನಾನು ಈ ಮಾತುಗಳನ್ನು ತಿಳಿಸುವುದಕ್ಕಾಗಿ ಬರುತ್ತೇನೆಯೇ? ನಾನೂ ಕೂಡ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆ. ಪ್ರತಿಯೊಬ್ಬರ ಪಾತ್ರವು ಡ್ರಾಮಾದಲ್ಲಿ ನಿಗಧಿತವಾಗಿದೆ. ಯಾರು ನಿಶ್ಚಯ ಬುದ್ಧಿಯವರಲ್ಲವೋ ಅವರು ಸ್ವರ್ಗದಲ್ಲಿ ಹೋಗಲು ಯೋಗ್ಯರಲ್ಲ, ಅಂತಹವರು ಇದೇ ರೀತಿ ಮಾತನಾಡುತ್ತಾರೆ. ಬಾಕಿ ಯಾರು ಸೂರ್ಯವಂಶಿ, ಚಂದ್ರವಂಶಿ ಮನೆತನದ ಆತ್ಮರಿದ್ದಾರೆಯೋ ಅವರು ಅವಶ್ಯವಾಗಿ ಬಂದು ತಂದೆಯಿಂದ ಕೇಳುವರು ಮತ್ತು ಆಸ್ತಿಯನ್ನು ತೆಗೆದುಕೊಳ್ಳುವರು. ಯಾರು ಹೆಚ್ಚು ಪುರುಷಾರ್ಥ ಮಾಡುವುದಿಲ್ಲವೋ ಅವರೂ ಸಹ ಸ್ವರ್ಗದಲ್ಲಂತೂ ಬರುತ್ತಾರೆ ಆದರೆ ಶಿಕ್ಷೆಯನ್ನನುಭವಿಸಿ ಯಾವುದಾದರೂ ಪದವಿ ಪಡೆಯುತ್ತಾರೆ. ಬಾಬಾ, ನಾವು ಸೂರ್ಯವಂಶಿಯಾಗುತ್ತೇವೆ, ನಾರಾಯಣನಾಗುತ್ತೇವೆ ಎಂದು ಬಹಳ ಮಂದಿ ಹೇಳುತ್ತಾರೆ ಆದರೆ ಮಕ್ಕಳು ಅಷ್ಟೇ ಪುರುಷಾರ್ಥ ಮಾಡಬೇಕಲ್ಲವೆ. ತಂದೆಯನ್ನು ಅನುಸರಿಸುವ ಶಕ್ತಿ ಬೇಕು, ಫಾಲೋ ಫಾದರ್ ಎಂದು ಹೇಳುತ್ತಾರೆ ಅಂದಮೇಲೆ ಇವರನ್ನು ನೋಡಿ ಹೇಗೆ ಸಮರ್ಪಿತನಾದರು! ಎಲ್ಲವನ್ನೂ ಈಶ್ವರಾರ್ಥವಾಗಿ ಅರ್ಪಣೆ ಮಾಡಿ ಬಿಟ್ಟರು. ಈಶ್ವರಾರ್ಥವಾಗಿ ಎಲ್ಲವನ್ನೂ ಕೊಟ್ಟು ತನ್ನ ಮಮತ್ವವನ್ನು ಕಳೆಯಬೇಕು. ಮೊದಲು ಭಟ್ಟಿಯಿಂದ ಅನೇಕರು ತಯಾರಾದರು. ಈಗ ಅಂತಹ ಭಟ್ಟಿಯಾಗಲು ಸಾಧ್ಯವೇ! ಈ ಕಾರ್ಯದಲ್ಲಿ ಮಾತೆಯರು ಕನ್ಯೆಯರು ಮುಂದೆ ಹೋಗುತ್ತಾರೆ ಅದರಲ್ಲಿಯೂ ಕನ್ಯೆಯರು ಮುಂದೆ ಹೋಗುತ್ತಾರೆ. ಇಲ್ಲಿ ದೇಹ ಮತ್ತು ದೇಹದ ಸಂಬಂಧಗಳನ್ನು ಮರೆಯಬೇಕಾಗಿದೆ ಏಕೆಂದರೆ ಈಗ ಮನೆಗೆ ಹೋಗಬೇಕಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ. ಈಗ ನಾಟಕವು ಪೂರ್ಣವಾಗುತ್ತದೆ, ಇನ್ನು ಸ್ವಲ್ಪವೇ ಸಮಯವಿದೆ, ಹೇಗೆ ಪ್ರಿಯತಮ-ಪ್ರಿಯತಮೆಯರಿರುತ್ತಾರೆ, ಈ ತಂದೆಯು ಪ್ರಿಯತಮನಾಗಿದ್ದಾರೆ, ಪ್ರಿಯತಮೆಯಲ್ಲ. ತಂದೆಯು ತಿಳಿಸುತ್ತಾರೆ - ನೀವು ಪತಿತರಾಗಿದ್ದೀರಿ ಅಂದಮೇಲೆ ನೀವೇ ನೆನಪು ಮಾಡಬೇಕಾಗಿದೆ. ನಾನು ನಿಮ್ಮನ್ನು ನೆನಪು ಮಾಡಲು ನಾನೇನು ಪತಿತನಾಗಿದ್ದೇನೆಯೇ! ನಾನಂತೂ ಯುಕ್ತಿಯನ್ನು ತಿಳಿಸುತ್ತೇನೆ, ಅದರಂತೆ ನಡೆಯಿರಿ. ಈ ಪ್ರಪಂಚದಿಂದ ಮಮತ್ವವನ್ನು ಕಳೆಯುತ್ತಾ ಹೋಗಿ. ಈಗ ಮರಳಿ ಮನೆಗೆ ಹೋಗಬೇಕಾಗಿದೆ. ಇದು ಬುದ್ಧಿಯಲ್ಲಿ ಜ್ಞಾನವಿದೆ. ಈ ಶರೀರವು ಹಳೆಯದಾಗಿದೆ, ಸತ್ಯಯುಗದಲ್ಲಿ ನಿರೋಗಿ ಶರೀರವು ಸಿಗುವುದು. ನಂತರ ನಾವು ಸುಂದರರಾಗಿ ಬಿಡುತ್ತೇವೆ. ಪತಿತರಿಂದ ಹೇಗೆ ಸುಂದರರಾಗುತ್ತೇವೆ ಎಂಬುದನ್ನು ನೀವೇ ತಿಳಿದುಕೊಂಡಿದ್ದೀರಿ. ರಾಮನನ್ನು ಕಪ್ಪಾಗಿ ತೋರಿಸಿದ್ದಾರೆ. ಶಿವಲಿಂಗವನ್ನೂ ಕಪ್ಪಾಗಿ ತೋರಿಸಿದ್ದಾರೆ. ಶಿವನಂತೂ ಎಂದೂ ಕಪ್ಪಾಗುವುದಿಲ್ಲ, ಅವರು ಸದಾ ಸುಂದರನಾಗಿದ್ದಾರೆ ಅಂದಮೇಲೆ ಅವರನ್ನು ಬೆಳ್ಳಗೆ ತೋರಿಸಬೇಕು.
|
3 |
+
ತಂದೆಯು ತಿಳಿಸುತ್ತಾರೆ - ಚಿತ್ರಗಳನ್ನು ನೋಡುತ್ತಿದ್ದಂತೆಯೇ ಆಕರ್ಷಣೆ ಮಾಡುವಂತಿರಲಿ. ಅಂತಹ ಚಿತ್ರಗಳನ್ನು ಮಾಡಿಸಿರಿ. ಪತ್ರಿಕೆಗಳಲ್ಲಿ ಎಷ್ಟೊಂದು ಚಿತ್ರಗಳು ಮುದ್ರಿತವಾಗುತ್ತವೆ, ನಿಮ್ಮ ಚಿತ್ರಗಳು ಅದರಲ್ಲಿ ಬರುವುದಿಲ್ಲ. ತಂದೆಯು ನೀವು ಮಕ್ಕಳನ್ನು ಬುದ್ಧಿಹೀನರಿಂದ ಬುದ್ಧಿವಂತರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನು ಬುದ್ಧಿವಂತರನ್ನಾಗಿ ಯಾರು ಮಾಡಿದರು? ತಂದೆಯು ಯೋಗದ ಮೂಲಕ ಈ ರೀತಿ ಮಾಡಿದರು. ನೀವು ಮಕ್ಕಳಿಗೆ ಈ ಜ್ಞಾನವು ಸಿಕ್ಕಿದೆ ಅಂದಮೇಲೆ ಅದನ್ನು ಎಲ್ಲರಿಗೂ ತಿಳಿಸಬೇಕು. ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಸರ್ಕಾರವು ಪ್ರಕಟಣೆಗಾಗಿ ಎಷ್ಟೊಂದು ಖರ್ಚು ಮಾಡುತ್ತದೆ! ಇಲ್ಲಿ ಯಾವುದು ನೀವು ಮಕ್ಕಳದೋ ಅದೇ ತಂದೆಯದು, ಯಾವುದು ತಂದೆಯದೋ ಅದೇ ನೀವು ಮಕ್ಕಳ ಕರ್ತವ್ಯವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ನಿಶ್ಕಾಮ ಸೇವಾಧಾರಿಯಾಗಿದ್ದೇನೆ, ದಾತನಾಗಿದ್ದೇನೆ ಅಂದಮೇಲೆ ನಾವು ಶಿವ ತಂದೆಗೆ ಕೊಡುತ್ತೇವೆ ಎಂಬ ಸಂಕಲ್ಪವನ್ನು ಮಾಡಬಾರದು. ಶಿವ ತಂದೆಯು 21 ಜನ್ಮಗಳಿಗಾಗಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಈ ತಂದೆಯು ತೆಗೆದುಕೊಳ್ಳುವುದಿಲ್ಲ ಕೊಡುತ್ತಾರೆ. ತಂದೆಯಂತೂ ದಾತನಾಗಿದ್ದಾರೆ. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ಹೇಗೆ ಬ್ರಹ್ಮಾ ತಂದೆಯು ಸಮರ್ಪಿತರಾದರೋ ಹಾಗೆಯೇ ಫಾಲೋ ಫಾದರ್ ಮಾಡಬೇಕಾಗಿದೆ. ತಮ್ಮದೆಲ್ಲವನ್ನೂ ಈಶ್ವರಾರ್ಥವಾಗಿ ಅರ್ಪಣೆ ಮಾಡಿ ಟ್ರಸ್ಟಿಯಾಗಿ ಮಮತ್ವವನ್ನು ಕಳೆಯಬೇಕಾಗಿದೆ.
|
7 |
+
2. ಲಾಸ್ಟ್ ನಲ್ಲಿ ಬಂದರೂ ಫಾಸ್ಟ್ ಹೋಗಲು ನೆನಪು ಮತ್ತು ವಿದ್ಯೆಯಲ್ಲಿ ಸಂಪೂರ್ಣ ಗಮನ ಕೊಡಬೇಕಾಗಿದೆ.
|
BKMurli/BKMurli/page_1009.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಈ ಗೀತೆಯು ನಿಮಗಾಗಿ ವಜ್ರ ಸಮಾನವಾಗಿದೆ ಮತ್ತು ಯಾರು ರಚಿಸಿದ್ದಾರೆಯೋ ಅವರಿಗಾಗಿ ಕವಡೆಯಂತಾಗಿದೆ ಏಕೆಂದರೆ ಅವರು ಕೇವಲ ಗಿಳಿ ಪಾಠದಂತೆ ಹಾಡುತ್ತಾರೆ, ಅರ್ಥವೇನೂ ತಿಳಿದುಕೊಂಡಿಲ್ಲ, ನೀವು ಅರ್ಥವನ್ನು ತಿಳಿದುಕೊಂಡಿದ್ದೀರಿ. ಈಗ ಆ ದಿನವು ಬಂದಿದೆ ಯಾವಾಗ ಕಲಿಯುಗವು ಬದಲಾಗಿ ಸತ್ಯಯುಗ, ಪತಿತ ಪ್ರಪಂಚವು ಬದಲಾಗಿ ಪಾವನ ಪ್ರಪಂಚವಾಗುವುದಿದೆ. ಹೇ ಪತಿತ-ಪಾವನ ಬನ್ನಿ ಎಂದೇ ಕರೆಯುತ್ತಾರೆ, ಪಾವನ ಪ್ರಪಂಚದಲ್ಲಿ ಯಾರೂ ಕರೆಯುವುದಿಲ್ಲ. ನೀವು ಈ ಗೀತೆಯ ಅರ್ಥವನ್ನು ಚೆನ್ನಾಗಿ ಅರಿತುಕೊಂಡಿದ್ದೀರಿ, ಅವರು ಅರಿತುಕೊಂಡಿಲ್ಲ. ಈಗ ನಿಮಗೆ ತಿಳಿದಿದೆ, ಭಕ್ತಿಮಾರ್ಗವು ಅರ್ಧಕಲ್ಪ ನಡೆಯುತ್ತದೆ, ಯಾವಾಗ ರಾವಣ ರಾಜ್ಯವು ಆರಂಭವಾಗುತ್ತದೆಯೋ ಆಗಿನಿಂದ ಭಕ್ತಿಯೂ ಆರಂಭವಾಗುತ್ತದೆ, ಏಣಿಯನ್ನು ಕೆಳಗಿಳಿಯಬೇಕಾಗುತ್ತದೆ. ಈ ರಹಸ್ಯವು ಮಕ್ಕಳ ಬುದ್ಧಿಯಲ್ಲಿ ಇದೆ. ನೀವೀಗ ತಿಳಿದುಕೊಂಡಿದ್ದೀರಿ, ಭಾರತವಾಸಿಗಳು ಯಾರು 16 ಕಲಾ ಸಂಪೂರ್ಣರಾಗಿದ್ದರೋ ಅವರೇ 14 ಕಲೆಯವರಾಗಿದ್ದಾರೆ, ಅವಶ್ಯವಾಗಿ ಯಾರು 14 ಕಲೆಗಳನ್ನು ಹೊಂದಿದ್ದರೋ ಅವರೇ 14 ಕಲೆಯವರಾಗುತ್ತಾರಲ್ಲವೆ. ಇಲ್ಲದಿದ್ದರೆ ಮತ್ತ್ಯಾರು ಆಗುತ್ತಾರೆ! ನೀವೇ ಆಗಿದ್ದಿರಿ, ಈಗ ಪುನಃ ಆಗುತ್ತಿದ್ದೀರಿ. ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಪ್ರಪಂಚದ ಕಲೆಯು ಕಳೆಯುತ್ತಾ ಹೋಗುತ್ತದೆ. ಮನೆಯು ಯಾವುದು ಮೊದಲು ಸತೋಪ್ರಧಾನವಾಗಿರುತ್ತದೆಯೋ ಅದು ಅವಶ್ಯವಾಗಿ ತಮೋಪ್ರಧಾನವಾಗಲೇಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ - ಸತ್ಯಯುಗಕ್ಕೆ ಸತೋಪ್ರಧಾನ ಪ್ರಪಂಚ, ಕಲಿಯುಗಕ್ಕೆ ತಮೋಪ್ರಧಾನ ಪ್ರಪಂಚವೆಂದು ಹೇಳಲಾಗುತ್ತದೆ. ಸತೋಪ್ರಧಾನರೇ ತಮೋಪ್ರಧಾನರಾಗಿದ್ದಾರೆ ಏಕೆಂದರೆ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರಪಂಚವು ಹೊಸದರಿಂದ ಅವಶ್ಯವಾಗಿ ಹಳೆಯದಾಗುತ್ತದೆ ಆದ್ದರಿಂದ ಹೊಸ ಪ್ರಪಂಚ, ಹೊಸ ರಾಜ್ಯವು ಬೇಕೆಂದು ಬಯಸುತ್ತಾರೆ. ಹೊಸ ಪ್ರಪಂಚದಲ್ಲಿ ಯಾರ ರಾಜ್ಯವಿತ್ತು ಎಂಬುದನ್ನು ಯಾರಿಗೂ ತಿಳಿದಿಲ್ಲ. ನಿಮಗೆ ಈ ಸತ್ಸಂಗದಿಂದ ಎಲ್ಲವೂ ತಿಳಿದು ಬರುತ್ತದೆ. ಈ ಸಮಯದಲ್ಲಿ ಇದೇ ಸತ್ಯ ಸತ್ಯವಾದ ಸತ್ಸಂಗವಾಗಿದೆ ಯಾವುದು ಇದು ಮತ್ತೆ ಭಕ್ತಿಮಾರ್ಗದಲ್ಲಿ ನಡೆಯುತ್ತದೆ ಆದ್ದರಿಂದ ಇದು ಪರಂಪರೆಯಿಂದ ನಡೆದು ಬಂದಿದೆ ಎಂದು ಹೇಳುತ್ತಾರಲ್ಲವೆ ಆದರೆ ನೀವು ತಿಳಿದುಕೊಂಡಿದ್ದೀರಿ - ಸತ್ಯ-ಸತ್ಯವಾದ ಸತ್ಸಂಗವು ನಿಮ್ಮದಾಗಿದೆ. ಉಳಿದಂತೆ ಏನೆಲ್ಲವೂ ಇವೆಯೋ ಅವು ಅಸತ್ಯ ಸಂಗಗಳಾಗಿವೆ, ಅವು ವಾಸ್ತವದಲ್ಲಿ ಸತ್ಸಂಗ ಅಲ್ಲವೇ ಅಲ್ಲ ಏಕೆಂದರೆ ಅವುಗಳಿಂದ ಮನುಷ್ಯರು ಕೆಳಗೇ ಇಳಿಯುತ್ತಾರೆ. ಈ ಸತ್ಸಂಗ ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಒಬ್ಬ ಸತ್ಯ ತಂದೆಯ ಜೊತೆ ಸಂಗವಾಗುತ್ತದೆ. ಬಾಕಿ ಮತ್ತ್ಯಾರೂ ಸತ್ಯವನ್ನು ಹೇಳುವುದೇ ಇಲ್ಲ, ಇದು ಅಸತ್ಯ ಖಂಡವಾಗಿದೆ. ಸುಳ್ಳು ಮಾಯೆ-ಸುಳ್ಳು ಕಾಯ.... ಮೊಟ್ಟ ಮೊದಲು ಈಶ್ವರ ಸರ್ವವ್ಯಾಪಿಯೆಂದು ಈಶ್ವರನ ಪ್ರತಿಯೇ ಸುಳ್ಳು ಹೇಳುತ್ತಾರೆ. ಪರಮಾತ್ಮನನ್ನೇ ಅಸತ್ಯ ಮಾಡಿ ಬಿಟ್ಟಿದ್ದಾರೆ ಆದ್ದರಿಂದ ನೀವು ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ, ಅವರಂತೂ ಉಲ್ಟಾ ಪರಿಚಯ ಕೊಡುತ್ತಾರೆ. ಅಸತ್ಯವೇ ಅಸತ್ಯ, ಸತ್ಯದ ಅಂಶವೂ ಇಲ್ಲ. ಇವು ಜ್ಞಾನದ ಮಾತುಗಳಾಗಿವೆ. ನೀರನ್ನು ನೀರು ಎಂದು ಹೇಳುವುದು ಅಸತ್ಯವೆಂದಲ್ಲ, ಇದು ಜ್ಞಾನ ಮತ್ತು ಅಜ್ಞಾನದ ಮಾತಾಗಿದೆ. ಜ್ಞಾನವನ್ನು ಒಬ್ಬ ಜ್ಞಾನ ಸಾಗರ ತಂದೆಯೇ ಕೊಡುತ್ತಾರೆ ಅದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಅಸತ್ಯವಿರುವುದಿಲ್ಲ, ರಾವಣನು ಬಂದು ಸತ್ಯ ಖಂಡವನ್ನು ಅಸತ್ಯ ಖಂಡವನ್ನಾಗಿ ಮಾಡಿ ಬಿಡುತ್ತಾನೆ. ತಂದೆಯು ತಿಳಿಸುತ್ತಾರೆ - ನಾನು ಸರ್ವವ್ಯಾಪಿಯಲ್ಲ, ಸತ್ಯವನ್ನು ನಾನೇ ತಿಳಿಸುತ್ತೇನೆ. ನಾನು ಬಂದು ಸನ್ಮಾರ್ಗ ಅರ್ಥಾತ್ ಸತ್ಯ ಖಂಡದಲ್ಲಿ ಹೋಗುವ ಮಾರ್ಗವನ್ನು ತಿಳಿಸುತ್ತೇನೆ. ನಾನಂತೂ ನಿಮ್ಮ ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದೇನೆ. ನಿಮಗೆ ಆಸ್ತಿಯನ್ನು ಕೊಡುವುದಕ್ಕಾಗಿಯೇ ಬರುತ್ತೇನೆ. ನೀವು ಮಕ್ಕಳಿಗಾಗಿ ಉಡುಗೊರೆಯನ್ನು ತರುತ್ತೇನೆ, ನನ್ನ ಹೆಸರೇ ಆಗಿದೆ - ಸ್ವರ್ಗದ ರಚಯಿತ. ಸ್ವರ್ಗವನ್ನು ಅಂಗೈಯಲ್ಲಿ ತೆಗೆದುಕೊಂಡು ಬರುತ್ತೇನೆ, ಸ್ವರ್ಗದಲ್ಲಿ ಸ್ವರ್ಗವಾಸಿ ದೇವತೆಗಳ ರಾಜ್ಯವಿರುತ್ತದೆ, ಈಗ ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತಿದ್ದಾರೆ. ಸತ್ಯವಾದವರು ಒಬ್ಬ ತಂದೆಯೇ ಆಗಿದ್ದಾರೆ, ಆದ್ದರಿಂದ ತಂದೆಯು ಹೇಳ್ತುತಾರೆ - ಹಿಯರ್ ನೋ ಈವಿಲ್, ಸೀ ನೋ ಈವಿಲ್..... ಇವೆಲ್ಲರೂ ಸತ್ತು ಹೋಗಿದ್ದಾರೆ, ಇದು ಸ್ಮಶಾನವಾಗಿದೆ, ಇದನ್ನು ನೋಡಿಯೂ ನೋಡದಂತಿರಬೇಕಾಗಿದೆ. ನೀವು ಹೊಸ ಪ್ರಪಂಚಕ್ಕಾಗಿ ಯೋಗ್ಯರಾಗಬೇಕಾಗಿದೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಅಂದರೆ ಸ್ವರ್ಗಕ್ಕೆ ಯೋಗ್ಯರಿಲ್ಲ. ತಂದೆಯು ತಿಳಿಸುತ್ತಾರೆ - ನಿಮ್ಮನ್ನು ರಾವಣನು ಅಯೋಗ್ಯರನ್ನಾಗಿ ಮಾಡಿದ್ದಾನೆ, ಅರ್ಧಕಲ್ಪಕ್ಕಾಗಿ ತಂದೆಯು ಬಂದು ಮತ್ತೆ ಯೋಗ್ಯರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರ ಶ್ರೀಮತದಂತೆ ನಡೆಯಬೇಕಾಗಿದೆ ನಂತರ ಎಲ್ಲಾ ಜವಾಬ್ದಾರಿಯು ಅವರ ಮೇಲಿರುವುದು. ತಂದೆಯು ಇಡೀ ಪ್ರಪಂಚವನ್ನು ಪಾವನವನ್ನಾಗಿ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ, ಅವರು ಯಾವ ಮತವನ್ನು ಕೊಡುವರೋ ಅದು ಕಲ್ಪದ ಮೊದಲಿನದನ್ನೇ ಕೊಡುತ್ತಾರೆ. ಇದರಲ್ಲಿ ತಬ್ಬಿಬ್ಬಾಗಬಾರದು. ಏನು ಕಳೆಯಿತೋ ಅದು ಡ್ರಾಮಾನುಸಾರ ಆಯಿತೆಂದು ಹೇಳಲಾಗುತ್ತದೆ. ಮಾತೇ ಸಮಾಪ್ತಿಯಾಯಿತು. ಶ್ರೀಮತವು ಹೀಗೆ ಮಾಡಿರಿ ಎಂದು ಹೇಳುತ್ತದೆ ಅಂದಮೇಲೆ ಮಾಡಬೇಕಲ್ಲವೆ. ಶ್ರೀಮತದಂತೆ ನಡೆದಾಗ ಅದಕ್ಕೆ ತಂದೆಯು ಜವಾಬ್ದಾರನಾಗಿದ್ದಾರೆ ಏಕೆಂದರೆ ಅವರೇ ಕರ್ಮಗಳಿಗೆ ಶಿಕ್ಷೆಯನ್ನು ಕೊಡಿಸುತ್ತಾರೆ ಅಂದಮೇಲೆ ಅವರ ಮಾತನ್ನು ಒಪ್ಪಿಕೊಳ್ಳಬೇಕು. ಮಧುರಮಕ್ಕಳೇ, ಗೃಹಸ್ಥ ���್ಯವಹಾರದಲ್ಲಿರುತ್ತಾ, ಈ ಅಂತಿಮ ಜನ್ಮ ಪವಿತ್ರರಾಗಿರಿ. ಈ ಮೃತ್ಯುಲೋಕದಲ್ಲಿ ನಿಮ್ಮದು ಅಂತಿಮ ಜನ್ಮವಾಗಿದೆ ಎಂದು ಹೇಳುತ್ತಾರೆ. ಈ ಮಾತನ್ನು ಅರಿತುಕೊಂಡಾಗಲೇ ಪಾವನರಾಗಲು ಸಾಧ್ಯ.
|
2 |
+
ಯಾವಾಗ ಪತಿತ ಪ್ರಪಂಚದ ವಿನಾಶವಾಗಬೇಕಾಗಿದೆಯೋ ಆಗಲೇ ತಂದೆಯು ಬರುತ್ತಾರೆ. ಮೊದಲು ಸ್ಥಾಪನೆ ನಂತರ ವಿನಾಶ ಎಂಬ ಪದವನ್ನು ಅರ್ಥ ಸಹಿತವಾಗಿ ಬರೆಯಬೇಕಾಗುತ್ತದೆ. ಸ್ಥಾಪನೆ, ಪಾಲನೆ, ವಿನಾಶ ಎಂದಲ್ಲ. ಸ್ಥಾಪನೆ, ವಿನಾಶ ನಂತರ ಪಾಲನೆ. ನಾವು ಓದಿ ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದು ಬುದ್ಧಿಯಲ್ಲಿ ಚೆನ್ನಾಗಿ ಕುಳಿತುಕೊಂಡಿರಬೇಕು. ಕೆಲವು ಮಕ್ಕಳು ಭಲೆ ಚೆನ್ನಾಗಿ ತಿಳಿಸುತ್ತಾರೆ ಆದರೆ ಆ ಅತೀಂದ್ರಿಯ ಸುಖವು ಯಾರಿಗೂ ಇಲ್ಲ. ಗಿಳಿಪಾಠದಂತೆ ನೆನಪು ಮಾಡುತ್ತಾರಲ್ಲವೆ. ನಿಮ್ಮ ಬುದ್ಧಿಯಲ್ಲಿಯೂ ಸಹ ಅದು ಚೆನ್ನಾಗಿ ಧಾರಣೆಯಾಗಬೇಕು. ನೀವು ತಿಳಿದುಕೊಂಡಿದ್ದೀರಿ - ಈ ಯಾವುದೆಲ್ಲಾ ಶಾಸ್ತ್ರಗಳಿವೆಯೋ ಎಲ್ಲವೂ ಭಕ್ತಿಮಾರ್ಗದ್ದಾಗಿದೆ, ಆದ್ದರಿಂದ ಈಗ ನಿರ್ಣಯಿಸಿ - ಸತ್ಯವು ಯಾವುದಾಗಿದೆ? ಸತ್ಯ ನಾರಾಯಣನ ಕಥೆಯನ್ನು ನಿಮಗೆ ಒಂದೇ ಬಾರಿ ತಂದೆಯು ತಿಳಿಸುತ್ತಾರೆ. ತಂದೆಯು ಎಂದೂ ಅಸತ್ಯವನ್ನು ಹೇಳಲು ಸಾಧ್ಯವಿಲ್ಲ. ತಂದೆಯೇ ಸತ್ಯ ಖಂಡದ ಸ್ಥಾಪನೆ ಮಾಡುತ್ತಾರೆ, ಸತ್ಯ ಕಥೆಯನ್ನು ತಿಳಿಸುತ್ತಾರೆ. ಇದರಲ್ಲಿ ಅಸತ್ಯವಾಗಲು ಸಾಧ್ಯವಿಲ್ಲ. ಮಕ್ಕಳಿಗೆ ಇದು ನಿಶ್ಚಯವಿರಲಿ, ನಾವು ಯಾರ ಜೊತೆ ಕುಳಿತಿದ್ದೇವೆ? ತಂದೆಯು ನಮಗೆ ತನ್ನ ಜೊತೆ ಯೋಗವನ್ನಿಡುವುದನ್ನು ಕಲಿಸುತ್ತಾರೆ. ಸತ್ಯ ಅಮರ ಕಥೆ, ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಿದ್ದಾರೆ, ಇದರಿಂದ ನಾವು ನರನಿಂದ ನಾರಾಯಣನಾಗುತ್ತಿದ್ದೇವೆ ನಂತರ ಭಕ್ತಿಮಾರ್ಗದಲ್ಲಿ ಇದರ ಗಾಯನ ನಡೆಯುತ್ತದೆ. ಇದು ಬುದ್ಧಿಯಲ್ಲಿರಬೇಕು, ನಮಗೆ ಯಾವುದೇ ಮನುಷ್ಯರು ಓದಿಸುತ್ತಿಲ್ಲ, ನಾವಾತ್ಮರಿಗೆ ಆತ್ಮಿಕ ತಂದೆಯು ಓದಿಸುತ್ತಾರೆ. ಶಿವ ತಂದೆ ಯಾರು ನಾವಾತ್ಮರ ತಂದೆಯಾಗಿದ್ದಾರೆ, ಅವರೇ ನಮಗೆ ಓದಿಸುತ್ತಾರೆ. ನಾವೀಗ ಶಿವತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ. ಮಧುಬನದಲ್ಲಿ ಬಂದಾಗ ನಶೆಯೇರುತ್ತದೆ, ಇಲ್ಲಿ ನಿಮಗೆ ರಿಫ್ರೆಶಮೆಂಟ್ ಸಿಗುತ್ತದೆ. ನೀವು ಅನುಭವ ಮಾಡುತ್ತೀರಿ, ಇಲ್ಲಿ ಸ್ವಲ್ಪ ಸಮಯಕ್ಕಾಗಿ ಬಂದರೂ ಸಹ ರಿಫ್ರೆಶ್ ಆಗಿ ಬಿಡುತ್ತೀರಿ. ಹೊರಗಡೆಯಂತೂ ಉದ್ಯೋಗ ವ್ಯವಹಾರಗಳ ಜಂಜಾಟವಿರುತ್ತದೆ. ತಂದೆಯು ತಿಳಿಸುತ್ತಾರೆ- ಹೇ ಆತ್ಮರೇ ಎಂದು. ತಂದೆಯು ಆತ್ಮರೊಂದಿಗೆ ಮಾತನಾಡುತ್ತಾರೆ, ತಂದೆಯು ನಿರಾಕಾರನಾಗಿದ್ದಾರೆ. ಅವರನ್ನು ಯಾರೂ ತಿಳಿದುಕೊಂಡಿಲ್ಲ. ಬ್ರಹ್ಮಾ, ವಿಷ್ಣು, ಶಂಕರನನ್ನೂ ತಿಳಿದುಕೊಂಡಿಲ್ಲ. ಚಿತ್ರವಂತೂ ಎಲ್ಲರ ಬಳಿಯಲ್ಲಿರಲಿ. ಕಾಗದದ ಚಿತ್ರವನ್ನು ನೋಡಿ ಕೆಲವರು ಹರಿದು ಹಾಕುತ್ತಾರೆ, ಕೆಲವರಂತೂ ಎಷ್ಟು ದೂರ ದೂರದವರೆಗೆ ಹೋಗಿ ಎಷ್ಟೊಂದು ಪೂಜೆ ಇತ್ಯಾದಿಗಳನ್ನು ಮಾಡುತ್ತಾರೆ! ಚಿತ್ರವನ್��ಂತೂ ಮನೆಯಲ್ಲಿಯೂ ಇಟ್ಟಿರುತ್ತಾರಲ್ಲವೆ ಅಂದಮೇಲೆ ಇಷ್ಟು ದೂರದವರೆಗೆ ಹೋಗಿ ಅಲೆದಾಡುವುದರಿಂದ ಏನು ಲಾಭ? ಈಗ ನೀವು ಮಕ್ಕಳಿಗೆ ಈ ಜ್ಞಾನವು ಸಿಕ್ಕಿದೆ ಆದ್ದರಿಂದ ಅದೆಲ್ಲವೂ ಅನರ್ಥವೆನಿಸುತ್ತದೆ. ಕೃಷ್ಣನನ್ನು ಇಲ್ಲಿಯೂ ಸಹ ಕಲ್ಲಿನಿಂದ ಶ್ಯಾಮ ಹಾಗೂ ಸುಂದರನನ್ನಾಗಿ ಮಾಡಿಸಬಹುದಾಗಿದೆ ಆದರೆ ಜಗನ್ನಾಥ ಪುರಿಗೇ ಏಕೆ ಹೋಗುತ್ತಾರೆ? ಕೃಷ್ಣನನ್ನು ಶ್ಯಾಮ ಸುಂದರನೆಂದು ಏಕೆ ಹೇಳುತ್ತಾರೆ? ಇವೆಲ್ಲಾ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ. ಆತ್ಮವು ತಮೋಪ್ರಧಾನವಾಗುವುದರಿಂದ ಕಪ್ಪಾಗಿ ಬಿಡುತ್ತದೆ, ಮತ್ತೆ ಆತ್ಮವು ಪವಿತ್ರವಾದಾಗ ಸುಂದರವಾಗಿ ಬಿಡುತ್ತದೆ. ಇದೇ ಭಾರತವು ಸ್ವರ್ಗವಾಗಿತ್ತು, ಅಲ್ಲಿ ಪಂಚತತ್ವಗಳಲ್ಲಿಯೂ ಸ್ವಾಭಾವಿಕ ಸೌಂದರ್ಯವಿರುತ್ತದೆ. ಆದ್ದರಿಂದ ಶರೀರವೂ ಸಹ ಅಷ್ಟು ಸುಂದರವಾಗಿರುತ್ತಿತ್ತು. ಈಗ ತತ್ವಗಳು ತಮೋಪ್ರಧಾನವಾಗಿರುವ ಕಾರಣ ಶರೀರವೂ ಸಹ ಕೆಲವರದು ಕಪ್ಪು, ಕೆಲವರದು ಡೊಂಕು, ಕುರುಡರು, ಕುಂಟರು ಆಗುತ್ತಿರುತ್ತಾರೆ. ಇದಕ್ಕೆ ನರಕವೆಂದು ಹೇಳಲಾಗುತ್ತದೆ. ಇದಂತೂ ಮಾಯೆಯ ಆಡಂಬರವಾಗಿದೆ. ವಿದೇಶದಲ್ಲಂತೂ ದೀಪಗಳು ಈ ರೀತಿಯಿರುತ್ತವೆ, ಅದರ ಬೆಳಕು ಕಾಣಿಸುತ್ತದೆಯೇ ಹೊರತು ದೀಪಗಳು ಕಾಣಿಸುವುದಿಲ್ಲ. ಸತ್ಯಯುಗದಲ್ಲಿಯೂ ಸಹ ಇದೇ ರೀತಿಯ ಪ್ರಕಾಶವಿರುತ್ತದೆ. ವಿಮಾನ ಇತ್ಯಾದಿಗಳು ಅಲ್ಲಿಯೂ ಇರುತ್ತವೆ ಏಕೆಂದರೆ ವಿಜ್ಞಾನದವರೂ ಸಹ ಇಲ್ಲಿ ಬಂದು ತಿಳಿದುಕೊಳ್ಳುತ್ತಾರಲ್ಲವೆ. ಅಂದಮೇಲೆ ಅವರು ಅಲ್ಲಿಯೂ ಬಂದು ವಿಮಾನ ಇತ್ಯಾದಿಗಳನ್ನು ತಯಾರು ಮಾಡುತ್ತಾರೆ. ನೀವು ಎಷ್ಟು ಸಮೀಪ ಬರತೊಡಗುತ್ತೀರೋ ಅಷ್ಟು ನಿಮಗೆ ಎಲ್ಲವೂ ಸಾಕ್ಷಾತ್ಕಾರವಾಗುವುದು. ವಿದ್ಯುತ್ತಿನ ಕಾರ್ಯಕರ್ತರು ಮೊದಲಾದವರೆಲ್ಲರೂ ಬಂದು ಜ್ಞಾನವನ್ನು ತಿಳಿದುಕೊಳ್ಳುತ್ತಾರೆ, ಸ್ವಲ್ಪ ತಿಳಿದುಕೊಂಡರೂ ಸಹ ಪ್ರಜೆಗಳಲ್ಲಿ ಬರುತ್ತಾರೆ. ಅವರ ಕಲೆಯನ್ನು ಸಂಸ್ಕಾರದಲ್ಲಿ ತೆಗೆದುಕೊಂಡು ಹೋಗುತ್ತಾರೆ, ಇದರಿಂದ ಅಂತ್ಯ ಮತಿ ಸೋ ಗತಿಯಾಗುತ್ತದೆ. ಹಾ! ನಿಮ್ಮಂತೆ ಕರ್ಮಾತೀತ ಸ್ಥಿತಿಯನ್ನು ಪಡೆಯುವುದಿಲ್ಲ ಆದರೆ ಆತ್ಮವು ತನ್ನಲ್ಲಿರುವ ಕಲೆಗಳನ್ನು ತೆಗೆದುಕೊಂಡು ಹೋಗುತ್ತದೆಯಲ್ಲವೆ. ಟಿ.ವಿ., ಇತ್ಯಾದಿಗಳ ಮೂಲಕ ದೂರದಲ್ಲಿ ಕುಳಿತೇ ನೋಡುತ್ತಿರುತ್ತಾರೆ. ದಿನ ಕಳೆದಂತೆ ಪ್ರಯಾಣ ಮಾಡುವುದೇ ಕಷ್ಟವಾಗಿ ಬಿಡುತ್ತದೆ. ಪ್ರಪಂಚದಲ್ಲಿ ಏನೇನು ಸಂಶೋಧನೆಗಳನ್ನು ಮಾಡಿ ವಸ್ತುಗಳನ್ನು ತಯಾರು ಮಾಡುತ್ತಾರೆ, ಪ್ರಾಕೃತಿಕ ವಿಕೋಪಗಳಲ್ಲಿಯೂ ಬಹಳ ಮಂದಿ ಮರಣ ಹೊಂದುತ್ತಾರೆ. ಪ್ರವಾಹಗಳು ಬರುತ್ತವೆ, ಸಮುದ್ರಗಳು ಉಕ್ಕುತ್ತವೆ, ಸಮುದ್ರವನ್ನೂ ಸಹ ಒಣಗಿಸಿದ್ದಾರಲ್ಲವೆ.
|
3 |
+
ಈಗ ನೀವು ಮಕ್ಕಳು ಈ ಪ್ರಪಂಚದಲ್ಲಿ ಏನೇನಿದೆ ಮತ್ತು ಸತ್ಯಯುಗದಲ್ಲಿ ಏನೇನಿರುವುದು ಎಂಬುದೆಲ್ಲವನ್ನೂ ತಿಳಿದುಕೊಂಡಿದ್ದೀರಿ. ಕೇವಲ ಭಾರತ ಖಂಡವೇ ಇರುತ್ತದೆ, ಅದು ಚಿಕ್ಕದಾಗಿರುತ್ತದೆ, ಉಳಿದೆಲ್ಲರೂ ಪರಮಧಾಮಕ್ಕೆ ಹೊರಟು ಹೋಗುತ್ತಾರೆ. ಇನ್ನು ಸ್ವಲ್ಪವೇ ಸಮಯ ಉಳಿದಿದೆ, ಇದೇನೂ ಇರುವುದಿಲ್ಲ. ನೀವು ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ, ನಿಮಗಾಗಿ ಹಳೆಯ ಪ್ರಪಂಚದ ವಿನಾಶವೂ ಮೊದಲೇ ನಿಶ್ಚಿತವಾಗಿದೆ. ಈ ಛೀ ಛೀ ಪ್ರಪಂಚದಲ್ಲಿ ನೀವು ಇನ್ನು ಕೆಲವು ದಿನಗಳು ಮಾತ್ರವೇ ಇರುತ್ತೀರಿ ನಂತರ ತಮ್ಮ ಹೊಸ ಪ್ರಪಂಚಕ್ಕೆ ಹೊರಟು ಹೋಗುತ್ತೀರಿ. ಇದನ್ನು ಕೇವಲ ನೆನಪು ಮಾಡಿಕೊಳ್ಳುತ್ತಾ ಇದ್ದರೂ ಸಹ ಖುಷಿಯಿಂದ ಇರುತ್ತೀರಿ. ನಿಮ್ಮ ಬುದ್ಧಿಯಲ್ಲಿದೆ - ಇದೆಲ್ಲವೂ ಸಮಾಪ್ತಿಯಾಗಲಿದೆ, ಇಷ್ಟೇಲ್ಲಾ ಖಂಡಗಳು ಉಳಿಯುವುದಿಲ್ಲ. ಪ್ರಾಚೀನ ಭಾರತಖಂಡವೇ ಉಳಿಯುತ್ತದೆ. ಭಲೆ ಗೃಹಸ್ಥ ವ್ಯವಹಾರದಲ್ಲಿರಿ, ಕೆಲಸ ಇತ್ಯಾದಿಗಳನ್ನು ಮಾಡುತ್ತಾ ಇರಿ ಆದರೆ ಬುದ್ಧಿಯಲ್ಲಿ ತಂದೆಯ ನೆನಪಿರಲಿ. ನೀವು ಈ ಮನುಷ್ಯರಿಂದ ದೇವತೆಗಳಾಗುವ ಕೋರ್ಸನ್ನು ತೆಗೆದುಕೊಳ್ಳಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ನೌಕರಿ ಇತ್ಯಾದಿಗಳನ್ನು ಮಾಡುತ್ತಾ ತಂದೆ ಮತ್ತು ಚಕ್ರವನ್ನು ನೆನಪು ಮಾಡಿರಿ. ಏಕಾಂತದಲ್ಲಿ ಕುಳಿತು ವಿಚಾರಸಾಗರ ಮಂಥನ ಮಾಡಿರಿ. ಮುಂದೆ ಪ್ರಾಕೃತಿಕ ಆಪತ್ತುಗಳು ಬರುವವು ಯಾವುದರಿಂದ ಇಡೀ ಪ್ರಪಂಚವು ಸಮಾಪ್ತಿಯಾಗುವುದು. ಸತ್ಯಯುಗದಲ್ಲಿ ಬಹಳ ಕೆಲವರೇ ಮನುಷ್ಯರಿರುತ್ತಾರೆ, ಅಲ್ಲಿ ಕಣಿವೆ ಇತ್ಯಾದಿಗಳ ಅವಶ್ಯಕತೆಯಿಲ್ಲ, ಇಲ್ಲಂತೂ ಎಷ್ಟು ಕಣಿವೆಗಳನ್ನು ತೋಡುತ್ತಾರೆ. ನದಿಗಳಂತೂ ಅನಾದಿಯಾಗಿವೆ, ಸತ್ಯಯುಗದಲ್ಲಿ ಜಮುನಾ ನದಿಯ ತೀರದಲ್ಲಿ ಸಿಹಿ ನೀರಿನ ನದಿಗಳ ತೀರದಲ್ಲಿ ಮಹಲುಗಳಿರುತ್ತವೆ. ಅಲ್ಲಿ ಈ ಬಾಂಬೆ ಇರುವುದಿಲ್ಲ, ಇದನ್ನು ಯಾರೂ ಹೊಸ ಬಾಂಬೆ ಎಂದು ಹೇಳುವುದಿಲ್ಲ. ನೀವು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ, ನಾವು ಸ್ವರ್ಗಕ್ಕಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ ನಂತರ ಈ ನರಕವು ಇರುವುದೇ ಇಲ್ಲ. ರಾವಣ ಪುರಿಯು ಸಮಾಪ್ತಿಯಾಗುತ್ತದೆ, ರಾಮ ಪುರಿಯು ಸ್ಥಾಪನೆಯಾಗುತ್ತದೆ. ತಮೋಪ್ರಧಾನ ಪೃಥ್ವಿಯಲ್ಲಿ ದೇವತೆಗಳು ತಮ್ಮ ಪಾದಗಳನ್ನೂ ಇಡಲು ಸಾಧ್ಯವಿಲ್ಲ, ಯಾವಾಗ ಇದು ಪರಿವರ್ತನೆಯಾಗುವುದೋ ಆಗ ಹೆಜ್ಜೆಯನ್ನು ಇಡುತ್ತಾರೆ ಆದ್ದರಿಂದ ಲಕ್ಷ್ಮಿಯನ್ನು ಆಹ್ವಾನ ಮಾಡುತ್ತಾರೆಂದರೆ ಬಹಳ ಸ್ವಚ್ಛ ಮಾಡುತ್ತಾರೆ. ಲಕ್ಷ್ಮಿಯ ಆಹ್ವಾನ ಮಾಡುತ್ತಾರೆ, ಚಿತ್ರವನ್ನಿಡುತ್ತಾರೆ ಆದರೆ ಅವರ ಪರಿಚಯವು ಯಾರಿಗೂ ಗೊತ್ತಿಲ್ಲ ಆದ್ದರಿಂದ ಅದಕ್ಕೆ ವಿಗ್ರಹಾರಾಧನೆ ಎಂದು ಹೇಳಲಾಗುತ್ತದೆ. ಕಲ್ಲಿನ ಮೂರ್ತಿಯನ್ನೇ ಭಗವಂತನೆಂದು ಹೇಳಿ ಬಿಡುತ್ತಾರೆ. ಇವೆಲ್ಲಾ ಮಾತುಗಳನ್ನು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಪರಮಾತ್ಮನೇ ತಿಳಿಸುತ್ತಾರೆ. ಆತ್ಮವು ಆತ್ಮಕ್ಕೆ ತಿಳಿಸಲು ಸಾಧ್ಯವಿಲ್ಲ, ಆತ್ಮವು ಹೇಗೆ ಮತ್ತು ಯಾವ-ಯಾವ ಪಾತ್ರವನ್ನು ಅಭಿನಯಿಸುತ್ತದೆ ಎಂಬುದನ್ನೂ ಸಹ ನೀವೀಗ ತಿಳಿಸಬಲ್ಲಿರಿ. ತಂದೆಯು ಬಂದು ಆತ್ಮವೆಂದರೇನು ಎಂದು ಅನುಭೂತಿ ಮಾಡಿಸುತ್ತಾರೆ. ಮನುಷ್ಯರು ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ ಅಂದಮೇಲೆ ಅವರಿಗೆ ಏನು ಹೇಳುವುದು! ಮನುಷ್ಯರಾಗಿದ್ದರೂ ಚಲನೆಯು ಪ್ರಾಣಿಗಳಂತಿದೆ, ಈಗ ನಿಮಗೆ ಜ್ಞಾನವು ಸಿಕ್ಕಿದೆ. ಏಣಿಯ ಚಿತ್ರದಲ್ಲಿ ಅನ್ಯರಿಗೆ ತಿಳಿಸುವುದು ಬಹಳ ಸಹಜವಾಗುತ್ತದೆ, ಅದರಲ್ಲಿಯೂ ಬಹಳ ಚೆನ್ನಾಗಿ ತಿಳಿಸಬೇಕಾಗಿದೆ. ನಾವು ಭಾರತವಾಸಿಗಳು ಯಾರು ದೇವಿ-ದೇವತೆಗಳಾಗಿದ್ದೆವು ಅವರೇ ಹೇಗೆ ಸತೋಪ್ರಧಾನರಾದೆವು? ನಂತರ ಸತೋ, ರಜೋ, ತಮೋದಲ್ಲಿ ಬಂದೆವು, ಇವೆಲ್ಲಾ ಮಾತುಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ ಆಗಲೇ ವಿಚಾರ ಸಾಗರ ಮಂಥನ ನಡೆಯುವುದು. ಧಾರಣೆಯಾಗದಿದ್ದರೆ ವಿಚಾರ ಸಾಗರ ಮಂಥನ ನಡೆಯಲು ಸಾಧ್ಯವಿಲ್ಲ. ಕೇಳುತ್ತಾರೆ ಮತ್ತೆ ಉದ್ಯೋಗ-ವ್ಯವಹಾರಗಳಲ್ಲಿ ತೊಡಗಿ ಬಿಡುತ್ತಾರೆ, ವಿಚಾರ ಸಾಗರ ಮಂಥನ ಮಾಡಲು ಸಮಯವೇ ಇಲ್ಲ. ವಾಸ್ತವದಲ್ಲಿ ನೀವು ಮಕ್ಕಳು ಪ್ರತಿನಿತ್ಯವೂ ಓದಬೇಕಾಗಿದೆ ಮತ್ತು ಅದರಮೇಲೆ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ, ಮುರುಳಿಯಂತೂ ಎಲ್ಲಿ ಬೇಕಾದರೂ ಸಿಗುತ್ತದೆ. ವಿಶಾಲ ಬುದ್ಧಿಯವರಾದರೆ ಜ್ಞಾನ ಬಿಂದುಗಳನ್ನು ಅರಿತುಕೊಳ್ಳುತ್ತಾರೆ. ತಂದೆಯು ನಿತ್ಯವೂ ತಿಳಿಸುತ್ತಾರೆ, ಅನ್ಯರಿಗೆ ತಿಳಿಸುವುದಕ್ಕಾಗಿ ಬಹಳಷ್ಟು ಅಂಶಗಳಿವೆ. ಗಂಗಾ ನದಿಯ ತೀರದಲ್ಲಿಯೂ ನೀವು ಹೋಗಿ ತಿಳಿಸಬಹುದು - ಸರ್ವರ ಸದ್ಗತಿದಾತನು ತಂದೆಯೋ ಅಥವಾ ನೀರಿನ ಗಂಗೆಯೋ? ತಾವೇಕೆ ಸುಮ್ಮನೆ ಹಣವನ್ನು ಖರ್ಚು ಮಾಡುತ್ತೀರಿ! ಒಂದುವೇಳೆ ಗಂಗಾ ಸ್ನಾನದಿಂದ ಪಾವನರಾಗುವಂತಿದ್ದರೆ ಗಂಗೆಯಲ್ಲಿ ಹೋಗಿ ಕುಳಿತು ಬಿಡಿ. ಹೊರಗಡೆಯೇಕೆ ಬರುತ್ತೀರಿ? ತಂದೆಯಂತೂ ತಿಳಿಸುತ್ತಾರೆ - ಶ್ವಾಸ-ಶ್ವಾಸದಲ್ಲಿಯೂ ನನ್ನನ್ನು ನೆನಪು ಮಾಡಿ, ಇದೇ ಯೋಗಾಗ್ನಿಯಾಗಿದೆ. ಯೋಗ ಅರ್ಥಾತ್ ನೆನಪು.
|
4 |
+
ಬಹಳಷ್ಟು ಜ್ಞಾನವಿದೆ ಆದರೆ ಸತೋಪ್ರಧಾನ ಬುದ್ಧಿಯವರು ಕೂಡಲೇ ತಿಳಿದುಕೊಳ್ಳುತ್ತಾರೆ, ಕೆಲವರು ರಜೋ, ಕೆಲವರು ತಮೋ ಬುದ್ಧಿಯವರಿದ್ದಾರೆ. ಇಲ್ಲಿ ತರಗತಿಯಲ್ಲಿ ನಂಬರ್ವಾರ್ ಕುಳ್ಳರಿಸುವುದಿಲ್ಲ, ಹಾಗೆ ಮಾಡಿದ್ದೇ ಆದರೆ ಹೃದಯಾಘಾತವಾಗಿ ಬಿಡುವುದು. ಡ್ರಾಮಾ ಪ್ಲಾನನುಸಾರ ರಾಜಧಾನಿಯು ಪೂರ್ಣ ಸ್ಥಾಪನೆಯಾಗುತ್ತಿದೆ, ನಂತರ ಸತ್ಯಯುಗದಲ್ಲಿ ತಂದೆಯು ಓದಿಸುವರೇ! ತಂದೆಯ ವಿದ್ಯೆಯು ಇದೊಂದೇ ಸಮಯ ನಡೆಯುತ್ತದೆ, ನಂತರ ಭಕ್ತಿಮಾರ್ಗದಲ್ಲಿ ಅಸತ್ಯ ಮಾತುಗಳನ್ನು ಬರೆಯುತ್ತಾರೆ. ಆಶ್ಚರ್ಯವೇನೆಂದರೆ ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುವರೋ ಅವರ ಹೆಸರನ್ನು ಗೀತೆಯಲ್ಲಿ ಹಾಕಿದ್ದಾರೆ ಮತ್ತು ಯಾರು ಪುನರ್ಜನ್ಮರಹಿತ ಆಗಿದ್ದಾರೆಯೋ ಅವರ ಹೆಸರನ್ನು ಮರೆ ಮಾಡಿ ಬಿಟ್ಟಿದ್ದಾರೆ. ಅಂದಮೇಲೆ ಇದು 100% ಅಸತ್ಯವಾಯಿತಲ್ಲವೆ.
|
5 |
+
ಮಕ್ಕಳು ಅನೇಕರ ಕಲ್ಯಾಣ ಮಾಡಬೇಕಾಗಿದೆ, ನಿಮ್ಮದೆಲ್ಲವೂ ಗುಪ್ತವಾಗಿದೆ. ಇಲ್ಲಿ ನೀವು ಬ್ರಹ್ಮಾಕುಮಾರ-ಕುಮಾರಿಯರು ತಮಗಾಗಿ ಸ್ವರ್ಗದ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ಇದೂ ಸಹ ಯಾರ ಬುದ್���ಿಯಲ್ಲಿಯೂ ಬರುವುದಿಲ್ಲ. ನಿಮ್ಮಲ್ಲಿಯೂ ಮರೆತು ಹೋಗುತ್ತಾರೆ ಅಂದಮೇಲೆ ಅನ್ಯರು ಹೇಗೆ ತಿಳಿದುಕೊಳ್ಳುವರು. ನೀವಿದನ್ನು ಮರೆಯದಿದ್ದರೆ ಸದಾ ಖುಷಿಯಲ್ಲಿರುತ್ತೀರಿ. ಮರೆಯುವುದರಿಂದಲೇ ಗುಟುಕರಿಸುತ್ತೀರಿ. ಒಳ್ಳೆಯದು.
|
6 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
7 |
+
ಧಾರಣೆಗಾಗಿ ಮುಖ್ಯಸಾರ:
|
8 |
+
1. ಅಪಾರ ಸುಖದ ಅನುಭವ ಮಾಡಲು ತಂದೆಯು ಏನನ್ನು ಓದಿಸುತ್ತಾರೆಯೋ ಅದನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ, ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.
|
9 |
+
2. ಈ ಸ್ಮಶಾನವನ್ನು ನೋಡಿಯೂ ನೋಡದಂತಿರಬೇಕಾಗಿದೆ. ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ...... ಹೊಸ ಪ್ರಪಂಚಕ್ಕೆ ಯೋಗ್ಯರಾಗಬೇಕಾಗಿದೆ.
|
BKMurli/BKMurli/page_101.txt
ADDED
@@ -0,0 +1,12 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
“ಮನಸ್ಸನ್ನು ಸ್ವಚ್ಛ, ಬುದ್ಧಿಯನ್ನು ಕ್ಲಿಯರ್ ಆಗಿ ಇಟ್ಟುಕೊಂಡು ಡಬಲ್ ಲೈಟ್ ಫರಿಶ್ತಾ ಸ್ಥಿತಿಯ ಅನುಭವ ಮಾಡಿ”
|
2 |
+
ಇಂದು ಬಾಪ್ದಾದಾರವರು ತನ್ನ ಸ್ವರಾಜ್ಯ ಅಧಿಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಸ್ವರಾಜ್ಯ ಬ್ರಾಹ್ಮಣ ಜೀವನದ ಜನ್ಮ ಸಿದ್ಧ ಅಧಿಕಾರವಾಗಿದೆ. ಬಾಪ್ದಾದಾರವರು ಪ್ರತಿಯೊಂದು ಬ್ರಾಹ್ಮಣನಿಗೂ ಸ್ವರಾಜ್ಯದ ಸಿಂಹಾಸನಾಧೀಶರನ್ನಾಗಿ ಮಾಡಿಬಿಟ್ಟಿದ್ದಾರೆ. ಸ್ವರಾಜ್ಯದ ಅಧಿಕಾರ ಜನ್ಮವಾಗುತ್ತಿದ್ದಂತೆಯೇ ಪ್ರತಿಯೊಂದು ಬ್ರಾಹ್ಮಣ ಆತ್ಮನಿಗೆ ಪ್ರಾಪ್ತಿಯಾಗಿದೆ. ಎಷ್ಟು ಸ್ವರಾಜ್ಯದ ಮೇಲೆ ಸ್ಥಿತರಾಗುತ್ತೀರಿ ಅಷ್ಟು ತಮ್ಮಲ್ಲಿ ಲೈಟ್ (ಹಗುರತೆ, ಬೆಳಕು) ಹಾಗೂ ಮೈಟ್ನ (ಶಕ್ತಿಯ) ಅನುಭವ ಮಾಡುತ್ತೀರಿ.
|
3 |
+
ಬಾಪ್ದಾದಾರವರು ಇಂದು ಪ್ರತಿಯೊಂದು ಮಗುವಿನ ಮಸ್ತಕದಲ್ಲಿ ಪ್ರಕಾಶದ ಕಿರೀಟವನ್ನು ನೋಡುತ್ತಿದ್ದಾರೆ. ಎಷ್ಟು ತಮ್ಮಲ್ಲಿ ಶಕ್ತಿಯನ್ನು ಧಾರಣೆ ಮಾಡಿಕೊಂಡಿದ್ದೀರಿ ಅಷ್ಟೇ ನಂಬರಿನಲ್ಲಿ ಪ್ರಕಾಶದ ಕಿರೀಟ ಹೊಳೆಯುತ್ತದೆ. ಬಾಪ್ದಾದಾರವರು ಎಲ್ಲಾ ಮಕ್ಕಳಿಗೂ ಸರ್ವಶಕ್ತಿಗಳನ್ನು ಅಧಿಕಾರದಲ್ಲಿ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಮಾಸ್ಟರ್ ಸರ್ವ ಶಕ್ತಿವಂತರಾಗಿದ್ದಾರೆ, ಆದರೆ ಧಾರಣೆ ಮಾಡುವುದರಲ್ಲಿ ನಂಬರ್ವಾರ್ ಆಗಿದ್ದಾರೆ. ಬಾಪ್ದಾದಾರವರು ನೋಡಿದರು ಸರ್ವಶಕ್ತಿಗಳ ಜ್ಞಾನವು ಎಲ್ಲರಲ್ಲಿಯೂ ಇದೆ, ಧಾರಣೆಯು ಇದೆ ಆದರೆ ಒಂದು ಮಾತಿನಲ್ಲಿ ಅಂತರ ಬಂದುಬಿಡುತ್ತದೆ. ಯಾವುದೇ ಬ್ರಾಹ್ಮಣ ಆತ್ಮನೊಂದಿಗೆ ಕೇಳಿ- ಪ್ರತಿಯೊಂದು ಶಕ್ತಿಯ ವರ್ಣನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ, ಪ್ರಾಪ್ತಿಗಳ ವರ್ಣನೆಯನ್ನು ಸಹ ಬಹಳ ಚೆನ್ನಾಗಿ ಮಾಡುತ್ತಾರೆ, ಆದರೆ ಅಂತರ ಏನೆಂದರೆ - ಸಮಯದಲ್ಲಿ ಯಾವ ಶಕ್ತಿಯ ಅವಶ್ಯಕತೆ ಇದೆಯೋ, ಆ ಸಮಯದಲ್ಲಿ ಆ ಶಕ್ತಿ ಕರ್ಮದಲ್ಲಿ ತೊಡಗಿಸಲು ಸಾಧ್ಯವಾಗುವುದಿಲ್ಲ. ಸಮಯದ ನಂತರ ಅನುಭವ ಮಾಡುತ್ತಾರೆ- ಈ ಶಕ್ತಿಯ ಅವಶ್ಯಕತೆ ಇತ್ತು. ಬಾಪ್ದಾದಾರವರು ಮಕ್ಕಳಿಗೆ ಹೇಳುತ್ತಾರೆ- ಸರ್ವ ಶಕ್ತಿಗಳ ಆಸ್ತಿ ಎಷ್ಟು ಶಕ್ತಿಶಾಲಿಯಾಗಿದೆ ಯಾವುದರಿಂದ ಯಾವ ಸಮಸ್ಯೆಯೂ ಸಹ ನಿಮ್ಮ ಎದುರು ನಿಲ್ಲಲು ಸಾಧ್ಯವಿಲ್ಲ. ಸಮಸ್ಯೆ ಮುಕ್ತ ಆಗಬಹುದು. ಕೇವಲ ಸರ್ವ ಶಕ್ತಿಗಳನ್ನು ಇಮರ್ಜ್ ರೂಪದಲ್ಲಿ ಸ್ಮೃತಿಯಲ್ಲಿ ಇಟ್ಟುಕೊಳ್ಳಿ ಹಾಗೂ ಸಮಯ ದಲ್ಲಿ ಕಾರ್ಯದಲ್ಲಿ ತೊಡಗಿಸಿ. ಇದಕ್ಕಾಗಿ ನೀವು ಬುದ್ಧಿಯ ಲೈನನ್ನು ಕ್ಲಿಯರ್ ಆಗಿ ಇಟ್ಟುಕೊಳ್ಳಿ. ಎಷ್ಟು ಬುದ್ಧಿಯ ಲೈನ್ ಕ್ಲಿಯರ್ ಹಾಗೂ ಕ್ಲೀನ್ ಇರುತ್ತದೆ ಅಷ್ಟು ನಿರ್ಣಯ ಶಕ್ತಿ ತೀವ್ರವಾಗಿರುವ ಕಾರಣ ಯಾವ ಸಮಯ ಯಾವ ಶಕ್ತಿಯ ಅವಶ್ಯಕತೆ ಇದೆಯೋ ಅದನ್ನು ಕಾರ್ಯದಲ್ಲಿ ತೊಡಗಿಸಬಹುದು. ಏಕೆಂದರೆ ಸಮಯ ಪ್ರಮಾಣ ಬಾಪ್ದಾದಾರವರು ಪ್ರತಿಯೊಂದು ಮಗುವನ್ನು ವಿಘ್ನಮುಕ್ತ, ಸಮಸ್ಯೆ ಮುಕ್ತ, ಪರಿಶ್ರಮದ ಪುರುಷಾರ್ಥದಿಂದ ಮುಕ್ತರನ್ನಾಗಿ ನೋಡಲು ಬಯಸುತ್ತಾರೆ. ಎಲ್ಲರೂ ಆಗಬೇಕೆಂದು ಬಯಸುತ್ತಾರೆ ಆದರೆ ಬಹಳ ಕಾಲದ ಈ ಅಭ್ಯಾಸದ ಅವಶ್ಯಕತೆ ಇದೆ. ಬ್ರಹ್ಮಾ ತಂದೆಯ ವಿಶೇಷ ಸಂಸ್ಕಾರವನ್ನು ನೋಡಿ-"ತಕ್ಷಣ ಧಾನ ಮಹಾಪುಣ್ಯ" ಜೀವನದ ಆರಂಭದಿಂದ ಪ್ರತಿ ಕಾರ್ಯದಲ್ಲಿ ತಕ್ಷಣ ದಾನವು ಮಾಡಿದರು ಹಾಗೂ ತಕ್ಷಣ ಕೆಲಸವನ್ನು ಮಾಡಿದರು. ಬ್ರಹ್ಮಾ ತಂದೆಯ ವಿಶೇಷತೆಯಾಗಿದೆ- ನಿರ್ಣಯ ಶಕ್ತಿ ಸದಾ ಫಾಸ್ಟ್ ಆಗಿತ್ತು. ಬಾಪ್ದಾದಾರವರು ಫಲಿತಾಂಶದಲ್ಲಿ ನೋಡಿದರು. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಲೇಬೇಕು. ಬಾಪ್ದಾದಾರವರೊಂದಿಗೆ ಬರುವವರಾಗಿದ್ದೀರಲ್ಲವೇ! ಅಥವಾ ಹಿಂದೆ ಹಿಂದೆ ಬರುವವರಾಗಿದ್ದೀರಾ? ಜೊತೆಯಲ್ಲಿ ಹೋಗಬೇಕೆಂದರೆ ಬ್ರಹ್ಮಾ ತಂದೆಯನ್ನು ಅನುಕರಿಸಿ. ಕರ್ಮದಲ್ಲಿ ಫಾಲೋ ಬ್ರಹ್ಮಾ ತಂದೆ ಹಾಗೂ ಸ್ಥಿತಿಯಲ್ಲಿ ನಿರಾಕರಿ ಶಿವ ತಂದೆಯನ್ನು ಫಾಲೋ ಮಾಡಬೇಕು. ಫಾಲ್ಲೋ ಮಾಡುವುದು ಬರುತ್ತದೆ ಅಲ್ಲವೇ?
|
4 |
+
ಡಬಲ್ ವಿದೇಶಿಯರಿಗೆ ಫಾಲೋ ಮಾಡಲು ಬರುತ್ತದೆಯೇ? ಫಾಲೋ ಮಾಡುವುದಂತೂ ಸಹಜವಾಗಿದೆ ಅಲ್ಲವೇ! ಫಾಲೋ ಮಾಡಬೇಕೆಂದರೆ ಏಕೆ, ಏನು, ಹೇಗೆ.... ಇದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಹಾಗೂ ಎಲ್ಲರಿಗೂ ಅನುಭವವಿದೆ- ಏಕೆ, ಏನು, ಹೇಗೆ ಇದೆ ವ್ಯರ್ಥ ಸಂಕಲ್ಪಗಳ ನಿಮಿತ್ತ ಆಗಿದೆ, ಇದೆ ಆಧಾರವಾಗಿದೆ. ಫಾಲೋ ಫಾದರ್ ಮಾಡುವುದರಲ್ಲಿ ಈ ಶಬ್ದಗಳು ಸಮಾಪ್ತಿಯಾಗಿ ಬಿಡುತ್ತದೆ. ಹೇಗೆ ಎನ್ನುವುದಲ್ಲ ಹೀಗೆ! ಬುದ್ಧಿ ತಕ್ಷಣ ನಿರ್ಣಯ ಮಾಡುತ್ತದೆ ಈ ರೀತಿ ನಡೆ, ಈ ರೀತಿ ಮಾಡು. ಎಂದ ಮೇಲೆ ಇಂದು ಬಾಪ್ದಾದಾರವರು ವಿಶೇಷ ಎಲ್ಲಾ ಮಕ್ಕಳಿಗೂ ಭಲೇ ಮೊದಲ ಬಾರಿ ಬಂದಿರುವಿರಿ, ಅಥವಾ ಹಳೆಯವರಾಗಿದ್ದೀರಿ, ಎಲ್ಲರಿಗೂ ಇದೆ ಸೂಚನೆಯನ್ನು ಕೊಡುತ್ತಿದ್ದಾರೆ- ತಮ್ಮ ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಹಲವರ ಮನಸ್ಸನಲ್ಲಿ ಈಗಲೂ ಸಹ ವ್ಯರ್ಥ ಹಾಗೂ ನಕಾರಾತ್ಮಕತೆಯ ಸಣ್ಣಪುಟ್ಟ ಕಲೆ ಇದೆ. ಇದರ ಕಾರಣ ಪುರುಷಾರ್ಥದ ಶ್ರೇಷ್ಠ ವೇಗ, ತೀವ್ರಗತಿಯಲ್ಲಿ ಅಡೆತಡೆ ಬರುತ್ತದೆ. ಬಾಪ್ದಾದಾರವರು ಸದಾ ಶ್ರೀಮತವನ್ನು ಕೊಡುತ್ತಾರೆ- ಮನಸ್ಸಿನಲ್ಲಿ ಸದಾ ಪ್ರತಿಯೊಂದು ಆತ್ಮದ ಪ್ರತಿ ಶುಭ ಭಾವನೆ ಹಾಗೂ ಶುಭಕಾಮನೆಯನ್ನು ಇಡಿ- ಇದಾಗಿದೆ ಸ್ವಚ್ಛ ಮನಸ್ಸು. ಅಪಕಾರಿಯ ಮೇಲೆಯೂ ಉಪಕಾರದ ವೃತ್ತಿ ಇಡುವುದು- ಇದೆ ಸ್ವಚ್ಛ ಮನಸ್ಸಾಗಿದೆ. ಸ್ವಯಂನ ಪ್ರತಿ ಹಾಗೂ ಅನ್ಯರ ಪ್ರತಿ ವ್ಯರ್ಥ ಸಂಕಲ್ಪ ಬರುವುದು- ಇದು ಸ್ವಚ್ಛ ಮನಸ್ಸಲ್ಲ. ಸ್ವಚ್ಛ ಮನಸ್ಸು ಹಾಗೂ ಶುದ್ಧ ಮತ್ತು ಕ್ಲಿಯರ್ ಬುದ್ಧಿ. ಪರಿಶೀಲನೆ ಮಾಡಿ, ತಮ್ಮನ್ನು ತಾವು ಗಮನವಿಟ್ಟು ನೋಡಿ, ಮೇಲೆ ಮೇಲೆ ಪರಿಶೀಲನೆ ಮಾಡುವುದಲ್ಲ ಸರಿಯಾಗಿದೆ, ಸರಿಯಾಗಿದೆ. ಹೀಗಲ್ಲ. ಯೋಚಿಸಿ ನೋಡಿ- ಮನಸ್ಸು ಹಾಗೂ ಬುದ್ಧಿ ಸ್ಪಷ್ಟವಾಗಿದೆಯೇ, ಶ್ರೇಷ್ಠವಾಗಿದೆಯೇ? ಆಗ ಡಬಲ್ ಲೈಟ್ ಸ್ಥಿತಿ ಬರಲು ಸಾಧ್ಯ. ತಂದೆಯ ಸಮಾನ ಸ್ಥಿತಿಯನ್ನು ಮಾಡಲು ಇದೇ ಸಾಧನವಾಗಿದೆ. ಹಾಗೂ ಈ ಅಭ್ಯಾಸ ಅಂತ್ಯದಲ್ಲಿ ಅಲ್ಲ, ಬಹು ಕಾಲದ ಅಭ್ಯಾಸ ಅವಶ್ಯಕ ವಾಗಿದೆ. ಚೆಕ್ ಮಾಡಲು ಬರುತ್ತದೆಯೇ? ತಮ್ಮನ್ನು ತಾವು ಚೆಕ್ ಮಾಡಿಕೊಳ್ಳಬೇಕು, ಬೇರೆಯವರನ್��ಲ್ಲ ಬಾಪ್ದಾದಾರವರು ಮೊದಲು ಸಹ, ಹಾಸ್ಯದ ಮಾತನ್ನು ಹೇಳಿದ್ದರು- ಮಕ್ಕಳಿಗೆ ದೂರದ ದೃಷ್ಟಿ ಬಹಳ ತೀಕ್ಷ್ಣವಾಗಿದೆ ಹಾಗೂ ಹತ್ತಿರದ ದೃಷ್ಟಿ ಬಲಹೀನವಾಗಿದೆ. ಆದ್ದರಿಂದ ಅನ್ಯರನ್ನು ಜಡ್ಜ್ (ತೀರ್ಮಾನ) ಮಾಡುವುದರಲ್ಲಿ ಬಹಳ ಬುದ್ಧಿವಂತರಾಗಿದ್ದೀರಿ. ತನ್ನನ್ನು ತಾನು ಚೆಕ್ ಮಾಡುವುದರಲ್ಲಿ ಬಲಹೀನರಾಗಬೇಡಿ.
|
5 |
+
ಬಾಪ್ದಾದಾರವರು ಮೊದಲು ಸಹ ಹೇಳಿದ್ದರು- ಹೇಗೆ ಈಗ ನಿಮಗೆ ನಿಶ್ಚಯವಿದೆ ನಾನು ಬ್ರಹ್ಮಾಕುಮಾರಿ/ ಬ್ರಹ್ಮಾಕುಮಾರನಾಗಿದ್ದೇನೆ. ನಡೆಯುತ್ತಾ- ಓಡಾಡುತ್ತಾ- ಯೋಚಿಸುತ್ತ - ನಾನು ಬ್ರಹ್ಮಾಕುಮಾರಿ ಆಗಿದ್ದೇನೆ, ನಾನು ಬ್ರಹ್ಮಾಕುಮಾರ ಬ್ರಾಹ್ಮಣ ಆತ್ಮನಾಗಿದ್ದೇನೆ. "ನಾನು ಫರಿಶ್ತಾ ಆಗಿದ್ದೇನೆ" ಇದನ್ನು ಸ್ವಾಭಾವಿಕ ಸ್ಮೃತಿ ಹಾಗೂ ಸ್ವಭಾವವನ್ನಾಗಿ ಮಾಡಿಕೊಳ್ಳಿ. ಅಮೃತ ವೇಳೆ ಏಳುತ್ತಲೇ ಇದನ್ನು ಪಕ್ಕಾ ಮಾಡಿಕೊಳ್ಳಿ- ನಾನು ಫರಿಶ್ತಾ ಪರಮಾತ್ಮ- ಶ್ರೀಮತದ ಅಡಿಯಲ್ಲಿ ಈ ಸಾಕಾರ ತನುವಿನಲ್ಲಿ ಬಂದಿದ್ದೇನೆ, ಎಲ್ಲರಿಗೂ ಸಂದೇಶವನ್ನು ಕೊಡುವುದಕ್ಕಾಗಿ ಹಾಗೂ ಶ್ರೇಷ್ಠ ಕರ್ಮವನ್ನು ಮಾಡುವುದಕ್ಕಾಗಿ. ಕಾರ್ಯ ಪೂರ್ಣವಾದ ತಕ್ಷಣ ತಮ್ಮ ಶಾಂತಿಯ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ. ಶ್ರೇಷ್ಠ ಸ್ಥಿತಿಯಲ್ಲಿ ಹೋಗಿಬಿಡಿ. ಒಬ್ಬರು ಇನ್ನೊಬ್ಬರನ್ನು ಸಹ ಫರಿಶ್ತಾ ಸ್ಥಿತಿಯಲ್ಲಿಯೇ ನೋಡಿ. ನಿಮ್ಮ ವೃತ್ತಿ ಅನ್ಯರನ್ನು ಸಹ ನಿಧಾನವಾಗಿ ಫರಿಶ್ತೆಗಳನ್ನಾಗೆ ಮಾಡಿಬಿಡುವುದು. ನಿಮ್ಮ ದೃಷ್ಟಿ ಅನ್ಯರ ಮೇಲೆಯೂ ಪ್ರಭಾವ ಬೀರುವುದು. ನಾವು ಫರಿಶ್ತೆಗಳಾಗಿದ್ದೇವೆ ಎಂದು ಪಕ್ಕಾ ಇದೆಯೇ? `ಫರಿಶ್ತಾ ಭವ'ದ ವರದಾನ ಎಲ್ಲರಿಗೂ ಸಿಕ್ಕಿದೆಯೇ? ಒಂದು ಸೆಕೆಂಡಿನಲ್ಲಿ ಫರಿಶ್ತಾ ಸ್ಥಿತಿ ಅರ್ಥಾತ್ ಡಬಲ್ ಲೈಟ್ ಆಗಲು ಸಾಧ್ಯವೇ? ಒಂದು ಸೆಕೆಂಡಿನಲ್ಲಿ, ಒಂದು ನಿಮಿಷದಲ್ಲಿ ಅಲ್ಲ, 10 ನಿಮಿಷದಲ್ಲಿ ಅಲ್ಲ, ಒಂದು ಸೆಕೆಂಡ್ನಲ್ಲಿ ಯೋಚಿಸಿದಿರಿ ಹಾಗೂ ಆಗಿಬಿಟ್ಟಿರಿ, ಈ ರೀತಿಯ ಅಭ್ಯಾಸವಿದೆಯೇ? ಒಳ್ಳೆಯದು, ಯಾರು ಒಂದು ಸೆಕೆಂಡಿನಲ್ಲಿ ಆಗಬಲ್ಲರು, 2 ಸೆಕೆಂಡಿನಲ್ಲಿ ಅಲ್ಲ, ಒಂದು ಸೆಕೆಂಡ್ನಲ್ಲಿ ಆಗುತ್ತೀರಿ ಎನ್ನುವವರು ಒಂದು ಕೈಯಿಂದ ಚಪ್ಪಾಳೆ ಹೊಡೆಯಿರಿ. ಆಗಲು ಸಾಧ್ಯವೇ? ಸುಮ್ಮನೆ ಕೈ ಎತ್ತಬೇಡಿ. ಡಬಲ್ ವಿದೇಶಿಯರು ಕೈ ಎತ್ತುತ್ತಿಲ್ಲ! ಸಮಯ ಬೇಕಾಗುತ್ತದೆಯೇ? ಒಳ್ಳೆಯದು ಯಾರು ಸ್ವಲ್ಪ ಸಮಯ ಬೇಕು ಎಂದು ತಿಳಿಯುತ್ತೀರಿ, ಒಂದು ಸೆಕೆಂಡ್ನಲ್ಲಿ ಅಲ್ಲ, ಸ್ವಲ್ಪ ಸಮಯ ಬೇಕಾಗುತ್ತದೆ ಎನ್ನುವವರು ಕೈ ಎತ್ತಿ. (ಬಹುತೇಕರು ಕೈಯೆತ್ತಿದರು) ಒಳ್ಳೆಯದು, ಆದರೆ ಕೊನೆಯ ಸಮಯದ ಪೇಪರ್ ಒಂದು ಸೆಕೆಂಡ್ನಲ್ಲಿ ಬರುವಂತಹದ್ದಾಗಿದೆ, ಆಗ ಏನು ಮಾಡುವಿರಿ? ಇದ್ದಕ್ಕಿದ್ದಂತೆಯೇ ಬರುತ್ತದೆ ಹಾಗೂ ಸೆಕೆಂಡ್ ನಲ್ಲಿ ಬರುತ್ತದೆ. ಕೈ ಎತ್ತಿದಿರಿ, ಯಾವುದೇ ತೊಂದರೆ ಇಲ್ಲ. ಅನುಭೂತಿ ಮಾಡಿದಿರಿ, ಇದು ಸಹ ಬಹಳ ಒಳ್ಳೆಯದು. ಆದರೆ ಈ ಅಭ್ಯಾಸ ಮಾಡಲೇಬೇಕು. ಮಾಡಬೇಕಾಗುತ್ತದೆ ಅಲ್ಲ, ಮಾಡಲೇಬೇಕು. ಈ ಅಭ್ಯಾಸ ಬಹಳ ಬಹಳ- ಬಹಳ ಅವಶ್ಯಕವಾಗಿದೆ. ಹೋಗಲಿ, ಬಾಪ್ದಾದಾರವರು ನಿಮಗೆ ಇನ್ನು ಸ್ವಲ್ಪ ಸಮಯ ಕೊಡುತ್ತಾರೆ. ಎಷ್ಟು ಸಮಯ ಬೇಕು? ಎರಡು ಸಾವಿರದ ವರೆಗೂ ಬೇಕೆ? 21ನೇ ಶತಮಾನವಂತು ನೀವೆಲ್ಲರೂ ಚಾಲೆಂಜ್ (ಸವಾಲು) ಮಾಡಿದ್ದೀರಿ- ಗೋಲ್ಡನ್ ಏಜ್ ಪ್ರಪಂಚ ಬರುವುದು ಹಾಗೂ ವಾತಾವರಣವನ್ನು ತಯಾರು ಮಾಡುತ್ತೇವೆ. ಚಾಲೆಂಜ್ ಮಾಡಿದ್ದಿರಲ್ಲವೇ! ಎಂದ ಮೇಲೆ ಅಷ್ಟರವರೆಗೂ ಬಹಳ ಸಮಯವಿದೆ. ಎಷ್ಟು ಸ್ವಯಂನ ಮೇಲೆ ಗಮನ ಕೊಡಲು ಸಾಧ್ಯವೂ, ಕೊಡಲು ಸಾಧ್ಯವೇ? ಅಲ್ಲ, ಕೊಡಲೇಬೇಕು. ಹೇಗೆ ದೇಹಭಾನದಲ್ಲಿ ಬರಲು ಎಷ್ಟು ಸಮಯ ಬೇಕಾಗುತ್ತದೆ! ಎರಡು ಸೆಕೆಂಡ್? ಬಯಸದಿದ್ದರೂ ಸಹ ದೇಹ ಭಾನದಲ್ಲಿ ಬಂದುಬಿಡುತ್ತೀರಿ, ಎಂದ ಮೇಲೆ ಎಷ್ಟು ಸಮಯ ಹಿಡಿಸುತ್ತದೆ? ಒಂದು ಸೆಕೆಂಡ್ ಅಥವಾ ಅದಕ್ಕಿಂತಲೂ ಕಡಿಮೆ? ಗೊತ್ತೇ ಆಗುವುದಿಲ್ಲ- ದೇಹ ಭಾನದಲ್ಲಿ ಬಂದುಬಿಟ್ಟಿದ್ದೇವೆ. ಇದೇ ರೀತಿ ಈ ಅಭ್ಯಾಸವನ್ನು ಮಾಡಿ- ಏನೇ ಆಗಲಿ, ಏನೆ ಮಾಡುತ್ತಿರಲಿ ಆದರೆ ಗೊತ್ತೇ ಆಗದಿದ್ದಂತೆ ಆತ್ಮ ಅಭಿಮಾನಿ, ಶಕ್ತಿಶಾಲಿ ಸ್ಥಿತಿಯಲ್ಲಿ ಸ್ವತಹವಾಗಿ ಬಂದುಬಿಟ್ಟಿದ್ದೇನೆ. ಫರಿಶ್ತಾ ಸ್ಥಿತಿಯು ಸಹ ಸ್ವತಹವಾಗಿ ಬಂದುಬಿಡಬೇಕು. ಎಷ್ಟು ತಮ್ಮ ಸ್ವಭಾವ ಫರಿಶ್ತಾತನದ್ದಾಗಿ ಮಾಡಿಕೊಳ್ಳುತ್ತೀರಿ, ಪ್ರಕೃತಿ ಈ ಸ್ಥಿತಿಯನ್ನು ನ್ಯಾಚುರಲ್ (ಸ್ವತಹವಾಗಿ) ಮಾಡಿಬಿಡುತ್ತದೆ. ಹಾಗಾದರೆ ಬಾಪ್ದಾದಾರವರು ಎಷ್ಟು ಸಮಯದ ನಂತರ ಕೇಳಬಹುದು? ಎಷ್ಟು ಸಮಯ ಬೇಕು? ಜಯಂತಿ ಹೇಳಿ- ಎಷ್ಟು ಸಮಯ ಬೇಕು? ವಿದೇಶಿಯರ ಕಡೆಯಿಂದ ನೀವು ಹೇಳಿ- ವಿದೇಶಿಯರಿಗೆ ಎಷ್ಟು ಸಮಯ ಬೇಕು? ಜನಕ್ ಹೇಳಿ. (ದಾದೀಜಿಯವರು ಹೇಳಿದರು ಇವತ್ತೆ ಆಗುತ್ತೇವೆ, ನಾಳೆ ಅಲ್ಲ) ಒಂದು ವೇಳೆ ಇಂದೇ ಆಗುತ್ತೀರಿ ಎಂದರೆ ಎಲ್ಲರೂ ಫರಿಶ್ತಾ ಆಗಿಬಿಟ್ಟಿದ್ದೀರಿ? ಆಗಿಬಿಡುತ್ತೇವೆ ಅಲ್ಲ. ಆಗಿಬಿಡುತ್ತೇವೆ ಎಂದರೆ ಎಲ್ಲಿಯವರೆಗೆ ಆಗುವಿರಿ? ಬಾಪ್ದಾದಾರವರು ಇಂದು ಬ್ರಹ್ಮಾ ತಂದೆಯ ಯಾವ ಸಂಸ್ಕಾರವನ್ನು ಹೇಳಿದರು?- `ತಕ್ಷಣ ದಾನ ಮಹಾಪುಣ್ಯ'.
|
6 |
+
ಬಾಪ್ದಾದಾರವರಿಗೆ ಪ್ರತಿಯೊಂದು ಮಗುವಿನ ಮೇಲೆ ಪ್ರೀತಿ ಇದೆ. ಒಂದು ಮಗುವನ್ನು ಸಹ ಕಡಿಮೆ ಎಂದು ತಿಳಿಯುವುದಿಲ್ಲ. ನಂಬರ್ವಾರ್ ಏಕೆ? ಎಲ್ಲರೂ ನಂಬರ್ ಒನ್ ಆಗಿಬಿಟ್ಟರೆ ಎಷ್ಟು ಚೆನ್ನಾಗಿರುತ್ತೆ. ಒಳ್ಳೆಯದು ಇಂದು ಬಹಳ ಗುಂಪುಗಳು ಬಂದಿದ್ದಾರೆ.
|
7 |
+
ಪ್ರಶಾಸಕ ವರ್ಗ (ಅಡ್ಮಿನಿಸ್ಟ್ರೇಟಿವ್ ವಿಂಗ್)ನ ಸಹೋದರ ಸಹೋದರಿಯರೊಂದಿಗೆ:- ಪರಸ್ಪರ ಸೇರಿಕೊಂಡು ಯಾವ ಪ್ರೋಗ್ರಾಮ್ ಮಾಡಿದ್ದೀರಿ? ಇಂತಹ ತೀವ್ರ ಪುರುಷಾರ್ಥದ ಯೋಜನೆಯನ್ನು ಮಾಡಿ ಯಾವುದರಿಂದ ಬೇಗ ನೀವು ಶ್ರೇಷ್ಠ ಆತ್ಮರ ಕೈಯಲ್ಲಿ ಈ ಕಾರ್ಯ ಬಂದು ಬಿಡಬೇಕು. ವಿಶ್ವ ಪರಿವರ್ತನೆ ಮಾಡಬೇಕೆಂದರೆ ಇಡೀ ಅಡ್ಮಿನಿಸ್ಟ್ರೇಷನ್ (ಪ್ರಶಾಸನ) ಬದಲಾಯಿಸಬೇಕಾಗುತ್ತದೆ ಅಲ್ಲವೇ! ಹೇಗೆ ಈ ಕಾರ್ಯ ಸಹಜವಾಗಿ ಮುಂದುವರೆಯುತ್ತಾ ಹೋಗುವುದು, ಹರಡುತ್ತಾ ಹೋಗುವುದು, ಇದರ ಯೋಚನೆ ಮಾಡಿದ್ದೀರಾ? ಯಾರೆಲ್ಲಾ ಕಡಿಮೆ ಎಂದರೆ ಕಡಿಮೆ ದೊಡ್ಡ ದೊಡ್ಡ ನಗರಗಳಲ್ಲಿ ನಿಮಿತ್ತರಾಗಿದ್ದಾರೆ ಅವರಿಗೆ ಪರ್ಸನಲ್ (ವೈಯಕ್ತಿಕವಾಗಿ) ಸಂದೇಶ ಕೊಡುವ ಯೋಜನೆ ಮಾಡಿದ್ದೀರಾ? ಕಡಿಮೆ ಎಂದರೆ ಕಡಿಮೆ ಇವರಾದರೂ ತಿಳಿದುಕೊಳ್ಳಲಿ- ಈಗ ಆಧ್ಯಾತ್ಮಿಕತೆಯ ಮೂಲಕ ಪರಿವರ್ತನೆ ಆಗಬಹುದು ಹಾಗೂ ಆಗಲೇಬೇಕು. ಹಾಗಾದರೆ ತಮ್ಮ ವರ್ಗದವರನ್ನು ಎದ್ದೇಳಿಸಿ ಆದ್ದರಿಂದ ಈ ವರ್ಗಗಳನ್ನು ಮಾಡಲಾಗಿದೆ. ಬಾಪ್ದಾದಾರವರು ವರ್ಗದವರ ಸೇವೆಯನ್ನು ನೋಡಿ ಖುಷಿಯಾಗಿದ್ದಾರೆ ಆದರೆ ಈ ಫಲಿತಾಂಶವನ್ನು ನೋಡಬೇಕಾಗಿದೆ- ಪ್ರತಿ ವರ್ಗದವರು ತಮ್ಮ ತಮ್ಮ ವರ್ಗದವರಿಗೆ ಎಲ್ಲಿಯವರೆಗೂ ಸಂದೇಶವನ್ನು ತಲುಪಿಸಿದ್ದಾರೆ! ಅಲ್ಪಸ್ವಲ್ಪ ಎದ್ದೇಳಿಸಿದ್ದೀರಾ ಅಥವಾ ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಾ? ಸಹಯೋಗಿ, ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಾ? ಬ್ರಹ್ಮಾಕುಮಾರನನ್ನಾಗಿ ಮಾಡಿಕೊಂಡಿಲ್ಲ ಆದರೆ ಸಹಯೋಗಿ ಜೊತೆಗಾರರನ್ನಾಗಿ ಮಾಡಿಕೊಂಡಿದ್ದೀರಾ?
|
8 |
+
ಎಲ್ಲಾ ವರ್ಗದವರಿಗೆ ಬಾಪ್ದಾದಾರವರು ಹೇಳುತ್ತಿದ್ದಾರೆ- ಹೇಗೆ ಈಗ ಧಾರ್ಮಿಕ ನಾಯಕರು ಬಂದರು, ಅವರು ನಂಬರ್ಒನ್ ಆಗಿರಲಿಲ್ಲ ಆದರೂ ಸಹ ಒಂದೇ ವೇದಿಕೆಯ ಮೇಲೆ ಎಲ್ಲರೂ ಒಟ್ಟಾದರೂ ಹಾಗೂ ಎಲ್ಲರ ಮುಖದಿಂದ ಬಂತು- ನಾವೆಲ್ಲರೂ ಸೇರಿಕೊಂಡು ಆಧ್ಯಾತ್ಮಿಕ ಶಕ್ತಿಯನ್ನು ಹರಡಿಸಬೇಕು. ಈ ರೀತಿ ಪ್ರತಿಯೊಂದು ವರ್ಗದವರು ಯಾರೆಲ್ಲಾ ಬಂದಿದ್ದೀರಿ, ಈ ಪ್ರತಿಯೊಂದು ವರ್ಗದವರು ಸಹ ಇಂತಹ ಫಲಿತಾಂಶವನ್ನು ತೆಗೆಯಬೇಕು- ನಮ್ಮ ವರ್ಗದವರಿಗೆ ಎಲ್ಲಿಯವರೆಗೂ ಸಂದೇಶ ತಲುಪಿದೆ?
|
9 |
+
ಎರಡನೆಯದು- ಆಧ್ಯಾತ್ಮಿಕತೆಯ ಅವಶ್ಯಕತೆ ಇದೆ ಹಾಗೂ ನಾವು ಸಹಯೋಗಿಗಳಾಗುತ್ತೇವೆ ಇಂತಹ ಫಲಿತಾಂಶವಿರಲಿ. ರೆಗುಲರ್ (ನಿಯಮಿತ) ವಿದ್ಯಾರ್ಥಿಗಳಾಗುವುದಿಲ್ಲ ಆದರೆ ಸಹಯೋಗಿ ಆಗಬಹುದು. ಇಲ್ಲಿಯವರೆಗೂ ಪ್ರತಿಯೊಂದು ವರ್ಗದವರಿಗೂ ಏನೆಲ್ಲ ಸೇವೆ ಮಾಡಿದ್ದೀರಿ, ಹೇಗೆ ಈಗ ಧಾರ್ಮಿಕ ನಾಯಕರನ್ನು ಕರೆದಿರಿ, ಇದೇ ರೀತಿ ಪ್ರತಿಯೊಂದು ದೇಶದಿಂದ ಪ್ರತಿಯೊಂದು ವರ್ಗದವರಿಗೆ ಮಾಡಿ. ಮೊದಲು ಭಾರತದಲ್ಲಿಯೇ ಮಾಡಿ, ನಂತರ ಇಂಟನ್ರ್ಯಾಷನಲ್ (ಅಂತರಾಷ್ಟ್ರೀಯವಾಗಿ) ಮಾಡಿ, ಪ್ರತಿಯೊಂದು ವರ್ಗದ ಇಂತಹ ಭಿನ್ನ-ಭಿನ್ನ ಪದವಿಯವರು ಒಟ್ಟಾಗಲಿ ಹಾಗೂ ಇಂತಹ ಅನುಭವ ಮಾಡಲಿ- ನಾವು ಇವರ ಸಹಯೋಗಿಗಳಾಗಬೇಕು. ಪ್ರತಿಯೊಂದು ವರ್ಗದ ಈ ಫಲಿತಾಂಶ ಎಲ್ಲಿಯವರೆಗೂ ಇದೆ? ಹಾಗೂ ಮುಂದಿನ ಯೋಜನೆ ಏನಾಗಿದೆ? ಏಕೆಂದರೆ ಒಂದು ವರ್ಗ, ಒಬ್ಬೊಬ್ಬರನ್ನು ಒಂದು ವೇಳೆ ಲಕ್ಷ್ಯವಿಟ್ಟುಕೊಂಡು ಸಮೀಪ ತರುತ್ತಿರಿ ಎಂದರೆ ನಂತರ ಎಲ್ಲಾ ವರ್ಗದ ಯಾರೆಲ್ಲ ಸಮೀಪ ಸಹಯೋಗಿಗಳಿದ್ದಾರಲ್ಲವೇ, ಅವರ ಸಂಘಟನೆಯನ್ನು ಮಾಡಿ ದೊಡ್ಡ ಸಂಘಟನೆಯನ್ನು ಮಾಡೋಣ. ಹಾಗೂ ಒಬ್ಬರು ಇನ್ನೊಬ್ಬರನ್ನು ನೋಡುತ್ತಾ ಉಮಂಗ ಉತ್ಸಾಹವು ಸಹ ಬರುತ್ತದೆ. ಈಗ ಹರಡಿಕೊಂಡಿದ್ದಾರೆ, ಒಂದು ನಗರದಲ್ಲಿ ಕೆಲವರು, ಇನ್ನೊಂದು ನಗರದಲ್ಲಿ ಕೆಲವರು. ಒಳ್ಳೆಯವರಾಗಿದ್ದಾರೆ ಆದರೆ ಎಲ್ಲಕ್ಕಿಂತ ಮೊದಲು ಸಂಘಟನೆಯನ್ನು ಸೇರಿಸಿ ಹಾಗೂ ನಂತರ ಎಲ್ಲರನ್ನು ಸೇರಿಸಿ ಸಂಘಟನೆ ಮಧುಬನದಲ��ಲಿ ಮಾಡೋಣ. ಇಂತಹ ಯೋಜನೆಯನ್ನು ಮಾಡಿದ್ದೀರಾ? ಅವಶ್ಯವಾಗಿ ಮಾಡಿರಬಹುದು. ಫಾರಿನ್ ಅವರಿಗೆ( ವಿದೇಶದವರಿಗೆ) ಸಹ ಸಂದೇಶವನ್ನು ಕಳುಹಿಸಿದ್ದೆವು, ಬಹಳ ಹರಡಿಕೊಂಡಿದ್ದಾರೆ. ಭಾರತದಲ್ಲಿಯೂ ನೋಡಿ ಒಳ್ಳೊಳ್ಳೆಯ ಆತ್ಮಗಳು ಬೇರೆ ಬೇರೆ ಜಾಗಗಳಲ್ಲಿ ಹೊರ ಬಂದಿದ್ದಾರೆ ಆದರೆ ಗುಪ್ತವಾಗಿ ಇದ್ದುಬಿಡುತ್ತಾರೆ. ಅವರನ್ನು ಭೇಟಿ ಮಾಡಿಸಿ ವಿಶೇಷ ಕಾರ್ಯಕ್ರಮವನ್ನು ಮಾಡಿ ಅನುಭವವನ್ನು ಹಂಚಿಸಿ, ಇದರಿಂದ ಅಂತರ ಬಂದುಬಿಡುತ್ತದೆ, ಸಮೀಪ ಬಂದುಬಿಡುತ್ತಾರೆ. ಕೆಲವು ವರ್ಗದಲ್ಲಿ ಐದು ಇರುತ್ತಾರೆ, ಕೆಲವು ವರ್ಗದಲ್ಲಿ ಎಂಟು ಇರುತ್ತಾರೆ, ಕೆಲವು ವರ್ಗದಲ್ಲಿ 25 - 30 ಸಹ ಇರುತ್ತಾರೆ. ಸಂಘಟನೆಯಲ್ಲಿ ಬರುವುದರಿಂದ ಮುಂದುವರೆದು ಬಿಡುತ್ತಾರೆ. ಉಮಂಗ - ಉಲ್ಲಾಸ ವೃದ್ಧಿಯಾಗುತ್ತದೆ. ಹಾಗಾದರೆ ಇಲ್ಲಿಯವರೆಗೂ ಏನೆಲ್ಲಾ ವರ್ಗಗಳ ಸೇವೆಯಾಗಿದೆ, ಅದರ ಫಲಿತಾಂಶವನ್ನು ತೆಗೆಯಬೇಕು. ಕೇಳಿಸಿತೇ, ಎಲ್ಲಾ ವರ್ಗದವರು ಕೇಳಿಸಿಕೊಳ್ಳುತ್ತಿದ್ದೀರಿ ಅಲ್ಲವೇ! ಎಲ್ಲಾ ವರ್ಗದವರು ಯಾರೆಲ್ಲ ಇಂದು ವಿಶೇಷವಾಗಿ ಬಂದಿದ್ದೀರಿ ಅವರು ಕೈ ಎತ್ತಿ. ಬಹಳ ಇದ್ದಾರೆ. ಹಾಗಾದರೆ ಈಗ ಫಲಿತಾಂಶವನ್ನು ಕೊಡಿ- ಎಷ್ಟು ಎಷ್ಟು, ಯಾರು ಯಾರು ಹಾಗೂ ಎಷ್ಟು ಪಸೆರ್ಂಟೇಜ್ ಸಮೀಪ ಸಹಯೋಗಿಗಳಾಗಿದ್ದಾರೆ? ನಂತರ ಅವರಿಗಾಗಿ ರಮಣೀಕ ಕಾರ್ಯಕ್ರಮವನ್ನು ತಯಾರಿಸೋಣ. ಸರಿಯೇ!
|
10 |
+
ಮಧುಬನದವರು ಖಾಲಿಯಾಗಿ ಇರಬಾರದು. ಖಾಲಿಯಾಗಿರಲು ಬಯಸುತ್ತೀರಾ? ವ್ಯಸ್ತರಾಗಿರಲು ಬಯಸುತ್ತೀರಿ ಅಲ್ಲವೇ! ಅಥವಾ ದಣಿದು ಬಿಡುತ್ತೀರಾ? ಮಧ್ಯ ಮಧ್ಯದಲ್ಲಿ 15 ದಿನ ರಜೆಯೂ ಇರುತ್ತದೆ ಹಾಗೂ ಇರಲೇಬೇಕು. ಆದರೆ ಕಾರ್ಯಕ್ರಮದ ಹಿಂದೆ ಕಾರ್ಯಕ್ರಮ ಲಿಸ್ಟ್ನಲ್ಲಿ ಇರಬೇಕು ಆಗ ಉಮಂಗ ಉತ್ಸಾಹವಿರುತ್ತದೆ. ಇಲ್ಲವಾದರೆ ಯಾವಾಗ ಸೇವೆ ಇರುವುದಿಲ್ಲ ಎಂದರೆ ದಾದಿ ಒಂದು ದೂರನ್ನು ಕೊಡುತ್ತಾರೆ. ಯಾವ ದೂರು ಹೇಳಲೇ? ದಾದಿ ಹೇಳುತ್ತಾರೆ, ಎಲ್ಲರೂ ಹೇಳುತ್ತಾರೆ- ತಮ್ಮ ತಮ್ಮ ಊರಿಗೆ ಹೋಗುತ್ತೇವೆ, ಸುತ್ತಾಡಲು ಹೋಗುತ್ತೇವೆ, ಸೇವೆಗಾಗಿಯೂ ಸುತ್ತಾಡಲು ಹೋಗುತ್ತೇವೆ ಆದ್ದರಿಂದ ವ್ಯಸ್ತರಾಗಿರುವುದು ಒಳ್ಳೆಯದಾಗಿದೆ. ವ್ಯಸ್ತರಾಗಿದ್ದರೆ ಕಿಟ್ ಕಿಟ್ ಆಗುವುದಿಲ್ಲ. ಹಾಗೂ ನೋಡಿ ಮಧುಬನದವರ ಒಂದು ವಿಶೇಷತೆಯ ಮೇಲೆ ಬಾಪ್ದಾದಾರವರು ಪದಮದಷ್ಟು ಶುಭಾಶಯಗಳನ್ನು ಕೊಡುತ್ತಾರೆ, ನೂರರಷ್ಟು ಸಹ ಅಲ್ಲ, ಪದಮದಷ್ಟು. ಯಾವ ಮಾತಿನ ಮೇಲೆ? ಯಾವಾಗಲೂ ಯಾರೇ ಬರುತ್ತಾರೆ ಎಂದರೆ ಮಧುಬನ ನಿವಾಸಿಯರಲ್ಲಿ ಇಂತಹ ಸೇವೆಯ ಲಗನ್ ಬಂದುಬಿಡುತ್ತದೆ ಏನೇ ಒಳಗಡೆ ಇದ್ದರೂ ಅದು, ಮರೆಯಾಗಿ ಹೋಗುತ್ತದೆ. ಅವ್ಯಕ್ತ ಕಾಣಿಸುತ್ತದೆ. ಅವಿಶ್ರಾಂತರಾಗಿ ಕಾಣಿಸುತ್ತಾರೆ ಹಾಗೂ ರಿಮಾರ್ಕ್ ಬರೆದು ಹೋಗುತ್ತಾರೆ- ಇಲ್ಲಂತೂ ಪ್ರತಿಯೊಬ್ಬರೂ ಫರಿಶ್ತೆಗಳಂತೆ ಎನಿಸುತ್ತಾರೆ. ಈ ವಿಶೇಷತೆ ಬಹಳ ಒಳ್ಳೆಯದಾಗಿದೆ- ಆ ಸಮಯದಲ್ಲಿ ವಿಶೇಷವಾಗಿ ವಿಲ್ ಪವರ್ ಬಂದುಬಿಡುತ್ತದೆ. ಸೇವೆಯ ಹೊಳಪು ಬಂದುಬಿಡುತ್ತದೆ. ಎಂದ ಮೇಲೆ ಈ ಪ್ರ��ಾಣ ಪತ್ರವನ್ನು ಬಾಪ್ದಾದಾರವರು ಕೊಡುತ್ತಾರೆ. ಶುಭಾಶಯಗಳು? ಚಪ್ಪಾಳೆ ಅಂತೂ ಹೊಡೆಯಿರಿ ಮಧುಬನದವರು. ಬಹಳ ಒಳ್ಳೆಯದು. ಬಾಪ್ದಾದಾರವರು ಸಹ ಆ ಸಮಯ ಸುತ್ತಾಡಲು ಬರುತ್ತಾರೆ, ನಿಮಗೆ ಗೊತ್ತಾಗುವುದಿಲ್ಲ ಆದರೆ ಬಾಪ್ದಾದಾರವರು ಸುತ್ತಾಡಲು ಬರುತ್ತಾರೆ. ಈ ಮಧುಬನದ ವಿಶೇಷತೆ ಇನ್ನಷ್ಟು ಮುಂದುವರೆಯುತ್ತಾ ಹೋಗುವುದು. ಒಳ್ಳೆಯದು.
|
11 |
+
ಮೀಡಿಯಾ ವಿಂಗ್: ವಿದೇಶದಲ್ಲಿಯೂ ಮೀಡಿಯಾ ಶುರುವಾಗಿದೆ ಅಲ್ಲವೇ! ಬಾಪ್ದಾದಾರವರು ನೋಡಿದರೂ ಮೀಡಿಯಾದಲ್ಲಿ ಒಳ್ಳೆಯ ಪರಿಶ್ರಮ ಪಟ್ಟಿದ್ದೀರಿ. ಈಗ ನ್ಯೂಸ್ ಪೇಪರ್ನಲ್ಲಿ (ಸುದ್ದಿ ಪತ್ರಿಕೆಯಲ್ಲಿ) ಬರಲು ಶುರುವಾಗಿದೆ ಹಾಗೂ ಪ್ರೀತಿಯಿಂದ ಕೊಡುತ್ತಾರೆ. ಪರಿಶ್ರಮದ ಫಲವು ಸಿಗುತ್ತಿದೆ. ಈಗ ಇನ್ನೂ ವಿಶೇಷವಾಗಿ ಸುದ್ದಿ ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ ಸದಾ ಕಾಲಕ್ಕಾಗಿ ಸ್ವಲ್ಪ ಸಮಯ ಕೊಟ್ಟಿದ್ದಾರೆ! ಪ್ರತಿದಿನ ನಡೆಯುತ್ತದೆ ಅಲ್ಲವೇ. ಈ ಉನ್ನತಿ ಚೆನ್ನಾಗಿದೆ. ಎಲ್ಲರಿಗೂ ಕೇಳಿಸಿಕೊಳ್ಳುವುದರಲ್ಲಿ ಒಳ್ಳೆಯ ಅನುಭವವಾಗುತ್ತದೆ ಈ ರೀತಿ ಸುದ್ಧಿ ಪತ್ರಿಕೆಯಲ್ಲಿ ವಿಶೇಷ ಸಪ್ತಾಹಿಕವಾಗಿರಲಿ, ಅಥವಾ ಪ್ರತಿನಿತ್ಯ ವಾಗಿರಲಿ ಅಥವಾ ಎರಡು ದಿನಕ್ಕೆ ಒಮ್ಮೆ ಒಂದು ಭಾಗ ನಿಗದಿಯಾಗಲಿ- ಇದು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಅವಕಾಶವಾಗಿದೆ. ಈ ರೀತಿ ಪುರುಷಾರ್ಥ ಮಾಡಿ. ಸಫಲತೆ ಇದೆ, ಕನೆಕ್ಷನ್ ಕೂಡ ಚೆನ್ನಾಗಿ ವೃದ್ಧಿಯಾಗುತ್ತ ಹೋಗುತ್ತದೆ. ಈಗ ಸುದ್ದಿ ಪತ್ರಿಕೆಯಲ್ಲಿ ಏನಾದರೂ ಅದ್ಭುತವನ್ನು ಮಾಡಿ ತೋರಿಸಿ ಸುದ್ಧಿ ಪತ್ರಿಕೆಯಲ್ಲಿ. ಮಾಡಲು ಸಾಧ್ಯವೇ? ಗುಂಪು ಮಾಡಲು ಸಾಧ್ಯವೇ? ಕೈ ಎತ್ತಿ- ಆಯಿತು ಮಾಡುತ್ತೇವೆ. ಉಮಂಗ ಉತ್ಸಾಹ ಇದ್ದಲ್ಲಿ ಸಫಲತೆ ಇದ್ದೇ ಇದೆ. ಏಕೆ ಆಗಲು ಸಾಧ್ಯವಿಲ್ಲ! ಅಂತಿಮದಲ್ಲಿ ಸಮಯ ಬರುತ್ತದೆ ಯಾವಾಗ ಎಲ್ಲಾ ಸಾಧನೆಗಳು ನಿಮ್ಮ ಕಡೆಯಿಂದ ಬಳಸಲಾಗುತ್ತದೆ. ನಿಮಗೆ ನೀಡುತ್ತಾರೆ. ಏನಾದರೂ ಕೊಡಿ, ಏನಾದರೂ ಕೊಡಿ ಎಂದು ನೀಡುತ್ತಾರೆ. ಸಹಯೋಗವನ್ನು ತೆಗೆದುಕೊಳ್ಳಿ. ಈಗ ನೀವು ಹೇಳಬೇಕಾಗುತ್ತದೆ- ಸಹ ಯೋಗಿಗಳಾಗಿ ಎಂದು, ನಂತರ ಅವರು ಹೇಳುತ್ತಾರೆ ನಮ್ಮನ್ನು ಸಹಯೋಗಿಗಳನ್ನಾಗಿ ಮಾಡಿಕೊಳ್ಳಿ. ಕೇವಲ ಒಂದು ಮಾತನ್ನು ಪಕ್ಕಾ ಮಾಡಿಕೊಳ್ಳಿ- ಫರಿಶ್ತೆ, ಫರಿಶ್ತೆ, ಫರಿಶ್ತೆ. ನಂತರ ನೋಡಿ ನಿಮ್ಮ ಕೆಲಸ ಎಷ್ಟು ಬೇಗ ಆಗುತ್ತದೆ. ಹಿಂದೆ ಬೀಳುವ ಅವಶ್ಯಕತೆ ಇರುವುದಿಲ್ಲ ಆದರೆ ನೆರಳಿನಂತೆ ಅವರೇ ನಿಮ್ಮ ಹಿಂದೆ ಬರುತ್ತಾರೆ. ಕೇವಲ ನಿಮ್ಮ ಸ್ಥಿತಿ ನಿಂತಿರುವುದರಿಂದ ಇನ್ನು ನಿಂತುಕೊಂಡಿದೆ. ಸದಾ ಸಿದ್ದರಾಗಿ ಬಿಟ್ಟರೆ ಕೇವಲ ವಿಚ್ ಒತ್ತುವುದಷ್ಟೇ ತಡವಾಗಿರುತ್ತದೆ, ಅಷ್ಟೇ. ಚೆನ್ನಾಗಿ ಮಾಡುತ್ತಿದ್ದೀರಿ ಹಾಗೂ ಮಾಡುವಿರಿ.
|
12 |
+
ನಾಲ್ಕಾರು ಕಡೆಯ ದೇಶ ವಿದೇಶದ ಸಹಕಾರ ಸ್ವರೂಪದಲ್ಲಿ ಅಥವಾ ಸೂಕ್ಷ್ಮ ಸ್ವರೂಪದಲ್ಲಿ ಮಿಲನ ಆಚರಿಸುವಂತಹ ಸರ್ವ ಸ್ವರಾಜ್ಯ ಅಧಿಕಾರಿ ಆತ್ಮಗಳಿಗೆ ಸದಾ ಈ ಶ್ರೇಷ್ಠ ಅಧಿಕಾರವನ್ನು ತಮ್ಮ ಚಲನೆ ಹಾಗೂ ಚಹರ���ಯಿಂದ ಪ್ರತ್ಯಕ್ಷ ಮಾಡುವಂತಹ ವಿಶೇಷ ಆತ್ಮಗಳಿಗೆ, ಸದಾ ಬಾಪ್ದಾದಾರವರನ್ನು ಪ್ರತಿಯೊಂದು ಹೆಜ್ಜೆಯಲ್ಲಿ ಫಾಲೋ ಮಾಡುವಂತಹ, ಸದಾ ಮನಸ್ಸನ್ನು ಸ್ವಚ್ಛ ಹಾಗೂ ಬುದ್ಧಿಯನ್ನು ಸ್ಪಷ್ಟವಾಗಿಟ್ಟುಕೊಳ್ಳುವಂತಹ ಇಂತಹ ಸ್ವತಹ ತೀವ್ರ ಪುರುಷಾರ್ಥಿ ಆತ್ಮಗಳಿಗೆ, ಸದಾ ಜೊತೆಯಲ್ಲಿರುವಂತಹ ಹಾಗೂ ಜೊತೆಯಲ್ಲಿ ನಡೆಯುವಂತಹ ಮಕ್ಕಳಿಗೆ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ
|
BKMurli/BKMurli/page_1010.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಈ ಹಾಡನ್ನು ಯಾರು ಹಾಡುತ್ತಿರುವರು? ಯಾರು ತಂದೆಯಿಂದ ಮೂರು ಜಗತ್ತಿನ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದಾರೆ. ತಮ್ಮಿಂದ ಏನೆಲ್ಲವೂ ಸಿಕ್ಕಿದೆಯೋ ಅದನ್ನ್ಯಾರೂ ದೂರಗೊಳಿಸಲು ಸಾಧ್ಯವಿಲ್ಲ. ನಮ್ಮನ್ನು ಯಾರೂ ದೂರಗೊಳಿಸಲು ಸಾಧ್ಯವಿಲ್ಲ ಅರ್ಥಾತ್ ಕಾಲ (ಮೃತ್ಯು) ಕಬಳಿಸಲು ಸಾಧ್ಯವಿಲ್ಲ. ಹಾಗೆಯೇ ನಮ್ಮ ರಾಜ್ಯವನ್ನೂ ಸಹ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಕ್ಕಳಿಗೆ ಗೊತ್ತಿದೆ - ನಾವು ಆ ಮಾಲೀಕನಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ತಂದೆಯನ್ನು ಮಾಲೀಕನೆಂದೂ ಸಹ ಹೇಳುತ್ತಾರೆ ಆದರೆ ಆ ಮಾಲೀಕನಿಂದ ಏನು ಸಿಗುತ್ತದೆ ಎನ್ನುವುದೇನೂ ಗೊತ್ತಿಲ್ಲ. ಮಾಲೀಕನನ್ನು ನೆನಪು ಮಾಡುವುದು ಹೇಗೆ, ಅವರ ನಾಮ-ರೂಪವೇನು? ಇದೂ ಸಹ ಗೊತ್ತಿಲ್ಲ. ಮಾಲೀಕನಂತು ಸೃಷ್ಟಿಯ ಮಾಲೀಕನಾದರಲ್ಲವೆ, ಅವರು ರಚೈತನಾದರು ಮತ್ತು ನಾವು ರಚನೆಯಾದೆವು. ಬಾಬಾರವರು ವಾರಸುಧಾರ(ಮಕ್ಕಳು)ರನ್ನು ರಚಿಸುತ್ತಾರೆ ಅಥವಾ ತನ್ನ ಮಕ್ಕಳನ್ನು ಪುನಃ ಮಾಲೀಕರನ್ನಾಗಿ ಮಾಡುತ್ತಾರೆ. ನಂತರ ಮಕ್ಕಳು ತಂದೆಯ ಮಾಲೀಕರಾಗಿ ಬಿಡುತ್ತಾರೆ. ಮಕ್ಕಳು ಹೇಳುವರು - ನನ್ನ ತಂದೆಯ ಆಸ್ತಿಯೇನಿದೆಯೋ ಅದರ ಮಾಲೀಕನು ನಾನಾಗಿರುವೆನು. ತಂದೆಯವರಂತು ಈ ರೀತಿ ಎಂದಿಗೂ ಹೇಳುವುದಿಲ್ಲ - ಮಕ್ಕಳ ಆಸ್ತಿಗೆ ನಾನು ಮಾಲೀಕನಾಗಿದ್ದೇನೆ. ಇದು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಇದನ್ನು ಬುದ್ಧಿವಂತ ಮಕ್ಕಳೇ ತಿಳಿದುಕೊಳ್ಳಲು ಸಾಧ್ಯವಾಗುವುದು. ಬುದ್ಧಿಯು ಸ್ವಚ್ಛವಿರದಿದ್ದರೆ ಜ್ಞಾನರತ್ನಗಳು ಧಾರಣೆಯಾಗಲು ಸಾಧ್ಯವಿಲ್ಲ. ಯಾವಾಗ ದೇಹೀ-ಅಭಿಮಾನಿ ಆಗುತ್ತೀರಿ ಆಗಲೇ ಈ ರತ್ನಗಳು ನಿಲ್ಲಲು ಸಾಧ್ಯವಾಗುವುದು. ಇದಕ್ಕಾಗಿ ದೇಹಿ-ಅಭಿಮಾನಿ ಆಗಿರಬೇಕು ಹಾಗೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಆ ತಂದೆಯನ್ನು ನೆನಪು ಮಾಡಬೇಕಾಗಿದೆ. ಹೇಗೆ ಲೌಕಿಕ ತಂದೆಯು ಮಕ್ಕಳಿಗೆ ಜನ್ಮ ಕೊಡುತ್ತಾರೆಂದರೆ, ಮಕ್ಕಳು ಮಾಲೀಕರಾಗಿ ಬಿಡುತ್ತಾರೆ. ಮಕ್ಕಳು ನನ್ನ ತಂದೆ ಎಂದು ಹೇಳಿದರೆ, ತಂದೆಯು ಇವರು ನನ್ನ ಮಕ್ಕಳೆಂದು ಹೇಳುವರು. ಆದರೆ ಮಕ್ಕಳ ಬಳಿಯಂತು ಏನೂ ಇಲ್ಲ, ಅವರಿಗಂತು ತಂದೆಯ ಆಸ್ತಿಯು ಸಿಗುತ್ತದೆ. ಆದರೆ ತಂದೆಯೆಂದಿಗೂ ಮಕ್ಕಳ ಆಸ್ತಿಯು ನನ್ನದೆಂದು ಹೇಳುವುದಿಲ್ಲ. ತಂದೆಯು ತಿಳಿಯುತ್ತಾರೆ - ಮಕ್ಕಳು ನನ್ನ ಆಸ್ತಿಯ ಮಾಲೀಕರು. ಇದು ಬಹಳ ಧಾರಣಾಯುಕ್ತವಾದ ಮಾತುಗಳಾಗಿವೆ. ಧಾರಣೆಯಾಗುವುದಿಲ್ಲ ಏಕೆಂದರೆ ಅವಗುಣಗಳಿವೆ. ನನ್ನಲ್ಲಿ ಬಹಳ ಅವಗುಣಗಳಿವೆ ಎನ್ನುವುದನ್ನು ತಿಳಿಯಬೇಕು. ಇದರಲ್ಲಿ ಮೊಟ್ಟ ಮೊದಲ ಅವಗುಣ ಅಥವಾ ಕೊರತೆಯೆಂದರೆ - ಶ್ರೀಮತದನುಸಾರ ನಡೆಯದಿರುವುದು. ಶ್ರೀಮತದಿಂದಲೇ ಶ್ರೇಷ್ಠರಾಗಬೇಕು. ಶ್ರೀಮತವು ರಾಜಯೋಗವನ್ನು ಕಲಿಸುತ್ತದೆ. ಶ್ರೀ ಎಂದರೆ ನಿರಾಕಾರ ಭಗವಾನುವಾಚ ಆಗಿದೆ ಆದ್ದರಿಂದ ನಾವು ಪ್ರಶ್ನೆ ಕೇಳುತ್ತೇವೆ – ಜ್ಞಾನ ಸಾಗರ ಪತಿತ-ಪಾವನ ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ���ಂಬಂಧವೇನಿದೆ? ಇದನ್ನು ಬಹಳ ದೊಡ್ಡ ಬೋರ್ಡ್ ಮೇಲೆ ಬರೆಯಬೇಕು. ಪರಮಾತ್ಮನು ಸ್ವರ್ಗದ ರಚೈತನಾಗಿದ್ದಾರೆ ಅಂದಮೇಲೆ ಯಾರ ಸಂಬಂಧವು ಪರಮಾತ್ಮನೊಂದಿಗೆ ಇದೆಯೋ ಅವರೂ ಸಹ ಅವಶ್ಯವಾಗಿ ಸ್ವರ್ಗದ ಮಾಲೀಕರಾಗಿ ಬಿಡುವರು.
|
2 |
+
ತಂದೆಯು ಬಂದು ಮಕ್ಕಳಿಗೆ ಸಲಾಂ (ಗೌರವ) ಮಾಡುತ್ತಾರೆ. ಸಲಾಂ ಮಾಲೇಕಂ ಮಕ್ಕಳೆ. ಅದಕ್ಕೆ ಮಕ್ಕಳು ಹೇಳುತ್ತಾರೆ - ಮಾಲೇಕಂ ಸಲಾಂ. ನಾವಂತು ಕೇವಲ ಬ್ರಹ್ಮಾಂಡದ ಮಾಲೀಕರಾಗಿದ್ದೇವೆ, ನೀವು ಬ್ರಹ್ಮಾಂಡ ಹಾಗೂ ವಿಶ್ವ - ಇವೆರಡಕ್ಕೂ ಮಾಲೀಕರಾಗುತ್ತೀರಿ ಆದ್ದರಿಂದ ತಂದೆಯು ಮಕ್ಕಳಿಗೆ ಡಬಲ್ ಸಲಾಂ ಮಾಡುತ್ತಾರೆ. ಬೇಹದ್ದಿನ ತಂದೆಯೊಬ್ಬರೇ ನಿಮಗಾಗಿ ಎಷ್ಟೊಂದು ನಿಷ್ಕಾಮ ಸೇವೆ ಮಾಡುವರು. ಲೌಕಿಕ ತಂದೆಯು ನಿಷ್ಕಾಮರಾಗಿ ಇರುವುದಿಲ್ಲ. ಅವರಿಗೆ ಆಸೆಯಿರುತ್ತದೆ - ನಾವು ವಾನಪ್ರಸ್ಥ ಸ್ಥಿತಿಯಲ್ಲಿದ್ದಾಗ, ನಮ್ಮ ಸೇವೆಯನ್ನು ಮಕ್ಕಳು ಮಾಡುವರು. ಸತ್ಯವಾಗಿಯೂ ಮಕ್ಕಳು ತಂದೆಯ ಸೇವೆ ಮಾಡುತ್ತಿದ್ದರು, ಈ ನಿಯಮವೂ ಇತ್ತು. ಇತ್ತೀಚೆಗೆ ಹಣವನ್ನು ವ್ಯರ್ಥವಾಗಿ ಕಳೆಯುತ್ತಾರೆ. ನೀವು ಮಕ್ಕಳಿಗೆ ಗೊತ್ತಿದೆ - ನಮಗೆ ತಂದೆಯಿಂದ ಅಂತಹ ರಾಜ್ಯಭಾಗ್ಯವು ಸಿಗುತ್ತದೆ. ಲಕ್ಷ್ಮೀ-ನಾರಾಯಣನ ಬಗ್ಗೆಯೂ ಬರೆಯಿರಿ - ಇವರನ್ನು ತಿಳಿದಿದ್ದೀರಾ? ಇವರಿಗೆ ಈ ಸ್ವರ್ಗದ ರಾಜ್ಯಭಾಗ್ಯವನ್ನು ಯಾರು ಕೊಟ್ಟರು? ಅವಶ್ಯವಾಗಿ ಸ್ವರ್ಗ ಸ್ಥಾಪನೆ ಮಾಡುವವರೇ ಕೊಡುವರು. ಹಳೆಯ ಪ್ರಪಂಚವಾದಾಗ ಹೊಸ ಪ್ರಪಂಚದ ಸ್ಥಾಪನೆಯನ್ನು ಮಾಡುವರು ಅಂದಮೇಲೆ ಲಕ್ಷ್ಮೀ-ನಾರಾಯಣರು ಈ ಆಸ್ತಿಯನ್ನು ಶ್ರೀಮತದನುಸಾರ ನಡೆಯುವುದರಿಂದ ಪಡೆದರು. ಶ್ರೀಮತವು ರಾಜಯೋಗ ಹಾಗೂ ಸಹಜ ಜ್ಞಾನವನ್ನು ಕಲಿಸಿಕೊಡುತ್ತದೆ. ಯಾರಿಗೆ ತಿಳಿಸುತ್ತಾರೆಯೋ ಅವರು ರಾಜರಾಗಿ ಬಿಡುತ್ತಾರೆ. ಮೊದಲ ನಂಬರಿನಲ್ಲಿ ಶ್ರೀಕೃಷ್ಣನಿದ್ದಾನೆ, ಅವನು ಅಂತಹ ಯಾವ ಕರ್ಮವನ್ನು ಮಾಡಿದನು? ಅದರಿಂದ ತನ್ನ ತಾಯಿ-ತಂದೆಗಿಂತಲೂ ಶ್ರೇಷ್ಠ ಪದವಿಯನ್ನು ಪಡೆದರು! ಆ ಮಹಾರಾಜ-ಮಹಾರಣಿ ಎಲ್ಲಿದ್ದರು, ಅವರ ಬಳಿ ಕೃಷ್ಣನ ಜನ್ಮವಾಯಿತು! ಎಲ್ಲಿಯವರೆಗೆ ನಿರ್ವಿಕಾರಿಯಾಗಿ ಇರುವುದಿಲ್ಲವೋ ಅಲ್ಲಿಯವರೆಗೆ ಬುದ್ಧಿಯಲ್ಲಿ ಅವಿನಾಶಿ ಜ್ಞಾನವು ಧಾರಣೆಯಾಗಲು ಸಾಧ್ಯವಿಲ್ಲ. ಯಾವಾಗ ಪವಿತ್ರವಾಗಿರುತ್ತೀರಿ ಆಗಲೇ ಬುದ್ಧಿಯ ಬೀಗವು ತೆರೆಯಲ್ಪಡುತ್ತದೆ. ಅಪವಿತ್ರರಾಗುವುದರಿಂದ ಬುದ್ಧಿಯಿಂದ ಎಲ್ಲವೂ ಹೊರಟು ಹೋಗುತ್ತದೆ. ಬಹಳ ಮಕ್ಕಳು ವಿಚ್ಛೇದನವನ್ನೂ ಕೊಟ್ಟು ಬಿಡುತ್ತಾರೆ, ವಿದ್ಯಾಭ್ಯಾಸ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಅವರೆಂದಿಗೂ ಯಾರಿಗೂ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ. ಪತಿತರಾಗುತ್ತಾರೆ, ಆಹಾರ-ಪಾನೀಯಗಳನ್ನೂ ಅಶುದ್ಧವಾಗಿರುವುದನ್ನೇ ಸ್ವೀಕರಿಸುತ್ತಾರೆ, ಹೋಗಿ ಮಾಯಾವಿ ಮನುಷ್ಯರೊಂದಿಗೆ ಭೇಟಿಯಾಗುತ್ತಾರೆ, ಅಂತಹವರ ಗಂಟಲು ಒಣಗಿ ಬಿಡುತ್ತದೆ (ಜ್ಞಾನವನ್ನು ತಿಳಿಸಲು ಸಾಧ್ಯವಾಗುವುದಿಲ್ಲ). ಈ ಮಾತುಗಳೂ ಸಹ ಶಾಸ್ತ್ರಗಳಲ್ಲಿದೆ - ಬೃಂದ��ವನದಲ್ಲಿ ರಾಸ್ ಮುಂತಾದವು ಆಗುತ್ತಿದ್ದವು, ಮಾಡುವುದಕ್ಕೆ ಅಡ್ಡಿ ಮಾಡುತ್ತಿದ್ದರು - ಯಾರಿಗೇ ತಿಳಿಸುತ್ತೀರೆಂದರೆ ಗಂಟಲು ಒಣಗಿ ಬಿಡುತ್ತದೆ - ಇದು ಜ್ಞಾನದ (ತಿಳಿದುಕೊಳ್ಳುವ) ಮಾತುಗಳಾಗಿವೆ. ಒಂದುವೇಳೆ ತಂದೆಯವರಿಗೆ ವಿಚ್ಛೇದನ ಕೊಟ್ಟು, ಅಲ್ಲಿಂದ ಹೊರಟು ನಿಂದನೆ ಮಾಡಿದರೆ ಗಂಟಲು ಒಣಗಿ ಬಿಡುತ್ತದೆ. ಹೇಳುತ್ತಾರಲ್ಲವೆ - ಸದ್ಗುರುವಿನ ನಿಂದಕರು ನೆಲೆಯನ್ನು ಪಡೆಯುವುದಿಲ್ಲ. ತಂದೆಯು ಹೇಳುವರು - ಯಾವಾಗ ಸೃಷ್ಟಿಯು ಪತಿತ, ಹಳೆಯದಾಗುತ್ತದೆಯೋ ಆಗ ನಾನು ಬರುವೆನು. ಮನುಷ್ಯರು ತಮೋಪ್ರಧಾನರು ಆಗಲೇಬೇಕು. ಯಾವ ಕರ್ತವ್ಯವನ್ನು ಮಾಡುವರೋ ಅದನ್ನು ಅವರು ಉಲ್ಟಾ ಆಗಿಯೇ ಮಾಡುವರು ಏಕೆಂದರೆ ಉಲ್ಟಾ ಮತವು ಸಿಗುತ್ತಿದೆ, ಶ್ರೀಮತವಿಲ್ಲ. ಉಲ್ಟಾ ಮತವು ಪತಿತ ಭ್ರಷ್ಟಾಚಾರಿಯನ್ನಾಗಿ ಮಾಡುತ್ತದೆ. ಇದಕ್ಕೆ ಮುಂಚೆ ಭ್ರಷ್ಟಾಚಾರಿ ಎಂಬ ಶಬ್ಧವೇ ಇರಲಿಲ್ಲ. ಸನ್ಯಾಸಿಗಳು ಪಾವನರಾಗುವುದಕ್ಕಾಗಿ ವಿಕಾರಗಳ ಸನ್ಯಾಸ ಮಾಡುತ್ತಾರೆ.
|
3 |
+
ಆದ್ದರಿಂದ ಮೊಟ್ಟ ಮೊದಲು ಈ ಮಾತಿನ ತಿಳುವಳಿಕೆ ಕೊಡಬೇಕು - ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ಎಲ್ಲರೂ ಭಗವಂತನನ್ನು ನೆನಪು ಮಾಡುತ್ತಾರೆ. ಭಗವಂತನು ಹೇಳುತ್ತಾರೆ - ನನಗೆ ಎಲ್ಲಾ ಭಕ್ತರೂ ಪ್ರಿಯರಾಗಿದ್ದಾರೆ ಏಕೆಂದರೆ ಅವರೆಲ್ಲರಿಗೂ ನಾನೇ ಗತಿ-ಸದ್ಗತಿ ಕೊಡಬೇಕು. ಭಗವಂತನು ಬಂದು ಭಕ್ತರಿಗೆ ಭಕ್ತಿಯ ಫಲವನ್ನು ಕೊಡುತ್ತಾರೆ ಆದ್ದರಿಂದ ಭಕ್ತರು ಭಗವಂತನಿಗೆ ಪ್ರಿಯವರೆಂದು ಅವರು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ದುರ್ಗತಿಯನ್ನು ಪಡೆದಿದ್ದೀರಿ, ನಾನೀಗ ಸದ್ಗತಿ ಕೊಡುವುದಕ್ಕಾಗಿ ಬಂದಿರುವೆನು. ಭಕ್ತಿಯ ನಂತರ ಅವಶ್ಯವಾಗಿ ಭಗವಂತನು ಬರಬೇಕಾಗಿದೆ. ನಾನು ಮೊದಲು ನಿಮಗೇ ಭಕ್ತಿಯ ಫಲವನ್ನು ಕೊಡಬೇಕಾಗುತ್ತದೆ. ಅನ್ಯರಂತು ಪ್ರಾರಂಭದಿಂದ ನನ್ನ ಭಕ್ತರಾಗುವುದಿಲ್ಲ, ಅವರಂತು ಅನೇಕರ ಭಕ್ತಿ ಮಾಡುತ್ತಾರೆ. ನಿನ್ನ ನನ್ನ ಪ್ರಿಯವಾದ ಮಕ್ಕಳಾಗಿದ್ದೀರಿ, ನೀವು ಮಾಲೀಕರಿದ್ದಿರಿ ನಂತರ ಮಾಯಾ ರಾವಣನು ನಿಮ್ಮ ಮೇಲೆ ವಿಜಯ ಪಡೆದನು, ತದನಂತರ ಭಕ್ತಿಯ ಆರಂಭವಾಗಿ ಬಿಟ್ಟಿತು. ಇದೂ ಸಹ ಡ್ರಾಮಾ ಆಗಿದೆ. ನಾನಂತು ಎಲ್ಲರ ಸದ್ಗತಿ ಮಾಡುತ್ತೇನೆ, ನೀವೀಗ ನನ್ನ ಮತದಂತೆ ನಡೆಯುವಿರಲ್ಲವೆ! ಮತ ಕೊಡುವುದಕ್ಕಾಗಿ ನಾನು ಬರಬೇಕಾಗುತ್ತದೆ. ಇಲ್ಲದಿದ್ದರೆ ಸದ್ಗತಿಯ ಮಾರ್ಗವನ್ನು ಹೇಗೆ ತಿಳಿಸುವುದು! ನಾನು ಮೊದಲ ನಂಬರಿನ ಈ ಭಕ್ತನ ತನುವಿನಲ್ಲಿ ಬರುತ್ತೇನೆ, ಇದು ನಂದಿಯಾಗಿದೆ. ಶಿವನ ಮಂದಿರದಲ್ಲಿ ಶಿವನ ಮುಂದೆ ನಂದಿಯನ್ನಿಡುತ್ತಾರೆ. ಈಗ ವಿಚಾರ ಮಾಡಿ - ಪರಮಪಿತ ಪರಮಾತ್ಮನು ಎತ್ತಿನ ತನುವಿನಲ್ಲಂತು ಬರುವುದಿಲ್ಲ. ಎತ್ತಿನ ಮೂಲಕ ರಾಜಯೋಗವನ್ನು ಕಲಿಸಿ ಕೊಡುವುದು ಹೇಗೆ? ಜ್ಞಾನ ಸಾಗರನು ಎತ್ತಿನಲ್ಲಿ ಪ್ರವೇಶ ಮಾಡುವರೇನು! ನೀವೀಗ ಬುದ್ಧಿವಂತರಾಗಿದ್ದೀರಿ, ಶ್ರೀಮತದಂತೆ ನಡೆದು ಲಕ್ಷ್ಮೀ-ನಾರಾಯಣ, ಸೂರ್ಯವಂಶಿ ರಾಜ-ರಾಣಿಯರಾಗುತ್ತಿದ��ದೀರಿ. ಆ ರಾಜಧಾನಿಯನ್ನೆಂದಿಗೂ ಯಾರೂ ಸಹ ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ, ಯಾವುದೇ ಬಿರುಗಾಳಿಗಳು ಬರಲು ಸಾಧ್ಯವಿಲ್ಲ. ನಾವು ಅಮರ ಪುರಿಯ ಮಾಲೀಕರಾಗುತ್ತೇವೆ, ಇದು ಮೃತ್ಯುಲೋಕವಾಗಿದೆ. ಅಮರನಾಥ ತಂದೆಯೇ ಕಾಲನ ಮೇಲೆ ವಿಜಯಿಗಳನ್ನಾಗಿ ಮಾಡುವವರಾಗಿದ್ದಾರೆ, ಅವರ ಪಾತ್ರವೇ ಭಿನ್ನವಾಗಿದೆ. ನೀವೆಲ್ಲರೂ ಪಾರ್ವತಿಯರು ಆಗಿದ್ದೀರಿ, ನಾನು ಅಮರನಾಥನಾಗಿದ್ದೇನೆ. ನಾನೆಂದಿಗೂ ಜನನ-ಮರಣದಲ್ಲಿ ಬರುವುದಿಲ್ಲ. ಅಮರಪುರಿ ಸ್ವರ್ಗದ ಮಾಲೀಕರನ್ನಾಗಿ ನಿಮ್ಮನ್ನು ಮಾಡುತ್ತೇನೆ. ಭಾರತವಾಸಿಗಳಿಗೆ ವೈಕುಂಠವೆಂದರೆ ಬಹಳ ಪ್ರಿಯ, ಹೇಳುತ್ತಾರೆ - ಇಂತಹವರು ವೈಕುಂಠವಾಸಿ ಆದರು. ಬಾಯನ್ನು ಬಹಳ ಸಿಹಿ ಮಾಡಿ ಬಿಟ್ಟರು. ಆ ವೈಕುಂಠವಂತು ಈಗ ಸತ್ಯಯುಗದಲ್ಲಾಗುವುದು. ಯಾವಾಗ ಸತ್ಯಯುಗವಿರುತ್ತದೆಯೋ ಆಗ ಪುನರ್ಜನ್ಮವೂ ಸತ್ಯಯುಗದಲ್ಲಿಯೇ ಪಡೆಯುತ್ತಾರೆ. ನಂತರ ತ್ರೇತಾದಲ್ಲಿ ಬರುತ್ತಾರೆಂದರೆ ಪುನರ್ಜನ್ಮವನ್ನೂ ತ್ರೇತಾದಲ್ಲಿಯೇ ಪಡೆಯುತ್ತಾರೆ. ನಂತರ ದ್ವಾಪರದಲ್ಲಿ ಬರುತ್ತಾರೆಂದರೆ ಪುನರ್ಜನ್ಮವೂ ದ್ವಾಪರದಲ್ಲಿಯೇ ಪಡೆಯುತ್ತಾರೆ. ಆದರೆ ಈ ರೀತಿಯೆಂದಾದರೂ ಆಗಲು ಸಾಧ್ಯವೇ - ಯಾರು ಕಲಿಯುಗದಲ್ಲಿ ಶರೀರ ಬಿಡುವರೋ ಅವರ ಪುನರ್ಜನ್ಮವು ಸತ್ಯಯುಗದಲ್ಲಾಗುತ್ತದೆ. ಸ್ವರ್ಗದಲ್ಲಿ ಜನ್ಮವನ್ನು ತೆಗೆದುಕೊಳ್ಳುವುದಕ್ಕೆ ಆಧಾರವಾಗಿದೆ - ವಿದ್ಯಾಭ್ಯಾಸದ ಆಧಾರದ ಮೇಲೆ. ತಂದೆಯು ಹೇಳುತ್ತಾರೆ - ನಾನು ನಿಮ್ಮನ್ನು ಸೃಷ್ಟಿಯ ಮಾಲೀಕರನ್ನಾಗಿ ಮಾಡುತ್ತೇನೆ, ನಾನು ನಿಷ್ಕಾಮಿ ಆಗಿದ್ದೇನೆ. ನಾನು ವಿಶ್ವದ ಮಾಲೀಕನಾಗುವುದಿಲ್ಲ. ನೀವು ಸ್ವರ್ಗದಲ್ಲಿ ಹೋಗುತ್ತೀರೆಂದರೆ, ನಾನು ವಿಶ್ರಾಂತಿಯಲ್ಲಿ ಹೋಗುತ್ತೇನೆ. ನಾನು ಈ ಚಕ್ರದಲ್ಲಿ ಬರುವುದಿಲ್ಲ. ಈ ಈಶ್ವರೀಯ ಜನ್ಮದ ನಂತರ ನೀವು ದೇವತೆಗಳ ಮಡಿಲಿನಲ್ಲಿ ಜನ್ಮ ಪಡೆಯುವಿರಿ. ಈಗ ನೀವು ಜನ್ಮ-ಜನ್ಮಾಂತರವು ಆಸುರಿ ಮಡಿಲಿನಲ್ಲಿ ಜನ್ಮವನ್ನು ತೆಗೆದುಕೊಳ್ಳುತ್ತೀರಿ, ಭ್ರಷ್ಟಾಚಾರಿಗಳು ಆಗಿ ಬಿಟ್ಟಿದ್ದೀರಿ. ಸತ್ಯಯುಗದಲ್ಲಿ ಎಲ್ಲರೂ ಶ್ರೇಷ್ಠಾಚಾರಿ ಆಗಿರುತ್ತಾರೆ. ನೀವೀಗ ಶ್ರೀಮತದಿಂದ ಶ್ರೇಷ್ಠಾಚಾರಿ ಆಗುತ್ತಿದ್ದೀರಿ. ಅಲ್ಲಿ ವಿಕಾರಗಳಿರುವುದಿಲ್ಲ. ಇಲಿ ಭಲೆ ಸನ್ಯಾಸಿಗಳಿದ್ದಾರೆ ಆದರೆ ಜನ್ಮವಂತು ವಿಕಾರಗಳಿಂದ ತೆಗೆದುಕೊಳ್ಳುವರಲ್ಲವೆ. ಸತ್ಯಯುಗದಲ್ಲಿ ವಿಕಾರಗಳಿಂದ ಜನ್ಮವಾಗುವುದಿಲ್ಲ, ಇಲ್ಲದಿದ್ದರೆ ಅವರನ್ನು ಸಂಪೂರ್ಣ ನಿರ್ವಿಕಾರಿ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿ ಮಾಯೆಯಿರುವುದಿಲ್ಲ ಆದರೆ ಈ ಮಾತುಗಳೂ ಸಹ ಯಾರ ಬುದ್ಧಿಯಲ್ಲಿಯಾದರೂ ಕುಳಿತುಕೊಳ್ಳಬೇಕು ಅಷ್ಟೇ (ಧಾರಣೆ).
|
4 |
+
ಈಗ ಬಾಬಾರವರು ಹೇಳುತ್ತಾರೆ - ಮಕ್ಕಳೇ, ನೀವು ಮನೆಗೆ ನಡೆಯಬೇಕಾಗಿದೆ ನಂತರ ಸ್ವರ್ಗದಲ್ಲಿ ಬಂದು ರಾಜ್ಯಾಡಳಿತ ಮಾಡಬೇಕಾಗಿದೆ. ಆತ್ಮರು ಪರಮಧಾಮದಿಂದ ಪಾತ್ರವನ್ನು ಅಭಿನಯಿಸುವುದಕ್ಕಾಗಿ ಬರುತ್ತಾರೆ, ನಂತರ ಎಲ್ಲಿಯವರೆಗೆ ಪತಿತ ಪಾವನನು ಬಂದು ಮುಕ್ತಗೊಳಿಸುವುದಿಲ್ಲವೋ ಅಲ್ಲಿಯವರೆಗೆ ಒಬ್ಬರೂ ಸಹ ಹೋಗಲು ಸಾಧ್ಯವಿಲ್ಲ. ಆದರೆ ಇಂತಹವರು ನಿರ್ವಾಣ ಗೈದರು ಎಂದು ಸುಳ್ಳು ಹೇಳುತ್ತಿರುತ್ತಾರೆ. ತಂದೆಯು ಇವೆಲ್ಲಾ ಮಾತುಗಳನ್ನು ಬಹಳ ಸ್ಪಷ್ಟವಾಗಿ ತಿಳಿಸುತ್ತಾರೆ. ಯಾರಿಗೇ ಆಗಲಿ ಮೊಟ್ಟ ಮೊದಲು ಇದನ್ನು ತಿಳಿಸಿರಿ - ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನಿದೆ! ಈ ಪ್ರಶ್ನೆಯನ್ನು ಕೇಳುವುದಕ್ಕೂ ಸಹ ಮತ್ತ್ಯಾರಿಗೂ ಬರುವುದಿಲ್ಲ. ನೀವು ಕಲ್ಪ-ಕಲ್ಪವೂ ಕಲ್ಲು ಬುದ್ಧಿಯವರಿಗೆ ಪಾರಸ ಬುದ್ಧಿ ಹಾಗೂ ಪಾರಸ ಬುದ್ಧಿಯಿಂದ ಕಲ್ಲು ಬುದ್ಧಿಯವರು ಆಗುತ್ತಾ ಬಂದಿದ್ದೀರಿ. ಇದನ್ನಂತು ಬಹಳಚೆನ್ನಾಗಿ ತಿಳಿಸಲಾಗುತ್ತದೆ ಆದರೆ ಯಾವಾಗ ನಾವು ಅವಶ್ಯವಾಗಿ ಶಿವ ತಂದೆಯ ಮಕ್ಕಳು ಎಂಬುದು ನಿಶ್ಚಯ ಕುಳಿತುಕೊಳ್ಳುತ್ತದೆಯೋ ಆಗಲೇ ತಿಳಿದುಕೊಳ್ಳುವರು. ಬಾಬಾರವರು ಹೇಳುತ್ತಾರೆ - ನಾನೀಗ ನಿಮ್ಮನ್ನು ಸುಖಧಾಮದಲ್ಲಿ ಕರೆದೊಯ್ಯಲು ಬಂದಿದ್ದೇನೆ, ಹೊರಡುವಿರಾ? ಅಲ್ಲಿ ಈ ವಿಕಾರವು ಸಿಗುವುದಿಲ್ಲ. ಇದರ ಮುಖ್ಯ ಮಾತೇ ಪವಿತ್ರತೆಯದಾಗಿದೆ. ಯಾರು ಕಲ್ಪದ ಮೊದಲು ಇದ್ದರೋ ಅವರೇ ಈಗಲೂ ಪವಿತ್ರವಾಗಿರಲು ಸಾಧ್ಯ. ಬಹಳ ಮಕ್ಕಳು ಬರೆಯುತ್ತಾರೆ - ಬಾಬಾ, ಈ ಬಂಧನವು ಯಾವಾಗ ತುಂಡಾಗುತ್ತದೆಯೋ ಗೊತ್ತಿಲ್ಲ, ಅದಕ್ಕೆ ಯುಕ್ತಿ ತಿಳಿಸಿರಿ. ತಂದೆಯು ಹೇಳುತ್ತಾರೆ - ಮಕ್ಕಳೇ, ತನ್ನ ಸಮಯದಲ್ಲಿ ಬಂಧನಗಳು ಕಳೆಯುತ್ತವೆ. ಇದರಲ್ಲಿ ಬಾಬಾರವರೇನು ಮಾಡುವರು? ಒಂದು ಬಂಧನದಿಂದ ಭಲೆ ಮುಕ್ತರಾಗುತ್ತೀರಿ, ನಂತರ ಮಕ್ಕಳು ಇತ್ಯಾದಿಗಳ ಕಡೆ ಮೋಹವುಂಟಾಗುತ್ತದೆ. ಇವೆಲ್ಲದರಿಂದ ಬುದ್ಧಿಯನ್ನು ತೆಗೆಯುವುದರಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ಕೆಲವರಂತು ಇನ್ನಷ್ಟು ಹೆಚ್ಚಾಗಿಯೇ ಮೋಹದಲ್ಲಿ ಬಂದು ಬಿಡುತ್ತಾರೆ. ಅನೇಕರಿದ್ದಾರೆ ಅವರು ಮೋಹದಲ್ಲಿ ಸಿಲುಕಿ ಬಿಡುತ್ತಾರೆ. ತಂದೆಯು ಹೇಳುವರು - ನೀವು ಒಬ್ಬ ತಂದೆಯಲ್ಲಿ ಮೋಹವಿಟ್ಟಾಗ ಧಾರಣೆಯಾಗುವುದು. ಯಾರೇ ಆಗಲಿ ಜ್ಞಾನವನ್ನು ಪಾಲನೆ ಮಾಡಲು ಆಗದಿದ್ದರೆ ಓಡಿ ಹೋಗುತ್ತಾರೆ. ನಂತರ ಹೆಸರಿಗೆ ಕಳಂಕವಾಗುವುದು. ಇದು ಡ್ರಾಮಾದಲ್ಲಿ ಕಲ್ಪದ ಮೊದಲೂ ಆಗಿತ್ತು, ಒಂದು ಸೆಕೆಂಡ್ ಕಳೆಯಿತೆಂದರೂ ಡ್ರಾಮಾ ಅಷ್ಟೇ. ಅಮ್ಮ ಸತ್ತರೂ ಹಲ್ವಾ ಸ್ವೀಕರಿಸಿರಿ (ಜ್ಞಾನದ ಚಿಂತನೆ), ಸ್ತ್ರೀಯ ಮರಣವಾದರೂ ಹಲ್ವಾ ತಿನ್ನಿರಿ..... ಅರ್ಧಂಬರ್ಧ ಜ್ಞಾನಿಗಳಿಗೆ ತೂಕಡಿಕೆ ಬರುತ್ತದೆ. ಅನೇಕ ಸನ್ಯಾಸಿಗಳೂ ಸಹ ಹೀಗೆಯೇ ಇರುತ್ತಾರೆ, ಅಂತಹವರು ಅಲ್ಲಿರಲು ಸಾಧ್ಯವಿಲ್ಲ. ಮತ್ತೆ ಗೃಹಸ್ಥದಲ್ಲಿಯೇ ಹೊರಟು ಹೋಗುತ್ತಾರೆ. ಚಲನೆಯೇ ಹಾಗಿರುತ್ತದೆ. ಇಲ್ಲಂತು ಮುಖ್ಯವಾದ ಮಾತು ಒಂದೇ ಆಗಿದೆ. ನಾವೂ ಸಹ ಆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ನೀವೂ ಸಹ ಅವರನ್ನು ತಂದೆಯೆಂದು ತಿಳಿಯುತ್ತೀರಿ, ಅಂದಮೇಲೆ ಬಂದು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಿರಿ. ಇದೊಂದೇ ಮಾತಿದೆ - ಸೆಕೆಂಡಿನಲ್ಲಿ ಜೀವನ್ಮುಕ್ತಿ, ಅಂತ್ಯದಲ್ಲಿ ಸ್ವಲ್ಪ ತಿಳಿಸಿದರೂ ತಕ್ಷಣದಲ್ಲಿಯೇ ತಿಳಿದು ಬಿಡುತ್ತಾರೆ. ಅನೇಕ ಮತಗಳಿರುವುದರಿಂದ ಭಾರತವು ಭ್ರಷ್ಟವಾಗಿ ಬಿಟ್ಟಿದೆ. ಮತ್ತೆ ಒಂದು ಮತದಿಂದ ಭಾರತವು ಅರ್ಧಕಲ್ಪಕ್ಕಾಗಿ ಶ್ರೇಷ್ಠಾಚಾರಿ ಆಗುತ್ತದೆ. ಅವಶ್ಯವಾಗಿ ತಂದೆಯವರೇ ಶ್ರೇಷ್ಠರನ್ನಾಗಿ ಮಾಡುವರು. ಸರ್ವರನ್ನೂ ಕರೆದುಕೊಂಡು ಹೋಗುವವರು ಒಬ್ಬ ತಂದೆಯೇ ಆಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮುಳುಗಿಸುವವರೂ ಸಹ ಯಾರಾದರೂ ಇರಬೇಕು. ತಂದೆಯು ಸರ್ವರಿಗೂ ಹೇಳುತ್ತಾರೆ - ವಿಕಾರಗಳ ಸನ್ಯಾಸ ಮಾಡಬೇಕಾಗುತ್ತದೆ, ಇದರಿಂದಲೇ ನೀವು ಪವಿತ್ರ ಪ್ರಪಂಚದ ಮಾಲೀಕರಾಗಬಹುದು. ತಂದೆಯು ಆಸ್ತಿಯನ್ನು ಕೊಡುತ್ತಿದ್ದಾರೆ, ಬಹಳ ಬ್ರಹ್ಮಾಕುಮಾರಿಯರು ಇದ್ದಾರೆ. ನೀವೂ ಬಿ.ಕೆ., ಆಗಿದ್ದೀರಿ, ಆಸ್ತಿಯು ಆತ್ಮದ ತಂದೆಯಿಂದ ಸಿಗುತ್ತದೆ, ಇದೆಷ್ಟು ಸಹಜವಿದೆ ಆದರೆ ಕೆಲವರು ಕೇವಲ ಕೇಳುತ್ತಾರೆ, ಮಾಡುವುದಿಲ್ಲ ಆದ್ದರಿಂದ ಯಾರಿಗೂ ಬಾಣ ನಾಟುವುದಿಲ್ಲ. ಹೇಳುವುದರಿಂದ ಭಲೆ ಯಾರದಾದರೂ ಕಲ್ಯಾಣವಾಗುತ್ತದೆ ಆದರೆ ಸ್ವಯಂ ಮಾಡದಿದ್ದರೆ ಬೀಳುತ್ತಾರೆ. ಯಾರಿಗೆ ಜ್ಞಾನ ಕೊಡುತ್ತಾರೆ ಅವರು ಶ್ರೇಷ್ಠ ಮಟ್ಟಕ್ಕೆ ಹೋಗುತ್ತಾರೆ, ಸ್ವಯಂ ಮಾತ್ರ ಬೀಳುತ್ತಾರೆ. ಇಂತಹವರು ಅನೇಕರಿದ್ದಾರೆ, ಬಾಬಾರವರು ಮಕ್ಕಳಿಗೆ ಸಂಪೂರ್ಣ ಆಸ್ತಿಯನ್ನು ವ್ಹಿಲ್ ಮಾಡಿ ಬಿಡುತ್ತಾರೆ. ನೀವೀಗ ಯೋಗ್ಯರಾಗಿ ಸ್ವರ್ಗದ ಮಾಲೀಕರಾಗಿರಿ. ಒಳ್ಳೆಯದು!
|
5 |
+
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ಶ್ರೇಷ್ಠಾಚಾರಿ ಆಗುವುದಕ್ಕಾಗಿ ತಮ್ಮಲ್ಲಿರುವ ಸರ್ವ ಅವಗುಣಗಳನ್ನು ತೆಗೆದು, ಸದಾ ಶ್ರೀಮತದಂತೆ ನಡೆಯಬೇಕಾಗಿದೆ. ದೇಹಿ-ಅಭಿಮಾನಿಯಾಗಿದ್ದು ಬುದ್ಧಿಯಲ್ಲಿ ಜ್ಞಾನ ರತ್ನಗಳ ಧಾರಣೆ ಮಾಡಿಕೊಳ್ಳಬೇಕಾಗಿದೆ.
|
8 |
+
2. ತಾವು ಹೇಳುವುದು ಮತ್ತು ಮಾಡುವುದನ್ನು ಒಂದೇ ಸಮಾನ ಮಾಡಬೇಕಾಗಿದೆ. ಜ್ಞಾನದ ಧಾರಣೆಗಾಗಿ ಎಲ್ಲದರಿಂದ ಮೋಹ ತೆಗೆದು, ಒಬ್ಬ ತಂದೆಯಲ್ಲಿಯೇ ಮೋಹವನ್ನಿಡಬೇಕಾಗಿದೆ.
|
BKMurli/BKMurli/page_1011.txt
ADDED
@@ -0,0 +1,13 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಯೋಗಯುಕ್ತ-ಯುಕ್ತಿಯುಕ್ತರಾಗುವ ಯುಕ್ತಿ
|
2 |
+
ಇಂದು ಬಾಪ್ದಾದಾ ತನ್ನ ಸರ್ವ ಮಕ್ಕಳಲ್ಲಿ ವಿಶೇಷ ಎರಡು ಪ್ರಕಾರದ ಮಕ್ಕಳನ್ನು ನೋಡುತ್ತಿದ್ದಾರೆ. ಒಂದನೆಯ ಪ್ರಕಾರದವರು ಸದಾ ಯೋಗಯುಕ್ತರು ಮತ್ತು ಪ್ರತೀ ಮಾತಿನಲ್ಲಿ ಯುಕ್ತಿಯುಕ್ತರಾಗಿದ್ದಾರೆ. ಎರಡನೆಯವರು ಯೋಗಿಗಳಾಗಿದ್ದಾರೆ ಆದರೆ ಸದಾ ಯೋಗಯುಕ್ತರಲ್ಲ ಮತ್ತು ಸದಾ ಪ್ರತೀ ಕರ್ಮದಲ್ಲಿ ಸ್ವತಹ ಯುಕ್ತಿಯುಕ್ತರೂ ಅಲ್ಲ. ಮನಸ್ಸಾ-ವಾಚಾ ಹಾಗೂ ಕರ್ಮ - ಮೂರರಲ್ಲಿಯೂ ಕೆಲಕೆಲವೊಮ್ಮೆ ಕೆಲವೊಂದರಲ್ಲಿ ಯುಕ್ತಿಯುಕ್ತರಾಗಿಲ್ಲ. ವಾಸ್ತವದಲ್ಲಿ ಬ್ರಾಹ್ಮಣ ಜೀವನ ಅರ್ಥಾತ್ ಸ್ವತಹ ಯೋಗಯುಕ್ತ ಮತ್ತು ಸದಾ ಯುಕ್ತಿಯುಕ್ತವಾದುದು. ಬ್ರಾಹ್ಮಣ ಜೀವನದ ಅಲೌಕಿಕತೆ ಹಾಗೂ ವಿಶೇಷತೆ ಮತ್ತು ಭಿನ್ನ ಹಾಗೂ ಪ್ರಿಯ ಸ್ಥಿತಿಯು ಇದೇ ಆಗಿದೆ – “ಯೋಗಯುಕ್ತ” ಮತ್ತು ``ಯುಕ್ತಿಯುಕ್ತ'' ಆದರೆ ಕೆಲವು ಮಕ್ಕಳು ಈ ವಿಶೇಷತೆಯಲ್ಲಿ ಸಹಜ ಮತ್ತು ಸ್ವಾಭಾವಿಕವಾಗಿ ನಡೆಯುತ್ತಿದ್ದಾರೆ ಮತ್ತು ಕೆಲವರು ಗಮನವನ್ನೂ ಇಡುತ್ತಾರೆ ಆದರೂ ಸಹ ಸದಾ ಎರಡು ಮಾತುಗಳ ಅನುಭವ ಮಾಡಲು ಸಾಧ್ಯವಿಲ್ಲ, ಇದಕ್ಕೆ ಕಾರಣವೇನು? ಜ್ಞಾನವಂತೂ ಎಲ್ಲರಿಗೂ ಇದೆ ಮತ್ತು ಎಲ್ಲರ ಲಕ್ಷ್ಯವೂ ಒಂದೇ ಆಗಿದೆ - ಆದರೂ ಸಹ ಕೆಲವರು ಲಕ್ಷ್ಯದ ಆಧಾರದಿಂದ ಇವೆರಡೂ ಲಕ್ಷ್ಯಗಳು ಅರ್ಥಾತ್ ಯೋಗಯುಕ್ತ ಮತ್ತು ಯುಕ್ತಿಯುಕ್ತ ಸ್ಥಿತಿಯ ಅನುಭೂತಿಗೆ ಸಮೀಪವಿದ್ದಾರೆ. ಇನ್ನೂ ಕೆಲವರು ಕೆಲವೊಮ್ಮೆ ತೀವ್ರ ಪುರುಷಾರ್ಥದಿಂದ ಸಮೀಪ ಬರುತ್ತಾರೆ ಆದರೆ ಕೆಲವೊಮ್ಮೆ ಸಮೀಪ, ಇನ್ನೂ ಕೆಲವೊಮ್ಮೆ ನಡೆಯುತ್ತಾ-ನಡೆಯುತ್ತಾ ಯಾವುದಾದರೊಂದು ಕಾರಣಕ್ಕೆ ವಶರಾಗಿ ನಿಂತು ಬಿಡುತ್ತಾರೆ ಆದರೆ ಸದಾ ಲಕ್ಷಣದ ಸಮೀಪ ಅನುಭೂತಿ ಮಾಡುವುದಿಲ್ಲ. ಸರ್ವ ಬ್ರಾಹ್ಮಣ ಆತ್ಮರಲ್ಲಿ ಈ ಶ್ರೇಷ್ಠಲಕ್ಷ್ಯದವರೆಗೆ ನಂಬರ್ವನ್ ಸಮೀಪ ಯಾರು? ಬ್ರಹ್ಮಾತಂದೆ ಅಂದಮೇಲೆ ಯಾವ ವಿಧಿಯನ್ನು ಅಳವಡಿಸಿಕೊಂಡ ಕಾರಣ ಈ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರು? ಸದಾ ಯೋಗಯುಕ್ತರಾಗಿರುವ ಸರಳ ವಿಧಿಯಾಗಿದೆ - ಸದಾ ತನ್ನನ್ನು ``ಸಾರಥಿ'' ಮತ್ತು ``ಸಾಕ್ಷಿ'' ಎಂದು ತಿಳಿದು ನಡೆಯುವುದು.
|
3 |
+
ತಾವೆಲ್ಲಾ ಶ್ರೇಷ್ಠಾತ್ಮರು ಈ ರಥಕ್ಕೆ ಸಾರಥಿಯಾಗಿದ್ದೀರಿ, ರಥವನ್ನು ನಡೆಸುವಂತಹ ಆತ್ಮ ಸಾರಥಿಯಾಗಿದ್ದೀರಿ. ಈ ಸ್ಮೃತಿಯು ಸ್ವತಹವಾಗಿಯೇ ಈ ರಥ ಅಥವಾ ದೇಹದಿಂದ ಭಿನ್ನ ಮಾಡಿ ಬಿಡುತ್ತದೆ. ಯಾವುದೇ ಪ್ರಕಾರದ ದೇಹದ ಪರಿವೆಯಿಂದ ಭಿನ್ನ ಮಾಡಿ ಬಿಡುತ್ತದೆ. ದೇಹಭಾನವು ಇಲ್ಲವೆಂದರೆ ಸಹಜವಾಗಿ ಯೋಗಯುಕ್ತರಾಗಿ ಬಿಡುತ್ತೀರಿ ಮತ್ತು ಪ್ರತೀ ಕರ್ಮದಲ್ಲಿ ಯೋಗಯುಕ್ತ, ಯುಕ್ತಿಯುಕ್ತರು ಸ್ವತಹ ಆಗಿ ಬಿಡುತ್ತೀರಿ. ಸ್ವಯಂನ್ನು ಸಾರಥಿಯೆಂದು ತಿಳಿಯುವುದರಿಂದ ಸರ್ವ ಕರ್ಮೇಂದ್ರಿಯಗಳು ತನ್ನ ನಿಯಂತ್ರಣದಲ್ಲಿ ಇರುತ್ತವೆ ಅರ್ಥಾತ್ ಸರ್ವ ಕರ್ಮೇಂದ್ರಿಯಗಳನ್ನು ಸದಾ ಲಕ್ಷ್ಯ ಮತ್ತು ಲಕ್ಷಣದ ಗುರಿಯ ಸಮೀಪಕ್ಕೆ ತರುವ ನಿಯಂತ್ರಣ ಶಕ್ತಿಯು ಬಂದು ಬಿಡುತ್ತದೆ. ಸ್ವಯಂ ``ಸಾರಥಿ''ಯಾವುದೇ ಕರ್ಮೇಂದ್ರಿಯಕ್ಕೆ ವಶವಾಗುವುದಿಲ್ಲ ಏಕೆಂದರೆ ಮಾಯೆಯು ಯಾರ ಮೇಲಾದರೂ ಯುದ್ಧ ಮಾಡುತ್ತದೆಯೆಂದರೆ ಮಾಯೆಯು ಯುದ್ಧ ಮಾಡುವ ವಿಧಿಯು ಇದೇ ಆಗಿರುತ್ತದೆ - ಮೊದಲು ಅದು ಯಾವುದಾದರೊಂದು ಸ್ಥೂಲ ಕರ್ಮೇಂದ್ರಿಯ ಅಥವಾ ಸೂಕ್ಷ್ಮ ಶಕ್ತಿಗಳಾದ ``ಮನ-ಬುದ್ಧಿ-ಸಂಸ್ಕಾರ''ದ ಪರವಶರನ್ನಾಗಿ ಮಾಡಿ ಬಿಡುತ್ತದೆ. ತಾವು ಸಾರಥಿ ಆತ್ಮರಿಗೆ ತಂದೆಯಿಂದ ಯಾವ ಮಹಾಮಂತ್ರವು ವಶೀಕರಣ ಮಂತ್ರ ಸಿಕ್ಕಿದೆಯೋ ಅದನ್ನು ಪರಿವರ್ತನೆ ಮಾಡಿ ವಶೀಕರಣದ ಬದಲು ವಶೀಭೂತರನ್ನಾಗಿ ಮಾಡಿ ಬಿಡುತ್ತದೆ ಮತ್ತು ಒಂದು ಮಾತಿನಲ್ಲಿ ವಶೀಭೂತರಾಗಿ ಬಿಟ್ಟರೆ ಎಲ್ಲಾ ಭೂತಗಳು ಪ್ರವೇಶವಾಗಿ ಬಿಡುತ್ತವೆ ಏಕೆಂದರೆ ಈ ಭೂತಗಳಲ್ಲಿ ಪರಸ್ಪರ ಒಗ್ಗಟ್ಟಿದೆ. ಒಂದು ಭೂತವು ಬಂದಿತೆಂದರೆ ಅದು ಮತ್ತೆಲ್ಲಾ ಭೂತಗಳ ಆಹ್ವಾನ ಮಾಡುತ್ತದೆ ನಂತರ ಏನಾಗುವುದು? ಈ ಭೂತವು ಸಾರಥಿಯಿಂದ ಸ್ವಾರ್ಥಿಯನ್ನಾಗಿ ಮಾಡಿ ಬಿಡುತ್ತದೆ ಮತ್ತು ತಾವೇನು ಮಾಡುತ್ತೀರಿ? ಯಾವಾಗ ಸಾರಥಿತನದ ಸ್ಮೃತಿಯಲ್ಲಿ ಬರುತ್ತೀರೋ ಆಗ ಭೂತಗಳನ್ನು ಓಡಿಸುವ ಯುದ್ಧ ಮಾಡುತ್ತೀರಿ, ಯುದ್ಧದ ಸ್ಥಿತಿಯನ್ನು ಯೋಗಯುಕ್ತ ಸ್ಥಿತಿಯೆಂದು ಹೇಳುವುದಿಲ್ಲ ಆದ್ದರಿಂದ ಯೋಗಯುಕ್ತ ಮತ್ತು ಯುಕ್ತಿಯುಕ್ತ ಗುರಿಯ ಸಮೀಪಕ್ಕೆ ಹೋಗುವ ಬದಲು ನಿಂತು ಬಿಡುತ್ತೀರಿ ಮತ್ತು ಮೊದಲ ನಂಬರಿನ ಸ್ಥಿತಿಯಿಂದ ಎರಡನೇ ನಂಬರಿಗೆ ಬಂದು ಬಿಡುತ್ತೀರಿ. ಸಾರಥಿ ಎಂದರೆ ಅವರು ವಶರಾಗುವವರಲ್ಲ ಬದಲಾಗಿ ವಶಪಡಿಸಿಕೊಂಡು ನಡೆಸುವವರಾಗಿರುತ್ತಾರೆ ಅಂದಮೇಲೆ ತಾವೆಲ್ಲರೂ ಯಾರಾಗಿದ್ದೀರಿ? ಸಾರಥಿಗಳಲ್ಲವೆ.
|
4 |
+
ಸಾರಥಿ ಅರ್ಥಾತ್ ಆತ್ಮಾಭಿಮಾನಿ ಏಕೆಂದರೆ ಆತ್ಮನೇ ಸಾರಥಿಯಾಗಿದೆ, ಬ್ರಹ್ಮಾ ತಂದೆಯು ಈ ವಿಧಿಯಿಂದ ನಂಬರ್ವನ್ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರು ಆದ್ದರಿಂದ ತಂದೆಯೂ ಸಹ ಇವರಿಗೆ ಸಾರಥಿಯಾದರು. ಸಾರಥಿಯಾಗುವ ನೆನಪಾರ್ಥವನ್ನು ತಂದೆಯು ಮಾಡಿ ತೋರಿಸಿದರು. ಫಾಲೋ ಫಾದರ್ ಮಾಡಿರಿ. ಸಾರಥಿಯಾಗಿ ಸದಾ ಸಾರಥಿ ಜೀವನದಲ್ಲಿ ಅತಿ ಭಿನ್ನ ಮತ್ತು ಪ್ರಿಯ ಸ್ಥಿತಿಯನ್ನು ಅನುಭವ ಮಾಡಿಸಿದರು ಏಕೆಂದರೆ ದೇಹವನ್ನು ಅಧೀನ ಮಾಡಿಕೊಂಡು ತಂದೆಯು ಪ್ರವೇಶಿಸುತ್ತಾರೆ ಅರ್ಥಾತ್ ಸಾರಥಿಯಾಗುತ್ತಾರೆಯೇ ಹೊರತು ದೇಹಕ್ಕೆ ಅಧೀನರಾಗುವುದಿಲ್ಲ ಆದ್ದರಿಂದ ಭಿನ್ನ ಮತ್ತು ಪ್ರಿಯರಾಗಿದ್ದಾರೆ. ಹಾಗೆಯೇ ತಾವೆಲ್ಲಾ ಬ್ರಾಹ್ಮಣ ಆತ್ಮರೂ ಸಹ ತಂದೆಯ ಸಮಾನ ಸಾರಥಿ ಸ್ಥಿತಿಯಲ್ಲಿರಿ. ನಡೆಯುತ್ತಾ-ತಿರುಗಾಡುತ್ತಾ ಇದನ್ನು ಪರಿಶೀಲನೆ ಮಾಡಿಕೊಳ್ಳಿ - ನಾನು ಸಾರಥಿ ಅರ್ಥಾತ್ ಸರ್ವರನ್ನು ನಡೆಸುವಂತಹ ಭಿನ್ನ ಮತ್ತು ಪ್ರಿಯಸ್ಥಿತಿಯಲ್ಲಿ ಸ್ಥಿತನಾಗಿದ್ದೇನೆಯೇ? ಇದನ್ನೂ ಮಧ್ಯ-ಮಧ್ಯದಲ್ಲಿ ಪರಿಶೀಲಿಸಿಕೊಳ್ಳಿ. ಇಡೀ ದಿನ ಹಾಗೆಯೇ ಕಳೆದು ಹೋದ ಮೇಲೆ ನಂತರ ರಾತ್ರಿಯಲ್ಲಿ ಪರಿಶೀಲನೆ ಮಾಡಿಕೊಳ್ಳುವುದಲ್ಲ, ಇಡೀ ದಿನ ಕಳೆದು ಹೋಯಿತೆಂದರೆ ಕಳೆದು ಹೋಗಿರುವ ಸಮಯವು ಸದಾಕಾಲಕ್ಕಾಗಿ ಸಂಪಾದ��ೆಯಿಂದ ಹೊರಟು ಹೋಯಿತು ಆದ್ದರಿಂದ ಕಳೆದುಕೊಂಡ ಮೇಲೆ ಎಚ್ಚೆತ್ತುಕೊಳ್ಳಬೇಡಿ, ಇದನ್ನು ಸ್ವತಹ ಸ್ವಾಭಾವಿಕ ಸಂಸ್ಕಾರವನ್ನಾಗಿ ಮಾಡಿಕೊಳ್ಳಿ. ಯಾವುದನ್ನು? ಪರಿಶೀಲನೆ ಮಾಡಿಕೊಳ್ಳುವ ಸಂಸ್ಕಾರ. ಹೇಗೆ ಯಾರದೇ ಯಾವುದೇ ಹಳೆಯ ಸಂಸ್ಕಾರವು ಈ ಬ್ರಾಹ್ಮಣ ಜೀವನದಲ್ಲಿ ಈಗಲೂ ಸಹ ಮುಂದುವರೆಯುವುದರಲ್ಲಿ ವಿಘ್ನರೂಪ ಆಗಿ ಬಿಡುತ್ತದೆ ಎಂದರೆ ಬಯಸದಿದ್ದರೂ ಸಂಸ್ಕಾರಕ್ಕೆ ವಶರಾಗಿ ಬಿಡುತ್ತೇವೆ ಎಂದು ಹೇಳುತ್ತೀರಲ್ಲವೆ. ಯಾವುದನ್ನು ಮಾಡಲು ಬಯಸದಿದ್ದರೂ ಸಹ ಅದನ್ನು ಮಾಡಿ ಬಿಡುತ್ತೀರಿ, ಯಾವಾಗ ಉಲ್ಟಾ ಸಂಸ್ಕಾರವು ಬಯಸದಿದ್ದರೂ ಸಹ ಯಾವುದೇ ಕರ್ಮ ಮಾಡಿಸಿ ಬಿಡುತ್ತದೆ ಅಂದಮೇಲೆ ಈ ಸ್ವಾಭಾವಿಕ ಪರಿಶೀಲನೆಯ ಶುದ್ಧ ಸಂಸ್ಕಾರವನ್ನು ನಿಮ್ಮಿಂದ ಅಳವಡಿಸಿಕೊಳ್ಳಲು ಸಾಧ್ಯವಿಲ್ಲವೆ? ಪರಿಶ್ರಮವಿಲ್ಲದೆ ಪರಿಶೀಲನೆಯ ಶುದ್ಧ ಸಂಸ್ಕಾರವು ಸ್ವತಹವಾಗಿ ಕಾರ್ಯ ಮಾಡಿಸುತ್ತಾ ಇರುತ್ತದೆ. ಮರೆತು ಹೋಗುತ್ತೇವೆ ಅಥವಾ ಬಹಳ ಬ್ಯುಜಿûಯಾಗಿರುತ್ತೇವೆ ಎಂದು ಹೇಳುವುದಿಲ್ಲ. ಅಶುದ್ಧ ಅಥವಾ ವ್ಯರ್ಥ ಸಂಸ್ಕಾರವಿದೆ, ಕೆಲವು ಮಕ್ಕಳಲ್ಲಿ ಅಶುದ್ಧ ಸಂಸ್ಕಾರವಿಲ್ಲದಿದ್ದರೆ ವ್ಯರ್ಥ ಸಂಸ್ಕಾರವಾದರೂ ಇರುತ್ತದೆ. ಈ ಅಶುದ್ಧ, ವ್ಯರ್ಥ ಸಂಸ್ಕಾರವು ಮರೆಸಿದರೂ ಸಹ ಮರೆತು ಹೋಗುವುದಿಲ್ಲ ಮತ್ತು ನಂತರ ಇದನ್ನೇ ಹೇಳುತ್ತೀರಿ - ನನಗೆ ಅಂತಹ ಭಾವನೆಯಿರಲಿಲ್ಲ ಆದರೆ ಏನು ಮಾಡುವುದು? ಇದು ನನ್ನ ಹಳೆಯ ಸ್ವಭಾವವಾಗಿದೆ ಅಥವಾ ಸಂಸ್ಕಾರವಾಗಿದೆ ಅಂದಮೇಲೆ ಅಶುದ್ಧ ಸಂಸ್ಕಾರವು ಮರೆತರೂ ಮರೆಯುವುದಿಲ್ಲ ಆದರೆ ಶುದ್ಧ ಸಂಸ್ಕಾರವು ಹೇಗೆ ಮರೆತು ಹೋಗುತ್ತದೆ? ಸಾರಥಿತನದ ಸ್ಥಿತಿಯು ಸ್ವತಹವಾಗಿ ಸ್ವ-ಉನ್ನತಿಯ ಶುದ್ಧ ಸಂಸ್ಕಾರವನ್ನು ಇಮರ್ಜ್ ಮಾಡುತ್ತದೆ ಮತ್ತು ಸ್ವಾಭಾವಿಕವಾಗಿ ಸಮಯ ಪ್ರಮಾಣ ಸಹಜವಾಗಿ ಪರಿಶೀಲನೆ ನಡೆಯುತ್ತಾ ಇರುತ್ತದೆ, ಅಶುದ್ಧ ಹವ್ಯಾಸದಿಂದ ದೂರವಾಗಿ ಬಿಡುತ್ತೀರಿ ಮತ್ತು ಈ ಹವ್ಯಾಸದಿಂದ ಬಲವಾಗಿ ಬಿಡುತ್ತೀರಿ. ಅಂದಾಗ ಕೇಳಿದಿರಾ - ಸದಾ ಯೋಗಯುಕ್ತ-ಯುಕ್ತಿಯುಕ್ತರಾಗಿರುವ ವಿಧಿ ಏನಾಗಿದೆ? ಸಾರಥಿಯಾಗಿ ನಡೆಯುವುದು. ಸಾರಥಿಯು ಸ್ವತಹ ಸಾಕ್ಷಿಯಾಗಿ ಮಾಡುತ್ತಾರೆ, ನೋಡುತ್ತಾರೆ, ಕೇಳುತ್ತಾರೆ. ಸಾಕ್ಷಿಯಾಗಿ ನೋಡುವ, ಕೇಳುವ, ಮಾಡುವ ಎಲ್ಲದರಲ್ಲಿಯೂ ಎಲ್ಲವನ್ನೂ ಮಾಡುತ್ತಿದ್ದರೂ ಸಹ ನಿರ್ಲೇಪವಾಗಿರುತ್ತಾರೆ ಅರ್ಥಾತ್ ಮಾಯೆಯ ಲೇಪದಿಂದ ಭಿನ್ನವಾಗಿರುತ್ತಾರೆ ಅಂದಮೇಲೆ ಪಾಠವನ್ನು ಪಕ್ಕಾ ಮಾಡಿಕೊಂಡಿರಲ್ಲವೆ. ಬ್ರಹ್ಮಾ ತಂದೆಯನ್ನು ಫಾಲೋ ಮಾಡುವವರಾಗಿದ್ದೀರಲ್ಲವೆ. ಬ್ರಹ್ಮಾ ತಂದೆಯೊಂದಿಗೆ ಬಹಳ ಪ್ರೀತಿಯಿದೆ ಅಂದಮೇಲೆ ಪ್ರೀತಿಗೆ ಗುರುತಾಗಿದೆ - ``ಸಮಾನರಾಗುವುದು'' ಅರ್ಥಾತ್ ಫಾಲೋ ಮಾಡುವುದು.
|
5 |
+
ಎಲ್ಲಾ ಟೀಚರ್ಸ್ಗೆ ತಂದೆಯೊಂದಿಗೆ ಎಷ್ಟು ಪ್ರೀತಿಯಿದೆ! ತಂದೆಯು ಸದಾ ಟೀಚರ್ಸ್ನ್ನು ತನ್ನ ಸೇವೆಯ ಸಮೀಪ ಜೊತೆಗಾರರೆಂದು ತಿಳಿಯುತ್ತೇವೆ ಅಂದಮೇಲೆ ಮೊದಲು ಟೀಚರ್ಸ್ ಫಾಲೋ ಮಾಡುತ��ತೀರಲ್ಲವೆ! ಇದರಲ್ಲಿ ಸದಾ ಇದೇ ಲಕ್ಷ್ಯವನ್ನು ಇಟ್ಟುಕೊಳ್ಳಿ - ``ಮೊದಲು ನಾನು''. ಈರ್ಷ್ಯೆಯಲ್ಲಿ ಮೊದಲು ನಾನು ಎಂಬುದಲ್ಲ, ಇದು ನಷ್ಟವನ್ನು ಉಂಟು ಮಾಡುತ್ತದೆ. ಶಬ್ಧವು ಅದೇ ಆಗಿದೆ - ``ಮೊದಲು ನಾನು'' ಆದರೆ ಒಂದಾಗಿದೆ - ಈರ್ಷ್ಯೆಗೆ ವಶರಾಗಿ ಮೊದಲು ನಾನು ಎಂದು ಹೇಳುವುದು, ಇದರಿಂದ ಮೊದಲು ಬರುವ ಬದಲು ಹಿಂದುಳಿದು ಬಿಡುತ್ತಾರೆ. ಮೊದಲಿನಿಂದ ಕೊನೆಗೆ ಬಂದು ಬಿಡುತ್ತಾರೆ ಆದ್ದರಿಂದ ಫಾಲೋ ಮಾಡುವುದರಲ್ಲಿ ``ಮೊದಲು ನಾನು'' ಎಂದು ಹೇಳಿರಿ ಮತ್ತು ಮಾಡಿರಿ ಆಗ ತಾವೇ ಮೊದಲು ಹೊರಟು ಬಿಡುತ್ತೀರಿ. ಬ್ರಹ್ಮಾ ತಂದೆಯು ಮೊದಲು ಹೋದರಲ್ಲವೆ ಅಂದಮೇಲೆ ಸದಾ ಈ ಲಕ್ಷ್ಯವನ್ನಿಟ್ಟುಕೊಳ್ಳಿ - ಟೀಚರ್ಸ್ ಅರ್ಥಾತ್ ಫಾಲೋ ಫಾದರ್ ಮತ್ತು ನಂಬರ್ವನ್ ಫಾಲೋ ಫಾದರ್. ಹೇಗೆ ಬ್ರಹ್ಮಾರವರು ನಂಬರ್ವನ್ ಆದರು ಅಂದಮೇಲೆ ಫಾಲೋ ಮಾಡುವವರೂ ಸಹ ನಂಬರ್ವನ್ ಬರುವ ಲಕ್ಷ್ಯವನ್ನು ಇಟ್ಟುಕೊಳ್ಳಿ. ಎಲ್ಲಾ ಟೀಚರ್ಸ್ ಇದರಲ್ಲಿ ಪಕ್ಕಾ ಇದ್ದೀರಲ್ಲವೆ. ಫಾಲೋ ಮಾಡುವ ಧೈರ್ಯವಿದೆಯಲ್ಲವೆ ಏಕೆಂದರೆ ಟೀಚರ್ಸ್ ಅರ್ಥಾತ್ ನಿಮಿತ್ತರಾಗುವವರು. ಅನೇಕ ಆತ್ಮರಿಗೆ ನಿಮಿತ್ತರಾಗಿದ್ದೀರಿ ಅಂದಮೇಲೆ ನಿಮಿತ್ತರಾಗುವವರ ಮೇಲೆ ಎಷ್ಟೊಂದು ಜವಾಬ್ದಾರಿಯಿದೆ! ಹೇಗೆ ಬ್ರಹ್ಮಾ ತಂದೆಯು ನಿಮಿತ್ತರಾಗಿದ್ದರಲ್ಲವೆ ಆದ್ದರಿಂದ ಬ್ರಹ್ಮಾ ತಂದೆಯನ್ನು ನೋಡಿ ಎಷ್ಟೊಂದು ಮಂದಿ ಬ್ರಾಹ್ಮಣರು ತಯಾರಾದರು! ಅದೇರೀತಿ ಟೀಚರ್ಸ್ ಯಾವುದೇ ಕಾರ್ಯವನ್ನು ಮಾಡುತ್ತೀರಿ, ಅಡಿಗೆಯನ್ನೇ ಮಾಡುತ್ತೀರೋ ಅಥವಾ ಸ್ವಚ್ಛತೆಯನ್ನು ಮಾಡುತ್ತಿದ್ದೀರೋ ಆದರೆ ಪ್ರತೀ ಕರ್ಮ ಮಾಡುತ್ತಾ ಈ ಸ್ಮೃತಿಯಿರಲಿ - ನಾನು ಅನೇಕ ಆತ್ಮರ ಪ್ರತಿ ನಿಮಿತ್ತನಾಗಿದ್ದೇನೆ. ನಾನು ``ಯಾವುದನ್ನೂ'' ಮತ್ತು ``ಹೇಗೆ'' ಮಾಡುತ್ತೇನೆಯೋ ನಾನು ನಿಮಿತ್ತ ಆತ್ಮನನ್ನು ನೋಡಿ ಅನ್ಯರೂ ಮಾಡುತ್ತಾರೆ ಆದ್ದರಿಂದ ಬಾಪ್ದಾದಾ ಸದಾ ಹೇಳುತ್ತಾರೆ – ಒಂದು ಕಡೆ ಭಾಷಣ ಮಾಡುವುದು ಮತ್ತು ಇನ್ನೊಂದು ಕಡೆ ಪಾತ್ರೆ ತೊಳೆಯುವುದು - ಎರಡರಲ್ಲಿಯೂ ಯೋಗಯುಕ್ತ-ಯುಕ್ತಿಯುಕ್ತ ಸ್ಥಿತಿಯಿರಲಿ. ಯಾವುದೇ ಕೆಲಸವಾಗಿರಲಿ ಆದರೆ ಸ್ಥಿತಿಯು ಸದಾ ಯೋಗಯುಕ್ತ ಮತ್ತು ಯುಕ್ತಿಯುಕ್ತವಾಗಿರಲಿ. ಭಾಷಣ ಮಾಡುತ್ತಿದ್ದೇವೆಂದು ಹೇಳಿ ಯೋಗಯುಕ್ತರು ಆಗಿರುವುದಲ್ಲ ಮತ್ತು ಪಾತ್ರೆ ತೊಳೆಯುವುದು ಅರ್ಥಾತ್ ಸಾಧಾರಣ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿ ಸಾಧಾರಣ ಸ್ಥಿತಿಯಾಗಿ ಬಿಡುವುದಲ್ಲ, ಪ್ರತೀ ಸಮಯ ಫಾಲೋ ಫಾದರ್ ಮಾಡಿ. ತಿಳಿಯಿತೆ!
|
6 |
+
ಮುಂದೆ ಕುಳಿತುಕೊಳ್ಳುತ್ತೀರಿ ಅಂದಮೇಲೆ ಮುಂದೆ ಕುಳಿತುಕೊಳ್ಳಲು ಎಷ್ಟೊಂದು ಇಷ್ಟವಾಗುತ್ತದೆ. ಮತ್ತು ಸದಾ ಮುಂದುವರೆಯುವುದರಲ್ಲಿ ಎಷ್ಟು ಚೆನ್ನಾಗಿರುತ್ತದೆ! ಯಾವುದೇ ಇಂತಹ ಕಠಿಣ ಸಂಸ್ಕಾರವು ಹಿಂದೇಟಾಕುವ ಪ್ರಯತ್ನ ಮಾಡಿದರೆ ಆಗ ಈ ದೃಶ್ಯವನ್ನು ನೆನಪು ಮಾಡಿಕೊಳ್ಳಿ. ಯಾವಾಗ ಮುಂದೆ ಕುಳಿತುಕೊಳ್ಳಲು ಎಷ್ಟು ಚೆನ್ನಾಗಿರುತ್ತದೆ ಅಂದಮೇಲೆ ಮುಂದುವರೆಯುವುದರಲ್ಲಿ ನ���ವೇಕೆ ಹಿಂದುಳಿಯಬೇಕು? ಯಾವುದೇ ಮಾತು ಬಂದರೆ ಮಧುಬನಕ್ಕೆ ತಲುಪಿ ಬಿಡಿ ಮತ್ತು ತನ್ನನ್ನು ಧೈರ್ಯ, ಉಮ್ಮಂಗದಲ್ಲಿ ತಂದುಕೊಳ್ಳಿ ಏಕೆಂದರೆ ಹಿಂದೆ ಇರುವವರು ಕೊನೆಯಲ್ಲಿ ಇನ್ನೂ ಅನೇಕರು ಬರುತ್ತಾರೆ. ತಾವೆಲ್ಲರೂ ಒಂದುವೇಳೆ ಹಿಂದೆ ಉಳಿದುಕೊಂಡರೆ ಮತ್ತೆ ಹಿಂದಿರುವವರು ಮುಂದೆ ಬರಬೇಕಾಗುತ್ತದೆ ಆದ್ದರಿಂದ ಸದಾ ಇದನ್ನೇ ಸ್ಮೃತಿಯಿಟ್ಟುಕೊಳ್ಳಿ - ನಾವು ಮುಂದೆ ಇರುವವರಾಗಿದ್ದೇವೆ. ಹಿಂದೆ ಇರುವುದು ಅರ್ಥಾತ್ ಪ್ರಜೆಗಳಾಗುವುದು. ಪ್ರಜೆಗಳಂತೂ ಆಗಬಾರದಲ್ಲವೆ. ಪ್ರಜಾಯೋಗಿಗಳಲ್ಲ, ರಾಜಯೋಗಿಗಳಾಗಿದ್ದೀರಲ್ಲವೆ! ಅಂದಮೇಲೆ ಫಾಲೋ ಫಾದರ್ ಮಾಡಿ. ಒಳ್ಳೆಯದು-
|
7 |
+
ವಿದೇಶಿಯರು ಏನು ಮಾಡುತ್ತೀರಿ? ಫಾಲೋ ಫಾದರ್ ಮಾಡುತ್ತೀರಲ್ಲವೆ! ಎಲ್ಲಿಯತನಕ ತಲುಪುತ್ತೀರಿ? ಎಲ್ಲರೂ ಮುಂದೆ ಬರುತ್ತೀರಿ. ಯಾರೆಲ್ಲಾ ಬಂದಿದ್ದೀರೋ ಎಲ್ಲರೂ ಫಾಲೋ ಫಾದರ್ ಮಾಡಿ ಫಾಸ್ಟ್ ಮತ್ತು ಫಸ್ಟ್ ಬನ್ನಿರಿ. ಒಬ್ಬರೇ ಮೊಟ್ಟ ಮೊದಲಿಗೆ ಬರುವರು ಎಂದು ತಿಳಿಯಬೇಡಿ. ಫಸ್ಟ್ ಗ್ರೇಡ್ನಲ್ಲಂತೂ ಅನೇಕರಿರುವರಲ್ಲವೆ. ಫಸ್ಟ್ ನಂಬರಿನಲ್ಲಂತೂ ಬ್ರಹ್ಮಾ ತಂದೆಯು ಬರುವರು ಆದರೆ ಫಸ್ಟ್ ಗ್ರೇಡ್ನಲ್ಲಿ ಜೊತೆಗಾರರಿರುತ್ತಾರೆ ಆದ್ದರಿಂದ ಎಲ್ಲರೂ ತಂದೆಯ ಜೊತೆಯಲ್ಲಿ ಬನ್ನಿರಿ. ಒಬ್ಬರೇ ಫಸ್ಟ್ ಇರುವುದಿಲ್ಲ, ಫಸ್ಟ್ ಗ್ರೇಡ್ನವರು ಅನೇಕರಿರುತ್ತಾರೆ ಆದ್ದರಿಂದ ಮೊದಲ ನಂಬರಂತೂ ನಿಗಧಿಯಾಯಿತು ಆದ್ದರಿಂದ ನಾವು ಎರಡನೇ ಗ್ರೇಡ್ನಲ್ಲಿ ಬರುತ್ತೇವೆಂದು ತಿಳಿಯಬೇಡಿ. ಯಾರು ಮೊದಲು ಮಾಡುವರೋ ಅವರೇ ಅರ್ಜುನರು. ಮೊದಲ ನಂಬರಿನವರು ಅರ್ಜುನರು. ಎಲ್ಲರಿಗೂ ಫಸ್ಟ್ನಲ್ಲಿ ಬರುವ ಅವಕಾಶವಿದೆ, ಎಲ್ಲರೂ ಬರಬಹುದಾಗಿದೆ. ಫಸ್ಟ್ಗ್ರೇಡ್ ಅಪರಿಮಿತವಾಗಿದೆ, ಕಡಿಮೆಯಿಲ್ಲ ಆದ್ದರಿಂದ ಎಲ್ಲರೂ ಫಸ್ಟ್ನಲ್ಲಿ ಬರುತ್ತೀರಲ್ಲವೆ, ಪಕ್ಕಾ ಇದ್ದೀರಾ? ಒಳ್ಳೆಯದು!
|
8 |
+
ಸದಾ ಬ್ರಹ್ಮಾ ತಂದೆಯನ್ನು ಫಾಲೋ ಮಾಡುವವರು, ಸದಾ ಸ್ವತಹ ಯೋಗಯುಕ್ತ-ಯುಕ್ತಿಯುಕ್ತರಾಗಿರುವವರು, ಸದಾ ಸಾರಥಿಯಾಗಿ ಕರ್ಮೇಂದ್ರಿಯಗಳನ್ನು ಶ್ರೇಷ್ಠ ಮಾರ್ಗದಲ್ಲಿ ನಡೆಸುವವರು, ಸದಾ ಗುರಿಯ ಸಮೀಪ ಇರುವವರು ಇಂತಹ ಸರ್ವ ಶ್ರೇಷ್ಠ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
|
9 |
+
ಅವ್ಯಕ್ತ ಬಾಪ್~ದಾದಾರವರ ಜೋನ್ ಪ್ರಕಾರ ಉಚ್ಛರಿಸಲ್ಪಟ್ಟ ಮಹಾವಾಕ್ಯಗಳು - ಇಂದೋರ್ ಜೋನ್ ಗ್ರೂಪ್:
|
10 |
+
ಬಾಪ್ದಾದಾರವರ ಶ್ರೇಷ್ಠ ಮತವು ಶ್ರೇಷ್ಠ ಗತಿಯನ್ನು ಪ್ರಾಪ್ತಿ ಮಾಡಿಸಿತು - ಇಂತಹ ಅನುಭವ ಮಾಡುತ್ತೀರಲ್ಲವೆ! ಮತದಂತೆ ಗತಿಯಾಗುತ್ತದೆ ಅಂದಮೇಲೆ ತಂದೆಯ ಶ್ರೇಷ್ಠ ಮತವಿದೆಯೆಂದರೆ ಗತಿಯೂ ಶ್ರೇಷ್ಠವಾಗಿ ಇರುತ್ತದೆಯಲ್ಲವೇ! ಹೇಗೆ ಅಂತ್ಯ ಮತಿ ಸೊ ಗತಿ ಎಂದು ಹೇಳುತ್ತಾರೆ..... ಈ ರೀತಿ ಏಕೆ ಮಹಿಮೆ ಮಾಡಲಾಗಿದೆ? ಏಕೆಂದರೆ ತಂದೆಯವರು ಚಕ್ರದ ಅಂತಿಮದಲ್ಲಿಯೇ ಬಂದು ಶ್ರೇಷ್ಠ ಮತವನ್ನು ಕೊಡುತ್ತಾರೆ ಅಂದಮೇಲೆ ಅಂತಿಮ ಸಮಯದಲ್ಲಿ ಶ್ರೇಷ್ಠ ಮತವನ್ನು ತೆಗೆದುಕೊಳ್ಳುತ್ತೀರಿ ಹಾಗೂ ಅನೇಕ ಜನ���ಮಗಳ ಸದ್ಗತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಈ ಸಮಯದಲ್ಲಿ ಬೇಹದ್ದಿನ ``ಅಂತ್ಯ ಮತಿ ಸೊ ಗತಿ'' ಶ್ರೇಷ್ಠವಾಗಿ ಬಿಡುತ್ತದೆ. ಹಾಗಾದರೆ ಈ ಸಮಯದ್ದೇ ನೆನಪಾರ್ಥವು ಭಕ್ತಿಮಾರ್ಗದಲ್ಲಿ ನಡೆದುಬಂದಿದೆ. ಒಂದು ಜನ್ಮದ ಶ್ರೇಷ್ಠ ಮತದಿಂದ ಎಷ್ಟೊಂದು ಜನ್ಮಗಳವರೆಗೆ ಶ್ರೇಷ್ಠ ಗತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ! ಎಲ್ಲಾ ನೆನಪಾರ್ಥಗಳು ಈ ಸಂಗಮಯುಗದ್ದೇ ಆಗಿದೆ. ನೆನಪಾರ್ಥವೇಕೆ ಆಗಿದೆ? ಏಕೆಂದರೆ ಈ ಸಮಯದಲ್ಲಿ ನೆನಪಿನಲ್ಲಿದ್ದು ಕರ್ಮವನ್ನು ಮಾಡುತ್ತೀರಿ. ಪ್ರತಿಯೊಂದು ಕರ್ಮದ ನೆನಪಾರ್ಥವಾಗಿ ಬಿಟ್ಟಿದೆ. ತಾವು ಅಮೃತವೇಳೆಯಲ್ಲಿ ವಿಧಿಪೂರ್ವಕವಾಗಿ ಏಳುತ್ತೀರೆಂದರೆ ನೋಡಿರಿ, ತಮ್ಮ ನೆನಪಾರ್ಥ ಚಿತ್ರಗಳಲ್ಲಿಯೂ ವಿಧಿಪೂರ್ವಕವಾಗಿ ಏಳಿಸುತ್ತಾರೆ ಮತ್ತು ಎಷ್ಟೊಂದು ಪ್ರೀತಿಯಿಂದ ಏಳಿಸುತ್ತಾರೆ. ಅದಂತು ಜಡಚಿತ್ರವಿದೆ ಆದರೆ ಎಷ್ಟೊಂದು ಮನಃಪೂರ್ವಕವಾಗಿ ಸ್ನೇಹದಿಂದ ಏಳಿಸುತ್ತಾರೆ! ಏಳುವುದರ ಜೊತೆಗೆ ನೈವೇದ್ಯವನ್ನೂ ಇಡುತ್ತಾರೆ, ಮಲಗಿಸುವುದನ್ನೂ ಮಾಡುತ್ತಾರೆ ಏಕೆಂದರೆ ತಾವು ಈ ಸಮಯದಲ್ಲಿ ಎಲ್ಲಾ ಕಾರ್ಯಗಳನ್ನು ವಿಧಿಪೂರ್ವಕವಾಗಿ ನೆನಪಿನಲ್ಲಿದ್ದು ಮಾಡುತ್ತೀರಿ. ಸೇವಿಸುವುದೂ ಸಹ ವಿಧಿಪೂರ್ವಕವಾಗಿ, ಭೋಗವನ್ನಿಟ್ಟು ಸೇವಿಸುತ್ತೀರಲ್ಲವೆ ಅಥವಾ ಹೇಗಿದೆಯೋ ಹಾಗೆಯೇ ಸೇವಿಸುತ್ತೀರಾ? ಕೆಲವೊಮ್ಮೆ ಯಾರಿಗಾದರೂ ಊಟ ಕೊಡಬೇಕು. ಆದ್ದರಿಂದ ಅವಸರದಲ್ಲಿ ಭೋಗವನ್ನಿಡಲಿಲ್ಲ - ಈ ರೀತಿಯಂತು ಆಗುವುದಿಲ್ಲವೆ! ಒಂದುವೇಳೆ ಯಾರಿಗಾದರೂ ಕೊಡಬೇಕಾಗುವುದು, ಯಾವುದಾದರೂ ವಿವಶತೆಯಿದೆ ಎಂದರೂ ಸಹ ಮೊದಲು ಭೋಗಕ್ಕಿಡುವುದನ್ನಂತು ತೆಗೆಯಿರಿ. ಯಾರಿಗೋ ಊಟ ಕೊಟ್ಟು ನಂತರ ಭೋಗವನ್ನಿಡುವಂತೆ ಆಗಬಾರದು. ವಿಧಿಪೂರ್ವಕವಾಗಿ ಸೇವಿಸುವುದರಿಂದ ಸಿದ್ಧಿಯು ಪ್ರಾಪ್ತಿಯಾಗುವುದು ಹಾಗೂ ಖುಷಿಯಾಗುತ್ತದೆ, ನಿರಂತರ ಸಹಜವಾಗಿಯೇ ನೆನಪಿರುತ್ತದೆ.
|
11 |
+
ಅಂದಮೇಲೆ ಅಮೃತವೇಳೆಯಿಂದ ರಾತ್ರಿಯವರೆಗೆ ಏನೆಲ್ಲಾ ಕರ್ಮವನ್ನು ಮಾಡುತ್ತೀರಿ, ನೆನಪಿನ ವಿಧಿಪೂರ್ವಕವಾಗಿ ಮಾಡಿದಾಗ ಪ್ರತೀ ಕರ್ಮದ ಸಿದ್ಧಿಯು ಸಿಗುವುದು. ಸಿದ್ಧಿ ಎಂದರೆ ಪ್ರತ್ಯಕ್ಷಫಲದ ಪ್ರಾಪ್ತಿಯಾಗುತ್ತಾ ಇರುತ್ತದೆ. ಅತಿ ಶ್ರೇಷ್ಠವಾದ ಸಿದ್ಧಿಯೆಂದರೆ ಪ್ರತ್ಯಕ್ಷಫಲದ ರೂಪದಲ್ಲಿ ಅತೀಂದ್ರಿಯ ಸುಖದ ಅನುಭೂತಿಯಾಗುವುದು. ಸದಾ ಸುಖದ ಪ್ರಕಂಪನಗಳಲ್ಲಿ, ಖುಷಿಯ ಪ್ರಕಂಪನಗಳಲ್ಲಿ ತೇಲಾಡುತ್ತಾ ಇರುವಿರಿ. ಮೊದಲು ಪ್ರತ್ಯಕ್ಷಫಲ ಸಿಗುತ್ತದೆ, ನಂತರ ಭವಿಷ್ಯಫಲವು ಸಿಗುವುದು. ಈ ಸಮಯದ ಪ್ರತ್ಯಕ್ಷಫಲವು ಭವಿಷ್ಯ ಅನೇಕ ಜನ್ಮಗಳ ಫಲಕ್ಕಿಂತಲೂ ಶ್ರೇಷ್ಠವಾದುದು. ಒಂದುವೇಳೆ ಈಗ ಪ್ರತ್ಯಕ್ಷಫಲವನ್ನು ಅನುಭವಿಸದಿದ್ದರೆ, ಇಡೀ ಕಲ್ಪದಲ್ಲೆಂದಿಗೂ ಪ್ರತ್ಯಕ್ಷಫಲವು ಸಿಗುವುದಿಲ್ಲ. ಈಗೀಗ ಮಾಡಿದಿರಿ, ಈಗೀಗ ಸಿಕ್ಕಿತು- ಇದಕ್ಕೆ ಪ್ರತ್ಯಕ್ಷಫಲವೆಂದು ಹೇಳಲಾಗುವುದು. ಸತ್ಯಯುಗದಲ್ಲಿಯೂ ಯಾವ ಫಲ ಸಿಗುತ್ತದೆಯೋ ಅದು ಈ ಜನ��ಮದ್ದೇ ಸಿಗುತ್ತದೆ, ಮುಂದಿನ ಜನ್ಮದಲ್ಲ. ಆದರೆ ಇಲ್ಲೇನು ಸಿಗುತ್ತದೆಯೋ ಅದು ಪ್ರತ್ಯಕ್ಷಫಲವಾಗಿದೆ ಅರ್ಥಾತ್ ಈಗೀಗ ಪಡೆಯುವ ಫಲವಾಗಿದೆ. ಅಂದಮೇಲೆ ಪ್ರತ್ಯಕ್ಷಫಲದಿಂದ ವಂಚಿತರಾಗಬಾರದು, ಸದಾ ಫಲವನ್ನು ಅನುಭವಿಸುವುದಂತು ಚೆನ್ನಾಗಿರುತ್ತದೆ ಅಲ್ಲವೆ! ಇಂತಹ ಭಾಗ್ಯವನ್ನೆಂದಿಗಾದರೂ ಯೋಚಿಸಿದ್ದಿರಾ? ಭಗವಂತನ ಮೂಲಕ ಸಿಗುತ್ತದೆ ಎಂಬುದನ್ನು ಸ್ವಪ್ನದಲ್ಲಿಯೂ ಇರಲಿಲ್ಲ! ಅಂದಮೇಲೆ ಯಾವ ಮಾತು ಸ್ವಪ್ನ-ಸಂಕಲ್ಪದಲ್ಲಿಯೂ ಇರಲಿಲ್ಲವೋ ಅದು ಆಗಿಬಿಟ್ಟಿತೆಂದರೆ ಎಷ್ಟೊಂದು ಖುಷಿಯಾಗುತ್ತದೆ! ವರ್ತಮಾನ ಸಮಯದಲ್ಲಿ ಯಾರಿಗಾದರೂ ಲಾಟರಿಯಿಂದ ಹಣ ಬರುತ್ತದೆಯೆಂದರೆ ಎಷ್ಟೊಂದು ಖುಷಿಯಾಗುತ್ತದೆ! ಇದಂತು ಪ್ರತ್ಯಕ್ಷಫಲವಾಗಿದೆ, ಇದರಿಂದ ಭವಿಷ್ಯದ ಫಲವೂ ಆಗಿ ಬಿಡುತ್ತದೆ. ಅಂದಮೇಲೆ ನಶೆಯಿರುತ್ತದೆಯಲ್ಲವೆ, ಕೆಲವೊಮ್ಮೆ ಹೆಚ್ಚು ಕೆಲವೊಮ್ಮೆ ಕಡಿಮೆಯಂತು ಆಗುವುದಿಲ್ಲವೇ? ಸದಾ ಏಕರಸ ಸ್ಥಿತಿಯಲ್ಲಿ ಹಾರುತ್ತಿರಿ. ಸೆಕೆಂಡಿನಲ್ಲಿ ಹಾರುವುದನ್ನು ಕಲಿತಿದ್ದೀರಲ್ಲವೆ ಅಥವ ಹಾರುವುದರಲ್ಲಿ ಹೆಚ್ಚು ಸಮಯ ಹಿಡಿಸುತ್ತದೆಯೇ? ಸಂಕಲ್ಪ ಮಾಡಿದೆವು ಮತ್ತು ತಲುಪಿದೆ ಎನ್ನುವಷ್ಟು ತೀವ್ರಗತಿಯಿದೆಯೇ? ಒಳ್ಳೆಯದು!
|
12 |
+
ಇಂದೋರ್ ಜೋನಿನವರೆಲ್ಲರೂ ಸಂತುಷ್ಟವಾಗಿದ್ದೀರಲ್ಲವೆ, ಮಾತೆಯರು ಸದಾ ಸಂತುಷ್ಟವಾಗಿ ಇದ್ದೀರಾ? ಕೆಲವೊಮ್ಮೆ ಪರಿವಾರದಲ್ಲಿ ಲೌಕಿಕದಿಂದ ಅಸಂತುಷ್ಟರಂತು ಆಗುವುದಿಲ್ಲವೇ? ಕೆಲವೊಮ್ಮೆ ಬೇಸರವಾಗುತ್ತದೆಯೇ? ಕೆಲವೊಮ್ಮೆ ಚಂಚಲವಿರುವ ಮಕ್ಕಳಿಂದ ಬೇಸರವಾಗುವುದಿಲ್ಲವೇ? ಎಂದಿಗೂ ಸಹ ಬೇಸರವಾಗಬಾರದು, ತಾವೆಷ್ಟು ಬೇಸರವಾಗುವಿರಿ, ಅವರು ಅಷ್ಟೇ ಬೇಸರ ಪಡಿಸುವರು. ಆದ್ದರಿಂದ ನಿಮಿತ್ತರಾಗಿದ್ದು, ಸೇವಾಧಾರಿಯಾಗಿದ್ದು ಸೇವೆ ಮಾಡಿರಿ. ನನ್ನ ಮಗು ಮತ್ತೆ ಈ ರೀತಿ ಮಾಡುತ್ತದೆ ಎಂಬ ನನ್ನದೆನ್ನುವುದು ಬಂದರೆ ಬೇಸರವಾಗುವಿರಿ! ಅಂದಾಗ ಎಲ್ಲಿ ನನ್ನದೆನ್ನುವುದು ಇರುತ್ತದೆಯೋ ಅಲ್ಲಿ ಬೇಸರವಾಗುವಿರಿ ಹಾಗೂ ಎಲ್ಲಿ ನಿನ್ನದು-ನಿನ್ನದು (ತಂದೆಯದು) ಬರುತ್ತದೆಯೋ ಅಲ್ಲಿ ತೇಲಾಡುತ್ತೀರಿ. ಹಾಗಾದರೆ ತೇಲಾಡುವವರಲ್ಲವೆ! ಸದಾ ನಿನ್ನದು ಅಂದರೆ ಸ್ವಮಾನದಲ್ಲಿರುವುದು. ನನ್ನದು-ನನ್ನದು ಎಂದು ಹೇಳುವುದೆಂದರೆ ಅಭಿಮಾನ ಬರುವುದು, ನಿನ್ನದು-ನಿನ್ನದು ಎನ್ನುವುದೆಂದರೆ ಸ್ವಮಾನದಲ್ಲಿರುವುದು. ಹಾಗಾದರೆ ಸದಾ ಸ್ವಮಾನದಲ್ಲಿ ಇರುವವರು ಅರ್ಥಾತ್ ನಿನ್ನದೆಂದು ಸ್ವೀಕರಿಸುವುದು - ಇದನ್ನೇ ನೆನಪಿಟ್ಟುಕೊಳ್ಳಿರಿ. ಒಳ್ಳೆಯದು.
|
13 |
+
ಡಬಲ್ ವಿದೇಶಿಗಳೂ ಸಹ ಅಗಲಿ ಮರಳಿ ಸಿಕ್ಕಿರುವವರು, ಸ್ವಲ್ಪವೇ ಇದ್ದಾರೆ. ಇದರಲ್ಲೆಷ್ಟು ಖುಷಿಯಿರುತ್ತದೆ ಎಂಬುದನ್ನು ವರ್ಣನೆ ಮಾಡಬಲ್ಲಿರಾ? ಬೇಹದ್ದಿನ ತಂದೆಯಾಗಿದ್ದಾರೆ ಅಂದಮೇಲೆ ಪ್ರಾಪ್ತಿಯೂ ಬೇಹದ್ದಿನದಾಗಿದೆ ಆದ್ದರಿಂದ ಅದ್ದನ್ನು ಎಣಿಕೆ ಮಾಡಲು ಸಾಧ್ಯವಿಲ್ಲ. ಬಾಪ್ದಾದಾರವರಂತು ಡಬಲ್ ವಿದೇಶಿ ಮಕ್ಕಳನ್ನು ತೀವ್ರ ಪುರುಷಾರ್ಥಿಯ ಲೆಕ್ಕದ��ಂದ ನೋಡಿ ಖುಷಿಯಾಗುವರು. ಭಾರತವಾಸಿಗಳಂತು ಭಾರತದ ಮಾತುಗಳನ್ನು ತಿಳಿದುಕೊಂಡಿದ್ದಾರೆ ಆದರೆ ಇವರುಗಳು ತಿಳಿಯದೇ ಇದ್ದರೂ ಇಷ್ಟು ಸಮೀಪ ತೀವ್ರ ಪುರುಷಾರ್ಥಿ ಆಗಿ ಬಿಟ್ಟರು, ಅಂದಾಗ ಚಮತ್ಕಾರವಲ್ಲವೆ! ಹಾಗಾದರೆ ಡಬಲ್ ಭಾಗ್ಯಶಾಲಿ ಆಗಿ ಬಿಟ್ಟಿರಿ! ಮತ್ತು ಭಾರತವಾಸಿಗಳಿಗೇನು ನಶೆಯಿದೆ - ನಾವೇ ಪ್ರತೀ ಕಲ್ಪದಲ್ಲಿ ಅವಿನಾಶಿ ಭಾರತವಾಸಿ ಆಗುವೆವು. ಅವಿನಾಶಿ ಖಂಡ ಭಾರತವೇ ಆಗಿದೆ ಎಂಬ ನಶೆಯಿದೆಯಲ್ಲವೆ! ಪ್ರತಿಯೊಬ್ಬರಿಗೂ ತಮ್ಮ-ತಮ್ಮ ನಶೆಯಿದೆ. ಎಲ್ಲರೂ ಭಾರತದಲ್ಲಿಯೇ ಬರಬೇಕಾಗುತ್ತದೆ ಅಲ್ಲವೆ ಹಾಗೂ ಕುಳಿತಿರುವುದೂ ಭಾರತದಲ್ಲಿಯೇ ಕುಳಿತಿದ್ದೀರಿ. ಒಳ್ಳೆಯದು - ಎಲ್ಲರಿಗೂ ನೆನಪುಗಳು.
|
BKMurli/BKMurli/page_1012.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಸ್ಪಿರಿಚ್ಯುಯಲ್ ಚಿಲ್ಡ್ರನ್ ಎಂದು ಹೇಳಲಾಗುತ್ತದೆ. ಸ್ಪಿರಿಚ್ಯುಯಲ್ ಫಾದರ್ ಮತ್ತು ಸ್ಪಿರಿಚ್ಯುಯಲ್ ಚಿಲ್ಡ್ರನ್. ಈಗ ಇದಂತೂ ಆತ್ಮಿಕ ಮಕ್ಕಳಿಗೆ ತಿಳಿದಿದೆ - ನಾವಾತ್ಮರಿಗೆ ಅಲ್ಲಿ ಶರೀರವಿರುವುದಿಲ್ಲ, ಆದ್ದರಿಂದ ಅಲ್ಲಿ ಯಾವುದೇ ವಾರ್ತಾಲಾಪ ನಡೆಯುವುದಿಲ್ಲ. ಯಾವಾಗ ಇಬ್ಬರಿಗೂ ಶರೀರವಿರುವುದೋ ಆಗಲೇ ಪರಸ್ಪರ ವಾರ್ತಾಲಾಪವಾಗುವುದು. ಆತ್ಮರಿಗೆ ಇಲ್ಲಂತೂ ತಮ್ಮ-ತಮ್ಮ ಶರೀರವಿದೆ, ಬಾಕಿ ಯಾರು ಜ್ಞಾನಸಾಗರ ಆತ್ಮಿಕ ತಂದೆಯಿದ್ದಾರೆಯೋ ಅವರಿಗೇ ತಮ್ಮ ಶರೀರವಿಲ್ಲ, ಅವರು ನಿರಾಕಾರನಾಗಿದ್ದಾರೆ. ಶಾಂತಿಧಾಮದಲ್ಲಿ ನಾವಾತ್ಮರೂ ಸಹ ಅಶರೀರಿಯಾಗಿರುತ್ತೇವೆ ಎಂದು ಮಕ್ಕಳೂ ತಿಳಿದುಕೊಂಡಿದ್ದೀರಿ. ಹೇಗೆ ತಂದೆಯು ಅಶರೀರಿ ಹಾಗೂ ವಿಚಿತ್ರನಾಗಿದ್ದಾರೆಯೋ ಹಾಗೆಯೇ ನೀವಾತ್ಮರೂ ಸಹ ಅಲ್ಲಿ ಅಶರೀರಿಯಾಗಿರುತ್ತೀರಿ. ಇದು ತಿಳಿದುಕೊಳ್ಳುವ ಮಾತಾಗಿದೆ. ಅಶರೀರಿಯಾಗಿ ಬಂದಿದ್ದೇವೆ, ಅಶರೀರಿಯಾಗಿ ಹೋಗಬೇಕಾಗಿದೆ ಎಂಬ ಮಾತನ್ನೂ ಹೇಳುತ್ತಾರೆ ಅಂದರೆ ಈ ಶರೀರರೂಪಿ ವಸ್ತ್ರವಿರುವುದಿಲ್ಲ. ಆತ್ಮವು ಶಾಂತಿಧಾಮದಲ್ಲಿದ್ದಾಗ ಅಶರೀರಿಯಾಗಿರುತ್ತದೆ, ಶಾಂತಿಯಲ್ಲಿರುತ್ತದೆ. ಈಗ ಆತ್ಮಿಕ ತಂದೆಯು ಈ ಜ್ಞಾನವನ್ನು ತಿಳಿಸುತ್ತದೆ, ಇಡೀ ಪ್ರಪಂಚದಲ್ಲಿ ಆತ್ಮಿಕ ತಂದೆಯು ಮತ್ತ್ಯಾರೂ ಇಲ್ಲ, ಮತ್ತೆಲ್ಲರೂ ಶರೀರದ ತಂದೆಯರಾಗಿದ್ದಾರೆ. ಆತ್ಮಿಕ ತಂದೆಯು ಸ್ವಯಂ ಹೇಳುತ್ತಾರೆ - ನಾನು ಅಶರೀರಿಯಾಗಿದ್ದೆನು, ಆದ್ದರಿಂದ ಮಾತನಾಡುವ ಸಮಯದಲ್ಲಿ ಶರೀರದ ಆಧಾರ ತೆಗೆದುಕೊಳ್ಳಬೇಕಾಗುತ್ತದೆ. ಭಲೆ ಶಾಸ್ತ್ರಗಳಲ್ಲಿ ಪ್ರಕೃತಿಯ ಆಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಬರೆದಿದ್ದಾರೆ ಆದರೆ ತಂದೆಯು ತಿಳಿಸುತ್ತಾರೆ - ಪ್ರಕೃತಿಯಿಂದಲೇ ಶರೀರವು ಮಾಡಲ್ಪಟ್ಟಿದೆ. ನಾನು ಸಾಧಾರಣ ಶರೀರದ ಆಧಾರ ತೆಗೆದುಕೊಳ್ಳುತ್ತೇನೆ.
|
2 |
+
ಆತ್ಮಿಕ ತಂದೆಯು ಆತ್ಮಿಕ ಸರ್ಜನ್ ಎಂದು ಹೇಳಲಾಗುತ್ತದೆ ಏಕೆಂದರೆ ನೆನಪು ಅಥವಾ ಯೋಗವನ್ನು ಕಲಿಸುತ್ತಾರೆ, ಇದರಿಂದ ನಾವಾತ್ಮರು ಸದಾ ನಿರೋಗಿಗಳಾಗಿ ಬಿಡುತ್ತೇವೆ. 21 ಜನ್ಮಗಳವರೆಗೆ ಎಂದೂ ರೋಗಿಗಳಾಗುವುದಿಲ್ಲ ನಂತರ ಮಾಯಾರಾಜ್ಯವಾದಾಗ ನಾವು ರೋಗಿಗಳಾಗಿ ಬಿಡುತ್ತೇವೆ. ತಂದೆಯು ಬಂದು ನಮ್ಮನ್ನು 21 ಜನ್ಮಗಳಿಗಾಗಿ ನಿರೋಗಿಗಳನ್ನಾಗಿ ಮಾಡುತ್ತಾರೆ. ತಂದೆಗೆ ಯಾತ್ರೆಯನ್ನು ಕಲಿಸುವಂತಹ ಮಾರ್ಗದರ್ಶಕನೆಂದೂ ಹೇಳಲಾಗುತ್ತದೆ. ನಾವು ವಿಚಿತ್ರವಾದ ಆತ್ಮಿಕ ಯಾತ್ರಿಕರಾಗಿದ್ದೇವೆ. ಈ ಆತ್ಮಿಕ ಯಾತ್ರೆಯನ್ನು ಮತ್ತ್ಯಾವುದೇ ಮನುಷ್ಯ ಮಾತ್ರರು ಪ್ರಪಂಚದಲ್ಲಿ ತಿಳಿದುಕೊಂಡಿಲ್ಲ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚ, ಯಾವಾಗಲೂ ಇದೇರೀತಿ ಹೇಳಲಾಗುತ್ತದೆ. ವಿಶೇಷವಾಗಿ ನಮಗೆ ಈ ಆತ್ಮಿಕ ಯಾತ್ರೆಯನ್ನು ಕಲಿಸುತ್ತಾರೆ. ಯಾರು ಕಲಿಸುತ್ತಾರೆ? ಆತ್ಮಿಕ ತಂದೆ. ದೈಹಿಕ ಯಾತ್ರೆಗಳನ್ನಂತೂ ಮನುಷ್ಯರು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದಾರೆ. ಕೆಲಕೆಲವರಂತೂ ಒಂದು ಜನ್ಮದಲ್ಲಿ 2-4 ಯಾತ್ರೆಗಳನ್ನಾದರೂ ಮಾಡುತ್ತಾರೆ. ಅದು ಜೀವಾತ್ಮರ ಯಾತ್ರೆಯೆಂದು ಹೇಳುತ್ತಾರೆ ಮತ್ತು ಇದು ಆತ್ಮರ ಯಾತ್ರೆಯಾಗಿದೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ತಂದೆಯನ್ನು ನೆನಪಿಟ್ಟುಕೊಳ್ಳಬೇಕಾಗಿದೆ ಆಗ ಅಂತ್ಯಮತಿ ಸೋ ಗತಿಯಾಗಿ ಬಿಡುವುದು. ತಂದೆಯ ನೆನಪಿನಲ್ಲಿ ನಾವು ತಂದೆಯ ಬಳಿಗೆ ಹೊರಟು ಹೋಗುತ್ತೇವೆ. ಈಗ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ಈ ಯಾತ್ರೆಯನ್ನು ಕಲಿಸುತ್ತಾರೆ. ಗೀತೆಯಲ್ಲಿ ಮನ್ಮನಾಭವ ಅಕ್ಷರವಿದೆ ಆದರೆ ಅದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಅದರಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಮತ್ತೇನಾಗುವುದು? ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ನೆನಪಿನಿಂದ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೇವೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಇಡೀ ವೃಕ್ಷವು ಜಡಜಡೀಭೂತವಾಗಿ ಬಿಟ್ಟಿದೆ. ಈಗ ಆತ್ಮವು ಸತೋಪ್ರಧಾನವಾಗುವುದು ಹೇಗೆ? ಹಿಂತಿರುಗಿ ಮನೆಗೆ ಹೋಗುವುದು ಹೇಗೆ? ಅಲ್ಲಂತೂ ಪವಿತ್ರ ಆತ್ಮರೇ ಇರುತ್ತಾರೆ. ಮತ್ತೆ ಇಲ್ಲಿ ಬಂದು ಶರೀರ ಧಾರಣೆ ಮಾಡುತ್ತಾ ರಜೋ, ತಮೋದಲ್ಲಿ ಬರುತ್ತಾರೆ. ಪ್ರತೀ ವಸ್ತುವಿಗೂ ಹಂತಗಳಿರುತ್ತವೆ. ಪ್ರಪಂಚವು ಬದಲಾಗುತ್ತಿದೆ ಎಂದು ಹಾಡುತ್ತಾರೆ. ಇದಕ್ಕೆ ಹಳೆಯ ಪ್ರಪಂಚ, ಕಲಿಯುಗವೆಂದು ಹೇಳಲಾಗುತ್ತದೆ. ಹೊಸ ಪ್ರಪಂಚಕ್ಕೆ ಸತ್ಯಯುಗ, ಸ್ವರ್ಗವೆಂದು ಹೇಳಲಾಗುತ್ತದೆ. ಈಗ ಮಕ್ಕಳ ಬುದ್ಧಿಯಲ್ಲಿ ಇದು ಇರಬೇಕಾಗಿದೆ, ಯಾವಾಗ ಸತ್ಯಯುಗವಿತ್ತೋ ಆಗ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಈಗ ಆ ಧರ್ಮವಿಲ್ಲ. ದೇವತಾ ಧರ್ಮವು ಇಸ್ಲಾಂ, ಬೌದ್ಧ, ಕ್ರಿಶ್ಚಿಯನ್.... ಇವು ಮುಖ್ಯವಾಗಿದೆ. ಯುಗಗಳಲ್ಲಿಯೂ ಮುಖ್ಯವಾಗಿ ನಾಲ್ಕು ಯುಗಗಳಿವೆ. ಬಾಕಿ ಈ ಬ್ರಾಹ್ಮಣರ ಸಂಗಮಯುಗವು ಗುಪ್ತ ಯುಗವಾಗಿದೆ. ಪರಮಪಿತ ಪರಮಾತ್ಮನೇ ಬಂದು ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಇವೆಲ್ಲಾ ಮಾತುಗಳನ್ನು ಮಕ್ಕಳು ನೆನಪಿಟ್ಟುಕೊಳ್ಳಬೇಕು ಮತ್ತು ತಮ್ಮ ಬುದ್ಧಿಯೋಗವನ್ನು ತಂದೆಯ ಜೊತೆ ಜೋಡಿಸಬೇಕಾಗಿದೆ. ವಿಕರ್ಮಾಜೀತರಾಗುವುದೇ ಮೂಲ ಮಾತಾಗಿದೆ. ನಾವು ಸಂಪೂರ್ಣ ಸತೋಪ್ರಧಾನ ಪವಿತ್ರರಾಗಿದ್ದೆವು, ಮೂಲತಃ 24 ಕ್ಯಾರೇಟ್ ಚಿನ್ನದಂತೆ ಇದ್ದೆವು ನಂತರ ಸತೋದಲ್ಲಿ ಬಂದು 22 ಕ್ಯಾರೇಟ್ ಆದೆವು. ನಂತರ ರಜೋದಲ್ಲಿ 18 ಕ್ಯಾರೇಟ್, ತಮೋದಲ್ಲಿ 9 ಕ್ಯಾರೇಟ್ ಚಿನ್ನದಂತಾದೆವು. ಚಿನ್ನಕ್ಕೂ ಡಿಗ್ರಿಗಳಿರುತ್ತವೆ, ಇದು ಆತ್ಮದ ಮಾತಾಗಿದೆ. ಹೇಗೆ ಭ್ರಮರಿಯು ಛೀ ಛೀ ಕೀಟಗಳನ್ನು ತೆಗೆದುಕೊಂಡು ಬರುತ್ತದೆ. ಅದನ್ನು ಭೂ ಭೂ (ಜ್ಞಾನದ ಧ್ವನಿ) ಮಾಡಿ ತನ್ನ ಸಮಾನ ಮಾಡುತ್ತದೆ. ನೀವೂ ಸಹ ಜ್ಞಾನದ ���ೂ ಭೂ ಮಾಡಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೀರಿ. ಭ್ರಮರಿಯು ಕೀಟಗಳನ್ನು ತಂದು ಮನೆಯಲ್ಲಿ ಏಕಾಂತದಲ್ಲಿ ಇಡುತ್ತದೆ. ಅದಕ್ಕೂ ಎಷ್ಟೊಂದು ತಿಳುವಳಿಕೆಯಿದೆ! ನೀವಾತ್ಮರಲ್ಲಿಯೂ ಡ್ರಾಮಾನುಸಾರ ಪಾತ್ರವು ನಿಗಧಿತವಾಗಿದೆ.
|
3 |
+
ನೀವು ತಿಳಿದುಕೋಂಡಿದ್ದೀರಿ - ಕಲ್ಪದ ಮೊದಲೂ ಸಹ ಆತ್ಮಿಕ ತಂದೆಯಿಂದ ನಾವು ಆತ್ಮಿಕ ಜ್ಞಾನವನ್ನು ಕೇಳಿದ್ದೆವು. ಕಲ್ಪ-ಕಲ್ಪವೂ ಕೇಳುತ್ತಾ ಇರುತ್ತೇವೆ, ನತಿಂಗ್ನ್ಯೂ. ಇದನ್ನು ತಂದೆಯೇ ತಿಳಿಸುತ್ತಾರೆ - ಬೀಜಕ್ಕೆ ವೃಕ್ಷದ ಜ್ಞಾನವಿರುತ್ತದೆಯಲ್ಲವೆ. ತಂದೆಯು ನಿಮ್ಮನ್ನು ತ್ರಿಕಾಲದರ್ಶಿಗಳನ್ನಾಗಿ ಮಾಡಲು ಬರುತ್ತಾರೆ. ಮೂರುಕಾಲಗಳ ಜ್ಞಾನವನ್ನು ಕೊಡುತ್ತಾರಲ್ಲವೆ. ನಿಮ್ಮನ್ನು ಜೀವಿಸಿದ್ದಂತೆಯೇ ದತ್ತು ಮಾಡಿಕೊಳ್ಳುತ್ತಾರೆ. ಹೇಗೆ ಕನ್ಯೆಯನ್ನೂ ಸಹ ಜೀವಿಸಿದ್ದಂತೆಯೇ ಇವರು ನನ್ನ ಸ್ತ್ರೀ ಎಂದು ದತ್ತು ಮಾಡಿಕೊಳ್ಳುತ್ತಾರೆ. ಈಗ ಪ್ರಜಾಪಿತ ಬ್ರಹ್ಮನಿಗಂತೂ ಸ್ತ್ರೀ ಯಾರೂ ಇಲ್ಲ ಅಂದಾಗ ಇಲ್ಲಿ ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ಇವರು ನಮ್ಮ ತಂದೆಯಾಗಿದ್ದಾರೆಂದು ನೀವೂ ಹೇಳುತ್ತೀರಿ. ಪರಮಪಿತ ಪರಮಾತ್ಮ ತಂದೆಯೂ ಸಹ ನೀವು ನನ್ನ ಮಕ್ಕಳಾಗಿದ್ದೀರಿ ಎಂದು ಹೇಳುತ್ತಾರೆ. ಶಿವ ತಂದೆಯು ಆತ್ಮಿಕ ತಂದೆಯಾಗಿದ್ದಾರೆ, ಪ್ರಜಾಪಿತ ಬ್ರಹ್ಮಾ ಶರೀರಧಾರಿಯಾಗಿದ್ದಾರೆ. ಆತ್ಮಿಕ ತಂದೆಯು ಇವರ ಶರೀರದಲ್ಲಿ ಬರುವವರೆಗೆ ಜ್ಞಾನವನ್ನು ಹೇಗೆ ತಿಳಿಸುವರು! ಪರಮಪಿತ ಪರಮಾತ್ಮನನ್ನು ಜ್ಞಾನ ಸಾಗರನೆಂದು ಹೇಳಲಾಗುತ್ತದೆ, ಎಲ್ಲಾ ಪ್ರಕಾರದ ಜ್ಞಾನವು ಯಾವಾಗಲೂ ಆತ್ಮನಲ್ಲಿಯೇ ಇರುತ್ತದೆ. ಲೌಕಿಕ ಜ್ಞಾನವನ್ನೂ ಸಹ ಆತ್ಮವೇ ಓದುತ್ತದೆಯಲ್ಲವೆ ಆದರೆ ತಮೋಪ್ರಧಾನರಾಗಿರುವ ಕಾರಣ ಯಾರಿಗೂ ಆತ್ಮಾಭಿಮಾನವಿರುವುದೇ ಇಲ್ಲ. ನೀವೀಗ ಆತ್ಮಾಭಿಮಾನಿಗಳಾಗುತ್ತೀರಿ. ಸತ್ಯಯುಗದಲ್ಲಿ ಈ ಮಾತುಗಳನ್ನು ತಿಳಿಸಲಾಗುವುದಿಲ್ಲ, ಈ ಸಮಯದಲ್ಲಿಯೇ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ ಏಕೆಂದರೆ ಈ ಸಮಯದಲ್ಲಿ ತಲೆಯ ಮೇಲೆ ಪಾಪದ ಹೊರೆಯಿದೆ. ಅದನ್ನೂ ಕಳೆಯಬೇಕಾಗಿದೆ. ಪತಿತ-ಪಾವನನೇ ಬಂದು ನಮ್ಮನ್ನು ಪಾವನ ಮಾಡಿ ಎಂದು ಈ ಸಮಯದಲ್ಲಿಯೇ ತಂದೆಯನ್ನು ಕರೆಯುತ್ತಾರೆ. ಆತ್ಮವೇ ಪತಿತ, ತಮೋಪ್ರಧಾನವಾಗಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುತ್ತದೆ ಆದರೆ ಪರಮಪಿತ ಪರಮಾತ್ಮನು ಬಿಂದು ರೂಪವಾಗಿದ್ದಾರೆ ಎಂಬುದು ಭಕ್ತರಿಗೆ ತಿಳಿದಿಲ್ಲ. ಕೇವಲ ಬಿಂದುವಿಗೆ ಮಂದಿರವನ್ನು ಕಟ್ಟಿಸಲು ಆಗುವುದಿಲ್ಲ, ಶೋಭಿಸುವುದೇ ಇಲ್ಲ ಆದ್ದರಿಂದ ಲಿಂಗಾಕಾರವಾಗಿ ಮಾಡಿಸುತ್ತಾರೆ. ನಂತರ ಸಾಕ್ಷಾತ್ಕಾರಕ್ಕಾಗಿ ಅವರು ಕೋಟಿಸೂರ್ಯ ತೇಜೋಮಯನೆಂದು ಹೇಳುತ್ತಾರೆ ಅಂದಮೇಲೆ ಲಿಂಗವು ಅಷ್ಟು ತೇಜೋಮಯವಾಗಿದೆ? ಹೇಗೆ ಅರ್ಜುನನಿಗಾಗಿ ತೋರಿಸಿದ್ದಾರಲ್ಲವೆ - ಅರ್ಜುನನಿಗೆ ತೇಜೋಮಯ ರೂಪದ ಸಾಕ್ಷಾತ್ಕಾರವಾಯಿತು, ನಾನು ಇದನ್ನು ಸಹಿಸಲಾರೆ ಎಂದು ಹೇಳಿದನು. ಈ ಮಾತನ್ನು ಕೇಳಿಸಿಕೊಂಡಿದ್ದಾರಲ್ಲವೆ. ಇಲ್ಲಿಯೂ ಸಹ ಅನೇಕರಿಗೆ ಸಾಕ್ಷಾತ್ಕಾರವಾಗಿತ್ತು, ಸಾಕು ನಿಲ್ಲಿಸಿ, ನಮ್ಮಿಂದ ಸಹನೆ ಮಾಡಲು ಆಗುವುದಿಲ್ಲವೆಂದು ಹೇಳುತ್ತಿದ್ದರು. ಕಣ್ಣು ಕೆಂಪಗಾಗಿ ಬಿಡುತ್ತಿತ್ತು. ನಮಗೆ ಪರಮಾತ್ಮನ ಸಾಕ್ಷಾತ್ಕಾರವಾಯಿತು ಎಂದು ಅವರು ತಿಳಿದುಕೊಳ್ಳುತ್ತಾರೆ. ಯಾರು ಮಾಡಿಸಿದರು? ಕೃಷ್ಣನಂತೂ ಮಾಡಿಸಲಿಲ್ಲ, ಶಿವ ತಂದೆಯೇ ಸಾಕ್ಷಾತ್ಕಾರ ಮಾಡಿಸಿದರು. ಅವರಿಗೆ ದಿವ್ಯದೃಷ್ಟಿದಾತನೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ದಿವ್ಯದೃಷ್ಟಿಯ ಚಾಬಿಯನ್ನು ಕೊಡುವುದಿಲ್ಲ. ಇದು ನನಗೆ ಭಕ್ತಿಮಾರ್ಗದಲ್ಲಿ ಕೆಲಸಕ್ಕೆ ಬರುತ್ತದೆ. ಸತ್ಯಯುಗದಲ್ಲಿ ಇದರ ಅವಶ್ಯಕತೆಯಿರುವುದಿಲ್ಲ. ನೀವು ಪೂಜಾರಿಗಳಿಂದ ಪೂಜ್ಯರಾಗಿ ಬಿಡುತ್ತೀರಿ. ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟು ಪರಮಧಾಮದಲ್ಲಿ ಹೋಗಿ ಕುಳಿತು ಬಿಡುತ್ತೇನೆ, ನಾನು ಸದಾ ಪೂಜ್ಯನು ಎಂದೂ ಪೂಜಾರಿಯಾಗುವುದಿಲ್ಲ.
|
4 |
+
ನೀವು ಮಕ್ಕಳು ಈಗ ಬುದ್ಧಿವಂತರಾಗಿದ್ದೀರಿ. ಚಲನೆಯಿಂದಲೇ ಇವರು ಎಷ್ಟು ಮಧುರವಾಗಿದ್ದಾರೆ, ಇವರಿಗೆ ಎಷ್ಟು ಚೆನ್ನಾಗಿ ಧಾರಣೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ತಂದೆಯು ಯಾವ ವಿಷಯಗಳನ್ನು ತಿಳಿಸುತ್ತಾರೆಯೋ ಅದನ್ನು ಬರೆದಿಟ್ಟುಕೊಳ್ಳಬೇಕು, ಇಂದು ಯಾತ್ರೆಯ ವಿಷಯದ ಬಗ್ಗೆ ತಿಳಿಸಬೇಕು. ಯಾತ್ರೆಯು ಎರಡು ಪ್ರಕಾರದ್ದಿರುತ್ತದೆ, ಇದು ನಂಬರ್ವನ್ ವಿಷಯವಾಗಿದೆ. ಮನುಷ್ಯರೆಲ್ಲರೂ ಭಕ್ತಿಮಾರ್ಗದಲ್ಲಿ ದೈಹಿಕ ಯಾತ್ರೆಗಳನ್ನು ಮಾಡಿಸುತ್ತಾರೆ, ಜ್ಞಾನಮಾರ್ಗದಲ್ಲಿ ದೈಹಿಕ ಯಾತ್ರೆಯಿರುವುದಿಲ್ಲ, ನಿಮ್ಮದು ಆತ್ಮಿಕ ಯಾತ್ರೆಯಾಗಿದೆ. ತಂದೆಯು ತಿಳಿಸುತ್ತಾರೆ - ನೀವು ಈ ಯಾತ್ರೆಯಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಆತ್ಮವು ಪವಿತ್ರನಾಗದೆ ಮನೆಗೆ ಹೋಗಲು ಸಾಧ್ಯವಿಲ್ಲ. ಎಲ್ಲಾ ಆತ್ಮರು ಇಲ್ಲಿಯೇ ಬರುತ್ತಾ ಇರುತ್ತಾರೆ, ಹೋಗುವುದಂತೂ ಯಾರೂ ಇಲ್ಲ. ಸರ್ಕಾರಕ್ಕೂ ನೀವು ತಿಳಿಸಬಹುದು - ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿದ್ದಾಗ ಒಬ್ಬ ಮಗ, ಒಬ್ಬ ಮಗಳು ಇರುತ್ತಿದ್ದರು, ಅದೂ ಯೋಗಬಲದಿಂದ. ವಿಚಾರ ಮಾಡಿ - ಸತ್ಯಯುಗದಲ್ಲಿ ಎಷ್ಟು ಕಡಿಮೆ ಜನಸಂಖ್ಯೆಯಿರಬಹುದು ಮತ್ತು ಸಂಪೂರ್ಣ ನಿರ್ವಿಕಾರಿ ಲಕ್ಷ್ಮೀ-ನಾರಾಯಣರ ರಾಜ್ಯಭಾರವು ನಡೆಯಿತು ಅಂದಮೇಲೆ ಅವಶ್ಯವಾಗಿ ಮಗನೂ ಇರುವರು. ನಾವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೇವೆ ಅಂದಮೇಲೆ ಯೋಗಬಲದಿಂದ ಮಕ್ಕಳಾಗಲು ಸಾಧ್ಯವಿಲ್ಲವೆ? ಇದು ಡ್ರಾಮಾದಲ್ಲಿ ನಿಗಧಿಯಾಗಿದೆ, ಪವಿತ್ರರಾಗಿರುವ ಕಾರಣ ಈಗ ಮಗುವಾಗುವುದು ಎಂದು ಸಾಕ್ಷಾತ್ಕಾರವಾಗುತ್ತದೆ, ಆ ಖುಷಿಯಿರುತ್ತದೆ. ವಿಕಾರದ ಯಾವುದೇ ಮಾತಿರುವುದಿಲ್ಲ. ಅಲ್ಲಿ ಮಕ್ಕಳು ಹೇಗೆ ಜನಿಸುತ್ತಾರೆ ಎಂದು ನಿಮ್ಮೊಂದಿಗೆ ಕೆಲವರು ಕೇಳುತ್ತಾರೆ ಆಗ ಹ��ಳಿರಿ, ಪಪ್ಪಾಯಿಯ ಗಿಡಗಳು ಗಂಡು ಮತ್ತು ಹೆಣ್ಣು ಒಂದು ಇನ್ನೊಂದರ ಪಕ್ಕದಲ್ಲಿದ್ದಾಗ ಅದರಿಂದ ಫಲ ಬರುತ್ತದೆ. ಒಂದುವೇಳೆ ಒಂದು ಇನ್ನೊಂದರ ಪಕ್ಕದಲ್ಲಿ ಇಲ್ಲದಿದ್ದರೆ ಫಲ ಕೊಡುವುದಿಲ್ಲ. ಅದ್ಬುತವಲ್ಲವೆ. ಅಂದಮೇಲೆ ಸತ್ಯಯುಗದಲ್ಲಿ ಯೋಗಬಲದಿಂದ ಮಕ್ಕಳಾಗಲು ಏಕೆ ಸಾಧ್ಯವಿಲ್ಲ! ನವಿಲಿನ ಉದಾಹರಣೆಯೂ ಇದೆ ಅದಕ್ಕೆ ರಾಷ್ಟ್ರ ಪಕ್ಷಿಯೆಂದು ಹೇಳಲಾಗುತ್ತದೆ. ಪ್ರೇಮದ ಕಣ್ಣೀರಿನಿಂದ ಗರ್ಭ ಧಾರಣೆಯಾಗಿ ಬಿಡುತ್ತದೆ, ಇದು ವಿಕಾರ ಆಗಲಿಲ್ಲ ಅಲ್ಲವೆ. ಈ ಭಾರತವು ಶಿವಾಲಯವಾಗಿತ್ತು, ಶಿವ ತಂದೆಯು ಸ್ಥಾಪನೆ ಮಾಡಿದ್ದರು, ಈಗ ರಾವಣನು ವೇಶ್ಯಾಲಯವನ್ನಾಗಿ ಮಾಡಿದ್ದಾನೆ. ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ರಾವಣನ ಜಯಂತಿ ಎಂದು ಯಾರಿಗೂ ತಿಳಿದಿಲ್ಲ. ರಾವಣನ ಬಗ್ಗೆ ಯಾರಿಗೂ ಅರ್ಥವಾಗುವುದಿಲ್ಲ. ದಸರಾ ದಿನದಂದು ರಾವಣನ ಪ್ರತಿಮೆ ಮಾಡಿ ಅದನ್ನು ಸಮಾಪ್ತಿ ಮಾಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ರಾವಣನ ಐದು ವಿಕಾರಗಳನ್ನು ಈ ಪಟಾಕಿಗಳಿಂದ ಸುಡುವುದಲ್ಲ, ಯೋಗಬಲದಿಂದ ವಿಜಯ ಪಡೆಯಬೇಕಾಗಿದೆ. ಯಾವ ಯೋಗವನ್ನು ತಂದೆಯೇ ಬಂದು ಕಲಿಸುತ್ತಾರೆ, ಯೋಗಿ ಭವ, ಪವಿತ್ರ ಭವ ಎಂದು ಹೇಳುತ್ತಾರೆ. ಗೀತೆಯಲ್ಲಿ ಈ ಶಬ್ಧವಿದೆ - ಮನ್ಮನಾಭವ. ನನ್ನನ್ನು ನೆನಪು ಮಾಡಿರಿ, ಈ ಯಾತ್ರೆಯಿಂದಲೇ ನೀವು ಶಾಂತಿಧಾಮಕ್ಕೆ ಹೊರಟು ಹೋಗುವಿರಿ ನಂತರ ಅಮರಲೋಕದಲ್ಲಿ ಬರುವಿರಿ. ಮನುಷ್ಯರು ಯಾತ್ರೆ ಮಾಡಲು ಪವಿತ್ರವಾಗಿರುತ್ತಾರೆ, ಕಾಶಿಗೆ ಹೋಗುವವರೂ ಪವಿತ್ರರಾಗಿರುತ್ತಾರೆ ಆದರೆ ಕಾಶಿಯಲ್ಲಿರುವವರು ಯಾರೂ ಪವಿತ್ರರಾಗಿರುವುದಿಲ್ಲ. ಈ ರಾವಣ ರಾಜ್ಯದಲ್ಲಿ ಪತಿತರೊಂದಿಗೆ ಪತಿತರ ವ್ಯವಹಾರವಿದೆ, ಅಲ್ಲಿ ಪಾವನರ ವ್ಯವಹಾರವು ಪಾವನ ಮನುಷ್ಯರೊಂದಿಗೇ ಇರುತ್ತದೆ ಆದರೂ ಮತ್ತೆ ಕೆಳಗಿಳಿಯಲೇಬೇಕಾಗುತ್ತದೆ.
|
5 |
+
ತಂದೆಯು ತಿಳಿಸಿದ್ದಾರೆ - ಅರ್ಧಕಲ್ಪ ದಿನ, ಅರ್ಧಕಲ್ಪ ರಾತ್ರಿಯಾಗುತ್ತದೆ, ಇದೂ ಸಹ ಬ್ರಾಹ್ಮಣರ ಮಾತಾಗಿದೆ. ಬ್ರಾಹ್ಮಣರೇ ಮತ್ತೆ ದೇವತೆಗಳಾಗುತ್ತೀರಿ. ಹೊಸ ಪ್ರಪಂಚದಲ್ಲಿ ಲಕ್ಷ್ಮೀ-ನಾರಾಯಣರು ಎಲ್ಲಿಂದ ಬಂದರು? ಯಾವುದೇ ಯುದ್ಧವನ್ನಂತೂ ಮಾಡಲಿಲ್ಲ. ಮಹಾಭಾರತ ಯುದ್ಧವನ್ನು ತೋರಿಸುತ್ತಾರೆ ಆದರೆ ನಂತರ ಅದರ ಫಲಿತಾಂಶ ಏನನ್ನೂ ತೋರಿಸುವುದಿಲ್ಲ. ಪಂಚ ಪಾಂಡವರಿದ್ದರು ಎಂದು ಹೇಳುತ್ತಾರೆ, ನೀವು ಎಷ್ಟೊಂದು ಮಂದಿ ಪಾಂಡವರಿದ್ದೀರಿ, ನೀವು ಆತ್ಮಿಕ ಪಂಡರಾಗಿದ್ದೀರಿ. ಎಲ್ಲರೂ ಈಗ ಹಿಂತಿರುಗಿ ಹೋಗಬೇಕು ಎಂಬುದನ್ನು ತಿಳಿದುಕೊಂಡಿದ್ದೀರಿ, ತಂದೆಯು ಬರುವುದೇ ಎಲ್ಲರನ್ನೂ ಕರೆದುಕೊಂಡು ಹೋಗಲು, ಅವರು ಸುಪ್ರೀಂ ಮಾರ್ಗದರ್ಶಕ ಅಥವಾ ಮುಕ್ತಿದಾತನಾಗಿದ್ದಾರೆ, ಮಾಯೆಯಿಂದ ಮುಕ್ತ ಮಾಡಿ ಜೊತೆ ಕರೆದುಕೊಂಡು ಹೋಗುತ್ತಾರೆ. ಜೊತೆಯಲ್ಲಿ ಕರೆದುಕೊಂಡು ಹೋಗಲು ಮಾರ್ಗದರ್ಶಕರಂತೂ ಅವಶ್ಯವಾಗಿ ಬೇಕಾಗಿದೆ. ಈ ಮಾತುಗಳನ್ನು ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕು. ಆ ಶಾಸ್ತ್ರಗಳಂತೂ ಗ್ರಂಥಗಳಲ್ಲಿ ಮುದ್ರಿತವಾಗಿದೆ. ಯಾರು ಬೇಕಾದರೂ ಹೋಗಿ ಓದಬಹುದು. ಈ ಜ್ಞಾನವನ್ನು ತಂದೆಯೇ ತಿಳಿಸುತ್ತಾರೆ ಮತ್ತೆ ಶಾಸ್ತ್ರಗಳನ್ನು ಓದುವ ಮಾತೇ ಇಲ್ಲ. ತಂದೆಯಿಂದ ಕೇಳಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ನೆನಪಿನ ಯಾತ್ರೆ ನಂಬರ್ವನ್ ಆಗಿದೆ, ಅದರಿಂದಲೇ ಪವಿತ್ರರಾಗುತ್ತೀರಿ. ಚರಿತ್ರೆ-ಭೂಗೋಳವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಈ ಯಾತ್ರೆಯಲ್ಲಿ ಬಹಳ ಮಕ್ಕಳು ಕಚ್ಚಾ ಇದ್ದಾರೆ, ನೆನಪಿನಲ್ಲಿಯೇ ವಿಘ್ನಗಳು ಬೀಳುತ್ತವೆ. ಜ್ಞಾನವು ಬಹಳ ಸಹಜವಾಗಿದೆ.
|
6 |
+
ತಂದೆಯು ತಿಳಿಸುತ್ತಾರೆ - ಇದು ಸೃಷ್ಟಿಚಕ್ರವಾಗಿದೆ. ಇದರ ನಾಲ್ಕೂ ಭಾಗಗಳು ಸರಿಸಮವಾಗಿವೆ. ಒಂದುವೇಳೆ ಇದರ ಆಯಸ್ಸು ಲಕ್ಷಾಂತರ ವರ್ಷಗಳಾಗಿದ್ದರೆ ಮನುಷ್ಯರು ಹೆಚ್ಚಾಗಿ ಬಿಡುತ್ತಿದ್ದರು. ಜನಸಂಖ್ಯೆಯು ಕಡಿಮೆಯಾಗಬೇಕೆಂದು ಸರ್ಕಾರವೂ ಸಹ ಹೇಳುತ್ತದೆ ಆದರೆ ಇದು ತಂದೆಯ ಕೆಲಸವಾಗಿದೆ. ಮನುಷ್ಯರೆಲ್ಲರೂ ದೈಹಿಕ ಯುಕ್ತಿಗಳನ್ನೇ ರಚಿಸುತ್ತಿರುತ್ತಾರೆ. ತಂದೆಯದು ಇದು ಆತ್ಮಿಕ ಯುಕ್ತಿಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಅನೇಕ ಧರ್ಮಗಳ ವಿನಾಶ ಮಾಡಿ ಒಂದು ಧರ್ಮದ ಸ್ಥಾಪನೆ ಮಾಡಲು ಬರುತ್ತೇನೆ. ಒಂದು ಮತವು ಸತ್ಯಯುಗದಲ್ಲಿಯೇ ಇರುವುದು, ಇಲ್ಲಿರಲು ಸಾಧ್ಯವಿಲ್ಲ. ತಮ್ಮನ್ನು ಯಾರೂ ಸಹ ಪರಸ್ಪರ ಸಹೋದರನೆಂದು ತಿಳಿದುಕೊಳ್ಳುವುದೇ ಇಲ್ಲ. ತಂದೆಯು ಮಕ್ಕಳಿಗೆ ಬಹಳ ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ತಮ್ಮ ಬಳಿ ಭಾಷಣದ ವಿಷಯಗಳ ಪಟ್ಟಿಯನ್ನು ಇಟ್ಟುಕೊಳ್ಳಬೇಕು. ಒಂದೊಂದು ವಿಷಯವೂ ಬಹಳ ಸುಂದರವಾಗಿದೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಹೆಚ್ಚು ಟಾಂ ಟಾಂ ಹೊಡೆಯಬಾರದು, ಕೇವಲ ಇಷ್ಟನ್ನೇ ತಿಳಿಸಬೇಕು – ಶಿವ ತಂದೆಯು ಹೇಳುತ್ತಾರೆ, ನಾನು ಎಲ್ಲಾ ಆತ್ಮರ ತಂದೆ ಪರಮ ಆತ್ಮನಾಗಿದ್ದೇನೆ. ನನ್ನನ್ನೇ ಭಗವಂತನೆಂದು ಹೇಳುತ್ತಾರೆ. ಯಾವುದೇ ಮನುಷ್ಯರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಆತ್ಮಿಕ ಯಾತ್ರೆ ಮತ್ತು ದೈಹಿಕ ಯಾತ್ರೆಯ ವಿಷಯವು ಬಹಳ ಚೆನ್ನಾಗಿದೆ. ದೈಹಿಕ ಯಾತ್ರೆಯು ಮೃತ್ಯುಲೋಕದಲ್ಲಿ ಇರುತ್ತದೆ, ಇದು ಮೃತ್ಯುಲೋಕ, ಅದು ಅಮರಲೋಕವಾಗಿದೆ. ನೀವು ಮಕ್ಕಳು ಕಲ್ಪ-ಕಲ್ಪವೂ ತಂದೆಯ ಜೊತೆ ಸಹಯೋಗಿಗಳಾಗುತ್ತೀರಿ, ಆದ್ದರಿಂದ ನೀವು ಆತ್ಮೀಯ ಮಧುರ ಮಕ್ಕಳಾಗಿದ್ದೀರಿ. ಒಳ್ಳೆಯದು.
|
7 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
8 |
+
ಧಾರಣೆಗಾಗಿ ಮುಖ್ಯಸಾರ:
|
9 |
+
1. ತಾವು ಬುದ್ಧಿವಂತರಾಗಿ ಅನ್ಯರನ್ನೂ ಮಾಡಬೇಕಾಗಿದೆ. ತಮ್ಮ ಚಲನೆಯನ್ನು ಬಹಳ ರಾಯಲ್ ಮತ್ತು ಮಧುರವಾಗಿಟ್ಟುಕೊಳ್ಳಬೇಕಾಗಿದೆ.
|
10 |
+
2. ಆತ್ಮಿಕ ಯಾತ್ರೆಯಲ್ಲಿ ತತ್ಪರರಾಗಿರಬೇಕಾಗಿದೆ. ತಮ್ಮ ಬಳಿ ಒಳ್ಳೊಳ್ಳೆಯ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕು. ಒಂದೊಂದು ವಿಷಯದ ಮೇಲೆ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.
|
BKMurli/BKMurli/page_1013.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಕ್ಕಳಿಗೆ ಈಗ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಂತೂ ಬುದ್ಧಿಯಲ್ಲಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ನಾವು ಭಾರತವಾಸಿಗಳು ಮೊಟ್ಟ ಮೊದಲು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದೆವು. ಈ ನೆನಪು ಮಕ್ಕಳಿಗಾಗಿ ಬಹಳ ಅವಶ್ಯವಾಗಿದೆ. ಪ್ರತೀಕ್ಷಣ ನೆನಪಿನ ಯಾತ್ರೆಯಲ್ಲಿರಬೇಕು. ಇದರಲ್ಲಿ ಬಹಳ ಪರಿಶ್ರಮ ಪಡಬೇಕು ಆದರೆ ರಚಯಿತ ಮತ್ತು ರಚನೆಯ ಜ್ಞಾನವಂತೂ ಬುದ್ಧಿಯಲ್ಲಿರಬೇಕಲ್ಲವೆ. ನಾವು ಸತ್ಯಯುಗದಲ್ಲಿ ದೇವಿ-ದೇವತೆಗಳಾಗಿದ್ದೆವು, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ದೇವಿ-ದೇವತೆಗಳು ವಿಶ್ವದ ಮಾಲೀಕರಾಗಿದ್ದರು, ಒಂದೇ ಧರ್ಮವಿತ್ತು. ಶಬ್ಧಗಳನ್ನೂ ಸಹ ಪೂರ್ಣ ತಿಳಿದುಕೊಳ್ಳಬೇಕು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಸತ್ಯಯುಗದ ಆದಿಯಲ್ಲಿ ನಾವು ಸೂರ್ಯವಂಶಿ ಮನೆತನದಲ್ಲಿದ್ದೆವು. ರಚಯಿತ ತಂದೆಯು ಆದಿ-ಮಧ್ಯ-ಅಂತ್ಯದ ಯಾವ ಜ್ಞಾನವನ್ನು ತಿಳಿಸಿದ್ದಾರೆಯೋ ಅದು ಪ್ರತಿಯೊಬ್ಬರ ಬುದ್ಧಿಯಲ್ಲಿರಬೇಕು. ಇದನ್ನು ಎಂದೂ ಮರೆಯಬಾರದು ಮತ್ತು ಇದನ್ನು ನೀವೇ ತಿಳಿದುಕೊಂಡಿದ್ದೀರಿ, ನಾವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನಂತರ ತ್ರೇತಾದಲ್ಲಿ ಬಂದೆವು ಆಗ ಎರಡು ಕಲೆಗಳು ಕಡಿಮೆಯಾಯಿತು, ಸೃಷ್ಟಿಯೂ ಸಹ ಹಳೆಯದಾಗುತ್ತಾ ಹೋಗುತ್ತದೆ. ಇದನ್ನು ಚೆನ್ನಾಗಿ ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ಎಷ್ಟು ನೀವು ನೆನಪು ಮಾಡುತ್ತಾ ಇರುತ್ತೀರಿ ಅಷ್ಟು ಖುಷಿಯ ನಶೆಯೇರಿರುವುದು ಮತ್ತೆ ತ್ರೇತಾದ ಅಂತ್ಯದ ನಂತರ ದ್ವಾಪರವು ಬರುತ್ತದೆ. ದ್ವಾಪರದ ಆರಂಭದಿಂದ ಅನ್ಯ ಧರ್ಮಗಳು ಸ್ಥಾಪನೆಯಾಗುತ್ತವೆ ಮತ್ತು ನಾವು ಇಳಿಯುತ್ತಾ-ಇಳಿಯುತ್ತಾ ಭಕ್ತಿಮಾರ್ಗದಲ್ಲಿ ಬರುತ್ತೇವೆ, ಆ ಸಮಯದಲ್ಲಿ ಅನ್ಯ ಧರ್ಮದವರೂ ಭಕ್ತಿಮಾರ್ಗದಲ್ಲಿ ಇರುತ್ತಾರೆಂದಲ್ಲ, ಈ ಕಥೆಯು ನೀವು ಭಾರತವಾಸಿಗಳಿಗಾಗಿಯೇ ಇದೆ. ಭಲೆ ರಾವಣ ರಾಜ್ಯವಾಗಿದೆ ಆದರೆ ಅವರಿಗಾಗಿ ರಾವಣ ರಾಜ್ಯವೆಂದು ಹೇಳುವುದಿಲ್ಲ, ಅವರು ತಮ್ಮ ಸಮಯದಲ್ಲಿ ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಧರ್ಮಗಳ ಸ್ಥಾಪನೆಯಾಗಬೇಕಾಗಿದೆ ನಂತರ ವೃದ್ಧಿ ಹೊಂದುತ್ತಾ ಹೋಗುತ್ತಾರೆ ಮತ್ತು ಕೆಳಗಿಳಿಯುತ್ತಲೂ ಇರುತ್ತಾರೆ. ಚಕ್ರವಂತೂ ಸುತ್ತಲೇಬೇಕಾಗಿದೆ, ಈ ಸಮಯದಲ್ಲಿ ನೀವು ತಿಳಿದುಕೊಂಡಿದ್ದೀರಿ- ದ್ವಾಪರದ ನಂತರ ಭಕ್ತಿಮಾರ್ಗವು ಆರಂಭವಾಗಿದೆ, ಅನ್ಯ ಧರ್ಮಗಳೂ ಸ್ಥಾಪನೆಯಾಗಿವೆ. ಈಗಂತೂ ಕಲಿಯುಗ ತಮೋಪ್ರಧಾನ ಪ್ರಪಂಚವಾಗಿದೆ. ಸೃಷ್ಟಿಯು ಹಳೆಯದಾಗಿರುವ ಕಾರಣ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಈ ಜ್ಞಾನವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಇದು ಸಹಜಕ್ಕಿಂತ ಸಹಜ ಮಾತಾಗಿದೆ ಯಾವುದನ್ನು ಮಕ್ಕಳೂ ಸಹ ನೆನಪಿಟ್ಟುಕೊಳ್ಳಬಹುದು ಆದರೆ ಅವರು ಗಿಳಿಯ ಪಾಠದಂತೆ ನೆನಪು ಮಾಡುತ್ತಾರೆ. ನೀವು ಮಕ್ಕಳಿಗಂತೂ ಭಾಸವಾಗುತ್ತದೆ ಅದರನುಸಾರ ತಿಳಿಸುತ್ತೀ��ಿ. ನಿಮಗೆ ತಿಳಿದಿದೆ - ಇಡೀ ವೃಕ್ಷವೇ ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ಮೊಟ್ಟ ಮೊದಲು ಯಾವ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತೋ ಅದರ ಬುನಾದಿಯು ಈಗ ಇಲ್ಲ, ಭಲೆ ಇದ್ದರೂ ಸಹ ಅವರು ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ ಆದ್ದರಿಂದ ದೇವಿ-ದೇವತಾಧರ್ಮವಿಲ್ಲ ಪ್ರಾಯಲೋಪವಾಗಿದೆ ಎಂದು ಹೇಳಲಾಗುತ್ತದೆ. ಎಲ್ಲರೂ ಪತಿತರಾಗಿ ಬಿಟ್ಟಿದ್ದಾರೆ ಆದ್ದರಿಂದ ತಮ್ಮನ್ನು ಯಾರೂ ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ. ಆ ಧರ್ಮವೂ ಇಲ್ಲ, ಆ ಕರ್ಮವೂ ಇಲ್ಲ. ಸತ್ಯಯುಗದಲ್ಲಿ ಎಲ್ಲರ ಕರ್ಮವು ಅಕರ್ಮವಾಗುತ್ತದೆ. ಇಲ್ಲಿ ಮನುಷ್ಯರು ಯಾವ ಕರ್ಮ ಮಾಡುವರೋ ಅದು ವಿಕರ್ಮವಾಗುತ್ತದೆ. ತಮೋಪ್ರಧಾನರಾಗಿರುವ ಕಾರಣ ತಮ್ಮನ್ನು ಯಾರೂ ಸಹ ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ. ಡ್ರಾಮಾಪ್ಲಾನ್ನುಸಾರ ಇದೂ ಸಹ ನಿಗಧಿಯಾಗಿದೆ, ಯಾವಾಗ ಧರ್ಮವು ಪ್ರಾಯಲೋಪವಾಗುವುದೋ ಆಗಲೇ ತಂದೆಯು ಬಂದು ಸದ್ಧರ್ಮದ ಸ್ಥಾಪನೆ ಮಾಡುವರು ಮತ್ತು ಅನೇಕ ಧರ್ಮಗಳ ವಿನಾಶ ಮಾಡಿಸುವರು. ಹೊಸ ಪ್ರಪಂಚದಲ್ಲಿ ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು. ಈಗ ಶಿವ ತಂದೆಯು ಬಂದು ಪುನಃ ಬ್ರಹ್ಮಾರವರ ಮೂಲಕ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ನೀವು ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಕ್ರೈಸ್ಟ್ನ ಮೂಲಕ ಯಾರು ಕ್ರಿಶ್ಚಿಯನ್ನರಾದರೋ ಅವರನ್ನೂ ಮುಖವಂಶಾವಳಿಯೆಂದೇ ಹೇಳುತ್ತಾರೆ. ಮಕ್ಕಳಂತೂ ಆಗಿರಲಿಲ್ಲ ಅಲ್ಲವೆ. ಹಾಗೆಯೇ ನೀವೂ ಸಹ ಬ್ರಹ್ಮನ ಮೂಲಕ ಬ್ರಾಹ್ಮಣರಾಗಿದ್ದೀರಿ, ಮೂಲತಃ ನೀವು ಶಿವ ತಂದೆಯ ಮಕ್ಕಳಾಗಿದ್ದೀರಿ. ಈ ಸಮಯದಲ್ಲಿ ನೀವು ಬ್ರಹ್ಮಾರವರ ಮೂಲಕ ಬ್ರಾಹ್ಮಣರಾಗಿದ್ದೀರಿ. ಶಿವ ತಂದೆಯೇ ಸ್ವಯಂ ಇವರ ಮೂಲಕ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ ಏಕೆಂದರೆ ಅವರೇ ಹಳೆಯ ಪ್ರಪಂಚದ ವಿನಾಶವನ್ನೂ ಮಾಡಿಸಬೇಕಾಗಿದೆ. ಆ ವಿನಾಶದ ಕಾರ್ಯವನ್ನು ಮತ್ತ್ಯಾರೂ ಮಾಡುವುದಿಲ್ಲ. ಅವರಂತೂ ಬಂದು ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ ನಂತರ ಆ ಧರ್ಮವು ವೃದ್ಧಿಯಾಗುತ್ತದೆ. ಈಗ ಇರುವುದೇ ತಮೋಪ್ರಧಾನ ಪ್ರಪಂಚ, ಕಲಿಯುಗದ ಅಂತ್ಯ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ, ನೀವು ತಿಳಿದುಕೊಂಡಿದ್ದೀರಿ - ಈ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಇದು ಸತ್ಯಯುಗದಲ್ಲಿರುವುದಿಲ್ಲ. ಅಲ್ಲಿ ಈ ಅನೇಕ ಧರ್ಮಗಳಿರುವುದಿಲ್ಲ. ಈ ಇಸ್ಲಾಮಿ, ಕ್ರಿಶ್ಚಿಯನ್ ಮುಂತಾದ ಎಲ್ಲಾ ಧರ್ಮಗಳು ದ್ವಾಪರದಲ್ಲಿ ಸ್ಥಾಪನೆಯಾಗುತ್ತವೆ. ನಂತರ ಪ್ರತಿಯೊಬ್ಬರೂ ತಮ್ಮ-ತಮ್ಮ ಶಾಸ್ತ್ರವನ್ನು ಬರೆದಿದ್ದಾರೆ, ಈಗ ಇಡೀ ಸೃಷ್ಟಿಯು ಪತಿತವಾಗಿದೆ ಆದ್ದರಿಂದ ಬಂದು ನಮ್ಮ ದುಃಖ ದೂರ ಮಾಡಿ, ಸುಖ ಕೊಡಿ ಎಂದು ಪತಿತ-ಪಾವನ ತಂದೆಯನ್ನೇ ಕರೆಯುತ್ತಾರೆ. ಮಾರ್ಗದರ್ಶಕನಾಗಿ ನಮ್ಮನ್ನು ಕರೆದುಕೊಂಡು ಹೋಗಿ ಎಂದು ಅವರೂ ಸಹ ಹೇಳುತ್ತಾರೆ. ಅವರು ಎಲ್ಲರಿಗೂ ಮಾರ್ಗದರ್ಶಕನಾಗುತ್ತಾ��ಲ್ಲವೆ. ನೀವೀಗ ಅಂತರವನ್ನು ತಿಳಿದುಕೊಂಡಿದ್ದೀರಿ, ಆ ಮಾರ್ಗದರ್ಶಕರಂತು ತೀರ್ಥ ಯಾತ್ರೆಗಳಲ್ಲಿ ಸುತ್ತಾಡಿಸುತ್ತಾರೆ. ನೀವು ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ, ಪಾಂಡವ ಸಂಪ್ರದಾಯದವರಾಗಿದ್ದೀರಿ. ಶಿವ ತಂದೆಯ ಮಕ್ಕಳೂ ಸಹ ಮಾರ್ಗದರ್ಶಕರೆ ಆಗಿದ್ದೀರಿ ಆದ್ದರಿಂದ ಆತ್ಮಿಕ ಯಾತ್ರೆಯನ್ನು ಕಲಿಸುತ್ತಾರೆ. ಹೇ ಆತ್ಮ, ನೀನು ತನ್ನ ತಂದೆಯನ್ನು ನೆನಪು ಮಾಡು ಮತ್ತು ಮನೆಯನ್ನು ನೆನಪು ಮಾಡು. ತಂದೆಯನ್ನು ನೆನಪು ಮಾಡುವುದರಿಂದ ಮನೆಗೆ ತಲುಪುತ್ತೀರಿ, ನೆನಪು ಮಾಡದಿದ್ದರೆ ಪಾಪಗಳು ಕಳೆಯುವುದಿಲ್ಲ. ಭಲೆ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಆದರೆ ಶಿಕ್ಷೆಗಳನ್ನನುಭವಿಸಿ ಲೆಕ್ಕಾಚಾರಗಳನ್ನು ಮುಗಿಸಬೇಕಾಗುತ್ತದೆ ಅಥವಾ ಯೋಗಬಲದಿಂದ ಕಳೆಯಬೇಕಾಗುತ್ತದೆ ಆದರೆ ಅವಶ್ಯವಾಗಿ ಲೆಕ್ಕಾಚಾರವನ್ನು ಮುಗಿಸಲೇಬೇಕಾಗಿದೆ.
|
2 |
+
ನಾವೀಗ ಜಮಾ ಮಾಡಿಕೊಳ್ಳುತ್ತಿದ್ದೇವೆಂದು ನಿಮಗೆ ತಿಳಿದಿದೆ. ಪವಿತ್ರರಾಗಿ ಎಷ್ಟು ಸಂಪಾದನೆ ಮಾಡಿಕೊಳ್ಳುವಿರೋ ಅಷ್ಟು ಜಮಾ ಆಗುತ್ತದೆ. ಪುರುಷಾರ್ಥ ಮಾಡದಿದ್ದರೆ ಏನೂ ಜಮಾ ಆಗುವುದಿಲ್ಲ, ನಷ್ಟವುಂಟಾಗುವುದು. ನೀವು ತಿಳಿದುಕೊಂಡಿದ್ದೀರಿ - ಅರ್ಧಕಲ್ಪ ನಾವು ನಷ್ಟ ಹೊಂದುತ್ತಲೇ ಬಂದಿದ್ದೇವೆ, ಈಗ ಸಂಪೂರ್ಣ ದಿವಾಳಿಯಾಗಿ ಬಿಟ್ಟಿದ್ದೇವೆ, ಪ್ರತೀ ಮಾತಿನಲ್ಲಿ ದಿವಾಳಿ. ಈಗ ಮಕ್ಕಳು 21 ಜನ್ಮಗಳಿಗಾಗಿ ಜಮಾ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಇದನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿ. ಸಮಯ ಇರುವಾಗಲೆಲ್ಲಾ ಈ ಸ್ಮೃತಿಯಲ್ಲಿರಿ - ತಂದೆಯು ಜ್ಞಾನಸಾಗರನಾಗಿದ್ದಾರೆ ಅಂದಮೇಲೆ ನಿಮಗೂ ಸಹ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ತಂದೆಯು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಹೇಗೆ ಬ್ಯಾರಿಸ್ಟರ್, ಇಂಜಿನಿಯರ್ ಮೊದಲಾದವರು ವಿದ್ಯೆಯನ್ನು ಓದಿಸಿ ತಮ್ಮ ಸಮಾನರನ್ನಾಗಿ ಮಾಡುತ್ತಾರಲ್ಲವೆ. ಹಾಗೆಯೇ ತಂದೆಯೂ ಸಹ ಮಕ್ಕಳನ್ನೂ ತಮ್ಮಸಮಾನ ದೇಹೀ-ಅಭಿಮಾನಿಗಳನ್ನಾಗಿ ಮಾಡುತ್ತಾರೆ. ತಂದೆಯು ದೇಹಾಭಿಮಾನವನ್ನು ಇಟ್ಟುಕೊಳ್ಳುವುದಿಲ್ಲ, ಇದು ವಿದ್ಯೆಯಾಗಿದೆಯಲ್ಲವೆ. ಯಾವ ಜ್ಞಾನವು ತಂದೆಯಲ್ಲಿದೆಯೋ ಅದನ್ನು ತಂದೆಯು ನಿಮಗೆ ಕೊಡುತ್ತಾರೆ. ತಂದೆಯು ಪವಿತ್ರತೆಯ ಸಾಗರನಾಗಿದ್ದಾರೆ ಅಂದಮೇಲೆ ನಿಮ್ಮನ್ನೂ ತಮ್ಮ ಸಮಾನ ಪವಿತ್ರರನ್ನಾಗಿ ಮಾಡುತ್ತಾರೆ. ಯಾರು ಪವಿತ್ರರಾಗುವುದಿಲ್ಲವೋ ಅವರು ಶಿಕ್ಷೆಗಳನ್ನನುಭವಿಸುತ್ತಾರೆ ಮತ್ತು ಪದವಿಯೂ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಧನದಿಂದ ನೀವು ಸಾಹುಕಾರರಾಗಬೇಕು ಎಂದಲ್ಲ. ತಂದೆಯು ತಿಳಿಸಿದ್ದಾರೆ - ಬಡವರ ಒಂದು ಪೈಸೆ ಸಾಹುಕಾರರ ಒಂದು /ರೂಪಾಯಿಗೆ ಸಮಾನ. ಇಬ್ಬರಿಗೂ ಅಷ್ಟೇ ಆಸ್ತಿಯು ಸಿಗುತ್ತದೆ, ತಂದೆಯು ಬಡವರ ಬಂಧುವಾಗಿದ್ದಾರೆ ಆದ್ದರಿಂದ ಅಜಾಮೀಳರಂತಹ ಪಾಪಿಗೂ ಅಹಲ್ಯೆಯರು, ಗಣಿಕೆಯರು, ಕುಬ್ಜೆಯರು ಎಲ್ಲರ ಉದ್ಧಾರ ಮಾಡುತ್ತಾರೆಂದು ಗಾಯನವಿದೆ. ಸಾಹುಕಾರರ ಹೆಸರನ್ನ�� ಗಾಯನ ಮಾಡುವುದಿಲ್ಲ. ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ನಾವು ಮೊಟ್ಟ ಮೊದಲು ಎಲ್ಲರಿಗಿಂತ ಸಾಹುಕಾರರಾಗಿದ್ದೆವು ಎಂದು ನೀವು ಹೇಳುತ್ತೀರಿ ಮತ್ತು ಇಲ್ಲಿ ಜ್ಞಾನವನ್ನು ನಂಬರ್ವಾರ್ ತೆಗೆದುಕೊಂಡರೆ ಅಲ್ಲಿ ಪದವಿಯೂ ನಂಬರ್ವಾರ್ ಪಡೆಯುತ್ತಾರೆ ಆದ್ದರಿಂದ ಮಾತಾಪಿತರನ್ನು ಪೂರ್ಣ ಅನುಸರಿಸಬೇಕಾಗಿದೆ. ಹೇಗೆ ಬಾಬಾರವರು (ಬ್ರಹ್ಮಾ) ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ, ಮಮ್ಮಾ-ಬಾಬಾರವರೂ ಸಹ ಸರ್ವೀಸ್ ಮಾಡುತ್ತಾರಲ್ಲವೆ. ನಿಮ್ಮದು ಇದು ಆತ್ಮಿಕ ಸೇವೆಯಾಗಿದೆ. ಮನೆ-ಮನೆಗೆ ಸಂದೇಶವನ್ನು ತಲುಪಿಸಬೇಕಾಗಿದೆ. ನಮಗೆ ತಂದೆಯು ಬಂದಿರುವ ಸಂದೇಶವೇ ಸಿಗಲಿಲ್ಲವೆಂದರೆ ಹೇಗೆ ನೆನಪು ಮಾಡುವುದು ಎಂದು ಕೊನೆಗೆ ಯಾರೂ ಹೇಳುವಂತಾಗಬಾರದು. ಭಗವಂತನಿಗೂ ದೂರು ಕೊಟ್ಟರು ಎಂದು ಕೆಲವು ಕಥೆಗಳು ಶಾಸ್ತ್ರಗಳಲ್ಲಿವೆ ಆದ್ದರಿಂದ ಎಲ್ಲರಿಗೆ ತಂದೆಯ ಸಂದೇಶ ತಿಳಿಸಬೇಕು. ಸ್ವಲ್ಪವೇ ಸಮಯವಿದೆ, ದಿನ-ಪ್ರತಿದಿನ ಹೆಚ್ಚು-ಹೆಚ್ಚು ಪ್ರದರ್ಶನಿ, ಮೇಳಗಳು ಆಗುತ್ತಾ ಇರುತ್ತವೆ. ಈ ಜ್ಞಾನವು ವಿದೇಶದ ಪತ್ರಿಕೆಗಳಲ್ಲಿಯೂ ಬರುತ್ತದೆ. ಯಜ್ಞದ ಆದಿಯಲ್ಲಿ ಭಟ್ಟಿಯಾದಾಗ ವಿದೇಶದವರೆಗೆ ಪತ್ರಿಕೆಗಳಲ್ಲಿ ಹೆಸರು ಹೋಯಿತು. ಈಗ ಪುನಃ ಆಗುವುದು- ಪರಮಪಿತ ಪರಮಾತ್ಮನು ಬಂದು ಎಲ್ಲರನ್ನೂ ಮುಕ್ತಗೊಳಿಸುತ್ತಿದ್ದಾರೆ ಮತ್ತು ತಿಳಿಸುತ್ತಾರೆ - ಎಲ್ಲಾ ಕಡೆಯಿಂದ ಬುದ್ಧಿಯೋಗವನ್ನು ತೆಗೆಯಿರಿ, ತಂದೆಯಾದ ನನ್ನೊಬ್ಬನನ್ನೇ ನೆನಪು ಮಾಡಿ, ಆಗ ನೀವು ಪಾವನರಾಗಿ ಮುಕ್ತಿಧಾಮದಲ್ಲಿ ಹೋಗುವಿರಿ. ಕೆಲವರಂತೂ ಬಹಳ ಚೆನ್ನಾಗಿ ತಿಳಿದುಕೊಂಡು ನೆನಪು ಮಾಡತೊಡಗುತ್ತಾರೆ. ಧರ್ಮದಲ್ಲಿ ಯಾರು ಮುಖ್ಯಸ್ಥರಿರುವರೋ ಅವರು ನಂಬರ್ವಾರ್ ಆಗಿ ಬರುತ್ತಾರೆ. ಎಲ್ಲಾ ಧರ್ಮಗಳ ವೃಕ್ಷವು ನಿರಾಕಾರಿ ಪ್ರಪಂಚದಿಂದ ಇಲ್ಲಿ ಬಂದು ವೃದ್ಧಿಯಾಗುತ್ತದೆ. ಮತ್ತೆ ಪತಿತ ಪ್ರಪಂಚದಿಂದ ನಿರಾಕಾರಿ ಪಾವನ ಪ್ರಪಂಚದಲ್ಲಿ ಹೊರಟು ಹೋಗುತ್ತಾರೆ. ನಂತರ ಪ್ರತಿಯೊಬ್ಬರೂ ತಮ್ಮ-ತಮ್ಮ ಸಮಯದಲ್ಲಿ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಇದು ಬುದ್ಧಿಯಲ್ಲಿರಬೇಕು. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು, ಅದು ವೃದ್ಧಿಯಾಗುತ್ತಾ-ಆಗುತ್ತಾ ಅನೇಕ ಧರ್ಮ, ಅನೇಕ ಮತಗಳಾಗಿ ಬಿಡುತ್ತದೆ. ನೀವು ತಿಳಿದುಕೊಂಡಿದ್ದೀರಿ - ಈ ಭಾರತವು ಅವಿನಾಶಿ ಖಂಡವಾಗಿದೆ, ಇದರಲ್ಲಿ ಪ್ರಳಯವೆಂದೂ ಆಗುವುದಿಲ್ಲ. ಈ ಮಾತುಗಳನ್ನು ಸ್ಮರಣೆ ಮಾಡುತ್ತಾ ಇರಿ.
|
3 |
+
ಇದು ನಿಮ್ಮ ಈಶ್ವರೀಯ ಮೆಷಿನ್ ಆಗಿದೆ. ಸೇವಾಕೇಂದ್ರಗಳು ತೆರೆಯುತ್ತಾ ಹೋಗುತ್ತವೆ, ಈಗ ವಿನಾಶವೂ ಸನ್ಮುಖದಲ್ಲಿ ನಿಂತಿದೆ. ಈ ಕಣ್ಣುಗಳಿಂದ ಏನೆಲ್ಲಾ ನೋಡುತ್ತೀರೋ ಅದೆಲ್ಲವೂ ಸತ್ಯಯುಗದಲ್ಲಿ ಇರುವುದಿಲ್ಲ, ಅರಣ್ಯವಾಗಿ ಬಿಡುವುದು. ಅಬುಪರ್ವತವು ಸತ್ಯಯುಗದಲ್ಲಿರುವುದಿಲ್ಲ, ಅದರ ಅವಶ್ಯಕತೆಯೇ ಇಲ್ಲ. ಈ ಮಂದಿರ ಇತ್ಯಾದಿಗಳೆಲ್ಲವೂ ನಂತರ ಭಕ್ತಿಮಾರ್ಗದಲ್ಲಿ ಮಾಡಲ್ಪಡುತ್ತವೆ. ಎಷ್ಟು ಎತ್ತರದ ಪರ್ವತಗಳ ಮೇಲೆ ಮಂದಿರಗಳನ್ನು ಕಟ್ಟಿಸುತ್ತಾರೆ ಮತ್ತೆ ಚಳಿಗಾಲದಲ್ಲಿ ಅದನ್ನು ಮುಚ್ಚಿ ಕೆಳಗಡೆ ಬಂದು ಬಿಡುತ್ತಾರೆ. ನೀವಂತೂ ಪರ್ವತಗಳ ಮೇಲೆ ಕುಳಿತಿದ್ದೀರಿ. ಅಂತ್ಯದಲ್ಲಿ ಎಲ್ಲವೂ ಬೆಟ್ಟಗಳ ಮೇಲೆ ಸಾಕ್ಷಾತ್ಕಾರವಾಗುತ್ತದೆ. ಬ್ರಹ್ಮಾ ತಂದೆಯು ತಿಳಿಸುತ್ತಾರೆ - ನನಗೂ ಸಹ ಸಾಕ್ಷಾತ್ಕಾರವಾದಾಗ ನಾನು ಪರ್ವತದ ಮೇಲಿದ್ದೆನು, ಈಗಲೂ ಸಹ ಪರ್ವತಗಳ ಮೇಲೆ ಬಂದು ಕುಳಿತಿದ್ದೇವೆ. ಇಲ್ಲಿ ಕುಳಿತು-ಕುಳಿತಿದ್ದಂತೆಯೇ ನೀವು ಎಲ್ಲವನ್ನು ಕೇಳುತ್ತೀರಿ ಮತ್ತು ನೋಡುತ್ತೀರಿ. ಹೇಗೆ ಬೆಂಕಿ ಬೀಳುತ್ತದೆ, ಏನೇನು ನಡೆಯುತ್ತದೆ ಎಂಬುದು ಇಲ್ಲಿ ಕುಳಿತಿದ್ದಂತೆಯೇ ಸಾಕ್ಷಾತ್ಕಾರವಾಗುತ್ತದೆ. ರೇಡಿಯೋಗಳಿಂದ, ಪತ್ರಿಕೆಗಳಿಂದ ನೀವು ಎಲ್ಲವನ್ನೂ ಕೇಳುತ್ತೀರಿ. ಟಿ.ವಿ.,ಯಲ್ಲಿಯೂ ನೋಡುತ್ತೀರಿ. ಮುಂದೆ ಹೋದಂತೆ ಇಂತಹ ವಸ್ತುಗಳನ್ನು ಕಂಡುಹಿಡಿಯುತ್ತಾರೆ ಅದರಿಂದ ಮನೆಯಲ್ಲಿ ಕುಳಿತುಕೊಂಡೇ ಎಲ್ಲವನ್ನೂ ನೋಡಬಹುದು, ರೇಡಿಯೋಗಳಲ್ಲಿ ಎಲ್ಲೆಲ್ಲಿನ ಶಬ್ಧಗಳು ಕೇಳಿಬರುತ್ತದೆ, ಇದೆಲ್ಲವೂ ಮಾಯೆಯ ಶೋ ಆಗಿದೆ ಆದ್ದರಿಂದ ಇದೇ ಸ್ವರ್ಗವೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ ಆದರೆ ಯಾವಾಗ ವಿನಾಶವಾಗುವುದೋ ಆಗಲೇ ಸ್ವರ್ಗವು ಬರಲು ಸಾಧ್ಯ. ಅಲ್ಲಿ ಸಿಹಿ ನೀರಿನ ನದಿಗಳ ತೀರದಲ್ಲಿ ಮಹಲುಗಳಿರುತ್ತವೆ. ಪರ್ವತಗಳ ಮೇಲೆ ಹೋಗುವ ಅವಶ್ಯಕತೆಯಿರುವುದಿಲ್ಲ, ಅಲ್ಲಿ ಸದಾ ವಸಂತ ಋತುವಿರುತ್ತದೆ. ಇಂದು ಬಿಸಿಲು, ಚಳಿ.... ಎಲ್ಲದರಲ್ಲಿ ದುಃಖವಿದೆ. ಸ್ವರ್ಗದಲ್ಲಿ ದುಃಖದ ಹೆಸರೇ ಇರುವುದಿಲ್ಲ. ನೀವು ಅಂತಹ ಸ್ಥಾನಕ್ಕೆ ಹೋಗುತ್ತೀರಿ, ಇದು ಬುದ್ಧಿಯಲ್ಲಿದೆ - ನಾವು ಈ ಶರೀರವನ್ನು ಬಿಟ್ಟು ತಂದೆಯ ಬಳಿ ಹೋಗಬೇಕಾಗಿದೆ. ನಾವೀಗ ತಂದೆಯ ಮೂಲಕ ರಾಜಯೋಗವನ್ನು ಕಲಿಯುತ್ತಿದ್ದೇವೆ. 5000 ವರ್ಷಗಳ ಮೊದಲೂ ಸಹ ಕಲಿತಿದ್ದಿರಿ, ಬಾಬಾ ತಾವಂತೂ ಅದೇ ಕಲ್ಪದ ಹಿಂದಿನ ತಂದೆಯಾಗಿದ್ದೀರಿ ಎಂದು ಹೇಳುತ್ತೀರಿ. ತಂದೆಗೂ ಗೊತ್ತಿದೆ - ಯಾರು ಕಲ್ಪದ ಮೊದಲು ರಾಜ್ಯಭಾಗ್ಯವನ್ನು ಪಡೆದಿರುವರೋ ಅವರೇ ಈಗಲೂ ಪಡೆಯುತ್ತಾರೆ. ಈ ಚಕ್ರವು ಬುದ್ಧಿಯಲ್ಲಿರಬೇಕು. ಅವಶ್ಯವಾಗಿ 5000 ವರ್ಷಗಳ ಮೊದಲೂ ಭಾರತದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಮತ್ತೆ ಅರ್ಧ ಸಮಯದ ನಂತರ ಮಾಯೆಯ ಪ್ರವೇಶತೆಯಾಯಿತು, ಅನ್ಯ ಧರ್ಮಗಳು ಬಂದವು, ಭಕ್ತಿಮಾರ್ಗವು ಆರಂಭವಾಯಿತು ಅರ್ಥಾತ್ ರಾವಣ ರಾಜ್ಯವು ಆರಂಭವಾಯಿತು. ಈ ಚಿತ್ರಗಳಲ್ಲಿ ಸ್ಪಷ್ಟವಾಗಿ ತಿಳಿಸಬಹುದು. ಸತೋಪ್ರಧಾನರಿಂದ ಹೇಗೆ ತಮೋಪ್ರಧಾನರಾಗುತ್ತಾರೆನ್ನುವುದು ಭಾರತದ ಕಥೆಯೇ ಆಗಿದೆ. ನಂತರ ಯಾವಾಗ ವಿನಾಶದ ಸಮಯವು ಬರುವುದೋ ಆಗ ಎಲ್ಲರೂ ವಿನಾಶಕಾಲೇ ವಿಪರೀತ ಬುದ್ಧಿಯವರಾಗಿ ಬಿಡುತ್ತಾರೆ. ಮೇಳ, ಪ್ರದರ್ಶನಿಗಳಲ್ಲಿ ಬಹಳ ಯುಕ್ತಿಯಿಂದ ಚಿತ್ರಗಳನ್ನಿಡಬೇಕು. ನಿಮ್ಮದು ಇದು ಗುಪ್ತ ಜ್ಞಾನವಾಗಿದೆ, ಇಲ್ಲಿ ಯಾವುದೇ ಆಯುಧ ಇತ್ಯಾದಿಗಳ ಮಾತಿಲ್ಲ. ನೀವು ಬಹಳ ಸಾಧಾರಣವಾಗಿದ್ದೀರಿ, ನೀವು ನಡೆಯುತ��ತಾ-ತಿರುಗಾಡುತ್ತಾ ತಂದೆಯ ನೆನಪಿನಲ್ಲಿರುತ್ತೀರಿ. ನೀವು ವೇದ-ಶಾಸ್ತ್ರಗಳನ್ನು ಒಪ್ಪುತ್ತೀರಾ ಎಂದು ಯಾರಾದರೂ ನಿಮ್ಮೊಂದಿಗೆ ಕೇಳಿದರೆ ತಿಳಿಸಿ, ಹೌದು ನಾವು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೇವೆ- ಇವುಗಳಿಂದ ಭಗವಂತನ ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಇದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಸತ್ಯಯುಗದಲ್ಲಿ ಎಲ್ಲರೂ ಪಾವನ ಆತ್ಮರಿದ್ದರು. ಗೀತೆಯೂ ಇದೆಯಲ್ಲವೆ - ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ... ಹೊಸ ಪ್ರಪಂಚದಲ್ಲಿ ಎಲ್ಲವೂ ಹೊಸದಾಗಿರುವುದು. ತಂದೆಯು ಬಂದು ಹೊಸ ಪ್ರಪಂಚಕ್ಕಾಗಿ ಹೊಸ ಕಥೆಗಳನ್ನು ತಿಳಿಸುತ್ತಾರೆ. ದೃಶ್ಯಾವಳಿಗಳೆಲ್ಲವೂ ಹೊಸದಾಗಿರುತ್ತವೆ. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ, ಅಭಿಪ್ರಾಯವನ್ನೂ ಬರೆಯುತ್ತಾರೆ. ಇದು ಬಹಳ ಚೆನ್ನಾಗಿದೆ, ಇದನ್ನು ಎಲ್ಲರಿಗೆ ತಿಳಿಸಬೇಕು ಎಂದು ಹೇಳುತ್ತಾರೆ ಆದರೆ ಸ್ವಯಂ ಏನನ್ನೂ ತಿಳಿದುಕೊಳ್ಳುವುದಿಲ್ಲ. ಕೋಟಿಯಲ್ಲಿ ಕೆಲವರೇ ಬರುತ್ತಾರೆ ಆದರೆ ಸೇವೆಯಂತೂ ಆಗುವುದು. ಅನೇಕರು ಪ್ರಜೆಗಳು ತಯಾರಾಗುವರು. ನೀವು ಮಕ್ಕಳು ಈ ಜ್ಞಾನದ ಸ್ಮರಣೆ ಮಾಡುತ್ತಾ ಇರುತ್ತೀರೆಂದರೆ ಖುಷಿಯಿರುವುದು. ಈ ಪ್ರಪಂಚವೇ ದುಃಖದ ಪ್ರಪಂಚವಾಗಿದೆ, ನಷ್ಟವಾಯಿತು ದಿವಾಳಿಯಾದರು, ಭೂಕಂಪವಾಯಿತೆಂದರೆ ಎಲ್ಲರ ಹಣವೂ ಸಮಾಪ್ತಿಯಾಗುತ್ತದೆ ಆದ್ದರಿಂದಲೇ ಕೆಲವರದು ಮಣ್ಣು ಪಾಲಾಯಿತು, ಕೆಲವರದು ರಾಜ ತಿಂದನು..... ಎಂದು ಹೇಳುತ್ತಾರೆ. ಆದರೆ ಯಾರದು ಸಫಲವಾಗುವುದು? ಯಾರು ಈಶ್ವರೀಯ ಸ್ಥಾಪನಾ ಕಾರ್ಯದಲ್ಲಿ ತೊಡಗಿಸುತ್ತಿದ್ದಾರೆಯೋ ಅವರದೇ ಸಫಲವಾಗುತ್ತದೆ. ಇದು ಈಶ್ವರೀಯ ಬ್ಯಾಂಕ್ ಆಗಿದೆ, ಯಾರೆಷ್ಟು ಇದರಲ್ಲಿ ಸಫಲ ಮಾಡುವರೋ ಅಷ್ಟು ಜಮಾ ಆಗುತ್ತದೆ. ಯಾರೆಷ್ಟೇ ಕಲ್ಪದ ಮೊದಲು ಹಾಕಿರುವರೋ ಅಷ್ಟೇ ಶಿವ ತಂದೆಯ ಭಂಡಾರದಲ್ಲಿ ಹಾಕುತ್ತಾರೆ. ಇದಕ್ಕೆ ಪ್ರತಿಯಾಗಿ ಮತ್ತೆ ಹೊಸ ಪ್ರಪಂಚದಲ್ಲಿ 21 ಜನ್ಮಗಳಿಗಾಗಿ ಪ್ರಾಪ್ತಿಯಾಗುವುದು. ಭಕ್ತಿಮಾರ್ಗದಲ್ಲಿ ಶಿವ ತಂದೆಯ ಹುಂಡಿಯಲ್ಲಿ ಹಾಕುತ್ತಾರೆಂದರೆ ಅಲ್ಪಕಾಲದ ಕ್ಷಣ ಭಂಗುರ ಸುಖವು ಸಿಗುತ್ತದೆ. ಇಲ್ಲಂತೂ ಡೈರೆಕ್ಟ್ ಶಿವ ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ ಆದ್ದರಿಂದ 21 ಜನ್ಮಗಳಿಗಾಗಿ ಸಿಗುವುದು. ಭಕ್ತಿಮಾರ್ಗದಲ್ಲಿ ಅಲ್ಪಕಾಲದ ಸುಖವು ನರಕದಲ್ಲಿ ಸಿಗುತ್ತದೆ. ಈಗ ನಿಮ್ಮ ನಡವಳಿಕೆಯು ಬಹಳ ಚೆನ್ನಾಗಿರಬೇಕು, ಯಾರಿಗೂ ದುಃಖವನ್ನು ಕೊಡಬಾರದು ಇಲ್ಲದಿದ್ದರೆ ಹೆಸರಿಗೆ ಕಳಂಕ ತರುತ್ತೀರಿ. ಎಂದೂ ಕ್ರೋಧ ಮಾಡಿಕೊಳ್ಳಬಾರದು. ದೇಹಾಭಿಮಾನದಲ್ಲಿ ಬರುವುದರಿಂದ ಪಾಪಗಳಾಗುತ್ತವೆ. ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಹೇಳುತ್ತೀರಿ - ಬಾಬಾ, ಇದೆಲ್ಲವೂ ತಮ್ಮದಾಗಿದೆ. ಸತ್ಯ ಹೃದಯದವರ ಮೇಲೆ ಪ್ರಭು ಪ್ರಸನ್ನರಾಗುವರು. ಹೃದಯದಲ್ಲಿ ಯಾವುದೇ ಪ್ರಕಾರದ ಕೊರತೆಯಿರಬಾರದು. ಇಲ್ಲದಿದ್ದರೆ ಇನ್ನೂ ಕೆಳಗಿಳಿಯುತ್ತೀರಿ. ನೀವು ಪೈಗಂಬರನ ಮಕ್ಕಳಾಗಿದ್ದೀರಿ, ಎಲ್ಲರಿಗೆ ಸಂದೇಶವನ್��ು ಕೊಡುತ್ತೀರಿ - ತಂದೆಯು ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಅದರ ಸಂದೇಶವನ್ನು ಎಲ್ಲರಿಗೆ ಕೊಡಬೇಕಾಗಿದೆ. ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ ಅದಕ್ಕಾಗಿ ಯಾರಿಗೆ ರಾಜಯೋಗವನ್ನು ಕಲಿಯುವ ಇಚ್ಛೆಯಿದೆಯೋ ಅವರು ಬಂದು ಕಲಿಯಿರಿ. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ಒಳಗೆ ಯಾವುದೇ ಕೊರತೆಯಿದ್ದರೆ ಅದನ್ನು ತೆಗೆಯಬೇಕಾಗಿದೆ, ಸತ್ಯ ಹೃದಯವನ್ನಿಟ್ಟುಕೊಳ್ಳಬೇಕಾಗಿದೆ. ದೇಹಾಭಿಮಾನದಲ್ಲಿ ಬಂದು ಎಂದೂ ಕ್ರೋಧ ಮಾಡಬಾರದು.
|
7 |
+
2. ಸಮಯ ಸಿಕ್ಕಿದರೆ ಸಾಕು ನೆನಪಿನ ಯಾತ್ರೆಯಲ್ಲಿದ್ದು ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ.
|
BKMurli/BKMurli/page_1014.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ಓಂ ಶಾಂತಿಯ ಅರ್ಥವನ್ನು ತಿಳಿಸಿದ್ದಾರೆ. ಓಂ ಎಂದರೆ ನಾನು ಎಂದು ಹೇಳಲಾಗುತ್ತದೆ. ನಾನಾತ್ಮ, ನನ್ನದು ಶರೀರ ಎರಡು ವಸ್ತುಗಳಿವೆ. ಓಂ ಶಾಂತಿ ಅರ್ಥಾತ್ ಶಾಂತಿಯು ನನ್ನ ಸ್ವಧರ್ಮವಾಗಿದೆ ಎಂದು ಆತ್ಮವು ಹೇಳಿತು. ಆತ್ಮದ ನಿವಾಸ ಸ್ಥಾನವು ಶಾಂತಿಧಾಮ ಅಥವಾ ಪರಮಧಾಮವಾಗಿದೆ, ಅದು ನಿರಾಕಾರಿ ಪ್ರಪಂಚವಾಗಿದೆ. ಇದು ಸಾಕಾರಿ ಮನುಷ್ಯರ ಪ್ರಪಂಚವಾಗಿದೆ. ಮನುಷ್ಯರಲ್ಲಿ ಆತ್ಮವಿದೆ ಮತ್ತು ಈ ಶರೀರವು ಪಂಚ ತತ್ವಗಳಿಂದಾಗಿದೆ. ಆತ್ಮವು ಅವಿನಾಶಿಯಾಗಿದೆ, ಅದು ಎಂದೂ ಸಾಯುವುದಿಲ್ಲ. ಆತ್ಮದ ತಂದೆ ಯಾರು? ಶರೀರದ ತಂದೆಯಂತೂ ಪ್ರತಿಯೊಬ್ಬರಿಗೂ ಬೇರೆ-ಬೇರೆಯಿರುತ್ತಾರೆ. ಬಾಕಿ ಎಲ್ಲಾ ಆತ್ಮರ ತಂದೆಯು ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ. ಅವರ ಮೂಲ ಹೆಸರಾಗಿದೆ - ಶಿವ. ಮೊಟ್ಟ ಮೊದಲು ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ನಂತರ ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂದು ಹೇಳುತ್ತಾರೆ, ಅವರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕಿಂತ ಶ್ರೇಷ್ಠನು ನಿರಾಕಾರ ಪರಮಾತ್ಮನಾಗಿದ್ದಾರೆ ನಂತರ ಸೂಕ್ಷ್ಮ ದೇವತೆಗಳು, ಇಲ್ಲಿ ಎಲ್ಲರೂ ಮನುಷ್ಯರಾಗಿದ್ದಾರೆ ಆದ್ದರಿಂದ ಈಗ ಪ್ರಶ್ನೆ ಬರುತ್ತದೆ - ಆತ್ಮದ ರೂಪವೇನಾಗಿದೆ? ಭಾರತದಲ್ಲಿ ಶಿವನ ಪೂಜೆ ಮಾಡುತ್ತಾರೆ, ಶಿವಕಾಶಿ ಶಿವಕಾಶಿ ಎಂದು ಹೇಳುತ್ತಾರೆ. ಅವರು ಲಿಂಗವನ್ನು ಮಾಡುತ್ತಾರೆ, ಕೆಲವರು ದೊಡ್ಡ ಆಕಾರದಲ್ಲಿ ಮಾಡುತ್ತಾರೆ, ಕೆಲವರು ಚಿಕ್ಕದು. ಆದರೆ ಹೇಗೆ ಆತ್ಮನ ರೂಪವಿದೆಯೋ ಹಾಗೆಯೇ ಪರಮಾತ್ಮನ ರೂಪವಿದೆ, ಪರಮ ಆತ್ಮ ಎಂಬುದನ್ನು ಸೇರಿಸಿ ಪರಮಾತ್ಮ ಎಂದು ಹೇಳುತ್ತಾರೆ. ಪರಮಾತ್ಮನಿಗಾಗಿ ಅಖಂಡ ಜ್ಯೋತಿ ಸ್ವರೂಪನೆಂದು ಕೆಲವರು ಹೇಳುತ್ತಾರೆ. ಬ್ರಹ್ಮ ಮಹಾತತ್ವವೇ ಪರಮಾತ್ಮನೆಂದು ಕೆಲವರು ಹೇಳುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಹೇಗೆ ನೀವಾತ್ಮರು ಬಿಂದುವಾಗಿದ್ದೀರೋ ಹಾಗೆಯೇ ನನ್ನ ರೂಪವೂ ಬಿಂದುವಾಗಿದೆ. ಯಾವಾಗ ರುದ್ರನ ಪೂಜೆ ಮಾಡುತ್ತಾರೆಯೋ ಅದರಲ್ಲಿ ಲಿಂಗವನ್ನೇ ಮಾಡುತ್ತಾರೆ. ಶಿವನ ದೊಡ್ಡ ಲಿಂಗ ಮತ್ತು ಸಾಲಿಗ್ರಾಮಗಳನ್ನು ಚಿಕ್ಕ-ಚಿಕ್ಕ ಗಾತ್ರದಲ್ಲಿ ಮಾಡಿಸುತ್ತಾರೆ. ಮನುಷ್ಯರಿಗೆ ಯಥಾರ್ಥವಾಗಿ ಆತ್ಮದ ಜ್ಞಾನವಾಗಲಿ, ಪರಮಾತ್ಮನ ಜ್ಞಾನವಾಗಲಿ ಇಲ್ಲ ಅಂದಮೇಲೆ ಆ ಮನುಷ್ಯರಿಂದೇನು ಪ್ರಯೋಜನ! ಎಲ್ಲರಲ್ಲಿ ಪಂಚ ವಿಕಾರಗಳು ಪ್ರವೇಶವಾಗಿದೆ, ದೇಹಾಭಿಮಾನದಲ್ಲಿ ಬಂದು ಒಬ್ಬರು ಇನ್ನೊಬ್ಬರನ್ನು ಕುಟುಕುತ್ತಾ ಇರುತ್ತಾರೆ. ಈ ವಿಕಾರವೇ ದುಃಖ ಕೊಡುವಂತಹದ್ದಾಗಿದೆ. ಯಾರಾದರೂ ಶರೀರ ಬಿಟ್ಟರೆ ದುಃಖವಾಯಿತು, ಇದೂ ಸಹ ಮುಳ್ಳು ಚುಚ್ಚಿದಂತೆ. ಯಾವ ಮನುಷ್ಯರಿಗೂ ಆತ್ಮಾನುಭೂತಿಯಾಗಲಿ, ಪರಮಾತ್ಮಾನುಭೂತಿಯಾಗಲಿ ಇಲ್ಲ. ಚಹರೆಯು ಮನುಷ್ಯರದು, ಗುಣಗಳು ವಿಕಾರಿಯಾಗಿದೆ ಆದ್ದರಿಂದ ರಾವಣ ಸಂಪ್ರದಾಯವೆಂದು ಹೇಳಲಾಗುತ್ತದೆ ಏಕೆಂದರೆ ರಾವಣ ರಾಜ್ಯವಾ���ಿದೆ. ನಮಗೆ ರಾಮ ರಾಜ್ಯ ಬೇಕೆಂದು ಹೇಳುತ್ತಾರೆ. ಗೀತೆಯಲ್ಲಿಯೂ ಶಬ್ಧವಿದೆ- ಕೌರವ ಸಂಪ್ರದಾಯ, ಪಾಂಡವ ಸಂಪ್ರದಾಯ ಮತ್ತು ಯಾದವ ಸಂಪ್ರದಾಯ. ಈಗ ನೀವು ಮಕ್ಕಳು ರಾಜಯೋಗವನ್ನು ಕಲಿಯುತ್ತಿದ್ದೀರಿ. ರಾಜಯೋಗವನ್ನು ಶ್ರೀಕೃಷ್ಣನು ಕಲಿಸಲು ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ. ಅವನ ಮಹಿಮೆಯಾಗಿದೆ- ಸರ್ವಗುಣ ಸಂಪನ್ನ..... ಪ್ರತಿಯೊಬ್ಬರ ಕರ್ತವ್ಯ, ಮಹಿಮೆಯು ಬೇರೆ-ಬೇರೆಯಾಗಿದೆ. ರಾಷ್ಟ್ರಪತಿಯ ಕರ್ತವ್ಯವೇ ಬೇರೆ, ಪ್ರಧಾನ ಮಂತ್ರಿಯ ಕರ್ತವ್ಯವೇ ಬೇರೆ. ಈಗ ಇವರು ಶ್ರೇಷ್ಠಾತಿ ಶ್ರೇಷ್ಠ ಬೇಹದ್ದಿನ ತಂದೆಯಾಗಿದ್ದಾರೆ, ಇವರ ಕರ್ತವ್ಯವನ್ನೂ ಸಹ ಮನುಷ್ಯರೇ ತಿಳಿದುಕೊಳ್ಳುವರು. ಪ್ರಾಣಿಗಳು ತಿಳಿದುಕೊಳ್ಳಲು ಸಾಧ್ಯವೇ! ಮನುಷ್ಯರು ಯಾವಾಗ ತಮೋಪ್ರಧಾನ ಆಗಿ ಬಿಡುತ್ತಾರೆಯೋ ಆಗ ಒಬ್ಬರು ಇನ್ನೊಬ್ಬರಿಗೆ ನಿಂದನೆ ಮಾಡುತ್ತಾರೆ. ಇದು ಹಳೆಯ ಕಲಿಯುಗೀ ಪ್ರಪಂಚವಾಗಿದೆ, ಇದಕ್ಕೆ ನರಕವೆಂದು ಹೇಳಲಾಗುತ್ತದೆ, ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಆತ್ಮವು ಈ ಕರ್ಮೇಂದ್ರಿಯಗಳ ಮೂಲಕ ನಮಗೆ ರಾಮರಾಜ್ಯ ಬೇಕು, ಹೇ ಪತಿತ-ಪಾವನ ತಾವು ಬಂದು ಪಾವನ ಮಾಡಿ, ಶಾಂತಿಧಾಮ-ಸುಖಧಾಮದಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತದೆ. ತಂದೆಯು ತಿಳಿಸುತ್ತಾರೆ - ಸುಖ ದುಃಖದ ಆಟವು ಮಾಡಲ್ಪಟ್ಟಿದೆ, ಮಾಯೆಯೊಂದಿಗೆ ಸೋಲುವುದೇ ಸೋಲು, ಮಾಯೆಯೊಂದಿಗೆ ಗೆಲ್ಲುವುದೇ ಗೆಲುವು. ಯಾರಿಗೆ ಪೂಜೆ ಮಾಡುತ್ತಾರೆಯೋ ಅವರ ಕರ್ತವ್ಯವನ್ನೇ ಅರಿತುಕೊಂಡಿಲ್ಲ. ಇದಕ್ಕೆ ಅಂಧಶ್ರದ್ಧೆ ಅಥವಾ ಗೊಂಬೆಗಳ ಪೂಜೆಯೆಂದು ಹೇಳಲಾಗುತ್ತದೆ. ಹೇಗೆ ಮಕ್ಕಳು ಗೊಂಬೆಗಳನ್ನು ಮಾಡಿ ಆಟವಾಡಿದ ನಂತರ ಅದನ್ನು ಒಡೆದು ಹಾಕುತ್ತಾರೆ. ಮನುಷ್ಯರು ಶಿವ ಪರಮಾತ್ಮಾಯ ನಮಃ ಎಂದು ಹಾಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಶಿವನು ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ. ಬ್ರಹ್ಮನಿಗೂ ಸಹ ಪ್ರಜಾಪಿತನೆಂದು ಹೇಳುತ್ತಾರೆ. ಪ್ರಜೆಗಳೆಂದರೆ ಮನುಷ್ಯ ಸೃಷ್ಟಿ. ಶಿವನು ಆತ್ಮರ ತಂದೆಯಾಗಿದ್ದಾರೆ. ಎಲ್ಲರಿಗೂ ಇಬ್ಬರು ತಂದೆಯರಿದ್ದಾರೆ ಆದರೆ ಎಲ್ಲಾ ಆತ್ಮರ ತಂದೆಯು ಶಿವನಾಗಿದ್ದಾರೆ, ಅವರಿಗೆ ದುಃಖಹರ್ತ-ಸುಖಕರ್ತನೆಂದು ಹೇಳಲಾಗುತ್ತದೆ. ಕಲ್ಯಾಣಕಾರಿ ಎಂದೂ ಹೇಳುತ್ತಾರೆ. ದೇವತೆಗಳ ಮುಂದೆ ತಾವು ಸರ್ವಗುಣ ಸಂಪನ್ನರು, ನಾವು ನೀಚರು ಪಾಪಿಗಳಾಗಿದ್ದೇವೆ, ನಮ್ಮಲ್ಲಿ ಯಾವುದೇ ಗುಣವಿಲ್ಲವೆಂದು ಮಹಿಮೆಯನ್ನು ಹಾಡುತ್ತಾರೆ. ಸಂಪೂರ್ಣ ತುಚ್ಛ ಬುದ್ಧಿಯವರಾಗಿದ್ದಾರೆ. ದೇವತೆಗಳು ಸ್ವಚ್ಛ ಬುದ್ಧಿಯವರಾಗಿದ್ದರು, ಇಲ್ಲಿ ಎಲ್ಲರೂ ವಿಕಾರಿ ಪತಿತರಾಗಿದ್ದಾರೆ ಆದ್ದರಿಂದ ಗುರುಗಳನ್ನು ಮಾಡಿಕೊಳ್ಳುತ್ತಾರೆ. ವಾಸ್ತವದಲ್ಲಿ ಯಾರು ಸದ್ಗತಿ ಮಾಡುವರೋ ಅವರೇ ಗುರುವಾಗಿದ್ದಾರೆ. ಗುರುಗಳನ್ನು ವಾನಪ್ರಸ್ಥದಲ್ಲಿ ಮಾಡಿಕೊಳ್ಳಲಾಗುತ್ತದೆ. ನಾವು ಭಗವಂತನ ಬಳಿ ಹೋಗಲು ಬಯಸುತ್ತೇವೆಂದು ಹೇಳುತ್ತಾರೆ, ಸತ್ಯಯುಗದಲ್ಲಿ ವಾನಪ್ರಸ್ಥ ಸ್ಥಿತಿಯೆಂದು ಹೇಳುವುದಿಲ್ಲ. ಅಲ್ಲಿ ಇದು ತಿಳಿದಿರುತ್ತದೆ - ನಾವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲಿ ಮನುಷ್ಯರು ಮುಕ್ತಿಯಲ್ಲಿ ಹೋಗುವುದಕ್ಕಾಗಿ ಗುರುಗಳನ್ನು ಮಾಡಿಕೊಳ್ಳುತ್ತಾರೆ ಆದರೆ ಯಾರೂ ಹೋಗುವುದಿಲ್ಲ. ಇವರೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಇದನ್ನು ತಂದೆಯೇ ತಿಳಿಸುತ್ತಾರೆ. ತಂದೆಯು ಒಬ್ಬರೇ ಆಗಿದ್ದಾರೆ, ಅವರೇ ಭಗವಂತನಾಗಿದ್ದಾರೆ. ಮನುಷ್ಯರಿಗೆ ಭಗವಂತನೆಂದು ಹೇಳಲು ಹೇಗೆ ಸಾಧ್ಯ! ಇಲ್ಲಂತೂ ಎಲ್ಲರಿಗೆ ಭಗವಂತನೆಂದು ಹೇಳುತ್ತಿರುತ್ತಾರೆ, ಸಾಯಿಬಾಬಾ ಭಗವಂತ, ನಾನೂ ಭಗವಂತ, ನೀವೂ ಭಗವಂತ, ಕಲ್ಲು-ಮುಳ್ಳು ಎಲ್ಲದರಲ್ಲಿ ಭಗವಂತನಿದ್ದಾರೆ ಎಂದು ಹೇಳಿಬಿಡುತ್ತಾರೆ. ನೀವೂ ಸಹ ಮೊದಲು ಕಲ್ಲು ಬುದ್ಧಿಯವರು ನರಕವಾಸಿಗಳಾಗಿದ್ದೀರಿ, ಈಗ ಸಂಗಮಯುಗಿಗಳಾಗಿದ್ದೀರಿ. ಮಹಿಮೆಯೆಲ್ಲವೂ ಸಂಗಮಯುಗದ್ದಾಗಿದೆ, ಪುರುಷೋತ್ತಮ ಮಾಸವನ್ನು ಆಚರಿಸುತ್ತಾರಲ್ಲವೆ ಆದರೆ ಅದರಲ್ಲಿ ಯಾರೂ ಉತ್ತಮ ಪುರುಷರಾಗುವುದಿಲ್ಲ. ನೀವೀಗ ಮನುಷ್ಯರಿಂದ ದೇವತೆಗಳು ಎಷ್ಟೊಂದು ಉತ್ತಮ ಪುರುಷರಾಗಿದ್ದೀರಿ! ತಂದೆಯು ತಿಳಿಸುತ್ತಾರೆ - ನಾನು ಕಲ್ಪದ ಸಂಗಮಯುಗದಲ್ಲಿ ಭಾರತವನ್ನು ಪುರುಷೋತ್ತಮವನ್ನಾಗಿ ಮಾಡಲು ಬರುತ್ತೇನೆ. ಇದನ್ನೂ ಸಹ ಮಕ್ಕಳಿಗೆ ತಿಳಿಸಿದ್ದಾರೆ - ಹೇಗೆ ಆತ್ಮವು ಬಿಂದುವಾಗಿದೆಯೋ ಹಾಗೆಯೇ ಪರಮಪಿತ ಪರಮಾತ್ಮನೂ ಬಿಂದುವಾಗಿದ್ದಾರೆ. ಭೃಕುಟಿಯ ನಡುವೆ ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ, ಆತ್ಮವು ಸೂಕ್ಷ್ಮವಾಗಿದೆ, ಅದನ್ನು ಬುದ್ಧಿಯಿಂದ ಅರಿತುಕೊಳ್ಳಲಾಗುತ್ತದೆ. ಈ ಕಣ್ಣುಗಳಿಂದ ನೋಡಲು ಸಾಧ್ಯವಾಗುವುದಿಲ್ಲ. ದಿವ್ಯ ದೃಷ್ಟಿಯಿಂದ ನೋಡಬಹುದಾಗಿದೆ. ಉದಾಹರಣೆಗೆ: ಯಾರಾದರೂ ತೀವ್ರ ಭಕ್ತಿ ಮಾಡುತ್ತಾರೆಂದರೆ ಅದರಿಂದ ಸಾಕ್ಷಾತ್ಕಾರವಾಗುತ್ತದೆ ಆದರೆ ಅದರಿಂದ ಏನಾದರೂ ಸಿಕ್ಕಿತೇ? ಏನೂ ಇಲ್ಲ. ಸಾಕ್ಷಾತ್ಕಾರದಿಂದ ಸದ್ಗತಿಯಂತೂ ಆಗಲು ಸಾಧ್ಯವಿಲ್ಲ, ಸದ್ಗತಿದಾತ, ದುಃಖಹರ್ತ-ಸುಖಕರ್ತನು ಒಬ್ಬ ತಂದೆಯೇ ಆಗಿದ್ದಾರೆ. ಈ ಪ್ರಪಂಚವೇ ವಿಕಾರಿಯಾಗಿದೆ. ಸಾಕ್ಷಾತ್ಕಾರದಿಂದ ಯಾರೂ ಸ್ವರ್ಗಕ್ಕೆ ಹೋಗುವುದಿಲ್ಲ. ಶಿವನ ಭಕ್ತಿ ಮಾಡಿದರು, ಸಾಕ್ಷಾತ್ಕಾರವಾಯಿತೆಂದರೆ ಏನಾಯಿತು? ತಂದೆಯ ವಿನಃ ಮತ್ತ್ಯಾರೂ ಮರಳಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಮಾಡಿ-ಮಾಡಲ್ಪಟ್ಟಿರುವುದೇ ಆಗುತ್ತಿದೆ ಎಂದು ಹೇಳುತ್ತಾರೆ ಆದರೆ ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಆತ್ಮದ ಜ್ಞಾನವೂ ಇಲ್ಲ. ಪ್ರತಿಯೊಂದು ಆತ್ಮವು 84 ಲಕ್ಷ ಜನ್ಮಗಳನ್ನು ತೆಗೆದುಕೊಳ್ಳುತ್ತದೆ, ಅದರಲ್ಲಿ ಒಂದು ಮನುಷ್ಯನ ಜನ್ಮವು ದುರ್ಲಭವಾಗಿದೆ ಎಂದು ಹೇಳುತ್ತಾರೆ ಆದರೆ ಈ ರೀತಿಯ ಯಾವುದೇ ಮಾತಿಲ್ಲ, ಮನುಷ್ಯರದಂತೂ ದೊಡ್ಡ ಪಾತ್ರವೇ ನಡೆಯುತ್ತದೆ. ಮನುಷ್ಯರೇ ಸ್ವರ್ಗವಾಸಿಗಳು, ಮನುಷ್ಯರೇ ನರಕವಾಸಿಗಳಾಗುತ್ತಾರೆ. ಭಾರತವೇ ಎಲ್ಲದಕ್ಕಿಂತ ಶ್ರೇಷ್ಠ ಖಂಡವಾಗಿತ್ತು. ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅಲ್ಲಂತೂ ಬಹಳ ಕೆಲವರೇ ಮನುಷ್ಯರಿರುತ್ತಾರೆ. ಒಂದು ಮತ, ಒಂದು ಧರ್ಮವಿತ್ತು, ಭಾರತವು ಇಡೀ ವಿಶ್ವದ ಮಾಲೀಕನಾಗಿತ್ತು, ಮತ್ತ್ಯಾವುದೇ ಧರ್ಮವಿರಲಿಲ್ಲ. ಇದು ವಿದ್ಯೆಯಾಗಿದೆ. ಇದನ್ನು ಯಾರು ಓದಿಸುತ್ತಾರೆ? ಭಗವಾನುವಾಚ - ನಾನು ನಿಮ್ಮನ್ನು ಈ ರಾಜಯೋಗದ ಮೂಲಕ ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಭಗವಂತನು ಯಾರಿಗೆ ಗೀತೆಯನ್ನು ತಿಳಿಸಿದರು, ಗೀತೆಯಿಂದ ನಂತರ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ಗೀತೆಯ ನಂತರ ಮಹಾಭಾರತವಾಗಿದೆ, ಗೀತೆಯಲ್ಲಿ ರಾಜಯೋಗವಿದೆ. ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಮನ್ಮನಾಭವದ ಅರ್ಥವೇನೆಂದರೆ ತಂದೆಯು ಹೇಳುತ್ತಾರೆ, ಯಾರು ಸೂರ್ಯವಂಶಿ ಪೂಜ್ಯರಾಗಿದ್ದಿರೋ ಅವರೇ ನಂತರ ಶೂದ್ರವಂಶಿ ಪೂಜಾರಿಗಳಾಗಿ ಬಿಟ್ಟಿದ್ದೀರಿ. ವಿರಾಟ ರೂಪದ ಅರ್ಥವನ್ನೂ ಸಹ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ವಿರಾಟ ರೂಪದಲ್ಲಿ ಬ್ರಾಹ್ಮಣರನ್ನು ತೋರಿಸುವುದೇ ಮರೆ ಮಾಡಿ ಬಿಟ್ಟಿದ್ದಾರೆ. ಬ್ರಾಹ್ಮಣರಂತೂ ಬಹಳ ಮಂದಿ ಎಂದು ಗಾಯನವಾಗುತ್ತದೆ. ಪ್ರಜಾಪಿತ ಬ್ರಹ್ಮನ ಸಂತಾನರಲ್ಲವೆ. ತಂದೆಯು ಬ್ರಹ್ಮಾರವರ ಮೂಲಕವೇ ರಚನೆಯನ್ನು ರಚಿಸುತ್ತಾರೆ, ದತ್ತು ಮಾಡಿಕೊಳ್ಳುತ್ತಾರೆ. ನೀವೀಗ ಶ್ರೇಷ್ಠ ಬ್ರಾಹ್ಮಣರಾಗಿದ್ದೀರಿ. ನಿಮ್ಮನ್ನು ರಚಿಸುವವರು ಸರ್ವಶ್ರೇಷ್ಠ ಭಗವಂತನಾಗಿದ್ದಾರೆ, ಅವರೇ ಎಲ್ಲರ ತಂದೆಯಾಗಿದ್ದಾರೆ. ಬ್ರಹ್ಮನಿಗೂ ಅವರು ತಂದೆಯಾಗಿದ್ದಾರೆ, ಪೂರ್ಣ ರಚನೆಗೆ ತಂದೆಯಾಗಿದ್ದಾರೆ ಅಂದಮೇಲೆ ರಚನೆಯಾದ ನೀವು ಪರಸ್ಪರ ಸಹೋದರರಾದಿರಿ. ಆಸ್ತಿಯು ತಂದೆಯಿಂದ ಸಿಗುತ್ತದೆಯೇ ಹೊರತು ಸಹೋದರನಿಂದಲ್ಲ. ಶಿವ ಜಯಂತಿಯನ್ನೂ ಆಚರಿಸಲಾಗುತ್ತದೆ. ಇಂದಿಗೆ 5000 ವರ್ಷಗಳ ಮೊದಲು ಬ್ರಹ್ಮನ ತನುವಿನಲ್ಲಿ ಶಿವ ತಂದೆಯು ಬಂದಿದ್ದರು, ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡಿದ್ದರು, ಬ್ರಾಹ್ಮಣರೇ ರಾಜಯೋಗವನ್ನು ಕಲಿತಿದ್ದಿರಿ, ಅದನ್ನು ಮತ್ತೆ ನೀವೀಗ ಕಲಿಯುತ್ತಿದ್ದೀರಿ. ಭಾರತವು ಮೊದಲು ಶಿವಾಲಯವಾಗಿತ್ತು. ಶಿವ ತಂದೆಯು ಶಿವಾಲಯ(ಸ್ವರ್ಗ)ವನ್ನು ರಚಿಸಿದರು ಮತ್ತು ಭಾರತವಾಸಿಗಳೇ ಸ್ವರ್ಗದಲ್ಲಿ ರಾಜ್ಯಭಾರ ಮಾಡುತ್ತಿದ್ದರು, ಈಗ ಎಲ್ಲಿ ರಾಜ್ಯ ಮಾಡುತ್ತಾರೆ? ಈಗ ಪತಿತ ಪ್ರಪಂಚ ನರಕವಾಗಿದೆ, ನಾವು ನರಕವಾಸಿಗಳೆಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಇಂತಹವರು ಶರೀರ ಬಿಟ್ಟರು, ಸ್ವರ್ಗವಾಸಿಯಾದರು ಎಂದು ಹೇಳುತ್ತಾರೆ ಅಂದಮೇಲೆ ತಮ್ಮನ್ನು ನರಕವಾಸಿಯೆಂದು ತಿಳಿದುಕೊಳ್ಳಬೇಕಲ್ಲವೆ.
|
2 |
+
ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಿದ್ದೆನು, ಇಂದಿಗೆ 5000 ವರ್ಷಗಳಾಯಿತು. ಮೊದಲು ನೀವು ಬಹಳ ಸಾಹುಕಾರರಾಗಿದ್ದಿರಿ, ಇಡೀ ವಿಶ್ವದ ಮಾಲೀಕರಾಗಿದ್ದಿರಿ ಅಂದಮೇಲೆ ಅವಶ್ಯವಾಗಿ ಭಗವಂತನೇ ಈ ರೀತಿ ಮಾಡಿರುವರು. ಭಗವಾನುವಾಚ - ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ ಅಂದಮೇಲೆ ಅವಶ್ಯವಾಗಿ ರಾಜರೂ ಆಗುತ್ತಾರೆ, ಪ್ರಜೆಗಳೂ ಆಗುತ್ತಾರೆ. ಅರ್ಧಕಲ್ಪ ದಿನ, ಸ್ವರ್ಗವಾಗಿದೆ. ಅರ್ಧಕಲ್ಪ ರಾತ್ರಿ ನರಕವಾಗಿದೆ. ಈಗ ತಂದೆಯು ಒಂದು ಬಾರಿ ಬರುವರಲ್ಲವೆ, ತಂದೆಯು ಎಲ್ಲರ ಮಾರ್ಗದರ್ಶಕನಾಗಿದ್ದಾರೆ, ಅವರು ಎಲ್ಲರನ್ನೂ ಮರಳಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಮತ್ತೆ ಮೃತ್ಯುಲೋಕದಲ್ಲಿ ಬರುವುದಿಲ್ಲ. ಒಬ್ಬ ತಂದೆಯೇ ಅಂಧರಿಗೆ ಊರುಗೋಲಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ರಾವಣ ರಾಜ್ಯದ ವಿನಾಶವಾಗಲಿದೆ. ಇದು ಅದೇ ಮಹಾಭಾರತ ಯುದ್ಧವಾಗಿದೆ, ಮನುಷ್ಯರಂತೂ ಏನನ್ನೂ ತಿಳಿದುಕೊಳ್ಳುವುದಿಲ್ಲ. ಭಾರತವಾಸಿಗಳು ತಾವೇ ಪೂಜ್ಯರು, ತಾವೇ ಪೂಜಾರಿಗಳಾಗಿದ್ದಾರೆ, ಏಣಿ ಇಳಿಯುತ್ತಾ-ಇಳಿಯುತ್ತಾ ವಾಮಮಾರ್ಗದಲ್ಲಿ ಹೋಗುವುದರಿಂದ ಪೂಜಾರಿಗಳಾಗಿ ಬಿಡುತ್ತಾರೆ. ಮೊದಲು ನಾವೆಲ್ಲರೂ ಪೂಜ್ಯರು, ಸೂರ್ಯವಂಶಿಯರಾಗಿದ್ದೆವು ನಂತರ ಎರಡು ಕಲೆಗಳು ಕಡಿಮೆಯಾಗಿ ಚಂದ್ರವಂಶಿಯರಾದೆವು. ಇನ್ನೂ ಕೆಳಗಿಳಿಯುತ್ತಾ ಪೂಜಾರಿಗಳಾಗಿದ್ದೇವೆ. ಮೊಟ್ಟ ಮೊದಲು ಶಿವನ ಪೂಜೆಯಾಗುತ್ತದೆ, ಅದಕ್ಕೆ ಅವ್ಯಭಿಚಾರಿ ಪೂಜೆಯೆಂದು ಹೇಳಲಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಒಬ್ಬ ನಿರಾಕಾರ ತಂದೆಯನ್ನು ನೆನಪು ಮಾಡಿರಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಕರೆಯುತ್ತಾರೆ. ನನ್ನ ವಿನಃ ಮತ್ತ್ಯಾರಾದರೂ ಹೇಗೆ ಪಾವನ ಮಾಡುವರು? ಏಣಿಚಿತ್ರದಲ್ಲಿ ತೋರಿಸಿದ್ದಾರೆ - ಕಲಿಯುಗದ ಅಂತ್ಯದಲ್ಲಿ ಏನಾಗುತ್ತದೆ ಎಂದು. ಪಂಚ ತತ್ವಗಳಿಗೂ ಭಕ್ತಿ ಮಾಡುತ್ತಾರೆ. ಸಾಧು-ಸಂತರು ಬ್ರಹ್ಮತತ್ವದ ಸಾಧನೆ ಮಾಡುತ್ತಾರೆ. ಸ್ವರ್ಗದಲ್ಲಿ ಇದ್ಯಾವುದೂ ಇರುವುದಿಲ್ಲ. ಇದೆಲ್ಲಾ ನಾಟಕವು ಭಾರತದ ಪ್ರತಿ ಮಾಡಲ್ಪಟ್ಟಿದೆ, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಇಲ್ಲಿ ಭಕ್ತಿಮಾರ್ಗದ ಯಾವುದೇ ದಂತಕಥೆಗಳಿಲ್ಲ. ಇದಂತೂ ವಿದ್ಯೆಯಾಗಿದೆ, ಇಲ್ಲಿ ಒಬ್ಬ ತಂದೆಯನ್ನು ನೆನಪು ಮಾಡಿರಿ ಎಂದು ಶಿಕ್ಷಣ ಸಿಗುತ್ತದೆ. ಬ್ರಹ್ಮಾ, ವಿಷ್ಣು, ಶಂಕರನನ್ನೂ ನೆನಪು ಮಾಡಬಾರದು, ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದಾಗಿದೆ. ನಮಗೆ ಒಬ್ಬ ಶಿವ ತಂದೆಯ ವಿನಃ ಮತ್ತ್ಯಾರೂ ಇಲ್ಲವೆಂದು ನೀವು ಮಕ್ಕಳೂ ಸಹ ಹೇಳುತ್ತೀರಿ. ತಂದೆಯೂ ಹೇಳುತ್ತಾರೆ- ಮಕ್ಕಳೇ, ಗೃಹಸ್ಥ ವ್ಯವಹಾರದಲ್ಲಿದ್ದು ಕಮಲಪುಷ್ಫ ಸಮಾನ ಪವಿತ್ರರಾಗಿರಿ. ಪತಿತ-ಪಾವನನೆಂದು ನನ್ನೊಬ್ಬನಿಗೇ ಹೇಳುತ್ತಾರೆ. ಅಂದಮೇಲೆ ಮನುಷ್ಯರು ಗುರುಗಳಾಗಲು ಹೇಗೆ ಸಾಧ್ಯ! ಯಾವಾಗ ಸ್ವಯಂ ತಾನೇ ಮರಳಿ ಹೋಗಲು ಸಾಧ್ಯವಿಲ್ಲ ಅಂದಮೇಲೆ ಅನ್ಯರನ್ನು ಹೇಗೆ ಕರೆದುಕೊಂಡು ಹೋಗುವರು? ಮತ್ತು ಜ್ಯೋತಿಯಲ್ಲಿ ಜ್ಯೋತಿ ���ಮಾವೇಶವಾಗುವುದೂ ಇಲ್ಲ. ಪಾತ್ರವನ್ನಭಿನಯಿಸುವವರೆಲ್ಲರೂ ಇಲ್ಲಿ ಪುನರ್ಜನ್ಮದಲ್ಲಿದ್ದಾರೆ, ನೀವೆಲ್ಲರೂ ಪ್ರಿಯತಮೆಯರಾಗಿದ್ದೀರಿ. ಒಬ್ಬ ಪ್ರಿಯತಮನನ್ನು ನೆನಪು ಮಾಡುತ್ತೀರಿ. ಅವರು ದಯಾಹೃದಯಿ, ಮುಕ್ತಿದಾತನಾಗಿದ್ದಾರೆ. ಇಲ್ಲಿ ದುಃಖವಿದೆ, ಆದ್ದರಿಂದಲೇ ಅವರನ್ನು ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ಯಾರೂ ನೆನಪು ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನನ್ನ ಪಾತ್ರವೇ ಸಂಗಮಯುಗದಲ್ಲಿದೆ, ಬಾಕಿ ಯುಗೇ ಯುಗೇ ಎಂಬ ಶಬ್ಧವನ್ನು ತಪ್ಪಾಗಿ ಬರೆದು ಬಿಟ್ಟಿದ್ದಾರೆ. ಈ ಕಲ್ಯಾಣಕಾರಿ ಪುರುಷೋತ್ತಮ ಯುಗವು ಯಾರಿಗೂ ಗೊತ್ತಿಲ್ಲ. ಮೊದಲ ಮುಖ್ಯ ಮಾತಾಗಿದೆ - ತಂದೆಯನ್ನು ಅರಿತುಕೊಳ್ಳುವುದು, ಇಲ್ಲದಿದ್ದರೆ ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವಿರಿ! ರಚನೆಯಿಂದ ಆಸ್ತಿಯು ಸಿಗಲು ಸಾಧ್ಯವಿಲ್ಲ. ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆ. ಇಷ್ಟೊಂದು ಮಂದಿ ಪ್ರಜೆಗಳು ಹೇಗೆ ರಚಿಸಲ್ಪಡುವರು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಪ್ರಜಾಪಿತನಿದ್ದಾರಲ್ಲವೆ. ಸರಸ್ವತಿಯು ತಾಯಿಯೋ ಅಥವಾ ಮಗಳಾಗಿದ್ದಾರೆಯೋ? ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ನಿಮಗೆ ತಾಯಿಯಂತು ಗುಪ್ತವಾಗಿದ್ದಾರೆ, ಶಿವ ತಂದೆಯು ಬ್ರಹ್ಮಾರವರ ಮೂಲಕ ನಿಮ್ಮನ್ನು ದತ್ತು ಮಾಡಿಕೊಳ್ಳುತ್ತಾರೆ. ನೀವೀಗ ರಾಜ ಋಷಿಗಳಾಗಿದ್ದೀರಿ. ಋಷಿ ಶಬ್ಧವು ಪವಿತ್ರತೆಯ ಸಾಂಕೇತಿಕವಾಗಿದೆ. ಸನ್ಯಾಸಿಗಳು ಹಠಯೋಗಿಗಳಾಗಿದ್ದಾರೆ, ಅವರು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಯಾವ ಗೀತೆಯನ್ನು ತಿಳಿಸುತ್ತಾರೆಯೋ ಅದೂ ಸಹ ಭಕ್ತಿಮಾರ್ಗದ್ದಾಗಿದೆ, ಎಷ್ಟೊಂದು ಗೀತೆಗಳನ್ನು ರಚಿಸಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಸಂಸ್ಕೃತದಲ್ಲಂತೂ ಓದಿಸುವುದಿಲ್ಲ, ಶ್ಲೋಕ ಇತ್ಯಾದಿಗಳ ಮಾತೂ ಇಲ್ಲ. ನಾನು ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ರಾಜಯೋಗದಿಂದ ನೀವು ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ಒಳ್ಳೆಯದು.
|
3 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
4 |
+
ಧಾರಣೆಗಾಗಿ ಮುಖ್ಯಸಾರ:
|
5 |
+
1. ಎಂದೂ ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ನನ್ನವರು ಒಬ್ಬ ಶಿವ ತಂದೆಯ ವಿನಃ ಮತ್ತ್ಯಾರೂ ಇಲ್ಲ, ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ.
|
6 |
+
2. ತಂದೆಯ ಸಮಾನ ಆತ್ಮಿಕ ಮಾರ್ಗದರ್ಶಕರಾಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸಬೇಕಾಗಿದೆ. ಅಂಧರಿಗೆ ಊರುಗೋಲಾಗಬೇಕಾಗಿದೆ.
|
BKMurli/BKMurli/page_1015.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಈ ಸಮಯದ ಮನುಷ್ಯರ ಜೀವನಕ್ಕೆ ಅಮೂಲ್ಯ ಜೀವನವೆಂದು ಹೇಳಲಾಗುತ್ತದೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ ಮತ್ತು ತಂದೆಯೂ ತಿಳಿಸುತ್ತಾರೆ - ಇದು ನಿಮ್ಮ ಅಂತಿಮ ಮನುಷ್ಯ ಜನ್ಮವಾಗಿದೆ. ಇದು ಬಹಳ ಅಮೂಲ್ಯವಾಗಿದೆ, ಇದಕ್ಕೆ ಯಾರೂ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಹಾಗೆಯೇ ಈ ಸಮಯವೂ ಸಹ ಬಹಳ ಅಮೂಲ್ಯವಾಗಿದೆ, ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈಗ ಕವಡೆಯಿಂದ ವಜ್ರ ಸಮಾನರು, ಭಿಕಾರಿಗಳಿಂದ ರಾಜಕುಮಾರರು, ಬಡವರಿಂದ 100% ಸಾಹುಕಾರಾಗುತ್ತಿದ್ದೀರಿ. ಈ ನಿಮ್ಮ ಮನುಷ್ಯ ಶರೀರವು ಬಹಳ ಅಮೂಲ್ಯವಾಗಿದೆ ಏಕೆಂದರೆ ತಂದೆಯ ಮಕ್ಕಳಾಗಿದ್ದೀರಿ. ಅನ್ಯಮನುಷ್ಯರ ಜೀವನವು ಅಮೂಲ್ಯವಲ್ಲ, ನೀವು ಮಕ್ಕಳು ಈ ಸಮಯದಲ್ಲಿ ತಮ್ಮ ಶ್ವಾಸವನ್ನೂ ವ್ಯರ್ಥವಾಗಿ ಕಳೆಯಬಾರದು. ಅದನ್ನು ಹೇಗೆ ಸಫಲ ಮಾಡಿಕೊಳ್ಳಬೇಕು ಎಂಬುದನ್ನು ತಂದೆಯು ತಿಳಿಸುತ್ತಾರೆ. ಶ್ವಾಸ-ಶ್ವಾಸದಲ್ಲಿ ತಂದೆಯನ್ನು ನೆನಪು ಮಾಡಿರಿ, ಮನುಷ್ಯರು ಭಕ್ತಿಮಾರ್ಗದಲ್ಲಿ ಅನೇಕ ಪ್ರಕಾರದ ಸ್ಮರಣೆ ಮಾಡುತ್ತಾರೆ. ಅದು ಅನೇಕರ ವ್ಯಭಿಚಾರಿ ನೆನಪಾಗಿದೆ, ನೀವು ಮಕ್ಕಳೇ ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ ಏಕೆಂದರೆ ತಿಳಿದುಕೊಂಡಿದ್ದೀರಿ, ನಮ್ಮ ಶ್ವಾಸವೂ ವ್ಯರ್ಥವಾಗಿ ಹೋಗದಿರಲಿ. ಶ್ವಾಸ-ಶ್ವಾಸವು ಪ್ರಯತ್ನ ಮಾಡಿ ತಂದೆಯನ್ನು ನೆನಪು ಮಾಡಬೇಕಾಗಿದೆ ಎಂಬ ಆದೇಶ ಸಿಗುತ್ತದೆ, ಇದರಲ್ಲಿ ಜಪ ಮಾಡುವಂತಿಲ್ಲ. ಶಬ್ಧದಿಂದ ದೂರವಿರುವುದೇ ನಮ್ಮ ಸ್ವಧರ್ಮವಾಗಿದೆ, ಈ ಶರೀರದ ಮೂಲಕ ನಾವು ಪಾತ್ರವನ್ನಭಿನಯಿಸುತ್ತೇವೆ. ಆತ್ಮವು ಮೂಲತಃ ಶಾಂತಿಧಾಮ ನಿವಾಸಿಯಾಗಿದೆ. ಇದನ್ನು ನಮ್ಮ ವಿನಃ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ - ನಾವು ಮೂಲತಃ ಶಾಂತಿಧಾಮದ ನಿವಾಸಿಗಳು ಎಂದು. ನೀವು ಎಲ್ಲಿನ ನಿವಾಸಿಗಳಾಗಿದ್ದೀರಿ ಎಂದು ಯಾರಾದರೂ ಕೇಳಿದರೆ ನೀವು ಹೇಳುತ್ತೀರಿ - ನಾವಾತ್ಮರು ಶಾಂತಿಧಾಮದ ವಾಸಿಗಳಾಗಿದ್ದೇವೆ ಬಾಕಿ ಇಲ್ಲಿನ ವಿಳಾಸವನ್ನು ಕೇಳಿದಾಗ ನಾವು ಇಂತಹಕಡೆ ಇರುವವರೆಂದು ಹೇಳುತ್ತೀರಿ. ಶಾಂತಿಧಾಮದಿಂದ ಇಲ್ಲಿ ಬಂದು ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸಲೇಬೇಕಾಗಿದೆ, ಈಗ ಇದು ಈ ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ಇದರಲ್ಲಿ ಒಂದು ಶ್ವಾಸವನ್ನೂ ವ್ಯರ್ಥವಾಗಿ ಕಳೆಯಬಾರದು, ಆ ಮನುಷ್ಯರಂತು ಬಹಳ ವ್ರತಗಳನ್ನಿಟ್ಟುಕೊಳ್ಳುತ್ತಾರೆ. ಅವರಿಗೆ ಹೇಳಬೇಕಾಗಿದೆ - ನೀವು ಏಕೆ ಸಮಯವನ್ನು ವ್ಯರ್ಥ ಮಾಡುತ್ತೀರಿ? ಇದಕ್ಕಿಂತಲೂ ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ನೆನಪು ಮಾಡಿರಿ, ಉಪವಾಸವಿರುವುದೂ ನೀವು ಜೀವಘಾತ ಮಾಡಿದಂತೆ. ಆತ್ಮಘಾತವೆಂದು ಹೇಳುವುದಿಲ್ಲ ಏಕೆಂದರೆ ಆತ್ಮದ ಘಾತವೆಂದೂ ಆಗುವುದಿಲ್ಲ, ಜೀವಘಾತಿ ಮಹಾಪಾಪಿ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ತಮ್ಮ ಶರೀರಕ್ಕೆ ತೊಂದರೆ ಕೊಡುವುದೂ ಸಹ ಮಹಾಪಾಪವಾಗಿದೆ. ನೀವು ಇದನ್ನು ಹೇಳಬಲ್ಲಿರಿ, ಈ ಸಮಯದಲ್ಲಿ ನೀವು ಈ ಪುರುಷಾರ್ಥದಿಂದ ಮಹಾ��್ ಪುಣ್ಯಾತ್ಮರಾಗಬಹುದು ಏಕೆಂದರೆ ಇಲ್ಲಿ ತಂದೆಯು ಬಂದಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಇವರು ಬಾಪ್ದಾದಾ ಆಗಿದ್ದಾರಲ್ಲವೆ. ಶಿವ ತಂದೆ, ಬ್ರಹ್ಮಾದಾದಾ. ಪ್ರಜಾಪಿತ ಬ್ರಹ್ಮನು ಪ್ರಸಿದ್ಧವಾಗಿದ್ದಾರೆ ಅಂದಮೇಲೆ ಇಂತಹ ಅಮೂಲ್ಯ ಶರೀರದ ಘಾತವನ್ನೇಕೆ ಮಾಡಿಕೊಳ್ಳುತ್ತೀರಿ, ಇದಕ್ಕಿಂತಲೂ ಮನ್ಮನಾಭವ ಆಗಿ ತಂದೆಯನ್ನು ನೆನಪು ಮಾಡಿರಿ. ಇದರಿಂದ ಜೀವನ್ಮುಕ್ತಿ ಸಿಗುವುದೆಂದು ಹೇಳಬಹುದು ಅಥವಾ ಯಾರ ಮೂಲಕವಾದರೂ ಸಂದೇಶವನ್ನು ಕಳುಹಿಸಿರಿ. ಈ ಸಮಯದಲ್ಲಿ ಈ ಪ್ರಪಂಚವು ಬದಲಾಗುತ್ತಿದೆ, ಈ ಪುರುಷಾರ್ಥದಿಂದ ನಿಮಗೆ ಜೀವನ್ಮುಕ್ತಿ ಪ್ರಾಪ್ತಿಯಾಗುತ್ತದೆ ಎಂದು ದೆಹಲಿಯ ಮಕ್ಕಳೂ ಸಹ ಕಳುಹಿಸಬಹುದು. ನೋಡುತ್ತೀರಿ, ಸನ್ಮುಖದಲ್ಲಿ ಮಹಾಭಾರತ ಯುದ್ಧವೂ ಇದೆ ಆದ್ದರಿಂದ ಮಕ್ಕಳು ಒಂದು ಶ್ವಾಸವನ್ನೂ ಸಹ ವ್ಯರ್ಥ ಮಾಡಬಾರದು. ಇಡೀ ಕಲ್ಪ ಏಣಿಯನ್ನಿಳಿಯುತ್ತಾ-ಇಳಿಯುತ್ತಾ ತಮೋಪ್ರಧಾನರಾಗಿ ಬಿಟ್ಟಿದ್ದೀರಿ, ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ, ಇದರಲ್ಲಿ ಪರಿಶ್ರಮವಾಗುತ್ತದೆ. ಇದು ಚಿಕ್ಕಮ್ಮನ ಮನೆಯಂತಲ್ಲ. ಜನಕನಿಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಹೇಗೆ ಸಿಕ್ಕಿತು? ಅದನ್ನೂ ನೀವು ತಿಳಿದುಕೊಂಡಿದ್ದೀರಿ ಮತ್ತು ಬರೆಯಬಲ್ಲಿರಿ - ಒಂದು ಸೆಕೆಂಡಿನಲ್ಲಿ ಕವಡೆಯೂ ಖರ್ಚಿಲ್ಲದೆ ಜೀವನ್ಮುಕ್ತಿ ಪ್ರಾಪ್ತಿಯಾಗುತ್ತದೆ ಎಂದು.
|
2 |
+
ಇದು ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ಅಮರಲೋಕದಲ್ಲಿ ಜೀವನ್ಮುಕ್ತಿಯಿರುತ್ತದೆ. ಮೃತ್ಯುಲೋಕದಲ್ಲಿ ಜೀವನ ಬಂಧನವಾಗಿದೆ. ಇದು ಭಾಗವತದಲ್ಲಿಯೂ ಇದೆ. ಜನಕನಿಗೆ ಜ್ಞಾನ ಕೊಡುವವರು ಯಾರೂ ಸಿಗಲಿಲ್ಲ ಎಂದು ಒಂದು ಕಥೆಯನ್ನು ಬರೆದು ಬಿಟ್ಟಿದ್ದಾರೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಜ್ಞಾನವನ್ನು ಕೊಡುತ್ತಾರೆ, ಇದನ್ನೇ ಬ್ರಹ್ಮಜ್ಞಾನವೆಂದು ಹೇಳಲಾಗುತ್ತದೆ. ಬ್ರಹ್ಮನಿಗೂ ಸಹ ಅವಶ್ಯವಾಗಿ ಯಾರಾದರೂ ಕೊಟ್ಟಿರಬೇಕಲ್ಲವೆ. ಜ್ಞಾನಸಾಗರನು ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಬ್ರಹ್ಮಾರವರ ಮೂಲಕ ಬಂದು ಜ್ಞಾನವನ್ನು ಕೊಡುತ್ತಾರೆ. ತ್ರಿಮೂರ್ತಿ ಚಿತ್ರದಲ್ಲಿ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಯಾರಾದರೂ ಒಳಗೆ ಬರುತ್ತಾರೆಂದರೆ ಅವರನ್ನು ಕೇಳಿರಿ, ಬೋರ್ಡ್ನ್ನು ನೋಡಿದಿರಾ? ಅದರ ಮೇಲೆ ಏನು ಬರೆಯಲ್ಪಟ್ಟಿದೆ? ಬ್ರಹ್ಮಾಕುಮಾರ-ಕುಮಾರಿಯರು ಪ್ರಜಾಪಿತ ಬ್ರಹ್ಮನ ಮಕ್ಕಳಾದರು. ಪ್ರಜಾಪಿತನಿಗೆ ಕೇವಲ ಕುಮಾರಿಯರೇ ಇರುತ್ತಾರೆಯೇ? ಅವಶ್ಯವಾಗಿ ಕುಮಾರರೂ ಇದ್ದಾರೆ ಅಂದಮೇಲೆ ನಮ್ಮದು ಇದು ಪರಿವಾರವಾಯಿತು. ಬ್ರಹ್ಮನು ತಂದೆಯಾಗಿದ್ದಾರೆ, ಅಂದಾಗ ಬ್ರಹ್ಮನು ಯಾರ ಮಗನಾಗಿದ್ದಾರೆ? ಶಿವ ತಂದೆಯ ಮಗನಾಗಿದ್ದಾರೆ. ತಂದೆಯು ಇವರ ಮೂಲಕ ಸ್ಥಾಪನೆ ಮಾಡುತ್ತಿದ್ದಾರೆ. ಇದು ಪರಿವಾರವೂ ಆಗಿದೆ, ಪಾಠಶಾಲೆಯೂ ಆಗಿದೆ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ, ಅವರೇ ಈ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಅಂದಮೇಲೆ ಅವಶ್ಯವಾಗ�� ಆಸುರೀ ಪ್ರಪಂಚವು ಸಮಾಪ್ತಿಯಾಗುವುದು. ಭಾರತದ ಉನ್ನತಿ ಮತ್ತು ಅವನತಿಯಾಗುತ್ತದೆ. ಭಾರತವೇ ಸ್ವರ್ಗದಿಂದ ನರಕ, ಶ್ರೇಷ್ಠದಿಂದ ಕನಿಷ್ಟವಾಗುತ್ತದೆ. ಸ್ವರ್ಗವೆಂದು ಹೊಸ ಪ್ರಪಂಚ. ಯಾರು ಬುದ್ಧಿವಂತರಾಗಿರುವರೋ ಅವರು ಅವಶ್ಯವಾಗಿ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತೆಂದು ತಿಳಿದುಕೊಳ್ಳುತ್ತಾರೆ. ನೀವು ಇದನ್ನೂ ಬರೆಯುತ್ತೀರಿ – ದೇವತಾ ಧರ್ಮವು ಹೇಗೆ ಸ್ಥಾಪನೆಯಾಗುತ್ತಿದೆ, ಒಂದು ಸೆಕೆಂಡಿನಲ್ಲಿ ಹೇಗೆ ಜೀವನ್ಮುಕ್ತಿ ಸಿಗುತ್ತದೆ.... ಎಂಬುದನ್ನು ಬಂದು ತಿಳಿದುಕೊಳ್ಳಿ. ಈಗ ಇದು ಹಳೆಯ ಪ್ರಪಂಚವಾಗಿದೆ. ಇದು ಬದಲಾಗಿ ಹೊಸ ಪ್ರಪಂಚವಾಗುತ್ತಿದೆ ಆದ್ದರಿಂದ ಈ ಅಂತಿಮ ಜನ್ಮವು ಬಹಳ ಅಮೂಲ್ಯವಾಗಿದೆ, ಇದಕ್ಕೆ ಬಹಳ ಮಹತ್ವಿಕೆಯಿದೆ ಯಾವಾಗ ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಮತ್ತು ಆದಿ ಸನಾತನ ದೇವಿ-ದೇವತಾ ಧರ್ಮದವರೇ ಬಂದು ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಒಂದುವೇಳೆ ತೆಗೆದುಕೊಳ್ಳಲಿಲ್ಲವೆಂದರೆ ಇವರು 84 ಜನ್ಮಗಳನ್ನು ತೆಗೆದುಕೊಳ್ಳುವವರಲ್ಲ. ಸೂರ್ಯವಂಶದಲ್ಲಿ ಬರುವವರಲ್ಲ, ಕೊನೆಯಲ್ಲಿ ಬರುತ್ತಾರೆಂದು ತಿಳಿಯಬೇಕು. ಯಾರದು ಪೂರ್ಣ ಜ್ಯೋತಿಯು ಬೆಳಗುತ್ತದೆಯೋ ಅವರು ಸತ್ಯಯುಗದಲ್ಲಿ ಬರುತ್ತಾರೆ. ಕೊನೆಯಲ್ಲಿ ದಿನ-ಪ್ರತಿದಿನ ಇನ್ನೂ ಕಡಿಮೆ ಶಕ್ತಿಯುಳ್ಳವರು, ಬರುತ್ತಾರೆ. ಮಹಾನ್ ಸೌಭಾಗ್ಯಶಾಲಿಗಳೇ ಅಕ್ಯೂರೇಟ್ ಹೊಸ ಪ್ರಪಂಚದಲ್ಲಿ ಬರುತ್ತಾರೆ. ಹೊಸ ಮನೆಯಲ್ಲಿಯೇ ಇರಬೇಕಲ್ಲವೆ. 10-12 ವರ್ಷಗಳ ನಂತರ ಹೋಗಿ ಇರುವಂತಹ ಕಚ್ಚಾ ಪುರುಷಾರ್ಥವನ್ನು ಏಕೆ ಮಾಡಬೇಕು! ಮಮ್ಮಾ-ಬಾಬಾರವರು ಹೊಸ ಪ್ರಪಂಚದಲ್ಲಿ ಮಹಾರಾಜ-ಮಹಾರಾಣಿ ಆಗುತ್ತಾರೆಂದರೆ ನಾವೂ ಸಹ ಏಕೆ ಆಗಬಾರದು. ಸರ್ವೀಸನ್ನು ವೃದ್ಧಿ ಮಾಡಬೇಕು. ಮಕ್ಕಳಿಗೆ ಇದೇ ವಿಚಾರ ನಡೆಯಬೇಕು.
|
3 |
+
ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಇಂದು ಬಹಳ ಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ತಂದೆಯನ್ನು ಅರಿತುಕೊಂಡಿರಿ ಮತ್ತು ಜೀವನ್ಮುಕ್ತಿಗೆ ಹಕ್ಕುದಾರರಾಗಿಯೇ ಬಿಡುತ್ತೀರಿ. ಜ್ಞಾನದ ವಿನಾಶವೆಂದೂ ಆಗುವುದಿಲ್ಲ. ಕೆಲವು ಮನುಷ್ಯರು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಇನ್ನೂ ಕೆಲವರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಹಾಗೆಯೇ ನೋಡಿಕೊಂಡು ಹೊರಟು ಹೋಗುತ್ತಾರೆ. ಕೆಲವರು ನಾವು ಖಂಡಿತ ಬರುತ್ತೇವೆಂದು ಹೇಳಿ ಹೋಗುತ್ತಾರೆ ಆದರೆ ಮಾಯೆಯು ಮತ್ತೆ ಮರೆಸಿ ಬಿಡುತ್ತದೆ. ಮಾಯಾ ಬೆಕ್ಕು ಕಡಿಮೆಯಿಲ್ಲ, ಗುಲಾಬ್ ಕಾವಲಿ ಎಂಬ ಒಂದು ಆಟವನ್ನೂ ತೋರಿಸುತ್ತಾರೆ. ಈ ಉದಾಹರಣೆಯೂ ನಿಮಗಾಗಿಯೇ ಇದೆ. ತಂದೆಯೇ ತಿಳಿಸುತ್ತಾರೆ. ಇಲ್ಲಿ ನೀವು ಮಾಯೆಯ ಮೇಲೆ ಜಯ ಗಳಿಸಿ ಜಗಜ್ಜೀತರಾಗಲು ಬಂದಿದ್ದೀರಿ, ಇದರಮೇಲೆ ಕಥೆಯೂ ಮಾಡಲ್ಪಟ್ಟಿದೆ. ನೀವು ಮಾಯೆಯ ಮೇಲೆ ಜಯ ಗಳಿಸುವುದಕ್ಕಾಗಿ ಯೋಗಬಲದಲ್ಲಿರುತ್ತೀರಿ ಆದರೆ ಮಾಯಾಬೆಕ್ಕು ತಿರುಗಿಸಿ ಬಿಡುತ್ತದೆ. ಗುಲಾಬ್ ಕಾವಲಿ, ಅಲ್ಲಾ ಅವಲುದ್ದೀನ್ ಇವೆಲ್ಲವೂ ಈ ಸಮಯದ ಮಾತು��ಳಾಗಿವೆ. ಅಲ್ಲಾರವರೇ ಅವಲುದ್ಧೀನ್, ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಹತಮತಾಯಿ ಆಟವೂ ಈ ಸಮಯದ್ದಾಗಿದೆ. ತಂದೆಯನ್ನು ನೆನಪು ಮಾಡದಿದ್ದರೆ ಮಾಯೆಯು ಬಂದು ಬಿಡುತ್ತದೆ. ಏನೆಲ್ಲವೂ ಆಗಿ ಬಿಟ್ಟಿದೆಯೋ ಅದನ್ನು ನಂತರ ಕುಳಿತು ಕಥೆಗಳ ರೂಪದಲ್ಲಿ ಬರೆಯುತ್ತಾರೆ. ಏನು ಆಗಲಿದೆಯೋ ಅದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಹಿಂದೆ ಏನೆಲ್ಲವೂ ಕಳೆದು ಹೋಗಿದೆಯೋ ಅದರ ನಾಟಕವನ್ನು ರಚಿಸುತ್ತಾರೆ. ಕಂಸ ವಧೆ, ಅಮೃತ ಮಂಥನ, ಭಿನ್ನ-ಭಿನ್ನ ಪ್ರಕಾರದ ಆಟಗಳನ್ನು ರಚಿಸುತ್ತಾರೆ ಆದರೆ ಇದು ಬೇಹದ್ದಿನ ನಾಟಕವಾಗಿದೆ ಎಂಬುದನ್ನು ಪಾಪ ಅವರು ತಿಳಿದುಕೊಂಡಿಲ್ಲ. ನಿಮಗೆ ತಿಳಿದಿದೆ - ಇದು ಅನಾದಿ, ಅವಿನಾಶಿ ನಾಟಕವಾಗಿದೆ. ಈ ನಾಟಕವು ಎಷ್ಟು ವರ್ಷಗಳದಾಗಿದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಚರಿತ್ರೆಯು ಪುನರಾವರ್ತನೆಯಾಗುತ್ತದೆ ಎಂದು ಹೇಳುತ್ತಾರೆ, ತಿಳಿದುಕೊಳ್ಳುವುದಿಲ್ಲ. ತಂದೆಯು ಭಿನ್ನ-ಭಿನ್ನ ಪ್ರಕಾರದ ರಹಸ್ಯಗಳನ್ನು ತಿಳಿಸುತ್ತಾರೆ ಯಾವುದರಿಂದ ನಮ್ಮ ಈ ಅಂತಿಮ ಜನ್ಮವು ಬಹಳ ಅಮೂಲ್ಯವಾಗಿದೆ, ಇದರಲ್ಲಿ ಸಮಯವನ್ನು ವ್ಯರ್ಥ ಮಾಡಬಾರದು ಎಂಬುದನ್ನು ಬುದ್ಧಿಯಲ್ಲಿ ಕುಳಿತುಕೊಳ್ಳಲಿ ಎಂದು. ಕೈಕೆಲಸ ಮಾಡಲಿ, ಬುದ್ಧಿಯು ತಂದೆಯನ್ನು ನೆನಪು ಮಾಡಲಿ. ಬುದ್ಧಿಯು ಆತ್ಮದಲ್ಲಿದೆಯಲ್ಲವೆ. ನನಗೆ ತೊಂದರೆ ಕೊಡಬೇಡಿ, ನನ್ನ ಮನಸ್ಸನ್ನು ದುಃಖಿಯನ್ನಾಗಿ ಮಾಡಬೇಡಿ ಎಂದು ಆತ್ಮವೇ ಹೇಳುತ್ತದೆ. ಬುದ್ಧಿಯು ತಿಳಿದುಕೊಳ್ಳುತ್ತದೆ ಮತ್ತು ಇವರು ನಮಗೆ ಸುಖ ಕೊಡುತ್ತಾರೆ, ಇವರು ದುಃಖ ಕೊಡುತ್ತಾರೆ ಎಂದು ನಿರ್ಣಯ ಮಾಡುತ್ತದೆ. ಆತ್ಮವು ಶರೀರವಿಲ್ಲದೆ ಮಾತನಾಡಲು ಸಾಧ್ಯವಿಲ್ಲ. ಆತ್ಮವೇ ಎಲ್ಲವನ್ನು ಕಲಿಯುತ್ತದೆ. ಸಂಸ್ಕಾರವು ಆತ್ಮದಲ್ಲಿಯೇ ತುಂಬುತ್ತದೆ. ಈಗ ನಿಮಗೆ ಪರಮಪಿತ ಪರಮಾತ್ಮನು ಕಲಿಸುತ್ತಿದ್ದಾರೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ. ಅವರು ಭಾರತಕ್ಕಾಗಿ ವೈಕುಂಠದ ಉಡುಗೊರೆಯನ್ನು ತೆಗೆದುಕೊಂಡು ಬರುತ್ತಾರೆ ಆದ್ದರಿಂದ ಸರ್ವರ ಸದ್ಗತಿದಾತನೆಂದು ಗಾಯನವಿದೆ. ಅವರ ಜನ್ಮ ಸ್ಥಾನವು ಭಾರತವಾಗಿದೆ. ಸೋಮನಾಥ ಮಂದಿರವು ಇಲ್ಲಿಯೆ ಇದೆ. ಶಿವ ತಂದೆಯು ಬಂದಿದ್ದರು ಆದ್ದರಿಂದಲೇ ಅವರ ನೆನಪಾರ್ಥ ಮಂದಿರವನ್ನು ನಿರ್ಮಿಸಿದ್ದಾರೆ. ಅವರು ಯಾವಾಗ ಬಂದರು, ಏನು ಮಾಡಿ ಹೋದರು ಎಂಬುದನ್ನು ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣರಿದ್ದರು ನಂತರ ಅವರು ಎಲ್ಲಿ ಹೋದರು, ಅವರು ಈ ಪತಿತ ಪ್ರಪಂಚದಲ್ಲಿದ್ದಾರೆ. ಸತೋಪ್ರಧಾನರಾಗಿದ್ದರು ಮತ್ತೆ ಚಕ್ರವನ್ನು ಸುತ್ತಿ ತಮೋಪ್ರಧಾನರಾಗಿದ್ದಾರೆಂದು ತಿಳಿದುಕೊಳ್ಳುತ್ತಾರೆಯೇ! ನಾಮ-ರೂಪವಂತೂ ಬದಲಾಗುತ್ತದೆಯಲ್ಲವೆ. ಪ್ರತೀ ಜನ್ಮದಲ್ಲಿ ಮುಖ ಲಕ್ಷಣಗಳು ಬದಲಾಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ಸ್ವಲ್ಪವೂ ಅಂತರವಾಗಲು ಸಾಧ್ಯವಾಗುವುದಿಲ್ಲ. ಒಬ್ಬರ ರೂಪವು ಇನ್ನೊಬ್ಬರಿಗೆ ಹೋಲುವುದಿಲ್ಲ. ಮಕ್ಕಳು ತಮ್ಮ ತಂದೆಯನ್ನು ಅರಿತುಕೊಳ್ಳಲಿ ಎಂದು ತಂದೆಗೆ ಮಕ್ಕಳ ಮೇಲೆ ದಯೆ ಬರುತ್ತದೆ, ಅರ್ಥವಾಗುತ್ತದೆಯಲ್ಲವೆ. ಬ್ರಹ್ಮಾಕುಮಾರ-ಕುಮಾರಿಯರು ವೃದ್ಧಿಯಾಗುತ್ತಾ ಹೋಗುತ್ತಾರೆ. ಇದು ಒಂದುದಿನ ಬರುವುದು. ಎಲ್ಲರೂ ಸುತ್ತುವರೆಯುತ್ತಾ ಇರುತ್ತಾರೆ. ನಿಮ್ಮ ಪ್ರದರ್ಶನಿಗೆ ಎಲ್ಲರೂ ಬರುತ್ತಾರೆ, ದಿನ ಕಳೆದಂತೆ ಪ್ರಸಿದ್ಧಿಯಾಗುತ್ತಾ ಹೋಗುತ್ತದೆ. ತಂದೆಯು ಅಭಿಪ್ರಾಯದ ಪುಸ್ತಕವನ್ನು ಮುದ್ರಿಸುತ್ತಾರೆ. ಅದೂ ಸಹ ಒಂದು ದಿನ ಕೆಲಸಕ್ಕೆ ಬರುವುದು, ಅನೇಕರಿಗೆ ಕಳುಹಿಸಬೇಕಾಗುವುದು. ಯಾವ ಮಕ್ಕಳು ಸೇವಾಧಾರಿಗಳಾಗಿದ್ದಾರೆಯೋ ಅವರು ಇಡೀ ದಿನ ಈ ವಿಚಾರಗಳನ್ನು ಮಾಡಬೇಕಾಗುತ್ತದೆ. ಆಗ ಭಲೆ ಬಿ.ಕೆ.,ಗಳು ಬಂದು ಮಿಲನ ಮಾಡಲಿ ಎಂದು ದೊಡ್ಡ-ದೊಡ್ಡವರೂ ಸಹ ಕೂಡಲೇ ಹೇಳುತ್ತಾರೆ. ಉಪವಾಸ ಸತ್ಯಾಗ್ರಹಗಳನ್ನೂ ಸಹ ಮಾಡುತ್ತಾರೆಂದರೆ 10-12 ದಿನಗಳ ನಂತರ ಶಕ್ತಿಹೀನರಾಗಿ ಬಿಡುತ್ತಾರೆ, ಮಾತನಾಡುವುದಕ್ಕೂ ಆಗುವುದಿಲ್ಲ. ನಿಮ್ಮ ಮಾತನ್ನು ತಿಳಿದುಕೊಳ್ಳುತ್ತಾರೆ ಮತ್ತು ಅವಶ್ಯವಾಗಿ ಜೀವನ್ಮುಕ್ತಿಯನ್ನು ಪಡೆಯಲು ಇದೇ ಸರಿಯಾದ ಮಾರ್ಗ ಎಂಬುದನ್ನು ಹೇಳುತ್ತಾರೆ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ ಉಳಿದೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಗುರುಗಳಂತೂ ಅನೇಕ ಮಂದಿ ಆಗಿ ಹೋದರಲ್ಲವೆ. ಸ್ತ್ರೀಗೆ ಪತಿಯೂ ಗುರುವಾಗಿದ್ದಾರೆ, ಕಥೆ ಹೇಳುವವರಿಗೂ ಗುರುಗಳೆಂದು ಹೇಳುತ್ತಾರೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಮಕ್ಕಳಿಗೆ ಸರ್ವೀಸಿಗಾಗಿ ಬಹಳ ವಿಶಾಲ ಮನೋಭಾವನೆಯಿರಬೇಕು. ತಂದೆಯನ್ನು ನೆನಪು ಮಾಡಿ ರಾವಣನ ಮೇಲೆ ವಿಜಯ ಗಳಿಸಬೇಕಾಗಿದೆ. ಶ್ವಾಸವನ್ನು ವ್ಯರ್ಥವಾಗಿ ಕಳೆಯಬಾರದು. ಯಾರು ಸಮಯವನ್ನು ವ್ಯರ್ಥವಾಗಿ ಕಳೆಯುವರೋ ಅವರಿಗೆ ಬುದ್ಧಿಹೀನರೆಂದು ಹೇಳಲಾಗುತ್ತದೆ. ತಂದೆಯು ಹೇಳುತ್ತಾರೆ - ಯಾರದೇ ಜೀವನವನ್ನು ವಜ್ರ ಸಮಾನವನ್ನಾಗಿ ಮಾಡಲು ನೀವು ಸರ್ವೀಸ್ ಮಾಡುವುದಿಲ್ಲವೇ! ಎಷ್ಟೊಂದು ಸಮಯವನ್ನೂ ಶಕ್ತಿಯನ್ನೂ ವ್ಯರ್ಥವಾಗಿ ಕಳೆಯುತ್ತೀರಿ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ಕಲ್ಲು ಬುದ್ಧಿಯವರೆಂದು ಹೇಳಲಾಗುತ್ತದೆ, ಇದರಲ್ಲಿ ಎಲ್ಲವೂ ಯೋಗದ ಮಾತಾಗಿದೆ. ತಂದೆಯನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ತೆಗೆದುಕೊಳ್ಳಿರಿ. ಇದರ ಅರ್ಥವನ್ನು ಎಂದೂ ಯಾರೂ ತಿಳಿದುಕೊಳ್ಳುವುದಿಲ್ಲ, ಅವರಂತೂ ಬ್ರಹ್ಮತತ್ವವನ್ನೂ ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವುದು. ಬ್ರಹ್ಮತತ್ವವು ಪತಿತ-ಪಾವನನಾಗಿದೆಯೇ? ಪತಿತ-ಪಾವನನು ಪರಮಪಿತ ಪರಮಾತ್ಮನಾಗಿದ್ದಾನೆ, ಬ್ರಹ್ಮತತ್ವವಲ್ಲ. ಪಾಪ ಮನುಷ್ಯರು ಬಹಳ ಮರೆತು ಹೋಗಿದ್ದಾರೆ. ತಂದೆಯು ಮಕ್ಕಳಿಗೆ ಪುನಃ ಹೇಳುತ್ತಾರೆ- ಮಕ್ಕಳೇ, ಸಮಯವನ್ನು ವ್ಯರ್ಥ ಮಾಡಬೇಡಿರಿ, ತಂದೆಯನ್ನು ನೆನಪು ಮಾಡಿರಿ. ತಂದೆಗೆ ಗೊತ್ತಿದೆ, ಕೆಲವು ಮಕ್���ಳು ದಿನ-ರಾತ್ರಿ ಬಹಳ ಸಮಯವನ್ನು ವ್ಯರ್ಥ ಮಾಡುತ್ತಾರೆ, ಇಡೀ ದಿನ ಏನೂ ಪುರುಷಾರ್ಥ ಮಾಡುವುದಿಲ್ಲ. ತಂದೆಯು ತಮ್ಮ ಉದಾಹರಣೆಯನ್ನೂ ತಿಳಿಸುತ್ತಾರೆ. ಭೋಜನ ಮಾಡಲು ಕುಳಿತುಕೊಂಡರೂ ತಂದೆಯನ್ನು ನೆನಪು ಮಾಡುತ್ತೇನೆ. ನಾವಿಬ್ಬರೂ ಒಟ್ಟಿಗೆ ತಿನ್ನುತ್ತೇವೆ ಎಂದು. ಶರೀರದಲ್ಲಿ ಎರಡೂ ಆತ್ಮಗಳಿವೆಯಲ್ಲವೆ, ಹೀಗೆ ನೆನಪು ಮಾಡುತ್ತಾ-ಮಾಡುತ್ತಾ ಮತ್ತೆ ಮರೆತು ಹೋಗುತ್ತೇನೆ. ಬೇರೆ-ಬೇರೆ ವಿಚಾರಗಳು ಬಂದು ಬಿಡುತ್ತವೆ ಏಕೆಂದರೆ ಇವರ ಮೇಲೆ ಬಹಳ ಜವಾಬ್ದಾರಿಯಿದೆ. ಬಹಳಷ್ಟು ವಿಚಾರಗಳು ಬರುತ್ತವೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಇವರಿಗಿಂತಲೂ ಹೆಚ್ಚು ನೆನಪಿನಲ್ಲಿರಬಹುದು. ಇವರಂತು ಪರಿಶ್ರಮ ಪಡಬೇಕಾಗುತ್ತದೆ, ಸದಾ ಶಿವ ತಂದೆಯು ತಿಳಿಸುತ್ತಾರೆಂದು ತಿಳಿದುಕೊಳ್ಳಿ. ಅವರನ್ನು ನೆನಪು ಮಾಡಿರಿ, ಬ್ರಹ್ಮನನ್ನು ನೆನಪು ಮಾಡುವುದರಿಂದ ಶಿವ ತಂದೆಯು ಮರೆತು ಹೋಗುವರು. ಮಕ್ಕಳು ಮೊದಲು ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ ನಂತರ ಅನ್ಯರದು. ಕೆಲವರಂತೂ ಅನ್ಯರ ಕಲ್ಯಾಣ ಮಾಡುತ್ತಾ ಇರುತ್ತಾರೆ. ತಮ್ಮ ಉನ್ನತಿ ಮಾಡಿಕೊಳ್ಳುವುದಿಲ್ಲ. ಅನ್ಯರನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾ ಮತ್ತೆ ತಾವೇ ಮಾಯವಾಗಿ ಬಿಡುತ್ತಾರೆ. ಆಶ್ಚರ್ಯವಲ್ಲವೆ! ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ನೀವು ಅನುಭವವನ್ನೂ ತಿಳಿಸುತ್ತೀರಿ, ಮತ್ತ್ಯಾವುದೇ ಸತ್ಸಂಗ ಇತ್ಯಾದಿಗಳಲ್ಲಿ ತಿಳಿಸುವುದಿಲ್ಲ. ಇಲ್ಲಿಯೂ ನಂಬರ್ವಾರ್ ಧಾರಣೆಯಾಗುತ್ತದೆ. ಈ ಜ್ಞಾನವನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಲಾಗುತ್ತದೆ, ಜೋಳಿಗೆಯನ್ನು ತುಂಬಿಸು ಎಂದು ಹಾಡುತ್ತಾರೆ, ಈ ಜ್ಞಾನವನ್ನು ಬುದ್ಧಿಯಲ್ಲಿ ತುಂಬಿಸಲಾಗುವುದೋ ಅಥವಾ ಜೋಳಿಗೆಯಲ್ಲಿಯೋ? ಪಾರಸ ಬುದ್ಧಿ ಮತ್ತು ಕಲ್ಲು ಬುದ್ಧಿಯವರೆಂದು ಹೇಳಿಕೆಯಿದೆ, ನಿಮ್ಮ ಈ ಜೀವನವು ಬಹಳ ಅಮೂಲ್ಯವಾಗಿದೆ. ಅದರಲ್ಲಿ ಬಹಳ ಪುರುಷಾರ್ಥದ ಅವಶ್ಯಕತೆಯಿದೆ. ಗೃಹಸ್ಥ ವ್ಯವಹಾರದಲ್ಲಿದ್ದು ಎಲ್ಲವನ್ನೂ ಮಾಡಬೇಕಾಗಿದೆ. ಸನ್ನಿವೇಶಗಳನ್ನು ನೋಡಬೇಕಾಗುತ್ತದೆ. ಭಲೆ ಕುಮಾರರಾಗಿದ್ದರೆ ಚೆನ್ನಾಗಿ ಸರ್ವೀಸ್ ಮಾಡುವಂತಿದ್ದರೆ ಅವರಿಂದ ನೌಕರಿಯನ್ನು ಬಿಡಿಸಬಹುದು, ಪ್ರತಿಯೊಬ್ಬರ ಸ್ಥಿತಿಗತಿಗಳನ್ನು ನೋಡಿ ನಂತರ ಸಲಹೆ ನೀಡಲಾಗುತ್ತದೆ. ಸರ್ಜನ್ ನಾಡಿ ನೋಡದೆ ಸಲಹೆ ನೀಡಲು ಸಾಧ್ಯವಿಲ್ಲ. ಇವರು ಅವಿನಾಶಿ ಸರ್ಜನ್ ಆಗಿದ್ದಾರೆ, ಆತ್ಮಕ್ಕೆ ಮನ್ಮನಾಭವದ ಇಂಜೆಕ್ಷನ್ ಕೊಡುತ್ತಾರೆ. ಇವರದು ಇದು ಒಂದೇ ಇಂಜೆಕ್ಷನ್ ಆಗಿದೆ ಯಾವುದು 21 ಜನ್ಮಗಳಿಗಾಗಿ ಸದಾ ಆರೋಗ್ಯವಂತರನ್ನಾಗಿ ಮಾಡಿ ಬಿಡುತ್ತದೆ. ಪ್ರಜಾಪಿತ ಬ್ರಹ್ಮನಿಗೆ ಇಷ್ಟು ಮಂದಿ ಮಕ್ಕಳಿದ್ದಾರೆ, ಎಷ್ಟು ದೊಡ್ಡ ಗೃಹಸ್ಥಿಯಾಗಿದ್ದಾರೆ, ಇದು ಬೇಹದ್ದಿನ ಗೃಹಸ್ಥ ವ್ಯವಹಾರವಾಗಿದೆ, ಇವರು ಶಿವ ತಂದೆಯ ರಥವಲ್ಲವೆ ಅಂದಮೇಲೆ ಎಷ್ಟೊಂದು ಸಂಪಾದನೆಯಾಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ಈ ರಥದಲ್ಲಿ ಕುಳಿತ�� ಜ್ಞಾನವನ್ನು ತಿಳಿಸುತ್ತೇನೆ, ಇಲ್ಲದಿದ್ದರೆ ಹೇಗೆ ತಿಳಿಸಲಿ! ಕೃಷ್ಣನಿರುವುದೇ ಸತ್ಯಯುಗದ ಆದಿಯಲ್ಲಿ ಅದೇ ಆತ್ಮವು ಈಗ ಶ್ಯಾಮನಾಗಿದೆ. ಆದ್ದರಿಂದ ಇವರ ಬಹಳ ಜನ್ಮಗಳ ಅಂತಿಮದಲ್ಲಿ ಪ್ರವೇಶ ಮಾಡುತ್ತೇನೆ. ಆದ್ದರಿಂದ ಭಾಗ್ಯಶಾಲಿ ರಥವೆಂದು ಗಾಯನವಿದೆ. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ತನ್ನ ಹಾಗೂ ಅನ್ಯರ ಜೀವನವನ್ನು ವಜ್ರ ಸಮಾನವನ್ನಾಗಿ ಮಾಡುವ ಸೇವೆ ಮಾಡುತ್ತಾ ಇರಬೇಕಾಗಿದೆ. ಸಮಯ, ಹಣ, ಶಕ್ತಿಯನ್ನು ವ್ಯರ್ಥವಾಗಿ ಕಳೆಯಬಾರದು.
|
7 |
+
2. ಅನ್ಯರ ಕಲ್ಯಾಣ ಮಾಡುವುದರ ಜೊತೆ ಜೊತೆಗೆ ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ. ಬುದ್ಧಿರೂಪಿ ಜೋಳಿಗೆಯಲ್ಲಿ ಜ್ಞಾನ ರತ್ನಗಳನ್ನು ಧಾರಣೆ ಮಾಡಿಕೊಂಡು ದಾನ ಮಾಡಬೇಕಾಗಿದೆ.
|
BKMurli/BKMurli/page_1016.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಆತ್ಮಿಕ ಮಕ್ಕಳು ತಿಳಿದುಕೊಂಡಿದ್ದೀರಿ. ಈಗ ಆ ದಿನವು ಮತ್ತೆ ಬಂದಿದೆ. ಯಾವ ದಿನ? ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ಭಾರತದಲ್ಲಿ ಮತ್ತೆ ಸ್ವರ್ಗದ ಆದಿ ಸನಾತನ ದೇವಿ-ದೇವತಾ ಧರ್ಮವು ಸ್ಥಾಪನೆಯಾಗುತ್ತದೆ ಅರ್ಥಾತ್ ಲಕ್ಷ್ಮೀ-ನಾರಾಯಣರ ರಾಜ್ಯವು ಸ್ಥಾಪನೆಯಾಗುತ್ತಿದೆ ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು. ಪತಿತ-ಪಾವನ ತಂದೆಯನ್ನು ನಾವು ಯಾರನ್ನು ಕರೆಯುತ್ತಿದ್ದೆವು ಅವರು ಬಂದಿದ್ದಾರೆ. ಅವರೇ ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ ಅಥವಾ ದುಃಖಹರ್ತ-ಸುಖಕರ್ತನಾಗಿದ್ದಾರೆ. ಒಂದು ಬಾರಿ ಮುಕ್ತಗೊಳಿಸಿದ ನಂತರ ಮತ್ತೆ ಹೇಗೆ ಸಿಕ್ಕಿ ಹಾಕಿಕೊಂಡಿರಿ! ಎಂಬುದು ಯಾರಿಗೂ ತಿಳಿದಿಲ್ಲ. ಇಂತಹ ಕಲ್ಲು ಬುದ್ಧಿ ಮನುಷ್ಯರಿಗೆ ತಿಳಿಸಲು ಎಷ್ಟು ಪರಿಶ್ರಮವಾಗುತ್ತದೆ. ಕರ್ತವ್ಯವನ್ನು ನೋಡಿ, ಹೇಗೆ ಇಟ್ಟಿದ್ದಾರೆ! ಕೊಳಕಾದ ಬಟ್ಟೆಗಳನ್ನು ಬಂದು ಸ್ವಚ್ಛ ಮಾಡಿರಿ ಎಂದು. ದೇವತೆಗಳ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿರುವುದು. ರಾವಣ ರಾಜ್ಯದಲ್ಲಿ ಯಾರದೇ ಶರೀರವು ಪವಿತ್ರವಾಗಿಲ್ಲ, ಶರೀರವಂತು ಪತಿತವಾಗಿದೆ. ಇವೆಲ್ಲಾ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಭಲೆ ಆತ್ಮವು ಸ್ವಲ್ಪ ಪವಿತ್ರವಾಗಿದ್ದರೆ ಅವರದು ಪ್ರಭಾವವಿರುತ್ತದೆ ಆದರೂ ಪತಿತರಂತೂ ಆಗಲೇಬೇಕಲ್ಲವೆ. ಬೇಹದ್ದಿನ ತಂದೆ ಪತಿತ-ಪಾವನನು ಬಂದು ತಿಳಿಸುತ್ತಾರೆ - ಈ ಐದು ವಿಕಾರಗಳು ಶತ್ರುಗಳಾಗಿವೆ, ಇವನ್ನು ಬಿಡಿ. ಒಂದುವೇಳೆ ನನ್ನ ಮತವನ್ನು ಒಪ್ಪದಿದ್ದರೆ ನಿಮಗೆ ಧರ್ಮರಾಜನು ಶಿಕ್ಷೆ ಕೊಡುವರು. ನೀವು ಆಲ್ಮೈಟಿ ಅಥಾರಿಟಿಯ ಮಾತನ್ನು ಪಾಲಿಸದಿದ್ದರೆ ಧರ್ಮರಾಜನು ಬಹಳ ಕಠಿಣ ಶಿಕ್ಷೆ ಕೊಡುವರು. ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ನಾವೇ ಪಾವನ ದೇವಿ-ದೇವತೆಗಳಾಗಿದ್ದೆವು, ಈಗ ಪತಿತರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ಈಗ ಬಹುಬೇಗನೆ ಅದನ್ನು ಬಿಡಬೇಕಾಗಿದೆ. ದೇಹಾಭಿಮಾನವು ರಾವಣನ ಮತವಾಗಿದೆ, ಅದನ್ನು ಬಿಡಬೇಕಾಗಿದೆ. ಮೊದಲ ನಂಬರಿನ ವಿಕಾರವೂ ಬಿಡಬೇಕಾಗಿದೆ. ಅಂತಹ ದಿನವೂ ಬರುವುದು ಯಾವಾಗ ತಂದೆಯ ಜೊತೆ ಈ ಸಭೆಯಲ್ಲಿ ಪತಿತರು ಯಾರೂ ಕುಳಿತುಕೊಳ್ಳಲು ಸಾಧ್ಯವಿಲ್ಲ, ಅಂತಹವರಿಗೆ ಅನುಮತಿ ಕೊಡುವುದಿಲ್ಲ. ಪತಿತರನ್ನು ಹೊರ ಹಾಕಿರಿ ಎಂದು ಹೇಳಲಾಗುತ್ತದೆ, ಇಂದ್ರ ಸಭೆಯಲ್ಲಿ ಬರಲು ಬಿಡುವುದಿಲ್ಲ. ಭಲೆ ಯಾರೆಷ್ಟೇ ಕೋಟ್ಯಾಧಿಪತಿಯಾಗಿರಲಿ ಅಥವಾ ಏನೇ ಆಗಿರಲಿ ಸಭೆಯಲ್ಲಿ ಬರಲು ಸಾಧ್ಯವಿಲ್ಲ. ಭಲೆ ಅವರಿಗೆ ತಿಳಿಸಲಾಗುತ್ತದೆ ಆದರೆ ತಂದೆಯ ಸಭೆಯಲ್ಲಿ ಅನುಮತಿ ನೀಡಲಾಗುವುದಿಲ್ಲ. ಈಗ ಅವರಿಗೆ ಅನುಮತಿ ನೀಡಲಾಗುತ್ತಿದೆ, ನಂತರ ಇರುವುದಿಲ್ಲ. ಈಗಲೂ ಸಹ ತಂದೆಯು ಕೇಳುತ್ತಾರೆ- ಯಾರಾದರೂ ಪತಿತರು ಬಂದು ಕುಳಿತುಕೊಂಡರೆ ತಂದೆಗೆ ಇಷ್ಟವಾಗುವುದಿಲ್ಲ, ಹೀಗೆ ಅನೇಕರು ಬಂದು ಕುಳಿತುಕೊಳ್ಳುತ್ತಾರೆ. ಅಂತಹವರು ಬಹಳ ಕಠಿಣ ಶಿಕ್ಷೆಯನ್ನು ಅನುಭವ��ಸಬೇಕಾಗುವುದು. ಗುಡಿ-ಗೋಪುರಗಳಿಗೆ ಸ್ನಾನ ಮಾಡಿಕೊಂಡು ಹೋಗುತ್ತಾರೆ, ಸ್ನಾನ ಮಾಡದೇ ಯಾರೂ ಹೋಗುವುದಿಲ್ಲ. ಅದು ಸ್ಥೂಲ ಸ್ನಾನವಾಗಿದೆ, ಇದು ಜ್ಞಾನ ಸ್ನಾನವಾಗಿದೆ. ಇದರಿಂದಲೂ ಶುದ್ಧವಾಗಬೇಕಾಗಿದೆ. ಯಾವುದೇ ಮಾಂಸಹಾರಿಗಳು ಬರಲು ಸಾಧ್ಯವಿಲ್ಲ, ಯಾವಾಗ ಸಮಯ ಬರುವುದೋ ಆಗ ತಂದೆಯು ಬಹಳ ಕಠಿಣವಾಗುತ್ತಾರೆ. ಪ್ರಪಂಚದಲ್ಲಿ ನೋಡಿ, ಭಕ್ತಿಯದು ಎಷ್ಟೊಂದು ಪ್ರಭಾವವಿದೆ, ಯಾರು ಬಹಳ ಶಾಸ್ತ್ರಗಳನ್ನು ಓದುವರೋ ಅವರು ಶಾಸ್ತ್ರಿ ಎಂಬ ಪದವಿಯನ್ನು ತೆಗೆದುಕೊಳ್ಳುತ್ತಾರೆ. ನೀವೀಗ ಸಂಸ್ಕೃತ ಇತ್ಯಾದಿಗಳನ್ನು ಕಲಿತು ಏನು ಮಾಡುತ್ತೀರಿ! ಈಗ ತಂದೆಯು ತಿಳಿಸುತ್ತಾರೆ - ಎಲ್ಲವನ್ನೂ ಮರೆತು ಹೋಗಿ, ಕೇವಲ ಒಬ್ಬ ತಂದೆಯನ್ನು ನೆನಪು ಮಾಡಿದರೆ ನೀವು ಪವಿತ್ರರಾಗಿ ವಿಷ್ಣು ಪುರಿಯ ಮಾಲೀಕರಾಗಿ ಬಿಡುತ್ತೀರಿ. ಯಾವಾಗ ಈ ಮಾತನ್ನು ಚೆನ್ನಾಗಿ ತಿಳಿದುಕೊಳ್ಳುವರೊ ಆಗ ಈ ಶಾಸ್ತ್ರಗಳೆಲ್ಲವನ್ನೂ ಮರೆತು ಹೋಗುವರು. ಲೌಕಿಕ ವಿದ್ಯೆಯನ್ನು ಓದಿ ವಕೀಲ ಇತ್ಯಾದಿಯಾಗುತ್ತಾರೆ ಆದರೆ ಅದೆಲ್ಲದಕ್ಕಿಂತ ಉನ್ನತ ವಿದ್ಯೆಯು ಇದಾಗಿದೆ ಯಾವುದನ್ನು ಪರಮಾತ್ಮ ಜ್ಞಾನ ಸಾಗರನೇ ಓದಿಸುತ್ತಾರೆ. ಅವರನ್ನು ಪತಿತ-ಪಾವನ ಬನ್ನಿರಿ ಎಂದು ಕರೆಯುತ್ತಾರೆ ಆದರೆ ನಾವು ಪತಿತರಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ತಂದೆಯು ಇದನ್ನು ತಿಳಿಸುತ್ತಲೇ ಇರುತ್ತಾರೆ - ಸತ್ಯಯುಗಕ್ಕೆ ರಾಮ ರಾಜ್ಯವೆಂದು, ಕಲಿಯುಗಕ್ಕೆ ರಾವಣ ರಾಜ್ಯವೆಂದು ಹೇಳುತ್ತಾರೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಪಾವನ ದೇವಿ - ದೇವತೆಗಳನ್ನು ಮಂದಿರಗಳಲ್ಲಿ ಪೂಜಿಸಲಾಗುತ್ತದೆ ಮತ್ತು ಅವರ ಮುಂದೆ ಪತಿತರು ಹೋಗಿ ತಲೆ ಬಾಗುತ್ತಾರೆ. ಅವರು ಪವಿತ್ರತೆಯಲ್ಲಿ ಎಲ್ಲರಿಗಿಂತ ಶ್ರೇಷ್ಠವಾಗಿದ್ದಾರೆಂದು ಇದರಿಂದಲೇ ಸಿದ್ಧವಾಯಿತು. ಸನ್ಯಾಸಿಗಳಿಗಿಂತಲೂ ಶ್ರೇಷ್ಠರಾಗಿದ್ದಾರೆ. ಸನ್ಯಾಸಿಗಳ ಮಂದಿರವಾಗುವುದಿಲ್ಲ. ಈಗ ಮನುಷ್ಯರು ತಮೋಪ್ರಧಾನ ಭಕ್ತಿಯಲ್ಲಿ ಹೋಗಿರುವುದರಿಂದ ಸನ್ಯಾಸಿಗಳ ಚಿತ್ರವನ್ನೂ ಇಟ್ಟುಕೊಳ್ಳುತ್ತಾರೆ, ಅದಕ್ಕೆ ತಮೋಪ್ರಧಾನ ಭಕ್ತಿಯೆಂದು ಹೇಳಲಾಗುತ್ತದೆ. ಮನುಷ್ಯರ ಪೂಜೆ, ಪಂಚತತ್ವಗಳ ಪೂಜೆಯು ನಡೆಯುತ್ತಿದೆ, ಸತೋಪ್ರಧಾನ ಭಕ್ತಿಯಿದ್ದಾಗ ಒಬ್ಬರ ಪೂಜೆಯು ನಡೆಯುತ್ತಿತ್ತು, ಅದಕ್ಕೆ ಅವ್ಯಭಿಚಾರಿ ಭಕ್ತಿಯೆಂದು ಹೇಳಲಾಗುತ್ತದೆ. ದೇವತೆಗಳನ್ನೂ ಸಹ ತಂದೆಯೇ ಮಾಡಿದ್ದಾರೆ ಅಂದಮೇಲೆ ಅವರೊಬ್ಬರಿಗೇ ಪೂಜೆಯು ನಡೆಯಬೇಕು ಆದರೆ ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ಸತೋಪ್ರಧಾನದಿಂದ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಕೆಲವರು ಸತೋಪ್ರಧಾನರಾಗಿಬಿಡುತ್ತಾರೆ, ಕೆಲವರು ಸತೋ, ಕೆಲವರು ರಜೋ, ಕೆಲವರು ತಮೋ ಆಗುತ್ತಾರೆ.
|
2 |
+
ಸತ್ಯಯುಗದಲ್ಲಿ ಬಹಳ ಸ್ವಚ್ಛತೆಯಿರುತ್ತದೆ, ಅಲ್ಲಿ ಶರೀರ(ಶವ)ಕ್ಕೆ ಯಾವುದೇ ಬೆಲೆಯಿರುವುದಿಲ್ಲ. ವಿದ್ಯುತ್ತಿಗೆ ಕೊಟ್ಟು ಸಮಾಪ್ತಿ ಮಾಡುತ್ತಾರೆ, ಇಲ್ಲಿನ ತರಹ ಭಸ್ಮ(ಬೂದಿ)ವನ್ನ��� ನದಿ ಮೊದಲಾದುವುಗಳಲ್ಲಿ ಹಾಕುವುದಿಲ್ಲ ಅಥವಾ ಆ ಶರೀರವನ್ನು ಎಲ್ಲಿಯೂ ತೆಗೆದುಕೊಂಡು ಹೋಗುವುದಿಲ್ಲ, ಈ ಕಷ್ಟದ ಮಾತೇ ಇರುವುದಿಲ್ಲ. ವಿದ್ಯುತ್ತಿಗೆ ಕೊಟ್ಟು ಸಮಾಪ್ತಿ ಮಾಡಿ ಬಿಡುವರು. ಇಲ್ಲಿ ಶರೀರದ ಹಿಂದೆ ಮನುಷ್ಯರು ಎಷ್ಟೊಂದು ಅಳುತ್ತಾರೆ, ನೆನಪು ಮಾಡುತ್ತಾರೆ, ಬ್ರಾಹ್ಮಣರಿಗೆ ತಿನ್ನಿಸುತ್ತಾರೆ, ಅಲ್ಲಿ ಇಂತಹ ಯಾವುದೇ ಮಾತುಗಳು ಇರುವುದಿಲ್ಲ. ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ, ಅಲ್ಲಿ ಏನೇನಿರಬಹುದು. ಸ್ವರ್ಗವೆಂದರೆ ಮತ್ತೇನು! ಇದು ನರಕ, ಅಸತ್ಯ ಖಂಡವಾಗಿದೆ ಆದ್ದರಿಂದಲೇ ಸುಳ್ಳು ಕಾಯ, ಸುಳ್ಳು ಮಾಯೆ ಎಂದು ಗಾಯನವಿದೆ. ಗೋಹತ್ಯೆಯನ್ನು ನಿಲ್ಲಿಸಿ ಎಂದು ಸರ್ಕಾರವೂ ಹೇಳುತ್ತದೆ. ಅವರಿಗೆ ಬರೆಯಬೇಕು - ಮೊದಲು ಒಬ್ಬರು ಇನ್ನೊಬ್ಬರ ಮೇಲೆ ಕಾಮದ ಕಟಾರಿಯನ್ನು ನಡೆಸುವ ಹತ್ಯೆಯನ್ನು ನಿಲ್ಲಿಸಿ, ಈ ಕಾಮವು ಮಹಾಶತ್ರುವಾಗಿದೆ. ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಅದನ್ನು ಜಯಿಸಿರಿ. ನೀವು ಪವಿತ್ರರಾದರೆ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಅಲ್ಲಿ ದೇವತೆಗಳಿಗೆ ಹೊಸ ರಕ್ತವಿರುತ್ತದೆ. ಮಕ್ಕಳದು ಹೊಸ ರಕ್ತವೆಂದು ಮನುಷ್ಯರು ಹೇಳುತ್ತಾರೆ ಆದರೆ ಹೊಸ ರಕ್ತವೆಲ್ಲಿಂದ ಬಂದಿತು! ಇಲ್ಲಿ ಹಳೆಯ ರಕ್ತವಾಗಿದೆ. ಸತ್ಯಯುಗದಲ್ಲಿ ಯಾವಾಗ ಹೊಸ ಶರೀರವು ಸಿಗುವುದೋ ಆಗ ಹೊಸ ರಕ್ತವಿರುವುದು. ಈ ಶರೀರವೂ ಹಳೆಯದಾಗಿದೆ ಆದ್ದರಿಂದ ರಕ್ತವೂ ಹಳೆಯದಾಗಿದೆ. ಈಗ ಇದನ್ನು ಬಿಡಬೇಕಾಗಿದೆ ಮತ್ತು ಪಾವನರಾಗಬೇಕಾಗಿದೆ. ತಂದೆಯ ವಿನಃ ಮತ್ತ್ಯಾರೂ ಪಾವನ ಮಾಡಲು ಸಾಧ್ಯವಿಲ್ಲ. ಎಲ್ಲರ ಧರ್ಮವು ಬೇರೆ-ಬೇರೆಯಾಗಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಧರ್ಮಶಾಸ್ತ್ರವನ್ನು ಓದಬೇಕಾಗಿದೆ. ಸಂಸ್ಕೃತದಲ್ಲಿ ಮುಖ್ಯವಾದುದು ಗೀತೆಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಸಂಸ್ಕೃತವನ್ನು ಕಲಿಸುತ್ತೇನೆಯೇ? ಈ ಬ್ರಹ್ಮನು ಯಾವ ಭಾಷೆಯನ್ನು ಅರಿತಿದ್ದಾರೆಯೋ ನಾನು ಅದರಲ್ಲಿಯೇ ತಿಳಿಸುತ್ತೇನೆ. ಒಂದುವೇಳೆ ನಾನು ಸಂಸ್ಕೃತದಲ್ಲಿ ತಿಳಿಸಿದರೆ ಈ ಮಕ್ಕಳು ಹೇಗೆ ತಿಳಿದುಕೊಳ್ಳುವರು! ಈ ಸಂಸ್ಕೃತವು ದೇವತೆಗಳ ಭಾಷೆಯೂ ಅಲ್ಲ, ಕೆಲಕೆಲವೊಮ್ಮೆ ಮಕ್ಕಳು ಬಂದು ಸತ್ಯಯುಗದ ಭಾಷೆಯನ್ನೇ ತಿಳಿಸುತ್ತಾರೆ. ಈ ಭಾಷೆಗಳನ್ನು ಕಲಿಯುವುದರಿಂದ ಶರೀರ ನಿರ್ವಹಣೆಗೆ ಕೆಲವರು ಲಕ್ಷಗಳನ್ನು, ಕೆಲವರು ಕೋಟಿಗಳನ್ನು ಸಂಪಾದಿಸುತ್ತಾರೆ, ಇಲ್ಲಿ ನೀವು ಎಷ್ಟೊಂದು ಸಂಪಾದನೆ ಮಾಡಿಕೊಳ್ಳುತ್ತೀರಿ. ಸತ್ಯಯುಗದಲ್ಲಿ ನಾವು ಮಹಾರಾಜ-ಮಹಾರಾಣಿಯಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಎಷ್ಟು ಓದುವರೋ ಅಷ್ಟು ಧನವಂತರಾಗುವರು. ಬಡವರು ಮತ್ತು ಸಾಹುಕಾರರಲ್ಲಿ ಅಂತರವಂತೂ ಇರುತ್ತದೆಯಲ್ಲವೆ. ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ, ಯಾರು ಸೇವಾಕೇಂದ್ರಕ್ಕೆ ಬರುತ್ತಾರೆಯೋ ಅವರಿಗೆ ತಿಳಿಸಬೇಕಾಗಿದೆ - ಒಂದುವೇಳೆ ಪವಿತ್ರರಾಗದಿದ್ದರೆ ಜ್ಞಾನವು ಬುದ್ಧಿಯಲ್ಲಿ ನಿಲ್ಲುವುದಿಲ್ಲ. 5-7 ದಿನಗಳಕಾಲ ಬಂದು ಮತ್ತೆ ಪತಿತರಾದರೆ ಜ್ಞಾನವು ಸಮಾಪ್ತಿ. ಯೋಗವನ್ನು ಕಲಿಯುತ್ತಾ-ಕಲಿಯುತ್ತಾ ಒಂದುವೇಳೆ ಪತಿತರಾದರೆ ಎಲ್ಲವೂ ಮಣ್ಣು ಪಾಲಾಗುವುದು. ಒಂದುವೇಳೆ ಯಾರಾದರೂ ಪವಿತ್ರವಾಗಿರುವುದಿಲ್ಲವೆಂದರೆ ಭಲೆ ಬರುವುದೇ ಬೇಡ, ಅವರ ಚಿಂತೆ ಮಾಡಬಾರದು. ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ತಲೆಯ ಮೇಲಿದೆ, ತಂದೆಯ ನೆನಪಿಲ್ಲದೆ ಅದು ಹೇಗೆ ಇಳಿಯುತ್ತದೆ! ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ, ತಂದೆಯು ಏನು ಹೇಳುವರೋ ಅದನ್ನು ಮಾಡಬೇಕಾಗಿದೆ. ಹೇ ಪತಿತ-ಪಾವನ ಬನ್ನಿ ನಾವು ಪತಿತರಾಗಿದ್ದೇವೆಂದು ಇಡೀ ಪ್ರಪಂಚವೇ ಕರೆಯುತ್ತದೆ ಆದರೆ ಯಾರೂ ಪಾವನರಾಗುವುದಿಲ್ಲ ಅಂದಮೇಲೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಅವರಂತು ಬ್ರಹ್ಮತತ್ವವನ್ನೇ ಪರಮಾತ್ಮನೆಂದು ತಿಳಿದು ನೆನಪು ಮಾಡುತ್ತಾರೆ. ಪರಮಾತ್ಮನೆಂದರೆ ಯಾರು ಎಂಬ ಜ್ಞಾನವು ಯಾರಲ್ಲಿಯೂ ಇಲ್ಲ. ಬ್ರಹ್ಮತತ್ವವು ಪರಮಾತ್ಮನಲ್ಲ ಅಥವಾ ಬ್ರಹ್ಮತತ್ವದಲ್ಲಿ ಯಾರೂ ಲೀನವಾಗಲು ಸಾಧ್ಯವಿಲ್ಲ. ಮತ್ತೆ ಪುನರ್ಜನ್ಮದಲ್ಲಿ ಎಲ್ಲರೂ ಬರಲೇಬೇಕಾಗಿದೆ ಏಕೆಂದರೆ ಆತ್ಮ ಅವಿನಾಶಿಯಾಗಿದೆ. ಬುದ್ಧನು ಹಿಂತಿರುಗಿ ಹೊರಟು ಹೋದನೆಂದು ಅವರು ತಿಳಿದುಕೊಳ್ಳುತ್ತಾರೆ ಆದರೆ ಬುದ್ಧನು ಯಾವ ಧರ್ಮದ ಸ್ಥಾಪನೆ ಮಾಡಿದನೋ ಅವಶ್ಯವಾಗಿ ಅದರ ಪಾಲನೆಯನ್ನೂ ಮಾಡುತ್ತಾನೆ. ಇಲ್ಲದಿದ್ದರೆ ಪಾಲನೆಯನ್ನು ಯಾರು ಮಾಡುವರು? ಅವರು ಹಿಂತಿರುಗಿ ಹೋಗಲು ಹೇಗೆ ಸಾಧ್ಯ! ನಾವು ಹೋಗಿ ಮುಕ್ತಿಯಲ್ಲಿ ಕುಳಿತು ಬಿಡುತ್ತೇವೆಂದು ನೀವು ಹೇಳುತ್ತೀರಾ? ನೀವು ತಿಳಿದುಕೊಂಡಿದ್ದೀರಿ - ನಾವು ನಮ್ಮ ಧರ್ಮ ಸ್ಥಾಪನೆ ಮಾಡುತ್ತಿದ್ದೇವೆ, ಮತ್ತೆ ನೀವೇ ಪಾಲನೆಯನ್ನೂ ಮಾಡುತ್ತೀರಿ. ಅದು ಪಾವನ ಧರ್ಮವಾಗಿತ್ತು, ಈಗ ಪತಿತರಾಗಿ ಬಿಟ್ಟಿದ್ದೀರಿ. ಯಾರು ಈ ಧರ್ಮದವರಾಗಿರುವರೋ ಅವರೇ ಬರುತ್ತಾರೆ. ಈಗ ಸಸಿಯ ನಾಟಿಯಾಗುತ್ತಿದೆ, ಈ ದೇವಿ-ದೇವತಾ ಧರ್ಮವು ಎಲ್ಲದಕ್ಕಿಂತ ಮಧುರ ವೃಕ್ಷವಾಗಿದೆ, ಇದರ ಸ್ಥಾಪನಾ ಕಾರ್ಯವು ನಡೆಯುತ್ತಿದೆ. ಶಾಸ್ತ್ರ ಇತ್ಯಾದಿ ಏನೆಲ್ಲವನ್ನೂ ರಚಿಸಿದ್ದಾರೆಯೋ ಎಲ್ಲವೂ ಭಕ್ತಿಮಾರ್ಗಕ್ಕಾಗಿ. ಒಬ್ಬ ತಂದೆಯದೇ ಗಾಯನವಿದೆ, ಅವರು ಬಂದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ ಅಂದಮೇಲೆ ಈ ರೀತಿ ಮಾಡುವಂತಹ ತಂದೆಯನ್ನು ಎಷ್ಟು ಚೆನ್ನಾಗಿ ನೆನಪು ಮಾಡಬೇಕು! ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಡ್ರಾಮಾನುಸಾರ ಭಕ್ತಿಮಾರ್ಗವೂ ಸಹ ನಡೆಯಬೇಕು. ವಾಸ್ತವದಲ್ಲಿ ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ ಅಂದಮೇಲೆ ಪೂಜೆಯು ಅವರೊಬ್ಬರಿಗೇ ಮಾಡಬೇಕಾಗಿದೆ. ದೇವಿ-ದೇವತೆಗಳು ಸತೋಪ್ರಧಾನರಿದ್ದವರು 84 ಜನ್ಮಗಳನ್ನು ತೆಗೆದುಕೊಂಡು ತಮೋಪ್ರಧಾನರಾಗಿದ್ದಾರೆ. ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ. ತಂದೆಯ ನೆನಪಿನ ವಿನಃ ಸತೋಪ್ರಧಾನರಾಗಲು ಸಾಧ್ಯವಿಲ್ಲ. ತಂದೆಯ ವಿನಃ ಮತ್ತ್ಯಾರಲ್ಲಿಯೂ ಆ ರೀತಿ ಮಾಡುವ ಶಕ್ತಿಯಿಲ್ಲ ಅಂದಮೇಲೆ ನೆನಪು ಅವರೊಬ್ಬರನ್ನೇ ಮಾಡಬೇಕಾ��ಿದೆ. ಇದು ಅವ್ಯಭಿಚಾರಿ ನೆನಪಾಗಿದೆ. ಅನೇಕರನ್ನು ನೆನಪು ಮಾಡುವುದು ವ್ಯಭಿಚಾರಿ ನೆನಪಾಗಿದೆ. ಎಲ್ಲಾ ಆತ್ಮರಿಗೆ ಗೊತ್ತಿದೆ - ಶಿವನು ನಮ್ಮ ತಂದೆಯಾಗಿದ್ದಾರೆ ಆದ್ದರಿಂದಲೇ ಎಲ್ಲಾ ಕಡೆ ಶಿವನನ್ನು ಪೂಜಿಸುತ್ತಾರೆ. ದೇವಿ-ದೇವತೆಗಳ ಮುಂದೆ ಶಿವನನ್ನು ಇಟ್ಟಿರುತ್ತಾರೆ. ವಾಸ್ತವದಲ್ಲಿ ದೇವತೆಗಳಂತೂ ಪೂಜೆ ಮಾಡುವುದಿಲ್ಲ, ಗಾಯನವಿದೆ - ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಮಾಡುವುದಿಲ್ಲ ಅಂದಮೇಲೆ ದೇವತೆಗಳು ಹೇಗೆ ಪೂಜೆ ಮಾಡುತ್ತಾರೆ, ಅದು ತಪ್ಪಾಗಿದೆ. ಸುಳ್ಳು ಮಹಿಮೆಯನ್ನು ತೋರಿಸುವುದೇ? ಶಿವ ತಂದೆಯನ್ನು ನೆನಪು ಮಾಡಲು ಅವರನ್ನು ಎಲ್ಲಿ ಅರಿತುಕೊಂಡಿದ್ದಾರೆ? ಅಂದಮೇಲೆ ಆ ಚಿತ್ರವನ್ನು ತೆಗೆದುಹಾಕಬೇಕು. ಬಾಕಿ ಸಿಂಗಲ್ ಕಿರೀಟಧಾರಿಗಳು ಪೂಜೆ ಮಾಡುವುದನ್ನು ತೋರಿಸಬೇಕು. ಸಾಧು-ಸಂತ ಯಾರಿಗೂ ಸಹ ಪ್ರಕಾಶತೆಯ ಕಿರೀಟವಿಲ್ಲ ಆದ್ದರಿಂದ ಬ್ರಾಹ್ಮಣರಿಗೂ ಸಹ ಪ್ರಕಾಶತೆಯ ಕಿರೀಟವನ್ನು ತೋರಿಸಲು ಸಾಧ್ಯವಿಲ್ಲ. ಯಾರಿಗೆ ಜ್ಞಾನದಲ್ಲಿ ಪೂರ್ಣ ಗಮನ ಹರಿಯುವುದೋ ಅವರು ತಿದ್ದುಪಡಿ ಮಾಡುತ್ತಾ ಇರುತ್ತಾರೆ. ಇನ್ನೂ ಯಾರೂ ಪರಿಪೂರ್ಣರಾಗಿಲ್ಲ. ತಪ್ಪುಗಳಾಗುತ್ತಲೇ ಇರುತ್ತವೆ. ತ್ರಿಮೂರ್ತಿಯ ಚಿತ್ರವು ಎಷ್ಟು ಚೆನ್ನಾಗಿದೆ! ಇವರು ತಂದೆ, ಇವರು ದಾದಾ ಆಗಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ನೆನಪು ಮಾಡಿದರೆ ಈ ರೀತಿಯಾಗುತ್ತೀರಿ, ದೇಹೀ-ಅಭಿಮಾನಿಗಳಾಗಬೇಕಾಗಿದೆ. ಆತ್ಮವು ಹೇಳುತ್ತದೆ - ಒಬ್ಬ ತಂದೆಯ ವಿನಃ ನನಗೆ ಮತ್ತ್ಯಾರಲ್ಲಿಯೂ ಮಮತೆಯಿಲ್ಲ. ನಾವು ಇಲ್ಲಿದ್ದರೂ ಸಹ ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡುತ್ತೇವೆ. ಈಗ ದುಃಖಧಾಮವನ್ನು ಬಿಡಬೇಕಾಗಿದೆ ಆದರೆ ನಮ್ಮ ಹೊಸ ಮನೆಯು ತಯಾರಾಗುವವರೆಗೆ ಹಳೆಯ ಮನೆಯಲ್ಲಿಯೇ ಇರಬೇಕಾಗಿದೆ. ಹೊಸ ಮನೆಗೆ ಹೋಗಲು ಯೋಗ್ಯರಾಗಬೇಕಾಗಿದೆ. ಆತ್ಮವು ಪವಿತ್ರವಾಗಿ ಬಿಟ್ಟರೆ ಮತ್ತೆ ಮನೆಗೆ ಹೊರಟು ಹೋಗುವುದು. ಎಷ್ಟು ಸಹಜವಾಗಿದೆ! ಮೂಲ ಮಾತು ಇದನ್ನೇ ತಿಳಿದುಕೊಳ್ಳಬೇಕಾಗಿದೆ - ಪರಮಾತ್ಮ ಯಾರು ಮತ್ತು ಈ ದಾದಾ ಯಾರು? ತಂದೆಯು ಇವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ನೀವು ಸತ್ಯಯುಗದಲ್ಲಿ ಪಾವನ ದೇವತೆಗಳಾಗಿ ಬಿಡುತ್ತೀರಿ. ಉಳಿದೆಲ್ಲರೂ ಆ ಸಮಯದಲ್ಲಿ ಮುಕ್ತಿಧಾಮದಲ್ಲಿರುತ್ತಾರೆ. ಎಲ್ಲಾ ಆತ್ಮರನ್ನೂ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುವವರು ತಂದೆಯೇ ಆಗಿದ್ದಾರೆ. ಎಷ್ಟು ಸಹಜವಾಗಿದೆ! ಮಕ್ಕಳಿಗೆ ಬಹಳ ಖುಷಿಯಿರಬೇಕು. ಹೃದಯವು ಬಹಳ ಸ್ವಚ್ಛವಾಗಿರಬೇಕು. ಮನಸ್ಸು ಸ್ವಚ್ಛವಾಗಿದ್ದಲ್ಲಿ ಎಲ್ಲಾ ಬಯಕೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಮನಸ್ಸು ಆತ್ಮದಲ್ಲಿದೆ, ಸತ್ಯ ಹೃದಯರಾಮನು ಆತ್ಮರ ತಂದೆಯಾಗಿದ್ದಾರೆ, ಹೃದಯವನ್ನು ಗೆಲ್ಲುವವರೆಂದು ಹೃದಯರಾಮ ತಂದೆಗೆ ಹೇಳಲಾಗುತ್ತದೆ. ಅವರು ಬರುವುದೇ ಎಲ್ಲರ ಹೃದಯವನ್ನು ಗೆ��್ಲುವುದಕ್ಕಾಗಿ ಸಂಗಮದಲ್ಲಿ ಬಂದು ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಆತ್ಮರ ಹೃದಯವನ್ನು ಗೆಲ್ಲುವವರು ಪರಮಾತ್ಮನಾಗಿದ್ದಾರೆ, ಮನುಷ್ಯರ ಹೃದಯವನ್ನು ಗೆಲ್ಲುವವರು ಮನುಷ್ಯರಾಗಿದ್ದಾರೆ. ರಾವಣ ರಾಜ್ಯದಲ್ಲಿ ಎಲ್ಲರೂ ಒಬ್ಬರು ಇನ್ನೊಬ್ಬರ ಹೃದಯವನ್ನು ಕೆಡಿಸುವವರಾಗಿದ್ದಾರೆ.
|
3 |
+
ನೀವು ಮಕ್ಕಳಿಗೆ ಕಲ್ಪದ ಮೊದಲೂ ಸಹ ಈ ತ್ರಿಮೂರ್ತಿಯ ಚಿತ್ರದಲ್ಲಿ ತಿಳಿಸಿದ್ದಾರೆ ಆದ್ದರಿಂದಲೇ ಈಗಲೂ ಸಹ ಇದು ಇದೆಯಲ್ಲವೆ. ಅಂದಮೇಲೆ ಅವಶ್ಯವಾಗಿ ತಿಳಿಸಬೇಕಾಗುವುದು. ಈಗ ತಿಳಿಸುವುದಕ್ಕಾಗಿ ಎಷ್ಟೊಂದು ಚಿತ್ರಗಳು ಬಿಡುಗಡೆಯಾಗಿದೆ. ಏಣಿ ಚಿತ್ರವು ಎಷ್ಟು ಚೆನ್ನಾಗಿದೆ! ಆದರೂ ಸಹ ತಿಳಿದುಕೊಳ್ಳುವುದಿಲ್ಲ. ಅರೆ! ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈಗ ಇದು ಅಂತಿಮ ಜನ್ಮವಾಗಿದೆ. ನಾವಂತೂ ಶುಭವನ್ನು ನುಡಿಯುತ್ತೇವೆ ಅಂದಮೇಲೆ ನಾವು 84 ಜನ್ಮಗಳನ್ನು ತೆಗೆದುಕೊಂಡಿಲ್ಲವೆಂದು ನೀವೇಕೆ ಹೇಳುತ್ತೀರಿ! ಅಂದಮೇಲೆ ನೀವು ಸ್ವರ್ಗದಲ್ಲಿ ಬರುವುದಿಲ್ಲ, ಮತ್ತೆ ನರಕದಲ್ಲಿಯೇ ಬರುತ್ತೀರಿ. ಸ್ವರ್ಗದಲ್ಲಿ ಬರಲು ಬಯಸುತ್ತಿಲ್ಲ. ಭಾರತವೇ ಸ್ವರ್ಗವಾಗಬೇಕಾಗಿದೆ. ಇದಂತೂ ತಿಳಿದುಕೊಳ್ಳುವ ಲೆಕ್ಕವಾಗಿದೆ. ಮಹಾರಥಿಗಳು ಬಹಳ ಚೆನ್ನಾಗಿ ತಿಳಿಸುತ್ತಾರೆ. ನಾವು ಹೋಗಿ ಯಾರಿಗಾದರೂ ದಾನ ಮಾಡಬೇಕು ಎಂದು ಸರ್ವೀಸ್ ಮಾಡುವ ಉಲ್ಲಾಸವಿರಬೇಕು. ಧನವೇ ಇಲ್ಲದಿದ್ದರೆ ದಾನ ಮಾಡುವ ವಿಚಾರವೂ ಬರುವುದಿಲ್ಲ. ಮೊದಲು ಕೇಳಬೇಕು - ಯಾವ ಆಸೆಯನ್ನು ಇಟ್ಟುಕೊಂಡು ಬಂದಿದ್ದೀರಿ? ಇಲ್ಲಿ ದರ್ಶನದ ಮಾತಿಲ್ಲ. ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖ ಪಡೆಯಬೇಕಾಗಿದೆ. ಇಬ್ಬರು ತಂದೆಯರಿದ್ದಾರಲ್ಲವೆ. ಬೇಹದ್ದಿನ ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ, ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಹೇಗೆ ಸಿಗುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಿ. ಇದನ್ನೂ ಸಹ ತಿಳಿದುಕೊಳ್ಳುವವರೇ ತಿಳಿದುಕೊಳ್ಳುತ್ತಾರೆ. ರಾಜ್ಯಭಾಗ್ಯವನ್ನು ಪಡೆಯುವವರಿದ್ದರೆ ಕೂಡಲೇ ತಿಳಿದುಕೊಳ್ಳುವರು. ಇದನ್ನಂತೂ ತಂದೆಯು ತಿಳಿಸುತ್ತಾರೆ - ಮನೆಯಲ್ಲಿ ಕುಳಿತುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಲೂ ಕೇವಲ ತಂದೆಯ ನೆನಪು ಮಾಡಿರಿ, ನೆನಪು ಮಾಡುವುದರಿಂದಲೇ ಪಾಪಗಳು ಕಳೆಯುತ್ತಾ ಹೋಗುತ್ತವೆ. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ಎಂದೂ ಒಬ್ಬರು ಇನ್ನೊಬ್ಬರ ಮನಸ್ಸನ್ನು ಕೆಡಿಸಬಾರದು. ಸರ್ವೀಸ್ ಮಾಡುವ ಉಲ್ಲಾಸವನ್ನು ಇಟ್ಟುಕೊಳ್ಳಬೇಕು. ಜ್ಞಾನ ಧನವಿದ್ದರೆ ಅವಶ್ಯವಾಗಿ ದಾನ ಮಾಡಬೇಕು.
|
7 |
+
2. ಹೊಸ ಮನೆಯಲ್ಲಿ ಹೋಗುವುದಕ್ಕಾಗಿ ಸ್ವಯಂನ್ನು ಯೋಗ್ಯನನ್ನಾಗಿ ಮಾಡಿಕೊಳ್ಳಬೇಕಾಗಿದೆ. ಆತ್ಮವನ್ನು ನೆನಪಿನ ಬಲದಿಂದ ಪಾವನ ಮಾಡಿಕೊಳ್ಳಬೇಕಾಗಿದೆ.
|
BKMurli/BKMurli/page_1017.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಈ ಗೀತೆಯನ್ನು ಯಾರು ಕೇಳುತ್ತಾರೆ? ಮಕ್ಕಳೇ ಕೇಳುತ್ತಾರೆ, ಅವರೇ ಅರ್ಥವನ್ನು ತಿಳಿದುಕೊಳ್ಳುತ್ತಾರೆ. ಪ್ರಜೆಗಳೂ ಸಹ ಯಾರು ಕೇಳುವರೋ ಅವರೂ ವಿಶ್ವದ ಮಾಲೀಕರಾಗುತ್ತಾರೆ. ಹೇಗೆ ಭಾರತವಾಸಿಗಳೆಲ್ಲರೂ ನಮ್ಮ ಭಾರತ ಎಂದು ಹೇಳುತ್ತಾರೆ, ಹಾಗೆಯೇ ಸತ್ಯಯುಗದಲ್ಲಿಯೂ ಸಹ ಯಥಾರಾಜ-ರಾಣಿ ತಥಾ ಪ್ರಜಾ ಇರುತ್ತಾರೆ. ನಾವು ವಿಶ್ವದ ಮಾಲೀಕರೆಂದು ಎಲ್ಲರೂ ತಿಳಿದುಕೊಳ್ಳುತ್ತಾರೆ. ಹೇಗೆ ಯುರೋಪಿಯನ್ನರು ಬಂದರು, ಅವರೂ ಸಹ ನಾವು ಹಿಂದೂಸ್ತಾನದ ಮಾಲೀಕರೆಂದು ಹೇಳಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ನಾವು ಹಿಂದೂಸ್ತಾನಿಗಳು ಹಿಂದೂಸ್ತಾನದ ಮಾಲೀಕರೆಂದು ಹೇಳುತ್ತಿರಲಿಲ್ಲ. ಅವರ ಗುಲಾಮರಾಗಿದೆವು. ರಾಜ್ಯವೆಲ್ಲವೂ ಯುರೋಪಿಯನ್ನರ ಕೈಯಲ್ಲಿತ್ತು, ಮತ್ತೆ ನಮ್ಮ ರಾಜ್ಯಭಾಗ್ಯವನ್ನು ರಾವಣನು ಕಸಿದುಕೊಂಡನು. ಈಗ ನಮಗೆ ನಮ್ಮ ರಾಜ್ಯವು ಬೇಕು, ಇದು ಪರರಾಜ್ಯವಾಗಿದೆ. ದೂರದೇಶದಲ್ಲಿ ಇರುವವರು ಪರದೇಶದಲ್ಲಿ ಬಂದರೆಂದು ಗಾಯನವಿದೆ. ನೀವೀಗ ತಮ್ಮ ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ನೀವು ಹೊಡೆದಾಡುವುದಿಲ್ಲ, ಎಲ್ಲವನ್ನು ತಮಗಾಗಿಯೇ ಮಾಡುತ್ತೀರಿ. ಆ ಸೈನ್ಯವಂತೂ ತಮ್ಮ ರಾಷ್ಟ್ರಪತಿ ಅಥವಾ ಪ್ರಧಾನಮಂತ್ರಿಗಾಗಿ ಹೊಡೆದಾಡುತ್ತಾರೆ. ಗಣ್ಯ ವ್ಯಕ್ತಿಗಳಂತೂ ಅವರೇ ಆಗುತ್ತಾರಲ್ಲವೆ. ಅವರಿಗೇ ಬಹಳ ಒಳ್ಳೆಯ ನಶೆಯಿರುತ್ತದೆ. ಈಗಲೂ ಸಹ ನಮ್ಮ ಭಾರತವೆಂದು ಹೇಳುತ್ತಾರಲ್ಲವೆ ಆದರೆ ಇದೇನೂ ನಮ್ಮ ರಾಜ್ಯವಲ್ಲ, ರಾವಣನ ರಾಜ್ಯವಾಗಿದೆ. ಇದರಲ್ಲಿ ನಾವು ಜೀವಿಸುತ್ತಿದ್ದೇವೆಂದು ಭಾರತವಾಸಿಗಳಿಗೆ ಗೊತ್ತಿಲ್ಲ. ರಾಮರಾಜ್ಯದಲ್ಲಿರುವಾಗ ಇದು ಪರರಾಜ್ಯವೆಂದು ಹೇಳುವುದಿಲ್ಲ, ಈಗ ಭಾರತದಲ್ಲಿ ಸಂಪೂರ್ಣ ರಾವಣ ರಾಜ್ಯವಿದೆ. ರಾಮನ ರಾಜ್ಯವಿತ್ತು, ದೇವತೆಗಳ ರಾಜ್ಯವಿತ್ತು, ಈಗಿಲ್ಲ. ನೀವು ತಿಳಿದುಕೊಂಡಿದ್ದೀರಿ - 5000 ವರ್ಷಗಳ ನಂತರ ನಾವು ರಾಜ್ಯವನ್ನು ಪಡೆಯುತ್ತಿದ್ದೇವೆ. ಯಾರಿಂದ? ಪರಮಾತ್ಮ ತಂದೆಯಿಂದ. ರಾಮ ಎಂಬ ಶಬ್ಧವನ್ನು ಕೇಳಿ ಮನುಷ್ಯರು ತಬ್ಬಿಬ್ಬಾಗುತ್ತಾರೆ ಆದ್ದರಿಂದ ಬೇಹದ್ದಿನ ತಂದೆಯೆಂದು ಹೇಳುವುದು ಸರಿಯಿದೆ. ತಂದೆ ಶಬ್ಧವು ಬಹಳ ಮಧುರವಾಗಿದೆ. ತಂದೆಯೇ ಆಸ್ತಿಯನ್ನು ನೆನಪಿಗೆ ತರಿಸುತ್ತಾರೆ. ಒಬ್ಬ ತಂದೆಯ ವಿನಃ ಮತ್ತೆಲ್ಲವನ್ನೂ ಮರೆಯಬೇಕಾಗಿದೆ. ನಾವಾತ್ಮರು ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ, ತಂದೆಯು ಬಂದು ನಿಮ್ಮನ್ನು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ. ನಾವಾತ್ಮರಾಗಿದ್ದೇವೆ, ಆತ್ಮವು ಎಷ್ಟು ಸೂಕ್ಷ್ಮವಾಗಿದೆ ಅದರಲ್ಲಿ 84 ಜನ್ಮಗಳ ಪಾತ್ರವು ಅಡಕವಾಗಿದೆ, ಇದನ್ನು ಮಂಧ ಬುದ್ಧಿಯ ಮನುಷ್ಯರು ಅರಿತುಕೊಳ್ಳುವುದಿಲ್ಲ ಮತ್ತು ತಿಳಿಸುವುದೂ ಇಲ್ಲ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಇದು ಎಷ್ಟು ಸಹಜವಾಗಿದೆ! ಆದರೆ ಮಾಯೆಯು ಮರೆಸಿಬಿಡುತ್ತದೆ ಆದ್ದರಿಂದ ಮಕ್ಕಳು ಪರಿಶ್ರಮ ಪಡಬೇಕಾಗುತ್ತದೆ. ಇದರಲ್ಲಿ ಯಾವುದೇ ಆಯುಧಗಳು ಮದ್ದು ಗುಂಡುಗಳ ಮಾತಿಲ್ಲ. ಯಾವುದೇ ವ್ಯಾಯಾಮವನ್ನು ಕಲಿಯಬೇಕಾಗಿಲ್ಲ. ಶಾಸ್ತ್ರ ಇತ್ಯಾದಿಗಳನ್ನು ಓದುವಂತಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ನಾವು ನಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ, ಹೇಗೆ ನಾಟಕದಲ್ಲಿ ಪಾತ್ರಧಾರಿಯು ಪಾತ್ರವನ್ನಭಿನಯಿಸಿ ನಂತರ ತಮ್ಮ ವೇಷ ಭೂಷಣಗಳನ್ನು ಬದಲಾಯಿಸಿ ತಮ್ಮ ಮನೆಗೆ ಹೋಗುತ್ತಾರೆ ಹಾಗೆಯೇ ನಿಮ್ಮ ಬುದ್ಧಿಯಲ್ಲಿಯೂ ಇದೆ - ಈಗ ನಾಟಕವು ಮುಕ್ತಾಯವಾಗಲಿದೆ. ಈಗ ಅಶರೀರಿಯಾಗಿ ಮನೆಗೆ ಹೋಗಬೇಕಾಗಿದೆ. ನಾವು ಪ್ರತೀ 5000 ವರ್ಷಗಳ ನಂತರ ಪಾತ್ರವನ್ನಭಿನಯಿಸುತ್ತೇವೆ. ಅರ್ಧಕಲ್ಪ ರಾಜ್ಯಭಾರ ಮಾಡುತ್ತೇವೆ, ಅರ್ಧಕಲ್ಪ ಗುಲಾಮರಾಗಿ ಬಿಡುತ್ತೇವೆ. ಈಗ ಮಕ್ಕಳಿಗೆ ಹೆಚ್ಚು ಕಷ್ಟ ಕೊಡುವುದಿಲ್ಲ. ಕೇವಲ ಬುದ್ಧಿಯಲ್ಲಿ ನೆನಪಿರಬೇಕಾಗಿದೆ. ಪುರುಷಾರ್ಥ ಮಾಡಿ ಸಾಧ್ಯವಾದಷ್ಟು ಇದನ್ನು ಮರೆಯಬಾರದು. ಈಗ ನಾಟಕವು ಪೂರ್ಣವಾಗುತ್ತಿದೆ. ಇನ್ನು ಸ್ವಲ್ಪವೇ ಸಮಯವಿದೆ, ನಾವು ಹೋಗಬೇಕಾಗಿದೆ. ಹೀಗೆ ತಮ್ಮೊಂದಿಗೆ ಮಾತನಾಡಿಕೊಳ್ಳುತ್ತಾ-ಮಾತನಾಡಿಕೊಳ್ಳುತ್ತಾ ನೀವು ಪಾವನರಾಗಿ ಹಿಂತಿರುಗಿ ಹೋಗಿ ಬಿಡುತ್ತೀರಿ. ಪ್ರತಿಯೊಬ್ಬ ಮಗು ಇದನ್ನು ಅರಿತುಕೊಳ್ಳಬಹುದಾಗಿದೆ - ನಾನು ತಂದೆಯನ್ನು ಎಷ್ಟು ನೆನಪು ಮಾಡುತ್ತೇನೆ? ಯಾರಾದರೂ ಚಾರ್ಟ್ ರೆಯಲಿ, ಬರೆಯದಿರಲಿ ಆದರೆ ಬುದ್ಧಿಯಲ್ಲಂತೂ ಇರುತ್ತದೆಯಲ್ಲವೆ – ಇಡೀ ದಿನದಲ್ಲಿ ನಾನು ಏನೇನು ಮಾಡಿದೆನು? ಹೇಗೆ ವ್ಯಾಪಾರಿಗಳು ರಾತ್ರಿಯಲ್ಲಿ ತಮ್ಮ ಲಾಭ-ನಷ್ಟಗಳನ್ನು ನೋಡುತ್ತಾರೆ, ಇದೂ ಸಹ ವ್ಯಾಪಾರವಾಗಿದೆ. ರಾತ್ರಿ ಮಲಗುವ ಸಮಯದಲ್ಲಿ ಪರಿಶೀಲನೆ ಮಾಡಿಕೊಳ್ಳಿ – ಇಡೀ ದಿನದಲ್ಲಿ ತಂದೆಯನ್ನು ಎಷ್ಟು ನೆನಪು ಮಾಡಿದೆನು, ಎಷ್ಟು ಜನರಿಗೆ ತಂದೆಯ ಪರಿಚಯ ಕೊಟ್ಟೆನು? ಯಾರು ಬುದ್ಧಿವಂತರಾಗಿರುವರೋ ಅವರ ವ್ಯಾಪಾರವು ಚೆನ್ನಾಗಿ ನಡೆಯುತ್ತದೆ. ಮಂಧಬುದ್ಧಿಯವರಾಗಿದ್ದರೆ ವ್ಯಾಪಾರವೂ ಹಾಗೆಯೇ ನಡೆಯುತ್ತದೆ. ಇಲ್ಲಂತೂ ತಮ್ಮ ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ಕೇವಲ ತಂದೆಯು ತಿಳಿಸುವುದೇನೆಂದರೆ - ನನ್ನನ್ನು ನೆನಪು ಮಾಡಿ ಹಾಗೂ ಚಕ್ರವನ್ನು ನೆನಪು ಮಾಡಿದರೆ ನೀವು ಚಕ್ರವರ್ತಿ ರಾಜರಾಗುತ್ತೀರಿ. ಅತಿಯಾದ ಆಸೆಯೂ ಇರಬಾರದು, ಹಳ್ಳಿಗಳಲ್ಲಿ ಇರುವವರಿಗೆ ಆಸೆಗಳು ಕಡಿಮೆಯಿರುತ್ತದೆ, ಸಾಹುಕಾರರಿಗೆ ಬಹಳ ಇರುತ್ತದೆ. ಬಡವರು ತಮ್ಮ ಬಡತನದಲ್ಲಿಯೇ ಖುಷಿಯಾಗಿರುತ್ತಾರೆ. ಒಣ ರೊಟ್ಟಿಯನ್ನು ತಿನ್ನುವುದೇ ಅಭ್ಯಾಸವಾಗಿ ಬಿಟ್ಟಿರುತ್ತದೆ. ಸಾಹುಕಾರರಲ್ಲಿ ಬಹಳ ಇಚ್ಛೆಗಳಿರುತ್ತವೆ, ತಂದೆ-ತಾಯಿಗೂ ಸಹ ತೊಂದರೆ ಕೊಡುತ್ತಾರೆ. ಬ್ರಹ್ಮಾ ತಂದೆಯು ಅನುಭವಿಯಾಗಿದ್ದಾರೆ. ಬಡವರ ಮೇಲೆ ಅನುಕಂಪವೂ ಬರುತ್ತದೆ. ಬಡವರು ನೋಡುತ್ತಾರೆ- ಇಷ್ಟು ದೊಡ್ಡ ವ್ಯಕ್ತಿಯು ಜ್ಞಾನ ಕೇಳುತ್ತಾರೆಂದರೆ ನಾವೂ ಕೇಳೋಣ ಎಂದು ತಿಳಿಯು���್ತಾರೆ, ತಂದೆಯು ಬಹಳ ಚಿತ್ರಗಳನ್ನು ಮಾಡಿಸಿದ್ದಾರೆ. ಸರ್ವೀಸ್ ಮಾಡುತ್ತೇವೆಂದು ಕೆಲವರು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮೊದಲು ನೀವು ಬುದ್ಧಿವಂತರಾಗಿ ನಂತರ ಸರ್ವೀಸ್ ಮಾಡಿರಿ ಏಕೆಂದರೆ ಇತ್ತೀಚೆಗೆ ಭಕ್ತಿಯ ಪ್ರಭಾವ ಹೆಚ್ಚಾಗಿದೆ. ಒಂದು ಕಡೆ ತಿಳಿಸಿದರೆ ಇನ್ನೊಂದು ಕಡೆ ಗುರುಗಳ ಉಪದೇಶ ನಡೆಯುತ್ತದೆ. ಅವರು ಭಯ ಪಡಿಸುತ್ತಾರೆ - ಒಂದುವೇಳೆ ನೀವು ಭಕ್ತಿ ಮಾಡದಿದ್ದರೆ ನಿಮಗೆ ಫಲ ಹೇಗೆ ಸಿಗುವುದು! ಭಕ್ತಿಯಿಂದ ಭಗವಂತ ಸಿಗುತ್ತಾರೆ. ಎಲ್ಲಿಯವರೆಗೆ ಈ ಜ್ಞಾನದಲ್ಲಿ ಪಕ್ಕಾ ಆಗುವುದಿಲ್ಲವೋ, ನಮಗೆ ಭಗವಂತ ಸಿಕ್ಕಿದ್ದಾರೆ ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆಯೆಂದು ಅವರು ನಮಗೆ ತಿಳಿಸುತ್ತಿದ್ದಾರೆಂದು ಪೂರ್ಣ ನಿಶ್ಚಯವಾಗುವುದಿಲ್ಲವೊ ಅಲ್ಲಿಯವರೆಗೆ ಯಾವುದೇ ವಿರೋಧವನ್ನು ಎದುರಿಸಲು ಸಾಧ್ಯವಿಲ್ಲ. ನಿಮ್ಮೊಂದಿಗೆ ವಿರೋಧವಿದೆ, ನೀವು ಒಂದು ಮಾತನ್ನು ಹೇಳುತ್ತೀರೆಂದರೆ ಅವರು ಇನ್ನೊಂದು ಮಾತನ್ನು ಹೇಳುತ್ತಾರೆ. ಪ್ರಪಂಚದಲ್ಲಿ ಅನೇಕ ಮಠ ಪಂಥಗಳಿವೆ, ಅಲ್ಲಿ ಮನುಷ್ಯರು ಹೋಗಿ ಒಂದಲ್ಲ ಒಂದು ಕೇಳಿಕೊಂಡು ಬರುತ್ತಾರೆ. ಭಗವದ್ಗೀತೆಗೂ ಭಿನ್ನ-ಭಿನ್ನ ಅರ್ಥಗಳನ್ನು ತಿಳಿಸುತ್ತಾರೆ ಆದ್ದರಿಂದ ಮನುಷ್ಯರು ಸಿಕ್ಕಿಕೊಳ್ಳುತ್ತಾರೆ. ಸನ್ಯಾಸಿಗಳು ಎಂದೂ ಸಹ ಗೃಹಸ್ಥಿಗಳಿಗೆ ವಿಕಾರದಲ್ಲಿ ಹೋಗಬೇಡಿ ಎಂದು ಹೇಳುವುದಿಲ್ಲ. ಒಂದುವೇಳೆ ಅವರು ನಿರ್ವಿಕಾರಿಗಳಾಗಿರಿ ಎಂದು ಹೇಳಿದರೂ ಸಹ ಏನಾಗುವುದು? ಗುರಿ-ಧ್ಯೇಯ ಯಾವುದೂ ಇಲ್ಲ. ಪ್ರಪಂಚದಲ್ಲಿ ಉಲ್ಟಾ ಮಾರ್ಗಗಳನ್ನು ತಿಳಿಸುವವರು ಅನೇಕರಿದ್ದಾರೆ. ಸತ್ಯ ಮಾರ್ಗವನ್ನು ತಿಳಿಸುವವರು ಕೆಲವರೇ ಇದ್ದಾರೆ. ಅವರಮೇಲೂ ಸಹ ಮಾಯೆಯ ಪ್ರಭಾವ ಬೀರುತ್ತಾ ಇರುತ್ತದೆ. ಪವಿತ್ರರಾಗಬೇಕೆಂದು ಮನಸ್ಸು ಹೇಳುತ್ತದೆ ಆದರೆ ಮಾಯೆಯು ಬುದ್ಧಿಯನ್ನು ತಿರುಗಿಸುತ್ತದೆ. ಬಹಳ ಕೆಟ್ಟ ವಿಚಾರಗಳನ್ನು ತರುತ್ತಾ ಇರುತ್ತದೆ. ಮಾಯೆಯ ಯುದ್ಧವು ಬಹಳ ಇದೆ. ನಡೆಯುತ್ತಾ-ನಡೆಯುತ್ತಾ ಬಹಳ ಬಿರುಗಾಳಿಗಳು ಬರುತ್ತವೆ. ಒಂದುವೇಳೆ ಯಾವುದೇ ವಿಕಾರದ ಭೂತವು ಒಳಗಡೆ ಇದ್ದರೆ ಅದು ಮನಸ್ಸನ್ನು ತಿನ್ನುತ್ತಾ ಇರುವುದು. ಕ್ರೋಧದ ದಾನ ಕೊಡಿ ಎಂದು ಅನ್ಯರಿಗೆ ಹೇಳಿ, ತಾನು ಕ್ರೋಧ ಮಾಡುತ್ತಿದ್ದರೆ ಅವರು ನೇರವಾಗಿ ಹೇಳಿಬಿಡುತ್ತಾರೆ- ನೀವೇ ಕ್ರೋಧ ಮಾಡಿಕೊಳ್ಳುತ್ತೀರಿ ಮತ್ತೆ ನಮಗೆ ಹೇಗೆ ಹೇಳುತ್ತೀರಿ? ಆದ್ದರಿಂದ ಕ್ರೋಧವನ್ನು ಬಿಡಲೇಬೇಕಾಗುವುದು. ಕ್ರೋಧವನ್ನು ಮುಚ್ಚಿಟ್ಟು ಕಾರ್ಯ ಮಾಡಲಾಗುವುದಿಲ್ಲ. ಕ್ರೋಧದಲ್ಲಿ ಬಹಳ ಶಬ್ಧವಿರುತ್ತದೆ, ಪರಸ್ಪರ ಹೊಡೆದಾಡುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಗ್ಲಾನಿ ಮಾಡುತ್ತಾರೆ. ತಂದೆಯೂ ನೋಡುತ್ತಾರೆ - ಕ್ರೋಧದ ಭೂತವು ಬಿಟ್ಟು ಹೋಗುವುದೇ ಇಲ್ಲ. ಕೆಲಕೆಲವರು ಇಲ್ಲಿ ತಂದೆಯ ಸನ್ಮುಖದಲ್ಲಿದ್ದರೂ ಸಹ ಕ್ರೋಧ ಮಾಡುತ್ತಾರೆ. ಅನೇಕರಲ್ಲಿ ಕ್ರೋಧದ ಭೂತವು ಬಂದು ಬಿಡುತ್ತದೆ. ಇದು ಬಹಳ ಕೆಟ್���ದ್ದಾಗಿದೆ. ತೊಂದರೆ ಕೊಡುತ್ತಾರೆ. ತಂದೆಯು ಮತ್ತೆ ಪ್ರೀತಿಯಿಂದ ತಿಳಿಸುತ್ತಾರೆ- ಒಂದುವೇಳೆ ಹೆಸರನ್ನು ಕೆಡಿಸುತ್ತೀರೆಂದರೆ ಮತ್ತೆ ಪದವಿ ಭ್ರಷ್ಟರಾಗುತ್ತಾರೆ. ನೀವು ಪಂಚ ವಿಕಾರಗಳನ್ನು ತಂದೆಗೆ ದಾನವಾಗಿ ಕೊಟ್ಟಿದ್ದೀರಿ ಅಂದಮೇಲೆ ಮತ್ತೇಕೆ ಹಿಂತೆಗೆದುಕೊಳ್ಳುತ್ತೀರಿ ಎಂಬುದನ್ನಂತೂ ತಿಳಿಸಬೇಕು. ಒಂದುವೇಳೆ ಮತ್ತೆ ಕ್ರೋಧ ಮಾಡಿಕೊಂಡರೆ ಗ್ರಹಣವು ಬಿಟ್ಟು ಹೋಗುವುದಿಲ್ಲ, ಅದು ವೃದ್ಧಿಯಾಗುತ್ತಿರುತ್ತದೆ. ತಂದೆಯ ಆಶೀರ್ವಾದದ ಬದಲು ಶಾಪವು ಸಿಗುತ್ತದೆ ಏಕೆಂದರೆ ತಂದೆಯ ಜೊತೆ ಧರ್ಮರಾಜನೂ ಇದ್ದಾರೆ, ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಕ್ರೋಧ ಮಾಡುವುದೂ ಸಹ ಪಾಪವಾಗಿದೆ, ಯಾರಲ್ಲಿ ಪಂಚ ವಿಕಾರಗಳಿದೆಯೋ ಅವರಿಗೆ ಪಾಪಾತ್ಮರೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಎಲ್ಲರೂ ಪುಣ್ಯಾತ್ಮರಿರುತ್ತಾರೆ, ಅಲ್ಲಿ ಯಾವುದೇ ಪಾಪ ಮಾಡುವುದಿಲ್ಲ. ಈಗ ಜನ್ಮ-ಜನ್ಮಾಂತರದ ಬಹಳಷ್ಟು ಹೊರೆಯು ತಲೆಯ ಮೇಲಿದೆ. ಮೊದಲು ಅದನ್ನು ಯೋಗಬಲದಿಂದ ಕಳೆಯಬೇಕಾಗಿದೆ. ಮಾಯೆಯು ಬಹಳ ಕೆಟ್ಟದ್ದಾಗಿದೆ, ಲೋಭವು ಅನೇಕರಲ್ಲಿದೆ. ಬಟ್ಟೆ, ಚಪ್ಪಲಿ, ಬಿಡುಗಾಸಿನ ಲೋಭವಿದೆ, ಇದಕ್ಕಾಗಿ ಸುಳ್ಳು ಹೇಳುತ್ತಿರುತ್ತಾರೆ - ಇದೆಲ್ಲವೂ ಲೋಭದ ಚಿಹ್ನೆಗಳಾಗಿದೆ. ಇಲ್ಲಂತೂ ಎಲ್ಲವೂ ಸಿಗುತ್ತವೆ. ಹೊರಗಡೆ ಮನೆ-ಮನೆಯಲ್ಲಿ ಬಹಳ ಕಿರಿಕಿರಿಯಿರುತ್ತದೆ, ಸಂಗವು ಬಹಳ ಕೆಟ್ಟದ್ದಾಗಿದೆ. ಪತಿಯು ಬ್ರಾಹ್ಮಣನಾಗಿದ್ದರೂ, ಸ್ತ್ರೀ ಶೂದ್ರಳು. ಒಂದುವೇಳೆ ಸ್ತ್ರೀ ಬ್ರಾಹ್ಮಣಿಯಾಗಿದ್ದರೆ ಪತಿಯು ಶೂದ್ರನಾಗಿರುತ್ತಾನೆ. ಮನೆಯಲ್ಲಿಯೂ ಹಂಸ ಮತ್ತು ಕೊಕ್ಕರೆ, ಇದರಿಂದ ಬಹಳ ಕಿರಿಕಿರಿಯಾಗುತ್ತಿರುತ್ತದೆ. ತಮ್ಮನ್ನು ಶಾಂತವಾಗಿಟ್ಟುಕೊಳ್ಳುವ ಯುಕ್ತಿಯನ್ನು ಕಲಿಯಬೇಕಾಗುತ್ತದೆ. ಮನೆಮಠ ಬಿಡುವುದನ್ನು ತಂದೆಯು ಒಪ್ಪುವುದಿಲ್ಲ. ಇಂತಹ ಆಶ್ರಮಗಳು ಬಹಷ್ಟಿವೆ ಅಲ್ಲಿ ಮಕ್ಕಳ ಸಮೇತವಾಗಿ ಹೋಗಿ ಇರುತ್ತಾರೆ, ಮತ್ತೆ ಎಲ್ಲಾ ಜಾಗಗಳಲ್ಲಿಯೂ ಏರುಪೇರುಗಳು ಇದ್ದೇ ಇರುತ್ತದೆ, ಶಾಂತಿಯು ಎಲ್ಲಿಯೂ ಇಲ್ಲ. ಸತ್ಯ-ಸತ್ಯವಾದ ಶಾಂತಿ, ಸುಖ, ಪವಿತ್ರತೆಯು 21 ಜನ್ಮಗಳಿಗಾಗಿ ಈಗ ನೀವು ಮಕ್ಕಳಿಗೆ ಸಿಗುತ್ತಿದೆ. ಇಂತಹ ಮತವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ.
|
2 |
+
ತಂದೆಯು ತಿಳಿಸುತ್ತಾರೆ - ನಾನು ಸರ್ವೀಸ್ ಮಾಡಲು ಎಷ್ಟು ದೂರದ ದೇಶದಿಂದ ಬರುತ್ತೇನೆ. ನೀವೂ ಸಹ ಸರ್ವೀಸ್ ಮಾಡಬೇಕಾಗಿದೆ. ಪ್ರದರ್ಶನಿ, ಮೇಳಗಳಲ್ಲಿ ಬಹಳಷ್ಟು ತಿಳಿದುಕೊಳ್ಳಲು ಸಾಧ್ಯವಿಲ್ಲ. ಭಲೆ ರಾಜ್ಯಪಾಲ ಮೊದಲಾದವರು ಉದ್ಘಾಟನೆ ಮಾಡುತ್ತಾರೆ ಆದರೆ ಇವರಿಗೆ ಪರಮಾತ್ಮನೇ ಬ್ರಹ್ಮಾರವರ ಮೂಲಕ ಓದಿಸುತ್ತಾರೆ, ಇದರಿಂದ ವಿಶ್ವದ ಆಸ್ತಿಯು ಸಿಗುತ್ತದೆಯೆಂಬುದು ಅವರ ಬುದ್ಧಿಯಲ್ಲಿ ಬರುತ್ತದೆಯೇ? ಇದು ಬಹಳ ಚೆನ್ನಾಗಿದೆ, ಮಾತೆಯರು ಒಳ್ಳೆಯ ಕರ್ತವ್ಯ ಮಾಡುತ್ತಿದ್ದಾರೆ. ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಿದ್ದಾರೆ ಎಂದಷ್ಟೇ ಹೇಳುತ್ತಾರೆ. ಭಲೆ ಇದನ್ನೂ ಬರೆಯುತ್ತಾರೆ- ಗೀತೆಯನ್ನು ಭಗವಂತನೇ ಹೇಳಿದ್ದಾರೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಬರೆದರೂ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ತಿಳಿದುಕೊಳ್ಳುವ ಪುರುಷಾರ್ಥವೂ ನಡೆಯುವುದಿಲ್ಲ. ನಿಮ್ಮ ಬುದ್ಧಿಯಲ್ಲಿದೆ – ಶಿವ ತಂದೆಯು ಬ್ರಹ್ಮನ ಮೂಲಕ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಈ ಲಕ್ಷ್ಮೀ-ನಾರಾಯಣರಾಗುತ್ತೀರಿ. ಈ ಸಂದೇಶವನ್ನು ಎಲ್ಲರಿಗೆ ತಿಳಿಸಬೇಕಾಗಿದೆ. ನೀವು ಪೈಗಂಬರನ ಮಕ್ಕಳಾಗಿದ್ದೀರಿ. ಅನ್ಯ ಯಾರೆಲ್ಲರೂ ಬರುತ್ತಾರೆಯೋ ಅವರು ಧರ್ಮ ಸ್ಥಾಪಕರಾಗಿದ್ದಾರೆ. ನೀವು ಎಲ್ಲರಿಗೆ ಈ ಸಂದೇಶವನ್ನು ತಿಳಿಸಿರಿ - ತಂದೆಯು ಸ್ವರ್ಗ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಒಂದುವೇಳೆ ನೀವು ನನ್ನನ್ನು ನೆನಪು ಮಾಡುತ್ತೀರಿ ಮತ್ತು ಪವಿತ್ರರಾಗುತ್ತೀರೆಂದರೆ ನೀವೂ ಸಹ ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ, ಪದೇ-ಪದೇ ಈ ವಿಚಾರಗಳೂ ನಡೆಯಬೇಕು. ಸ್ಥಿತಿಯು ಪರಿಪಕ್ವವಿಲ್ಲದಿರುವ ಕಾರಣ ಉದ್ಯೋಗ-ವ್ಯವಹಾರಗಳಲ್ಲಿ ಹೋಗುತ್ತಿದ್ದಂತೆಯೇ ಎಲ್ಲವೂ ಮರೆತು ಹೋಗುತ್ತದೆ. ಆದರೆ ಯಾವ ಮಹಾವಾಕ್ಯಗಳನ್ನು ಕೇಳುತ್ತೀರಿ ಅದು ವ್ಯರ್ಥವಾಗುವುದಿಲ್ಲ. ಒಂದೊಂದು ರತ್ನವು ಕಡಿಮೆಯಲ್ಲ, ಒಂದು ರತ್ನವೂ ಸಹ ಸ್ವರ್ಗದ ಮಾಲೀಕರನ್ನಾಗಿ ಮಾಡಬಲ್ಲದು. ನಮ್ಮ ಭಾರತವು ಬಹಳ ಶ್ರೇಷ್ಠ ದೇಶವಾಗಿದೆ ಎಂದು ಹಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಮ್ಮ ಭಾರತ ಯಾವುದು ಸ್ವರ್ಗವಾಗಿತ್ತೋ ಅದೀಗ ನರಕವಾಗಿದೆ. ಈಗ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಪ್ರಜೆಗಳಂತೂ ಅನೇಕರು ತಯಾರಾಗುತ್ತಿರುತ್ತಾರೆ, ವೃದ್ಧಿಯಾಗುತ್ತಿರುತ್ತದೆ, ಸೇವಾಕೇಂದ್ರಗಳು ತೆರೆಯುತ್ತಲೇ ಇರುತ್ತವೆ. ತಂದೆಯೂ ಸಹ ತಿಳಿಸುತ್ತಾರೆ- ಹಳ್ಳಿಯಲ್ಲಿ ಹೋಗಿ ಸರ್ವೀಸ್ ಮಾಡಿರಿ. ಇಂತಹ ಅನೇಕ ಹಳ್ಳಿಗಳಿವೆ ಎಲ್ಲಿ ಎಲ್ಲರೂ ಸೇರಿ ತರಗತಿ ನಡೆಸುತ್ತಾರೆ ಮತ್ತೆ ತಂದೆಗೆ ಪತ್ರ ಬರೆಯುತ್ತಾರೆ.
|
3 |
+
ನೀವು ಮಕ್ಕಳ ಕೆಲಸವಾಗಿದೆ - ಬ್ರಾಹ್ಮಣ ಧರ್ಮವನ್ನು ವೃದ್ಧಿ ಮಾಡುವುದು. ಇದರಿಂದ ಎಲ್ಲಾ ಮನುಷ್ಯರು ದೇವತೆಗಳಾಗಿ ಬಿಡುತ್ತಾರೆ. ಯಾರು ಇಲ್ಲಿನವರಾಗಿರುತ್ತಾರೆ ಅವರು ಅನ್ಯ ಸತ್ಸಂಗಗಳಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಇಲ್ಲಿ ಮುಖ್ಯ ಮಾತು ಪವಿತ್ರತೆಯಾಗಿದೆ. ಇದಕ್ಕಾಗಿಯೇ ತಂದೆ ಮಕ್ಕಳ, ಸ್ತ್ರೀ-ಪುರುಷರ, ಪುರುಷರು ಸ್ತ್ರೀಯರಿಗೆ ಶತ್ರುಗಳಾಗಿ ಬಿಡುತ್ತಾರೆ. ಸರ್ಕಾರವೂ ಸಹ ಹೇಳುತ್ತದೆ- ಇವರೇನು ಮಾಡುತ್ತಾರೆ? ಇದು ಏಕೆ ಆಗುತ್ತದೆ ಎಂದು. ಆದರೆ ಧರ್ಮದಲ್ಲಿ ಅವರು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಸ್ವರಾಜ್ಯವನ್ನಂತೂ ಅವಶ್ಯವಾಗಿ ಸ್ಥಾಪನೆ ಮಾಡುತ್ತೀರಿ. ಮೊದಲು ಯಾವ ಯುದ್ಧವಾಗಿದೆಯೋ ಅದರ ಮತ್ತು ಇದರ ಮಧ್ಯೆ ರಾತ್ರಿ-ಹಗಲಿನ ಅಂತರವಿದೆ. ಮೊದಲು ಈ ಅಣು ಬಾಂಬುಗಳು ತಯಾರಾಗಿರಲಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಮ್ಮ ರಾಜ್ಯದಲ್ಲಿ ಯುದ್ಧದ ಹೆಸರು, ಗುರುತೂ ಇರಲಿಲ್ಲ. ಸತ್ಯ-ತ್ರೇತಾಯುಗದಲ್ಲಿ ಸುಖವಿರುತ್ತದೆ, ದ್ವಾಪರ-ಕಲಿಯುಗದಲ್ಲಿ ದುಃಖವಿದೆ. ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ. ಪ್ರಪಂಚವು ಒಂದೇ ಆಗಿರುತ್ತದೆ. ಕೇವಲ ಹೊಸದು ಮತ್ತು ಹಳೆಯದಾಗುತ್ತದೆ. ಈಗ ಹಳೆಯ ಪ್ರಪಂಚವು ವಿನಾಶವಾಗಿ ಹೊಸದಾಗುತ್ತದೆ. ಈ ಹಳೆಯ ಪ್ರಪಂಚವು ಈಗ ಏನೂ ಪ್ರಯೋಜನವಿಲ್ಲ ಮತ್ತೆ ಹೊಸ ಪ್ರಪಂಚ ಸ್ಥಾಪಿಸಬೇಕಾಗಿದೆ. ದೆಹಲಿಯಲ್ಲಿ ಎಷ್ಟು ಬಾರಿ ಹೊಸ ಮಹಲುಗಳಾಗಿರಬಹುದು. ಯಾರು ಬರುತ್ತಾರೆಯೋ ಅವರು ಆ ಕಟ್ಟಡವನ್ನು ಬೀಳಿಸಿ ಮತ್ತೆ ತಮ್ಮ ನೆನಪಿಗಾಗಿ ಹೊಸದನ್ನು ಕಟ್ಟಿಸುತ್ತಾರೆ. ಯಾವಾಗ ದೊಡ್ಡ ಯುದ್ಧವಾಗುವುದೋ ಆಗ ಇವೆಲ್ಲವೂ ನುಚ್ಚು ನೂರಾಗುವವು. ಮತ್ತೆ ಹೊಸ ಪ್ರಪಂಚದಲ್ಲಿ ಹೊಸ ಮಹಲುಗಳನ್ನು ನಿರ್ಮಾಣ ಮಾಡುತ್ತೀರಿ. ಯಾರೆಷ್ಟು ಓದುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವರು. ಕೆಲವರು ಚೆನ್ನಾಗಿ ಓದುತ್ತಾರೆ, ಕೆಲವರು ಕಡಿಮೆ. ಇದಂತೂ ನಡೆಯುತ್ತಾ ಇರುತ್ತದೆ.
|
4 |
+
ನೀವು ಮಕ್ಕಳು ಇದನ್ನು ಪಕ್ಕಾ ನೆನಪಿಟ್ಟುಕೊಳ್ಳಿ - ನಾವೀಗ 84 ಜನ್ಮಗಳನ್ನು ಪೂರ್ಣ ಮಾಡಿದ್ದೇವೆ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈ ಹಳೆಯ ಶರೀರವನ್ನು ಬಿಟ್ಟು ನಾವು ನಮ್ಮ ಮನೆಗೆ ಹೋಗುವೆವು. ಈ ಸ್ಥಿತಿಯು ಪಕ್ಕಾ ಆಗಿ ಬಿಟ್ಟರೆ ಮತ್ತೇನು ಬೇಕು! ಈ ಸ್ಥಿತಿಯಲ್ಲಿ ಶರೀರ ಬಿಟ್ಟರೂ ಸಹ ಬಹಳ ಶ್ರೇಷ್ಠ ಕುಲದಲ್ಲಿ ಜನ್ಮ ಪಡೆಯುತ್ತೀರಿ. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ತಮ್ಮ ಸಂಪಾದನೆಯನ್ನು ಜಮಾ ಮಾಡಿಕೊಳ್ಳುವುದಕ್ಕಾಗಿ ತಂದೆ ಮತ್ತು ಚಕ್ರವನ್ನು ನೆನಪು ಮಾಡುತ್ತಾ ಇರಬೇಕಾಗಿದೆ. ಮಾಯೆಯ ಚಕ್ರವ್ಯೂಹದಲ್ಲಿ ಎಂದೂ ಬರಬಾರದು. ಅತಿಯಾದ ಆಸೆಗಳನ್ನಿಟ್ಟುಕೊಳ್ಳಬಾರದು.
|
8 |
+
2. ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ತಮ್ಮ ಬ್ರಾಹ್ಮಣ ಧರ್ಮವನ್ನು ವೃದ್ಧಿ ಮಾಡಬೇಕಾಗಿದೆ. ಹಳ್ಳಿ-ಹಳ್ಳಿಗಳಿಗೆ ಹೋಗಿ ಸೇವೆ ಮಾಡಬೇಕಾಗಿದೆ.
|
BKMurli/BKMurli/page_1018.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಸದಾ ಪ್ರಸನ್ನರಾಗಿರುವುದು ಹೇಗೆ?
|
2 |
+
ಇಂದು ಬಾಪ್ದಾದಾ ನಾಲ್ಕಾರು ಕಡೆಯ ಮಕ್ಕಳನ್ನು ನೋಡುತ್ತಿದ್ದರು, ಏನನ್ನು ನೋಡಿದರು? ಪ್ರತಿಯೊಬ್ಬ ಮಗು ಪ್ರತೀ ಸಮಯ ಸ್ವಯಂ ಎಷ್ಟು ಪ್ರಸನ್ನವಾಗಿರುತ್ತಾರೆ, ಜೊತೆ ಜೊತೆಗೆ ಅನ್ಯರನ್ನೂ ಸ್ವಯಂನ ಮೂಲಕ ಎಷ್ಟು ಪ್ರಸನ್ನಗೊಳಿಸುತ್ತಾರೆ? ಏಕೆಂದರೆ ಪರಮಾತ್ಮನ ಸರ್ವಪ್ರಾಪ್ತಿಗಳ ಪ್ರತ್ಯಕ್ಷ ಸ್ವರೂಪದಲ್ಲಿ ಪ್ರಸನ್ನತೆಯೇ ಚಹರೆಯ ಮೇಲೆ ಕಂಡು ಬರುತ್ತದೆ. “ಪ್ರಸನ್ನತೆ”ಯು ಬ್ರಾಹ್ಮಣ ಜೀವನದ ವಿಶೇಷ ಆಧಾರವಾಗಿದೆ. ಅಲ್ಪಕಾಲದ ಪ್ರಸನ್ನತೆ ಮತ್ತು ಸದಾಕಾಲದ ಸಂಪನ್ನತೆಯ ಪ್ರಸನ್ನತೆ - ಇವೆರಡರಲ್ಲಿ ರಾತ್ರಿ-ಹಗಲಿನ ಅಂತರವಿದೆ. ಅಲ್ಪಕಾಲದ ಪ್ರಸನ್ನತೆಯು ಅಲ್ಪಕಾಲದ ಪ್ರಾಪ್ತಿಯವರ ಚಹರೆಯ ಮೇಲೆ ಸ್ವಲ್ಪ ಸಮಯಕ್ಕಾಗಿ ಅವಶ್ಯವಾಗಿ ಕಂಡು ಬರುತ್ತದೆ ಆದರೆ ಆತ್ಮಿಕ ಪ್ರಸನ್ನತೆಯು ಸ್ವಯಂನ್ನು ಪ್ರಸನ್ನನನ್ನಾಗಿ ಮಾಡಿಯೇ ಮಾಡುತ್ತದೆ ಆದರೆ ಆತ್ಮಿಕ ಪ್ರಸನ್ನತೆಯ ವೈಬ್ರೇಷನ್ ಅನ್ಯ ಆತ್ಮಗಳವರೆಗೂ ತಲುಪುತ್ತದೆ. ಅನ್ಯ ಆತ್ಮರೂ ಸಹ ಶಾಂತಿ ಮತ್ತು ಶಕ್ತಿಯ ಅನುಭೂತಿ ಮಾಡುತ್ತಾರೆ. ಹೇಗೆ ಫಲದಾಯಕ ವೃಕ್ಷವು ತನ್ನ ಶೀತಲತೆಯ ಛಾಯೆಯಲ್ಲಿ ಮಾನವನಿಗೆ ಸ್ವಲ್ಪ ಸಮಯಕ್ಕಾಗಿ ಶೀತಲತೆಯ ಅನುಭವ ಮಾಡಿಸುತ್ತದೆ ಮತ್ತು ಮಾನವನು ಪ್ರಸನ್ನನಾಗಿ ಬಿಡುತ್ತಾನೆ ಹಾಗೆಯೇ ಪರಮಾತ್ಮ ಪ್ರಾಪ್ತಿಗಳ ಫಲ ಸಂಪನ್ನ ಆತ್ಮಿಕ ಪ್ರಸನ್ನತೆಯಿರುವ ಆತ್ಮನು ಅನ್ಯರಿಗೂ ಸಹ ತನ್ನ ಪ್ರಾಪ್ತಿಗಳ ಛಾಯೆಯ ತನು-ಮನದ ಶಾಂತಿ ಮತ್ತು ಶಕ್ತಿಯ ಅನುಭೂತಿ ಮಾಡಿಸುತ್ತಾರೆ. ಪ್ರಸನ್ನತೆಯ ವೈಬ್ರೇಷನ್ ಸೂರ್ಯನ ಕಿರಣಗಳಂತೆ ವಾಯುಮಂಡಲವನ್ನು, ವ್ಯಕ್ತಿಯನ್ನು ಮತ್ತೆಲ್ಲಾ ಮಾತುಗಳನ್ನು ಮರೆಸಿ ಸತ್ಯ, ಆತ್ಮಿಕ ಶಾಂತಿಯ ಖುಷಿಯ ಅನುಭೂತಿಯಲ್ಲಿ ಬದಲಾವಣೆ ಮಾಡಿ ಬಿಡುತ್ತದೆ. ವರ್ತಮಾನ ಸಮಯದ ಅಜ್ಞಾನಿ ಆತ್ಮಗಳು ತಮ್ಮ ಜೀವನದಲ್ಲಿ ಬಹಳ ಖರ್ಚು ಮಾಡಿಯಾದರೂ ಪ್ರಸನ್ನತೆಯಲ್ಲಿರಲು ಬಯಸುತ್ತಾರೆ. ತಾವೆಲ್ಲರೂ ಏನು ಖರ್ಚು ಮಾಡಿದಿರಿ? ಪೈಸೆಯನ್ನೂ ಖರ್ಚು ಮಾಡದೇ ಸದಾ ಪ್ರಸನ್ನರಾಗಿರುತ್ತೀರಲ್ಲವೆ! ಅಥವಾ ಅನ್ಯರ ಸಹಯೋಗದಿಂದ ಪ್ರಸನ್ನರಾಗಿರುತ್ತೀರಾ? ಬಾಪ್ದಾದಾ ಮಕ್ಕಳ ಚಾರ್ಟನ್ನು ಪರಿಶೀಲನೆ ಮಾಡುತ್ತಿದ್ದೆವು. ಏನು ನೋಡಿರಬಹುದು? ಒಂದನೆಯವರು ಸದಾ ಪ್ರಸನ್ನರಾಗಿರುವವರು ಮತ್ತು ಎರಡನೇ ಪ್ರಕಾರದವರು ಪ್ರಸನ್ನರಾಗಿರುವವರು. ಅವರಲ್ಲಿ “ಸದಾ” ಶಬ್ಧವಿಲ್ಲ. ಪ್ರಸನ್ನತೆಯೂ ಮೂರು ಪ್ರಕಾರದ್ದನ್ನು ನೋಡಿದೆವು. 1. ಸ್ವಯಂನಿಂದ ಪ್ರಸನ್ನ. 2. ಅನ್ಯರ ಮೂಲಕ ಪ್ರಸನ್ನ. 3. ಸೇವೆಯ ಮೂಲಕ ಪ್ರಸನ್ನ. ಒಂದುವೇಳೆ ಮೂರರಲ್ಲಿಯೂ ಪ್ರಸನ್ನರಾಗಿದ್ದರೆ ಬಾಪ್ದಾದಾರವರನ್ನು ಸ್ವತಹ ಪ್ರಸನ್ನಗೊಳಿಸಿದ್ದಾರೆ ಮತ್ತು ಯಾವ ಆತ್ಮನ ಮೇಲೆ ತಂದೆಯು ಪ್ರಸನ್ನರಾಗಿದ್ದಾರೆಯೋ ಅವರು ಸದಾ ಸಫಲತಾಮೂರ್ತಿಗಳು ಆಗಿಯೇ ಆಗುವರು.
|
3 |
+
ಬಾಪ್ದಾದಾ ನೋಡಿದೆವು - ಕೆಲವು ಮಕ್ಕಳು ತನ್ನೊಂದಿಗೂ ಅಪ್ರಸನ್ನವಾಗಿರುತ್ತಾರೆ, ಚಿಕ್ಕಮಾತಿನ ಕಾರಣ ಅಪ್ರಸನ್ನವಾಗಿರುತ್ತಾರೆ. ಮೊಟ್ಟ ಮೊದಲ ಪಾಠವಾದ “ನಾನು ಯಾರು” ಇದನ್ನು ತಿಳಿದುಕೊಂಡಿದ್ದರೂ ಸಹ ಮರೆತು ಹೋಗುತ್ತಾರೆ. ಯಾವ ತಂದೆಯು ಆ ರೀತಿ ಮಾಡಿದ್ದಾರೆಯೋ, ಕೊಟ್ಟಿದ್ದಾರೆಯೋ ಅವರನ್ನೇ ಮರೆತು ಹೋಗುತ್ತಾರೆ. ತಂದೆಯು ಪ್ರತಿಯೊಬ್ಬ ಮಗುವನ್ನು ಪೂರ್ಣ ಆಸ್ತಿಗೆ ಅಧಿಕಾರಿಗಳನ್ನಾಗಿ ಮಾಡಿದ್ದಾರೆ. ಕೆಲವರಿಗೆ ಪೂರ್ಣ, ಕೆಲವರಿಗೆ ಅರ್ಧ ಆಸ್ತಿಯನ್ನು ನೀಡಿಲ್ಲ. ಯಾರಿಗಾದರೂ ಅರ್ಧ ಅಥವಾ ಕಾಲು ಭಾಗದಷ್ಟು ಸಿಕ್ಕಿದೆಯೇ? ಅರ್ಧ ಸಿಕ್ಕಿದೆಯೋ ಅಥವಾ ಅರ್ಧ ತೆಗೆದುಕೊಂಡಿದ್ದೀರೋ? ತಂದೆಯು ಎಲ್ಲರಿಗೆ ಮಾ|| ಸರ್ವಶಕ್ತಿವಂತನ ವರದಾನ ಹಾಗೂ ಆಸ್ತಿಯನ್ನು ಕೊಟ್ಟರು. ಕೆಲವು ಶಕ್ತಿಗಳನ್ನು ಮಕ್ಕಳಿಗೆ ಕೊಟ್ಟರು, ಕೆಲವೊಂದನ್ನು ಕೊಡಲಿಲ್ಲವೆಂದಲ್ಲ. ತನಗಾಗಿ ಏನನ್ನೂ ಇಟ್ಟುಕೊಳ್ಳಲಿಲ್ಲ. ಸರ್ವಗುಣ ಸಂಪನ್ನರನ್ನಾಗಿ ಮಾಡಿದ್ದಾರೆ, ಸರ್ವಪ್ರಾಪ್ತಿ ಸ್ವರೂಪರನ್ನಾಗಿ ಮಾಡಿದ್ದಾರೆ ಆದರೆ ತಂದೆಯ ಮೂಲಕ ಏನು ಪ್ರಾಪ್ತಿಗಳಾಗಿದೆಯೋ ಅದನ್ನು ಸ್ವಯಂನಲ್ಲಿ ಸಮಾವೇಶ ಮಾಡಿಕೊಳ್ಳುವುದಿಲ್ಲ. ಹೇಗೆ ಸ್ಥೂಲ ಧನ ಹಾಗೂ ಸಾಧನಗಳು ಪ್ರಾಪ್ತಿಯಾಗಿದ್ದರೂ ಸಹ ಅದನ್ನು ಖರ್ಚು ಮಾಡುವುದು ಬರುವುದಿಲ್ಲ ಅಥವಾ ಸಾಧನಗಳನ್ನು ಉಪಯೋಗಿಸುವುದು ಬರಲಿಲ್ಲವೆಂದರೆ ಪ್ರಾಪ್ತಿ ಇದ್ದರೂ ಸಹ ಅದರಿಂದ ವಂಚಿತರಾಗಿ ಉಳಿಯುತ್ತಾರೆ. ಹಾಗೆಯೇ ಎಲ್ಲಾ ಪ್ರಾಪ್ತಿಗಳು ಹಾಗೂ ಖಜಾನೆಗಳು ಎಲ್ಲರ ಬಳಿ ಇವೆ ಆದರೆ ಅದನ್ನು ಕಾರ್ಯದಲ್ಲಿ ತೊಡಗಿಸುವ ವಿಧಿ ಬರುವುದಿಲ್ಲ ಮತ್ತು ಸಮಯದಲ್ಲಿ ಉಪಯೋಗಿಸುವುದು ಬರುವುದಿಲ್ಲ ಮತ್ತೆ ಹೇಳುತ್ತಾರೆ - ಇದನ್ನು ಮಾಡಬೇಕು, ಇದನ್ನು ಮಾಡಬಾರದು ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ ಆದರೆ ಆ ಸಮಯದಲ್ಲಿ ಮರೆತು ಹೋಯಿತು, ಈಗ ತಿಳಿದುಕೊಳ್ಳುತ್ತೇನೆ - ಈ ರೀತಿಯಾಗಬಾರದು ಎಂದು. ಆದರೆ ಆ ಸಮಯದಲ್ಲಿ ಒಂದು ಕ್ಷಣವು ಹೊರಟು ಹೋದರೂ ಸಹ ಸಫಲತೆಯ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಏಕೆಂದರೆ ಸಮಯದ ವಾಹನವು ಹೊರಟು ಹೋಯಿತು. ಭಲೆ ಒಂದು ಕ್ಷಣವೇ ತಡ ಮಾಡಿರಬಹುದು ಅಥವಾ ಒಂದು ಗಂಟೆಯನ್ನಾದರೂ ತಡ ಮಾಡಿರಬಹುದು ಆದರೆ ಸಮಯವಂತೂ ಹೊರಟು ಹೋಯಿತಲ್ಲವೆ ಮತ್ತು ಯಾವಾಗ ಸಮಯದ ವಾಹನವು ಹೊರಟು ಹೋಗುವುದೋ ಆಗ ಸ್ವಯಂನೊಂದಿಗೆ ಹೃದಯ ವಿಧೀರ್ಣರಾಗಿ ಬಿಡುತ್ತಾರೆ ಮತ್ತು ನನ್ನ ಭಾಗ್ಯವೇ ಹೀಗಿದೆ, ಡ್ರಾಮಾದಲ್ಲಿ ನನ್ನ ಪಾತ್ರವೇ ಹೀಗಿದೆ ಎಂದು ಅಪ್ರಸನ್ನತೆಯ ಸಂಸ್ಕಾರವು ಇಮರ್ಜ್ ಆಗಿ ಬಿಡುವುದು. ಮೊದಲೂ ತಿಳಿಸಿದ್ದೆವು - ಸ್ವಯಂನೊಂದಿಗೆ ಅಪ್ರಸನ್ನರಾಗಿರಲು ಮುಖ್ಯವಾಗಿ ಎರಡು ಕಾರಣಗಳಿರುತ್ತವೆ - ಹೃದಯ ವಿಧೀರ್ಣರಾಗುವುದು ಮತ್ತು ಇನ್ನೊಂದು ಕಾರಣವಿದೆ - ಅನ್ಯರ ವಿಶೇಷತೆ ಹಾಗೂ ಭಾಗ್ಯವನ್ನು ಅಥವಾ ಪಾತ್ರವನ್ನು ನೋಡಿ ಈರ್ಷ್ಯೆಯು ಉತ್ಪನ್ನವಾಗುವುದು ಆಗ ಈರ್ಷ್ಯೆಯೂ ಹೆಚ್ಚಾಗುತ್ತದೆ, ಧೈರ್ಯವೂ ಕಡಿಮೆಯಾಗುತ್ತದೆ. ಹೃದಯ ವಿಧೀರ್ಣರಾಗಿರುವವರು ಎಂದೂ ಪ್ರಸನ್ನರಾಗಿರಲು ಸಾಧ್ಯವಿಲ್ಲ ಮತ್ತು ಈರ್ಷ್ಯೆ ಪಡುವವರು ಎಂದೂ ಪ್ರಸನ್ನರಾಗಿರಲು ಸಾಧ್ಯವಿಲ್ಲ ಏಕೆಂದರೆ ಎರಡೂ ಲೆಕ್ಕದಿಂದ ಇಂತಹ ಆತ್ಮಗಳ ಇಚ್ಛೆಯು ಎಂದಿಗೂ ಪೂರ್ಣವಾಗುವುದಿಲ್ಲ ಮತ್ತು ಇಚ್ಛೆಗಳು “ಅಚ್ಛಾ” ಅರ್ಥಾತ್ ಒಳ್ಳೆಯವರಾಗಲು ಬಿಡುವುದಿಲ್ಲ, ಆದ್ದರಿಂದ ಪ್ರಸನ್ನರಾಗಿರುವುದಿಲ್ಲ. ಪ್ರಸನ್ನರಾಗಿರಲು ಸದಾ ಒಂದು ಮಾತನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಿ - ಡ್ರಾಮಾದ ನಿಯಮ ಪ್ರಮಾಣ ಸಂಗಮಯುಗದಲ್ಲಿ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನಿಗೂ ಯಾವುದಾದರೊಂದು ವಿಶೇಷತೆ ಸಿಕ್ಕಿದೆ, ಅವರು 16,000ದ ಮಾಲೆಯ ಕೊನೆಯ ಮಣಿಯೇ ಆಗಿರಲಿ, ಅವರಿಗೂ ಒಂದಲ್ಲ ಒಂದು ವಿಶೇಷತೆ ಪ್ರಾಪ್ತಿಯಾಗಿರುತ್ತದೆ. ಅದಕ್ಕಿಂತಲೂ ಮುಂದೆ ಹೋದಾಗ 9 ಲಕ್ಷ ಎಂದು ಯಾವ ಗಾಯನವಿದೆಯೋ ಅವರಿಗೂ ಸಹ ಒಂದಲ್ಲ ಒಂದು ವಿಶೇಷತೆಯಿರುತ್ತದೆ. ತಮ್ಮ ವಿಶೇಷತೆಯನ್ನು ಮೊದಲು ಗುರುತಿಸಿ. ಬ್ರಾಹ್ಮಣ ಜನ್ಮದ ಭಾಗ್ಯದ ವಿಶೇಷತೆಯನ್ನು ಗುರುತಿಸಲು ಈಗಿನ್ನೂ 9 ಲಕ್ಷದವರೆಗೆ ತಲುಪಿಲ್ಲ. ಅದನ್ನು ಗುರುತಿಸಿ ಕಾರ್ಯದಲ್ಲಿ ತೊಡಗಿಸಿ. ಕೇವಲ ಅನ್ಯರ ವಿಶೇಷತೆಯನ್ನು ನೋಡಿ ಹೃದಯ ವಿಧೀರ್ಣರಾಗುವುದಾಗಲಿ ಅಥವಾ ಈರ್ಷ್ಯೆಯಲ್ಲಿ ಬರಬಾರದು ಆದರೆ ತನ್ನ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿದಾಗ ಒಂದು ವಿಶೇಷತೆಯು ಮತ್ತೆಲ್ಲಾ ವಿಶೇಷತೆಗಳನ್ನು ತರುವುದು. ಒಂದರ ಮುಂದೆ ಬಿಂದು ಹಾಕುತ್ತಾ ಹೋದರೆ ಎಷ್ಟಾಗುವುದು? 1ರ ಪಕ್ಕದಲ್ಲಿ ಒಂದು ಬಿಂದುವನ್ನಿಟ್ಟರೆ (0) 10 ಆಗುವುದು. ಇನ್ನೊಂದು ಬಿಂದುವನ್ನಿಟ್ಟರೆ 100 ಆಗಿಬಿಡುವುದು. ಮೂರನೇ ಬಿಂದುವನ್ನಿಟ್ಟರೆ...... ಈ ಲೆಕ್ಕವಂತೂ ಬರುತ್ತದೆಯಲ್ಲವೆ. ಕಾರ್ಯದಲ್ಲಿ ತೊಡಗಿಸುವುದು ಎಂದರೆ ಹೆಚ್ಚಿಸಿಕೊಳ್ಳುವುದು. ಇದರಲ್ಲಿ ಅನ್ಯರನ್ನು ನೋಡಬೇಡಿ, ತನ್ನ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿ. ಹೇಗೆ ನೋಡಿ, ಬಾಪ್ದಾದಾ ಸದಾ “ಭೋಲಿ ಭಂಡಾರಿ” (ಭೋಲಿ ದಾದಿ) ಯ ಉದಾಹರಣೆಯನ್ನು ತಿಳಿಸುತ್ತಾರೆ. ಮಹಾರಥಿಗಳ ಹೆಸರು ಕೆಲವೊಮ್ಮೆ ಬರುತ್ತದೆ ಆದರೆ ಇವರ ಹೆಸರನ್ನು ಹೇಳುತ್ತಲೇ ಇರುತ್ತಾರೆ. ಯಾವ ವಿಶೇಷತೆಯಿತ್ತೋ ಅದನ್ನು ಕಾರ್ಯದಲ್ಲಿ ತೊಡಗಿಸಿದರು. ಭಲೆ ಭಂಡಾರವನ್ನೇ ಸಂಭಾಲನೆ ಮಾಡುತ್ತಾರೆ ಆದರೆ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸುವುದರಿಂದ ವಿಶೇಷ ಆತ್ಮಗಳ ಹೆಸರಿನ ಗಾಯನವಾಗುತ್ತದೆ. ಎಲ್ಲರೂ ಮಧುಬನದ ವರ್ಣನೆ ಮಾಡುವಾಗ ದಾದಿಯರ ಮಾತುಗಳನ್ನು ತಿಳಿಸುತ್ತಾರೆ, ಜೊತೆಗೆ ಭೋಲಿ ದಾದಿಯ ಉದಾಹರಣೆಯನ್ನೂ ಕೊಡುತ್ತಾರೆ. ಭಲೆ ಭಾಷಣ ಮಾಡುವುದಿಲ್ಲ ಆದರೆ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿದ ಕಾರಣ ಸ್ವಯಂ ವಿಶೇಷ ಆತ್ಮನಾಗಿ ಬಿಟ್ಟರು. ಅನ್ಯರೂ ಸಹ ವಿಶೇಷ ದೃಷ್ಟಿಯಿಂದ ನೋಡುತ್ತಾರೆ, ಅಂದಮೇಲೆ ಪ್ರಸನ್ನರಾಗಿರಲು ಏನು ಮಾಡುವಿರಿ? ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸಿ ಆಗ ವೃದ್ಧಿಯೂ ಆಗುವುದು ಮತ್ತು ಯಾವಾಗ ಸರ್ವ ವಿಶೇಷತೆಗಳು ಬಂದು ಬಿಡುವುದೋ ಆಗ ಸಂಪನ್ನರಾಗಿ ಬಿಡುತ���ತೀರಿ ಮತ್ತು ಪ್ರಸನ್ನತೆಗೆ ಆಧಾರವಾಗಿದೆ - ``ಸಂಪನ್ನತೆ'' ಯಾರು ಸ್ವಯಂನೊಂದಿಗೆ ಪ್ರಸನ್ನರಾಗಿರುವರೋ ಅವರು ಅನ್ಯರೊಂದಿಗೂ ಪ್ರಸನ್ನರಾಗಿರುತ್ತಾರೆ, ಸೇವೆಯೊಂದಿಗೂ ಪ್ರಸನ್ನರಾಗಿರುತ್ತಾರೆ. ಯಾವುದೇ ಸೇವೆ ಸಿಗಲಿ ಅದರಲ್ಲಿ ಅನ್ಯರನ್ನು ಪ್ರಸನ್ನಗೊಳಿಸುತ್ತಾ ಸೇವೆಯಲ್ಲಿ ಮೊದಲಿನ ನಂಬರನ್ನು ಪಡೆಯುತ್ತಾರೆ. ಎಲ್ಲದಕ್ಕಿಂತ ಅತಿ ದೊಡ್ಡ ಸೇವೆಯನ್ನು ತಮ್ಮ ಪ್ರಸನ್ನಚಿತ್ತ ಮೂರ್ತಿಯೇ (ಚಹರೆ) ಮಾಡುವುದು ಅಂದಾಗ ಯಾವ ಚಾರ್ಟ್ ನೋಡಿದೆವೆಂದು ಕೇಳಿದಿರಾ! ಒಳ್ಳೆಯದು.
|
4 |
+
ಟೀಚರ್ಸ್ಗೆ ಮುಂದೆ ಕುಳಿತುಕೊಳ್ಳುವ ಭಾಗ್ಯ ಸಿಕ್ಕಿದೆ ಏಕೆಂದರೆ ಮಾರ್ಗದರ್ಶಕರಾಗಿ ಬರುತ್ತಾರೆ, ಬಹಳ ಪರಿಶ್ರಮ ಪಡುತ್ತಾರೆ. ಒಬ್ಬರನ್ನು ಸುಖಧಾಮದಿಂದ ಕರೆದರೆ ಇನ್ನೊಬ್ಬರನ್ನು ವಿಶಾಲ ಭವನದಿಂದ (ಮಧುಬನದಲ್ಲಿ) ಕರೆಯುತ್ತಾರೆ. ಇದರಿಂದ ಒಳ್ಳೆಯ ವ್ಯಾಯಾಮವಾಗಿ ಬಿಡುತ್ತದೆ. ಸೇವಾಕೇಂದ್ರದಲ್ಲಂತೂ ವಾಕಿಂಗ್ ಮಾಡುವುದಿಲ್ಲ, ಯಜ್ಞದ ಆದಿಯಲ್ಲಿ ಸೇವೆಯನ್ನು ಆರಂಭ ಮಾಡಿದಾಗ ಎಲ್ಲರೂ ನಡೆದುಕೊಂಡೇ ಹೋಗುತ್ತಿದ್ದರಲ್ಲವೆ. ನಿಮ್ಮ ಹಿರಿಯ ದಾದಿಯರೂ ಸಹ ನಡೆದಾಡುತ್ತಿದ್ದರು, ಸಾಮಾನುಗಳ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ನಡೆದುಕೊಂಡೇ ಹೋಗುತ್ತಿದ್ದರು, ಈಗಂತೂ ತಾವೆಲ್ಲರೂ ಮಾಡಿ-ಮಾಡಲ್ಪಟ್ಟಿರುವ ಸಮಯದಲ್ಲಿ ಬಂದಿದ್ದೀರಿ ಆದ್ದರಿಂದ ಭಾಗ್ಯಶಾಲಿಗಳಲ್ಲವೆ. ತಯಾರಾಗಿರುವ ಸೇವಾಕೇಂದ್ರಗಳು ಸಿಕ್ಕಿದೆ, ತಮ್ಮ ಮನೆಯಾಗಿ ಬಿಟ್ಟಿದೆ. ಮೊದಲಂತೂ ಯಮುನಾ ನದಿಯ ತೀರದಲ್ಲಿದ್ದರು, ಒಂದೇ ಕೋಣೆಯಿತ್ತು, ರಾತ್ರಿಯಲ್ಲಿ ಮಲಗುವುದು ಹಗಲಿನಲ್ಲಿ ಅದೇ ಸೇವಾಸ್ಥಾನವಾಗಿರುತ್ತಿತ್ತು. ಆದರೆ ಖುಷಿ-ಖುಷಿಯಿಂದ ತ್ಯಾಗ ಮಾಡಿದ್ದೀರಿ ಅದರ ಭಾಗ್ಯದ ಫಲವನ್ನು ತಿನ್ನುತ್ತಿದ್ದೀರಿ. ತಾವು ಫಲವನ್ನು ತಿನ್ನುವ ಸಮಯದಲ್ಲಿ ಬಂದಿದ್ದೀರಿ. ಮೊದಲಿನವರೆಲ್ಲರೂ ಬೀಜವನ್ನು ಬಿತ್ತಿದ್ದರು, ಅದರ ಫಲವನ್ನು ತಾವು ತಿನ್ನುತ್ತಿದ್ದೀರಿ. ಫಲ ತಿನ್ನುವುದು ಬಹಳ ಸಹಜವಲ್ಲವೆ. ಈಗ ಇಂತಹ ಫಲಸ್ವರೂಪ, ಕ್ವಾಲಿಟಿಯವರನ್ನು ತಯಾರು ಮಾಡಿ. ತಿಳಿಯಿತೆ- ಕ್ವಾಂಟಿಟಿ (ಸಂಖ್ಯೆ) ಅಂತೂ ಇದ್ದೇ ಇದೆ ಮತ್ತು ಇದೂ ಬೇಕಾಗಿದೆ. 9 ಲಕ್ಷದವರೆಗೆ ತಲುಪಬೇಕೆಂದರೆ ಕ್ವಾಲಿಟಿ ಮತ್ತು ಕ್ವಾಂಟಿಟಿ ಎರಡೂ ಬೇಕಾಗಿದೆ ಆದರೆ ಈಗ 16,000ದ ಪಕ್ಕಾ ಮಾಲೆಯನ್ನು ತಯಾರು ಮಾಡಿ. ಈಗ ಕ್ವಾಲಿಟಿ ಆತ್ಮರನ್ನು ತಯಾರು ಮಾಡುವ ಸೇವೆಯಲ್ಲಿ ವಿಶೇಷ ಅಂಡರ್ಲೈನ್ ಮಾಡಿಕೊಳ್ಳಿ.
|
5 |
+
ಪ್ರತಿಯೊಂದು ಗ್ರೂಪ್ನಲ್ಲಿ ಶಿಕ್ಷಕಿ ಸಹೋದರಿಯರೂ ಬರುತ್ತಾರೆ, ಕುಮಾರಿಯರೂ ಬರುತ್ತಾರೆ ಆದರೆ ಯಾರೂ ಸಮರ್ಪಣೆ ಆಗುವುದಿಲ್ಲ. ಮಧುಬನವು ಇಷ್ಟವಾಗುತ್ತದೆ, ತಂದೆಯೊಂದಿಗೆ ಪ್ರೀತಿಯೂ ಇದೆ ಆದರೆ ಸಮರ್ಪಣೆಯಾಗಲು ಆಲೋಚಿಸುತ್ತಾರೆ. ಯಾರು ಸ್ವಯಂ ತಾವಾಗಿಯೇ ಮುಂದೆ ಬರುವರೋ ಅರ್ಥಾತ್ ಸಮರ್ಪಣೆಯಾಗುವರೋ ಅವರು ನಿರ್ವಿಘ್ನರಾಗಿ ನಡೆಯುತ್ತಾರೆ ಮತ್ತು ಯಾರು ಹೇಳುವುದರಿಂದ ನಡೆಯುವರೋ ಅವರು ���ಿಲ್ಲುತ್ತಾರೆ ಮತ್ತೆ ನಡೆಯುತ್ತಾರೆ. ನಾವಂತೂ ಸಮರ್ಪಣೆಯಾಗುವುದಿಲ್ಲ ಎಂದು ಮೊದಲೇ ಹೇಳಿದ್ದೆವು ಎಂದು ಅವರು ಪದೇ-ಪದೇ ತಮಗೇ ಹೇಳುತ್ತಾರೆ. ಇನ್ನೂ ಕೆಲವರು ಆಲೋಚಿಸುತ್ತಾರೆ - ಇದಕ್ಕಿಂತಲೂ ಹೊರಗಡೆಯಿದ್ದು ಸೇವೆ ಮಾಡುವುದು ಒಳ್ಳೆಯದಾಗಿದೆ ಎಂದು. ಆದರೆ ಹೊರಗೆ ಇದ್ದು ಸೇವೆ ಮಾಡುವುದು ಮತ್ತು ತ್ಯಾಗ ಮಾಡಿ ಸೇವೆ ಮಾಡುವುದರಲ್ಲಿ ಖಂಡಿತ ವ್ಯತ್ಯಾಸವಿದೆ. ಯಾರು ಸಮರ್ಪಣತೆಯ ಮಹತ್ವಿಕೆಯನ್ನು ಅರಿತುಕೊಂಡಿದ್ದಾರೆಯೋ ಅವರು ಸದಾ ಸ್ವಯಂನ್ನು ಕೆಲವು ಮಾತುಗಳಿಂದ ಬಿಡಿಸಿಕೊಂಡು ಆರಾಮದಿಂದ ಬಂದು ಬಿಟ್ಟಿದ್ದಾರೆ. ಕೆಲವರು ಪರಿಶ್ರಮದಿಂದ ಬಂದಿದ್ದಾರೆ ಅಂದಾಗ ಟೀಚರ್ಸ್ ತಮ್ಮ ಮಹತ್ವಿಕೆಯನ್ನು ಚೆನ್ನಾಗಿ ಅರಿತುಕೊಂಡಿದ್ದೀರಲ್ಲವೆ? ನೌಕರಿ ಮತ್ತು ಈ ಸೇವೆ ಎರಡೂ ಕೆಲಸಗಳನ್ನು ಮಾಡುವವರು ಒಳ್ಳೆಯವರೋ ಅಥವಾ ಒಂದು ಕೆಲಸ ಮಾಡುವವರು ಒಳ್ಳೆಯವರೋ? ನೌಕರಿ ಮಾಡುವವರಾದರೂ ಡಬಲ್ ಪಾತ್ರವನ್ನು ಅಭಿನಯಿಸಬೇಕಾಗುವುದು. ಭಲೆ ನಿರ್ಬಂಧನರಾಗಿರಬಹುದು ಆದರೂ ಡಬಲ್ ಪಾತ್ರವಂತೂ ಇದೆಯಲ್ಲವೆ. ನಿಮ್ಮದು ಒಂದೇ ಪಾತ್ರವಾಗಿದೆ, ಪ್ರವೃತ್ತಿಯವರಾದರೆ ಒಂದು ವಿದ್ಯಾಭ್ಯಾಸ, ಇನ್ನೊಂದು ಸೇವೆ ಮತ್ತು ಜೊತೆ ಜೊತೆಗೆ ಪ್ರವೃತ್ತಿಯನ್ನೂ ಪಾಲನೆ ಮಾಡುವ ಮೂರು ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ತಾವಂತೂ ಎಲ್ಲಾ ಮಾತುಗಳಿಂದ ಮುಕ್ತರಾದಿರಿ. ಒಳ್ಳೆಯದು.
|
6 |
+
ಸರ್ವ ಸದಾ ಪ್ರಸನ್ನತೆಯ ವಿಶೇಷತೆಯಿಂದ ಸಂಪನ್ನ, ಶ್ರೇಷ್ಠಾತ್ಮರಿಗೆ, ಸದಾ ತಮ್ಮ ವಿಶೇಷತೆಯನ್ನು ಅರಿತುಕೊಂಡು ಕಾರ್ಯದಲ್ಲಿ ತೊಡಗಿಸುವಂತಹ ಬುದ್ಧಿವಂತ ಮತ್ತು ಉದಾಹರಣಾ ಮೂರ್ತಿ ಆತ್ಮರಿಗೆ, ಸದಾ ಪ್ರಸನ್ನರಾಗಿರುವಂತಹ ಪ್ರಸನ್ನಗೊಳಿಸುವ ಶ್ರೇಷ್ಠತೆಯನ್ನು ಹೊಂದಿರುವ ಮಹಾನ್ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
|
7 |
+
ಆಗ್ರಾ-ರಾಜಸ್ಥಾನ:
|
8 |
+
ಸದಾ ತಮ್ಮನ್ನು ಅಕಾಲ ಸಿಂಹಾನಧಿಕಾರಿ ಶ್ರೇಷ್ಠ ಆತ್ಮನೆಂದು ತಿಳಿಯುವಿರಾ? ಆತ್ಮನು ಅಕಾಲನಾಗಿದ್ದಾನೆ ಅಂದಮೇಲೆ ಅದರ ಸಿಂಹಾಸನವೂ ಅಕಾಲ ಸಿಂಹಾಸನವಾಯಿತಲ್ಲವೆ! ಈ ಸಿಂಹಾಸನದ ಮೇಲೆ ಆತ್ಮವು ಕುಳಿತುಕೊಂಡು ಎಷ್ಟೊಂದು ಕಾರ್ಯವನ್ನು ಮಾಡುತ್ತದೆ. ನಾನು `ಸಿಂಹಾಸನಾಧಿಕಾರಿ ಆತ್ಮನಾಗಿದ್ದೇನೆ' ಎಂಬ ಸ್ಮೃತಿಯಿಂದ ಸ್ವತಹವಾಗಿಯೇ ಸ್ವರಾಜ್ಯದ ಸ್ಮೃತಿಯು ಬರುತ್ತದೆ. ಯಾವಾಗ ರಾಜನು ಸಿಂಹಾಸನದ ಮೇಲೆ ಕುಳಿತುಕೊಳ್ಳುವನು ಆಗ ರಾಜನೆಂಬ ನಶೆ, ಖುಷಿಯು ಸ್ವತಹವಾಗಿಯೇ ಉತ್ಪನ್ನವಾಗುವುದು. ಸಿಂಹಾಸನಾಧಿಕಾರಿ ಎಂದರೆ ಸ್ವರಾಜ್ಯ ಅಧಿಕಾರಿ ರಾಜನಾಗಿದ್ದೇನೆ - ಈ ಸ್ಮೃತಿಯಿಂದ ಸ್ವತಹವಾಗಿಯೇ ಸರ್ವ ಕರ್ಮೇಂದ್ರಿಯಗಳೂ ಆದೇಶದ ಅನುಸಾರ ನಡೆಯುವುದು. ಯಾರು ಅಕಾಲ ಸಿಂಹಾಸನಾಧಿಕಾರಿ ಎಂದು ತಿಳಿದುಕೊಂಡು ನಡೆಯುವರೋ ಅವರಿಗಾಗಿ ತಂದೆಯ ಹೃದಯ ಸಿಂಹಾಸನವೂ ಇದೆ. ಏಕೆಂದರೆ ಆತ್ಮನೆಂದು ತಿಳಿಯುವುದರಿಂದ ತಂದೆಯದೇ ನೆನಪು ಬರುತ್ತದೆ. ನಂತರ ದೇಹವೂ ಇರುವುದಿಲ್ಲ, ದೇಹದ ಸಂಬಂಧ/ದೇಹದ ಪದಾರ್ಥವೂ ಇರುವುದಿಲ್ಲ. ತಂದೆಯೇ ತನ್ನ ಪ್ರಪಂಚವಾಗಿದ್ದಾರೆ ಆದ್ದರಿಂದ ಅಕಾಲ-ಸಿಂಹಾಸನ-ಅಧಿಕಾರಿಯು ತಂದೆಯ ಹೃದಯ-ಸಿಂಹಾಸನ-ಅಧಿಕಾರಿಯೂ ಆಗುವರು. ಯಾರಲ್ಲಿ ಒಬ್ಬ ತಂದೆಯ ಹೊರತು ಮತ್ತ್ಯಾರೂ ಇರುವುದಿಲ್ಲ - ಇಂತಹ ಮಕ್ಕಳೇ ತಂದೆಯ ಹೃದಯದಲ್ಲಿರುವರು ಅಂದಮೇಲೆ ಡಬಲ್ ಸಿಂಹಾಸನವಾಯಿತು. ಯಾರು ಅಗಲಿ ಮರಳಿ ಸಿಕ್ಕಿರುವ ಮಕ್ಕಳಿರುತ್ತಾರೆ, ಬಹಳ ಪ್ರಿಯವಾಗುವರು, ಅವರನ್ನು ಸದಾ ಮಡಿಲಿನಲ್ಲಿಯೇ ಕೂರಿಸಿಕೊಳ್ಳುವರು, ತಲೆಯ ಮೇಲೆ ಕೂರಿಸಿಕೊಳ್ಳುವರೇ ಹೊರತು ಕೆಳಗಿಡುವುದಿಲ್ಲ. ಅದಕ್ಕಾಗಿಯೇ ತಂದೆಯೂ ಹೇಳುವರು - ಸಿಂಹಾಸನದ ಮೇಲೆ ಕುಳಿತುಕೊಳ್ಳಿರಿ, ಕೆಳಗೆ ಬಂದು ಬಿಡಬಾರದು. ಯಾರಿಗೆ ಸಿಂಹಾಸನವು ಸಿಗುತ್ತದೆಯೋ ಅವರು ಬೇರೆ ಜಾಗದಲ್ಲಿ ಕುಳಿತುಕೊಳ್ಳುವರೇನು? ಹಾಗಾದರೆ ಅಕಾಲ ಸಿಂಹಾಸನ ಅಥವಾ ಹೃದಯ ಸಿಂಹಾಸನವನ್ನು ಮರೆತು ದೇಹದ ಧರಣಿಯಲ್ಲಿ, ಮಣ್ಣಿನಲ್ಲಿ ಬರಬಾರದು. ದೇಹವನ್ನು ಮಣ್ಣು ಎಂದು ಹೇಳುವಿರಲ್ಲವೆ, ಮಣ್ಣು-ಮಣ್ಣಿನಲ್ಲಿ ಸೇರಿ ಹೋಗುತ್ತದೆ ಎಂದು ಹೇಳುವರಲ್ಲವೆ! ಹಾಗಾದರೆ ದೇಹದಲ್ಲಿ ಬರುವುದು ಅರ್ಥಾತ್ ಮಣ್ಣಿನಲ್ಲಿ ಬರುವುದಾಯಿತು. ಯಾರು ರಾಯಲ್ ಫ್ಯಾಮಿಲಿ ಮಕ್ಕಳಾಗಿರುತ್ತಾರೆಯೋ ಅವರೆಂದಿಗೂ ಸಹ ಮಣ್ಣಿನಲ್ಲಿ ಆಡುವುದಿಲ್ಲ. ಪರಮಾತ್ಮನ ಮಕ್ಕಳಂತು ಎಲ್ಲರಿಗಿಂತಲೂ ರಾಯಲ್ ಆಗಿರುವರು ಅಂದಾಗ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ಪ್ರಿಯವಾಗುತ್ತದೆಯೋ ಅಥವಾ ಮಣ್ಣನ್ನೂ ಸ್ವಲ್ಪ ನೋಡಿ ಬಿಡೋಣ ಎಂದು ಸ್ವಲ್ಪ-ಸ್ವಲ್ಪ ಮನಸ್ಸಾಗುತ್ತದೆಯೇ! ಕೆಲವು ಮಕ್ಕಳಲ್ಲಿ ಮಣ್ಣನ್ನು ತಿನ್ನುವ ಅಥವಾ ಮಣ್ಣಿನಲ್ಲಿಯೇ ಆಡುವ ಸ್ವಭಾವವಿರುತ್ತದೆ. ತಮ್ಮಲ್ಲಿ ಇಂತಹ ಸ್ವಭಾವವಂತು ಇಲ್ಲವಲ್ಲವೆ! 63 ಜನ್ಮಗಳಲ್ಲಿಯೂ ಮಣ್ಣಿನೊಂದಿಗೆ ಆಡಿದಿರಿ, ಈಗ ತಂದೆಯು ಸಿಂಹಾಸನಾಧಿಕಾರಿ ಮಾಡುತ್ತಿದ್ದಾರೆ, ಅಂದಾಗ ಮಣ್ಣಿನೊಂದಿಗೆ ಹೇಗೆ ಆಡುವಿರಿ, ಯಾರು ಮಣ್ಣಿನಲ್ಲಿ ಆಡುವರೋ ಅವರು ಅಶುದ್ಧವಾಗುತ್ತಾರೆ. ಹಾಗಾದರೆ ತಾವೂ ಸಹ ಎಷ್ಟೊಂದು ಅಶುದ್ಧವಾಗಿ ಬಿಟ್ಟಿದ್ದೀರಿ. ಈಗ ತಂದೆಯವರು ಸ್ವಚ್ಛರನ್ನಾಗಿ ಮಾಡಿ ಬಿಟ್ಟಾರು, ಇದೇ ಸ್ಮೃತಿಯಿಂದ ಸದಾ ಸಮರ್ಥವಾಗಿ ಇರಬೇಕು. ಎಂದಿಗೂ ಸಹ ಶಕ್ತಿಶಾಲಿಗಳು ಬಲಹೀನರಾಗುವುದಿಲ್ಲ. ಬಲಹೀನರಾಗುವುದು ಎಂದರೆ ಮಾಯೆಯ ರೋಗವುಂಟಾಗುವುದು. ಈಗಂತು ಸದಾ ಆರೋಗ್ಯವಂತರು ಆಗಿದ್ದೀರಿ, ಆತ್ಮವು ಶಕ್ತಿಶಾಲಿ ಆಗಿ ಬಿಟ್ಟಿತು. ಶರೀರದ ಲೆಕ್ಕಚಾರವು ಬೇರೆ ಮಾತು ಆದರೆ ಮನಸ್ಸಂತು ಶಕ್ತಿಶಾಲಿ ಆಯಿತಲ್ಲವೆ. ಶರೀರವು ಬಲಹೀನವಾಗಿದೆ ಆದ್ದರಿಂದ ನಡೆಯುವುದಿಲ್ಲ, ಅದಂತು ಅಂತಿಮದಲ್ಲಿದೆ, ಆ ರೀತಿ ಅವಶ್ಯವಾಗಿ ಆಗುವುದು ಆದರೆ ಆತ್ಮವು ಶಕ್ತಿಶಾಲಿ ಆಗಿರಲಿ. ಶರೀರದ ಜೊತೆ ಆತ್ಮವಂತು ಬಲಹೀನವಾಗಬಾರದು. ಅದಕ್ಕಾಗಿ ಸದಾ ನೆನಪಿಟ್ಟುಕೊಳ್ಳಿರಿ - ಡಬಲ್ ಸಿಂಹಾಸನ ಅಧಿಕಾರಿಯಿಂದ ಡಬಲ್ ಕಿರೀಟಧಾರಿ ಆಗುವವರಿದ್ದೀರಿ. ಒಳ್ಳೆಯದು!
|
9 |
+
ಎಲ್ಲರೂ ಸಂತುಷ್ಟವಾಗಿ ಇದ್ದೀರಲ್ಲವೆ! ಸಂತುಷ್ಟತೆ ಅರ್ಥಾತ್ ಪ್ರಸನ್ನವಾಗಿರುವುದು. ಸದಾ ಪ್ರಸನ್ನವಾಗಿ ಇರುತ್ತೀರಾ ಅಥವಾ ಕೆಲವೊಮ್ಮೆ ಪ್ರಸನ್ನವಾಗಿರುತ್ತೀರಾ? ಕೆಲವೊಮ್ಮೆ ಅಪ್ರಸನ್ನ, ಕೆಲವೊಮ್ಮೆ ಪ್ರಸನ್ನವಾಗಿರುವಂತೆ ಇರುವುದಿಲ್ಲವೇ, ಕೆಲವೊಮ್ಮೆ ಕೆಲವು ಮಾತುಗಳಲ್ಲಿ ಅಪ್ರಸನ್ನರಂತು ಆಗುವುದಿಲ್ಲವೇ?ಇಂದು ಇದನ್ನು ಮಾಡಿದೆನು, ಇಂದು ಇದಾಯಿತು, ನೆನ್ನೆ ಅದಾಯಿತು - ಈ ರೀತಿಯಾಗಿ ಪತ್ರವನ್ನು ಬರೆಯುವುದಿಲ್ಲವೇ?ಸದಾ ಪ್ರಸನ್ನಚಿತ್ತರಾಗಿ ಇರುವವರು ತನ್ನ ಆತ್ಮಿಕ ಪ್ರಕಂಪನಗಳಿಂದ ಅನ್ಯರನ್ನೂ ಪ್ರಸನ್ನಗೊಳಿಸುವರು.ನಾನಂತು ಪ್ರಸನ್ನವಾಗಿಯೇ ಇರುವೆನು ಅಷ್ಟೇ ಅಲ್ಲ, ಆದರೆ ಪ್ರಸನ್ನತೆಯ ಶಕ್ತಿಯು ಅವಶ್ಯವಾಗಿ ಹರಡುವುದು ಅಂದಮೇಲೆ ಯಾರನ್ನಾದರೂ ಪ್ರಸನ್ನಗೊಳಿಸಬಹುದು - ಈ ರೀತಿ ಇದ್ದೀರಾ ಅಥವಾ ತಮ್ಮವರೆಗಷ್ಟೇ ಪ್ರಸನ್ನತೆಯಿರುವುದು ಸರಿಯೇ? ಅನ್ಯರನ್ನೂ ಪ್ರಸನ್ನಗೊಳಿಸುವಿರೆಂದರೆ ನಂತರ ಯಾವುದೇ ಪತ್ರಗಳು ಬರುವುದಿಲ್ಲ. ಒಂದುವೆಳೆ ಯಾರಿಂದಲಾದರೂ ಅಪ್ರಸನ್ನತೆಯ ಪತ್ರವು ಬಂದಿತೆಂದರೆ, ಮತ್ತೆ ಅವರಿಗೇ ಹಿಂತಿರುಗಿಸಿ ಕಳುಹಿಸಬೇಕಲ್ಲವೆ! ಈ ಸಮಯ ಮತ್ತು ದಿನಾಂಕವನ್ನು ನೆನಪಿಟ್ಟುಕೊಳ್ಳಿರಿ. ಮತ್ತು ಈ ಪತ್ರವನ್ನು ಬರೆಯಿರಿ - ಓ.ಕೆ.ಆಗಿದ್ದೇನೆ ಮತ್ತು ಎಲ್ಲರೂ ನನ್ನಿಂದಲೂ ಒ.ಕೆ.ಆಗಿದ್ದಾರೆ. ಕೇವಲ ಈ ಎರಡು ಸಾಲುಗಳಲ್ಲಿಯೇ ಬರೆಯಿರಿ. ನಾನೂ ಒ.ಕೆ., ಮತ್ತು ನನ್ನಿಂದ ಅನ್ಯರೂ ಒ.ಕೆ., ಇದ್ದಾರೆ, ಇವೆರಡು ಸಾಲುಗಳನ್ನು ಕಾರ್ಡಿನಲ್ಲಿ ಬರೆದರೂ ತಲುಪುತ್ತದೆ, ಅದಕ್ಕಾಗಿ ಇಷ್ಟೆಲ್ಲಾ ಖರ್ಚನ್ನೇಕೆ ಮಾಡುತ್ತೀರಿ! ಮತ್ತು ಪದೇ-ಪದೇ ಬರೆಯಬೇಡಿ, ಇಲ್ಲದಿದ್ದರೆ ಪ್ರತಿನಿತ್ಯವೂ ಕಾರ್ಡನ್ನು ಕಳುಹಿಸುತ್ತೀರಿ, ನಿತ್ಯವೂ ಕಳುಹಿಸಬಾರದು. ತಿಂಗಳಿಗೆ ಎರಡು ಬಾರಿ, 15 ದಿನದಲ್ಲಿ ಒಮ್ಮೆ “ಒ.ಕೆ.” ಎಂದು ಬರೆದು ಕಾರ್ಡನ್ನು ಕಳುಹಿಸಿರಿ, ಬೇರೆ ಕಥೆಗಳನ್ನು ಬರೆಯಬಾರದು. ತಮ್ಮ ಪ್ರಸನ್ನತೆಯಿಂದ ಅನ್ಯರನ್ನೂ ಪ್ರಸನ್ನರನ್ನಾಗಿ ಮಾಡಿರಿ. ಒಳ್ಳೆಯದು!
|
BKMurli/BKMurli/page_1019.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಇದನ್ನು ಯಾರು ಹೇಳಿದರು? ಧೈರ್ಯವಹಿಸಿ ಅರ್ಥಾತ್ ತಾಳ್ಮೆಯಿಂದಿರಿ ಎಂದು ತಂದೆಯು ಮಕ್ಕಳಿಗೆ ಹೇಳಿದರು, ಇಡೀ ಪ್ರಪಂಚಕ್ಕೆ ಹೇಳಲಿಲ್ಲ. ಭಲೆ ಎಲ್ಲರೂ ಮಕ್ಕಳಾಗಿದ್ದಾರೆ ಆದರೆ ಎಲ್ಲರೂ ಕುಳಿತುಕೊಂಡಿಲ್ಲ ಅಲ್ಲವೆ. ಮಕ್ಕಳೇ ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಈ ದುಃಖಧಾಮವು ಬದಲಾಗುತ್ತಿದೆ, ಸುಖಧಾಮಕ್ಕಾಗಿ ನಾವು ಓದುತ್ತಿದ್ದೇವೆ ಮತ್ತು ಶ್ರೀಮತದಂತೆ ನಡೆಯುತ್ತಿದ್ದೇವೆ. ಮಕ್ಕಳಿಗೆ ಧೈರ್ಯವನ್ನೂ ಕೊಡುತ್ತಾರೆ, ವಾಸ್ತವದಲ್ಲಿ ಇಡೀ ಪ್ರಪಂಚಕ್ಕೆ ಗುಪ್ತ ಧೈರ್ಯವು ಸಿಗುತ್ತಿದೆ. ನಾವು ಸನ್ಮುಖದಲ್ಲಿ ಕೇಳುತ್ತೇವೆಂದು ನೀವು ತಿಳಿದುಕೊಳ್ಳುತ್ತೀರಿ, ಎಲ್ಲರೂ ಕೇಳುವುದಿಲ್ಲ. ಅವರು ಬೇಹದ್ದಿನ ತಂದೆಯಾಗಿದ್ದಾರೆ, ಬೇಹದ್ದಿನ ದುಃಖಹರ್ತ-ಸುಖಕರ್ತನಾಗಿದ್ದಾರೆ. ದುಃಖವನ್ನು ದೂರ ಮಾಡಿ ಸುಖದ ಮಾರ್ಗವನ್ನು ತಿಳಿಸುತ್ತಾರೆ. ನಿಮಗೆ ಯಾವಾಗ ಸುಖವಿರುವುದೋ ಆಗ ದುಃಖದ ಹೆಸರೂ ಇರುವುದಿಲ್ಲ, ಸುಖದ ಪ್ರಪಂಚಕ್ಕೆ ಸತ್ಯಯುಗ, ದುಃಖದ ಪ್ರಪಂಚಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಇದನ್ನೂ ಸಹ ಮಕ್ಕಳೇ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಸಂಪೂರ್ಣ ಸುಖವಿರುತ್ತದೆ, 16 ಕಲಾ ಸಂಪೂರ್ಣ. ಹೇಗೆ ಪೂರ್ಣ ಚಂದ್ರಮನಿರುತ್ತಾನೆ, ನಂತರ ಕಲೆಗಳು ಕಡಿಮೆಯಾಗುತ್ತಾ-ಆಗುತ್ತಾ ಅಮಾವಾಸ್ಯೆಯಂದು ಚಿಕ್ಕ ಗೆರೆಯಷ್ಟೇ ಉಳಿದುಕೊಳ್ಳುತ್ತದೆ. ಪೂರ್ಣ ಅಂಧಕಾರವಾಗಿ ಬಿಡುತ್ತದೆ. 16 ಕಲಾ ಸಂಪೂರ್ಣನಿದ್ದಾಗ ಸಂಪೂರ್ಣ ಸುಖವೂ ಇರುವುದು. ಕಲಿಯುಗದಲ್ಲಿ 16 ಕಲೆಗಳು ಅಪೂರ್ಣವಾಗಿವೆ ಆದ್ದರಿಂದ ದುಃಖವೂ ಆಗುತ್ತದೆ. ಈ ಇಡೀ ಪ್ರಪಂಚಕ್ಕೆ ಮಾಯಾರೂಪಿ ಗ್ರಹಣವು ಹಿಡಿಯುತ್ತದೆ ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ನಿಮ್ಮಲ್ಲಿ ಯಾವ ದೇಹಾಭಿಮಾನವಿದೆಯೋ ಅದನ್ನು ಮೊಟ್ಟ ಮೊದಲು ಬಿಡಿ. ಈ ದೇಹಾಭಿಮಾನವು ನಿಮಗೆ ಬಹಳ ದುಃಖ ಕೊಡುತ್ತದೆ, ಆತ್ಮಾಭಿಮಾನಿಯಾಗಿರಿ ಆಗ ತಂದೆಯನ್ನೂ ನೆನಪು ಮಾಡಬಲ್ಲಿರಿ. ದೇಹಾಭಿಮಾನದಲ್ಲಿ ಇರುವುದರಿಂದ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ಇದು ಅರ್ಧಕಲ್ಪದ ದೇಹಾಭಿಮಾನವಾಗಿದೆ, ಈ ಅಂತಿಮ ಜನ್ಮದಲ್ಲಿ ದೇಹೀ-ಅಭಿಮಾನಿಯಾಗುವುದರಿಂದ ಮೊದಲನೆಯದಾಗಿ ಪಾಪಗಳ ಹೊರೆಯು ಸಮಾಪ್ತಿಯಾಗುತ್ತದೆ ಮತ್ತು 16 ಕಲಾ ಸಂಪೂರ್ಣ, ಸತೋಪ್ರಧಾನರಾಗುತ್ತೀರಿ. ಅನೇಕರು ದೇಹಾಭಿಮಾನದ ಮಾತುಗಳನ್ನೂ ತಿಳಿದುಕೊಳ್ಳುವುದಿಲ್ಲ. ಮನುಷ್ಯನನ್ನು ದುಃಖಿಯನ್ನಾಗಿ ಮಾಡುವುದೇ ದೇಹಾಭಿಮಾನವಾಗಿದೆ. ನಂತರ ಅನ್ಯ ವಿಕಾರಗಳು ಬರುತ್ತವೆ. ದೇಹೀ-ಅಭಿಮಾನಿಗಳಾದರೆ ಇವೆಲ್ಲಾ ವಿಕಾರಗಳು ಬಿಟ್ಟು ಹೋಗುತ್ತವೆ. ಇಲ್ಲದಿದ್ದರೆ ಇವು ಬಿಡುವುದು ಕಷ್ಟವಿದೆ. ದೇಹಾಭಿಮಾನದ ಅಭ್ಯಾಸವು ಪಕ್ಕಾ ಆಗಿರುವ ಕಾರಣ ತನ್ನನ್ನು ಆತ್ಮನೆಂದು ತಿಳಿದುಕೊಳ್ಳುವುದೇ ಇಲ್ಲ. ಇದರಲ್ಲಿ ಎಲ್ಲಾ ವಿಕಾರಗಳನ್ನು ದಾನ ಮಾಡಬೇಕಾಗುತ್ತದೆ. ಮೊಟ್ಟ ಮೊದಲು ದೇಹಾಭಿಮಾನವನ್ನು ಬಿಡಬೇಕಾಗಿದೆ. ಕಾಮ, ಕ್ರೋ��� ಇತ್ಯಾದಿಗಳು ನಂತರ ಬರುತ್ತವೆ. ನಿಮ್ಮ ತಂದೆಯು ಅವರಾಗಿದ್ದಾರೆ. ದೇಹಾಭಿಮಾನದ ಕಾರಣ ಲೌಕಿಕ ತಂದೆಯನ್ನೇ ತಂದೆಯೆಂದು ತಿಳಿದುಕೊಳ್ಳುತ್ತಾ ಬಂದಿದ್ದೀರಿ. ಈಗ ಮುಖ್ಯ ಮಾತೇನೆಂದರೆ ಪಾವನರಾಗುವುದು ಹೇಗೆ? ಪತಿತ ಪ್ರಪಂಚದಲ್ಲಿ ಎಲ್ಲರೂ ಪತಿತರಾಗಿದ್ದಾರೆ, ಯಾರೂ ಪಾವನರಿರಲು ಸಾಧ್ಯವಿಲ್ಲ. ಒಬ್ಬ ತಂದೆಯೇ ಎಲ್ಲರನ್ನೂ ಪಾವನರನ್ನಾಗಿ ಮಾಡಿ ಖುಷಿ-ಖುಷಿಯಿಂದ ಮರಳಿ ಕರೆದುಕೊಂಡು ಹೋಗುತ್ತಾರೆ.
|
2 |
+
ಈಗ ನೀವು ಮಕ್ಕಳಿಗೆ ಯೋಗದ ಚಿಂತನೆಯಿದೆ. ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ದೇಹಾಭಿಮಾನವನ್ನು ಕಳೆಯುವುದು ಎಂದರೆ ಸಾಯುವುದು ಎಂದರ್ಥ. ನಾವಾತ್ಮರು ತಂದೆಯನ್ನು ನೆನಪು ಮಾಡಿ ಪತಿತರಿಂದ ಪಾವನರಾಗಿ ಬಿಡಬೇಕು, ಈ ಪಾವನರಾಗುವ ಯುಕ್ತಿಯನ್ನು ತಂದೆಯೇ ತಿಳಿಸಿದ್ದರು. ಈಗ ಪುನಃ ತಿಳಿಸುತ್ತಿದ್ದಾರೆ. ಕಲ್ಪ-ಕಲ್ಪವೂ ತಿಳಿಸುತ್ತಾರೆ. ಪ್ರಪಂಚದಲ್ಲಿ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮೂಲ ಮಾತು ಶಿವ ತಂದೆಯನ್ನು ನೆನಪು ಮಾಡುವುದಾಗಿದೆ. ಯಾವಾಗ ಇಲ್ಲಿ ಬಂದು ಬಿ.ಕೆ.ಗಳ ಮುಖಾಂತರ ಕೇಳುವರೋ ಆಗಲೇ ಅರ್ಥವಾಗುತ್ತದೆ ಏಕೆಂದರೆ ತಾತನ ಆಸ್ತಿಯು ಸಿಗಬೇಕಾಗಿದೆ. ಅಂದಮೇಲೆ ಅವಶ್ಯವಾಗಿ ಯಾರ ಮುಖಾಂತರ ಸಿಗುವುದೋ ಅವರು ಅವಶ್ಯವಾಗಿ ಬೇಕಾಗಿದೆ. ಸಲಹೆಯನ್ನಂತೂ ಸಾಕಾರ ತಂದೆಯ ಮುಖಾಂತರವೇ ತೆಗೆದುಕೊಳ್ಳಬೇಕಾಗುವುದು. ಬಹಳ ಮಕ್ಕಳು ತಿಳಿಯುತ್ತಾರೆ - ನಾವಂತೂ ಶಿವ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡುತ್ತೇವೆ, ಬ್ರಹ್ಮಾರವರನ್ನು ಬಿಟ್ಟು ಬಿಡುತ್ತೇವೆ. ಆದರೆ ಬ್ರಹ್ಮನಿಲ್ಲದೆ ಶಿವ ತಂದೆಯಿಂದ ಹೇಗೆ ಕೇಳುವಿರಿ! ನಮಗೆ ಬ್ರಹ್ಮಾ ತಂದೆಯೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ಹೇಳುತ್ತಾರೆ. ಒಳ್ಳೆಯದು - ನೀವು ತಮ್ಮನ್ನು ಆತ್ಮನೆಂದು ತಿಳಿದು ಶಿವ ತಂದೆಯನ್ನು ನೆನಪು ಮಾಡಿರಿ, ಮನೆಗೆ ಹೋಗಿ ಕುಳಿತುಕೊಳ್ಳಿ ಆದರೆ ಯಾವ ಸೃಷ್ಟಿಚಕ್ರದ ಜ್ಞಾನವು ಸಿಗುತ್ತದೆಯೋ ಅದನ್ನು ಹೇಗೆ ಕೇಳುವಿರಿ? ಈ ಜ್ಞಾನವನ್ನು ತಿಳಿದುಕೊಳ್ಳದೆ ಕೇವಲ ನೆನಪು ಮಾಡಲು ಹೇಗೆ ಸಾಧ್ಯ! ಜ್ಞಾನವನ್ನು ಈ ಬ್ರಹ್ಮನ ಮುಖಾಂತರವೇ ತೆಗೆದುಕೊಳ್ಳಬೇಕಾಗುತ್ತದೆಯಲ್ಲವೆ. ಮತ್ತೆಂದೂ ಈ ಜ್ಞಾನ ಸಿಗಲು ಸಾಧ್ಯವಿಲ್ಲ. ಪ್ರತಿನಿತ್ಯವೂ ಹೊಸ-ಹೊಸ ಮಾತುಗಳು ತಂದೆಯ ಮುಖಾಂತರವೇ ಸಿಗುತ್ತದೆ. ಬ್ರಹ್ಮಾ ಮತ್ತು ಬ್ರಹ್ಮಾಕುಮಾರಿಯರಿಲ್ಲದೆ ಹೇಗೆ ತಿಳಿದುಕೊಳ್ಳುವಿರಿ! ಇದೆಲ್ಲವನ್ನೂ ಕಲಿಯಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಯಾರು ಮನೆಯಲ್ಲಿಯೇ ಕುಳಿತು ಕರ್ಮಾತೀತ ಸ್ಥಿತಿಯನ್ನು ಪಡೆಯುವ ಪುರುಷಾರ್ಥ ಮಾಡುವರೋ ಅವರು ಭಲೆ ಮುಕ್ತಿಯಲ್ಲಿ ಹೋಗುವರು ಆದರೆ ಜೀವನ್ಮುಕ್ತಿಯಲ್ಲಿ ಹೋಗಲು ಸಾಧ್ಯವಿಲ್ಲ. ಜ್ಞಾನ ಧನವನ್ನು ಧಾರಣೆ ಮಾಡಿಕೊಂಡು ದಾನ ಮಾಡಿದಾಗಲೇ ಧನವಂತರಾಗುವಿರಿ, ಇಲ್ಲದಿದ್ದರೆ ಸದಾ ಆರೋಗ್ಯವಂತರು ಹೇಗಾಗುತ್ತೀರಿ! ಮುರುಳಿಯ ಆಧಾರವನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ. ವಿದ್ಯೆಯನ್ನಂತೂ ಓದಬೇಕಲ್ಲವೆ. ಇಂತಹವರು ಅನೇಕರು ಬರುತ್ತಾರೆ, ಕೇವಲ ಲಕ್ಷ್ಯವನ್ನು ತೆಗೆದುಕೊಂಡು ಮುಕ್ತಿಯಲ್ಲಿ ಹೋಗುತ್ತಾರೆ. ನೀವು ಎಲ್ಲಾ ಮನುಷ್ಯ ಮಾತ್ರರಿಗೂ ತಿಳಿಸುತ್ತೀರಿ - ನೀವು ಕೇವಲ ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ. ಯಾವಾಗ ಜ್ಞಾನ ಧನವನ್ನು ಪಡೆಯುವರೋ ಆಗಲೇ ಸತ್ಯಯುಗದಲ್ಲಿ ಸಾಹುಕಾರರಾಗುವರು. ಇಲ್ಲದಿದ್ದರೆ ಮುಕ್ತಿಯಲ್ಲಿ ಹೋಗಿ ಮತ್ತೆ ಭಕ್ತಿಮಾರ್ಗದ ಸಮಯದಲ್ಲಿ ಬಂದು ಭಕ್ತಿ ಮಾಡುತ್ತಾರೆ, ಯಾರ ಕಲ್ಯಾಣವನ್ನೂ ಮಾಡಲು ಸಾಧ್ಯವಿಲ್ಲ ಏಕೆಂದರೆ ಮನುಷ್ಯರಿಂದ ದೇವತೆಯಾಗಬೇಕೆಂದರೆ ಜ್ಞಾನವು ಅವಶ್ಯವಾಗಿ ಬೇಕಾಗಿದೆ. ಜ್ಞಾನವನ್ನು ಕೇಳಿದ ನಂತರ ತಿಳಿಸಬೇಕಾಗಿದೆ. ಪ್ರದರ್ಶನಿಯಲ್ಲಿ ನೋಡಿರಿ, ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ ಆದರೂ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಆತ್ಮವು ಎಷ್ಟು ಚಿಕ್ಕ ಬಿಂದುವಾಗಿದೆ. ಪ್ರತಿಯೊಂದು ಆತ್ಮನಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ, ಇದನ್ನು ನೀವೀಗ ತಿಳಿದುಕೊಂಡಿದ್ದೀರಿ. ಎಲ್ಲಾ ಮನುಷ್ಯ ಮಾತ್ರರು ಪಾತ್ರಧಾರಿಗಳಾಗಿದ್ದಾರೆ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಹಳೆಯ ಪ್ರಪಂಚದ ವಿನಾಶವೂ ಆಗಲಿದೆ. ರಾಮನೂ ಹೋದ, ರಾವಣನೂ ಹೋದನೆಂದು ಗಾಯನವಿದೆ. ಎಲ್ಲರೂ ಹೋಗುವರು ಆದರೆ ಮಕ್ಕಳಾದವರಿಗೆ ದುಃಖವಾಗಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ, ಇದು ಮಾಡಿ-ಮಾಡಲ್ಪಟ್ಟ ಡ್ರಾಮಾ ಆಗಿದೆ, ಎಲ್ಲರ ವಿನಾಶವು ಆಗಲೇಬೇಕಾಗಿದೆ. ರಾಜ-ರಾಣಿ, ಸಾಧು-ಸಂತ ಎಲ್ಲರೂ ಮರಣ ಹೊಂದುತ್ತಾರೆ ಅಂದಮೇಲೆ ಅವರನ್ನು ಯಾರು ಸುಡುತ್ತಾರೆ? ಇದಂತೂ ಕೇವಲ ಅವರ ಹೆಸರನ್ನು ಪ್ರಸಿದ್ಧ ಮಾಡುವುದಕ್ಕಾಗಿ ಮಾಡುತ್ತಾರೆ. ಇದರಲ್ಲಿ ಯಾವುದೇ ಲಾಭವಿಲ್ಲ ಅಥವಾ ಅವರ ಆತ್ಮಕ್ಕೂ ಇದರಿಂದ ಸುಖ ಸಿಗುವುದಿಲ್ಲ. ಮನುಷ್ಯರಂತೂ ಭಕ್ತಿಮಾರ್ಗದಲ್ಲಿ ಏನೆಲ್ಲವನ್ನೂ ಮಾಡುತ್ತಾರೆಯೋ ಅದೆಲ್ಲವೂ ಅಂಧಶ್ರದ್ಧೆಯಿಂದ ಮಾಡುತ್ತಾರೆ. ಈಗ ತಂದೆಯು ನಿಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡುತ್ತಾರೆ! ಪದೇ-ಪದೇ ಈ ಚಿತ್ರಗಳನ್ನು ನೋಡಿರಿ ಆಗ ನಮಗೆ ತಂದೆಯು ಓದಿಸಿ ಹೇಗೆ ಮಾಡುತ್ತಿದ್ದಾರೆಂದು ನೆನಪಿರುತ್ತದೆ ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಕಾರ್ಯದಲ್ಲಿ ತರುವುದಿಲ್ಲ. ತಂದೆಯು ಬಹಳಷ್ಟು ತಿಳಿಸುತ್ತಾರೆ ಆದರೆ ಅದನ್ನು ಕಾರ್ಯದಲ್ಲಿ ತರಬೇಕಲ್ಲವೆ. ತಂದೆಯ ಮಕ್ಕಳಾಗಿಯೂ ಸರ್ವೀಸ್ ಮಾಡುವುದಿಲ್ಲ. ತಂದೆಯಂತೂ ಕಲ್ಯಾಣಕಾರಿಯಾಗಿದ್ದಾರೆ. ಕೆಲವು ಮಕ್ಕಳು ಅನೇಕರ ಅಕಲ್ಯಾಣವನ್ನೇ ಮಾಡುತ್ತಾ ಇರುತ್ತಾರೆ. ಯಾರಿಗೆ ಸ್ವಲ್ಪ ಭಾವನೆಯಾದರೂ ಇರುತ್ತದೆಯೋ ಅವರ ಭಾವನೆಯನ್ನೂ ಸಹ ತೆಗೆಸಿ ಬಿಡುತ್ತಾರೆ. ಇಂತಿಂತಹ ವಿಕರ್ಮಗಳನ್ನು ಮಾಡುವವರೂ ಇದ್ದಾರೆ. ಭೂತಗಳ ಪ್ರವೇಶತೆಯಾಗುತ್ತದೆಯಲ್ಲವೆ! ಆದ್ದರಿಂದ ಸದ್ಗುರುವಿನ ನಿಂಧಕರಿಗೆ ನೆಲೆಯಿಲ್ಲವೆಂದು ಗಾಯನವಿದೆ. ಇದರಲ್ಲಿ ಬಾಪ್ದಾದಾ ಇಬ್ಬರೂ ಬಂದು ಬಿಡುತ್ತಾರೆ. ನಿರಾಕಾರನನ್ನು ಯಾರೇನೂ ಮಾಡಲು ಸಾಧ್ಯವಿಲ್ಲ. ಅವರಿಗೆ ಏನು ಹೇಳಲು ಸಾಧ್ಯ! ಭಕ್ತಿಮಾರ್ಗದಲ್ಲಿ ಭಗವಂತನೇ ದುಃಖ ಕೊಡುತ್ತಾರೆ ಎಂದು..... ಹೇಳುತ್ತಿದ್ದರು, ಅಜ್ಞಾನದ ಕಾರಣ ಹೀಗೆ ತಿಳಿಯುತ್ತಿದ್ದರು. ಈಗಂತೂ ಮಕ್ಕಳು ತಿಳಿದುಕೊಳ್ಳುತ್ತೀರಿ - ಅಜ್ಞಾನಕ್ಕೆ ವಶವಾಗಿ ತಂದೆಗೆ ಅಷ್ಟೊಂದು ತಿರಸ್ಕರಿಸುತ್ತಾರೆ. ತಮೋಪ್ರಧಾನರನ್ನು ಸತೋಪ್ರಧಾನರನ್ನಾಗಿ ಮಾಡುವವರು ಯಾರೂ ಇಲ್ಲ. ಪರಮಾತ್ಮ ಸರ್ವವ್ಯಾಪಿಯೆಂದು ಉಲ್ಟಾ ಮತ ಕೊಡುತ್ತಾರೆ. ಇದರಿಂದ ಮನುಷ್ಯರು ಎಷ್ಟೊಂದು ತಬ್ಬಿಬ್ಬಾಗುತ್ತಾರೆ! ಆದ್ದರಿಂದಲೇ ಬ್ರಹ್ಮನ ತನುವಿನಲ್ಲಿ ಪರಮಾತ್ಮನು ಬರಲು ಹೇಗೆ ಸಾಧ್ಯವೆಂದು ಹೇಳುತ್ತಾರೆ. ಅಂದಮೇಲೆ ಮತ್ತ್ಯಾರ ತನುವಿನಲ್ಲಿ ಬರುವುದು? ಕೃಷ್ಣನ ತನುವಿನಲ್ಲಿ ಬರುವುದೇ? ಅವರು ಇಲ್ಲದಿದ್ದರೆ ಬ್ರಹ್ಮಾಕುಮಾರ-ಕುಮಾರಿಯರು ಹೇಗಾಗುವಿರಿ? ಕೃಷ್ಣನ ತನುವಿನಲ್ಲಿ ಬಂದರೆ ಅವರಿಂದ ಜ್ಞಾನವನ್ನು ಕೇಳಿದವರು ದೈವೀಕುಮಾರ-ಕುಮಾರಿಯರಾಗಿ ಬಿಡುತ್ತಾರೆ. ಬ್ರಾಹ್ಮಣರಂತೂ ಅವಶ್ಯವಾಗಿ ಬ್ರಹ್ಮಾಕುಮಾರ ಮತ್ತು ಕುಮಾರಿಯರಾಗುತ್ತಾರೆ. ಬ್ರಾಹ್ಮಣರಿಲ್ಲದೆ ತಂದೆಯು ಏನನ್ನೂ ಮಾಡಲು ಸಾಧ್ಯವಿಲ್ಲ ಆದ್ದರಿಂದ ಇವರ ಚಿತ್ರವನ್ನು ಅವಶ್ಯವಾಗಿ ಕೊಡಬೇಕಾಗಿದೆ. ಈ ಬ್ರಹ್ಮನೂ ಸಹ ಬ್ರಾಹ್ಮಣನಾಗಿದ್ದಾರೆ, ಪ್ರಜಾಪಿತ ಬ್ರಹ್ಮನು ಭಾರತದಲ್ಲಿಯೇ ಬೇಕಾಗಿದೆ. ದಿನ-ಪ್ರತಿದಿನ ಮನೆಯಲ್ಲಿ ಕುಳಿತೇ ಅನೇಕರಿಗೆ ಬ್ರಹ್ಮನ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ, ವೃದ್ಧಿಯಾಗುತ್ತಿರುತ್ತದೆ. ಯಾರ ಪಾತ್ರವಿರುವುದೋ ಅವರು ಓಡೋಡಿ ಬರುತ್ತಾರೆ. ಭಗವಂತನು ಅವಶ್ಯವಾಗಿ ಯಾವುದೋ ರೂಪದಲ್ಲಿದ್ದಾರೆಂದು ಅನೇಕರು ತಿಳಿದುಕೊಳ್ಳುತ್ತಾರೆ. ಸಾಕ್ಷಾತ್ಕಾರವನ್ನೂ ಸಹ ಪರಮಪಿತ ಪರಮಾತ್ಮನ ವಿನಃ ಮತ್ತ್ಯಾರೂ ಮಾಡಿಸಲು ಸಾಧ್ಯವಿಲ್ಲ. ಶಿವ ತಂದೆಯು ಬ್ರಹ್ಮನ ಮುಖಾಂತರವೇ ಸ್ಥಾಪನೆ ಮಾಡುತ್ತಾರೆ, ಜ್ಞಾನವನ್ನು ಕೊಡುತ್ತಾರೆ ಮತ್ತು ಬ್ರಾಹ್ಮಣ ಧರ್ಮವನ್ನೂ ರಚಿಸುತ್ತಾರೆ. ಬ್ರಾಹ್ಮಣ ಧರ್ಮವು ಅವಶ್ಯವಾಗಿ ಬೇಕಾಗಿದೆ, ಅವರು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ಪ್ರಜಾಪಿತ ಬ್ರಹ್ಮನೂ ಸಹ ಬಹಳ ಶ್ರೇಷ್ಠನಲ್ಲವೆ. ಅವರಿಗೆ ಎರಡನೇ ಭಗವಂತನೆಂದು ಹೇಳುತ್ತಾರೆ. ಸೂಕ್ಷ್ಮವತನದಲ್ಲಿ ಮತ್ತ್ಯಾರೂ ಇಲ್ಲ. ಬ್ರಹ್ಮನ ಮೂಲಕ ಸ್ಥಾಪನೆಯಾಗುತ್ತದೆ ಅಷ್ಟೇ. ಬ್ರಹ್ಮನೇ ನಂತರ ದೇವತೆಯಾಗುತ್ತಾರೆ, 84 ಜನ್ಮಗಳ ನಂತರ ಅವರೇ ಬ್ರಹ್ಮನಾಗುತ್ತಾರೆ. ಬ್ರಹ್ಮಾ-ಸರಸ್ವತಿಯೇ ಮತ್ತೆ ಲಕ್ಷ್ಮೀ-ನಾರಾಯಣರಾಗುತ್ತಾರೆ. ಜ್ಞಾನ ಜ್ಞಾನೇಶ್ವರಿಯೇ ನಂತರ ರಾಜ ರಾಜೇಶ್ವರಿಯಾಗುತ್ತಾರೆ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ ಹೇಗಾದರು? ಇದು ಬಹಳಒಳ್ಳೆಯ ಮಾತಾಗಿದೆ. ಇದರ ಬಗ್ಗೆ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಈ ಜ್ಞಾನವು ಒಬ್ಬ ತಂದೆಯ ಮೂಲಕ ಸಿಗುತ್ತದೆ. ಪ್ರದರ್ಶನಿಯಲ್ಲಿ ಬಹಳ ಚೆನ್ನಾಗಿ ತಿಳಿಸಿರಿ - ನೀವು ಬ್ರಹ್ಮನನ್ನು ನೋಡಿ ಏಕೆ ತಬ್ಬಿಬ���ಬಾಗುತ್ತೀರಿ! ಇಷ್ಟೇಲ್ಲಾ ಬ್ರಾಹ್ಮಣ-ಬ್ರಾಹ್ಮಣಿಯರಿದ್ದಾರೆ. ಮೊದಲು ಬ್ರಾಹ್ಮಣರಾದರು ಆದ್ದರಿಂದ ವಿಷ್ಣುಪುರಿಯ ಮಾಲೀಕ ದೇವತೆಯಾದರು. ಬ್ರಹ್ಮನ ದಿನ ಮತ್ತು ಬ್ರಹ್ಮನ ರಾತ್ರಿಯು ಪ್ರಸಿದ್ಧವಾಗಿದೆ. ಈಗ ರಾತ್ರಿಯಾಗಿದೆ, ಹೀಗೆ ಚಿತ್ರಗಳ ಮುಂದೆ ಕುಳಿತು ಅಭ್ಯಾಸ ಮಾಡಿರಿ. ಯಾರು ಸರ್ವೀಸ್ ಮಾಡುತ್ತಾರೆಯೋ ಅವರಿಗೆ ಸರ್ವೀಸಿನ ವಿನಃ ಮತ್ತ್ಯಾವುದೇ ವಿಚಾರ ಬರುವುದಿಲ್ಲ. ಸರ್ವೀಸಿಗಾಗಿ ಓಡುತ್ತಾ ಇರುತ್ತಾರೆ. ಬುದ್ಧಿಯಲ್ಲಿ ಜ್ಞಾನದ ಹನಿ ಬೀಳುತ್ತಿದ್ದು ಬುದ್ಧಿರೂಪಿ ಜೋಳಿಗೆಯು ಚೆನ್ನಾಗಿ ತುಂಬಿದಾಗಲೇ ಉಮ್ಮಂಗ ಬರುವುದು. ಸರ್ವೀಸಿಗಾಗಿ ಓಡುತ್ತಾ ಇರುತ್ತೀರಿ. ಜ್ಞಾನವಿದ್ದು ಅನ್ಯರಿಗೆ ತಿಳಿಸದೇ ಇರಲು ಸಾಧ್ಯವೇ ಇಲ್ಲ. ಅಂದಮೇಲೆ ಜ್ಞಾನ ತೆಗೆದುಕೊಳ್ಳುವುದಾದರೂ ಏತಕ್ಕಾಗಿ? ತೆಗೆದುಕೊಳ್ಳುವುದೆಂದರೆ ದಾನ ಮಾಡುವುದಾಗಿದೆ. ದಾನ ಮಾಡುವುದಿಲ್ಲ, ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವುದಿಲ್ಲವೆಂದರೆ ಅವರು ಬ್ರಾಹ್ಮಣರೇನು! ಬಹಳ ಕನಿಷ್ಠ ದರ್ಜೆಯವರಾದರು. ತಂದೆಯು ನಿತ್ಯವೂ ಮಕ್ಕಳಿಗೆ ತಿಳಿಸುತ್ತಾರೆ, ಪ್ರಥಮ ದರ್ಜೆಯ ಬ್ರಾಹ್ಮಣರ ಕರ್ತವ್ಯವೇ ಇದಾಗಿದೆ - ಸರ್ವೀಸ್ ಮಾಡುವುದು. ಡಿಸ್ಸರ್ವೀಸ್ ಸಹ ಮಕ್ಕಳಿಂದಲೇ ಆಗುತ್ತದೆ. ಒಂದುವೇಳೆ ಸರ್ವೀಸ್ ಮಾಡದಿದ್ದರೆ ಅವಶ್ಯವಾಗಿ ಡಿಸ್ಸರ್ವೀಸ್ ಮಾಡುತ್ತೀರಿ. ಒಳ್ಳೊಳ್ಳೆಯ ಮಕ್ಕಳು ಎಲ್ಲಿಗೇ ಹೋದರೂ ಅವಶ್ಯವಾಗಿ ಸರ್ವೀಸ್ ಮಾಡುತ್ತಾರೆ. ಯಾವಾಗ ಜ್ಞಾನವು ಸಂಪೂರ್ಣವಾಗಿ ಬಿಡುವುದೋ ಆಗ ಅನನ್ಯ ಮಕ್ಕಳಿಂದ ಯಾವುದೇ ತಪ್ಪಾಗುವುದಿಲ್ಲ ಆಗಲೇ ಮಾಲೆಯ ಮಣಿಯಾಗುವರು. ಮುಖ್ಯವಾಗಿ 8 ಮಣಿಗಳಿವೆ, ಪರೀಕ್ಷೆಯು ಬಹಳ ದೊಡ್ಡದಾಗಿದೆಯಲ್ಲವೆ. ದೊಡ್ಡ ಪರೀಕ್ಷೆಯನ್ನು ಯಾವಾಗಲೂ ಕೆಲವರೇ ತೇರ್ಗಡೆ ಮಾಡುತ್ತಾರೆ ಏಕೆಂದರೆ ಸರ್ಕಾರವು ಅವರಿಗೆ ನೌಕರಿ ಕೊಡಬೇಕಾಗುತ್ತದೆ. ತಂದೆಯೂ ಸಹ ಇಲ್ಲಿ ವಿಶ್ವದ ಮಾಲೀಕರನ್ನಾಗಿ ಮಾಡಬೇಕಾಗುತ್ತದೆ ಆದ್ದರಿಂದ ಈ ಪರೀಕ್ಷೆಯಲ್ಲಿ ಕೆಲವರು ತೇರ್ಗಡೆಯಾಗುತ್ತಾರೆ, ಪ್ರಜೆಗಳಂತೂ ಲಕ್ಷಾಂತರ ಮಂದಿಯಾಗುತ್ತಾರೆ ಆದ್ದರಿಂದ ತಂದೆಯು ಕೇಳುತ್ತಾರೆ - ಮಹಾರಾಜರಾಗುತ್ತೀರೋ ಅಥವಾ ಪ್ರಜೆಗಳಲ್ಲಿ ಸಾಹುಕಾರರಾಗುತ್ತೀರೋ? ಇಲ್ಲವೆ ಬಡವರಾಗುತ್ತೀರೋ? ಹೇಳಿರಿ - ಏನಾಗುತ್ತೀರಿ? ಮಹಾರಾಜರ ಬಳಿ ದಾಸ-ದಾಸಿಯರಂತೂ ಅನೇಕರಿರುತ್ತಾರೆ ಮತ್ತು ವರದಕ್ಷಿಣೆಯಾಗಿಯೂ ದಾಸಿಯರನ್ನು ಕಳುಹಿಸುತ್ತಾರೆ. ಪುರುಷಾರ್ಥ ಮಾಡಿ ಒಳ್ಳೆಯ ಪದವಿಯನ್ನು ಪಡೆಯಬೇಕು. ನಿಮಂತ್ರಣ ಕೊಡುವಷ್ಟು ಬುದ್ಧಿವಂತರಾಗಬೇಕು. ಕೆಲವರನ್ನೇ ಭಾಷಣಕ್ಕಾಗಿ ಕರೆಯುತ್ತಾರೆ, ಇದನ್ನಂತೂ ತಿಳಿದುಕೊಂಡಿದ್ದೀರಲ್ಲವೆ. ಬಾಕಿ ಯಾರಲ್ಲಿ ಲಕ್ಷಣಗಳಿಲ್ಲವೋ ಅವರನ್ನು ಯಾರೂ ಕರೆಸುವುದಿಲ್ಲ. ಆದರೆ ನಾವು ಅಷ್ಟು ಕನಿಷ್ಠರಾಗಿದ್ದೇವೆ ಎಂಬುದು ಸ್ವಯಂಗೆ ಅರ್ಥವಾಗುತ್ತದೆಯೇ? ಕೆಲವರಂತೂ ಒಳ್ಳೆಯ ಸೇವಾಧಾರಿಗಳಿದ್ದಾರೆ. ಎಲ್ಲಿ ನೋಡಿದರಲ್ಲಿ ಸರ್��ೀಸಿಗಾಗಿ ಹೋಗುತ್ತಾರೆ. ನೌಕರಿಯ ವಿಚಾರವನ್ನೂ ಮಾಡದೆ ಸೇವೆಗೆ ಓಡುತ್ತಾರೆ. ಕೆಲವರು ನೌಕರಿಯಿಲ್ಲದಿದ್ದರೂ ಸಹ ಸರ್ವೀಸ್ ಮಾಡುವುದಿಲ್ಲ, ಉಮ್ಮಂಗವಿಲ್ಲ ಅಂದರೆ ಅದೃಷ್ಟದಲ್ಲಿಲ್ಲ ಅಥವಾ ಗ್ರಹಚಾರಿಯಿದೆ ಎಂದರ್ಥ. ಸರ್ವೀಸ್ ಬಹಳಷ್ಟಿದೆ, ಪರಿಶ್ರಮವೂ ಪಡಬೇಕಾಗುತ್ತದೆ. ಸುಸ್ತಾಗುತ್ತ, ತಿಳಿಸುತ್ತಾ-ತಿಳಿಸುತ್ತಾ ಗಂಟಲು ಕಟ್ಟುತ್ತದೆ, ಪುರುಷಾರ್ಥಿಗಳ ಗಂಟಲೂ ಕಟ್ಟುತ್ತದೆಯೆಂದರೆ ಬಹಳ ಚೆನ್ನಾಗಿ ಸರ್ವೀಸ್ ಮಾಡಿದರು ಎಂದಲ್ಲ. ಬಹಳ ರಾಯಲ್ ಸರ್ವೀಸ್ ಮಾಡುವವರು ಯಾರು ಎಂದು ತಂದೆಗೆ ಗೊತ್ತಿದೆ ಆದರೆ ಕೆಲವರಲ್ಲಿ ಬಲಹೀನತೆಗಳೂ ಇರುತ್ತವೆ, ನಾಮ-ರೂಪದಲ್ಲಿ ಸಿಲುಕುತ್ತಾ ಇರುತ್ತಾರೆ ಮತ್ತೆ ಶಿಕ್ಷಣವನ್ನು ಕೊಟ್ಟು ಸುಧಾರಣೆ ಮಾಡಲಾಗುತ್ತದೆ. ನಾಮ-ರೂಪದಲ್ಲಿ ಎಂದೂ ಸಿಲುಕಬಾರದು, ದೇಹೀ-ಅಭಿಮಾನಿಗಳಾಗಬೇಕಾಗಿದೆ. ಆತ್ಮವು ಚಿಕ್ಕ ಬಿಂದುವಾಗಿದೆ. ತಂದೆಯೂ ಬಿಂದುವಾಗಿದ್ದಾರೆ. ತನ್ನನ್ನು ಚಿಕ್ಕ ಬಿಂದುವೆಂದು ತಿಳಿದು ತಂದೆಯನ್ನು ನೆನಪು ಮಾಡುವುದು ಬಹಳ ಪರಿಶ್ರಮವಿದೆ. ಬಾಬಾ, ನಾವು ನಿಮ್ಮನ್ನು ಬಹಳ ನೆನಪು ಮಾಡುತ್ತೇವೆಂದು ಹೇಳುತ್ತಾರೆ ಆದರೆ ಬುದ್ಧಿಯಲ್ಲಿ ಆಕ್ಯೂರೇಟ್ ನೆನಪಿರಬೇಕಾಗಿದೆ. ಬಹಳ ಧೈರ್ಯ ಹಾಗೂ ಗಂಭೀರತೆಯಿಂದ ನೆನಪು ಮಾಡಬೇಕಾಗಿದೆ. ಈ ರೀತಿ ನೆನಪು ಮಾಡುವವರು ಕೆಲವರೇ ವಿರಳ. ಇದರಲ್ಲಿ ಬಹಳ ಪರಿಶ್ರಮವಿದೆ. ಒಳ್ಳೆಯದು.
|
3 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
4 |
+
ಧಾರಣೆಗಾಗಿ ಮುಖ್ಯಸಾರ:
|
5 |
+
1. ತಮ್ಮ ಜೋಳಿಗೆಯನ್ನು ಜ್ಞಾನರತ್ನಗಳಿಂದ ತುಂಬಿಸಿಕೊಂಡು ದಾನ ಮಾಡಬೇಕಾಗಿದೆ. ಇದೇ ಕರ್ತವ್ಯದಲ್ಲಿ ತತ್ಫರರಾಗಿದ್ದು ಫಸ್ಟ್ಕ್ಲಾಸ್ ಬ್ರಾಹ್ಮಣರಾಗಬೇಕಾಗಿದೆ.
|
6 |
+
2. ಕಲ್ಯಾಣಕಾರಿ ತಂದೆಯ ಮಕ್ಕಳಾಗಿದ್ದೀರಿ ಆದ್ದರಿಂದ ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ಅನ್ಯರ ಭಾವನೆಯನ್ನು ಕೆಡಿಸುವುದು, ಉಲ್ಟಾ ಮತ ಕೊಡುವುದು, ಇಂತಹ ಅಕಲ್ಯಾಣದ ಕರ್ತವ್ಯವನ್ನು ಎಂದೂ ಮಾಡಬಾರದು.
|
BKMurli/BKMurli/page_102.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಧುರಾತಿ ಮಧುರ ಆತ್ಮೀಯ ಮಕ್ಕಳೇ ಇದನ್ನು ತಿಳಿದುಕೊಂಡಿರುವಿರಿ ಒಂದು ಕಡೆ ಭಕ್ತಿ. ಇನ್ನೊಂದು ಕಡೆ ಜ್ಞಾನ. ಭಕ್ತಿಯಂತೂ ಅಪಾರವಾಗಿದೆ ಮತ್ತು ಕಲಿಸುವಂತಹವರು ಅನೇಕರಿದ್ದಾರೆ. ಶಾಸ್ತ್ರವನ್ನೂ ಕಲಿಸುತ್ತಾರೆ, ಮನುಷ್ಯರು ಕಲಿಯುತ್ತಾರೆ. ಇಲ್ಲಿ ಶಾಸ್ತ್ರವೂ ಇಲ್ಲಾ, ಮನುಷ್ಯರೂ ಇಲ್ಲ. ಇಲ್ಲಿ ಕಲಿಸುವಂತಹವರು ಆತ್ಮೀಯ ತಂದೆ ಒಬ್ಬರೇ ಯಾರು ಆತ್ಮಗಳಿಗೆ ತಿಳಿಸುತ್ತಾರೆ. ಆತ್ಮವೇ ಧಾರಣೆ ಮಾಡುತ್ತದೆ. ಪರಮಪಿತ ಪರಮಾತ್ಮನಲ್ಲಿ ಈ ಇಡೀ ಜ್ಞಾನ ಇದೆ, 84 ಚಕ್ರದ ಜ್ಞಾನ ಅವರಲ್ಲಿದೆ, ಆದ್ದರಿಂದ ಅವರನ್ನೂ ಸ್ವದರ್ಶನ ಚಕ್ರಧಾರಿ ಎಂದು ಹೇಳಬಹುದು. ನಾವು ಮಕ್ಕಳನ್ನೂ ಅವರು ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡುತ್ತಿದ್ದಾರೆ. ಬಾಬಾ ಕೂಡ ಬ್ರಹ್ಮಾರವರ ತನುವಿನ್ನಲ್ಲಿದ್ದಾರೆ, ಆದ್ದರಿಂದ ಅವರನ್ನು ಬ್ರಾಹ್ಮಣ ಎಂದೂ ಹೇಳಬಹುದಾಗಿದೆ. ನಾವೂ ಅವರ ಮಕ್ಕಳು ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ. ಈಗ ತಂದೆ ಕುಳಿತು ನೆನಪಿನಯಾತ್ರೆ ಯನ್ನು ಕಲಿಸುತ್ತಿದ್ದಾರೆ,ಇದರಲ್ಲಿ ಹಠಯೋಗ ಮುಂತಾದುವುಗಳ ಮಾತಿಲ್ಲ. ಅವರು ಹಠಯೋಗದಿಂದ ಟ್ರಾನ್ಸ್ ಮುಂತಾದುವಲ್ಲಿ ಹೋಗುತ್ತಾರೆ. ಇದೇನು ದೊಡ್ಡಮಾತಲ್ಲ. ಟ್ರಾನ್ಸ್ ನಿಂದ ಯಾವುದೇ ಹೆಚ್ಚುಗಾರಿಕೆ ಇಲ್ಲ. ಟ್ರಾನ್ಸ್ ಅಂತೂ ನಯಾಪೈಸೆಗೂ ಬರದ ಆಟವಾಗಿದೆ. ನೀವು ಈರೀತಿ ಯಾರಿಗೂ ಎಂದೂ ಹೇಳಬಾರದಾಗಿದೆ ನಾವು ಟ್ರಾನ್ಸ್ ನಲ್ಲಿ ಹೋಗುತ್ತೇವೆ ಎಂದು ಏಕೆಂದರೆ ಇತ್ತೀಚೆಗೆ ವಿದೇಶ ಮುಂತಾದಕಡೆ ಅಲ್ಲಿ-ಇಲ್ಲಿ ಬಹಳಷ್ಟು ಜನ ಟ್ರಾನ್ಸ್ ನಲ್ಲಿ ಹೋಗುವವರಿದ್ದಾರೆ. ಟ್ರಾನ್ಸ್ ನಲ್ಲಿ ಹೋಗುವುದರಿಂದ ಅವರಿಗೂ ಏನೂ ಪ್ರಯೋಜನವಿಲ್ಲ, ನಿಮಗೂ ಏನೂ ಪ್ರಯೋಜನವಿಲ್ಲ. ಬಾಬಾ ತಿಳುವಳಿಕೆ ಕೊಟ್ಟಿದ್ದಾರೆ.ಟ್ರಾನ್ಸ್ನಲ್ಲಿ ನೆನಪಿನಯಾತ್ರೆಯೂ ಇಲ್ಲಾ ಜ್ಞಾನವೂ ಇಲ್ಲ. ಧ್ಯಾನ ಅಥವಾ ಟ್ರಾನ್ಸ್ ನಲ್ಲಿ ಹೋಗುವವರು ಎಂದೂ ಸ್ವಲ್ಪವೂ ಜ್ಞಾನವನ್ನು ಕೇಳುವುದಿಲ್ಲ, ಇದರಿಂದ ಪಾಪವೂ ಭಸ್ಮ ವಾಗುವುದಿಲ್ಲ.ಟ್ರಾನ್ಸ್ ನ ಮಹತ್ವಿಕೆ ಏನೂ ಇಲ್ಲ. ಮಕ್ಕಳು ಯೋಗವನ್ನಿಡುತ್ತಾರೆ, ಅದನ್ನು ಟ್ರಾನ್ಸ್ ಎಂದು ಹೇಳಲಾಗುವುದಿಲ್ಲ. ನೆನಪಿನಿಂದ ವಿಕರ್ಮ ವಿನಾಶ ವಾಗುವುದು. ಟ್ರಾನ್ಸ್ ನಲ್ಲಿ ವಿಕರ್ಮ ವಿನಾಶವಾಗುವುದಿಲ್ಲ. ಬಾಬಾ ಎಚ್ಚರಿಕೆ ಕೊಡುತ್ತಾರೆ, ಮಕ್ಕಳೇ ಟ್ರಾನ್ಸ್ ನ ಆಸೆ ಇಟ್ಟಕೊಳ್ಳಬೇಡಿ ಎಂದು.
|
2 |
+
ನೀವು ತಿಳಿದಿರುವಿರಿ ಈ ಸನ್ಯಾಸಿಗಳು ಮುಂತಾದವರಿಗೆ ಜ್ಞಾನ ಯಾವಾಗ ಸಿಗುವುದೆಂದರೆ ಯಾವಾಗ ವಿನಾಶದ ಸಮಯ ವಾಗುತ್ತದೆ ಆಗ. ಭಲೆ ಆದರೂ ನೀವು ಹೀಗೇ ನಿಮಂತ್ರಣ ಕೊಡುತ್ತಿರಿ ಆದರೆ ಈ ಜ್ಞಾನ ಅವರ ಕಳಷದಲ್ಲಿ ಬೇಗನೆ ಬರುವುದಿಲ್ಲ.ಯಾವಾಗ ವಿನಾಶ ಎದುರಲ್ಲಿ ನೋಡುತ್ತಾರೆ ಆಗ ಬರುತ್ತದೆ, ತಿಳಿಯುತ್ತಾರೆ ಈಗ ಮೃತ್ಯು ಇನ್ನೇನು ಬಂದಿತು. ಯಾವಾಗ ಸಮೀಪದಿಂದ ನೋಡುತ್ತಾರೆ ಆಗ ಒಪ್ಪುತ್ತಾರೆ. ಅವರ ಪಾತ್ರವೇ ಅಂತ್ಯದಲ್ಲಿದೆ. ನೀವು ಹೇಳುವಿರಿ ಈಗ ವಿನಾಶ ಇನ್ನೇನು ಬ��ದಿತು, ಮೃತ್ಯು ಬರುವುದಿದೆ. ಆದರೆ ಅವರು ತಿಳಿಯುತ್ತಾರೆ ಇವರು ಸುಳ್ಳು ಹೇಳುತ್ತಿದ್ದಾರೆ ಎಂದು.
|
3 |
+
ನಿಮ್ಮ ವೃಕ್ಷ ನಿಧಾನವಾಗಿ ಬೆಳೆಯುತ್ತಿದೆ. ಸನ್ಯಾಸಿಗಳಿಗೆ ಹೇಳಬೇಕುಕೇವಲ ತಂದೆಯನ್ನು ನೆನಪುಮಾಡಿ ಎಂದು. ತಂದೆ ಇದನ್ನೂ ತಿಳಿಸುತ್ತಾರೆ ನೀವು ಕಣ್ಣನ್ನು ಮುಚ್ಚಿಕೊಳ್ಳಬಾರದು ಎಂದು. ಕಣ್ಣನ್ನು ಮುಚ್ಚಿಕೊಂಡರೆ ತಂದೆಯನ್ನು ಹೇಗೆ ನೋಡುವಿರಿ. ನಾನು ಆತ್ಮ ಆಗಿದ್ದೇನೆ, ಪರಮಪಿತ ಮರಮಾತ್ಮನ ಎದುರು ಕುಳಿತಿದ್ದೇನೆ. ಅವರನ್ನು ನೋಡಲಾಗುವುದಿಲ್ಲ, ಅದರೆ ಈ ಜ್ಞಾನ ಬುದ್ಧಿಯಲ್ಲಿದೆ. ನೀವು ಮಕ್ಕಳು ತಿಳಿಯುತ್ತೀರಿ ಪರಮಪಿತ ಪರಮಾತ್ಮ ನಮಗೆ ಓದಿಸುತ್ತಿದ್ದಾರೆ-ಈ ಶರೀರದ ಆಧಾರ ಪಡೆದು. ಧ್ಯಾನ ಮುಂತಾದುವುಗಳ ಮಾತೇ ಇಲ್ಲ. ಧ್ಯಾನದಲ್ಲಿ ಹೋಗುವುದೇನು ದೊಡ್ಡಮಾತಲ್ಲ. ಈ ಭೋಗ ಮುಂತಾದುವುಗಳೆಲ್ಲಾ ಡ್ರಾಮದಲ್ಲಿ ನಿಗಧಿಯಾಗಿದೆ. ಸರ್ವೆಂಟ್ ಆಗಿ ಭೋಗವಿಟ್ಟು ಬರುವಿರಿ. ಹೇಗೆ ನೌಕರರು ದೊಡ್ಡ ಮನುಷ್ಯರಿಗೆ ಊಟ ಮಾಡಿಸುತ್ತಾರೆ ಹಾಗೆ. ನೀವೂ ಸಹ ನೌಕರರಾಗಿರುವಿರಿ ದೇವತೆಗಳಿಗೆ ಭೋಗವಿಡಲು ಹೋಗುವಿರಿ. ಅವರು ಫರಿಷ್ತಾ ಆಗಿದ್ದಾರೆ. ಅವರು ಮಮ್ಮಾ-ಬಾಬಾರವರನ್ನು ನೋಡುತ್ತಾರೆ. ಆ ಸಂಪೂರ್ಣ ಮೂರ್ತಿ ಕೂಡ ನಮ್ಮ ಗುರಿ ಉದ್ಧೇಶವಾಗಿದೆ. ಅವರನ್ನು ಇಂತಹ ಫರಿಷ್ತಾ ಯಾರು ಮಾಡಿದರು? ಬಾಕಿ ಧ್ಯಾನದಲ್ಲಿ ಹೋಗುವುದಂತೂ ದೊಡ್ಡಮಾತಲ್ಲ. ಹೇಗೆ ಇಲ್ಲಿ ಶಿವಬಾಬಾರವರು ನಿಮಗೆ ಓದಿಸುತ್ತಾರೆ ಅದೇರೀತಿ ಶಿವಬಾಬಾ ಇವರ (ಬ್ರಹ್ಮಾ) ಮುಖಾಂತರ ಅವರಿಗೂ ಸ್ವಲ್ಪ ತಿಳಿಸುತ್ತಾರೆ. ಸೂಕ್ಷ್ಮವತನದಲ್ಲಿ ಏನಾಗುತ್ತದೆ,ಇದನ್ನು ಕೇವಲ ತಿಳಿಯಬೇಕಾಗುತ್ತದೆ. ಬಾಕಿ ಟ್ರಾನ್ಸ್ ಮುಂತಾದುವಕ್ಕೆ ಏನೂ ಮಹತ್ವಿಕೆ ಕೊಡಬಾರದು. ಯಾರಿಗಾದರೂ ಟ್ರಾನ್ಸ್ ತೋರಿಸುವುದೂ-ಇದೂ ಸಹ ಹುಡುಗಾಟಿಕೆಯಾಗಿದೆ. ಬಾಬಾ ಎಲ್ಲರಿಗೂ ಎಚ್ಚರಿಕೆ ಕೊಡುತ್ತಾರೆ-ಟ್ರಾನ್ಸ್ ನಲ್ಲಿ ಹೋಗಬೇಡಿ, ಇದರಲ್ಲೂ ಎಷ್ಟೋಬಾರಿ ಮಾಯೆ ಪ್ರವೇಶವಾಗಿ ಬಿಡುತ್ತದೆ.
|
4 |
+
ಇದು ವಿಧ್ಯೆಯಾಗಿದೆ, ಕಲ್ಪ-ಕಲ್ಪ ತಂದೆ ಬಂದು ನಿಮಗೆ ಓದಿಸುತ್ತಾರೆ. ಈಗ ಸಂಗಮಯುಗವಾಗಿದೆ. ನೀವು ಟ್ರಾನ್ಸ್ಫರ್ ಆಗಬೇಕಾಗಿದೆ. ಡ್ರಾಮಾದ ಪ್ಲಾನ್ ಅನುಸಾರ ನೀವು ಪಾತ್ರವನ್ನಭಿನಯಿಸುತ್ತಿರುವಿರಿ, ಪಾತ್ರದ ಮಹಿಮೆ ಇದೆ. ತಂದೆ ಬಂದು ಡ್ರಾಮಾನುಸಾರ ಓದಿಸುತ್ತಾರೆ. ನೀವು ತಂದೆಯಿಂದ ಒಂದು ಬಾರಿ ಓದಿ ಮನುಷ್ಯರಿಂದ ದೇವತೆ ಖಂಡಿತ ಆಗಬೇಕು. ಇದರಿಂದ ಮಕ್ಕಳಿಗಂತು ಖುಶಿಯಾಗುತ್ತದೆ. ಈಗ ನಾವು ತಂದೆಯನ್ನು ಮತ್ತು ರಚನೆಯ ಆದಿ ಮಧ್ಯೆ ಅಂತ್ಯವನ್ನೂ ತಿಳಿದಿರುವಿರಿ. ತಂದೆಯ ಶಿಕ್ಷಣ ಪಡೆದು ಬಹಳ ಹರ್ಷಿತರಾಗಬೇಕಾಗಿದೆ. ನೀವು ಹೊಸ ಪ್ರಪಂಚಕ್ಕಾಗಿ ಓದುತ್ತಿರುವಿರಿ. ಅದು ದೇವತೆಗಳ ರಾಜ್ಯ ಅಂದರೆ ಖಂಡಿತ ಪುರುಷೋತ್ತಮ ಸಂಗಮಯುಗದಲ್ಲೇ ಓದಬೇಕಾಗುತ್ತದೆ. ನೀವು ಈ ದುಃಖದಿಂದ ಬಿಡಿಸಿಕೊಂಡು ಸುಖದಲ್ಲಿ ಹೋಗುವಿರಿ. ಇಲ್ಲಿ ತಮೋಪ್ರದಾನರಾಗಿರುವ ಕಾರಣ ಕಾಯಿಲೆ ಮುಂತಾದುವುಗಳಲ್ಲಿ ಬರುವ��ರಿ. ಈ ಎಲ್ಲಾ ರೋಗಗಳು ಅಳಿಸಿ ಹೋಗಬೇಕು. ಮುಖ್ಯವಾಗಿ ವಿಧ್ಯೆ ಆಗಿದೆ, ಇದರಲ್ಲಿ ಟ್ರಾನ್ಸ್ ಮುಂತಾದುವುಗಳ ಸಂಬಂಧವಿಲ್ಲ.ಇದು ದೊಡ್ಡ ಮಾತಲ್ಲ. ಬಹಳ ಜಾಗಗಳಲ್ಲಿ ಈ ರೀತಿ ಧ್ಯಾನದಲ್ಲಿ ಹೋಗುತ್ತಾರೆ ನಂತರ ಹೇಳುತ್ತಾರೆ ಮಮ್ಮಾ ಬಂದಿದ್ದರು, ಬಾಬಾ ಬಂದಿದ್ದರು ಎಂದು. ತಂದೆ ಹೇಳುತ್ತಾರೆ ಇದು ಯಾವುದೂ ಇಲ್ಲ. ತಂದೆಯಂತೂ ಒಂದೇ ಮಾತಲ್ಲಿ ತಿಳಿಸುತ್ತಾರೆ-ನೀವು ಏನು ಅರ್ಧ ಕಲ್ಪ ದೇಹ-ಅಭಿಮಾನಿಗಳಾಗಿದ್ದಿರಿ, ಈಗ ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪುಮಾಡಿ ಆಗ ವಿಕರ್ಮ ವಿನಾಶ ವಾಗುತ್ತೆ, ಇದಕ್ಕೆ ನೆನಪಿನ ಯಾತ್ರೆ ಎಂದು ಹೇಳಲಾಗುತ್ತದೆ. ಯೋಗ ಎಂದು ಹೇಳುವುದರಿಂದ ಯಾತ್ರೆ ಎಂದು ಸಿದ್ಧವಾಗುವುದಿಲ್ಲ. ನೀವು ಆತ್ಮಗಳು ಇಲ್ಲಿಂದ ಹೋಗಬೇಕಾಗಿದೆ, ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು. ನೀವು ಈಗ ಯಾತ್ರೆ ಮಾಡುತ್ತಿರುವಿರಿ. ಅವರು ಮಾಡುವ ಯೋಗದಲ್ಲಿ ಯಾತ್ರೆಯ ಮಾತಿಲ್ಲ, ಹಠಯೋಗಿ ಗಳಂತೂ ಬಹಳಷ್ಟಿದ್ದಾರೆ, ಅದಾಗಿದೆ ಹಠಯೋಗ, ಇದಾಗಿದೆ ತಂದೆಯನ್ನು ನೆನಪು ಮಾಡುವುದು. ತಂದೆ ಹೇಳುತ್ತಾರೆ ಮಧುರ-ಮಧುರ ಮಕ್ಕಳೇ ತಮ್ಮನ್ನು ಆತ್ಮ ಎಂದು ತಿಳಿಯಿರಿ. ಈ ರೀತಿ ಬೇರೆ ಯಾರೂ ಎಂದೂ ತಿಳಿಸುವುದಿಲ್ಲ. ಇದು ವಿದ್ಯೆಯಾಗಿದೆ. ತಂದೆಗೆ ಮಕ್ಕಳಾದ ನಂತರ ತಂದೆಯಿಂದ ಓದಬೇಕು ಮತ್ತು ಓದಿಸಬೇಕು. ಬಾಬಾ ಹೇಳುತ್ತಾರೆ ನೀವು ಮ್ಯೂಜಿಯಂ ತೆರೆಯಿರಿ, ತಮಷ್ಟಕ್ಕೆ ತಾವೇ ನಿಮ್ಮ ಬಳಿ ಬರುತ್ತಾರೆ. ಕರೆಯವ ಗೊಡವೆಯೆ ಇರುವುದಿಲ್ಲ. ಈ ಜ್ಞಾನ ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ,ಎಂದೂ ಕೇಳಿರಲಿಲ್ಲ ಎನ್ನುತ್ತಾರೆ. ಇದರಿಂದ ಚಾರಿತ್ರ್ಯೆ ಸುಧಾರಣೆಯಾಗುತ್ತದೆ. ಪವಿತ್ರತೆ ಮುಖ್ಯವಾಗಿದೆ, ಯಾವುದರ ಮೇಲೆ ಗಲಾಟೆ ಮುಂತಾದುವುಗಳಾಗುತ್ತದೆ. ಬಹಳ ಮಂದಿ ಫೇಲ್ ಕೂಡ ಆಗುತ್ತಾರೆ. ನಿಮ್ಮ ಅವಸ್ಥೆ ಈ ರೀತಿಯಾಗಿ ಬಿಡುತ್ತದೆ ಏನು ಈ ಪ್ರಪಂಚದಲ್ಲಿದ್ದರೂ ಅದನ್ನು ನೋಡುವುದಿಲ್ಲ. ತಿನ್ನುತ್ತಾ-ಕುಡಿಯುತ್ತಾ ನಿಮ್ಮ ಬುದ್ಧಿ ಆಕಡೆಯಿರುತ್ತದೆ. ಹೇಗೆ ಅಪ್ಪ ಹೊಸ ಮನೆ ಕಟ್ಟುತ್ತಿದ್ದರೆ ಎಲ್ಲರ ಬುದ್ಧಿ ಹೊಸ ಮನೆಯಕಡೆ ಹೋಗಿಬಿಡುತ್ತದೆ ಯಲ್ಲವೇ. ಈಗ ಹೊಸ ಪ್ರಪಂಚ ತಯಾರಾಗುತ್ತಿದೆ. ಬೇಹದ್ದಿನ ತಂದೆ ಬೇಹದ್ದಿನ ಮನೆ ತಯಾರಿಸುತ್ತಿದ್ದಾರೆ. ನೀವು ತಿಳಿದಿದ್ದೀರಿ ನಾವುಸ್ವರ್ಗವಾಸಿಗಳಾಗಲು ಪುರುಷಾರ್ಥ ಮಾಡುತ್ತಿದ್ದೇವೆ ಎಂದು. ಈಗ ಚಕ್ರ ಪೂರ್ಣವಾಯಿತು. ಈಗ ನಮಗೆ ಮನೆ ಮತ್ತು ಸ್ವರ್ಗಕ್ಕೆ ಹೋಗಬೇಕಾಗಿದೆ ಮತ್ತು ಅದಕ್ಕಾಗಿ ಖಂಡಿತ ಪಾವನರೂ ಆಗಬೇಕಿದೆ. ನೆನಪಿನ ಯಾತ್ರೆಯಿಂದ ಪಾವನರಾಗಬೇಕು. ನೆನಪಿನಲ್ಲೆ ವಿಘ್ನ ಬರುತ್ತದೆ, ಇದರಲ್ಲೇ ನಿಮ್ಮ ಯುದ್ದವಾಗಿದೆ. ವಿಧ್ಯಯಲ್ಲಿ ಯುದ್ಧದ ಮಾತಿರುವುದಿಲ್ಲ. ವಿಧ್ಯೆಯಂತೂ ಬಹಳ ಸರಳವಾಗಿದೆ. 84 ರ ಚಕ್ರದ ಜ್ಞಾನವಂತೂ ಬಹಳ ಸಹಜವಾಗಿದೆ. ಬಾಕಿ ನಿಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪುಮಾಡಿ, ಇದರಲ್ಲೇ ಪರಿಶ್ರಮವಿದೆ. ತಂದೆ ಹೇಳುತ್ತಾರೆ ನೆನಪಿನಯಾತ್ರೆಯನ್ನು ಮರೆಯಬೇಡಿ. ಕಡೇ ಪಕ್ಷ 8 ಗಂಟೆಯಾದರೂ ಖಂಡಿತ ನೆನಪು ಮಾಡಬೇಕು. ಶರೀರ ನಿರ್ವಹಣೆಗೆ ಕೆಲಸವನ್ನೂ ಮಾಡಬೇಕು. ನಿದ್ರೆಯನ್ನೂ ಮಾಡಬೇಕು. ಸಹಜ ಮಾರ್ಗವಾಗಿದೆಯಲ್ಲವೇ. ಒಂದುವೇಳೆ ನಿದ್ರೆ ಮಾಡಬೇಡಿ ಎಂದರೆ ಅದು ಹಠಯೋಗವಾಗಿಬಿಡುತ್ತದೆ. ಹಠಯೋಗಿಗಳಂತೂ ಬಹಳಷ್ಟಿದ್ದಾರೆ ತಂದೆ ಹೇಳುತ್ತಾರೆ ಆ ಕಡೆ ಏನನ್ನೂ ನೋಡಬೇಡಿ, ಅದರಿಂದ ಏನೂ ಲಾಭವಿಲ್ಲ. ಹಠಯೋಗ ಮುಂತಾದುವನ್ನು ಎಷ್ಟು ಕಲಿಸುತ್ತಾರೆ. ಇದೆಲ್ಲ ಮನುಷ್ಯಮತವಾಗಿದೆ. ನೀವು ಅತ್ಮಗಳಾಗಿರುವಿರಿ, ಆತ್ಮವೇ ಶರೀರ ಪಡೆದು ಪಾತ್ರವನ್ನಭಿನಯಿಸುತ್ತದೆ, ಡಾಕ್ಟರ್ ಇತ್ಯಾದಿ ಆಗುತ್ತದೆ. ಆದರೆ ಮನುಷ್ಯ ದೇಹ-ಅಭಿಮಾನಿಯಾಗಿಬಿಟ್ಟಿದ್ದಾನೆ- ನಾನು ಇಂತಹವನು.......
|
5 |
+
ಈಗ ನಿಮ್ಮ ಬುದ್ಧಿಯಲ್ಲಿದೆ- ನಾನು ಆತ್ಮನಾಗಿದ್ದೇನೆ. ತಂದೆಯೂ ಆತ್ಮ ಆಗಿದ್ದಾರೆ ಈ ಸಮಯದಲ್ಲಿ ನೀವು ಆತ್ಮಗಳಿಗೆ ಓದಿಸುತ್ತಿದ್ದಾರೆ ಆದ್ದರಿಂದ ಗಾಯನ ಇದೆ- ಆತ್ಮಗಳು ಮತ್ತು ಪರಮಾತ್ಮ ಬಹಳಕಾಲದಿಂದ ಅಗಲಿಹೋಗಿದ್ದರು.... ಎಂದು, ಕಲ್ಪ-ಕಲ್ಪ ಮಿಲನ ಮಾಡುತ್ತಿರುತ್ತಾರೆ. ಬಾಕಿ ಯಾವುದು ಇಡೀ ಪ್ರಪಂಚ ಇದೆ, ಅವರೆಲ್ಲ ದೇಹ-ಅಭಿಮಾನದಲ್ಲಿ ಬಂದು ದೇಹವೆಂದು ತಿಳಿದೇ ಒದುತ್ತಾರೆ ಹಾಗೂ ಓದಿಸುತ್ತಾರೆ. ತಂದೆ ಹೇಳುತ್ತಾರೆ ನಾನು ಆತ್ಮಗಳಿಗೆ ಓದಿಸುತ್ತೇನೆ. ಜಡ್ಜ್, ಬ್ಯಾರಿಸ್ಟರ್ ಮುಂತಾದವರು ಸಹ ಆತ್ಮವೇ ಆಗುತ್ತದೆ. ನೀವು ಆತ್ಮ ಸತೋಪ್ರಧಾನ ಪವಿತ್ರರಾಗಿದ್ದಿರಿ ನಂತರ ಪಾತ್ರ ಮಾಡುತ್ತಾ ಮಾಡುತ್ತಾ ಪತಿತರಾದಿರಿ ಆಗ ಕರೆಯುತ್ತೀರಿ ಬಾಬಾ ಬಂದು ನಮ್ಮನ್ನು ಪಾವನ ಆತ್ಮರನ್ನಾಗಿ ಮಾಡಿ ಎಂದು. ತಂದೆಯಂತೂ ಪಾವನರಾಗೆ ಇದ್ದಾರೆ. ಈ ಮಾತು ಯಾವಾಗ ಕೇಳುವಿರಿ ಆಗ ಧಾರಣೆಯಾಗುತ್ತದೆ. ನೀವು ಮಕ್ಕಳಿಗೆ ಧಾರಣೆ ಯಾದಾಗ ನೀವು ದೇವತೆಗಳಾಗುವಿರಿ. ಬೇರೆ ಯಾರ ಬುದ್ಧಿಯಲ್ಲೂ ಕುಳಿತುಕೊಳ್ಳುವುದಿಲ್ಲ ಏಕೆಂದರೆ ಇದಾಗಿದೆ ಹೊಸಮಾತು. ಇದು ಜ್ಞಾನವಾಗಿದೆ. ಅದು ಭಕ್ತಿಯಾಗಿದೆ. ನೀವೂ ಭಕ್ತಿ ಮಾಡುತ್ತಾ-ಮಾಡುತ್ತಾ ದೇಹ-ಅಭಿಮಾನಿಗಳಾಗಿಬಿಡುವಿರಿ. ಈಗ ತಂದೆಯು ತಿಳಿಸುತ್ತಾರೆ-ಮಕ್ಕಳೇ, ಆತ್ಮ-ಅಭಿಮಾನಿಗಳಾಗಿ ಎಂದು. ನಾವು ಆತ್ಮಗಳಿಗೆ ತಂದೆಯು ಈ ಶರೀರದ ಮೂಲಕ ಓದಿಸುತ್ತಾರೆ. ಘಳಿಗೆ-ಘಳಿಗೆ ನೆನಪಿನಲ್ಲಿಟ್ಟುಕೊಳ್ಳಿ ಇದು ಒಂದೇ ಸಮಯವಾಗಿದೆ ಯಾವುದು ಆತ್ಮಗಳಿಗೆ ಪರಮಪಿತ ತಂದೆ ಓದಿಸುತ್ತಾರೆ. ಬಾಕಿ ಇಡೀ ಡ್ರಾಮದಲ್ಲಿ ಎಂದೂ ಈ ಪಾತ್ರ ಇರುವುದಿಲ್ಲ. ಈ ಸಂಗಮಯುಗದ ವಿನಹ ಆದ್ದರಿಂದ ತಂದೆ ಮತ್ತೆ ಹೇಳುತ್ತಾರೆ ಮಧುರ-ಮಧುರ ಮಕ್ಕಳೇ ತಮ್ಮನ್ನು ಆತ್ಮ ಎಂದು ನಿಶ್ಚಯಮಾಡಿಕೊಳ್ಳಿ,ತಂದೆಯನ್ನು ನೆನಪುಮಾಡಿ. ಇದು ಬಹಳ ಉನ್ನತವಾದ ಯಾತ್ರೆಯಾಗಿದೆ- ಏರಿದರೆ ವೈಕುಂಠರಸವನ್ನು ಹೀರಿ. ವಿಕಾರದಲ್ಲಿ ಬೀಳುವುದರಿಂದ ಏಕದಂ ಚೂರು ಚೂರಾಗಿಬಿಡುವಿರಿ. ಆದರೂ ಸ್ವರ್ಗದಲ್ಲಿ ಬರುವಿರಿ, ಆದರೆ ಪದವಿ ಬಹಳ ಕಡಿಮೆಯಾಗುತ್ತದೆ. ಇಲ್ಲಿ ರಾಜಧಾನಿ ಸ್ಥಾಪನೆಯಾಗುತ್ತಿದೆ. ಇದರಲ್ಲಿ ಕಡಿಮೆ ಪದವಿಯವರೂ ಬೇಕಾಗುತ್ತದೆ, ಎಲ್ಲರೂ ಜ್ಞಾನದಲ್ಲಂತೂ ನಡೆಯುವುದಿಲ್ಲ. ಇಲ್ಲದೇ ಹೋದರೆ ಬಹಳಷ್ಟು ಮಕ್ಕಳು ಬಾಬಾರವರನ್ನು ಮಿಲನಮಾಡಬೇಕಿತ್ತು. ಒಂದುವೇಳೆ ಮಿಲನ ಮಾಡಿದ್ದರೂ ಸ್ವಲ್ಪ ಸಮಯಕ್ಕಾಗಿ. ನೀವು ಮಾತೆಯರ ಮಹಿಮೆ ಬಹಳ ಇದೆ. ವಂದೇಮಾತರಂ ಎಂದೂ ಗಾಯನ ಮಾಡಲಾಗುತ್ತದೆ. ಜಗದಂಬ ರ ಎಷ್ಟುದೊಡ್ಡ ಮೇಳಾ ನಡೆಯುತ್ತದೆ ಏಕೆಂದರೇ ಬಹಳ ಹೆಚ್ಚು ಸೇವೆಮಾಡಿದ್ದಾರೆ. ಯಾರು ಹೆಚ್ಚು ಸೇವೆ ಮಾಡುತ್ತಾರೆ ಅವರು ದೊಡ್ಡ ರಾಜರಾಗುತ್ತಾರೆ. ದಿಲ್ವಾಡಾ ಮಂದಿರದಲ್ಲೂ ನಿಮ್ಮದೆ ನೆನಪಾರ್ಥ ಇದೆ. ನೀವು ಮಕ್ಕಳಂತೂ ಬಹಳ ಸಮಯ ಕೊಡಬೇಕಾಗುತ್ತದೆ. ನೀವು ಭೋಜನ ಮುಂತಾದುವನ್ನು ಮಾಡುತ್ತೀರೆಂದರೆ ಬಹಳ ಶುದ್ಧ ಭೋಜನ ನೆನಪಿನಲ್ಲಿ ಕುಳಿತು ಮಾಡಬೇಕಾಗಿದೆ, ಯಾರಿಗೆ ತಿನ್ನಿಸುವಿರಿ ಅವರ ಹೃದಯ ಕೂಡ ಶುದ್ಧವಾಗಿಬಿಡಬೇಕು. ಈ ರೀತಿ ಬಹಳ ಕಡಿಮೆ ಜನ ಇದ್ದಾರೆ, ಯಾರಿಗೆ ಇಂಥಹ ಬೋಜನ ದೊರಕುತ್ತಿರುವುದು. ನಿಮ್ಮನ್ನು ನೀವು ಕೇಳಿಕೊಳ್ಳಿ- ನಾವು ಶಿವಬಾಬಾರವರ ನೆನಪಿನಲ್ಲಿದ್ದು ಭೋಜನ ಮಾಡುತ್ತಿರುವೆನಾ?, ಯಾವುದನ್ನು ತಿನ್ನುವುದರಿಂದಲೇ ಅವರ ಹೃದಯ ಕರಗಿಹೋಗಿಬಿಡಬೇಕು. ಘಳಿಗೆ-ಘಳಿಗೆ ನೆನಪು ಮರೆತುಹೋಗುತ್ತದೆ. ಬಾಬಾ ಹೇಳುತ್ತಾರೆ ಮರೆಯುವುದೂ ಡ್ರಾಮದಲ್ಲಿ ನಿಗಧಿಯಾಗಿದೆ ಏಕೆಂದರೆ ನೀವು 16 ಕಲೆ ಉಳ್ಳವರು ಇನ್ನೂ ಆಗಿಲ್ಲ. ಸಂಪೂರ್ಣರಂತೂ ಖಂಡಿತ ಆಗಬೇಕು. ಪೌರ್ಣಮಿಯ ಚಂದ್ರನಲ್ಲಿ ಎಷ್ಟು ಹೊಳಪಿರುತ್ತದೆ. ನಂತರ ಕಡಿಮೆ ಯಾಗುತ್ತಾ ಆಗುತ್ತಾ ಸಣ್ಣ ಗೆರೆಯಾಗಿ ಉಳಿದುಬಿಡುತ್ತದೆ. ಘೋರ ಅಂಧಕಾರ ಉಳಿದುಬಿಡುತ್ತದೆ ನಂತರ ಘೋರ ಬೆಳಕು. ಈ ವಿಕಾರಗಳನ್ನು ಬಿಟ್ಟು ತಂದೆಯನ್ನು ನೆನಪು ಮಾಡುತ್ತಿದ್ದರೆ ನಿಮ್ಮ ಆತ್ಮ ಸಂಪೂರ್ಣ ವಾಗಿಬಿಡುತ್ತದೆ. ನೀವು ಮಹಾರಾಜ ಆಗಬೇಕು ಎಂದು ಇಚ್ಛೆ ಪಡುತ್ತೀರಿ ಆದರೆ ಎಲ್ಲರೂ ಆಗಲು ಸಾಧ್ಯವಿಲ್ಲ. ಪುರುಷಾರ್ಥ ಎಲ್ಲರೂ ಮಾಡಬೇಕಾಗಿದೆ. ಕೆಲವರು ಯಾವುದೇ ಪುರುಷಾರ್ಥ ಮಾಡುವುದಿಲ್ಲ ಆದ್ದರಿಂದ ಮಹಾರಥಿ, ಕುದುರೇ ಸವಾರ, ಕಾಲಾಳು ಎಂದು ಕರೆಸಿಕೊಳ್ಳುವರು. ಮಹಾರಥಿಗಳು ಸ್ವಲ್ಪವೇ ಇರುತ್ತಾರೆ. ಪ್ರಜೆ ಅಥವಾ ಸೇನೆ ಎಷ್ಟಿರುತ್ತಾರೆ ಅಷ್ಟು ಕಮಾಂಡರ್ಸ್, ಮೇಜರ್ಸ್ ಇರುವುದಿಲ್ಲ. ನಿಮ್ಮಲ್ಲೂ ಕಮಾಂಡರ್ಸ್, ಮೇಜರ್ಸ್, ಕ್ಯಾಪ್ಟನ್ ಇದ್ದಾರೆ. ಕಾಲಾಳುಗಳೂ ಇದ್ದಾರೆ. ನಿಮ್ಮದೂ ಸಹ ಆತ್ಮೀಯ ಸೇನೆಯಾಗಿದೆಯಲ್ಲವೇ. ಎಲ್ಲದರ ಆಧಾರ ನೆನಪಿನಯಾತ್ರೆಯ ಮೇಲಿದೆ. ಅದರಲ್ಲೇ ಬಲ ಸಿಗುತ್ತದೆ. ನೀವು ಗುಪ್ತ ಸೈನಿಕರಾಗಿರುವಿರಿ. ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳ ಏನು ಕೊಳಕಿದೆ ಅದು ಭಸ್ಮವಾಗಿಬಿಡುತ್ತದೆ. ತಂದೆ ಹೇಳುತ್ತಾರೆ ವ್ಯಾಪಾರ ವ್ಯವಹಾರವನ್ನಂತೂ ಮಾಡಿ. ತಂದೆಯನ್ನು ನೆನಪುಮಾಡಿ. ನೀವು ಓಬ್ಬ ಪ್ರಿಯತಮನಿಗೆ ಜನ್ಮ-ಜನ್ಮಾಂತರ ಪ್ರಿಯತಮೆಯರಾಗಿರುವಿರಿ. ಈಗ ಆ ಪ್ರಿಯತಮ ಸಿಕ್ಕಿದ್ದಾನೆಂದರೆ ಅವನ ನೆನಪನ್ನು ಮಾಡಬೇಕಿದೆ. ಹಿಂದೆ ಭಲೇ ನೆನಪು ಮಾಡುತ್ತಿದ್ದಿರಿ ಆದರೆ ವಿಕರ್ಮ ವಿನಾಶ ಆಗುತ್ತ���ರಲಿಲ್ಲ. ತಂದೆ ತಿಳಿಸಿಕೊಟ್ಟಿದ್ದಾರೆ ನಿಮಗೆ ಈಗ ತಮೋಪ್ರದಾನ ರಿಂದ ಸತೋ ಪ್ರದಾನರಾಗಬೇಕು ಆತ್ಮವೇ ಆಗಬೇಕಿದೆ. ಆತ್ಮವೇ ಪರಿಶ್ರಮ ಪಡುತ್ತಿದೆ. ಈ ಜನ್ಮದಲ್ಲಿ ನೀವು ಜನ್ಮ-ಜನ್ಮಾಂತರದ ಮೈಲಿಗೆಯನ್ನು ತೆಗೆಯಬೇಕಾಗಿದೆ. ಇದಾಗಿದೆ ಮೃತ್ಯುಲೋಕದ ಅಂತಿಮ ಜನ್ಮ ನಂತರ ಅಮರಲೋಕಕ್ಕೆ ಹೋಗಬೇಕಾಗಿದೆ. ಆತ್ಮ ಪಾವನವಾಗದ ಹೊರತು ಹೋಗಲು ಸಾಧ್ಯವಿಲ್ಲ. ಎಲ್ಲರ ಲೆಕ್ಕಾ-ಚಾರ ಚುಕ್ತು ಆಗಿಬಿಡಬೇಕು. ನಂತರ ಒಂದುವೇಳೆ ಸಜೆಗಳನ್ನು ಬೋಗಿಸಿದರೆ ಪದವಿ ಕಡಿಮೆಯಾಗಿಬಿಡುತ್ತದೆ. ಯಾರು ಸಜೆ ತಿನ್ನುವುದಿಲ್ಲ ಅವರನ್ನುಮಾಲೆಯ 8 ಮಣಿ ಗಳೆಂದು ಕರೆಯಲಾಗುತ್ತದೆ. 9 ರತ್ನಗಳ ಉಂಗುರ ಮುಂತಾದುವನ್ನು ಮಾಡಿಸುತ್ತಾರೆ. ಹೀಗಾಗಬೇಕಾದರೆ ತಂದೆಯನ್ನು ನೆನಪುಮಾಡುವ ಬಹಳ ಪರಿಶ್ರಮ ಮಾಡಬೇಕಾಗುತ್ತದೆ. ಒಳ್ಳೆಯದು!.
|
6 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
|
7 |
+
ಧಾರಣೆಗಾಗಿ ಮುಖ್ಯಸಾರ:
|
8 |
+
1. ಸಂಗಮಯುಗದಲ್ಲಿ ಸ್ವಯಂ ಅನ್ನು ಟ್ರಾನ್ಸ್ ಫರ್ ಮಡಿಕೊಳ್ಳಬೇಕು. ವಿಧ್ಯೆ ಮತ್ತು ಪವಿತ್ರತೆಯ ಧಾರಣೆಯಿಂದ ತಮ್ಮ ಚಾರಿತ್ರ್ಯೆ ಸುದಾರಣೆ ಮಾಡಿಕೊಳ್ಳಬೇಕು. ಟ್ರಾನ್ಸ್ ಮುಂತಾದುವುಗಳಲ್ಲಿ ಹೋಗುವ ಆಸೆ ಇಟ್ಟುಕೊಳ್ಳಬಾರದು.
|
9 |
+
2. ಶರೀರ ನಿರ್ವಾಹಾರ್ಥ ಕರ್ಮವನ್ನೂ ಮಾಡಬೇಕು, ನಿದ್ರೆಯೂ ಮಾಡಬೇಕು, ಹಠಯೋಗವಲ್ಲ, ಆದರೆ ನೆನಪಿನ ಯಾತ್ರೆಯನ್ನು ಎಂದೂ ಮರೆಯಬಾರದು. ಯೋಗಯುಕ್ತರಾಗಿ ಇಂತಹ ಶುದ್ದ ಭೋಜನವನ್ನು ತಯಾರಿಸಿ ಮತ್ತು ಬಡಿಸಿ ಯಾರು ತಿನ್ನುತ್ತಾರೆ ಅವರ ಹೃದಯ ಶುದ್ಧವಾಗಿ ಬಿಡಬೇಕು.
|
BKMurli/BKMurli/page_1020.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಾರೆ - ಒಂದುವೇಳೆ ಶಿವ ಭಗವಾನುವಾಚ ಎಂದು ಹೇಳಿದರೂ ಸಹ ಇಂದು ಅನೇಕ ಮನುಷ್ಯರು ಶಿವ ಎಂದು ಹೆಸರನ್ನು ಇಟ್ಟುಕೊಂಡಿರುತ್ತಾರೆ ಆದ್ದರಿಂದ ಈ ರೀತಿ ಹೇಳಬೇಕಾಗುತ್ತದೆ - ಆತ್ಮಿಕ ತಂದೆಯು ಆತ್ಮಿಕ ಮಕ್ಕಳ ಪ್ರತಿ ಮೊಟ್ಟ ಮೊದಲು ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಮುಂಜಾನೆ ಮೊದಲು ಗುಡ್ಮಾರ್ನಿಂಗ್ ಹೇಳಲಾಗುತ್ತದೆ. ನೀವೂ ಸಹ ಗುಡ್ಮಾರ್ನಿಂಗ್ ಹೇಳಿದಿರಿ. ಬೆಳಗ್ಗೆ-ಬೆಳಗ್ಗೆ ಬಂದು ಯಾರು ಬಂದು ಗುಡ್ಮಾರ್ನಿಂಗ್ ಹೇಳುತ್ತಾರೆ? ಮುಂಜಾನೆ ತಂದೆಯೇ ಬರುತ್ತಾರೆ. ಇದು ಬೇಹದ್ದಿನ ಬೆಳಗ್ಗೆ ಮತ್ತು ರಾತ್ರಿಯಾಗಿದೆ, ಇದನ್ನು ಯಾವುದೇ ಮನುಷ್ಯರೂ ತಿಳಿದುಕೊಂಡಿಲ್ಲ. ಮಕ್ಕಳಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಭಲೆ ಮಕ್ಕಳಾಗಿರಬಹುದು ಆದರೆ ಮುಂಜಾನೆಯೆದ್ದು ತಂದೆಯನ್ನು ನೆನಪು ಮಾಡುವುದಿಲ್ಲ. ಮುಂಜಾನೆ ಎದ್ದು ಮೊಟ್ಟ ಮೊದಲು ಶಿವ ತಂದೆಯೊಂದಿಗೆ ಗುಡ್ಮಾರ್ನಿಂಗ್ ಹೇಳುವುದು ಅರ್ಥಾತ್ ನೆನಪು ಮಾಡುವುದರಿಂದ ಬಹಳ ಖುಷಿಯಿರುವುದು ಆದರೆ ಬಹಳ ಮಕ್ಕಳು ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡುವುದೇ ಇಲ್ಲ. ಭಕ್ತಿಮಾರ್ಗದಲ್ಲಿಯೂ ಮನುಷ್ಯರು ಮುಂಜಾನೆಯೆದ್ದು ಭಕ್ತಿ ಮಾಡುತ್ತಾರೆ, ಪೂಜೆ ಮಾಡುತ್ತಾರೆ. ಮಂತ್ರವನ್ನು ಜಪಿಸುತ್ತಾರೆ. ಅವರು ಸಾಕಾರದ ಭಕ್ತಿ ಮಾಡುತ್ತಾರೆ. ಆಗ ಅವರಿಗೆ ಮೂರ್ತಿಯ ನೆನಪು ಬಂದು ಬಿಡುತ್ತದೆ. ಶಿವನ ಪೂಜಾರಿಯಾಗಿದ್ದರೆ ಅವರು ಶಿವನನ್ನು ದೊಡ್ಡ ಲಿಂಗದ ರೂಪದಲ್ಲಿ ಮಾಡುತ್ತಾರೆ. ಆ ಲಿಂಗವೇ ನೆನಪಿಗೆ ಬರುತ್ತದೆ. ಅದೂ ಸಹ ತಪ್ಪಾಗಿದೆ. ಈಗಂತೂ ನೀವು ಮಕ್ಕಳು ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಬೇಕು ಮತ್ತು ಮುಂಜಾನೆಯೆದ್ದು ತಂದೆಯೊಂದಿಗೆ ಮಾತನಾಡಿರಿ - ಬಾಬಾ, ಗುಡ್ಮಾರ್ನಿಂಗ್. ಆದರೆ ಈ ಅಭ್ಯಾಸವು ಯಾರಿಗೂ ಇಲ್ಲವೆಂದು ತಂದೆಗೆ ಗೊತ್ತಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮ್ಮ ತಲೆಯ ಮೇಲೆ ಅರ್ಧಕಲ್ಪ ಹೊರೆಯಿದೆ, ಅದು ಇಳಿಯುವುದೇ ಇಲ್ಲ ಏಕೆಂದರೆ ನೆನಪು ಮಾಡುವುದಿಲ್ಲ. ಕೆಲಕೆಲವರಿಗೆ ಪಾಪವು ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಹೇಗೆ ಇಲಿಯೂ ಗಾಳಿ ಬಿಟ್ಟು ನಂತರ ಕಚ್ಚುತ್ತದೆಯೋ ಹಾಗೆಯೇ ಮಾಯೆಯೂ ಸಹ ಇಲಿಯಂತೆ ಕಚ್ಚುತ್ತಾ ಇರುತ್ತದೆ. ತಲೆಯ ಕೂದಲನ್ನು ಕತ್ತರಿಸಿ ಬಿಡುತ್ತದೆ, ಅದು ಅರ್ಥವಾಗುವುದೇ ಇಲ್ಲ. ಭಲೆ ಯಾರಾದರೂ ತಮ್ಮನ್ನು ಜ್ಞಾನಿಗಳೆಂದು ತಿಳಿದುಕೊಳ್ಳಬಹುದು ಆದರೆ ನೆನಪಿನಲ್ಲಿ ಬಹಳ ಕಚ್ಚಾ ಇದ್ದಾರೆ ಎಂದು ತಂದೆಯು ಚೆನ್ನಾಗಿ ತಿಳಿದುಕೊಂಡಿದ್ದಾರೆ. ತಮ್ಮ ಹೃದಯದಲ್ಲಿ ಕೇಳಿಕೊಳ್ಳಿ - ನಾನು ಮುಂಜಾನೆಯೆದ್ದು ತಂದೆಯನ್ನು ನೆನಪು ಮಾಡುತ್ತೇನೆಯೇ? ಬೇಹದ್ದಿನ ತಂದೆಯು ನಿಮಗೆ ಬೇಹದ್ದಿನ ಮುಂಜಾನೆಯಲ್ಲಿ ಬಂದು ಸಿಕ್ಕಿದ್ದಾರೆ. ಸನ್ಯಾಸಿಗಳೂ ಸಹ ಎದ್ದು ಬ್ರಹ್ಮ್ತತ್ವವನ್ನು ನೆನಪು ಮಾಡುತ್ತಾರೆ. ಮನುಷ್ಯರಂತೂ ���ಳುತ್ತಿದ್ದಂತೆಯೇ ಮಿತ್ರ ಸಂಬಂಧಿ, ತಮ್ಮ ಜೊತೆಗಾರ ಮೊದಲಾದವರನ್ನು ನೆನಪು ಮಾಡುತ್ತಾರೆ. ಭಕ್ತರಾಗಿದ್ದಾರೆ ತಮ್ಮ ದೇವತೆಗಳನ್ನು ನೆನಪು ಮಾಡುತ್ತಾರೆ. ಪಾಪಾತ್ಮರು ಪಾಪಾತ್ಮರಿಗೇ ಗುಡ್ಮಾರ್ನಿಂಗ್ ಹೇಳುತ್ತಾರೆ ಅಥವಾ ನೆನಪು ಮಾಡುತ್ತಾರೆ. ನೆನಪು ಮುಂಜಾನೆ ಮಾಡಲಾಗುತ್ತದೆ, ಭಕ್ತಿಯೂ ಸಹ ಮುಂಜಾನೆಯ ಸಮಯದಲ್ಲಿಯೇ ಮಾಡುತ್ತಾರೆ ಆದರೆ ಭಗವಂತನ ಭಕ್ತಿಯನ್ನು ಯಾರೂ ಮಾಡುವುದಿಲ್ಲ ಏಕೆಂದರೆ ಭಗವಂತನನ್ನು ಅರಿತುಕೊಂಡಿಲ್ಲ. ಭಲೆ ಭಕ್ತಿಯ ಫಲವನ್ನು ಕೊಡುವವರು ಭಗವಂತನೇ ಆಗಿದ್ದಾರೆಂದು ಹೇಳುತ್ತಾರೆ, ಓ ಗಾಡ್ಫಾದರ್ ಎಂದೂ ಹೇಳುತ್ತಾರೆ. ಇದನ್ನು ಆತ್ಮವೇ ಹೇಳುತ್ತದೆ ಆದರೆ ಪರಮಾತ್ಮನನ್ನು ಯಾರೂ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಯಾವಾಗ ಸ್ವಯಂ ಭಗವಂತನೇ ಬಂದು ತಮ್ಮ ಪರಿಚಯ ಕೊಡುವರೋ ಆಗಲೇ ಇದನ್ನು ತಿಳಿದುಕೊಳ್ಳಲು ಸಾಧ್ಯ. ಇಲ್ಲವೆಂದರೆ ಎಲ್ಲರೂ ನೇತಿ-ನೇತಿ ಅರ್ಥಾತ್ ಗೊತ್ತಿಲ್ಲ ಗೊತ್ತಿಲ್ಲ ಎಂದೇ ಹೇಳುತ್ತಾರೆ ಆದ್ದರಿಂದ ಪರಮಾತ್ಮನು ಈ ಸಮಯದಲ್ಲಿಯೇ ಬಂದು ನಾನು ಯಾರು ಎಂಬುದನ್ನು ತಿಳಿಸುತ್ತಾರೆ ಆದರೆ ಬಹಳ ಮಕ್ಕಳಲ್ಲಿಯೂ ಅರ್ಥಾತ್ ದೊಡ್ಡ-ದೊಡ್ಡ ಮಹಾರಥಿಗಳೂ ಸಹ ತಂದೆಯನ್ನು ಪೂರ್ಣ ಅರಿತುಕೊಂಡಿಲ್ಲ. ಪ್ರೀತಿಯಿಂದ ತಂದೆಯನ್ನು ನೆನಪು ಮಾಡುವುದಿಲ್ಲ. ಮುಂಜಾನೆ ಎದ್ದು ಪ್ರೀತಿಯಿಂದ ಗುಡ್ಮಾರ್ನಿಂಗ್ ಹೇಳುವುದು, ಜ್ಞಾನದ ಚಿಂತನೆಯಲ್ಲಿ ಇರುವುದನ್ನೂ ಮಾಡುವುದಿಲ್ಲ. ನೆನಪು ಮಾಡಿದಾಗಲೇ ಖುಷಿಯ ನಶೆಯಿರುವುದು ಆದರೆ ಆ ನಶೆಯೇರಲು ಮಾಯೆಯು ಬಿಡುವುದಿಲ್ಲ. ಒಂದುವೇಳೆ ಎಲ್ಲಿಯಾದರೂ ತಂದೆಗೆ ಅಗೌರವ ಮಾಡಿದರೆ ಮಾಯೆಯು ಒಮ್ಮೆಲೇ ಬುದ್ಧಿಯೋಗವನ್ನು ತುಂಡರಿಸಿ ಬಿಡುತ್ತದೆ ನಂತರ ವ್ಯರ್ಥ ಮಾತುಗಳಲ್ಲಿಯೇ ಬುದ್ಧಿಯು ತೊಡಗಿರುತ್ತದೆ. ಸ್ವರ್ಗದ ಮಾಲೀಕರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಪ್ರಜೆಗಳಾಗುವುದಂತೂ ಸಹಜವಾಗಿದೆ, ಮುಂದೆ ಹೋದಂತೆ ನೋಡುತ್ತೀರಿ, 30-40 ವರ್ಷದಿಂದ ಇರುವವರೂ ಸಹ ಜ್ಞಾನವನ್ನು ಬಿಟ್ಟು ಹೋಗುತ್ತಾರೆ. ಮಾಯೆಯು ಹಾರಿಸಿ ಬಿಡುತ್ತದೆ. ರಾಜ್ಯ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಮೊದಲೇ ಸತ್ತು ಹೋಗುತ್ತಾರೆ (ಜ್ಞಾನ ಬಿಟ್ಟು ಹೋಗುತ್ತಾರೆ) ಅಂದಮೇಲೆ ರಾಜ್ಯಭಾಗ್ಯವು ಹೇಗೆ ಸಿಗುವುದು! ತಂದೆಯು ಈ ರಹಸ್ಯವನ್ನು ತೆರೆಯುವುದಿಲ್ಲ. ಮಾಯೆಯೂ ಸಹ ನೋಡುತ್ತದೆ - ನಾನು ಅರ್ಧಕಲ್ಪ ರಾಜ್ಯ ಮಾಡುವವನಾಗಿದ್ದೇನೆ, ಇವರು ನನ್ನಮೇಲೆ ಜಯ ಗಳಿಸುತ್ತಾರೆ ಎಂದು. ಮತ್ತೆ ಶಿವ ತಂದೆಯನ್ನು ಒಮ್ಮೆಲೆ ಮರೆತು ಹೋಗುತ್ತಾರೆ. ಕೆಲವೊಂದೆಡೆ ಇವರ (ಬ್ರಹ್ಮಾ ತಂದೆಯ) ನಾಮ-ರೂಪದಲ್ಲಿ ಸಿಲುಕುತ್ತಾರೆ. ಶಿವ ತಂದೆಯನ್ನು ನೆನಪು ಮಾಡುವುದಿಲ್ಲ, ಯಾರಲ್ಲಿ ಕ್ರೋಧ, ಲೋಭ, ಮೋಹದ ಭೂತವಿರುವುದೋ ಅವರೇನು ತಂದೆಯನ್ನು ನೆನಪು ಮಾಡುವರು! ಇಷ್ಟು ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅದರ ಮಾತೇ ಕೇಳಬೇಡಿ. ದೇಹಾಭಿಮಾನದಲ್ಲಿ ಸಿಲುಕುತ್ತಾರೆ, ಶಿವ ತಂದೆಯು ತಿ��ಿಸುತ್ತಾರೆ - ಗೃಹಸ್ಥದಲ್ಲಿದ್ದು ಪ್ರಿಯತಮನಾದ ನನ್ನನ್ನು ನೆನಪು ಮಾಡುತ್ತಾ ಇರಿ ಆಗ ಕರ್ಮಾತೀತ ಸ್ಥಿತಿಯಾಗುವುದು. ಮೂಲಮಾತು ನೆನಪು ಮಾಡುವುದಾಗಿದೆ, ಇದರಲ್ಲಿಯೇ ಪರಿಶ್ರಮವಿದೆ. ನೆನಪು ಮಾಡದೆ ಸತೋಪ್ರಧಾನರಾಗಲು ಸಾಧ್ಯವಿಲ್ಲ, ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕೂ ಸಾಧ್ಯವಿಲ್ಲ, ಬುದ್ಧಿಯೋಗ ಬೇರೆ ಕಡೆ ಅಲೆಯುತ್ತಾ ಇರುವುದು. ಕೆಲವು ಮಕ್ಕಳಂತೂ ಬಹಳ ಪ್ರೀತಿಯಿಂದ, ಅಂತರಾಳದಿಂದ ತಂದೆಯನ್ನು ನೆನಪು ಮಾಡುತ್ತಾರೆ. ತಂದೆಗೆ ಗುಡ್ಮಾರ್ನಿಂಗ್ ಹೇಳಿದ ನಂತರ, ಬಾಬಾ ನಾವು ನಿಮ್ಮ ನೆನಪಿನಲ್ಲಿರುತ್ತೇವೆ ಏಕೆಂದರೆ ತಲೆಯ ಮೇಲೆ ಬಹಳಷ್ಟು ಪಾಪಗಳ ಹೊರೆಯಿದೆ ಎಂದು ಹೇಳಬೇಕು. ಒಂದುವೇಳೆ ತಂದೆಯ ನೆನಪಿನಲ್ಲಿ ಇಲ್ಲದಿದ್ದರೆ ಪಾಪಗಳ ಹೊರೆಯು ಹೇಗೆ ಕಳೆಯುವುದು! ಅರ್ಧಕಲ್ಪದ ದೇಹಾಭಿಮಾನವಿರುವ ಕಾರಣ ಅದು ಹೋಗುವುದೇ ಇಲ್ಲ. ಅಲ್ಲಿ ದೇವತೆಗಳು ಆತ್ಮಾಭಿಮಾನಿಯಾಗಿರುತ್ತಾರೆ. ಭಲೆ ಪರಮಾತ್ಮನನ್ನು ತಿಳಿದುಕೊಂಡಿರುವುದಿಲ್ಲ ಆದರೆ ಇದಂತೂ ತಿಳಿದಿರುತ್ತದೆ - ನಾನಾತ್ಮನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ. ಒಂದುವೇಳೆ ರಚಯಿತನನ್ನು ಅರಿತುಕೊಂಡರೆ ರಚನೆ, ತಂದೆಯ ಆಸ್ತಿಯನ್ನೂ ಅರಿತುಕೊಳ್ಳುವರು. ಅಲ್ಲಿ ಈ ಜ್ಞಾನವಿರುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಈ ಜ್ಞಾನವನ್ನು ತಿಳಿಸುತ್ತೇನೆ, ನಂತರ ಇದು ಪ್ರಾಯಲೋಪವಾಗಿ ಬಿಡುತ್ತದೆ ಮತ್ತೆ ಈ ಜ್ಞಾನವು ಪರಂಪರೆಯಾಗಿ ನಡೆಯುವುದಿಲ್ಲ. ಮನುಷ್ಯರು ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ತಿಳಿದುಕೊಂಡಿಲ್ಲ. ಎಲ್ಲಾ ಆತ್ಮರಿಗೆ ತಮ್ಮ-ತಮ್ಮ ಪಾತ್ರವು ಹೇಗೆ ಸಿಕ್ಕಿದೆಯೆಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ನೀವು ಬಹಳ ಒಳ್ಳೆಯ ಪಾತ್ರಧಾರಿಗಳಾಗಿದ್ದೀರಿ. ಈ ಸಮಯದಲ್ಲಿ ನೀವು ವಿಶ್ವವನ್ನು ತಮ್ಮ ರಾಜ್ಯವನ್ನಾಗಿ ಮಾಡಿಕೊಳ್ಳುತ್ತೀರಿ. ನಿಮ್ಮದು ಹೀರೋ ಮತ್ತು ಹೀರೋಯಿನ್ ಪಾತ್ರವಾಗಿದೆ, ಮೂಲ ಮಾತು ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಗೆ ಗೊತ್ತಿದೆ - ಪ್ರದರ್ಶನಿಯಲ್ಲಿ ಬಹಳ ಮಕ್ಕಳು ಚೆನ್ನಾಗಿ ಸರ್ವೀಸ್ ಮಾಡುತ್ತಾರೆ ಆದರೆ ನೆನಪಿನಲ್ಲಿ ಬಹಳ ನಿರ್ಬಲರಾಗಿದ್ದಾರೆ. ಮುಂಜಾನೆಯೆದ್ದು ತಂದೆಯೊಂದಿಗೆ ಹೇಗೆ ಗುಡ್ಮಾರ್ನಿಂಗ್ ಹೇಳಬೇಕು ಎಂಬ ಬುದ್ಧಿಯೂ ಇಲ್ಲ. ಭಲೆ ವಿಷಯದ ಮೇಲೆ ಬಹಳ ಚೆನ್ನಾಗಿ ಮಂಥನ ಮಾಡುತ್ತಾರೆ. ಅದು ಸಾಮಾನ್ಯ ಮಾತಾಗಿದೆ. ಪ್ರತಿನಿತ್ಯ ಹೊಸ-ಹೊಸ ಭಾಷಣದ ವಿಷಯಗಳನ್ನು ತೆಗೆದುಕೊಂಡು ತಿಳಿಸಬಹುದು ಆದರೆ ಮುಖ್ಯ ಮಾತು ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿದಾಗಲೇ ಪಾಪವು ಕಳೆಯುವುದು.
|
2 |
+
ತಂದೆಗೆ ಗೊತ್ತಿದೆ - ಮಕ್ಕಳಿಗೆ ಇನ್ನೂ ಆ ಸ್ಥಿತಿಯು ಬಂದಿಲ್ಲ, ತಂದೆಯು ಹೆಸರನ್ನು ಹೇಳುವುದಿಲ್ಲ. ಒಂದುವೇಳೆ ತಂದೆಯು ಹೆಸರನ್ನು ತಿಳಿಸಿ ಬಿಟ್ಟರೆ ಈಗ ಪೈಸೆಯಷ್ಟು ಯಾವ ಸ್ಥಿತಿಯಿದೆಯೋ ತಿಳಿದ ನಂತರ ಅದೂ ಸಹ ಕಡಿಮೆಯಾಗುವುದು. ಈ ಜ್ಞಾನದಲ್ಲಿ ತಿಳುವಳಿಕ�� ಇರಬೇಕಾಗಿದೆ. ಯಾರಾದರೂ ನೋಡಿ ನೀವು ಸಪ್ಪೆಯಾಗಿ ಕಾಣಿಸುತ್ತೀರಿ, ಆರೋಗ್ಯ ಸರಿಯಿಲ್ಲವೆ ಎಂದು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದಂತೆಯೇ ಜ್ವರ ಬಂದು ಬಿಡಬಾರದು. ಇಷ್ಟು ಕಚ್ಚಾ ಆಗಬಾರದು, ಧೈರ್ಯವಿರಬೇಕು. ಸೇವಾಧಾರಿ ಮಕ್ಕಳು ಎಂದೂ ಬಿಟ್ಟು ಹೋಗುವುದಿಲ್ಲ. ಅವರು ತಮ್ಮ ನಶೆಯಲ್ಲಿರುತ್ತಾರೆ. ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾ ತಂದೆಯ ನೆನಪು ಮಾಡಬೇಕಾಗಿದೆ, ತಂದೆಗೆ ಗುಡ್ಮಾರ್ನಿಂಗ್ ಹೇಳುತ್ತಿರಬೇಕು - ಇದು ಉನ್ನತ ಗುರಿಯಾಗಿದೆ. ರಾಜ್ಯ ಪದವಿಯನ್ನು ಪಡೆಯಬೇಕೆಂದರೆ ಪರಿಶ್ರಮ ಪಡಬೇಕಾಗಿದೆ. ಯಾರು ಕಲ್ಪದ ಹಿಂದೆ ಆಗಿದ್ದರೋ ಅವರಿಗೆ ಮುಂದೆ ಹೋದಂತೆ ಅರ್ಥವಾಗುತ್ತಾ ಹೋಗುವುದು. ಯಾರನ್ನೂ ಬಚ್ಚಿಡಲು ಸಾಧ್ಯವಿಲ್ಲ. ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಿಳಿದುಕೊಂಡಿರುತ್ತಾರೆ ಮತ್ತು ರಿಜಿಸ್ಟರ್ ಇಟ್ಟುಕೊಂಡಿರುತ್ತಾರೆ, ಅದರಿಂದಲೂ ಅರ್ಥವಾಗುತ್ತದೆ. ಅದರಲ್ಲಿ ಮುಖ್ಯವಾಗಿ ಭಾಷೆಯ ಸಬ್ಜೆಕ್ಟ್ ಇರುತ್ತದೆ, ಇಲ್ಲಿ ನೆನಪಿನ ಸಬ್ಜೆಕ್ಟ್ ಮುಖ್ಯವಾಗಿದೆ. ಜ್ಞಾನವಂತೂ ಸಹಜವಾಗಿದೆ, ಇದನ್ನು ಮಕ್ಕಳೂ ತಿಳಿಸಬಲ್ಲರು. ಬಾಲ್ಯದಲ್ಲಿ ಧಾರಣೆ ಮಾಡಿಕೊಳ್ಳಲು ಬುದ್ಧಿಯು ತೀಕ್ಷ್ಣವಾಗಿರುತ್ತದೆ, ವೃದ್ಧರು ಇಷ್ಟೊಂದು ತಿಳಿಸಲು ಸಾಧ್ಯವಿಲ್ಲ. ಇಲ್ಲಿಯೂ ಸಹ ತಂದೆಯು ಕುಮಾರಿಯರಿಗೇ ಹೆಚ್ಚು ಮಾನ್ಯತೆ ಕೊಡುತ್ತಾರೆ, ಕೇವಲ ನಾಮ-ರೂಪದಲ್ಲಿ ಸಿಲುಕಿ ಎಲ್ಲಿಯೂ ತಲೆ ಕೆಳಕಾಗಬಾರದು. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಗೂಬೆಯಂತೆ ತಲೆ ಕೆಳಕಾಗಿ ಬಿಟ್ಟಿದ್ದಾರೆ ಮತ್ತೆ ಅವರನ್ನು ಸರಿ ಪಡಿಸುವುದರಿಂದ ಅಲ್ಲಾನ ಮಕ್ಕಳಾಗಿ ಬಿಡುತ್ತಾರೆ. ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳಿರುವುದರಿಂದಲೇ ಎಲ್ಲಾ ಮನುಷ್ಯರು ಪರಮಾತ್ಮನಿಂದ ವಿಮುಖರಾಗಿ ಬಿಟ್ಟಿದ್ದಾರೆ. ಸನ್ಯಾಸಿಗಳು ತಮ್ಮ ಪೂಜೆಯನ್ನೂ ಮಾಡಿಸಿಕೊಳ್ಳುತ್ತಾರೆ, ವಾಸ್ತವದಲ್ಲಿ ನೀವು ನಮಗೇಕೆ ಹೂಗಳನ್ನು ಹಾಕುತ್ತೀರಿ ಎಂದು ಹೇಳಬೇಕಲ್ಲವೆ ಆದರೆ ಹೇಳುವುದಿಲ್ಲ. ಅವರನ್ನು ಎಲ್ಲರೂ ತಮ್ಮ ಗುರುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಅವರು ಸನ್ಯಾಸಿಗಳು ಇವರು ಗೃಹಸ್ಥಿಗಳು ಅಂದಮೇಲೆ ಅವರ ಅನುಯಾಯಿಗಳಾಗಲು ಹೇಗೆ ಸಾಧ್ಯ! ಯಾವಾಗ ಸನ್ಯಾಸಿಗಳಂತೆ ಇವರೂ ಸಹ ಸನ್ಯಾಸಿಗಳಾದಾಗಲೇ ಅನುಯಾಯಿಗಳೆಂದು ಹೇಳಬಹುದು. ಆದರೆ ನೀವು ತಮ್ಮನ್ನು ಅನುಯಾಯಿಗಳೆಂದು ಹೇಳಿಕೊಳ್ಳಬೇಡಿ ಎಂದು ಯಾರೂ ಸಹ ತಿಳಿಸುವುದಕ್ಕೂ ಸಾಧ್ಯವಿಲ. ನೀವು ಅನುಯಾಯಿಗಳಾಗಿದ್ದೀರಿ ಎಂದು ತಂದೆಯು ಯಾರಿಗೂ ಹೇಳಲು ಸಾಧ್ಯವಿಲ್ಲ. ಯಾವಾಗ ಪಾವನರಾಗುವ ಪ್ರತಿಜ್ಞೆ ಮಾಡುವರೋ ಆಗಲೇ ಅನುಯಾಯಿಗಳೆಂದು ಹೇಳಿಕೊಳ್ಳಬಹುದು. ಪ್ರತಿಜ್ಞೆ ಮಾಡಿದಾಗ ಸ್ವಯಂ ಬರೆದು ಕಳುಹಿಸುತ್ತಾರೆ ಆದರೆ ಯಾವಾಗ ಬಿದ್ದು ಮುಖ ಕಪ್ಪು ಮುಖ ಮಾಡಿಕೊಳ್ಳುತ್ತಾರೆಯೋ ಆಗ ಬರೆಯುವುದಿಲ್ಲ ಏಕೆಂದರೆ ಸಂಕೋಚವಾಗುತ್ತದೆ.
|
3 |
+
ಇದು ಅತಿ ದೊಡ್ಡ ಪೆಟ್ಟಾಗಿದೆ, ನಂತರ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಲು ಸಾಧ್ಯವಿಲ್ಲ. ಪತಿತರನ್ನು ನಾನು ತಿರಸ್ಕರಿಸುತ್ತೇನೆ, ವಿಷ ಕುಡಿಯುವವರು ಬಹಳ ಕೆಟ್ಟವರಾಗಿದ್ದಾರೆ. ಪವಿತ್ರರಾಗುವುದು ಬಹಳ ಒಳ್ಳೆಯದಲ್ಲವೆ. ನಾನು ಪವಿತ್ರ ಪ್ರಪಂಚವನ್ನಾಗಿ ಮಾಡಿಯೇ ತೋರಿಸುತ್ತೇನೆ, ಬಂದು ಪವಿತ್ರರನ್ನಾಗಿ ಮಾಡುವ ಕಾಂಟ್ರಾಕ್ಟ್ನ್ನು ತೆಗೆದುಕೊಳ್ಳುತ್ತೇನೆ. ಕಲ್ಪ-ಕಲ್ಪವೂ ಕಾಂಟ್ರಾಕ್ಟರ್ ಆದ ನನ್ನನ್ನೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಮತ್ತ್ಯಾರೂ ನನ್ನಂತಹ ಕಾಂಟ್ರಾಕ್ಟರ್ ಇರುವುದಿಲ್ಲ, ನನ್ನೊಬ್ಬನಿಗೇ ಕಾಂಟ್ರಾಕ್ಟ್ ಸಿಕ್ಕಿದೆ, ನಾನೇ ಪಾವನ ಪ್ರಪಂಚವನ್ನಾಗಿ ಮಾಡುವೆನು. ಕಲ್ಪ-ಕಲ್ಪವೂ ಜ್ಞಾನವಂತೂ ಈ ಕಾಂಟ್ರಾಕ್ಟನ್ನು ಪೂರ್ಣಗೊಳಿಸುತ್ತೇನೆ. ಸನ್ಯಾಸಿಗಳು ಪವಿತ್ರರಾಗಿದ್ದು ಭಾರತವನ್ನು ತಣಿಸುವ ಕಾಂಟ್ರಾಕ್ಟ್ ಸಿಕ್ಕಿದೆ ಏಕೆಂದರೆ ಭಾರತವೇ ಪವಿತ್ರವಾಗಿತ್ತು, ಅದನ್ನು ಸ್ವರ್ಗವೆಂದು ಹೇಳಲಾಗುತ್ತದೆ. ಅಲ್ಲಿನ ದೇವತೆಗಳು ಸರ್ವಗುಣ ಸಂಪನ್ನರು, ಸಂಪೂರ್ಣ ನಿರ್ವಿಕಾರಿಗಳಾಗಿದ್ದರು. ಅವರ ಮಹಿಮೆಯನ್ನು ಹಾಡುತ್ತಾರೆ, ಈ ಗಾಯನವು ಅನ್ಯ ದೇಶಗಳಲ್ಲಿ ಇಲ್ಲ, ಅಲ್ಲಿ ಚಿತ್ರಗಳೂ ಇಲ್ಲ, ಇವರು ಸ್ವರ್ಗದ ಮಾಲೀಕರಾಗಿದ್ದರು, ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿಯೆಂದು ಹೇಳುತ್ತಾರೆ. ಬಹಳ ಪ್ರೀತಿಯಿಂದ ಹಳೆಯ ಚಿತ್ರಗಳನ್ನು ಖರೀದಿಸುತ್ತಾರೆ, ದೇವತೆಯಾದ ಕೃಷ್ಣನ ಚಿತ್ರವನ್ನು ತರಿಸುತ್ತಾರೆ. ಎಲ್ಲರಿಗಿಂತ ಹೆಚ್ಚಿನದಾಗಿ ಕೃಷ್ಣನನ್ನು ಪ್ರೀತಿ ಮಾಡುತ್ತಾರೆ.
|
4 |
+
ನೀವು ಮಕ್ಕಳು ಇದೇ ಚಿಂತೆಯನ್ನು ಇಟ್ಟುಕೊಳ್ಳಬೇಕಾಗಿದೆ - ನಾವು ಸತೋಪ್ರಧಾನರಾಗಬೇಕಾಗಿದೆ. ಮಾಯೆಯು ಬಹಳ ಅಲೆದಾಡಿಸುತ್ತದೆ. ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ, ಶಿವ ತಂದೆಯನ್ನು ನೆನಪೇ ಮಾಡುವುದಿಲ್ಲ. ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ - ನಮಗೆ ಶಿವ ತಂದೆಯು ತಿಳಿಸುತ್ತಿದ್ದಾರೆ, ಈ ಬ್ರಹ್ಮಾರವರು ಏನೂ ಹೇಳುವುದಿಲ್ಲವೆಂದು ಸದಾ ತಿಳಿದುಕೊಳ್ಳಿ. ಆದರೂ ಸಹ ಶಿವ ತಂದೆಯನ್ನು ಮರೆತು ನಾಮ-ರೂಪವನ್ನು ನೆನಪು ಮಾಡುತ್ತಾ ಇರುತ್ತಾರೆಯೋ ಅಂತಹವರು ಯಾವ ಪದವಿಯನ್ನು ಪಡೆಯುವರು! ಮೊದಲು ಶ್ರೀಮತದಂತೆ ನಡೆಯಬೇಕಾಗಿದೆ, ಶಿವ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಭೂತಗಳನ್ನು ಓಡಿಸಿರಿ. ದೇಹಾಭಿಮಾನವನ್ನು ಓಡಿಸಿರಿ. ನಾವಾತ್ಮರಾಗಿದ್ದೇವೆ ಮತ್ತು ಬಹಳ ಮಧುರರಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ – ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆಯುತ್ತಾ ಹೋಗಿ, ನನ್ನನ್ನು ನೆನಪು ಮಾಡಿ. ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ನನ್ನನ್ನು ನೆನಪು ಮಾಡಲಿ. ನಾನು ಬಹಳ ಹಳೆಯ ಪ್ರಿಯತಮನಾಗಿದ್ದೇನೆ, ಈ ರೀತಿ ಮತ್ತ್ಯಾರಿಗೂ ತಿಳಿಸಲು ಬರುವುದಿಲ್ಲ. ತಂದೆಯೇ ಈ ಸಮಯದಲ್ಲಿ ಬಂದು ನಿಮ್ಮನ್ನು ಆತ್ಮಿಕ ಪ್ರಿಯತಮೆಯರನ್ನಾಗಿ ಮಾಡಿಕೊಳ್ಳುತ್ತಾರೆ. ಈಗ ನಮ್ಮ ಪ್ರಿಯತಮನಾದ ಶಿವ ತಂದೆಯು ಬಂದಿದ್ದಾರೆಂದು ನೀವಾತ್ಮರಿಗೆ ತಿಳಿದಿದೆ. ಅವರಿಂದ ಸ್ವರ್ಗದ ಆಸ್ತಿಯನ್ನು ಪಡೆಯಬೇಕಾಗಿದೆ. ಇಂತಹ ಶಿವ ತಂದೆಗೆ ಬೆಳಗ್ಗೆ-ಬೆಳಗ್ಗೆ ಎದ್ದು ಗುಡ್ಮಾರ್ನಿಂಗ್ ಹೇಳಬೇಕು, ನೆನಪು ಮಾಡಬೇಕು. ಎಷ್ಟು ನೆನಪು ಮಾಡುತ್ತೀರಿ ಅಷ್ಟು ಪಾಪಗಳೂ ಸಹ ಕಳೆಯುವುದು, ದೇಹಾಭಿಮಾನವು ಕಳೆಯುವುದು. ಇಂತಹ ಅಭ್ಯಾಸ ಮಾಡುತ್ತಾ-ಮಾಡುತ್ತಾ ಸ್ಥಿತಿಯು ಪಕ್ಕಾ ಆಗಿ ಬಿಡುತ್ತದೆ. ನೆನಪಿನಲ್ಲಿ ಕುಳಿತುಕೊಂಡಿರುತ್ತೀರಿ, ಗ್ರಾಹಕರು ಬಂದರೂ ಸಹ ಅವರಕಡೆ ಗಮನ ಹೋಗುವುದಿಲ್ಲ. ಗ್ರಾಹಕರಿಗೆ ಬೇಕಾದುದನ್ನು ಕೊಟ್ಟ ನಂತರ ಮತ್ತೆ ತಂದೆಯ ನೆನಪಿನಲ್ಲಿರಬೇಕು. ಈ ರೀತಿ ನೀವು ಕರ್ಮಾತೀತರಾಗುವ ಪುರುಷಾರ್ಥ ಮಾಡಬೇಕಾಗಿದೆ. ತಂದೆಯು ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ಇವರ (ಬ್ರಹ್ಮಾ) ಮೇಲಂತೂ ಬಹಳ ಜವಾಬ್ದಾರಿಯಿದೆ, ಇವರಿಗಿಂತಲೂ ಹೆಚ್ಚಿನದಾಗಿ ನೆನಪು ಮಾಡುವ ಅವಕಾಶವು ನಿಮಗೆ ಸಿಗುತ್ತದೆ. ಬ್ರಹ್ಮಾ ತಂದೆಯು ಉದಾಹರಣೆಯನ್ನು ತಿಳಿಸುತ್ತಾರೆ- ಭೋಜನದ ಸಮಯದಲ್ಲಿ ಶಿವ ತಂದೆಯನ್ನು ನೆನಪು ಮಾಡಿ. ನಾವಿಬ್ಬರೂ (ಬಾಬಾ ಮತ್ತು ದಾದಾ) ಒಟ್ಟಿಗೆ ತಿನ್ನೋಣವೆಂದು ಕುಳಿತುಕೊಳ್ಳುತ್ತೇನೆ ಆದರೆ ಮತ್ತೆ ಮರೆತು ಹೋಗುತ್ತೇನೆ. ಎಲ್ಲರಿಗಿಂತ ಹೆಚ್ಚಿನ ಜಂಜಾಟವು ಈ ತಂದೆಯ ಮೇಲಿರುತ್ತದೆ. ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ರಾತ್ರಿ 12 ಗಂಟೆಯ ನಂತರ ಎ.ಎಂ ಆರಂಭವಾಗುತ್ತದೆ. ರಾತ್ರಿಯಲ್ಲಿ ಬೇಗನೆ ಮಲಗಿ, ಮುಂಜಾನೆ ಬೇಗನೆ ಎದ್ದು ನೆನಪು ಮಾಡಬೇಕು. ಏಳುತ್ತಿದ್ದಂತೆಯೇ “ಬಾಬಾ ಗುಡ್ಮಾರ್ನಿಂಗ್” ಎಂದು ಹೇಳಿ, ಮತ್ತೆ ಬೇರೆ ಕಡೆ ಬುದ್ಧಿಯು ಹೋಗಬಾರದು. ತಂದೆಯಂತೂ ಪ್ರತಿಯೊಬ್ಬ ಮಗುವನ್ನೂ ತಿಳಿದುಕೊಂಡಿದ್ದಾರೆ. ನಿಮ್ಮದು ಭವಿಷ್ಯಕ್ಕಾಗಿ ಬಹಳ ಸಂಪಾದನೆಯಿದೆ. ಕಲ್ಪ-ಕಲ್ಪಾಂತರವೂ ಈ ಸಂಪಾದನೆಯು ಕೆಲಸಕ್ಕೆ ಬರುವುದು ಆದ್ದರಿಂದ ಯಾವುದೇ ಭೂತವು ಬರಬಾರದು. ಕ್ರೋಧವೂ ಕಡಿಮೆಯಿಲ್ಲ, ಮೋಹವೂ ಸಹ ಕೆಟ್ಟದ್ದಾಗಿದೆ. ಎಷ್ಟು ಸಾಧ್ಯವೋ ತಂದೆಯ ನೆನಪಿನಲ್ಲಿ ಕುಳಿತು ಪಾವನರಾಗಬೇಕಾಗಿದೆ. ಹೇಗೆ ತಂದೆಯು ಜ್ಞಾನಸಾಗರನಾಗಿದ್ದಾರೆಯೋ ಅದೇರೀತಿ ಮಕ್ಕಳೂ ಆಗಬೇಕಾಗಿದೆ ಆದರೆ ಸಾಗರವು ಒಂದೇ ಇರುತ್ತದೆಯಲ್ಲವೆ. ಉಳಿದೆಲ್ಲವುಗಳಿಗೆ ನದಿಯೆಂದು ಹೇಳುತ್ತಾರೆ. ಕ್ರೋಧವು ಎರಡನೇ ನಂಬರಿನ ಶತ್ರುವಾಗಿದೆ, ಬಹಳ ನಷ್ಟವನ್ನುಂಟು ಮಾಡುತ್ತದೆ. ಒಬ್ಬರು ಇನ್ನೊಬ್ಬರ ಪ್ರಾಣವನ್ನೇ ತೆಗೆಯುತ್ತಾರೆ. ಲೋಭಿಯೂ ಸಹ ಒಬ್ಬರು ಇನ್ನೊಬ್ಬರ ಪ್ರಾಣವನ್ನು ಹಿಂಡುತ್ತಾರೆ. ಮೋಹದ ಭೂತವಂತೂ ಸತ್ಯನಾಶ ಮಾಡಿ ಬಿಡುತ್ತದೆ. ಮೋಹದ ಕಾರಣ ಶಿವ ತಂದೆಯ ನೆನಪನ್ನು ಮರೆತು ತಮ್ಮ ಮಕ್ಕಳನ್ನು ನೆನಪು ಮಾಡುತ್ತಾ ಇರುತ್ತಾರೆ. ನಷ್ಟಮೋಹಿಗಳು ಅಡೋಲ ಸ್ಥಿತಿಯಲ್ಲಿರುತ್ತಾರೆ. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ಚೆನ್ನಾಗಿ ���ರ್ವೀಸ್ ಮಾಡುವ ಜೊತೆ ಜೊತೆಗೆ ಅಂತರಾಳದಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ಮುಂಜಾನೆ ಏಳುತ್ತಿದ್ದಂತೆಯೇ ಪ್ರೀತಿಯಿಂದ “ಬಾಬಾ ಗುಡ್ಮಾರ್ನಿಂಗ್” ಎಂದು ಹೇಳಬೇಕಾಗಿದೆ. ಕರ್ಮ ಮಾಡುತ್ತಿದ್ದರೂ ಸಹ ನೆನಪಿನ ಅಭ್ಯಾಸ ಮಾಡಬೇಕಾಗಿದೆ.
|
8 |
+
2. ಯಾವುದೇ ದೇಹಧಾರಿಯು ನಾಮ-ರೂಪದಲ್ಲಿ ಸಿಲುಕಬಾರದು, ಜ್ಞಾನದ ಚಿಂತನೆಯಲ್ಲಿ ಇರಬೇಕಾಗಿದೆ, ವ್ಯರ್ಥ ಮಾತುಗಳನ್ನಾಡಬಾರದು.
|
BKMurli/BKMurli/page_1021.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಇದನ್ನು ಯಾರು ಹೇಳಿದರು? ಆತ್ಮವು ಹೇಳಿತು ಏಕೆಂದರೆ ಡ್ರಾಮಾ ಪ್ಲಾನನುಸಾರ ನೀವೀಗ ಆತ್ಮಾಭಿಮಾನಿಗಳಾಗುತ್ತಿದ್ದೀರಿ. ಅರ್ಧಕಲ್ಪ ದೇಹಾಭಿಮಾನಿಯಾಗುತ್ತೀರಿ, ಅರ್ಧಕಲ್ಪ ಆತ್ಮಾಭಿಮಾನಿಯಾಗುತ್ತೀರಿ. ನೀವೀಗ ಆತ್ಮಾಭಿಮಾನಿಗಳಾಗುವ ಅಭ್ಯಾಸ ಮಾಡಬೇಕಾಗಿದೆ, ತಂದೆಯು ಪದೇ-ಪದೇ ಹೇಳುತ್ತಾರೆ – ಅಶರೀರಿ ಭವ, ಆತ್ಮಾಭಿಮಾನಿ ಭವ. ನೀವು ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ಅವರು ದೂರ ಕುಳಿತಿದ್ದಾರೆ. ನಾವು ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದಾರೆ. ತಂದೆಯ ಶ್ರೀಮತದ ಅನುಸಾರವೇ ನಡೆಯಬೇಕಾಗಿದೆ, ಇದಕ್ಕೆ ಶ್ರೇಷ್ಠಾತಿ ಶ್ರೇಷ್ಠ ಮತವೆಂದು ಹೇಳಲಾಗುತ್ತದೆ. ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ಈಗ ತಂದೆಯು ತಿಳಿಸುತ್ತಾರೆ – ದೇಹ ಸಹಿತ ದೇಹದ ಎಲ್ಲಾ ಸಂಬಂಧವನ್ನು ಬಿಡಿ, ಆತ್ಮಾಭಿಮಾನಿಯಾಗುವ ಬಹಳ-ಬಹಳ ಅಭ್ಯಾಸ ಮಾಡಬೇಕಾಗಿದೆ. ಶರೀರವಂತೂ ವಿನಾಶವಾಗಲಿದೆ, ಆತ್ಮ ಅವಿನಾಶಿಯಾಗಿದೆ. ವಿನಾಶಿ ಶರೀರವನ್ನು ನೆನಪು ಮಾಡುವ ಕಾರಣ ಆತ್ಮವನ್ನು ಮರೆತು ಕುಳಿತಿದ್ದಾರೆ. ಆತ್ಮವೆಂದರೇನು ಎಂಬುದನ್ನೂ ಸಹ ಮಕ್ಕಳಿಗೆ ತಿಳಿಸಲಾಗುತ್ತದೆ. ಆತ್ಮವು ಚಿಕ್ಕ ನಕ್ಷತ್ರವಾಗಿದೆ ಎಂದು ಹೇಳುತ್ತಾರೆ. ಅದು ಈ ಕಣ್ಣುಗಳಿಗೆ ಕಾಣಿಸುವುದಿಲ್ಲ, ಅದನ್ನು ದಿವ್ಯ ದೃಷ್ಟಿಯಿಲ್ಲದೆ ನೋಡಲು ಸಾಧ್ಯವಿಲ್ಲ. ಆತ್ಮವನ್ನು ನೋಡಲು ಬಹಳ ಪ್ರಯತ್ನ ಪಡುತ್ತಾರೆ ಆದರೆ ನೋಡಲು ಸಾಧ್ಯವಿಲ್ಲ. ಭಲೆ ಯಾರಾದರೂ ದಿವ್ಯ ದೃಷ್ಟಿಯಿಂದ ನೋಡಲೂಬಹುದು ಆದರೆ ಇದೇನು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಆತ್ಮವು ದೊಡ್ಡ ವಸ್ತುವಲ್ಲ, ಚಿಕ್ಕ ನಕ್ಷತ್ರ ಮಾದರಿಯಾಗಿದೆ. ಎಷ್ಟು ಚಿಕ್ಕ ಬಿಂದುವಾಗಿದೆ, ಈ ಮಾತುಗಳು ಯಾರದೇ ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಬಹಳ ಕಷ್ಟವಿದೆ ಏಕೆಂದರೆ ಅರ್ಧಕಲ್ಪದಿಂದ ದೇಹಾಭಿಮಾನದಲ್ಲಿದ್ದಿರಿ.
|
2 |
+
ತಂದೆಯು ತಿಳಿಸುತ್ತಾರೆ - ನಿಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ, ನಾವಾತ್ಮರು ಅಲ್ಲಿನ ನಿವಾಸಿಗಳಾಗಿದ್ದೇವೆ. ಈ ಶರೀರವನ್ನು ಇಲ್ಲಿಯೇ ತೆಗೆದುಕೊಳ್ಳಬೇಕಾಗಿದೆ, ಈ ಶರೀರವು ಪಂಚತತ್ವಗಳಿಂದಾಗಿದೆ. ಯಾವಾಗ ಪಿಂಡ(ಶರೀರ)ವು ತಯಾರಾಗುತ್ತದೆಯೋ ಆಗ ಸೂಕ್ಷ್ಮಆತ್ಮವು ಇದರಲ್ಲಿ ಪ್ರವೇಶ ಮಾಡುತ್ತದೆ, ಚೈತನ್ಯತೆ ಬರುತ್ತದೆ. ಆತ್ಮವು ಸತ್ಯ, ಚೈತನ್ಯವಾಗಿದೆ ಮತ್ತು ಪರಮಪಿತ ಪರಮಾತ್ಮನು ಸತ್ಯ, ಚೈತನ್ಯವಾಗಿದ್ದಾರೆ. ಪರಮ ಆತ್ಮನಾಗಿದ್ದಾರೆ. ಅವರು ದೊಡ್ಡ ಗಾತ್ರದಲ್ಲಿಲ್ಲ. ಆತ್ಮವು ಚಿಕ್ಕ ಬಿಂದುವಾಗಿದೆ. ಹೇಗೆ ಇವರಲ್ಲಿ ಜ್ಞಾನವಿದೆಯೋ ಹಾಗೆಯೇ ನೀವಾತ್ಮರಲ್ಲಿಯೂ ಜ್ಞಾನವಿದೆ. ಇಷ್ಟು ಚಿಕ್ಕಆತ್ಮನಲ್ಲಿ ಸಂಪೂರ್ಣ ಜ್ಞಾನವಿದೆ, ಇದು ಬಹಳ ಅದ್ಭುತವಾಗಿದೆ. ಆದರೆ ಮಕ್ಕಳು ಪದೇ-ಪದೇ ಈ ಮಾತುಗಳನ್ನು ಮರೆತು ಹೋಗುತ್ತಾರೆ, ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಈಗ ನೀವಾತ್ಮರು ಈ ಶರೀರದ ಮೂಲಕ ವಿಶ್ವದ ಮಾಲೀಕರಾಗುತ್ತೀರಿ ಅರ್ಥಾತ್ ದೇವಿ-ದೇವತೆಗಳಾಗುತ್ತೀರಿ. ತಂದೆಯಂತೂ ಭಗವಂತನಾಗಿದ್ದಾರೆ ಆದರೆ ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿಯೆಂದು ಹೇಳುತ್ತಾರೆ ಏಕೆಂದರೆ ತಂದೆಯೇ ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಈ ಜ್ಞಾನದಿಂದ ನೋಡಿ, ಹೇಗಾಗಿ ಬಿಡುತ್ತಾರೆ. ಯಾರು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವರೋ ಅವರು ಒಳ್ಳೆಯ ಸಂಪಾದನೆ ಮಾಡುತ್ತಾರೆ. ಹೇಗೆ ಪ್ರಪಂಚದಲ್ಲಿ ಯಾರಾದರೂ ಬಹಳ ಸುಂದರವಾಗಿದ್ದರೆ ಅವರಿಗೆ ಬಹಳ ಬಹುಮಾನವು ಸಿಗುತ್ತದೆ. ಮಿಸ್ ಇಂಡಿಯಾ, ಮಿಸ್ ಅಮೇರಿಕಾ ಎಂದು ಹೇಳುತ್ತಾರೆ. ಶರೀರದ ಜೊತೆ ಅವರು ಎಷ್ಟು ಪರಿಶ್ರಮ ಪಡುತ್ತಾರೆ! ಸತ್ಯಯುಗದಲ್ಲಂತೂ ಆಕರ್ಷಣೆ ಮಾಡುವಂತಹ ಸ್ವಾಭಾವಿಕ ಸೌಂದರ್ಯವಿರುತ್ತದೆ, ಶರೀರವು ಸತೋಪ್ರಧಾನ ಪ್ರಕೃತಿಯಿಂದ ಆಗುತ್ತದೆಯಲ್ಲವೆ. ಅವರು ಎಷ್ಟು ಆಕರ್ಷಿಸುತ್ತದೆ. ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣರ ಚಿತ್ರಗಳು ಎಲ್ಲರನ್ನು ಎಷ್ಟು ಮನ ಸೆಳೆಯುತ್ತದೆ. ವಾಸ್ತವದಲ್ಲಿ ಇಲ್ಲಿ ಅವರದೂ ಸಹ ಆಕ್ಯೂರೇಟ್ ಚಿತ್ರವಾಗುವುದಿಲ್ಲ. ಅಲ್ಲಂತೂ ಸತೋಪ್ರಧಾನರಾಗಿರುತ್ತಾರೆ ಆದ್ದರಿಂದ ಸ್ವಾಭಾವಿಕ ಸೌಂದರ್ಯವಿರುತ್ತದೆ. ಇದೆಲ್ಲವನ್ನೂ ತಂದೆಯೇ ತಿಳಿಸುತ್ತಾರೆ. ಅವರಂತೂ ಹೇ ಪತಿತ-ಪಾವನ ಎಂದು ಹಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಹೇಗೆ ಬುದ್ಧಿ ಇಲ್ಲದವರಂತೆ ಕೂಗುತ್ತಾರೆ. ಹೇ ಭಗವಂತ ದಯೆ ತೋರಿಸಿ ಎಂದು. ಆದರೆ ಭಗವಂತ ಯಾರು ಎಂಬುದನ್ನು ತಿಳಿದುಕೊಂಡಿಲ್ಲ. ತಂದೆಯನ್ನು ಅರಿತಾಗಲೇ ರಚನೆಯನ್ನೇ ಅರಿತುಕೊಳ್ಳುವರು ಆದ್ದರಿಂದ ಋಷಿ-ಮುನಿ ಮೊದಲಾದವರೆಲ್ಲರೂ ನಮಗೂ ಗೊತ್ತಿಲ್ಲ ಎಂದು ಹೇಳುತ್ತಾ ಹೋದರು. ಇದಂತೂ ಪೂರ್ಣ ಸತ್ಯವಾಗಿದೆ. ರಚಯಿತ ಮತ್ತು ರಚನೆಯನ್ನು ಯಾರೂ ಅರಿತುಕೊಂಡಿಲ್ಲ. ಒಂದುವೇಳೆ ಅರಿತುಕೊಂಡರೆ ವಿಶ್ವದ ಮಾಲೀಕರಾಗಿ ಬಿಡುವರು.
|
3 |
+
ನೀವೀಗ ತಿಳಿದುಕೊಂಡಿದ್ದೀರಿ - ಈ ಲಕ್ಷ್ಮೀ-ನಾರಾಯಣರನ್ನೂ ಸಹ ಈ ರೀತಿ ಮಾಡುವವರು ತಂದೆಯೇ ಆಗಿದ್ದಾರೆ. ನೀವೀಗ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ ಆದರೆ ಅರ್ಧಕಲ್ಪ ದೇಹಾಭಿಮಾನದಲ್ಲಿರುವ ಕಾರಣ ಇಷ್ಟು ಗೌರವ ಕೊಡುವುದಿಲ್ಲ. ಆತ್ಮಾಭಿಮಾನಿಯಾಗುವುದೇ ಇಲ್ಲ. ದೇಹೀ-ಅಭಿಮಾನಿಗಳಾಗುವುದರಿಂದ ದಿನ ಪ್ರತಿದಿನ ನಿಮ್ಮ ಗೌರವವು ಹೆಚ್ಚುತ್ತಾ ಹೋಗುವುದು. ಯಾವಾಗ ಪೂರ್ಣ ದೇಹೀ-ಅಭಿಮಾನಿಗಳಾಗುವಿರೋ ಆಗ ಗೌರವವನ್ನು ಇಡುತ್ತೀರಿ. ಸ್ಥಿತಿಯು ಸುಧಾರಣೆಯಾಗುತ್ತಾ ಹೋಗುವುದು, ಖುಷಿಯೂ ಇರುವುದು. ನಂಬರ್ವಾರಂತೂ ಇರುತ್ತಾರಲ್ಲವೆ. ಹೇಗೆ ತಂದೆಯು ನಿಮಗೆ ತಿಳಿಸುತ್ತಾರೆಯೋ ಹಾಗೆಯೇ ನೀವೂ ಸಹ ಅನ್ಯರಿಗೆ ಯುಕ್ತಿಯಿಂದ ತಿಳಿಸುತ್ತಾ ಇರಿ - ತಮ್ಮನ್ನು ಆತ್ಮನೆಂದು ತಿಳಿಯಿರಿ. ಈಗ ನಿಮ್ಮ 84 ಜನ್ಮಗಳ ಚಕ್ರವು ಪೂರ್ಣವಾಯಿತು, ಹಿಂತಿರುಗಿ ಹೋಗಬೇಕಾಗಿದೆ. ನಾವಾತ್ಮರು ಮನೆಯಿಂದ ಇಲ್ಲಿ ಬಂದು ಶರೀರ ಧಾರಣೆ ಮಾಡಿ ಪಾತ್ರವನ್ನು ಅಭಿನಯಿಸುತ್ತಿದ್ದೇ���ೆ. ಇಲ್ಲಿ ಎಷ್ಟು ಜನ್ಮಗಳನ್ನು ತೆಗೆದುಕೊಂಡೆವು ಎಂಬುದೂ ಸಹ ಬುದ್ಧಿಯಲ್ಲಿ ಜ್ಞಾನವಿದೆ. ದೇಹೀ-ಅಭಿಮಾನಿಗಳು ಆಗುವುದರಲ್ಲಿಯೇ ಪರಿಶ್ರಮವಿದೆ. ಪದೇ-ಪದೇ ಮಾಯೆಯು ದೇಹಾಭಿಮಾನಿಗಳನ್ನಾಗಿ ಮಾಡುತ್ತದೆ, ನೀವೀಗ ಮಾಯೆಯ ಮೇಲೆ ಜಯ ಗಳಿಸಿ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಏಕಾಂತದಲ್ಲಿ ಕುಳಿತು ವಿಚಾರ ಮಾಡಿ - ನಾವಾತ್ಮರಾಗಿದ್ದೇವೆ, ತಂದೆಯು ತಿಳಿಸಿದ್ದಾರೆ, ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಈ ದೇಹದಲ್ಲಿಯೂ ಮೋಹವನ್ನು ಇಟ್ಟುಕೊಳ್ಳಬೇಡಿ, ನಾವಾತ್ಮರು ಅವಿನಾಶಿಯಾಗಿದ್ದೇವೆ. ನಾವು ಸಹೋದರರಲ್ಲಿಯೂ ಬುದ್ಧಿಯೋಗವನ್ನು ಇಡಬಾರದು. ಸಹೋದರನಿಗೆ ಆಸ್ತಿಯು ಸಿಗುತ್ತದೆಯೇ! ಯಾವುದೇ ಆತ್ಮನನ್ನಾಗಲಿ, ಸಹೋದರ ಶರೀರವನ್ನಾಗಲಿ ನೆನಪು ಮಾಡಬಾರದು. ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಆಸ್ತಿಯು ತಂದೆಯಿಂದಲೇ ಸಿಗುವುದು. ನಾವಾತ್ಮರು ನಮ್ಮ ಮನೆಗೆ ಹೋಗುತ್ತೇವೆ, ನಂತರ ಸತ್ಯಯುಗದಲ್ಲಿ ಬಂದು ನಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ಅಲ್ಲಿ ಆತ್ಮಾಭಿಮಾನಿ ಆಗಿರುತ್ತೇವೆ. ಇಲ್ಲಿ ಮಾಯಾ ರಾವಣನು ದೇಹಾಭಿಮಾನಿಗಳನ್ನಾಗಿ ಮಾಡಿ ಬಿಡುತ್ತಾನೆ. ನೀವೀಗ ಪುನಃ ಆತ್ಮಾಭಿಮಾನಿಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತಾ ಇರಿ, ಇಲ್ಲಿ ಚಿತ್ರಗಳ ಮುಂದೆ ಬಂದು ಕುಳಿತುಕೊಳ್ಳಿ. ಹೇಗೆ ಸೈನಿಕರಿಗೆ ಮೈದಾನದಲ್ಲಿ ಅಭ್ಯಾಸ ಮಾಡಿಸಲಾಗುತ್ತದೆಯಲ್ಲವೆ. ಈಗ ನೀವು ಆತ್ಮಾಭಿಮಾನಿಗಳಾಗಿ ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನೀವಂತೂ ನನ್ನ ಮಕ್ಕಳಾಗಿದ್ದೀರಲ್ಲವೆ. ದೇಹಾಭಿಮಾನಿಗಳಾಗಿದ್ದರಿಂದ ನೀವು ಮಾಯೆಗೆ ವಶವಾಗಿ ಬಿಟ್ಟಿದ್ದೀರಿ. ಹೇ ಪತಿತ-ಪಾವನ, ಜ್ಞಾನ ಸಾಗರ ಎಂದು ಕರೆಯುತ್ತೀರಿ ಅಂದಮೇಲೆ ಉಳಿದೆಲ್ಲರೂ ಭಕ್ತಿಯ ಸಾಗರರಾಗಿದ್ದಾರೆ. ಭಕ್ತಿಮಾರ್ಗದ ಎಷ್ಟೊಂದು ವಿಸ್ತಾರವಿದೆ. ತಂದೆಯು ಬರುವುದೇ ಸುಳ್ಳು ಪ್ರಪಂಚದಲ್ಲಿ, ಅದರಲ್ಲಿಯೂ ಸಾಧಾರಣ ರೂಪದಲ್ಲಿ. ಡ್ರಾಮಾದಲ್ಲಿ ಇದೇ ರೀತಿ ನಿಗಧಿತವಾಗಿದೆ. ಪತಿತ ಶರೀರದಲ್ಲಿಯೇ ತಂದೆಯು ಬರುತ್ತಾರೆ, ಲಕ್ಷ್ಮೀ-ನಾರಾಯಣರ ಶರೀರದಲ್ಲಿ ಬರುವುದಿಲ್ಲ. ಅವರಿಗಂತೂ ರಾಜ್ಯಭಾಗ್ಯವು ಸಿಕ್ಕಿದೆ ಅಂದಮೇಲೆ ಅವರಲ್ಲಿ ನಾನು ಹೇಗೆ ಬರಲಿ! ಸಾಧಾರಣ ರೂಪದಲ್ಲಿರುವ ಕಾರಣ ನನ್ನನ್ನು ಗುರುತಿಸುವುದೇ ಇಲ್ಲ. ಕರೆಯುತ್ತಾರೆ ಆದರೆ ಅವಶ್ಯವಾಗಿ ಯಾವುದೋ ಶರೀರದಲ್ಲಿ ಬರುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ನನ್ನ ರೂಪವು ನಿರಾಕಾರ ಬಿಂದು ಸ್ವರೂಪವಾಗಿದೆ ಅಂದಮೇಲೆ ಅವಶ್ಯವಾಗಿ ಪ್ರಜಾಪಿತ ಬ್ರಹ್ಮನ ತನುವಿನಲ್ಲಿಯೇ ಬರುತ್ತೇನೆ. ಪ್ರಜಾಪಿತನು ಅವಶ್ಯವಾಗಿ ಇಲ್ಲಿಯೇ ಬೇಕು ಮತ್ತು ಹಳೆಯ ತನುವೇ ಬೇಕಾಗಿದೆ. ಈ ಬ್ರಹ್ಮಾರವರು ಹಳೆಯ ರೂಪದಲ್ಲಿ ಮತ್ತು ಇವರ ಪಕ್ಕದಲ್ಲಿಯೇ ಹೊಸ ರೂಪದಲ್ಲಿ ವಿಷ್ಣು ನಿಂತಿದ್ದಾರೆ. ತ್ರಿಮೂರ್ತಿಯ ಚಿತ್ರದಲ್ಲಿ ಎಷ್ಟೊಂದು ಜ್ಞಾನವಿದೆ.
|
4 |
+
ನೀವು ಮಕ್ಕಳು ಮೊದಲು ಈ ದೇವತೆಗಳನ್ನು ಕರೆಯುತ್ತಿದ್ದಿರಿ. ಶ್ರೀನಾರಾಯಣನ ಎಷ್ಟೊಂದು ಭಕ್ತಿ ಮಾಡುತ್ತಿದ್ದಿರಿ. ಆಶ್ಚರ್ಯವಲ್ಲವೆ. ನಾನೂ ಸಹ ನಾರಾಯಣನನ್ನು ಎಷ್ಟೊಂದು ಪ್ರೀತಿ ಮಾಡುತ್ತಿದ್ದೆನು, ಶ್ರೀನಾರಾಯಣನು ಬಂದಿದ್ದಾರೆ ಇವರಿಗೆ ತಿನ್ನಿಸಿ, ಕುಡಿಸಿರಿ... ಈಗಂತೂ ನಾನೇ ಈ ರೀತಿಯಾಗುತ್ತಿದ್ದೇನೆ ಎಂದು ಆಂತರ್ಯದಲ್ಲಿ ತಿಳಿದುಕೊಳ್ಳುತ್ತೇನೆ. ಏನು ಆಗಿದ್ದೆನೋ ಅದಕ್ಕೆ ಅವಶ್ಯವಾಗಿ ಖಾತರಿ ಮಾಡುತ್ತೇನೆ ಅಂದರೆ ನಾನು ನನ್ನದೇ ಮೂರ್ತಿಗೆ ಖಾತರಿ ಮಾಡುತ್ತೇನೆ. ತಂದೆಯೂ ಸಹ ಹೇಳುತ್ತಿದ್ದರು - ತಮ್ಮ ಖಾತರಿ ಮಾಡಿಕೊಳ್ಳುತ್ತೀರಿ ಎಂದು. ನೀವು ಮಕ್ಕಳು ನೋಡಿದ್ದೀರಲ್ಲವೆ - ಇವು ಬಹಳ ಅದ್ಭುತ ಮಾತುಗಳಾಗಿವೆ. ಇವನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನೀವೇ ತಿಳಿಸಬಲ್ಲಿರಿ, ಇದು ಸಂಪೂರ್ಣ ಹೊಸ ಜ್ಞಾನವಾಗಿದೆ. ತಂದೆಯು ತಿಳಿಸುತ್ತಾರೆ- ನಾನು ಪುನಃ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ಆದಿಯಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಮಧ್ಯದಲ್ಲಿ ರಾವಣ ರಾಜ್ಯವಿದೆ. ಈಗ ಅಂತ್ಯವಾಗಿದೆ, ಅಂತಿಮದಲ್ಲಿ ಸ್ವಯಂ ತಂದೆಯು ಬರುತ್ತಾರೆ. ಈಗ ನೀವು ಮಕ್ಕಳು ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಇನ್ನು ಸ್ವಲ್ಪ ಸಮಯದಲ್ಲಿಯೇ ಏನೇನು ಆಗುವುದಿದೆ, ವಿನಾಶವೂ ಅವಶ್ಯವಾಗಿ ಆಗುವುದು. ಮಹಾಭಾರತ ಯುದ್ಧವಾಗಿತ್ತು, ಈಗ ಪುನಃ ಆಗುವುದೆಂದು ಹೇಳುತ್ತಾರೆ. ಈ ಸಮಯದಲ್ಲಿ ಇದು ಯಾರಿಗೂ ಗೊತ್ತಿಲ್ಲ. ಪತಿತ-ಪಾವನನು ಒಬ್ಬ ತಂದೆಯೇ ಆಗಿದ್ದಾರೆ. ಅವರು ಬಂದಿದ್ದಾರೆ, ಅಂದಮೇಲೆ ಇನ್ನೆಷ್ಟು ಸಮಯ ಇರಬಹುದು. ಶ್ರೀಕೃಷ್ಣನಂತೂ ಇಲ್ಲಿ ಬರಲು ಸಾಧ್ಯವಿಲ್ಲ. ಶ್ರೀಕೃಷ್ಣನು ಸತ್ಯಯುಗದಲ್ಲಿ ಒಂದು ಜನ್ಮ ತೆಗೆದುಕೊಂಡನು. ಕೃಷ್ಣನ ಹೆಸರಿನಿಂದ ನಂತರ ಹೆಸರು, ರೂಪ ಬದಲಾಗುತ್ತಾ ಹೋಯಿತು. ಶರೀರದ ಲಕ್ಷಣಗಳೇ ಬದಲಾಗುತ್ತಾ ಹೋಗುತ್ತವೆ. ತಂದೆಯು ತಿಳಿಸಿದ್ದಾರೆ - ನೀವೇ ಯಾರು ಪೂಜ್ಯರಾಗಿದ್ದಿರೋ ಅವರೇ ನಂತರ ಪೂಜಾರಿಗಳಾಗಿದ್ದೀರಿ. 84 ಜನ್ಮಗಳನ್ನು ಹೇಗೆ ತೆಗೆದುಕೊಂಡಿದ್ದೀರಿ ಎಂಬುದನ್ನು ತಿಳಿಸಿದ್ದಾರೆ ಮತ್ತು ಹೇಳುತ್ತಾರೆ, ನೀವು ಅರ್ಧಕಲ್ಪ ದೇಹಾಭಿಮಾನದಲ್ಲಿದ್ದಿರಿ, ಈಗ ದೇಹೀ-ಅಭಿಮಾನಿಯಾಗಿ. ನೀವು ಆತ್ಮರಾಗಿದ್ದೀರಿ, ನಾನು ನಿಮ್ಮ ತಂದೆ ಪರಮಪಿತ ಪರಮಾತ್ಮನಾಗಿದ್ದೇನೆ. ನಾನು ಅಶರೀರಿಯಾಗಿದ್ದೇನೆ ಮತ್ತು ಮಕ್ಕಳಿಗೆ ನನ್ನ ಪರಿಚಯವನ್ನು ಕೊಡುತ್ತೇನೆ. ಅತೀಂದ್ರಿಯ ಸುಖವನು ಗೋಪ-ಗೋಪಿಕೆಯರಿಂದ ಕೇಳಿ ಎಂಬ ಯಾವ ಗಾಯನವಿದೆಯೋ ಇದು ಅಂತ್ಯದ ಮಾತಾಗಿದೆ ಯಾವಾಗ ಪರೀಕ್ಷೆಯ ಫಲಿತಾಂಶವು ಸಮೀಪ ಬರುತ್ತದೆ. ಯಾವ ಮಕ್ಕಳು ಹೆಚ್ಚು ಸರ್ವೀಸ್ ಮಾಡುವರೋ ಅವರು ಅವಶ್ಯವಾಗಿ ಎಲ್ಲರಿಗೆ ಪ್ರಿಯರಾಗುತ್ತಾರೆ. ಪ್ರದರ್ಶನಿ ಮೊದಲಾದುವುಗಳಲ್ಲಿಯೂ ಮೊದಲು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಇಂತಹವರನ್ನು ಕಳುಹಿಸಿಕೊಡಿ ಎ��ದು ಪತ್ರ ಬರೆಯುತ್ತಾರೆ. ಇದರ ಅರ್ಥವೇನೆಂದರೆ ಇವರು ನಮಗಿಂತಲೂ ಬುದ್ಧಿವಂತರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ ಆದರೆ ದೇಹಾಭಿಮಾನವು ಬಹಳ ಇದೆ. ನಮ್ಮ ಹಿರಿಯ ಸಹೋದರ ಅಥವಾ ಸಹೋದರಿಯರಿದ್ದರೆ ಅವರಿಗೆ ಗೌರವ ಕೊಡಬೇಕು. ಇಂತಹವರು ನಮಗಿಂತಲೂ ನೂರು ಪಟ್ಟು ಒಳ್ಳೆಯವರೆಂದು ಎಂದಿಗೂ ಹೇಳುವುದಿಲ್ಲ. ಅನ್ಯರಿಗೆ ಗೌರವ ಕೊಡುವಷ್ಟು ತಿಳುವಳಿಕೆಯೂ ಇಲ್ಲ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದರಂತೆ ನಡೆಯದಿದ್ದರೆ ಅವರ ಗತಿಯೇನಾಗುವುದು! ದೇಹಾಭಿಮಾನವು ಬಾಡಿಸಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ದೇಹೀ-ಅಭಿಮಾನಿಯಾಗಿರಿ. ಮುಂಜಾನೆಯೆದ್ದು ಶಿವ ತಂದೆಯನ್ನು ನೆನಪು ಮಾಡಿರಿ ಆದರೆ ಅದನ್ನೂ ಮಾಡುವುದಿಲ್ಲ, ಒಳ್ಳೊಳ್ಳೆಯ ಮಕ್ಕಳೂ ಸಹ ಯೋಗದಲ್ಲಿ ಬಹಳ ಕಡಿಮೆಯಿರುತ್ತಾರೆ. ಜ್ಞಾನವನ್ನಂತೂ ಚಿಕ್ಕ ಮಕ್ಕಳೂ ತಿಳಿಸಬಲ್ಲರು ಆದರೆ ಅದು ಗಿಳಿಯ ಪಾಠದಂತಾಗಿ ಬಿಡುತ್ತದೆ. ಇದರಲ್ಲಿ ಯೋಗದಲ್ಲಿದ್ದು ಧಾರಣೆಯೂ ಇದ್ದಾಗ ಖುಷಿಯಿರುವುದು. ಯೋಗವಿಲ್ಲದೆ ವಿಕರ್ಮಗಳು ವಿನಾಶವಾಗಲು ಸಾಧ್ಯವಿಲ್ಲ. ಪವಿತ್ರ ವಸ್ತು(ತಂದೆ)ವನ್ನು ನೆನಪು ಮಾಡಲಾಗುತ್ತದೆ ಅಂದಮೇಲೆ ಅವರ ಜೊತೆ ಪ್ರೀತಿಯೂ ಬಹಳ ಇರಬೇಕು. ಪದೇ-ಪದೇ ತಿಳಿಸಲಾಗುತ್ತದೆ - ಮನ್ಮನಾಭವ. ಅರ್ಧಕಲ್ಪ ದೇಹಾಭಿಮಾನಿಯಾಗಿದ್ದಿರಿ ಆದ್ದರಿಂದ ಈಗ ದೇಹೀ-ಅಭಿಮಾನಿಯಾಗಿರುವುದು ಕಷ್ಟವೆನಿಸುತ್ತದೆ. ಬಹಳ ಪರಿಶ್ರಮವಾಗುತ್ತದೆ. ದೇಹೀ-ಅಭಿಮಾನಿ ಸ್ಥಿತಿಯನ್ನು ಹೊಂದುವುದರಲ್ಲಿ ಎಷ್ಟು ವರ್ಷಗಳು ಹಿಡಿಸುತ್ತದೆ. ತನ್ನನ್ನು ಚಿಕ್ಕ ಆತ್ಮವೆಂದು ತಿಳಿದು ತಂದೆಯನ್ನೂ ಬಿಂದುವೆಂದು ತಿಳಿದು ನೆನಪು ಮಾಡುವುದರಲ್ಲಿ ಪರಿಶ್ರಮವಿದೆ. ಯಾರು ಸತ್ಯವಾಗಿರುವರೋ ಅವರು ನಾವು ಎಷ್ಟು ತಂದೆಯನ್ನು ನೆನಪು ಮಾಡುತ್ತೇವೆ ಎಂದು ಆಂತರ್ಯದಲ್ಲಿ ಕೇಳಿಕೊಳ್ಳುತ್ತಾ ಇರುತ್ತಾರೆ. ಇದು ಬಹಳ ಕಠಿಣ ಅಭ್ಯಾಸವಾಗಿದೆ. 21 ಜನ್ಮಗಳಿಗಾಗಿ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುವುದು ಕಡಿಮೆ ಮಾತೇನು! ನೀವು ತಿಳಿದುಕೊಂಡಿದ್ದೀರಿ - ನಾವು ಅತಿ ಚಿಕ್ಕ ಆತ್ಮರಲ್ಲಿ 84 ಜನ್ಮಗಳ ಪಾತ್ರವು ನಿಗಧಿತವಾಗಿದೆ. ಆತ್ಮವೇ ಮುಖ್ಯ ಪಾತ್ರಧಾರಿಯಾಗುತ್ತದೆ. ಆತ್ಮವೇ ಎಲ್ಲವೂ ಆಗುತ್ತದೆ ಆದರೆ ದೇಹಾಭಿಮಾನದ ಕಾರಣ ಅತ್ಮಾಭಿಮಾನವು ಮಾಯವಾಗಿ ಬಿಟ್ಟಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇದೇ ಅಭ್ಯಾಸ ಮಾಡಬೇಕಾಗಿದೆ - ಈ ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ, ಇದೇ ಗೀತೆಯಾಗಿದೆ. ಕೇವಲ ಅದರಲ್ಲಿ ನಿರಾಕಾರನ ಹೆಸರನ್ನು ಬಿಟ್ಟು ದೇಹಧಾರಿ ದೇವತೆಯ ಹೆಸರನ್ನು ಬರೆದು ಬಿಟ್ಟಿದ್ದಾರೆ.
|
5 |
+
ತಂದೆಯು ತಿಳಿಸುತ್ತಾರೆ - ಯಾರು ಆದಿಯಿಂದ ಹಿಡಿದು ಅಂತ್ಯದವರೆಗೆ ಬಹಳ ಭಕ್ತಿ ಮಾಡಿದ್ದಾರೆಯೋ ಅವರೇ ನಂಬರ್ವನ್ ಮೇಲೆ ಹೋಗುತ್ತಾರೆ. ನೀವೂ ಸಹ ಬಹಳ ಭಕ್ತಿ ಮಾಡಿದ್ದೀರಿ ಅಂದಮೇಲೆ ನೀವು ಮಕ್ಕಳಿಗೂ ಸಹ ಎಷ್ಟೊಂದು ಖುಷಿಯಿರಬೇಕು - ನಮಗೆ ತಂದೆಯು ಸಿಕ್ಕಿದ್ದಾರೆ, ತಂದೆಯು ನಮಗೆ ��ದಿಸುತ್ತಿದ್ದಾರೆ, ನಾವು ಈ ವಿದ್ಯೆಯಿಂದ ವಿಶ್ವದ ಮಾಲೀಕರಾಗುತ್ತೇವೆ. ಈಗ ತಂದೆಯ ಮತದಂತೆ ಅವಶ್ಯವಾಗಿ ನಡೆಯಬೇಕು. ತಂದೆಯು ಯಾವ ಆದೇಶವನ್ನು ಕೊಡುತ್ತಾರೆಯೋ ಅದರಿಂದ ಒಂದುವೇಳೆ ಏನಾದರೂ ತಪ್ಪಾಗಿ ಬಿಟ್ಟರೂ ಸಹ ಅವರೇ ಅದನ್ನು ಸರಿ ಪಡಿಸುತ್ತಾರೆ. ಸಲಹೆ ನೀಡುತ್ತಾರೆಂದರೆ ಅದಕ್ಕೆ ಜವಾಬ್ದಾರನೂ ಅವರೇ ಆಗಿದ್ದಾರೆ. ಅವರ ಸಲಹೆಯಂತೆ ಮಾಡಿದಾಗ ಪದೇ-ಪದೇ ಆ ಶಿವ ತಂದೆಯ ನೆನಪೇ ಬರುತ್ತಿರುವುದು ಆದ್ದರಿಂದ ಈ ಬ್ರಹ್ಮಾ ತಂದೆಯೂ ಸಹ ಸದಾ ನಿಮಗೆ ಶಿವ ತಂದೆಯು ತಿಳಿಸುತ್ತಾರೆಂದೇ ಹೇಳುತ್ತಾರೆ. ನಾನೂ ಸಹ ಅವರಿಂದಲೇ ಕೇಳುತ್ತೇನೆ, ಈ ಸಲಹೆ ನೀಡುವವರು ಶಿವ ತಂದೆಯಾಗಿದ್ದಾರೆ. ನಾನು ಅವರ ಆದೇಶದಂತೆ ನಡೆಯುತ್ತೇನೆ. ನೀವೂ ಸಹ ಅವರನ್ನು ನೆನಪು ಮಾಡುತ್ತೀರಿ, ಇವರೂ ಸಹ ಅವರನ್ನೇ ನೆನಪು ಮಾಡುತ್ತಾರೆ. ದೇಹಾಭಿಮಾನವನ್ನು ಬಿಟ್ಟು ಬಿಡಿ, ನೀವು ಯಾವುದೇ ವಜ್ರ ವ್ಯಾಪಾರಿ ದಾದಾರವರ ಬಳಿ ಬಂದಿಲ್ಲ, ನೀವು ಶಿವ ತಂದೆಯ ಬಳಿ ಬಂದಿದ್ದೀರಿ. ಜ್ಞಾನಸಾಗರನಂತೂ ಅವರೇ ಅಲ್ಲವೆ, ನೀವು ಶಿವ ತಂದೆಯಿಂದ ಜ್ಞಾನಾಮೃತವನ್ನು ಕುಡಿಯಲು ಬಂದಿದ್ದೀರಿ. ಈಗಲೂ ಸಹ ಜ್ಞಾನಾಮೃತವನ್ನು ಕುಡಿಯುತ್ತಾ ಇರುತ್ತೀರಿ. ಪ್ರತಿನಿತ್ಯವು ಜ್ಞಾನ ಸಾಗರ ತಂದೆಯು ತಿಳಿಸುತ್ತಾ ಇರುತ್ತಾರೆ - ಅವರನ್ನೇ ನೆನಪು ಮಾಡಬೇಕಾಗಿದೆ. ತಂದೆಯು ಭಕ್ತಿಯನ್ನು ಬಿಡಿ ಎಂದು ಹೇಳುವುದಿಲ್ಲ, ಯಾವಾಗ ಜ್ಞಾನದ ಪರಾಕಾಷ್ಠತೆ ಬರುವುದೋ ಆಗ ಅದು ಭಕ್ತಿ, ಇದು ಜ್ಞಾನವಾಗಿದೆ ಎಂಬುದನ್ನು ತಾವಾಗಿಯೇ ಅರ್ಥ ಮಾಡಿಕೊಳ್ಳುವರು. ಅರ್ಧಕಲ್ಪ ನೀವು ಭಕ್ತಿ ಮಾಡಿದ್ದೀರಿ, ಇದರಿಂದ ಯಾರೂ ಹಿಂತಿರುಗಿ ಹೋಗಲಿಲ್ಲ, ಕರೆದುಕೊಂಡು ಹೋಗುವವರು ಒಬ್ಬ ತಂದೆಯೇ ಆಗಿದ್ದಾರೆ. ಒಳ್ಳೆಯದು.
|
6 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
7 |
+
ಧಾರಣೆಗಾಗಿ ಮುಖ್ಯಸಾರ:
|
8 |
+
1. ತಂದೆಯು ಯಾವ ಸಲಹೆ ನೀಡಿದ್ದಾರೆಯೋ ಅದನ್ನು ಶಿವ ತಂದೆಯ ಶ್ರೀಮತವೆಂದು ತಿಳಿದು ನಡೆಯಬೇಕಾಗಿದೆ. ಜ್ಞಾನಾಮೃತವನ್ನು ಕುಡಿಯಬೇಕು ಮತ್ತು ಕುಡಿಸಬೇಕಾಗಿದೆ.
|
9 |
+
2. ಎಲ್ಲರಿಗೆ ಗೌರವ ನೀಡುತ್ತಾ ಸರ್ವೀಸಿನಲ್ಲಿ ತತ್ಪರರಾಗಿರಬೇಕು. ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿರುವ ಅಭ್ಯಾಸ ಮಾಡಬೇಕಾಗಿದೆ.
|
BKMurli/BKMurli/page_1022.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಶಿವ ತಂದೆಯು ಬ್ರಹ್ಮಾರವರ ತನುವಿನಿಂದ ಮಧುರಾತಿ ಮಧುರ ಅನನ್ಯ ಆತ್ಮಿಕ ಮಕ್ಕಳ ಪ್ರತಿ ಗುಹ್ಯ ರಹಸ್ಯ ಅಥವಾ ಜ್ಞಾನವನ್ನು ತಿಳಿಸುತ್ತಿದ್ದಾರೆ. ಒಂದಂತು ಮಕ್ಕಳು ಗೀತೆಯನ್ನು ಕೇಳಿದಿರಿ, ಭಲೆ ಎಷ್ಟಾದರೂ ದುಃಖವನ್ನು ಸಹನೆ ಮಾಡಬೇಕಾಗಲಿ, ಬಾಬಾ ನಾವು ನಿಮ್ಮ ಮೇಲೆ ಬಲಿಹಾರಿಯಾಗುತ್ತೇವೆ ಎಂದು. ದುಃಖವು ಏಕೆ ಆಗುತ್ತದೆ? ಏಕೆಂದರೆ ಮನುಷ್ಯರಿಗೆ ವಿಷ(ವಿಕಾರ)ವು ಸಿಗುವುದಿಲ್ಲ. ಇದಂತೂ ಮಕ್ಕಳಿಗೆ ಗೊತ್ತಿದೆ, ನಾವು ಆತ್ಮನನ್ನಾಗಲಿ ಪರಮಾತ್ಮನನ್ನಾಗಲಿ ತಿಳಿದುಕೊಂಡಿರಲಿಲ್ಲ. ತಮ್ಮನ್ನು ತಾವು ಮತ್ತು ತಂದೆಯನ್ನು ಅರಿತಿರಲಿಲ್ಲ ಆದ್ದರಿಂದ ಹೇಗೆ ಪ್ರಾಣಿ ಬುದ್ಧಿಯವರಾಗಿದ್ದೆವು, ಲೌಕಿಕ ಸಂಬಂಧದಲ್ಲಂತೂ ತಮ್ಮನ್ನು ತಿಳಿದುಕೊಂಡಿರುತ್ತಾರೆ. ಲೌಕಿಕ ತಂದೆಯನ್ನೂ ತಿಳಿದುಕೊಂಡಿರುತ್ತಾರೆ. ಈ ಸಮಯದ ಮನುಷ್ಯರು ತನ್ನನ್ನು ಮತ್ತು ಪಾರಲೌಕಿಕ ತಂದೆಯನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ. ಪರಮಾತ್ಮನಿಗೆ ಯಾವುದೇ ನಾಮ, ರೂಪ, ದೇಶ, ಕಾಲ ಇಲ್ಲವೇ ಇಲ್ಲ ಎಂದು ಹೇಳಿ ಬಿಡುತ್ತಾರೆ ಅಂದಮೇಲೆ ಆತ್ಮಕ್ಕೂ ಇರಬಾರದು. ಆತ್ಮವನ್ನೂ ಸಹ ಅವರು ತಿಳಿದುಕೊಂಡಿಲ್ಲ. ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ನೀವೀಗ ಅರಿತುಕೊಂಡಿದ್ದೀರಿ, ಅವರು ಕೇವಲ ನಾಮ ಮಾತ್ರಕ್ಕೆ ಆತ್ಮ ಮತ್ತು ಜೀವ ಎಂದು ಹೇಳಿ ಬಿಡುತ್ತಾರೆ. ಆತ್ಮ ಅವಿನಾಶಿಯಾಗಿದೆ, ಜೀವವು ವಿನಾಶಿಯಾಗಿದೆ. ಆತ್ಮವೆಂದರೇನು? ಅದರ ರಂಗು-ರೂಪವೇನಾಗಿದೆ? ಹೆಸರಂತೂ ಆತ್ಮವೆಂದು ಗೊತ್ತಿದೆ ಆದರೆ ಅದು ಹೇಗಿದೆ, ಏನು ಮಾಡುತ್ತದೆ? ಹೇಗೆ ಪಾತ್ರವನ್ನು ಅಭಿನಯಿಸುತ್ತದೆ? ಎಷ್ಟು ಸಮಯ ಪಾತ್ರವನು ಅಭಿನಯಿಸುತ್ತದೆ? ಈ ಆತ್ಮದ ಜ್ಞಾನದ ವರ್ಣನೆಯನ್ನು ಯಾರೂ ಮಾಡಲು ಸಾಧ್ಯವಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಆತ್ಮವು ಚಿಕ್ಕ ನಕ್ಷತ್ರವಾಗಿದೆ. ಆತ್ಮದಲ್ಲಿ ಇಡೀ 84 ಜನ್ಮಗಳ ಅವಿನಾಶಿ ಪಾತ್ರವು ನಿಗಧಿತವಾಗಿದೆ. ಶಂಕರಾಚಾರ್ಯರ ಆತ್ಮವೂ ಸಹ ತಮ್ಮ ಪಾತ್ರವನ್ನು ಅಭಿನಯಿಸುತ್ತಿದೆ. ಆತ್ಮವು ಹೇಗೆ ಸತೋಪ್ರಧಾನತೆಯಿಂದ ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆಯೆಂದು ಯಾರೂ ತಿಳಿದುಕೊಂಡಿಲ್ಲ. ಕೇವಲ ಭೃಕುಟಿಯ ನಡುವೆ ಹೊಳೆಯುವ ನಕ್ಷತ್ರವೆಂದು ಹೇಳಿ ಬಿಡುತ್ತಾರೆ, ಮತ್ತೇನೂ ತಿಳಿದುಕೊಂಡಿಲ್ಲ. ಆತ್ಮವನ್ನು ತಿಳಿಯದಿದ್ದರೆ ಪರಮಾತ್ಮನನ್ನು ತಿಳಿದುಕೊಳ್ಳಲಿಲ್ಲ ಎಂದರ್ಥ. ಈ ಸಮಯದಲ್ಲಿ ಇದು ಮುಳ್ಳುಗಳ ಕಾಡಾಗಿದೆ, ಎಲ್ಲರೂ ಮುಳ್ಳುಗಳಾಗಿದ್ದಾರೆ. ರಚಯಿತ ಪರಮಪಿತ ಪರಮಾತ್ಮನನ್ನಾಗಲಿ, ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲಿ ತಿಳಿದುಕೊಂಡಿಲ್ಲ. ನೀವು ಮಕ್ಕಳು ಆತ್ಮ ಮತ್ತು ಪರಮಾತ್ಮನನ್ನು ತಿಳಿದುಕೊಂಡಿದ್ದೀರಿ, ಅದು ನಂಬರ್ವಾರ್ ಪುರುಷಾರ್ಥದ ಅನುಸಾರ. ಬಹಳ ಮಕ್ಕಳು ಯಥಾರ್ಥ ರೀತಿಯಿಂದ ತಿಳಿದುಕೊಂಡಿಲ್ಲ. ದೇಹಾಭಿಮಾನವಿರುವ ಕಾರಣ ಸಂಪೂರ್ಣ ಧಾರಣೆಯಾಗುವುದಿಲ್ಲ. ನಂಬರ್ವಾರಂತೂ ಇರುತ್ತಾರಲ್ಲವೆ! ಬಾಬಾ ಹೀಗೇಕೆ ಎಂ��ು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಇದರಲ್ಲಿ ಎಲ್ಲಾ ಪ್ರಕಾರದವರೂ ಬೇಕು. ಕಲ್ಲು ಬುದ್ಧಿಯವರೇ ಕನಿಷ್ಟ ಪದವಿ ಪಡೆಯುವರು. ಒಂದುವೇಳೆ ತಾನು ಅರಿತುಕೊಂಡರೂ ಅನ್ಯರಿಗೂ ತಿಳಿಸುವರು. ಮುಂದೆ ಹೋದಂತೆ ತಿಳಿಸತೊಡಗುತ್ತೇವೆಂದು ನೀವು ಹೇಳುತ್ತೀರಿ ಆದರೆ ಇಂತಹವರೂ ಸಹ ಯಾರಾದರೂ ಬೇಕು ಆಗಲೇ ಕಡಿಮೆ ಪದವಿ ಸಿಗುವುದಲ್ಲವೆ. ರಾಜನೆಲ್ಲಿ! ಪ್ರಜೆಗಳೆಲ್ಲಿ! ಎಷ್ಟೊಂದು ಅಂತರವಿದೆ. ಇಲ್ಲಂತೂ ರಾಜಾ, ಪ್ರಜೆ ಎಲ್ಲರಿಗೂ ದುಃಖವಿದೆ. ಸತ್ಯಯುಗದಲ್ಲಿ ರಾಜನಿಗಾಗಲಿ, ಪ್ರಜೆಗಳಿಗಾಗಲಿ ದುಃಖವಿರುವುದಿಲ್ಲ ಆದರೆ ಪದವಿಗಳಲ್ಲಿ ಅಂತರವಿರುತ್ತದೆ. ಪೂರ್ಣ ಧಾರಣೆಯಿಲ್ಲದ ಕಾರಣ ಯಾರಿಗೂ ತಿಳಿಸಲು ಸಾಧ್ಯವಾಗುವುದಿಲ್ಲ. ಆಗ ಯಾವುದಾದರೊಂದು ಮುಳ್ಳು ಚುಚ್ಚುತ್ತಾ ಇರುತ್ತದೆ, ಕೆಲವೊಮ್ಮೆ ಲೋಭ, ಕೆಲವೊಮ್ಮೆ ಮೋಹ..... ಭೂತಗಳು ಪ್ರವೇಶವಾಗುತ್ತಾ ಇರುವುದು. ಇದೂ ಸಹ ಅವಶ್ಯವಾಗಿ ಆಗಬೇಕಾಗಿದೆ.
|
2 |
+
ನೀವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯಾಗಿದ್ದೀರಿ. ಪ್ರಜಾಪಿತನ ತಂದೆ ಯಾರು? ಶಿವಬಾಬಾ. ಬಾಕಿ ಶಿವನಿಗೆ ಯಾರೂ ತಂದೆಯಿಲ್ಲ. ಈ ಬ್ರಹ್ಮಾ-ವಿಷ್ಣು-ಶಂಕರನೂ ಸಹ ಶಿವನ ರಚನೆಯಾಗಿದ್ದಾರೆ ಅಂದಮೇಲೆ ಎಲ್ಲರೂ ಆತ್ಮರಾಗಿ ಬಿಟ್ಟರು. ಪರಮಪಿತ ಪರಮಾತ್ಮನು ಒಬ್ಬರೇ ಆಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರ ಅಥವಾ ಲಕ್ಷ್ಮೀ-ನಾರಾಯಣ ಮೊದಲಾದ ಯಾವುದೇ ತ್ಮರಿಂದ ಮನುಷ್ಯಾತ್ಮರಿಂದ ಎಂದೂ ಗತಿ-ಸದ್ಗತಿಯ ಆಸ್ತಿ ಸಿಗಲು ಸಾಧ್ಯವಿಲ್ಲ. ಮನುಷ್ಯರು ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಒಬ್ಬ ಪರಮಪಿತ ಪರಮಾತ್ಮನೇ ಆತ್ಮಾನುಭೂತಿ ಮಾಡಿಸಬಲ್ಲರು. ಜ್ಞಾನದಿಂದ ಸದ್ಗತಿಯಾಗುತ್ತದೆ, ಜ್ಞಾನವನ್ನು ಒಬ್ಬ ತಂದೆಯೇ ಕೊಡುತ್ತಾರೆ. ಕೆಲವು ಮಕ್ಕಳು ಯಜ್ಞದ ಸ್ಥೂಲ ಸೇವೆಯನ್ನು ಬಹಳ ಮಾಡುತ್ತಾರೆ, ಈ ಸಬ್ಜೆಕ್ಟ್ನಿಂದಲೂ ಅಂಕಗಳು ಬಹಳ ಸಿಗುತ್ತವೆ, ಈಗ ನೀವು ಮಕ್ಕಳಿಗೆ ತಂದೆಯು ಅಮರ ಕಥೆ, ಮೂರನೇ ನೇತ್ರದ ಕಥೆಯನ್ನು ತಿಳಿಸುತ್ತಾರೆ. ಇದು ವಾಸ್ತವದಲ್ಲಿ ಕಥೆಯಲ್ಲ, ಇದು ಆತ್ಮಿಕ ಜ್ಞಾನವಾಗಿದೆ, ಸ್ವಯಂನ್ನು ಅರಿತುಕೊಳ್ಳುವುದಾಗಿದೆ. ಅವರಂತೂ ಹೇಗೆ ನೀರಿನಿಂದ ಗುಳ್ಳೆಯು ಹೊರಬರುತ್ತದೆ ಮತ್ತೆ ಅದರಲ್ಲಿಯೇ ಸೇರಿ ಹೋಗುತ್ತದೆ ಎಂದು ಹೇಳುತ್ತಾರೆ. ನಾವು ಬ್ರಹ್ಮತತ್ವದಿಂದ ಹುಟ್ಟಿ ಪಾತ್ರವನ್ನು ಅಭಿನಯಿಸಿ ಮತ್ತೆ ಬ್ರಹ್ಮ್ದಲ್ಲಿಯೇ ಲೀನವಾಗಿ ಬಿಡುತ್ತೇವೆ ಅಥವಾ ಬ್ರಹ್ಮವೇ ಆಗಿಬಿಡುತ್ತೇವೆಂದು ಹೇಳಿ ಬಿಡುತ್ತಾರೆ. ರಚನೆ ಮತ್ತು ರಚಯಿತನ ಜ್ಞಾನವೇ ಇಲ್ಲ. ಜ್ಞಾನವನ್ನು ತಂದೆಯೇ ಬಂದು ತಿಳಿಸುತ್ತಾರೆ, ಅವರ ಹೆಸರಾಗಿದೆ - ಶಿವ. ಮತ್ತೆ ಅವರಿಗೆ ಕೆಲವರು ರುದ್ರನೆಂದೂ ಹೇಳುತ್ತಾರೆ, ಕೆಲವರು ಪಾಪ ಕಟೇಶ್ವರನೆಂದೂ ಹೇಳುತ್ತಾರೆ. ಅನೇಕ ಹೆಸರುಗಳನ್ನು ಇಟ್ಟು ಪೂಜಾ ಸಾಮಗ್ರಿಯನ್ನು ಹೆಚ್ಚಿಸಿ ಬಿಟ್ಟಿದ್ದಾರೆ. ಪರಮಾತ್ಮನು ಯಾವ-��ಾವ ಕರ್ತವ್ಯವನ್ನು ಮಾಡಿದ್ದಾರೆಯೋ ಅದರಂತೆಯೇ ಭಿನ್ನ-ಭಿನ್ನ ಹೆಸರುಗಳನ್ನಿಟ್ಟು ಬಹಳ ಮಂದಿರಗಳನ್ನು ಕಟ್ಟಿಸಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಇದು ಮುಳ್ಳುಗಳ ಪ್ರಪಂಚ, ವಿಷದ ಸಾಗರವಾಗಿದೆ. ಈಶ್ವರ ಸರ್ವವ್ಯಾಪಿಯಲ್ಲ ಎಂಬುದನ್ನೂ ಸಹ ಎಲ್ಲರಿಂದ ಬರೆಸಬೇಕಾಗಿದೆ. ತಂದೆಯು ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಇದರಿಂದ ಇಡೀ ಪ್ರಪಂಚವು ಸ್ವರ್ಗವಾಗಿ ಬಿಡುತ್ತದೆ, ಇದೂ ಸಹ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಶಾಸ್ತ್ರಗಳೆಲ್ಲವೂ ಭಕ್ತಿಯದಾಗಿದೆ ಬಾಕಿ ಪ್ರತಿಯೊಬ್ಬರಿಗೆ ತಮ್ಮ-ತಮ್ಮ ಕೆಲಸದ ಜ್ಞಾನವಿದೆ. ಬಡಿಗನಿಗೆ ಅದರದ್ದೇ ಜ್ಞಾನವಿರುತ್ತದೆ, ವೈದ್ಯರಿಗೆ ವೈದ್ಯಕೀಯ ಜ್ಞಾನವಿರುತ್ತದೆ ಆದರೆ ಇದು ಆತ್ಮಿಕ ಜ್ಞಾನವಾಗಿದೆ. ಅದನ್ನು ಒಬ್ಬ ಪರಮಾತ್ಮನೇ ಬಂದು ಕೊಡುತ್ತಾರೆ. ಯಾರಿಗೆ ಪರಮಾತ್ಮನೆಂದು ಹೇಳಲಾಗುತ್ತದೆ ಎಂಬುದು ಮನುಷ್ಯರಿಗೆ ಗೊತ್ತೇ ಇಲ್ಲ. ಗೀತೆಯಲ್ಲಿ ಶ್ರೀಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಮುಖ್ಯ ಮಾತೇ ಇದಾಗಿದೆ. ಮೂಲ ತಾಯಿಯನ್ನೇ ಖಂಡನೆ ಮಾಡಿ ಬಿಟ್ಟಿದ್ದಾರೆ ಅಂದಮೇಲೆ ಉಳಿದೆಲ್ಲಾ ಶಾಸ್ತ್ರಗಳೆಲ್ಲವೂ ಸುಳ್ಳಾಯಿತು. ನಕಲಿ ವಜ್ರಗಳ ಗಣಿಗಳಿರುತ್ತವೆ ಹಾಗೆಯೇ ಇವೂ ಸಹ ನಕಲಿ ವಜ್ರಗಳಾಗಿವೆ. ಪಾರಸ ಬುದ್ಧಿಯವರು ಪಾರಸಪುರಿ ಸತ್ಯಯುಗದಲ್ಲಿ ಇರುತ್ತಾರೆ, ಇದಂತೂ ನರಕವಾಗಿದೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಅವಶ್ಯವಾಗಿ ಪತಿತವಾಗಿದ್ದಾರೆ. ನರಕ ಮತ್ತು ಸ್ವರ್ಗ ಎರಡೂ ಭಾರತದಲ್ಲಿಯೇ ಇದೆ. ಯಾರಾದರೂ ಶರೀರ ಬಿಟ್ಟರೆ ಸ್ವರ್ಗಸ್ಥರಾದರೆಂದು ಹೇಳುತ್ತಾರೆ ಆದರೆ ಸ್ವರ್ಗವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಪರಮಾತ್ಮನು ಸ್ವರ್ಗಸ್ಥಾಪನೆ ಮಾಡುತ್ತಾರೆ, ನರಕದ್ದಲ್ಲ ಎಂಬುದು ಬುದ್ಧಿಯಲ್ಲಿ ಬರುವುದಿಲ್ಲ. ರಾವಣ ರಾಜ್ಯವು ಯಾವಾಗಿನಿಂದ ಆರಂಭವಾಗುತ್ತದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಭಲೆ ಬಹಳ ಶಾಸ್ತ್ರಗಳನ್ನು ಓದುತ್ತಾರೆ, ಬ್ರಹ್ಮಚರ್ಯದಲ್ಲಿಯೂ ಇರುತ್ತಾರೆ ಆದರೆ ಜನ್ಮವಂತೂ ವಿಕಾರದಿಂದ ಆಗುತ್ತದೆಯಲ್ಲವೆ. ಸಾಧು-ಸಂತರೂ ಸಹ ಸಾಧನೆ ಮಾಡುತ್ತಾರೆ, ತಂದೆಯಿಂದ ಮುಕ್ತಿಯನ್ನು ಕೇಳುತ್ತಾರೆ ಏಕೆಂದರೆ ಛೀ ಛೀ ಪ್ರಪಂಚದಲ್ಲಿರಲು ಇಷ್ಟವಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಮೊದಲು ಆತ್ಮವು ಹೇಗೆ ಜನನ-ಮರಣದಲ್ಲಿ ಬರುತ್ತದೆ, ಹೇಗೆ ಸತ್ಯ ಚಿನ್ನದಲ್ಲಿ ತುಕ್ಕು ಸೇರುತ್ತದೆ, ಹೇಗೆ 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತದೆ ಎಂದು ಆತ್ಮದ ಜ್ಞಾನ ತಿಳಿಯಬೇಕಾಗಿದೆ. ಎಲ್ಲರಿಗಿಂತ ಹೆಚ್ಚು ಪಾತ್ರವು ನಿಮ್ಮದಾಗಿದೆ. ನೀವು ದೇವಿ-ದೇವತೆಗಳಾಗಿದ್ದವರು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಲಕ್ಷ್ಮೀ-ನಾರಾಯಣರು ರಾಜ್ಯಭಾರ ಮಾಡಿದರು ನಂತರ ಎಲ್ಲಿ ಹೋದರು? ಅವರ ಆತ್ಮವಂತೂ ಅವಶ್ಯವಾಗಿ ಜನ್ಮ ತೆಗೆದುಕೊಂಡಿರುತ್ತದೆಯಲ್ಲವೆ. ಈಗ ಅವರು ಎಲ್ಲಿದ್ದಾರೆ? ಯಾರೂ ತಿಳಿದುಕೊಂಡಿಲ್ಲ. ಕ್ರಿಶ್ಚಿಯನ್ನರು ತಿಳಿದುಕೊಂಡಿರುತ್ತಾರೆ - ಕ್ರೈಸ್ಟ್ ಈ ಸಮಯದಲ್ಲಿ ಯಾವುದೇ ಕನಿಷ್ಠ ಪಾತ್ರದಲ್ಲರುವರು. ನೀವಂತೂ ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ, ಲಕ್ಷ್ಮೀ-ನಾರಾಯಣರು ಯಾರು ಸ್ವರ್ಗದ ಮಾಲೀಕರಾಗಿದ್ದರೋ ಅವರೇ ಪುನರ್ಜನ್ಮ ತೆಗೆದುಕೊಂಡು 84 ಜನ್ಮಗಳನ್ನು ಪೂರ್ಣ ಮಾಡಬೇಕಾಗಿದೆ. ಎಲ್ಲಾ ಆತ್ಮರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಯೋಗದಲ್ಲಿ ಇಲ್ಲದಿದ್ದರೆ ಮುಳ್ಳುಗಳಿಂದ ಹೂಗಳಾಗಲು ಸಾಧ್ಯವಿಲ್ಲ. ಯೋಗದಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಸತೋಪ್ರಧಾನ ಹೂಗಳಾಗುತ್ತೀರಿ. ಎಲ್ಲಯವರೆಗೆ ಇಲ್ಲಿರುತ್ತೀರೋ ಅಲ್ಲಿಯವರೆಗೆ ಒಂದಲ್ಲಒಂದು ಮುಳ್ಳಿನ ಅಂಶವಿರುತ್ತದೆ. ಹೂಗಳಾಗಿ ಬಿಟ್ಟರೆ ಮತ್ತೆ ನೀವು ಇಲ್ಲಿರಲು ಸಾಧ್ಯವಿಲ್ಲ. ಸತ್ಯಯುಗಕ್ಕೆ ಹೂದೋಟವೆಂದು ಹೇಳಲಾಗುತ್ತದೆ. ನೀವೀಗ ಮುಳ್ಳುಗಳ ಕಾಡು ಅಥವಾ ರಾವಣ ರಾಜ್ಯದಲ್ಲಿದ್ದೀರಿ. ಎಲ್ಲರೂ ಮುಳ್ಳುಗಳಾಗಿದ್ದಾರೆ. ಯಾರು ಅನೇಕ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆಯೋ ಅವರಿಗೇ ಸತ್ಯ ಸುಗಂಧಭರಿತ ಹೂವು ಎಂದು ಹೇಳಲಾಗುತ್ತದೆ. ಒಂದು ಹೂವಿನ ರಾಜನಿರುತ್ತದೆ, ಅದು ಶ್ವೇತ ಬಣ್ಣದಿಂದ ಕೂಡಿರುತ್ತದೆ. ಅದನ್ನು ಟೇಬಲ್ನ ಮೇಲೆ ಇಡುತ್ತಾರೆ, ಅದು ಅರಳುತ್ತಾ ಇರುತ್ತದೆ. ಪರಿಮಳವು ಹೆಚ್ಚುತ್ತಾ ಇರುತ್ತದೆ. ಇಂತಹ ಹೂಗಳು ಯಾರೂ ಆಗುವುದಿಲ್ಲ. ಈಗ ರಾಜಾ ಹೂ ಇದೆಯೆಂದರೆ ರಾಣಿಹೂ ಇರಬೇಕು (ರಾತ್ರಿ ರಾಣಿ). ಗುಲಾಬಿ, ಸಂಪಿಗೆ ಇತ್ಯಾದಿ ಒಳ್ಳೊಳ್ಳೆಯ ಹೂಗಳಿವೆ, ಪುಷ್ಫ ಪ್ರದರ್ಶನವನ್ನು ತೋರಿಸುತ್ತಾರೆ. ಅಲ್ಲಿ ಎಲ್ಲಾ ಒಳ್ಳೊಳ್ಳೆಯ ಹೂಗಳನ್ನು ತೆಗೆದುಕೊಂಡು ಬರುತ್ತಾರೆ, ಯಾರು ಒಳ್ಳೊಳ್ಳೆಯ ಹೂಗಳನ್ನು ತರುವರೋ ಅವರಿಗೆ ಬಹುಮಾನವು ಸಿಗುತ್ತದೆ. ನೀವೂ ಸಹ ಈಗ ಹೂದೋಟವನ್ನು ಮಾಡುತ್ತೀರಲ್ಲವೆ. ಶಿವನ ಮೇಲೆ ಹೂಗಳನ್ನು ಅರ್ಪಿಸುತ್ತಾರೆ, ಸುಗಂಧರಾಜ ಮತ್ತು ಎಕ್ಕದ ಹೂಗಳನ್ನೂ ಅರ್ಪಿಸುತ್ತಾರೆ. ತಂದೆಯು ತಿಳಿಸಿದ್ದಾರೆ- ನಾನು ಇಲ್ಲಿ ನೀವು ಮಕ್ಕಳನ್ನು ಹೂಗಳನ್ನಾಗಿ ಮಾಡುವ ಪಾತ್ರವನ್ನು ಅಭಿನಯಿಸುತ್ತೇನೆ. ಯಾರು ಗುಲಾಬಿ ಹೂವಾಗಿದ್ದಾರೆ, ಯಾರು ಸಂಪಿಗೆಯಾಗಿದ್ದಾರೆ ಮತ್ತು ಯಾರು ಚೆಂಡು ಮಲ್ಲಿಗೆಯಾಗಿದ್ದಾರೆ, ಯಾರು ಎಕ್ಕದ ಹೂವಾಗಿದ್ದಾರೆ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ. ಎಲ್ಲದಕ್ಕಿಂತ ಕನಿಷ್ಟವಾಗಿದೆ – ಎಕ್ಕದ ಹೂ. ಅದರ ಚಲನೆಯೇ ಮುಳ್ಳಗಳಂತೆ ಇರುತ್ತದೆ. ಕೆಲಕೆಲವರು ಬಹಳ ತೀಕ್ಷ್ಣ ಮುಳ್ಳುಗಳಾಗಿದ್ದಾರೆ, ಕ್ರೋಧವೂ ಸಹ ಒಂದು ಮುಳ್ಳಾಗಿದೆ. ಅನೇಕರಿಗೆ ದುಃಖವನ್ನು ಕೊಡುತ್ತದೆ, ನೀವೀಗ ಮುಳ್ಳುಗಳ ಪ್ರಪಂಚದಿಂದ ದೂರವಿದ್ದೀರಿ, ಸಂಗಮದಲ್ಲಿದ್ದೀರಿ. ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ. ಹೇಗೆ ಮಾಲಿಯು ಮುಳ್ಳುಗಳನ್ನು ತೆಗೆದು ಹೂಗಳನ್ನು ಬೇರೆ ಕುಂಡದಲ್ಲಿ ಇಡುತ್ತಾರೆ ಹಾಗೆಯೇ ತಂದೆಯೂ ಸಹ ತಮ್ಮನ್ನು ಬೇರ್ಪಡಿಸಿದ್ದಾರೆ. ನೀವು ಸಂಗಮದಲ್ಲಿದ್ದೀರಿ, ನಿಮ್ಮದು ರಿಪೇರಿಯಾಗುತ್ತಾ ಇರುತ್ತದೆ ಆದರೂ ಸಹ ಮಾಯೆಯು ಮುಳ್ಳನ್ನಾಗಿ ಮಾಡಿ ಬಿಡುತ್ತದೆ. ಒಂದೇ ಸಾರಿ ನನ್ನವರಾಗಿ ಬಿಟ್ಟರಲ್ಲವೆ ಆದ್ದರಿಂದ ಮಾಯೆಯ ವಿಘ್ನವೂ ಸಹ ಒಂದು ದಿನ ಸಮಾಪ್ತಿಯಾಗುತ್ತವೆ ನಂತರ ಈ ಕುಂಡದಲ್ಲಿ ಹಾಕಿರುವ ಹೂಗಳೆಲ್ಲರೂ ಸ್ವರ್ಗದಲ್ಲಿ ಹೋಗುವಿರಿ. ಕಲಿಯುಗೀ ಮುಳ್ಳುಗಳು ಭಸ್ಮವಾಗುತ್ತಾರೆ. ನೀವು ಕೆಲವರೇ ಹೂಗಳಾಗಿರುತ್ತೀರಿ, ನಿಮ್ಮನ್ನು ಸಂಗಮಯುಗೀ ಹೂ ಕುಂಡದಲ್ಲಿ ಹಾಕಲಾಗಿದೆ, ಬೀಜವು ಬಿತ್ತನೆಯಾಗಿದೆ. ಮಾಯೆಯ ಬಿರುಗಾಳಿ ಬಂದರೆ ಬಾಡಿಸುತ್ತದೆ, ಆದರೂ ಬಿತ್ತನೆ ಮಾಡಿರುವ ಜ್ಞಾನದ ಅವಿನಾಶಿ ಬೀಜವೆಂದೂ ವಿನಾಶವಾಗುವುದಿಲ್ಲ.
|
3 |
+
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ನೀವು ಮಕ್ಕಳು ಬಹಳ-ಬಹಳ ನಿರ್ಭಯರಾಗಬೇಕಾಗಿದೆ. ಇದನ್ನು ಬರೆಯಿರಿ - ಪ್ರತೀ 5000 ವರ್ಷಗಳ ನಂತರ ಈ ಮೇಳ-ಪ್ರದರ್ಶನಿಯನ್ನು ನಾವು ಸಂಗಮದಲ್ಲಿ ತೋರಿಸಲು ಬಂದಿದ್ದೇವೆ. ಇದನ್ನೂ ಸಹ ಬರೆಯಬೇಕಾಗಿದೆ - ಈ ಯುದ್ಧವು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು, ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವ ಸಲುವಾಗಿ ಪ್ರತೀ 5000 ವರ್ಷಗಳ ನಂತರ ನಡೆಯುತ್ತದೆ. ತಂದೆಯು ಅನೇಕ ಸೂಚನೆಗಳನ್ನು ತಿಳಿಸುತ್ತಾರೆ. ಬಹಳ ಸಹಜ ಯುಕ್ತಿಗಳನ್ನು ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡಿರಿ ಮತ್ತು ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಿರಿ. ಮನುಷ್ಯರಂತೂ ನೀರಿನಲ್ಲಿ ಮುಳುಗುತ್ತಾ ಇರುತ್ತಾರೆ, ಸಾಗರದಲ್ಲಿ ಹೋಗಬೇಕಲ್ಲವೆ. ನದಿಗಳು ಸಾಗರದಿಂದ ಹುಟ್ಟುತ್ತವೆ, ನದಿಗಳ ತಂದೆಯು ಸಾಗರನಲ್ಲವೆ. ಅಲ್ಲಿಗೆ ಹೋಗಿ ಸ್ನಾನ ಮಾಡಿರಿ ಆದರೆ ಅದು ಉಪ್ಪು ನೀರಾಗಿರುತ್ತದೆ ಆದ್ದರಿಂದ ಸಿಹಿ ನೀರಿನ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ನೀವೀಗ ಜ್ಞಾನ ಸಾಗರನ ಮಕ್ಕಳಾಗಿದ್ದೀರಿ, ಜ್ಞಾನ ಸಾಗರ, ಪತಿತ-ಪಾವನನು ತಂದೆಯಾಗಿದ್ದಾರೆ. ನೀವು ಅವರ ಮಕ್ಕಳು ಯಾರು ಹೆಚ್ಚು ಸರ್ವೀಸ್ ಮಾಡುತ್ತೀರೋ ಅವರು ಒಳ್ಳೆಯ ಹೂವೆಂದು ತಿಳಿಯಲಾಗುತ್ತದೆ. ಪ್ರದರ್ಶನಿಯಲ್ಲಿಯೂ ಪದೇ-ಪದೇ ಒಳ್ಳೆಯ ಹೂ ತಂದವರನ್ನು ಕರೆಯುತ್ತಾರೆ. ಇವರು ನಮಗಿಂತಲೂ ಬುದ್ಧಿವಂತರೆಂದು ತಿಳಿಯುತ್ತಾರೆ ಆದರೆ ಬುದ್ಧಿವಂತಿಕೆಗೆ ಗೌರವವನ್ನೂ ಕೊಡಬೇಕು. ತಂದೆಯು ಸದಾ ತಿಳಿಸುತ್ತಾರೆ - ಎಂದೂ ಕ್ರೋಧ ಮಾಡಬೇಡಿ, ಪ್ರೀತಿಯಿಂದ ತಿಳಿಸಿ. ಯಾರಾದರೂ ಕ್ರೋಧ ಮಾಡುತ್ತಾರೆಂದರೆ ಇವರಲ್ಲಿ ಕ್ರೂರವಾದ ಭೂತವಿದೆಯೆಂದು ತಂದೆಯು ತಿಳಿಯುತ್ತಾರೆ. ತಂದೆ-ತಾಯಿಯ ಮೇಲೂ ಕ್ರೋಧ ಮಾಡಲು ಹಿಂಜರಿಯುವುದಿಲ್ಲ. ಇನ್ನೂ ದುರ್ಗತಿಯನ್ನು ಹೊಂದುತ್ತಾರೆ. ಬಡವರ ಬಂಧು ಎಂದಾದರೂ ಬಡವರ ಮೇಲೆ ಕ್ರೋಧ ಮಾಡುತ್ತಾರೆಯೇ? ಬಡವರಬಂಧು ತಂದೆ ಬಂದಿರುವುದೇ ಬಡವರನ್ನು ಸಾಹುಕಾರರನ್ನಾಗಿ ಮಾಡಲು. ಇಲ್ಲಿ ಯಾರು ಪದಮಾಪತಿಗಳಿದ್ದಾರೆಯೋ ಅವರು ಇನ್ನೊಂದು ಜನ್ಮದಲ್ಲಿ ನೌಕರ-ಚಾಕರರಾಗಿರುತ್ತಾರೆ. ಬಡವರು ಯಾರು ಚೆನ್ನಾಗಿ ಓದುವರೋ ಅವರು ಹೋಗಿ ರಾಜ-ರಾಣಿಯಾಗುತ್ತಾರೆ, ಯಾರು ಈಶ್ವರೀಯ ಸೇವೆಗೆ ಏನನ್ನೂ ಕೊಡುವುದಿಲ್ಲ. ಇಂತಹವರೂ ಸೇವಾಕೇಂದ್ರಕ್ಕೆ ಬರುತ್ತಾರೆ ಸ್ವಲ್ಪ ಬೀಜಬಿತ್ತಿದರೂ ನಮ್ಮ ಭವಿಷ್ಯವು ಎಷ್ಟು ಶ್ರೇಷ್ಠವಾಗುವುದು ಎಂಬುದು ಅವರಿಗೆ ಗೊತ್ತೇ ಇಲ್ಲ. ಸುಧಾಮನ ಉದಾಹರಣೆಯಿದೆಯಲ್ಲವೆ. ಈಶ್ವರಾರ್ಥವಾಗಿ ದಾನ ಮಾಡುತ್ತಾರೆ, ಇನ್ನೊಂದು ಜನ್ಮದಲ್ಲಿ ಫಲ ಸಿಗುತ್ತದೆಯೆಂದು ತಿಳಿಯುತ್ತಾರೆ. ತಂದೆಯಂತೂ ಬರೆದು ಕಳುಹಿಸುತ್ತಾರೆ - ಮಕ್ಕಳೇ, ನಿಮಗೆ ಒಂದು ಇಟ್ಟಿಗೆಯ ಬದಲು ಮಹಲು ಸಿಗುತ್ತದೆ. ಇಲ್ಲಿ ಕವಡೆಗಳನ್ನು ಕೊಡುತ್ತೀರೆಂದರೆ ಅಲ್ಲಿ ವಜ್ರಗಳಾಗುತ್ತವೆ ಆದ್ದರಿಂದ ಒಂದು ಹಿಡಿ ಅವಲಕ್ಕಿಯ ಗಾಯನವಿದೆ. ಗುರುನಾನಕರ ಮಂದಿರಕ್ಕೆ ಹೋಗುತ್ತಾರೆ. ಒಂದಲ್ಲ ಒಂದನ್ನು ಅವಶ್ಯವಾಗಿ ಇಡುತ್ತಾರೆ ಆದರೆ ಇಲ್ಲಂತೂ ತಂದೆಯು ದಾತನಲ್ಲವೆ. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ಬಹಳ-ಬಹಳ ನಿರ್ಭಯರಾಗಿ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಎಲ್ಲರಲ್ಲಿ ಅವಿನಾಶಿ ಬೀಜವನ್ನು ಬಿತ್ತನೆ ಮಾಡಬೇಕಾಗಿದೆ.
|
7 |
+
2. ಕ್ರೋಧವು ಬಹಳ ದೊಡ್ಡ ಮುಳ್ಳಾಗಿದೆ, ಅದನ್ನು ಬಿಟ್ಟು ಬಹಳ-ಬಹಳ ಪ್ರಿಯರಾಗಬೇಕಾಗಿದೆ. ಪ್ರೀತಿಯಿಂದ ಸರ್ವೀಸ್ ಮಾಡಬೇಕಾಗಿದೆ. ಸೇವಾಧಾರಿಗಳಿಗೆ ಗೌರವ ಕೊಡಬೇಕಾಗಿದೆ.
|
BKMurli/BKMurli/page_1023.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಎರಡು ಶಬ್ಧಗಳನ್ನು ಕೇಳಿದಿರಿ. ಈಗ ಮಕ್ಕಳು ಇದರ ಅರ್ಥವನ್ನು ತಿಳಿದುಕೊಂಡು ಬಿಟ್ಟಿದ್ದೀರಿ - ತಂದೆಯು ಇಲ್ಲಿಯೇ ಇದ್ದಾರೆ. ತಂದೆಯು ಸರಿಯಾದ ಮಾತನ್ನು ತಿಳಿಸುತ್ತಾರೆ, ಏಕೆಂದರೆ ಜ್ಞಾನದ ಬಗ್ಗೆಯಿರಲಿ ಅಥವಾ ಈಶ್ವರನ ಜೊತೆ ಮಿಲನ ಮಾಡುವ ವಿಷಯದಲ್ಲಿ, ಪ್ರತಿಯೊಂದು ಮಾತನ್ನು ಮನುಷ್ಯರೇನು ಹೇಳುತ್ತಾರೆಯೋ ಅದು ತಪ್ಪಾಗಿದೆ. ಈಗ ಆಕಾಶ ಸಿಂಹಾಸನವನ್ನು ಬಿಟ್ಟು ಬಾ.... ಎಂದು ಗೀತೆಯ ಅಕ್ಷರವನ್ನು ಕೇಳಿದಿರಿ ಆದರೆ ಆಕಾಶ ಸಿಂಹಾಸನವೆಂದರೇನು ಎಂಬುದು ಯಾರಿಗೂ ತಿಳಿದಿಲ್ಲ. ಪತಿತ-ಪಾವನನಂತೂ ಬರಲೇಬೇಕಾಗಿದೆ. ಕೆಲವರು ಭಗವಂತನೇ ಇಲ್ಲವೆಂದು ಹೇಳುತ್ತಾರೆ. ಇನ್ನೂ ಕೆಲವರು ಎಲ್ಲರೂ ಭಗವಂತನೇ ಆಗಿದ್ದಾರೆ ಅಂದಾಗ ಏಕೆ ಬರುವರು ಎಂದು ಹೇಳುತ್ತಾರೆ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ. ಆದ್ದರಿಂದ ಗಾಯನ ಇತ್ಯಾದಿ ಏನೆಲ್ಲವೂ ಭಕ್ತಿಮಾರ್ಗದಲ್ಲಿ ಇದೆಯೋ ಅದನ್ನು ಕೇಳಲು ಇಷ್ಟವಾಗುವುದಿಲ್ಲ. ಪತಿತ-ಪಾವನನೇ ಬಂದು ತನ್ನ ಪರಿಚಯವನ್ನು ಕೊಟ್ಟು, ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಪ್ರಪಂಚದಲ್ಲಿ ಇರುವವರು ಯಾರೂ ಸಹ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಇಲ್ಲಿಯೂ ಎಷ್ಟೊಂದು ಮತದ ವ್ಯಕ್ತಿಗಳಿದ್ದಾರೆ. ಮನುಷ್ಯರು ಪವಿತ್ರವಾಗಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ ಅಂದಾಗ ಅವಶ್ಯವಾಗಿ ಎಲ್ಲಿಯವರೆಗೆ ಭಗವಂತನು ಬರುವುದಿಲ್ಲವೋ ಅಲ್ಲಿಯವರೆಗೆ ಪವಿತ್ರರಾಗಲು ಹೇಗೆ ಸಾಧ್ಯ! ಪರಮಾತ್ಮನೇ ಬಂದು ಶಿಕ್ಷಣ ಕೊಡುತ್ತಾರೆ ಮತ್ತು ಇದರಲ್ಲಿ ಎಷ್ಟು ಪ್ರಾಪ್ತಿ ಇದೆಯೆಂದು ಒತ್ತುಕೊಟ್ಟು ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು ಹೇಳುತ್ತಾರೆ - ನನ್ನವರಾಗಿ ಶ್ರೀಮತದಂತೆ ನಡೆಯದಿದ್ದರೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಹೇಗೆ ತಂದೆಯು ಮಕ್ಕಳ ಚಲನೆಯು ಸರಿ ಇಲ್ಲದಿರುವುದನ್ನು ನೋಡುತ್ತಾರೆಂದರೆ ಪೆಟ್ಟು ಕೊಡುತ್ತಾರೆ. ಈ ತಂದೆಯಂತೂ ಪೆಟ್ಟು ಕೊಡುವುದಿಲ್ಲ ಕೇವಲ ತಿಳಿಸುತ್ತಾರೆ, ರಕ್ತದಿಂದಲೂ ಸಹ ಬರೆದು ಪ್ರತಿಜ್ಞೆ ಮಾಡುತ್ತಾರೆ ಆದರೂ ಸೋಲನ್ನು ಅನುಭವಿಸುತ್ತಾರೆ. ಪವಿತ್ರರಾಗುವುದರಿಂದ ಏನು ಸಿಗುತ್ತದೆ, ಪತಿತರೆಂದು ಯಾರಿಗೆ ಹೇಳಲಾಗುತ್ತದೆ ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ. ತಂದೆಯು ತಿಳಿಸುತ್ತಾರೆ - ಯಾರು ವಿಕಾರದಲ್ಲಿ ಹೋಗುತ್ತಾರೆಯೋ ಅವರು ಪತಿತರಾಗಿದ್ದಾರೆ, ವಿಕಾರವನ್ನು ಬಿಡುವುದು ಅಸಾಧ್ಯವೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಆದ್ದರಿಂದ ತಿಳಿಸಿರಿ, ದೇವಿ-ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿದ್ದರು, ಚಿತ್ರಗಳನ್ನು ತೋರಿಸಬೇಕು. ಇದು ನಿರ್ವಿಕಾರಿ ಪ್ರಪಂಚವಾಗಿತ್ತಲ್ಲವೆ. ಪವಿತ್ರತೆಯಿದ್ದಾಗ ಭಾರತವು ಎಷ್ಟೊಂದು ಸಾಹುಕಾರನಾಗಿತ್ತು, ಶಿವಾಲಯವಾಗಿತ್ತು. ವಿಕಾರವಿಲ್ಲದೆ ಪ್ರಪಂಚವು ಹೇಗೆ ವೃದ್ಧಿಯಾಗುವುದು ಎಂದು ಮನುಷ್ಯರಿಗೆ ಚಿಂತೆಯಿರುತ್ತದೆ. ಅರೆ! ಜನಸಂಖ್ಯೆಯು ಕಡಿಮೆಯಾಗಲಿ ಎಂದು ಸರ್ಕಾರವೂ ಸಹ ಈ ವಿಷಯದಲ್ಲಿ ಬೇಸತ್ತು ಹೋಗಿದೆ. ಆದರೂ ಸಹ ಪ್ರತೀ ವರ್ಷವು ಜನಸಂಖ್ಯೆಯು ಎಷ್ಟೊಂದು ಹೆಚ್ಚುತ್ತಿರುತ್ತದೆ. ಕಡಿಮೆ ಆಗುವುದಂತೂ ಬಹಳ ಪರಿಶ್ರಮವಿದೆ. ಇಲ್ಲಿ ಬೇಹದ್ದಿನ ತಂದೆಯು ತಿಳಿಸುತ್ತಾರೆ - ಒಂದುವೇಳೆ ನೀವು ಪವಿತ್ರರಾಗದಿದ್ದರೆ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ, ಬಹಳ ಭಾರಿ ಆದಾಯವಿದೆ. ಮಕ್ಕಳಿಗೆ ಗೊತ್ತಿದೆ, ಅವಶ್ಯವಾಗಿ ಮಾಯಾಜೀತರಾದಾಗಲೇ ನಾವು ಜಗಜ್ಜೀತರಾಗುವೆವು. ರಾವಣನನ್ನು ಜಯಿಸಿ ರಾಮ ರಾಜ್ಯವನ್ನು ಪಡೆಯುತ್ತೀರಿ, ಅಲ್ಲಿ ಈ ವಿಕಾರವೇ ಇರುವುದಿಲ್ಲ. ಅದನ್ನು ನೀವು ಜಯಿಸಿದಿರಲ್ಲವೆ. ಈ ಮಾತುಗಳನ್ನು ತಿಳಿದುಕೊಳ್ಳುವವರು ಕೆಲವರೇ ವಿರಳ. ವಿಕಾರವಿಲ್ಲದೆ ಪ್ರಪಂಚವು ಹೇಗೆ ನಡೆಯುತ್ತದೆ ಎಂದು ಹೇಳುತ್ತಾರೆ, ಹೀಗೆ ಯಾರು ಮಾತನಾಡುವರೋ ಅವರು ಈ ಆದಿ ಸನಾತನ ಧರ್ಮದವರಲ್ಲ ಎಂದು ತಿಳಿದುಕೊಳ್ಳಿ. ಎಲ್ಲಿಯಾದರೂ ನೀವು ಭಾಷಣ ಮಾಡುತ್ತೀರೆಂದರೆ ನೀವು ಹೇಳಿ, ಭಗವಾನುವಾಚ - ಭಗವಂತನು ತಿಳಿಸುತ್ತಾರೆ ಕಾಮ ಮಹಾಶತ್ರುವಾಗಿದೆ, ಅದರ ಮೇಲೆ ಜಯ ಗಳಿಸಿದರೆ ನೀವು ಜಗಜ್ಜೀತರಾಗುತ್ತೀರಿ. ಇದು ಬಹಳ ನೇರ ಮಾತಾಗಿದೆ ಆದರೂ ಸಹ ಅವರು ತಿಳಿದುಕೊಳ್ಳುವುದಿಲ್ಲ ಅಥವಾ ತಿಳಿಸುವವರಲ್ಲಿ ಬುದ್ಧಿವಂತಿಕೆಯಿಲ್ಲ. ತಂದೆಯಂತೂ ತಿಳಿದುಕೊಳ್ಳುತ್ತಾರೆ, ಮಕ್ಕಳು ರೂಪಾಯಿಯಲ್ಲಿ ಐದು ಆಣೆಯಷ್ಟೂ ಕಲಿತಿಲ್ಲ ಅಥವಾ ಸ್ವಯಂ ಪೂರ್ಣ ಯೋಗಿಯಾಗಿಲ್ಲ ಆದ್ದರಿಂದಲೇ ಶಕ್ತಿ ಸಿಗುವುದಿಲ್ಲ. ನೆನಪಿನಿಂದಲೇ ಶಕ್ತಿಯು ಸಿಗುತ್ತದೆ. ತಂದೆಯು ಸರ್ವಶಕ್ತಿವಂತನಲ್ಲವೆ! ಯೋಗವಿದ್ದಾಗಲೇ ಶಕ್ತಿಯೂ ಸಿಗುವುದು. ಅನೇಕ ಮಕ್ಕಳಲ್ಲಿ ಯೋಗವು ಬಹಳ ಕಡಿಮೆಯಿದೆ, ಯಾರು ಸತ್ಯವಾಗಿ ಬರೆಯುವುದಿಲ್ಲವೋ ನೆನಪಿನ ಚಾರ್ಟ್ ಬರೆಯುವುದೂ ಸಹ ಬಹಳ ವಿರಳ. ಶಿಕ್ಷಕಿಯರೇ ಚಾರ್ಟ್ ಇಡಲಿಲ್ಲವೆಂದರೆ ವಿದ್ಯಾರ್ಥಿಗಳು ಹೇಗೆ ಇಡುವರು! ಅನೇಕ ವಿದ್ಯಾರ್ಥಿಗಳು ಯೋಗದಲ್ಲಿ ಬಹಳ ತೀಕ್ಷ್ಣವಾಗಿದ್ದಾರೆ, ಮುಖ್ಯ ಮಾತು ತಂದೆಯನ್ನು ನೆನಪು ಮಾಡಬೇಕಾಗಿದೆ. ಯೋಗ ಶಬ್ಧವು ಶಾಸ್ತ್ರಗಳಿಂದ ಬಂದಿದೆ, ಮನುಷ್ಯರು ಕೇಳಿ ತಬ್ಬಿಬ್ಬಾಗುತ್ತಾರೆ. ಯೋಗವನ್ನು ಕಲಿಸಿ ಎಂದು ಹೇಳುತ್ತಾರೆ. ಅರೆ! ಯೋಗವನ್ನು ಕಲಿಸಲಾಗುತ್ತದೆಯೇ? ಮುಂಜಾನೆ ಎದ್ದು ತಾವೇ ನೆನಪು ಮಾಡಬೇಕಾಗಿದೆ. ಇದರಲ್ಲಿ ಶಿಕ್ಷಕರೇ ಕುಳಿತು ಕಲಿಸಿ ಕೊಡುವ ಅವಶ್ಯಕತೆಯೇನಿದೆ? ಆದ್ದರಿಂದ ನೆನಪು ಶಬ್ಧವು ಸರಿಯಾಗಿದೆ, ಯೋಗವೆಂಬುದು ಕಲಿಯುವ ಮಾತಲ್ಲ, ಈ ಹವ್ಯಾಸ ಮಾಡಿಕೊಳ್ಳಬಾರದು. ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ. ಅಮೃತವೇಳೆ ನೆನಪು ಮಾಡುವುದು ಒಳ್ಳೆಯದಾಗಿದೆ. ಭಕ್ತಿಯನ್ನೂ ಸಹ ಮುಂಜಾನೆ ಎದ್ದು ಮಾಡುತ್ತಾರೆ. ಇದೂ ಸಹ ತಂದೆಯನ್ನು ನೆನಪು ಮಾಡಿದಂತೆ. ಏಕೆ ನೆನಪು ಮಾಡುತ್ತಾರೆ? ಏಕೆಂದರೆ ತಂದೆಯಿಂದ ಆಸ್ತಿ ಸಿಗಬೇಕಾಗಿದೆ. ಭಲೆ ಭಕ್ತಿಮಾರ್ಗದಲ್ಲಿ ಶಿವನನ್ನು ನೆನಪು ಮಾಡುತ್ತಾರೆ ಆದರೆ ಶಿವನಿಂದ ಏನು ಸಿಗುವುದು ಎಂಬುದು ಅವರಿಗೆ ತಿಳಿದಿಲ್ಲ. ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಈಗ ತಂದೆಯು ಶ್ರೀಮತ ಕೊಡುತ್ತಾರೆ - ತಮ್ಮ ಕಲ್ಯಾಣಕ್ಕಾಗಿ ನನ್ನನ್ನು ನೆನಪು ಮಾಡಿರಿ, ನೆನಪಿನಿಂದಲೇ ಶಕ್ತಿ ಬರುತ್ತದೆ. ಶಕ್ತಿಯಿಂದ ವಿಕರ್ಮಗಳು ವಿನಾಶವಾಗುತ್ತವೆ, ಜ್ಞಾನದಿಂದ ವಿಕರ್ಮಗಳು ವಿನಾಶವಾಗುವುದಿಲ್ಲ. ಜ್ಞಾನದಿಂದ ಪದವಿಯು ಸಿಗುವುದು. ನೆನಪಿನಿಂದಲೇ ಪತಿತರಿಂದ ಪಾವನರಾಗುತ್ತೀರಿ. ಅನೇಕ ಮಕ್ಕಳು ಇದರಲ್ಲಿ ಅನುತ್ತೀರ್ಣರಾಗಿದ್ದಾರೆ. ಬಹಳ ಒಳ್ಳೊಳ್ಳೆಯ ಮಕ್ಕಳೂ ಸಹ ಐದಾಣೆಯಷ್ಟೂ ವಿರಳ ನೆನಪು ಮಾಡುತ್ತಾರೆ. ಕೆಲವರಂತೂ ಒಂದು ಪೈಸೆಯಷ್ಟೂ ನೆನಪು ಮಾಡುವುದಿಲ್ಲ. ಇದರಲ್ಲಿ ಬಹಳ ಪರಿಶ್ರಮವಿದೆ. ಜ್ಞಾನವನ್ನು ಬಹು ಬೇಗನೆ ಕಲಿಯುತ್ತಾರೆ ಆದರೆ ನೆನಪಿನಲ್ಲಿದ್ದಾಗಲೇ ದೋಣಿಯು ಪಾರಾಗುವುದು. ಆಗಲೇ ಜನ್ಮ-ಜನ್ಮಾಂತರದ ವಿಕರ್ಮಗಳು ವಿನಾಶವಾಗುತ್ತವೆ. ನಂತರ ಪುಣ್ಯಾತ್ಮರಾಗಿ ಬಿಡುತ್ತೀರಿ. ನಮ್ಮನ್ನು ಪತಿತರಿಂದ ಪಾವನ ಮಾಡಿ ಎಂದು ತಂದೆಯನ್ನು ಕರೆಯುತ್ತಾರೆ. ಪಾವನರಂತೂ ಅನೇಕರಾಗುತ್ತಾರೆ ಆದರೆ ಯಾರು ಚೆನ್ನಾಗಿ ನೆನಪಿನಲ್ಲಿರುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುವರು. ನಿಮಗಿಂತಲೂ ಬಂಧನದಲ್ಲಿ ಇರುವವರು ಹೆಚ್ಚು ನೆನಪು ಮಾಡುತ್ತಾರೆ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಪವಿತ್ರರಾಗಿರುವುದು ಅಸಂಭವವೆಂದು ಯಾರಾದರೂ ಹೇಳಿದರೆ ಅಂತಹವರೊಂದಿಗೆ ಮಾತನಾಡಲೂಬಾರದು. ನಿರ್ವಿಕಾರಿ ಭಾರತವಿದ್ದಾಗ ಸತೋಪ್ರಧಾನವಾಗಿತ್ತು ಆದರೆ ಸಾಹುಕಾರರ ಬುದ್ಧಿಯಲ್ಲಿ ಈ ಜ್ಞಾನ ಕುಳಿತುಕೊಳ್ಳುವುದು ಅಸಂಭವವಾಗಿದೆ ಏಕೆಂದರೆ ನೆನಪಿನಲ್ಲಿಯೇ ಪರಿಶ್ರಮವಿದೆ.
|
2 |
+
ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಅವರೊಂದಿಗೂ ಸಂಬಂಧವನ್ನು ನಿಭಾಯಿಸಿರಿ. ವಾಸ್ತವದಲ್ಲಿ ಕಾಯಿದೆಗಳು ಬಹಳ ಕಠಿಣವಾಗಿದೆ, ನೀವು ಜನ್ಮ-ಜನ್ಮಾಂತರವಂತೂ ಪಾಪಾತ್ಮರಿಗೆ ದಾನ ಮಾಡುತ್ತಾ ಪಾಪಾತ್ಮರಾಗುತ್ತಾ ಬಂದಿರಿ. ನೀವೀಗ ಪಾಪಾತ್ಮರಿಗೆ ಹಣವನ್ನು ಕೊಡುವಂತಿಲ್ಲ ಆದರೆ ತಾತನ ಆಸ್ತಿಯಾಗಿದ್ದರೆ ಕೊಡಲೇಬೇಕಾಗುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ - ಮೊದಲು ಎಲ್ಲಾ (ಲೌಕಿಕದ) ಕರ್ತವ್ಯಗಳನ್ನು ಮುಗಿಸಿ ನಂತರ ಸಮರ್ಪಣೆಯಾಗಿ ಬಿಡಿ. ಇಂತಹವರು ಕೋಟಿಯಲ್ಲಿ ಕೆಲವರೇ ಇರುತ್ತಾರೆ. ಬಹಳ ದೊಡ್ಡ ಗುರಿಯಾಗಿದೆ, ತಂದೆಯನ್ನು ಫಾಲೋ ಮಾಡಬೇಕಾಗಿದೆ. ನಷ್ಟಮೋಹಿಗಳಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಬಹಳ ಪರಿಶ್ರಮವಿದೆ. ವಿಶ್ವದ ಮಾಲೀಕರಾಗುವುದು ಎಷ್ಟು ದೊಡ್ಡ ಪ್ರಾಪ್ತಿಯಾಗಿದೆ! ಕಲ್ಪ-ಕಲ್ಪವೂ ಯಾರು ವಿಶ್ವದ ಮಾಲೀಕರಾದರೋ ಅವರೇ ಆಗುವರು. ಡ್ರಾಮಾದ ರಹಸ್ಯವು ಕೆಲವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುತ್ತದೆ, ಸ���ಹುಕಾರರಂತೂ ಜ್ಞಾನವನ್ನು ಕೇಳುವುದು ಬಹಳ ವಿರಳ. ಬಡವರಂತೂ ಬಾಬಾ ಇದೆಲ್ಲವೂ ತಮ್ಮದಾಗಿದೆ ಎಂದು ಕೂಡಲೇ ಹೇಳಿ ಬಿಡುತ್ತಾರೆ ಮತ್ತೆ ಅವರು ಸೇವೆಯನ್ನೂ ಮಾಡಬೇಕಾಗಿದೆ. ಪಾವನರಾಗುವುದಕ್ಕಾಗಿ ನೆನಪೂ ಬೇಕು, ಇಲ್ಲದಿದ್ದರೆ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಶಿಕ್ಷೆಯನ್ನು ಅನುಭವಿಸಿದರೆ ಪದವಿಯೂ ಕಡಿಮೆಯಾಗುವುದು, ಯಾರು ನೆನಪು ಮಾಡುವುದಿಲ್ಲವೋ ಅವರು ಶಿಕ್ಷೆಯನ್ನು ಅನುಭವಿಸುತ್ತಾರೆ. ಜ್ಞಾನವನ್ನು ಎಷ್ಟಾದರೂ ತಿಳಿದುಕೊಳ್ಳಲಿ ಅದರಿಂದ ವಿಕರ್ಮಗಳು ವಿನಾಶವಾಗುವುದಿಲ್ಲ. ಪೆಟ್ಟು ತಿಂದಮೇಲೆ ಅಲ್ಪಸ್ವಲ್ಪ ಪದವಿಯನ್ನು ಪಡೆಯುವುದು ಆಸ್ತಿಯಾಯಿತೇ? ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ತಂದೆಗೆ ಆಜ್ಞಾಕಾರಿಗಳಾಗಬೇಕು. ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಹಾವಾಕ್ಯಗಳನ್ನು ಶಿರಸಾವಹಿಸಿ ಮಾಡಬೇಕು. ಕೃಷ್ಣನ ಆತ್ಮವೂ ಸಹ ಈ ಸಮಯದಲ್ಲಿ ಆಸ್ತಿಯನ್ನು ತೆಗೆದುಕೊಳ್ಳುತ್ತಿದೆ. ಈ ಲಕ್ಷ್ಮೀ-ನಾರಾಯಣರ ಬಹಳ ಜನ್ಮಗಳ ಅಂತಿಮದಲ್ಲಿ ನಾನು ಪುನಃ ಅವರಿಗೆ ಓದಿಸಿ ಆಸ್ತಿಯನ್ನು ಕೊಡುತ್ತೇನೆ. ನಿಮ್ಮಲ್ಲಿಯೂ ರಾಜಕುಮಾರ-ಕುಮಾರಿಯರಾಗುವವರಿದ್ದೀರಲ್ಲವೆ. ರಾಯಲ್ ಮನೆತನದವರ ಚಲನೆಯು ಬಹಳ ತಾಳ್ಮೆಯಿಂದ ಕೂಡಿರುತ್ತದೆ, ಗುಪ್ತ ನಶೆಯಿರುತ್ತದೆ. ತಂದೆಯು ಎಷ್ಟು ಸಾಧಾರಣವಾಗಿರುತ್ತಾರೆ, ಅವರಿಗೆ ಗೊತ್ತಿದೆ- ಇನ್ನು ಸ್ವಲ್ಪವೇ ಸಮಯವಿದೆ. ನಾನು ಹೋಗಿ ವಿಶ್ವ ಮಹಾರಾಜ ಆಗಬೇಕಾಗಿದೆ, ಇವರೂ ಸಹ ಪತಿತನಾಗಿದ್ದರು, ಇವರು ತಂದೆಯ ರಥವಾಗಿದ್ದಾರೆ ಆದ್ದರಿಂದ ಇಲ್ಲಿ ಗದ್ದುಗೆಯ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ತಂದೆಯು ಎಲ್ಲಿ ಕುಳಿತುಕೊಳ್ಳುವುದು! ಇವರೂ ಸಹ ನಿಮ್ಮ ಹಾಗೆಯೇ ವಿದ್ಯಾರ್ಥಿಯಾಗಿದ್ದಾರೆ, ಓದುತ್ತಾರೆ. ಬಹಳ ಮಂದಿ ಮಕ್ಕಳು ತಂದೆಯನ್ನು ಅರಿತುಕೊಂಡಿಲ್ಲ. ತಂದೆಯ ಜೊತೆ ಧರ್ಮರಾಜನೂ ಇದ್ದಾರೆ. ತಂದೆಯು ಹೇಳುತ್ತಾರೆ - ನನ್ನ ಆಜ್ಞೆಯನ್ನು ಪಾಲಿಸಲಿಲ್ಲ, ನನ್ನ ನಿಂದನೆ ಮಾಡಿದಿರೆಂದರೆ ಧರ್ಮರಾಜನು ಬಹಳ ಶಿಕ್ಷೆಗಳನ್ನು ಕೊಡುವರು. ಡೈರೆಕ್ಟ್ ನನ್ನ ಅಥವಾ ನನ್ನ ಮಕ್ಕಳಿಗೆ ನೀವು ಉಲ್ಲಂಘನೆ ಮಾಡುತ್ತೀರಿ ಎಂದರ್ಥ. ತಂದೆಗೆ ಇವರೊಬ್ಬರೇ ಬಹಳ ಅನನ್ಯ ಮಗುವಾಗಿದ್ದಾರೆ. ಪ್ರೀತಿಯಂತೂ ಇದೆಯಲ್ಲವೆ, ಇವರಿಗೆ ನಿಂದನೆ ಮಾಡುತ್ತೀರೆಂದರೆ ಎಷ್ಟೊಂದು ಶಿಕ್ಷೆಗಳನ್ನು ಅನುಭವಿಸಬೇಕಾಗುವುದು! ಸ್ವಲ್ಪ ಆಪತ್ತುಗಳು ಬರಲಿ ಆಗ ನೋಡಿ, ಎಷ್ಟು ಮಂದಿ ಓಡಿ ಬರುತ್ತಾರೆ. ನೀವೆಲ್ಲರೂ ಓಡಿ ಬಂದಿದ್ದೀರಲ್ಲವೆ. ಇವರು ಯಾವುದೇ ಜಾದು ಇತ್ಯಾದಿಗಳನ್ನು ಮಾಡಲಿಲ್ಲ, ಜಾದೂಗಾರನು ಶಿವ ತಂದೆಯಾಗಿದ್ದಾರೆ. ಇವರಲ್ಲಿ ಶಿವ ತಂದೆಯು ಬರುತ್ತಾರೆ ಎಂಬುದೂ ಸಹ ಅನೇಕರಿಗೆ ಗಮನವಿರುವುದಿಲ್ಲ. ಶಿವ ತಂದೆಯ ಮುಂದೆ ನಾವು ಏನಾದರೂ ಉಲ್ಟಾ ಮಾಡಿ ಬಿಟ್ಟರೆ ಇವರು ಅಯೋಗ್ಯ ಮಗುವೆಂದು ತಂದೆಯು ಹೇಳುವರು. ಇವರಲ್ಲಿ ಡಬಲ್ ಇದ್ದಾರಲ್ಲವೆ ಆದ್ದರಿಂದ ಪತ್ರದಲ್ಲ��� ಬಾಪ್ದಾದಾ ಎಂದು ಬರೆಯುತ್ತಾರೆ ಆದರೆ ಬಾಪ್ದಾದಾ ಹೇಗೆ ಒಟ್ಟಿಗೆ ಇದ್ದಾರೆ ಎಂಬುದನ್ನೂ ಸಹ ಮಕ್ಕಳು ತಿಳಿದುಕೊಳ್ಳುವುದಿಲ್ಲ. ತಂದೆಯು ದಾದಾರವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ತಾವಾಗಿಯೇ ಮಾತನಾಡಿಸಬೇಕು - ನೀವು ತಿಳಿದುಕೊಂಡಿದ್ದೀರಾ - ಬಾಪ್ದಾದಾ ಯಾರು ಎಂದು. ಭಲೆ ಯಾರಾದರೂ ನೀವು ಯಾರಿಗೆ ಬಾಪ್ದಾದಾ ಎಂದು ಹೇಳುತ್ತೀರಿ ಎಂದು ಕೇಳಿದರೆ ಬಾಪ್ದಾದಾ ಎಂದು ಒಬ್ಬರಿಗೆ ಹೆಸರಿರಲು ಸಾಧ್ಯವಿಲ್ಲ ಆದ್ದರಿಂದ ಮಕ್ಕಳು ಯುಕ್ತಿಯಿಂದ ತಿಳಿಸಬೇಕು. ಯಾವಾಗ ನೀವು ಅವರಿಗೆ ತಿಳಿಸುವಿರೋ ಆಗಲೇ ಶಿವ ತಂದೆಯು ದಾದಾರವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ಈಗ ವಿನಾಶವಾಗಲಿದೆ ಎಂಬುದು ಅವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ಅವರಿಂದ ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ಈಗ ತಾವು ಕಲಿಯಿರಿ, ಅರ್ಧಕಲ್ಪ ಯಾವ ತಂದೆಯನ್ನು ಕರೆದೆವೋ ಆ ತಂದೆಯು ಜ್ಞಾನವನ್ನು ಕೊಡಲು ಬಂದಿದ್ದಾರೆ ಎಂದು ತಿಳಿಸಿರಿ, ಆಗಲೂ ಸಹ ನಮಗೆ ತಿಳಿದುಕೊಳ್ಳಲು ಬಿಡುವಿಲ್ಲವೆಂದು ಹೇಳುತ್ತಾರೆ. ಆಗ ತಾವು ದೇವಿ-ದೇವತಾ ಧರ್ಮದವರಲ್ಲ, ಸ್ವರ್ಗದ ಸುಖವು ನಿಮ್ಮ ಅದೃಷ್ಟದಲ್ಲಿ ಇಲ್ಲವೆಂದು ಹೇಳಿರಿ ಬಾಕಿ ಇಲ್ಲಿ ತಲೆ ಬಾಗುವಂತಿಲ್ಲ. ಸನ್ಯಾಸಿಗಳ ಮುಂದೆ ಚರಣಗಳಿಗೆ ತಲೆ ಬಾಗುತ್ತಾರೆ. ಇಲ್ಲಿ ತಂದೆಯಂತೂ ಗುಪ್ತವಾಗಿದ್ದಾರಲ್ಲವೆ. ಮುಂದೆ ಹೋದಂತೆ ಬಹಳ ಪ್ರಭಾವ ಬೀರುವುದು, ಆ ಸಮಯದಲ್ಲಿ ಬಹಳ ಜನಸಂದಣಿ ಆಗುವುದು. ಜನಸಂದಣಿಯಲ್ಲಿ ಎಷ್ಟೊಂದು ಮನುಷ್ಯರು ಸತ್ತುಹೋಗುತ್ತಾರೆ. ಪ್ರಧಾನಮಂತ್ರಿ ಮೊದಲಾದವರ ದರ್ಶನ ಮಾಡುವುದಕ್ಕಾಗಿ ಎಷ್ಟೊಂದು ಸಾಲು ನಿಲ್ಲುತ್ತದೆ. ಇಲ್ಲಿ ಮಕ್ಕಳ ಜೊತೆ ತಂದೆಯೂ ಎಷ್ಟು ಗುಪ್ತವಾಗಿ ಕುಳಿತಿದ್ದಾರೆ. ಇಲ್ಲಿ ಯಾರನ್ನು ನೋಡುತ್ತಾರೆ? ಇವರು ವಜ್ರ ವ್ಯಾಪಾರಿಯಾಗಿದ್ದರು ಎಂದು ಇವರ ಬಗ್ಗೆ ತಿಳಿದುಕೊಂಡಿದ್ದಾರೆ. ಬ್ರಹ್ಮಾರವರ ಮೂಲಕ ಮನುಷ್ಯ ಸೃಷ್ಟಿಯನ್ನು ಹೇಗೆ ರಚಿಸಿದರೆಂದು ಶಾಸ್ತ್ರಗಳಲ್ಲಿಯೂ ಇದೆ. ತಂದೆಯು ತಿಳಿಸುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡಿ ರಚಿಸುತ್ತೇನೆ. ಇದೂ ಸಹ ಬರವಣಿಗೆಯಿದೆ ಆದರೆ ಕಲ್ಲು ಬುದ್ಧಿಯವರಾಗಿರುವ ಕಾರಣ ತಿಳಿದುಕೊಳ್ಳುವುದಿಲ್ಲ. ತಂದೆಯು ಬಂದು ಮಕ್ಕಳನ್ನು ಪತಿತರಿಂದ ಪಾವನರನ್ನಾಗಿ ಮಾಡಿ ವರ್ಗಾವಣೆ ಮಾಡುತ್ತಾರೆ ಬಾಕಿ ಯಾವುದೇ ಹೊಸ ರಚನೆಯನ್ನು ರಚಿಸುವುದಿಲ್ಲ. ಇದು ಪತಿತರನ್ನು ಪಾವನರನ್ನಾಗಿ ಮಾಡುವ ಯುಕ್ತಿಯಾಗಿದೆ. ವಿರಾಟ ರೂಪದ ಚಿತ್ರವು ಅವಶ್ಯವಾಗಿ ಇರಬೇಕು. ಚಿತ್ರವು ದೊಡ್ಡದಾಗಿದ್ದರೆ ತಿಳಿಸುವುದರಲ್ಲಿಯೂ ಸಹಜವಾಗುವುದು. ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರನ್ನಾಗಿ ಮಾಡುವುದು ಸಹಜ ಮಾತೇನಲ್ಲ. ಕೆಲವರಂತೂ ತವೆಯಂತೆ ನೋಡಿ ಹೊರಟು ಹೋಗುತ್ತಾರೆ. ಪ್ರಜೆಗಳಾಗುವುದಿದ್ದರೆ ಅವರ ಬುದ್ಧಿಯಲ್ಲಿ ಅಲ್ಪಸ್ವಲ್ಪವಾದರೂ ಕುಳಿತುಕೊಳ್ಳುವುದು. ನಾವೆ ಬ್ರಾಹ್ಮಣರು, ಬ್ರಾಹ್ಮಣರಿಂದ ದೇವತೆಗಳು. ಇಲ್ಲಿ ಹಮ್ ಸೋ ಸೋ ಹಮ್ನ ಅರ್ಥವನ್ನು ತಂದೆಯು ಎಷ್ಟು ಚೆನ್ನಾಗಿ ತಿಳಿಸಿದ್ದಾರೆ. ಸನ್ಯಾಸಿಗಳು ಆತ್ಮವೇ ಪರಮಾತ್ಮನೆಂದು ಹೇಳುತ್ತಾರೆ. ಇಲ್ಲಿ ನೀವು ತಿಳಿದುಕೊಂಡಿದ್ದೀರಿ, ನಾವು ಆತ್ಮರಾಗಿದ್ದೇವೆ, ನಾವಾತ್ಮರು ಮೊದಲು ಬ್ರಾಹ್ಮಣರು ನಂತರ ದೇವತೆಗಳು ಮತ್ತೆ ನಾವೇ ಕ್ಷತ್ರಿಯರು.... ಆಗುತ್ತೇವೆ. ನಾವು ಎಷ್ಟೊಂದು ವರ್ಣಗಳಲ್ಲಿ ಬರುತ್ತೇವೆ, 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ ಬಾಕಿ ಯಾರು ಕೊನೆಯಲ್ಲಿ ಬರುತ್ತಾರೆಯೋ ಅವರದು ಎಷ್ಟು ಜನ್ಮಗಳಿರಬಹುದು ಎಂಬ ಲೆಕ್ಕವನ್ನು ನೀವು ತೆಗೆಯಬಹುದು. ತಂದೆಗೆ ಪ್ರಿಯವಾದ ಚಿತ್ರಗಳನ್ನು ಮಡಿಸಬೇಕು. ಇಬ್ಬರು ನಾಲ್ಕು ಮಂದಿ ಒಳ್ಳೆಯ ಮಕ್ಕಳು ಚಿತ್ರಗಳನ್ನು ಮಾಡಿಸುವುದರಲ್ಲಿ ಸಹಯೋಗ ನೀಡಬೇಕು. ತಂದೆಯು ಖರ್ಚು ಮಾಡುವುದಕ್ಕಾಗಿ ತಯಾರಿದ್ದಾರೆ ಮತ್ತೆ ತಂದೆಯು ತಾವಾಗಿಯೇ ಹುಂಡಿಯನ್ನು ತುಂಬಿಸುವರು ಆದ್ದರಿಂದ ತಂದೆಯು ಹೇಳುತ್ತಾರೆ- ಮುಖ್ಯ ಚಿತ್ರಗಳನ್ನು ಟ್ರಾನ್ಸ್ಲೈಟ್ನಿಂದ ಮಾಡಿಸಬೇಕು. ಮನುಷ್ಯರು ನೋಡಿ ಖುಷಿ ಪಡುತ್ತಾರೆ, ಇಡೀ ಪ್ರದರ್ಶನಿಯು ಈ ರೀತಿಯಾಗಬೇಕು ಆದರೆ ಮಕ್ಕಳನ್ನು ನಿಲ್ಲಿಸುವುದಕ್ಕಾಗಿ ತಂದೆಯೂ ಪರಿಶ್ರಮ ಪಡಬೇಕಾಗುತ್ತದೆ.
|
3 |
+
ತಂದೆಯ ನೆನಪು ಮುಖ್ಯವಾಗಿದೆ, ನೆನಪಿನಿಂದಲೇ ನೀವು ಪತಿತರಿಂದ ಪಾವನ ಸೃಷ್ಟಿಯ ಮಾಲೀಕರಾಗಿ ಬಿಡುತ್ತೀರಿ ಮತ್ತ್ಯಾವುದೇ ಉಪಾಯವಿಲ್ಲ. ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿರಿ, ಚಕ್ರವನ್ನು ನೆನಪು ಮಾಡಬೇಕು. ನಿಮ್ಮ ಸ್ವಭಾವವು ಬಹಳ ಘನತೆಯಿಂದ ಕೂಡಿರಲಿ. ನಡೆಯುತ್ತಾ-ನಡೆಯುತ್ತಾ ಕೆಲವರನ್ನು ಲೋಭವು, ಕೆಲವರನ್ನು ಮೋಹವು ಹಿಡಿದುಕೊಳ್ಳುತ್ತದೆ. ಇನ್ನೂ ಕೆಲವರು ತಮಗೆ ಪ್ರಿಯವಾದ ವಸ್ತುಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅದು ಸಿಗದಿದ್ದರೆ ರೋಗಿಯಾಗಿ ಬಿಡುತ್ತಾರೆ. ಆದ್ದರಿಂದ ಯಾವುದೇ ಹವ್ಯಾಸಾವನ್ನು ಇಟ್ಟುಕೊಳ್ಳಬಾರದು. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ತಮ್ಮ ಕಲ್ಯಾಣ ಮಾಡಿಕೊಳ್ಳುವುದಕ್ಕಾಗಿ ತಂದೆಯ ಆಜ್ಞೆಯನ್ನು ಪಾಲಿಸಬೇಕಾಗಿದೆ. ಬಾಪ್ದಾದಾರವರಿಗೆ ಎಂದೂ ಉಲ್ಲಂಘನೆ ಮಾಡಬಾರದು. ಯಾವುದೇ ಲೋಭ, ಮೋಹದ ಹವ್ಯಾಸವನ್ನು ಇಟ್ಟುಕೊಳ್ಳಬಾರದು.
|
7 |
+
2. ತಮ್ಮ ಸ್ವಭಾವವನ್ನು ಬಹಳ ರಾಯಲ್ ಮಾಡಿಕೊಳ್ಳಬೇಕಾಗಿದೆ. ಬೆಳಗ್ಗೆ-ಬೆಳಗ್ಗೆ ಅಮೃತವೇಳೆ ಎದ್ದು ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ.
|
BKMurli/BKMurli/page_1024.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ತಂದೆಯ ನೆನಪಿನಲ್ಲಂತು ಮಕ್ಕಳು ತಾವಾಗಿಯೇ ಇರುತ್ತೀರಿ. ಗಳಿಗೆ-ಗಳಿಗೆಗೆ ಹೇಳುವ ಅವಶ್ಯಕತೆಯೂ ಇರುವುದಿಲ್ಲ. ತಂದೆಯ ಡೈರೆಕ್ಷನ್ ಆಗಿದೆ - ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನು ನೆನಪು ಮಾಡುತ್ತೀರೆಂದರೆ, ಯಾವ ರಾವಣ ನಿಮ್ಮನ್ನು ಪತಿತರನ್ನಾಗಿ ಮಾಡಿಬಿಟ್ಟಿದ್ದಾನೆ, ಅದರ ಮೇಲೆ ವಿಜಯವನ್ನು ಪಡೆಯುತ್ತೀರಿ. ನಿಮಗೆ ಯಾವುದೇ ಅಸ್ತ್ರ ಮುಂತಾದವುಗಳನ್ನು ಕೊಡುವುದಿಲ್ಲ, ಕೇವಲ ಯೋಗಬಲದಿಂದ ನೀವು ರಾವಣನ ಮೇಲೆ ವಿಜಯವನ್ನು ಪಡೆಯುತ್ತೀರಿ. ಅವಶ್ಯವಾಗಿ ವಿಜಯ ಪಡೆಯಬೇಕು ಮತ್ತು ಸಂಗಮದಲ್ಲಿಯೇ ಪಡೆಯುತ್ತೀರಿ, ಆಗ ರಾವಣ ರಾಜ್ಯವು ಸಮಾಪ್ತಿಯಾಗಿ ರಾಮ ರಾಜ್ಯದ ಸ್ಥಾಪನೆಯಾಗಬೇಕು. ತಂದೆಯಂತು ಹಿಂಸೆಯನ್ನೆಂದಿಗೂ ಕಲಿಸಲು ಸಾಧ್ಯವಿಲ್ಲ. ದೇವತೆಗಳಂತು ಅಹಿಂಸಾ ಪರಮೋಧರ್ಮಿ ಆಗಿಯೇ ಇದ್ದಾರೆ. ಅಲ್ಲಿ ಕಾಮ ಕಟಾರಿಯ ಹಿಂಸೆ ಆಗುವುದಿಲ್ಲವೆಂದು ಪ್ರಪಂಚದವರು ತಿಳಿದುಕೊಂಡಿಲ್ಲ. ಯಾರು ಕಲ್ಪದ ಮೊದಲು ನಿರ್ವಿಕಾರಿಗಳಾಗಿದ್ದರು, ಅವರೇ ನಿಮ್ಮ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ. ಈಗ ನೀವು ಯುದ್ಧದ ಮೈದಾನದಲ್ಲಿದ್ದೀರಿ. ಗಾಯನವಿದೆ - ಶಿವಶಕ್ತಿ ಸೇನೆ ಎಂದು. ನೀವು ಗುಪ್ತ ಯೋಧರಾಗಿದ್ದೀರಿ, ಪ್ರತಿಯೊಬ್ಬರೂ ತನಗಾಗಿ ಮಾಡುತ್ತಿದ್ದೀರಿ. ಮಾಯಾಜೀತ್ ಜಗತ್ಜೀತ್ ಆಗಬೇಕಾಗಿದೆ. ನೀವು ತಮಗಾಗಿ ಮಾಡುತ್ತೀರಿ ಅಂದರೆ ತಮ್ಮ ಭಾರತ ದೇಶಕ್ಕಾಗಿ ಮಾಡುತ್ತೀರಿ. ಇದರಲ್ಲಿ ಯಾರು ಚೆನ್ನಾಗಿ ಪುರುಷಾರ್ಥ ಮಾಡುತ್ತಾಎರ್ ಅವರು ಪಡೆಯುತ್ತಾರೆ. ಯಾರು 5 ವಿಕಾರಗಳ ಮೇಲೆ ವಿಜಯವನ್ನು ಪಡೆಯುತ್ತಾರೆ ಅವರೇ ಜಗತ್ಜೀತರಾಗುತ್ತಾರೆ, ಮತ್ತ್ಯಾವುದೇ ವಸ್ತುವಿನ ಮೇಲೆ ವಿಜಯ ಪಡೆಯುವುದಲ್ಲ. ನಿಮ್ಮದಿರುವುದೇ ರಾವಣ ರಾಜ್ಯದ ಮೇಲೆ ವಿಜಯ ಪಡೆಯುವುದು ಅರ್ಥಾತ್ ದೈವೀ ಗುಣಗಳನ್ನು ಧಾರಣೆ ಮಾಡುವುದು. ದೈವೀ ಗುಣಗಳ ಧಾರಣೆ ಮಾಡದೇ ಸತ್ಯಯುಗದಲ್ಲಿ ಹೋಗಲು ಸಾಧ್ಯವಿಲ್ಲ. ಅಂದಮೇಳೆ ತಮ್ಮೊಂದಿಗೆ ಕೇಳಿಕೊಳ್ಳಿ - ನಾವು ಎಲ್ಲಿಯವರಗೆ ದೈವೀ ಗುಣಗಳ ಧಾರಣೆ ಮಾಡಿದ್ದೇವೆ? ದೈವೀ ಗುಣಗಳ ಧಾರಣೆ ಮಾಡುವುದು ಎಂದರೆ ರಾವಣನ ಮೇಲೆ ವಿಜಯ ಪಡೆಯುವುದು. ರಾಮ ರಾಜ್ಯವಿತ್ತು ಎಂದು ಹೇಳಲಾಗುತ್ತದೆ ಅಂದಮೇಲೆ ಒಬ್ಬ ರಾಮನಂತು ರಾಜ್ಯಾಡಳಿತ ಮಾಡಿರುವುದಿಲ್ಲ? ಪ್ರಜೆಗಳಂತು ಇರುತ್ತಾರೆ. ಇಲ್ಲಿ ರಾಜ, ರಾಣಿ ಹಾಗೂ ಪ್ರಜೆಗಳೆಲ್ಲರೂ ರಾವಣನ ಮೇಲೆ ವಿಜಯವನ್ನು ಪಡೆಯುತ್ತಿದ್ದಾರೆ. ದೈವೀ ಗುಣಗಳನ್ನು ಧಾರಣೆ ಮಾಡುತ್ತಿದ್ದಾರೆ. ದೈವೀ ಗುಣಗಳಲ್ಲಿ ಆಹಾರ-ಪಾನೀಯ, ಮಾತನಾಡುವುದು - ಎಲ್ಲವೂ ಶುದ್ಧ ಪವಿತ್ರವಾಗುತ್ತದೆ. ಪ್ರತಿಯೊಂದು ಮಾತಿನಲ್ಲಿ ಸತ್ಯವನ್ನು ಹೇಳಬೇಕಾಗಿದೆ. ತಂದೆಯ ಸತ್ಯವೇ ಆಗಿದ್ದಾರೆ ಅಂದಾಗ ಇಂತಹ ತಂದೆಯ ಜೊತೆ ಎಷ್ಟು ಸತ್ಯವಾಗಿರಬೇಕು! ಒಂದುವೇಳೆ ಸತ್ಯವಾಗಿರುವುದಿಲ್ಲವೆಂದರೆ ಎಷ್ಟು ದುರ್ಗತಿಯಾಗುತ್ತದೆ! ಗತಿಯಂತು ಶ್ರೇಷ್ಠವಾಗಿರುವುದನ್ನು ���ಡೆಯಬೇಕಾಗಿದೆ. ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿ ಆಗಬೇಕಾಗಿದೆ. ಹೇಳಲಾಗುತ್ತದೆ - ನಿಮ್ಮ ಗತಿ ಮತ ನೀವೇ ತಿಳಿದಿದ್ದೀರಿ ಎಂದು. ತಂದೆಯು ಯಾವ ಮತವನ್ನು ಕೊಡುತ್ತಾರೆ, ಅದರಿಂದ ಎಂತಹ ಶ್ರೇಷ್ಠ ಗತಿಯಾಗುತ್ತದೆ. ಸರ್ವ ಶ್ರೇಷ್ಠ ತಂದೆಯು ಸರ್ವ ಶ್ರೇಷ್ಠ ಗತಿಯನ್ನು ಪಾಪ್ತಿ ಮಾಡಿಸುತ್ತಾರೆ ಅಂದಮೇಲೆ ಈಗ ಶ್ರೀಮತದಂತೆ ನಡೆದು ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಜನ್ಮ-ಜನ್ಮಾಂತರದ ಪಾಪವನ್ನು ಯೋಗಬಲವಿಲ್ಲದೆ ತುಂಡಾಗುವುದಿಲ್ಲ ಇದಕ್ಕಾಗಿ ನೆನಪಿನ ಯಾತ್ರೆಯು ಬಹಳ ಚೆನ್ನಾಗಿ ಮಾಡಬೇಕು. ಅಮೃತವೇಳೆ ನೆನಪು ಚೆನ್ನಾಗಿರುತ್ತದೆ. ಆ ಸಮಯದ ವಾಯುಮಂಡಲವು ಚೆನ್ನಾಗಿರುತ್ತದೆ. ದಿನದಲ್ಲಿ ಭಲೆ ಎಷ್ಟೇ ಸಮಯ ಕುಳಿತುಕೊಳ್ಳಿ ಆದರೆ ಅಮೃತವೇಳೆಯಂತಹ ಸಮಯವಿಲ್ಲ. ತಮ್ಮ ಮಾತುಗಳು ಗುಪ್ತವಾಗಿದೆ. ಆಂಗ್ಲಭಾಷೆಯಲ್ಲಿ ಹೇಳುತ್ತಾರೆ - “ವಿ ಆರ್ ಅಟ್ ವಾರ್” (ನಾವು ಯುದ್ಧದ ಮೈದಾನದಲ್ಲಿದ್ದೇವೆ) ನಮ್ಮ ಯುದ್ಧ ರಾವಣನೊಂದಿಗೆ ಇದೆ. ರಾವಣನು ನಂಬರ್ವನ್ ಶತ್ರುವಾಗಿದ್ದಾನೆ. ಶ್ರೀಮತದಿಂದ ರಾಮನ ಸಂಪ್ರದಾಯದವರು ರಾವಣ ಸಂಪ್ರದಾಯದವರ ಮೇಲೆ ವಿಜಯ ಪಡೆದರು. ತಂದೆಯು ಸರ್ವಶಕ್ತಿವಂತನಾಗಿದ್ದಾರಲ್ಲವೆ. ಪ್ರಪಂಚವಂತು ಪಾಪ! ಈ ಸಮಯದಲ್ಲಿ ಘೋರ ಅಂಧಕಾರದಲ್ಲಿದೆ. ನಾವು ಸೋತಿದ್ದೇವೆಂದರೆ ಅವರಿಗೆ ತಿಳಿದೇ ಇಲ್ಲ. ಮಾಯೆಯೊಂದಿಗೆ ಸೋಲುವುದೇ ಸೋಲು, ಮಾಯೆಯೆಂದು ಯಾವುದಕ್ಕೆ ಹೇಳಲಾಗುತ್ತದೆ- ಇದೂ ಸಹ ಯಾರೂ ತಿಳಿದಿಲ್ಲ. ಇಡೀ ಲಂಕೆಯ ಮೇಲೆ ರಾವಣನ ರಾಜ್ಯವಿತ್ತು. ಶಾಸ್ತ್ರಗಳಲ್ಲಿ ಭಕ್ತಿಮಾರ್ಗದಲ್ಲಿ ಎಷ್ಟೊಂದು ದಂತಕಥೆಗಳನ್ನು ಬರೆದಿದ್ದಾರೆ, ಅದನ್ನು ಜನ್ಮ-ಜನ್ಮಾಂತರದಿಂದ ಓದಿದ್ದೀರಿ. ಈಗ ಹೇಳುತ್ತಾರೆ- ಶಾಸ್ತ್ರಗಳನ್ನಂತು ಅವಶ್ಯವಾಗಿ ಓದಬೇಕು ಎಂದು. ಯಾರು ಓದುವುದಿಲ್ಲ ಅವರಿಗೆ ನಾಸ್ತಿಕರೆಂದು ಹೇಳಲಾಗುತ್ತದೆ ಮತ್ತು ತಂದೆಯು ತಿಳಿಸುತ್ತಾರೆ- ಶಾಸ್ತ್ರಗಳನ್ನು ಓದುತ್ತಾ-ಓದುತ್ತಾ ಎಲ್ಲರೂ ನಾಸ್ತಿಕರಾಗಿ ಬಿಟ್ಟಿದ್ದಾರೆ. ಈ ಮಾತುಗಳನ್ನು ಮಕ್ಕಳಿಗೆ ಚೆನ್ನಾಗಿ ತಿಳಿಸಬೇಕು- ಭಾರತವು ಯಾವಾಗ ಸತೋಪ್ರಧಾನವಿತ್ತು ಆಗ ಅದನ್ನು ಸ್ವರ್ಗವೆಂದು ಹೇಳಲಾಗುತ್ತಿತ್ತು. ಅದೇ ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತ-ತಮೋಪ್ರಧಾನರಾದರು. ಈಗ ಮತ್ತೆ ಪಾವನರಾಗುವುದು ಹೇಗೆ! ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದ್ದೇ ಆದರೆ ಸತೋಪ್ರಧಾನ ಪಾವನರಾಗಿ ಬಿಡುತ್ತೀರಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಯಾರನ್ನೂ ಗುರುಗಳನ್ನಾಗಿ ಮಾಡಿಕೊಳ್ಳಬೇಡಿ. ಹೇಳಲಾಗುತ್ತದೆ- ಗುರುವಿಲ್ಲದೆ ಘೋರ ಅಂಧಕಾರ. ಬಹಳಷ್ಟು ಮಂದಿ ಗುರುಗಳಿದ್ದಾರೆ ಆದರೆ ಎಲ್ಲರೂ ಅಂಧಕಾರದಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ- ಯಾವಾಗ ಜ್ಞಾನಸೂರ್ಯನು ಬರುವನು ಆಗ ಘೋರ ಅಂಧಕಾರವು ದೂರವಾಗುವುದು. ಭಲೆ ಸನ್ಯಾಸಿಗಳು ಪ���ವನರಾಗುತ್ತಾರೆ ಆದರೆ ಜನ್ಮವಂತು ವಿಕಾರದಿಂದಲೇ ತೆಗೆದುಕೊಳ್ಳುತ್ತಾರಲ್ಲವೆ. ದೇವಿ-ದೇವತೆಗಳಂತು ವಿಕಾರದಿಂದ ಜನಿಸುವುದಿಲ್ಲ. ಇಲ್ಲಿ ಎಲ್ಲರ ಶರೀರ ಕೊಳಕಾಗಿದೆ. ತಂದೆಯು ಈ ರೀತಿ ಕೊಳಕಾಗಿರುವ ವಸ್ತ್ರಗಳನ್ನು ಸ್ವಚ್ಛ ಮಾಡುತ್ತಾರೆ. ಆತ್ಮವು ಪವಿತ್ರವಾಯಿತೆಂದರೆ ಶರೀರವು ಚೆನ್ನಾಗಿರುವುದು ಸಿಗುತ್ತದೆ. ಇದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಪರಿಶೀಲನೆಯನ್ನು ಇಡಬೇಕು- ನನ್ನಿಂದ ಯಾವುದೇ ಕೆಟ್ಟ ಕೆಲಸವಂತು ಆಗುತ್ತಿಲ್ಲವೇ. ಈಶ್ವರೀಯ ಕಾಯಿದೆಯು ಕಠಿಣವಾಗಿದೆ. ಯಾವುದೇ ಕೆಟ್ಟ ಕೆಲಸ ಮಾಡುತ್ತೀರೆಂದರೆ ಅದರ ಶಿಕ್ಷೆಯು ಬಹಳ ಕಠಿಣವಾಗಿದೆ. ಈಗ ಅಂತಿಮ ಸಮಯವಾಗಿದೆ, ಎಲ್ಲಾ ಲೆಕ್ಕಾಚಾರಗಳನ್ನು ಯೋಗಬಲದಿಂದ ಸಮಾಪ್ತಿ ಮಾಡಬೇಕಾಗಿದೆ. ಒಂದುವೇಳೆ ಸಮಾಪ್ತಿ ಮಾಡಲಿಲ್ಲವೆಂದರೆ ತುಂಡು ರೊಟ್ಟಿ (ಚಿಕ್ಕ ಪದವಿ) ಯನ್ನು ತಿನ್ನಬೇಕಾಗುತ್ತದೆ. ನಂತರ ಮಾನಿ ಮತ್ತು ಮೋಚ್ರಾ (ಶಿಕ್ಷೆಯನ್ನು ಅನುಭವಿಸಿ ಮತ್ತೆ ಪದವಿ ಭ್ರಷ್ಟವಾಗುವುದು) ಎಂದು ಹೇಳಲಾಗುತ್ತದೆ. ಮಾನಿ(ತುಂಡು ರೊಟ್ಟಿ)ಯಂತು ಎಲ್ಲರಿಗೂ ಸಿಗುತ್ತದೆ. ಮುಕ್ತಿ ಮತ್ತು ಜೀವನ್ಮುಕ್ತಿಯ ರೊಟ್ಟಿಯಂತು ಎಲ್ಲರಿಗೂ ಕೊಡುತ್ತಾರೆ. ಕೆಲವರು ಪಾಸ್-ವಿತ್-ಆನರ್, ಕೆಲವರಿಗೆ ಶಿಕ್ಷೆ ಸಿಗುತ್ತದೆ ನಂತರ ಅಪಮಾನದಿಂದ ಸ್ವಲ್ಪ ತುಂಡು ರೊಟ್ಟಿ ಸಿಗುತ್ತದೆ. ಸಿಂಹಾಸನದಲ್ಲಂತು ಕುಳಿತುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕೆಟ್ಟ ಕೆಲಸ ಮಾಡಿದರೆಂದರೆ ಅಪಮಾನವಾಗುತ್ತದೆ, ಅದೂ ತಂದೆಯ ಮುಂದೆ. ಶಿವ ತಂದೆಯು ಕುಳಿತಿದ್ದಾರಲ್ಲವೆ. ನಿಮಗೆ ಸಾಕ್ಷಾತ್ಕಾರ ಮಾಡಿಸುತ್ತೇವೆ- ನಾವು ಇದರಲ್ಲಿದ್ದೆವು, ನಿಮಗೆ ಎಷ್ಟೊಂದು ತಿಳಿಸುತ್ತಿದ್ದೆವು. ಈಗ ನಾನು ಸಂಪೂರ್ಣ(ಬ್ರಹ್ಮ)ನಲ್ಲಿ ಇದ್ದೇನೆ. ನೀವು ಮಕ್ಕಳು ಸಂಪೂರ್ಣ ತಂದೆಯ ಬಳಿ ಹೋಗುತ್ತೀರಿ. ಅವರ ಮೂಲಕ ಶಿವ ತಂದೆಯು ಡೈರೆಕ್ಷನ್ ಮುಂತಾದುದನ್ನು ಕೊಡುತ್ತಾರಲ್ಲವೆ. ತಂದೆಯು ನಿಮಗೆ ಸಾಕ್ಷಾತ್ಕಾರ ಮಾಡಿಸುತ್ತಾರೆ – ದೈವೀ ಗುಣಗಳನ್ನು ಧಾರಣೆ ಮಾಡಿ ಸೇವೆ ಮಾಡಿ, ಯಾರದೇ ನಿಂದನೆಯನ್ನು ಮಾಡಬೇಡಿ ಎಂದು ಇವರಲ್ಲಿ ಕುಳಿತು ನಿಮಗೆ ಎಷ್ಟು ಓದಿಸುತ್ತಿದ್ದೆವು, ತಿಳಿಸುತ್ತಿದ್ದೆವು, ಆದರೂ ನೀವು ಇದೇ ಕೆಲಸ ಮಾಡಿದಿರಿ, ಈಗ ಶಿಕ್ಷೆಯನ್ನು ಅನುಭವಿಸಿ. ಎಷ್ಟೆಷ್ಟು ಪಾಪ ಮಾಡಿರುತ್ತೀರಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಕೆಲವರು ಬಹಳ ಶಿಕ್ಷೆಯನ್ನು ಅನುಭವಿಸುತ್ತಾರೆ, ಕೆಲವರು ಕಡಿಮೆ. ಅವರಲ್ಲಿಯೂ ನಂಬರ್ವಾರ್, ಎಷ್ಟು ಸಾಧ್ಯವೊ ಯೋಗಬಲದಿಂದ ವಿಕರ್ಮಗಳನ್ನು ತುಂಡರಿಸುತ್ತಿರಬೇಕು. ಮಕ್ಕಳು ಎಲ್ಲದಕ್ಕಿಂತ ದೊಡ್ಡ ಚಿಂತೆ ಇದನ್ನೇ ಇಟ್ಟುಕೊಳ್ಳಬೇಕು- ನಾವು ಹೇಗೆ ಸಂಪೂರ್ಣ ಅಪ್ಪಟ ಚಿನ್ನವಾಗುವುದು? ಏಳುತ್ತಾ-ಕುಳಿತುಕೊಳ್ಳುತ್ತಾ ಇದೇ ಬುದ್ಧಿಯಲ್ಲಿರಲಿ, ಎಷ್ಟು ನೆನಪು ಮಾಡುತ್ತೀರಿ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಮಾಯೆಯ ಬಿರುಗಾಳಿಗಳ ಚಿಂತೆ ಮಾಡಬಾರ��ು, ಎಷ್ಟು ಸಮಯ ಸಿಗುತ್ತದೆಯೋ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾನು ತಮೋಪ್ರಧಾನದಿಂದ ಸತೋಪ್ರಧಾನನಾಗಬೇಕಾಗಿದೆ ಎಂದು. ತಂದೆಯನ್ನು ನೆನಪು ಮಾಡುತ್ತೀರೆಂದರೆ ಪಾಪಗಳು ತುಂಡಾಗುತ್ತವೆ. ಯಾವುದೇ ಪಾಪ ಮಾಡಬಾರದು. ಇಲ್ಲವೆಂದರೆ ನೂರು ಪಟ್ಟಾಗುವುದು. ಕ್ಷಮೆ ಕೇಳಲಿಲ್ಲವೆಂದರೆ ನಂತರ ವೃದ್ಧಿಯಾಗುತ್ತಾ-ಆಗುತ್ತಾ ಸತ್ಯನಾಶವಾಗಿ ಬಿಡುತ್ತದೆ. ಮಾಯೆಯು ಪಾಪದ ಹಿಂದೆ ಪಾಪವನ್ನು ಮಾಡಿಸುತ್ತಿರುತ್ತದೆ. ಬೇಹದ್ದಿನ ತಂದೆಯೊಂದಿಗೆ ಅವಿನಯಿಗಳಾಗಿ ಬಿಡುತ್ತೀರಿ. ಇದೂ ಸಹ ಅನೇಕರಿಗೆ ಗೊತ್ತಾಗುವುದಿಲ್ಲ. ತಂದೆಯು ಸದಾ ತಿಳಿಸುತ್ತಾರೆ- ಶಿವ ತಂದೆಯು ಮುರುಳಿಯನ್ನು ನುಡಿಸುತ್ತಿದ್ದಾರೆ ಎಂದು ತಿಳಿಯಿರಿ. ಶಿವ ತಂದೆಯು ಡೈರೆಕ್ಷನ್ ಕೊಡುತ್ತಿದ್ದಾರೆಂದರೆ ನೆನಪೂ ಸಹ ಇರಲಿ, ಭಯವೂ ಇರಲಿ. ಬಹಳ ಪಾಪ ಮಾಡುತ್ತಿರುತ್ತೀರಿ, ಸತ್ಯವನ್ನು ತಿಳಿಸಬೇಕು - ಬಾಬಾ ನಮ್ಮಿಂದ ಈ ತಪ್ಪಾಯಿತು. ತಂದೆಯು ತಿಳಿಸುತ್ತಾರೆ - ಪಾಪಗಳ ಹೊರೆಯು ತಲೆಯ ಮೇಲೆ ಬಹಳ ಇದೆ. ಏನೆಲ್ಲಾ ಮಾಡಿದಿರಿ ಅದನ್ನು ತಿಳಿಸಿ. ಸತ್ಯವನ್ನು ತಿಳಿಸುವುದರಿಂದ ಅರ್ಧ ಕಡಿಮೆಯಾಗಿ ಬಿಡುತ್ತದೆ.
|
2 |
+
ತಂದೆಯು ತಿಳಿಸುತ್ತಾರೆ- ಯಾರು ನಂಬರ್ವನ್ ಪುಣ್ಯಾತ್ಮನಾಗುತ್ತಾರೆ, ನಂತರ ಅವರೇ ಪಾಪತ್ಮನೂ ಸಹ ನಂಬರ್ವನ್ನಲ್ಲಿ ಆಗುತ್ತಾರೆ. ಬಾಬಾ ಸ್ವಯಂ ಹೇಳುತ್ತಾರೆ- ನಿಮ್ಮ ಬಹಳ ಜನ್ಮಗಳಲ್ಲಿಯೂ ಅಂತಿಮ ಜನ್ಮವಾಗಿದೆ. ನೀವು ಪುಣ್ಯಾತ್ಮನಾಗಿದ್ದಿರಿ, ಈಗ ಪಾಪಾತ್ಮನಾಗಿದ್ದೀರಿ ನಂತರ ಪುಣ್ಯಾತ್ಮನಾಗಬೇಕಾಗಿದೆ. ತನ್ನ ಕಲ್ಯಾಣವನ್ನಂತು ಮಾಡಿಕೊಳ್ಳಬೇಕಾಗಿದೆ. ಇಲ್ಲಿ ನೀವು ತಲೆ ಮುಂತಾದನ್ನು ಬಾಗಿಸುವ ಅವಶ್ಯಕತೆಯಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಭಲೆ ಇವರೂ (ಬ್ರಹ್ಮ) ವೃದ್ಧನಾಗಿದ್ದಾರೆ, ನಮಸ್ತೆ ಮಾಡುತ್ತಾರೆ. ಮನೆಯಲ್ಲಿ ಮಕ್ಕಳು ಗಳಿಗೆ-ಗಳಿಗೆ ನಮಸ್ತೆ ಮಾಡುತ್ತಾರೆಯೇ! ಒಂದು ಬಾರಿ ನಮಸ್ತೆ ಮಾಡಿದರು ನಂತರ ಪ್ರತ್ಯುತ್ತರದಲ್ಲಿಯೂ ಮಾಡಲಾಗುತ್ತದೆ. ತಂದೆಯು ತಿಳಿಸುತ್ತಾರೆ- ನೀವು ನನ್ನನ್ನು ದೊಡ್ಡವರೆಂದು ತಿಳಿದು ನಮಸ್ತೆ ಮಾಡುತ್ತೀರಿ, ಮತ್ತೆ ನಾನು ನಿಮ್ಮನ್ನು ವಿಶ್ವದ ಮಾಲೀಕರೆಂದು ತಿಳಿದು ನಮಸ್ತೆ ಮಾಡುತ್ತೇನೆ. ಅರ್ಥವಿದೆಯಲ್ಲವೆ. ಮನುಷ್ಯರಂತು ರಾಮ-ರಾಮ ಎಂದು ಹೇಳಿ ಬಿಡುತ್ತಾರೆ ಆದರೆ ಅರ್ಥವನ್ನೇನೂ ತಿಳಿಯುವುದಿಲ್ಲ. ವಾಸ್ತವದಲ್ಲಿ ರಾಮ ಎಂದರೆ ಶಿವ ತಂದೆ. ರಾಮ ಆ ರಘುಪತಿ ಅಲ್ಲ, ಈ ರಾಮ ನಿರಾಕಾರನಾಗಿದ್ದಾರೆ. ಅವರ ಹೆಸರು ಶಿವ ತಂದೆ ಎಂದಾಗಿದೆ. ಶಿವನ ಮುಂದೆ ಈ ರೀತಿ ಯಾರೂ ಹೇಳುವುದಿಲ್ಲ- ನಾನು ರಾಮನ ಪೂಜೆಯನ್ನು ಮಾಡುತ್ತೇನೆ. ಈಗ ತಂದೆಯು ತಿಳಿಸುತ್ತಾರೆ- ನೀವು ಮಂದಿರಗಳಲ್ಲಿ ಹೋಗಿ ತಿಳಿಸಿ, ಇವರೂ ಸಹ ಮನುಷ್ಯನಾಗಿದ್ದರು. ನೀವು ಇವರ ಮುಂದೆ ಹೋಗಿ ಮಹಿಮೆ ಹಾಡುತ್ತೀರಿ- ತಾವು ನಿರ್ವಿಕಾರಿ, ಸರ್ವಗುಣ ಸಂಪನ್ನ, ನಾವು ಪಾಪಿ-ನೀಚರಾಗಿದ್ದೇವೆ. ಈ ತನುವೂ ಸಹ ಮನುಷ್ಯನದಾಗಿದೆ ಮತ್ತು ಆ ತನುವ�� ಸಹ ಮನುಷ್ಯನದಾಗಿದೆ ಆದರೆ ಅವರಲ್ಲಿ ದೈವೀ ಗುಣಗಳಿದೆ ಆದ್ದರಿಂದ ದೇವತೆಯಾಗಿದ್ದಾರೆ. ನೀವು ಸ್ವಯಂ ಹೇಳುತ್ತೀರಿ- ನಮ್ಮಲ್ಲಿ ಆಸುರೀ ಗುಣಗಳಿವೆ ಆದ್ದರಿಂದ ಮಂಗನಾಗಿದ್ದೇವೆ. ಚಹರೆಯಂತು ಇಬ್ಬರದೂ ಒಂದೇ ಆಗಿದೆ. ಲಕ್ಷಣದಲ್ಲಿ ವ್ಯತ್ಯಾಸವಿದೆ. ಭಾರತವಾಸಿಗಳೇ ಕಿರೀಟಧಾರಿಯಾಗಿದ್ದರು, ಈಗ ನೋ ತಾಜ್(ಕಿರೀಟವಿಲ್ಲ), ಬಡವರೂ ಸಹ ಭಾರತವಾಸಿಗಳೇ ಆಗಿದ್ದಾರೆ. ತಂದೆಯು ಸಹ ಭಾರತದಲ್ಲಿಯೇ ಬರುತ್ತಾರೆ, ಎಲ್ಲಿ ಸ್ವರ್ಗವಾಗಬೇಕಾಗಿದೆ ಅಲ್ಲಿ ತಂದೆಯು ಬರುತ್ತಾರಲ್ಲವೆ. ಕಳಿಂಗನ ಅವತಾರವೆಂದು ಹೇಳಲಾಗುತ್ತದೆ, ಎಷ್ಟು ಕಳಂಕಗಳನ್ನು ಹಾಕಲಾಗಿದೆ. ಒಂದುವೇಳೆ ಅನ್ಯ ಧರ್ಮದವರಿಗೆ ಸ್ವಲ್ಪ ತಿಳಿದರೆ ಅವರೂ ಸಹ ಭಾರತವಾಸಿಗಳನ್ನು ಫಾಲೋ ಮಾಡುತ್ತಾರೆ. ಕಲ್ಲು ಬುದ್ಧಿಯವರಾಗಿರುವ ಕಾರಣ ನನ್ನನ್ನೂ ಕಲ್ಲು-ಮಣ್ಣಿನಲ್ಲಿ ಇದ್ದಾರೆಂದು ಹೇಳಿ ಬಿಡುತ್ತಾರೆ. ತಂದೆಯನ್ನು ತಿಳಿದೇ ಇಲ್ಲ- ತಂದೆಯು ಇವರಲ್ಲಿ ಪ್ರವೇಶ ಮಾಡಿ ಭಾರತವನ್ನು ಎಂತಹ ಕಿರೀಟಧಾರಿಯನ್ನಾಗಿ ಮಾಡುತ್ತಾರೆ. ಭಾರತದ ಸೇವೆಯನ್ನು ಎಷ್ಟೊಂದು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ- ನೀವು ನನ್ನ ಗ್ಲಾನಿ ಮಾಡುತ್ತೀರಿ, ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ನೀವು ಎಷ್ಟೊಂದು ಅಪಕಾರ ಮಾಡುತ್ತೀರಿ, ರಾವಣನು ನಿಮ್ಮ ಮತವನ್ನು ಸಾಯಿಸಿ ಬಿಟ್ಟಿದ್ದಾನೆ. ಕೆಟ್ಟ ಗತಿಯಾಗಿ ಬಿಟ್ಟಿದೆ, ಆದ್ದರಿಂದ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ತಿಳುವಳಿಕೆ ಎಷ್ಟು ಸಹಜವಾಗಿ ಸಿಗುತ್ತಿದೆ ಆದರೂ ಕೆಲವು ಮಕ್ಕಳು ಮರೆತು ಹೋಗುತ್ತಾರೆ. ಯೋಗವಿಲ್ಲವೆಂದರೆ ಧಾರಣೆಯೂ ಆಗುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ಬಂಧನದಲ್ಲಿ ಇರುವವರು ಎಲ್ಲರಿಗಿಂತ ಹೆಚ್ಚು ನೆನಪು ಮಾಡುತ್ತಾರೆ. ಶಿವ ತಂದೆಯ ನೆನಪಿನಲ್ಲಿ ಸಹನೆಯನ್ನೂ ಮಾಡುತ್ತಾರೆ. ಭಾರತವಾಸಿಗಳಲ್ಲಿ ಯಾರು ದೇವಿ-ದೇವತೆಗಳು ಆಗುವಂತಹವರಿದ್ದಾರೆ ಅವರೇ ಇಲ್ಲಿಗೆ ಬರುತ್ತಾರೆ. ಆರ್ಯ ಸಮಾಜಿಗಳಂತು ದೇವತೆಗಳ ಮೂರ್ತಿಗಳನ್ನು ಒಪ್ಪುವುದೇ ಇಲ್ಲ. ವೃಕ್ಷದ ಅಂತ್ಯದಲ್ಲಿ ರೆಂಬೆಯಿದೆ, ಹೆಚ್ಚೆಂದರೆ 2-3 ಜನ್ಮಗಳೂ ಸಹ ವಿರಳವಾಗಿ ಪಡೆಯುತ್ತಾರೆ.
|
3 |
+
ಬಹಳ ಮಂದಿ ತಿಳಿಯುತ್ತಾರೆ - ವಿಕಾರವಿಲ್ಲದೆ ಪ್ರಪಂಚವು ಹೇಗೆ ನಡೆಯುವುದು. ಅರೆ! ದೇವತೆಗಳನ್ನು ಸಂಪೂರ್ಣ ನಿರ್ವಿಕಾರಿ ಎಂದು ಹೇಳಲಾಗುತ್ತದೆ ಅಲ್ಲವೆ. ಇದೂ ಸಹ ಯಾರಿಗೂ ತಿಳಿದಿಲ್ಲ- ಅಲ್ಲಿ ವಿಕಾರವಿರುವುದೇ ಇಲ್ಲ ಎಂದು. ಕಲ್ಪದ ಮೊದಲಿನವರು ತಕ್ಷಣ ತಿಳಿದು ಬಿಡುತ್ತಾರೆ. ಗಾಯನವೂ ಇದೆ, ಭಗವಾನುವಾಚ- ಕಾಮ ಮಹಾಶತ್ರುವಾಗಿದೆ. ಆದರೆ ಭಗವಂತನು ಯಾವಾಗ ಹೇಳಿದ್ದರು ಎಂಬುದು ಯಾರೂ ತಿಳಿದಿಲ್ಲ. ಈಗ ನೀವು ಮಕ್ಕಳು ಜಗತ್ಜೀತ್ ಆಗುತ್ತಿದ್ದೀರಿ ಆದರೆ ಶ್ರೇಷ್ಠ ಪದವಿಯನ್ನು ಪಡೆಯಲು ಪರಿಶ್ರಮ ಪಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಗೃಹಸ್ಥ ವ್ಯವಹಾರದಲ್ಲಿರುತ್ತಾ ಕೇವಲ ಬುದ್ಧಿಯೋಗವನ್ನು ನನ್ನೊಂದಿಗೆ ತೊಡಗ��ಸಿ. ಯಾವಾಗ ತಂದೆಯ ಮಕ್ಕಳಾಗಿ ಬಿಟ್ಟಿರಿ ಅಂದಮೇಲೆ ತಂದೆಯೊಂದಿಗೆ ಪ್ರೀತಿಯುಂಟಾಗಬೇಕು. ಉಳಿದಂತೆ ಅನ್ಯರ ಜೊತೆ ಕಾರ್ಯವನ್ನು ಮಾಡಿಸಲು ಪ್ರೀತಿಯನ್ನು ಇಡಬೇಕು. ಬುದ್ಧಿಯಲ್ಲಿ ಈ ವಿಚಾರವನ್ನು ಇಟ್ಟುಕೊಳ್ಳಬೇಕು- ಪಾಪ ಇವರನ್ನು ಸ್ವರ್ಗವಾಸಿಯನ್ನಾಗಿ ಹೇಗೆ ಮಾಡುವುದು. ಸತ್ಯ ಯಾತ್ರೆಯಲ್ಲಿ ನಡೆಯುವ ಯುಕ್ತಿಯನ್ನು ತಿಳಿಸಿ. ಅದು ಶಾರೀರಿಕ ಯಾತ್ರೆಯಾಗಿದೆ, ಅದನ್ನು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ. ಇದೊಂದೇ ನೆನಪಿನ ಯಾತ್ರೆಯಾಗಿದೆ. ಈಗ ನಮ್ಮ 84 ಜನ್ಮಗಳ ಪೂರ್ಣವಾಯಿತು ಮತ್ತೆ ಸತ್ಯಯುಗದ ಇತಿಹಾಸವು ಪುನರಾವರ್ತನೆಯಾಗುವುದು. ಪತಿತರಂತು ಮನೆ(ಪರಮಧಾಮ)ಗೆ ಹೋಗಲು ಸಾಧ್ಯವಿಲ್ಲ. ಪಾವನರನ್ನಾಗಿ ಮಾಡಲು ಪತಿತ-ಪಾವನ ತಂದೆಯು ಬೇಕಾಗಿದೆ. ಭಲೆ ಸನ್ಯಾಸಿಗಳು ಪಾವನರಾಗುತ್ತಾರೆ ಆದರೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರನ್ನು ಕರೆದುಕೊಂಡು ಹೋಗುವವರು ತಂದೆಯೇ ಆಗಿದ್ದಾರೆ. ತಂದೆಯು ಬಂದು ಎಲ್ಲರನ್ನು ರಾವಣನಿಂದ ಬಿಡಿಸಿ ಮುಕ್ತ ಮಾಡಿ ಬಿಡುತ್ತಾರೆ. ಸತ್ಯಯುಗದಲ್ಲಿ ದುಃಖ ಕೊಡುವಂತಹ ಯಾವುದೇ ವಸ್ತುವಿರುವುದಿಲ್ಲ. ಹೆಸರೇ ಸುಖಧಾಮವಾಗಿದೆ. ಇದಾಗಿದೆ ದುಃಖಧಾಮ. ಅದು ಕ್ಷೀರಸಾಗರ, ಇದು ವಿಷದ ಸಾಗರ ಆಗಿದೆ.
|
4 |
+
ಈಗ ನೀವು ತಿಳಿದಿದ್ದೀರಿ - ಸ್ವರ್ಗದಲ್ಲಿ ಎಷ್ಟು ಸುಖದಿಂದ ವಿಶ್ರಾಂತಿಯಿಂದ ಇರುತ್ತೀರಿ. ಕ್ಷೀರ ಸಾಗರದಿಂದ ಹೊರಬಂದು ವಿಷದ ಸಾಗರದಲ್ಲಿ ಹೇಗೆ ಬರುತ್ತಾರೆ, ಇದು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ- ಶ್ರೀಮತದಂತೆ ನಡೆಯಬೇಕು ನಂತರ ಅವರು ಜವಾಬ್ದಾರನಾಗಿದ್ದಾರೆ. ಶ್ರೀಮತವು ಹೇಳುತ್ತದೆ- ಭಲೆ ಹೋಗಿ, ಮಕ್ಕಳನ್ನು ಸಂಭಾಲನೆ ಮಾಡಿ. ಅವರಿಗೆ ಜ್ಞಾನದ ಧ್ವನಿ ಮಾಡುತ್ತೀರೆಂದರೆ ಸ್ವಲ್ಪವಾದರೂ ಕಲ್ಯಾಣವಾಗಿ ಬಿಡುತ್ತದೆ. ಸ್ವರ್ಗದಲ್ಲಂತು ಬಂದು ಬಿಡುತ್ತಾರೆ. ತಂದೆಯು ಬಂದು ನರಕವಾಸಿಗಳಿಂದ ಸ್ವರ್ಗವಾಸಿಯನ್ನಾಗಿ 21 ಜನ್ಮಗಳಿಗಾಗಿ ಮಾಡುತ್ತಾರೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ. ಮನುಷ್ಯರಂತು ಏನನ್ನೂ ತಿಳಿದುಕೊಂಡಿಲ್ಲ. ಇದೂ ಸಹ ಮೊದಲು ತಿಳಿದಿರಲಿಲ್ಲ - ಹೇಗೆ ಇವರ 84 ಜನ್ಮಗಳ ಕಥೆಯಾಗಿದೆ - “ತತ್ತ್ವಂ” ಇವರೂ ಸಹ ರಾಜಯೋಗ ಕಲಿಯುತ್ತಿದ್ದಾರೆ. ನೀವು ರಾಜಋಷಿಯಾಗಿದ್ದೀರಿ. ಅವರು ಹಠಯೋಗಿ ಋಷಿಗಳಾಗಿದ್ದಾರೆ. ನೀವು ಗೃಹಸ್ಥ ವ್ಯವಹಾರದಲ್ಲಿದ್ದು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ. ನೀವೆಲ್ಲರೂ ಶರಣಾಗತಿಯಾಗಲು ಬಂದಿದ್ದೀರಲ್ಲವೆ. ಈಗ ನಾವು ಸ್ವರ್ಗದಲ್ಲಿ ಕುಳಿತಿದ್ದೇವೆಂದು ತಿಳಿಯುತ್ತೀರಿ. ಪ್ರಪಂಚದಲ್ಲಿ ಮಾಯೆಯ ಆಡಂಬರವಿದೆ. ಎಲ್ಲಿಯವರೆಗೆ ನರಕದ ವಿನಾಶವಾಗುವುದಿಲ್ಲ ಅಲ್ಲಿಯವರೆಗೆ ಸ್ವರ್ಗವಾಗಲು ಹೇಗೆ ಸಾಧ್ಯ! ಮಾಯಾವೀ ಮನುಷ್ಯರು ಇದಕ್ಕೇ ಸ್ವರ್ಗವೆಂದು ತಿಳಿದು ಕುಳಿತಿದ್ದಾರೆ. ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ತಂದೆಗೆ ಎಷ್ಟೊಂದು ಪರಿಶ್ರಮವೆನಿಸುತ್ತದೆ. ಪೂರ್ಣ ನರಕವಾಸಿಯಾ��ಿದ್ದಾರೆ. ಸ್ವರ್ಗವಾಸಿಗಳಾಗುವುದೇ ಇಲ. ತಂದೆಯು ಎಷ್ಟೊಂದು ಪ್ರೀತಿಯಿಂದ ತಿಳಿಸುತ್ತಾರೆ. ಒಳ್ಳೆಯದು- ಮಧುರಾತಿ ಮಧುರ ಮಕ್ಕಳು ರಾವಣನ ಮೇಲೆ ವಿಜಯವನ್ನು ಪಡೆಯುವುದರಿಂದಲೇ ನೀವು ಜಗತ್ಜೀತರಾಗುವಿದಿ. ಅದಕ್ಕಾಗಿ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ಮರ್ಯಾದೆ ಹೋಗುವ ರೀತಿ ಯಾವುದೇ ಕಾರ್ಯವನ್ನು ಮಾಡಬೇಡಿ. ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಮಾಯೆಯ ಬಿರುಗಾಳಿಯನ್ನು ಲೆಕ್ಕಿಸದೇ, ಎಷ್ಟು ಸಮಯ ಸಿಗುತ್ತದೋ ಅಷ್ಟು ಸಮಯ ತಂದೆಯನ್ನು ನೆನಪು ಮಾಡಬೇಕಾಗಿದೆ.
|
8 |
+
2. ತಮ್ಮ ಶ್ರೇಷ್ಠ ಗತಿಯನ್ನು ಮಾಡಿಕೊಳ್ಳಲು ಸತ್ಯ ತಂದೆಯ ಜೊತೆ ಸತ್ಯವಾಗಿರಬೇಕು. ಯಾವುದೇ ಮಾತನ್ನು ಮುಚ್ಚಿಡಬಾರದು.
|
BKMurli/BKMurli/page_1025.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಸ್ವಮಾನದಿಂದಲೇ ಸನ್ಮಾನದ ಪ್ರಾಪ್ತಿ
|
2 |
+
ಇಂದು ಬಾಪ್ದಾದಾ ನಾಲ್ಕಾರು ಕಡೆಯ ಸ್ವಮಾನಧಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಸ್ವಮಾನಧಾರಿ ಮಕ್ಕಳಿಗೇ ಇಡೀ ದಿನ ಸನ್ಮಾನವಾಗುತ್ತದೆ. ಒಂದು ಜನ್ಮ ಸ್ವಮಾನಧಾರಿಗಳು, ಇಡೀ ಕಲ್ಪ ಸನ್ಮಾನಧಾರಿಗಳಾಗುವಿರಿ. ತಮ್ಮ ರಾಜ್ಯದಲ್ಲಿಯೂ ರಾಜ್ಯಾಧಿಕಾರಿಗಳಾಗುವ ಕಾರಣ ಪ್ರಜೆಗಳ ಮೂಲಕ ಸನ್ಮಾನವು ಪ್ರಾಪ್ತಿಯಾಗುತ್ತದೆ ಮತ್ತು ಅರ್ಧಕಲ್ಪ ಭಕ್ತರ ಮೂಲಕ ಸನ್ಮಾನ ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಈಗ ತಮ್ಮ ಅಂತಿಮ ಜನ್ಮದಲ್ಲಿಯೇ ಭಕ್ತರ ಮೂಲಕ ದೇವಾತ್ಮ ಅಥವಾ ಶಕ್ತಿಯ ರೂಪದ ಸನ್ಮಾನವನ್ನು ನೋಡುತ್ತಿದ್ದೀರಿ ಮತ್ತು ಕೇಳುತ್ತಿದ್ದೀರಿ. ಎಷ್ಟು ಪ್ರೇಮದಿಂದ ಈಗಲೂ ಸನ್ಮಾನ ನೀಡುತ್ತಿದ್ದಾರೆ! ಇಷ್ಟು ಶ್ರೇಷ್ಠ ಭಾಗ್ಯವನ್ನು ಹೇಗೆ ಪ್ರಾಪ್ತಿ ಮಾಡಿಕೊಂಡಿರಿ! ಮುಖ್ಯವಾಗಿ ಕೇವಲ ಒಂದು ಮಾತಿನ ತ್ಯಾಗದ ಕಾರಣ ಈ ಭಾಗ್ಯವಿದೆ, ಯಾವುದರ ತ್ಯಾಗ ಮಾಡಿದಿರಿ? ದೇಹಾಭಿಮಾನದ ತ್ಯಾಗ ಮಾಡಿದಿರಿ ಏಕೆಂದರೆ ದೇಹಾಭಿಮಾನದ ತ್ಯಾಗವಿಲ್ಲವೆಂದರೆ ಸ್ವಮಾನದಲ್ಲಿ ಸ್ಥಿತರಾಗಲು ಸಾಧ್ಯವೇ ಇಲ್ಲ. ಈ ತ್ಯಾಗಕ್ಕೆ ಪ್ರತಿಫಲವಾಗಿ ಭಾಗ್ಯವಿದಾತ ಭಗವಂತನು ಈ ಭಾಗ್ಯದ ವರದಾನ ನೀಡಿದ್ದಾರೆ. ಎರಡನೇ ಮಾತೇನೆಂದರೆ - ಸ್ವಯಂ ತಂದೆಯು ತಾವು ಮಕ್ಕಳಿಗೆ ಸ್ವಮಾನ ಕೊಟ್ಟಿದ್ದಾರೆ. ತಂದೆಯು ಮಕ್ಕಳನ್ನು ಚರಣಗಳ ದಾಸ ಹಾಗೂ ದಾಸಿಯಾಗುವುದರಿಂದ ಬಿಡಿಸಿ ತನ್ನ ತಲೆಯ ಕಿರೀಟವನ್ನಾಗಿ ಮಾಡಿಕೊಂಡರು. ಎಷ್ಟು ದೊಡ್ಡ ಸ್ವಮಾನವನ್ನು ಕೊಟ್ಟರು! ಇಂತಹ ಸ್ವಮಾನವನ್ನು ಪ್ರಾಪ್ತಿ ಮಾಡಿಕೊಳ್ಳುವ ಮಕ್ಕಳ ಪ್ರತಿ ತಂದೆಯೂ ಸನ್ಮಾನ ಇಡುತ್ತಾರೆ. ತಂದೆಯು ಮಕ್ಕಳನ್ನು ಸದಾ ತನಗಿಂತಲೂ ಮುಂದಿಡುತ್ತಾರೆ, ಸದಾ ಮಕ್ಕಳ ಗುಣಗಾನ ಮಾಡುತ್ತಾರೆ. ಪ್ರತೀದಿನ ಬಹಳ ಪ್ರೀತಿಯಿಂದ ನೆನಪು, ಪ್ರೀತಿಯನ್ನು ಕೊಡಲು ಪರಮಧಾಮದಿಂದ ಸಾಕಾರವತನಕ್ಕೆ ಬರುತ್ತಾರೆ. ಅಲ್ಲಿಂದಲೇ ಕಳುಹಿಸುವುದಿಲ್ಲ ಆದರೆ ಇಲ್ಲಿ ಬಂದು ಕೊಡುತ್ತಾರೆ. ನಿತ್ಯವೂ ನೆನಪು ಪ್ರೀತಿ ಸಿಗುತ್ತಿದೆಯಲ್ಲವೆ, ಇಷ್ಟು ಶ್ರೇಷ್ಠ ಸನ್ಮಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಸ್ವಯಂ ತಂದೆಯೇ ಸನ್ಮಾನ ನೀಡಿದ್ದಾರೆ ಆದ್ದರಿಂದ ಅವಿನಾಶಿ ಸನ್ಮಾನಕ್ಕೆ ಅಧಿಕಾರಿಗಳಾಗಿದ್ದೀರಿ. ಇಂತಹ ಶ್ರೇಷ್ಠತೆಯ ಅನುಭವ ಮಾಡುತ್ತೀರಾ? ಸ್ವಮಾನ ಮತ್ತು ಸನ್ಮಾನ - ಎರಡಕ್ಕೂ ಪರಸ್ಪರ ಸಂಬಂಧವಿದೆ.
|
3 |
+
ಸ್ವಮಾನಧಾರಿಗಳು ತಮಗೆ ಪ್ರಾಪ್ತಿಯಾಗಿರುವ ಸ್ವಮಾನದಲ್ಲಿರುತ್ತಾ ಸ್ವಮಾನದ ಸನ್ಮಾನದಲ್ಲಿಯೂ ಇರುತ್ತಾರೆ ಮತ್ತು ಅನ್ಯರನ್ನೂ ಸನ್ಮಾನದಿಂದ ನೋಡುತ್ತಾರೆ, ಮಾತನಾಡುತ್ತಾರೆ ಹಾಗೂ ಸಂಪರ್ಕದಲ್ಲಿ ಬರುತ್ತಾರೆ. ಸ್ವ-ಸನ್ಮಾನದ ಅರ್ಥವೇ ಆಗಿದೆ - ಸ್ವಯಂಗೆ ಸನ್ಮಾನ ಕೊಡುವುದು. ಹೇಗೆ ತಂದೆಯು ವಿಶ್ವದ ಸರ್ವ ಆತ್ಮರ ಮೂಲಕ ಸನ್ಮಾನವನ್ನು ಪ್ರಾಪ್ತಿ ಮಾಡಿಕೊಳ್ಳುವವರಾಗಿದ್ದಾರೆ, ಪ್ರತಿಯೊಬ್ಬರೂ ಸನ್ಮಾನ ಕೊಡುತ್ತಾರೆ ಆದರೆ ಎಷ್ಟು ತಂದೆಗೆ ಸನ್ಮಾನ ಸಿಗುವುದೋ ಅಷ್ಟೇ ಎಲ್ಲಾ ಮಕ್ಕಳಿಗೂ ಸನ್ಮಾನ ಕೊಡುತ್ತಾರೆ. ಅವರು ಕೊಡುವುದಿಲ್ಲವೆಂದರೆ ಅವರು ದೇವತೆಗಳಾಗುವುದಿಲ್ಲ. ಅನೇಕ ಜನ್ಮಗಳು ದೇವತೆಗಳಾಗುತ್ತೀರಿ ಮತ್ತು ಅನೇಕ ಜನ್ಮಗಳು ದೇವತಾ ರೂಪದ ಪೂಜೆಯು ನಡೆಯುತ್ತದೆ. ಒಂದು ಜನ್ಮ ಬ್ರಾಹ್ಮಣರಾಗುತ್ತೀರಿ ಆದರೆ ಅನೇಕ ಜನ್ಮಗಳು ದೇವತಾ ರೂಪದಲ್ಲಿ ರಾಜ್ಯ ಮಾಡುತ್ತೀರಿ ಹಾಗೂ ಪೂಜ್ಯರಾಗುತ್ತೀರಿ. ದೇವತೆ ಅರ್ಥಾತ್ ಕೊಡುವವರು. ಒಂದುವೇಳೆ ಈ ಜನ್ಮದಲ್ಲಿ ಈ ಸನ್ಮಾನ ಕೊಡಲಿಲ್ಲವೆಂದರೆ ಹೇಗೆ ದೇವತೆಗಳಾಗುವಿರಿ, ಅನೇಕ ಜನ್ಮಗಳಲ್ಲಿ ಸನ್ಮಾನವನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳುವಿರಿ? ಫಾಲೋ ಫಾದರ್, ಸಾಕಾರ ಸ್ವರೂಪದಲ್ಲಿ ಬ್ರಹ್ಮಾ ತಂದೆಯನ್ನು ನೋಡಿದಿರಿ, ಸದಾ ಸ್ವಯಂನ್ನು ವಿಶ್ವ ಸೇವಾಧಾರಿ ಎಂದು ಕರೆಸಿಕೊಂಡರು, ಮಕ್ಕಳ ಸೇವಕನೆಂದು ಕರೆಸಿಕೊಂಡರು ಮತ್ತು ಮಕ್ಕಳನ್ನು ಮಾಲೀಕರನ್ನಾಗಿ ಮಾಡಿದರು. ಸದಾ ಮಾಲೀಕನಿಗೆ ವಂದನೆ ಮಾಡಿದರು. ಸದಾ ಚಿಕ್ಕಮಕ್ಕಳಿಗೂ ಸಹ ಸನ್ಮಾನದ ಸ್ನೇಹ ಕೊಟ್ಟರು. ಭವಿಷ್ಯದಲ್ಲಿ ಆಗಲಿರುವ ವಿಶ್ವ ಕಲ್ಯಾಣಕಾರಿಗಳೆಂಬ ರೂಪದಿಂದ ನೋಡಿದರು, ಕುಮಾರ-ಕುಮಾರಿಯರನ್ನು ಯುವ ಸ್ಥಿತಿಯಲ್ಲಿ ಇರುವವರನ್ನು ಸದಾ ವಿಶ್ವದ ಪ್ರಸಿದ್ಧ ಮಹಾನ್ ಆತ್ಮರಿಗೆ ಛಾಲೆಂಜ್ ಮಾಡುವವರು, ಅಸಂಭವವನ್ನು ಸಂಭವ ಮಾಡುವವರು, ಮಹಾತ್ಮರ ತಲೆಯನ್ನೂ ಬಾಗಿಸುವವರು ಎಂಬ ಪವಿತ್ರ ಆತ್ಮರ ಸನ್ಮಾನದಿಂದ ನೋಡಿದರು. ಸದಾ ತನಗಿಂತಲೂ ಕಮಾಲ್ ಮಾಡುವ ಮಹಾನ್ ಆತ್ಮರೆಂದು ತಿಳಿದು ಸನ್ಮಾನ ನೀಡಿದರಲ್ಲವೆ! ಹಾಗೆಯೇ ವೃದ್ಧರನ್ನೂ ಸಹ ಸದಾ ಅನುಭವಿ ಆತ್ಮರು, ಜೊತೆಗಾರರ ಸನ್ಮಾನದಿಂದ ನೋಡಿದರೆ ಬಂಧನದಲ್ಲಿ ಇರುವವರನ್ನು ನಿರಂತರ ನೆನಪಿನಲ್ಲಿ ನಂಬರ್ವನ್ ಆಗುವ ಸನ್ಮಾನದಿಂದ ನೋಡಿದರು ಆದ್ದರಿಂದ ನಂಬರ್ವನ್ ಅವಿನಾಶಿ ಸನ್ಮಾನಕ್ಕೆ ಅಧಿಕಾರಿಯಾದರು. ರಾಜ್ಯ ಸನ್ಮಾನದಲ್ಲಿಯೂ ನಂಬರ್ವನ್ ವಿಶ್ವ ಮಹಾರಾಜನ್ ಮತ್ತು ಪೂಜ್ಯ ರೂಪದಲ್ಲಿಯೂ ತಂದೆಯ ಪೂಜೆಯ ನಂತರ ಮೊದಲ ಪೂಜ್ಯರು ಲಕ್ಷ್ಮೀ-ನಾರಾಯಣರೇ ಆಗುತ್ತಾರೆ ಅಂದಾಗ ರಾಜ್ಯ ಸನ್ಮಾನ ಮತ್ತು ಪೂಜ್ಯ ಸನ್ಮಾನ ಎರಡರಲ್ಲಿಯೂ ನಂಬರ್ವನ್ ಆಗಿ ಬಿಟ್ಟರು ಏಕೆಂದರೆ ಸರ್ವರಿಗೆ ಸ್ವಮಾನ-ಸನ್ಮಾನ ನೀಡಿದರು. ಸನ್ಮಾನ ಕೊಟ್ಟರೆ ನಾನು ಕೊಡುವೆನು ಎಂದು ಯೋಚಿಸಲಿಲ್ಲ, ಸನ್ಮಾನ ಕೊಡುವವರು ನಿಂಧಕರನ್ನೂ ತಮ್ಮ ಮಿತ್ರರೆಂದು ತಿಳಿದುಕೊಳ್ಳುತ್ತಾರೆ. ಕೇವಲ ಸನ್ಮಾನ ಕೊಡುವವರನ್ನು ತನ್ನವರೆಂದು ತಿಳಿದುಕೊಳ್ಳುವುದಿಲ್ಲ, ನಿಂದನೆ ಮಾಡುವವರನ್ನೂ ಸಹ ತನ್ನವರೆಂದು ತಿಳಿದುಕೊಳ್ಳುತ್ತಾರೆ ಏಕೆಂದರೆ ಇಡೀ ಪ್ರಪಂಚವೇ ತನ್ನ ಪರಿವಾರವಾಗಿದೆ. ಸರ್ವ ಆತ್ಮರಿಗೆ ಬುನಾದಿಯು ತಾವು ಬ್ರಾಹ್ಮಣರಾಗಿದ್ದೀರಿ. ಎಲ್ಲಾ ಶಾಖೆಗಳು ಅರ್ಥಾತ್ ಭಿನ್ನ-ಭಿನ್ನ ಧರ್ಮದ ಆತ್ಮರೂ ಸಹ ಮೂಲ ಬೇರಿನಿಂದಲೇ ಬಂದಿದ್ದಾರೆ ಅಂದಾಗ ಎಲ್ಲರೂ ತಮ್ಮವರಾದರಲ್ಲವೆ. ಇಂತಹ ಸ್ವಮಾನಧಾರಿಗಳು ಸದಾ ತಮ್ಮನ್ನು ಮಾ|| ರಚಯಿತನೆಂದು ��ಿಳಿದು ಸರ್ವರ ಪ್ರತಿ ಸನ್ಮಾನದಾತರಾಗುತ್ತಾರೆ. ಸದಾ ತಮ್ಮನ್ನು ಆದಿ ದೇವ ಬ್ರಹ್ಮನ ಆದಿ ರತ್ನಗಳೇ ಆದಿ ಪಾತ್ರಧಾರಿ ಅತ್ಮರೆಂದು ತಿಳಿಯುತ್ತೀರಾ? ಇಷ್ಟೊಂದು ನಶೆಯಿದೆಯೇ? ಎಲ್ಲರೂ ಕೇಳಿಸಿಕೊಂಡಿರಾ? ಮಕ್ಕಳಿಗೇನು ಸನ್ಮಾನವಿದೆ, ವೃದ್ಧರ ಸನ್ಮಾನವೇನಾಗಿದೆ, ಯುವಕರಿಗೇನಿದೆ? ಆದಿಪಿತ ಬ್ರಹ್ಮನು ನಮ್ಮನ್ನು ಇಷ್ಟು ಸನ್ಮಾನದಿಂದ ನೋಡಿದರು, ಎಷ್ಟೊಂದು ನಶೆಯಿರಬೇಕು! ಸದಾ ಇದನ್ನು ಸ್ಮೃತಿ ಇಟ್ಟುಕೊಳ್ಳಿ- ಆದಿಆತ್ಮನು ಯಾವ ಶ್ರೇಷ್ಠ ದೃಷ್ಠಿಯಿಂದ ನೋಡಿದರೆ ಅದೇರೀತಿ ಶ್ರೇಷ್ಠ ಸ್ಥಿತಿಯ ಸೃಷ್ಟಿಯಲ್ಲಿರುತ್ತೇವೆ. ಹೀಗೆ ತಮ್ಮೊಂದಿಗೆ ಪ್ರತಿಜ್ಞೆ ಮಾಡಿ. ಪ್ರತಿಜ್ಞೆಯಂತೂ ಮಾಡುತ್ತಿರುತ್ತೀರಲ್ಲವೆ? ಮಾತಿನಿಂದಲೂ ಪ್ರತಿಜ್ಞೆ ಮಾಡುತ್ತೀರಿ, ಮನಸ್ಸಿನಿಂದಲೂ ಮಾಡುತ್ತೀರಿ ಮತ್ತು ಬರೆದೂ ಮಾಡುತ್ತೀರಿ ಆದರೂ ಮರೆತು ಹೋಗುತ್ತೀರಿ. ಆದ್ದರಿಂದ ಪ್ರತಿಜ್ಞೆಯ ಲಾಭವನ್ನು ಪಡೆಯುವುದಿಲ್ಲ. ನೆನಪಿಟ್ಟುಕೊಂಡರೂ ಸಹ ಲಾಭವನ್ನು ತೆಗೆದುಕೊಳ್ಳುವರು. ಎಲ್ಲರೂ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ – ಎಷ್ಟು ಬಾರಿ ಪ್ರತಿಜ್ಞೆ ಮಾಡಿದ್ದೇವೆ ಮತ್ತು ಎಷ್ಟು ಬಾರಿ ನಿಭಾಯಿಸಿದ್ದೇವೆ? ನಿಭಾಯಿಸುವುದು ಬರುತ್ತದೆಯೇ ಅಥವಾ ಕೇವಲ ಪ್ರತಿಜ್ಞೆ ಮಾಡುವುದು ಬರುತ್ತದೆಯೇ? ಅಥವಾ ಬದಲಾಗುತ್ತಾ ಇರುತ್ತೀರಾ? ಕೆಲವೊಮ್ಮೆ ಪ್ರತಿಜ್ಞೆ ಮಾಡುವವರು, ಕೆಲವೊಮ್ಮೆ ನಿಭಾಯಿಸುವವರಾಗಿದ್ದೀರಾ?
|
4 |
+
ಟೀಚರ್ಸ್ ಏನು ತಿಳಿದುಕೊಳ್ಳುತ್ತೀರಿ? ನಿಭಾಯಿಸುವವರ ಪಟ್ಟಿಯಲ್ಲಿದ್ದೀರಲ್ಲವೆ. ಶಿಕ್ಷಕಿಯರನ್ನು ಬಾಪ್ದಾದಾ ಸದಾ ಸಹ ಶಿಕ್ಷಕರೆಂದು ಹೇಳುತ್ತಾರೆ. ಅಂದಮೇಲೆ ಜೊತೆಗಾರರ ವಿಶೇಷತೆಯೇನಿರುತ್ತದೆ? ಜೊತೆಗಾರರು ಸಮಾನರಾಗಿರುತ್ತಾರೆ. ತಂದೆಯು ಎಂದಾದರೂ ಬದಲಾಗುತ್ತಾರೆಯೇ? ಶಿಕ್ಷಕಿಯರೂ ಸಹ ಪ್ರತಿಜ್ಞೆ ಮತ್ತು ಅದರ ಲಾಭ ಎರಡರ ಸಮತೋಲನೆಯನ್ನು ಇಟ್ಟುಕೊಳ್ಳುವವರಾಗಿದ್ದಾರೆ. ಪ್ರತಿಜ್ಞೆ ಹೆಚ್ಚು ಲಾಭ ಕಡಿಮೆ - ಈ ಬ್ಯಾಲೆನ್ಸ್ ಇರುವುದಿಲ್ಲ. ಯಾರು ಎರಡನ್ನೂ ಬ್ಯಾಲೆನ್ಸ್ ಇಟ್ಟುಕೊಳ್ಳುವರೋ ಅವರಿಗೆ ವರದಾತ ತಂದೆಯ ಮೂಲಕ ಈ ವರದಾನ ಅಥವಾ ಬ್ಲೆಸ್ಸಿಂಗ್ ಸಿಗುತ್ತದೆ. ಅವರು ಸದಾ ಧೃಡ ಸಂಕಲ್ಪದಿಂದ ಕರ್ಮದಲ್ಲಿ ಸಫಲತಾ ಮೂರ್ತಿಗಳಾಗುತ್ತಾರೆ. ಸಹ ಶಿಕ್ಷಕರದು ಇದೇ ವಿಶೇಷ ಕರ್ಮವಾಗಿದೆ - ಸಂಕಲ್ಪ ಮತ್ತು ಕರ್ಮ ಸಮಾನವಾಗಿರಲಿ. ಸಂಕಲ್ಪ ಶ್ರೇಷ್ಠ ಮತ್ತು ಕರ್ಮ ಸಾಧಾರಣವಾದರೆ ಇದಕ್ಕೆ ಸಮಾನತೆಯೆಂದು ಹೇಳುವುದಿಲ್ಲ. ಆದ್ದರಿಂದ ಸದಾ ಟೀಚರ್ಸ್ ತಮ್ಮನ್ನು “ಸಹ ಶಿಕ್ಷಕರು” ಅರ್ಥಾತ್ “ತಂದೆಯ ಸಮಾನ ಶಿಕ್ಷಕರು” ಎಂದು ತಿಳಿದು ಈ ಸ್ಮೃತಿಯಲ್ಲಿ ಸಮರ್ಥರಾಗಿ ನಡೆಯಿರಿ. ಬಾಪ್ದಾದಾರವರಿಗೆ ಟೀಚರ್ಸ್ನ ಧೈರ್ಯವನ್ನು ನೋಡಿ ಖುಷಿಯಾಗುತ್ತದೆ. ಧೈರ್ಯವನ್ನಿಟ್ಟು ಸೇವೆಗೆ ನಿಮಿತ್ತರಾಗಿ ಬಿಟ್ಟಿದ್ದೀರಲ್ಲವೆ ಆದರೆ ಈಗ ಸದಾ ಈ ಸ್ಲೋಗನ್ ಸದಾ ನೆನಪಿಟ್ಟುಕೊಳ್ಳಿ - “ಧೈರ್ಯಶಾಲಿ ಶಿಕ್ಷಕಿಯರು ತಂದೆಗೆ ಸ���ಾನ” ಇದನ್ನೆಂದೂ ಮರೆಯಬೇಡಿ. ಆಗ ಸ್ವತಹವಾಗಿ ಸಮಾನರಾಗುವ ಲಕ್ಷ್ಯವು “ಬಾಪ್ದಾದಾ ತಮ್ಮ ಸನ್ಮುಖದಲ್ಲಿರುವರು ಅರ್ಥಾತ್ ಜೊತೆಯಿರುವರು” ಒಳ್ಳೆಯದು.
|
5 |
+
ನಾಲ್ಕಾರು ಕಡೆಯ ಸ್ವಮಾನಧಾರಿ ಸೋ ಸನ್ಮಾನಧಾರಿ ಮಕ್ಕಳಿಗೆ, ಬಾಪ್ದಾದಾ ನಯನಗಳ ಸನ್ಮುಖದಲ್ಲಿ ನೋಡುತ್ತಾ ಸನ್ಮಾನದ ದೃಷ್ಟಿಯಿಂದ ನೆನಪು, ಪ್ರೀತಿಯನ್ನು ಕೊಡುತ್ತಿದ್ದೇವೆ. ಸದಾ ರಾಜ್ಯ ಸನ್ಮಾನ ಮತ್ತು ಪೂಜ್ಯ ಸನ್ಮಾನದ ಸಮಾನ ಜೊತೆಗಾರ ಮಕ್ಕಳಿಗೆ ನೆನಪು, ಪ್ರೀತಿ ಹಾಗೂ ನಮಸ್ತೆ.
|
6 |
+
ಬಿಹಾರ್ ಗ್ರೂಪ್ :
|
7 |
+
ಎಲ್ಲರೂ ತಮ್ಮನ್ನು ಸ್ವರಾಜ್ಯ ಅಧಿಕಾರಿ ಎಂದು ತಿಳಿಯುವಿರಾ? ಸ್ವಯಂನ ರಾಜ್ಯವು ಸಿಕ್ಕಿದೆಯೇ ಅಥವಾ ಇನ್ನೂ ಸಿಗಬೇಕಿದೆಯೇ? ಸ್ವರಾಜ್ಯದ ಪರಿಭಾಷೆ ಆಗಿದೆ - ಯಾವಾಗ ಬೇಕು, ಹೇಗೆ ಬೇಕೋ ಹಾಗೆಯೇ ಕರ್ಮೇಂದ್ರಿಯಗಳ ಮೂಲಕ ಕರ್ಮ ಮಾಡಿಸಲು ಸಾಧ್ಯವಾಗಬೇಕು. ಕರ್ಮೇಂದ್ರಿಯಜೀತರು ಅರ್ಥಾತ್ ಸ್ವರಾಜ್ಯ ಅಧಿಕಾರಿ ಎಂದು. ಇಂತಹ ಸ್ವರಾಜ್ಯ ಅಧಿಕಾರಿ ಆಗಿರುವಿರಾ ಅಥವಾ ಕೆಲವೊಮ್ಮೆ ತಮ್ಮನ್ನೇ ಕರ್ಮೇಂದ್ರಿಗಳು ನಡೆಸುತ್ತದೆಯೇ? ಕೆಲವೊಮ್ಮೆ ತಮ್ಮನ್ನು ಮನಸ್ಸು ನಡೆಸುತ್ತದೆಯೇ ಅಥವಾ ತಾವು ಮನಸ್ಸನ್ನು ನಡೆಸುವಿರಾ? ಕೆಲವೊಮ್ಮೆ ಮನಸ್ಸು ವ್ಯರ್ಥ ಸಂಕಲ್ಪವನ್ನು ಮಾಡುತ್ತದೆಯೇ ಅಥವಾ ಇಲ್ಲವೇ? ಒಂದುವೇಳೆ ಕೆಲವೊಮ್ಮೆ ಮಾಡುತ್ತದೆ ಎಂದರೆ, ಆ ಸಮಯದಲ್ಲಿ ಸ್ವರಾಜ್ಯ ಅಧಿಕಾರಿ ಎಂದು ಹೇಳುವುದೇ? ಸ್ವರಾಜ್ಯವು ಬಹಳ ದೊಡ್ಡ ಶಕ್ತಿಯಾಗಿದೆ. ರಾಜ್ಯ ಶಕ್ತಿಯನ್ನು ಭಲೆ ಯಾರಾದರೂ ನಿರ್ವಹಣೆ ಮಾಡಬಹುದು, ಹೇಗೆ ನಡೆಸಬೇಕೆಂದು ತಿಳಿಯುವರೋ ಹಾಗೆಯೇ ನಡೆಸಬಹುದು, ಈ ಮನಸ್ಸು-ಬುದ್ಧಿ-ಸಂಸ್ಕಾರವಂತು ಆತ್ಮನ ಶಕ್ತಿಗಳಾಗಿವೆ. ಆತ್ಮವು ಈ ಮೂರರ ಮಾಲೀಕನಾಗಿದೆ. ಒಂದುವೇಳೆ ಕೆಲವೊಮ್ಮೆ ಸಂಸ್ಕಾರವು ತನ್ನ ಕಡೆಗೆ ಸೆಳೆಯುತ್ತದೆಯೆಂದರೆ ಮಾಲೀಕರೆಂದು ಹೇಳಲಾಗುತ್ತದೆಯೇ? ಹಾಗಾದರೆ ಸ್ವರಾಜ್ಯ-ಶಕ್ತಿ ಅರ್ಥಾತ್ ಕರ್ಮೇಂದ್ರಿಯಜೀತರು. ಯಾರು ಹೀಗೆ ಕರ್ಮೇಂದ್ರಿಯಜೀತರಾಗಿದ್ದಾರೆಯೋ ಅವರೇ ವಿಶ್ವದ... ರಾಜ್ಯ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಾಗುವುದು. ಸ್ವರಾಜ್ಯ ಅಧಿಕಾರಿಯೇ ವಿಶ್ವ-ರಾಜ್ಯಾಧಿಕಾರಿ ಆಗುವನು. ಅಂದಮೇಲೆ ತಾವು ಬ್ರಾಹ್ಮಣ ಆತ್ಮರ ಸ್ಲೋಗನ್ ಇದೇ ಆಗಿದೆ- `ಸ್ವರಾಜ್ಯವು ಬ್ರಾಹ್ಮಣ ಜೀವನದ ಜನ್ಮ-ಸಿದ್ಧ ಅಧಿಕಾರವಾಗಿದೆ'. ಸ್ವರಾಜ್ಯ ಅಧಿಕಾರಿಯ ಸ್ಥಿತಿಯು ಸದಾ ಮಾಸ್ಟರ್ ಸರ್ವಶಕ್ತಿವಂತನದಾಗಿರುತ್ತದೆ, ಯಾವುದೇ ಶಕ್ತಿಯ ಕೊರತೆಯಿರುವುದಿಲ್ಲ. ಸ್ವರಾಜ್ಯ ಅಧಿಕಾರಿಯು ಸದಾ ಧರ್ಮ ಅರ್ಥಾತ್ ಧಾರಣಾ ಮೂರ್ತಿಯೂ ಆಗಿರುತ್ತಾನೆ ಮತ್ತು ರಾಜ್ಯ ಅರ್ಥಾತ್ ಶಕ್ತಿಶಾಲಿಯೂ ಆಗಿರುವನು. ಈಗ ರಾಜ್ಯದಲ್ಲಿ ಯಾವುದಾದರೊಂದು ಏರುಪೇರುಗಳಿವೆ ಏಕೆ? ಏಕೆಂದರೆ ಧರ್ಮ ಶಕ್ತಿಯು ಬೇರ್ಪಟ್ಟಿದೆ ಮತ್ತು ಸ್ವರಾಜ್ಯ ಶಕ್ತಿಯು ಬೇರ್ಪಟ್ಟಿದೆ ಆದ್ದರಿಂದ ಅಂಗವಿಕಲನಾಗಿದೆಯಲ್ಲವೆ! ಒಂದು ಶಕ್ತಿಯಿದೆಯಲ್ಲವೆ ಆದ್ದರಿಂದ ಏರುಪೇರುಗಳಿವೆ. ಇದೇರೀತಿ ತಮ್ಮಲ್ಲಿಯೂ ಸಹ ಒಂದುವೇಳೆ ಧರ್ಮ ಮತ್ತು ರಾಜ್ಯ - ಇವೆರಡೂ ಶಕ್ತಿಗಳಿಲ್ಲದಿದ್ದರೆ ವಿಘ್ನಗಳು ಬರುತ್ತವೆ, ಏರುಪೇರುಗಳಲ್ಲಿ ತರುತ್ತದೆ, ಯುದ್ಧ ಮಾಡಬೇಕಾಗುತ್ತದೆ. ಎರಡೂ ಶಕ್ತಿಗಳಿದ್ದರೆ ಸದಾಕಾಲವೂ ನಿಶ್ಚಿಂತ ಚಕ್ರವರ್ತಿಯಾಗಿರುತ್ತೀರಿ, ತಮ್ಮಬಳಿ ಯಾವುದೇ ವಿಘ್ನಗಳು ಬರಲು ಸಾಧ್ಯವಿಲ್ಲ. ಅಂದಮೇಲೆ ಈ ರೀತಿಯಾಗಿ ನಿಶ್ಚಿಂತ ಚಕ್ರವರ್ತಿಯಾಗಿದ್ದೀರಾ? ಅಥವಾ ಸ್ವಲ್ಪ-ಸ್ವಲ್ಪ ಶರೀರದ ಕಡೆ, ಸಂಬಂಧದ ಕಡೆ.... ಚಿಂತೆಯಿರುತ್ತದೆಯೇ? ಪಾಂಡವರಲ್ಲಿ ಸಂಪಾದಿಸುವ ಚಿಂತೆಯಿರುತ್ತದೆ. ಪರಿವಾರವನ್ನು ನಡೆಸಬೇಕೆಂಬ ಚಿಂತೆಯಿರುತ್ತದೆಯೇ ಅಥವಾ ನಿಶ್ಚಿಂತರಾಗಿ ಇರುತ್ತೀರಾ? ನಡೆಸುವವರು ನಡೆಸುತ್ತಿದ್ದಾರೆ, ಮಾಡಿಸುವವರು ಮಾಡಿಸುತ್ತಿದ್ದಾರೆ - ಈ ರೀತಿಯಾಗಿ ನಿಮಿತ್ತವಾಗಿದ್ದು ಮಾಡುವವರೇ ನಿಶ್ಚಿಂತ ಚಕ್ರವರ್ತಿಗಳಾಗುವರು. ``ನಾನು ಮಾಡುತ್ತಿದ್ದೇನೆ'' ಇಂತಹ ಪರಿವೆಯಲ್ಲಿ ಬರುತ್ತೀರೆಂದರೆ ನಿಶ್ಚಿಂತವಾಗಿರಲು ಸಾಧ್ಯವಿಲ್ಲ. ಆದರೆ `ತಂದೆಯ ಮೂಲಕ ನಿಮಿತ್ತವಾಗಿ ಇರುವೆನು' ಎಂಬ ಸ್ಮೃತಿಯಲ್ಲಿದ್ದರೆ ನಿಶ್ಚಿಂತತೆ ಅಥವಾ ನಿಶ್ಚಿಂತ ಜೀವನದ ಅನುಭವ ಮಾಡುವಿರಿ, ಯಾವುದೇ ಚಿಂತೆಗಳಿರುವುದಿಲ್ಲ. ನಾಳೆ ಏನಾಗುವುದೋ ಎಂಬ ಚಿಂತೆಯೂ ಇರುವುದಿಲ್ಲ. ಕೆಲವೊಮ್ಮೆಗಾದರೂ ಇಂತಹ ಚಿಂತೆಯಿರುತ್ತದೆಯೇ - ನಾಳೆ ಏನಾಗುವುದೋ, ಹೇಗಾಗುವುದೋ? ಗೊತ್ತಿಲ್ಲ ವಿನಾಶವು ಯಾವಾಗ ಆಗುವುದೋ, ಏನಾಗುವುದೋ? ಮಕ್ಕಳ ಭವಿಷ್ಯವು ಏನಾಗುವುದೋ? ಮೊಮ್ಮಕ್ಕಳದೇನಾಗುವುದೋ ಎಂಬ ಚಿಂತೆಯಿರುತ್ತದೆಯೇ? ನಿಶ್ಚಿಂತ ಚಕ್ರವರ್ತಿಗಳಲ್ಲಿ ಸದಾ ಈ ನಿಶ್ಚಯವಿರುತ್ತದೆ- ಏನಾಗುತ್ತಿದೆಯೋ ಅದು ಒಳ್ಳೆಯದಾಗುತ್ತಿದೆ, ಮತ್ತು ಏನಾಗುವುದೋ ಅದು ಇನ್ನಷ್ಟು ಬಹಳ ಒಳ್ಳೆಯದಾಗಿರುತ್ತದೆ ಏಕೆಂದರೆ ಮಾಡಿಸುವವರು ಸರ್ವ ಶ್ರೇಷ್ಠನಾಗಿದ್ದಾರಲ್ಲವೆ! ಇಂತಹವರಿಗೆ ನಿಶ್ಚಯ ಬುದ್ಧಿ ವಿಜಯಿಗಳೆಂದು ಹೇಳಲಾಗುವುದು. ಈ ರೀತಿ ಆಗಿದ್ದೀರಾ ಅಥವಾ ಚಿಂತಿಸುತ್ತಿದ್ದೀರಾ? ಆಗಲೇಬೇಕಲ್ಲವೆ! ಇಷ್ಟು ಶ್ರೇಷ್ಠ ರಾಜ್ಯವೇ ಸಿಕ್ಕಿದೆ ಅಂದಮೇಲೆ ಚಿಂತಿಸುವ ಮಾತೇನಿದೆ? ಯಾರಾದರೂ ತನ್ನ ಅಧಿಕಾರವನ್ನು ಬಿಡುವರೇ? ಗುಡಿಸಿಲಿನಲ್ಲಿಯೇ ಇರಬಹುದು, ಆ ಸ್ವಲ್ಪ ಆಸ್ತಿಯನ್ನೂ ಸಹ ಬಿಡುವುದಿಲ್ಲ. ಇದಂತು ಎಷ್ಟೊಂದು ಶ್ರೇಷ್ಠವಾದ ಪ್ರಾಪ್ತಿಯಾಗಿದೆ. ಅಂದಮೇಲೆ ಇದು ನನ್ನ ಅಧಿಕಾರವಾಗಿದೆ ಎಂಬ ಸ್ಮೃತಿಯಿಂದ, ಸದಾ ಅಧಿಕಾರಿಯಾಗಿದ್ದು ಹಾರುತ್ತಿರಿ. ಈ ವರದಾನವನ್ನು ಸದಾ ನೆನಪಿಟ್ಟುಕೊಳ್ಳಿರಿ - ``ಸ್ವರಾಜ್ಯ ನಮ್ಮ ಜನ್ಮ-ಸಿದ್ಧ ಅಧಿಕಾರವಾಗಿದೆ''. ಪರಿಶ್ರಮ ಪಡುವವರಲ್ಲ, ಅಧಿಕಾರಿಯಾಗಿದ್ದೇವೆ. ಒಳ್ಳೆಯದು! ಬಿಹಾರ್ ಎಂದರೆ ಸದಾ ವಸಂತ ಋತುವಿನಲ್ಲಿ (ಶಾಂತಿಯಲ್ಲಿ) ಇರುವವರು, ಎಲೆ ಉದುರುವ ಕಾಲದಲ್ಲಿ ಹೋಗಬಾರದು. ಕೆಲವೊಮ್ಮೆಗೂ ಬಿರುಗಾಳಿಗಳು ಬರಬಾರದು, ಸದಾ ವಸಂತ ಋತುವಿರಲಿ. ಒಳ್ಳೆಯದು.
|
8 |
+
2. ಆತ್ಮಿಕ ದೃಷ್ಟಿಯಿಂದ ಸೃಷ್ಟಿಯನ್ನೇ ಪರಿವರ್ತಿಸುವವರು ಎಂದು ತಮ್ಮಿಂದ ಅನುಭವ ಮಾಡುವಿರಾ? ದೃಷ್ಟಿಯಿಂದ ಸೃಷ್ಟಿಯು ಪರಿವರ್ತನೆ ಆಗಿ ಬಿಡುತ್ತದೆ ಎಂದು ಕೇಳುತ್ತಿದ್ದೆವು ಆದರೀಗ ಆತ್ಮಿಕ ದೃಷ್ಟಿಯಿಂದ ಸೃಷ್ಟಿಯ ಪರಿವರ್ತನೆ ಆಗಿ ಬಿಟ್ಟಿತಲ್ಲವೆ! ಇದರ ಅನುಭವಿ ಆಗಿ ಬಿಟ್ಟಿದ್ದೀರಿ. ತಮಗಂತು ಈಗ ತಂದೆಯ ಪ್ರಪಂಚವಾಗಿದ್ದಾರೆ, ಅಂದಮೇಲೆ ಸೃಷ್ಟಿಯು ಬದಲಾಯಿತು. ಹಿಂದಿನ ಜಗತ್ತು ಅರ್ಥಾತ್ ಪ್ರಪಂಚಕ್ಕೂ, ಮತ್ತು ಈಗಿನ ಪ್ರಪಂಚದಲ್ಲಿ ಇರುವುದಕ್ಕೂ ಅಂತರವಾಗಿ ಬಿಟ್ಟಿತಲ್ಲವೆ! ಮುಂಚೆ ಇದ್ದಂತಹ ಪ್ರಪಂಚದಲ್ಲಿ ಬುದ್ಧಿಯು ಅಲೆದಾಡುತ್ತಿತ್ತು ಹಾಗೆಯೇ ಈಗ ತಂದೆಯೇ ಪ್ರಪಂಚವಾಗಿ ಬಿಟ್ಟರು. ಅದರಿಂದ ಬುದ್ಧಿಯ ಅಲೆದಾಟವು ಬಂಧ್ ಆಯಿತು ಮತ್ತು ಏಕಾಗ್ರವಾಗಿ ಬಿಟ್ಟಿತು. ಏಕೆಂದರೆ ಮುಂಚೆ ಇದ್ದಂತಹ ಜೀವನದಲ್ಲಿ ಕೆಲವೊಮ್ಮೆ ದೇಹದ ಸಂಬಂಧದಲ್ಲಿ, ಕೆಲವೊಮ್ಮೆ ದೇಹದ ಪದಾರ್ಥದಲ್ಲಿ.... ಅನೇಕದರ ಕಡೆ ಬುದ್ಧಿಯು ಹೋರಟು ಹೋಗುತ್ತಿತ್ತು. ಈಗ ಇದೆಲ್ಲವೂ ಬದಲಾಗಿ ಬಿಟ್ಟಿತು. ಈಗಲೂ ದೇಹದ ನೆನಪಿರುತ್ತದೆಯೇ ಅಥವಾ ದೇಹಿಯ ನೆನಪಿರುವುದೇ? ಒಂದುವೇಳೆ ದೇಹದ ಕಡೆ ಬುದ್ಧಿಯು ಹೋಗುತ್ತದೆಯೆಂದರೆ, ಇದು ತಪ್ಪು ಎಂದು ತಿಳಿಯುತ್ತೀರಲ್ಲವೆ! ನಂತರ ದೇಹದ ಬದಲಾಗಿ ತಮ್ಮನ್ನು ದೇಹೀ ಎಂದು ತಿಳಿದುಕೊಳ್ಳುವ ಅಭ್ಯಾಸವನ್ನು ಮಾಡುತ್ತೀರಿ. ಹಾಗಾದರೆ ತಮ್ಮ ಪ್ರಪಂಚವೇ ಬದಲಾಯಿತಲ್ಲವೆ! ಮತ್ತು ಸ್ವಯಂ ತಾವೂ ಬದಲಾಗಿ ಬಿಟ್ಟಿರಿ. ತಂದೆಯವರೇ ತಮ್ಮ ಪ್ರಪಂಚವೇ ಅಥವಾ ಈಗಲೂ ಸ್ಥೂಲ ಜಗತ್ತಿನಲ್ಲೇನಾದರೂ ಉಳಿದಿದೆಯೇ? ವಿನಾಶಿ ಧನ ಅಥವಾ ವಿನಾಶಿ ಸಂಬಂಧದ ಕಡೆಗಂತು ಬುದ್ಧಿಯು ಹೋಗುವುದಿಲ್ಲವೇ? ಈಗ ನನ್ನದೇನೂ ಇಲ್ಲ, ``ನನ್ನ ಬಳಿ ಬಹಳಷ್ಟು ಹಣವಿದೆ'' ಎಂಬ ಈ ಸಂಕಲ್ಪ ಅಥವಾ ಸ್ವಪ್ನದಲ್ಲಿಯೂ ಇರುವುದಿಲ್ಲ ಏಕೆಂದರೆ ಎಲ್ಲವನ್ನೂ ತಂದೆಗೆ ಸಮರ್ಪಣೆ ಮಾಡಿದ್ದೇವೆ. ನನ್ನದನ್ನು ನಿನ್ನದೆಂದು ಸಮರ್ಪಿಸಿದ್ದೀರಲ್ಲವೆ! ಅಥವಾ ನನ್ನದೂ ಸಹ ನನ್ನದೆ ಹಾಗೂ ತಂದೆಯದೂ ನನ್ನದಾಗಿದೆ - ಈ ರೀತಿಯಾಗಿ ತಿಳಿಯುವುದಿಲ್ಲವೇ? ಈ ವಿನಾಶಿ ತನು-ಮನ, ಹಳೆಯ ಮನಸ್ಸು ನನ್ನದಲ್ಲ, ತಂದೆಯವರಿಗೆ ಕೊಟ್ಟಿದ್ದೇವೆ. ಪರಿವರ್ತನೆಯಾಗಲು ಮೊಟ್ಟ ಮೊದಲು `ಸರ್ವಸ್ವವೂ ನಿನ್ನದು' ಎಂಬ ಸಂಕಲ್ಪವನ್ನೇ ಮಾಡಿದಿರಿ, ನಿನ್ನದು ಎಂದು ಹೇಳುವುದರಲ್ಲಿಯೇ ಲಾಭವಿದೆ, ಇದರಲ್ಲಿ ತಂದೆಗೇನೂ ಲಾಭವಿಲ್ಲ, ತಮಗೇ ಲಾಭವಿದೆ. ಏಕೆಂದರೆ ನನ್ನದು ಎನ್ನುವುದರಿಂದ ಬಂಧನಕ್ಕೆ ಒಳಗಾಗುವಿರಿ, ಹೊರೆ ಇರುವವರಾಗುತ್ತೀರಿ ಮತ್ತು ನಿನ್ನದು ಎನ್ನುವುದರಿಂದ ನಿರ್ಲಿಪ್ತರಾಗುತ್ತೀರಿ, ಡಬಲ್ಲೈಟ್ ``ಟ್ರಸ್ಟಿ''(ನಿಮಿತ್ತ) ಆಗಿ ಬಿಡುತ್ತೀರಿ. ಅಂದಮೇಲೆ ಯಾವುದು ಒಳ್ಳೆಯದು! ಹಗುರರಾಗುವುದು ಒಳ್ಳೆಯದೇ ಅಥವಾ ಹೊರೆಯನ್ನು ಹೊರುವುದು ಒಳ್ಳೆಯದೇ? ವರ್ತಮಾನ ಸಮಯದಲ್ಲಿ ಕೆಲವರು ಶರೀರದಿಂದಲೂ ದಪ್ಪಗಿರುತ್ತಾರೆಂದರೆ ಇಷ್ಟವಾಗುವುದಿಲ್ಲ. ಎಲ್ಲರೂ ಸಹ ತನ್ನನ್ನು ಹಗುರವಾಗಿಡುವ ಪ್ರಯತ್ನವನ್ನೇ ಮಾಡುತ್���ಾರೆ ಏಕೆಂದರೆ ಹೊರೆ(ಶರೀರದ ತೂಕ ಹೆಚ್ಚಾಗುವುದು)ಯಾಗುವುದು ಎಂದರೆ ನಷ್ಟವಾಗುವುದು ಎಂದರ್ಥ ಮತ್ತು ಇದರಿಂದ ಲಾಭವಿದೆ. ಇದೇರೀತಿ ನನ್ನದು-ನನ್ನದು ಎನ್ನುವುದರಿಂದ ಬುದ್ಧಿಯ ಮೇಲೆ ಹೊರೆಯುಂಟಾಗುತ್ತದೆ, ನಿನ್ನದು-ನಿನ್ನದು ಎನ್ನುವುದರಿಂದ ಬುದ್ಧಿಯು ಹಗುರವಾಗಿ ಬಿಡುತ್ತದೆ. ಎಲ್ಲಿಯವರೆಗೆ ಹಗುರವಾಗುವುದಿಲ್ಲವೋ ಅಲ್ಲಿಯವರೆಗೆ ಶ್ರೇಷ್ಠ ಸ್ಥಿತಿಯವರೆಗೆ ತಲುಪಲು ಸಾಧ್ಯವಿಲ್ಲ. ಹಾರುವ ಕಲೆಯೇ ಆನಂದದ ಅನುಭೂತಿಯನ್ನು ಮಾಡಿಸುತ್ತದೆ, ಹಗುರವಾಗಿ ಇರುವುದರಲ್ಲಿಯೇ ಆನಂದವಿದೆ. ಒಳ್ಳೆಯದು!
|
9 |
+
ಯಾವಾಗ ತಂದೆಯೇ ಸಿಕ್ಕಿದರೆಂದಾಗ, ಅವರ ಮುಂದೆ ಮಾಯೆಯೇನಾಗಿದೆ? ಮಾಯೆಯು ದುಃಖಿಯನ್ನಾಗಿ ಮಾಡುವಂತದ್ದು ಮತ್ತು ತಂದೆಯವರು ಆಸ್ತಿಯನ್ನು ಕೊಡುವವರು, ಪ್ರಾಪ್ತಿ ಮಾಡಿಸುವವರು. ಇಂತಹ ಪ್ರಾಪ್ತಿ ಮಾಡಿಸುವ ತಂದೆಯಂತು ಇಡೀ ಕಲ್ಪದಲ್ಲಿಯೂ ಸಿಗುವುದಿಲ್ಲ! ಸ್ವರ್ಗದಲ್ಲಿಯ್ತೂ ಸಿಗುವುದಿಲ್ಲ. ಹಾಗಾದರೆ ಇದನ್ನು ಒಂದು ಸೆಕೆಂಡಿಗಾಗಿಯೂ ಮರೆಯಬಾರದು, ಅಲ್ಪಕಾಲದ ಪ್ರಾಪ್ತಿಯನ್ನು ಮಾಡಿಸುವವರನ್ನೇ ಮರೆಯುವುದಿಲ್ಲ ಅಂದಾಗ ಬೇಹದ್ದಿನ ಪ್ರಾಪ್ತಿ ಮಾಡಿಸುವಂತಹ ತಂದೆಯನ್ನು ಮರೆಯಲು ಸಾಧ್ಯವೇ! ಅಂದಾಗ ಸದಾ ಇದನ್ನೇ ನೆನಪಿಟ್ಟುಕೊಳ್ಳಿರಿ - ನಾವು ಟ್ರಸ್ಟಿ ಆಗಿದ್ದೇವೆ. ಜೀವನದಲ್ಲಿ ಮತ್ತೇನು ಬೇಕು! ಆನಂದ, ಸಂಗೀತ ಮತ್ತು ಹಾರುವುದು- ಯಾವಾಗ ಪ್ರಾಪ್ತಿಯಾಗುವುದೋ ಆಗಲೇ ಆನಂದವು ಉಂಟಾಗುತ್ತದೆಯಲ್ಲವೆ! ಇಲ್ಲದಿದ್ದರೆ ದುಃಖಿಯಾಗುವುದೇ ಇರುತ್ತದೆ. ಆದ್ದರಿಂದ ಈ ವರದಾನವು ಸ್ಮೃತಿಯಲ್ಲಿರಲಿ - ನಾವು ಆನಂದವಾಗಿರುತ್ತಾ, ಹಾಡುತ್ತಾ, ಹಾರುವವರಾಗಿದ್ದೇವೆ, ಸದಾಕಾಲವೂ ತಂದೆಯವರ ಪ್ರಪಂಚದಲ್ಲಿಯೇ ಇರುವವರು ಆಗಿದ್ದೇವೆ. ಎಲ್ಲಾದರೂ ಬುದ್ಧಿ ಹೋಗುತ್ತದೆ ಎನ್ನುವುದಕ್ಕೇ ಇನ್ನೇನೂ ಬೇಕಾಗಿಯೇ ಇಲ್ಲ. ಸ್ವಪ್ನದಲ್ಲಿಯೂ ಅಳಬಾರದು, ಮಾಯೆಯು ದುಃಖಿಯನ್ನಾಗಿ ಮಾಡಿದರೂ ಅಳಬಾರದು. ಕೇವಲ ಕಣ್ಣುಗಳಿಂದಲೇ ಅಳುವುದಿರುವುದಿಲ್ಲ, ಮನಸ್ಸಿನ ಅಳು (ದುಃಖ) ಸಹ ಇರುತ್ತದೆ. ಅಂದರೆ ಮಾಯೆಯು ದುಃಖಿ ಮಾಡುತ್ತದೆ ಮತ್ತು ತಂದೆಯವರು ಆನಂದದಲ್ಲಿ ಇಡುತ್ತಾರೆ. ಬಿಹಾರ್ ಎಂದರೆ ಸದಾ ಖುಷಿಯಾಗಿ ಇರುವವರು ಎಂದು ಮತ್ತು ಬಂಗಾಳ ಎಂದರೆ ಸದಾ ಸಿಹಿಯಾಗಿರುವವರು. ಬಂಗಾಳದಲ್ಲಿನ ಮಿಠಾಯಿ ಬಹಳ ಚೆನ್ನಾಗಿರುತ್ತದೆ ಅಲ್ಲವೆ, ವಿಧ-ವಿಧವಾದ ಮಿಠಾಯಿ ಮಾಡುತ್ತಾರೆ ಅಂದಮೇಲೆ ಎಲ್ಲಿ ಮಧುರತೆ ಅಥವಾ ಸಿಹಿಯಿರುತ್ತದೆಯೋ ಅಲ್ಲಿ ಪವಿತ್ರತೆಯಿದೆ. ಪವಿತ್ರತೆಯಿಲ್ಲದೆ ಮಧುರತೆ ಬರಲು ಸಾಧ್ಯವೇ ಇಲ್ಲ. ಹಾಗಾದರೆ ತಾವು ಸದಾ ಮಧುರವ ಮತ್ತು ಖುಷಿಯಾಗಿ ಇರುವವರು. ಒಳ್ಳೆಯದು! ಟೀಚರ್ಸ್ ಸಹ ಆನಂದಿತರನ್ನು ನೋಡಿ ಸದಾ ಆನಂದವಾಗಿಯೇ ಇರುತ್ತೀರಲ್ಲವೆ. ಒಳ್ಳೆಯದು!
|
BKMurli/BKMurli/page_1026.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮನುಷ್ಯರು ಯಾವುದೆಲ್ಲಾ ಗೀತೆ ಇತ್ಯಾದಿಗಳನ್ನು ಬರೆಯುತ್ತಾರೆ, ಶಾಸ್ತ್ರಗಳನ್ನು ತಿಳಿಸುತ್ತಾರೆ ಆದರೆ ಅವರು ಏನನ್ನೂ ತಿಳಿದುಕೊಂಡಿಲ್ಲ. ಏನೆಲ್ಲವನ್ನು ಓದುತ್ತಾ ಬಂದಿದ್ದಾರೆಯೋ ಅದರಿಂದ ಯಾರದೇ ಕಲ್ಯಾಣವಾಗಲಿಲ್ಲ, ಇನ್ನೂ ಅಕಲ್ಯಾಣವಾಗುತ್ತಾ ಬಂದಿದೆ. ಸರ್ವರ ಕಲ್ಯಾಣಕಾರಿಯು ಈಶ್ವರನೊಬ್ಬರೇ ಆಗಿದ್ದಾರೆ, ನೀವು ತಿಳಿದುಕೊಂಡಿದ್ದೀರಿ - ನಮ್ಮ ಕಲ್ಯಾಣ ಮಾಡುವವರು ಈಗ ಬಂದಿದ್ದಾರೆ, ಕಲ್ಯಾಣದ ಮಾರ್ಗವನ್ನು ತಿಳಿಸುತ್ತಿದ್ದಾರೆ. ವಿಶೇಷವಾಗಿ ನೀವು ಭಾರತವಾಸಿಗಳ ಮತ್ತು ಇಡೀ ಪ್ರಪಂಚದ ಕಲ್ಯಾಣ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ, ಸತ್ಯಯುಗದಲ್ಲಿ ಎಲ್ಲರ ಕಲ್ಯಾಣವಾಗಿತ್ತು, ನೀವೆಲ್ಲರೂ ಸುಖಧಾಮದಲ್ಲಿದ್ದಿರಿ ಆಗ ಉಳಿದ ಆತ್ಮರು ಶಾಂತಿಧಾಮದಲ್ಲಿದ್ದರು. ಇದು ಮಕ್ಕಳ ಬುದ್ಧಿಯಲ್ಲಿದೆ ಆದರೆ ಜ್ಞಾನದ ಅಂಶವು ಜಾರಿ ಹೋಗುತ್ತದೆ. ಪೂರ್ಣ ಧಾರಣೆ ಮಾಡುವುದಿಲ್ಲ. ಒಂದುವೇಳೆ ಒಂದು ಮಾತಿನ ಮೇಲೆ ವಿಚಾರ ಮಾಡುತ್ತಾ ಇದ್ದರೆ ಈ ರೀತಿ ಆಗುವುದಿಲ್ಲ. ಪ್ರಾಣಿಗಳಲ್ಲಿಯೂ ಎಷ್ಟೊಂದು ಬುದ್ಧಿಯಿದೆ ಆದರೆ ಈಗಿನ ಬುದ್ಧಿಯಲ್ಲಿ ಅಷ್ಟು ಬುದ್ಧಿಯಿಲ್ಲ. ಪ್ರಾಣಿಗಳು (ಹಸು) ಹುಲ್ಲನ್ನು ತಿನ್ನುತ್ತದೆಯೆಂದರೆ ಮೆಲುಕು ಹಾಕುತ್ತಾ ಇರುತ್ತವೆ. ನಿಮಗೂ ಸಹ ಭೋಜನ ಸಿಗುತ್ತದೆ ಆದರೆ ನೀವು ಇಡೀದಿನ ಅದನ್ನು ಮೆಲುಕು ಹಾಕುವುದಿಲ್ಲ, ಪ್ರಾಣಿಗಳಂತೂ ಇಡೀದಿನ ಮೆಲುಕು ಹಾಕುತ್ತಿರುತ್ತದೆ. ಇಲ್ಲಿ ನಿಮಗೆ ಜ್ಞಾನದ ಹುಲ್ಲು ಸಿಗುತ್ತದೆ - ಯೋಗ ಮತ್ತು ಜ್ಞಾನ. ದಿನವಿಡೀ ಇದರಮೇಲೆ ವಿಚಾರ ಸಾಗರ ಮಂಥನ ನಡೆಯುತ್ತಿರಬೇಕು. ಯಾರಿಗೆ ಸರ್ವೀಸಿನ ಉಮ್ಮಂಗ ಇಲ್ಲವೋ ಅವರು ವಿಚಾರ ಸಾಗರ ಮಂಥನ ಮಾಡಿ ಏನು ಮಾಡುವರು! ಉಮ್ಮಂಗ ಇಲ್ಲದಿದ್ದರೆ ಮಾಡುವುದೂ ಇಲ್ಲ. ಕೆಲಕೆಲವರಿಗೆ ಜ್ಞಾನ ಧನವನ್ನು ದಾನ ಮಾಡುವ ಉಮ್ಮಂಗವಿರುತ್ತದೆ, ಗೋಶಾಲೆಯಲ್ಲಿ ಮನುಷ್ಯರು ಹೋಗಿ ಗೋವುಗಳಿಗೆ ಹುಲ್ಲನ್ನು ಕೊಡುತ್ತಾರೆ, ಅದೂ ಪುಣ್ಯವೆಂದು ತಿಳಿಯುತ್ತಾರೆ. ತಂದೆಯು ನಿಮಗೆ ಜ್ಞಾನದ ಹುಲ್ಲನ್ನು ತಿನ್ನಿಸುತ್ತಾರೆ. ಇದರಮೇಲೆ ವಿಚಾರ ಸಾಗರ ಮಂಥನ ಮಾಡುತ್ತಾ ಇದ್ದರೆ ಖುಷಿಯಲ್ಲಿರುತ್ತೀರಿ ಮತ್ತು ಸರ್ವೀಸಿನ ಉಮ್ಮಂಗವೂ ಇರುವುದು. ಕೆಲವರು ಒಂದು ಬೊಗಸೆಯಷ್ಟು ತುಂಬಿಸಿಕೊಳ್ಳುತ್ತಾರೆ ಅಥವಾ ಒಂದು ಹನಿಯನ್ನು ತೆಗೆದುಕೊಂಡರೂ ಸಹ ಸ್ವರ್ಗದಲ್ಲಿ ಬರುತ್ತಾರೆ. ಸ್ವರ್ಗದ ಬಾಗಿಲು ತೆರೆಯುವುದು. ವಾಸ್ತವದಲ್ಲಿ ಜ್ಞಾನ ಸಾಗರವನ್ನೇ ನುಂಗಿ ಬಿಡಬೇಕು. ಕೆಲವರಂತೂ ಎಲ್ಲವನ್ನೂ ಗ್ರಹಿಸಿ ಬಿಡುತ್ತಾರೆ, ಇನ್ನೂ ಕೆಲವರು ಒಂದು ಹನಿಯಷ್ಟು ತೆಗೆದುಕೊಳ್ಳುತ್ತಾರೆ. ಆದರೂ ಸಹ ಸ್ವರ್ಗದಲ್ಲಿ ಬರುತ್ತಾರೆ ಆದರೆ ಎಷ್ಟೆಷ್ಟು ಧಾರಣೆ ಮಾಡುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಬಾಕಿ ಸ್ವರ್ಗದಲ್ಲಿ ಒಂದು ಹನಿಯಷ್ಟು ತೆಗೆದುಕೊಂಡಿದ್ದರೂ ಸಹ ಬಂದು ಬಿಡುತ್ತಾರೆ. ಮನುಷ್ಯರು ಶರೀರ ಬಿಡುವಾಗ ಅವರಿಗೆ ಗಂಗಾಜಲವನ್ನು ಹಾಕುತ್ತಾರೆ. ಕೆಲಕೆಲವರ ಮನೆಯಲ್ಲಿ ಗಂಗಾಜಲವನ್ನೇ ಕುಡಿಯುತ್ತಾರೆ, ಎಷ್ಟು ಕುಡಿಯಬಹುದು? ಗಂಗೆಯಂತೂ ಹರಿಯುತ್ತಿರುತ್ತದೆ. ಅದನ್ನು ಯಾರೂ ಪೂರ್ಣ ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ನಿಮಗಾಗಿ ಗಾಯನವಿದೆ - ಇಡೀ ಸಾಗರವನ್ನೇ ನುಂಗಿ ಬಿಟ್ಟರು ಎಂದು. ಯಾರು ಜ್ಞಾನ ಸಾಗರನ ಬಳಿಗೆ ಬರುತ್ತಾರೆಯೋ, ಹೆಚ್ಚು ಸರ್ವೀಸ್ ಮಾಡುವರೋ ಅವರೇ ರುದ್ರ ಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ. ಯಾರು ಎಷ್ಟೆಷ್ಟು ಗ್ರಹಿಸುವರೋ ಮತ್ತು ಅನ್ಯರ ಕಲ್ಯಾಣ ಮಾಡುವರೋ ಅವರು ಪದವಿಯನ್ನೂ ಪಡೆಯುತ್ತಾರೆ. ಎಷ್ಟು ಧಾರಣೆ ಮಾಡುವರೋ ಅಷ್ಟು ಖುಷಿಯೂ ಇರುತ್ತದೆ. ಧನವಂತರಿಗೆ ಖುಷಿ ಇರುತ್ತದೆಯಲ್ಲವೇ. ಯಾರ ಬಳಿಯಾದರೂ ಬಹಳ ಧನವಿರುತ್ತದೆ ಎಂದರೆ ದಾನ ಮಾಡುತ್ತಾರೆ. ಕಾಲೇಜು, ಧರ್ಮಶಾಲೆ, ಮಂದಿರ ಇತ್ಯಾದಿ ಕಟ್ಟಿಸುತ್ತಾರೆಂದರೆ ಅವರಿಗೆ ಅಷ್ಟು ಖುಷಿಯೂ ಇರುವುದು. ಇಲ್ಲಂತೂ ಅವಿನಾಶಿ ಜ್ಞಾನರತ್ನಗಳು ಸಿಗುತ್ತಿವೆ, ಇದು 21 ಜನ್ಮಗಳಿಗಾಗಿ ಅವಿನಾಶಿ ಖಜಾನೆಯಾಗಿದೆ. ಯಾರು ಇದನ್ನು ಚೆನ್ನಾಗಿ ಧಾರಣೆ ಮಾಡಿಕೊಂಡು ದಾನ ಮಾಡುವರೋ ಅವರಿಗೆ ಒಳ್ಳೆಯ ಪದವಿ ಸಿಗುತ್ತದೆ. ಬಾಬಾ, ನಮಗೆ ನೌಕರಿಯನ್ನು ಬಿಟ್ಟು ಈ ಆತ್ಮಿಕ ಸೇವೆಯಲ್ಲಿ ತೊಡಗೋಣವೆಂದು ಮನಸಾಗುತ್ತದೆ, ಪ್ರೋಜೆಕ್ಟರ್ ಪ್ರದರ್ಶನಿಯನ್ನು ತೆಗೆದುಕೊಂಡು ಹೋಗಿ ಎಲ್ಲಾ ಕಡೆ ಸರ್ವೀಸ್ ಮಾಡೋಣ ಎನಿಸುತ್ತದೆ ಎಂದು ಕೆಲ ಕೆಲವು ಮಕ್ಕಳು ಬರೆಯುತ್ತಾರೆ. ಯಾರಿಗಾದರೂ ಒಂದು ಹನಿ ಸಿಕ್ಕಿದರೂ ಸಹ ಕಲ್ಯಾಣವಾಗಿ ಬಿಡುವುದು. ಸರ್ವೀಸಿನ ಬಹಳ ಉಮ್ಮಂಗವಿರುತ್ತದೆ. ಬಾಕಿ ಪ್ರತಿಯೊಬ್ಬರ ಸ್ಥಿತಿಯನ್ನು ತಂದೆಯು ತಿಳಿದುಕೊಂಡಿದ್ದಾರೆ. ಸರ್ವೀಸಿನ ಜೊತೆಗೆ ಗುಣಗಳೂ ಇರಬೇಕು. ಕ್ರೋಧವಿರಬಾರದು, ಯಾವುದೇ ಉಲ್ಟಾ-ಸುಲ್ಟಾ ಸಂಕಲ್ಪಗಳು ಬರಬಾರದು. ವಿಕಾರಗಳ ಯಾವುದೇ ಕಾಯಿಲೆಯಿರಬಾರದು. ಆರೋಗ್ಯವು ಚೆನ್ನಾಗಿರಬೇಕು. ಯಾರಲ್ಲಿ ವಿಕಾರಗಳು ಕಡಿಮೆಯಿದೆಯೋ ಅವರೇ ಆರೋಗ್ಯವಂತರೆಂದು ತಂದೆಯು ಹೇಳುತ್ತಾರೆ. ತಂದೆಯು ಮಹಿಮೆ ಮಾಡುತ್ತಾರಲ್ಲವೇ. ಯಾರು-ಯಾರು ಒಳ್ಳೆಯ ಮಹಾರಥಿಗಳೆಂದು ಗಾಯನವೂ ಆಗುತ್ತದೆ, ಇದನ್ನು ಅವರು ಅಸುರರು ಮತ್ತು ದೇವತೆಗಳ ಯುದ್ಧವೆಂದು ತೋರಿಸಿದ್ದಾರೆ. ದೇವತೆಗಳ ಜಯವಾಯಿತು ಎಂದು ಹೇಳುತ್ತಾರೆ. ಈಗ ನಮ್ಮದು ಪಂಚ ವಿಕಾರರೂಪಿ ಅಸುರರೊಂದಿಗೆ ಯುದ್ಧವಿದೆ, ಮತ್ತ್ಯಾವುದೇ ಪ್ರಕಾರದ ಆಸುರೀ ಮನುಷ್ಯರಿರುವುದಿಲ್ಲ. ಯಾರಲ್ಲಿ ಆಸುರೀ ಸ್ವಭಾವವಿದೆಯೋ ಅವರಿಗೆ ಅಸುರರೆಂದು ಹೇಳಲಾಗುತ್ತದೆ. ನಂಬರ್ವನ್ ಅಸುರೀ ಸ್ವಭಾವವಾಗಿದೆ – ಕಾಮ ವಿಕಾರ. ಆದ್ದರಿಂದ ಸನ್ಯಾಸಿಗಳೂ ಸಹ ಇದನ್ನು ಬಿಟ್ಟು ಹೊರಟು ಹೋಗುತ್ತಾರೆ. ಈ ಆಸುರೀ ಗುಣಗಳನ್ನು ಬಿಡುವುದರಲ್ಲಿ ಪರಿಶ್ರಮವಾಗುತ್ತದೆ. ಗೃಹಸ್ಥದಲ್ಲಿಯೇ ಇರಬೇಕಾಗಿದೆ ಆದರೆ ಆಸುರೀ ಸ್ವಭಾವವನ್ನು ಬಿಡಬೇಕಾಗಿದೆ. ಪವಿತ್ರವಾಗುವುದರಿಂದ ಮುಕ್ತಿ-ಜೀವನ್ಮುಕ್ತಿಯು ಸ��ಗುತ್ತದೆ. ಎಷ್ಟೊಂದು ಪ್ರಾಪ್ತಿಯಿದೆ! ಅವರಂತೂ ಮನೆ-ಮಠವನ್ನು ಬಿಟ್ಟು ಹೊರಟು ಹೋಗುತ್ತಾರೆ, ಪ್ರಾಪ್ತಿಯೇನೂ ಇಲ್ಲ. ಈ ಚಿತ್ರಗಳಲ್ಲಿ ತಿಳಿದುಕೊಳ್ಳುವ ಎಷ್ಟು ಒಳ್ಳೊಳ್ಳೆಯ ಮಾತುಗಳಿವೆ. ಅವರಂತೂ ಕೇವಲ ಚಿತ್ರಗಳ ಶೋ ಮಾಡುತ್ತಾರೆ. ಕೇವಲ ಚಿತ್ರಗಳನ್ನು ನೋಡುವುದಕ್ಕಾಗಿ ಎಷ್ಟೊಂದು ಮಂದಿ ಹೋಗುತ್ತಾರೆ ಆದರೆ ಲಾಭವೇನೂ ಇಲ್ಲ. ಇಲ್ಲಿ ಈ ಚಿತ್ರಗಳಲ್ಲಿ ಎಷ್ಟೊಂದು ಜ್ಞಾನವಿದೆ, ಇದರಿಂದ ಬಹಳಷ್ಟು ಲಾಭವಾಗುತ್ತದೆ. ಇಲ್ಲಿ ಈ ಚಿತ್ರಗಳಲ್ಲಿ ಎಷ್ಟೊಂದು ಜ್ಞಾನವಿದೆ, ಇದರಿಂದ ಬಹಳ ಲಾಭವಾಗುತ್ತದೆ. ಇದರಲ್ಲಿ ಕಲೆ ಇತ್ಯಾದಿಗಳು ಯಾವುದೇ ಮಾತಿಲ್ಲ ಅಥವಾ ಅದನ್ನು ಬರೆಯುವವರ ಬುದ್ಧಿವಂತಿಕೆಯ ಮಾತೂ ಇಲ್ಲ. ಅವರಾದರೆ ಚಿತ್ರಗಳ ಮೇಲೆ ಅದನ್ನು ರಚಿಸಿರುವವರ ಹೆಸರು ಬರೆದಿರುತ್ತಾರೆ. ಚಿತ್ರಕಾರರಿಗೂ ಬಳುವಳಿ ಸಿಗುತ್ತದೆ. ಕೆಲವರು ಇಷ್ಟನ್ನು ತಿಳಿದುಕೊಳ್ಳುತ್ತಾರೆ - ಹಾ! ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕು. ಇಷ್ಟು ಹೇಳಿದರೂ ಸಹ ಪ್ರಜೆಗಳಾಗುವರು. ಪ್ರಜೆಗಳಂತೂ ಅನೇಕರು ತಯಾರಾಗುವರು. ನಾನು ಜ್ಞಾನಸಾಗರನಾಗಿದ್ದೇನೆ, ಯಾರಿಗಾದರೂ ಒಂದು ಹನಿ ಸಿಕ್ಕಿದರೂ ಸ್ವರ್ಗದಲ್ಲಿ ಬಂದು ಬಿಡುತ್ತಾರೆ.
|
2 |
+
ನೀವು ತಿಳಿದುಕೊಂಡಿದ್ದೀರಿ - ಪ್ರದರ್ಶನಿ, ಮೇಳಗಳಿಂದ ಅನೇಕರ ಕಲ್ಯಾಣವಾಗುತ್ತದೆ. ಈಶ್ವರನು ಕಲ್ಯಾಣಕಾರಿಯಾಗಿದ್ದಾರಲ್ಲವೇ. ನಿಮ್ಮದೂ ಕಲ್ಯಾಣವಾಗುತ್ತಿದೆ ಆದರೆ ಇದರಲ್ಲಿ ತಮ್ಮ ವಿಚಾರ ಸಾಗರ ಮಂಥನ ಮಾಡುತ್ತಾ ಇರಿ. ಸ್ಮೃತಿಯಲ್ಲಿ ತಂದುಕೊಳ್ಳುತ್ತಾ ಇರಿ ಆಗ ಬಹಳ ಲಾಭವಾಗುವುದು. ಉಲ್ಟಾ-ಸುಲ್ಟಾ ಮಾತುಗಳನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡಬೇಕು. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಬಹಳ ಒಳ್ಳೆಯ ಮಾತುಗಳನ್ನು ತಿಳಿಸುತ್ತೇನೆ. ನಂಬರ್ವನ್ ಮುಖ್ಯ ಮಾತು ಒಂದೇ ಆಗಿದೆ - ಯಾರಿಗೇ ಇರಲಿ ತಂದೆಯ ಪರಿಚಯ ಕೊಡಿ. ಕೇವಲ ಒಬ್ಬ ತಂದೆಯನ್ನು ನೆನಪು ಮಾಡಿರಿ ಅವರೇ ಸರ್ವಸ್ವವಾಗಿದ್ದಾರೆ. ಭಕ್ತಿಮಾರ್ಗದಲ್ಲಿ ಇಂತಹವರು ಅನೇಕರಿರುತ್ತಾರೆ, ಅವರಿಗೆ ತಿಳಿಸಿರಿ, ತಾವಂತೂ ಬಹಳ ಚೆನ್ನಾಗಿ ಮಾಡುತ್ತೀರಿ. ಎಲ್ಲವನ್ನೂ ಪರಮಾತ್ಮ ಮಾಡಿಸುತ್ತಾರೆಂದು ಬೆರಳನ್ನು ಮೇಲೆ ಮಾಡಿ ಹೇಳುತ್ತಾರೆ. ಅವರು ಎಲ್ಲರ ಕಲ್ಯಾಣಕಾರಿ ಮೇಲಿರುತ್ತಾರೆ. ನೀವಾತ್ಮರೂ ಸಹ ಅಲ್ಲಿಯೇ ಇರುತ್ತೀರಿ. ಇದೆಲ್ಲಾ ಜ್ಞಾನದ ಮಾತುಗಳನ್ನು ನೀವು ಈಗ ತಿಳಿದುಕೊಂಡಿದ್ದೀರಿ.
|
3 |
+
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ನಿಮ್ಮ ಈ ಶರೀರವು ಹಳೆಯದಾಗಿ ಬಿಟ್ಟಿದೆ. ಸತ್ಯ-ತ್ರೇತಾಯುಗದಲ್ಲಿ ಎಷ್ಟು ಒಳ್ಳೆಯ ವಸ್ತ್ರವಿತ್ತು, ಈಗ ಈ ಸವೆದು ಹೋಗಿರುವ ವಸ್ತ್ರವನ್ನು ಎಲ್ಲಿಯವರೆಗೆ ಧರಿಸುತ್ತೀರಿ! ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಂದೆಯು ಬಂದು ತಿಳಿಸಿದಾಗಲೇ ತಿಳಿದುಕೊಳ್ಳುವರು. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಜ್ಞಾನವನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರು ಸಾಗರನಾಗಿದ್ದಾರೆ. ಯಾರು ಸಾಗರವನ್ನು ಗ್ರಹಿಸುವರೋ ಅವರೇ ವಿಜಯಮಾಲೆಯ ಮಣಿಯಾಗುತ್ತಾರೆ. ಅವರೇ ಸದಾ ಸರ್ವೀಸಿನಲ್ಲಿ ತತ್ಫರರಾಗಿರುತ್ತಾರೆ. ತಂದೆಯು ರುದ್ರ ಮಾಲೆಯನ್ನು ಮಾಡುವುದಕ್ಕಾಗಿಯೇ ಬಂದಿದ್ದಾರೆ. ಈಗ ಮರಳಿ ಹೋಗಬೇಕಾಗಿದೆ. ಎಲ್ಲಿಂದ ಬಂದಿದ್ದೇವೆಯೋ ಅಲ್ಲಿಗೇ ನಂಬರ್ವಾರ್ ಹೋಗುತ್ತೇವೆ. ಹಿಂದೆ-ಮುಂದೆ ಹೋಗಲು ಸಾಧ್ಯವಿಲ್ಲ. ನಾಟಕದಲ್ಲಿ ಪಾತ್ರಧಾರಿಗಳ ಪಾತ್ರವು ಸಮಯದಲ್ಲಿ ಇರುತ್ತದೆಯಲ್ಲವೇ. ಇದರಲ್ಲಿಯೂ ಯಾರು ಪಾತ್ರಧಾರಿಗಳಿದ್ದಾರೆಯೋ ಅವರು ನಂಬರ್ವಾರ್ ತಮ್ಮ-ತಮ್ಮ ಸಮಯದಲ್ಲಿ ಬರತೊಡಗುತ್ತಾರೆ. ಈ ಬೇಹದ್ದಿನ ನಾಟಕವು ಮಾಡಲ್ಪಟ್ಟಿದೆ. ಬ್ರಹ್ಮತತ್ವದಲ್ಲಿ ನಾವಾತ್ಮರು ಬಿಂದು ರೂಪದಲ್ಲಿರುತ್ತೇವೆ. ಅಲ್ಲಿ ಮತ್ತೇನೂ ಇರುವುದಿಲ್ಲ. ಒಂದು ಆತ್ಮ ಬಿಂದುವೆಲ್ಲಿ! ಇಷ್ಟು ದೊಡ್ಡ ಶರೀರವೆಲ್ಲಿ! ಆತ್ಮವು ಎಷ್ಟು ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ, ಬ್ರಹ್ಮಮಹಾತತ್ವವು ಎಷ್ಟು ದೊಡ್ಡದಾಗಿದೆ. ಹೇಗೆ ಆಕಾಶಕ್ಕೆ ಅಂತ್ಯವಿಲ್ಲವೋ ಹಾಗೆಯೇ ಬ್ರಹ್ಮತತ್ವಕ್ಕೂ ಅಂತ್ಯವಿಲ್ಲ. ಅಂತ್ಯವನ್ನು ಮುಟ್ಟಲು ಎಷ್ಟೊಂದು ಪ್ರಯತ್ನ ಪಡುತ್ತಾರೆ ಆದರೆ ತಲುಪಲು ಸಾಧ್ಯವಿಲ್ಲ. ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾ ಇರುತ್ತಾರೆ ಆದರೆ ಅಂತ್ಯವನ್ನು ಮುಟ್ಟಲು ಅಥವಾ ಅದನ್ನು ಹಿಡಿಯಲು ಅದು ಯಾವುದೇ ವಸ್ತುವಲ್ಲ. ವಿಜ್ಞಾನದ ಅಭಿಮಾನವು ಎಷ್ಟೊಂದಿದೆ, ಏನೂ ಲಾಭವಿಲ್ಲ. ಆಕಾಶವೇ ಆಕಾಶ, ಪಾತಾಳವೇ ಪಾತಾಳ ಎಂಬ ಶಬ್ಧವನ್ನು ಕೇಳಿರುವ ಕಾರಣ ಚಂದ್ರ ಗ್ರಹದಲ್ಲಿಯೂ ಪ್ರಪಂಚವಿರಬಹುದು ಎಂದು ತಿಳಿಯುತ್ತಾರೆ. ಡ್ರಾಮಾದಲ್ಲಿ ಅವರದೂ ಪಾತ್ರವಿದೆ, ಲಾಭವೇನೂ ಇಲ್ಲ. ತಂದೆಯು ಬಂದು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಎಷ್ಟೊಂದು ಲಾಭವಿದೆ! ಬಾಕಿ ಚಂದ್ರ ಗ್ರಹದಲ್ಲಾದರೂ ಹೋಗಲಿ, ಛೂ ಮಂತ್ರದಿಂದ ಭಸ್ಮವನ್ನಾದರೂ ತೆಗೆಯಲಿ..... ಇದರಿಂದೇನು ಲಾಭ! ಈಗಂತೂ ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಕಲ್ಪ-ಕಲ್ಪವೂ ತೆಗೆದುಕೊಳ್ಳುತ್ತಾ ಬಂದಿದ್ದೇವೆ, ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ. ಈ ಚಕ್ರವು ಸುತ್ತುತ್ತಾ ಇರುತ್ತದೆ. ಪ್ರಪಂಚದಲ್ಲಿ ಮೊದಲು ಸ್ವರ್ಣೀಮ ಭಾರತವೇ ಇತ್ತು, ಭಾರತವಾಸಿಗಳೇ ವಿಶ್ವದ ಮಾಲೀಕರಾಗಿದ್ದರು. ಅಲ್ಲಿ ದೇವತೆಗಳಿಗೆ ಯಾವುದೇ ಖಂಡದ ಬಗ್ಗೆ ತಿಳಿದಿರುವುದಿಲ್ಲ. ಇವಂತೂ ನಂತರದಲ್ಲಿ ವೃದ್ಧಿಯಾಗಿದೆ. ಹೊಸ-ಹೊಸ ಧರ್ಮ ಸ್ಥಾಪಕರು ಬಂದು ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ ಆದರೆ ಅವರು ಯಾರದೇ ಸದ್ಗತಿ ಮಾಡುವುದಿಲ್ಲ, ಕೇವಲ ಧರ್ಮ ಸ್ಥಾಪನೆ ಮಾಡುತ್ತಾರೆ. ಅವರಿಗೇನು ಗಾಯನವಿರುವುದು! ಮುಕ್ತಿಧಾಮದಿಂದ ಪಾತ್ರವನ್ನು ಅಭಿನಯಿಸಲು ಬರುತ್ತಾರೆ, ಮನುಷ್ಯರಿಂದ ಮೋಕ್ಷದಲ್ಲಿಯೇ ಕುಳಿತಿರಬೇಕು - ಈ ಆವಾಗಮನದ ಚಕ್ರದಲ್ಲಿ ಬರುವುದಾದರೂ ಏಕೆ ಎಂದು ಹೇಳುತ್ತಾರೆ ಆದರೆ ಇದರಲ್ಲಿ ಬರಲೇಬೇಕಾಗಿದೆ. ಪುನರ್ಜನ್ಮವನ್ನು ತೆಗೆದುಕೊಳ್ಳಲೇ ಬೇಕಾಗಿದೆ. ಪುನಃ ಹಿಂತಿರುಗಿ ಹೋಗಬೇಕಾಗಿದೆ, ಇದು ಮಾಡಿ-ಮಾಡಲ್ಪಟ್ಟ ಡ್ರಾಮಾದ ಚಕ್ರವಾಗಿದೆ. ಲಕ್ಷಾಂತರ ವರ್ಷಗಳ ನಾಟಕವು ಯಾವುದೂ ಇರುವುದಿಲ್ಲ. ಇದು ಸ್ವಾಭಾವಿಕ ಅನಾದಿ ನಾಟಕವಾಗಿದೆ, ಇದಕ್ಕೆ ಈಶ್ವರೀಯ ಲೀಲೆಯೆಂದು ಹೇಳಲಾಗುತ್ತದೆ. ರಚಯಿತ ಮತ್ತು ರಚನೆಯ ಯಾವ ಲೀಲೆಯಿದೆಯೋ ಅದನ್ನು ಅರಿತುಕೊಳ್ಳಬೇಕಾಗಿದೆ. ಸೃಷ್ಟಿಚಕ್ರವನ್ನು ಅರಿತುಕೊಳ್ಳುವ ಪುರುಷಾರ್ಥ ಮಾಡುವ ಮನುಷ್ಯರು ಯಾರೂ ಇಲ್ಲ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬ ವಿಚಾರ ಯಾರಿಗೂ ಇರುವುದೇ ಇಲ್ಲ. ಎಲ್ಲದಕ್ಕಿಂತ ಹಳೆಯ ಚಿತ್ರವು ಶಿವಲಿಂಗದ್ದಾಗಿದೆ. ಖುದನು ಬಂದಿದ್ದಾರೆ ಆದ್ದರಿಂದಲೇ ನಂತರ ಅವರದು ನೆನಪಾರ್ಥವನ್ನು ಮಾಡುತ್ತಾರೆ. ಮೊದಲು ಶಿವನ ಪೂಜೆಯು ಆರಂಭವಾದಾಗ ವಜ್ರದ ಲಿಂಗವನ್ನು ಮಾಡಿಸುತ್ತಾರೆ. ಯಾವಾಗ ಭಕ್ತಿಯು ರಜೋ, ತಮೋ ಆಗಿ ಬಿಡುತ್ತದೆಯೋ ಆಗ ಕಲ್ಲಿನ ಲಿಂಗವನ್ನೂ ಮಾಡಿಸುತ್ತಾರೆ.
|
4 |
+
ಶಿವ ತಂದೆಯು ವಜ್ರದಿಂದ ಕೂಡಿಲ್ಲ ಅವರು ಒಂದು ಬಿಂದುವಾಗಿದ್ದಾರೆ. ಪೂಜೆಗಾಗಿ ಅವರನ್ನು ಎಷ್ಟು ದೊಡ್ಡದಾಗಿ ತೋರಿಸುತ್ತಾರೆ, ನಾವು ವಜ್ರದ ಶಿವಲಿಂಗವನ್ನು ಮಾಡಿಸಬೇಕೆಂದು ತಿಳಿಯುತ್ತಾರೆ. ಸೋಮನಾಥನ ಎಷ್ಟು ದೊಡ್ಡ ಮಂದಿರದಲ್ಲಿ ಕೇವಲ ಒಂದು ಬಿಂದುವನ್ನು ಇಟ್ಟರೆ ಅದು ಅರ್ಥವಾಗುವುದಿಲ್ಲ. ಭಕ್ತಿಮಾರ್ಗದಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ವಿಜ್ಞಾನಿಗಳು ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾರೆ, ಒಳ್ಳೊಳ್ಳೆಯ ವಸ್ತುಗಳನ್ನು ಕಂಡು ಹಿಡಿಯುತ್ತಾ ಇರುತ್ತಾರೆ, ವಿನಾಶಕ್ಕಾಗಿಯೇ ತಯಾರಿಸುತ್ತಾರೆ. ಮೊದಲು ಈ ವಿದ್ಯುತ್ ಇರಲಿಲ್ಲ, ಮಣ್ಣಿನ ದೀಪಗಳನ್ನು ಇಡುತ್ತಿದ್ದರು.
|
5 |
+
ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಸ್ವಲ್ಪದರಲ್ಲಿಯೇ ಖುಷಿಯಾಗಿ ಬಿಡಬೇಡಿ, ಚೆನ್ನಾಗಿ ಧಾರಣೆ ಮಾಡಿಕೊಂಡು ಸಾಗರವನ್ನೇ ಗ್ರಹಿಸಿರಿ. ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಯೋ ಅವರು ಒಳ್ಳೆಯ ಪದವಿ ಪಡೆಯುತ್ತಾರೆ. ಇಡೀ ದಿನ ಖುಷಿಯ ನಶೆಯೇರಿರಬೇಕು. ಇದಂತೂ ಛೀ ಛೀ ಪ್ರಪಂಚವಾಗಿದೆ, ಈಗ ಇಲ್ಲಿಂದ ಹೋಗುತ್ತೀರಿ. ಹಳೆಯ ಪ್ರಪಂಚವು ಸಮಾಪ್ತಿಯಾಗಲೇಬೇಕು ಅದಕ್ಕಾಗಿ ತಯಾರಿಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಿದೆ, ಅದರಲ್ಲಿಯೂ ಎಷ್ಟೊಂದು ಸರ್ವೀಸ್ ಮಾಡಬೇಕಾಗಿದೆ. ಇಡೀ ಭಾರತದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲಿ ಎಲ್ಲಾ ಕಡೆಯೂ ಸುತ್ತಬೇಕಾಗಿದೆ. ಪತ್ರಿಕೆಗಳ ಮುಖಾಂತರ ವಿದೇಶದ ಮೂಲೆ-ಮೂಲೆಯವರೆಗೂ ಇದು ಅರ್ಥವಾಗಲಿ, ಈ ಏಣಿಯ ಚಿತ್ರದಿಂದ ಕೂಡಲೇ ಅರ್ಥ ಮಾಡಿಕೊಳ್ಳುವರು. ತಂದೆಯು ಬರುವುದೇ ಮಕ್ಕಳನ್ನು ಪುನಃ ಸ್ವರ್ಗವಾಸಿಗಳನ್ನಾಗಿ ಮಾಡಲು. ಅವಶ್ಯವಾಗಿ ಲಕ್ಷ್ಮೀ-ನಾರಾಯಣರು ಭಾರತದಲ್ಲಿಯೇ ರಾಜ್ಯ ಮಾಡಿ ಹೋಗಿದ್ದಾರೆ. ಭಾರತವು ಪ್ರಾಚೀನ ದೇಶವಾಗಿದೆ ಎಂದು ಬಹಳ ಮಹಿಮೆ ಮಾಡುತ್ತಾರೆ. ಭಾರತವು ಹೇಗಿತ್ತು, ಭಾರತದ��್ಲಿ ಇಂತಹ ಪವಿತ್ರ ದೇವಿಯರಿದ್ದರು ಎಂದು ಬಹಳ ಮಹಿಮೆ ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ತಂದೆಯಿಂದ ನಾವು 21 ಜನ್ಮಗಳ ಪ್ರಾಲಬ್ಧವನ್ನು ಪಡೆಯುತ್ತೇವೆ. ತಂದೆಯು ಬಹಳ ಸಹಜವಾಗಿ ಓದಿಸುತ್ತಾರೆ. ಅಲ್ಲಿ ದ್ರೌಪದಿಯ ಕಾಲನ್ನು ಒತ್ತಿದರು ಎಂದು ತೋರಿಸುತ್ತಾರೆ. ಅದೇನೂ ಇಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಭಕ್ತಿ ಮಾರ್ಗದಲ್ಲಿ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದೀರಿ, ನಾನೀಗ ನಿಮ್ಮ ದಣಿವನ್ನು ದೂರ ಮಾಡುತ್ತೇನೆ. ನೀವು ಮೋಸ ಹೋಗುತ್ತಾ ಪತಿತರಾಗಿ ಬಿಟ್ಟಿದ್ದೀರಿ. ನಾನು ನಿಮ್ಮ ದಣಿವನ್ನು ದೂರ ಮಾಡುತ್ತಿದ್ದೇನೆ, ಮತ್ತೆಂದೂ ನೀವು ದುಃಖವನ್ನು ನೋಡುವುದಿಲ್ಲ. ಸ್ವಲ್ಪವೂ ದುಃಖದ ಹೆಸರಿರುವುದಿಲ್ಲ ಬಾಕಿ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಒಳ್ಳೆಯ ಪದವಿಯನ್ನು ಪಡೆದರೆ ಇವರು ಹಿಂದಿನ ಜನ್ಮದಲ್ಲಿ ಒಳ್ಳೆಯ ಕರ್ಮ ಮಾಡಿದ್ದಾರೆಂದು ಹೇಳುತ್ತಾರಲ್ಲವೇ! ಗಾಯನವಂತೂ ಆಗುತ್ತದೆಯಲ್ಲವೇ. ಆದರೆ ಇವರು ಯಾವಾಗ ಪುರುಷಾರ್ಥ ಮಾಡಿ ಈ ಪದವಿಯನ್ನು ಪಡೆದರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಈಗ ತಂದೆಯು ನಿಮಗೆ ಇಂತಹ ಕರ್ಮವನ್ನು ಕಲಿಸುತ್ತಾರೆ, ಒಳ್ಳೆಯ ಕರ್ಮ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಿರಿ ಎಂದು ನಿಮಗೂ ಹೇಳುತ್ತಾರೆ. ಇಲ್ಲಿ ಮನುಷ್ಯರ ಕರ್ಮವು ವಿಕರ್ಮವಾಗುತ್ತದೆ. ಅಲ್ಲಂತೂ ಸ್ವರ್ಗವಿರುತ್ತದೆ, ಆದ್ದರಿಂದ ಕರ್ಮವು ಅಕರ್ಮವಾಗುತ್ತದೆ. ಅಲ್ಲಿ ಈ ಜ್ಞಾನವಿರುವುದಿಲ್ಲ, ತಂದೆಯು ತಿಳಿಸುತ್ತಾರೆ - ನಾನು ಕರ್ಮಗಳ ಗುಹ್ಯಗತಿಯನ್ನು ಅರಿತುಕೊಂಡಿದ್ದೇನೆ, ಈ ಸಮಯದಲ್ಲಿ ಯಾರು ಒಳ್ಳೆಯ ಕರ್ಮ ಮಾಡುವರೋ ಅವರು ಒಳ್ಳೆಯ ಫಲವನ್ನು ಪಡೆಯುತ್ತಾರೆ. ಇದು ಕರ್ಮ ಕ್ಷೇತ್ರವಾಗಿದೆ. ಕೆಲವರು ಬಹಳ ಒಳ್ಳೆಯ ಕರ್ಮ ಮಾಡುತ್ತಾರೆ, ಕೆಲವರಿಗೆ ಸೇವೆಯದೇ ಚಿಂತನೆಯಿರುತ್ತದೆ. ಬಾಬಾ, ನನ್ನಲ್ಲಿ ಯಾವುದೇ ಕೊರತೆಯಿದೆಯೇ ಎಂದು ಕೇಳುತ್ತಾರೆ. ಸೇವೆಯನ್ನಂತೂ ಎಷ್ಟು ಮಾಡಲು ಸಾಧ್ಯವಿದೆಯೋ ಅಷ್ಟೂ ಮಾಡಿರಿ, ಸೇವೆಯು ವೃದ್ಧಿಯಾಗುತ್ತಾ ಇರುವುದು. ಸೇವೆ ಮಾಡುವವರು ತಯಾರಾಗುತ್ತಾ ಹೋಗುತ್ತಾರೆ. ಮನಸ್ಸಿನಲ್ಲಿ ಇದೇ ಧೈರ್ಯವಿದೆ - ಇನ್ನು ಕೆಲವೇ ದಿನಗಳಿದೆ. ಈಗ ಇಂತಹ ಪುರುಷಾರ್ಥ ಮಾಡಬೇಕು, ಇದರಿಂದ ಅಲ್ಲಿಯೂ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ತಂದೆಯು ಈ ಜ್ಞಾನದ ಹುಲ್ಲನ್ನು ತಿನ್ನಿಸುತ್ತಾರೆ. ತಿಳಿಸುತ್ತಾರೆ, ಇದನ್ನು ಮೆಲುಕು ಹಾಕುತ್ತಾ ಇರಿ ಆಗ ಧಾರಣೆಯು ಪಕ್ಕಾ ಆಗಿರುವುದು ಮತ್ತು ಖುಷಿಯ ನಶೆಯೇರುವುದು. ಬಹಳ ಸರ್ವೀಸ್ ಮಾಡಬೇಕಾಗಿದೆ, ಅನೇಕರಿಗೆ ಸಂದೇಶ ಕೊಡಬೇಕಾಗಿದೆ. ನೀವು ಪೈಗಂಬರನ ಮಕ್ಕಳು ಪೈಗಂಬರರಾಗಿದ್ದೀರಿ. ಒಂದು ದಿನ ದೊಡ್ಡ ಪತ್ರಿಕೆಗಳಲ್ಲಿಯೂ ನಿಮ್ಮ ಚಿತ್ರಗಳು ಬರುತ್ತವೆ, ವಿದೇಶದವರೆಗೂ ಪತ್ರಿಕೆಗಳು ಹೋಗುತ್ತವೆಯಲ್ಲವೇ. ಇದು ಪರಮಾತ್ಮನ ಜ್ಞಾನ ಎಂದು ಚಿತ್ರಗಳಿಂದ ತಿಳಿದುಕೊಳ್ಳುತ್ತಾರೆ ಬಾಕಿ ನೆನಪಿನದೇ ಪರಿಶ್ರಮ��ಿದೆ. ಅದನ್ನು ಭಾರತವಾಸಿಗಳೇ ಪರಿಶ್ರಮ ಪಡುತ್ತಾರೆ. ಒಳ್ಳೆಯದು.
|
6 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
7 |
+
ಧಾರಣೆಗಾಗಿ ಮುಖ್ಯಸಾರ:
|
8 |
+
2. ಯಾವುದೇ ಆಸುರೀ ಸ್ವಭಾವವಿದೆಯೆಂದರೆ ಅದನ್ನು ಬಿಡಬೇಕಾಗಿದೆ. ತಂದೆಯು ಯಾವ ಜ್ಞಾನದ ಹುಲ್ಲನ್ನು(ಮುರುಳಿ) ತಿನ್ನಿಸುತ್ತಾರೆ, ಅದನ್ನು ಮೆಲುಕು ಹಾಕುತ್ತಿರಬೇಕು.
|
BKMurli/BKMurli/page_1027.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಪ್ರತಿನಿತ್ಯವೂ ತಿಳಿಸುತ್ತಾರೆ ಆದರೂ ಸಹ ಕೆಲವು ಮಾತುಗಳು ಮರೆತು ಹೋಗುತ್ತವೆ. ಮಕ್ಕಳು ಇದನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ - ಇದು ಸಂಗಮಯುಗವಾಗಿದೆ, ನಾವು ಸಂಗಮಯುಗದಲ್ಲಿದ್ದೇವೆ. ತಂದೆಯು ಸಂಗಮದಲ್ಲಿಯೇ ಬರುತ್ತಾರೆ, ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಸಂಗಮವೆಂದು ಗಾಯನವಿದೆ, ಕರೆಯುವುದು ಈ ಸಮಯದಲ್ಲಿಯೇ. ಕಲಿಯುಗದ ಅಂತ್ಯಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ ಆದ್ದರಿಂದ ಮತ್ತ್ಯಾವುದೇ ಸಮಯದಲ್ಲಿ ಕರೆಯುವುದಿಲ್ಲ, ತಂದೆಯು ಬರುವುದೂ ಇಲ್ಲ. ಯಾವಾಗ ಕಲಿಯುಗದ ಅಂತ್ಯವಾಗುವುದೋ ಆಗಲೇ ಬಾಬಾ, ನಾವು ಪತಿತರನ್ನು ಪಾವನ ಮಾಡಲು ಬನ್ನಿ, ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯಲ್ಲಿ ಬನ್ನಿ ಎಂದು ನನ್ನನ್ನು ಕರೆಯುತ್ತಾರೆ ಆದರೆ ಕಲ್ಪದ ಆಯಸ್ಸು ಎಷ್ಟು ಎಂಬುದು ಅವರಿಗೆ ತಿಳಿದಿಲ್ಲ. ಭಕ್ತಿ ಮಾಡುತ್ತಾ ಮಾಡುತ್ತಾ ತಿರುಗಾಡುತ್ತಾ-ತಿರುಗಾಡುತ್ತಾ ಕೊನೆಗೂ ಭಗವಂತ ಅವಶ್ಯವಾಗಿ ಸಿಗುವರು ಎಂದು ತಿಳಿದುಕೊಳ್ಳುತ್ತಾರೆ. ಯಾವಾಗ ಕಲ್ಪದ ಅಂತ್ಯವಾಗುವುದು ಎಂಬುದನ್ನು ತಿಳಿದುಕೊಂಡಿಲ್ಲ. ಕಲಿಯುಗದ ಅಂತ್ಯವು ಬಂದಾಗಲೇ ಎಲ್ಲರೂ ನೆನಪು ಮಾಡುತ್ತಾರೆ, ಸತ್ಯ-ತ್ರೇತಾಯುಗದಲ್ಲಿ ಅಪಾರ ಸುಖವಿರುತ್ತದೆ. ದ್ವಾಪರದಲ್ಲಿಯೂ ಇಷ್ಟು ದುಃಖವಿರುವುದಿಲ್ಲ, ಕಲಿಯುಗದಲ್ಲಿ ಮನುಷ್ಯರು ಯಾವಾಗ ದುಃಖಿಯಾಗುವರೋ ಆಗ ತಂದೆಯನ್ನು ಕರೆಯಲು ಆರಂಭಿಸುತ್ತಾರೆ. ತಮೋಪ್ರಧಾನರೆಂದರೆ ದುಃಖಿಗಳು ಆದ್ದರಿಂದಲೇ ಕರೆಯುತ್ತಾರಲ್ಲವೇ - ಹೇ ದುಃಖಹರ್ತ-ಸುಖಕರ್ತ ಬನ್ನಿರಿ ಎಂದು. ದುಃಖದ ಬಂಧನವು ಬಹಳಷ್ಟಿದೆ, ದುಃಖದ ಸಮಯದಲ್ಲಿ ಬಂದು ನಮ್ಮನ್ನು ಬಿಡಿಸಿ ಎಂದು ಭಗವಂತನನ್ನು ಕರೆಯುತ್ತಾರೆ. ಯಾವುದೇ ಮಾರ್ಗ ಸಿಗಲಿಲ್ಲವೆಂದರೆ ಬಹಳ ಜೋರಾಗಿ ಕರೆಯುತ್ತಾರೆ ಆದರೂ ಪಡೆಯುವುದಿಲ್ಲ. ಹೇಗೆ ಚಕ್ರವ್ಯೂಹವಿರುತ್ತದೆಯಲ್ಲವೇ, ಎಲ್ಲಿಂದ ಹೋದರೂ ಮಾರ್ಗ ಸಿಗುವುದಿಲ್ಲ. ಯಾವಾಗ ಸುಸ್ತಾಗಿ ಬಿಡುವರೋ ಆಗ ಜೋರಾಗಿ ಚೀರಾಡುತ್ತಾರೆ, ಇಲ್ಲಿಯೂ ಸಹ ಮನುಷ್ಯರು ಬಹಳ ದುಃಖಿಯಾದಾಗ ಹೇ ದುಃಖಹರ್ತ-ಸುಖಕರ್ತ ಅಂಧರಿಗೆ ಊರುಗೋಲಾದ ತಂದೆಯೇ ಎಂದು ಕೂಗುತ್ತಾರೆ. ಈ ಸಮಯದಲ್ಲಿಯೇ ತಂದೆಗೆ ಅಂಧರಿಗೆ ಊರುಗೋಲು ಎಂದು ಕರೆಯುತ್ತಾರೆ.
|
2 |
+
ನೀವೀಗ ಸಂಗಮದಲ್ಲಿದ್ದೀರಿ, ಒಂದು ಕಡೆ ಪಾಂಡವರು, ಇನ್ನೊಂದು ಕಡೆ ಕೌರವರಿದ್ದಾರೆ. ಯಾರು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೋ ಅವರಿಗೆ ಅಂಧರೆಂದು ಹೇಳಲಾಗುತ್ತದೆ. ತಂದೆಯ ಮೂಲಕ ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿರುವವರಿಗೆ ಕಣ್ಣಿರುವವರೆಂದು ಹೇಳಲಾಗುತ್ತದೆ. ನೀವು ತಿಳಿಸುತ್ತೀರಿ - ನಮಗೆ ರಾಜ್ಯಭಾಗ್ಯವು ಸಿಕ್ಕಿದೆ ಆದ್ದರಿಂದಲೇ ಚಿತ್ರಗಳನ್ನು ತೋರಿಸುತ್ತೇವೆ. ಸತ್ಯಯುಗವು ಶಿವ ತಂದೆಯು ಸ್ಥಾಪನೆ ಮಾಡಿರುವುದಾಗಿದೆ ಆದ್ದರಿಂದ ಅದಕ್ಕೆ ಶಿವಾಲಯವೆಂದು ಹೆಸರು ಬಂದಿತು ನಂತರ ವಿಕಾರಿಗಳಾದಾಗ ವಾಮಮಾರ್ಗದ ಸ್ಥಾಪನೆಯಾಗುತ್ತದೆ. ಆದ್ದರಿಂದ ಇದಕ್ಕೆ ವೇಶ್ಯಾಲಯವೆಂದು ಹೇಳಲಾಗುತ್ತದೆ. ಸತ್ಯಯುಗವು ಶಿವಾಲಯವಾಗಿರುತ್ತದೆ, ಕಲಿಯುಗವು ವೇಶ್ಯಾಲಯವಾಗಿದೆ. ನೀವು ಸಂಗಮಯುಗೀ ಬ್ರಾಹ್ಮಣರಿಗೆ ಇದು ಅರ್ಥವಾಗಿದೆ - ನಾವೀಗ ವೇಶ್ಯಾಲಯದಲ್ಲಿಯೂ ಇಲ್ಲ, ಶಿವಾಲಯದಲ್ಲಿಯೂ ಇಲ್ಲ. ನಾವು ಶಿವಾಲಯದಲ್ಲಿ ಹೋಗುತ್ತಿದ್ದೇವೆ, ಈಗ ವೇಶ್ಯಾಲಯ, ವಿಕಾರಿ ಸಂಬಂಧಗಳಿಂದ ನಮ್ಮ ಮಮತೆಯು ಹೊರಟುಹೋಗಿದೆ, ಈಗ ನಮ್ಮದು ಭವಿಷ್ಯದ ಸಂಬಂಧಗಳೊಂದಿಗೆ ಮಮತೆಯಿದೆ, ನಾವೀಗ ರಾಜಯೋಗಿಗಳಾಗಿದ್ದೇವೆ. ಅವರು ಯೋಗಿಗಳಾಗಿದ್ದಾರೆ, ಅವರೊಂದಿಗೆ ನಮಗೆ ಸಂಬಂಧವೇನಿದೆ! ಆದರೂ ಸಹ ಸಂಬಂಧವನ್ನು ನಿಭಾಯಿಸುವುದಕ್ಕಾಗಿ ತಮ್ಮ ಮನೆಯಲ್ಲಿಯೇ ಇರಬೇಕಾಗಿದೆ. ಆದರೂ ಬ್ರಾಹ್ಮಣರೊಂದಿಗೆ ಹೆಚ್ಚು ಸಂಬಂಧವಿರುತ್ತದೆ ಏಕೆಂದರೆ ಬ್ರಾಹ್ಮಣರಷ್ಟು ಶ್ರೇಷ್ಠ ಸೇವೆಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಆತ್ಮಿಕ ಸೇವೆ ಮಾಡಲು ತಂದೆಯೇ ನಿಮಿತ್ತರಾಗುತ್ತಾರೆ, ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ. ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವಾಗಿದ್ದಾರೆ, ಸತ್ಯಕ್ಕೆ ಸುಪ್ರೀಂ ಎಂದು ಹೇಳುತ್ತಾರೆ. ಅವರ ಮೂಲಕ ನಮಗೆ ಆಸ್ತಿ ಸಿಗುತ್ತಿದೆ, ಇದು ನೆನಪಿದ್ದರೆ ಪ್ರತೀ ಸಮಯ ಎಷ್ಟೊಂದು ಖುಷಿಯಿರುವುದು ಮತ್ತೆ ಅನ್ಯರಿಗೂ ತಿಳಿಸುವುದಕ್ಕಾಗಿ ಪುರುಷಾರ್ಥ ಮಾಡಲಾಗುತ್ತದೆ. ಮೊಟ್ಟ ಮೊದಲು ಅವರು ಪಾರಲೌಕಿಕ ತಂದೆಯಾಗಿದ್ದಾರೆ. ಅವರು ಸತ್ಯ ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ, ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ ಆದ್ದರಿಂದ ಅವರಿಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಮೊಟ್ಟ ಮೊದಲು ಅವರ ಮಹಿಮೆ ಮಾಡಬೇಕಾಗಿದೆ. ಅವರು ಸತ್ಯತಂದೆ, ಸತ್ಯ ಶಿಕ್ಷಕ, ಸದ್ಗುರುವಾಗಿದ್ದಾರೆ, ಸತ್ಯಧರ್ಮದ ಸ್ಥಾಪನೆ ಮಾಡುತ್ತಾರೆ. ಒಂದು ರಾಜ್ಯವಿರಲಿ ಎಂದು ಬಯಸುತ್ತಾರಲ್ಲವೇ, ಅದು ಸತ್ಯಯುಗದಲ್ಲಿಯೇ ಇರುತ್ತದೆ, ಇಲ್ಲಂತೂ ಇರಲು ಸಾಧ್ಯವಿಲ್ಲ. ಒಂದು ವಿಶ್ವವಿರಲಿ, ಏಕತೆಯಿರಲಿ ಎಂದು ಮನುಷ್ಯರು ಹೇಳುತ್ತಾರೆ. ವಿಶ್ವವಂತೂ ಒಂದೇ ಇರುತ್ತದೆ, ಕೇವಲ ವಿಶ್ವದಲ್ಲಿ ಒಂದು ರಾಜ್ಯವಿರಲಿ ಎಂಬುದು ಸರಿಯಾಗಿದೆ, ದೇವತೆಗಳ ರಾಜ್ಯವಿತ್ತು ಅಲ್ಲಿ ಮತ್ತ್ಯಾವುದೇ ಏರುಪೇರಿನ ಮಾತೇ ಇರಲಿಲ್ಲ. ಬೇಹದ್ದಿನ ತಂದೆಯು ಬಂದು ರಾಜಧಾನಿಯ ಸ್ಥಾಪನೆ ಮಾಡುತ್ತಾರೆ, ಇದನ್ನೂ ನೀವು ಈಗ ತಿಳಿದುಕೊಂಡಿದ್ದೀರಿ. ತಂದೆಯೇ ರಾಜಯೋಗವನ್ನು ಕಲಿಸುತ್ತಾರೆ, ಶ್ರೀಕೃಷ್ಣನಲ್ಲ, ಅವರು ಕೃಷ್ಣನೆಂದು ತಿಳಿದುಕೊಂಡಿದ್ದಾರೆ. ಯಾವಾಗ ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆಯೋ ಆಗಲೇ ರಾಜಯೋಗವನ್ನು ಕಲಿಸಿದರು ಬಾಕಿ ಶಾಸ್ತ್ರಗಳಲ್ಲಿ ಕೇವಲ ಮಹಿಮೆಯಿದೆ. ಮಹಿಮೆ ಮಾಡುವುದರಿಂದ ರಾಜಯೋಗವನ್ನು ಕಲಿತಂತಾಯಿತೇ! ಅವರು ಯಾವ ಗೀತೆ ಇತ್ಯಾದಿಗ��ನ್ನು ತಿಳಿಸುತ್ತಾರೆಯೋ ಅವರು ರಾಜಯೋಗವನ್ನು ಕಲಿಸುತ್ತಾರೆಯೇ? ಗೀತೆಯನ್ನು ತಿಳಿಸುತ್ತಾರೆ, ಅದು ಕೇವಲ ಯಾರು ಬಿದ್ದು ಹೋಗಿದ್ದಾರೆಯೋ ಅವರ ಮಹಿಮೆ ಮಾಡುತ್ತಾರೆ. ಭಗವಂತನು ಯಾರಿಗೆ ತಿಳಿಸಿದರೋ ಅವರೇ ರಾಜ್ಯ ಪದವಿಯನ್ನು ಪಡೆದರು. ಬಾಕಿ ಈ ಹಬ್ಬಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಮುಖ್ಯವಾದುದು ಸಂಗಮಯುಗದ ಮಾತಾಗಿದೆ. ಶಿವ ತಂದೆಯು ಬರುತ್ತಾರೆ, ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುತ್ತದೆ. ಶಿವ ತಂದೆಯು ಬಂದ ನಂತರ ಅವಶ್ಯವಾಗಿ ಹೊಸ ಪ್ರಪಂಚವು ಸ್ಥಾಪನೆಯಾಗುವುದು. ಕೃಷ್ಣನಂತೂ ಸತ್ಯಯುಗದ ಮಾಲೀಕನಾಗಿದ್ದಾನೆ, ಶಿವ ತಂದೆಯು ಬಂದು ಕೃಷ್ಣನನ್ನು ಈ ರೀತಿ ಮಾಡಿದರು. ಕೇವಲ ಒಬ್ಬ ಕೃಷ್ಣನಿಗೇ ಜ್ಞಾನವನ್ನು ಕೊಟ್ಟಿರುವರೇ? ಕೃಷ್ಣಪುರಿಯನ್ನೂ ಸ್ಥಾಪನೆ ಮಾಡಿರುವರು. ಆತ್ಮವನ್ನೇ ತಮೋಪ್ರಧಾನದಿಂದ ಸತೋಪ್ರಧಾನವನ್ನಾಗಿ ಮಾಡಿಕೊಳ್ಳಲು ಯೋಗವನ್ನು ಕಲಿಸಿದ್ದಾರೆ. ನೀವೇ ಮತ್ತೆ ಸತೋ, ರಜೋ, ತಮೋದಲ್ಲಿ ಬರುತ್ತೀರಲ್ಲವೇ. ನೀವು ಸತ್ಯಯುಗದಲ್ಲಿಯೇ ಕುಳಿತುಬಿಡಬೇಕು ಎಂದಲ್ಲ, 84 ಜನ್ಮಗಳ ಲೆಕ್ಕವೂ ಇದೆ. ಸತ್ಯಯುಗದ ನಂತರ ತ್ರೇತಾ, ದ್ವಾಪರ.... ಅವಶ್ಯವಾಗಿ ಬರಲೇಬೇಕಾಗಿದೆ. ದಿನದ ನಂತರ ರಾತ್ರಿಯಾಗಲೇಬೇಕಾಗಿದೆ. ಸತ್ಯಯುಗದ ಸ್ಥಾಪನೆಯನ್ನು ಯಾರು ಮಾಡುತ್ತಾರೆ, ಹೇಗೆ ಮಾಡುತ್ತಾರೆ? ಏಕೆಂದರೆ ಸತ್ಯಯುಗವು ಹೊಸ ಪ್ರಪಂಚವಾಗಿದೆ. ನಾನು ಹಳೆಯ ಪ್ರಪಂಚವನ್ನು ಪರಿವರ್ತಿಸುತ್ತೇನೆಂದು ತಂದೆಯು ಹೇಳುತ್ತಾರೆ. ಇದು ಮಹಾಭಾರತದ ಅದೇ ಅಣ್ವಸ್ತ್ರಗಳ ಯುದ್ಧವಾಗಿದೆ. ಅಲ್ಲಿ ಪಾಂಡವರೂ ಇದ್ದರು, ಪಾಂಡವರ ಜಯವಾಯಿತು, ಸ್ವರಾಜ್ಯವು ಸಿಕ್ಕಿತೆಂದು ಹೇಳುತ್ತಾರೆ. ಅಂದಾಗ ಸ್ವರಾಜ್ಯದಲ್ಲಿ ಬರುತ್ತೀರಲ್ಲವೇ. ಭಲೆ ಎಲ್ಲಿಯಾದರೂ ಶರೀರ ಬಿಡಲಿ, ರಾಜ್ಯದಲ್ಲಂತೂ ಬರಬೇಕಾಗಿದೆ. ಕಾಯಿದೆಯು ಹೇಳುತ್ತದೆ - ಹಿಮಾಲಯ ಪರ್ವತಗಳಲ್ಲಿ ಯಾರೂ ಶರೀರ ಬಿಡುವುದಿಲ್ಲ. ಯೋಗವನ್ನು ಇಲ್ಲಿಯೇ ಕಲಿಯುತ್ತಾರೆ, ಯೋಗಬಲದಿಂದಲೇ ಶರೀರ ಬಿಡಬೇಕಾಗಿದೆ. ಪರ್ವತಗಳಲ್ಲಿ ಹಿಮಗಡ್ಡೆಗಳಲ್ಲಿ ಶರೀರ ಬಿಡಲು ಅವರಿಗೇನಾಗಿದೆ? ಇದೆಲ್ಲವೂ ವಾಸ್ತವಿಕತೆಯಲ್ಲ, ಹೇಗೆ ಸರ್ಪವು ಹಳೆಯ ಪೋರೆಯನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತದೆ ಹಾಗೆಯೇ ಆತ್ಮವೂ ಸಹ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಶಾಂತಿಧಾಮದಲ್ಲಿ ಹೋಗಿ ನಂತರ ಸತ್ಯಯುಗದಲ್ಲಿ ಬರುತ್ತೀರಿ. ತಂದೆಯು ತಿಳಿಸುತ್ತಾರೆ- ಸತ್ಯಯುಗದಲ್ಲಿ ಶರೀರ ಬಿಟ್ಟರೆ ತಮ್ಮ ಸಮಯದಲ್ಲಿ ಯಾವಾಗ ಶರೀರವು ಹಳೆಯದಾಗುತ್ತದೆಯೋ ಆಗ ತಾವಾಗಿಯೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಅಲ್ಲಂತೂ ಹಿಂತಿರುಗಿ ಶಾಂತಿಧಾಮಕ್ಕೆ ಹೋಗುವುದಿಲ್ಲ. ಶಾಂತಿಧಾಮಕ್ಕೆ ಈಗಲೇ ಹೋಗಬೇಕಾಗಿದೆ. ಈಗ ಆ ಅಭ್ಯಾಸವನ್ನು ಮಾಡಲಾಗುತ್ತದೆ, ಆ ನಿಮ್ಮ ಅಭ್ಯಾಸವು ಅವಿನಾಶಿಯಾಗಿ ಬಿಡುತ್ತದೆ. ಇಲ್ಲಂತೂ ಏಕೆ ಅಭ್ಯಾಸ ಮಾಡಿಸುತ್ತಾರೆಂದರೆ ��� ಹಳೆಯ ಪ್ರಪಂಚವನ್ನೇ ಬಿಡಬೇಕಾಗಿದೆ, ಅಲ್ಲಂತೂ ಹೊಸ ಪ್ರಪಂಚವಿರುತ್ತದೆ. ಸ್ವರ್ಗವಾಸಿಗಳು ಶರೀರ ಬಿಟ್ಟರೆ ಸ್ವರ್ಗದಲ್ಲಿಯೇ ಬರುತ್ತಾರೆ. ನರಕವಾಸಿಗಳು ಶರೀರ ಬಿಟ್ಟರೆ ನರಕದಲ್ಲಿಯೇ ಇರುತ್ತಾರೆ, ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ರಾಜ-ಮಹಾರಾಜ ಎಂಬ ಬಿರುದು ಇಲ್ಲಿಯೂ ಸಿಗುತ್ತದೆ. ಭಲೆ ಇನ್ನೊಂದು ಪದವಿ ಸಿಗುತ್ತದೆ ಆದರೂ ಸಹ ಹೆಸರು ಅದೇ ನಡೆದು ಬರುತ್ತದೆ, ಮರೆಯುವುದಿಲ್ಲ. ಕೆಲಕೆಲವರ ಬಿರುದನ್ನು ಖಾಯಂ ಮಾಡಿ ಬಿಡುತ್ತಾರೆ. ಅದನ್ನು ಹಣ ಕೊಟ್ಟು ಬಿರುದನ್ನು ತೆಗೆದುಕೊಳ್ಳುತ್ತಾರೆ. ಹಿಂದೆ ಒಂದೆರಡು ಲಕ್ಷಗಳನ್ನು ಕೊಟ್ಟರೆ ಬಿರುದು ಸಿಗುತ್ತಿತ್ತು. ಈ ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ ಅವರಿಗೆ ಆತ್ಮಿಕ ತಂದೆಯೆಂದು ಹೇಳಲಾಗುತ್ತದೆ. ಅವರನ್ನೇ ಹೇ ತಂದೆಯೇ ಬಂದು ನಮ್ಮನ್ನು ಪತಿತರಿಂದ ಪಾವನ ಮಾಡಿರಿ, ಇಲ್ಲಿ ಬಹಳ ದುಃಖವಿದೆ, ನಮ್ಮನ್ನು ರಾಮ ರಾಜ್ಯದಲ್ಲಿ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಡ್ರಾಮಾನುಸಾರ 5000 ವರ್ಷಗಳ ಮೊದಲೂ ಸಹ ಇದೇ ರೀತಿ ಹೇಳಿದ್ದರು. ಪರಮಪಿತ ಪರಮಾತ್ಮನು ಬರಲೇಬೇಕಾಗಿದೆ, ಈ ಚಕ್ರವು ಸುತ್ತುತ್ತಿರುತ್ತದೆ. ನಾನು ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆಂದು ತಂದೆಯು ಹೇಳುತ್ತಾರೆ. ಈ ಅಕ್ಷರವನ್ನು ಅವಶ್ಯವಾಗಿ ಹಾಕಬೇಕಾಗಿದೆ, ನಾನು ಡ್ರಾಮಾ ಪ್ಲಾನನುಸಾರ ಬರುತ್ತೇನೆ, ಈ ಡ್ರಾಮಾ ಶಬ್ಧವನ್ನು ಬರೆಯಬೇಕಾಗಿದೆ, ಇದರಿಂದ ಮನುಷ್ಯರಿಗೆ ಅರ್ಥವಾಗಲಿ - ಇದು 5000 ವರ್ಷಗಳ ನಾಟಕವಾಗಿದೆ ಎಂದು.
|
3 |
+
ಈಗ ಎಲ್ಲಾ ಮನುಷ್ಯ ಮಾತ್ರರು ಪತಿತರಾಗಿದ್ದಾರೆ ಆದ್ದರಿಂದ ನಾವು ಪಾಪಿಯಾಗಿದ್ದೇವೆ, ನೀಚರಾಗಿದ್ದೇವೆ ಎಂದು ಸ್ವಯಂ ಹೇಳುತ್ತಾರೆ. ಅವಶ್ಯವಾಗಿ ವೇಶ್ಯಾಲಯವೂ ಆಗಿದೆ, ವಿಷಯಸಾಗರ ಆಗಿದೆಯಲ್ಲವೇ. ವಿಷ್ಣುಪುರಿಯು ಕ್ಷೀರಸಾಗರವಾಗಿತ್ತು ಅಲ್ಲಿ ಲಕ್ಷ್ಮೀ-ನಾರಾಯಣ ಇಬ್ಬರೂ ಇದ್ದರು, ಕ್ಷೀರಸಾಗರವೆಂದು ಹೋಲಿಕೆಯಲ್ಲಿ ಹೇಳಲಾಗುತ್ತದೆ. ಬಾಕಿ ಸ್ಥೂಲವಾಗಿ ಯಾವುದೇ ಕ್ಷೀರಸಾಗರ ಇರುವುದಿಲ್ಲ. ಸಾಗರವು ಸತ್ಯಯುಗದಲ್ಲಿಯೂ ಇದೇ ಇರುತ್ತದೆ, ಕಲಿಯುಗದಲ್ಲಿಯೂ ಇದೆ. ಸತ್ಯಯುಗದಲ್ಲಿ ಇಡೀ ಸಾಗರಕ್ಕೆ ನೀವು ಮಾಲೀಕರಾಗಿರುತ್ತೀರಿ, ಆಕಾಶ ಭೂಮಿ ಎಲ್ಲದಕ್ಕೂ ನೀವು ಮಾಲೀಕರಾಗಿದ್ದೀರಿ. ಈಗಂತೂ ತುಂಡು-ತುಂಡಾಗಿ ಬಿಟ್ಟಿದೆ. ಈಗ ಇದು ಸಂಗಮಯುಗವಾಗಿದೆ. ಸಂಗಮಯುಗವು ನೆನಪಿಗೆ ಬಂದಾಗಲೇ ಈಗ ಸತ್ಯಯುಗದಲ್ಲಿ ಹೋಗುತ್ತೇವೆ ಎಂಬುದು ಅರ್ಥವಾಗುತ್ತದೆ. ಸಂಗಮವಾಗಿದೆಯೆಂದ ಮೇಲೆ ತಂದೆಯು ಅವಶ್ಯವಾಗಿ ಇರುವರು, ಅವರು ಈ ಪ್ರಪಂಚವನ್ನು ಬದಲಾಯಿಸುವವರಾಗಿದ್ದಾರೆ. ಸ್ಥಾಪನೆಯಂತೂ ಬ್ರಹ್ಮಾರವರ ಮೂಲಕ ಇಲ್ಲಿಯೇ ಆಗುತ್ತದೆ, ನೀವೀಗ ಚಿತ್ರವನ್ನು ಮಾಡಿಸುತ್ತೀರಿ. ತಂದೆಯು ಶಕ್ತಿ ಮತ್ತು ಬೆಳಕಿನ ಬಿಂದುವಾಗಿದ್ದಾರೆ. ನೀವಾತ್ಮರೂ ಬಿಂದುವಾಗಿದ್ದೀರಿ. ಈಗ ನಿಮಗೆ ಪ್ರಕಾಶತೆಯನ್ನು ಎಲ್ಲಿ ತೋರಿಸುವುದು! ಆದ್ದರಿಂದ ನಿಮ್ಮ ತಲೆಯಲ್ಲಿ ಬಿಂದುವನ್ನು ತೋರಿಸಿದ್ದಾರೆ. ಆತ್ಮಕ್ಕೆ ಪ್ರಕಾಶವನ್ನು ಹೇಗೆ ತೋರಿಸುವುದು! ಲೈಟ್ನ್ನು ತೋರಿಸಿದರೆ ಅದು ದೊಡ್ಡದಾಗಿ ಬಿಡುತ್ತದೆ, ಅವರು ದೊಡ್ಡ ಲೈಟನ್ನೇ ಪೂಜಿಸುತ್ತಾರೆ ಆದರೆ ಮನುಷ್ಯರು ಪರಮಾತ್ಮನನ್ನೇ ಜ್ಯೋತಿ ಸ್ವರೂಪನೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ಪ್ರಕಾಶತೆಯು ಪವಿತ್ರತೆಯ ಚಿಹ್ನೆಯಾಗಿದೆ. ಜ್ಯೋತಿ ಸ್ವರೂಪವೆಂದು ಮನುಷ್ಯರು ತಿಳಿಯುತ್ತಾರೆ, ಒಂದುವೇಳೆ ಬಿಂದುವಿಗೆ ಆ ಪ್ರಕಾಶವನ್ನು ಚಿಕ್ಕದಾಗಿ ಕೊಟ್ಟರೆ ಪೂಜೆ ಮಾಡಲು ಆಗುವುದಿಲ್ಲ ಆದ್ದರಿಂದ ದೊಡ್ಡ ಗಾತ್ರದಲ್ಲಿ ಮಾಡಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಪರಮ ಆತ್ಮನಾಗಿದ್ದೇನೆ, ನನ್ನನ್ನು ನೀವು ಪರಮಾತ್ಮನೆಂದು ಹೇಳುತ್ತೀರಿ ಆದರೆ ಚಿಕ್ಕ ಬಿಂದುವಿಗೆ ಹೇಗೆ ಪೂಜೆ ಮಾಡುವುದು! ಹೇಗೆ ಪ್ರಭಾವಳಿಯನ್ನು ತೋರಿಸುವುದು? ಕೆಲವರು ಲಿಂಗ ಪೂಜೆಯನ್ನು ಮಾಡುತ್ತಾರೆ, ಸಾಹುಕಾರರಾಗಿದ್ದರೆ ವಜ್ರದಿಂದ ಲಿಂಗಾಕಾರವಾಗಿ ಮಾಡಿಸಿ ಅದರ ಪೂಜೆ ಮಾಡುತ್ತಾರೆ, ಹೆಸರನ್ನಂತೂ ಶಿವಲಿಂಗವೆಂದೇ ಇಡುತ್ತಾರೆ. ತಂದೆಯು ಬಿಂದುವಲ್ಲವೇ ಮತ್ತೇನೂ ಅಲ್ಲ. ಇವು ತಿಳಿದುಕೊಳ್ಳುವ ಗುಹ್ಯ ಮಾತುಗಳಾಗಿವೆ. ಆತ್ಮವು ಚಿಕ್ಕದು, ದೊಡ್ಡದಾಗಿರುವುದಿಲ್ಲ. ಇಲ್ಲದಿದ್ದರೆ ಅದು ಕುಳಿತುಕೊಳ್ಳುವುದು ಹೇಗೆ? ನೀವೀಗ ಹೇಗೆ ತಮ್ಮ ಆತ್ಮವನ್ನು ತಿಳಿದುಕೊಂಡಿದ್ದೀರೋ ಹಾಗೆಯೇ ತಂದೆಯನ್ನೂ ತಿಳಿದುಕೊಂಡಿದ್ದೀರಿ, ಆತ್ಮವು ತಂದೆಯನ್ನೇ ಕರೆಯುತ್ತದೆ ಅಂದಾಗ ನೋಡಿದ್ದೀರಾ? ಪರಮಾತ್ಮನನ್ನು ಹೇಗೆ ನೋಡುತ್ತೀರಿ? ಹಾ! ದಿವ್ಯದೃಷ್ಟಿಯಿಂದ ನೋಡಬಹುದಾಗಿದೆ, ಅದರಲ್ಲಿಯೂ ನೀವೀಗ ಯಥಾರ್ಥವಾಗಿ ಅರಿತುಕೊಂಡಿದ್ದೀರಿ ಅಂದಮೇಲೆ ನೋಡುವುದರಿಂದ ಏನು ಲಾಭ! ಇಲ್ಲಂತೂ ವಿದ್ಯೆಯನ್ನು ಓದಬೇಕಾಗಿದೆ, ಇದರಿಂದ ಮನುಷ್ಯರು ದೇವತೆಯಾಗುತ್ತಾರೆ. ಇದು ಭವಿಷ್ಯ ಹೊಸ ಪ್ರಪಂಚಕ್ಕಾಗಿ ವಿದ್ಯೆಯಾಗಿದೆ. ಈ ಲಕ್ಷ್ಮೀ-ನಾರಾಯಣರು ಇಂತಹ ಕರ್ಮವನ್ನು ಎಲ್ಲಿಂದ ಕಲಿತರು? ಸಂಗಮಯುಗದಲ್ಲಿ. ತಂದೆಯು ತಿಳಿಸುತ್ತಾರೆ - ನಾನು ಸಂಗಮದಲ್ಲಿಯೇ ಬಂದು ನಿಮಗೆ ಹೊಸ ಪ್ರಪಂಚಕ್ಕಾಗಿ ವಿದ್ಯೆಯನ್ನು ಓದಿಸುತ್ತೇನೆ. ತಂದೆಯು ಪ್ರದರ್ಶನಿಯಲ್ಲಿ ಪತ್ರವನ್ನು ಕೊಡುತ್ತಾರೆ, ಅದರಲ್ಲಿ ಇದನ್ನೂ ಬರೆಯಬೇಕಾಗಿದೆ - ಇದು ಸಂಗಮಯುಗವಾಗಿದೆ. ತಂದೆಯು ಹೇಳುತ್ತಾರೆ, ನೀವು ನನ್ನಿಂದ ಭವಿಷ್ಯ 21 ಜನ್ಮಗಳಿಗಾಗಿ ಜನ್ಮಸಿದ್ಧ ಅಧಿಕಾರವನ್ನು ತೆಗೆದುಕೊಳ್ಳಬಹುದು, ಈ ಸಂಗಮಯುಗ ಶಬ್ಧವನ್ನು ಅವಶ್ಯವಾಗಿ ಬರೆಯಬೇಕಾಗಿದೆ. ಯಾವ ಪತ್ರವು ಸರಿಯಾಗಿ ತಲುಪುತ್ತದೆಯೋ ಅದರ ಕಾಪಿಯನ್ನು ಅಲ್ಲಿ ಅಂಟಿಸಬೇಕು. ದೊಡ್ಡ ಅಕ್ಷರಗಳಲ್ಲಿ ಬರೆಯಬೇಕಾಗಿದೆ. ದಿನ-ಪ್ರತಿದಿನ ಸ್ಪಷ್ಟವಾಗುತ್ತಾ ಹೋಗುತ್ತದೆ. ಕೆಳಗೆ ಬಾಪ್ದಾದಾ ಎಂದು ಬರೆಯುತ್ತಾರೆ. ಶಿವ ತಂದೆಯು ಯಾರು ಆತ್ಮರ ತಂದೆಯಾಗಿದ್ದಾರೆಯೋ ಅವರು ಪ್ರಜಾಪಿತ ಬ್ರಹ್ಮನ ಮೂಲಕ ಕಲಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನನಗ��� ಶರೀರದ ಆಧಾರವಂತೂ ಬೇಕಲ್ಲವೆ, ಶಿವ ನಿರಾಕಾರನಾಗಿದ್ದಾರೆ. ಅವರಿಗೆ ತಮ್ಮದೇ ಆದ ಶರೀರವಿಲ್ಲ. ಬ್ರಹ್ಮಾ-ವಿಷ್ಣು-ಶಂಕರನಂತೂ ಸೂಕ್ಷ್ಮ ಆಕಾರಿಯಾಗಿದ್ದಾರೆ, ಉಳಿದೆಲ್ಲರಿಗೂ ಶರೀರವಿದೆ. ತಂದೆಯು ತಿಳಿಸುತ್ತಾರೆ- ನನಗೆ ಶರೀರವೆಲ್ಲಿದೆ? ಆದರೆ ನಾನು ನಾಮ-ರೂಪದಿಂದ ಭಿನ್ನವೆಂದಲ್ಲ, ಬಹಳ ಸ್ಪಷ್ಟವಾಗಿ ಮಕ್ಕಳಿಗೆ ತಿಳಿಸುತ್ತಾರೆ- ನಾನು ನಿರಾಕಾರನಾಗಿದ್ದೇನೆ ಆದರೆ ನಾನು ಬರುತ್ತೇನೆಂದರೆ ಅವಶ್ಯವಾಗಿ ನನಗೆ ಶರೀರ ಬೇಕು, ನಾನು ಗರ್ಭದಲ್ಲಿ ಬರುವುದಿಲ್ಲ. ನಾನೇ ಸ್ವಯಂ ತಿಳಿಸುತ್ತೇನೆ - ನಾನು ಈ ಸಾಧಾರಣ ತನುವಿನಲ್ಲಿ ಬರುತ್ತೇನೆ. ಇವರು ಮೊದಲು ಪೂಜ್ಯನಾಗಿದ್ದರು, ಈಗ ಪೂಜಾರಿಯಾಗಿದ್ದಾರೆ. ಮಾಲೆಯಲ್ಲಿ ಮೊದಲು ಶಿವ ತಂದೆ ನಂತರ ಎರಡು ಮಣಿಗಳಿವೆ, ಪ್ರವೃತ್ತಿ ಮಾರ್ಗವಿದೆಯಲ್ಲವೇ, ಈಗ ನಿಮಗೆ ತಿಳಿದಿದೆ - ಪ್ರವೃತ್ತಿ ಮಾರ್ಗದವರದೇ ಮಾಲೆಯಿದೆ, ಯಾರು ಪ್ರವೃತ್ತಿ ಮಾರ್ಗದಲ್ಲಿ ಪತಿತರಾಗಿದ್ದರು, ಈಗ ಶಿವ ತಂದೆಯ ಮತದಿಂದ ಪಾವನರಾಗಿ ಸೃಷ್ಟಿಯನ್ನು ಪಾವನ ಮಾಡಿದ್ದಾರೆ ಆದ್ದರಿಂದಲೇ ಅವರ ನೆನಪಾರ್ಥವಾಗಿ ಮಾಲೆಯು ಮಾಡಲ್ಪಟ್ಟಿದೆ. ರುದ್ರಮಾಲೆ ಮತ್ತು ವಿಷ್ಣುವಿನ ವೈಜಯಂತಿ ಮಾಲೆಯಿದೆ, ಬ್ರಾಹ್ಮಣರ ಮಾಲೆಯಾಗುವುದಿಲ್ಲ. ಬ್ರಾಹ್ಮಣರ ಮಾಲೆ ಮಾಡಲು ಪ್ರಯತ್ನ ಪಟ್ಟೆವು ಆದರೆ ಆಗಲಿಲ್ಲ. ಆದ್ದರಿಂದ ಮಾಲೆಯಾಗುವುದು, ಅವ್ಯಕ್ತ ಹೆಸರುಗಳನ್ನು ಇಡುವುದನ್ನು ಬಿಟ್ಟು ಬಿಟ್ಟೆವು. ಇಲ್ಲಿ ಯಾವ ಹೆಸರುಗಳನ್ನು ಇಡಲಾಗಿತ್ತೋ ಅವನ್ನು ಇಲ್ಲಿಯೇ ಬಿಟ್ಟು ಮತ್ತೆ ಅದೇ ತಮ್ಮ ಹಳೆಯ ಹೆಸರನ್ನು ಇಟ್ಟುಕೊಂಡು ಹೊರಟು ಹೋಗುತ್ತಾರೆ. ಅವರನ್ನು ಆ ಹೊಸ ಹೆಸರಿನಿಂದ ಯಾರೂ ಕರೆಯುವುದಿಲ್ಲ. ಅಂದಾಗ ತಂದೆಯು ನಮ್ಮ ತಂದೆ, ಶಿಕ್ಷಕ, ಗುರುವಾಗಿದ್ದಾರೆ, ಇಂತಹ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ ಆದರೆ ಮಾಯೆಯು ಹೀಗಿದೆ ಅದು ಮರೆಸಿ ಬಿಡುತ್ತದೆ ಆದ್ದರಿಂದ ಸ್ಥಿತಿಯು ಡೋಲಾಯಮಾನವಾಗುತ್ತದೆ. ಬಹಳ ಬೇಸರದ ಅನುಭವವಾಗುತ್ತದೆ. ಶಿವ ತಂದೆಯ ನೆನಪಿನಿಂದ ಮತ್ತೆ ಎದ್ದು ನಿಲ್ಲುತ್ತಾರೆ. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ವಿಕಾರೀ ಸಂಬಂಧಗಳಿಂದ ಮಮತೆಯನ್ನು ತೆಗೆಯಬೇಕು, ಭವಿಷ್ಯದ ಹೊಸ ಸಂಬಂಧಗಳೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ.
|
7 |
+
2. ಅನ್ಯರಿಗೆ ತಿಳಿಸುವುದಕ್ಕಾಗಿ ಪ್ರತಿ ಸಮಯ ಖುಷಿಯಲ್ಲಿ ಇರಬೇಕಾಗಿದೆ. ಸತ್ಯ ತಂದೆ, ಸತ್ಯ ಶಿಕ್ಷಕ ಮತ್ತು ಸತ್ಗುರುವಿನ ಶ್ರೀಮತದಂತೆ ನಡೆದು ಅಂಧರಿಗೆ ಊರುಗೋಲಾಗಬೇಕಾಗಿದೆ.
|
BKMurli/BKMurli/page_1028.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಕ್ಕಳು ಗೀತೆಯ ಎರಡು ಸಾಲನ್ನು ಕೇಳಿದಿರಿ, ಅವರಂತೂ ಗೀತೆಯನ್ನೇ ಮಾಡಿ ಬಿಟ್ಟಿದ್ದಾರೆ. ಹೇಗೆ ಯಾರದೇ ನಿಶ್ಚಿತಾರ್ಥವಾಗುತ್ತದೆಯೆಂದರೆ ಇದು ಪಕ್ಕಾ ಆಗಿ ಬಿಡುತ್ತದೆ, ಸ್ತ್ರೀ-ಪುರುಷರು ಒಬ್ಬರಿನ್ನೊಬ್ಬರನ್ನು ಬಿಡುವುದೇ ಇಲ್ಲ. ಪರಸ್ಪರ ಆಗದೇ ಬಿಟ್ಟು ಬಿಡುವವರು ಕೆಲವರೇ ವಿರಳ. ಇಲ್ಲಿ ನೀವು ಮಕ್ಕಳು ಯಾರ ಜೊತೆ ಪ್ರತಿಜ್ಞೆ ಮಾಡುತ್ತೀರಿ? ಈಶ್ವರನ ಜೊತೆ. ಅವರ ಜೊತೆ ನೀವು ಮಕ್ಕಳ ಅರ್ಥಾತ್ ಪ್ರಿಯತಮೆಯರ ನಿಶ್ಚಿತಾರ್ಥವಾಗಿದೆ ಆದರೆ ಯಾರು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನೂ ಸಹ ಬಿಟ್ಟು ಬಿಡುತ್ತಾರೆ. ಇಲ್ಲಿ ನೀವು ಮಕ್ಕಳು ಕುಳಿತಿದ್ದೀರಿ, ನಿಮಗೆ ತಿಳಿದಿದೆ - ಈಗ ಬೇಹದ್ದಿನ ಬಾಪ್ದಾದಾ ಬಂದರು ಎಂದರೆ ಬಂದು ಬಿಟ್ಟರು. ಈ ಸ್ಥಿತಿಯು ಇಲ್ಲಿರುವಾಗಲೇ ನಿಮಗೆ ಇರುತ್ತದೆ, ಹೊರಗಿನ ಸೇವಾಕೇಂದ್ರಗಳಲ್ಲಿ ಇರುವುದಿಲ್ಲ. ಬಾಪ್ದಾದಾ ಬಂದರು ಎಂದರೆ ಬಂದು ಬಿಟ್ಟರು ಎಂದು ನೀವು ಇಲ್ಲಿ ತಿಳಿದುಕೊಳ್ಳುತ್ತೀರಿ. ಹೊರಗಿನ ಸೇವಾಕೇಂದ್ರಗಳಲ್ಲಿ ತಂದೆಯು ನುಡಿಸಿರುವ ಮುರುಳಿಯು ಬಂದಿತು ಎಂದು ತಿಳಿದುಕೊಳ್ಳುತ್ತಾರೆ. ಇಲ್ಲಿ ಮತ್ತು ಅಲ್ಲಿಗೆ ಬಹಳ ಅಂತರವಿರುತ್ತದೆ ಏಕೆಂದರೆ ಇಲ್ಲಿ ಬೇಹದ್ದಿನ ಬಾಪ್ದಾದಾರವರ ಸನ್ಮುಖದಲ್ಲಿ ನೀವು ಕುಳಿತಿದ್ದೀರಿ, ಅಲ್ಲಿ ನೀವು ಸನ್ಮುಖದಲ್ಲಿ ಇರುವುದಿಲ್ಲ. ಸನ್ಮುಖದಲ್ಲಿ ಹೋಗಿ ಮುರುಳಿ ಕೇಳಬೇಕೆಂದು ಬಯಸುತ್ತೀರಿ. ಇಲ್ಲಿ ಮಕ್ಕಳ ಬುದ್ಧಿಯಲ್ಲಿ ಬಂದಿತು, ತಂದೆಯು ಬಂದರು ಎಂದರೆ ಬಂದು ಬಿಟ್ಟರು. ಹೇಗೆ ಅನ್ಯಸತ್ಸಂಗಗಳಲ್ಲಿ ಇಂತಹ ಸ್ವಾಮೀಜಿಯು ಬರುವರು ಎಂದು ತಿಳಿದುಕೊಳ್ಳುತ್ತಾರೆ ಆದರೆ ಈ ವಿಚಾರವೂ ಸಹ ಎಲ್ಲರಿಗೆ ಏಕರಸವಾಗಿ ಇರುವುದಿಲ್ಲ. ಕೆಲವರಿಗೆ ಸಂಬಂಧಿಗಳು ನೆನಪಿಗೆ ಬರುವರು, ಬುದ್ಧಿಯು ಒಬ್ಬ ಗುರುವಿನ ಜೊತೆಯೂ ನಿಲ್ಲುವುದಿಲ್ಲ. ಸ್ವಾಮಿಯ ನೆನಪಿನಲ್ಲಿ ಕುಳಿತಿರುವವರು ಕೆಲವರೇ ವಿರಳ. ಇಲ್ಲಿಯೂ ಹಾಗೆಯೇ. ಎಲ್ಲರೂ ಶಿವ ತಂದೆಯ ನೆನಪಿನಲ್ಲಿ ಕುಳಿತಿರುವುದಿಲ್ಲ, ಬುದ್ಧಿಯು ಓಡುತ್ತಾ ಇರುತ್ತದೆ. ಮಿತ್ರ ಸಂಬಂಧಿಗಳು ನೆನಪಿಗೆ ಬರುತ್ತಾರೆ, ಇಡೀ ಸಮಯ ಒಬ್ಬ ಶಿವ ತಂದೆಯ ಸನ್ಮುಖದಲ್ಲಿದ್ದರೆ ಅಹೋ ಸೌಭಾಗ್ಯ! ಸ್ಥಿರವಾಗಿ ನೆನಪಿನಲ್ಲಿ ಕೆಲವರೇ ವಿರಳ ಇರುತ್ತಾರೆ. ಇಲ್ಲಿ ಶಿವ ತಂದೆಯ ಸನ್ಮುಖ ಇರುವುದರಲ್ಲಿ ಬಹಳ ಖುಷಿಯಿರಬೇಕು. ಅತೀಂದ್ರಿಯ ಸುಖವನ್ನೂ ಗೋಪಿವಲ್ಲಭನ ಗೋಪ-ಗೋಪಿಕೆಯರಿಂದ ಕೇಳಿರಿ, ಇದು ಇಲ್ಲಿನ ಗಾಯನವಾಗಿದೆ. ಇಲ್ಲಿ ನೀವು ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ, ನಾವೀಗ ಈಶ್ವರನ ಮಕ್ಕಳಾಗಿದ್ದೇವೆ ನಂತರ ದೇವತೆಗಳ ಮಡಿಲಿಗೆ ಹೋಗುತ್ತೇವೆಂದು ನಿಮಗೆ ತಿಳಿದಿದೆ. ಭಲೆ ಕೆಲವರ ಬುದ್ಧಿಯಲ್ಲಿ ಸರ್ವೀಸಿನ ವಿಚಾರಗಳು ನಡೆಯುತ್ತವೆ - ಈ ಚಿತ್ರದಲ್ಲಿ ಇದನ್ನು ತಿದ್ದುಪಡಿ ಮಾಡಬೇಕು, ಇದನ್ನು ಬರೆಯಬೇಕು ಎಂದು. ಆದರೆ ಒಳ್ಳೆಯ ಮಕ್ಕಳು ಇದನ್ನೇ ತಿಳಿದುಕೊಳ್ಳುತ್ತಾರೆ- ಈಗಂತೂ ತ���ದೆಯಿಂದಲೇ ಕೇಳಬೇಕಾಗಿದೆ, ಮತ್ತ್ಯಾವುದೇ ಸಂಕಲ್ಪಗಳು ಬರಲು ಬಿಡುವುದಿಲ್ಲ. ತಂದೆಯು ಜ್ಞಾನರತ್ನಗಳಿಂದ ಜೋಳಿಗೆಯನ್ನು ತುಂಬಿಸಲು ಬಂದಿದ್ದಾರೆ ಅಂದಮೇಲೆ ತಂದೆಯೊಂದಿಗೆ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ. ನಂಬರ್ವಾರ್ ಧಾರಣೆ ಮಾಡಿಕೊಳ್ಳುವವರಂತೂ ಇದ್ದೇ ಇರುತ್ತಾರೆ. ಕೆಲವರು ಚೆನ್ನಾಗಿ ಧಾರಣೆ ಮಾಡಿಕೊಳ್ಳುತ್ತಾರೆ, ಕೆಲವರು ಕಡಿಮೆ ಧಾರಣೆ ಮಾಡುತ್ತಾರೆ. ಬುದ್ಧಿಯೋಗ ಮತ್ತೊಂದು ಕಡೆ ಓಡುತ್ತಾ ಇರುತ್ತದೆ, ಧಾರಣೆಯಾಗುವುದಿಲ್ಲ, ಕಚ್ಚಾ ಆಗಿಬಿಡುತ್ತಾರೆ. ಒಂದೆರಡು ಬಾರಿ ಮುರುಳಿಯನ್ನು ಕೇಳಿ ಧಾರಣೆಯಾಗಲಿಲ್ಲವೆಂದರೆ ಅದೇ ಹವ್ಯಾಸವು ಪಕ್ಕಾ ಆಗಿ ಬಿಡುತ್ತದೆ. ಮತ್ತೆ ಎಷ್ಟಾದರೂ ಮುರುಳಿಯನ್ನು ಕೇಳುತ್ತಾ ಇರಲಿ ಧಾರಣೆಯಾಗುವುದೇ ಇಲ್ಲ, ಯಾರಿಗೂ ತಿಳಿಸುವುದಕ್ಕೂ ಸಾಧ್ಯವಿಲ್ಲ. ಯಾರಿಗೆ ಧಾರಣೆಯಾಗಿರುವುದೋ ಅವರಿಗೆ ಸರ್ವೀಸಿನ ಉಮ್ಮಂಗವಿರುವುದು. ಅವರು ಸರ್ವೀಸಿಗಾಗಿ ಓಡುತ್ತಾ ಇರುವರು. ಹೋಗಿ ಧನ ದಾನ ಮಾಡಲೇ? ಎಂದು. ಏಕೆಂದರೆ ಈ ಧನವು ಒಬ್ಬ ತಂದೆಯ ವಿನಃ ಮತ್ತ್ಯಾರ ಬಳಿಯೂ ಇಲ್ಲ. ತಂದೆಗೆ ಇದೂ ಗೊತ್ತಿದೆ - ಎಲ್ಲರಿಗೆ ಧಾರಣೆಯಾಗಲು ಸಾಧ್ಯವಿಲ್ಲ. ಎಲ್ಲರೂ ಏಕರಸವಾಗಿ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಬುದ್ಧಿಯು ಬೇರೆ ಕಡೆ ಅಲೆಯುತ್ತಾ ಇರುತ್ತದೆ. ಭವಿಷ್ಯ ಅದೃಷ್ಟವು ಅಷ್ಟು ಶ್ರೇಷ್ಠವಾಗುವುದಿಲ್ಲ. ಇನ್ನೂ ಕೆಲವರು ಸ್ಥೂಲ ಸೇವೆಯಲ್ಲಿ ತಮ್ಮ ಮೂಳೆಗಳನ್ನು ಸವೆಸುತ್ತಾರೆ, ಎಲ್ಲರನ್ನೂ ಖುಷಿ ಪಡಿಸುತ್ತಾರೆ, ಹೇಗೆ ಭೋಜನವನ್ನು ತಯಾರಿಸುತ್ತಾರೆ, ಉಣಬಡಿಸುತ್ತಾರೆಂದರೆ ಇದೂ ಸಹ ಸಬ್ಜೆಕ್ಟ್ ಅಲ್ಲವೆ. ಯಾರಿಗೆ ಸೇವೆಯ ಉಮ್ಮಂಗವಿರುವುದೋ ಅವರು ಬಾಯಿಂದ ಅನ್ಯರಿಗೆ ಹೇಳದೇ ಇರುವುದೇ ಇಲ್ಲ. ಎಲ್ಲಿಯೂ ದೇಹಾಭಿಮಾನವು ಇಲ್ಲವೆ? ಹಿರಿಯರಿಗೆ ಗೌರವ ಕೊಡುತ್ತಾರೆಯೇ? ಎಂದು ಮತ್ತೆ ತಂದೆಯೂ ನೋಡುತ್ತಾರೆ. ದೊಡ್ಡ ಮಹಾರಥಿಗಳಿಗೆ ಗೌರವ ಕೊಡಬೇಕಾಗಿದೆ. ಹಾ! ಕೆಲವರು ಚಿಕ್ಕವರೂ ಸಹ ಬಹಳ ಬುದ್ಧಿವಂತರಾಗಿ ಬಿಡುತ್ತಾರೆಂದರೆ ಅವರಿಗೆ ದೊಡ್ಡವರೂ ಸಹ ಗೌರವ ಕೊಡಬೇಕಾಗಿದೆ ಏಕೆಂದರೆ ಅವರ ಬುದ್ಧಿಯು ಚೆನ್ನಾಗಿ ಕೆಲಸ ಮಾಡುತ್ತದೆ. ಸರ್ವೀಸಿನ ಉಮ್ಮಂಗವನ್ನು ನೋಡಿ ತಂದೆಯೂ ಖುಷಿಯಾಗುತ್ತಾರಲ್ಲವೆ - ಇವರು ಒಳ್ಳೆಯ ಸರ್ವೀಸ್ ಮಾಡುತ್ತಾರೆ ಎಂದು. ಇಡೀ ದಿನ ಪ್ರದರ್ಶನಿಯಲ್ಲಿ ತಿಳಿಸುವ ಅಭ್ಯಾಸ ಮಾಡಿಕೊಳ್ಳಬೇಕು- ಪ್ರಜೆಗಳು ಅನೇಕರು ತಯಾರಾಗುವರು. ಲಕ್ಷಾಂತರ ಮಂದಿ ಪ್ರಜೆಗಳು ಬೇಕಾಗಿದೆ, ಮತ್ತ್ಯಾವುದೇ ಉಪಾಯವಿಲ್ಲ. ಸೂರ್ಯವಂಶಿ, ಚಂದ್ರವಂಶಿ, ರಾಜ-ರಾಣಿ, ಪ್ರಜೆ ಎಲ್ಲರೂ ಇಲ್ಲಿಯೇ ತಯಾರಾಗುವರು. ಅಂದಮೇಲೆ ಎಷ್ಟೊಂದು ಸರ್ವೀಸ್ ಮಾಡಬೇಕಾಗಿದೆ! ನಾವೀಗ ಬ್ರಾಹ್ಮಣರಾಗಿದ್ದೇವೆಂದು ಮಕ್ಕಳ ಬುದ್ಧಿಯಲ್ಲಿದೆ. ಗೃಹಸ್ಥದಲ್ಲಿ ಇರುವುದರಿಂದ ಪ್ರತಿಯೊಬ್ಬರ ಸ್ಥಿತಿಯು ಭಿನ್ನ-ಭಿನ್ನವಾಗಿ ಇರುತ್ತದೆಯಲ್ಲವೆ. ಗೃಹಸ್ಥವನ್ನಂತೂ ಬಿಡುವಂತಿಲ್ಲ. ತಂದೆಯು ತಿಳಿಸುತ್ತಾರೆ - ಭಲೆ ಮನೆಯಲ್ಲಿಯೇ ಇರಿ ಆದರೆ ಬುದ್ಧಿಯಲ್ಲಿ ಈ ನಿಶ್ಚಯವಿರಲಿ - ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಬಿಟ್ಟಿದೆ, ನಮಗೆ ಈಗ ತಂದೆಯೊಂದಿಗೆ ಕೆಲಸವಿದೆ. ಇದನ್ನೂ ತಿಳಿದುಕೊಂಡಿದ್ದೀರಿ, ಕಲ್ಪದ ಮೊದಲು ಯಾರು ಈ ಜ್ಞಾನವನ್ನು ತೆಗೆದುಕೊಂಡಿದ್ದರೋ ಅವರೇ ತೆಗೆದುಕೊಳ್ಳುವರು. ಕ್ಷಣ, ಪ್ರತಿಕ್ಷಣವು ಕಲ್ಪದ ಹಿಂದಿನಂತೆ ಪುನರಾವರ್ತನೆಯಾಗುತ್ತಿದೆ, ಆತ್ಮದಲ್ಲಿ ಜ್ಞಾನವಿದೆಯಲ್ಲವೆ. ತಂದೆಯ ಬಳಿಯೂ ಜ್ಞಾನವಿದೆ, ನೀವು ಮಕ್ಕಳೂ ಸಹ ತಂದೆಯ ಸಮಾನರಾಗಬೇಕಾಗಿದೆ. ಜ್ಞಾನವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ, ಎಲ್ಲಾ ಮಾತುಗಳನ್ನು ಒಂದೇಸಲ ತಿಳಿಸಲಾಗುವುದಿಲ್ಲ. ಲಕ್ಷ್ಯವನ್ನು ಪಕ್ಕಾ ಇಟ್ಟುಕೊಳ್ಳಬೇಕಾಗುತ್ತದೆ. ವಿನಾಶವು ಸನ್ಮುಖದಲ್ಲಿ ನಿಂತಿದೆ, ಇದು ಅದೇ ವಿನಾಶವಾಗಿದೆ, ಸತ್ಯ-ತ್ರೇತಾಯುಗದಲ್ಲಿ ಯಾವುದೇ ಯುದ್ಧವಾಗುವುದಿಲ್ಲ ನಂತರ ಯಾವಾಗ ಬಹಳ ಧರ್ಮಗಳಾಗುವವೋ ಸೇನೆಯು ದೊಡ್ಡದಾಗುವುದು ಆಗ ಯುದ್ಧವು ಆರಂಭವಾಗುತ್ತದೆ. ಮೊಟ್ಟ ಮೊದಲು ಆತ್ಮರು ಸತೋಪ್ರಧಾನತೆಯಿಂದ ಇಳಿಯುತ್ತಾ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಹೇಗೆ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂಬುದೆಲ್ಲವನ್ನೂ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಇಲ್ಲಿ ಕುಳಿತಿದ್ದರೂ ಇದೇ ಬುದ್ಧಿಯಲ್ಲಿರಲಿ – ಶಿವ ತಂದೆಯು ಬಂದು ನಮಗೆ ಖಜಾನೆಯನ್ನು ಕೊಡುತ್ತಾರೆ, ಅದನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಳ್ಳೊಳ್ಳೆಯ ಮಕ್ಕಳು ಅಂಶಗಳನ್ನು ಬರೆದುಕೊಳ್ಳುತ್ತಾರೆ. ಇದು ಒಳ್ಳೆಯದಾಗಿದೆ ಏಕೆಂದರೆ ಬುದ್ಧಿಯಲ್ಲಿ ಅನೇಕ ವಿಚಾರಗಳು ಬರುವುದು, ಇಂದು ಈ ವಿಷಯದ ಬಗ್ಗೆ ತಿಳಿಸೋಣ ಎಂದು. ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಎಷ್ಟೊಂದು ಖಜಾನೆಯನ್ನು ಕೊಟ್ಟಿದ್ದೆನು, ಸತ್ಯ-ತ್ರೇತಾಯುಗದಲ್ಲಿ ನಿಮ್ಮ ಬಳಿ ಅಪಾರ ಹಣವಿತ್ತು ನಂತರ ವಾಮ ಮಾರ್ಗದಲ್ಲಿ ಇಳಿದ ಕಾರಣ ಕಡಿಮೆಯಾಗುತ್ತಾ ಹೋಯಿತು, ಖುಷಿಯೂ ಕಡಿಮೆಯಾಗುತ್ತಾ ಹೋಯಿತು. ಒಂದಲ್ಲ ಒಂದು ವಿಕರ್ಮಗಳಾಗತೊಡಗಿತು, ಇಳಿಯುತ್ತಾ-ಇಳಿಯುತ್ತಾ ಕಲೆಗಳು ಕಡಿಮೆಯಾಗುತ್ತವೆ. ಸತೋಪ್ರಧಾನ, ಸತೋ, ರಜೋ, ತಮೋ ಹಂತಗಳಿರುತ್ತವೆಯಲ್ಲವೆ. ಸತೋದಿಂದ ರಜೋದಲ್ಲಿ ಬರುತ್ತಾರೆ ಅಂದರೆ ಒಮ್ಮೆಲೆ ಬಂದು ಬಿಡುತ್ತಾರೆ ಎಂದಲ್ಲ. ತಮೋಪ್ರಧಾನತೆಯಲ್ಲಿಯೂ ನಿಧಾನ-ನಿಧಾನವಾಗಿ ಇಳಿಯುತ್ತಾರೆ. ಅದರಲ್ಲಿಯೂ ಸತೋ, ರಜೋ, ತಮೋ ಹಂತಗಳು ಬರುತ್ತವೆ. ಕೂಡಲೇ ತಮೋಪ್ರಧಾನ ಆಗಿ ಬಿಡುವುದಿಲ್ಲ. ನಿಧಾನ-ನಿಧಾನವಾಗಿ ಏಣಿಯನ್ನು ಇಳಿಯುತ್ತಾ ಹೋಗುತ್ತಾರೆ, ಕಲೆಗಳು ಕಡಿಮೆಯಾಗುತ್ತವೆ. ಈಗ ಮೇಲೇರಬೇಕಾಗಿದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಇದಕ್ಕಾಗಿ ಸಮಯವು ಬಹಳ ಕಡಿಮೆಯಿದೆ, ಏರಿದರೆ ವೈಕುಂಠ ರಸ ಎಂದು ಗಾಯನವೂ ಇದೆ. ಕಾಮದ ಪೆಟ್ಟು ಬಿದ್ದರೆ ಒಮ್ಮೆಲೆ ಪುಡಿ ಪುಡಿಯಾಗುತ್ತಾರೆ, ಮೂಳೆಗಳು ಪುಡಿಯಾಗುತ್ತವೆ. ಹೇಗೆ ಕೆಲವು ಮನುಷ್ಯರು ತಮ್ಮ ಜೀ���ಘಾತ ಮಾಡಿಕೊಳ್ಳುತ್ತಾರೆ, ಆತ್ಮಘಾತವಲ್ಲ ಜೀವಘಾತವಾಗಿದೆ. ಹಾಗೆಯೇ ಇಲ್ಲಿಯೂ ಆತ್ಮದ ಘಾತವಾಗಿ ಬಿಡುತ್ತದೆ ಅಂದರೆ ಮಾಡಿಕೊಂಡಿರುವ ಸಂಪಾದನೆಯೆಲ್ಲವೂ ಸಮಾಪ್ತಿಯಾಗುತ್ತದೆ. ಇಲ್ಲಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ, ತಂದೆಯನ್ನು ನೆನಪು ಮಾಡಬೇಕಾಗಿದೆ ಏಕೆಂದರೆ ತಂದೆಯಿಂದ ರಾಜ್ಯಭಾಗ್ಯ ಸಿಗುತ್ತದೆ ಅಂದಮೇಲೆ ತಮ್ಮೊಂದಿಗೆ ಕೇಳಿಕೊಳ್ಳಿ - ನಾನು ತಂದೆಯನ್ನು ನೆನಪು ಮಾಡಿ ಭವಿಷ್ಯಕ್ಕಾಗಿ ಎಷ್ಟು ಸಂಪಾದನೆ ಮಾಡಿಕೊಂಡೆನು? ಎಷ್ಟು ಜನ ಕುರುಡರಿಗೆ ಊರುಗೋಲಾದೆನು? ಮನೆ-ಮನೆಗೂ ಸಂದೇಶ ಕೊಡಬೇಕಾಗಿದೆ - ಈ ಹಳೆಯ ಪ್ರಪಂಚವು ಬದಲಾಗುತ್ತಿದೆ, ತಂದೆಯು ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಸುತ್ತಿದ್ದಾರೆ. ಏಣಿಚಿತ್ರದಲ್ಲಿ ತೋರಿಸಿದ್ದಾರೆ, ಈ ಚಿತ್ರಗಳನ್ನು ಮಾಡಿಸುವುದರಲ್ಲಿ ಪರಿಶ್ರಮವಾಗುತ್ತದೆ. ಮನುಷ್ಯರಿಗೆ ತಿಳಿದುಕೊಳ್ಳುವುದರಲ್ಲಿ ಸಹಜವಾಗಲು ಹೇಗೆ ಮಾಡಿಸುವುದು ಎಂದು ಇಡೀ ದಿನ ವಿಚಾರ ನಡೆಯುತ್ತಾ ಇರುತ್ತದೆ. ಇಡೀ ಪ್ರಪಂಚದವರಂತೂ ಬರುವುದಿಲ್ಲ, ದೇವಿ-ದೇವತಾ ಧರ್ಮದವರೇ ಬರುತ್ತಾರೆ. ನಿಮ್ಮ ಸೇವೆಯು ಬಹಳ ನಡೆಯುವುದಿದೆ. ನಿಮಗೆ ತಿಳಿದಿದೆ, ನಮ್ಮ ತರಗತಿಯು ಎಲ್ಲಿಯವರೆಗೆ ನಡೆಯುವುದು ಎಂದು. ಅವರಂತೂ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ತಿಳಿದುಕೊಳ್ಳುತ್ತಾರೆ ಆದ್ದರಿಂದ ಶಾಸ್ತ್ರ ಇತ್ಯಾದಿಗಳನ್ನು ತಿಳಿಸುತ್ತಲೇ ಇರುತ್ತಾರೆ. ಯಾವಾಗ ಅಂತ್ಯವಾಗುವುದೋ ಆಗ ಎಲ್ಲರ ಸದ್ಗತಿದಾತನು ಬರುವರು ನಂತರ ನಮ್ಮ ಯಾವ ಶಿಷ್ಯರಿರುವರೋ ಅವರಿಗೂ ಗತಿ ಸಿಗುವುದು ನಂತರ ನಾವು ಹೋಗಿ ಜ್ಯೋತಿಯಲ್ಲಿ ಸಮಾವೇಶವಾಗುತ್ತೇವೆ ಎಂದು ತಿಳಿಯುತ್ತಾರೆ. ಆದರೆ ಈ ರೀತಿಯಿಲ್ಲ, ನೀವು ತಿಳಿದುಕೊಂಡಿದ್ದೀರಿ - ನಾವು ಅಮರ ತಂದೆಯ ಮೂಲಕ ಸತ್ಯ-ಸತ್ಯವಾದ ಅಮರ ಕಥೆಯನ್ನು ಕೇಳುತ್ತಿದ್ದೇವೆ ಅಂದಮೇಲೆ ಅಮರ ತಂದೆಯು ಏನು ಹೇಳುತ್ತಾರೆಯೋ ಅದನ್ನು ಪಾಲಿಸಬೇಕು, ಕೇವಲ ಇಷ್ಟೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ. ಇಲ್ಲದಿದ್ದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು, ಪದವಿಯೂ ಕಡಿಮೆ ಸಿಗುವುದು. ಸರ್ವೀಸಿನಲ್ಲಿ ಪರಿಶ್ರಮ ಪಡಬೇಕಾಗಿದೆ. ಹೇಗೆ ಸೇವೆಯಲ್ಲಿ ತಮ್ಮ ಮೂಳೆ-ಮೂಳೆಗಳನ್ನು ಅರ್ಪಿಸಿದರು ಎಂದು ದಧೀಚಿ ಋಷಿಯ ಉದಾಹರಣೆಯಿದೆ, ತಮ್ಮ ಶರೀರದ ವಿಚಾರವನ್ನೂ ಮಾಡದೆ ಸರ್ವೀಸಿನಲ್ಲಿ ಇರಬೇಕಾಗಿದೆ. ಇದಕ್ಕೆ ಮೂಳೆಮೂಳೆಗಳನ್ನು ತೊಡಗಿಸುವುದು ಎಂದು ಹೇಳಲಾಗುತ್ತದೆ ಮತ್ತು ಇನ್ನೊಂದು ಆತ್ಮಿಕ ಅವಿಶ್ರಾಂತ ಸೇವೆಯಾಗಿದೆ, ಆತ್ಮಿಕ ಸೇವಾಧಾರಿಗಳು ಆತ್ಮಿಕ ಜ್ಞಾನವನ್ನೇ ತಿಳಿಸುತ್ತಾ ಇರುತ್ತಾರೆ. ಜ್ಞಾನಧನವನ್ನು ದಾನ ಮಾಡುತ್ತಾ ಖುಷಿಯಲ್ಲಿ ನರ್ತಿಸುತ್ತಾ ಇರುತ್ತಾರೆ. ಪ್ರಪಂಚದಲ್ಲಿ ಮನುಷ್ಯರು ಯಾವ ಸೇವೆ ಮಾಡುವರೋ ಅದು ದೈಹಿಕ ಸೇವೆಯಾಗಿದೆ. ಶಾಸ್ತ್ರಗಳನ್ನು ತಿಳಿಸುತ್ತಾರೆ, ಅದು ಆತ್ಮಿಕ ಸೇವೆಯಲ್ಲ. ಆತ್���ಿಕ ಸೇವೆಯನ್ನು ಕೇವಲ ತಂದೆಯೇ ಕಲಿಸುತ್ತಾರೆ, ಆತ್ಮಿಕ ತಂದೆಯೇ ಆತ್ಮರಿಗೆ ಓದಿಸುತ್ತಾರೆ, ನೀವೀಗ ಸತ್ಯಯುಗ ಹೊಸ ಪ್ರಪಂಚದಲ್ಲಿ ಹೋಗುವುದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಅಲ್ಲಿ ನಿಮ್ಮಿಂದ ಯಾವುದೇ ವಿಕರ್ಮವಾಗುವುದಿಲ್ಲ, ಅದು ರಾಮ ರಾಜ್ಯವಾಗಿದೆ. ಅಲ್ಲಿ ಕೆಲವರೇ ಇರುತ್ತಾರೆ. ಆ ಕೆಲವರೇ ಈಗ ಇಲ್ಲಿ ಬಂದು ಓದುತ್ತಾರೆ, ಈಗಂತೂ ರಾವಣ ರಾಜ್ಯದಲ್ಲಿ ಎಲ್ಲರೂ ದುಃಖಿಯಾಗಿದ್ದಾರಲ್ಲವೆ. ಈ ಇಡೀ ಜ್ಞಾನವೇ ನಂಬರ್ವಾರ್ ಪುರುಷಾರ್ಥದನುಸಾರ ನಿಮ್ಮ ಬುದ್ಧಿಯಲ್ಲಿದೆ. ಏಣಿಯ ಚಿತ್ರದಲ್ಲಿಯೇ ಎಲ್ಲಾ ಜ್ಞಾನವು ಬಂದು ಬಿಡುತ್ತದೆ. ಈ ಚಿತ್ರಗಳನ್ನು ಮಾಡಿಸುವುದಕ್ಕಾಗಿ ಮೆಷಿನರಿ ಬೇಕಾಗಿದೆ. ಆ ಸರ್ಕಾರದ ಪತ್ರಿಕೆಗಳು ಪ್ರತಿನಿತ್ಯವೂ ಎಷ್ಟೊಂದು ಮುದ್ರಿತವಾಗುತ್ತದೆ, ಎಷ್ಟೊಂದು ಕಾರೋಬಾರ್ ನಡೆಯುತ್ತದೆ, ಇಲ್ಲಂತೂ ಎಲ್ಲವನ್ನೂ ಕೈಯಿಂದ ಮಾಡಬೇಕಾಗುತ್ತದೆ.
|
2 |
+
ತಂದೆಯು ತಿಳಿಸುತ್ತಾರೆ - ಈ ಅಂತಿಮ ಜನ್ಮ ಪವಿತ್ರರಾಗಿರಿ, ಇದರಿಂದ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಈ ಜ್ಞಾನವು ಯಾರ ಬಳಿಯೂ ಇಲ್ಲ, ಏಣಿಯ ಚಿತ್ರದಲ್ಲಿ ಅನ್ಯ ಧರ್ಮಗಳ ಸಮಾಚಾರವೆಲ್ಲಿದೆ ಎಂದು ಕೇಳುತ್ತಾರೆ. ಅದೂ ಸಹ ಈ ಗೋಲದ ಚಿತ್ರದಲ್ಲಿ ಮಾಡಿಸಲಾಗಿದೆ. ಅವರಂತೂ ಹೊಸ ಪ್ರಪಂಚದಲ್ಲಿ ಬರುವುದೇ ಇಲ್ಲ, ಅವರಿಗೆ ಶಾಂತಿ ಸಿಗುತ್ತದೆ. ಭಾರತವಾಸಿಗಳೇ ಸ್ವರ್ಗದಲ್ಲಿದ್ದಾರಲ್ಲವೆ. ಭಾರತದಲ್ಲಿಯೇ ತಂದೆಯು ರಾಜಯೋಗವನ್ನು ಕಲಿಸಲು ಬರುತ್ತಾರೆ ಆದ್ದರಿಂದ ಭಾರತದ ಪ್ರಾಚೀನ ರಾಜಯೋಗವನ್ನು ಎಲ್ಲರೂ ಇಚ್ಛಿಸುತ್ತಾರೆ. ಈ ಚಿತ್ರದಿಂದ ತಾವೇ ಅರ್ಥ ಮಾಡಿಕೊಳ್ಳುತ್ತಾರೆ, ಅವಶ್ಯವಾಗಿ ಹೊಸ ಪ್ರಪಂಚದಲ್ಲಿ ಕೇವಲ ಭಾರತವೇ ಇತ್ತು ಎಂದು. ತಮ್ಮ ಧರ್ಮವನ್ನು ತಿಳಿದುಕೊಳ್ಳುತ್ತಾರೆ, ಹೇಗೆ ಕ್ರೈಸ್ಟ್ ಧರ್ಮ ಸ್ಥಾಪನೆ ಮಾಡಲು ಬಂದರು. ಈ ಸಮಯದಲ್ಲಿ ಅವರೂ ಸಹ ಭಿಕಾರಿ ರೂಪದಲ್ಲಿದ್ದಾರೆ, ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಈ ರಚಯಿತ ಮತ್ತು ರಚನೆಯ ಎಷ್ಟು ದೊಡ್ಡ ಜ್ಞಾನವಿದೆ! ನೀವು ಹೇಳಬಹುದು - ನಮಗೆ ಯಾರದೇ ಹಣದ ಅವಶ್ಯಕತೆಯಿಲ್ಲ, ನಾವು ಹಣವನ್ನೇನು ಮಾಡಬೇಕು! ನೀವು ಇದನ್ನು ಕೇಳಿರಿ ಮತ್ತು ಅನ್ಯರಿಗೆ ತಿಳಿಸುವುದಕ್ಕಾಗಿ ಈ ಚಿತ್ರಗಳನ್ನು ಮುದ್ರಣ ಮಾಡಿಸಿರಿ. ಈ ಚಿತ್ರಗಳಿಂದಲೇ ಕೆಲಸ ತೆಗೆದುಕೊಳ್ಳಬೇಕಾಗಿದೆ. ಹಾಲ್ನ್ನು ಮಾಡಿಸಿ, ಅಲ್ಲಿ ಈ ಜ್ಞಾನವನ್ನು ತಿಳಿಸಬಹುದು. ಬಾಕಿ ನಾವು ಹಣವನ್ನು ಏನು ಮಾಡುವುದು? ನಿಮ್ಮದೇ ಮನೆಯ ಕಲ್ಯಾಣವಾಗುವುದು, ನೀವು ಕೇವಲ ಪ್ರಬಂಧ ಮಾಡಿರಿ. ಅನೇಕರು ಬಂದು ಕೇಳುತ್ತಾರೆ. ರಚಯಿತ ಮತ್ತು ರಚನೆಯ ಜ್ಞಾನವು ಬಹಳ ಚೆನ್ನಾಗಿದೆ. ಇದನ್ನು ಮನುಷ್ಯರೇ ತಿಳಿದುಕೊಳ್ಳಬೇಕಾಗಿದೆ. ವಿದೇಶದವರು ಈ ಜ್ಞಾನವನ್ನು ಕೇಳಿ ಬಹಳ ಇಷ್ಟ ಪಡುತ್ತಾರೆ, ಬಹಳ ಖುಷಿಯಾಗುತ್ತಾರೆ ಮತ್ತು ತಿಳಿದುಕೊಳ್ಳುತ್ತಾರೆ, ನಾವೂ ಸಹ ತಂದೆಯ ಜೊತೆ ಯೋಗವನ್ನು ಇಟ್ಟರೆ ವಿಕರ್ಮಗಳು ವಿನಾಶವಾಗುತ್ತವೆ. ಎಲ್ಲರಿಗೆ ತಂ��ೆಯ ಪರಿಚಯ ಕೊಡಬೇಕಾಗಿದೆ. ಈ ಜ್ಞಾನವನ್ನು ಪರಮಪಿತನ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲವೆಂದು ಆಗ ಅವರಿಗೆ ಅರ್ಥವಾಗುವುದು. ಖುದಾನು ಬಹಿಶ್ತ್ನ್ನು ಸ್ಥಾಪನೆ ಮಾಡಿದನೆಂದು ಹೇಳುತ್ತಾರೆ ಆದರೆ ಅವರು ಹೇಗೆ ಬರುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ನಿಮ್ಮ ಮಾತುಗಳನ್ನು ಕೇಳಿ ಬಹಳ ಖುಷಿಯಾಗುತ್ತಾರೆ, ನಂತರ ಪುರುಷಾರ್ಥ ಮಾಡಿ ಯೋಗವನ್ನು ಕಲಿಯುತ್ತಾರೆ. ತಮೋಪ್ರಧಾನರಿಂದ ಸತೋಪ್ರಧಾನರು ಆಗುವುದಕ್ಕಾಗಿಯೂ ಪುರುಷಾರ್ಥ ಮಾಡುತ್ತಾರೆ. ಸರ್ವೀಸಿಗಾಗಿ ಬಹಳ ವಿಚಾರಗಳನ್ನು ಮಾಡಬೇಕು. ಭಾರತದಲ್ಲಿ ಕಲೆಯನ್ನು ತೋರಿಸಿದಾಗ ಅವರು ವಿದೇಶಕ್ಕೂ ಕಳುಹಿಸುವರು. ಇದನ್ನು ಮನುಷ್ಯರು ತಿಳಿದುಕೊಳ್ಳುತ್ತಾರೆ, ಹೊಸ ಪ್ರಪಂಚವು ಸ್ಥಾಪನೆಯಾಗುವುದರಲ್ಲಿ ತಡವಾಗುತ್ತದೆಯೇ? ಎಲ್ಲಿಯಾದರೂ ಭೂಕಂಪವಾದರೆ 2-3 ವರ್ಷಗಳಲ್ಲಿ ಹೊಸ-ಹೊಸ ಮನೆಗಳು ತಯಾರಾಗಿ ಬಿಡುತ್ತವೆ. ಎಷ್ಟು ಮಂದಿ ಕಾರ್ಮಿಕರಿರುವರೋ ಅಷ್ಟು ಬೇಗನೆ ಮನೆಯಾಗುತ್ತದೆ. ಒಂದು ತಿಂಗಳಿನಲ್ಲಿಯೂ ಮನೆಯನ್ನು ಕಟ್ಟಿಸುತ್ತಾರೆ. ಕಾರ್ಮಿಕರು ಸಾಮಾನು ಇತ್ಯಾದಿಗಳೆಲ್ಲವೂ ತಯಾರಿದ್ದರೆ ಮತ್ತೆ ಮನೆಯು ಕಟ್ಟಿಸುವುದರಲ್ಲಿ ತಡವಾಗುವುದಿಲ್ಲ. ವಿದೇಶದಲ್ಲಿ ಮನೆಗಳು ಹೇಗೆ ತಯಾರಾಗುತ್ತವೆ - ಮಿನಿಟ್ ಮೋಟಾರು. ಅಂದಮೇಲೆ ಸ್ವರ್ಗದಲ್ಲಿ ಇನ್ನೆಷ್ಟು ಬೇಗನೆ ಆಗಬಹುದು! ಚಿನ್ನ, ಬೆಳ್ಳಿ ಬಹಳಷ್ಟು ನಿಮಗೆ ಸಿಗುತ್ತದೆ. ಗಣಿಗಳಿಂದ ಚಿನ್ನ, ಬೆಳ್ಳಿ, ವಜ್ರಗಳನ್ನು ತೆಗೆದುಕೊಂಡು ಬರುತ್ತಾರೆ. ಕಲೆ ಎಲ್ಲವನ್ನೂ ಕಲಿಯುತ್ತಿದ್ದಾರೆ. ವಿಜ್ಞಾನದ ಅಭಿಮಾನವು ಎಷ್ಟಿದೆ! ಇದೇ ವಿಜ್ಞಾನವು ಮತ್ತೆ ಸತ್ಯಯುಗದಲ್ಲಿಯೂ ಕೆಲಸಕ್ಕೆ ಬರುತ್ತದೆ. ಇಲ್ಲಿ ಕಲಿಯುವವರು ಅಲ್ಲಿ ಇನ್ನೊಂದು ಜನ್ಮವನ್ನು ತೆಗೆದುಕೊಂಡು ಕೆಲಸಕ್ಕೆ ಬರುತ್ತಾರೆ. ಆ ಸಮಯದಲ್ಲಿ ಎಲ್ಲವೂ ಹೊಸ ಪ್ರಪಂಚವಾಗಿ ಬಿಡುತ್ತದೆ. ರಾವಣ ರಾಜ್ಯವೇ ಸಮಾಪ್ತಿಯಾಗುತ್ತದೆ. ಪಂಚತತ್ವಗಳೂ ಸಹ ಆದೇಶದ ಅನುಸಾರ ಸೇವೆ ಮಾಡುತ್ತದೆ, ಸ್ವರ್ಗವಾಗಿ ಬಿಡುತ್ತದೆ. ಅಲ್ಲಿ ಯಾವುದೇ ಉಪದ್ರವಗಳಾಗುವುದಿಲ್ಲ, ರಾವಣ ರಾಜ್ಯವೇ ಇರುವುದಿಲ್ಲ. ಎಲ್ಲರೂ ಸತೋಪ್ರಧಾನರಾಗುತ್ತಾರೆ. ಎಲ್ಲದಕ್ಕಿಂತ ಒಳ್ಳೆಯ ಮಾತಾಗಿದೆ - ತಂದೆಯೊಂದಿಗೆ ಬಹಳ ಪ್ರೀತಿಯಿರಬೇಕು. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಬೇಕು ಮತ್ತು ಅನ್ಯರಿಗೆ ದಾನ ಮಾಡಬೇಕಾಗಿದೆ. ಎಷ್ಟು ದಾನ ಮಾಡುವಿರೋ ಅಷ್ಟು ಒಟ್ಟುಗೂಡುತ್ತಾ ಹೋಗುವುದು, ಸೇವೆಯನ್ನೇ ಮಾಡದಿದ್ದರೆ ಧಾರಣೆ ಹೇಗಾಗುವುದು! ಸರ್ವೀಸಿನಲ್ಲಿ ಬುದ್ಧಿಯನ್ನು ಓಡಿಸಬೇಕು. ಸರ್ವೀಸ್ ಬಹಳಷ್ಟು ಆಗುತ್ತದೆ. ಯಾರಾದರೂ ಮಾಡುತ್ತಾ ಇರಿ, ದಿನ-ಪ್ರತಿದಿನ ಉನ್ನತಿಯನ್ನು ಪಡೆಯಬೇಕಾಗಿದೆ. ತಮ್ಮ ಉನ್ನತಿಯನ್ನೂ ಮಾಡಿಕೊಳ್ಳಬೇಕಾಗಿದೆ. ಒಳ್ಳೆಯದು.
|
3 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
4 |
+
ಧಾರಣೆಗಾಗಿ ಮುಖ್ಯಸಾರ:
|
5 |
+
1. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಗೌರವ ಕೊಡಬೇಕಾಗಿದೆ. ಸರ್ವೀಸಿನ ಬಹಳ-ಬಹಳ ಉಮ್ಮಂಗವನ್ನು ಇಟ್ಟುಕೊಳ್ಳಬೇಕು. ಜ್ಞಾನರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ಅದರ ದಾನ ಮಾಡಬೇಕಾಗಿದೆ.
|
6 |
+
2. ಒಬ್ಬ ತಂದೆಯಿಂದಲೇ ಕೇಳುವ ಸಂಕಲ್ಪವನ್ನು ಇಡಬೇಕಾಗಿದೆ. ಅನ್ಯ ವಿಚಾರಗಳಲ್ಲಿ ಬುದ್ಧಿಯನ್ನು ಅಲೆದಾಡಿಸಬಾರದು.
|
BKMurli/BKMurli/page_1029.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ, ಈಗ ಇವೆರಡು ಸಾಲಿನ ಅರ್ಥವನ್ನು ಯಾರು ತಿಳಿದುಕೊಂಡಿದ್ದೀರಿ, ಅವರು ಕೈಯನ್ನೆತ್ತಿರಿ? ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆಂದು ಯಾರು ಹೇಳಿದರು? ಆತ್ಮ. ನಾನು ಅದೃಷ್ಟವನ್ನು ರೂಪಿಸಿಕೊಂಡು ಬಂದಿದ್ದೇನೆ ಎಂದು ಎಲ್ಲಾ ಆತ್ಮರು ಹೇಳುತ್ತಾರೆ ಅಂದಾಗ ಯಾವ ಅದೃಷ್ಟ? ಹೊಸ ಪ್ರಪಂಚದಲ್ಲಿ ಹೋಗುವ ಅದೃಷ್ಟವಾಗಿದೆ. ಹೊಸ ಪ್ರಪಂಚವು ಸ್ವರ್ಗವಾಗಿದೆ, ಈ ಹಳೆಯ ಪ್ರಪಂಚವು ನರಕವಾಗಿದೆ ಆದ್ದರಿಂದ ಇದನ್ನು ಎಲ್ಲಾ ಆತ್ಮರೂ ಹೇಳುತ್ತಾರೆ. ಆತ್ಮಕ್ಕೆ ಶರೀರವಿದ್ದಾಗಲೇ ಮಾತನಾಡಲು ಸಾಧ್ಯವಾಗುವುದು. ನಾವು ಶಾಲೆಯಲ್ಲಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆಂದು ಜೀವಾತ್ಮರು ಹೇಳುತ್ತಾರೆ. ಇಲ್ಲಿ ಓದಿಸುವವರು ಯಾರು? ಶಿವ ತಂದೆ, ಜ್ಞಾನ ಸಾಗರ. ಮನುಷ್ಯನನ್ನು ದೇವತೆ ಅಥವಾ ಪತಿತರನ್ನು ಪಾವನ, ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವವರು ಅವರೊಬ್ಬರೇ ಆಗಿದ್ದಾರೆ. ಈ ನರಕಕ್ಕೆ ಬೆಂಕಿ ಬೀಳಲಿದೆ. ಪ್ರಪಂಚದಲ್ಲಿ ನಾವು ಬೇಹದ್ದಿನ ತಂದೆಯ ಬಳಿ ಬಂದಿದ್ದೇವೆ ಎಂದು ಹೇಳುವಂತಹ ಶಾಲೆಯು ಯಾವುದೂ ಇಲ್ಲ ಅಥವಾ ನಾನು ತಂದೆಯೂ ಆಗಿದ್ದೇನೆ, ಶಿಕ್ಷಕನೂ ಆಗಿದ್ದೇನೆ, ಗುರುವೂ ಆಗಿದ್ದೇನೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಈ ಬ್ರಹ್ಮಾರವರೂ ಸಹ ಹೇಳಲು ಸಾಧ್ಯವಿಲ್ಲ. ನಾನು ಎಲ್ಲರ ತಂದೆ, ಶಿಕ್ಷಕ, ಗುರುವಾಗಿದ್ದೇನೆಂದು ಒಬ್ಬ ಶಿವ ತಂದೆಯೇ ಹೇಳುತ್ತಾರೆ. ಅವರೇ ಕುಳಿತು ಓದಿಸುತ್ತಾರೆ ಅಂದಮೇಲೆ ಈಗ ಮಕ್ಕಳು ಅದೃಷ್ಟವನ್ನು ರೂಪಿಸಿಕೊಳ್ಳಬೇಕಾಗಿದೆ. ಮಕ್ಕಳು ಹೇಳುತ್ತೀರಿ - ನಾವು ಹೊಸ ಪ್ರಪಂಚದ ರಾಜಧಾನಿಯ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆ. ನಮಗೆ ತಿಳಿದಿದೆ, ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ತಂದೆಯು ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ನೀವು 21 ಜನ್ಮಗಳ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಲು ಓದುತ್ತೀರೆಂದರೆ, ರಾಜ್ಯ ಪದವಿಯ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ಇಲ್ಲಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ಈ ಹಾಡುಗಳನ್ನು ಭಲೆ ಆ ನಾಟಕದವರು ಬರೆದಿದ್ದಾರೆ ಆದರೆ ಇದರ ಅರ್ಥವನ್ನು ಈಗ ತಿಳಿಸಬೇಕಾಗಿದೆ. ಹೇಗೆ ತಂದೆಯು ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಭಕ್ತಿಯಿದೆ. ಸತ್ಯಯುಗದಲ್ಲಿ ಭಕ್ತಿ, ಮಂದಿರ ಇತ್ಯಾದಿಗಳಿರುವುದಿಲ್ಲ. ನೀವು ಅರ್ಧಕಲ್ಪ ಭಕ್ತಿ ಮಾಡಿದ್ದೀರಿ. ಈಗಂತೂ ಭಗವಂತ ಸಿಕ್ಕಿ ಬಿಟ್ಟಿದ್ದಾರೆ. ಭಾರತದಲ್ಲಿ ಮೊಟ್ಟ ಮೊದಲು ಈ ದೇವಿ-ದೇವತೆಗಳ ರಾಜ್ಯವಿತ್ತು ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಅದೃಷ್ಟವು ಕೆಟ್ಟು ಹೋಗಿದೆ, ಈಗ ಪುನಃ ಅದೃಷ್ಟವನ್ನು ರೂಪಿಸುತ್ತಾರೆ, ತಂದೆಯು ಅದೃಷ್ಟವನ್ನು ರೂಪಿಸುವುದಕ್ಕಾಗಿಯೇ ಬಂದಿದ್ದಾರೆ. ಮಕ್ಕಳೇ, ನನ್ನನ್ನು ನೆನಪು ಮಾಡಿರಿ, ನೀವು ಬಹಳ ಪಾಪಾತ್ಮರಾಗಿ ಬಿಟ್ಟಿದ್ದೀರಿ ಎಂದು ಹೇಳುತ್ತಾರೆ. ಮೊಟ್ಟ ಮೊದಲು ಶಿವ ತಂದೆಯ ಭಕ್ತಿಯು ನಡೆಯುತ್ತದೆ, ಅದು ಅವ್ಯಭಿಚಾರಿ ಭಕ್ತಿಯಾಗಿದೆ ನಂತರ ಭಕ್ತಿಯೂ ಸಹ ವ್ಯಭಿಚಾರಿಯಾಗಿ ಬಿಡುತ್ತದೆ ಅಂದಾಗ ಮಕ್ಕಳಿಗೆ ಮೊಟ್ಟ ಮೊದಲು ಈ ನಿಶ್ಚಯವಿರಲಿ - ಯಾರಿಗೆ ಭಗವಂತನೆಂದು ಹೇಳಲಾಗುತ್ತದೆಯೋ ಅವರೇ ನಮಗೆ ಓದಿಸುತ್ತಾರೆ. ಅವರಿಗೆ ಯಾವುದೇ ಶರೀರವಿಲ್ಲ. ಅವರು ಈ ಶರೀರದಲ್ಲಿ (ಬ್ರಹ್ಮಾ) ಕುಳಿತು ಮಾತನಾಡುತ್ತಾರೆ. ಹೇಗೆ ನಿಮ್ಮ ಆತ್ಮವು ಈ ಶರೀರದಲ್ಲಿ ಬಂದಾಗ ಮಾತನಾಡತೊಡಗುತ್ತದೆ. ಕೆಲಕೆಲವೊಮ್ಮೆ ಮನುಷ್ಯರು ಸತ್ತು ಹೋಗುತ್ತಾರೆ, ನಂತರ ಯಾವಾಗ ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆಯೋ ಆಗ ಅರ್ಧದಲ್ಲಿಯೇ ಅಲುಗಾಡುತ್ತಾರೆ, ಆತ್ಮವು ಹೊರಟು ಹೋಗಿ ಮತ್ತೆ ಬಂದಿತೆಂದಲ್ಲ, ಆತ್ಮವು ಬಹಳ ಸೂಕ್ಷ್ಮವಾಗಿದೆಯಲ್ಲವೇ ಆದ್ದರಿಂದ ಎಲ್ಲಿಯೋ ಬಚ್ಚಿಟ್ಟುಕೊಂಡಿರುತ್ತದೆ ಆದ್ದರಿಂದ ಈ ರೀತಿ ಹೇಳಬಹುದು – ಮೂರ್ಛಿತರಾಗಿ ಬಿಟ್ಟರು, ಅದು ಯಾರಿಗೂ ಅರ್ಥವಾಗಲಿಲ್ಲ. ಹೀಗೆ ಕೆಲಕೆಲವೊಮ್ಮೆ ಆಗಿ ಬಿಡುತ್ತದೆ. ಚಿತೆಯಿಂದಲೂ ಎದ್ದು ಕುಳಿತುಕೊಳ್ಳುತ್ತಾರೆ ಮತ್ತೆ ಅವರನ್ನು ಮೇಲೇತ್ತುತ್ತಾರೆ. ಇದೇನಾಯಿತು? ಆತ್ಮವು ಶರೀರದಲ್ಲಿಯೇ ಎಲ್ಲಿಯೋ ಪಕ್ಕಕ್ಕೆ ಸರಿದಿರುತ್ತದೆ. ಮತ್ತೆ ತನ್ನ ಸ್ಥಾನಕ್ಕೆ ಬಂದು ಬಿಡುತ್ತದೆ. ಆತ್ಮವಿಲ್ಲದಿದ್ದರೆ ಶರೀರವು ಒಮ್ಮೆಲೆ ಜಡವಾಗಿ ಬಿಡುತ್ತದೆ. ಅಂದಾಗ ಆತ್ಮರ ದೇಶವು ಪರಮಧಾಮವಾಗಿದೆ, ನೀವು ತಿಳಿದುಕೊಂಡಿದ್ದೀರಿ - ನಾವು ಆ ಮನೆಯ ನಿವಾಸಿಗಳಾಗಿದ್ದೇವೆ ಮೊಟ್ಟ ಮೊದಲು ನಾವಾತ್ಮರು ಮನೆಯಿಂದ ಸತ್ಯಯುಗದಲ್ಲಿ ಬಂದೆವು. ಭಾರತವಾಸಿಗಳು ಯಾರು ದೇವಿ-ದೇವತೆಗಳಾಗಿದ್ದರೋ ಅವರೇ ಬಂದು ಬಿಟ್ಟರು. ವಾಸ್ತವದಲ್ಲಿ ಯಾರು-ಯಾರು ಧರ್ಮ ಸ್ಥಾಪನೆ ಮಾಡುತ್ತಾರೆಯೋ ಅವರ ಧರ್ಮವು ಕೊನೆಯವರೆಗೂ ಸ್ಥಿರವಾಗಿರುತ್ತದೆ. ಬುದ್ಧನ ಧರ್ಮವು ಸ್ಥಿರವಾಗಿದೆ, ಕ್ರೈಸ್ಟ್ನ ಧರ್ಮವೂ ಸ್ಥಿರವಾಗಿದೆ. ಕೇವಲ ದೇವಿ-ದೇವತಾ ಧರ್ಮದವರು ಯಾರು ರಾಜ್ಯ ಮಾಡುತ್ತಿದ್ದರೋ ಅವರ ಹೆಸರೇ ಮರೆಯಾಗಿದೆ. ತಮ್ಮನ್ನು ದೇವಿ-ದೇವತಾ ಧರ್ಮದವರೆಂದು ಹೇಳಿಕೊಳ್ಳುವವರು ಯಾರೂ ಇಲ್ಲ.
|
2 |
+
ತಂದೆಯು ತಿಳಿಸುತ್ತಾರೆ - ಭಾರತವಾಸಿಗಳು ತಮ್ಮ ಧರ್ಮವನ್ನೇ ಮರೆತು ಹೋಗಿದ್ದಾರೆ - ನಮ್ಮ ಗೃಹಸ್ಥ ಧರ್ಮವು ಪವಿತ್ರವಾಗಿತ್ತು, ಸಂಪೂರ್ಣ ನಿರ್ವಿಕಾರಿ ಮಹಾರಾಜ-ಮಹಾರಾಣಿಯ ರಾಜ್ಯವಿತ್ತು. ಅವರಿಗೆ ಭಗವತಿ ಲಕ್ಷ್ಮಿ ಮತ್ತು ಭಗವಾನ್ ನಾರಾಯಣನೆಂದು ಹೇಳುತ್ತಾರೆ. ವಾಸ್ತವದಲ್ಲಿ ಭಗವಂತನು ಒಬ್ಬರೇ ಆಗಿದ್ದಾರೆ, ಅವರಿಗೇ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಈ ಲಕ್ಷ್ಮೀ-ನಾರಾಯಣರಲ್ಲಿ ಯಾವುದೇ ಜ್ಞಾನವಿಲ್ಲ, ಜ್ಞಾನಸಾಗರನು ಒಬ್ಬ ಶಿವ ತಂದೆಯೇ ಆಗಿದ್ದಾರೆ. ಅವರು ಕುಳಿತು ನೀವು ಮಕ್ಕಳಿಗೇ ಜ್ಞಾನವನ್ನು ಕೊಡುತ್ತಾರೆ. ನೀವೀಗ ಓದುತ್ತಿದ್ದೀರಿ, ಈ ವಿದ್ಯೆಯನ್ನು ಸತ್ಯಯುಗದಲ್ಲಿ ಮರ��ತು ಹೋಗುತ್ತೀರಿ. ಈಗ ನೀವು ಪ್ರತಿಯೊಬ್ಬರೂ ತಿಳಿದುಕೊಂಡಿದ್ದೀರಿ - ನಾವಾತ್ಮರಲ್ಲಿ 84 ಜನ್ಮಗಳ ರೆಕಾರ್ಡ್ ತುಂಬಲ್ಪಟ್ಟಿದೆ. ಆತ್ಮವೇ ಈಗ ಜ್ಞಾನವನ್ನು ತೆಗೆದುಕೊಳ್ಳುತ್ತಿದೆ, ನಂತರ ಸತ್ಯಯುಗದಲ್ಲಿ ಹೋಗಿ ತನ್ನ ರಾಜ್ಯಭಾರ ಮಾಡುವುದು. ನೀವು ಹೇಳುತ್ತೀರಿ - ನಾವು 84 ಜನ್ಮಗಳ ಚಕ್ರವನ್ನು ಸುತ್ತಿದೆವು, ಈಗ ತಂದೆಯಿಂದ ನಾವು ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರೂ ಆ ತಾತನಿಂದಲೇ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಆದರೆ ತಮ್ಮ-ತಮ್ಮ ಪುರುಷಾರ್ಥದನುಸಾರ. ಇದರಲ್ಲಿ ಭಾಗವನ್ನು ಹಂಚಲಾಗುವುದಿಲ್ಲ, ಲೌಕಿಕದಲ್ಲಿ ಹಂಚಲಾಗುತ್ತದೆಯಲ್ಲವೇ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ನಾನು ವೈಕುಂಠ ಸ್ಥಾಪನೆ ಮಾಡುತ್ತೇನೆ, ಅದರಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವುದು ನಿಮ್ಮ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತದೆ, ಪವಿತ್ರರಾಗುತ್ತೀರಿ. ಚಿನ್ನವನ್ನು ಭಟ್ಟಿಯಲ್ಲಿ ಹಾಕಲಾಗುತ್ತದೆಯಲ್ಲವೇ. ಆಗ ಅದರಿಂದ ತುಕ್ಕು ಬಿಟ್ಟುಹೋಗಿ ಅಪ್ಪಟ ಚಿನ್ನದಂತೆ ಗಟ್ಟಿಯಾಗಿ ಬಿಡುತ್ತದೆ. ಈ ಆತ್ಮವೂ ಸಹ ಸತ್ಯ ಚಿನ್ನವಾಗಿತ್ತು ನಂತರ ಇಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತದೆ. ಮೊದಲು ಸತೋಪ್ರಧಾನವಾಗಿರುತ್ತದೆ ನಂತರ ಅದರಲ್ಲಿ ಬೆಳ್ಳಿಯ ಬೆರಕೆಯಾಗುತ್ತದೆ, ಆತ್ಮವು ಸ್ವಲ್ಪ ಅಪವಿತ್ರವಾಗುತ್ತದೆ. ನಂತರ ನಿಧಾನ-ನಿಧಾನವಾಗಿ ಹಳೆಯದಾಗುತ್ತಾ ಹೋಗುತ್ತದೆ. ಮನೆಯೂ ಸಹ ಮೊದಲು ಹೊಸದಾಗಿರುತ್ತದೆ ನಂತರ ಹಳೆಯದಾಗತೊಡಗುತ್ತದೆ. 100 ವರ್ಷಗಳ ನಂತರ ಅದಕ್ಕೆ ಹಳೆಯದೆಂದೇ ಹೇಳುತ್ತಾರೆ. ಹಾಗೆಯೇ ಪ್ರಪಂಚವೂ ಸಹ ಹೊಸದು ಮತ್ತು ಹಳೆಯದಾಗುತ್ತದೆ. ಇಂದಿಗೆ 5000 ವರ್ಷಗಳ ಮೊದಲು ಹೊಸದಾಗಿತ್ತು, ಈ ದೇವಿ-ದೇವತೆಗಳ ರಾಜ್ಯವಿತ್ತು ಅದು ಎಲ್ಲಿ ಹೋಯಿತು? 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಹಳೆಯದಾಗಿ ಬಿಟ್ಟಿದೆ. ಆತ್ಮವೂ ಸಹ ಮೈಲಿಗೆ ಮತ್ತು ಶರೀರವೂ ಮೈಲಿಗೆಯಾಗಿ ಬಿಟ್ಟಿತು. ಪಾವನರಿಂದ ಪತಿತರಾಗಿ ಬಿಟ್ಟಿರಿ. ಕೃಷ್ಣನೂ ಸಹ ಶ್ಯಾಮ ಮತ್ತು ಸುಂದರನೆಂದು ತೋರಿಸುತ್ತಾರಲ್ಲವೇ. ಕಾಲು ನರಕದ ಕಡೆ ಮುಖವನ್ನು ಸ್ವರ್ಗದ ಕಡೆ ತೋರಿಸಬೇಕಾಗಿದೆ. ನೀವೂ ಸಹ ಆ ಕುಲದವರಾಗಿದ್ದೀರಿ, ನಿಮ್ಮದು ಕಾಲು ನರಕದ ಕಡೆ ಮುಖವು ಸ್ವರ್ಗದ ಕಡೆಯಿದೆ. ನೀವೀಗ ಮೊದಲು ನಿರ್ವಾಣಧಾಮದಲ್ಲಿ ಹೋಗಿ ನಂತರ ಸ್ವರ್ಗದಲ್ಲಿ ಬರುತ್ತೀರಿ. ಕಲಿಯುಗಕ್ಕೆ ಬೆಂಕಿ ಬೀಳುವುದು. ಅಣ್ವಸ್ತ್ರಗಳ ಮಳೆ, ಬೆಂಕಿ, ಭೂಕಂಪ ಇತ್ಯಾದಿಗಳಾಗುವುದು. ಪತಿತ ಆತ್ಮರೆಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿ ಮನೆಗೆ ಹೊರಟು ಹೋಗುವರು. ಇನ್ನು ಕೆಲವರೇ ಉಳಿಯುತ್ತಾರೆ. ಪವಿತ್ರ ಆತ್ಮರು ಬರತೊಡಗುತ್ತಾರೆ. ಈಗಂತೂ ಎಲ್ಲರೂ ಮುಳ್ಳುಗಳಾಗಿದ್ದಾರೆ. ಕಾಮ ಕಟಾರಿಯನ್ನು ನಡೆಸುವುದು ಮುಳ್ಳು ಚುಚ್ಚುವುದಾಗಿದೆ. ಇಲ್ಲಂತೂ ತಂದೆಯು ತಿಳಿಸುತ್ತ���ರೆ - ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ. ನನ್ನನ್ನು ನೆನಪು ಮಾಡಿರಿ, ನಾನು ನಿಮಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತೇನೆ, ನೀವು ಪವಿತ್ರರಾಗಿ ಬಿಡುತ್ತೀರಿ. ನೀವು ಪಾವನರಾಗಿದ್ದಾಗ ಗೃಹಸ್ಥ ವ್ಯವಹಾರವೂ ಪವಿತ್ರವಾಗಿತ್ತು, ನೀವೀಗ ಪತಿತರಾಗಿದ್ದೀರಿ ಆದ್ದರಿಂದ ಗೃಹಸ್ಥ ವ್ಯವಹಾರವೂ ಸಹ ಅಪವಿತ್ರ ವಿಕಾರಿಯಾಗಿದೆ. ಸತ್ಯಯುಗದಲ್ಲಿ ವ್ಯಾಪಾರ ವ್ಯವಹಾರವೂ ಸಹ ಸತ್ಯತೆಯಿಂದ ನಡೆಯುತ್ತದೆ. ಅಲ್ಲಿ ಅಸತ್ಯ ಹೇಳುವ ಅವಶ್ಯಕತೆಯೇ ಇರುವುದಿಲ್ಲ. ಯಾವಾಗ ಹೆಚ್ಚು ಹಣವನ್ನು ಸಂಪಾದಿಸುವ ಲೋಭವಿರುತ್ತದೆಯೋ ಆಗಲೇ ಸುಳ್ಳು ಹೇಳಲಾಗುತ್ತದೆ. ಅಲ್ಲಂತೂ ಅಪಾರ ಧನವಿರುತ್ತದೆ, ಆಹಾರ ಧಾನ್ಯಗಳಿಗೆ ಬೆಲೆ ಕಟ್ಟುವುದಿಲ್ಲ. ಅಲ್ಲಿ ಯಾರೂ ಬಡವರಿರುವುದೇ ಇಲ್ಲ. ಯಾರು ಚೆನ್ನಾಗಿ ಪುರುಷಾರ್ಥ ಮಾಡುವರೋ ಅವರು ಮಹಾರಾಜನಾಗುವರು. ವಜ್ರ ವೈಢೂರ್ಯಗಳ ಮಹಲುಗಳು ಸಿಗುತ್ತವೆ. ಸಂಪೂರ್ಣ ಪುರುಷಾರ್ಥ ಮಾಡದಿದ್ದರೆ ಪ್ರಜೆಗಳಲ್ಲಿ ಹೋಗುವರು. ರಾಜಾ-ರಾಣಿ ಮತ್ತೆ ರಾಜಕುಮಾರ-ರಾಜಕುಮಾರಿ ಇಡೀ ಮನೆತನ ಇರುತ್ತದೆಯಲ್ಲವೇ. ಮತ್ತೆ ಪ್ರಜೆಗಳಲ್ಲಿಯೂ ಸಹ ನಂಬರ್ವಾರ್ ಸಾಹುಕಾರರು ಮತ್ತು ಬಡ ಪ್ರಜೆಗಳಾಗುತ್ತಾರೆ. ಅಲ್ಲಂತೂ ಎಲ್ಲರೂ ಪವಿತ್ರರಾಗಿರುತ್ತಾರೆ. ರಾಜಾ-ರಾಣಿ ಮತ್ತು ಒಬ್ಬರೇ ಮಂತ್ರಿ. ಅಲ್ಲಿ ಅನೇಕ ಮಂತ್ರಿಗಳು ಇರುವುದಿಲ್ಲ ರಾಜನಲ್ಲಿಯೇ ರಾಜ್ಯ ನಡೆಸುವ ಬಲವಿರುತ್ತದೆ ಅಂದಾಗ ತಂದೆಯು ಹೇಗೆ ತಿಳಿಸುತ್ತಾರೆಯೋ ಹಾಗೆಯೇ ಮಕ್ಕಳೂ ತಿಳಿಸಬೇಕಾಗಿದೆ - ನಾವು ಭಾರತವಾಸಿ ದೇವಿ-ದೇವತೆಗಳಾಗಿದ್ದೆವು. ಸತ್ಯಯುಗದಲ್ಲಿ ನಮ್ಮ ರಾಜ್ಯವಿತ್ತು, ಗೃಹಸ್ಥ ವ್ಯವಹಾರದಲ್ಲಿ ನಾವು ಪವಿತ್ರರಾಗಿದ್ದೆವು, ಸ್ವರ್ಗವಾಸಿಗಳಾಗಿದ್ದೆವು ನಂತರ ಪತಿತರಾಗುತ್ತಾ ಆಗುತ್ತಾ ನರಕವಾಸಿಗಳಾಗಿದ್ದೇವೆ ಮತ್ತೆ ಸ್ವರ್ಗವಾಸಿಗಳಾಗುತ್ತೇವೆ. ಈ ಆಟವು ಮಾಡಲ್ಪಟ್ಟಿದೆ. ಒಂದು ಜನ್ಮದಲ್ಲಿಯೇ ಸ್ವರ್ಗವಾಸಿಗಳಾಗುತ್ತೀರಿ ಮತ್ತೆ ನರಕವಾಸಿಗಳಾಗುವುದರಲ್ಲಿ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಣಿಯ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿ ತೋರಿಸಲಾಗಿದೆ. ನಾವು ಹೋಗಿ ಸ್ವರ್ಗದಲ್ಲಿ ರಾಜ್ಯಭಾರ ಮಾಡುತ್ತೇವೆ, ಈಗ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂದು ಬುದ್ಧಿಯಲ್ಲಿ ಬಂದಿದೆ. ತಂದೆಯೇ ಸತ್ಯವನ್ನು ತಿಳಿಸಿ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಮನುಷ್ಯರು ಯಾರು ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಾರೆಯೋ ಅವರು ಯಾರೂ ನರನಿಂದ ನಾರಾಯಣನಾಗುವುದಿಲ್ಲ ಅಂದಮೇಲೆ ಆ ಕಥೆಯು ಅಸತ್ಯವಾಯಿತಲ್ಲವೇ.ಇಲ್ಲಿ ನೀವು ನರನಿಂದ ನಾರಾಯಣನಾಗುವುದಕ್ಕಾಗಿ ಕುಳಿತಿದ್ದೀರಿ. ಅಲ್ಲಿ ಯಾರೂ ಸಹ ಪವಿತ್ರರಾಗಿ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುವುದಿಲ್ಲ, ಹುಣ್ಣಿಮೆಯ ದಿನ ಸತ್ಯನಾರಾಯಣನ ಕಥೆಯನ್ನು ಹೇಳುತ್ತಾರೆ, ಈಗ ಈ ಸಮಯದಲ್ಲಿ ಸಂಪೂರ್ಣ ಚಂದ್ರಮನಿಗೆ ಹುಣ್ಣಿಮೆಯೆಂದು ಹೇಳಲಾಗುತ್ತದೆ. ನಂತರ ಕೊನೆಯಲ್ಲಿ ಯಾವಾಗ ಚಂದ್ರನಲ್ಲಿ ಒಂದು ಗೆರೆಯಷ್ಟು ಉಳಿಯುತ್ತದೆಯೋ ಅದಕ್ಕೆ ಅಮಾವಾಸ್ಯೆ ಎಂದು ಹೇಳಲಾಗುತ್ತದೆ. ಅಮಾವಾಸ್ಯೆ ಎಂದರೆ ಅಂಧಕಾರ ರಾತ್ರಿ, ಸತ್ಯ-ತ್ರೇತಾಯುಗಕ್ಕೆ ದಿನವೆಂತಲೂ, ದ್ವಾಪರ-ಕಲಿಯುಗಕ್ಕೆ ರಾತ್ರಿಯೆಂತಲೂ ಹೇಳಲಾಗುತ್ತದೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ, ಇದನ್ನು ಶಿವ ತಂದೆಯೇ ಓದಿಸುತ್ತಾರೆ ಅವರು ತಂದೆಯೂ ಆಗಿದ್ದಾರೆ, ಶಿಕ್ಷಕ ಮತ್ತು ಸದ್ಗುರುವೂ ಆಗಿದ್ದಾರೆ, ಇವರಲ್ಲಿ ಪ್ರವೇಶ ಮಾಡಿ ಆತ್ಮರಿಗೆ ತಿಳಿಸುತ್ತಾರೆ.
|
3 |
+
ತಂದೆಯು ತಿಳಿಸುತ್ತಾರೆ - ಹೇಗೆ ಇವರ ಆತ್ಮವು (ಬ್ರಹ್ಮ) ಭೃಕುಟಿಯ ಮಧ್ಯದಲ್ಲಿ ಕುಳಿತಿದೆಯೋ ಹಾಗೆಯೇ ನಾನೂ ಸಹ ಬಂದು ಇಲ್ಲಿ ಕುಳಿತುಕೊಳ್ಳುತ್ತೇನೆ, ನಿಮಗೆ ತಿಳಿಸುತ್ತೇನೆ. ನೀವು ಮೊದಲು ಪಾವನರಾಗಿದ್ದಿರಿ ನಂತರ ಪತಿತರಾಗುತ್ತೀರಿ. ಈಗ ತಂದೆಯಾದ ನನ್ನನ್ನು ನೆನಪು ಮಾಡಿರಿ, ಪವಿತ್ರರಾಗದೇ ಮನೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪವಿತ್ರರಾದಾಗಲೇ ಹಾರುವಿರಿ. ಹೇ ಪತಿತ-ಪಾವನ ಬನ್ನಿ, ಪಾವನರನ್ನಾಗಿ ಮಾಡಿ, ಆಗಲೇ ನಾವು ಹಾರುವೆವು, ನಮ್ಮ ಮನೆಯಾದ ಮುಕ್ತಿಧಾಮದಲ್ಲಿ ಹೋಗುವೆವು ಎಂದು ಎಲ್ಲರೂ ಕರೆಯುತ್ತಾರೆ. ಅದು ನಾವಾತ್ಮರ ಮನೆಯಾಗಿದೆ, ಪತಿತರ ಮನೆಗೆ ಹೋಗಲು ಸಾಧ್ಯವಿಲ್ಲ. ಶಿಕ್ಷಣವನ್ನು ಯಾರು ಚೆನ್ನಾಗಿ ಧಾರಣೆ ಮಾಡಿಕೊಳ್ಳುವರೋ ಅವರು ಬೇಗನೆ ಸ್ವರ್ಗದಲ್ಲಿ ಬರುತ್ತಾರೆ, ಇಲ್ಲದಿದ್ದರೆ ತಡವಾಗಿ ಬರುತ್ತಾರೆ. ಹೊಸ ಮನೆಯಲ್ಲಿ ಬರಬೇಕಲ್ಲವೇ. ಹೊಸ ಮನೆಯಲ್ಲಿಯೇ ಮಜಾ ಬರುತ್ತದೆಯಲ್ಲವೇ. ಸತ್ಯಯುಗದಲ್ಲಿ ಮೊಟ್ಟ ಮೊದಲಿಗೆ ಬರಬೇಕಾಗಿದೆ. ಮಮ್ಮಾ-ಬಾಬಾರವರು ಸತ್ಯಯುಗದಲ್ಲಿ ಬರುತ್ತಾರೆ ಅಂದಮೇಲೆ ನಾವೇಕೆ ತಡವಾಗಿ ಬರಬೇಕು! ನೀವೂ ಸಹ ಬ್ರಹ್ಮಾರವರನ್ನು ಫಾಲೋ ಮಾಡಿರಿ, ತಂದೆಯನ್ನು ನೆನಪು ಮಾಡುತ್ತಾ ಇರಿ. ಯಾವುದೇ ಮಾತಿನಲ್ಲಿ ಕಷ್ಟವಾದರೆ ಶಿವ ತಂದೆಯನ್ನು ಕೇಳಿರಿ, ಶ್ರೀಮತದಿಂದಲೇ ಶ್ರೇಷ್ಠರಾಗುತ್ತೀರಿ. ಹಳೆಯ ಪ್ರಪಂಚದಲ್ಲಿ ಪಂಚ ವಿಕಾರರೂಪಿ ರಾವಣನ ಮತದಂತೆ ನಡೆಯುತ್ತಾ ಬಂದಿದ್ದೀರಿ. ಮೊಟ್ಟ ಮೊದಲನೆಯದು ದೇಹಾಭಿಮಾನವಾಗಿದೆ. ಈಗ ನೀವು ಮಕ್ಕಳು ದೇಹೀ-ಅಭಿಮಾನಿಗಳಾಗಬೇಕಾಗಿದೆ. ನಾನಾತ್ಮನು ಪರಮಧಾಮ ನಿವಾಸಿಯಾಗಿದ್ದೇನೆ, ಅದಕ್ಕೆ ಶಾಂತಿಧಾಮವೆಂದು ಹೇಳಲಾಗುತ್ತದೆ. ಇಂತಹ ಮಾತುಗಳನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ, ತಂದೆಯೇ ತಿಳಿಸುತ್ತಾರೆ. ನಿಮ್ಮ ಆತ್ಮವು ಈ ಕರ್ಮೇಂದ್ರಿಯಗಳಿಂದ ಕೇಳಿಸಿಕೊಳ್ಳುತ್ತದೆ. ಸತ್ಯಯುಗದಲ್ಲಿ ಎಂದೂ ಶರೀರವು ರೋಗಿಯಾಗುವುದಿಲ್ಲ. ಇಲ್ಲಂತೂ ಅಕಾಲಮೃತ್ಯು ಆಗಿ ಬಿಡುತ್ತದೆ. ಸತ್ಯಯುಗದಲ್ಲಿ ಅಂತಹ ಮಾತೇ ಇರುವುದಿಲ್ಲ, ಅದಕ್ಕೆ ಹೆವೆನ್ ಸ್ವರ್ಗ, ಪ್ಯಾರಡೈಸ್ ಎಂದು ಹೇಳಲಾಗುತ್ತದೆ ನಂತರ ನಾವು ಚಕ್ರವನ್ನು ಸುತ್ತಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ 84 ಜನ್ಮಗಳನ್ನು ಪೂರ್ಣಗೊಳಿಸಿದ್ದೇವೆ. ಪುನಃ ತಂದೆಯು ಬಂದು ಮಕ್ಕಳ��್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ, ನೀವೀಗ ಹೊಸ ಪ್ರಪಂಚಕ್ಕೆ ಯೋಗ್ಯರಾಗುತ್ತಿದ್ದೀರಿ. ಈಗಂತೂ ನರಕವಾಗಿದೆ, ನೀವೀಗ ನರಕವಾಸಿಗಳಿಂದ ಸ್ವರ್ಗವಾಸಿಗಳಾಗುವ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ನಾವು ಶಿವ ತಂದೆಯ ಬಳಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆ, ಕಲ್ಪ-ಕಲ್ಪವೂ ಪ್ರತೀ 5000 ವರ್ಷಗಳ ನಂತರ ನಾವು ಅದೃಷ್ಟವನ್ನು ರೂಪಿಸಿಕೊಳ್ಳುತ್ತೇವೆಂದು ಹೇಳುತ್ತೀರಿ. ಈಗ ಸ್ವರ್ಗವಾಸಿಗಳಾಗುತ್ತೀರಿ ನಂತರ ರಾವಣ ರಾಜ್ಯವು ಆರಂಭವಾಗುವುದರಿಂದ ವಿಕಾರಿಗಳಾಗಿ ಬಿಡುತ್ತೀರಿ. ಈಗ ಎಲ್ಲರೂ ವಿಕಾರಿ ಪತಿತರಾಗಿದ್ದಾರೆ. ಆದ್ದರಿಂದ ತಂದೆಯು ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ಹೊಸ ಪ್ರಪಂಚದಲ್ಲಿ ಕೇವಲ ನೀವು ಮಕ್ಕಳೇ ಇರುತ್ತೀರಿ, ಉಳಿದೆಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಮೇಲೆ ಆತ್ಮಗಳ ವೃಕ್ಷವಿದೆ, ನಂತರ ತಮ್ಮ-ತಮ್ಮ ಸಮಯದಲ್ಲಿ ಅಲ್ಲಿಂದ ಬರುತ್ತೇವೆ. ಯಾವಾಗ ನಮ್ಮ ರಾಜ್ಯವಿರುವುದೋ ಅಲ್ಲಿ ಮತ್ತ್ಯಾವ ಧರ್ಮದವರೂ ಇರುವುದಿಲ್ಲ, ದ್ವಾಪರದಲ್ಲಿ ರಾವಣ ರಾಜ್ಯವು ಆರಂಭವಾಗುತ್ತದೆ. ಇದೆಲ್ಲಾ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ನರಕವಾಸಿಗಳಿಂದ ಸ್ವರ್ಗವಾಸಿಗಳಾಗಬೇಕಾಗಿದೆ. ನರಕವಾಸಿ ಮನುಷ್ಯರನ್ನು ಅಸುರರೆಂತಲೂ ಸ್ವರ್ಗವಾಸಿ ಮನುಷ್ಯರನ್ನು ದೇವತೆಗಳೆಂತಲೂ ಹೇಳುತ್ತಾರೆ. ಈಗ ಎಲ್ಲರೂ ಆಸುರೀ ಸ್ವಭಾವದವರಾಗಿದ್ದಾರೆ. ಈಗ ತಂದೆಯು ಕುಳಿತು ಪುರುಷಾರ್ಥ ಮಾಡಿಸುತ್ತಾರೆ. ತಂದೆಯು ಹೇಳುತ್ತಾರೆ - ಪವಿತ್ರರಾಗಿರಿ, ಪ್ರತಿಯೊಂದು ಮಾತಿನಲ್ಲಿ ಕೇಳುತ್ತಾ ಇರಿ. ಬಾಬಾ, ವ್ಯಾಪಾರದಲ್ಲಿ ಸುಳ್ಳು ಹೇಳಬೇಕಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಸುಳ್ಳು ಹೇಳುವುದರಿಂದ ಸ್ವಲ್ಪ ಪಾಪವಾಗುವುದು, ಅದು ಮತ್ತೆ ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ಪಾಪವು ಕಳೆಯುತ್ತಾ ಹೋಗುತ್ತದೆ. ಈಗಿನ ಪ್ರಪಂಚದಲ್ಲಿ ಎಲ್ಲರೂ ಪಾಪ ಮಾಡುತ್ತಾ ಇರುತ್ತಾರೆ, ಎಷ್ಟೊಂದು ಲಂಚವನ್ನು ತಿನ್ನುತ್ತಿರುತ್ತಾರೆ. ಈ ಪ್ರದರ್ಶನಿ ಚಿತ್ರಗಳು ನಕ್ಷೆಗಳಾಗಿವೆ, ಇಂತಹ ನಕ್ಷೆಗಳು ಎಲ್ಲಿಯೂ ಇಲ್ಲ. ಒಂದುವೇಳೆ ಯಾರಾದರೂ ನೋಡಿ ಕಾಪಿ ಮಾಡಬಹುದು ಆದರೆ ಅದರ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರದರ್ಶನಿ, ಮೇಳಗಳಲ್ಲಿ ಅನೇಕರು ಬರುತ್ತಾರೆ ಆಗ ಹೇಳಲಾಗುತ್ತದೆ - ಏಳು ದಿನಗಳ ಕಾಲ ತಿಳಿದುಕೊಳ್ಳಲು ಬನ್ನಿರಿ. ಅದರಿಂದ ನೀವು ಸ್ವರ್ಗವಾಸಿಗಳಾಗಲು ಯೋಗ್ಯರಾಗಿ ಬಿಡುತ್ತೀರಿ, ಈಗ ನರಕವಾಸಿಗಳಾಗಿದ್ದೀರಿ. ಏಣಿ ಚಿತ್ರದಲ್ಲಿ ನೋಡಿ ಎಷ್ಟು ಸ್ಪಷ್ಟವಾಗಿದೆ! ಇದು ಪತಿತ ಪ್ರಪಂಚವಾಗಿದೆ, ಪಾವನ ಪ್ರಪಂಚವು ಮೇಲ್ಭಾಗದಲ್ಲಿದೆ.
|
4 |
+
ಈಗ ನೀವು ಮಕ್ಕಳು ಶಿವ ತಂದೆಯೊಂದಿಗೆ ಬಾಬಾ ನಾವು ನರಕವಾಸಿಗಳಿಂದ ಸ್ವರ್ಗವಾಸಿಗಳು ಅವಶ್ಯವಾಗಿ ಆಗುತ್ತೇವೆಂದು ಪ್ರತಿಜ್ಞೆ ಮಾಡುತ್ತೀರಿ, ನೀವೀಗ ಶಿವಾಲಯದಲ್ಲಿ ಹೋಗಲು ತಯಾರಾಗುತ್ತ��ದ್ದೀರಿ ಆದ್ದರಿಂದ ವಿಕಾರದಲ್ಲಿ ಎಂದೂ ಹೋಗಬಾರದು. ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ ಆದರೆ ಪತಿತರಾಗಬಾರದು. ಪತಿತರಾಗುವುದರಿಂದ ದೊಡ್ಡ ತಪ್ಪಾಗಿ ಬಿಡುವುದು ಮತ್ತೆ ಧರ್ಮರಾಜನ ಬಳಿ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ಮನುಷ್ಯರಿಂದ ದೇವತೆಗಳಾಗಬೇಕೆಂದರೆ ಯಾವುದೆಲ್ಲಾ ಅಸುರೀ ಸ್ವಭಾವ ಇದೆಯೋ ಸುಳ್ಳು ಹೇಳುವ ಹವ್ಯಾಸವಿದೆಯೋ ಅದನ್ನು ತ್ಯಾಗ ಮಾಡಬೇಕಾಗಿದೆ. ದೈವೀ ಸ್ವಭಾವವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ.
|
8 |
+
2. ಮನೆಗೆ ಹೋಗುವುದಕ್ಕಾಗಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಮಾಯೆಯ ಬಿರುಗಾಳಿಗಳು ಬಂದರೂ ಸಹ ಕರ್ಮೇಂದ್ರಿಯಗಳಿಂದ ಎಂದೂ ಯಾವುದೇ ವಿಕರ್ಮ ಮಾಡಬಾರದು.
|
BKMurli/BKMurli/page_103.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಹೇಗೆ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆ ಪ್ರಿಯವಾಗಿರುವಂತೆ ಆತ್ಮಿಕ ತಂದೆಗೆ ಆತ್ಮಿಕ ಮಕ್ಕಳೂ ಪ್ರಿಯವಾಗಿರುತ್ತಾರೆ ಏಕೆಂದರೆ ಶ್ರೀಮತದನುಸಾರ ಇಡೀ ವಿಶ್ವದ ಕಲ್ಯಾಣ ಮಾಡುತ್ತಿದ್ದೀರಿ ಕಲ್ಯಾಣಕಾರಿ ಗಳೆಲ್ಲರೂ ಪ್ರಿಯರಾಗುತ್ತಾರೆ. ನೀವೂ ಸಹ ಪರಸ್ಪರ ಸಹೋದರ ಸಹೋದರರಾಗಿದ್ದೀರಿ ಅಂದಾಗ ಅವಶ್ಯವಾಗಿ ನೀವು ಒಬ್ಬರು ಇನ್ನೊಬ್ಬರಿಗೆ ಪ್ರಿಯರಾಗುತ್ತೀರಿ. ಎಷ್ಟು ಈ ತಂದೆಯ ಮಕ್ಕಳಲ್ಲಿ ಪರಸ್ಪರ ಪ್ರೀತಿ ಇರುವುದೋ ಅಷ್ಟು ಹೊರಗಿನವರೊಂದಿಗೆ ಇರುವುದಿಲ್ಲ. ನಿಮ್ಮಲ್ಲಿಯೂ ಪರಸ್ಪರ ಬಹಳ ಪ್ರೀತಿಯಿರಬೇಕು. ಒಂದು ವೇಳೆ ಸಹೋದರ ಸಹೋದರರೇ ಇಲ್ಲಿ ಹೊಡೆದಾಡಿದರೆ, ಜಗಳವಾಡಿದರೆ, ಅಥವಾ ಪ್ರೀತಿ ಮಾಡದಿದ್ದರೆ ಅವರು ಸಹೋದರರೇ ಅಲ್ಲ. ನಿಮ್ಮಲ್ಲಿ ಪರಸ್ಪರ ಪ್ರೀತಿ ಇರಬೇಕು. ತಂದೆಗೆ ಆತ್ಮಗಳ ಜೊತೆ ಪ್ರೀತಿಯಿದೆಯಲ್ಲವೆ! ಅಂದಮೇಲೆ ನೀವಾತ್ಮರಿಗೆ ಪರಸ್ಪರ ಬಹಳ ಪ್ರೀತಿಯಿರಬೇಕು. ಸತ್ಯಯುಗದಲ್ಲಿ ಎಲ್ಲ ಆತ್ಮಗಳು ಒಬ್ಬರು ಇನ್ನೊಬ್ಬರಿಗೆ ಪ್ರಿಯವಾಗಿರುತ್ತಾರೆ ಏಕೆಂದರೆ ಶರೀರದ ಅಭಿಮಾನವಿರುವುದಿಲ್ಲ. ನೀವು ಸಹೋದರ ಸಹೋದರರು ಒಬ್ಬ ತಂದೆಯ ನೆನಪಿನಿಂದ ಇಡೀ ವಿಶ್ವದ ಕಲ್ಯಾಣ ಮಾಡುತ್ತೀರಿ, ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತೀರಿ ಅಂದ ಮೇಲೆ ನಿಮ್ಮ ಸಹೋದರರ ಕಲ್ಯಾಣ ಮಾಡಬೇಕು. ಆದ್ದರಿಂದ ತಂದೆಯು ದೇಹಾಭಿಮಾನದಿಂದ ದೇಹೀ ಅಭಿಮಾನಿಯನ್ನಾಗಿ ಮಾಡುತ್ತಿದ್ದಾರೆ. ಆ ಲೌಕಿಕ ಸಹೋದರಂತೂ ಪರಸ್ಪರ ಹಣಕ್ಕಾಗಿ, ಪಾಲಿಗಾಗಿ ಹೊಡೆದಾಡುತ್ತಾರೆ. ಆದರೆ ಇಲ್ಲಿ ಹೊಡೆದಾಡುವ ಜಗಳವಾಡುವ ಮಾತಿಲ್ಲ, ಪ್ರತಿಯೊಬ್ಬರೂ ನೇರ ಸಂಬಂಧವನ್ನಿಟ್ಟುಕೊಳ್ಳಬೇಕಾಗುತ್ತದೆ. ಇದು ಬೇಹದ್ದಿನ ಮಾತಾಗಿದೆ. ಯೋಗಬಲದಿಂದ ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ಹೇಗೆ ಲೌಕಿಕ ತಂದೆಯಿಂದ ಸ್ಥೂಲ ಆಸ್ತಿಯನ್ನು ಪಡೆಯುತ್ತಾರೆ, ಇದಂತೂ ಆತ್ಮಿಕ ತಂದೆಯಿಂದ ಆತ್ಮಿಕ ಮಕ್ಕಳಿಗೆ ಆತ್ಮಿಕಆಸ್ತಿಯಾಗಿದೆ. ಪ್ರತಿಯೊಬ್ಬರೂ ನೇರವಾಗಿ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಎಷ್ಟೆಷ್ಟು ವ್ಯಕ್ತಿಗತವಾಗಿ ತಂದೆಯನ್ನು ನೆನಪು ಮಾಡುತ್ತೀರಿ ಅಷ್ಟು ಆಸ್ತಿಯು ಸಿಗುವುದು. ತಂದೆಯು ನೋಡುತ್ತಾರೆ - ಪರಸ್ಪರ ಹೊಡೆದಾಡಿದರೆ ತಂದೆಯು ಹೇಳುತ್ತಾರೆ ನೀವು ನಿರ್ಧನಿಕರೇನು? ಆತ್ಮೀಯ ಸಹೋದರರು ಜಗಳಾಡಬಾರದು, ಒಂದು ವೇಳೆ ಸಹೋದರರಾಗಿಯೂ ಜಗಳವಾಡಿದರೆ, ಪ್ರೀತಿಯಿಲ್ಲವೆಂದರೆ ರಾವಣನ ಮಕ್ಕಳಾದಂತೆ. ಅವರೆಲ್ಲರೂ ಆಸುರೀ ಸಂತಾನರು, ಮತ್ತೆ ದೈವೀ ಸಂತಾನರಲ್ಲಿ ಮತ್ತು ಆಸುರೀ ಸಂತಾನರಲ್ಲಿ ವ್ಯತ್ಯಾಸವೇ ಇಲ್ಲದಂತಾಗುತ್ತದೆ ಏಕೆಂದರೆ ದೇಹಾಭಿಮಾನಿಯಾಗುವುದರಿಂದಲೇ ಹೊಡೆದಾಡುತ್ತಾರೆ. ಆತ್ಮವು ಆತ್ಮನೊಂದಿಗೆ ಹೊಡೆದಾಡುವುದಿಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಪರಸ್ಪರ ಉಪ್ಪುನೀರಾಗಬೇಡಿ. ಆಗುತ್ತಾರೆ ಆದ್ದರಿಂದಲೇ ತಿಳಿಸುತ್ತಾರೆ - ಅಂತಹವರಿಗೆ ತಂದೆಯೂ ಹೇಳುತ್ತಾರೆ - ಇವರು ದೇಹಾಭಿಮಾನಿ ಮಕ್ಕಳಾಗಿದ್ದಾರೆ, ರಾವಣನ ಮಕ್ಕಳಾಗಿದ್ದಾರೆ ನನ್ನ ಮಕ್ಕಳಂತೂ ಅಲ್ಲ ಏಕೆಂದರೆ ಪರಸ್ಪರ ಉಪ್ಪು ನೀರಾಗಿ ಇರುತ್ತಾರೆ. ನೀವು 21 ಜನ್ಮಗಳಲ್ಲಿ ಕ್ಷೀರಖಂಡವಾಗಿ ಇರುತ್ತೀರಿ, ಅಂದಾಗ ಈ ಸಮಯದಲ್ಲಿ ದೇಹೀ ಅಭಿಮಾನಿಗಳಾಗಿರಿ. ಒಂದು ವೇಳೆ ಪರಸ್ಪರ ಆಗುವುದಿಲ್ಲವೆಂದರೆ ಆ ಸಮಯದಲ್ಲಿ ನಾವು ರಾವಣನ ಸಂಪ್ರದಾಯದವರೆಂದು ತಿಳಿಯಬೇಕು. ಪರಸ್ಪರ ಉಪ್ಪು ನೀರಾಗಿರುವುದರಿಂದ ತಂದೆಯ ಗೌರವ ಕಳೆಯುತ್ತಾರೆ. ಈಶ್ವರೀಯ ಸಂತಾನರೆಂದು ಹೇಳಿಕೊಂಡರೂ ಅವರಲ್ಲಿ ಆಸುರೀ ಗುಣಗಳಿದ್ದರೆ ಅವರು ದೇಹಾಭಿಮಾನಿಗಳು ಎಂದರ್ಥ. ದೇಹೀ ಅಭಿಮಾನಿಗಳಲ್ಲಿ ಈಶ್ವರೀಯ ಗುಣಗಳಿರುತ್ತವೆ. ಇಲ್ಲಿ ನೀವು ಈಶ್ವರೀಯ ಗುಣಗಳನ್ನು ಧಾರಣೆ ಮಾಡಿದಾಗಲೇ ತಂದೆಯ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಮತ್ತೆ ಅದೇ ಸಂಸ್ಕಾರವು ಜೊತೆಯಲ್ಲಿ ಇರುತ್ತದೆ. ತಂದೆಗೆ ತಿಳಿಯುತ್ತದೆ - ಮಕ್ಕಳು ದೇಹಾಭಿಮಾನದಲ್ಲಿ ಬಂದು ಉಪ್ಪು ನೀರಾಗುತ್ತಾರೆ ಅಂತಹವರು ಈಶ್ವರನ ಮಕ್ಕಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ತಮಗೆ ಎಷ್ಟೊಂದು ನಷ್ಟ ಮಾಡಿಕೊಳ್ಳುತ್ತಾರೆ, ಮಾಯೆಗೆ ವಶರಾಗುತ್ತಾರೆ, ಪರಸ್ಪರ ಉಪ್ಪು ನೀರಾಗುತ್ತಾರೆ(ಮತಭೇದ). ಹಾಗೆ ಹೇಳುವುದಾದರೆ ಇಡೀ ಪ್ರಪಂಚವೇ ಉಪ್ಪು ನೀರಾಗಿದೆ ಆದರೆ ಒಂದು ವೇಳೆ ಈಶ್ವರೀಯ ಸಂತಾನರೂ ಸಹ ಉಪ್ಪು ನೀರಾದರೆ ವ್ಯತ್ಯಾಸವೇನಾಯಿತು? ಅವರಂತೂ ತಂದೆಯ ನಿಂದನೆ ಮಾಡಿಸುತ್ತಾರೆ. ತಂದೆಯ ನಿಂದನೆ ಮಾಡಿಸುವವರು, ಉಪ್ಪು ನೀರಾಗಿ ವರ್ತಿಸುವವರು, ಪದವಿ ಪಡೆಯಲು ಸಾಧ್ಯವಿಲ್ಲ. ಅವರನ್ನು ನಾಸ್ತಿಕರು ಎಂದು ಹೇಳಬಹುದು. ಆಸ್ತಿಕರಾಗುವ ಮಕ್ಕಳು ಎಂದೂ ಹೊಡೆದಾಡುವುದಿಲ್ಲ. ನೀವು ಪರಸ್ಪರ ಜಗಳವಾಡಬಾರದು. ಪ್ರೇಮದಿಂದ ಇರುವುದನ್ನು ಇಲ್ಲಿಂದಲೇ ಕಲಿಯಬೇಕು. ಇದರಿಂದ ಮುಂದೆ 21 ಜನ್ಮಗಳು ಪರಸ್ಪರ ಪ್ರೇಮ ಇರುತ್ತದೆ. ತಂದೆಯ ಮಕ್ಕಳು ಎಂದು ಕರೆಸಿಕೊಂಡ ಮೇಲೂ ಸಹೋದರ ಸಹೋದರಾಗುವುದಿಲ್ಲವೆಂದರೆ ಅವರು ಆಸುರೀ ಸಂತಾನರು. ತಂದೆಯು ಮಕ್ಕಳಿಗೆ ತಿಳಿಸಲು ಮುರಳಿ ನುಡಿಸುತ್ತಾರೆ ಆದರೆ ದೇಹಾಭಿಮಾನದ ಕಾರಣ ಬಾಬಾ ನಮಗೋಸ್ಕರ ಹೇಳುತ್ತಾರೆ ಎನ್ನುವುದೂ ತಿಳಿಯುವುದಿಲ್ಲ. ಮಾಯೆ ಬಹಳ ತೀಕ್ಷ್ಣವಾಗಿದೆ ಹೇಗೆ ಇಲಿ ಕಚ್ಚಿದಾಗ ಗೊತ್ತಾಗುವುದಿಲ್ಲ ಹಾಗೆ ಮಾಯೆಯೂ ಸಹ ಬಹಳ ಮಧುರವಾಗಿ ಕಚ್ಚುತ್ತದೆ ಅದು ಗೊತ್ತಾಗುವುದೇ ಇಲ್ಲ. ಪರಸ್ಪರ ಮುನಿಸಿಕೊಳ್ಳುವುದು ಆಸುರೀ ಸಂಪ್ರದಾಯದವರ ಕೆಲಸವಾಗಿದೆ. ಬಹಳ ಸೇವಾಕೇಂದ್ರಗಳಲ್ಲಿ ಉಪ್ಪು ನೀರಾಗಿ ವರ್ತಿಸುತ್ತಾರೆ, ಇನ್ನೂ ಯಾರೂ ಸಂಪೂರ್ಣರಾಗಿಲ್ಲ. ಮಾಯೆ ಯುದ್ಧ ಮಾಡುತ್ತಿರುತ್ತದೆ. ಮಾಯೆ ಹೀಗೆ ತಲೆ ತಿರುಗಿಸುತ್ತದೆ, ಅದು ತಿಳಿಯುವುದೇ ಇಲ್ಲ. ತಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ - ನಮ್ಮಲ್ಲಿ ಪರಸ್ಪರ ಪ್ರೇಮವಿದೆಯೇ ಅಥವಾ ಇಲ್ಲವೆ? ಪ್ರೇಮ ಸಾಗರನ ಮಕ್ಕಳಾಗಿದ್ದೀರಿ ಅಂದ ಮೇಲೆ ಪ್ರೇಮದಿಂದ ತುಂಬಿದ ಗಂಗೆಯಾಗಿರಬೇಕು. ಹೊಡೆದಾಡುವುದು- ಜಗಳಾಡುವುದು, ಅಲ��ಲ ಸಲ್ಲದ ಮಾತನಾಡುವುದುದಕ್ಕಿಂತ ಮಾತನಾಡದಿರುವುದು ಒಳ್ಳೆಯದು. ಕೆಟ್ಟದ್ದನ್ನು ಕೇಳಬೇಡಿ. . . . ಒಂದು ವೇಳೆ ಯಾರಲ್ಲಿಯಾದರೂ ಕ್ರೋಧದ ಅಂಶವಿದ್ದರೆ ಆ ಪ್ರೀತಿಯಿರುವುದಿಲ್ಲ. ಆದ್ದರಿಂದ ತಂದೆ ತಿಳಿಸುತ್ತಾರೆ - ಪ್ರತಿನಿತ್ಯವೂ ತಮ್ಮ ಚಾರ್ಟ್ನ್ನು ನೋಡಿಕೊಳ್ಳಿ. ಆಸುರೀ ಚಲನೆಯು ಸುಧಾರಣೆಯಾಗದಿದ್ದರೆ ಮತ್ತೆ ಅದೃಷ್ಟವೇನಾಗಬಹುದು? ಯಾವ ಪದವಿಯನ್ನು ಪಡೆಯುತ್ತೀರಿ? ತಂದೆ ತಿಳಿಸುತ್ತಾರೆ ಏನೂ ಸೇವೆ ಮಾಡದಿದ್ದರೆ ಅವರ ಸ್ಥಿತಿಯೇನಾಗಬಹುದು? ಪದವಿ ಕಡಿಮೆಯಾಗುವುದು. ಸಕ್ಷಾತ್ಕಾರವಂತೂ ಎಲ್ಲರಿಗೂ ಆಗಲೇ ಬೇಕು. ನಿಮಗೂ ನಿಮ್ಮ ವಿದ್ಯಾಭ್ಯಾಸದ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರವಾದ ನಂತರವೇ ನೀವು ವರ್ಗಾವಣೆಯಾಗುತ್ತೀರಿ. ವರ್ಗವಾಗಿ ನೀವು ಹೊಸ ಪ್ರಪಂಚದಲ್ಲಿ ಬರುತ್ತೀರಿ. ಅಂತ್ಯದಲ್ಲಿ ಯಾರು ಎಷ್ಟು ಅಂಕಗಳಿಂದ ತೇರ್ಗಡೆ ಆಗಿದ್ದಾರೆಂದು ಸಾಕ್ಷಾತ್ಕಾರ ಆಗುತ್ತದೆ. ಆ ಸಮಯದಲ್ಲಿ ಅಳುತ್ತಾರೆ, ದುಃಖಿಸುತ್ತಾರೆ, ಶಿಕ್ಷೆಯನ್ನೂ ಅನುಭವಿಸುತ್ತಾರೆ. ನಾವು ತಂದೆ ಹೇಳಿದ್ದನ್ನು ಪಾಲಿಸಲಿಲ್ಲವೆಂದು ಪಶ್ಚಾತ್ತಾಪ ಪಡುತ್ತಾರೆ. ತಂದೆಯಂತೂ ಪದೇ ಪದೇ ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಆಸುರೀ ಗುಣವಿರಬಾರದು. ಯಾರಲ್ಲಿ ದೈವೀ ಗುಣಗಳಿವೆ ಅವರು ತಮ್ಮ ಸಮಾನ ಮಾಡಿಕೊಳ್ಳಬೇಕು. ತಂದೆಯನ್ನು ನೆನಪು ಮಾಡುವುದಂತೂ ಬಹಳ ಸಹಜ. ಅಲ್ಫ್ ಮತ್ತು ಬೇ. ಅಲ್ಫ್ ಎಂದರೆ ತಂದೆ ಮತ್ತು ಬೇ ಅಂದರೆ ಬಾದಶಾಹಿ. ಅಂದಾಗ ಮಕ್ಕಳಿಗೆ ನಶೆಯಿರಬೇಕು. ಒಂದು ವೇಳೆ ಪರಸ್ಪರ ಉಪ್ಪು ನೀರಾದರೆ ಈಶ್ವರೀಯ ಸಂತಾನರೆಂದು ಹೇಗೆ ತಿಳಿಯುತ್ತೀರಿ! ಇವರು ಆಸುರೀ ಸಂತಾನರು, ಮಾಯೆ ಇವರ ಮೂಗು ಹಿಡಿದುಕೊಂಡಿದೆ ಎಂದು ತಂದೆಯು ತಿಳಿಯುತ್ತಾರೆ. ಇದು ಅವರಿಗೆ ತಿಳಿಯುವುದಿಲ್ಲ. ಅವರ ಸ್ಥಿತಿಯೇ ಏರುಪೇರಾಗುತ್ತದೆ, ಪದವಿಯೂ ಕಡಿಮೆಯಾಗುತ್ತದೆ. ನೀವು ಮಕ್ಕಳು ಅಂತಹವರಿಗೆ ಪ್ರೇಮದಿಂದ ಕಲಿಸಲು ಪ್ರಯತ್ನ ಮಾಡಬೇಕು. ಪ್ರೇಮದ ದೃಷ್ಟಿಯಿರಬೇಕು. ತಂದೆಯು ಪ್ರೇಮದಸಾಗರ ಆಗಿದ್ದಾರೆ ಆದ್ದರಿಂದ ಮಕ್ಕಳನ್ನು ಸೆಳೆಯುತ್ತಾರಲ್ಲವೆ ಅಂದಾಗ ನೀವೂ ಸಹ ಪ್ರೇಮದ ಸಾಗರರಾಗಬೇಕು.
|
2 |
+
ತಂದೆ ಮಕ್ಕಳಿಗೆ ಬಹಳ ಪ್ರೀತಿಯಿಂದ ತಿಳಿಸುತ್ತಾರೆ, ಒಳ್ಳೆಯ ಮತವನ್ನು ಕೊಡುತ್ತಾರೆ. ಈಶ್ವರೀಯ ಮತ ಸಿಗುವುದರಿಂದ ನೀವು ಹೂಗಳಾಗುತ್ತೀರಿ, ಎಲ್ಲ ಗುಣಗಳನ್ನು ಕೊಡುತ್ತಾರೆ. ದೇವತೆಗಳಲ್ಲಿ ಪ್ರೀತಿಯಿರುತ್ತದೆ ಅಲ್ಲವೆ, ಅಂದಾಗ ಆ ಸ್ಥಿತಿಯನ್ನು ನೀವು ಇಲ್ಲಿಯೇ ರೂಪಿಸಿಕೊಳ್ಳಬೇಕು. ಈ ಸಮಯದಲ್ಲಿನಿಮಗೆ ಜ್ಞಾನವಿದೆ, ನಂತರ ದೇವತೆಗಳಾದಿರೆಂದರೆ ಜ್ಞಾನವು ಇರುವುದಿಲ್ಲ, ಅಲ್ಲಿ ದೈವೀ ಪ್ರೀತಿಯಿರುತ್ತದೆ ಆದ್ದರಿಂದ ತಾವು ಮಕ್ಕಳು ದೈವೀ ಗುಣಗಳನ್ನು ಧಾರಣೆ ಮಾಡಬೇಕು. ಈಗ ನೀವು ಪೂಜ್ಯರಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ನೀವು ಮಕ್ಕಳೂ ಸಹ ನಂಬರ್ವಾರ್ ಪುರುಷಾರ್ಥನುಸಾರ ತಿಳಿದುಕೊಂಡಿದ್ದೀರಿ. ಯಾರು ತಿಳಿದುಕೊಂಡಿಲ್ಲವೋ ಅವರು ���ನ್ಯರಿಗೂ ತಿಳಿಸಲು ಆಗುವುದಿಲ್ಲ. ಮತ್ತು ಪದವಿಯೂ ಕಡಿಮೆಯಾಗುತದೆ. ಶಾಲೆಯಲ್ಲಿ ಓದುವವರಲ್ಲಿ ಕೆಲವರ ಚಲನೆ ಕೆಟ್ಟುಹೋಗುತ್ತದೆ, ಇನ್ನೂ ಕೆಲವರದು ಸದಾ ಒಳ್ಳೆಯ ನಡವಳಿಕೆಯಿರುತ್ತದೆ, ಕೆಲವರು ಹಾಜರಾದರೆ, ಕೆಲವರು ಗೈರುಹಾಜರಿಯಾಗಿರುತ್ತಾರೆ. ಇಲ್ಲಿ ಯಾರು ಸದಾ ತಂದೆಯನ್ನು ನೆನಪು ಮಾಡುತ್ತಾರೆ ಸ್ವದರ್ಶನ ಚಕ್ರತಿರುಗಿಸುತ್ತಾರೆ ಅವರ ಹಾಜರಿಯಿರುತ್ತದೆ. ತಂದೆ ತಿಳಿಸುತ್ತಾರೆ - ಏಳುತ್ತಾ-ಕುಳಿತುಕೊಳ್ಳುತ್ತಾ ತಮ್ಮನ್ನು ಸ್ವದರ್ಶನ ಚಕ್ರಧಾರಿ ಎಂದು ತಿಳಿಯಿರಿ. ಮರೆತರೆ ಗೈರುಹಾಜರಿಯಾಗುತ್ತದೆ. ಯಾವಾಗ ಸದಾ ಹಾಜರಿರುತ್ತೀರಿ ಆಗ ಶ್ರೇಷ್ಠ ಪದವಿ ಪಡೆಯುತ್ತೀರಿ. ಮರೆತರೆ ಕಡಿಮೆ ಪದವಿ ಪಡೆಯುತ್ತೀರಿ. ತಂದೆಗೆ ಗೊತ್ತಿದೆ, ಇನ್ನೂ ಸಮಯವಿದೆ, ಶ್ರೇಷ್ಠ ಪದವಿಯನ್ನು ಪಡೆಯುವವರ ಬುದ್ಧಿಯಲ್ಲಿ ಈ ಚಕ್ರವು ತಿರುಗುತ್ತಿರಬಹುದು. ಶಿವ ತಂದೆಯ ನೆನಪಿರಲಿ, ಮುಖದಲ್ಲಿ ಜ್ಞಾನಾಮೃತವಿರಲಿ ಆಗ ಪ್ರಾಣ ತನುವನ್ನು ಬಿಟ್ಟು ಹೋಗಲಿ ಎಂದು ಹೇಳುತ್ತಾರೆ. ಯಾವುದೇ ವಸ್ತುವಿನೊಂದಿಗೆ ಪ್ರೀತಿಯಿದ್ದರೆ ಅಂತ್ಯ ಕಾಲದಲ್ಲಿ ಅದೇ ನೆನಪಿಗೆ ಬರುತ್ತದೆ. ತಿನ್ನುವ ಲೋಭವಿದ್ದರೆ ಸಾಯುವ ಸಮಯುದಲ್ಲಿ ಅದನ್ನು ತಿನ್ನಬೇಕೆಂದು ಆ ಪದಾರ್ಥವೇ ನೆನಪಿಗೆ ಬರುತ್ತದೆ. ಮತ್ತೆ ಪದವಿಭ್ರಷ್ಟರಾಗುತ್ತಾರೆ. ತಂದೆಯಂತೂ ಹೇಳುತ್ತಾರೆ - ಮಕ್ಕಳೇ, ಸ್ವದರ್ಶನಚಕ್ರಧಾರಿಗಳಾಗಿ ಶರೀರ ಬಿಡಿ, ಮತ್ತೇನೂ ನೆನಪಿಗೆ ಬರಬಾರದು. ಯಾವುದೇ ಸಂಬಂಧವಿಲ್ಲದೆ ಹೇಗೆ ಆತ್ಮವು ಒಂಟಿಯಾಗಿ ಬಂದಿದೆಯೋ ಹಾಗೆಯೇ ಹೋಗಬೇಕು. ಲೋಭವೂ ಕಡಿಮೆಯಿಲ್ಲ. ಲೋಭವಿದ್ದರೆ ಅಂತಿಮ ಸಮಯದಲ್ಲಿ ಅದೇ ನೆನಪಿಗೆ ಬರುತ್ತದೆ. ಅದು ಸಿಗಲಿಲ್ಲವೆಂದರೆ ಅದರ ಆಸೆಯಲ್ಲಿಯೇ ಶರೀರ ಬಿಡುತ್ತಾರೆ. ಆದ್ದರಿಂದ ನೀವು ಮಕ್ಕಳಲ್ಲಿ ಲೋಭ ಇರಬಾರದು. ತಂದೆ ತಿಳಿಸುತ್ತಾರೆ - ಅನೇಕರಿದ್ದಾರೆ ಆದರೆ ಇದನ್ನು ತಿಳಿದುಕೊಳ್ಳುವವರೇ ತಿಳಿದುಕೊಳ್ಳುತ್ತಾರೆ. ತಂದೆಯ ನೆನಪನ್ನು ಹೃದಯದಲ್ಲಿಟ್ಟುಕೊಳ್ಳಿ - ಬಾಬಾ, ಓಹೋ ಬಾಬಾ! ಕೇವಲ ಮುಖದಿಂದ ಬಾಬಾ, ಬಾಬಾ ಎಂದು ಹೇಳುವುದಲ್ಲ ಅಜಪಾಜಪವಾಗಿ ನಡೆಯುತ್ತಿರಲಿ. ತಂದೆಯ ನೆನಪಿನಲ್ಲಿ, ಕರ್ಮಾತೀತ ಸ್ಥಿತಿಯಲ್ಲಿ ಶರೀರ ಬಿಟ್ಟರೆ ಆಗ ಶ್ರೇಷ್ಠ ಪದವಿಯನ್ನು ಪಡೆಯಬಹುದು. ಒಳ್ಳೆಯದು.
|
3 |
+
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
|
4 |
+
ಧಾರಣೆಗಾಗಿ ಮುಖ್ಯಸಾರ:
|
5 |
+
1. ಪ್ರೇಮದಿಂದ ತುಂಬಿದ ಗಂಗೆಯಾಗಬೇಕು. ಎಲ್ಲರ ಪ್ರತಿ ಪ್ರೇಮದ ದೃಷಿ ಇಟ್ಟುಕೊಳ್ಳಬೇಕು. ಎಂದೂ ಬಾಯಿಂದ ಅಲ್ಲ ಸಲ್ಲದ ಮಾತುಗಳನ್ನುಆಡಬಾರದು.
|
6 |
+
2. ಯಾವುದೇ ಪದಾರ್ಥದಲ್ಲಿ ಲೋಭವನ್ನಿಡಬಾರದು. ಸ್ವದರ್ಶನ ಚಕ್ರಧಾರಿಯಾಗಿರಬೇಕು. ಅಭ್ಯಾಸ ಮಾಡಬೇಕು ಅಂತ್ಯದ ಸಮಯದಲ್ಲಿ ಯಾವುದೇ ಪದಾರ್ಥವು ನೆನಪಾಗಬಾರದು.
|
BKMurli/BKMurli/page_1030.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೊಂದಿಗೆ ತಂದೆಯು ಸನ್ಮುಖದಲ್ಲಿ ಮಾತನಾಡುತ್ತಿದ್ದಾರೆ. ಮಕ್ಕಳೂ ಸಹ ತಿಳಿದುಕೊಂಡಿರುತ್ತೀರಿ - ನಮ್ಮ ಜೊತೆ ಬೇಹದ್ದಿನ ತಂದೆಯು ಮಾತನಾಡುತ್ತಿದ್ದಾರೆ, ಅವರು ಎಲ್ಲರಿಗಿಂತ ಅತಿ ಮಧುರವಾಗಿದ್ದಾರೆ. ತಂದೆಯು ಮಧುರರಾಗಿರುತ್ತಾರೆ, ಶಿಕ್ಷಕರು ಮಧುರರಾಗಿರುತ್ತಾರೆ ಏಕೆಂದರೆ ಇಬ್ಬರಿಂದಲೂ ಆಸ್ತಿಯು ಸಿಗುತ್ತದೆ. ಗುರುವಿನಿಂದ ಭಕ್ತಿಯ ಆಸ್ತಿಯು ಸಿಗುತ್ತದೆ. ಇಲ್ಲಂತೂ ಒಬ್ಬರಲ್ಲಿಯೇ ಮೂವರು ಸಿಗುತ್ತಾರೆ, ಖುಷಿಯೂ ಇರುತ್ತದೆ. ನೀವು ಅವರ ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆ ಯಾರಿಗೆ ಪತಿತ-ಪಾವನನೆಂದು ಹೇಳಲಾಗುತ್ತದೆಯೋ ಅವರೇ ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ, ಆ ಬೀಜವು ಜಡವಾಗಿರುತ್ತದೆ ಇವರು ಚೈತನ್ಯವಾಗಿದ್ದಾರೆ. ಇವರಿಗೆ ಸತ್ಚಿತ್ ಆನಂದ ಸ್ವರೂಪನೆಂದು ಹೇಳಲಾಗುತ್ತದೆ ಮತ್ತೆ ಅವರಿಗೆ ಮಹಿಮೆಯೂ ಇದೆ. ಅವರು ಜ್ಞಾನ ಸಾಗರನಾಗಿದ್ದಾರೆ ಆದರೆ ಅವರಿಂದ ಯಾವ ಜ್ಞಾನವು ಸಿಗುತ್ತದೆಯೆಂಬುದು ಯಾರಿಗೂ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ, ಯಾರಿಗೆ ತಂದೆಯು ಜ್ಞಾನವನ್ನು ಕೊಡುತ್ತಿದ್ದಾರೆಯೋ ಅವರೇ ಭಕ್ತಿಮಾರ್ಗದಲ್ಲಿ ಇವರ ಮಂದಿರ, ಶಾಸ್ತ್ರ ಇತ್ಯಾದಿಗಳನ್ನು ರಚಿಸುತ್ತಾರೆ. ಇದನ್ನೂ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಪ್ರತೀ 5000 ವರ್ಷಗಳ ನಂತರ ಈ ಕಲ್ಪದ ಸಂಗಮವು ಬರುತ್ತದೆ. ಇದಕ್ಕೆ ಆತ್ಮಿಕ ಅವಿನಾಶಿ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಉತ್ತಮ ಪುರುಷರು ಅನೇಕರಿರುತ್ತಾರೆ ಆದರೆ ಅವರು ಒಂದು ಜನ್ಮದಲ್ಲಿ ಉತ್ತಮ ಪುರುಷಾಗಿರುತ್ತಾರೆ ನಂತರ ಮಧ್ಯಮ, ಕನಿಷ್ಠರಾಗಿ ಬಿಡುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನು ನೋಡಿ, ಎಷ್ಟು ಉತ್ತಮ ಪುರುಷರಾಗಿದ್ದಾರೆ! ಇವರು ಪುರುಷೋತ್ತಮ ಮತ್ತು ಪುರುಷೋತ್ತಮೆ ಆಗಿದ್ದಾರೆ. ಇಬ್ಬರನ್ನೂ ಇಷ್ಟು ಉತ್ತಮರನ್ನಾಗಿ ಯಾರು ಮಾಡಿದರು! ಶ್ರೇಷ್ಠಾತಿ ಶ್ರೇಷ್ಠರು ಭಗವಂತನಾಗಿದ್ದಾರೆಂದು ಗಾಯನವಿದೆ, ಅವರು ಪರಮಧಾಮದಲ್ಲಿ ಇರುತ್ತಾರೆ. ಮನುಷ್ಯ ಸೃಷ್ಟಿಯಲ್ಲಿ ಶ್ರೇಷ್ಠಾತಿ ಶ್ರೇಷ್ಠರು ಈ ವಿಶ್ವ ಮಹಾರಾಜ -ಮಹಾರಾಣಿಯಾಗಿದ್ದಾರೆ. ಇವರು ಶ್ರೇಷ್ಠಾತಿ ಶ್ರೇಷ್ಠ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರು ಈ ರಾಜ್ಯವನ್ನು ಹೇಗೆ ಪಡೆದರು! ಇದು ಯಾರಿಗೂ ತಿಳಿದಿಲ್ಲ. ತಂದೆಯು ನಿಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರು ಎಷ್ಟು ಪ್ರಿಯರೆನಿಸಬೇಕು! ಅವರ ಮತದಂತೆ ನಡೆಯಬೇಕಾಗಿದೆ. ಇಷ್ಟು ಶ್ರೇಷ್ಠ ವಿಶ್ವದ ಮಾಲೀಕರನ್ನಾಗಿ ಮಾಡುವಂತಹ ತಂದೆಯು ಎಷ್ಟು ಸಾಧಾರಣ ರೀತಿಯಿಂದ ಓದಿಸುತ್ತಾರೆ! ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯು ಭಾರತದಲ್ಲಿ ಬರುತ್ತಾರೆ. ಇಲ್ಲಿ ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಈಗ ಸ್ಮೃತ��� ಬಂದಿದೆ - ನಾವು ಸ್ವರ್ಗವಾಸಿಗಳು 84 ಜನ್ಮಗಳನ್ನು ಪಡೆದು ನರಕವಾಸಿಗಳಾಗಿದ್ದೇವೆ. ಪುನಃ ಸ್ವರ್ಗವಾಸಿಗಳನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗುವುದು. ಸತೋಪ್ರಧಾನರಾಗದೇ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಶಿಕ್ಷೆಯೂ ಸಹ ಆತ್ಮಕ್ಕೇ ಸಿಗುತ್ತದೆಯಲ್ಲವೆ. ಗರ್ಭ ಜೈಲಿನಲ್ಲಿ ಶರೀರ ಧಾರಣೆ ಮಾಡಿಸಿ ನಂತರ ಶಿಕ್ಷೆ ಕೊಡುತ್ತಾರೆ. ಮಕ್ಕಳೇ, ಬಹಳ ದುಃಖವನ್ನು ಅನುಭವಿಸಬೇಕಾಗುತ್ತದೆ. ತ್ರಾಹಿ ತ್ರಾಹಿ ಎನ್ನುತ್ತಾರೆ, ಮತ್ತೆಂದೂ ನಾನು ಪಾಪ ಮಾಡುವುದಿಲ್ಲ ಎಂದು ಹೇಳುತ್ತಾರೆ. ನೀವು ಮಕ್ಕಳು ಗರ್ಭ ಜೈಲಿನಲ್ಲಿ ಹೋಗಬಾರದು, ಅಲ್ಲಿ ಗರ್ಭವು ಮಹಲಿನಂತಿರುತ್ತದೆ ಏಕೆಂದರೆ ಪಾಪವಿರುವುದಿಲ್ಲ. ಇಲ್ಲಿ ರಾವಣ ರಾಜ್ಯದಲ್ಲಿ ಪಾಪವಾಗುತ್ತದೆ ಆದ್ದರಿಂದ ರಾಮ ರಾಜ್ಯ ಬೇಕೆಂದು ಬಯಸುತ್ತಾರೆ ಆದರೆ ರಾವಣ ರಾಜ್ಯವೆಂದರೇನು ಎಂಬುದನ್ನು ತಿಳಿದುಕೊಂಡಿಲ್ಲ. ರಾವಣನನ್ನು ಒಂದು ಸಲ ಸುಟ್ಟರೆ ಸಮಾಪ್ತಿಯಾಗಬೇಕು ಆದರೆ ಮತ್ತೆ-ಮತ್ತೆ ಸುಡುತ್ತಾರೆ. ಅಂದಮೇಲೆ ಇನ್ನೂ ಸತ್ತಿಲ್ಲವೆಂದರ್ಥ. ಮತ್ತೆ ಇದೆಲ್ಲವನ್ನೂ ಮಾಡುವುದರಿಂದ ಏನು ಲಾಭ? ಅವರಂತೂ ಹೋಗಿ ಲಂಕೆಯನ್ನು ಲೂಟಿ ಮಾಡಿ ಬರುತ್ತಾರೆ. ವಾಸ್ತವದಲ್ಲಿ ನೀವು ಈ ಸಮಯದಲ್ಲಿ ರಾವಣನ ಮೇಲೆ ಜಯ ಗಳಿಸುತ್ತೀರಿ ಮತ್ತು ಸತ್ಯಯುಗದ ಮಾಲೀಕರಾಗುತ್ತೀರಿ. ಅಜ್ಮೀರಿನಲ್ಲಿ ವೈಕುಂಠದ ಮಾದರಿಯನ್ನು ತೋರಿಸಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ, ತಂದೆಯು ಮಕ್ಕಳನ್ನು ಪುನಃ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ, ನಾವು ವಜ್ರ-ವೈಡೂರ್ಯಗಳ ಮಹಲುಗಳಲ್ಲಿ ರಾಜ್ಯಭಾರ ಮಾಡುತ್ತೇವೆ.
|
2 |
+
ಈಗ ನೀವು ಮಕ್ಕಳು ಯೋಗಬಲದಿಂದ ನಿರ್ವಿಕಾರಿ, ಸತೋಪ್ರಧಾನರಾಗುತ್ತೀರಿ. ಆತ್ಮವು ಸಂಪೂರ್ಣ ನಿರ್ವಿಕಾರಿಯಾಗಿ ಮತ್ತೆ ಶಾಂತಿಧಾಮಕ್ಕೆ ಹೊರಟು ಹೋಗುವುದು. ಅಲ್ಲಿ ದುಃಖದ ಮಾತಿಲ್ಲ. ತಂದೆಯು ತಿಳಿಸಿದ್ದಾರೆ- ಈ ನಾಟಕದಲ್ಲಿ ನಿಮ್ಮದು ಎಲ್ಲರಿಗಿಂತ ಮುಖ್ಯವಾದುದು ಹೀರೋ-ಹೀರೋಯಿನ್ ಪಾತ್ರವಾಗಿದೆ. ರಾಜ್ಯವನ್ನು ಪಡೆಯುವುದು ಮತ್ತು ಕಳೆದುಕೊಳ್ಳುವುದು ಇದು ಆಟವಾಗಿದೆ. ನೀವು ಹೀರೋ-ಹೀರೋಯಿನ್ ಆಗಿದ್ದೀರಿ, ಹೀರೋ ಅಂದರೆ ಮುಖ್ಯ ಪಾತ್ರಧಾರಿಗಳಾಗಿದ್ದೀರಿ. ನೀವು ಸತ್ಯಯುಗದಲ್ಲಿ ಪವಿತ್ರ ಗೃಹಸ್ಥ ಆಶ್ರಮದಲ್ಲಿದ್ದಿರಿ, ಕಲಿಯುಗದಲ್ಲಿ ಅಪವಿತ್ರ ಗೃಹಸ್ಥ ವ್ಯವಹಾರವಾಗಿದೆ. ಈಗ ತಂದೆಯು ಸತ್ಯಯುಗದಲ್ಲಿ ಕರೆದುಕೊಂಡು ಹೋಗುವರು, ಅಲ್ಲಿ ಲಕ್ಷ್ಮೀ-ನಾರಾಯಣ ಸೂರ್ಯವಂಶಿಯರ ರಾಜ್ಯವಿರುವುದು. ಅವರು ಪುನರ್ಜನ್ಮವನ್ನು ತೆಗೆದುಕೊಂಡು ಚಂದ್ರವಂಶದಲ್ಲಿ ಬರುತ್ತಾರೆ, ವೃದ್ಧಿಯಾಗುತ್ತಾ ಇರುತ್ತದೆ. ಈಗ ಎಷ್ಟೊಂದು ಕೋಟಿಗಳಷ್ಟು ಜನಸಂಖ್ಯೆಯಾಗಿ ಬಿಟ್ಟಿದೆ! ಸಂತಾನ ನಿಯಂತ್ರಣವಾಗ��ೇಕೆಂದು ಹೇಳುತ್ತಾರೆ, ಯಾರಿಗೆ ಒಂದೆರಡು ಮಕ್ಕಳಾಗುವವೋ ಅವರು ನಿಲ್ಲಿಸುತ್ತಾರೆಯೇ? ಈಗ ನೀವು ಇದನ್ನು ಸಿದ್ಧ ಮಾಡಿ ತಿಳಿಸಬಹುದು - ಜನಸಂಖ್ಯೆಯನ್ನು ಕಡಿಮೆ ಮಾಡುವುದು ತಂದೆಯ ಮೇಲಿದೆ. ತಂದೆಗೆ ಗೊತ್ತಿದೆ - ಹೆಚ್ಚು ಮನುಷ್ಯರಿದ್ದರೆ ಸಾಯುವರು, ನಾನು ಎಲ್ಲರನ್ನೂ ಸಮಾಪ್ತಿ ಮಾಡಿ ಒಂದು ಧರ್ಮದ ಸ್ಥಾಪನೆ ಮಾಡಲು ಬಂದಿದ್ದೇನೆ. ಅಲ್ಲಿ ಕೇವಲ 9 ಲಕ್ಷ ಮಂದಿ ಇರುತ್ತಾರೆ, ಛೂ ಮಂತ್ರವಾಯಿತಲ್ಲವೆ. ಕಲಿಯುಗರೂಪಿ ರಾತ್ರಿಯು ಮುಕ್ತಾಯವಾಗಿ ದಿನವು ಆರಂಭವಾಗುವುದು. ಸಂತಾನ ನಿಯಂತ್ರಣಕ್ಕಾಗಿ ಎಷ್ಟೊಂದು ಖರ್ಚು ಮಾಡುತ್ತಾರೆ, ತಂದೆಗೆ ಯಾವುದೇ ಖರ್ಚಿಲ್ಲ, ಪ್ರಾಕೃತಿಕ ವಿಕೋಪಗಳಾಗುವವು ಆಗ ಎಲ್ಲರೂ ಸಮಾಪ್ತಿಯಾಗುವರು. ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಅವರು ಯಾವ ಯೋಜನೆಗಳನ್ನು ಮಾಡುತ್ತಿದ್ದಾರೆಯೋ ಅದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ಯುರೋಪಿಯನ್ ಯಾದವರು, ಭಾರತವಾಸಿ ಕೌರವರು ಮತ್ತು ಪಾಂಡವರು. ಅವರೆಲ್ಲರೂ ಒಂದು ಕಡೆ, ಇನ್ನೊಂದು ಕಡೆ ಇವರಿಬ್ಬರೂ ಸಹೋದರರಿದ್ದಾರೆ. ಭಾರತದಲ್ಲಿ ಸಹೋದರ-ಸಹೋದರರಿದ್ದಾರೆ. ಯಾರು ಈಗ ಕಲಿಯುಗದಲ್ಲಿ ಸಹೋದರ-ಸಹೋದರರಿದ್ದಾರೆಯೋ ಅವರಿಂದ ನೀವೀಗ ಸಂಗಮಕ್ಕೆ ಹೊರ ಬಂದಿದ್ದೀರಿ. ಕೌರವರು ಮತ್ತು ಪಾಂಡವರು ಒಂದೇ ಮನೆಯವರಾಗಿದ್ದರು, ಆತ್ಮರು ಮೂಲತಃ ಸಹೋದರ-ಸಹೋದರರಾಗಿದ್ದಾರೆ. ತಂದೆಯು ಮೊಟ್ಟಮೊದಲು ನೀವಾತ್ಮರೊಂದಿಗೇ ಮಿಲನ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಯಾರು ಮೊಟ್ಟ ಮೊದಲು ಹೋಗುತ್ತಾರೆಯೋ ಅವರು ಬಹುಮಾನ ತೆಗೆದುಕೊಳ್ಳುತ್ತಾರೆ. ನಿಮ್ಮದು ಇದು ನೆನಪಿನ ಸ್ಪರ್ಧೆಯಾಗಿದೆ, ಇದು ಯಾವುದೇ ಶಾಸ್ತ್ರದಲ್ಲಿಲ್ಲ. ತಂದೆಯು ತಿಳಿಸುತ್ತಾರೆ - ನನ್ನ ಜೊತೆ ಯೋಗವನ್ನು ಇಡಿ. ಯೋಗದ ಯಾತ್ರೆಯು ಈ ಸಮಯದಲ್ಲಿಯೇ ನಡೆಯುತ್ತದೆ. ಈ ಯಾತ್ರೆಯನ್ನು ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಆತ್ಮಿಕ ಯೋಗವಾಗಲಿ, ಶಾರೀರಿಕ ಯೋಗವಾಗಲಿ ಇರುವುದಿಲ್ಲ. ಅಲ್ಲಿ ಅವಶ್ಯಕತೆಯೇ ಇಲ್ಲ. ಇದು ಈ ಸಮಯದಲ್ಲಿ ನಿಮ್ಮ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಡ್ರಾಮಾದಲ್ಲಿ ಒಂದೊಂದು ಸೆಕೆಂಡಿನ ಪಾತ್ರವನ್ನು ತಿಳಿಸಿದ್ದಾರೆ, ಇದಕ್ಕೆ ಸ್ವದರ್ಶನ ಚಕ್ರವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಈಗ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ, ನಿಮಗೆ 84 ಜನ್ಮಗಳ ಅಥವಾ ಸೃಷ್ಟಿಚಕ್ರದ ಜ್ಞಾನವಿದೆ. ಸ್ವ ಎಂದರೆ ಆತ್ಮ. ಆತ್ಮಕ್ಕೆ ಈ ಜ್ಞಾನವಿದೆ ಆದ್ದರಿಂದ ಈಗ ನೀವು ಮಕ್ಕಳು ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ನಾನು ನಿಮಗೆ ಆತ್ಮಿಕ ಮಕ್ಕಳೇ ಎಂದು ಹೇಳುತ್ತೇನೆ. ಸ್ವದರ್ಶನ ಚಕ್ರಧಾರಿ ಬ್ರಾಹ್ಮಣ ಕುಲಭೂಷಣರಾಗಿದ್ದೀರಿ. ಈ ಪದಗಳ ಅರ್ಥವು ಹೊಸಬರಿಗೆ ಅರ್ಥವಾಗುವುದಿಲ್ಲ. ಈ ಅಲಂಕಾರಗಳನ್ನು ನಿಮಗೆ ಕೊಡುವುದಿಲ್ಲ ಏಕೆಂದರೆ ನಿಮ್ಮಲ್ಲಿ ಕೆಲವರು ಜ್ಞಾನವನ್ನು ಬಿಟ್ಟು ಹೊರಟು ಹೋಗುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ 84 ಜನ್ಮಗಳ ಚಕ್ರವಿದೆ, ಈಗ ನಂಬರ್ವನ್ನಲ್ಲಿ ಹೋಗುತ್ತೀರಿ. ಮೊದಲು ಮನೆಗೆ ಹೋಗಿ ನಂತರ ದೇವತೆಗಳಾಗುತ್ತೀರಿ. ಅನಂತರ ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಎಷ್ಟು ತಿಳುವಳಿಕೆಯ ಮಾತಾಗಿದೆ. ಯಾರಾದರೂ ಇಷ್ಟು ನೆನಪು ಮಾಡಿದರೂ ಸಹ ಸೌಭಾಗ್ಯವೇ! ಇನ್ನು ಸ್ವಲ್ಪವೇ ಸಮಯವಿದೆ ನಂತರ ನಾವು ಸ್ವರ್ಗದಲ್ಲಿ ಹೋಗುತ್ತೇವೆ. ಬಾಕಿ ಶಾಸ್ತ್ರಗಳಲ್ಲಿ ಅನೇಕ ದಂತ ಕಥೆಗಳನ್ನು ಬರೆದಿದ್ದಾರೆ, ಕೃಷ್ಣನೊಂದಿಗೆ ಎಲ್ಲರಿಗೂ ಪ್ರೀತಿಯಿದೆ ಆದರೆ ಕೃಷ್ಣನಿಗೆ ಸರ್ಪವು ಕಚ್ಚಿತು, ಹೀಗಾಯಿತು, ಹಾಗಾಯಿತು.... ಎಂದು ಬರೆದು ಬಿಟ್ಟಿದ್ದಾರೆ. ಕೃಷ್ಣನು ರಾಧೆಗಿಂತಲೂ ಪ್ರಿಯನಾಗಿದ್ದಾನೆ ಏಕೆಂದರೆ ಮುರುಳಿಯನ್ನು ನುಡಿಸಿದ್ದಾನೆ. ಅದು ವಾಸ್ತವದಲ್ಲಿ ಜ್ಞಾನದ ಮಾತಾಗಿದೆ. ನೀವು ಈ ಸಮಯದಲ್ಲಿ ಜ್ಞಾನ ಜ್ಞಾನೇಶ್ವರಿಯರಾಗಿದ್ದೀರಿ ನಂತರ ಓದಿ ರಾಜ ರಾಜೇಶ್ವರಿಯರಾಗುತ್ತೀರಿ. ಇದು ಗುರಿ-ಧ್ಯೇಯವಾಗಿದೆ. ಇಲ್ಲಿನ ಉದ್ದೇಶವೇನೆಂದು ಯಾರಾದರೂ ನಿಮ್ಮೊಂದಿಗೆ ಕೇಳಿದರೆ ಹೇಳಿರಿ, ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ನಾವೇ ದೇವತೆಗಳಾಗಿದ್ದೆವು, 84 ಜನ್ಮಗಳ ನಂತರ ಶೂದ್ರರಾದೆವು, ಈಗ ಬ್ರಾಹ್ಮಣರಾಗಿದ್ದೇವೆ ನಂತರ ದೇವತೆಗಳಾಗುತ್ತೇವೆ. ಓದಿಸುವವರು ಜ್ಞಾನ ಸಾಗರ ಪರಮಾತ್ಮನಾಗಿದ್ದಾರೆ, ಕೃಷ್ಣನಲ್ಲ. ಈ ರಾಜಯೋಗವನ್ನು ಯಾರೂ ಕಲಿಸಲು ಸಾಧ್ಯವಿಲ್ಲ. ಬಾಬಾ, ನಾವು ಕಲ್ಪ-ಕಲ್ಪವೂ ಬಂದು ತಮ್ಮಿಂದ ರಾಜ್ಯಭಾಗ್ಯವನ್ನು ಪಡೆಯುತ್ತೇವೆಂದು ನೀವು ಹೇಳುತ್ತೀರಿ, ಇದನ್ನು ನೀವೇ ತಿಳಿದುಕೊಂಡಿದ್ದೀರಿ. ಈ ಮಹಾಭಾರಿ ಯುದ್ಧದಿಂದಲೇ ಸ್ವರ್ಗದ ಬಾಗಿಲು ತೆರೆಯುವುದು. ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ ಅಂದಮೇಲೆ ಸ್ವರ್ಗವು ಅವಶ್ಯವಾಗಿ ಬೇಕು, ನರಕವು ಸಮಾಪ್ತಿಯಾಗಬೇಕು. ಈ ಮಹಾಭಾರಿ ಯುದ್ಧವು ಶಾಸ್ತ್ರಗಳಲ್ಲಿದೆ.
|
3 |
+
(ಕೆಮ್ಮು ಬಂದಿತು) ಇದು ಯಾರಿಗೆ ಬರುತ್ತದೆ? ಶಿವ ತಂದೆಗೋ ಅಥವಾ ಬ್ರಹ್ಮಾ ತಂದೆಗೋ? (ಬ್ರಹ್ಮಾ ತಂದೆಗೆ) ಇದು ಕರ್ಮಭೋಗವಾಗಿದೆ. ಅಂತ್ಯದವರೆಗೂ ಆಗುತ್ತಾ ಇರುವುದು. ಸಂಪೂರ್ಣರಾಗಿ ಬಿಟ್ಟರೆ ಮತ್ತೆ ಈ ಶರೀರವೂ ಇರುವುದಿಲ್ಲ ಅಲ್ಲಿಯವರೆಗೂ ಇದಕ್ಕೆ ಏನಾದರೊಂದು ಆಗುತ್ತಾ ಇರುವುದು, ಇದಕ್ಕೆ ಕರ್ಮಭೋಗವೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಕರ್ಮಭೋಗವಿರುವುದಿಲ್ಲ, ಯಾವುದೇ ಕಾಯಿಲೆ ಇತ್ಯಾದಿಗಳು ಬರುವುದಿಲ್ಲ. ನಾವು ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತೇವೆ, ಸದಾ ಹರ್ಷಿತರಾಗಿರುತ್ತೇವೆ ಏಕೆಂದರೆ ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ ಮತ್ತೆ ಅರ್ಧಕಲ್ಪದ ನಂತರ ದುಃಖವು ಆರಂಭವಾಗುತ್ತದೆ. ಅದರಲ್ಲಿಯೂ ಯಾವಾಗ ಭಕ್ತಿಯು ವ್ಯಭಿಚಾರಿಯಾಗಿ ಬಿಡುತ್ತದೆಯೋ ಆಗ ಹೆಚ್ಚು ದುಃಖವಾಗುತ್ತದೆ ಆಗಲೇ ತ್ರಾಹಿ ತ್ರಾಹಿ ಎನ್ನುತ್ತಾರೆ ಮತ್ತೆ ವಿನಾಶವಾಗುತ್ತದೆ. ಈಗ ನೀವು ಸನ್ಮುಖದಲ್ಲಿ ಕೇಳುತ್ತೀರಿ ಆದ್ದರಿಂದ ಎಷ್ಟೊಂದು ಮಜಾ ಬರುತ್ತದೆ. ನಿಮಗೆ ತಿಳಿದಿದೆ, ಇವರು ನಮ್ಮ ಸತ್ಯ ತಂದೆ, ಸತ್ಯ ಶಿಕ್ಷಕ, ಸತ್ಯ ಸದ���ಗುರುವಾಗಿದ್ದಾರೆ, ಈ ಮಹಿಮೆಯು ಒಬ್ಬ ನಿರಾಕಾರ ತಂದೆಯದೇ ಆಗಿದೆ, ಅವರು ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ಆ ತಂದೆಯನ್ನು ನೆನಪು ಮಾಡಿದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಇಲ್ಲಿ ಯಾವುದೇ ಸಾಧು-ಸಂತ, ಮಹಾತ್ಮರು ಗದ್ದುಗೆಯ ಮೇಲೆ ಕುಳಿತುಕೊಳ್ಳುವುದಿಲ್ಲ, ಎಂದೂ ಕಾಲಿಗೆ ಬೀಳುವುದಕ್ಕೂ ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ, ನನಗೆ ಕಾಲುಗಳಾದರೂ ಎಲ್ಲಿದೆ? ನೀವು ಯಾವುದಕ್ಕೆ ತಲೆ ಬಾಗುತ್ತೀರಿ? ಅನೇಕ ಗುರುಗಳಿಗೆ ತಲೆಬಾಗುತ್ತಾ-ಬಾಗುತ್ತಾ ನಿಮ್ಮ ಹಣೆಯೇ ಸವೆದು ಹೋಗಿದೆ. ಯಾವುದು ಭಕ್ತಿಮಾರ್ಗದಲ್ಲಿ ಇರುತ್ತದೆಯೋ ಅದು ಜ್ಞಾನ ಮಾರ್ಗದಲ್ಲಿರಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ಹೇ ರಾಮನೇ..... ಎಂದು ಹೇಳುತ್ತಾರೆ. ಇಲ್ಲಿ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಶಬ್ಧ ಮಾಡುವಂತಿಲ್ಲ. ತಮ್ಮನ್ನು ಆತ್ಮನೆಂದು ತಿಳಿದು ಗುಪ್ತವಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಹೇ ಶಿವ.... ಎಂದೂ ಹೇಳುವಂತಿಲ್ಲ. ನೀವು ಶಬ್ಧದಿಂದ ದೂರ ಹೋಗಬೇಕಾಗಿದೆ. ಮಗುವಿಗೆ ಆಂತರ್ಯದಲ್ಲಿ ತಂದೆಯ ನೆನಪಿರುತ್ತದೆ, ಇವರು ನಮ್ಮ ತಂದೆಯಾಗಿದ್ದಾರೆಂದು ಆತ್ಮಕ್ಕೆ ಗೊತ್ತಿದೆ. ನೀವು ಒಳಗೆ ಗುಪ್ತವಾಗಿ ನೆನಪು ಮಾಡಬೇಕಾಗಿದೆ, ಇದಕ್ಕೆ ಅಜಪಾಜಪ ನೆನಪು ಎಂದು ಹೇಳಲಾಗುತ್ತದೆ ಅಂದರೆ ಜಪ ಮಾಡಬೇಕಾಗಿಲ್ಲ, ಮಾಲೆಯನ್ನು ಆಂತರ್ಯದಲ್ಲಾದರೂ ಜಪಿಸಿ ಅಥವಾ ಹೊರಗಡೆಯಾದರೂ ಜಪಿಸಿರಿ ಒಂದೇ ಮಾತಾಗಿದೆ. ಆಂತರ್ಯದಲ್ಲಿ ಜಪಿಸುವುದು ಯಾವುದೇ ಗುಪ್ತವಲ್ಲ. ಗುಪ್ತ ಮಾತು ಯಾವುದೆಂದರೆ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಅವರು ಶಿವ ತಂದೆ, ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಶೃಂಗಾರ ಮಾಡುವುದಕ್ಕಾಗಿ ನಿಮಗೆ ಡಬಲ್ ಇಂಜಿನ್ ಸಿಗುತ್ತದೆ, ಇವರ ಆತ್ಮವೂ ಶೃಂಗರಿತವಾಗುತ್ತದೆ ನಂತರ ಎಲ್ಲರೂ ತಂದೆಯ ಮನೆಗೆ ಹೋಗುತ್ತೀರಿ, ಅಲ್ಲಿಂದ ಮತ್ತೆ ಮಾವನ ಮನೆಯಾದ ಕೃಷ್ಣ ಪುರಿಯಲ್ಲಿ ಬರುತ್ತೀರಿ. ಇದು ಡಬಲ್ ತಂದೆಯ ಮನೆಯಾಗಿದೆ, ಈ ಅಲೌಕಿಕ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ ಆದ್ದರಿಂದಲೇ ಈ ದಾದಾರವರನ್ನು ಏಕೆ ತೋರಿಸಿದ್ದೀರಿ ಎಂದು ಕೇಳುತ್ತಾರೆ ಆದರೆ ಇವರ ತನುವಿನಲ್ಲಿ ಪರಮಾತ್ಮ ಓದಿಸುತ್ತಾರೆಂದು ಯಾರಿಗೂ ತಿಳಿದಿಲ್ಲ. ಇವರು ಬಹಳ ಜನ್ಮಗಳ ಅಂತಿಮದಲ್ಲಿ ಪೂಜ್ಯರಿಂದ ಪೂಜಾರಿಯಾಗಿದ್ದಾರೆ, ರಾಜನಿಂದ ಪ್ರಜೆಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಇವರ ತನುವಿನಲ್ಲಿ ಪ್ರವೇಶ ಮಾಡುತ್ತೇನೆ ಎಂದು. ಆದರೂ ಸಹ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಮಂದಿರಗಳಲ್ಲಿ ನಂದಿಯನ್ನು ತೋರಿಸಿದ್ದಾರೆ. ಶಂಕರನಂತು ಸೂಕ್ಷ್ಮವತನವಾಸಿ ಆಗಿದ್ದಾರೆ, ಸೂಕ್ಷ್ಮವತನದಲ್ಲಿ ನಂದಿ ಇತ್ಯಾದಿಗಳಿರುವುದಿಲ್ಲ, ನಂದಿ ಅರ್ಥಾತ್ ಪುರುಷ. ಭಗೀರಥನನ್ನು ಪುರುಷನಂತೆ ತೋರಿಸುತ್ತಾರೆ, ಮನುಷ್ಯರು ಸಂಪೂರ್ಣ ಬುದ್���ಿಹೀನರಾಗಿ ಬಿಟ್ಟಿದ್ದಾರೆ. ರಾವಣನು ಬುದ್ಧಿಹೀನರನ್ನಾಗಿ ಮಾಡಿದ್ದಾನೆ. ರಾಮ ರಾಜ್ಯ ಬೇಕೆಂದು ತಾವೇ ಹೇಳುತ್ತಾರೆ ಆದರೆ ರಾಮ ರಾಜ್ಯವಂತೂ ಸತ್ಯಯುಗದಲ್ಲಿರುತ್ತದೆ. ಕಲಿಯುಗದಲ್ಲಿ ರಾವಣ ರಾಜ್ಯವಿದೆ. ರಾಮ ಮತ್ತು ರಾವಣನು ಭಾರತದಲ್ಲಿಯೇ ಇರುತ್ತಾರೆ. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ. ರಾವಣನ ಜಯಂತಿಯನ್ನು ಆಚರಿಸುವುದಿಲ್ಲ ಏಕೆಂದರೆ ಶತ್ರುವಾಗಿದ್ದಾನೆ. ಯಾರು ಸುಖ ಕೊಡುತ್ತಾರೆಯೋ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಈಗ ಶಿವ ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ ಮತ್ತು ರಾವಣನಿಂದ ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ರಾವಣನೆಂದರೆ ಯಾರು? ಯಾವಾಗ ಬರುತ್ತಾನೆ? ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಅಕ್ಯೂರೇಟ್ ಲೆಕ್ಕವನ್ನು ತಿಳಿಸಲಾಗುತ್ತದೆ, ಈ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಿ, ಮರೆಯಬೇಡಿ. ಜ್ಞಾನ ಸಾಗರನ ಬಳಿಗೆ ಮೋಡಗಳಾಗಿ ಬಂದಿದ್ದೀರಿ ಅಂದಮೇಲೆ ತುಂಬಿಸಿಕೊಂಡು ಹೋಗಿ ಮಳೆ ಸುರಿಸಬೇಕು. ಧಾರಣೆಯು ಚೆನ್ನಾಗಿರಬೇಕಾಗಿದೆ. ಇಲ್ಲಿ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ, ನಾವು ಬೇಹದ್ದಿನ ತಂದೆಯ ಸನ್ಮುಖದಲ್ಲಿ ಮನೆಯಲ್ಲಿ ಕುಳಿತಿದ್ದೇವೆಂದು ಭಾಸವಾಗುತ್ತದೆ. ಬ್ರಾಹ್ಮಣ ಕುಲಭೂಷಣರೂ ಇದ್ದಾರೆ, ಮಮ್ಮಾ-ಬಾಬಾರವರೂ ಇದ್ದಾರೆ. ತಂದೆಯು ನಮಗೆ ಶಿಕ್ಷಕನ ರೂಪದಲ್ಲಿ ಓದಿಸುತ್ತಿದ್ದಾರೆ. ಸದ್ಗುರುವಿನ ರೂಪದಲ್ಲಿ ಜೊತೆ ಕರೆದುಕೊಂಡು ಹೋಗುತ್ತಾರೆ. ಆ ಗುರುಗಳು ಕರೆದುಕೊಂಡು ಹೋಗುವುದಿಲ್ಲ. ಗುರುವಿನ ಕೆಲಸವಾಗಿದೆ - ಅನುಯಾಯಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು. ವಾಸ್ತವದಲ್ಲಿ ಅವರು ಅನುಯಾಯಿಗಳೂ ಅಲ್ಲ ಏಕೆಂದರೆ ಅವರು ಸನ್ಯಾಸಿಗಳು ಇವರು ಗೃಹಸ್ಥಿಗಳು ಅಂದಮೇಲೆ ಅನುಯಾಯಿಗಳು ಹೇಗಾದರು! ನೀವು ಶಿವ ತಂದೆಯನ್ನು ಅನುಸರಿಸುತ್ತೀರಿ ಮತ್ತು ಬ್ರಹ್ಮಾ ತಂದೆಯನ್ನೂ ಅನುಸರಿಸುತ್ತೀರಿ. ಹೇಗೆ ಇವರು ಆಗುತ್ತಾರೆಯೋ ನೀವೂ ಆಗುತ್ತೀರಿ. ನೀವಾತ್ಮರು ಪವಿತ್ರರಾಗಿ ತಂದೆಯಬಳಿ ಹೊರಟು ಹೋಗುತ್ತೀರಿ. ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ, ನೀವು ಸತ್ಯ-ಸತ್ಯವಾದ ಅನುಯಾಯಿಗಳಾಗಿದ್ದೀರಿ.
|
4 |
+
ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ, ನೀವೀಗ ಜ್ಞಾನ ಚಿತೆಯ ಮೇಲೆ ಕುಳಿತುಕೊಂಡರೆ ಕರೆದುಕೊಂಡು ಹೋಗುತ್ತೇನೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಆ ಸಮಯದಲ್ಲಿ ಮತ್ತೆಲ್ಲಾ ಧರ್ಮದವರು ಶಾಂತಿಧಾಮದಲ್ಲಿದ್ದರು, ಇವು ಬಹಳ ಸಹಜ ಮಾತುಗಳಾಗಿವೆ. ತಂದೆಗೆ ಅನುಯಾಯಿಗಳಾಗಿರಿ. ಎಷ್ಟು ಪವಿತ್ರರಾಗುತ್ತೀರೋ ಅಷ್ಟು ಒಳ್ಳೆಯ ಪದವಿಯನ್ನು ಪಡೆಯುತ್ತೀರಿ ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಹೋಗುವುದಂತೂ ನಿಶ್ಚಿತವಾಗಿದೆ, 21 ಜನ್ಮಗಳ ಆಸ್ತಿಯು ಸಿಗುತ್ತದೆ ಅಂದಮೇಲೆ ಪರಿಶ್ರಮವನ್ನು ಏಕೆ ಪಡಬಾರದು! ಈಗ ಪ��ಿಶ್ರಮ ಪಡದಿದ್ದರೆ ಕಲ್ಪ-ಕಲ್ಪಾಂತರವೂ ಮಾಡುವುದಿಲ್ಲ ಅಂದಮೇಲೆ ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುತ್ತೀರಿ! ಇದು ಬೇಹದ್ದಿನ ತರಗತಿಯಾಗಿದೆ. ಒಂದೇ ಪರೀಕ್ಷೆಯಿದೆ- ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ಒಬ್ಬ ತಂದೆಗೆ ಸತ್ಯ-ಸತ್ಯವಾದ ಅನುಯಾಯಿಗಳಾಗಿ ಸಂಪೂರ್ಣ ಪವಿತ್ರರಾಗಬೇಕಾಗಿದೆ. 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ.
|
8 |
+
2. ಬಾಯಿಂದ ಎಂದೂ ಹೇ ಶಿವ ತಂದೆಯೇ ಎಂದು ಹೇಳಬಾರದು, ಶಬ್ಧದಿಂದ ದೂರ ಹೋಗಬೇಕಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ಆಂತರ್ಯದಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ.
|
BKMurli/BKMurli/page_1031.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ಮಕ್ಕಳೊಂದಿಗೆ ಕೇಳುತ್ತಿದ್ದಾರೆ - ಮಕ್ಕಳೇ, ನೀವು ಇಲ್ಲಿ ಮುಂಜಾನೆಯಿಂದ ಕುಳಿತು ಏನು ಮಾಡುತ್ತಿದ್ದೀರಿ? ನೀವು ವಿದ್ಯಾರ್ಥಿಗಳಾಗಿಯೇ ಇದ್ದೀರಿ ಅಂದಮೇಲೆ ಅವಶ್ಯವಾಗಿ ಇಲ್ಲಿ ಕುಳಿತು ಈ ವಿಚಾರ ಮಾಡುತ್ತಾ ಇರುತ್ತೀರಿ - ನಮಗೆ ಓದಿಸಲು ಶಿವ ತಂದೆಯು ಬಂದಿದ್ದಾರೆ. ಈ ವಿದ್ಯೆಯಿಂದ ನಾವು ಸೂರ್ಯವಂಶಿಯರಾಗುತ್ತೇವೆ ಏಕೆಂದರೆ ನೀವು ರಾಜಯೋಗವನ್ನು ಕಲಿಯುತ್ತಿದ್ದೀರಿ ವಿಷ್ಣುಪುರಿಯ ಮಾಲೀಕರಾಗುವುದಕ್ಕಾಗಿ, ಈ ವಿಚಾರದಲ್ಲಿ ಕುಳಿತಿದ್ದೀರೋ ಅಥವಾ ಯಾವುದಾದರೂ ಜವಾಬ್ದಾರಿ, ಮಕ್ಕಳು-ಮರಿ, ಉದ್ಯೋಗ-ವ್ಯವಹಾರ ಇತ್ಯಾದಿಗಳು ನೆನಪಿಗೆ ಬರುತ್ತಿದೆಯೇ? ಇದೇ ಬುದ್ಧಿಯಲ್ಲಿ ಇರಬೇಕಾಗಿದೆ - ಇದು ಗೀತಾಪಾಠಶಾಲೆಯಾಗಿದೆ, ನಮಗೆ ಭಗವಂತ ಓದಿಸುತ್ತಾರೆ ಮತ್ತು ನಾವು ಲಕ್ಷ್ಮೀ-ನಾರಾಯಣ ಅಥವಾ ಅವರ ಕುಟುಂಬದ ಸದಸ್ಯರಾಗುತ್ತೇವೆ. ಇದು ರಾಜಯೋಗವಾಗಿದೆ, ಮಕ್ಕಳ ಬುದ್ಧಿಯಲ್ಲಿ ಇದೇ ಇರಲಿ - ನಾವು ತಂದೆಯಿಂದ ಡೈರೆಕ್ಟ್ ಕೇಳಿ ಸೂರ್ಯವಂಶಿ ಮನೆತನದವರಾಗುತ್ತೇವೆ. ಲಕ್ಷ್ಮೀ-ನಾರಾಯಣರ ಚಿತ್ರವು ಸನ್ಮುಖದಲ್ಲಿದೆ, ನಮ್ಮ ರಾಜ್ಯವಿರುವುದು, ಹೇಗೆ ಕಾಂಗ್ರೆಸ್ಸಿನವರೂ ಸಹ ತಿಳಿದುಕೊಳ್ಳುತ್ತಾರೆ. ಬ್ರಾಹ್ಮಣರಲ್ಲಿಯೂ ಸಹ ಸ್ವರ್ಗವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದು ಕೆಲವರಿಗೆ ಗೊತ್ತೇ ಇಲ್ಲ, ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನಾವು ತಂದೆಯಿಂದ ಸ್ವರ್ಗದ ಸ್ವರಾಜ್ಯವಿದ್ಯೆಯನ್ನು ಕಲಿಯುತ್ತಿದ್ದೇವೆ. ನಾವೇ ಸ್ವರ್ಗದ ಮಾಲೀಕರಾಗುತ್ತೇವೆ. ಇದನ್ನು ಆಂತರ್ಯದಲ್ಲಿ ಸ್ಮರಣೆ ಮಾಡಬೇಕಾಗಿದೆ. ಹೇಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ಬುದ್ಧಿಯಲ್ಲಿರುತ್ತದೆ - ನಾವು ಬ್ಯಾರಿಸ್ಟರ್, ಇಂಜಿನಿಯರ್ ಆಗುವುದಕ್ಕಾಗಿ ಓದುತ್ತಿದ್ದೇವೆ ಆದರೆ ನಿಮಗೆ ಇಷ್ಟಾದರೂ ನೆನಪಿರುತ್ತದೆಯೋ ಅಥವಾ ಮರೆತು ಹೋಗುತ್ತೀರೋ? ನೀವು ಶ್ರೇಷ್ಠಾತಿ ಶ್ರೇಷ್ಠ ಭಗವಂತನ ವಿದ್ಯಾರ್ಥಿಗಳಾಗಿದ್ದೀರಿ, ನಿಮ್ಮನ್ನು ಶ್ರೇಷ್ಠಾತಿ ಶ್ರೇಷ್ಠ ದೇವತೆಗಳನ್ನಾಗಿ ಮಾಡಲು ತಂದೆಯು ಓದಿಸುತ್ತಿದ್ದಾರೆ, ನೀವು ಅವರ ಮಕ್ಕಳಾಗಿದ್ದೀರಿ. ಆತ್ಮವು ಈ ಶರೀರದ ಮೂಲಕ ತಮ್ಮ ಭವಿಷ್ಯ ಪದವಿಯನ್ನು ನೆನಪು ಮಾಡಿಕೊಳ್ಳುತ್ತಿದ್ದೀರಿ ಅಥವಾ ಶರೀರದ ಸಂಬಂಧಿ, ಶರೀರದ ಸಂಪತ್ತು, ಉದ್ಯೋಗ-ವ್ಯವಹಾರವನ್ನು ನೆನಪು ಮಾಡುತ್ತೀರಾ? ಇಲ್ಲಿಗೆ ಬರುತ್ತೀರೆಂದರೆ ಇದನ್ನು ತಿಳಿದುಕೊಳ್ಳಿ - ಬೇಹದ್ದಿನ ತಂದೆಯು ನಮ್ಮನ್ನು ಬೇಹದ್ದಿನ ಮಾಲೀಕರನ್ನಾಗಿ ಮಾಡಲು ಓದಿಸಲು ಬರುತ್ತಾರೆ. ಈ ವಿದ್ಯೆಯಿಂದ ನೀವು ರಾಜ-ರಾಣಿಯಾದರೂ ಆಗಿರಿ, ಪ್ರಜೆಗಳಾದರೂ ಆಗಿರಿ. ಮಾಲೀಕರಂತೂ ಆಗುತ್ತೀರಲ್ಲವೇ. ಹೊಸ ಪ್ರಪಂಚದಲ್ಲಿಯೇ ಸೂರ್ಯವಂಶಿ ಮನೆತನವಿರುತ್ತದೆ, ನಾವು ನಮ್ಮ ರಾಜ್ಯಭಾರ ಮಾಡುತ್ತೇವೆ ಎಂಬುದನ್ನಂತೂ ತಿಳಿದುಕೊಳ್ಳುತ್ತೀರಲ್ಲವೇ.
|
2 |
+
ತಂದೆಗೆ ಗೊತ್ತಿದೆ - ಮಕ್ಕಳು ಹೊರಗಡೆ ಇರುತ್ತಾ ಮನೆ ಮಠ, ಹೊಲ ಗದ್ದೆಗಳಲ್ಲಿರುತ್ತಾ ಇಷ್ಟೊಂದು ತಂದೆಯ ನೆನಪಿರಲು ಸಾಧ್ಯವಿಲ್ಲ ಆದ್ದರಿಂದ ಇಲ್ಲಿಗೆ ಮಿಲನ ಮಾಡಲು ಬರುತ್ತೀರೆಂದರೆ ಎಲ್ಲಾ ಆಲೋಚನೆಗಳನ್ನು ಬಿಟ್ಟು ಬನ್ನಿರಿ. ನೀವೀಗ ಆ ಕಲಿಯುಗೀ ಪ್ರಪಂಚದಲ್ಲಿ ಇಲ್ಲವೇ ಇಲ್ಲ, ನೀವು ಸಂಗಮದಲ್ಲಿದ್ದೀರಿ. ಕಲಿಯುಗವನ್ನು ಬಿಟ್ಟು ಬಿಟ್ಟಿದ್ದೀರಿ. ಹೊರಗಡೆ ಕಲಿಯುಗವಿದೆ, ವಿಶೇಷವಾಗಿ ಈ ಮಧುಬನವು ಸಂಗಮವಾಗಿದೆ ಆದ್ದರಿಂದ ಮಧುಬನದ ಗಾಯನವಿದೆ. ಇಲ್ಲಿ ಈ ಮುರುಳಿಯದೇ ಸ್ಮರಣೆ ಮಾಡಬೇಕಾಗಿದೆ. ನೀವು ಏನನ್ನು ಕೇಳುತ್ತೀರೋ ಅದನ್ನು ರಿಪೀಟ್ ಮಾಡಿರಿ ಮತ್ತು ವಿಚಾರ ಸಾಗರ ಮಂಥನ ಮಾಡಿ. ಸಮಯ ಸಿಕ್ಕಿದಾಗ ಚಿತ್ರಗಳ ಮುಂದೆ ಹೋಗಿ ಕುಳಿತುಕೊಳ್ಳಿ, ಇದನ್ನು ನೋಡುತ್ತಾ ಮತ್ತು ಓದುತ್ತಾ ಇರಿ. ಬ್ರಾಹ್ಮಣಿಯರು ಯಾರು ಕರೆದುಕೊಂಡು ಬರುತ್ತಾರೆಯೋ ಅವರ ಮೇಲೂ ಬಹಳ ಜವಾಬ್ದಾರಿಯಿದೆ. ಬಹಳ ಚಿಂತೆಯಿರಬೇಕು - ಹೇಗೆ ಶಿಕ್ಷಕರಿಗೆ ನಮ್ಮ ಶಾಲೆಯಿಂದ ಒಂದುವೇಳೆ ಕಡಿಮೆ ಜನ ತೇರ್ಗಡೆಯಾದರೆ ಗೌರವ ಕಳೆಯುವುದು ಎಂದು ಚಿಂತೆಯಿರುತ್ತದೆ. ಯಾವಾಗ ಶಾಲೆಯಿಂದ ಅನೇಕರು ಉತ್ತೀರ್ಣರಾಗುವರೋ ಆಗ ಅವರು ಒಳ್ಳೆಯ ಶಿಕ್ಷಕರೆಂದು ನಂಬಲಾಗುತ್ತದೆ. ಹಾಗೆಯೇ ಬ್ರಾಹ್ಮಣಿಯರು ವಿದ್ಯಾರ್ಥಿಗಳ ಮೇಲೆ ಗಮನ ಕೊಡಬೇಕಾಗಿದೆ. ನೀವು ಹೇಗೆ ಇಲ್ಲಿ ಸಂಗಮದಲ್ಲಿ ಬಂದಿದ್ದೀರಿ, ಇಲ್ಲಿ ಡೈರೆಕ್ಟ್ ತಂದೆಯೇ ತಿಳಿಸುತ್ತಾರೆ. ಇಲ್ಲಿನ ಪ್ರಭಾವವು ಬಹಳ ಚೆನ್ನಾಗಿರುತ್ತದೆ. ಒಂದುವೇಳೆ ಇಲ್ಲಿಯೂ ಸಹ ಮನೆ ಮಠ, ಉದ್ಯೋಗ-ವ್ಯವಹಾರಗಳು ನೆನಪಿಗೆ ಬಂದರೆ ಇವರು ಸಾಧಾರಣ ಪ್ರಜೆಯಾಗುವರೆಂದು ತಂದೆಯು ತಿಳಿದುಕೊಳ್ಳುತ್ತಾರೆ. ರಾಜರಾಗಲು ಬಂದಿದ್ದರು ಆದರೆ..... ವಾಸ್ತವದಲ್ಲಿ ಮಕ್ಕಳಿಗೆ ಬಹಳ ಖುಷಿಯಿರಬೇಕು. ಈ ಚಿತ್ರಗಳೂ ಸಹ ನಿಮಗೆ ಬಹಳ ಸಹಯೋಗ ನೀಡುತ್ತವೆ. ಮನುಷ್ಯರು ನೆನಪಿಗಾಗಿ ಅಷ್ಟ ದೇವತೆಗಳ ಮತ್ತು ಗುರುಗಳ ಚಿತ್ರಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಆದರೆ ಅವರನ್ನು ನೆನಪು ಮಾಡುವುದರಿಂದ ಸಿಗುವುದೇನೂ ಇಲ್ಲ. ಭಕ್ತಿಮಾರ್ಗದಲ್ಲಿ ಏನೆಲ್ಲವನ್ನೂ ಮಾಡುತ್ತಾ ಕೆಳಗಿಳಿದು ಬಂದಿದ್ದೀರಿ, ನೀವು ಮಕ್ಕಳು ಈಗ ಮೇಲೇರುವ ಪುರುಷಾರ್ಥ ಮಾಡಬೇಕಾಗಿದೆ. ಮನೆಯಲ್ಲಿ ಶಿವ ತಂದೆಯ ಚಿತ್ರವನ್ನಿಟ್ಟುಕೊಳ್ಳಿ ಆಗ ಪದೇ-ಪದೇ ನೆನಪಿಗೆ ಬರುವುದು. ಮೊದಲು ನೀವು ಹನುಮಂತನನ್ನೋ, ಕೃಷ್ಣನನ್ನೊ, ರಾಮನನ್ನೋ ನೆನಪು ಮಾಡುತ್ತಿದ್ದಿರಿ. ಈಗ ನನ್ನನ್ನು ನೆನಪು ಮಾಡಿರಿ ಎಂದು ಶಿವ ತಂದೆಯು ಸನ್ಮುಖದಲ್ಲಿ ಹೇಳುತ್ತಾರೆ. ತ್ರಿಮೂರ್ತಿಯ ಚಿತ್ರವು ಬಹಳ ಚೆನ್ನಾಗಿದೆ. ಈ ಚಿತ್ರವನ್ನು ಸದಾ ಪಾಕೆಟ್ನಲ್ಲಿ, ಜೇಬಿನಲ್ಲಿ ಇಟ್ಟುಕೊಂಡು ಪದೇ-ಪದೇ ನೋಡುತ್ತಾ ಇರಿ ಆಗ ನೆನಪಿರುವುದು. ಇವರು (ಬ್ರಹ್ಮಾ) ಭಕ್ತನಾಗಿದ್ದಾಗ ಲಕ್ಷ್ಮೀ-ನಾರಾಯಣರ ಚಿತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಗದ್ದುಗೆಯ ಕೆಳಗಡೆ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರು. ಅದರಿಂದ ಏನೂ ಸಿಗಲಿಲ್ಲ, ಈಗ ತಂದೆಯಿಂದ ಬಹಳ ಪ್ರಾಪ್ತಿಯಾಗುತ್ತಿದೆ. ಅವರನ್ನೇ ನೆನಪು ಮಾಡಬೇಕಾಗಿದೆ, ಇದರಲ್ಲಿ ಮಾಯೆಯು ಎದುರಿಸುತ್ತದೆ. ಜ್ಞಾನವನ್ನಂತೂ ಭಲೆ ಬಹಳ ಕೇಳುತ್ತಾರೆ, ಹೇಳುತ್ತಾರೆ. ಇದರಲ್ಲಿ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. 84 ಜನ್ಮಗಳ ಚಕ್ರವು ಮರೆತು ಹೋಗುತ್ತದೆ ಎಂದು ಹೇಳುವುದಿಲ್ಲ. ಇಲ್ಲಿರುವವರು ಹೆಚ್ಚು ನೆನಪು ಮಾಡುತ್ತಾರೆ ಎಂದಲ್ಲ, ಇಲ್ಲಿದ್ದರೂ ಸಹ ಕೆಲವರು ಮಣ್ಣು ಪಾಲಾಗುವುದನ್ನೇ ನೆನಪು ಮಾಡುತ್ತಿರುತ್ತಾರೆ. ಯಾವ ತಂದೆಯಿಂದ ನಾವು ಸುಂದರರಾಗಲು ಬಂದಿದ್ದೇವೆಯೋ ಅವರನ್ನೇ ತಿಳಿದುಕೊಂಡಿಲ್ಲ. ಮಾಯೆಯ ನೆರಳು ಬಹಳ ಬೀಳುತ್ತದೆ. ಮೂಲ ಮಾತು ನೆನಪಿನದಾಗಿದೆ, ತಂದೆಗೆ ಗೊತ್ತಿದೆ - ಬಹಳ ಒಳ್ಳೊಳ್ಳೆಯ ಮಕ್ಕಳೂ ಸಹ ನೆನಪಿನಲ್ಲಿರುವುದಿಲ್ಲ. ಯೋಗದಲ್ಲಿರುವುದರಿಂದಲೇ ದೇಹಾಭಿಮಾನವು ಕಡಿಮೆಯಾಗುವುದು. ಬಹಳ ಮಧುರರಾಗಿರುತ್ತೀರಿ. ದೇಹಾಭಿಮಾನವಿದ್ದರೆ ಮಧುರರಾಗುವುದಿಲ್ಲ, ಕೋಪಿಸಿಕೊಳ್ಳುತ್ತಾ ಇರುತ್ತಾರೆ. ತಂದೆಯು ಈ ಮಾತನ್ನು ಎಲ್ಲರಿಗೆ ಹೇಳುವುದಿಲ್ಲ. ಕೆಲವರು ಸುಪುತ್ರರೂ ಇದ್ದಾರೆ ಯಾರು ಯೋಗದಲ್ಲಿರುತ್ತಾರೆಯೋ ಅವರಿಗೆ ಸುಪುತ್ರರೆಂದು ಹೇಳಲಾಗುತ್ತದೆ. ಅವರಿಂದ ಯಾವುದೇ ಉಲ್ಟಾ-ಸುಲ್ಟಾ ಮಾತುಗಳು ಬರುವುದಿಲ್ಲ. ಮಿತ್ರ ಸಂಬಂಧಿ ಮೊದಲಾದವರೆಲ್ಲರನ್ನೂ ಮರೆತು ಹೋಗುತ್ತಾರೆ - ನಾವು ಅಶರೀರಿಯಾಗಿ ಬಂದಿದ್ದೇವೆ, ಈಗ ಅಶರೀರಿಯಾಗಿ ಮನೆಗೆ ಹೋಗಬೇಕಾಗಿದೆ. ಈಗ ನೀವು ಮಕ್ಕಳಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ, ಇದರಿಂದ ನೀವು ಮನೆಯನ್ನು ಮತ್ತು ರಾಜಧಾನಿಯನ್ನು ತಿಳಿದುಕೊಂಡಿದ್ದೀರಿ. ಇದೂ ಸಹ ನೀವು ಮಕ್ಕಳಿಗೆ ಗೊತ್ತಿದೆ, ಶಿವ ತಂದೆಯು ಕಪ್ಪು ಲಿಂಗವಾಗಿಲ್ಲ. ಮನುಷ್ಯರು ಕಪ್ಪಾಗಿ ತೋರಿಸುತ್ತಾರೆ ಆದರೆ ಅವರು ಬಿಂದುವಾಗಿದ್ದಾರೆ. ಇದನ್ನೂ ಸಹ ನಾವು ತಿಳಿದುಕೊಂಡಿದ್ದೇವೆ. ನಾವೀಗ ಮನೆಗೆ ಹೋಗುತ್ತೇವೆ, ಅಲ್ಲಿ ನಾವು ಅಶರೀರಿಯಾಗಿರುತ್ತೇವೆ. ನಾವೀಗ ಅಶರೀರಿಗಳಾಗಬೇಕಾಗಿದೆ. ತನ್ನನ್ನು ಆತ್ಮನೆಂದು ತಿಳಿದು ಪತಿತ-ಪಾವನ ತಂದೆಯನ್ನು ನೆನಪು ಮಾಡಬೇಕಾಗಿದೆ, ಇದನ್ನಂತೂ ತಿಳಿಸಲಾಗುತ್ತದೆ - ಆತ್ಮ ಅವಿನಾಶಿಯಾಗಿದೆ, ಅದರಲ್ಲಿ 84 ಜನ್ಮಗಳ ಪಾತ್ರವು ನಿಗಧಿತವಾಗಿದೆ. ಅದರ ಅಂತ್ಯವಾಗುವುದಿಲ್ಲ. ಸ್ವಲ್ಪ ಸಮಯ ಮುಕ್ತಿಧಾಮಕ್ಕೆ ಹೋಗಿ ಮತ್ತೆ ಪಾತ್ರದಲ್ಲಿ ಬರಬೇಕಾಗಿದೆ. ನೀವು ಸರ್ವತೋಮುಖ ಪಾತ್ರವನ್ನು ಅಭಿನಯಿಸುತ್ತೀರಿ, ಇದು ಸದಾ ನೆನಪಿರಲಿ. ನಾವೀಗ ಮನೆಗೆ ಹೋಗಬೇಕಾಗಿದೆ, ತಂದೆಯನ್ನು ನೆನಪು ಮಾಡುವುದರಿಂದ ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೇವೆ. ಇಲ್ಲಿ ಉದ್ಯೋಗ-ವ್ಯವಹಾರಗಳನ್ನು ನೆನಪು ಮಾಡಿಕೊಳ್ಳಬಾರದು. ಇಲ್ಲಿ (ಮಧುಬನ) ಪೂರ್ಣ ಸಂಗಮಯುಗದಲ್ಲಿದ್ದೀರಿ, ನೀವೀಗ ದೋಣಿಯಲ್ಲಿ ಕುಳಿತಿದ್ದೀರಿ. ಕೆಲವರು ಮಧ್ಯದಲ್ಲಿಯೇ ಇಳಿದು ಹೋಗುತ್ತಾರೆ, ನಂತರ ಸಿಕ್ಕಿ ಹಾಕಿಕೊಂಡು ಸಾಯುತ್ತಾರೆ. ಇದರ ಮೇಲೆ ಶಾಸ್ತ್ರಗಳಲ್ಲಿ ಒಂದು ಕಥೆಯೂ ಇದೆ. ನೀವೀಗ ತಿಳಿದುಕ��ಂಡಿದ್ದೀರಿ - ನಾವು ಆ ತೀರದೆಡೆಗೆ ಹೋಗುತ್ತಿದ್ದೇವೆ, ಅಂಬಿಗನು ಶಿವ ತಂದೆಯಾಗಿದ್ದಾರೆ. ಕೃಷ್ಣನಿಗೆ ಅಂಬಿಗ ಅಥವಾ ಮಾಲೀಕನೆಂದು ಹೇಳುವುದಿಲ್ಲ, ಶಿವ ಭಗವಾನುವಾಚ ಆಗಿದೆ. ಪತಿತ-ಪಾವನ ಶಿವ ತಂದೆಯಾಗಿದ್ದಾರೆ. ಕೃಷ್ಣನ ಕಡೆ ಬುದ್ಧಿಯು ಹೋಗಲು ಸಾಧ್ಯವಿಲ್ಲ. ಮನುಷ್ಯರ ಬುದ್ಧಿಯಂತೂ ಅಲೆಯುತ್ತಿರುತ್ತದೆ. ತಂದೆಯು ಬಂದು ಅಲೆಯುವುದರಿಂದ ಬಿಡಿಸುತ್ತಾರೆ, ಕೇವಲ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ ಆಗಲೇ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಈ ಮಾತುಗಳನ್ನು ಮರೆಯಬಾರದು. ನೀವು ಇಲ್ಲಿಂದ ಬಹಳ ರಿಫ್ರೆಷ್ ಆಗಿ ಹೋಗುತ್ತೀರಿ, ಅನುಭವವನ್ನೂ ತಿಳಿಸುತ್ತೀರಿ. ಬಾಬಾ, ನಾವು ಮತ್ತೆ ಹೇಗಿದ್ದವರು ಅದೇರೀತಿ ಆಗಿ ಬಿಡುತ್ತೇವೆ. ಮಿತ್ರ ಸಂಬಂಧಿ ಮೊದಲಾದವರ ಮುಖವನ್ನು ನೋಡುತ್ತಿದ್ದಂತೆಯೇ ಮತ್ತೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ನೀವು ಮಕ್ಕಳು ಪ್ರಿಯತಮೆಯರಾಗಿದ್ದೀರಿ, ಕೆಲಸ ಕಾರ್ಯಗಳನ್ನು ಮಾಡುತ್ತಾ ಪ್ರಿಯತಮನನ್ನು ನೆನಪು ಮಾಡಿರಿ ಆಗ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಒಂದುವೇಳೆ ಈಗ ಪುರುಷಾರ್ಥ ಮಾಡದಿದ್ದರೆ ಸಿಂಗಲ್ ಕಿರೀಟವೂ ಸಿಗುವುದಿಲ್ಲ, ನೀವು ಮಕ್ಕಳು ಇಲ್ಲಿಗೆ ಬರುತ್ತೀರೆಂದರೆ ಸಮಯವನ್ನು ವ್ಯರ್ಥ ಮಾಡಬಾರದು. ಇಲ್ಲಿ ನಿಮಗೆ ಮತ್ತೇನೂ ಇಲ್ಲ, ಕೇವಲ ನಿಮ್ಮ ನೆನಪಾರ್ಥ ದಿಲ್ವಾಡಾ ಮಂದಿರವಿದೆ, ಅದನ್ನು ನೋಡಬಹುದು. ಅದರಲ್ಲಿ ಮೇಲೆ ವೈಕುಂಠವಿದೆ, ನಿಮ್ಮ ವೃಕ್ಷದ ಚಿತ್ರವೂ ಸ್ಪಷ್ಟವಾಗಿದೆ, ಕೆಳಗೆ ರಾಜಯೋಗದಲ್ಲಿ ಕುಳಿತಿದ್ದೀರಿ. ಮೇಲೆ ರಾಜಧಾನಿಯು ನಿಂತಿದೆ. ಅದೇ ರೀತಿಯಲ್ಲಿ ದಿಲ್ವಾಡಾ ಮಂದಿರವು ಮಾಡಲ್ಪಟ್ಟಿದೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮಗೆ ಪುನಃ ಜ್ಞಾನವನ್ನು ತಿಳಿಸಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ಈ ಕಲಿಯುಗದ ವಿನಾಶವಾಗಲಿದೆ. ಈ ಆದಿದೇವ-ಆದಿನಾಥನು ಯಾರಾಗಿದ್ದಾರೆ, ನೀವು ಎಲ್ಲರ ಪರಿಚಯವನ್ನು ತಿಳಿದುಕೊಂಡಿದ್ದೀರಲ್ಲವೆ. ಈ ಸಮಯದ ಚರ್ಚೆಯು ನಂತರ ಭಕ್ತಿಮಾರ್ಗದಲ್ಲಿ ನಡೆಯುತ್ತದೆ. ಹಬ್ಬ, ವ್ರತ ಇತ್ಯಾದಿಗಳೆಲ್ಲವೂ ಈ ಸಮಯದ್ದಾಗಿದೆ. ಸತ್ಯವಾದ ವ್ರತವು ಮನ್ಮನಾಭವ ಆಗಿದೆ ಬಾಕಿ ನಿರ್ಜಲವಾಗಿರುವುದು, ಆಹಾರವನ್ನು ಸೇವಿಸದೇ ಇರುವುದು ಯಾವುದೇ ವ್ರತವಲ್ಲ. ಈ ಸಮಯದ ಪ್ರಪಂಚದಲ್ಲಿ ಮಾಯೆಯ ಬಹಳ ಆಡಂಬರವಿದೆ. ಮೊದಲು ಈ ವಿದ್ಯುತ್, ಗ್ಯಾಸ್ ಇತ್ಯಾದಿಗಳಿರಲಿಲ್ಲ. ಇವೆಲ್ಲವೂ 100 ವರ್ಷಗಳಲ್ಲಿ ಹೊರಬಂದಿವೆ. ಇದರಲ್ಲಿ ಮನುಷ್ಯರು ಸಿಕ್ಕಿ ಹಾಕಿಕೊಂಡಿದ್ದಾರೆ. ನಮಗಾಗಿ ಇಲ್ಲಿಯೇ ಸ್ವರ್ಗವಿದೆ ಎಂದು ಹೇಳುತ್ತಾರೆ, ಮಾಯೆಯ ಪ್ರಭಾವವು ಇಷ್ಟೊಂದಿದೆ ಮನುಷ್ಯರು ತಂದೆಯನ್ನೇ ನೆನಪು ಮಾಡುವುದಿಲ್ಲ. ನೀವು ಹೋಗಿ ನೋಡಿರಿ, ನಾವು ಸ್ವರ್ಗದಲ್ಲಿ ಕುಳಿತಿದ್ದೇವೆ ಎಂದು ಹೇಳುತ್ತಾರೆ. ಈಗ ಸ್ವರ್ಗದ ಮುಂದೆ ಇದೇನೂ ಇಲ್ಲ, ಸ್ವರ್ಗವೆಲ್ಲಿ! ಈ ನರಕವೆಲ್ಲಿ! ಸ್ವರ್ಗದ ಒಂದು ವಸ್ತುವೂ ಸ��� ಇಲ್ಲಿರಲು ಸಾಧ್ಯವಿಲ್ಲ. ಅಲ್ಲಿ ಪ್ರತೀ ವಸ್ತು ಸತೋಪ್ರಧಾನವಾಗಿರುವುದು. ಹಸುಗಳೂ ಸಹ ಸುಂದರವಾಗಿರುವುದು. ಸೂಕ್ಷ್ಮವತನದಲ್ಲಿ ಫಲಪುಷ್ಫಗಳನ್ನು ನೋಡಿಕೊಂಡು ಬರುತ್ತೀರಲ್ಲವೇ, ಅದಕ್ಕೆ ಶೂಬೀ ರಸವೆಂದು ಹೆಸರನ್ನು ಇಡುತ್ತಾರೆ. ಪ್ರಪಂಚದವರಿಗೆ ಸ್ವರ್ಗವೆಲ್ಲಿದೆ ಎಂಬುದೂ ಸಹ ತಿಳಿದಿಲ್ಲ. ಸ್ವರ್ಗದಲ್ಲಿ ಎಲ್ಲವೂ ಸತೋಪ್ರಧಾನವಾಗಿರುತ್ತದೆ, ಈ ಮಣ್ಣು ಇತ್ಯಾದಿಗಳೇನೂ ಅಲ್ಲಿ ಬೀಳುವುದಿಲ್ಲ. ದುಃಖದ ಯಾವುದೇ ಮಾತಿರುವುದಿಲ್ಲ ಆದರೆ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಈ ವಿದ್ಯೆಯನ್ನು ಓದಿಸುತ್ತಿದ್ದಾರೆ ಎಂಬುದು ಇನ್ನೂ ಅಷ್ಟು ನಶೆಯೇರುತ್ತಿಲ್ಲ. ಚಿತ್ರಗಳು ಎಷ್ಟು ಸ್ಪಷ್ಟವಾಗಿವೆ! ಚಿತ್ರಗಳನ್ನು ಮಾಡಿಸುವುದರಲ್ಲಿ ಸಮಯ ಹಿಡಿಸುತ್ತದೆ. ತಂದೆಯು ಎಲ್ಲವನ್ನೂ ಸೇವಾರ್ಥವಾಗಿ ಮಾಡಿಸುತ್ತಲೇ ಇರುತ್ತಾರೆ ಆದರೆ ಕೆಲವರಂತೂ ತಮ್ಮ ಉದ್ಯೋಗ-ವ್ಯವಹಾರಗಳಲ್ಲಿ ಇಷ್ಟೊಂದು ಸಿಲುಕಿದ್ದಾರೆ, ತಂದೆಯನ್ನು ನೆನಪು ಮಾಡುವುದಿಲ್ಲ. ಪ್ರದರ್ಶನಿಯ ಚಿತ್ರಗಳ ಪುಸ್ತಕವೂ ಇದೆ, ಅದನ್ನು ಓದಬೇಕು. ಗೀತಾಪಾಠಿಗಳು ಎಲ್ಲಿಯೇ ಹೋದರೂ ಸಹ ಗೀತೆಯನ್ನು ಅವಶ್ಯವಾಗಿ ಓದುತ್ತಾರೆ. ಈಗ ನಿಮಗೆ ಸತ್ಯಗೀತೆಯು ಚಿತ್ರಗಳ ಸಹಿತ ಸಿಕ್ಕಿದೆ, ಈಗ ಚೆನ್ನಾಗಿ ಪರಿಶ್ರಮ ಪಡಬೇಕಾಗಿದೆ, ಇಲ್ಲದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಯಾವಾಗ ಸಾಕ್ಷಾತ್ಕಾರವಾಗುವುದೋ ಆಗ ಅಯ್ಯೊ ಅಯ್ಯೊ ಎನ್ನಬೇಕು. ಪರೀಕ್ಷೆಯು ಪೂರ್ಣವಾಯಿತೆಂದರೆ ಮತ್ತೆ ಇನ್ನೊಂದು ತರಗತಿಯಲ್ಲಿ ನಂಬರ್ವಾರ್ ಕುಳಿತುಕೊಳ್ಳುತ್ತಾರೆ. ಇಲ್ಲಿಯೂ ಸಹ ಯಾವಾಗ ಸಾಕ್ಷಾತ್ಕಾರವಾಗುವುದೋ, ನಂಬರ್ವಾರ್ ರುದ್ರ ಮಾಲೆಯೇ ನಂತರ ವಿಜಯ ಮಾಲೆಯಲ್ಲಿ ಹೋಗುತ್ತಾರೆ. ಶಾಲೆಯಲ್ಲಿ ಮಕ್ಕಳು ಯಾರಾದರೂ ಅನುತ್ತೀರ್ಣರಾದರೆ ಎಷ್ಟೊಂದು ದುಃಖಿಯಾಗಿ ಬಿಡುತ್ತಾರೆ. ನಿಮ್ಮದು ಇದು ಕಲ್ಪ-ಕಲ್ಪಾಂತರದ ಆಟವಾಗಿದೆ.
|
3 |
+
ಕೆಲವು ಮಕ್ಕಳು ಪೂರ್ಣ ಮ್ಯಾಗಜಿನ್ ಓದುವುದೇ ಇಲ್ಲ. ಮ್ಯಾಗಜಿನ್ ಓದಿ ಸರ್ವೀಸ್ ಮಾಡಬೇಕಾಗಿದೆ. ಬಾಬಾ, ಇಂತಹವರನ್ನು ಬದಲು ಮಾಡಿ ಒಳ್ಳೆಯ ಬ್ರಾಹ್ಮಿಣಿಯನ್ನು ಕಳುಹಿಸಿ ಎಂದು ಪತ್ರ ಬರೆಯುತ್ತಾರೆ. ಕೆಲಕೆಲವರು ಬ್ರಾಹ್ಮಿಣಿಯರ ಜೊತೆ ಇಷ್ಟೊಂದು ಪ್ರೀತಿಯುಂಟಾಗುತ್ತದೆ, ಬ್ರಾಹ್ಮಿಣಿಯು ಬದಲಾದರೆ ಇವರೂ ಸಹ ಕೆಳಗೆ ಬೀಳುತ್ತಾರೆ, ಸೇವಾಕೇಂದ್ರಕ್ಕೆ ಬರುವುದನ್ನು ಬಿಟ್ಟು ಬಿಡುತ್ತಾರೆ. ಯಾವುದೇ ಉಲ್ಟಾ ಕರ್ಮವಾದರೆ ಕೂಡಲೇ ಸತ್ಯತೆಯಿಂದ ತಂದೆಗೆ ಬರೆಯಬೇಕು ಆಗ ಪಾಪದ ಪ್ರಭಾವವು ಕಡಿಮೆಯಾಗುವುದು. ಇಲ್ಲದಿದ್ದರೆ ವೃದ್ಧಿಯಾಗುತ್ತಾ ಹೋಗುವುದು. ತಂದೆಯು ಸುಧಾರಣೆ ಮಾಡಿಕೊಳ್ಳುವುದಕ್ಕಾಗಿ ಹೇಳುತ್ತಾರೆ ಆದರೆ ಯಾರಾದರೂ ಸುಧಾರಣೆ ಆಗಲಿಲ್ಲವೆಂದರೆ ಪಾಪಕರ್ಮ ಮಾಡುವುದನ್ನು ಬಿಡುವುದೇ ಇಲ್ಲ. ಅದೃಷ್ಟದಲ್ಲಿ ಇಲ್ಲವೆಂದರೆ ತಂದೆಗೆ ಸತ್ಯ ಸಮಾಚಾರವನ್ನು ತಿಳಿಸುವುದಿಲ್ಲ. ತಂದೆಯ ಬಳಿ ರಿಪೋರ್ಟ�� ಬಂದರೆ ಅವರನ್ನು ಸುಧಾರಣೆ ಮಾಡುವ ಪ್ರಯತ್ನ ಪಡುವರು. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ಅಶರೀರಿಯಾಗುವ ಸಂಪೂರ್ಣ ಅಭ್ಯಾಸ ಮಾಡಬೇಕಾಗಿದೆ. ಯಾವುದೇ ಉಲ್ಟಾ ಸುಲ್ಟಾ ಮಾತನಾಡಬಾರದು. ಬಹಳ ಮಧುರರಾಗಬೇಕು. ಯಾವುದೇ ಮಾತಿನಲ್ಲಿ ಮುನಿಸಿಕೊಳ್ಳಬಾರದು.
|
7 |
+
2. ಮುರುಳಿಯ ಸ್ಮರಣೆ ಮಾಡಬೇಕು. ಏನನ್ನು ಕೇಳುತ್ತೀರೋ ಅದನ್ನು ವಿಚಾರ ಸಾಗರ ಮಂಥನ ಮಾಡಬೇಕು. ಮನ್ಮನಾಭವದ ವ್ರತವನ್ನು ಇಟ್ಟುಕೊಳ್ಳಬೇಕಾಗಿದೆ.
|
BKMurli/BKMurli/page_1032.txt
ADDED
@@ -0,0 +1,12 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಶುಭ ಭಾವನೆ ಮತ್ತು ಶುಭ ಕಾಮನೆಯ ಸೂಕ್ಷ್ಮ ಸೇವೆ
|
2 |
+
ಇಂದು ವಿಶ್ವಕಲ್ಯಾಣಕಾರಿ ಬಾಪ್ದಾದಾ ತನ್ನ ವಿಶ್ವಕಲ್ಯಾಣಕಾರಿ ಜೊತೆಗಾರರನ್ನು ನೋಡುತ್ತಿದ್ದಾರೆ. ಎಲ್ಲಾ ಮಕ್ಕಳು ತಂದೆಯ ವಿಶ್ವಕಲ್ಯಾಣದ ಕಾರ್ಯದಲ್ಲಿ ನಿಮಿತ್ತರಾಗಿರುವ ಜೊತೆಗಾರರಾಗಿದ್ದಾರೆ. ಎಲ್ಲರ ಮನಸ್ಸಿನಲ್ಲಿ ಸದಾ ಇದೊಂದೇ ಸಂಕಲ್ಪವಿದೆ - ವಿಶ್ವದ ವ್ಯಾಕುಲರಾಗಿರುವ ಆತ್ಮರ ಕಲ್ಯಾಣವಾಗಲಿ. ನಡೆಯುತ್ತಾ-ತಿರುಗಾಡುತ್ತಾ ಯಾವುದೇ ಕಾರ್ಯ ಮಾಡುತ್ತಾ ಮನಸ್ಸಿನಲ್ಲಿ ಇದೇ ಶುಭ ಭಾವನೆಯಿದೆ. ಭಕ್ತಿಮಾರ್ಗದಲ್ಲಿಯೂ ಭಾವನೆಯಿರುತ್ತದೆ ಆದರೆ ಭಕ್ತಾತ್ಮರಿಗೆ ವಿಶೇಷ ಅಲ್ಪಕಾಲದ ಕಲ್ಯಾಣದ ಪ್ರತಿ ಭಾವನೆಯಿರುತ್ತದೆ. ತಾವು ಜ್ಞಾನಿ ಆತ್ಮ ಮಕ್ಕಳ ಜ್ಞಾನಯುಕ್ತ ಕಲ್ಯಾಣದ ಭಾವನೆಯು ಆತ್ಮರ ಪ್ರತಿ ಸದಾಕಾಲ ಮತ್ತು ಸರ್ವ ಕಲ್ಯಾಣಕಾರಿಯ ಭಾವನೆಯಿದೆ. ತಮಗೆ ವರ್ತಮಾನ ಮತ್ತು ಭವಿಷ್ಯಕ್ಕೋಸ್ಕರ ಇದೇ ಭಾವನೆಯಿದೆ - ಪ್ರತಿಯೊಂದು ಆತ್ಮನು ಅನೇಕ ಜನ್ಮಗಳಿಗಾಗಿ ಸುಖಿಯಾಗಲಿ, ಪ್ರಾಪ್ತಿಗಳಿಂದ ಸಂಪನ್ನರಾಗಿ ಬಿಡಲಿ ಏಕೆಂದರೆ ಅವಿನಾಶಿ ತಂದೆಯ ಮೂಲಕ ತಾವಾತ್ಮರಿಗೆ ಅವಿನಾಶಿ ಆಸ್ತಿಯು ಸಿಕ್ಕಿದೆ. ತಮ್ಮ ಭಾವನೆಯ ಫಲವು ವಿಶ್ವದ ಆತ್ಮರನ್ನು ಪರಿವರ್ತನೆ ಮಾಡುತ್ತಿದೆ ಮತ್ತು ಮುಂದೆ ಹೋದಂತೆ ಪ್ರಕೃತಿಯ ಸಹಿತ ಪರಿವರ್ತನೆ ಆಗಿಬಿಡುವುದು. ತಾವಾತ್ಮರ ಶ್ರೇಷ್ಠ ಭಾವನೆಯು ಇಷ್ಟೊಂದು ಶ್ರೇಷ್ಠ ಫಲವನ್ನು ಪ್ರಾಪ್ತಿ ಮಾಡಿಸುವಂತದ್ದಾಗಿದೆ ಆದ್ದರಿಂದ ಕಲ್ಯಾಣಕಾರಿ ಆತ್ಮರೆಂದು ನಿಮ್ಮ ಗಾಯನವಾಗುತ್ತದೆ. ತಮ್ಮ ಶುಭಭಾವನೆಯ ಇಷ್ಟು ಮಹತ್ವಿಕೆಯನ್ನು ಅರಿತುಕೊಂಡಿದ್ದೀರಾ? ತಮ್ಮ ಶುಭಭಾವನೆಯನ್ನು ಸಾಧಾರಣ ರೀತಿಯಿಂದ ಕಾರ್ಯದಲ್ಲಿ ತೊಡಗಿಸುತ್ತಾ ನಡೆಯುತ್ತಿದ್ದೀರೋ ಅಥವಾ ಮಹತ್ವಿಕೆಯನ್ನರಿತು ನಡೆಯುತ್ತೀರೋ? ಪ್ರಪಂಚದವರೂ ಸಹ ಶುಭಭಾವನೆಯ ಶಬ್ಧವನ್ನು ಹೇಳುತ್ತಾರೆ ಆದರೆ ನಿಮ್ಮ ಶುಭಭಾವನೆಯು ಕೇವಲ ಶುಭವಲ್ಲ, ಶಕ್ತಿಶಾಲಿಯೇ ಆಗಿದೆ ಏಕೆಂದರೆ ತಾವು ಸಂಗಮಯುಗೀ ಶ್ರೇಷ್ಠ ಆತ್ಮರಾಗಿದ್ದೀರಿ. ಸಂಗಮಯುಗಕ್ಕೆ ಡ್ರಾಮಾನುಸಾರ ಪ್ರತ್ಯಕ್ಷ ಫಲವು ಪ್ರಾಪ್ತಿಯಾಗುವ ವರದಾನವಿದೆ ಆದ್ದರಿಂದ ತಮ್ಮ ಶುಭಭಾವನೆಯ ಪ್ರತ್ಯಕ್ಷಫಲವು ಆತ್ಮರಿಗೆ ಪ್ರಾಪ್ತಿಯಾಗುತ್ತದೆ. ಯಾರೆಲ್ಲಾ ಆತ್ಮರು ತಮ್ಮ ಸಂಬಂಧ-ಸಂಪರ್ಕದಲ್ಲಿ ಬರುವರೋ ಅವರು ಅದೇ ಸಮಯದಲ್ಲಿಯೇ ಶಾಂತಿ ಮತ್ತು ಸ್ನೇಹದ ಫಲದ ಅನುಭೂತಿ ಮಾಡುತ್ತಾರೆ.
|
3 |
+
ಶುಭಕಾಮನೆಯಿಲ್ಲದೆ ಶುಭಭಾವನೆಯಿರಲು ಸಾಧ್ಯವಿಲ್ಲ. ಪ್ರತಿಯೊಂದು ಆತ್ಮನ ಪ್ರತಿ ಸದಾ ಇದೇ ದಯೆಯ ಕಾಮನೆಯಿರುತ್ತದೆ - ಈ ಆತ್ಮನೂ ಸಹ ಆಸ್ತಿಗೆ ಅಧಿಕಾರಿಯಾಗಿ ಬಿಡಲಿ. ಪ್ರತಿಯೊಂದು ಆತ್ಮನ ಪ್ರತಿ ಇವರು ನಮ್ಮ ಈಶ್ವರೀಯ ಪರಿವಾರದವರೇ ಆಗಿದ್ದಾರೆ ಅಂದಮೇಲೆ ಇವರಿಂದ ವಂಚಿತರಾಗಿ ಏಕೆ ಉಳಿಯಬೇಕೆಂದು ದಯೆ ಬರುತ್ತದೆ, ಶುಭಕಾಮನೆ ಇರುತ್ತದೆಯಲ್ಲವೇ. ಶುಭಕಾಮನೆ ಮತ್ತು ಶುಭಭಾವನೆ ಇದು ಸೇವೆಯ ಫೌಂಡೇಷನ್ ಆಗಿದೆ. ���ಾವುದೇ ಸೇವೆಯನ್ನು ಮಾಡುತ್ತೀರಿ, ಒಂದುವೇಳೆ ತಮ್ಮಲ್ಲಿ ಶುಭಭಾವನೆ-ಶುಭಕಾಮನೆ ಇಲ್ಲವೆಂದರೆ ಆತ್ಮರಿಗೆ ಪ್ರತ್ಯಕ್ಷಫಲದ ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಒಂದು ಸೇವೆಯಾಗಿದೆ - ನೀತಿಯ ಪ್ರಮಾಣ ರೀತಿಯ ಪ್ರಮಾಣ ಸೇವೆ, ಏನು ಕೇಳಿರುವರೋ ಅದನ್ನು ತಿಳಿಸುವುದಾಗಿದೆ. ಎರಡನೆಯದು - ತಮ್ಮ ಶುಭಭಾವನೆ-ಶುಭಕಾಮನೆಯಿಂದ ಸೇವೆ ಮಾಡುವುದಾಗಿದೆ. ತಮ್ಮ ಶುಭಭಾವನೆಯು ಅವರಿಗೆ ತಂದೆಯಲ್ಲಿಯೂ ಭಾವನೆಯನ್ನು ತರಿಸುತ್ತದೆ ಮತ್ತು ತಂದೆಯ ಮೂಲಕ ಫಲದ ಪ್ರಾಪ್ತಿ ಮಾಡಿಸಲು ನಿಮಿತ್ತನಾಗಿಬಿಡುತ್ತದೆ. “ಶುಭ ಭಾವನೆ”ಯು ಎಲ್ಲಿಯೇ ದೂರ ಕುಳಿತಿರುವ ಯಾವುದೇ ಆತ್ಮನಿಗೂ ಸಹ ಫಲದ ಪ್ರಾಪ್ತಿ ಮಾಡಿಸಲು ನಿಮಿತ್ತನಾಗುತ್ತದೆ. ಹೇಗೆ ವಿಜ್ಞಾನದ ಸಾಧನಗಳು ದೂರದಲ್ಲಿ ಕುಳಿತೇ ಆತ್ಮರೊಂದಿಗೆ ಸಮೀಪ ಸಂಬಂಧ ಮಾಡಿಸಲು ನಿಮಿತ್ತನಾಗುತ್ತದೆ. ತಮ್ಮ ಶಬ್ಧವು ಅವರಿಗೆ ತಲುಪುತ್ತದೆ, ತಮ್ಮ ಸಂದೇಶವು ತಲುಪುತ್ತದೆ, ತಮ್ಮ ದೃಶ್ಯವು ತಲುಪುತ್ತದೆ ಅಂದಮೇಲೆ ವೈಜ್ಞಾನಿಕ ಶಕ್ತಿಯೇ ಅಲ್ಪಕಾಲಕ್ಕಾಗಿ ಸಮೀಪತೆಯ ಫಲ ಕೊಡಬಲ್ಲದು ಅಂದಮೇಲೆ ತಮ್ಮ ಶಾಂತಿಯಶಕ್ತಿ, ಶುಭಭಾವನೆಯು ದೂರ ಕುಳಿತಿದ್ದರೂ ಆತ್ಮರಿಗೆ ಫಲ ಕೊಡುವುದಿಲ್ಲವೇ? ಆದರೆ ಇದಕ್ಕೆ ಆಧಾರವಾಗಿದೆ - ತನ್ನಲ್ಲಿ ಇಷ್ಟು ಶಾಂತಿಯ ಶಕ್ತಿಯು ಜಮಾ ಇರಬೇಕು. ಶಾಂತಿಯ ಶಕ್ತಿಯು ಅಲೌಕಿಕ ಅನುಭವ ಮಾಡಿಸುತ್ತದೆ. ಮುಂದೆ ಹೋದಂತೆ ಈ ಪ್ರತ್ಯಕ್ಷ ಪ್ರಮಾಣವನ್ನು ಅನುಭವ ಮಾಡುತ್ತಾ ಇರುತ್ತೀರಿ.
|
4 |
+
ಶುಭಭಾವನೆ ಅರ್ಥಾತ್ ಶಕ್ತಿಶಾಲಿ ಸಂಕಲ್ಪ. ಎಲ್ಲಾ ಶಕ್ತಿಗಳಿಗಿಂತ ಸಂಕಲ್ಪದ ಗತಿಯು ತೀವ್ರವಾಗಿದೆ. ಎಷ್ಟಾದರೂ ವಿಜ್ಞಾನವು ತೀವ್ರಗತಿಯ ಸಾಧನಗಳನ್ನು ತಯಾರಿಸಿರಬಹುದು ಆದರೆ ಅವೆಲ್ಲವುಗಳಿಗಿಂತಲೂ ಸಂಕಲ್ಪ ಶಕ್ತಿಯು ತೀವ್ರಗತಿಯದಾಗಿದೆ. ಯಾವುದೇ ಆತ್ಮನ ಪ್ರತಿ ಅಥವಾ ಬೇಹದ್ದಿನ ವಿಶ್ವದ ಆತ್ಮನ ಪ್ರತಿ ಶುಭಭಾವನೆಯನ್ನು ಇಡುತ್ತೀರಿ ಅರ್ಥಾತ್ ಶಕ್ತಿಶಾಲಿ ಶುಭ ಮತ್ತು ಶುದ್ಧ ಸಂಕಲ್ಪ ಮಾಡುತ್ತೀರಿ - ಈ ಆತ್ಮನ ಕಲ್ಯಾಣವಾಗಲಿ ಎಂದು. ಆಗ ತಮ್ಮ ಸಂಕಲ್ಪ ಅಥವಾ ಭಾವನೆಯು ಉತ್ಪನ್ನವಾಗುವುದು ಮತ್ತು ಆ ಆತ್ಮಕ್ಕೆ ನನಗೆ ಯಾರದೋ ವಿಶೇಷ ಸಹಯೋಗದಿಂದ ಶಕ್ತಿ ಹಾಗೂ ಶಾಂತಿಯು ಸಿಗುತ್ತಿದೆ ಎಂಬ ಅನುಭವವಾಗುತ್ತದೆ. ಹೇಗೆ ಈಗಲೂ ಸಹ ಕೆಲವು ಮಕ್ಕಳು ಇದೇ ಅನುಭವ ಮಾಡುತ್ತಾರೆ - ಕೆಲವು ಕಾರ್ಯಗಳಲ್ಲಿ ನನಗೆ ಅಷ್ಟು ಧೈರ್ಯ ಅಥವಾ ನನಗೆ ಅಷ್ಟು ಯೋಗ್ಯತೆಯಿರಲಿಲ್ಲ ಆದರೆ ಬಾಪ್ದಾದಾರವರ ಅಧಿಕ ಸಹಯೋಗದಿಂದ ಈ ಕಾರ್ಯವು ಸಹಜವಾಗಿ ಸಫಲವಾಯಿತು ಅಥವಾ ಈ ವಿಘ್ನವು ಸಮಾಪ್ತಿ ಆಯಿತೆಂದು ಹೇಳುತ್ತಾರೆ ಅದೇರೀತಿ ತಾವು ಮಾ|| ವಿಶ್ವಕಲ್ಯಾಣಕಾರಿ ಆತ್ಮರ ಸೂಕ್ಷ್ಮ ಸೇವೆಯನ್ನು ಪ್ರತ್ಯಕ್ಷ ರೂಪದಲ್ಲಿ ಅನುಭವ ಮಾಡುತ್ತಾರೆ. ಸಮಯವು ಕಡಿಮೆ ಮತ್ತು ಸಾಧನಗಳೂ ಕಡಿಮೆ. ಸಂಪತ್ತೂ ಕಡಿಮೆ ಹಿಡಿಸುತ್ತದೆ. ಇದಕ್ಕಾಗಿ ಮನಸ್ಸು ಮತ್ತು ಬುದ್ಧಿಯು ಸದಾ ಫ್ರೀ ಆಗಿರಬೇಕು. ಚಿಕ್ಕ-ಚಿಕ್ಕ ಮಾತುಗ��ಲ್ಲಿ ಮನಸ್ಸು-ಬುದ್ಧಿಯನ್ನು ಬಹಳ ಬ್ಯುಜಿಯಾಗಿಟ್ಟುಕೊಳ್ಳುತ್ತೀರಿ ಆದ್ದರಿಂದ ಸೇವೆಯ ಸೂಕ್ಷ್ಮ ಗತಿಯ ಲೈನ್ ಸ್ಪಷ್ಟವಾಗಿರುವುದಿಲ್ಲ. ಸಾಧಾರಣ ಮಾತುಗಳಲ್ಲಿಯೂ ಸಹ ತಮ್ಮ ಮನಸ್ಸು-ಬುದ್ಧಿಯ ಮಾರ್ಗವನ್ನು ಬಹಳ ಬ್ಯುಜಿಯಾಗಿಟ್ಟುಕೊಳ್ಳುತ್ತೀರಿ ಆದ್ದರಿಂದ ಈ ಸೂಕ್ಷ ಸೇವೆಯು ತೀವ್ರ ಗತಿಯಿಂದ ನಡೆಯುತ್ತಿಲ್ಲ. ಇದಕ್ಕಾಗಿ ವಿಶೇಷ ಗಮನವಾಗಿದೆ - “ಏಕಾಂತ ಮತ್ತು ಏಕಾಗ್ರತೆ”.
|
5 |
+
ಏಕಾಂತ ಪ್ರಿಯ ಆತ್ಮರು ಎಷ್ಟಾದರೂ ಬ್ಯುಜಿಯಾಗಿರಲಿ ಆದರೆ ಮಧ್ಯ-ಮಧ್ಯದಲ್ಲಿ ಒಂದು ಘಳಿಗೆ, ಎರಡು ಘಳಿಗೆಗಳನ್ನು ತೆಗೆದು ಏಕಾಂತದ ಅನುಭವ ಮಾಡುತ್ತಾರೆ. ಏಕಾಂತ ಪ್ರಿಯ ಆತ್ಮನು ಇಂತಹ ಶಕ್ತಿಶಾಲಿಗಳು ಆಗಿ ಬಿಡುತ್ತಾರೆ. ತಮ್ಮ ಸೂಕ್ಷ್ಮ ಶಕ್ತಿಗಳು ಮನಸ್ಸು-ಬುದ್ಧಿಯಿಂದ ಯಾವ ಸಮಯದಲ್ಲಿ ಬೇಕೋ, ಎಲ್ಲಿ ಬೇಕೋ ಏಕಾಗ್ರ ಮಾಡಲು ಸಾಧ್ಯವಾಗುತ್ತದೆ. ಹೊರಗಿನ ಪರಿಸ್ಥಿತಿಯು ಏರುಪೇರಿನದಾಗಿದ್ದರೂ ಸಹ ಏಕಾಂತ ಪ್ರಿಯ ಆತ್ಮನು ಒಬ್ಬರ ಅಂತ್ಯದಲ್ಲಿ (ಪ್ರೀತಿಯಲ್ಲಿ) ಸೆಕೆಂಡಿನಲ್ಲಿ ಏಕಾಗ್ರವಾಗಿ ಬಿಡುತ್ತಾರೆ. ಹೇಗೆ ಸಾಗರದ ಮೇಲೆ ಅಲೆಗಳ ಶಬ್ಧವು ಬಹಳ ಹೆಚ್ಚಾಗಿರುತ್ತದೆ. ಎಷ್ಟೊಂದು ಏರುಪೇರು ಇರುತ್ತದೆ ಆದರೆ ಸಾಗರದ ಆಳದಲ್ಲಿ ಏರುಪೇರುಗಳು ಇರುವುದಿಲ್ಲ ಅಂದಮೇಲೆ ಯಾವಾಗ ಒಬ್ಬರ ಅಂತ್ಯದಲ್ಲಿ, ಜ್ಞಾನಸಾಗರನ ಪ್ರೀತಿಯಲ್ಲಿ ಮುಳುಗಿ ಹೋಗುತ್ತೀರೊ ಆಗ ಏರುಪೇರು ಸಮಾಪ್ತಿಯಾಗಿ ಏಕಾಗ್ರವಾಗಿ ಬಿಡುತ್ತೀರಿ. ಸೂಕ್ಷ್ಮ ಸೇವೆ ಏನೆಂದು ತಿಳಿಯಿತೆ? “ಶುಭಭಾವನೆ”, “ಶುಭಕಾಮನೆ”- ಈ ಶಬ್ಧವನ್ನು ಎಲ್ಲರೂ ಹೇಳುತ್ತಿರುತ್ತಾರೆ ಆದರೆ ಇದರ ಮಹತ್ವಿಕೆಯನ್ನರಿತು ಪ್ರತ್ಯಕ್ಷ ರೂಪದಲ್ಲಿ ಬರುವುದರಿಂದ ಅನೇಕ ಆತ್ಮರಿಗೆ ಪ್ರತ್ಯಕ್ಷಫಲದ ಅನುಭೂತಿ ಮಾಡಿಸಲು ನಿಮಿತ್ತರಾಗುವಿರಿ. ಒಳ್ಳೆಯದು.
|
6 |
+
ಟೀಚರ್ಸ್ನ ಕೆಲಸವೇ ಆಗಿದೆ - ಸೇವೆ. ಟೀಚರ್ಸ್ನ ಮಹತ್ವಿಕೆಯೇ ಸೇವೆಯಾಗಿದೆ. ಒಂದುವೇಳೆ ಸೇವೆಯ ಪ್ರತ್ಯಕ್ಷ ಪ್ರಮಾಣವು ಕಾಣುವುದಿಲ್ಲವೆಂದರೆ ಅವರನ್ನು ಯೋಗ್ಯ ಶಿಕ್ಷಕಿಯ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ. ಟೀಚರ್ಸ್ನ ಮಹಾನತೆಯೇ ಸೇವೆಯಾಯಿತಲ್ಲವೇ ಆದ್ದರಿಂದ ಸೇವೆಯ ಸೂಕ್ಷ್ಮ ರೂಪವನ್ನು ತಿಳಿಸಿದೆವು. ಮುಖದ (ವಾಚಾ) ಸೇವೆಯನ್ನಂತೂ ಮಾಡುತ್ತಲೇ ಇರುತ್ತೀರಿ ಆದರೆ ಮುಖ ಮತ್ತು ಮನಸ್ಸಿನ ಶುಭಭಾವನೆಯ ಸೇವೆಯು ಜೊತೆ ಜೊತೆಯಲ್ಲಿ ಇರಲಿ, ಮಾತು ಮತ್ತು ಭಾವನೆ ಡಬಲ್ ಕೆಲಸ ಮಾಡುತ್ತದೆ. ಈ ಸೂಕ್ಷ್ಮ ಸೇವೆಯ ಅಭ್ಯಾಸವು ಬಹಳ ಕಾಲ ಅರ್ಥಾತ್ ಈಗಿನಿಂದಲೇ ಬೇಕಾಗಿದೆ ಏಕೆಂದರೆ ಮುಂದೆ ಹೋದಂತೆ ಸೇವೆಯ ರೂಪರೇಖೆಯು ಬದಲಾಗಲೇಬೇಕಾಗಿದೆ ನಂತರ ಆ ಸಮಯದಲ್ಲಿ ಸೂಕ್ಷ್ಮ ಸೇವೆಯಲ್ಲಿ ತನ್ನನ್ನು ಬ್ಯುಜಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಹೊರಗಿನ ಪರಿಸ್ಥಿತಿಗಳು ಬುದ್ಧಿಯನ್ನು ಆಕರ್ಷಣೆ ಮಾಡುತ್ತದೆ ಅಂದಾಗ ಫಲಿತಾಂಶವೇನಾಗುವುದು? ನೆನಪು ಮತ್ತು ಸೇವೆಯ ಸಮತೋಲನೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಆದ್ದ���ಿಂದ ಈಗಿನಿಂದಲೇ ತಮ್ಮ ಮನಸ್ಸು ಮತ್ತು ಬುದ್ಧಿಯ ಸೇವೆಯ ಮಾರ್ಗವನ್ನು ಪರಿಶೀಲನೆ ಮಾಡಿಕೊಳ್ಳಿ. ಟೀಚರ್ಸ್ಗೆ ಪರಿಶೀಲನೆ ಮಾಡಿಕೊಳ್ಳುವುದು ಬರುತ್ತದೆಯಲ್ಲವೇ. ಶಿಕ್ಷಕಿಯರು ಅನ್ಯರಿಗೆ ಕಲಿಸುತ್ತೀರಿ ಅಂದಮೇಲೆ ಅವಶ್ಯವಾಗಿ ಸ್ವಯಂ ತಿಳಿದುಕೊಂಡಿದ್ದೀರಿ ಆದ್ದರಿಂದಲೇ ಕಲಿಸುತ್ತೀರಲ್ಲವೆ. ಎಲ್ಲರೂ ಯೋಗ್ಯಶಿಕ್ಷಕಿಯರು ಆಗಿದ್ದೀರಲ್ಲವೆ. ಯೋಗ್ಯಶಿಕ್ಷಕನ ವಿಶೇಷತೆ ಏನೆಂದರೆ ನಿರಂತರ ಮನಸ್ಸಾ-ವಾಚಾ ಅಥವಾ ಕರ್ಮಣಾ ಸೇವೆಯಲ್ಲಿ ಸದಾ ಬ್ಯುಜಿಯಾಗಿರುವವರು. ಆಗ ಅನ್ಯ ಮಾತುಗಳಿಂದ ಸ್ವತಹ ಖಾಲಿಯಾಗಿ ಬಿಡುತ್ತೀರಿ. ಒಳ್ಳೆಯದು.
|
7 |
+
ಕುಮಾರಿಯರೂ ಬಂದಿದ್ದಾರೆ. ಕುಮಾರಿಯರು ಅರ್ಥಾತ್ ಮುಂದೆ ಆಗಲಿರುವ ಟೀಚರ್ಸ್ ಆದ್ದರಿಂದಲೇ ಬ್ರಹ್ಮಾಕುಮಾರಿಯರೆಂದು ಹೇಳುತ್ತಾರೆ. ಒಂದುವೇಳೆ ಮುಂದೆ ಆಗಲಿರುವ ಸೇವಾಧಾರಿಗಳಲ್ಲವೆಂದರೆ ಅಂತಹವರು ಬಿಡುಗಾಸಿನ ಕುಮಾರಿಯರು. ಕುಮಾರಿಯರು ಏನು ಮಾಡುತ್ತಾರೆ? ಬಿಡುಗಾಸಿನ ಹಿಂದೆ ನೌಕರಿಯ ಬುಟ್ಟಿಯನ್ನು ಹೊತ್ತುಕೊಳ್ಳುತ್ತಾರಲ್ಲವೇ. ಬಾಪ್ದಾದಾರವರಿಗೆ ಕುಮಾರಿಯರ ಮೇಲೆ ಬಹಳ ನಗುಬರುತ್ತದೆ - ಬುಟ್ಟಿಯ ಹೊರೆಯನ್ನು ಹೊತ್ತುಕೊಳ್ಳಲು ತಯಾರಾಗಿ ಬಿಡುತ್ತಾರೆ ಆದರೆ ಭಗವಂತನ ಮನೆಯಲ್ಲಿ ಅರ್ಥಾತ್ ಸೇವಾಸ್ಥಾನಗಳಲ್ಲಿ ಇರಲು ಧೈರ್ಯವನ್ನು ಇಡುವುದಿಲ್ಲ. ಇಂತಹ ಬಲಹೀನ ಕುಮಾರಿಯರಂತೂ ಅಲ್ಲತಾನೇ. ಭಲೆ ಓದುತ್ತಿರಬಹುದು ಆದರೂ ಸಹ ನೌಕರಿ ಮಾಡುವುದೇ ಅಥವಾ ವಿಶ್ವ ಸೇವೆ ಮಾಡುವುದೇ ಎಂಬ ಲಕ್ಷ್ಯವನ್ನಂತು ಮೊದಲೇ ಇಟ್ಟುಕೊಳ್ಳಬೇಕಾಗಿದೆ. ನೌಕರಿ ಮಾಡುವುದು ಎಂದರೆ ತನ್ನನ್ನು ಪಾಲನೆ ಮಾಡಿಕೊಳ್ಳುವುದು, ಪಾಲನೆ ಮಾಡಲು ಮರಿ ಮಕ್ಕಳಂತೂ ಇಲ್ಲ. ಆರಾಮದಿಂದ ತನ್ನನ್ನು ಪಾಲನೆ ಮಾಡಿಕೊಳ್ಳಲು, ಆರಾಮದಿಂದ ನಡೆಯುವುದಕ್ಕಾಗಿ ನೌಕರಿ ಮಾಡುತ್ತಾರೆ ಆದರೆ ವಿಶ್ವದ ಆತ್ಮರಿಗೆ ತಂದೆಯ ಪಾಲನೆ ಕೊಡಬೇಕೆಂಬ ಲಕ್ಷ್ಯವನ್ನಿಟ್ಟುಕೊಳ್ಳಿ. ಯಾವಾಗ ಅನೇಕ ಆತ್ಮರಿಗೆ ನಿಮಿತ್ತರಾಗಬಲ್ಲಿರಿ ಅಂದರೆ ಕೇವಲ ತನ್ನನ್ನು ತಾನು ಪಾಲನೆ ಮಾಡಿಕೊಳ್ಳುವುದು ಅದರ ಮುಂದೆ ಏನಾಯಿತು? ಅನೇಕರ ಆಶೀರ್ವಾದಗಳನ್ನು ತೆಗೆದುಕೊಳ್ಳುವುದು ಎಷ್ಟು ದೊಡ್ಡ ಸಂಪಾದನೆಯಾಗಿದೆ. ಆ ಸಂಪಾದನೆಯಲ್ಲಿ 5000, 5 ಲಕ್ಷವಾದರೂ ಆಗಬಹುದು ಆದರೆ ಇಲ್ಲಿ ಅನೇಕ ಆತ್ಮರ ಆಶೀರ್ವಾದಗಳು ಎಷ್ಟು ದೊಡ್ಡ ಸಂಪಾದನೆಯಾಗಿದೆ ಮತ್ತು ಈ ಸಂಪಾದನೆಯು ಅನೇಕ ಜನ್ಮಗಳಿಗಾಗಿ ಜೊತೆ ಬರುವುದು. ಆ 5 ಲಕ್ಷಗಳೆಲ್ಲಿ ಜೊತೆ ಬರುತ್ತದೆ? ಮನೆಯಲ್ಲಿ ಅಥವಾ ಬ್ಯಾಂಕ್ನಲ್ಲಿ ಉಳಿದುಕೊಳ್ಳುತ್ತದೆ ಆದ್ದರಿಂದ ಸದಾ ಶ್ರೇಷ್ಠ ಲಕ್ಷ್ಯವನ್ನು ಇಟ್ಟುಕೊಳ್ಳಿ, ಸಾಧಾರಣವಲ್ಲ. ಸಂಗಮಯುಗದಲ್ಲಿ ಈಗಿನ ಈ ಒಂದು ಜನ್ಮದಲ್ಲಿ ಬೇಹದ್ದಿನ ಸೇವೆಯಲ್ಲಿ ನಿಮಿತ್ತರಾಗುವ ಸುವರ್ಣಾವಕಾಶವು ಸಿಗುತ್ತದೆ. ಸತ್ಯಯುಗದಲ್ಲಿಯೂ ಈ ಅವಕಾಶವು ಸಿಗುವುದಿಲ್ಲ. ನೌಕರಿಗಾಗಿಯೂ ಸಹ ಯಾವುದಾದರೂ ಅವಕಾಶ ಸಿಗಲಿ ಎಂದು ಪತ್ರಿಕೆಗಳನ್ನು ನೋಡುತ್ತಿರುತ್���ಾರಲ್ಲವೆ. ತಂದೆಯು ಸ್ವಯಂ ಸೇವೆಯ ಅವಕಾಶ ನೀಡುತ್ತಿದ್ದಾರೆ ಆದ್ದರಿಂದ ಯೋಗ್ಯ ಬಲಭುಜಗಳಾಗಿ. ಸಾಧಾರಣ ಬ್ರಹ್ಮಾಕುಮಾರಿಯೂ ಆಗಬಾರದು, ಯೋಗ್ಯ ಸೇವಾಧಾರಿಗಳಾಗಲಿಲ್ಲವೆಂದರೆ ಸೇವೆ ಮಾಡುವ ಬದಲು ಸೇವೆ ತೆಗೆದುಕೊಳ್ಳುತ್ತಿರುತ್ತಾರೆ. ಯೋಗ್ಯ ಸೇವಾಧಾರಿಗಳಾಗುವುದು ಯಾವುದೇ ಕಷ್ಟವಿಲ್ಲ. ಯಾವಾಗ ಯೋಗ್ಯ ಸೇವಾಧಾರಿಗಳಾಗುವುದಿಲ್ಲವೋ ಆಗ ಹೇಗಾಗುವುದೋ, ನಡೆಯಲಾಗುತ್ತದೆಯೋ ಇಲ್ಲವೋ ಎಂದು ಹೆದರುತ್ತೀರಿ. ಯೋಗ್ಯತೆಯಿರುವುದಿಲ್ಲ, ಭಯವೆನಿಸುತ್ತದೆ. ಯಾರು ಯೋಗ್ಯರಾಗಿರುವುದಿಲ್ಲವೋ ಅವರು “ನಿಶ್ಚಿಂತ ಚಕ್ರವರ್ತಿ” ಗಳಾಗಿರುತ್ತಾರೆ. ಸ್ಥೂಲ ಯೋಗ್ಯತೆಯಿರಬಹುದು, ಜ್ಞಾನದ ಯೋಗ್ಯತೆಯಿರಬಹುದು, ಮನುಷ್ಯನನ್ನು ಮೌಲ್ಯವಂತನನ್ನಾಗಿ ಮಾಡುತ್ತದೆ. ಯೋಗ್ಯತೆಯಿಲ್ಲವೆಂದರೆ ಬೆಲೆಯಿರುವುದಿಲ್ಲ. ಸೇವೆಯ ಯೋಗ್ಯತೆಯು ಎಲ್ಲದಕ್ಕಿಂತ ದೊಡ್ಡದಾಗಿದೆ, ಇಂತಹ ಯೋಗ್ಯ ಆತ್ಮನನ್ನು ಯಾವುದೇ ಮಾತು ತಡೆಯಲು ಸಾಧ್ಯವಿಲ್ಲ. ಯೋಗ್ಯರಾಗುವುದು ಎಂದರೆ ನನ್ನವರು ಒಬ್ಬ ತಂದೆಯ ವಿನಃ ಬೇರೆಯಾರೂ ಇಲ್ಲ. ಕುಮಾರಿಯರು ಕೇಳಿದಿರಾ? ಒಳ್ಳೆಯದು.
|
8 |
+
ಕುಮಾರರೂ ಬಹಳ ಮಂದಿ ಬಂದಿದ್ದಾರೆ. ಕುಮಾರರು ಬಹಳ ವೇಗವಾಗಿ ಓಡುತ್ತಾರೆ. ಸೇವೆಯಲ್ಲಿಯೂ ಒಳ್ಳೆಯ ಉಮ್ಮಂಗದಿಂದ ಓಡುತ್ತಿರುತ್ತಾರೆ ಆದರೆ ಕುಮಾರರ ವಿಶೇಷತೆ ಮತ್ತು ಮಹಾನತೆಯು ಇದೇ ಆಗಿದೆ - ಆದಿಯಿಂದ ಇಲ್ಲಿಯವರೆಗೂ ನಿರ್ವಿಘ್ನ ಕುಮಾರರಾಗಿದ್ದೀರಾ? ಒಂದುವೇಳೆ ಕುಮಾರರು ನಿರ್ವಿಘ್ನ ಕುಮಾರರಾಗಿದ್ದರೆ ಇಂತಹವರು ಬಹಳ ಮಹಾನ್ ಎಂದು ಗಾಯನವಾಗುತ್ತದೆ ಏಕೆಂದರೆ ಪ್ರಪಂಚದವರೂ ಸಹ ಕುಮಾರಿಯರ ಬದಲು ಕುಮಾರರು ಯೋಗ್ಯರಾಗಿ ಬಿಡುವುದು ಬಹಳ ಕಷ್ಟವೆಂದು ತಿಳಿಯುತ್ತಾರೆ ಆದರೆ ಕುಮಾರರೇ ವಿಶ್ವಕ್ಕೆ ಚಾಲೆಂಜ್ ಮಾಡಬೇಕು - ತಾವಂತೂ ಅಸಂಭವವಂತೂ ಹೇಳುತ್ತೀರಿ, ನಾವಂತೂ ನಿರ್ವಿಘ್ನ ಕುಮಾರರಾಗಿದ್ದೇವೆ ಎಂದು. ಇಂತಹ ವಿಶ್ವಕ್ಕೆ ಮಾದರಿಯನ್ನು ತೋರಿಸುವ ಕುಮಾರರು ಮಹಾನ್ ಕುಮಾರರಾಗಿದ್ದಾರೆ. ಬಾಪ್ದಾದಾ ಇಂತಹ ಕುಮಾರರಿಗೆ ಸದಾ ಹೃದಯಪೂರ್ವಕ ಶುಭಾಷಯಗಳನ್ನೇ ಕೊಡುತ್ತೇನೆ. ತಿಳಿಯಿತೇ - ಈಗೀಗ ಬಹಳ ಒಳ್ಳೆಯ ಮಕ್ಕಳು ಈಗೀಗ ಯಾವುದೇ ವಿಘ್ನಗಳು ಬಂದರೆ ಏರಿಳಿತವಾಗಿ ಬಿಡುವುದಲ್ಲ. ಕುಮಾರರು ಅರ್ಥಾತ್ ಸಮಸ್ಯೆಯೂ ಆಗಬಾರದು ಮತ್ತು ಸಮಸ್ಯೆಯಲ್ಲಿ ಸೋಲಲೂಬಾರದು. ಕುಮಾರರು ಕುಮಾರಿಯರಿಗಿಂತಲೂ ಮುಂದೆ ಹೋಗಬಹುದು ಆದರೆ ನಿರ್ವಿಘ್ನ ಕುಮಾರರಾಗಬೇಕು ಏಕೆಂದರೆ ಕುಮಾರರಿಗೆ ಬಹುತೇಕವಾಗಿ ಇದೇ ವಿಘ್ನವು ಬರುತ್ತದೆ - ಯಾರೂ ಜೊತೆಗಾರರಿಲ್ಲ, ಯಾರಾದರೂ ಜೊತೆ ಬೇಕು, ಸಂಗಾತಿ ಬೇಕು ಎಂದು. ಆದ್ದರಿಂದ ಯಾವುದಾದರೊಂದು ರೀತಿಯಿಂದ ತನ್ನ ಸಂಗ ಮಾಡಿಕೊಳ್ಳುತ್ತಾರೆ. ಕೆಲಕೆಲವರು ಕುಮಾರರು ಸಂಗಾತಿಯನ್ನೂ ಮಾಡಿಕೊಳ್ಳುತ್ತಾರೆ ಮತ್ತು ಇನ್ನೂ ಕೆಲವರು ಕುಳಿತುಕೊಳ್ಳುವುದು, ಮಾತನಾಡುವುದು - ಇಂತಹ ಸಂಗದಲ್ಲಿ ಬರುತ್ತಾರೆ ಮತ್ತು ಸಂಗಾತಿಯನ್ನೂ ಮಾಡಿಕೊಳ್ಳುವ ಸಂಕಲ���ಪ ಬರುತ್ತದೆ ಆದರೆ ಕೆಲವರು ಇಂತಹ ಕುಮಾರರೂ ಇದ್ದಾರೆ ತಂದೆಯ ವಿನಃ ಮತ್ತ್ಯಾವುದೇ ಸಂಗವನ್ನೂ ಮಾಡಿಕೊಳ್ಳುವುದಿಲ್ಲ, ಸಂಗಾತಿಯನ್ನೂ ಮಾಡಿಕೊಳ್ಳುವುದಿಲ್ಲ. ಸದಾ ತಂದೆಯ ಸಂಗದಲ್ಲಿರುವ ಕುಮಾರರು ಸದಾ ಸುಖಿಯಾಗಿರುತ್ತಾರೆ ಅಂದಾಗ ತಾವೆಲ್ಲರೂ ಎಂತಹ ಕುಮಾರರಾಗಿದ್ದೀರಿ? ಸ್ವಲ್ಪ-ಸ್ವಲ್ಪ ಸಂಗವು ಬೇಕೇ? ಇಡೀ ಪರಿವಾರವು ಸಂಗವಾಗಿದೆಯೇ? ಹಾಗಿದ್ದರೆ ಸರಿ. ಆದರೆ ಇಬ್ಬರು ಮೂವರು ಅಥವಾ ಯಾರಾದರೊಬ್ಬರ ಸಂಗ ಬೇಕು ಎಂದು ಹೇಳುವುದು ತಪ್ಪಾಗಿದೆ. ಅಂದಾಗ ತಾವೆಲ್ಲರೂ ಯಾರಾಗಿದ್ದೀರಿ? ನಿರ್ವಿಘ್ನರಾಗಿದ್ದೀರಲ್ಲವೇ. ಹೊಸ ಕುಮಾರರು ಕಮಾಲ್ ಮಾಡಿ ತೋರಿಸುತ್ತೀರಿ. ಕೊನೆಗೂ ವಿಶ್ವವನ್ನು ತನ್ನ ಮುಂದೆ, ತಂದೆಯ ಮುಂದೆ ಬಾಗಿಸಬೇಕಲ್ಲವೆ ಆದ್ದರಿಂದ ಈ ಕುಮಾರರ ಚಮತ್ಕಾರವು ವಿಶ್ವವನ್ನೇ ಬಾಗಿಸುವುದು. ಕುಮಾರರದು ಚಮತ್ಕಾರವಾಗಿದೆ ಎಂದು ವಿಶ್ವವು ತಮ್ಮ ಗುಣಗಾಯನ ಮಾಡುವುದು. ಬಹುತೇಕವಾಗಿ ಕುಮಾರರು ಸೇವೆಯ ಸಂಗದಲ್ಲಿ ಇರುತ್ತಾರೆ ಆದರೆ ಕುಮಾರರಿಗೆ ಸ್ವಲ್ಪ ಸಂಗದ ಸಂಕಲ್ಪ ಬರುತ್ತದೆಯೆಂದರೆ ಪಾಂಡವ ಭವನವನ್ನು ಮಾಡಿಕೊಂಡು ಸಫಲರಾಗಿ ಇರಿ. ಈ ರೀತಿ ಯಾರಾದರೂ ಮಾಡಿ ತೋರಿಸಿ ಆದರೆ ಇಂದು ಪಾಂಡವಭವನವನ್ನು ಮಾಡಿ ನಾಳೆ ಪಾಂಡವರು ಒಬ್ಬರು ಪೂರ್ವಕ್ಕೆ ಹೊರಟು ಹೋಗುವುದು, ಇನ್ನೊಬ್ಬರು ಪಶ್ಚಿಮಕ್ಕೆ ಹೊರಟು ಹೋಗುವರು, ಇಂತಹ ಪಾಂಡವ ಭವನವನ್ನು ಮಾಡಬೇಡಿ.
|
9 |
+
ಬಾಪ್ದಾದಾರವರಿಗೆ ಕುಮಾರರ ಮೇಲೆ ವಿಶೇಷ ಹೆಮ್ಮೆಯಿದೆ- ಒಂಟಿಯಾಗಿದ್ದರೂ ಸಹ ಪುರುಷಾರ್ಥದಲ್ಲಿ ನಡೆಯುತ್ತಿದ್ದಾರೆ. ಕುಮಾರರು ಪರಸ್ಪರ ಇಬ್ಬರು, ಮೂವರು ಜೊತೆಗಾರರಾಗಿ ಏಕೆ ನಡೆಯುವುದಿಲ್ಲ! ಸಂಗಾತಿಯು ಕೇವಲ ಸ್ತ್ರೀಯರೇ ಬೇಕಿಲ್ಲ, ಇಬ್ಬರು ಕುಮಾರರೂ ಸಹ ಇರಬಹುದು ಆದರೆ ಒಬ್ಬರು ಇನ್ನೊಬ್ಬರಿಗೆ ನಿರ್ವಿಘ್ನ ಜೊತೆಗಾರರಾಗಿ ಇರಬೇಕು. ಇನ್ನೂ ಆ ಶೌರ್ಯವನ್ನು ಯಾರೂ ತೋರಿಸಿಲ್ಲ. ಸಮಯದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಯೋಗಿಗಳಾದರೆ ಏನು ತಾನೆ ಸಾಧ್ಯವಿಲ್ಲ? ಅನ್ಯ ಮಾತುಗಳು ಬಂದುಬಿಡುತ್ತವೆ ಆದ್ದರಿಂದ ಬಾಪ್ದಾದಾ ಪಾಂಡವ ಭವನವನ್ನು ಮಾಡಲು ನಿರಾಕರಿಸುತ್ತಾರೆ ಆದರೆ ಯಾರಾದರೂ ಸ್ಯಾಂಪಲ್ ಮಾಡಿ ತೋರಿಸಿ. ಪಾಂಡವ ಭವನವನ್ನು ಮಾಡಿ ಮತ್ತೆ ನಿಮಿತ್ತ ದಾದಿ, ದೀದಿಯರ ಸಮಯವನ್ನು ತೆಗೆದುಕೊಳ್ಳುತ್ತಾ ಇರುವುದಲ್ಲ. ಪರಸ್ಪರ ನಿರ್ವಿಘ್ನವಾಗಿರಿ, ಒಬ್ಬರು ಇನ್ನೊಬ್ಬರಿಗಿಂತಲೂ ಯೋಗ್ಯ ಕುಮಾರರಾಗಿರಿ. ಆಗ ನೋಡಿ, ಎಷ್ಟು ಒಳ್ಳೆಯ ಹೆಸರು ಬರುತ್ತದೆ! ಕುಮಾರರು ಕೇಳಿಸಿಕೊಂಡಿರಾ, ಯೋಗ್ಯ ಕುಮಾರರಾಗಿರಿ, ನಿರ್ವಿಘ್ನ ಕುಮಾರರಾಗಿರಿ. ಸೇವಾಕ್ಷೇತ್ರದಲ್ಲಿ ತಾವೂ ಸಮಸ್ಯೆಯಾಗಬೇಡಿ, ಬದಲಾಗಿ ಸಮಸ್ಯೆಯನ್ನು ಪರಿಹರಿಸುವವರಾಗಿ. ನಂತರ ನೋಡಿ, ಕುಮಾರರಿಗೆ ಬಹಳ ಬೆಲೆಯಿರುವುದು ಏಕೆಂದರೆ ಕುಮಾರರಿಲ್ಲದೆ ಸೇವೆ ನಡೆಯುವುದಿಲ್ಲ ಅಂದರೆ ಕುಮಾರರು ಏನು ಮಾಡುತ್ತೀರಿ? ಎಲ್ಲರೂ ಹೇಳಿರಿ - “ನಿರ್ವಿಘ್ನ ಕುಮಾರರಾಗಿ ತೋರಿಸುತ್ತೇವೆ”. (ಕುಮಾರರು ಬಾಪ್ದಾದಾರವರ ಮುಂದೆ ನಿಂತು ಪ್ರತಿಜ್ಞೆ ಮಾಡಿದರು) ಈಗ ಎಲ್ಲರ ಭಾವಚಿತ್ರವನ್ನು ತೆಗೆಯಲಾಗಿದೆ. ನಾವು ಎದ್ದು ನಿಂತಾಗ ಯಾರೂ ನೋಡಲಿಲ್ಲ ಎಂದು ತಿಳಿದುಕೊಳ್ಳಬೇಡಿ, ನಿಮ್ಮ ಭಾವಚಿತ್ರವಿದೆ. ಚೆನ್ನಾಗಿದೆ - “ಸಾಹಸ ಮಕ್ಕಳದು, ಸಹಯೋಗ ತಂದೆಯದು”ಮತ್ತು ಇಡೀ ಪರಿವಾರವೇ ತಮ್ಮ ಜೊತೆಯಿದೆ. ಒಳ್ಳೆಯದು.
|
10 |
+
ನಾಲ್ಕೂ ಕಡೆಯಲ್ಲಿನ ಸರ್ವ ಮಕ್ಕಳಿಗೆ ಸದಾ ಬಾಪ್ದಾದಾರವರು ತನ್ನ ಸ್ನೇಹದ, ಸಹಯೋಗದ ಛತ್ರಛಾಯೆಯ ಜೊತೆಗೆ ಹೃದಯದಿಂದ ಸೇವೆಗಳ ಶುಭಾಷಯಗಳನ್ನು ಕೊಡುತ್ತಿದ್ದಾರೆ. ದೇಶ-ವಿದೇಶದ ಸೇವೆಯ ಸಮಾಚಾರಗಳು ತಲುಪುತ್ತಿರುತ್ತವೆ. ಪ್ರತಿಯೊಬ್ಬ ಮಗುವು ತನ್ನ ಹೃದಯದ ಸಮಾಚಾರಗಳನ್ನೂ ತಿಳಿಸುತ್ತಿರುತ್ತಾರೆ. ವಿಶೇಷವಾಗಿ ಹೆಚ್ಚು ಪತ್ರಗಳು ವಿದೇಶದಿಂದ ಬರುತ್ತಿರುತ್ತವೆ. ಅಂದಾಗ ಸೇವಾ ಸಮಾಚಾರವನ್ನು ಕೊಡುವಂತಹ ಮಕ್ಕಳಿಗೆ ಶುಭಾಷಯಗಳೂ ಇದೆ ಮತ್ತು ಅದರ ಜೊತೆಗೆ ಸದಾ ಸ್ವ-ಸೇವೆ ಮತ್ತು ವಿಶ್ವ-ಸೇವೆಯಲ್ಲಿ `ಸಫಲತಾ ಭವ'ದ ವರದಾನವನ್ನು ಕೊಡುತ್ತಿದ್ದಾರೆ. ಸ್ವ-ಪುರುಷಾರ್ಥದ ಸಮಾಚಾರವನ್ನು ಕೊಡುವವರಿಗೆ ಬಾಪ್ದಾದಾರವರು ಇದೇ ವರದಾನವನ್ನು ಕೊಡುತ್ತಿದ್ದಾರೆ - ಹೇಗೆ ಸತ್ಯ ಹೃದಯದಿಂದ ತಂದೆಯನ್ನು ಖುಷಿ ಪಡಿಸುತ್ತೀರಿ, ಹಾಗೆಯೇ ಸದಾ ತಮ್ಮನ್ನು ತಾವೂ ಸಹ ತಮ್ಮ ಸಂಸ್ಕಾರಗಳಿಂದ ಸಂಘಟನೆಯಿಂದ ರಹಸ್ಯಯುಕ್ತ ಅರ್ಥಾತ್ ಖುಷಿಯಾಗಿರಿ. ಪರಸ್ಪರರ ಸಂಸ್ಕಾರಗಳ ರಹಸ್ಯವನ್ನೂ ತಿಳಿದುಕೊಳ್ಳಬೇಕು, ಪರಿಸ್ಥಿತಿಗಳನ್ನೂ ತಿಳಿದುಕೊಳ್ಳುವುದೇ ರಹಸ್ಯಯುಕ್ತ ಸ್ಥಿತಿಯಾಗಿದೆ. ಬಾಕಿ ಸತ್ಯ ಹೃದಯದಿಂದ ತಮ್ಮ ಲೆಕ್ಕವನ್ನು ಕೊಡಿ ಹಾಗೂ ಸ್ನೇಹದ ಆತ್ಮಿಕ ವಾರ್ತಾಲಾಪದ ಪತ್ರವನ್ನು ಬರೆಯುವುದು ಅರ್ಥಾತ್ ಹಿಂದಿನ ಲೆಕ್ಕವನ್ನು ಸಮಾಪ್ತಿ ಮಾಡುವುದು ಹಾಗೂ ಸ್ನೇಹದ ವಾರ್ತಾಲಾಪವು ಸದಾ ಸಮೀಪತೆಯ ಅನುಭೂತಿ ಮಾಡಿಸುತ್ತಿರುತ್ತದೆ. ಇದಾಯಿತು ಪತ್ರಗಳ ಪ್ರತ್ಯುತ್ತರ.
|
11 |
+
ಪತ್ರವನ್ನು ಬರೆಯುವುದರಲ್ಲಿ ವಿದೇಶಿಗಳು ಬಹಳ ಬುದ್ಧಿವಂತರಿದ್ದಾರೆ. ಬಹಳ ಬೇಗನೆ ಬರೆದು ಬಿಡುತ್ತಾರೆ. ಭಾರತವಾಸಿಗಳೂ ಸಹ ಬಹಳ ಉದ್ದವಾದ ಪತ್ರಗಳನ್ನು ಕಳುಹಿಸುವುದು ಪ್ರಾರಂಭಿಸಬಾರದು. ಬಾಪ್ದಾದಾರವರು ಹೇಳಿದ್ದಾರೆ - ಎರಡು ಶಬ್ಧಗಳಲ್ಲಿಯೇ ಬರೆಯಿರಿ. ಓ.ಕೆ (ಸಂಪೂರ್ಣವಾಗಿ ಚೆನ್ನಾಗಿದ್ದೇನೆ). ಸೇವಾ ಸಮಾಚಾರಗಳಿದ್ದರೆ ಬರೆಯಿರಿ, ಇಲ್ಲದಿದ್ದರೆ ಕೇವಲ ಓ.ಕೆ. ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಇಂತಹ ಪತ್ರವನ್ನು ಓದುವುದು ಬಹಳ ಸಹಜವಾಗಿದೆ ಮತ್ತು ತಾವು ಬರೆಯುವುದಕ್ಕೂ ಸಹಜವಿದೆ. ಆದರೆ ಒಂದುವೇಳೆ ಓ.ಕೆ. ಇಲ್ಲದಿದ್ದರೆ ಓ.ಕೆ. ಎಂದು ಬರೆಯಬಾರದು. ಓ.ಕೆ. ಆದನಂತರ ಪತ್ರವನ್ನು ಬರೆಯಿರಿ. ಪೋಸ್ಟ್ ಮಾಡಿರುವುದನ್ನು ಓದುವುದಕ್ಕೂ ಸಮಯ ತೆಗೆದುಕೊಳ್ಳುತ್ತದೆ ಅಲ್ಲವೆ! ಯಾವುದೇ ಕಾರ್ಯವನ್ನು ಮಾಡುತ್ತೀರೆಂದರೆ ಸದಾ ಶಾರ್ಟ್ ಆಗಿರಲಿ ಮತ್ತು ಸ್ವೀಟ್ ಆಗಿರಲಿ. ಪತ್ರವನ್ನು ಯಾರೇ ಓದುತ್ತಾರೆಂದರೆ ಓದುವವರಿಗೂ ಖುಷಿಯಾಗ�� ಬಿಡಬೇಕು ಆದ್ದರಿಂದ ರಾಮ ಕಥೆಗಳನ್ನು ಬರೆದು ಕಳುಹಿಸಬಾರದು. ತಿಳಿಯಿತೇ! ಸಮಾಚಾರವನ್ನಂತು ಕೊಡಬೇಕು ಆದರೆ ಸಮಾಚಾರ ಕೊಡುವುದನ್ನೂ ಕಲಿಯಬೇಕಾಗಿದೆ. ಒಳ್ಳೆಯದು!
|
12 |
+
ಸರ್ವ ಶುಭ ಭಾವನೆ ಮತ್ತು ಶುಭ ಕಾಮನೆಯ ಸೂಕ್ಷ್ಮ ಸೇವೆಯ ಮಹತ್ವಿಕೆಯನ್ನು ಅರಿತುಕೊಳ್ಳುವಂತಹ ಮಹಾನ್ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
|
BKMurli/BKMurli/page_1033.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಈ ಗೀತೆಯನ್ನು ಭಕ್ತಿಮಾರ್ಗದಲ್ಲಿ ಹಾಡಿದ್ದಾರೆ. ಕೊನೆಗೆ ಇವೆಲ್ಲವೂ ನಿಂತು ಹೋಗುತ್ತದೆ, ಇದರ ಅವಶ್ಯಕತೆಯಿಲ್ಲ. ಒಂದು ಸೆಕೆಂಡಿನಲ್ಲಿ ತಂದೆಯಿಂದ ಆಸ್ತಿ ಸಿಗುತ್ತದೆ ಎಂದು ಗಾಯನವಿದೆ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆ. ಜೀವನ್ಮುಕ್ತಿ ಅರ್ಥಾತ್ ಈ ದುಃಖಧಾಮದಿಂದ ಮುಕ್ತ, ಭ್ರಷ್ಟಾಚಾರಿತನದಿಂದ ಮುಕ್ತರಾಗಿ ನಂತರ ಏನಾಗುತ್ತೀರಿ? ಅದಕ್ಕಾಗಿ ಗುರಿ-ಧ್ಯೇಯವನ್ನು ಬಹಳ ಚೆನ್ನಾಗಿ ತಿಳಿಸಬೇಕು. ತಂದೆಯು ರಾತ್ರಿಯೂ ಸಹ ತಿಳಿಸಿದರು - ಯಾರಾದರೂ ಬರುತ್ತಾರೆಂದರೆ ಮೊದಲು ಸರ್ವಶ್ರೇಷ್ಠ ಭಗವಂತನ ಪರಿಚಯ ಕೊಡಿ. ಇಲ್ಲಿನ ಉದ್ದೇಶವೇನು ಎಂದು ಕೇಳುತ್ತಾರೆ. ಆಗ ಮೊಟ್ಟ ಮೊದಲು ಬೇಹದ್ದಿನ ತಂದೆಯ ಪರಿಚಯ ಕೊಡಬೇಕಾಗಿದೆ. ಈಗ ಆ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗುತ್ತೀರಿ. ಹೇ ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ ಅಂದಮೇಲೆ ತಂದೆಗೆ ಅವಶ್ಯವಾಗಿ ಯಾವುದೋ ಅಥಾರಿಟಿ ಇರಬೇಕಲ್ಲವೇ. ಯಾವುದೋ ಪಾತ್ರವು ಸಿಕ್ಕಿರಬೇಕಲ್ಲವೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯೆಂದು ಅವರಿಗೆ ಹೇಳುತ್ತಾರೆ. ಅವರು ಭಾರತದಲ್ಲಿಯೇ ಬರುತ್ತಾರೆ, ಬಂದು ಭಾರತವನ್ನೇ ಶ್ರೇಷ್ಠಾತಿ ಶ್ರೇಷ್ಠವನ್ನಾಗಿ ಮಾಡುತ್ತಾರೆ. ವೈಕುಂಠದ ಉಡುಗೊರೆಯನ್ನು ತರುತ್ತಾರೆ. ಮನುಷ್ಯ ಸೃಷ್ಟಿಯಲ್ಲಿ ಶ್ರೇಷ್ಠಾತಿ ಶ್ರೇಷ್ಠರು ದೇವಿ-ದೇವತೆಗಳು, ಸೂರ್ಯವಂಶಿ ಮನೆತನದವರಾಗಿದ್ದಾರೆ, ಅವರು ಸತ್ಯಯುಗದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಸತ್ಯಯುಗವನ್ನು ಸ್ಥಾಪನೆ ಮಾಡುವವರು ಸರ್ವಶ್ರೇಷ್ಠ ಭಗವಂತನೇ ಆಗಿದ್ದಾರೆ. ಅವರಿಗೇ ಸ್ವರ್ಗದ ರಚಯಿತನೆಂದು ಹೇಳುತ್ತಾರೆ. ಅವರು ತಂದೆಯಾಗಿದ್ದಾರೆ ಅಂದಮೇಲೆ ಅವರಿಗೆ ಸರ್ವವ್ಯಾಪಿ ಎಂದು ಹೇಳಲು ಸಾಧ್ಯವಿಲ್ಲ. ಸರ್ವವ್ಯಾಪಿ ಎಂದು ಹೇಳುವುದರಿಂದ ತಂದೆಯ ಆಸ್ತಿಯೇ ಮಾಯವಾಗುತ್ತದೆ. ಎಷ್ಟು ಮಧುರ ಮಾತುಗಳಾಗಿವೆ - ತಂದೆ ಎಂದರೆ ಆಸ್ತಿ. ಅವಶ್ಯವಾಗಿ ತಮ್ಮ ಮಕ್ಕಳಿಗೇ ಆಸ್ತಿಯನ್ನು ಕೊಡುತ್ತಾರೆ. ಎಲ್ಲಾ ಮಕ್ಕಳ ತಂದೆಯು ಒಬ್ಬರೇ ಆಗಿದ್ದಾರೆ. ಅವರು ಬಂದು ಸುಖ-ಶಾಂತಿಯ ಆಸ್ತಿಯನ್ನು ಕೊಡುತ್ತಾರೆ, ರಾಜಯೋಗವನ್ನು ಕಲಿಸುತ್ತಾರೆ. ಉಳಿದೆಲ್ಲಾ ಆತ್ಮರು ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹಿಂತಿರುಗಿ ಹೋಗುವರು. ಈಗ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಅದಕ್ಕಾಗಿಯೇ ಈ ಮಹಾಭಾರತ ಯುದ್ಧವಿದೆ, ಅನೇಕ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆಯಾಗುವುದು. ಬುದ್ಧಿಯೂ ಸಹ ಹೇಳುತ್ತದೆ, ಅವಶ್ಯವಾಗಿ ಕಲಿಯುಗದ ನಂತರ ಸತ್ಯಯುಗವೇ ಬರಬೇಕಾಗಿದೆ. ದೇವಿ-ದೇವತೆಗಳ ಚರಿತ್ರೆಯು ಪುನರಾವರ್ತನೆಯಾಗುವುದು. ಗಾಯನವೂ ಇದೆ- ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ.
|
2 |
+
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದೊಂದು ಅಂತಿಮ ಜನ್ಮದಲ್ಲಿ ಪವಿತ್���ರಾಗಿರಿ. ಈಗ ಮೃತ್ಯುಲೋಕವು ಸಮಾಪ್ತಿಯಾಗಿ ಅಮರಲೋಕದ ಸ್ಥಾಪನೆಯಾಗಲಿದೆ. ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ಅಮರಕಥೆಯನ್ನು ಕೇಳುತ್ತಿದ್ದೀರಿ. ಸ್ತ್ರೀಯರು ಮತ್ತು ಪುರುಷರು ಇಬ್ಬರೂ ಅಮರರಾಗುತ್ತೀರಲ್ಲವೇ. ಇದಕ್ಕೆ ಅಮರಕಥೆಯೆಂದಾದರೂ ಹೇಳಿ, ಮೂರನೇ ನೇತ್ರದ ಕಥೆಯೆಂದಾದರೂ ಹೇಳಿ. ಬಹಳ ಮಟ್ಟಿಗೆ ಮಾತೆಯರೇ ಕಥೆಯನ್ನು ಕೇಳುತ್ತಾರೆ ಅಂದಮೇಲೆ ಅಮರಪುರಿಯಲ್ಲಿ ಪುರುಷರು ಇರುವುದಿಲ್ಲವೇ? ಇಬ್ಬರೂ ಇರುತ್ತಾರೆ. ಶಾಸ್ತ್ರವು ಏನು ಹೇಳುತ್ತದೆ ಮತ್ತು ತಂದೆಯು ಏನು ಹೇಳುತ್ತಾರೆ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಇದನ್ನೂ ಹೇಳುತ್ತಾರೆ - ಭಕ್ತಿಯ ಫಲವನ್ನು ಕೊಡಲು ಭಗವಂತನು ಬರುತ್ತಾರೆ ಎಂದು. ಅವಶ್ಯವಾಗಿ ಸತ್ಯಯುಗದಲ್ಲಿ ಈ ದೇವಿ-ದೇವತೆಗಳದೇ ವಿಶ್ವದ ಮೇಲೆ ರಾಜ್ಯಭಾರವಿತ್ತು, ಇವರಿಗೆ ಇಂತಹ ಫಲವನ್ನು ಯಾರು ಕೊಟ್ಟರು? ಯಾವುದೇ ಸಾಧು ಸನ್ಯಾಸಿ ಮೊದಲಾದವರಂತೂ ಕೊಡಲು ಸಾಧ್ಯವಿಲ್ಲ. ಇದನ್ನೂ ತಿಳಿದುಕೊಂಡಿದ್ದೀರಿ - ಎಲ್ಲರೂ ಒಂದೇ ರೀತಿ ಭಕ್ತಿ ಮಾಡುವುದಿಲ್ಲ. ಯಾರು ಬಹಳ ಭಕ್ತಿ ಮಾಡುವರೋ ಅವರಿಗೆ ಫಲವೂ ಸಹ ಅದೇ ರೀತಿ ಸಿಗುವುದು. ಯಾರು ಪೂಜ್ಯರಾಗಿದ್ದರೋ ಅವರೇ ಪೂಜಾರಿಗಳಾದರು, ಪುನಃ ಪೂಜ್ಯರಾಗುವರು. ಭಕ್ತಿಯ ಫಲವಂತೂ ಸಿಗುತ್ತದೆಯಲ್ಲವೆ. ಈ ಮಾತುಗಳೆಲ್ಲವನ್ನೂ ತಿಳಿಸಬೇಕಾಗಿದೆ. ಮೊಟ್ಟ ಮೊದಲು ತ್ರಿಮೂರ್ತಿಯ ಬಗ್ಗೆ ತಿಳಿಸಬೇಕು. ಮೊದಲು ಏಣಿಯ ಚಿತ್ರದೆಡೆಗೆ ಕರೆದುಕೊಂಡು ಹೋಗುವುದಲ್ಲ, ಇವು ವಿವರವಾದ ಮಾತುಗಳಾಗಿವೆ. ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ, ಅವರು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ ನಂತರ ಬ್ರಹ್ಮಾ-ವಿಷ್ಣು-ಶಂಕರ, ಅನಂತರ ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ತೋರಿಸಬೇಕಾಗಿದೆ. ಬಾಕಿ ಭಕ್ತಿಮಾರ್ಗದ ಚಿತ್ರಗಳಂತೂ ಬಹಳಷ್ಟಿವೆ. ಮೊಟ್ಟ ಮೊದಲು ಇದನ್ನು ತಿಳಿಸಿರಿ - ಬೇಹದ್ದಿನ ತಂದೆಯಾಗಿದ್ದಾರೆ, ಅವರಿಂದ ನಾವು ಬೇಹದ್ದಿನ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯನ್ನು ಕೊಡುತ್ತಾರೆ. ಭಾರತದಲ್ಲಿ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ ಅಂದಮೇಲೆ ಸ್ವರ್ಗದ ರಚಯಿತ ತಂದೆಯೇ ಬಂದು ಸ್ವರ್ಗ ಸ್ಥಾಪನೆ ಮಾಡಿರಬೇಕು. ತಂದೆಯೇ ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ ಮತ್ತೆ 5000 ವರ್ಷಗಳ ನಂತರ ನರಕವಾಗಿ ಬಿಡುತ್ತದೆ. ರಾಮನೂ ಬರಬೇಕಾಗುತ್ತದೆ ಮತ್ತು ಸಮಯದಲ್ಲಿ ರಾವಣನೂ ಬರಬೇಕಾಗುತ್ತದೆ. ರಾಮನು ಆಸ್ತಿಯನ್ನು ಕೊಡುತ್ತಾನೆ, ರಾವಣನು ಶಾಪವನ್ನು ಕೊಡುತ್ತಾನೆ. ಜ್ಞಾನ ಅರ್ಥಾತ್ ದಿನವು ಮುಕ್ತಾಯವಾಗಿ ದಿನವಾಗುತ್ತದೆ. ದಿನದಲ್ಲಿ ಕೇವಲ ಸೂರ್ಯವಂಶಿ-ಚಂದ್ರವಂಶಿಯರು. ಈ ಮಾತುಗಳನ್ನು ಸಾರದಲ್ಲಿ ತಿಳಿಸುವುದು ಬಹಳ ಸಹಜವಾಗುತ್ತದೆ. ಮೊಟ್ಟ ಮೊದಲು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಪರಿಚಯ ನೀಡಿ ಪಕ್ಕಾ ಮಾಡಿಸಬೇಕು. ಮೂಲ ಮಾತೇ ಇದಾಗಿದೆ. ಸತ್ಯಯುಗದಲ್ಲಿ ದೇವಿ-ದೇವ��ಾ ಮನೆತನವಿತ್ತು, ಸತೋಪ್ರಧಾನರಾಗಿದ್ದರು ನಂತರ ಸತೋ, ರಜೋ, ತಮೋದಲ್ಲಿ ಬಂದರು. ಇದು ಚಕ್ರವಾಗಿದೆ. ಒಂದೇ ವಸ್ತು ಶಾಶ್ವತವಾಗಿರುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಇದೇ ನೆನಪಿರಲಿ - ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ನೆನಪು ಮಾಡಬೇಕಾಗಿದೆ. ಈ ನೆನಪಿನಲ್ಲಿಯೇ ಮಕ್ಕಳು ಬಹಳ ಕಚ್ಚಾ ಇದ್ದಾರೆ. ತಂದೆಯೂ ಸಹ (ಬ್ರಹ್ಮಾ) ತಮ್ಮ ಅನುಭವವನ್ನು ತಿಳಿಸುತ್ತಾರೆ - ನೆನಪು ಪದೇ-ಪದೇ ಮರೆತುಹೋಗುತ್ತದೆ ಏಕೆಂದರೆ ಇವರಿಗೆ ಬಹಳ ವಿಚಾರಗಳಿರುತ್ತವೆ ಆದ್ದರಿಂದಲೇ ಯಾರಿಗೆ ಬಹಳ ಜವಾಬ್ದಾರಿಯಿರುವುದೋ ಅವರು ನೆನಪಿನಲ್ಲಿರಲು ಹೇಗೆ ಸಾಧ್ಯ! ತಂದೆಗೆ ಇಡೀ ದಿನ ವಿಚಾರಗಳು ನಡೆಯುತ್ತಿರುತ್ತವೆ. ಇವರ ಮುಂದೆ ಎಷ್ಟೊಂದು ಮಾತುಗಳು ಬರುತ್ತವೆ ಆದ್ದರಿಂದ ತಂದೆಗೆ ಮುಂಜಾನೆ ಎದ್ದು ಕುಳಿತುಕೊಳ್ಳಲು ಹೆಚ್ಚು ಮಜಾ ಬರುತ್ತದೆ. ನಶೆಯೂ ಇರುತ್ತದೆ - ಈ ಸ್ಥಾಪನೆಯಾದ ನಂತರ ನಾನು ಪುನಃ ವಿಶ್ವದ ಮಹಾರಾಜನಾಗುವೆನು ಎಂದು. ಹೇಗೆ ತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ – ಮೊಟ್ಟ ಮೊದಲ ಮುಖ್ಯ ಮಾತಾಗಿದೆ - ತಂದೆಯ ಪರಿಚಯ ಕೊಡುವುದು. ಅನ್ಯ ಯಾವುದೆಲ್ಲಾ ಮಾತುಗಳನ್ನು ಯಾರಾದರೂ ಹೇಳಲಿ, ತಿಳಿಸಿ- ಇದರಿಂದ ಯಾವುದೇ ಲಾಭವಿಲ್ಲ. ನಾವು ನಿಮಗೆ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಪರಿಚಯ ನೀಡುತ್ತೇವೆ. ಅವರೇ ವಿಶ್ವದ ಮಾಲೀಕರಾಗುವ ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯನ್ನು ಕೊಡುತ್ತಾರೆ. ಆರ್ಯ ಸಮಾಜಿಗಳು ದೇವತೆಗಳ ಚಿತ್ರಗಳನ್ನು ಒಪ್ಪುವುದಿಲ್ಲ, ನಿಮ್ಮ ಬಳಿ ಬಂದು ಚಿತ್ರಗಳನ್ನು ನೋಡಿದಾಗಲೇ ಮುಖ ತಿರುಗಿಸುತ್ತಾರೆ. ಯಾರು ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆಯೋ ಅವರು ಶಾಂತಿಯಿಂದ ಬಂದು ಕೇಳುತ್ತಾ ಇರುತ್ತಾರೆ. ಮುಖ್ಯ ಮಾತೇ ಒಂದಾಗಿದೆ – ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಪರಿಚಯ. ಬ್ರಹ್ಮಾ-ವಿಷ್ಣು-ಶಂಕರನಿಗೂ ಸಹ ಶ್ರೇಷ್ಠಾತಿ ಶ್ರೇಷ್ಠನೆಂದು ಹೇಳುವುದಿಲ್ಲ. ಶ್ರೇಷ್ಠಾತಿ ಶ್ರೇಷ್ಠ ತಂದೆಯಿಂದಲೇ ಆಸ್ತಿಯು ಸಿಗುತ್ತದೆ, ಅವರೇ ಪತಿತ-ಪಾವನನಾಗಿದ್ದಾರೆ, ಈ ಮಾತನ್ನು ಪಕ್ಕಾ ಮಾಡಿದ್ದೀರಿ - ಭಗವಂತನೊಬ್ಬನೇ ಆಗಿದ್ದಾರೆ. ತಂದೆ ಎಂದರೆ ಆಸ್ತಿ. ಭಾರತದಲ್ಲಿಯೇ ಬಂದು ಆಸ್ತಿಯನ್ನು ಕೊಡುತ್ತಾರೆ. ಬ್ರಹ್ಮಾರವರ ಮುಖಾಂತರ ಹೊಸ ಪ್ರಪಂಚದ ಸ್ಥಾಪನೆ, ಶಂಕರನ ಮೂಲಕ ವಿನಾಶ. ಈ ಮಹಾಭಾರತ ಯುದ್ಧದಿಂದಲೇ ಸ್ವರ್ಗದ ಬಾಗಿಲು ತೆರೆಯುತ್ತದೆ, ಪತಿತರಿಂದ ಪಾವನರಾಗುತ್ತೀರಿ. ಬೇಹದ್ದಿನ ತಂದೆಯಿಂದಲೇ ಭಾರತಕ್ಕೆ ಆಸ್ತಿಯು ಸಿಗುತ್ತಿದೆ. ಇಲ್ಲಿ ಒಂದೇ ಮಾತಾಗಿದೆ ಮತ್ತ್ಯಾವುದೇ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ತುಕ್ಕು ಬಿಟ್ಟು ಹೋಗುವುದು. ಈ ಒಂದು ಮಾತನ್ನು ಚೆನ್ನಾಗಿ ತಿಳಿದುಕೊಂಡಾಗ ಅನ್ಯ ಮಾತುಗಳನ್ನು ತಿಳಿಸಿರಿ. ನಾವು ಹೇಳುತ್ತೇವೆ, ಜ್ಞಾನಾಮೃತವನ್ನು ಕುಡಿದು ಪವಿತ್ರರಾಗಿ ಎಂದು. ಅದಕ್ಕೆ ಅವರು ವಿಷವೇ ಬೇಕೆಂದು ಹೇಳುತ್ತಾರೆ. ಇದನ್ನು ಕುರಿತು ಒಂದು ಚಿತ��ರವೂ ಇದೆ ಆದ್ದರಿಂದಲೇ ಅಮೃತವನ್ನು ಬಿಟ್ಟು ವಿಷವನ್ನೇಕೆ ಕುಡಿಯುವಿರಿ? ಎಂದು ಹೇಳುತ್ತಾರೆ. ಈ ಆತ್ಮಿಕ ಜ್ಞಾನವನ್ನು ಆತ್ಮಿಕ ತಂದೆಯೇ ಕೊಡುತ್ತಾರೆ ಅಂದಮೇಲೆ ಅವರು ಸರ್ವವ್ಯಾಪಿ ಹೇಗಾಗುವರು? ನೀವು ತಂದೆಯನ್ನು ಸರ್ವವ್ಯಾಪಿ ಎಂದು ಹೇಳುತ್ತೀರಿ, ಭಲೆ ನೀವು ಹಾಗೆಯೇ ತಿಳಿದುಕೊಳ್ಳಿ ಆದರೆ ನಾವೀಗ ಒಪ್ಪುವುದಿಲ್ಲ. ಮೊದಲು ನಾವು ಒಪ್ಪುತ್ತಿದ್ದೆವು ಆದರೆ ಈಗ ತಂದೆಯು ತಿಳಿಸಿದ್ದಾರೆ- ಸರ್ವವ್ಯಾಪಿ ಎಂದು ಹೇಳುವುದು ತಪ್ಪಾಗಿದೆ. ತಂದೆಯಿಂದ ಆಸ್ತಿಯು ಸಿಗುತ್ತದೆ. ಭಾರತವು ಈಗ ನರಕವಾಗಿದೆ. ಅದನ್ನು ಪುನಃ ನಾವು ಸ್ವರ್ಗ ಅರ್ಥಾತ್ ಪವಿತ್ರ ಗೃಹಸ್ಥ ಆಶ್ರಮವನ್ನಾಗಿ ಮಾಡುತ್ತೇವೆ. ಆದಿ ಸನಾತನ ದೇವಿ-ದೇವತೆಗಳದು ಪವಿತ್ರ ಗೃಹಸ್ಥಾಶ್ರಮವಾಗಿತ್ತು, ಈಗ ಅಪವಿತ್ರ ವಿಕಾರಿ ಪ್ರಪಂಚವಾಗಿದೆ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿರಿ, ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯು ರಚಯಿತನಾಗಿದ್ದಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಈಗ ಕಲಿಯುಗದಲ್ಲಿ ಅನೇಕ ಮನುಷ್ಯರಿದ್ದಾರೆ. ಸತ್ಯಯುಗದಲ್ಲಿ ಕೆಲವರೇ ಇರುವರು ಅಂದಮೇಲೆ ಆ ಸಮಯದಲ್ಲಿ ಉಳಿದೆಲ್ಲರೂ ಶಾಂತಿಧಾಮದಲ್ಲಿ ಇರುತ್ತಾರೆ ಆದ್ದರಿಂದ ಈಗ ಅವಶ್ಯವಾಗಿ ಯುದ್ಧವಾಗುವುದು, ಇದರಿಂದಲೇ ಎಲ್ಲರೂ ಮುಕ್ತಿಯಲ್ಲಿ ಹೋಗುವರು. ಇವೆಲ್ಲಾ ಮಾತುಗಳು ಮಕ್ಕಳ ಬುದ್ಧಿಯಲ್ಲಿ ಇರಬೇಕಾಗಿದೆ. ಮಕ್ಕಳು ಅವಶ್ಯವಾಗಿ ಸರ್ವೀಸ್ ಮಾಡಬೇಕಾಗಿದೆ. ಸರ್ವೀಸಿನಿಂದಲೇ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಪರಸ್ಪರ ಆಗದಿದ್ದರೆ ಶಿವ ತಂದೆಯನ್ನು ಮರೆತು ಬಿಡುವುದು ಅಥವಾ ಶಿವ ತಂದೆಯ ಸೇವೆ ಮಾಡುವುದನ್ನೇ ಬಿಟ್ಟು ಬಿಡುವುದಲ್ಲ. ಹಾಗೆ ಮಾಡಿದರೆ ಪದವಿ ಭ್ರಷ್ಟವಾಗುವುದು ನಂತರ ಸರ್ವೀಸ್ ಮಾಡುವ ಬದಲು ಡಿಸ್ಸರ್ವೀಸ್ ಮಾಡಿ ಬಿಡುತ್ತೀರಿ. ಪರಸ್ಪರ ಉಪ್ಪು ನೀರಾಗಿ ಸೇವೆಯನ್ನು ಬಿಟ್ಟು ಬಿಡುವುದು, ಇದರಂತಹ ಕೆಟ್ಟ ಕೆಲಸವು ಯಾವುದೂ ಇಲ್ಲ. ತಂದೆಯನ್ನು ನೆನಪು ಮಾಡಿರಿ, ಇದರಿಂದ ಸಂಪಾದನೆಯೂ ಆಗುವುದು. ಈಗ ಜ್ಞಾನವು ಸಿಕ್ಕಿದೆ - ಪವಿತ್ರರಾಗಿ ಮತ್ತು ತಂದೆಯನ್ನು ನೆನಪು ಮಾಡಿರಿ. ಜ್ಞಾನದ ಹೊಳಪಿಗೆ ದುರಿಯಾ ಎಂದು ಹೇಳಲಾಗುತ್ತದೆ. ಜ್ಞಾನ ಮತ್ತು ವಿಜ್ಞಾನವೆಂದು ಹೇಳುತ್ತಾರೆ. ವಿಜ್ಞಾನವು ಯೋಗವಾಗಿದೆ, ಜ್ಞಾನವು ಸೃಷ್ಟಿಚಕ್ರದ್ದಾಗಿದೆ. ಹೋಲಿ-ದುರಿಯಾ ಎಂದರೇನು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ, ತಂದೆಯನ್ನು ನೆನಪು ಮಾಡಬೇಕು ಮತ್ತು ಎಲ್ಲರಿಗೆ ಜ್ಞಾನವನ್ನು ತಿಳಿಸಬೇಕಾಗಿದೆ. ತಂದೆಯು ಮತ್ತೆ ಮತ್ತೆ ತಿಳಿಸುತ್ತಾರೆ – ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ಸರ್ವವ್ಯಾಪಿ ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಹೇಳುವುದಾದರೆ ಮತ್ತೆ ಯಾರನ್ನು ನೆನಪು ಮಾಡುತ್ತೀರಿ? ತಂದೆಯು ನನ್ನನ್ನು ನಿರಂತರ ನೆನಪು ಮಾಡಿರಿ ಎಂದು ತಿಳಿಸುತ್ತಾರೆ. ಆದರೆ ರಚಯಿತನನ್ನೇ ತಿಳಿದುಕೊಂಡಿಲ್ಲವೆಂದರೆ ಸಿಗುವುದಾದರೂ ಏನು! ತಿಳಿದುಕೊಳ್ಳದ ಕಾ���ಣ ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಆದ್ದರಿಂದ ಶ್ರೇಷ್ಠಾತಿ ಶ್ರೇಷ್ಠ ಎಂಬ ಮಾತನ್ನು ಸಿದ್ಧ ಮಾಡಿ ತಿಳಿಸಿರಿ ಆಗ ಸರ್ವವ್ಯಾಪಿ ಎಂಬ ಮಾತುಗಳು ಬುದ್ಧಿಯಿಂದ ಹೊರಟು ಹೋಗುತ್ತದೆ. ನಾವೆಲ್ಲರೂ ಸಹೋದರರಾಗಿದ್ದೇವೆ, ತಂದೆಯು ಪ್ರತೀ 5000 ವರ್ಷಗಳ ನಂತರ ಬಂದು ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ದೇವಿ-ದೇವತೆಗಳಿರುತ್ತಾರೆ, ಉಳಿದೆಲ್ಲರೂ ಮುಕ್ತಿಯಲ್ಲಿ ಹೋಗುತ್ತಾರೆ. ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡುತ್ತಾ ಇರಿ. ಕ್ರಿಸ್ತನನ್ನು ಪ್ರಾರ್ಥನೆ ಮಾಡುತ್ತಾರೆ, ಅವರಿಗೆ ತಿಳಿಸಿ - ಕ್ರಿಸ್ತನು ಎಲ್ಲರ ತಂದೆಯಂತೂ ಅಲ್ಲ, ಎಲ್ಲರ ತಂದೆಯು ನಿರಾಕಾರನಾಗಿದ್ದಾರೆ. ಅವರನ್ನೇ ಓ ಗಾಡ್ ಫಾದರ್ ಎಂದು ಆತ್ಮವು ಕರೆಯುತ್ತದೆ. ಕ್ರಿಸ್ತನೂ ಸಹ ಆ ಭಗವಂತನ ಪುತ್ರನೆಂದು ಗಾಯನವಿದೆ. ಅಂದಮೇಲೆ ಮಗನಿಂದ ಆಸ್ತಿಯು ಹೇಗೆ ಸಿಗುವುದು? ಕ್ರಿಸ್ತನು ರಚನೆಯಾಗಿದ್ದಾನೆ. ಕ್ರಿಸ್ತನನ್ನು ನೆನಪು ಮಾಡುವುದರಿಂದ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗುವುದು ಎಂದು ಯಾವುದೇ ಶಾಸ್ತ್ರಗಳಲ್ಲಿ ಬರೆದಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ಗೀತೆಯಲ್ಲಿ ಮಾತ್ರವೇ ಇದೆ. ಭಗವಂತನ ಶಾಸ್ತ್ರವೇ ಗೀತೆಯಾಗಿದೆ. ಕೇವಲ ತಂದೆಯ ಹೆಸರನ್ನು ಬದಲಾಯಿಸಿ ಕೃಷ್ಣನ ಹೆಸರನ್ನು ಬರೆದು ಬಿಟ್ಟಿದ್ದಾರೆ- ಈ ತಪ್ಪು ಮಾಡಿಬಿಟ್ಟಿದ್ದಾರೆ ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ. ಅವರೇ ಸುಖ-ಶಾಂತಿಯ ಆಸ್ತಿಯನ್ನು ಕೊಡುತ್ತಾರೆ. ಶಿವನ ಚಿತ್ರವನ್ನು ಎಲ್ಲರೂ ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿದೆ. ಶಿವ ತಂದೆಯು ಈ ಆಸ್ತಿಯನ್ನು ಕೊಡುತ್ತಾರೆ, ನಂತರ 84 ಜನ್ಮಗಳಲ್ಲಿ ಕಳೆದುಕೊಳ್ಳುತ್ತೀರಿ. ಏಣಿಯ ಚಿತ್ರದಲ್ಲಿ ತಿಳಿಸಬೇಕಾಗಿದೆ - ಪತಿತ-ಪಾವನ ತಂದೆಯೇ ಬಂದು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಕೃಷ್ಣ ಭಗವಾನುವಾಚ ಎಂದು ಮನುಷ್ಯರು ಹೇಳುತ್ತಾರೆ, ಶಿವ ಭಗವಾನುವಾಚ ಎಂದು ನೀವು ಹೇಳುತ್ತೀರಿ. ಫಸ್ಟ್ ಫ್ಲೋರ್ ನಲ್ಲಿ ಶ್ರೇಷ್ಠ ತಂದೆಯಿರುತ್ತಾರೆ, ನಂತರ ಸೆಕೆಂಡ್ ಫ್ಲೋರ್ ಸೂಕ್ಷ್ಮವತನ, ಇದು ಥರ್ಡ್ ಫ್ಲೋರ್ ಆಗಿದೆ. ಸೃಷ್ಟಿಯು ಇಲ್ಲಿದೆ, ಅಂತಿಮದಲ್ಲಿ ಸೂಕ್ಷ್ಮವತನಕ್ಕೆ ಹೋಗುತ್ತೀರಿ. ಅಲ್ಲಿ ಟ್ರಿಬ್ಯುನಲ್ (ಧರ್ಮರಾಜ ಪುರಿ) ಕುಳಿತುಕೊಳ್ಳುತ್ತದೆ, ಶಿಕ್ಷೆ ಸಿಗುತ್ತದೆ. ಶಿಕ್ಷೆಗಳನ್ನು ಅನುಭವಿಸಿ ಪವಿತ್ರರಾಗಿ ಮೇಲೆ ಹೊರಟು ಹೋಗುತ್ತೀರಿ. ತಂದೆಯು ಎಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಈಗ ಸಂಗಮವಾಗಿದೆ, ಇದಕ್ಕೇ ನೂರು ವರ್ಷಗಳು ಕೊಡಬೇಕು. ಬಾಬಾ, ಸ್ವರ್ಗದಲ್ಲಿ ಏನೇನಿರುವುದು ಎಂದು ಮಕ್ಕಳು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಅದನ್ನು ಮುಂದೆ ಹೋದಂತೆ ನೋಡುವಿರಿ. ಮೊದಲು ನೀವು ತಂದೆಯನ್ನು ತಿಳಿದುಕೊಳ್ಳಿ, ಪತಿತರಿಂದ ಪಾವನರಾಗುವ ಗುಂಗಿನಲ್ಲಿರಿ. ಸ್ವರ್ಗದಲ್ಲಿ ಏನಾಗಬೇಕಾಗಿದೆಯೋ ಅದು ಆಗುತ್ತಾ ಇರುವುದು. ನೀವು ಈ ರೀತಿ ಪಾವನರಾಗಿರಿ ತಂದೆಯಿಂ�� ಹೊಸ ಪ್ರಪಂಚದ ಪೂರ್ಣ ಆಸ್ತಿಯು ಪ್ರಾಪ್ತಿಯಾಗಿದೆ. ಬಾಕಿ ಮಧ್ಯದಲ್ಲಿ ಏನಾಗುತ್ತದೆ ಎಂಬುದನ್ನು ಮುಂದೆ ಹೋಗಿ ನೋಡುವಿರಿ. ಅಂದಾಗ ಈ ಮಾತುಗಳೆಲ್ಲವನ್ನೂ ನೆನಪಿಟ್ಟುಕೊಳ್ಳಿ, ನೆನಪಿಲ್ಲದೇ ಇರುವ ಕಾರಣ ಸಮಯದಲ್ಲಿ ತಿಳಿಸುವುದಿಲ್ಲ, ಮರೆತು ಹೋಗುತ್ತೀರಿ. ನೀವು ಮಕ್ಕಳು ಒಳ್ಳೆಯ ಕರ್ಮವನ್ನೇ ಮಾಡಬೇಕಾಗಿದೆ. ತಂದೆಯ ನೆನಪಿನಲ್ಲಿದ್ದರೆ ಕೆಟ್ಟ ಕರ್ಮವಾಗುವುದೇ ಇಲ್ಲ. ಅನೇಕರು ಕೆಟ್ಟ ಕರ್ಮವನ್ನೂ ಮಾಡುತ್ತಾರೆ. ಈ ಬ್ರಾಹ್ಮಿಣಿಯಿದ್ದರೆ ನಮಗೆ ಚೆನ್ನಾಗಿರುತ್ತದೆ, ಅವರು ಹೋದರೆ ತಾನೂ ವಿದ್ಯೆಯನ್ನು ಓದುವುದನ್ನು ನಿಲ್ಲಿಸಿಬಿಡುತ್ತಾರೆ. ಬ್ರಾಹ್ಮಿಣಿಯ ಕಾರಣ ಜ್ಞಾನದಿಂದ ಸತ್ತು ಹೋಗುತ್ತಾರೆ ಅಂದರೆ ತಂದೆಯ ಆಸ್ತಿ ಪಡೆಯುವುದರಿಂದ ಸತ್ತು ಹೋದರು ಎಂದರ್ಥ. ಇದನ್ನೂ ದೌರ್ಭಾಗ್ಯವೆಂದೇ ಹೇಳಲಾಗುತ್ತದೆ.
|
3 |
+
ಕೆಲವು ಮಕ್ಕಳು ಒಬ್ಬರಿನ್ನೊಬ್ಬರ ನಾಮ-ರೂಪದಲ್ಲಿ ಸಿಲುಕಿ ಸತ್ತು ಹೋಗುತ್ತಾರೆ. ಇಲ್ಲಿ ನಿಮ್ಮದು ದೈಹಿಕ ಪ್ರೀತಿಯಿರಬಾರದು, ನಿರಂತರ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾರೊಂದಿಗೂ ಲೇವಾದೇವಿ ಇರಬಾರದು. ತಾವು ತಿಳಿಸಿ, ನಮಗೆ ಏಕೆ ಕೊಡುತ್ತೀರಿ? ನಿಮ್ಮ ಯೋಗವು ಶಿವ ತಂದೆಯೊಂದಿಗೆ ಇದೆಯಲ್ಲವೇ. ಅಂದಮೇಲೆ ಯಾರು ಡೈರೆಕ್ಟ್ ಕೊಡುವುದಿಲ್ಲವೋ ಅವರದು ಶಿವ ತಂದೆಯ ಬಳಿ ಜಮಾ ಆಗುವುದಿಲ್ಲ. ಬ್ರಹ್ಮಾರವರ ಮೂಲಕ ಸ್ಥಾಪನೆಯಾಗುತ್ತದೆ ಅಂದಮೇಲೆ ಎಲ್ಲವನ್ನೂ ಅವರ ಮೂಲಕವೇ ಮಾಡಬೇಕಾಗಿದೆ. ಮಧ್ಯದಲ್ಲಿ ಯಾರಾದರೂ ತಿಂದು ಬಿಟ್ಟರೆ ಶಿವ ತಂದೆಯ ಬಳಿಯಂತೂ ಜಮಾ ಆಗಲಿಲ್ಲ. ಬ್ರಹ್ಮಾರವರ ಮುಖಾಂತರ ಶಿವ ತಂದೆಗೇ ಕೊಡಬೇಕಾಗಿದೆ. ಸೇವಾಕೇಂದ್ರವನ್ನೂ ಸಹ ಬ್ರಹ್ಮಾರವರ ಮುಖಾಂತರವೇ ತೆರೆಯಿರಿ, ತಾವೇ ಸೇವಾಕೇಂದ್ರವನ್ನು ತೆರೆಯುತ್ತೀರೆಂದರೆ ಅದು ಸೇವಾಕೇಂದ್ರವಾಯಿತೇ? ಬಾಪ್ದಾದಾ ಇಬ್ಬರು ಒಟ್ಟಿಗೆ ಇದ್ದಾರೆ. ಇವರ ಕೈಗೆ ಬಂದಿತೆಂದರೆ ಶಿವ ತಂದೆಯ ಕೈಯಲ್ಲಿ ಬಂದಿತೆಂದರ್ಥ. ಎಷ್ಟೊಂದು ಸೇವಾಕೇಂದ್ರಗಳಿವೆ, ಕೆಲವರದು ಯಾವುದೇ ಸಮಾಚಾರವೇ ಬರುವುದಿಲ್ಲ. ಬಾಬಾ, ಇದು ನಿಮ್ಮ ಸೆಂಟರಿನ ಲೆಕ್ಕ ಪತ್ರವೆಂದು ಬರೆದು ಕಳುಹಿಸಬೇಕು. ಸೇಟ್ನ ಬಳಿ ಲೆಕ್ಕ ಪತ್ರವು ಬರಬೇಕಲ್ಲವೇ. ಶಿವ ತಂದೆಯ ಬಳಿ ಅನೇಕರದು ಜಮಾ ಆಗುವುದೇ ಇಲ್ಲ. ಇಷ್ಟೂ ಬುದ್ಧಿಯಿಲ್ಲ. ಭಲೆ ಜ್ಞಾನವು ಬಹಳಷ್ಟಿದೆ ಆದರೆ ಯುಕ್ತಿ ಬರುವುದಿಲ್ಲ. ನಾವು ಸೇವಾಕೇಂದ್ರವನ್ನು ತೆರೆದೆವು ಎಂದು ಹೇಳುತ್ತಾರೆ. ನೀವು ಯಾರಿಗೆ ಕೊಟ್ಟಿರೋ ಅವರು ಸೇವಾಕೇಂದ್ರವನ್ನು ತೆರೆದರು, ಶಿವ ತಂದೆಯು ತೆರೆದಂತಾಯಿತೇ? ಅಂತಹ ಸೇವಾಕೇಂದ್ರವು ವೃದ್ಧಿಯೂ ಆಗುವುದಿಲ್ಲ. ಸೇವಾಕೇಂದ್ರವನ್ನು ತೆರೆಯುವುದಾದರೆ ಶಿವ ತಂದೆಯ ಮೂಲಕ ತೆರೆಯಿರಿ. ಬಾಬಾ, ನಾವು ಇದನ್ನು ಕೊಡುತ್ತೇವೆ, ಈ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ತಿಳಿಸಬೇಕು. ಮಕ್ಕಳು ಬಹಳಷ್ಟು ತಪ್ಪುಗಳನ್ನು ಮಾಡುತ್ತಾರೆ, ಯೋಗದಲ್ಲಿ ಬಹಳ ಕಚ್ಚಾ ಇದ್ದಾರೆ. ಒಳ್ಳೆಯದು.
|
4 |
+
ಮಧುರಾತಿ ���ಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ಜ್ಞಾನದ ಜೊತೆ ಜೊತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಯುಕ್ತಿಯನ್ನು ಕಲಿಯಬೇಕಾಗಿದೆ. ಒಬ್ಬ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಯಾವುದೇ ದೇಹಧಾರಿಯ ಹಿಂದೆ ದುರಾದೃಷ್ಟವಂತರಾಗಬಾರದು.
|
7 |
+
2. ಪರಸ್ಪರ ಯಾವುದೇ ಮಾತಿನ ಕಾರಣ ತಂದೆಯ ಸೇವೆಯನ್ನು ಬಿಡಬಾರದು. ಬೆಳಗ್ಗೆ-ಬೆಳಗ್ಗೆ ಎದ್ದು ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕು. ನೆನಪು ಮಾಡುವ ಪರಿಶ್ರಮ ಪಡಬೇಕಾಗಿದೆ.
|
BKMurli/BKMurli/page_1034.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಈ ಗೀತೆಯ ಸಾಲು ಮಕ್ಕಳನ್ನು ಜಾಗೃತ ಮಾಡಿ ಬಿಟ್ಟಿತು. ಏನು ಹೇಳಿತು? ಬುದ್ಧಿಯಲ್ಲಿ ಇದನ್ನು ನೆನಪಿಟ್ಟುಕೊಳ್ಳಬೇಕಾಗಿದೆ - ನಾವು ತೀರ್ಥ ಯಾತ್ರೆಯಲ್ಲಿ ಇದ್ದೇವೆ ಮತ್ತು ನಮ್ಮ ಈ ಯಾತ್ರೆಯು ಎಲ್ಲದಕ್ಕಿಂತ ಭಿನ್ನವಾಗಿದೆ. ಈ ಯಾತ್ರೆಯನ್ನು ಮರೆಯಬೇಡಿ. ಎಲ್ಲವೂ ಯಾತ್ರೆಯ ಮೇಲೆ ಆಧಾರಿತವಾಗಿದೆ. ಮತ್ತೆಲ್ಲರೂ ತೀರ್ಥ ಯಾತ್ರೆಗಳನ್ನು ಮಾಡಿ ಮತ್ತೆ ಹಿಂತಿರುಗಿ ಬರುತ್ತಾರೆ ಮತ್ತು ಜನ್ಮ-ಜನ್ಮಾಂತರ ಯಾತ್ರೆ ಮಾಡುತ್ತಲೇ ಬರುತ್ತಾರೆ. ನಮ್ಮ ತೀರ್ಥವು ಅದಲ್ಲ, ಅಮರನಾಥದಲ್ಲಿ ಹೋಗಿ ಮತ್ತೆ ಮೃತ್ಯುಲೋಕದಲ್ಲಿ ಬರುವುದಲ್ಲ. ಮತ್ತೆಲ್ಲರದೂ ಆ ಯಾತ್ರೆಗಳಾಗಿದೆ. ತೀರ್ಥ ಯಾತ್ರೆಗೆ ಹೋಗಿ ಸುತ್ತಾಡಿಕೊಂಡು ಮತ್ತೆ ಬಂದು ಪತಿತರಾಗುತ್ತಾರೆ, ಭಿನ್ನ-ಭಿನ್ನ ಪ್ರಕಾರದ ಯಾತ್ರೆಗಳಿದೆಯಲ್ಲವೆ. ದೇವಿಯ ಮಂದಿರಗಳೂ ಬಹಳಷ್ಟಿದೆ, ವಿಕಾರಿಗಳ ಜೊತೆ ಎಷ್ಟೊಂದು ಯಾತ್ರೆಗಳನ್ನು ಮಾಡುತ್ತಾರೆ, ನೀವು ಮಕ್ಕಳಂತೂ ನಿರ್ವಿಕಾರಿಯಾಗಿರುವ ಪಣ ತೊಟ್ಟಿದ್ದೀರಿ. ಇದು ನೀವು ನಿರ್ವಿಕಾರಿಗಳ ಯಾತ್ರೆಯಾಗಿದೆ. ನಿರ್ವಿಕಾರಿ ತಂದೆಯು ಯಾರು ಸದಾ ಪಾವನನಾಗಿದ್ದಾರೆಯೋ ಅವರನ್ನು ನೆನಪು ಮಾಡಬೇಕಾಗಿದೆ. ನೀರಿನ ಸಾಗರಕ್ಕೆ ವಿಕಾರಿ ಅಥವಾ ನಿರ್ವಿಕಾರಿ ಎಂದು ಹೇಳುವುದಿಲ್ಲ ಮತ್ತು ಅದರಿಂದ ಹೊರಟಿರುವ ನದಿಗಳೂ ಸಹ ನಿರ್ವಿಕಾರಿಯನ್ನಾಗಿ ಮಾಡುವುದಿಲ್ಲ. ಮನುಷ್ಯ ಮಾತ್ರರು ಇಷ್ಟು ಪತಿತರಾಗಿ ಬಿಟ್ಟಿದ್ದಾರೆ, ಏನನ್ನೂ ತಿಳಿದುಕೊಂಡಿಲ್ಲ. ಆ ತೀರ್ಥ ಯಾತ್ರೆಗಳು ಅಲ್ಪಕಾಲದ ಕ್ಷಣ ಭಂಗುರ ಯಾತ್ರೆಗಳಾಗಿವೆ, ಇದು ದೊಡ್ಡ ಯಾತ್ರೆಯಾಗಿದೆ. ನೀವು ಮಕ್ಕಳು ಏಳುತ್ತಾ-ಕುಳಿತುಕೊಳ್ಳುತ್ತಾ ಯಾತ್ರೆಯ ವಿಚಾರ ಮಾಡಬೇಕಾಗಿದೆ. ಯಾತ್ರೆಗೆ ಹೋಗುತ್ತಾರೆಂದರೆ ಗೃಹಸ್ಥ ವ್ಯವಹಾರ, ಉದ್ಯೋಗ-ವ್ಯಾಪಾರ ಎಲ್ಲವನ್ನೂ ಮರೆಯಲಾಗಿದೆ. ಕೇವಲ ಅಮರನಾಥನಿಗೆ ಜೈ ಎಂದು ಹೇಳುತ್ತಾ ಹೋಗುತ್ತಾರೆ. ಒಂದೆರಡು ತಿಂಗಳ ಕಾಲ ತೀರ್ಥ ಯಾತ್ರೆ ಮಾಡಿಕೊಂಡು ಬಂದ ನಂತರ ಕೆಸರಿನಲ್ಲಿ ಬೀಳುತ್ತಾರೆ. ಮತ್ತೆ ಗಂಗಾ ಸ್ನಾನ ಮಾಡಲು ಹೋಗುತ್ತಾರೆ. ನಾವು ನಿತ್ಯವೂ ಪತಿತರಾಗುತ್ತೇವೆ ಎಂಬುದು ಅವರಿಗೆ ತಿಳಿದೇ ಇಲ್ಲ. ಗಂಗಾ, ಜಮುನಾ ತೀರದಲ್ಲಿರುವವರೂ ಸಹ ನಿತ್ಯವೂ ಪತಿತರಾಗುತ್ತಾರೆ. ಪ್ರತಿನಿತ್ಯವೂ ಗಂಗೆಯಲ್ಲಿ ಹೋಗಿ ಸ್ನಾನ ಮಾಡುತ್ತಾರೆ. ಒಂದು ನಿಯಮವಿರುತ್ತದೆ, ಎರಡನೆಯದಾಗಿ ವಿಶೇಷ ದಿನಗಳಲ್ಲಿ ಹೋಗುತ್ತಾರೆ ಮತ್ತು ಗಂಗೆಯು ಪತಿತ-ಪಾವನಿ ಎಂದು ತಿಳಿಯುತ್ತಾರೆ ಅಂದಮೇಲೆ ವಿಶೇಷವಾಗಿ ಆ ಒಂದು ದಿನದಂದು ಗಂಗೆಯು ಪಾವನರನ್ನಾಗಿ ಮಾಡುವಂತದ್ದಾಗುತ್ತದೆ, ನಂತರ ಇರುವುದಿಲ್ಲ ಎಂದಲ್ಲ. ಯಾವ ದಿನದಂದು ಮೇಳವಾಗುತ್ತದೆಯೋ, ಆ ದಿನ ಪತಿತ-ಪಾವನಿಯಾಗಿ ಬಿಡುತ್ತದೆ ಎಂದಲ್ಲ, ಅದಂತೂ ಯಾವಾಗಲೂ ಇರುತ್ತದೆ. ನಿತ್ಯವೂ ಸ್ನಾನ ಮಾಡಲು ಹೋಗುತ್ತಾರೆ. ಮೇಳದಲ್ಲಿಯೂ ವಿಶೇಷ ದಿನಗಳಂದು ಹೋಗುತ್ತಾರೆ, ಇದರಲ್ಲಿ ಅರ್ಥವೇ ಇಲ್ಲ, ಗಂಗಾ-ಜ���ುನಾ ನದಿಗಳಂತೂ ಅವೇ ಆಗಿದೆ. ಅದರಲ್ಲಿ ಶವಗಳನ್ನೂ ಸಹ ಹಾಕುತ್ತಾರೆ.
|
2 |
+
ಈಗ ನೀವು ಮಕ್ಕಳು ಆತ್ಮಿಕ ಯಾತ್ರೆಯಲ್ಲಿರಬೇಕಾಗಿದೆ, ನಾವೀಗ ಮನೆಗೆ ಹೋಗುತ್ತೇವೆ. ಇದಕ್ಕಾಗಿ ಇಲ್ಲಿ ಗಂಗಾ ಸ್ನಾನ ಮಾಡುವ ಅಥವಾ ಶಾಸ್ತ್ರಗಳನ್ನು ಓದುವ ಮಾತಿಲ್ಲ. ತಂದೆಯು ಒಂದೇ ಬಾರಿ ಬರುತ್ತಾರೆ. ಇಡೀ ಪ್ರಪಂಚವೂ ಸಹ ಒಂದೇ ಬಾರಿ ಪಾವನವಾಗುತ್ತದೆ. ಇದನ್ನೂ ತಿಳಿದುಕೊಂಡಿದ್ದೀರಿ - ಸತ್ಯಯುಗವು ಹೊಸ ಪ್ರಪಂಚ, ಕಲಿಯುಗವು ಹಳೆಯ ಪ್ರಪಂಚವಾಗಿದೆ. ತಂದೆಯು ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶ ಮಾಡಲು ಅವಶ್ಯವಾಗಿ ಬರಬೇಕಾಗುತ್ತದೆ. ಇದು ಅವರದೇ ಕರ್ತವ್ಯವಾಗಿದೆ ಆದರೆ ಮಾಯೆಯು ಇಷ್ಟು ತಮೋಪ್ರಧಾನ ಬುದ್ಧಿಯವರನ್ನಾಗಿ ಮಾಡಿ ಬಿಟ್ಟಿದೆ, ಅವರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಪ್ರದರ್ಶನಿಯಲ್ಲಿ ಎಷ್ಟು ಮಂದಿ ಬರುತ್ತಾರೆ, ಸನ್ಯಾಸಿಗಳೂ ಸಹ ಬರುತ್ತಾರೆ ಆದರೂ ಕೋಟಿಯಲ್ಲಿ ಕೆಲವರೇ ತಿಳಿದುಕೊಳ್ಳುತ್ತಾರೆ. ನೀವು ಲಕ್ಷಾಂತರ, ಕೋಟ್ಯಾಂತರ ಜನರಿಗೆ ತಿಳಿಸುತ್ತೀರಿ ಆದರೂ ಕೆಲವರೇ ವಿರಳ ಬರುತ್ತಾರೆ. ಅನೇಕರಿಗೆ ತಿಳಿಸಬೇಕಾಗುವುದು. ಕೊನೆಗೆ ನಿಮ್ಮ ಈ ಜ್ಞಾನ ಮತ್ತು ಚಿತ್ರಗಳೆಲ್ಲವೂ ಪತ್ರಿಕೆಗಳಲ್ಲಿ ಬರುತ್ತವೆ, ಏಣಿಯ ಚಿತ್ರವೂ ಬರುತ್ತದೆ. ಇದಂತೂ ಭಾರತಕ್ಕಾಗಿ ಇದೆ, ಅನ್ಯ ಧರ್ಮದವರು ಎಲ್ಲಿ ಹೋಗುತ್ತಾರೆ ಎಂದು ಕೇಳುತ್ತಾರೆ, ಅಂತಿಮ ಸಮಯವೆಂದೂ ಗಾಯನವಿದೆ. ಅಂತಿಮ ಅರ್ಥಾತ್ ಹಿಂತಿರುಗಿ ಹೋಗುವ ಸಮಯವಾಗಿದೆ. ಹಳೆಯ ಪ್ರಪಂಚದ ವಿನಾಶ, ಹೊಸ ಪ್ರಪಂಚದ ಸ್ಥಾಪನೆಯಾಗುವುದು. ಅಂದಮೇಲೆ ಅವಶ್ಯವಾಗಿ ಎಲ್ಲರೂ ಹಿಂತಿರುಗಿ ಹೋಗುತ್ತಾರಲ್ಲವೆ, ಎಲ್ಲರ ವಿನಾಶವಾಗಲಿದೆ. ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ. ಈ ಮಾತುಗಳನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ನೀವು ತಿಳಿದುಕೊಂಡಿದ್ದೀರಿ - ನರಕವಾಸಿಗಳ ವಿನಾಶ, ಸ್ವರ್ಗವಾಸಿಗಳ ಸ್ಥಾಪನೆಯಾಗುತ್ತಿದೆ, ಕಲ್ಪ-ಕಲ್ಪವೂ ಇದೇ ರೀತಿ ಆಗುತ್ತದೆ. ಈಗ ಇರುವ ಸ್ವಲ್ಪವೇ ಸಮಯದಲ್ಲಿಯೂ ಅನೇಕರಿಗೆ ಈ ಜ್ಞಾನವು ಸಿಗುತ್ತಾ ಹೋಗುವುದು. ಮೇಳಗಳೂ ಆಗುತ್ತಾ ಇರುತ್ತವೆ. ಎಲ್ಲಾ ಕಡೆಯಿಂದ ನಾವು ಮೇಳ ಮಾಡಿದೆವು, ಪ್ರದರ್ಶನಿ ಇಟ್ಟಿದ್ದೆವು ಎಂದು ಪತ್ರ ಬರೆಯುತ್ತಾ ಇರುತ್ತಾರೆ ಆದರೆ ಅದರ ಜೊತೆ ಜೊತೆಗೆ ತಮ್ಮ ನೆನಪಿನ ಯಾತ್ರೆಯನ್ನೂ ಮರೆಯಬಾರದು. ಮಕ್ಕಳು ಬಹಳ ತಣ್ಣಗೆ ನಡೆಯುತ್ತಿದ್ದಾರೆ, ನೆನಪಿನ ಯಾತ್ರೆ ಈ ರೀತಿ ಮಾಡುತ್ತಾರೆ ಹೇಗೆ ವೃದ್ಧರು ಮಾಡಿದಂತೆ. ಶಕ್ತಿಯೇ ಇಲ್ಲವೇನೋ, ಏನೂ ತಿಂದಿಲ್ಲವೆನ್ನುವಂತೆ ಯಾತ್ರೆ ಮಾಡುತ್ತಾರೆ. ತಂದೆಗೆ ಎಷ್ಟೊಂದು ವಿಚಾರವು ನಡೆಯುತ್ತಿರುತ್ತದೆ. ವಿಚಾರ ಮಾಡುತ್ತಾ-ಮಾಡುತ್ತಾ ನಿದ್ರೆಯೇ ಹೊರಟು ಹೋಗುತ್ತದೆ. ವಿಚಾರ ಸಾಗರ ಮಂಥನವನ್ನು ಎಲ್ಲರೂ ಮಾಡಬೇಕಲ್ಲವೇ. ನಮಗೆ ಬೇಹದ್ದಿನ ತಂದೆಯು ಓದಿಸುತ್ತಾರೆಂದು ಮಕ್ಕಳಿಗೇ ತಿಳಿದಿದೆ ಅಂದಮೇಲೆ ಎಷ್ಟು ಅಪಾರ ಖುಷಿಯಿರಬೇಕು - ಈ ವಿದ್ಯೆಯಿಂದ ನಾವು ವಿಶ್ವದ ಮಾಲೀಕರಾಗುತ್ತೇವೆ. ಕೆಲಕೆಲವರ ಚಲನೆಯು ಈ ರೀತಿಯಿದೆ ಹೇಗೆ ಏಡಿಯಿದ್ದಂತೆ. ಏಡಿಗಳನ್ನು ತಂದೆಯು ದೇವತೆಗಳನ್ನಾಗಿ ಮಾಡುತ್ತಾರೆ ಆದರೂ ಸಹ ಕೆಲವರ ನಡವಳಿಕೆಯು ಸುಧಾರಣೆಯಾಗುವುದೇ ಇಲ್ಲ. ಈ ಏಣಿಯ ಚಿತ್ರದಲ್ಲಿ ಬಹಳ ಒಳ್ಳೆಯ ಜ್ಞಾನವಿದೆ, ಆದರೆ ಮಕ್ಕಳು ಇಷ್ಟು ಕೆಲಸವನ್ನೂ ಮಾಡುವುದಿಲ್ಲ. ಯಾತ್ರೆಯನ್ನೇ ಮಾಡುವುದಿಲ್ಲ, ತಂದೆಯನ್ನು ನೆನಪು ಮಾಡಿದರೆ ಬುದ್ಧಿಯ ಬೀಗವು ತೆರೆಯುವುದು. ಸತೋಪ್ರಧಾನ ಬುದ್ಧಿಯಾಗುತ್ತಾ ಹೋಗುವುದು. ನೀವು ಮಕ್ಕಳದು ಪಾರಸ ಬುದ್ಧಿಯಾಗಬೇಕು, ಅನೇಕರ ಕಲ್ಯಾಣ ಮಾಡಬೇಕು, ನೀವು ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೀರಿ, ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ ಆದ್ದರಿಂದ ನನ್ನನ್ನು ನೆನಪು ಮಾಡಿರಿ. ಕೃಷ್ಣನಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ, ಅವನಿಗೆ ಶ್ಯಾಮಸುಂದರನೆಂದು ಹೇಳುತ್ತಾರೆ. ತಂದೆಯು ಶ್ಯಾಮನಾದ ಆತ್ಮನಿಗೆ ಕುಳಿತು ತಿಳಿಸುತ್ತಾರೆ. ನನ್ನನ್ನು ತಂದೆಯು ವಿಶ್ವದ ಮಾಲೀಕನನ್ನಾಗಿ ಮಾಡುತ್ತಾರೆಂದು ಈ ಆತ್ಮಕ್ಕೆ ಗೊತ್ತಿದೆ, ಅಂದಮೇಲೆ ಬುದ್ಧಿಯು ಎಷ್ಟೊಂದು ಖುಷಿಯಲ್ಲಿ ತುಂಬಿರಬೇಕು. ಇದರಲ್ಲಿ ಯಾವುದೇ ಅಹಂಕಾರದ ಮಾತಿಲ್ಲ. ತಂದೆಯು ಎಷ್ಟು ನಿರಹಂಕಾರಿಯಾಗಿದೆ. ಬುದ್ಧಿಯಲ್ಲಿ ಎಷ್ಟೊಂದು ಖುಷಿಯಿರುತ್ತದೆ, ನಾಳೆ ನಾವು ವಜ್ರ ವೈಡೂರ್ಯಗಳ ಮಹಲುಗಳನ್ನು ಕಟ್ಟಿಸುತ್ತೇವೆ. ಹೊಸ ಪ್ರಪಂಚದಲ್ಲಿ ರಾಜ್ಯಭಾರವನ್ನು ನಡೆಸುತ್ತೇವೆ. ಇದಂತೂ ಸಂಪೂರ್ಣ ಪತಿತ ಪ್ರಪಂಚವಾಗಿದೆ. ಈ ಪ್ರಪಂಚದ ಮನುಷ್ಯರು ಏನೂ ಪ್ರಯೋಜನಕ್ಕಿಲ್ಲ. ಏನನ್ನೂ ತಿಳಿದುಕೊಂಡಿಲ್ಲ. ಇದನ್ನೂ ತೋರಿಸಬೇಕು - ವಜ್ರ ಸಮಾನ ಜೀವನವಿತ್ತು, ಅವರೇ ನಂತರ 84 ಜನ್ಮಗಳನ್ನು ತೆಗೆದುಕೊಂಡು ಕವಡೆಯಂತೆ ಆಗಿಬಿಡುತ್ತಾರೆ. ಈ ಏಣಿಯ ಚಿತ್ರವು ನಂಬರ್ವನ್ ಆಗಿದೆ ನಂತರ ಎರಡನೆಯದಾಗಿ ತ್ರಿಮೂರ್ತಿ ಚಿತ್ರವಿದೆ.
|
3 |
+
ನಿಕಟ ಭವಿಷ್ಯದಲ್ಲಿ ಶ್ರೇಷ್ಠಾಚಾರಿ ಭಾರತವಾಗಿ ಬಿಡುವುದು, ಶ್ರೇಷ್ಠಾಚಾರಿ ಪ್ರಪಂಚದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ ಎಂದು ನೀವು ಹೇಳುತ್ತೀರಿ. ಈಗ ಎಷ್ಟೊಂದು ಜನಸಂಖ್ಯೆಯಿದೆ! ಮಹಾಭಾರತ ಯುದ್ಧವೂ ಸನ್ಮುಖದಲ್ಲಿದೆ. ಎಲ್ಲಾ ಆತ್ಮರು ಸೊಳ್ಳೆಗಳ ರೀತಿಯಲ್ಲಿ ಹೋಗುವರು. ಬೆಂಕಿಯು ಹತ್ತಿಕೊಳ್ಳುತ್ತಿದೆ. ಎಷ್ಟು ಸುಧಾರಣೆ ಮಾಡಲು ಪ್ರಯತ್ನ ಪಡುವರೋ ಅಷ್ಟೇ ಶತ್ರುಗಳಾಗುತ್ತಾ ಹೋಗುತ್ತಾರೆ. ತಂದೆಯು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಮಕ್ಕಳಿಗೆ ಎಷ್ಟೊಂದು ನಶೆ ತರಿಸುತ್ತಾರೆ. ಕೆಲಕೆಲವರಂತೂ ಇಲ್ಲಿಂದ ಹೋಗುತ್ತಿದ್ದಂತೆಯೇ ಇಡೀ ಜ್ಞಾನವು ಹಾರಿ ಹೋಗುತ್ತದೆ. ಸ್ಮೃತಿಯೇನೂ ಇರುವುದಿಲ್ಲ, ಇಲ್ಲದಿದ್ದರೆ ನಾವು ಹೋಗಿ ಸರ್ವೀಸ್ ಮಾಡಬೇಕೆಂಬ ಎಷ್ಟೊಂದು ಉಮ್ಮಂಗವಿರಬೇಕು! ತಂದೆಯೂ ಸಹ ಗುಣವನ್ನು ನೋಡಿ ಸರ್ವೀಸಿಗೆ ಕಳುಹಿಸುತ್ತಾರಲ್ಲವೇ. ಇದರಲ್ಲಿ ಬಹಳ ಹರ್ಷಿತರಾಗಿರುತ್ತಾರೆ, ಸರ್ವೀಸಿನಲ್ಲಿ ಖುಷಿಯಿರುತ್ತದೆ. ಒಳ್ಳೊಳ್ಳೆಯ ಹಳೆಯ ಮಕ್ಕ���ು ಪರಸ್ಪರ ಚಿಕ್ಕ ಚಿಕ್ಕ ಮಾತಿಗೆ ಮುನಿಸಿಕೊಳ್ಳುತ್ತಾರೆ, ಈ ಮಾತುಗಳ ಕಾರಣ ನೀವು ಸರ್ವೀಸನ್ನು ಬಿಡುವುದೇ? ಸರ್ವೀಸನ್ನು ಖುಷಿಯಿಂದ ಮಾಡಬೇಕಾಗಿದೆ. ಯಾರ ಜೊತೆ ಆಗುವುದಿಲ್ಲವೋ ಅವರ ಮುಖವನ್ನು ನೋಡುತ್ತಿದ್ದಂತೆಯೇ ಸರ್ವೀಸಿನ ವಿಚಾರವೇ ಹಾರಿ ಹೋಗುತ್ತದೆ. ಸರ್ವೀಸಿನಲ್ಲಿ ಮನಸ್ಸಾಗದಿದ್ದರೆ ದೂರ ಸರಿಯುತ್ತಾರೆ. ಅಂದಮೇಲೆ ಅಂತಹ ಜ್ಞಾನಿಗಳು ಮತ್ತು ಅಜ್ಞಾನಿಗಳಲ್ಲಿ ಯಾವುದೇ ಅಂತರವಿಲ್ಲ. ದೇಹಾಭಿಮಾನದ ಗ್ರಹಚಾರವು ಬಂದು ಕುಳಿತುಕೊಳ್ಳುತ್ತದೆ. ಇದು ಮೊದಲನೇ ನಂಬರಿನ ಕಾಯಿಲೆಯಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಯಾಗಿರಿ. ಆತ್ಮವೇ ಎಲ್ಲವನ್ನೂ ಮಾಡುತ್ತದೆಯಲ್ಲವೇ. ಆತ್ಮವೇ ವಿಕಾರಿ ಮತ್ತು ನಿರ್ವಿಕಾರಿಯಾಗುತ್ತದೆ. ಸ್ವರ್ಗದಲ್ಲಿ ನಿರ್ವಿಕಾರಿಯಾಗಿತ್ತು, ರಾವಣ ರಾಜ್ಯದಲ್ಲಿ ಆತ್ಮವೇ ವಿಕಾರಿಯಾಗಿದೆ. ಇದೂ ಸಹ ಡ್ರಾಮಾದಲ್ಲಿ ಹೀಗೆ ಮಾಡಲ್ಪಟ್ಟಿದೆ, ಆದ್ದರಿಂದ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಯಾರು ನಿರ್ವಿಕಾರಿಯಾಗಿದ್ದರೋ ಅವರೇ ಪತಿತ, ವಿಕಾರಿಯಾಗಿದ್ದಾರೆ. ನಾವೇ ನಿರ್ವಿಕಾರಿಯಾಗಿದ್ದೆವು, ಈಗ ವಿಕಾರಿಯಾಗಿದ್ದೇವೆ. ನಾವಾತ್ಮರು ಮೂಲವತನದ ನಿವಾಸಿಗಳಾಗಿದ್ದೇವೆ, ಅಲ್ಲಿ ನಾವು ನಿರ್ವಿಕಾರಿಯಾಗಿರುತ್ತೇವೆ. ಇಲ್ಲಿ ಶರೀರದಲ್ಲಿ ಬಂದು ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ವಿಕಾರಿಯಾಗಿದ್ದೇವೆ ಎಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ, ಇದನ್ನು ತಂದೆಯೇ ತಿಳಿಸುತ್ತಾರೆ. ಆತ್ಮವು ಶಾಂತಿಧಾಮದಿಂದ ಬಂದಾಗ ಅವಶ್ಯವಾಗಿ ಪವಿತ್ರವಾಗಿರುತ್ತದೆ ನಂತರ ಅಪವಿತ್ರವಾಗಿದೆ. ಪವಿತ್ರ ಪ್ರಪಂಚದಲ್ಲಿ 9 ಲಕ್ಷ ಜನಸಂಖ್ಯೆಯಿರುತ್ತದೆ ಅಂದಮೇಲೆ ಇಷ್ಟೊಂದು ಆತ್ಮರು ಎಲ್ಲಿಂದ ಬಂದರು? ಅವಶ್ಯವಾಗಿ ಶಾಂತಿಧಾಮದಿಂದಲೇ ಬಂದಿರುವರು. ಅದು ನಿರಾಕಾರಿ ಪ್ರಪಂಚವಾಗಿದೆ, ಅಲ್ಲಿ ಎಲ್ಲಾ ಆತ್ಮರು ಪವಿತ್ರವಾಗಿರುತ್ತಾರೆ ನಂತರ ಪಾತ್ರವನ್ನಭಿನಯಿಸುತ್ತಾ ಅಭಿನಯಿಸುತ್ತಾ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಪಾವನರಿಂದ ಪತಿತರಾಗುವರು. ಮತ್ತೆ ತಂದೆಯು ಬಂದು ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರೆ, ಈ ನಾಟಕವು ನಡೆಯುತ್ತಲೇ ಇರುತ್ತದೆ. ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಆ ತಂದೆಯನ್ನು ಯಾರೂ ಅರಿತುಕೊಂಡಿಲ್ಲ. ಋಷಿ-ಮುನಿಗಳೂ ಸಹ ನಮಗೂ ಗೊತ್ತಿಲ್ಲವೆಂದು ಹೇಳಿ ಹೋದರು. ನಾವು ಭಗವಂತನನ್ನು ಮತ್ತು ಅವರ ರಚನೆಯನ್ನು ತಿಳಿದುಕೊಂಡಿಲ್ಲ ಎಂದು ಹೇಳುತ್ತಾರೆ. ಮತ್ತೆ ಪರಮಾತ್ಮನು ಜ್ಞಾನಪೂರ್ಣ ಎಂಬುದನ್ನೂ ಹೇಳುತ್ತಾರೆ, ಅವರು ಸರ್ವ ಆತ್ಮರ ತಂದೆ ಬೀಜ ರೂಪನಾಗಿದ್ದಾರೆ, ಅವರು ಆತ್ಮರ ಬೀಜ ರೂಪನಾಗಿದ್ದಾರೆ ಮತ್ತು ಪ್ರಜಾಪಿತನು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ. ಆ ನಿರಾಕಾರ ತಂದೆಯು ಇವರಲ್ಲಿ ಪ್ರವೇಶ ಮಾಡಿ ಮನುಷ್ಯರಿಗೆ ತಿಳಿಸುತ್ತಾರೆ, ಅವರಿಗೆ ಮನುಷ್ಯ ಸೃಷ್ಟಿಯ ಬೀಜರೂಪನೆಂದು ಹೇಳುವುದಿಲ್ಲ, ಅವರು ಆತ್ಮರ ಪಿತನಾಗಿದ್ದಾರೆ ಮತ್ತು ಈ ಬ್ರಹ್ಮಾರವರು ಮನುಷ್ಯ ಸೃಷ್ಟಿಯ ಪ್ರಜಾಪಿತನಾಗಿದ್ದಾರೆ. ಅವರ ಮೂಲಕ ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ. ಶರೀರವೇ ಬೇರೆ, ಆತ್ಮವೇ ಬೇರೆಯಾಗಿದೆಯಲ್ಲವೇ. ಮನ-ಬುದ್ಧಿಯು ಆತ್ಮದಲ್ಲಿಯೇ ಇದೆ, ಆತ್ಮವೇ ಬಂದು ಪಾತ್ರವನ್ನು ಅಭಿನಯಿಸಲು ಶರೀರದಲ್ಲಿ ಪ್ರವೇಶ ಮಾಡುತ್ತದೆ.
|
4 |
+
ನೀವು ತಿಳಿದುಕೊಂಡಿದ್ದೀರಿ - ಯಾರಾದರೂ ಶರೀರ ಬಿಡುತ್ತಾರೆಂದರೆ ಹೋಗಿ ಇನ್ನೊಂದು ಪಾತ್ರವನ್ನು ಅಭಿನಯಿಸುತ್ತಾರೆ. ಇದರಲ್ಲಿ ಅಳುವುದರಿಂದ ಏನಾಗುವುದು! ಅವರು ಹೊರಟು ಹೋದರು ಅಂದಮೇಲೆ ಅವರು ಬಂದು ನಮ್ಮ ಚಿಕ್ಕಪ್ಪ, ದೊಡ್ಡಪ್ಪ, ಮಾವನಾಗುವರೇ? ಅಳುವುದರಿಂದ ಏನು ಲಾಭ! ಮಮ್ಮಾರವರೂ ಹೋದರು, ಡ್ರಾಮಾನುಸಾರ ಪಾತ್ರವನ್ನಭಿನಯಿಸುತ್ತಿದ್ದಾರೆ. ಹೀಗೆ ಅನೇಕರು ಹೋಗುತ್ತಾರೆ. ಎಲ್ಲಿಗೆ ಹೋಗಿ ಜನ್ಮ ತೆಗೆದುಕೊಳ್ಳುತ್ತಾರೆ. ಇದರಿಂದ ಅರ್ಥವಾಗುತ್ತದೆ - ಎಂತೆಂತಹ ಆಜ್ಞಾಕಾರಿ ಮಗುವಾಗಿರುವರೋ ಅಷ್ಟು ಒಳ್ಳೆಯ ಮನೆಯಲ್ಲಿ ಹೋಗಿ ಜನ್ಮ ಪಡೆಯುವರು. ಇಲ್ಲಿನವರು ಒಳ್ಳೆಯ ಮನೆಯಲ್ಲಿಯೇ ಹೋಗಿ ಜನ್ಮ ಪಡೆಯುತ್ತಾರೆ. ನಂಬರ್ವಾರಂತೂ ಇರುತ್ತಾರಲ್ಲವೆ. ಯಾರು ಯಾವ ಕರ್ಮವನ್ನು ಮಾಡುತ್ತಾರೆಯೋ ಅಂತಹ ಮನೆಯಲ್ಲಿ ಹೋಗುತ್ತಾರೆ. ಕೊನೆಯಲ್ಲಿ ನೀವು ಹೋಗಿ ರಾಜಧಾನಿಯಲ್ಲಿ ಜನ್ಮ ತೆಗೆದುಕೊಳ್ಳುತ್ತೀರಿ. ಯಾರು ರಾಜರ ಬಳಿ ಹೋಗುತ್ತಾರೆ ಎಂಬುದನ್ನು ಸ್ವಯಂ ತಿಳಿದುಕೊಳ್ಳಬಹುದು. ದೈವೀ ಸಂಸ್ಕಾರವನ್ನಂತೂ ತೆಗೆದುಕೊಂಡು ಹೋಗುತ್ತಾರಲ್ಲವೆ. ಇದರಲ್ಲಿ ಬಹಳ ವಿಶಾಲ ಬುದ್ಧಿಯಿಂದ ವಿಚಾರ ಸಾಗರ ಮಂಥನ ಮಾಡಲಾಗುತ್ತದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಮಕ್ಕಳೂ ಸಹ ಜ್ಞಾನ ಸಾಗರ ಆಗಬೇಕಾಗಿದೆ. ನಂಬರ್ವಾರಂತೂ ಇರುತ್ತಾರೆ. ಮುಂದೆ ಹೋದಂತೆ ಉನ್ನತಿಯಾಗುತ್ತಾ ಹೋಗುತ್ತಾರೆ ಎಂದು ತಿಳಿದುಕೊಳ್ಳಲಾಗುತ್ತದೆ. ಯಾರು ಇಂದು ಕೆಲಸ ಮಾಡುವುದಿಲ್ಲವೋ ಅವರೇ ನಾಳೆ ಎಲ್ಲರಿಗಿಂತಲೂ ತೀಕ್ಷ್ಣವಾಗಿ ಹೋಗಬಹುದು, ಅವರ ಗ್ರಹಚಾರವು ಕಳೆಯಬಹುದು. ಯಾರ ಮೇಲಾದರೂ ರಾಹುವಿನ ಗ್ರಹಚಾರ ಕುಳಿತುಕೊಳ್ಳುತ್ತದೆಯೆಂದರೆ ಅಂತಹವರು ಗುಣಿಗೆ ಬೀಳುತ್ತಾರೆ, ಮೂಳೆಗಳು ಪುಡಿ ಪುಡಿಯಾಗುತ್ತವೆ. ಬೇಹದ್ದಿನ ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ ನಂತರ ಬೀಳುತ್ತಾರೆಂದರೆ, ಧರ್ಮರಾಜನಿಂದ ಬಹಳ ಶಿಕ್ಷೆಗಳು ಬೀಳುತ್ತವೆ. ಇವರು ಬೇಹದ್ದಿನ ತಂದೆ, ಬೇಹದ್ದಿನ ಧರ್ಮರಾಜನಾಗಿದ್ದಾರೆ ಅಂದಮೇಲೆ ಬೇಹದ್ದಿನ ಶಿಕ್ಷೆ ಸಿಗುತ್ತದೆ. ಯಾವುದೇ ಮಾತಿನಲ್ಲಿ ನೆಪ ಹೇಳಿದರೆ ಅಥವಾ ಉಲ್ಟಾ ಕೆಲಸ ಮಾಡಿದರೆ ಅವಶ್ಯವಾಗಿ ಶಿಕ್ಷೆಯನ್ನು ಅನುಭವಿಸುತ್ತಾರೆ. ಇಷ್ಟೆಲ್ಲಾ ಮಾತುಗಳನ್ನು ತಂದೆಯು ತಿಳಿಸಿದರೂ ಸಹ ನಾವು ತಂದೆಯ ಉಲ್ಲಂಘನೆ ಮಾಡುತ್ತೇವೆ ಎಂಬುದನ್ನೇ ಅರ್ಥ ಮಾಡಿಕೊಳ್ಳುವುದಿಲ್ಲ. ಶ್ರೀಮತದಂತೆ ನಡೆಯಿರಿ, ಸೇವೆಯಲ್ಲಿ ಸಹಯೋಗಿಗಳಾಗಿರಿ, ನೆನಪಿನ ಯಾತ್ರೆಯಲ್���ಿರಿ, ಚಿತ್ರಗಳಲ್ಲಿ ತಿಳಿಸುವ ಅಭ್ಯಾಸ ಮಾಡುತ್ತೀರೆಂದರೆ ಅದೇ ಹವ್ಯಾಸವಾಗಿ ಬಿಡುವುದು ಇಲ್ಲವೆಂದರೆ ಶ್ರೇಷ್ಠ ಪದವಿ ಹೇಗೆ ಸಿಗುವುದು? ಲೌಕಿಕದಲ್ಲಿ ಕೆಲ ಮಕ್ಕಳು ಸುಪುತ್ರರಾಗಿರುತ್ತಾರೆ, ಇನ್ನೂ ಕೆಲವರು ಕುಪುತ್ರರಾಗಿರುತ್ತಾರೆ. ಇಲ್ಲಿಯೂ ಸಹ ಕೆಲವರು ಕೂಡಲೇ ತಂದೆಯ ಸೇವೆಯನ್ನು ಮಾಡಿ ತೋರಿಸುತ್ತಾರೆ. ಆದ್ದರಿಂದ ಮಕ್ಕಳು ಬೇಹದ್ದಿನ ಸರ್ವೀಸ್ ಮಾಡಬೇಕಾಗಿದೆ, ಬೇಹದ್ದಿನ ಆತ್ಮರ ಕಲ್ಯಾಣ ಮಾಡಬೇಕಾಗಿದೆ. ಮನ್ಮನಾಭವದ ಸಂದೇಶ ಕೊಡಬೇಕಾಗಿದೆ - ತಂದೆಯನ್ನು ನೆನಪು ಮಾಡಿದರೆ ನಿಮ್ಮ ಬುದ್ಧಿಯು ತಮೋಪ್ರಧಾನದಿಂದ ಸತೋಪ್ರಧಾನವಾಗಿ ಬಿಡುತ್ತದೆ. ಈಗ ಕಲಿಯುಗೀ ತಮೋಪ್ರಧಾನ ಪ್ರಪಂಚದ ಅಂತ್ಯವಾಗಿದೆ, ಈಗ ಸತೋಪ್ರಧಾನರಾಗಬೇಕಾಗಿದೆ. ಆತ್ಮರದು ಅಲ್ಲಿ ನಂಬರ್ವಾರ್ ಪ್ರಪಂಚವಲ್ಲವೇ. ಅವರು ನಂಬರ್ವಾರ್ ಆಗಿ ಬಂದು ಪಾತ್ರವನ್ನು ಅಭಿನಯಿಸುತ್ತಾರೆ. ಬರುವುದೂ ಸಹ ನಂಬರ್ವಾರ್ ಡ್ರಾಮಾನುಸಾರ. ಈಗ ಎಲ್ಲಾ ಆತ್ಮರು ರಾವಣ ರಾಜ್ಯದಲ್ಲಿ ದುಃಖಿಯಾಗಿದ್ದಾರೆ ಆದರೂ ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ನೀವು ಪತಿತರಾಗಿದ್ದೀರಿ ಎಂದು ಯಾರಿಗಾದರೂ ಹೇಳಿದರೆ ಕೋಪಿಸಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಇದು ವಿಕಾರಿ ಪ್ರಪಂಚವಾಗಿದೆ, ನೀವು ತಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವಿರಿ. ಉಳಿದೆಲ್ಲರೂ ವಿನಾಶವಾಗಿ ಹಿಂತಿರುಗಿ ಹೊರಟು ಹೋಗುವರು. ಮಹಾಭಾರತ ಯುದ್ಧವಾಗುವುದು. ಇದರಿಂದ ಎಲ್ಲಾ ಆತ್ಮಗಳೂ ಸಮಾಪ್ತಿಯಾಗಿ ಒಂದು ಧರ್ಮ ಉಳಿಯುವುದೆಂದು ಗಾಯನವಿದೆ, ಈ ಯುದ್ಧದ ನಂತರವೇ ಸ್ವರ್ಗದ ಬಾಗಿಲು ತೆರೆಯುತ್ತದೆ. ಮಕ್ಕಳಿಗೆ ಎಷ್ಟು ಚೆನ್ನಾಗಿ ತಿಳಿಸುತ್ತಾರೆ, ಮುಂದೆ ಹೋದಂತೆ ನಿಮ್ಮ ಮಾತುಗಳನ್ನು ಅನೇಕರು ಕೇಳುತ್ತಾ ಇರುತ್ತಾರೆ, ಬರತೊಡಗುತ್ತಾರೆ. ಸೂರ್ಯವಂಶಿ ಚಂದ್ರವಂಶಿಯರು ಯಾರು ಪತಿತರಾಗಿ ಬಿಟ್ಟಿದ್ದಾರೆಯೋ ಅವರೇ ಬಂದು ನಂಬರ್ವಾರ್ ತಮ್ಮ ಆಸ್ತಿಯನ್ನು ತೆಗೆದುಕೊಳ್ಳುವರು. ಪ್ರಜೆಗಳಂತೂ ಬಹಳ ಮಂದಿ ಆಗುವರು. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ಎಂದೂ ಸಹ ಭಗವಂತನ ಆಜ್ಞೆಗಳ ಉಲ್ಲಂಘನೆ ಮಾಡಬಾರದು. ಬೇಹದ್ದಿನ ಸೇವೆಯಲ್ಲಿ ಸುಪುತ್ರ ಮಕ್ಕಳಾಗಿ ಸಹಯೋಗಿಗಳಾಗಬೇಕಾಗಿದೆ.
|
8 |
+
2. ಜ್ಞಾನ ಧನದ ಗುಪ್ತ ಖುಷಿಯಿಂದ ಬುದ್ಧಿಯನ್ನು ಸಂಪನ್ನವಾಗಿ ಇಟ್ಟುಕೊಳ್ಳಬೇಕಾಗಿದೆ, ಪರಸ್ಪರ ಎಂದೂ ಮುನಿಸಿಕೊಳ್ಳಬಾರದು.
|
BKMurli/BKMurli/page_1035.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳು ಹೇಳುತ್ತಾರೆ - ಯಾರಾದರೂ ನಮ್ಮನ್ನು ಸಂಶಯ ಬುದ್ಧಿಯವರನ್ನಾಗಿ ಮಾಡಲು ಏನಾದರೂ ಮಾಡಲಿ ಆದರೆ ನಾವು ಸಂಶಯ ಬುದ್ಧಿಯವರಾಗುವುದಿಲ್ಲ, ಭಲೆ ಎಷ್ಟೇ ಉಲ್ಟಾ ಸುಲ್ಟಾ ಮಾತುಗಳನ್ನು ತಿಳಿಸಿದರೂ ಸಹ ಸಂಶಯ ಬುದ್ಧಿಯವರಾಗುವುದಿಲ್ಲ, ಶ್ರೀಮತದಂತೆ ನಡೆಯುತ್ತಾ ಇರುತ್ತೇವೆ. ತಂದೆಯು ಪ್ರತಿನಿತ್ಯವೂ ಭಿನ್ನ-ಭಿನ್ನ ಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ಸತ್ಯಯುಗದಲ್ಲಿ 9 ಲಕ್ಷ ಜನಸಂಖ್ಯೆಯಿತ್ತು ಅಂದಮೇಲೆ ಉಳಿದ ಇಷ್ಟೆಲ್ಲಾ ಮನುಷ್ಯರು ವಿನಾಶವಾಗುತ್ತಾರೆ. ಯಾರು ಬುದ್ಧಿವಂತರಾಗಿರುವರೋ ಅವರು ಸನ್ನೆಯಿಂದಲೇ ತಿಳಿದುಕೊಳ್ಳುವರು. ಅವಶ್ಯವಾಗಿ ಈ ಯುದ್ಧದಿಂದಲೇ ಅನೇಕ ಧರ್ಮಗಳು ವಿನಾಶವಾಗಿ ಒಂದು ದೇವಿ-ದೇವತಾ ಧರ್ಮದ ಸ್ಥಾಪನೆಯಾಗುವುದು. ಯಾರು ಯೋಗ್ಯರಾಗುವರೋ ಅವರೇ ಮನುಷ್ಯರಿಂದ ದೇವತೆಯಾಗುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಮನುಷ್ಯರಿಂದ ದೇವತೆಯನ್ನಾಗಿ ಮಾಡಲು ಸಾಧ್ಯವಿಲ್ಲ ಅಂದಮೇಲೆ ಮಕ್ಕಳಿಗೆ ನಾವೀಗ ಮನೆಗೆ ಹೋಗಬೇಕೆಂದು ನೆನಪಿರಬೇಕು ಆದರೆ ಮಾಯೆಯು ಪದೇ ಪದೇ ಮರೆಸುತ್ತದೆ. ಇಲ್ಲಿಯೇ ತಂದೆಯನ್ನು ನೆನಪು ಮಾಡಿ ಸತೋಪ್ರಧಾನರಾಗಬೇಕಾಗಿದೆ, ಯಾವ ಸಮಯದಲ್ಲಾದರೂ ಯುದ್ಧವು ಹೆಚ್ಚಾಗಬಹುದು. ಇದಕ್ಕೆ ನಿಯಮವಿದೆಯೇ? ಬಹುಷಃ ದೊಡ್ಡ ಯುದ್ಧವು ನಿಲ್ಲದೇ ಇರುವಷ್ಟು ಹೆಚ್ಚಾಗಬಹುದು ಎಂಬುದನ್ನೂ ಹೇಳುತ್ತಾರೆ. ಎಲ್ಲರೂ ಪರಸ್ಪರ ಹೊಡೆದಾಡತೊಡಗುತ್ತಾರೆ ಅಂದಮೇಲೆ ನಾವು ವಿನಾಶಕ್ಕೆ ಮೊದಲೇ ತಂದೆಯ ನೆನಪಿನಲ್ಲಿದ್ದು ತಮೋಪ್ರಧಾನರಿಂದ ಸತೋಪ್ರಧಾನರಾಗುವ ಪುರುಷಾರ್ಥವನ್ನೇಕೆ ಮಾಡಬಾರದು! ನೆನಪಿನ ಯಾತ್ರೆಯಲ್ಲಿಯೇ ಮಾಯೆಯು ವಿಘ್ನ ಹಾಕುತ್ತದೆ. ಆದ್ದರಿಂದ ತಂದೆಯು ಪ್ರತೀ ದಿನ ಚಾರ್ಟ್ ಬರೆಯಿರಿ ಎಂದು ಹೇಳುತ್ತಾರೆ, ಆದರೆ ಕೇವಲ 2-4 ಮಂದಿಯಷ್ಟೇ ಬರೆಯುತ್ತಾರೆ. ಉಳಿದವರಂತೂ ತಮ್ಮ ಉದ್ಯೋಗ-ವ್ಯವಹಾರಗಳಲ್ಲಿಯೇ ಇಡೀ ದಿನ ಮುಳುಗಿರುತ್ತಾರೆ. ಅನೇಕ ಪ್ರಕಾರದ ವಿಘ್ನಗಳಲ್ಲಿ ಸಿಲುಕಿರುತ್ತಾರೆ. ಮಕ್ಕಳಿಗೆ ಇದಂತೂ ತಿಳಿದಿದೆ - ನಾವು ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ ಅಂದಮೇಲೆ ಎಲ್ಲಿಯೇ ಇದ್ದರೂ ಪುರುಷಾರ್ಥ ಮಾಡಬೇಕಾಗಿದೆ. ಮನುಷ್ಯರಿಗೆ ತಿಳಿಸುವುದಕ್ಕಾಗಿ ಚಿತ್ರಗಳನ್ನು ಮಾಡಿಸುತ್ತಾ ಇರುತ್ತೇವೆ ಏಕೆಂದರೆ ಈ ಸಮಯದಲ್ಲಿ ಮನುಷ್ಯರು 100% ತಮೋಪ್ರಧಾನರಾಗಿದ್ದಾರೆ. ಮೊದಲು ಮುಕ್ತಿಧಾಮದಿಂದ ಬಂದಾಗ ಸತೋಪ್ರಧಾನರಾಗಿರುತ್ತಾರೆ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾ-ಬರುತ್ತಾ ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಈಗ ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನದಿಂದ ಸತೋಪ್ರಧಾನರಾಗುವಿರಿ ಎಂದು ಎಲ್ಲರಿಗೆ ತಂದೆಯ ಸಂದೇಶ ಕೊಡಬೇಕಾಗಿದೆ. ವಿನಾಶವೂ ಸನ್ಮುಖದಲ್ಲಿದೆ. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು, ಆಗ ಉಳಿದೆಲ್ಲರೂ ನಿರ್ವಾಣ ಧಾಮದಲ್ಲಿದ್ದರು. ಮಕ್ಕಳು ಚಿತ್ರಗಳ ��ೇಲೆ ಗಮನ ಕೊಡಬೇಕಾಗಿದೆ. ಚಿತ್ರಗಳು ದೊಡ್ಡ ಗಾತ್ರದಲ್ಲಿದ್ದಾಗ ಸಹಜವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲರಿಗೆ ತಂದೆಯ ಸಂದೇಶ ಕೊಡಬೇಕಾಗಿದೆ. ಮನ್ಮನಾಭವದ ಅಕ್ಷರವು ಮುಖ್ಯವಾಗಿದೆ ಅಥವಾ ತಂದೆ ಮತ್ತು ಆಸ್ತಿ. ಇದನ್ನು ತಿಳಿಸುವುದರಲ್ಲಿ ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ತಿಳಿಸುವವರಲ್ಲಿಯೂ ಎಷ್ಟು ನಂಬರ್ವಾರ್ ಇದ್ದಾರೆ, ಬೇಹದ್ದಿನ ತಂದೆಯ ಜೊತೆ ಪ್ರೀತಿಯಿರಬೇಕಾಗಿದೆ. ಬುದ್ಧಿಯಲ್ಲಿ ಇದೇ ಇರಬೇಕು - ನಾವು ತಂದೆಯ ಸೇವೆ ಮಾಡುತ್ತಿದ್ದೇವೆ, ಈಶ್ವರೀಯ ಸೇವಾಧಾರಿಗಳಾಗಬೇಕಾಗಿದೆ. ಅವರು ಭಲೆ ಈಶ್ವರೀಯ ಸೇವಾಧಾರಿ ಎಂಬ ಪದವನ್ನು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ಮಕ್ಕಳ ಸೇವೆ ಮಾಡಲು ಬಂದಿದ್ದಾರೆ, ಎಷ್ಟು ಉತ್ತಮ ದೇವಿ-ದೇವತೆಗಳನ್ನಾಗಿ ಮಾಡಲು ಬಂದಿದ್ದಾರೆ! ಇಂದು ನಾವು ಎಷ್ಟು ಕಂಗಾಲಾಗಿದ್ದೇವೆ. ಸತ್ಯಯುಗದಲ್ಲಿ ಎಷ್ಟೊಂದು ಸರ್ವಗುಣ ಸಂಪನ್ನರಾಗಿ ಬಿಡುತ್ತೇವೆ, ಇಲ್ಲಾದರೆ ಪರಸ್ಪರ ಜಗಳವಾಡುತ್ತಾ ಕಲಹ ಮಾಡುತ್ತಾ ಇರುತ್ತಾರೆ. ವಿನಾಶವಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಶಾಂತವಾಗಿ ಬಿಡುವುದು ಎಂದು ತಿಳಿದುಕೊಳ್ಳುತ್ತಾರೆ. ಸಂಪೂರ್ಣ ಘೋರ ಅಂಧಕಾರದಲ್ಲಿ ಮುಳುಗಿದ್ದಾರೆ, ಈಗ ಅವರಿಗೆ ತಿಳಿಸುವವರು ಬೇಕಾಗಿದೆ. ವಿದೇಶದಲ್ಲಿಯೂ ಈ ಜ್ಞಾನವನ್ನು ತಿಳಿಸಬಹುದು. ಒಂದೇ ಮಾತನ್ನು ಸಭೆಯಲ್ಲಿ ಕುಳಿತು ತಿಳಿಸಿರಿ, ಈಗ ಕಲಿಯುಗದಲ್ಲಿ 600 ಕೋಟಿಗಿಂತಲೂ ಅಧಿಕ ಜನಸಂಖ್ಯೆಯಿದೆ, ಸತ್ಯಯುಗದಲ್ಲಿ ಕೇವಲ 9 ಲಕ್ಷವಿರುತ್ತದೆ. ಇದರಿಂದಲೇ ಸಿದ್ಧವಾಗುತ್ತದೆ - ವಿನಾಶವು ಅವಶ್ಯವಾಗಿ ಆಗುವುದು. ಮಹಾಭಾರಿ ಯುದ್ಧವು ಪ್ರಸಿದ್ಧವಾಗಿದೆ, ಪರಮಾತ್ಮನೂ ಇಲ್ಲಿದ್ದಾರೆ, ಅವರೇ ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡಿಸುತ್ತಿದ್ದಾರೆ, ಶಂಕರನ ಮೂಲಕ ಕಲಿಯುಗದ ವಿನಾಶವೂ ಆಗಬೇಕಾಗಿದೆ ಏಕೆಂದರೆ ಈಗ ಸಂಗಮವಾಗಿದೆ. ಪ್ರಾಕೃತಿಕ ವಿಕೋಪಗಳಾಗುವವು, ಮೂರನೇ ಮಹಾಯುದ್ಧವು ಅಂತಿಮ ಯುದ್ಧವೆಂದು ಹೇಳುತ್ತಾರೆ. ಅಂತಿಮ ವಿನಾಶವು ಖಂಡಿತ ಆಗಬೇಕಾಗಿದೆ, ಈಗ ಇದನ್ನು ಎಲ್ಲರಿಗೂ ಹೇಳಬೇಕಾಗಿದೆ - ಬೇಹದ್ದಿನ ತಂದೆಯನ್ನು ನೆನಪು ಮಾಡಿದರೆ ಮುಕ್ತಿಧಾಮದಲ್ಲಿ ಹೊರಟು ಹೋಗುವಿರಿ. ಭಲೆ ತಮ್ಮ ಧರ್ಮದಲ್ಲಿಯೇ ಇರಿ, ಆದರೂ ತಂದೆಯನ್ನು ನೆನಪು ಮಾಡಿದರೆ ತಮ್ಮ ಧರ್ಮದಲ್ಲಿ ಒಳ್ಳೆಯ ಪದವಿಯನ್ನು ಪಡೆಯಬಹುದು.
|
2 |
+
ನೀವು ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯು ನಮಗೆ ಪ್ರಜಾಪಿತ ಬ್ರಹ್ಮಾರವರ ತನುವಿನ ಮೂಲಕ ಜ್ಞಾನವನ್ನು ತಿಳಿಸುತ್ತಿದ್ದಾರೆ, ನಾವು ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ. ಮನೆಯೇ ಮೊದಲ ಪಾಠಶಾಲೆ, ನೆರೆಹೊರೆಯವರೆಲ್ಲರಿಗೂ ಸಂದೇಶ ಕೊಡಬೇಕಾಗಿದೆ, ಅನ್ಯ ಧರ್ಮದವರಿಗೂ ಸಹ ತಂದೆಯ ಪರಿಚಯ ಕೊಡಬೇಕಾಗಿದೆ. ವಿದೇಶದವರಿಗೆ, ರಾಜರಿಗೂ ಸಹ ಜ್ಞಾನವನ್ನು ಕೊಡಬೇಕಾಗಿದೆ ಅದಕ್ಕಾಗಿ ತಯಾರಿ ಮಾಡಬೇಕು. ತಂದೆಯು ತಿಳಿಸುತ್ತಾರೆ - ತ್ರಿಮೂರ್���ಿ, ಗೋಲ, ಕಲ್ಪವೃಕ್ಷ ಯಾವ ಮುಖ್ಯ ಚಿತ್ರಗಳಿವೆಯೋ ಅದನ್ನು ಬಟ್ಟೆಯ ಮೇಲೆ ಮುದ್ರಿಸಿ ನೀವು ವಿದೇಶಕ್ಕೂ ತೆಗೆದುಕೊಂಡು ಹೋಗಬಹುದು. ಭಲೆ ದೊಡ್ಡ ಗಾತ್ರದಲ್ಲಿ ಸಾಧ್ಯವಾಗದಿದ್ದರೆ ಚಿಕ್ಕ ಗಾತ್ರದ ಎರಡು ಬಟ್ಟೆಗಳ ಮೇಲೆ ಮಾಡಿಸಿ. ಈ ಇಡೀ ಜ್ಞಾನವು ತ್ರಿಮೂರ್ತಿ, ಕಲ್ಪವೃಕ್ಷ, ಗೋಲದ ಚಿತ್ರದಲ್ಲಿದೆ. ಏಣಿಯ ಜ್ಞಾನವೂ ಸಹ ಗೋಲದಲ್ಲಿ ಬಂದು ಬಿಡುತ್ತದೆ. ಏಣಿಯ ಚಿತ್ರದಲ್ಲಿ ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ವಿವರವಾಗಿ ಮಾಡಿಸಲಾಗಿದೆ. ಚಕ್ರದಲ್ಲಿ ಎಲ್ಲಾ ಧರ್ಮದವರದೂ ಬಂದು ಬಿಡುತ್ತದೆ. ಏಣಿಯ ಚಿತ್ರದಲ್ಲಿ ಹೇಗೆ ಸತೋಪ್ರಧಾನರೇ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ, ಕೆಳಗಿಳಿಯುತ್ತಾರೆ ಎಂಬುದನ್ನು ತೋರಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ತಂದೆಗೆ ಇಡೀದಿನ ವಿಚಾರವು ನಡೆಯುತ್ತಿರುತ್ತದೆ ಆದ್ದರಿಂದ ಯಾರಾದರೂ ದೊಡ್ಡದಾದ ಹೊಸ ಮನೆಯನ್ನು ಕಟ್ಟಿಸಿದರೆ ಅದರಲ್ಲಿ ಗೋಡೆಯು ಇಷ್ಟು ದೊಡ್ಡದಾಗಿರಲಿ ಅದರಮೇಲೆ 6 ಅಡಿ ಗಾತ್ರದ ಚಿತ್ರವನ್ನು ಮಾಡಿಸುವಂತಿರಬೇಕು. 12 ಅಡಿಯ ಗೋಡೆಯಿರಲಿ. ಈ ಸಮಯದಲ್ಲಿ ಭಾಷೆಗಳೂ ಬಹಳಷ್ಟಿವೆ, ಎಲ್ಲಾ ಧರ್ಮದವರಿಗೆ ತಿಳಿಸಬೇಕೆಂದರೆ ಎಷ್ಟೊಂದು ಭಾಷೆಗಳಲ್ಲಿ ತಿಳಿಸಬೇಕಾಗುತ್ತದೆ. ಇಷ್ಟು ವಿಶಾಲ ಭಾವನೆಯಿಂದ ಯುಕ್ತಿಯನ್ನು ರಚಿಸಬೇಕು. ಸರ್ವೀಸಿನ ಉಮ್ಮಂಗವಿರಲಿ. ಖರ್ಚಂತೂ ಮಾಡಲೇಬೇಕಾಗಿದೆ ಬಾಕಿ ನೀವು ಯಾರಿಂದಲೂ ಭಿಕ್ಷೆ ಬೇಡುವ ಅವಶ್ಯಕತೆಯಿಲ್ಲ. ಭಂಡಾರವು ತಾನಾಗಿಯೇ ತುಂಬುವುದು, ಡ್ರಾಮಾದಲ್ಲಿ ನಿಗಧಿತವಾಗಿದೆ. ಮಕ್ಕಳು ಕೇವಲ ಬುದ್ಧಿಯನ್ನು ಓಡಿಸಬೇಕು ಆದರೆ ಸ್ವಲ್ಪ ಸೇವೆಯನ್ನು ಮಾಡುತ್ತಾರೆಂದರೆ ನಾವು ಬಹಳ ಬುದ್ಧಿವಂತರಾಗಿದ್ದೇವೆಂದು ಮಕ್ಕಳಿಗೆ ನಶೆಯೇರುತ್ತದೆ. ತಂದೆಯು ಹೇಳುತ್ತಾರೆ - ರೂಪಾಯಿಯಲ್ಲಿನ ನಾಲ್ಕಾಣೆಯಷ್ಟೂ ಕಲಿತಿಲ್ಲ, ಕೆಲವರು ಎರಡಾಣೆ, ಕೆಲವರು ಒಂದಾಣೆ, ಇನ್ನೂ ಕೆಲವರು ಒಂದು ಪೈಸೆಯಷ್ಟೂ ಕಲಿತಿರುವುದು ವಿರಳ, ಏನನ್ನೂ ತಿಳಿದುಕೊಂಡಿಲ್ಲ. ಮುರುಳಿಯನ್ನು ಓದುವ ಉಮ್ಮಂಗವೂ ಇಲ್ಲ. ಸಾಹುಕಾರ ಪ್ರಜೆ, ಬಡ ಪ್ರಜೆ ಎಲ್ಲರೂ ಇಲ್ಲಿಯೇ ಆಗಬೇಕಾಗಿದೆ. ಕೆಲವರಂತೂ ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ ನಂತರ ಮುಖವನ್ನು ಕಪ್ಪು ಮಾಡಿಕೊಳ್ಳುತ್ತಾರೆ. ತಂದೆಗೆ ಹೇಳುತ್ತಾರೆ - ಬಾಬಾ, ನಾವು ಸೋಲನ್ನು ಅನುಭವಿಸಿದೆವು. ತಂದೆಯು ಹೇಳುತ್ತಾರೆ - ನೀವಂತೂ ಕಾಲಾಳುಗಳಿಗೂ ಕಾಲಾಳುಗಳಾಗಿದ್ದೀರಿ, ಬಹಳ ಕನಿಷ್ಟರು. ಇಂತಹವರು ಯಾವ ಪದವಿಯನ್ನು ಪಡೆಯುವರು! ಈಗ ಸೂರ್ಯವಂಶಿ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಯಾರಿಗೆ ತಂದೆಯ ನೆನಪಿರುತ್ತದೆಯೋ ಅವರೇ ಖುಷಿಯಲ್ಲಿ ಇರುತ್ತಾರೆ. ಕೇವಲ ತಂದೆಯ ಮೂಲಕ ಯಾವ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂಬುದು ನೆನಪಿದ್ದರೂ ಸಹ ಬಹಳ ಲಾಭವಿದೆ. ಧಾರಣೆ ಮಾಡಿ ಮತ್ತೆ ಅನ್ಯರನ್ನೂ ತಮ್ಮ ಸಮಾನ ಮಾಡಬೇಕಾಗಿದೆ ಆದರೆ ಮಕ್ಕಳು ಸೇವೆಯನ್ನೇ ಮಾಡುವುದಿಲ್ಲ, ಸ್ವಲ್ಪ ಸೇವೆ ಮಾಡಿದರೆ ನಾವು ಉತ್ತೀರ್ಣರಾಗಿ ಬಿಟ್ಟೆವು ಎಂದು ತಿಳಿದುಕೊಳ್ಳುತ್ತಾರೆ. ದೇಹಾಭಿಮಾನದಲ್ಲಿ ಬಂದು ಬೀಳುತ್ತಾರೆ. ಒಂದುವೇಳೆ ಬ್ರಹ್ಮಾ ತಂದೆಗೆ ಅಗೌರವ ಮಾಡಿದರೆ ನನಗೆ ಅಗೌರವ ಮಾಡಿದಂತೆ ಎಂದು ಶಿವ ತಂದೆಯು ಹೇಳುತ್ತಾರೆ. ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದಾರಲ್ಲವೆ. ನಮಗಂತೂ ಶಿವ ತಂದೆಯೊಂದಿಗೆ ಸಂಬಂಧವಿದೆ ಎಂದಲ್ಲ, ಆಸ್ತಿಯಂತೂ ಇವರ ಮೂಲಕವೇ ಸಿಗುವುದಲ್ಲವೆ. ಇವರಿಗೆ ಹೃದಯದ ಸಮಾಚಾರವನ್ನು ತಿಳಿಸಬೇಕಾಗಿದೆ, ಸಲಹೆ ತೆಗೆದುಕೊಳ್ಳಬೇಕಾಗಿದೆ. ನಾನು ಸಾಕಾರ ತಂದೆಯ ಮೂಲಕ ಸಲಹೆ ಕೊಡುತ್ತೇನೆ ಎಂದು ಶಿವ ತಂದೆಯು ಹೇಳುತ್ತಾರೆ. ಬ್ರಹ್ಮನಿಲ್ಲದೆ ಶಿವ ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವಿರಿ! ಇವರಿಲ್ಲದೆ ಏನೂ ನಡೆಯುವುದಿಲ್ಲ ಆದ್ದರಿಂದ ಮಕ್ಕಳು ಬಹಳ-ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ಉಲ್ಟಾ ಅಹಂಕಾರದಲ್ಲಿ ಬಂದು ತಮಗೆ ನಷ್ಟ ಮಾಡಿಕೊಳ್ಳುತ್ತಾರೆ. ಸಾಕಾರ ತಂದೆಯ ಹೃದಯದಿಂದ ಇಳಿದರೆ ನಿರಾಕಾರ ತಂದೆಯ ಹೃದಯದಿಂದಲೂ ಇಳಿಯುತ್ತಾರೆ. ಇಂತಹವರೂ ಅನೇಕರಿದ್ದಾರೆ - ಎಂದೂ ಮುರುಳಿಯನ್ನು ಕೇಳುವುದಿಲ್ಲ, ಪತ್ರವನ್ನೂ ಬರೆಯುವುದಿಲ್ಲ ಅಂದಮೇಲೆ ತಂದೆಯು ಏನು ತಿಳಿದುಕೊಳ್ಳುವರು? ಗುರಿಯು ಬಹಳ ಉನ್ನತವಾಗಿದೆ ಆದ್ದರಿಂದ ಮಕ್ಕಳು ಸಮಯವನ್ನು ವ್ಯರ್ಥ ಮಾಡಬಾರದು. ಯಾರು ತಮ್ಮನ್ನು ಮಹಾರಥಿ ಎಂದು ತಿಳಿದುಕೊಳ್ಳುವರೋ ಅವರು ಶ್ರೇಷ್ಠ ಕಾರ್ಯದಲ್ಲಿ ಸಹಯೋಗ ನೀಡಬೇಕು ಆಗ ತಂದೆಯು ಖುಷಿಯಾಗಿ ಅವಕಾಶ ನೀಡಲಿ, ಇವರಿಂದ ಅನೇಕರ ಕಲ್ಯಾಣವಾಗುವುದು ಎಂದು. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ. ಪ್ರಜೆಗಳಂತೂ ಆಗುತ್ತಾರೆ. ತಂದೆಗೆ ಸೇವಾಧಾರಿ ಮಕ್ಕಳ ಕಡೆ ದೃಷ್ಟಿಯಿರುತ್ತದೆ. ಈ ಇಂದ್ರಸಭೆಯಲ್ಲಿ ಸೂರ್ಯವಂಶಿ ರಾಜ-ರಾಣಿಯಾಗುವವರು ಬರಬೇಕು ಯಾರು ಸೇವೆ ಮಾಡುವುದಿಲ್ಲವೋ ಅವರು ಯೋಗ್ಯರಲ್ಲ. ಮುಂದೆ ಹೋದಂತೆ ಯಾರು-ಯಾರು ಏನಾಗುವರು ಎಂಬುದೆಲ್ಲವೂ ಅರ್ಥವಾಗುವುದು. ಮಕ್ಕಳಿಗೆ ಬಹಳ-ಬಹಳ ನಶೆಯಿರಬೇಕು - ನಾವು ನಾಳೆ ಸ್ವರ್ಗದಲ್ಲಿ ರಾಜಕುಮಾರರಾಗುತ್ತೇವೆ. ಇಲ್ಲಿ ನೀವು ರಾಜಯೋಗವನ್ನು ಕಲಿಯಲು ಬಂದಿದ್ದೀರಿ, ಚೆನ್ನಾಗಿ ಓದದಿದ್ದರೆ ಕಡಿಮೆ ಪದವಿಯನ್ನು ಪಡೆಯುತ್ತೀರಿ. ತಂದೆಯ ಬಳಿ ಸರ್ವೀಸಿನ ಸಮಾಚಾರವು ಬರಬೇಕಾಗಿದೆ - ಬಾಬಾ, ಇಂದು ನಾನು ಈ ಸೇವೆ ಮಾಡಿದೆನು ಎಂದು. ಪತ್ರವನ್ನೇ ಬರೆಯದಿದ್ದರೆ ತಂದೆಯು ಏನು ತಿಳಿದುಕೊಳ್ಳುವರು? ಸತ್ತು ಹೋದರು ಅರ್ಥಾತ್ ಜ್ಞಾನವನ್ನು ಬಿಟ್ಟು ಹೋದರು ಎಂದು ತಿಳಿದುಕೊಳ್ಳುವರು. ಯಾರು ಸೇವೆಯಲ್ಲಿ ಇರುತ್ತಾರೆ, ತಂದೆಯ ಪರಿಚಯವನ್ನು ನೀಡುತ್ತಾ ಇರುತ್ತಾರೆಯೋ ಅಂತಹ ಮಕ್ಕಳೇ ತಂದೆಗೂ ನೆನಪಿರುತ್ತಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಬ್ರಹ್ಮಾಕುಮಾರ-ಕುಮಾರಿಯರಿಗೆ ಆಸ್ತಿಯನ್ನು ಕೊಡುತ್ತಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಬ್ರಾಹ್ಮಣರ ರಚನೆಯನ್ನು ರಚಿಸುತ್ತಾರೆ, ಈಗ ಮತ್ತೆಲ್ಲಾ ಧರ್ಮಗಳಿವೆ ಬಾಕಿ ದೇವಿ-ದೇವತಾ ಧರ್ಮ ಯಾವುದು ತಳಹದಿಯಾಗಿದೆಯೋ ಅದೇ ಮರೆಯಾಗಿದೆ. ಇದೆಲ್ಲಾ ಆಟವು ಮಾಡಲ್ಪಟ್ಟಿದೆ, ಏಣಿಯ ಚಿತ್ರದಲ್ಲಿ ಎಲ್ಲಾ ಧರ್ಮಗಳಿಲ್ಲ, ಗೋಲದಲ್ಲಿ ಸ್ಪಷ್ಟವಾಗಿದೆ ಆದ್ದರಿಂದ ಗೋಲದ ಚಿತ್ರದಲ್ಲಿ ತಿಳಿಸಬೇಕಾಗಿದೆ. ಇದನ್ನೂ ತಿಳಿಸಬೇಕು- ಸತ್ಯಯುಗದಲ್ಲಿ ದೇವಿ-ದೇವತೆಗಳು ಡಬಲ್ ಕಿರೀಟಧಾರಿಗಳಾಗಿದ್ದರು, ಈ ಸಮಯದಲ್ಲಿ ಪವಿತ್ರತೆಯ ಕಿರೀಟವು ಯಾರಿಗೂ ಇಲ್ಲ. ಪ್ರಕಾಶತೆಯ ಕಿರೀಟವನ್ನು ಕೊಡೋಣವೆಂದರೆ ಅದಕ್ಕೆ ಯಾರೊಬ್ಬರೂ ಯೋಗ್ಯರಿಲ್ಲ. ತನಗೂ (ಬ್ರಹ್ಮಾ) ಕೊಟ್ಟುಕೊಳ್ಳುವಂತಿಲ್ಲ. ನಾನೂ ಸಹ ಅದಕ್ಕಾಗಿಯೇ ಪುರುಷಾರ್ಥ ಮಾಡುತ್ತಿದ್ದೇನೆ, ಶರೀರವಂತೂ ಇಲ್ಲಿ ಪವಿತ್ರವಾಗಿಲ್ಲ. ಆತ್ಮವು ಯೋಗಬಲದಿಂದ ಪವಿತ್ರವಾಗುತ್ತಾ-ಆಗುತ್ತಾ ಅಂತಿಮದಲ್ಲಿ ಪವಿತ್ರವಾಗಿ ಬಿಡುವುದು. ಕಿರೀಟವಂತೂ ಸತ್ಯಯುಗದಲ್ಲಿ ಸಿಗುವುದು, ಸತ್ಯಯುಗದಲ್ಲಿ ಡಬಲ್ ಕಿರೀಟ, ಭಕ್ತಿಮಾರ್ಗದಲ್ಲಿ ಸಿಂಗಲ್ ಕಿರೀಟ, ಇಲ್ಲಂತೂ ಯಾವ ಕಿರೀಟವೂ ಇಲ್ಲ. ಈಗ ನಿಮಗೆ ಕೇವಲ ಪವಿತ್ರತೆಯ ಕಿರೀಟವನ್ನು ಎಲ್ಲಿ ತೋರಿಸುವುದು? ಲೈಟ್ನ್ನು ಎಲ್ಲಿಡುವುದು? ಜ್ಞಾನಿಗಳಂತೂ ಆಗಿದ್ದೀರಿ, ಯಾವಾಗ ಸಂಪೂರ್ಣ ಪವಿತ್ರರಾಗುತ್ತೀರೋ ಆಗ ಪವಿತ್ರತೆಯ ಪ್ರಕಾಶತೆಯಿರಬೇಕು ಅಂದಮೇಲೆ ಸೂಕ್ಷ್ಮವತನದಲ್ಲಿ ಅದನ್ನು ತೋರಿಸುವುದೇ? ಹೇಗೆ ಮಮ್ಮಾರವರು ಸೂಕ್ಷ್ಮವತನದಲ್ಲಿ ಪವಿತ್ರ ಫರಿಶ್ತೆಯಾಗಿದ್ದಾರಲ್ಲವೆ, ಅಲ್ಲಿ ಸಿಂಗಲ್ ಕಿರೀಟವಿದೆ ಆದರೆ ಈಗ ಲೈಟ್ನ ಕಿರೀಟವನ್ನು ಎಲ್ಲಿ ತೋರಿಸುವುದು? ಪವಿತ್ರರಾಗುವುದೇ ಕೊನೆಯಲ್ಲಿ. ಯೋಗ ಮುದ್ರೆಯಲ್ಲಿ ಇದ್ದಾಗ ಪ್ರಕಾಶತೆಯನ್ನು ತೋರಿಸುವುದೇ? ಇಂದು ಪವಿತ್ರತೆಯ ಕಿರೀಟವನ್ನು ಕೊಟ್ಟು ನಾಳೆ ಮತ್ತೆ ಪತಿತರಾಗಿ ಬಿಟ್ಟರೆ ಕಿರೀಟವೇ ಮಾಯವಾಗಿ ಬಿಡುತ್ತದೆ ಆದ್ದರಿಂದ ಅಂತ್ಯದಲ್ಲಿ ಕರ್ಮಾತೀತ ಸ್ಥಿತಿಯನ್ನು ಹೊಂದಿದಾಗಲೇ ಆ ಕಿರೀಟವಿರುತ್ತದೆ ಆದರೆ ನೀವು ಸಂಪೂರ್ಣರಾಗುತ್ತಿದ್ದಂತೆಯೇ ಸೂಕ್ಷ್ಮವತನಕ್ಕೆ ಹೊರಟು ಹೋಗುತ್ತೀರಿ. ಹೇಗೆ ಬುದ್ಧನನ್ನು, ಕ್ರೈಸ್ಟ್ ನ್ನು ತೋರಿಸುತ್ತಾರೆ ಮೊಟ್ಟ ಮೊದಲು ಪವಿತ್ರ ಆತ್ಮವು ಧರ್ಮ ಸ್ಥಾಪನೆ ಮಾಡಲು ಬರುತ್ತದೆ, ಅವರಿಗೆ ಪ್ರಕಾಶತೆಯನ್ನು ತೋರಿಸಬಹುದೇ ಹೊರತು ಕಿರೀಟವಲ್ಲ. ನೀವೂ ಸಹ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪವಿತ್ರರಾಗಿ ಬಿಡುತ್ತೀರಿ. ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ-ತಿರುಗಿಸುತ್ತಾ ನೀವು ರಾಜ್ಯ ಪದವಿಯನ್ನು ಪಡೆಯುತ್ತೀರಿ. ಅಲ್ಲಿ ಮಂತ್ರಿಗಳಿರುವುದಿಲ್ಲ, ಇಲ್ಲಾದರೆ ಅನೇಕರಿಂದ ಸಲಹೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ಎಲ್ಲರೂ ಸತೋಪ್ರಧಾನರಾಗಿರುತ್ತಾರೆ, ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು.
|
3 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮ���್ತೆ.
|
4 |
+
ಧಾರಣೆಗಾಗಿ ಮುಖ್ಯಸಾರ:
|
5 |
+
1. ಬಾಪ್ದಾದಾರವರಿಂದ ಆಫ್ರೀನ್ ತೆಗೆದುಕೊಳ್ಳಲು ತಂದೆಯ ಶ್ರೇಷ್ಠ ಕಾರ್ಯದಲ್ಲಿ ಸಂಪೂರ್ಣ ಸಹಯೋಗಿಗಳಾಗಬೇಕಾಗಿದೆ. ತಂದೆಗೆ ತಮ್ಮ ಸೇವಾ ಸಮಾಚಾರವನ್ನು ತಿಳಿಸಬೇಕಾಗಿದೆ.
|
6 |
+
2. ದೇಹಾಭಿಮಾನದಲ್ಲಿ ಬಂದು ಎಂದೂ ಅಗೌರವ ಮಾಡಬಾರದು. ಉಲ್ಟಾ ನಶೆಯಲ್ಲಿ ಬರಬಾರದು. ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಸರ್ವೀಸಿನ ಯುಕ್ತಿಗಳನ್ನು ರಚಿಸಬೇಕು, ಸೇವಾಧಾರಿಗಳಾಗಬೇಕಾಗಿದೆ.
|
BKMurli/BKMurli/page_1036.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಇದು ಒಬ್ಬ ತಂದೆಯ ಮಹಿಮೆಯಾಗಿದೆ ಆದರೆ ಭಕ್ತಿಮಾರ್ಗದಲ್ಲಿ ಕೇವಲ ಒಬ್ಬರ ಮಹಿಮೆಯನ್ನು ಹಾಡುವುದರಿಂದ ಭಕ್ತಿಯ ಶೋ ಇರುವುದಿಲ್ಲ. ಆದ್ದರಿಂದ ಭಕ್ತಿಯಲ್ಲಿ ಅನೇಕರ ಮಹಿಮೆಯನ್ನು ಹಾಡುತ್ತಾರೆ. ಅಲ್ಲಿ ಬಹಳ ಶಬ್ಧವೂ ಇರುತ್ತದೆ. ಗಂಟೆ, ಜಾಗಟೆ, ಗೀತೆ-ಭಜನೆ, ಅಳುವುದು-ಕರೆಯುವುದು, ಇದೆಲ್ಲವೂ ಭಕ್ತಿಮಾರ್ಗದಲ್ಲಿ ಎಷ್ಟೊಂದು ನಡೆಯುತ್ತದೆ! ಭಿನ್ನ-ಭಿನ್ನ ಪ್ರಕಾರದ ಶಬ್ಧ ಮಂತ್ರ-ತಂತ್ರ, ಸ್ತುತಿ ಇತ್ಯಾದಿಗಳಿರುತ್ತದೆ ಮತ್ತು ಜ್ಞಾನ ಮಾರ್ಗದಲ್ಲಿ ಶಾಂತಿಯಿದೆ. ಕೇವಲ ಸೂಚನೆ ನೀಡಲಾಗುತ್ತದೆ, ಶಬ್ಧವೇನೂ ಇಲ್ಲ. ಭಕ್ತಿಯಲ್ಲಿ ಎಷ್ಟೊಂದು ಆಡಂಬರವಿದೆ! ಎಲ್ಲದಕ್ಕಿಂತ ಹೆಚ್ಚಿನದಾಗಿ ಶಿವನ ಮಂದಿರದಲ್ಲಿಯೇ ಗಂಟೆಗಳು ಮೊಳಗುತ್ತವೆ. ಎಲ್ಲಿ ನೋಡಿದರೂ ಗಂಟೆಗಳೇ ಗಂಟೆಗಳಿರುತ್ತವೆ. ಯಾರನ್ನಾದರೂ ನಿದ್ರೆಯಿಂದ ಜಾಗೃತಗೊಳಿಸಲು ಯಾರೂ ಗಂಟೆಗಳನ್ನು ಹೊಡೆಯುವುದಿಲ್ಲ. ಶಿವ ತಂದೆಯು ಬಂದು ಮನುಷ್ಯರನ್ನು ಕುಂಭಕರ್ಣನ ಅಜ್ಞಾನ ನಿದ್ರೆಯಿಂದ ಏಳಿಸಿದ್ದಾರೆ ಆದರೆ ಗಂಟೆ ಹೊಡೆಯುವುದಿಲ್ಲ. ಸಂಪೂರ್ಣ ಶಾಂತಿಯಿಂದ ಎರಡು ಶಬ್ಧಗಳಲ್ಲಿಯೇ ತಿಳಿಸುತ್ತಾರೆ. ಯಾರು ಬುದ್ಧಿವಂತರಿರುವರೋ ಅವರು ಎರಡು ಶಬ್ಧಗಳಲ್ಲಿಯೇ ಅರ್ಥ ಮಾಡಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿರಿ. ಹೇ ಪತಿತ-ಪಾವನ ಬನ್ನಿ ಎಂದು ನೀವೇ ನನ್ನನ್ನು ಕರೆದಿರಿ. ನಾನೀಗ ಬಂದಿದ್ದೇನೆ, ನಿಮಗೆ ಮಾರ್ಗವನ್ನು ತಿಳಿಸುತ್ತೇನೆ. ನೀವು ಇನ್ನೂ ಪತಿತರಾಗಿ ಈ ಪ್ರಪಂಚದಲ್ಲಿಯೇ ಇರಬೇಕೇ! ನೀವಂತೂ ಪಾವನ ಪ್ರಪಂಚದಲ್ಲಿರಲು ಬಯಸುತ್ತೀರಲ್ಲವೆ! ಪಾವನ ಪ್ರಪಂಚವೆಂದು ಸ್ವರ್ಗಕ್ಕೆ ಹೇಳಲಾಗುತ್ತದೆ. ಪತಿತ-ಪಾವನ ಎಂದು ಹೇಳುತ್ತಾರೆ ಅಂದಮೇಲೆ ತಿಳಿದುಕೊಳ್ಳಬೇಕಾಗಿದೆ - ಪತಿತ-ಪಾವನನು ಬಂದು ಏನು ಮಾಡುವರು? ಅವಶ್ಯವಾಗಿ ನರಕದಿಂದ ಸ್ವರ್ಗದಲ್ಲಿ ಕರೆದುಕೊಂಡು ಹೋಗುವರು. ತಿಳಿದುಕೊಳ್ಳದೆ ಹಾಗೆಯೇ ಕರೆಯುತ್ತಿರುತ್ತಾರೆ. ಭಜನೆ ಮಾಡುತ್ತಿರುತ್ತಾರೆ ಆದರೆ ತಂದೆಯು ಬರುವರೆಂದರೆ ಏನು ಮಾಡುವರು ಎಂಬುದನ್ನು ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಇದು ಮನುಷ್ಯರಿಂದ ದೇವತೆಗಳಾಗುವ ವಿಶ್ವ ವಿದ್ಯಾಲಯವಾಗಿದೆ ಆದ್ದರಿಂದಲೇ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಎಂದು ಹಾಡುತ್ತಾರೆ, ಇದರಲ್ಲಿ ಶಾಸ್ತ್ರ ಇತ್ಯಾದಿಗಳೇನನ್ನೂ ಓದುವಂತಿಲ್ಲ. ಭಕ್ತಿಮಾರ್ಗದಲ್ಲಿ ಬಹಳ ಶಾಸ್ತ್ರ ಇತ್ಯಾದಿಗಳನ್ನು ಓದುತ್ತಾರೆ, ಅನೇಕ ಪ್ರವಚನಗಳಿರುತ್ತವೆ. ಒಂದೊಂದು ತಿಂಗಳವರೆಗೆ ಮಂಟಪವನ್ನು ಮಾಡಿ ಭಜನೆ ಮಾಡುತ್ತಾರೆ. ಇಲ್ಲಿ ಎಷ್ಟೊಂದು ಶಾಂತಿಯಲ್ಲಿ ತಂದೆಯು ತಿಳಿಸುತ್ತಾರೆ. ನೋಡಿ, ತಂದೆಯು ಬಂದು ನಿಮ್ಮನ್ನು ಪಾವನರನ್ನಾಗಿ ಮಾಡಿ ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಾರೆ. ವಿದ್ಯೆಯೂ ಸಹ ಎಷ್ಟು ಸಹಜವಾಗಿದೆ! ನೀವು ಮೊಟ್ಟ ಮೊದಲು ಪಾವನರಾಗಿದ್ದಿರಿ, ಸತ್ಯಯುಗದಲ್ಲಿದ್ದಿರಿ ನಂತರ 84 ���ನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕಲಿಯುಗದಲ್ಲಿ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ನೀವೀಗ ಸತೋಪ್ರಧಾನರಾಗಬೇಕಾಗಿದೆ ಆದ್ದರಿಂದ ನನ್ನನ್ನು ನೆನಪು ಮಾಡಿರಿ, ಅದು ನಿರಂತರವಾಗಿರಲಿ. ಹೇಗೆ ಕನ್ಯೆಗೆ ನಿಶ್ಚಿತಾರ್ಥವಾಗುತ್ತದೆ ಎಂದರೆ ಜಪಿಸುತ್ತಾಳೆಯೇ? ನೆನಪಿನಲ್ಲಿರುತ್ತಾಳೆಯೇ? ನೀವೇಲ್ಲರೂ ಪತ್ನಿಯರಾಗಿದ್ದೀರಿ, ಶಿವ ತಂದೆಯು ಪತಿಯರಿಗೂ ಪತಿಯಾಗಿದ್ದಾರೆ. ಪರಮಾತ್ಮನ ಜೊತೆ ನಿಮ್ಮದು ನಿಶ್ಚಿತಾರ್ಥವಾಗಿದೆ. ನಿಶ್ಚಿತಾರ್ಥ ಆಗಿ ಬಿಟ್ಟಿತೆಂದರೆ ಬುದ್ಧಿಯಲ್ಲಿ ನೆನಪು ಕುಳಿತು ಬಿಟ್ಟಿತು. ನಮಗೆ ನಿಶ್ಚಿತಾರ್ಥವಾಯಿತೆಂದು ನಿಶ್ಚಯವಾಯಿತು ನಂತರ ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾ ಇರುತ್ತಾರೆ. ನಿಮಗೂ ಸಹ ತಂದೆಯು ತಿಳಿಸುತ್ತಾರೆ - ನಾವು ಒಬ್ಬ ತಂದೆಯ ಮಕ್ಕಳು ಪರಸ್ಪರ ಸಹೋದರ-ಸಹೋದರರಾಗಿದ್ದೇವೆ ಎಂದು ನಿಶ್ಚಯಬುದ್ಧಿಯವರಾಗಿ ಬಿಟ್ಟಿರಿ. ಸಹೋದರರಿಗೆ ಒಬ್ಬ ತಂದೆಯಿಂದ ಆಸ್ತಿಯು ಸಿಗುತ್ತದೆ ಆದ್ದರಿಂದ ತಂದೆಯನ್ನು ಕರೆಯುತ್ತಾರೆ, ಭಲೆ ಮನುಷ್ಯರ ತನುವಿನಲ್ಲಿ ಬಂದು ಸಹೋದರ-ಸಹೋದರಿಯರಾಗುತ್ತೀರಿ ಆದರೆ ಕರೆಯುವುದು ಆತ್ಮವೇ ಅಲ್ಲವೆ! ಸಹೋದರ-ಸಹೋದರರು ಕರೆಯುತ್ತೀರಿ - ಹೇ ಪತಿತ-ಪಾವನ ತಂದೆಯೇ ಬನ್ನಿ ಎಂದು. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಪಾವನರಿಗೆ ಸತೋಪ್ರಧಾನರು, ಪತಿತರಿಗೆ ತಮೋಪ್ರಧಾನರೆಂದು ಹೇಳಲಾಗುತ್ತದೆ. ಈ ಮಾತುಗಳನ್ನು ತಂದೆಯು ಸಂಗಮಯುಗದಲ್ಲಿಯೇ ತಿಳಿಸುತ್ತಾರೆ. ಇದು ಗೀತಾ ಪಾಠಶಾಲೆಯಾಗಿದೆ, ಈ ಪಾಠಶಾಲೆಯಲ್ಲಿ ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ, ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಅಲ್ಲಾದರೆ ಶಿಕ್ಷಕರು ಸನ್ಮುಖದಲ್ಲಿ ಕುಳಿತು ಓದಿಸುತ್ತಾರೆ, ಕಣ್ಣಿಗೆ ಕಾಣಿಸುತ್ತಾರೆ ಆದರೆ ಇವರು ಗುಪ್ತವಾಗಿದ್ದಾರೆ ಅಂದಾಗ ಈ ಶಿಕ್ಷಕರನ್ನೂ ಸಹ ಬುದ್ಧಿಯಿಂದ ತಿಳಿದುಕೊಳ್ಳಬೇಕಾಗುತ್ತದೆ. ಇವರು ನಿರಾಕಾರ ಪತಿತ-ಪಾವನ ತಂದೆಯಾಗಿದ್ದಾರೆ. ಆ ತಂದೆಯೇ ಸ್ಮೃತಿ ತರಿಸುತ್ತಾರೆ - ಕಲ್ಪದ ಮೊದಲೂ ಸಹ ನಾನು ನಿಮಗೆ ರಾಜಯೋಗವನ್ನು ಕಲಿಸಿದ್ದೆನು, ಆದ್ದರಿಂದ ಮನ್ಮನಾಭವ, ಪವಿತ್ರರಾದರೆ ಈ ಲಕ್ಷ್ಮೀ-ನಾರಾಯಣರಂತೆ ಆಗಿ ಬಿಡುತ್ತೀರಿ ಎಂದು ಹೇಳಲಾಗುತ್ತದೆ. ಇದರಲ್ಲಿ ಗಂಟೆ, ಜಾಗಟೆ ಇತ್ಯಾದಿಗಳನ್ನು ಹೊಡೆಯುವ ಅವಶ್ಯಕತೆಯಿಲ್ಲ, ಸ್ವಯಂ ತಂದೆಯೇ ಬಂದು ಜಾಗೃತಗೊಳಿಸುತ್ತಾರೆ. ಮನ್ಮನಾಭವದ ಅರ್ಥವಾಗಿದೆ - ಶಾಂತಿ. ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿರಿ, ಸಾಕು. ನಾವೀಗ ಮನೆಗೆ ಹೋಗಬೇಕಾಗಿದೆ. ನಮ್ಮನ್ನು ದುಃಖದಿಂದ ಬಿಡಿಸಿ ಮುಕ್ತ ಮಾಡಿ ಎಂದು ಎಲ್ಲರೂ ತಂದೆಗೆ ಹೇಳುತ್ತಾರೆ. ಸನ್ಯಾಸಿಗಳು ಕೇವಲ ಬ್ರಹ್ಮನನ್ನು ನೆನಪು ಮಾಡುತ್ತಾರೆ, ಆದರೆ ಬ್ರಹ್ಮತತ್ವವಂತೂ ಮನೆಯಾಗಿದೆ. ಅವರು ಮನೆಯನ್ನು ನೆನಪು ಮಾಡುತ್ತಾರೆ, ಇಲ್ಲಿ ತಂದೆಯ��್ನು ನೆನಪು ಮಾಡಬೇಕಾಗಿದೆ. ಕೇವಲ ಮನೆಯನ್ನು ನೆನಪು ಮಾಡುತ್ತೀರೆಂದರೆ ಹೇಗೆ ಸನ್ಯಾಸಿಗಳಾಗಿ ಬಿಡುತ್ತೀರಿ. ಬ್ರಹ್ಮತತ್ವವು ಭಗವಂತನಲ್ಲ.
|
2 |
+
ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಆಗ ನೀವು ನಿರ್ವಾಣಧಾಮದಲ್ಲಿ ಹೋಗುವಿರಿ ನಂತರ ಅಲ್ಲಿಂದ ಸ್ವರ್ಗದಲ್ಲಿ ಬರುತ್ತೀರಿ. ಇಲ್ಲಿಂದ ನಾನು ನೀವು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ನಿಮಗೆ ತಿಳಿದಿದೆ - ಹಕ್ಕಿಗಳ ಸಮೂಹವು ಎಷ್ಟು ದೊಡ್ಡದಾಗಿರುತ್ತದೆ, ಅವುಗಳಲ್ಲಿ ಪರಸ್ಪರ ಒಗ್ಗಟ್ಟು ಇರುತ್ತದೆ. ಮೊದಲು ಮುಂದಿನ ಹಕ್ಕಿಯು ಕುಳಿತು ಬಿಟ್ಟರೆ ಮತ್ತೆಲ್ಲವೂ ಕುಳಿತು ಬಿಡುತ್ತದೆ, ಜೇನು ನೊಣಗಳಲ್ಲಿಯೂ ಇದೇ ರೀತಿ ಆಗುತ್ತದೆ. ಅವುಗಳಲ್ಲಿ ರಾಣಿಯು ಮನೆಯನ್ನು ಬಿಟ್ಟಿತೆಂದರೆ ಎಲ್ಲವೂ ಅದರ ಹಿಂದೆ ಓಡುತ್ತದೆ. ಆ ರಾಣಿ ನೊಣವು ಹೇಗೆ ಆ ಎಲ್ಲಾ ನೊಣಗಳಿಗೂ ಪ್ರಿಯತಮನಿದ್ದಂತೆ. ಅವುಗಳಲ್ಲಿ ಮತ್ತೆ ಪ್ರಿಯತಮೆಯೂ ಸಹ ತನ್ನ ಜೊತೆಗಾರರ ಮೇಲೆ ರಾಜ್ಯ ಮಾಡುತ್ತದೆ. ಶಾಸ್ತ್ರಗಳಲ್ಲಿಯೂ ಇದೆ, ಆತ್ಮರೆಲ್ಲರೂ ಸೊಳ್ಳೆಗಳ ರೀತಿ ಹಾರಿ ಹೋಗುವರು ಎಂದು. ಅನೇಕ ಆತ್ಮರಿದ್ದಾರೆ, ಆ ನೊಣಗಳು ಪ್ರತೀ ಸೀಜನ್ನಿನಲ್ಲಿ ತಮ್ಮ ರಾಣಿಯ ಹಿಂದೆ ಓಡುತ್ತವೆ, ನೀವಂತೂ ಒಂದೇ ಬಾರಿ ಓಡಬೇಕಾಗಿದೆ. ಈಗ ಎಲ್ಲಾ ಆತ್ಮರು ಮೂಲವತನಕ್ಕೆ ಹೋಗಬೇಕಾಗಿದೆ. ನಿಮ್ಮದು ಶಬ್ಧವೇನೂ ಇಲ್ಲ ಆದ್ದರಿಂದ ತಂದೆಯು ಉದಾಹರಣೆ ಕೊಡುತ್ತಾರೆ. ಸಾಸಿವೆ ಕಾಳಿನ ತರಹ ಎಲ್ಲರ ಶರೀರಗಳು ಸಮಾಪ್ತಿಯಾಗುತ್ತವೆ. ತಂದೆಯು ಬಿಂದು, ಸಾಸಿವೆ ಕಾಳಿನ ಮಾದರಿಯಲ್ಲಿದ್ದಾರೆ. ಗಸಗಸೆಯ ಕಾಳೂ ಸಹ ಬಹಳ ಚಿಕ್ಕದಾಗಿರುತ್ತದೆ. ಪರಮಾತ್ಮನೂ ಬಿಂದುವಾಗಿದ್ದಾರೆ, ಅವರನ್ನು ದಿವ್ಯ ದೃಷ್ಟಿಯ ವಿನಃ ನೋಡಲು ಸಾಧ್ಯವಿಲ್ಲ. ಬಹಳ ಸೂಕ್ಷ್ಮ ನಕ್ಷತ್ರ ಮಾದರಿಯಾಗಿದ್ದಾರೆ. ಗೀತೆಯಲ್ಲಿ ತೋರಿಸಿದ್ದಾರೆ - ಅಖಂಡ ಜ್ಯೋತಿಯ ಸಾಕ್ಷಾತ್ಕಾರವಾಯಿತು ಎಂದು. ಆದ್ದರಿಂದ ಇಲ್ಲಿಯೂ ಸಹ ಅಖಂಡ ಜ್ಯೋತಿಯ ಸಾಕ್ಷಾತ್ಕಾರವಾದಾಗಲೇ ಓಹೋ ಸಾಕ್ಷಾತ್ಕಾರವಾಯಿತೆಂದು ತಿಳಿದುಕೊಳ್ಳುತ್ತಾರೆ. ಒಂದುವೇಳೆ ಬಿಂದುವಿನ ಸಾಕ್ಷಾತ್ಕಾರವಾದರೆ ಇವರು ಪರಮಾತ್ಮನಲ್ಲ ಎಂದು ತಿಳಿದುಕೊಳ್ಳುತ್ತಾರೆ ಏಕೆಂದರೆ ಅರ್ಜುನನಿಗೆ ಬಹಳ ತೇಜೋಮಯ ರೂಪದಲ್ಲಿ ಸಾಕ್ಷಾತ್ಕಾರವಾಯಿತು ಎಂದು ಗೀತೆಯಲ್ಲಿ ಬರೆದಿದ್ದಾರೆ. ಆ ಭಕ್ತಿಯ ಮಾತುಗಳೇ ಬುದ್ಧಿಯಲ್ಲಿ ಕುಳಿತುಕೊಂಡಿವೆ. ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗದಲ್ಲಿ ರಾತ್ರಿ-ಹಗಲಿನ ಅಂತರವಿದೆ. ನೀವು ತಿಳಿದುಕೊಂಡಿದ್ದೀರಿ - ನಾವು 63 ಜನ್ಮಗಳು ಶರೀರದ ಮೂಲಕ ಎಷ್ಟೊಂದು ನರ್ತನ ಮಾಡುತ್ತೇವೆ. 63 ಜನ್ಮಗಳಲ್ಲಿ ಭಕ್ತಿಮಾರ್ಗದ ಕಥೆಯನ್ನು ನೋಡುತ್ತೇವೆ, ಅದರಲ್ಲಿಯೂ ಮೊದಲು ಸತೋಪ್ರಧಾನ ಭಕ್ತಿಯಿದ್ದಾಗ ಒಬ್ಬ ಶಿವ ತಂದೆಯ ಭಕ್ತಿ ಮಾಡುತ್ತಿದ್ದರು. ಈ ಗಂಗಾ ಸ್ನಾನ ಇತ್ಯಾದಿಗಳೆಲ್ಲವೂ ನಂತರದಲ್ಲಿ ಆರಂಭವಾಗುತ್ತದೆ. ಮೊದಲು ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ ���ೃದ್ಧಿಯಾಗುತ್ತದೆ. ಇಲ್ಲಂತೂ ಸಂಪೂರ್ಣ ಶಾಂತಿಯ ವಾತಾವರಣವೇ ನೆಲೆಸಿದೆ. ಕವಡೆಯಿಲ್ಲದಿದ್ದರೂ ನೀವು ವಿಶ್ವದ ಮಾಲೀಕರಾಗುತ್ತೀರಿ. ಮಮ್ಮಾರವರು ಕವಡೆಯೂ ಇಲ್ಲದೆ ಬಂದರು ಮತ್ತು ವಿಶ್ವ ಮಹಾರಾಣಿ ಆಗಿ ಬಿಟ್ಟರು ಇವರು ಸಾಧಾರಣವಾಗಿದ್ದರು, ಬಹಳ ಬಡವರ ಮನೆಯವರು ಕವಡೆಯೂ ಖರ್ಚಿಲ್ಲದೆ ನೋಡಿ, ಹೇಗಾಗುತ್ತಾರೆ! ಮಮ್ಮಾರವರು ಬಹಳ ಸರ್ವೀಸ್ ಮಾಡುತ್ತಿದ್ದರು, ಹೋಗಿ ಅನ್ಯರಿಗೂ ತಿಳಿಸುತ್ತಿದ್ದರು - ತಂದೆಯು ಹೇಳುತ್ತಾರೆ, ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಸತೋಪ್ರಧಾನರಾಗಿಬಿಡುತ್ತೀರಿ. ಇದರಲ್ಲಿ ಯಾವುದೇ ಖರ್ಚಿನ ಮಾತಿಲ್ಲ. ಒಂದುವೇಳೆ ಯಾರಾದರೂ ಖರ್ಚು ಮಾಡಿದರೂ ಸಹ ತನಗಾಗಿ ಮಾಡುತ್ತಾರೆ. ಹೇಗೆ ಭೂಮಿಯಲ್ಲಿ ಎರಡು ಹಿಡಿ ಕಾಳನ್ನು ಬಿತ್ತಿದರೆ ಅದರಿಂದ ಎಷ್ಟೊಂದು ಫಲ ಬರುತ್ತದೆ! ಎಷ್ಟು ದೊಡ್ಡ ತೋಟವಾಗುತ್ತದೆ. ಇಲ್ಲಿಯೂ ಸಹ 21 ಜನ್ಮಗಳಿಗಾಗಿ ನಿಮ್ಮದು ಎಷ್ಟೊಂದು ಸಂಪಾದನೆಯಾಗುತ್ತದೆ. ಮನುಷ್ಯರಿಂದ ದೇವತೆಗಳಾಗುವುದು ಎಷ್ಟು ಸಹಜವಾಗಿದೆ! ಒಂದು ಸೆಕೆಂಡಿನ ಮಾತಾಗಿದೆ ಆದರೆ ಎಷ್ಟು ಸಾಧಾರಣವಾಗಿ ಕುಳಿತಿದ್ದೀರಿ. ಒಂದುವೇಳೆ ಯಾರಾದರೂ ಕುಳಿತುಕೊಳ್ಳಲು ಆಗದಿದ್ದರೆ ಅಂತಹವರಿಗೆ ತಂದೆಯು ತಿಳಿಸುತ್ತಾರೆ- ಭಲೆ ಮಲಗಿಕೊಂಡೇ ಮುರುಳಿಯನ್ನು ಕೇಳಿರಿ, ಇದು ಧಾರಣೆಯ ಮಾತಾಗಿದೆ. ಆಂತರ್ಯದಲ್ಲಿ ತಂದೆ ಮತ್ತು ಚಕ್ರವನ್ನು ನೆನಪು ಮಾಡುತ್ತಾ ಇರಿ. ನೆನಪು ಮಾಡುತ್ತಾ-ಮಾಡುತ್ತಲೇ ಶರೀರವನ್ನು ಬಿಡಬೇಕಾಗಿದೆ. ಬಾಕಿ ಬಾಯಲ್ಲಿ ಗಂಗಾಜಲವನ್ನು ಹಾಕುವ ಮಾತಿಲ್ಲ. ಗುರು ಗೋಸಾಯಿಗಳು ಬಹಳ ಹೆದರಿಸುತ್ತಾರೆ - ನೀವು ಈ ನಿಯಮಗಳನ್ನು ಬಿಡುತ್ತೀರಿ, ಭಕ್ತಿ ಮಾಡುವುದಿಲ್ಲವೆಂದರೆ ಈ ರೀತಿಯಾಗುವುದು ಎಂದು. ಉದಾಹರಣೆಗೆ ಯಾರಿಗಾದರೂ ಕಾಲು ಕತ್ತರಿಸಿ ಹೋಗುತ್ತದೆ ಅಥವಾ ನಷ್ಟವಾಯಿತೆಂದರೆ ನೀವು ಭಕ್ತಿಯನ್ನು ಬಿಟ್ಟಿರಿ ಆದ್ದರಿಂದಲೇ ಇಂತಹ ಗತಿಯಾಯಿತು ಎಂದು ಹೇಳಿದ ಕೂಡಲೇ ಹೆದರುತ್ತಾರೆ. ಇಲ್ಲಂತೂ ಏನನ್ನೂ ಮಾಡಬೇಕಾಗಿಲ್ಲ, ತಂದೆಯ ನೆನಪು ತರಿಸಬೇಕಾಗಿದೆ, ಚಕ್ರದ ರಹಸ್ಯವನ್ನು ತಿಳಿಸಬೇಕಾಗಿದೆ. ಈಗ ಕಲಿಯುಗದ ನಂತರ ಸತ್ಯಯುಗವು ಬರಲಿದೆ, ಅವಶ್ಯವಾಗಿ ವಿನಾಶವಾಗಲಿದೆ ಆದ್ದರಿಂದಲೇ ಈ ಮಹಾಭಾರಿ ಯುದ್ಧವು ನಿಂತಿದೆ. ಭಗವಂತನು ಬಂದು ರಾಜಯೋಗವನ್ನು ಕಲಿಸಿ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಇದು ರಾಜಯೋಗವಾಗಿದೆ, ಪ್ರಜಾಯೋಗವಲ್ಲ. ಶುಭವನ್ನೇ ನುಡಿಯಬೇಕು, ಮಕ್ಕಳು ಬಹಳ ಮಧುರರಾಗಬೇಕಾಗಿದೆ. ತಂದೆಯು ಮಧುರವಾಗಿದ್ದಾರಲ್ಲವೆ! ಕ್ರೋಧ ಇತ್ಯಾದಿಗಳೆಲ್ಲವನ್ನೂ ದಾನದಲ್ಲಿ ತೆಗೆದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಪ್ರೀತಿಯ ಸಾಗರನಾಗಿದ್ದೇನೆ. ನೀವೂ ಸಹ ಆಗಿರಿ, ಬಹಳ ಪ್ರೀತಿಯಿಂದ ತಿಳಿಸುತ್ತಾರೆ. ಇಲ್ಲದಿದ್ದರೆ ಮಕ್ಕಳು ಬಹಳ ಏರುಪೇರು ಮಾಡುತ್ತಾರೆ ಏಕೆಂದರೆ ಮಾಯೆಯು ತಲೆ ಕೆಡಿಸಿ ಬಿಡುತ್ತದೆ. ಆದ್ದರಿಂದ ��ಿಚಾರವು ಬರುತ್ತದೆ - ಎಂದೂ ಯಾರಿಗೂ ಏನನ್ನೂ ಹೇಳಬಾರದು, ಪ್ರೀತಿಯಿಂದ ತಿಳಿಸಬೇಕು. ರೋಷದಿಂದ ನೋಡುವುದು, ಬಿಸಿಯಾಗುವುದು, ಜೋರಾಗಿ ಮಾತನಾಡುವುದು - ಇದರ ಅವಶ್ಯಕತೆಯಿಲ್ಲ. ಇದರಿಂದ ಕೆಲಸವು ಕೆಡುತ್ತದೆ. ಶಾಂತವಾಗಿರುವುದು ಒಳ್ಳೆಯದಾಗಿದೆ. ವಿಕಾರಗಳ ದಾನವನ್ನು ಕೊಟ್ಟು ಮತ್ತೆ ಪಡೆಯುತ್ತೀರೆಂದರೆ ತಮ್ಮ ಪದವಿಯನ್ನು ಕಳೆದುಕೊಳ್ಳುತ್ತೀರಿ. ತಂದೆಯ ಮಕ್ಕಳಾದಿರಿ ಎಂದರೆ ಪಂಚ ವಿಕಾರಗಳ ದಾನ ಮಾಡಿದಿರಿ. ದಾನ ಕೊಟ್ಟರೆ ಗ್ರಹಣ ಬಿಡುವುದು ಎಂದು ಹೇಳುತ್ತಾರೆ. ತಂದೆಯು ಮಾರ್ಗದರ್ಶಕನಲ್ಲವೆ. ಬ್ರಾಹ್ಮಣರು ಮಾರ್ಗದರ್ಶಕರಾಗಿರುತ್ತಾರೆ, ಶಿವ ತಂದೆಯೂ ಸಹ ಆತ್ಮಿಕ ಮಾರ್ಗದರ್ಶಕನಾಗಿದ್ದಾರೆ. ನೀವೂ ಸಹ ಆಗಿದ್ದೀರಿ. ತಂದೆಯು ಬ್ರಹ್ಮನ ತನುವಿನಲ್ಲಿ ಬರುತ್ತಾರೆ ಅಂದಮೇಲೆ ಇವರೂ ಬ್ರಾಹ್ಮಣರಾದರು. ತಂದೆಯು ಇವರಲ್ಲಿ ಕುಳಿತಿದ್ದಾರೆ, ಅವರ ಮಹಿಮೆಯನ್ನು ಹಾಡುತ್ತಾರೆ - ನೀವು ಮಾತಾಪಿತಾ..... ಮತ್ತ್ಯಾರಿಗೂ ಈ ಮಹಿಮೆಯಿಲ್ಲ. ಅವರ ಕರ್ತವ್ಯವೂ ಅದೇರೀತಿ ಇದೆ. ಇದು ಪಾಠಶಾಲೆಯಾಗಿದೆ, ತಂದೆಯು ಓದಿಸುತ್ತಾರೆ - ಇದು ಮಕ್ಕಳಿಗೆ ನೆನಪಿರಲಿ. ವಿಶ್ವದ ರಾಜ್ಯಭಾಗ್ಯವನ್ನು ಪಡೆಯುವುದೇ ಗುರಿ-ಧ್ಯೇಯವಾಗಿದೆ. ಅಂದಮೇಲೆ ಈ ರೀತಿ ಓದಿಸುವವರನ್ನು ಬಹಳ ಚೆನ್ನಾಗಿ ನೆನಪು ಮಾಡಬೇಕು. ಶಾಲೆಯಿಂದ ವಿದ್ಯಾರ್ಥಿಯು ಒಳ್ಳೆಯ ಅಂಕಗಳಲ್ಲಿ ತೇರ್ಗಡೆಯಾದರು, ಪ್ರತೀ ವರ್ಷವು ಶಿಕ್ಷಕರಿಗೆ ಉಡುಗೊರೆಯನ್ನು ಕಳುಹಿಸುತ್ತಾರೆ, ಈ ಹಬ್ಬ ಇತ್ಯಾದಿಗಳೆಲ್ಲವೂ ಈ ಸಮಯದ್ದಾಗಿದೆ ಆದರೆ ಇದರ ಮಹತ್ವವನ್ನು ಯಾರೂ ತಿಳಿದುಕೊಂಡಿಲ್ಲ.
|
3 |
+
ತಂದೆಯು ಜ್ಞಾನಪೂರ್ಣನಾಗಿದ್ದಾರೆ, ಅವರು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುವುದಕ್ಕಾಗಿಯೇ ಬರುತ್ತಾರೆ. ಕಲ್ಲು-ಮುಳ್ಳಿನಲ್ಲಿ ಹೇಗೆ ಬರುತ್ತಾರೆ. ಒಬ್ಬ ವೈದ್ಯರು ಪ್ರತಿಯೊಂದು ವಸ್ತುವಿನಲ್ಲಿ ಆತ್ಮವಿದೆ ಎಂದು ಸಿದ್ಧ ಮಾಡಿದ್ದರು, ಪರಮಾತ್ಮನಿದ್ದಾರೆಂದು ಹೇಳಲಿಲ್ಲ ಆದರೆ ಇಲ್ಲಂತೂ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಆ ವೈದ್ಯರು ಕೇವಲ ಎಲ್ಲರಲ್ಲಿ ಆತ್ಮನಿದೆ ಎಂದು ಹೇಳಿದರು ಆದರೆ ಸನ್ಯಾಸಿಗಳು ಎಲ್ಲರಲ್ಲಿ ಪರಮಾತ್ಮನೇ ಇದ್ದಾರೆಂದು ಹೇಳಿಬಿಟ್ಟರು. ಎಷ್ಟು ರಾತ್ರಿ-ಹಗಲಿನ ಅಂತರವಿದೆ! ಅವರು ಬೇಹದ್ದಿನ ತಂದೆಯಾಗಿದ್ದಾರೆ, ಎಲ್ಲರಿಂದ ಬುದ್ಧಿಯೋಗವನ್ನು ತೆಗೆಸಿ ತಮ್ಮ ಜೊತೆ ಜೋಡಣೆ ಮಾಡಿಸುತ್ತಾರೆ. ಆತ್ಮವು ಸಾಗರದಿಂದ ಹೊರಬಂದ ನೀರಿನ ಗುಳ್ಳೆಯಾಗಿದೆ ಅದು ಮತ್ತೆ ಸಾಗರದಲ್ಲಿಯೇ ಲೀನವಾಗುವುದು ಎಂದು ಅವರು ತಿಳಿದುಕೊಳ್ಳುತ್ತಾರೆ. ಚಿಕ್ಕ ಜ್ಯೋತಿಯು ದೊಡ್ಡ ಜ್ಯೋತಿಯಲ್ಲಿ ಲೀನವಾಗಿ ಬಿಡುವುದು ನಂತರ ಹೊಸ-ಹೊಸದಾಗಿ ಉತ್ಪತ್ತಿಯಾಗುವುದು ಎಂದು ಬ್ರಹ್ಮ ಜ್ಞಾನಿಗಳು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಭಕ್ತಿಯದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ನಾನೂ ಸಹ ಡ್ರಾಮಾನುಸಾರ ನೀವು ಮಕ್ಕಳಿಗೇ ಬಂದು ತಿಳಿಸುತ್ತೇನೆ. 84 ಜನ���ಮಗಳ ಚಕ್ರವನ್ನು ಸುತ್ತುವುದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ಏನೆಲ್ಲವೂ ನಡೆಯುತ್ತದೆಯೋ ಎಲ್ಲವೂ ನಿಗಧಿತವಾಗಿದೆ. ಕೆಲವರು ಗಾಯನವನ್ನೂ ಮಾಡುತ್ತಾರೆ, ಕೆಲವರು ವಿಘ್ನವನ್ನೂ ಹಾಕುತ್ತಾರೆ.
|
4 |
+
ನೀವು ಮಕ್ಕಳು ಶಿವ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಅವರು ಬರುವುದೇ ಎಲ್ಲಾ ಆತ್ಮರನ್ನೂ ಕರೆದುಕೊಂಡು ಹೋಗಲು, ಶರೀರದ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ. ಶರೀರ ಸಹಿತವಾಗಿ ಯಾರನ್ನಾದರೂ ಕರೆದುಕೊಂಡು ಹೋಗಲು ಬಂದಿದ್ದೇನೆಯೇ? ನನ್ನನ್ನೇ ಕರೆಯುತ್ತಾರೆ - ಹೇ ಮುಕ್ತಿದಾತ ಬನ್ನಿ, ನಮ್ಮನ್ನು ದುಃಖದಿಂದ ಬಿಡಿಸಿ. ಎಲ್ಲಿಯಾದರೂ ಇಂತಹ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಲ್ಲಿ ಸುಖ-ಶಾಂತಿ-ನೆಮ್ಮದಿಯನ್ನು ಪಡೆಯುವೆವು. ಅಂದಮೇಲೆ ಎಲ್ಲರ ಶರೀರಗಳನ್ನು ಇಲ್ಲಿಯೇ ಬಿಡಿಸಿ ಆತ್ಮರನ್ನು ಕರೆದುಕೊಂಡು ಹೋಗುತ್ತೇನೆ ಅಂದಮೇಲೆ ಕಾಲರ ಕಾಲ ಮಹಾಕಾಲ ಆದರಲ್ಲವೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಎಷ್ಟು ಅದ್ಭುತ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಯಾವುದೇ ಮಾತು ಅರ್ಥವಾಗದಿದ್ದರೆ ತಿಳಿಸಿರಿ - ಈ ಮಾತನ್ನು ತಂದೆಯು ನಮಗೆ ಇನ್ನೂ ತಿಳಿಸಿಲ್ಲ. ಯಾವಾಗ ತಿಳಿಸುವರೋ ಆಗ ನಿಮಗೆ ತಿಳಿಸುತ್ತೇನೆ, ಹೀಗೆ ತಮ್ಮನ್ನು ಬಿಡಿಸಿಕೊಳ್ಳಬೇಕು. ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಜ್ಞಾನ ಸಾಗರನಾಗಿದ್ದಾರೆ, ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸುವವರು ರಚಯಿತ ತಂದೆಯಾಗಿದ್ದಾರೆ. ಅವರೇ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ನೀವು ಲೈಟ್ಹೌಸ್ ಆಗಿದ್ದೀರಿ, ಸ್ವದರ್ಶನ ಚಕ್ರಧಾರಿಗಳೂ ಆಗಿದ್ದೀರಿ ಆದರೆ ಮಾಯೆಯು ಮರೆಸಿ ಬಿಡುತ್ತದೆ ಆಗ ಗುಟುಕರಿಸುತ್ತಾರೆ. ಯಾವುದಾದರೊಂದು ಅಲೆಯು ಬಂದು ಬಿಡುತ್ತದೆ. ಕರ್ಮಗಳ ಲೆಕ್ಕಾಚಾರವಿದೆಯಲ್ಲವೆ. ಎಲ್ಲಿಯವರೆಗೆ ಕರ್ಮಾತೀತ ಸ್ಥಿತಿ ಆಗುವುದಿಲ್ಲವೋ ಅಲ್ಲಿಯವರೆಗೆ ಒಂದಲ್ಲ ಒಂದು ಆಗುತ್ತಲೇ ಇರುತ್ತದೆ. ಲೆಕ್ಕಾಚಾರವು ಸಮಾಪ್ತಿಯಾಯಿತೆಂದರೆ ಶರೀರವನ್ನು ಬಿಟ್ಟು ಬಿಡುತ್ತೀರಿ ಮತ್ತು ಯುದ್ಧವೂ ಆರಂಭವಾಗುವುದು. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ವಿಕಾರಗಳ ದಾನವನ್ನು ಕೊಟ್ಟು ಹಿಂತೆಗೆದುಕೊಳ್ಳಬಾರದು. ಬಾಯಿಂದ ಶುಭವನ್ನು ನುಡಿಯಬೇಕು. ಬಹಳ ಮಧುರರಾಗಬೇಕಾಗಿದೆ. ತಂದೆಯ ಸಮಾನ ಪ್ರೀತಿಯ ಸಾಗರರಾಗಿ ಇರಬೇಕಾಗಿದೆ.
|
8 |
+
2. ಶಾಂತಿಯಲ್ಲಿದ್ದು ಕವಡೆಯೂ ಖರ್ಚಿಲ್ಲದೆ ವಿಶ್ವದ ರಾಜ್ಯಭಾಗ್ಯವನ್ನು ಪಡೆಯಬೇಕಾಗಿದೆ. ಎರಡು ಹಿಡಿ ಬೀಜವನ್ನು ಬಿತ್ತಿ 21 ಜನ್ಮಗಳ ಸಂಪಾದನೆ ಮಾಡಿಕೊಳ್ಳಬೇಕಾಗಿದೆ.
|
BKMurli/BKMurli/page_1037.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯ ಅರ್ಥವನ್ನು ತಿಳಿದುಕೊಂಡಿದ್ದೀರಿ. ತಂದೆಯು ಭಕ್ತಿಯೆಂಬ ರಾತ್ರಿಯನ್ನು ವಿನಾಶ ಮಾಡಿ, ದಿನದ ಸ್ಥಾಪನೆ ಮಾಡಲು ಬಂದಿದ್ದಾರೆ ಏಕೆಂದರೆ ಹೇ ಪತಿತ-ಪಾವನ ಬನ್ನಿ ಎಂದು ತಂದೆಯನ್ನೇ ಕರೆಯುತ್ತಾರಲ್ಲವೇ. ಯಾವುದೋ ಸಮಯದಲ್ಲಿ ನಾವು ಪಾವನರಾಗಿದ್ದೆವು, ಈಗ ಪತಿತರಾಗಿದ್ದೇವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಮೊದಲು ಏನಿತ್ತು, ಈಗ ಅದನ್ನೇ ಬೇಕು ಎಂದು ಬೇಡಲಾಗುತ್ತದೆ. ನೀವು ಮಕ್ಕಳಿಗೆ ಗೊತ್ತಿದೆ - ಮೊದಲು ಪವಿತ್ರ ದೇವಿ-ದೇವತೆಗಳ ರಾಜಧಾನಿಯಿತ್ತು, ಜ್ಞಾನ ಜ್ಞಾನೇಶ್ವರಿಯೇ ನಂತರ ರಾಜ ರಾಜೇಶ್ವರಿಯಾಗುವರು. ಹೇಗೆ ಜಗದಂಬೆ ಮತ್ತು ಲಕ್ಷ್ಮಿಯು ಬೇರೆ-ಬೇರೆ ಆಗಿದ್ದಾರೆ. ಲಕ್ಷ್ಮಿಯನ್ನೆಂದಿಗೂ ಜಗದಂಬೆ ಎಂದು ಹೇಳುವುದಿಲ್ಲ, ಲಕ್ಷ್ಮಿಯನ್ನು ಅವರ ಇಬ್ಬರು ಮಕ್ಕಳೇ ಮಾತೇಶ್ವರಿ ಎಂದು ಕರೆಯುತ್ತಾರೆ. ಇಲ್ಲಿ ಜಗದಂಬೆಯನ್ನು ಎಲ್ಲಾ ಭಾರತವಾಸಿಗಳು, ಯಾರೆಲ್ಲಾ ಧಾರ್ಮಿಕ ವ್ಯಕ್ತಿಗಳಿದ್ದಾರೆಯೋ ಎಲ್ಲರೂ ಅಂಬೆ ಎಂದು ಕರೆಯುತ್ತಾರೆ. ದೇವಿ-ದೇವತೆಗಳ ಮಂದಿರದಲ್ಲಿ ಹೋಗಿ ಭಕ್ತಿ ಮಾಡುತ್ತಾರೆ. ಈಗ ನಿಮಗೆ ಅರ್ಥವಾಗಿದೆ - ನಾವು ಬಹಳ ಭಕ್ತಿ ಮಾಡಿದ್ದೇವೆ. ದಾನ-ಪುಣ್ಯ ಇತ್ಯಾದಿಗಳನ್ನು ನೀವು ಎಷ್ಟು ಮಾಡಿದ್ದೀರೋ ಅಷ್ಟು ಮತ್ತ್ಯಾರೂ ಮಾಡಿರುವುದಿಲ್ಲ. ನೀವೇ ಎಲ್ಲರಿಗಿಂತ ಹೆಚ್ಚಿನದಾಗಿ ಭಕ್ತಿ ಮಾಡಿದ್ದೀರಿ. ನೀವೀಗ ಜೀವಿಸಿದ್ದಂತೆಯೇ ತಮ್ಮ ನೆನಪಾರ್ಥವನ್ನು ನೋಡಿದ್ದೀರಿ. ಆದಿ ದೇವ ಮತ್ತು ಆದಿ ದೇವಿಯಿದ್ದಾರೆ, ಅವರಿಗೆ ಜಗದಂಬೆಯೆಂದು ಹೇಳುತ್ತಾರೆ. ಈಗ ನಿಮಗೆ ತಿಳಿದಿದೆ - ಜಗದಂಬೆಯು ಧನವಂತರಾಗುತ್ತಾರೆ, ನೀವು ಅವರ ಮಕ್ಕಳಾಗಿದ್ದೀರಲ್ಲವೆ. ಈಗ ನೀವು ಓದುತ್ತಿದ್ದೀರಿ, ಜಗದಂಬೆಯು ವಿದ್ಯಾದೇವಿಯಾಗಿದ್ದಾರೆ. ಲೌಕಿಕ ಜ್ಞಾನದಿಂದ ಎಂದಿಗೂ ರಾಜ-ರಾಣಿಯಾಗುವುದಿಲ್ಲ. ನಿಮಗೆ ತಿಳಿದಿದೆ - ಆತ್ಮರೆಲ್ಲರೂ ಶಿವ ತಂದೆಯ ಮಕ್ಕಳಾಗಿದ್ದಾರೆ ಮತ್ತು ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಶಿವ ತಂದೆಯು ಇವರ ಮೂಲಕ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಿದ್ದಾರೆ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಗಾಯನವಿದೆ, ಇದನ್ನು ಚೆನ್ನಾಗಿ ತಿಳಿದುಕೊಂಡು ಧಾರಣೆ ಮಾಡಬೇಕಾಗಿದೆ. ಸಿಂಹದ ಹಾಲಿಗೆ ಚಿನ್ನದ ಪಾತ್ರೆಯು ಬೇಕು ಎಂದು ಹೇಳುತ್ತಾರಲ್ಲವೇ. ಈ ಜ್ಞಾನವು ಸರ್ವಶಕ್ತಿವಂತ ಪರಮಪಿತ ಪರಮಾತ್ಮನದಾಗಿದೆ. ಈ ಜ್ಞಾನಕ್ಕಾಗಿ ಬುದ್ಧಿರೂಪಿ ಪಾತ್ರೆಯು ಚಿನ್ನದ ಸಮಾನವಾಗಬೇಕು. ಹೊಸ ಪ್ರಪಂಚದಲ್ಲಿ ಆತ್ಮ ಮತ್ತು ಶರೀರವು ಎರಡೂ ಚಿನ್ನದ ಸಮಾನ ಆಗುತ್ತವೆ. ಈಗ ನಿಮ್ಮ ಆತ್ಮವು ಕಲ್ಲಿನ ಪಾತ್ರೆಯಾಗಿದೆ ಆದ್ದರಿಂದ ಶರೀರವೂ ಸಹ ಅಂತಹುದೇ ಆಗಿದೆ. ಭಾರತದಲ್ಲಿಯೇ ಶ್ಯಾಮ ಮತ್ತು ಸುಂದರ, ಪತಿತ ಮತ್ತು ಪಾವನರೆಂದು ಹೇಳುತ್ತಾರೆ. ನಾವು ಪತಿತರನ್ನು ಪಾವನರನ್ನಾಗಿ ಮಾಡಿ ಎಂದು ಮತ್ತ್ಯಾವುದೇ ಖಂಡಗಳಲ್ಲಿ ಈ ರೀತಿ ಹೇಳುವುದಿಲ್ಲ. ದುಃಖದಿಂದ ಬಿಡಿಸಿ ಶಾಂತಿಯಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ವಿವೇಕವೂ ಹೇಳುತ್ತದೆ - ನಾವು ಭಾರತವಾಸಿಗಳು ಪಾವನರಾಗಿದ್ದೆವು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಭಲೆ ಎಷ್ಟು ದೊಡ್ಡ ವ್ಯಕ್ತಿಗಳೇ ಇರಬಹುದು, ಅವರೂ ಸಹ ಗುರುವಿನ ಕಾಲಿಗೆ ಬೀಳುತ್ತಾರೆ ಏಕೆಂದರೆ ಗುರುವು ಸನ್ಯಾಸತ್ವವನ್ನು ಧಾರಣೆ ಮಾಡಿದ್ದಾರೆ, ಪಂಚ ವಿಕಾರಗಳನ್ನು ಬಿಟ್ಟಿದ್ದಾರೆ ಎಂದು ವಿಕಾರಿಗಳು ನಿರ್ವಿಕಾರಿಗಳಿಗೆ ಮಾನ್ಯತೆಯನ್ನು ಕೊಡುತ್ತಾರೆ. ಪವಿತ್ರತೆಗೆ ಮಾನ್ಯತೆಯಿದೆ. ದ್ವಾಪರದಿಂದ ರಾಜ-ರಾಣಿ ಮತ್ತು ಮಂತ್ರಿಗಳಿರುತ್ತಾರೆ. ಸತ್ಯಯುಗದ ರಾಜ-ರಾಣಿಗೆ ಮಂತ್ರಿಗಳಿರುವುದಿಲ್ಲ. ಯಾವಾಗ ರಾಜ-ರಾಣಿಯು ಪತಿತರಾಗುತ್ತಾರೆಯೋ ಆಗಲೇ ಒಬ್ಬ ಮಂತ್ರಿಯನ್ನು ಇಟ್ಟುಕೊಳ್ಳುತ್ತಾರೆ. ಈಗಂತೂ ಬಹಳ ಪತಿತರಾಗಿರುವ ಕಾರಣ ನೂರಾರು ಮಂತ್ರಿಗಳನ್ನು ಇಟ್ಟುಕೊಳ್ಳುತ್ತಾರೆ - ಇದು ಡ್ರಾಮಾದಲ್ಲಿ ನೊಂದಣಿಯಾಗಿದೆ. ತಂದೆಯು ತಿಳಿಸುತ್ತಾರೆ - ಡ್ರಾಮಾದ ಪೂರ್ವ ನಿಶ್ಚಿತವು ಹೇಗೆ ಮಾಡಲ್ಪಟ್ಟಿದೆ! ಮೊದಲು ಭಾರತವಷ್ಟೇ ಇತ್ತು, ನಂತರ ಅನ್ಯ ಧರ್ಮದವರು ಬಂದರು. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ನೀವು ಜ್ಞಾನ ಜ್ಞಾನೇಶ್ವರಿ ಆಗಿದ್ದೀರಿ, ಜಗದಂಬೆಯು ಬ್ರಹ್ಮನ ಮಗಳು ವಿದ್ಯಾ ಸರಸ್ವತಿಯಾಗಿದ್ದಾರೆ. ಜಗದಂಬೆಯು ಜ್ಞಾನವಂತಳಾಗಿದ್ದಾರೆ, ಅವರೇ ಇನ್ನೊಂದು ಜನ್ಮದಲ್ಲಿ ಧನಲಕ್ಷ್ಮಿಯಾಗುತ್ತಾರೆ. ಈಗ ನಿಮಗೆ ತಂದೆಯು ಜ್ಞಾನವನ್ನು ಕಲಿಸುತ್ತಿದ್ದಾರೆ, ನಿಮಗೆ ತಿಳಿದಿದೆ - ನಾವು ಅಲ್ಲಿ ಧನವಂತರಾಗುತ್ತೇವೆ. ಈ ಲಕ್ಷ್ಮೀ-ನಾರಾಯಣರು ಹೇಗೆ ಧನವಂತರಾದರು ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಬ್ರಹ್ಮಾ-ಸರಸ್ವತಿಯೇ ಲಕ್ಷ್ಮೀ-ನಾರಾಯಣರಾದರು. ಬ್ರಹ್ಮನು ಜಗತ್ಪಿತನಾಗಿದ್ದಾರೆ ಅಂದಮೇಲೆ ಬ್ರಾಹ್ಮಣ-ಬ್ರಾಹ್ಮಿಣಿಯರು ಅನೇಕರಿರುವರು. ನೀವು ಬ್ರಾಹ್ಮಣ-ಬ್ರಾಹ್ಮಿಣಿಯರು ಎಷ್ಟೊಂದು ಮಂದಿ ಇದ್ದೀರಿ, ನಾವು ಈ ಜ್ಞಾನದಿಂದ ಭವಿಷ್ಯದಲ್ಲಿ ಇಂತಹ ಧನವಂತರಾಗುತ್ತೇವೆಂದು ನಿಮಗೆ ತಿಳಿದಿದೆ. ಒಮ್ಮೆಲೆ ಧನ ಲಕ್ಷ್ಮಿ ಆಗುತ್ತೀರಿ, ಇದಕ್ಕಿಂತ ಹೆಚ್ಚಿನ ಐಶ್ವರ್ಯವು ಮತ್ತ್ಯಾರ ಬಳಿಯೂ ಇರುವುದಿಲ್ಲ ಆದ್ದರಿಂದಲೇ ಜ್ಞಾನವು ಆದಾಯದ ಮೂಲವೆಂದು ಹೇಳಲಾಗುತ್ತದೆ. ಜಡ್ಜ್, ಬ್ಯಾರಿಸ್ಟರ್ ಇತ್ಯಾದಿ ಜ್ಞಾನದಿಂದಲೇ ಆಗುತ್ತಾರಲ್ಲವೆ ಅಂದಮೇಲೆ ಇದೂ ಆದಾಯವಾಯಿತಲ್ಲವೆ. ಕೆಲಕೆಲವು ವೈದ್ಯರಿಗೆ ಒಬ್ಬ ರೋಗಿಯಿಂದಲೇ ಲಕ್ಷಾಂತರ ರೂಪಾಯಿಗಳು ಸಿಗುತ್ತವೆ, ಯಾರಾದರೂ ರಾಜ-ರಾಣಿ ಅಥವಾ ರಾಜಕುಮಾರರು ಕಾಯಿಲೆಗೊಳಗಾದರೆ ವೈದ್ಯರು ಆ ರೋಗದಿಂದ ಮುಕ್ತಗೊಳಿಸಿದರೆ ಅವರಿಗೆ ಖುಷಿಯಾಗಿ ದೊಡ್ಡ-ದೊಡ್ಡ ಮನೆಗಳನ್ನು ಕಟ್ಟಿಸಲು ಹಣವನ್ನು ಕೊಟ್ಟು ಬಿಡುತ್ತಾರೆ ಅಂದಮೇಲೆ ಎಷ್ಟೊಂದು ಆದಾಯವಾಯಿತು! ವಿದ್ಯೆಯಿಂದಲೇ ಪದವಿಯನ್ನು ಪಡೆಯುತ್ತಾರಲ್ಲವೇ. ನಿಮ್ಮದು ಇದು ವಿದ್ಯೆಯೂ ಆಗಿದೆ, ವ್ಯಾಪಾರವೂ ಆಗಿದೆ.
|
2 |
+
ನೀವು ಮಧುರ ಮಕ್ಕಳು ���ಗ ವ್ಯಾಪಾರ ಮಾಡಲು ಬಂದಿದ್ದೀರಿ. ನಿಮ್ಮ ಬಳಿ ಕೆಲಸಕ್ಕೆ ಬರದಿರುವಂತಹದ್ದನ್ನು ಕೊಟ್ಟು ಲಕ್ಷದಷ್ಟು ಸಂಪಾದಿಸುತ್ತೀರಿ. ತಂದೆಯು ಅವಿನಾಶಿ ಸರ್ಜನ್ ಆಗಿದ್ದಾರೆ. ಸದಾ ಆರೋಗ್ಯವಂತರಾಗಲು ತಂದೆಯು ಯೋಗವನ್ನು ಕಲಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಗ್ಯಾರಂಟಿ ಕೊಡುತ್ತೇನೆ, ನೀವು 21 ಜನ್ಮಗಳಿಗಾಗಿ ಸದಾ ಆರೋಗ್ಯವಂತರಾಗುತ್ತೀರಿ ಅಂದಮೇಲೆ ಇಂತಹ ಸರ್ಜನ್ನ ಶ್ರೀಮತದಂತೆ ಏಕೆ ನಡೆಯಬಾರದು! ತಂದೆಯ ಮತವನ್ನು ಪಾಲಿಸಿರಿ, ನನ್ನನ್ನು ನೆನಪು ಮಾಡಿರಿ. ಹೇಳುತ್ತಾರಲ್ಲವೆ - ಸ್ಮರಣೆ ಮಾಡಿ ಮಾಡಿ ಸುಖ ಪಡೆಯಿರಿ, ಇದರಿಂದ ತನುವಿನ ಕಲಹ-ಕ್ಲೇಷಗಳು ಕಳೆಯುವವು. ಭಕ್ತಿಮಾರ್ಗದಲ್ಲಿ ಯಾವುದೇ ಕಲಹ-ಕ್ಲೇಷಗಳು ಕಳೆಯುವುದಿಲ್ಲ. ಅನೇಕ ಸನ್ಯಾಸಿಗಳೂ ಸಹ ಕಾಯಿಲೆಯಲ್ಲಿ ನರಳುತ್ತಿರುತ್ತಾರೆ. ಹೇಗೆ ಹುಚ್ಛರಾಗಿ ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯ ಶ್ರೀಮತದಂತೆ ನಡೆದರೆ ನಾವು ಸದಾ ಆರೋಗ್ಯವಂತರಾಗುತ್ತೇವೆ, ಅಲ್ಲಿ ಆಯಸ್ಸು 125 ರಿಂದ 150 ವರ್ಷಗಳವರೆಗೆ ಇರುತ್ತದೆ. ದ್ವಾಪರದಲ್ಲಿಯೂ ಆಯಸ್ಸು ಒಮ್ಮೆಲೆ 35 ವರ್ಷಗಳಿಗೆ ಇಳಿದು ಬಿಡುವುದಿಲ್ಲ, ದ್ವಾಪರದ ಆರಂಭದಲ್ಲಿಯೂ ಸಹ 100-125 ವರ್ಷಗಳಿರುತ್ತವೆ ನಂತರ 70-80ಕ್ಕೆ ಇಳಿಯುತ್ತದೆ. ಈಗಂತೂ 35-40 ವರ್ಷಗಳಿಗೆ ಇಳಿದಿದೆ. ಕೆಲವರು ಬಾಲ್ಯದಲ್ಲಿಯೇ ಶರೀರ ಬಿಡುತ್ತಾರೆ ಏಕೆಂದರೆ ಭೋಗಿಗಳಾಗಿದ್ದಾರೆ. ನಿಮಗೆ ತಿಳಿದಿದೆ - ಈಗ ಭೋಗಿಯಿಂದ ಯೋಗಿ ಆಗುತ್ತಿದ್ದೀರಿ. ಅಲ್ಲಿ ಇಷ್ಟೊಂದು ಧೀರ್ಘಾಯಸ್ಸು ಇರುವುದು, ಎಂದೂ ಅಕಾಲಮೃತ್ಯು ಆಗುವುದಿಲ್ಲ. ತಂದೆಯು ಸ್ಮೃತಿ ತರಿಸುತ್ತಾರೆ, ನಿಮಗೆ ಎಷ್ಟೊಂದು ರಾಜ್ಯಭಾಗ್ಯವಿತ್ತು. ಈಗ ರಾವಣನು ಲೂಟಿ ಮಾಡಿದ್ದಾನೆ. ಅಲ್ಲಿ ಈ ಮಂದಿರ ಇತ್ಯಾದಿಗಳಿರುವುದಿಲ್ಲ. ನಿಮ್ಮ ಘೋಷಣಾ ವಾಕ್ಯಗಳೂ ಇವೆ, ಭಾರತದ ಆದಿ ಸನಾತನ ದೇವಿ-ದೇವತಾ ಧರ್ಮಕ್ಕೆ ಜಿಂದಾಬಾದ್, ಉಳಿದೆಲ್ಲವೂ ಮುರ್ದಾಬಾದ್ ಅರ್ಥಾತ್ ಅನೇಕ ಧರ್ಮಗಳ ವಿನಾಶ. ಅಲ್ಲಿ ಕೇವಲ ಒಂದೇ ಭಾರತ ಖಂಡವಿತ್ತು, ಒಂದು ಖಂಡದಲ್ಲಿ ಮನುಷ್ಯರೂ ಸಹ ಕೆಲವರೇ ಇರುವರು. ನೀವು ಬರೆಯಬಹುದು - ಸ್ವಲ್ಪವೇ ಸಮಯದಲ್ಲಿ ಭಾರತದ ಜನ ಸಂಖ್ಯೆಯು 9 ಲಕ್ಷವಾಗುವುದು. ಮತ್ತೆಲ್ಲರೂ ಸಮಾಪ್ತಿಯಾಗುವರು. ಈಗ ಒಂದು ಧರ್ಮದ ಸ್ಥಾಪನೆಯಾಗುತ್ತಿದೆ, ಹೊಸ ದೈವೀ ರಾಜ್ಯದಲ್ಲಿ ಒಂದೇ ಭಾಷೆ, ಒಂದೇ ರೀತಿ-ನೀತಿ ಇರುವುದು. ಇಲ್ಲಿ ಪ್ರತಿಯೊಬ್ಬರ ರೀತಿ-ನೀತಿಯೇ ಬೇರೆಯಾಗಿದೆ, ಅಲ್ಲಿ ಒಂದು ರಾಜ್ಯ, ಒಂದು ಮತವಿತ್ತು - ನೀವು ಇಂತಹ ಘೋಷಣಾ ವಾಕ್ಯಗಳನ್ನು ಪತ್ರಿಕೆಗಳಲ್ಲಿಯೂ ಹಾಕಿಸಬಹುದು. ಕೆಲವರು ಸಲಹೆಯನ್ನು ಕೇಳುತ್ತಾರೆ - ಬಾಬಾ, ಹಣವನ್ನು ಖರ್ಚು ಮಾಡಿ ಪತ್ರಿಕೆಗಳಲ್ಲಿ ಹಾಕಿಸುವುದೇ? ತಂದೆಯು ತಿಳಿಸುತ್ತಾರೆ - ಭಲೆ ಹಾಕಿಸಿರಿ, ಏನು ನಡೆಯುತ್ತಿದೆ ಎಂಬುದು ಮನುಷ್ಯರಿಗೆ ಅರ್ಥವಾಗಲಿ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ಸೂರ್ಯವಂಶಿ ದೇವಿ-ದೇವತ���ಗಳದು ಒಂದು ಧರ್ಮ, ಒಂದು ಮತವಿತ್ತು ಎಂಬುದನ್ನೂ ಹೇಳುತ್ತಾರೆ. ಈ ಮಹಾಭಾರತ ಯುದ್ಧದ ನಂತರ ಸ್ವರ್ಗದ ದ್ವಾರಗಳು ತೆರೆದಿತ್ತು. ಪತ್ರಿಕೆಗಳಲ್ಲಿ ಹಾಕಿಸುವಾಗ ಹೆಸರು ಬ್ರಹ್ಮಾಕುಮಾರ-ಕುಮಾರಿ ಎಂದು ಇರಬಾರದು ಆದರೆ ಯಾವಾಗ ಪವಿತ್ರರಾಗಿರುತ್ತೀರಿ ಆಗಲೇ ಬಿ.ಕೆ. ಎಂದು ಕರೆಸಿಕೊಳ್ಳಲಾಗುತ್ತದೆ. ತಂದೆಯನ್ನು ಕರೆದಿದ್ದೀರಿ, ಈಗ ತಂದೆಯು ಬಂದಿದ್ದಾರೆ ಅಂದಮೇಲೆ ತಂದೆಯೊಂದಿಗೆ ಪ್ರತಿಜ್ಞೆ ಮಾಡಿರಿ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಅಲೆದಾಡಿದಿರಿ! ಯಜ್ಞ, ತಪ, ದಾನ-ಪುಣ್ಯಗಳನ್ನು ಮಾಡಿದಿರಿ. ಮೊದಲು ಒಬ್ಬ ಶಿವನ ಭಕ್ತಿ ಮಾಡುತ್ತಿದ್ದಿರಿ ನಂತರ ದೇವತೆಗಳಿಗೆ ಭಕ್ತಿ ಮಾಡಿದಿರಿ. ಈಗ ವ್ಯಭಿಚಾರಿ ಭಕ್ತಿಯಾಗಿ ಬಿಟ್ಟಿದೆ. ತಂದೆಯು ನಿಮ್ಮನ್ನು ಈಗ ಎಲ್ಲಾ ದುಃಖಗಳಿಂದ ಬಿಡುಗಡೆ ಮಾಡುತ್ತಾರೆ. ತಂದೆಯು ನೀವು ಮಕ್ಕಳಿಗೇ ಜ್ಞಾನವನ್ನು ಕೊಟ್ಟು ಎಷ್ಟು ಶ್ರೇಷ್ಠ, ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಿ ನಿಮ್ಮ ಬಳಿ ಎಲ್ಲವೂ ಚಿನ್ನದ್ದೇ ಇರುವುದು. ತಂದೆಯು ನಿಮಗೆ ಶ್ರೀಮತವನ್ನು ಕೊಟ್ಟು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ನೀವು ಶ್ರೀಮತದಂತೆ ಏಕೆ ನಡೆಯುವುದಿಲ್ಲ! ತಂದೆಯು ಯಮ ಪಾಶದಿಂದ ಬಿಡಿಸುತ್ತಾರೆ, ಗರ್ಭಜೈಲಿನ ಶಿಕ್ಷೆಗಳಿಂದ ಬಿಡಿಸುತ್ತಾರೆ. ನೀವು ಸ್ವರ್ಗದಲ್ಲಿ ಗರ್ಭ ಮಹಲಿನಲ್ಲಿ ಇರುತ್ತೀರಿ. ಇಲ್ಲಿ ಜೈಲಾಗಿದೆ ಏಕೆಂದರೆ ಮನುಷ್ಯರು ಪಾಪ ಕರ್ಮ ಮಾಡುತ್ತಾರೆ. ಅಲ್ಲಿ ಪಂಚ ವಿಕಾರಗಳೇ ಇರುವುದಿಲ್ಲ, ಆದರೂ ಸಹ ರಾಜ-ರಾಣಿ ಮತ್ತು ಪ್ರಜೆಗಳ ಪದವಿಯಲ್ಲಿ ಅಂತಹವರಂತೂ ಇರುತ್ತಾರೆಯಲ್ಲವೇ. ಹಣ ಸಂಪಾದಿಸಲು ಮನುಷ್ಯರು ಪರಿಶ್ರಮ ಪಡುತ್ತಾರಲ್ಲವೇ. ಅಲ್ಲಿ ಮಂತ್ರಿಗಳಿರುವುದಿಲ್ಲ ಏಕೆಂದರೆ ನೀವು ಇಲ್ಲಿನ ಪ್ರಾಲಬ್ಧವನ್ನು ಪಡೆಯುತ್ತೀರಿ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಶ್ರೀಮತದಂತೆ ನಡೆಯಿರಿ, ನಾನು ದೂರ ದೇಶದಿಂದ ಪತಿತ ರಾಜ್ಯದಲ್ಲಿ ಪತಿತ ಶರೀರದಲ್ಲಿ ಬಂದಿದ್ದೇನೆ. ಇದು ರಾವಣನ ದೇಶವಾಗಿದೆ, ನಾನು ಬಂದು ನೀವು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತೇನೆ. ಇಂತಹ ತಂದೆಯ ಆಜ್ಞೆಯನ್ನು ಪಾಲಿಸದಿದ್ದರೆ ಅಂತಹವರು ಕುಪುತ್ರರಾದರು. ವಿಕಾರದ ಹಿಂದೆ ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕೆ? ತಂದೆಯು ತಿಳಿಸುತ್ತಾರೆ - ಈ ವಿಕಾರವು ದುಃಖ ಕೊಡುವಂತದ್ದಾಗಿದೆ, ಪತಿತರನ್ನು ಪಾವನ ಮಾಡುವುದು ನನ್ನ ಕರ್ತವ್ಯವಾಗಿದೆ. ತಂದೆಯು ಎಷ್ಟು ಪ್ರೀತಿಯಿಂದ ತಿಳಿಸುತ್ತಾರೆ - ತಿನ್ನಿರಿ, ಕುಡಿಯಿರಿ. ಸುಖಿಯಾಗಿ ಇರಿ ಆದರೆ ನಾವು ಶಿವ ತಂದೆಯ ಬಳಿ ಬಂದಿದ್ದೇವೆ, ಅವರಿಂದ ನಮ್ಮ ಪಾಲನೆಯಾಗುತ್ತಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಒಂದುವೇಳೆ ಮಿತ್ರ ಸಂಬಂಧಿ ಮೊದಲಾದವರ ವಸ್ತುಗಳನ್ನು ಧರಿಸುತ್ತೀರೆಂದರೆ ಅವರೇ ನೆನಪಿಗೆ ಬರುತ್ತಾರೆ, ಪದವಿಯು ಭ್ರಷ್ಟವಾಗುತ್ತದೆ. ಇಲ್ಲಿ ಶಿವ ತಂದೆಯ ಭಂಡಾರದಿಂದ, ಪತಿತ-ಪಾವನ ತಂದೆಯ ಯಜ್ಞದಿಂದ ಪಾಲನೆಯಾಗಬೇಕಾಗಿದೆ, ಪತಿತ ಮನೆಯಿಂದಲ್ಲ. ಯಾರಾದರೂ ಕೊಟ್ಟಿರುವ ವಸ್ತುವಿದ್ದರೆ ಅವರೇ ನೆನಪಿಗೆ ಬರುತ್ತಾರೆ. ಅದಕ್ಕಾಗಿಯೇ ಗಾಯನವಿದೆ - ಯಾರು ಅಂತ್ಯಕಾಲದಲ್ಲಿ ಸ್ತ್ರೀಯನ್ನು ಸ್ಮರಣೆ ಮಾಡಿದರೋ ಅವರಿಗೆ...... ಎಷ್ಟು ಒಳ್ಳೆಯ ಸ್ಥಿತಿಯಿರಬೇಕು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಬುದ್ಧಿಯಿಂದ ತಿಳಿದುಕೊಳ್ಳಿ- ಇವರೆಲ್ಲರೂ ಸಮಾಪ್ತಿಯಾಗಿ ಬಿಟ್ಟಿದ್ದಾರೆ. ನನ್ನವರು ಒಬ್ಬ ತಂದೆಯಾಗಿದ್ದಾರೆ. ಈಗ ತಂದೆಯ ಮಾಲೆಯ ಸ್ಮರಣೆ ಮಾಡುತ್ತೀರಾ? ನಾನು ನೀವು ಮಕ್ಕಳಿಗೆ ಸ್ಮೃತಿ ತರಿಸುತ್ತೇನೆ - ನನ್ನನ್ನು ನೆನಪು ಮಾಡಿರಿ ನಿಮಗೆ ಬಹಳ ಶಕ್ತಿ ಸಿಗುವುದು, ವಿಕರ್ಮಗಳು ವಿನಾಶವಾಗುತ್ತವೆ. ನೀವು ಬಲಶಾಲಿಗಳಾಗಿ ಬಿಡುತ್ತೀರಿ. ಈ ಲಕ್ಷ್ಮೀ-ನಾರಾಯಣರು ಬಲಶಾಲಿಗಳಲ್ಲವೆ, ಯಾರು ಬಲಶಾಲಿಗಳಾಗುವರೋ ಅವರೇ ರಾಜ್ಯವನ್ನು ಪಡೆಯುತ್ತಾರೆ. ಬ್ರಹ್ಮಾ ತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ - ನಾನು 12 ಮಂದಿ ಗುರುಗಳನ್ನು ಮಾಡಿಕೊಂಡೆನು, ಗುರುಗಳು ಹೇಳಿದರು - ಮುಂಜಾನೆ ಎದ್ದು ಸಾವಿರ ಮಾಲೆಗಳನ್ನು ಜಪಿಸಿರಿ. ಮತ್ತ್ಯಾವುದಾದರೂ ಸಮಯವನ್ನು ತಿಳಿಸಿ ಎಂದು ನಾವು (ಬ್ರಹ್ಮಾ) ಹೇಳುತ್ತಿದ್ದೆವು, ಇಡೀ ದಿನ ಉದ್ಯೋಗ-ವ್ಯವಹಾರಗಳಿಂದ ಸುಸ್ತಾಗಿ ಬಿಡುತ್ತೇವೆ ಎಂದು ನಾವು ಹೇಳುತ್ತಿದ್ದೆವು. ಹೇಗೆ ನೀವೂ ಸಹ ಬಾಬಾ, ಅಮೃತವೇಳೆ ಏಳಲು ಆಗುವುದಿಲ್ಲ ಎಂದು ಹೇಳುತ್ತೀರಿ. ನಾವು ಪವಿತ್ರರಾಗಿರಲು ಆಗುವುದಿಲ್ಲ, ನೆನಪಿನಲ್ಲಿರಲು ಆಗುವುದಿಲ್ಲ ಎಂದು ಹೇಳಬಾರದು. ತಂದೆಯು ತಿಳಿಸುತ್ತಾರೆ - ನೆನಪು ಮಾಡದಿದ್ದರೆ ವಿಕರ್ಮಗಳು ಹೇಗೆ ವಿನಾಶವಾಗುತ್ತವೆ! ನೀವು ಅವಶ್ಯವಾಗಿ ತಮೋಪ್ರಧಾನರಿಂದ ಸತೋಪ್ರಧಾನರು ಆಗಬೇಕಾಗಿದೆ. ಇದು ನಿಮ್ಮ ಅಂತಿಮ ಜನ್ಮವಾಗಿದೆ ಆದ್ದರಿಂದ ಅವಶ್ಯವಾಗಿ ಪವಿತ್ರರಾಗಬೇಕು. ತಂದೆಯ ಶ್ರೀಮತದಂತೆ ನಡೆಯದಿದ್ದರೆ ಪದವಿಯನ್ನೇನು ಪಡೆಯುತ್ತೀರಿ! ಅರ್ಧ ಕಲ್ಪದಿಂದ ನನ್ನನ್ನು ಕರೆದಿರಿ, ಈಗ ಹೇಳುತ್ತೇವೆ - ಪಾವನರಾಗಿ ನನ್ನನ್ನು ನೆನಪು ಮಾಡಿರಿ, ಅನ್ಯರಿಗೂ ಈ ಮಾರ್ಗವನ್ನು ತಿಳಿಸುತ್ತಿರಿ. ಸಂದೇಶವನ್ನು ಕೊಡಿ, ಮನ್ಮನಾಭವ. ಮೃತ್ಯುವು ಸನ್ಮುಖದಲ್ಲಿ ನಿಂತಿದೆ, ನಿಮಗೇ ಸಂದೇಶವಾಹಕರೆಂದು ಹೇಳಲಾಗುತ್ತದೆ. ನೀವು ಬ್ರಾಹ್ಮಣರಲ್ಲದೇ ಮತ್ತ್ಯಾರೂ ಸಂದೇಶವಾಹಕರಾಗಲು ಸಾಧ್ಯವಿಲ್ಲ. ಪತಿತ-ಪಾವನ ಶಿವ ತಂದೆಯು ಬರುತ್ತಾರೆ. ಯಾರಲ್ಲಿ ಪ್ರವೇಶ ಮಾಡುತ್ತಾರೆ ಎಂಬುದನ್ನೂ ಬರೆಯಲಾಗಿದೆ - ಬ್ರಹ್ಮನ ಮೂಲಕ ಸ್ಥಾಪನೆ. ಆದರೆ ಇದನ್ನು ತಿಳಿದುಕೊಳ್ಳುತ್ತಾರೆಯೇ! ಸೂಕ್ಷ್ಮವತನದಲ್ಲಿ ಪ್ರಜಾಪಿತ ಬ್ರಹ್ಮನಿರುವರೇ? ಇಲ್ಲಿಯೇ ಪತಿತರಿಂದ ಪಾವನರಾಗುತ್ತಾರೆ, ಶಾಂತಿಯ ಬಲದಿಂದ ಸ್ಥಾಪನೆಯಾಗುತ್ತದೆ. ವಿಜ್ಞಾನದ ಬಲದಿಂದ ವಿನಾಶವಾಗುತ್ತದೆ. ಶಾಂತಿಯು ಹೇಗೆ ಸಿಗುವುದು ಎಂದು ಎಲ್ಲರೂ ಕೇಳುತ್ತಾರೆ. ಆತ್ಮವಂತೂ ಶಾಂತ ಸ್ವರೂಪನಾಗಿದೆ, ಇಲ್ಲಿಗೆ ಪಾತ್ರವನ್ನು ಅಭಿನಯಿಸಲು ಬಂದಿದ್ದಾರೆ. ಇಲ್ಲಿ ಸಂಪೂರ್��� ಶಾಂತವಾಗಿರಲು ಹೇಗೆ ಸಾಧ್ಯ! ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿಯೇ ಸಿಗುವುದು, ಇಲ್ಲಂತೂ ದುಃಖವೇ ಸಿಗುತ್ತದೆ. ಸತ್ಯಯುಗದಲ್ಲಿ ಸುಖ-ಶಾಂತಿ ಎರಡೂ ಇರುತ್ತದೆ.
|
3 |
+
ಈಗ ನೀವು ಮಕ್ಕಳಿಲ್ಲಿ ಸನ್ಮುಖದಲ್ಲಿ ಕೇಳುತ್ತೀರಿ, ತಂದೆಯು ತಿಳಿಸುತ್ತಾರೆ - ಎಂದಿಗೂ ಪತಿತರು ನನ್ನೊಂದಿಗೆ ಮಿಲನವಾಗುವಂತಿಲ್ಲ. ಈ ರೀತಿಯಿಲ್ಲದಿದ್ದರೆ ಕರೆದುಕೊಂಡು ಬರುವಂತಹ ಬ್ರಾಹ್ಮಣಿಯರ ಮೇಲೆ ಪಾಪವೇರುವುದು. (ಇಂಧ್ರ ಸಭೆಯ ಪರಿಶ್ತೆಯ ಉದಾಹರಣೆ) ವಾಸ್ತವದಲ್ಲಿ ಇಂದ್ರ ಸಭೆಯು ಇದಾಗಿದೆ. ಇವರೆಲ್ಲರೂ ಜ್ಞಾನ ದೇವತೆಗಳಾಗಿದ್ದಾರೆ ಅಂದಮೇಲೆ ಇಲ್ಲಿ ಇನ್ನೂ ಪೆಟ್ಟು ಬೀಳುತ್ತದೆ, ತಂದೆಯು ಕಡ್ಡಾಯವಾಗಿ ನಿಷೇಧಿಸುತ್ತಾರೆ. ಯಾರೂ ಪತಿತರನ್ನು ಕರೆ ತರುವಂತಿಲ್ಲ. ಮೊದಲು ತಂದೆಯು ಯಾವಾಗಲೂ ಕೇಳುತ್ತಿದ್ದರು - ಪ್ರತಿಜ್ಞೆ ಮಾಡಿದ್ದೀರಾ? ಇನ್ನೂ ಪುರುಷಾರ್ಥ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದರು. ಯಾವಾಗ ಪಕ್ಕಾ ನಿಶ್ಚಯವಾಗುವುದೋ ಆಗ ಮಿಲನ ಮಾಡಿರಿ. ಒಂದುವೇಳೆ ಮಿಲನ ಮಾಡಿಕೊಂಡು ಹೋದ ನಂತರ ವಿಕಾರದಲ್ಲಿ ಬೀಳುತ್ತಾರೆಂದರೆ ನೂರು ಪಟ್ಟು ಪಾಪವಾಗುವುದು. ಬಹುಷಃ ಇವರ ಅದೃಷ್ಠದಲ್ಲಿ ಇಲ್ಲವೆಂದು ತಂದೆಯು ತಿಳಿದುಕೊಳ್ಳುವರು. ತಂದೆಯು ಅದೃಷ್ಠವನ್ನು ರೂಪಿಸುವುದಕ್ಕಾಗಿ ಪುರುಷಾರ್ಥ ಮಾಡಿಸುತ್ತಾರೆ. ಇಂತಹ ತಂದೆಯ ಮಾತನ್ನೇ ಪಾಲಿಸದಿದ್ದರೆ ಅಂತಹವರ ಗತಿಯೇನಾಗುವುದು! ತಂದೆಗೆ ದಯೆ ಬರುತ್ತದೆ, ತಂದೆಯು ತಿಳಿಸುತ್ತಾರೆ - ತಮ್ಮನ್ನು ಪರಿವರ್ತನೆ ಮಾಡಿಕೊಳ್ಳುತ್ತಾ ಹೋಗಿರಿ. ಪರಿವರ್ತನೆಯಾಗದೆ ಹಾಗೆಯೇ ನಡೆಯುತ್ತಾ-ನಡೆಯುತ್ತಾ ಶರೀರ ಬಿಡುವಂತಾಗಬಾರದು. ನಾವು ತಂದೆಯನ್ನು ನೆನಪು ಮಾಡಿ ಪಾಪಗಳ ಹೊರೆಯನ್ನು ಇಳಿಸಿಕೊಳ್ಳಬೇಕೆಂಬ ಭಯವಿರಲಿ. ಒಳ್ಳೆಯದು.
|
4 |
+
ಎಲ್ಲರ ಸದ್ಗತಿ ಮಾಡುವವರು ಒಬ್ಬರೇ ಶಿವ ತಂದೆಯಾಗಿದ್ದಾರೆ. ಅವರ ಭಾವಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ, ಅವರನ್ನು ದಿವ್ಯ ದೃಷ್ಟಿಯಿಂದಲೇ ನೋಡಬಹುದಾಗಿದೆ ಆದರೆ ಅವರನ್ನು ಅನುಭವ ಮಾಡಬಹುದು. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ಅಂತ್ಯ ಕಾಲದಲ್ಲಿ ಒಬ್ಬ ತಂದೆಯ ನೆನಪೇ ಬರಲಿ - ಅಂತಹ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ. ಮತ್ತ್ಯಾರೂ ನೆನಪಿಗೆ ಬರಬಾರದು. ಬುದ್ಧಿಯಲ್ಲಿರಲಿ - ಇದೆಲ್ಲವೂ ವಿನಾಶವಾಗಲಿದೆ.
|
8 |
+
2. ತಮ್ಮನ್ನು ತಾವು ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ಈ ಅಂತಿಮ ಜನ್ಮದಲ್ಲಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ನನ್ನಿಂದ ಯಾವುದೇ ಪಾಪ ಕರ್ಮವಾಗಬಾರದು ಎಂಬ ಭಯವಿರಲಿ.
|
BKMurli/BKMurli/page_1038.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಯಾರೆಲ್ಲರೂ ಮಕ್ಕಳು ಕುಳಿತಿದ್ದೀರಿ, ಅವರು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯ ಅಥವಾ ಸ್ವದರ್ಶನ ಚಕ್ರವನ್ನು ನೆನಪು ಮಾಡುತ್ತೀರಿ. ತಂದೆಯು ಮಕ್ಕಳಿಗೆ ಜ್ಞಾನವನ್ನು ನೀಡಿದ್ದಾರೆ - ಮಕ್ಕಳೇ, ಸ್ವದರ್ಶನ ಚಕ್ರಧಾರಿಗಳಾಗಿರಿ. ಸ್ವದರ್ಶನ ಚಕ್ರಧಾರಿಗಳಾಗುವುದು ನೀವು ಬ್ರಾಹ್ಮಣ ಮಕ್ಕಳ ಉದ್ದೇಶವಾಗಿದೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ, 84 ಜನ್ಮಗಳ ಚಕ್ರವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಬೇರೆಲ್ಲಾ ಮಾತುಗಳನ್ನು ಬುದ್ಧಿಯಿಂದ ತೆಗೆದುಹಾಕಬೇಕಾಗಿದೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ - ಅವಶ್ಯವಾಗಿ ತಂದೆಯು ನಮ್ಮನ್ನು ಸೂರ್ಯವಂಶಿ-ಚಂದ್ರವಂಶಿಯನ್ನಾಗಿ ಮಾಡಿದ್ದರು, ನಂತರ 84 ಜನ್ಮಗಳನ್ನು ತೆಗೆದುಕೊಂಡೆವು. ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ಆತ್ಮನಿಗೆ ತಂದೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಿರುತ್ತದೆ. ಈಗ ನಿಮ್ಮನ್ನು ಶಿವ ತಂದೆಯು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿದ್ದಾರೆ. ನೀವು 84 ಜನ್ಮಗಳ ಚಕ್ರದ ಆಟವನ್ನು ಯಾವರೀತಿ ಆಡುತ್ತೀರಿ ಎಂಬುದನ್ನು ತಂದೆಯು ತಿಳಿಸಿದ್ದಾರೆ. ಮೊಟ್ಟ ಮೊದಲು ನಾವು ಬ್ರಾಹ್ಮಣರಾಗಿದ್ದೇವೆ, ನಾವು ಬ್ರಾಹ್ಮಣರನ್ನು ರಚಿಸುವವರು ಬ್ರಹ್ಮನ ಮೂಲಕ ಶಿವ ತಂದೆಯಾಗಿದ್ದಾರೆ. ರಚಯಿತ ಮತ್ತು ರಚನೆಯ ಜ್ಞಾನದಿಂದಲೇ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ಈ ಜ್ಞಾನವನ್ನು ಬುದ್ಧಿಯಲ್ಲಿ ಸ್ಥಿರವಾಗಿ ಇಟ್ಟುಕೊಳ್ಳಬೇಕಾಗಿದೆ. ಮುಂಜಾನೆಯೆದ್ದು ಸ್ವದರ್ಶನ ಚಕ್ರಧಾರಿಗಳಾಗಿ ಕುಳಿತುಕೊಳ್ಳಬೇಕು. ನಾವು ನಮ್ಮ 84 ಜನ್ಮಗಳ ಚಕ್ರವನ್ನು ಅರಿತುಕೊಂಡಿದ್ದೇವೆ. ನಾವೆಲ್ಲಾ ಆತ್ಮರ ರಚಯಿತನು ಒಬ್ಬ ತಂದೆಯೇ ಆಗಿದ್ದಾರೆ, ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಎಂದು ತಿಳಿಸಿದ್ದಾರೆ. ನಮ್ಮ ತಂದೆಯು ಆ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಪರಮಧಾಮ ನಿವಾಸಿಯಾಗಿದ್ದಾರೆ. ನಾವೂ ಸಹ ಅಲ್ಲಿಯೇ ಇದ್ದೆವು. ಅವರು ನಮ್ಮ ತಂದೆಯಾಗಿದ್ದಾರೆ, ಬಾಬಾ ಎಂಬ ಶಬ್ಧವು ಬಹಳ ಪ್ರಿಯವಾಗಿದೆ. ಶಿವ ತಂದೆಯ ಮಂದಿರದಲ್ಲಿ ಹೋಗಿ ಎಷ್ಟೊಂದು ಪೂಜೆ ಮಾಡುತ್ತಾರೆ, ಬಹಳ ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಮನುಷ್ಯರಿಂದ ದೇವತೆ, ತುಚ್ಛ ಬುದ್ಧಿಯವರಿಂದ ಸ್ವಚ್ಛ ಬುದ್ಧಿಯವರನ್ನಾಗಿ ಮಾಡುತ್ತೇನೆ. ತುಚ್ಛ ಬುದ್ಧಿ ಅರ್ಥಾತ್ ಶೂದ್ರ ಬುದ್ಧಿಯಿಂದ ಸ್ವಚ್ಛ ಬುದ್ಧಿಯವರನ್ನಾಗಿ ಮಾಡಿದ್ದೆನು ಅರ್ಥಾತ್ ಶ್ರೇಷ್ಠ ಬುದ್ಧಿ ಪುರುಷೋತ್ತಮ ಬುದ್ಧಿಯವರನ್ನಾಗಿ ಮಾಡಿದ್ದೆನು. ಸ್ತ್ರೀ-ಪುರುಷರೆಲ್ಲರೂ ಈ ಲಕ್ಷ್ಮೀ-ನಾರಾಯಣರಿಗೆ ನಮಸ್ಕಾರ ಮಾಡುತ್ತಾರೆ. ಆದರೆ ಇವರು ಯಾರು, ಯಾವಾಗ ಬಂದರು, ಏನು ಮಾಡಿದರು ಎಂದು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಈ ಭಾರತವು ಅವಿನಾಶಿ ಖಂಡವಾಗಿದೆ ಏಕೆಂದರೆ ಅವಿನಾಶಿ ತಂದೆಯಾದ ಪರಮಪಿತ ಪರಮಾತ್ಮನ ಜನ್ಮಭೂಮಿಯಾಗ���ದೆ, ಪತಿತ-ಪಾವನ, ಸರ್ವರ ಸದ್ಗತಿದಾತನ ಜನ್ಮಸ್ಥಾನವಾಗಿದೆ ಅಂದಮೇಲೆ ಇದು ಬಹಳ ದೊಡ್ಡ ತೀರ್ಥ ಸ್ಥಾನವಾಯಿತು ಆದರೆ ಇದು ಪರಮಪಿತ ಪರಮಾತ್ಮನ, ಸರ್ವರ ಸದ್ಗತಿದಾತನ ಜನ್ಮಭೂಮಿಯಾಗಿದೆ ಎಂಬ ನಶೆಯು ಯಾರಿಗಾದರೂ ಇದೆಯೇ!! ಪತಿತ-ಪಾವನ ತಂದೆಯ ಜಯಂತಿಯು ಭಾರತದಲ್ಲಿಯೇ ಆಗಿದೆ, ಶಿವ ಜಯಂತಿಯನ್ನೂ ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಶಿವನ ಜನ್ಮವು ಇಲ್ಲಿಯೇ ಆಗುತ್ತದೆ. ಈ ಭಾರತವು ದೊಡ್ಡ ತೀರ್ಥ ಸ್ಥಾನವಾಗಿದೆ. ಆದರೆ ಇದು ನಮ್ಮ ಪರಮಪಿತ ಅಥವಾ ಮಾತಾಪಿತ, ಪತಿತ-ಪಾವನ, ಸರ್ವರ ಸದ್ಗತಿದಾತ ತಂದೆಯ ಜನ್ಮ ಸ್ಥಾನವಾಗಿದೆ ಡ್ರಾಮಾನುಸಾರ ಯಾರಿಗೂ ಗೊತ್ತಿಲ್ಲ. ಆದ್ದರಿಂದಲೇ ಭಾರತ ಭೂಮಿಯನ್ನು ವಂದೇ ಮಾತರಂ ಎಂದು ಹೇಳುತ್ತಾರೆ ಅರ್ಥಾತ್ ಈ ಭೂಮಿಯ ಮೇಲೆ ಈ ಕನ್ಯೆಯರು ಶ್ರೀಮತದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಅವರಿಗೆ ಈ ನಶೆಯಿರಬೇಕು - ಶ್ರೀಮತದಂತೆ ನಾವು ಕಲ್ಪ-ಕಲ್ಪವೂ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ. ಯಾರೆಷ್ಟು ಶ್ರೀಮತದಂತೆ ನಡೆಯುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಭಾರತವಾಸಿಗಳು ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ನಿಮಗೆ ತಿಳಿದಿದೆ - ಈ ಭಾರತವು ತಂದೆಯ ಜನ್ಮಸ್ಥಾನವಾಗಿದೆ, ಆ ತಂದೆಯು ಯಾವ ಧರ್ಮ ಸ್ಥಾಪನೆ ಮಾಡಿದರೋ, ಅದರ ಧರ್ಮ ಗ್ರಂಥವಾಗಿದೆ – ಗೀತೆ (ಭಗವದ್ಗೀತೆ), ಗೀತೆಯನ್ನು ಯಾರು ತಿಳಿಸಿದರು ಎಂಬುದನ್ನೇ ಭಾರತವಾಸಿಗಳು ಮರೆತು ಹೋಗಿದ್ದಾರೆ! ಎಷ್ಟೊಂದು ಅಂತರವಾಗಿ ಬಿಟ್ಟಿದೆ! ನಿರಾಕಾರ ಶಿವನೆಲ್ಲಿ ಮತ್ತು ಶ್ರೀಕೃಷ್ಣನೆಲ್ಲಿ! ನಿಮಗೆ ತಿಳಿದಿದೆ - ಕೃಷ್ಣನ ಆತ್ಮವೇ ಸುಂದರವಾಗಿತ್ತು, ಈಗ ಆ ಆತ್ಮವು ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿ ತಮೋಪ್ರಧಾನವಾಗಿ ಬಿಟ್ಟಿದೆ. ಪುನಃ ಇವರಲ್ಲಿ(ಬ್ರಹ್ಮಾ) ಶಿವ ತಂದೆಯು ಪ್ರವೇಶ ಮಾಡಿ, ಇವರನ್ನೇ ಸುಂದರ ಶ್ರೀಕೃಷ್ಣನನ್ನಾಗಿ ಮಾಡುತ್ತಿದ್ದಾರೆ ಆದ್ದರಿಂದ ಕೃಷ್ಣನಿಗೆ ಶ್ಯಾಮ ಮತ್ತು ಸುಂದರನೆಂದು ಹೇಳುತ್ತಾರೆ. ಕೃಷ್ಣನು ಸತ್ಯಯುಗದ ಮೊದಲನೇ ಸುಂದರ ರಾಜಕುಮಾರನಾಗಿದ್ದನು. ಮರ್ಯಾದಾ ಪುರುಷೋತ್ತಮ, ಅಹಿಂಸಾ ಪರಮೋಧರ್ಮಿ ಎಂದು ಮಹಿಮೆಯಿದೆ. ಭಾರತವಾಸಿಗಳಿಗೆ ರಾಧೆ-ಕೃಷ್ಣ ಮತ್ತು ಲಕ್ಷ್ಮೀ-ನಾರಾಯಣರ ಪರಸ್ಪರ ಸಂಬಂಧವೇನು ಎಂಬುದೂ ಸಹ ತಿಳಿದಿಲ್ಲ. ತಂದೆಯು ಹೇಳುತ್ತಾರೆ - ಇಲ್ಲಿಯವರೆಗೆ ಏನೆಲ್ಲವನ್ನೂ ಓದುತ್ತಾ ಬಂದಿದ್ದೀರೋ ಅದರಲ್ಲಿ ಯಾವುದೇ ಸಾರವಿಲ್ಲ. ಈಗ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ - ತಂದೆಯು 5000 ವರ್ಷಗಳ ನಂತರ ನಮಗೆ ಪುನಃ ರಾಜಯೋಗದ ಶಿಕ್ಷಣ ಕೊಡುತ್ತಿದ್ದಾರೆ. ಕೃಷ್ಣನು ಗೀತೆಯನ್ನು ಹೇಳಿದನೆಂದು ಇಡೀ ಪ್ರಪಂಚವು ಹೇಳುತ್ತದೆ. ತಂದೆಯು ಹೇಳುತ್ತಾರೆ - ಕೃಷ್ಣನಲ್ಲಿ ಸೃಷ್ಠಿಯ ಆದಿ-ಮಧ್ಯ-ಅಂತ್ಯದ ಜ್ಞಾನವೇ ಇಲ್ಲ. ಕೃಷ್ಣನ ಆತ್ಮವೂ ಸಹ ತನ್ನ ಹಿಂದಿನ ಜನ್ಮದಲ್ಲಿ ಈ ಜ್ಞಾನವನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಈ ಕಲ್ಪದಲ್ಲಿ ಈಗ ಪುನಃ ಪ್ರಾಪ್ತಿ ಮಾಡಿಕೊಳ್ಳುತ್ತಿದ್ದಾರೆ, ಇವರಿಗೆ ನಾನು ಬ್ರಹ್ಮಾ ಎಂದು ಹೆಸರನ್ನು ಇಟ್ಟಿದ್ದೇನೆ. ಅವರ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ, ನೀವು ಮರುಜೀವಿಗಳಾಗಿದ್ದೀರಲ್ಲವೆ. ಆದಿಯಲ್ಲಿ ಕೆಲವರಿಗೆ ಅವ್ಯಕ್ತ ಹೆಸರುಗಳನು ಇಡಲಾಗುತ್ತಿತ್ತು, ಈಗ ಇಡುವುದಿಲ್ಲ ಏಕೆಂದರೆ ಅನೇಕರು ವಿಚ್ಛೇದನವನ್ನು ಕೊಟ್ಟು ಬಿಟ್ಟರು, ತಂದೆಯ ಮಕ್ಕಳಾಗಿ ಹೆಸರನ್ನು ಇಟ್ಟ ನಂತರದಲ್ಲಿಯೂ ಜ್ಞಾನವನ್ನು ಬಿಟ್ಟು ಹೋಗುವುದು ಶೋಭಿಸುವುದಿಲ್ಲ ಆದ್ದರಿಂದ ಹೆಸರಿಡುವುದನ್ನು ನಿಲ್ಲಿಸಲಾಯಿತು. ನೀವೀಗ ಬ್ರಾಹ್ಮಣರಾಗಿದ್ದೀರಿ, ಪ್ರಜಾಪಿತ ಬ್ರಹ್ಮನ ಮಕ್ಕಳು ಶಿವ ತಂದೆಯ ಮೊಮ್ಮಕ್ಕಳಾಗಿದ್ದೀರಿ. ತಂದೆಯು ಹೇಳುತ್ತಾರೆ - ನೀವು ಆಸ್ತಿಯನ್ನು ನನ್ನಿಂದಲೇ ತೆಗೆದುಕೊಳ್ಳಬೇಕಾಗಿದೆ ಆದ್ದರಿಂದ ನನ್ನನ್ನೇ ನೆನಪು ಮಾಡಿರಿ. ಈ ಬ್ರಹ್ಮಾರವರದು ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ, ಸೂಕ್ಷ್ಮವತನದಲ್ಲಿ ಯಾವ ಬ್ರಹ್ಮನನ್ನು ತೋರಿಸುತ್ತಾರೆಯೋ ಅವರು ಪಾವನನಾಗಿದ್ದಾರೆ. ವಾಸ್ತವದಲ್ಲಿ ಪ್ರಜಾಪಿತನು ಸೂಕ್ಷ್ಮವತನದಲ್ಲಿರಲು ಸಾಧ್ಯವಿಲ್ಲ ಅಂದರೆ ವ್ಯಕ್ತ ಬ್ರಹ್ಮನೇ ಪುರುಷಾರ್ಥ ಮಾಡಿ ಅವ್ಯಕ್ತ ಬ್ರಹ್ಮನಾಗುತ್ತಾರೆ. ಇವರು ವ್ಯಕ್ತ ಬ್ರಹ್ಮನಾಗಿದ್ದಾರೆ, ಪವಿತ್ರ ಫರಿಶ್ತೆಯಾಗುವುದಕ್ಕಾಗಿ ಇವರು ಮಾನವ ವಂಶ ವೃಕ್ಷದ ತುದಿಯಲ್ಲಿ ನಿಂತಿದ್ದಾರೆ ಮತ್ತು ಕೆಳಗೆ ಮಕ್ಕಳ ಜೊತೆ ತಪಸ್ಸಿನಲ್ಲಿ ಕುಳಿತಿದ್ದಾರೆ ಆದ್ದರಿಂದ ಇವರನ್ನು ಸೂಕ್ಷ್ಮವತನದಲ್ಲಿ ತೋರಿಸಬೇಕಾಗುತ್ತದೆ. ಇಲ್ಲಿಯೂ ಸಹ ಪ್ರಜಾಪಿತನು ಅವಶ್ಯವಾಗಿ ಬೇಕಾಗಿದ್ದಾರೆ. ಸೂಕ್ಷ್ಮವತನದಲ್ಲಿ ಅವ್ಯಕ್ತ ಬ್ರಹ್ಮಾ, ಇಲ್ಲಿ ವ್ಯಕ್ತ ಬ್ರಹ್ಮಾ. ನೀವೂ ಸಹ ಫರಿಶ್ತೆಗಳಾಗಲು ಬಂದಿದ್ದೀರಿ, ಇದರಲ್ಲಿಯೇ ಮನುಷ್ಯರು ತಬ್ಬಿಬ್ಬಾಗುತ್ತಾರೆ ಏಕೆಂದರೆ ಇದು ಸಂಪೂರ್ಣವಾಗಿ ಹೊಸ ಜ್ಞಾನವಾಗಿದೆ. ಯಾವುದೇ ಶಾಸ್ತ್ರಗಳಲ್ಲಿ ಈ ಜ್ಞಾನವಿಲ್ಲ. ಭಗವಂತನು ಒಬ್ಬರೇ ಸರ್ವಶ್ರೇಷ್ಠ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಅವರ ನಿವಾಸ ಸ್ಥಾನವು ಪರಮಧಾಮವಾಗಿದೆ. ಅವರನ್ನು ಎಲ್ಲರೂ ಹೀಗೆ ನೆನಪು ಮಾಡುತ್ತಾರೆ - ನಮ್ಮ ಮೇಲೆ ಮಾಯೆಯ ನೆರಳು ಬಿದ್ದಿದೆ, ಪತಿತರಾಗಿ ಬಿಟ್ಟಿದ್ದೇವೆ ಆದ್ದರಿಂದ ಬನ್ನಿ. ಈ ಮಾತುಗಳು ಹೊಸಬರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನೀವೀಗ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಬಹಳ ಕೆಲವರೇ ರಾಜ್ಯಭಾರ ಮಾಡುತ್ತಿದ್ದರು, ಅಲ್ಲಿ ಅಧರ್ಮದ ಮಾತೇ ಇರುವುದಿಲ್ಲ. ಶಾಸ್ತ್ರಗಳಲ್ಲಿ ಎಷ್ಟೊಂದು ಮಾತುಗಳನ್ನು ಬರೆದು ಬಿಟ್ಟಿದ್ದಾರೆ ಆದರೆ ಅದರಲ್ಲಿ ಯಾವುದೇ ಸಾರವಿಲ್ಲ. ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಈಗ ಅಂತ್ಯದಲ್ಲಿ ಬಂದು ಪತಿತರಾಗಿದ್ದೀರಿ. ನೀವೀಗ ಮೇಲೇರುತ್ತೀರಿ. ಇಳಿಯುವುದರಲ್ಲಿ 84 ಜನ್ಮಗಳು ಹಿಡಿಸಿತು, ಈಗ ಸೆಕೆಂಡಿನಲ್ಲಿ ಮೇಲೇರುತ್ತೀರಿ.
|
2 |
+
ನೀವು ಮಕ್ಕಳು ಈಗ ರಾಜಯೋಗವನ್ನು ಕಲಿಯುತ್ತಿದ್ದೀರಿ ನಂತರ ಶಾಂತಿಧಾಮದಲ್ಲಿ ಹೋಗಿ ಸುಖಧಾಮದಲ್ಲಿ ಬರುತ್ತೀರಿ. ಇದು ದುಃಖಧಾಮವಾಗಿದೆ. ಮೊದಲು ನೀವೇ ಬಂದಿದ್ದೀರಿ ಆದ್ದರಿಂದ ತಂದೆಯೂ ಸಹ ಮೊಟ್ಟ ಮೊದಲು ನಿಮ್ಮೊಂದಿಗೆ ಬಂದು ಮಿಲನ ಮಾಡುತ್ತಾರೆ. ಇಲ್ಲಿ ತಂದೆ ಮತ್ತು ಮಕ್ಕಳು, ಆತ್ಮರು ಮತ್ತು ಪರಮಾತ್ಮನ ಮೇಳವಾಗುತ್ತದೆ. ಲೆಕ್ಕವಿದೆಯಲ್ಲವೆ - ನಾವು ತಂದೆಯಿಂದ ವಿದಾಯಿಯನ್ನು ಪಡೆದು 5000 ವರ್ಷಗಳಾಯಿತು, ಮೊಟ್ಟ ಮೊದಲೇ ಸ್ವರ್ಗದಲ್ಲಿ ಪಾತ್ರವನ್ನು ಅಭಿನಯಿಸಿದೆವು. ಅಲ್ಲಿಂದ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಕೆಳಗಿಳಿದು ಬಂದಿದ್ದೇವೆ. ಈಗ ತಂದೆಯ ಬಳಿ ಬಂದು ಬಿಟ್ಟಿದ್ದೇವೆ. ಇನ್ನು ಅಲ್ಪಸ್ವಲ್ಪ ಯಾರೆಲ್ಲರೂ ಪರಮಧಾಮದಲ್ಲಿ ಉಳಿದಿದ್ದಾರೆಯೋ ಅವರೂ ಬಂದು ಬಿಡುತ್ತಾರೆ ಅನಂತರ ವಿದ್ಯಾಭ್ಯಾಸ ಸಮಾಪ್ತಿಯಾಗುವುದು. ಎಲ್ಲರೂ ಇಲ್ಲಿಗೆ ಬರಬೇಕಾಗಿದೆ. ಯಾವಾಗ ಪರಮಧಾಮದಲ್ಲಿ ಖಾಲಿಯಾಗಿ ಬಿಡುವುದೋ ಆಗ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುವರು. ಇದು ತಿಳಿದುಕೊಳ್ಳುವ ಮಾತುಗಳಾಗಿವೆ. ಇಲ್ಲಿ ಓದಬೇಕಾಗಿದೆ. ಶಾಲೆಗೆ ಕೆಲವೊಮ್ಮೆ ಹೋಗುವುದು, ಕೆಲವೊಮ್ಮೆ ಹೋಗದೇ ಇರುವುದು - ಈ ಕಾಯಿದೆ ಇಲ್ಲ. ತಂದೆಯು ವಿದ್ಯಾಭ್ಯಾಸಕ್ಕಾಗಿ ಅನೇಕ ಪ್ರಬಂಧಗಳನ್ನು ನೀಡಿದ್ದಾರೆ. ವಾಸ್ತವದಲ್ಲಿ ಲೌಕಿಕ ವಿದ್ಯೆಯು ಎಂದೂ ಯಾರ ಬಳಿಯೂ ಅಂಚೆಯ ಮೂಲಕ ಹೋಗುವುದಿಲ್ಲ ಆದರೆ ಈ ಬೇಹದ್ದಿನ ತಂದೆಯ ವಿದ್ಯೆಯು (ಮುರುಳಿ) ಅಂಚೆಯ ಮೂಲಕ ಹೋಗುತ್ತದೆ, ಎಷ್ಟೊಂದು ಕಾಗದಗಳು ಮುದ್ರಿತವಾಗುತ್ತದೆ, ಎಲ್ಲೆಲ್ಲಿಗೆ ಹೋಗುತ್ತದೆ! ಏಳು ದಿನಗಳ ಕೋರ್ಸ್ ತೆಗೆದುಕೊಂಡು ನಂತರ ಎಲ್ಲಿ ಬೇಕಾದರೂ ಓದುತ್ತಾ ಇರಿ. ಈ ಸಮಯದಲ್ಲಿ ಎಲ್ಲರೂ ಅರ್ಧಕಲ್ಪದ ರೋಗಿಗಳಾಗಿದ್ದಾರೆ ಆದ್ದರಿಂದ ಏಳು ದಿನಗಳ ಕಾಲ ಭಟ್ಟಿಯಲ್ಲಿ ಇರಬೇಕಾಗುತ್ತದೆ. ಈ ಪಂಚ ವಿಕಾರಗಳ ಕಾಯಿಲೆಯು ಇಡೀ ಪ್ರಪಂಚದಲ್ಲಿ ಹರಡಿದೆ. ಸತ್ಯಯುಗದಲ್ಲಿ ನಿಮ್ಮ ಕಾಯವು ನಿರೋಗಿಯಾಗಿತ್ತು, ಸದಾ ಆರೋಗ್ಯವಂತರು, ಐಶ್ವರ್ಯವಂತರಾಗಿದ್ದಿರಿ, ಈಗಂತೂ ಸ್ಥಿತಿಯೇನಾಗಿ ಬಿಟ್ಟಿದೆ? ಇಡೀ ಆಟವು ಭಾರತದ ಮೇಲಿದೆ. ನಿಮಗೆ ಈಗ 84 ಜನ್ಮಗಳ ಸ್ಮೃತಿ ಬಂದಿದೆ. ಕಲ್ಪ-ಕಲ್ಪವೂ ನೀವೇ ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ ಮತ್ತು ಚಕ್ರವರ್ತಿ ರಾಜರೂ ಆಗುತ್ತೀರಿ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಅದರಲ್ಲಿ ನಂಬರ್ವಾರ್ ಪದವಿಗಳಿರುತ್ತವೆ. ಪ್ರಜೆಗಳೂ ಸಹ ಅನೇಕ ಪ್ರಕಾರದವರು ಬೇಕು. ಹೃದಯದಿಂದ ಕೇಳಿಕೊಳ್ಳಿರಿ - ನಾವು ಎಷ್ಟು ಜನರನ್ನು ನಮ್ಮ ಸಮಾನ ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡುತ್ತೇವೆ? ಯಾರು ಎಷ್ಟು ಜನರನ್ನು ಮಾಡುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುವರು. ತಂದೆಯು ನಿಮಗೆ ಮಾಯೆಯೊಂದಿಗೆ ಯುದ್ಧ ಮಾಡುವುದನ್ನು ಕಲಿಸುತ್ತಾರೆ ಆದ್ದರಿಂದ ಅವರ ಹೆಸರನ್ನು ಯುಧಿಷ್ಠಿರ ಎಂದು ಇಟ್ಟಿದ್ದಾರೆ. ಮಾಯೆಯ ��ೇಲೆ ಜಯ ಗಳಿಸುವ ಯುದ್ಧವನ್ನು ಕಲಿಸುತ್ತಾರೆ. ಯುಧಿಷ್ಠಿರ ಮತ್ತು ಧೃತರಾಷ್ಟ್ರನನ್ನೂ ತೋರಿಸುತ್ತಾರೆ. ಮಾಯಾಜೀತರೇ ಜಗಜ್ಜೀತರೆಂದು ಗಾಯನವಿದೆ, ಎಷ್ಟು ಸಮಯ ನಿಮ್ಮ ಜಯವು ಸ್ಥಿರವಾಗಿತ್ತು ನಂತರ ಎಷ್ಟು ಸಮಯ ಸೋಲನ್ನು ಅನುಭವಿಸುತ್ತೀರಿ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಇದು ಸ್ಥೂಲ ಯುದ್ಧವಲ್ಲ, ದೇವತೆಗಳು ಮತ್ತು ಅಸುರರ ಯುದ್ಧವೂ ಆಗಲಿಲ್ಲ. ಕೌರವರು ಮತ್ತು ಪಾಂಡವರ ಯುದ್ಧವೂ ಇಲ್ಲ. ಸುಳ್ಳು ಮಾಯೆ ಸುಳ್ಳುಕಾಯ... ಈ ಭಾರತವು ಅಸತ್ಯಖಂಡವಾಗಿದೆ. ಸತ್ಯಖಂಡವಿತ್ತು, ಯಾವಾಗಿನಿಂದ ರಾವಣರಾಜ್ಯವು ಆರಂಭವಾಯಿತೋ ಆಗಿನಿಂದ ಅಸತ್ಯಖಂಡವಾಯಿತು. ಈಶ್ವರನಪ್ರತಿ ಎಷ್ಟೊಂದು ಸುಳ್ಳು ಹೇಳುತ್ತಾರೆ, ಎಷ್ಟೊಂದು ಕಳಂಕವನ್ನು ಹಾಕುತ್ತಾರೆ, ಕಳಂಗೀ ಅವತಾರವೆಂದು ಗಾಯನವಿದೆ, ಎಲ್ಲರಿಗಿಂತ ಹೆಚ್ಚು ಕಳಂಕವನ್ನು ತಂದೆಗೆ ಹೊರಿಸುತ್ತಾರೆ. ಅವರಿಗೆ ಮೀನು, ಮೊಸಳೆ ಅವತಾರವೆಂದು, ಕಲ್ಲು-ಮುಳ್ಳಿನಲ್ಲಿ ಈಶ್ವರನಿದ್ದಾನೆಂದು ಎಷ್ಟೊಂದು ನಿಂದನೆ ಮಾಡುತ್ತಾರೆ ಅಂದಮೇಲೆ ಇದು ಸಭ್ಯತೆಯೇ? ಈಗ ನಿಮಗೆ ಪ್ರಕಾಶತೆಯು ಸಿಕ್ಕಿದೆ, ನೀವು ತಿಳಿದುಕೊಂಡಿದ್ದೀರಿ- ತಂದೆಯು ನಮಗೆ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಿದ್ದಾರೆ. ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ, ತಂದೆಯೇ ಸದ್ಗತಿದಾತನಾಗಿದ್ದಾರೆ. ತಂದೆಯ ಜ್ಞಾನದಿಂದ ಎಲ್ಲರ ಸದ್ಗತಿಯಾಗುತ್ತದೆ. ಬಾಕಿ ಯಾರು ಸ್ವಯಂ ದುರ್ಗತಿಯಲ್ಲಿದ್ದಾರೆಯೋ ಅವರು ಅನ್ಯರ ಸದ್ಗತಿಯನ್ನು ಹೇಗೆ ಮಾಡುವರು! ನಾನು ಬಂದು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ, ನೀವೇ ಪವಿತ್ರ ಪೂಜ್ಯರಾಗಿದ್ದಿರಿ ಈಗ ಬಂದು ಪೂಜಾರಿಗಳಾಗಿದ್ದೀರಿ. ಅಪವಿತ್ರ ರಾಜರು ಪವಿತ್ರರಾಜರಿಗೆ ಪೂಜೆ ಮಾಡುತ್ತಾರೆ. ಸತ್ಯಯುಗದಲ್ಲಿ ಡಬಲ್ ಕಿರೀಟಧಾರಿಗಳಿದ್ದರು, ವಿಕಾರಿ ರಾಜರಾದಾಗ ಒಂದು ಕಿರೀಟವಿರುತ್ತದೆ. ಅವರೂ ಸಹ ಮಹಾರಾಜ-ಮಹಾರಾಣಿ. ಆದರೆ ಪವಿತ್ರರಿಗೆ ಅಪವಿತ್ರರು ಹೋಗಿ ತಲೆಬಾಗುತ್ತಾರೆ. ಭಾರತವಾಸಿ ಪವಿತ್ರ ಪ್ರವೃತ್ತಿ ಮಾರ್ಗದವರೇ ನಂತರ ಪತಿತ ಪ್ರವೃತ್ತಿ ಮಾರ್ಗದವರಾಗುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನಿಮ್ಮದು ಈ ಮೃತ್ಯುಲೋಕದಲ್ಲಿ ಅಂತಿಮ ಜನ್ಮವಾಗಿದೆ, ನಾನೀಗ ನಿಮ್ಮನ್ನು ಪುನಃ ಸತ್ಯಯುಗದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಈ ಅಣು ಬಾಂಬುಗಳ ಯುದ್ಧವು 5000 ವರ್ಷಗಳ ಮೊದಲೂ ಸಹ ಆಗಿತ್ತು, ಈ ಹಳೆಯ ಪ್ರಪಂಚವು ಸಮಾಪ್ತಿ ಆಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಬೇಕಾಗಿದೆ. ಕಮಲಪುಷ್ಫ ಸಮಾನರು ನೀವು ಬ್ರಾಹ್ಮಣರಾಗುತ್ತೀರಿ ಆದರೆ ಈ ಅಲಂಕಾರವನ್ನು ವಿಷ್ಣುವಿಗೆ ತೋರಿಸಿದ್ದಾರೆ ಏಕೆಂದರೆ ನೀವು ಬ್ರಾಹ್ಮಣರು ಸದಾ ಏಕರಸವಾಗಿರುವುದಿಲ್ಲ, ಮೊದಲು ಕಮಲಪುಷ್ಫ ಸಮಾನರಾಗುತ್ತೀರಿ, ಎರಡು ವರ್ಷಗಳ ನಂತರ ಮತ್ತೆ ಪತಿತರಾಗಿ ಬಿಡುತ್ತೀರಿ ಆದ್ದರಿಂ��� ನಿಮಗೆ ಅಲಂಕಾರಗಳನ್ನು ತೋರಿಸುವುದಿಲ್ಲ.
|
3 |
+
ನಿಮ್ಮದು ಇದು ಸರ್ವೋತ್ತಮ ಕುಲವಾಗಿದೆ. ನೀವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಶೂದ್ರರಿಂದ ಕೂಡಲೇ ದೇವತೆಗಳಾಗಿ ಬಿಡುವುದಿಲ್ಲ. ಬ್ರಾಹ್ಮಣರು ಅವಶ್ಯವಾಗಿ ಬೇಕು. ಈಗ ಬ್ರಾಹ್ಮಣರಿಗೆ ತಂದೆಯು ಓದಿಸುತ್ತಿದ್ದಾರೆ ಅಂದಮೇಲೆ ಇಂತಹ ತಂದೆಗೆ ವಿಚ್ಛೇದನ ಕೊಡುವುದೇ! ತಂದೆಯು ತಿಳಿಸುತ್ತಾರೆ - ಆಶ್ಚರ್ಯವೆನಿಸುವಂತೆ ನನ್ನವರಾಗುತ್ತಾರೆ, ಜ್ಞಾನವನ್ನು ಕೇಳುತ್ತಾರೆ ಆದರೂ ಮತ್ತೆ ಹೋಗಿ ಮಾಯೆಗೆ ವಶರಾಗುತ್ತಾರೆ. ವಿರೋಧಿಗಳಾಗಿ ನನ್ನ ನಿಂದನೆ ಮಾಡಿಸುತ್ತಾರೆ, ಅಂತಹ ಸದ್ಗುರುವಿನ ನಿಂದಕರಿಗೆ ಸ್ವರ್ಗದಲ್ಲಿ ನೆಲೆಯಿಲ್ಲವೆಂದು ಹೇಳಲಾಗುತ್ತದೆ. ಇದನ್ನು ಸಾಮಾನ್ಯ ಗುರುಗಳಿಗೆ ಹೇಳಿ ಬಿಟ್ಟಿದ್ದಾರೆ ಆದರೆ ಅವರಂತೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಅವರು ಸದ್ಗತಿದಾತರಲ್ಲ. ಎಲ್ಲಾ ಆತ್ಮರ ತಂದೆ, ಶಿಕ್ಷಕ, ಸದ್ಗುರು ಒಬ್ಬರೇ ನಿರಾಕಾರ ತಂದೆಯಾಗಿದ್ದಾರೆ, ಅವರೇ ಎಲ್ಲರ ಉದ್ಧಾರ ಮಾಡಲು ಬಂದಿದ್ದಾರೆ. ಮುಂದೆ ಹೋದಂತೆ ತಿಳಿದುಕೊಳ್ಳುವರು ನಂತರ ಟೂಲೇಟ್ ಆಗಿ ಬಿಡುವುದು. ಅವರು ಮತ್ತೆ ತಮ್ಮ ಧರ್ಮದಲ್ಲಿಯೇ ಹೊರಟು ಹೋಗುವರು. ಶ್ರೇಷ್ಠಾತಿ ಶ್ರೇಷ್ಠವಾದುದು ದೇವಿ-ದೇವತಾ ಧರ್ಮವಾಗಿದೆ, ಅದಕ್ಕಿಂತಲೂ ಶ್ರೇಷ್ಠರು ನೀವು ಬ್ರಾಹ್ಮಣರಾಗಿದ್ದೀರಿ. ತಂದೆಯ ಜೊತೆಯಲ್ಲಿ ಕುಳಿತಿದ್ದೀರಿ. ನಿಮಗೆ ಓದಿಸುವವರು ವಿಚಿತ್ರ ಮತ್ತು ವಿದೇಹಿಯಾಗಿದ್ದಾರೆ. ಆ ತಂದೆಯು ತಿಳಿಸುತ್ತಾರೆ - ನನಗೆ ದೇಹವಿಲ್ಲ, ನನಗೆ ಶಿವನೆಂದು ಹೇಳುತ್ತೀರಿ, ನನ್ನ ಹೆಸರು ಬದಲಾಗುವುದಿಲ್ಲ. ಮತ್ತೆಲ್ಲರ ಶರೀರಗಳ ಹೆಸರು ಬದಲಾಗುತ್ತದೆ. ನಾನು ಪರಮ ಆತ್ಮನಾಗಿದ್ದೇನೆ, ನನ್ನ ಜನನ ಪತ್ರವನ್ನು ಯಾರೂ ಬರೆಯಲು ಸಾಧ್ಯವಿಲ್ಲ. ಯಾವಾಗ ಬೇಹದ್ದಿನ ರಾತ್ರಿಯಾಗುವುದೋ ಆಗ ನಾನು ದಿನವನ್ನಾಗಿ ಮಾಡಲು ಬರುತ್ತೇನೆ. ಈಗ ಸಂಗಮವಾಗಿದೆ, ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಂಡು ನಂತರ ಧಾರಣೆ ಮಾಡಿಕೊಳ್ಳಬೇಕು, ಸ್ಮೃತಿಯಲ್ಲಿ ತರಬೇಕಾಗಿದೆ. ಇಲ್ಲಿ ನೀವು ಮಕ್ಕಳು ಬರುತ್ತೀರೆಂದರೆ ಬಿಡುವು ಸಿಗುತ್ತದೆ. ಇಲ್ಲಿ ಬಹಳ ಚೆನ್ನಾಗಿ ವಿಚಾರ ಸಾಗರ ಮಂಥನ ಮಾಡಬಹುದು. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ಗೃಹಸ್ಥ ವ್ಯವಹಾರದಲ್ಲಿದ್ದರೂ ತಮ್ಮ ಸರ್ವೋತ್ತಮ ಕುಲದ ಸ್ಮೃತಿಯಿಂದ ಕಮಲ ಪುಷ್ಫ ಸಮಾನ ಪವಿತ್ರರಾಗಬೇಕಾಗಿದೆ. ಎಂದಿಗೂ ಸದ್ಗುರುವಿನ ನಿಂದನೆ ಮಾಡಿಸಬಾರದು.
|
7 |
+
2. ಶ್ರೀಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯನ್ನು ಮಾಡಬೇಕಾಗಿದೆ. ಸ್ವದರ್ಶನ ಚಕ್ರಧಾರಿಗ���ಾಗಬೇಕು ಮತ್ತು ಅನ್ಯರನ್ನೂ ಮಾಡಬೇಕಾಗಿದೆ. ಸಮಯ ಸಿಕ್ಕಿದರೆ ಅವಶ್ಯವಾಗಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.
|
BKMurli/BKMurli/page_1039.txt
ADDED
@@ -0,0 +1,15 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ವರದಾತನನ್ನು ರಾಜಿ ಮಾಡಿಕೊಳ್ಳುವ ಸಹಜ ವಿಧಿ
|
2 |
+
ಇಂದು ವರದಾತ ತಂದೆಯು ತನ್ನ ವರದಾನೀ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ವರದಾತನ ಮಕ್ಕಳು ಎಲ್ಲರೂ ವರದಾನಿಗಳಾಗಿದ್ದಾರೆ ಆದರೆ ನಂಬರ್ವಾರ್ ಇದ್ದಾರೆ. ವರದಾತನು ಎಲ್ಲಾ ಮಕ್ಕಳಿಗೂ ವರದಾನಗಳ ಜೋಳಿಗೆಯನ್ನು ತುಂಬಿಸಿ ಕೊಡುತ್ತಾರೆ ಆದರೂ ನಂಬರ್ವಾರ್ ಏಕೆ? ವರದಾತನು ಕೊಡುವುದರಲ್ಲಿ ನಂಬರ್ವಾರ್ ಕೊಡುವುದಿಲ್ಲ ಏಕೆಂದರೆ ವರದಾತನ ಬಳಿ ಅಕೂಟ ವರದಾನಗಳಿವೆ. ತೆರೆದ ಭಂಡಾರವಿದೆ, ಯಾರೆಷ್ಟು ಬೇಕಾದರೂ ತೆಗೆದುಕೊಳ್ಳಬಹುದು. ಇಂತಹ ತೆರೆದ ಭಂಡಾರದಿಂದ ಕೆಲವು ಮಕ್ಕಳು ಸರ್ವ ವರದಾನಗಳಿಂದ ಸಂಪನ್ನರಿರುತ್ತಾರೆ, ಇನ್ನೂ ಕೆಲವರು ಯಥಾಶಕ್ತಿ ಸಂಪನ್ನರಾಗುತ್ತಾರೆ. ಎಲ್ಲರಿಗಿಂತ ಹೆಚ್ಚು ಜೋಳಿಗೆಯನ್ನು ತುಂಬಿಸಿ ಕೊಡುವುದರಲ್ಲಿ ಭೋಲಾನಾಥನು ‘ವರದಾತನ ರೂಪವೇ ಆಗಿದ್ದಾರೆ’ ಮೊದಲು ತಿಳಿಸಿದ್ದೇವೆ - ದಾತ, ಭಾಗ್ಯವಿದಾತ ಮತ್ತು ವರದಾತ. ಮೂರರಲ್ಲಿ ವರದಾತನ ರೂಪದಿಂದ ಭೋಲಾ ಭಗವಂತನೆಂದು ಹೇಳಲಾಗುತ್ತದೆ ಏಕೆಂದರೆ ವರದಾತನು ಬಹು ಬೇಗನೆ ರಾಜಿಯಾಗಿ ಬಿಡುತ್ತಾರೆ. ಕೇವಲ ರಾಜಿ ಮಾಡಿಕೊಳ್ಳುವ ವಿಧಿಯನ್ನು ಅರಿತುಕೊಳ್ಳುತ್ತೀರೆಂದರೆ ಸಿದ್ಧಿ ಅರ್ಥಾತ್ ವರದಾನಗಳ ಜೋಳಿಗೆಯಿಂದ ಸಂಪನ್ನರಾಗಿರುವುದು ಬಹಳ ಸಹಜವಾಗುತ್ತದೆ. ವರದಾತನನ್ನು ರಾಜಿ ಮಾಡಿಕೊಳ್ಳುವ ಎಲ್ಲದಕ್ಕಿಂತ ಸಹಜ ವಿಧಿಯನ್ನು ತಿಳಿದುಕೊಂಡಿದ್ದೀರಾ? ಅವರಿಗೆ ಯಾರು ಎಲ್ಲರಿಗಿಂತ ಪ್ರಿಯರೆನಿಸುತ್ತಾರೆ? ಅವರಿಗೆ ‘ಒಂದು’ (ಏಕ) ಶಬ್ಧವು ಎಲ್ಲದಕ್ಕಿಂತ ಪ್ರಿಯವೆನಿಸುತ್ತದೆ. ಯಾವ ಮಕ್ಕಳು ಇಲ್ಲಿಯವರೆಗೂ ಏಕವ್ರತದಿಂದ ಇದ್ದಾರೆಯೋ ಅವರೇ ವರದಾತನಿಗೆ ಅತೀ ಪ್ರಿಯರಾಗಿದ್ದಾರೆ.
|
3 |
+
ಏಕವ್ರತ ಅರ್ಥಾತ್ ಕೇವಲ ಪತಿವ್ರತೆಯಲ್ಲ, ಎಲ್ಲಾ ಸಂಬಂಧದಿಂದಲೂ ಏಕವ್ರತಸ್ಥರು. ಸಂಕಲ್ಪ, ಸ್ವಪ್ನದಲ್ಲಿಯೂ ಇನ್ನೊಂದು ವ್ರತವಿರಬಾರದು. ಮೊದಲನೆ ವ್ರತ ಅರ್ಥಾತ್ ಸದಾ ವೃತ್ತಿಯಲ್ಲಿ ಒಬ್ಬರೇ ಇರಬೇಕು. ಎರಡನೆಯದು - ಸದಾ ನನ್ನವರು ಒಬ್ಬ ತಂದೆಯ ವಿನಃ ಬೇರೆ ಯಾರೂ ಇಲ್ಲ. ಈ ರೀತಿ ಪಕ್ಕಾ ವ್ರತವನ್ನು ತೆಗೆದುಕೊಂಡಿರಬೇಕು. ಕೆಲವು ಮಕ್ಕಳು ಏಕವ್ರತರಾಗುವುದರಲ್ಲಿ ಬಹಳ ಚತುರತೆ ಮಾಡುತ್ತಾರೆ. ಯಾವ ಚತುರತೆ? ತಂದೆಗೇ ಮಧುರ ಮಾತುಗಳನ್ನು ತಿಳಿಸುತ್ತಾರೆ - ತಂದೆ, ಶಿಕ್ಷಕ, ಸದ್ಗುರುವಿನ ಮುಖ್ಯ ಸಂಬಂಧವಂತೂ ತಮ್ಮ ಜೊತೆಯಿದೆ. ಆದರೆ ಸಾಕಾರ ಶರೀರಧಾರಿಗಳಾಗಿರುವ ಕಾರಣ, ಸಾಕಾರಿ ಪ್ರಪಂಚದಲ್ಲಿ ನಡೆಯುವ ಕಾರಣ, ಯಾರಾದರೂ ಸಾಕಾರಿ ಸಖ ಅಥವಾ ಸಖಿಯು ಸಹಯೋಗಕ್ಕಾಗಿ, ಸೇವೆಗಾಗಿ, ಸಲಹೆಗಾಗಿ ಸಾಕಾರದಲ್ಲಿ ಅವಶ್ಯವಾಗಿ ಬೇಕು ಏಕೆಂದರೆ ತಂದೆಯಂತೂ ನಿರಾಕಾರ ಮತ್ತು ಆಕಾರಿಯಾಗಿದ್ದಾರೆ ಆದ್ದರಿಂದ ಸೇವೆಯ ಜೊತೆಗಾರರು ಬೇಕಾಗಿದೆ. ಮತ್ತೇನೂ ಇಲ್ಲ ಏಕೆಂದರೆ ನಿರಾಕಾರಿ, ಆಕಾರಿ ಮಿಲನವನ್ನು ಆಚರಿಸಲು ಸ್ವಯಂ ಕೂಡಾ ನಿರಾಕಾರಿ ಆಕಾರಿ ಸ್ಥಿತಿಯಲ್ಲಿ ಸ್ಥಿತರಾಗಬೇಕಾಗುತ್ತದೆ. ಅದು ಕ��ಲಕೆಲವೊಮ್ಮೆ ಕಷ್ಟವೆನಿಸುತ್ತದೆ ಆದ್ದರಿಂದ ಸಮಯಕ್ಕಾಗಿ ಸಾಕಾರದಲ್ಲಿ ಯಾರಾದರೂ ಜೊತೆಗಾರರು ಬೇಕೆಂದು ಹೇಳುತ್ತಾರೆ. ಯಾವಾಗ ಬುದ್ಧಿಯಲ್ಲಿ ಬಹಳಷ್ಟು ಮಾತುಗಳು ತುಂಬುತ್ತವೆಯೋ ಆಗ ಏನು ಮಾಡುವುದು? ಕೇಳುವುದಕ್ಕಾಗಿ ಯಾರಾದರೂ ಬೇಕಲ್ಲವೆ! ಆದರೆ ಏಕವ್ರತಸ್ಥ ಆತ್ಮನ ಬಳಿ ಬೇರೆಯವರಿಗೆ ತಿಳಿಸಬೇಕಾಗುವಂತಹ ಹೊರೆಯ ಮಾತುಗಳ ಸಂಗ್ರಹಣೆ ಇರುವುದಿಲ್ಲ. ಒಂದು ಕಡೆ ಬಾಬಾ, ತಾವೇ ನನ್ನ ಜೊತೆಯಿರುತ್ತೀರಿ, ಸದಾ ತಂದೆಯು ನನ್ನ ಜೊತೆಯಿದ್ದಾರೆಂದು ತಂದೆಯನ್ನು ಬಹಳ ಖುಷಿ ಪಡಿಸುತ್ತೀರಿ. ಜೊತೆಗಾರನಿದ್ದಾರೆ, ಅಂದಮೇಲೆ ಆ ಸಮಯದಲ್ಲಿ ಅವರು ಎಲ್ಲಿ ಹೊರಟು ಹೋಗುತ್ತಾರೆ? ತಂದೆಯು ಹೊರಟುಹೋಗುತ್ತಾರೆಯೋ ಅಥವಾ ತಾವೇ ಅವರನ್ನು ಬಿಟ್ಟುಹೋಗುತ್ತೀರೋ? ಸದಾ ಜೊತೆಯಿದ್ದಾರೆಯೋ ಅಥವಾ 6-8 ಗಂಟೆಗಳ ಕಾಲ ಜೊತೆ ಇರುತ್ತಾರೆಯೋ? ಪ್ರತಿಜ್ಞೆ ಏನಾಗಿದೆ? ಜೊತೆಯಲ್ಲಿಯೇ ಇರುತ್ತೇವೆ, ಜೊತೆಯಲ್ಲಿಯೇ ನಡೆಯುತ್ತೇವೆ, ಜೊತೆಯಲ್ಲಿಯೇ ಇದ್ದೇವೆ - ಈ ಪ್ರತಿಜ್ಞೆಯು ಪಕ್ಕಾ ಇದೆಯಲ್ಲವೆ. ಬ್ರಹ್ಮಾ ತಂದೆಯೊಂದಿಗೆ ಇಷ್ಟೊಂದು ಪ್ರತಿಜ್ಞೆಯಿದೆ - ಇಡೀ ಚಕ್ರದಲ್ಲಿ ಜೊತೆಯಲ್ಲಿಯೇ ಪಾತ್ರವನ್ನು ಅಭಿನಯಿಸುತ್ತೇವೆ! ಎಂದು. ಯಾವಾಗ ಇಷ್ಟು ಶಕ್ತಿಶಾಲಿ ಪ್ರತಿಜ್ಞೆಯಿದೆ ಆದರೂ ಸಹ ಸಾಕಾರದಲ್ಲಿ ಯಾರಾದರೂ ವಿಶೇಷ ಜೊತೆಗಾರರು ಬೇಕೇ?
|
4 |
+
ಬಾಪ್ದಾದಾರವರ ಬಳಿ ಎಲ್ಲರ ಜನ್ಮಪತ್ರಿಯಿರುತ್ತದೆ. ತಂದೆಯ ಮುಂದೆ ಎಲ್ಲರೂ ಹೇಳುತ್ತಾರೆ - ತಾವೇ ಜೊತೆಗಾರರಾಗಿದ್ದೀರಿ ಎಂದು. ಯಾವಾಗ ಪರಿಸ್ಥಿತಿ ಬರುತ್ತದೆಯೋ ಆಗ ತಂದೆಗೆ ಹೇಳತೊಡಗುತ್ತಾರೆ - ಇದಂತೂ ಆಗಿಯೇ ಆಗುತ್ತದೆ, ಇಷ್ಟಾದರೂ ಬೇಕೇ ಬೇಕು.....ಇದಕ್ಕೆ ಏಕವ್ರತವೆಂದು ಹೇಳುವರೇ? ಜೊತೆಗಾರರೆಂದರೆ ಎಲ್ಲರೂ ಜೊತೆಗಾರರೆ, ಯಾರೂ ವಿಶೇಷವಲ್ಲ. ಇದಕ್ಕೇ ಏಕವ್ರತವೆಂದು ಹೇಳುತ್ತಾರೆ. ಆದ್ದರಿಂದ ವರದಾತನಿಗೆ ಇಂತಹ ಏಕವ್ರತಸ್ಥ ಮಕ್ಕಳು ಅತಿ ಪ್ರಿಯರಾಗಿದ್ದಾರೆ. ಇಂತಹ ಮಕ್ಕಳ ಪ್ರತೀ ಸಮಯದ ಜವಾಬ್ದಾರಿಗಳನ್ನು ವರದಾತ ತಂದೆಯು ಸ್ವಯಂ ತಾವೇ ನಿಭಾಯಿಸುತ್ತಾರೆ. ಇಂತಹ ವರದಾನೀ ಆತ್ಮಗಳು ಪ್ರತೀ ಸಮಯ, ಪ್ರತಿ ಪರಿಸ್ಥಿತಿಯಲ್ಲಿ ವರದಾನಗಳ ಪ್ರಾಪ್ತಿ ಸಂಪನ್ನ ಸ್ಥಿತಿಯ ಅನುಭವ ಮಾಡುತ್ತಾರೆ ಮತ್ತು ಸದಾ ಸಹಜವಾಗಿ ಪಾರು ಮಾಡುತ್ತಾರೆ, ಪಾಸ್-ವಿತ್-ಆನರ್ ಆಗುತ್ತಾರೆ. ಯಾವಾಗ ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ಸ್ವಯಂ ವರದಾತನೇ ಸದಾ ಸಿದ್ಧನಾಗಿದ್ದಾರೆ ಅಂದಮೇಲೆ ನೀವೇಕೆ ಜವಾಬ್ದಾರಿಯ ಹೊರೆಯನ್ನು ಹೊತ್ತುಕೊಳ್ಳುತ್ತೀರಿ? ಇದು ನನ್ನ ಜವಾಬ್ದಾರಿಯೆಂದು ತಿಳಿದುಕೊಳ್ಳುತ್ತೀರಿ ಆಗಲೇ ಪರಿಸ್ಥಿತಿಗಳಲ್ಲಿ ಪಾಸ್-ವಿತ್-ಆನರ್ ಆಗುವುದಿಲ್ಲ, ಬಹಳ ಕಷ್ಟದಿಂದ ತೇರ್ಗಡೆಯಾಗುತ್ತೀರಿ. ಯಾರ ಜೊತೆಯ ಸಹಯೋಗವಾದರೂ ಬೇಕಾಗುತ್ತದೆ. ಒಂದುವೇಳೆ ಬ್ಯಾಟರಿಯು ಪೂರ್ಣಚಾರ್ಜ್ ಆಗಿಲ್ಲವೆಂದರೆ ಕಾರನ್ನು ತಳ್ಳಿ ನಡೆಸುತ್ತಾರೆ. ಅಂದಾಗ ಒಬ್ಬರೇ ತಳ್ಳುವುದಕ್ಕೂ ಸಾಧ್ಯವಾಗು���ುದಿಲ್ಲ ಆದ್ದರಿಂದ ನಂಬರ್ವಾರ್ ಆಗಿ ಬಿಡುತ್ತಾರೆ ಅಂದಾಗ ವರದಾತನಿಗೆ ಒಂದು ಶಬ್ಧವು ಪ್ರಿಯವಾಗಿದೆ - ‘ಏಕವ್ರತ’. ಒಂದು ಬಲ ಒಂದು ಭರವಸೆ. ಒಬ್ಬರ ಭರವಸೆ, ಇನ್ನೊಬ್ಬರ ಬಲ ಎಂದು ಹೇಳುವುದಿಲ್ಲ. ಒಂದು ಬಲ, ಒಂದು ಭರವಸೆ ಎಂದೇ ಗಾಯನವಿದೆ. ಜೊತೆ ಜೊತೆಗೆ ಏಕಮತ. ಮನಮತ, ಪರಮತವಲ್ಲ ಮತ್ತು ಏಕರಸ ಅರ್ಥಾತ್ ಮತ್ತ್ಯಾವುದೇ ವ್ಯಕ್ತಿಯೂ ಇಲ್ಲ, ವೈಭವದ ರಸವೂ ಇಲ್ಲ ಹಾಗೆಯೇ ಜೊತೆಗೆ ಏಕತೆ, ಏಕಾಂತ ಪ್ರಿಯ ಅಂದಾಗ ಒಂದು ಶಬ್ಧವೇ ಪ್ರಿಯವಾಯಿತಲ್ಲವೆ. ಇದೇ ರೀತಿ ಇನ್ನೂ ಪಟ್ಟಿ ತೆಗೆಯಿರಿ.
|
5 |
+
ತಂದೆಯು ಇಷ್ಟೊಂದು ಭೋಲಾ ಆಗಿದ್ದಾರೆ ಅವರು ಒಂದರಲ್ಲಿಯೇ ರಾಜಿಯಾಗಿ ಬಿಡುತ್ತಾರೆ. ಇಂತಹ ಭೋಲಾನಾಥ ವರದಾತನನ್ನು ರಾಜಿ ಮಾಡಿಕೊಳ್ಳುವುದು ಕಷ್ಟವೇ? ಕೇವಲ ಒಂದರ ಪಾಠವನ್ನು ಪಕ್ಕಾ ಮಾಡಿಕೊಳ್ಳಿ, 5-7 ರಲ್ಲಿ ಹೋಗುವ ಅವಶ್ಯಕತೆಯಿಲ್ಲ. ವರದಾತನನ್ನು ರಾಜಿ ಮಾಡಿಕೊಳ್ಳುವವರು ಅಮೃತವೇಳೆಯಿಂದ ರಾತ್ರಿಯವರೆಗೆ ಪ್ರತೀ ದಿನಚರಿಯ ಕರ್ಮದಲ್ಲಿ ವರದಾನಗಳಿಂದಲೇ ಬೆಳೆಯುತ್ತಾರೆ, ನಡೆಯುತ್ತಾರೆ ಮತ್ತು ಹಾರುತ್ತಾರೆ. ಇಂತಹ ವರದಾನಿ ಆತ್ಮರಿಗೆ ಮನಸ್ಸಿನಿಂದಾಗಲಿ, ಸಂಬಂಧ-ಸಂಪರ್ಕದಿಂದಾಗಲಿ ಎಂದೂ ಯಾವುದೇ ಕಷ್ಟದ ಅನುಭವವಾಗುವುದಿಲ್ಲ. ಪ್ರತೀ ಸಂಕಲ್ಪ, ಪ್ರತೀ ಸೆಕೆಂಡ್, ಪ್ರತೀ ಕರ್ಮ, ಪ್ರತೀ ಹೆಜ್ಜೆಯಲ್ಲಿ ವರದಾತ ಮತ್ತು ವರದಾನವು ಸದಾ ಸಮೀಪ, ಸನ್ಮುಖ ಸಾಕಾರ ರೂಪದಲ್ಲಿ ಅನುಭವವಾಗುವುದು. ಅವರು ಹೇಗೆ ಸಾಕಾರದಲ್ಲಿ ಮಾತನಾಡುತ್ತಿದ್ದಾರೆ ಎನ್ನುವಂತೆ ಅನುಭವವಾಗುತ್ತದೆ, ಅವರಿಗೆ ಪರಿಶ್ರಮದ ಅನುಭವವಾಗುವುದಿಲ್ಲ. ಇಂತಹ ವರದಾನಿ ಆತ್ಮನಿಗೆ ಈ ವಿಶೇಷ ವರದಾನವು ಪ್ರಾಪ್ತಿಯಾಗುತ್ತದೆ ಅವರು ನಿರಾಕಾರ, ಆಕಾರನನ್ನು ಹೇಗೆ ಸಾಕಾರದ ಅನುಭವ ಮಾಡಬಲ್ಲರು! ಇಂತಹ ವರದಾನಗಳ ಮುಂದೆ ಹಜೂರ್ ತಂದೆಯು ಸದಾ ಹಾಜರಾಗುತ್ತಾರೆ, ಕೇಳಿದಿರಾ? ವರದಾತನನ್ನು ರಾಜಿ ಮಾಡಿಕೊಳ್ಳುವ ವಿಧಿ ಮತ್ತು ಸಿದ್ಧಿ - ಸೆಕೆಂಡಿನಲ್ಲಿ ಮಾಡಬಲ್ಲಿರಾ? ಕೇವಲ ಒಂದರಲ್ಲಿ. ಇದಕ್ಕೆ ಬದಲಾಗಿ ಎರಡನ್ನು ಸೇರಿಸಬೇಡಿ, ಒಂದರ ಪಾಠದ ವಿಸ್ತಾರವನ್ನು ಮತ್ತೆಂದಾದರೂ ತಿಳಿಸುತ್ತೇವೆ.
|
6 |
+
ಬಾಪ್ದಾದಾರವರ ಬಳಿ ಎಲ್ಲಾ ಮಕ್ಕಳ ಚರಿತ್ರೆಯೂ ಇದೆ ಮತ್ತು ಚತುರತೆಯೂ ಇದೆ. ಫಲಿತಾಂಶವೆಲ್ಲವೂ ಬಾಪ್ದಾದಾರವರ ಬಳಿಯಿದೆಯಲ್ಲವೆ. ಚತುರತೆಯ ಮಾತೂ ಸಹ ಬಹಳಷ್ಟಿದೆ. ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ. ಅದನ್ನು ಕೇಳಿಸಿಕೊಳ್ಳುತ್ತಾ ಇರುತ್ತೇನೆ. ಕೇವಲ ಬಾಪ್ದಾದಾ ಹೆಸರನ್ನು ಹೇಳುವುದಿಲ್ಲ ಆದ್ದರಿಂದ ತಂದೆಗೆ ಏನು ತಿಳಿಯುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಆದರೂ ಸಹ ಅವಕಾಶ ಕೊಡುತ್ತಾ ಇರುತ್ತೇವೆ. ತಂದೆಯು ತಿಳಿದುಕೊಳ್ಳುತ್ತಾರೆ - ಮಕ್ಕಳೇ, ರಿಯಲ್ ತಿಳುವಳಿಕೆಯಿಂದ ಭೋಲಾ ಆಗಿದ್ದಾರೆ ಆದರೆ ಇಂತಹ ಭೋಲಾ ಆಗಬೇಡಿ. ಒಳ್ಳೆಯದು.
|
7 |
+
ಮಕ್ಕಳು ವಿದೇಶವನ್ನು ಸುತ್ತಿಕೊಂಡು ಹಿಂತಿರುಗಿ ಬಂದಿದ್ದಾರೆ (ಜಾನಕಿ ದಾದಿ, ಡಾ|| ನಿರ್ಮಲ ಬೆಹೆನ್, ಜಗದೀಶ್ ಭಾಯಿ, ವ���ದೇಶಕ್ಕೆ ಹೋಗಿ ಬಂದಿದ್ದಾರೆ)
|
8 |
+
ಒಳ್ಳೆಯ ಫಲಿತಾಂಶವಿದೆ ಮತ್ತು ಸದಾ ಸೇವೆಯ ಸಫಲತೆಯಲ್ಲಿ ವೃದ್ಧಿಯಾಗಲೇಬೇಕಾಗಿದೆ. ಇಂಗ್ಲೆಂಡಿನದೂ ಸಹ ವಿಶೇಷ ಸೇವಾ ಕಾರ್ಯದಲ್ಲಿ ಸಂಬಂಧವಿದೆ. ಹೆಸರು ಅವರದು, ಕೆಲಸವು ತಮ್ಮದು ನಡೆಯುತ್ತಿದೆ. ಆತ್ಮಗಳಿಗೆ ಸಹಜವಾಗಿ ಸಂದೇಶವು ತಲುಪಲಿ, ತಮ್ಮ ಈ ಸೇವೆಯು ನಡೆಯುತ್ತಿದೆ. ಅಂದಾಗ ಅಲ್ಲಿನ ಕಾರ್ಯಕ್ರಮವು ಚೆನ್ನಾಗಿ ಆಯಿತು, ರಷ್ಯಾ ಉಳಿದುಕೊಂಡಿತ್ತು, ಅದೂ ಸಹ ಬರಲೇಬೇಕಾಗಿತ್ತು. ಬಾಪ್ದಾದಾ ಮೊದಲೇ ಸಫಲತೆಯ ನೆನಪು, ಪ್ರೀತಿಯನ್ನು ಕೊಟ್ಟು ಬಿಟ್ಟಿದ್ದೆವು, ಭಾರತದ ರಾಯಭಾರಿಯಾಗಿ ಹೋಗಿದ್ದರಿಂದ ಭಾರತದ ಹೆಸರು ಪ್ರಸಿದ್ಧವಾಯಿತಲ್ಲವೆ. ಚಕ್ರವರ್ತಿಯಾಗಿ ಚಕ್ಕರ್ ಹಾಕುವುದರಲ್ಲಿ ಮಜಾ ಬರುತ್ತದೆಯಲ್ಲವೆ. ಎಷ್ಟೊಂದು ಆಶೀರ್ವಾದಗಳನ್ನು ಜಮಾ ಮಾಡಿಕೊಂಡು ಬಂದಿರಿ. ಈ ನಿರ್ಮಲರವರೂ ಸಹ ಚಕ್ಕರ್ ಹಾಕುತ್ತಲೇ ಇರುತ್ತಾರೆ. ಹಾಗೆ ನೋಡಿದರೆ ಎಲ್ಲರೂ ಸೇವೆಯಲ್ಲಿ ತೊಡಗಿದ್ದಾರೆ ಆದರೆ ಸಮಯ ಪ್ರಮಾಣ ವಿಶೇಷ ಸೇವೆಯಾಗುತ್ತಿದೆ ಆದ್ದರಿಂದ ವಿಶೇಷ ಸೇವೆಯ ಶುಭಾಷಯಗಳನ್ನು ಕೊಡುತ್ತೇವೆ. ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ. ಲಂಡನ್, ಅಮೇರಿಕಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾ - ತಾವು ಈ ನಾಲ್ಕೂ ಜೋನ್ಗಳನ್ನು ಮಾಡಿದ್ದೀರಲ್ಲವೆ. 5ನೇಯದು ಭಾರತವಾಗಿದೆ. ಭಾರತದವರಿಗೆ ಮಿಲನ ಮಾಡಲು ಮೊದಲವಕಾಶ ಸಿಕ್ಕಿದೆ. ಯಾವುದನ್ನು ಮಾಡಿ ಬಂದಿದ್ದೀರಿ ಮತ್ತು ಮುಂದೆ ಏನು ಮಾಡುತ್ತೀರಿ ಎಲ್ಲವೂ ಒಳ್ಳೆಯದೇ ಆಗಿದೆ. ಮತ್ತು ಸದಾ ಒಳ್ಳೆಯದೇ ಆಗಿರುತ್ತದೆ. ನಾಲ್ಕೂ ಜೋನ್ಗಳ ಎಲ್ಲಾ ಡಬಲ್ ವಿದೇಶಿ ಮಕ್ಕಳಿಗೆ ಇಂದು ವಿಶೇಷ ನೆನಪು-ಪ್ರೀತಿಯನ್ನು ಕೊಡುತ್ತಿದ್ದೇವೆ. ರಷ್ಯಾ ಸಹ ಏಷ್ಯಾದಲ್ಲಿ ಬಂದು ಬಿಡುತ್ತದೆ. ಸೇವೆಯ ಪ್ರತಿಫಲ ಚೆನ್ನಾಗಿ ಸಿಗುತ್ತಿದೆ, ಸಾಹಸವೂ ಚೆನ್ನಾಗಿದೆ ಆದ್ದರಿಂದ ಸಹಯೋಗವೂ ಸಿಗುತ್ತಿದೆ ಮತ್ತು ಸಿಗುತ್ತಾ ಇರುತ್ತದೆ. ಭಾರತದಲ್ಲಿಯೂ ಸಹ ಈಗ ವಿಶಾಲ ಕಾರ್ಯಕ್ರಮಗಳನ್ನು ಮಾಡುವ ಯೋಜನೆ ಮಾಡುತ್ತಿದ್ದಾರೆ. ಒಬ್ಬೊಬ್ಬರಿಗೂ ಸಹ ವಿಶೇಷತೆ ಮತ್ತು ಸೇವೆಯ ಲಗನ್ನ್ನಲ್ಲಿ ಮಗ್ನರಾಗಿರುವ ಶುಭಾಷಯಗಳು ಮತ್ತು ನೆನಪು, ಪ್ರೀತಿ. ಒಳ್ಳೆಯದು.
|
9 |
+
ಸರ್ವ ಮಕ್ಕಳಿಗೆ ಸದಾ ಸಹಜವಾಗಿ ನಡೆಯುವ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಯಾವ ಸಹಜ ಯುಕ್ತಿಯನ್ನು ತಿಳಿಸಿದೆವೋ ಇದೇ ವಿಧಿಯನ್ನು ಸದಾ ಪ್ರಯೋಗದಲ್ಲಿ ತರುವಂತಹ ಪ್ರಯೋಗಿ ಮತ್ತು ಸಹಜಯೋಗಿ, ಸದಾ ವರದಾತನ ವರದಾನಗಳಿಂದ ಸಂಪನ್ನ ವರದಾನೀ ಮಕ್ಕಳಿಗೆ ಸದಾ ಒಂದರ ಪಾಠವನ್ನು ಪ್ರತಿ ಹೆಜ್ಜೆಯಲ್ಲಿ ಸಾಕಾರ ಸ್ವರೂಪದಲ್ಲಿ ತರುವಂತಹ ಸದಾ ನಿರಾಕಾರ, ಆಕಾರ ತಂದೆಯನ್ನು ಜೊತೆಯ ಅನುಭೂತಿಯಿಂದ ಸದಾ ಸಾಕಾರ ಸ್ವರೂಪದಲ್ಲಿ ಪ್ರತ್ಯಕ್ಷ ಅನುಭವ ಮಾಡುವಂತಹ ಸದಾ ವರದಾನಿ ಮಕ್ಕಳಿಗೆ ಬಾಪ್ದಾದಾರವರ ದಾತ, ಭಾಗ್ಯವಿದಾತ ಮತ್ತು ವರದಾತನ ನೆನಪು, ಪ್ರೀತಿ ಹಾಗೂ ನಮಸ್ತೆ.
|
10 |
+
ದಾದಿ ಜಾನಕಿಯವರೊಂದಿಗೆ ವಾರ್ತಾಲಾಪ:
|
11 |
+
ಎಲ್ಲರಿಗೂ ತಂದೆಯ ಪ್ರೀತಿಯನ್ನು ಎಷ್ಟು ಹಂಚುವಿರಿ, ಅಷ್ಟೇ ಪ್ರೀತಿಯ ಭಂಡಾರವು ವೃದ್ಧಿಯಾಗುತ್ತಿರುತ್ತದೆ. ಹೇಗೆ ಪ್ರತೀ ಸಮಯದಲ್ಲಿ ಪ್ರೀತಿಯ ಸುರಿಮಳೆ ಆಗುತ್ತಿದೆ ಎಂಬಂತೆ ಅನುಭವ ಆಗುತ್ತದೆಯಲ್ಲವೆ! ಒಂದು ಹೆಜ್ಜೆಯಲ್ಲಿ ಪ್ರೀತಿಯನ್ನು ಕೊಡಿ ಮತ್ತು ಮತ್ತೆ-ಮತ್ತೆ ಪ್ರೀತಿ ಪಡೆಯಿರಿ. ಎಲ್ಲರಿಗೂ ಸಹ ಪ್ರೀತಿಯೇ ಬೇಕಾಗಿದೆ, ಜ್ಞಾನವನ್ನಂತು ಕೇಳಿದ್ದಾರಲ್ಲವೆ! ಅಂದಾಗ ಒಂದು ಪ್ರಕಾರದ ಮಕ್ಕಳಿದ್ದಾರೆ ಅವರಿಗೆ ಪ್ರೀತಿ ಬೇಕು ಮತ್ತು ಇನ್ನೊಂದು ಪ್ರಕಾರದವರಿಗೆ ಶಕ್ತಿ ಬೇಕು. ಹಾಗಾದರೆ ಯಾವ ಸೇವೆ ಮಾಡಿದಿರಿ? ಇದೇ ಸೇವೆಯನ್ನು ಮಾಡಿದಿರಲ್ಲವೆ - ಕೆಲವರಿಗೆ ತಂದೆಯ ಮೂಲಕ ಪ್ರೀತಿಯನ್ನು ಕೊಟ್ಟಿರಿ ಹಾಗೂ ಕೆಲವರಿಗೆ ತಂದೆಯಿಂದ ಶಕ್ತಿಯನ್ನು ಕೊಡಿಸಿದಿರಿ. ಜ್ಞಾನದ ರಹಸ್ಯಗಳನ್ನಂತು ತಿಳಿದಿದ್ದಾರೆ, ಈಗ ಅವರಲ್ಲಿ ಸದಾಕಾಲದ ಒಲವು-ಉತ್ಸಾಹವು ಇರಬೇಕಾಗಿದೆ, ಅದೇ ಏರುಪೇರಾಗುತ್ತದೆ, ಆದರೂ ಬಾಪ್ದಾದಾರವರು ಡಬಲ್ ವಿದೇಶಿ ಮಕ್ಕಳಿಗೆ ಶಭಾಷ್ ಕೊಡುತ್ತಾರೆ. ಏಕೆಂದರೆ ಭಿನ್ನ ಧರ್ಮಗಳಲ್ಲಿಂದ ಹೊರಟು ಬಂದು ಬಿಟ್ಟರಲ್ಲವೆ! ದೇಶವೂ ಬೇರೆ, ಪದ್ಧತಿಗಳೂ ಸಹ ಭಿನ್ನವಾಗಿದ್ದರೂ ಇದರಲ್ಲಿ ನಡೆಯುತ್ತಿದ್ದಾರೆ, ಹಾಗೆಯೇ ಕೆಲವರಂತು ವಾರಸುಧಾರರೂ ಬಂದಿದ್ದಾರೆ. ಒಳ್ಳೆಯದು.
|
12 |
+
ಮಹಾರಾಷ್ಟ್ರ-ಪೂನಾ ಗ್ರೂಪ್:
|
13 |
+
ಎಲ್ಲರೂ ಮಹಾನ್ ಆತ್ಮರಾಗಿದ್ದೀರಲ್ಲವೆ! ಮುಂಚೆ ತಮ್ಮನ್ನು ಕೇವಲ ಮಹಾರಾಷ್ಟ್ರದ ನಿವಾಸಿಯೆಂದು ಹೇಳಿಕೊಳ್ಳುತ್ತಿದ್ದಿರಿ, ಈಗ ಸ್ವಯಂ ಮಹಾನರಾಗಿದ್ದೀರಿ. ತಂದೆಯು ಪ್ರತಿಯೊಂದು ಮಗುವನ್ನೂ ಮಹಾನರನ್ನಾಗಿ ಮಾಡಿ ಬಿಟ್ಟರು. ವಿಶ್ವದಲ್ಲಿ ಇನ್ಯಾರಾದರೂ ತಮಗಿಂತ ಮಹಾನರಿದ್ದಾರೆಯೇ? ಎಲ್ಲರಿಗಿಂತಲೂ ಕೆಳಗೆಂದರೆ ಭಾರತವಾಸಿಗಳೇ ಬಿದ್ದರು ಮತ್ತು ಅದರಲ್ಲಿಯೂ ಯಾರು 84 ಜನ್ಮಗಳನ್ನು ತೆಗೆದುಕೊಳ್ಳುವಂತಹ ಬ್ರಾಹ್ಮಣ ಆತ್ಮರಿದ್ದಾರೆ, ಅವರು ಕೆಳಗೆ ಬಿದ್ದರು. ಅಂದಾಗ ಎಷ್ಟು ಕೆಳಗೆ ಬಿದ್ದರೋ ಅಷ್ಟೇ ಈಗ ಶ್ರೇಷ್ಠ ಮಟ್ಟಕ್ಕೆ ಹೋಗಿದ್ದಾರೆ ಆದ್ದರಿಂದ ಹೇಳುತ್ತಾರೆ - ಬ್ರಾಹ್ಮಣರು ಅಂದರೆ ಶ್ರೇಷ್ಠ ಶಿಖೆಯಲ್ಲಿ ಇರುವವರು. ಅತಿ ಎತ್ತರದ ಸ್ಥಾನವು ಯಾವುದಿರುತ್ತದೆಯೋ ಅದನ್ನೇ ಶಿಖೆ ಎಂದು ಹೇಳಲಾಗುತ್ತದೆ. ಪರ್ವತಗಳ ತುತ್ತ ತುದಿಯನ್ನು ಶಿಖೆಯೆಂದು ಹೇಳುತ್ತಾರೆ ಅಂದಮೇಲೆ ನಾವು ಎಂತಹವರಿಂದ ಏನಾಗಿ ಬಿಟ್ಟೆವು ಎನ್ನುವ ಖುಷಿಯಿದೆ. ಪಾಂಡವರಿಗೆ ಹೆಚ್ಚು ಖುಷಿಯಿದೆಯೋ ಅಥವಾ ಶಕ್ತಿಯರಿಗೆ ಇದೆಯೇ? (ಶಕ್ತಿಯರಿಗೆ) ಏಕೆಂದರೆ ಶಕ್ತಿಯರನ್ನು ಬಹಳ ಕೆಳಮಟ್ಟಕ್ಕೆ ಬೀಳಿಸಲಾಗಿತ್ತು. ದ್ವಾಪರದಿಂದಲೂ ಪುರುಷ ತನುವಿರುವವರೇ ಯಾವುದಾದರೊಂದು ಪದವಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಧರ್ಮದಲ್ಲಿಯೂ ಈಗೀಗ ಸ್ತ್ರೀಯರನ್ನೂ ಮಹಾಮಂಡಲೇಶ್ವರಿ ಮಾಡಿದ್ದಾರೆ, ಇಲ್ಲದಿದ್ದರೆ ಮಹಾಮಂಡಲೇಶ್ವರ ಎಂದೇ ಗಾಯನವಾಗುತ್ತಿತ್ತು. ಯಾವಾಗಿನಿಂದ ತಂದೆಯವರು ಮಾತೆಯರನ್ನು ಮುಂದಿಟ್ಟರು, ಆಗಿನಿಂದ ಅವರು 2-4 ಮಹಾಮಂಡಲೇಶ್ವರಿಯನ್ನಾಗಿ ಮಾಡಿಟ್ಟಿದ್ದಾರೆ. ಇಲ್ಲದಿದ್ದರೆ ಧರ್ಮದ ಕಾರ್ಯಗಳಲ್ಲಿ ಮಾತೆಯರಿಗೆಂದಿಗೂ ಆಸನವನ್ನು ಕೊಡುತ್ತಿರಲಿಲ್ಲ ಆದ್ದರಿಂದ ಮಾತೆಯರಿಗೆ ಹೆಚ್ಚಿನದಾಗಿ ಖುಷಿಯಿದೆ ಮತ್ತು ಪಾಂಡವರದೂ ಗಾಯನವಿದೆ. ಪಾಂಡವರು ವಿಜಯವನ್ನು ಪ್ರಾಪ್ತಿ ಮಾಡಿಕೊಂಡರು, ಹೆಸರಂತು ಪಾಂಡವರಿಗೇ ಬರುತ್ತದೆ ಆದರೆ ಪೂಜೆಯೂ ಹೆಚ್ಚಾಗಿ ಶಕ್ತಿಯರದಾಗುತ್ತದೆ. ಮುಂಚೆ ಗುರುಗಳ ಪೂಜೆಯನ್ನಂತು ಬಹಳ ಮಾಡಿದ್ದಾರೆ, ಈಗ ಶಕ್ತಿಯರ ಪೂಜೆ ಮಾಡುತ್ತಾರೆ. ಜಾಗರಣೆಯನ್ನು ಗಣೇಶ ಅಥವಾ ಹನುಮಂತನಿಗಾಗಿ ಮಾಡುವುದಿಲ್ಲ, ಶಕ್ತಿಯರಿಗಾಗಿ ಮಾಡುತ್ತಾರೆ ಏಕೆಂದರೆ ಶಕ್ತಿಯರೀಗ ಸ್ವಯಂ ಜಾಗೃತರಾಗಿ ಬಿಟ್ಟಿದ್ದಾರೆ. ಅಂದಾಗ ಶಕ್ತಿಯರು ತಮ್ಮ ಶಕ್ತಿರೂಪದಲ್ಲಿ ಇರುತ್ತೀರಲ್ಲವೆ! ಅಥವಾ ಕೆಲವೊಮ್ಮೆ ಬಲಹೀನರು ಆಗಿ ಬಿಡುತ್ತೀರಾ? ಮಾತೆಯರಲ್ಲಿ ದೇಹದ ಸಂಬಂಧದ ಮೋಹವು ಬಲಹೀನರನ್ನಾಗಿ ಮಾಡುತ್ತದೆ. ಸ್ವಲ್ಪ-ಸ್ವಲ್ಪ ಮೊಮ್ಮಕ್ಕಳಲ್ಲಿ, ಮರಿ ಮಕ್ಕಳಲ್ಲಿ ಮೋಹವಿರುತ್ತದೆ ಮತ್ತು ಪಾಂಡವರಲ್ಲಿ ಯಾವ ಮಾತು ಬಲಹೀನರನ್ನಾಗಿ ಮಾಡುತ್ತದೆ? ಪಾಂಡವರಲ್ಲಿ ಅಹಂಕಾರದ ಕಾರಣ ಬೇಗನೆ ಕ್ರೋಧ ಬರುತ್ತದೆ, ಆದರೆ ಈಗಂತು ವಿಜಯವನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಲ್ಲವೆ! ಈಗಂತು ಶಾಂತ ಸ್ವರೂಪ ಪಾಂಡವರಾಗಿದ್ದೀರಿ ಮತ್ತು ಮಾತೆಯರೂ ಸಹ ನಿರ್ಮೋಹಿ ಆಗಿ ಬಿಟ್ಟಿದ್ದಾರೆ. ಪ್ರಪಂಚದವರು ಹೇಳುವರು - ಮಾತೆಯರಲ್ಲಿ ಮೋಹವಿರುತ್ತದೆ, ಹಾಗಾದರೆ ತಾವು ಚಾಲೆಂಜ್ ಮಾಡಿರಿ- ನಾವು ಮಾತೆಯರು ನಿರ್ಮೋಹಿ ಆಗಿದ್ದೇವೆ. ಅದೇರೀತಿ ಪಾಂಡವರೂ ಸಹ ಶಾಂತ ಸ್ವರೂಪರಾಗಿದ್ದೇವೆ, ಅದರಲ್ಲಿ ಅಂಶದಷ್ಟೂ ಕ್ರೋಧವು ಕಾಣಿಸುವುದಿಲ್ಲ. ಚಲನೆ-ವಲನೆಯವರೆಗೂ ಬರಬಾರದು. ಕೆಲವರು ಹೀಗೂ ಹೇಳುತ್ತಾರೆ - ಕ್ರೋಧವಂತು ಬರುವುದಿಲ್ಲ, ಸ್ವಲ್ಪ ಆವೇಶ ಬರುತ್ತದೆ ಅಂದಾಗ ಅದೇನಾಯಿತು! ಅದೂ ಸಹ ಕ್ರೋಧದ ಅಂಶವೇ ಆಯಿತಲ್ಲವೆ. ಹಾಗಾದರೆ ಪಾಂಡವರು ವಿಜಯಿ ಅಂದರೆ ಸಂಪೂರ್ಣವಾಗಿ ಸಂಕಲ್ಪದಲ್ಲಿಯೂ ಶಾಂತ, ಮಾತು ಮತ್ತು ಕರ್ಮದಲ್ಲಿಯೂ ಶಾಂತ ಸ್ವರೂಪರು. ಮಾತೆಯರು ಇಡೀ ವಿಶ್ವದ ಮುಂದೆ ತಮ್ಮ ನಿರ್ಮೋಹಿ ಸ್ವರೂಪವನ್ನು ತೋರಿಸಿರಿ. ಜನರಂತು ಇದು ಅಸಂಭವವೆಂದು ತಿಳಿಯುವರು ಮತ್ತು ತಾವು ಹೇಳಿರಿ - ಸಂಭವವೂ ಆಗುತ್ತದೆ ಮತ್ತು ಬಹಳ ಸಹಜವೂ ಇದೆ. ಲಕ್ಷ್ಯವನ್ನು ಇಟ್ಟುಕೊಳ್ಳುತ್ತೀರೆಂದರೆ ಅವಶ್ಯವಾಗಿ ಲಕ್ಷಣವೂ ಬರುತ್ತದೆ. ಸ್ಮೃತಿಯಂತೆ ಸ್ಥಿತಿಯಾಗುತ್ತದೆ. ಧರಣಿಯಲ್ಲಿ ಮಾತಾಪಿತರ ಪ್ರೇಮಜಲವು ಉತ್ಪನ್ನವಾಗಿದೆ ಆದ್ದರಿಂದ ಫಲವು ಸಹಜವಾಗಿ ಹೊರ ಬರುತ್ತಿದೆ. ಬಾಪ್ದಾದಾರವರು ಸೇವೆ ಮತ್ತು ಸ್ವ-ಉನ್ನತಿ - ಇವೆರಡನ್ನೂ ನೋಡಿ ಖುಷಿಯಾಗುತ್ತದೆ, ಕೇವಲ ಸೇವೆಯನ್ನೇ ನೋಡಿ ಖುಷಿಯಾಗುವುದಿಲ್ಲ. ಸೇವೆಯಲ್ಲಿ ತಾವೆಷ್ಟು ವೃದ್ಧಿ ಮಾಡುತ್ತೀರಿ, ಅಷ್ಟು ಸ್ವ-ಉನ್ನತಿಯಲ್ಲಿಯೂ ಇರಲಿ, ಎರಡೂ ಒಟ್ಟೊಟ್ಟಿಗೆ ಆಗುತ್ತಿರಲಿ ಮತ್ತು ಯಾವುದೇ ಇಚ್ಛೆಯಿರಬಾರದು. ಯಾವಾಗ ಸ್ವ��ಹವಾಗಿಯೇ ಎಲ್ಲವೂ ಸಿಗುತ್ತದೆಯೆಂದರೆ ಇಚ್ಛೆಯನ್ನೇಕೆ ಇಟ್ಟುಕೊಳ್ಳುವುದು. ಕೇಳದೆ, ಬೇಡದೇ ಇಷ್ಟೊಂದು ಸಿಕ್ಕಿದೆ, ಇದಕ್ಕಾಗಿ ಬೇಡುವ ಇಚ್ಛೆಯ ಅವಶ್ಯಕತೆಯೂ ಇಲ್ಲ ಅಂದಮೇಲೆ ಇಷ್ಟು ಸಂತುಷ್ಟವಾಗಿ ಇದ್ದೀರಲ್ಲವೇ! ತಮ್ಮ ಸ್ಮೃತಿಯಲ್ಲಿ ಈ ಟೈಟಲ್ನ್ನು ಇಟ್ಟುಕೊಳ್ಳಿರಿ - ಸಂತುಷ್ಟರಿದ್ದೇವೆ ಮತ್ತು ಸರ್ವರನ್ನೂ ಸಂತುಷ್ಟ ಪಡಿಸಿ, ಪ್ರಾಪ್ತಿ ಸ್ವರೂಪರನ್ನಾಗಿ ಮಾಡುವವರು ಆಗಿದ್ದೇವೆ. ಅಂದಮೇಲೆ ‘ಸಂತುಷ್ಟವಾಗಿರುವುದು ಮತ್ತು ಸಂತುಷ್ಟ ಪಡಿಸುವುದು’ ಇದೇ ವಿಶೇಷವಾದ ವರದಾನವಾಗಿದೆ. ಅಸಂತುಷ್ಟತೆಯ ಹೆಸರು-ಚಿಹ್ನೆಯೂ ಇರಬಾರದು. ಒಳ್ಳೆಯದು.
|
14 |
+
ಗುಜರಾತ್ ಗ್ರೂಪ್:
|
15 |
+
ಅಂತಿಮ ಜನ್ಮವಾಗಿರುವ ಕಾರಣ ಈ ಬ್ರಾಹ್ಮಣ ಜೀವನದಲ್ಲಿ ಭಲೆ ಶರೀರದಿಂದ ಎಷ್ಟೇ ಬಲಹೀನವಾಗಿರಬಹುದು ಅಥವಾ ರೋಗಗಳಿರಬಹುದು, ನಡೆಯಬಹುದು ಅಥವಾ ಇಲ್ಲದೆಯೂ ಇರಬಹುದು ಆದರೆ ಮನಸ್ಸಿನ ಹಾರುವಿಕೆಗಾಗಿ ರೆಕ್ಕೆಗಳನ್ನಂತು ಕೊಡಲಾಗಿದೆ, ಶರೀರ ನಡೆಯದಿರಬಹುದು ಆದರೆ ಮನಸ್ಸಿನಿಂದಂತು ಹಾರಬಹುದಲ್ಲವೆ! ಏಕೆಂದರೆ ಬಾಪ್ದಾದಾರವರಿಗೆ ಗೊತ್ತಿದೆ - 63 ಜನ್ಮಗಳಿಂದ ಅಲೆದಾಡುತ್ತಾ-ಹುಡುಕಾಡುತ್ತಾ ಬಲಹೀನವಾಗಿದೆ. ಶರೀರವು ತಮೋಗುಣಿ ಆಗಿರುವ ಕಾರಣ ಬಲಹೀನ, ರೋಗಿಯಾಗಿ ಬಿಟ್ಟಿದೆ. ಆದರೆ ಎಲ್ಲರ ಮನಸ್ಸು ಆರೋಗ್ಯದಿಂದ ಕೂಡಿದೆ. ಶರೀರದಲ್ಲಿ ರೋಗವಿರಬಹುದು ಆದರೆ ಮನಸ್ಸಿನಲ್ಲಂತು ಯಾವುದೇ ರೋಗವಿಲ್ಲ ಅಲ್ಲವೇ. ಎಲ್ಲರ ಮನಸ್ಸು ರೆಕ್ಕೆಗಳಿಂದ ಹಾರಿ ಬಿಡುತ್ತದೆ, ಶಕ್ತಿಶಾಲಿ ಮನಸ್ಸಿನ ಲಕ್ಷಣವು ಇದೇ ಆಗಿರುತ್ತದೆ - ಸೆಕೆಂಡಿನಲ್ಲಿ ಎಲ್ಲಿಗೆ ಬೇಕು ಅಲ್ಲಿಗೆ ತಲುಪಿ ಬಿಡುತ್ತದೆ. ಇದೇರೀತಿ ಶಕ್ತಿಶಾಲಿ ಆಗಿದ್ದೀರಾ ಅಥವಾ ಕೆಲವೊಮ್ಮೆ ಬಲಹೀನರಾಗುತ್ತೀರಾ. ಮನಸ್ಸಿಗೆ ಯಾವಾಗ ಹಾರುವುದು ಬಂದು ಬಿಡುತ್ತದೆ ಅಥವಾ ಅಭ್ಯಾಸವಾಗುತ್ತದೆಯೋ ಆಗ ಸೆಕೆಂಡಿನಲ್ಲಿಯೇ ಎಲ್ಲಿಗೆ ಬೇಕೋ ಅಲ್ಲಿಗೆ ತಲುಪಿ ಬಿಡಬಹುದು. ಈಗೀಗ ಸಾಕಾರ ವತನದಲ್ಲಿ, ಈಗೀಗ ಪರಮಧಾಮದಲ್ಲಿಯೂ ಒಂದು ಸೆಕೆಂಡಿನಲ್ಲಿ ತಲುಪುವ ತೀವ್ರತೆಯಿದೆ. ಅಂದಾಗ ಇಷ್ಟು ತೀವ್ರ ಗತಿಯಿದೆಯೇ? ಸದಾ ತಮ್ಮ ಭಾಗ್ಯದ ಹಾಡನ್ನು ಹಾಡುತ್ತಾ ಹಾರುತ್ತಿರಿ. ಅನೇಕ ಪ್ರಕಾರದ ಭಾಗ್ಯವು ಸಿಕ್ಕಿರುತ್ತದೆ, ಅನೇಕ ಪ್ರಕಾರದ ಪ್ರಾಪ್ತಿಗಳಾಗಿವೆ, ಅಂದಮೇಲೆ ಸದಾ ಅಮೃತವೇಳೆಯಲ್ಲಿ ತಮ್ಮ ಭಾಗ್ಯದ ಯಾವುದಾದರೊಂದು ಮಾತಿನ ಸ್ಮೃತಿಯನ್ನು ಇಟ್ಟುಕೊಳ್ಳಿ. ಕೆಲವೊಮ್ಮೆ ಯಾವುದಾದರೊಂದು ಪ್ರಾಪ್ತಿಯನ್ನು, ಕೆಲವೊಮ್ಮೆ ಕೆಲವು ಪ್ರಾಪ್ತಿಯನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತೀರೆಂದರೆ, ಬಹಳ ರಮಣೀಕ ಪುರುಷಾರ್ಥವಿರುತ್ತದೆ. ತಾವು ಪುರುಷಾರ್ಥವನ್ನೆಂದಿಗೂ ಬೇಸರವೆಂದು ತಿಳಿಯದೇ, ನವೀನತೆಯ ಅನುಭವವನ್ನು ಮಾಡುವಿರಿ ಅಲ್ಲವೇ. ಹೀಗಿಲ್ಲದಿದ್ದರೆ ಕೆಲವು ಮಕ್ಕಳು ಹೇಳುತ್ತಾರೆ - ನಾನಾತ್ಮ, ಶಿವ ತಂದೆಯ ಮಗುವಾಗಿದ್ದೇನೆ, ಇದನ್ನಂತು ಸದಾ ಹೇಳುತ್ತಾ ಇರುತ್ತೇವೆ. ಆದರೆ ನಾನಾತ್ಮನಿಗೆ ತಂದೆ���ು ಎಂತೆಂತಹ ಭಾಗ್ಯವನ್ನು ರೂಪಿಸಿದ್ದಾರೆ, ಯಾವ-ಯಾವ ಬಿರುದುಗಳನ್ನು ಕೊಟ್ಟಿದ್ದಾರೆ, ಯಾವ-ಯಾವ ಖಜಾನೆಗಳನ್ನು ಕೊಟ್ಟಿದ್ದಾರೆ, ಈ ರೀತಿಯಲ್ಲಿ ಭಿನ್ನ-ಭಿನ್ನವಾದ ಸ್ಮೃತಿಯನ್ನು ಇಟ್ಟುಕೊಳ್ಳಿರಿ, ಅದಕ್ಕಾಗಿ ಪಟ್ಟಿಯನ್ನು ಮಾಡಿರಿ. ಸ್ಮೃತಿಗಳ ಬಹಳ ದೊಡ್ಡ ಪಟ್ಟಿಯೇ ಇದೆ! ಕೆಲವೊಮ್ಮೆ ಖಜಾನೆಗಳ ಸ್ಮೃತಿಯಲ್ಲಿರಿ, ಕೆಲವೊಮ್ಮೆ ಶಕ್ತಿಗಳ ಸ್ಮೃತಿಯಲ್ಲಿರಿ, ಕೆಲವೊಮ್ಮೆ ಗುಣಗಳ, ಕೆಲವೊಮ್ಮೆ ಜ್ಞಾನದ ಸ್ಮೃತಿ, ಕೆಲವೊಮ್ಮೆ ತಮ್ಮ ಬಿರುದುಗಳ ಸ್ಮೃತಿಯನ್ನು ಇಟ್ಟುಕೊಳ್ಳಿರಿ. ವಿಧ-ವಿಧವಾದ ಸ್ಮೃತಿಗಳಲ್ಲಿ ಮನೋರಂಜನೆಯಾಗುವುದು. ಎಲ್ಲಾದರೂ ಮನೋರಂಜನೆ(ಸಾಂಸ್ಕೃತಿಕ) ಕಾರ್ಯಕ್ರಮವಾದರೆ, ಅಲ್ಲಿ ವಿಧ-ವಿಧವಾದ ನೃತ್ಯಗಳಿರುತ್ತವೆ, ವಿಧ-ವಿಧವಾದ ತಿನಿಸುಗಳಿರುತ್ತವೆ, ವಿಧ-ವಿಧವಾದ ಜನರೊಂದಿಗೆ ಭೇಟಿಯಾಗುವುದು, ಇದರಿಂದಲೇ ಮನೋರಂಜನೆಯಾಗುವುದಲ್ಲವೇ. ಅಂದಮೇಲೆ ಇದರಲ್ಲಿಯೂ ಸದಾ ಮನೋರಂಜನೆಯಲ್ಲಿ ಇರುವುದಕ್ಕಾಗಿ ವಿಧ-ವಿಧವಾದ ಮಾತುಗಳನ್ನು ಚಿಂತನೆ ಮಾಡಿರಿ. ಒಳ್ಳೆಯದು!
|
BKMurli/BKMurli/page_104.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ತೋಟದ ಮಾಲೀಕ ತಂದೆಯು ಕುಳಿತು ತಮ್ಮ ಹೂಗಳನ್ನು ನೋಡುತ್ತಾರೆ ಏಕೆಂದರೆ ಮತ್ತೆಲ್ಲ ಸೇವಾಕೇಂದ್ರಗಳಲ್ಲಂತೂ ಹೂಗಳು ಮಾತ್ತು ಮಾಲಿಗಳಿರುತ್ತಾರೆ, ಇಲ್ಲಿ ನೀವು ತೋಟದ ಮಾಲಿಕನ ಬಳಿ ತಮ್ಮ ಸುಗಂಧವನ್ನು ಬೀರಲು ಬರುತ್ತೀರಿ. ನೀವು ಹೂಗಳಾಗಿದ್ದೀರಿಲ್ಲವೆ! ನೀವು ತಿಳಿದುಕೊಂಡಿದ್ದೀರಿ, ತಂದೆಗೂ ಗೊತ್ತಿದೆ - ಮುಳ್ಳುಗಳ ಕಾಡಿನ ಬೀಜ ರೂಪ ರಾವಣನಾಗಿದ್ದಾನೆ. ಹಾಗೆ ನೋಡಿದರೆ ಇಡೀ ತೋಟದ ಬೀಜವು ಒಂದೇ ಆಗಿದೆ ಆದರೆ ಹೂಗಳ ತೋಟವನ್ನು ಮುಳ್ಳಿನ ಕಾಡನ್ನಾಗಿ ಮಾಡುವವರು ಅವಶ್ಯ ಇದ್ದಾರೆ. ಅವನೇ ರಾವಣ. ಅಂದ ಮೇಲೆ ನಿರ್ಣಯ ಮಾಡಿ - ತಂದೆ ಸರಿಯಾದ ಮಾತನ್ನು ತಿಳಿಸುತ್ತಾರೆ ಅಲ್ಲವೆ. ದೇವತಾ ರೂಪಿ ತೋಟದ ಬೀಜ ರೂಪ ತಂದೆ ಆಗಿದ್ದಾರೆ. ನೀವೀಗ ದೇವಿ ದೇವತೆ ಆಗುತ್ತಿದ್ದೀರಿ ಅಲ್ಲವೆ. ಇದು ಪ್ರತಿಯೊಬ್ಬರಿಗೂ ತಿಳಿದಿದೆ- ನಾವು ಯಾವ ಪ್ರಕಾರದ ಹೂ ಆಗಿದ್ದೇವೆ. ಹೂಗಳನ್ನು ನೋಡಲು ಮಾಲೀಕರು ಇಲ್ಲಿಯೇ ಬರುತ್ತಾರೆ. ಅವರೆಲ್ಲರೂ ಮಾಲಿಗಳಾಗಿದ್ದಾರೆ (ಸೇವಾಕೇಂದ್ರಗಳಲ್ಲಿ). ಅವರಲ್ಲಿಯೂ ಅನೇಕ ಪ್ರಕಾರದ ಮಾಲಿಗಳಿದ್ದಾರೆ. ಹೇಗೆ ತೋಟದಲ್ಲಿ ಭಿನ್ನ ಭಿನ್ನ ಪ್ರಕಾರದ ಮಾಲಿಗಳಿರುತ್ತಾರೆ. ಕೆಲವರಿಗೆ 5000 ರೂಪಾಯಿ ಸಂಬಳವಿರುತ್ತದೆ ಕೆಲವರಿಗೆ 1000, ಇನ್ನೂ ಕೆಲವರಿಗೆ 5000 ರೂಪಾಯಿಗಳಿರುತ್ತವೆ. ಕೆಲವರಿಗೆ 500 ರೂಪಾಯಿಗಳಿರುತ್ತವೆ. ಮೊಗಲ್ ಗಾರ್ಡನ್ನ ಮಾಲಿ ಅವಶ್ಯವಾಗಿ ಬಹಳ ಬುದ್ಧಿವಂತನಿರುತ್ತಾನೆ. ಅವನ ಸಂಬಳವೂ ಹೆಚ್ಚಿರುತ್ತದೆ. ಇದು ಬೇಹದ್ದಿನ ಅತಿ ದೊಡ್ಡ ಹೂದೋಟವಾಗಿದೆ. ಅದರಲ್ಲಿಯೂ ಅನೇಕ ಪ್ರಕಾರದ ನಂಬರವಾರ್ ಮಾಲಿಗಳಿದ್ದಾರೆ. ಯಾರು ಬಹಳ ಒಳ್ಳೆಯ ಮಾಲಿಗಳಿರುತ್ತಾರೆ ಅವರು ಹೂದೋಟವನ್ನು ಬಹಳ ಶೋಭಾಯಮಾನವಾಗಿಡುತ್ತಾರೆ, ಒಳ್ಳೊಳ್ಳೆಯ ಹೂಗಿಡಗಳನ್ನಿಡುತ್ತಾರೆ. ಹೇಗೆ ಗವರ್ನಮೆಂಟ್ ಹೌಸನ ಮೊಗಲ್ ಗಾರ್ಡನ್ ಎಷ್ಟು ಚೆನ್ನಾಗಿದೆ, ಹಾಗೆಯೇ ಇದೂ ಬೇಹದ್ದಿನ ಹೂದೋಟವಾಗಿದೆ. ಒಬ್ಬರಲೊ ತೋಟದ ಮಾಲೀಕರಾಗಿದ್ದಾರೆ. ಈಗ ಮುಳ್ಳುಗಳ ಕಾಡಿನ ಬೀಜ ರಾವಣ ಆಗಿದ್ದಾನೆ ಮತ್ತು ಹೂತೋಟದ ಬೀಜ ಶಿವತಂದೆಯಾಗಿದ್ದಾರೆ. ಆಸ್ತಿಯು ತಂದೆಯಿಂದ ಸಿಗುತ್ತದೆ. ರಾವಣನಿಂದ ಅಸ್ತಿ ಸಿಗುವುದಿಲ್ಲ. ರಾವಣನು ಶಾಪ ಕೊಡುತ್ತಾನೆ. ಯಾವಾಗ ಶಾಪಿತರಾಗುತ್ತಾರೆ ಆಗ ಸುಖ ಕೊಡುವವರನ್ನು ನೆನಪು ಮಾಡುತ್ತಾರೆ ಏಕೆಂದರೆ ಅವರು ಸುಖ ದಾತಾ, ಸದಾ ಸುಖ ನೀಡುವವರಾಗಿದ್ದಾರೆ. ಮಾಲಿಗಳೂ ಕೂಡ ಭಿನ್ನ ಭಿನ್ನ ಪ್ರಕಾರದವರಿರುತ್ತಾರೆ. ತೋಟದಮಾಲಿಕ ಬಂದು ಮಾಲಿಗಳನ್ನು ನೋಡುತ್ತಾರೆ ಎಂತಹ ಚಿಕ್ಕ ಪುಟ್ಟ ಹೂದೋಟವನ್ನು ಮಾಡಿದ್ದಾರೆ. ಯಾವ ಯಾವ ಹೂಗಳಿವೆ ಎಂದು ವಿಚಾರ ಮಾಡುತ್ತಾರೆ. ಕೆಲವೊಮ್ಮೆ ಬಹಳ ಒಳ್ಳೊಳ್ಳೆಯ ಮಾಲಿಗಳು ಬರುತ್ತಾರೆ. ಅಂತಹವರ ಹೂಗುಚ್ಛವೂ ಸಹ ಬಹಳ ಚೆನ್ನಾಗಿಯೇ ಇರುತ್ತದೆ. ಆಗ ಮಾಲೀಕನಿಗೂ ಖುಷಿಯಾಗುತ್ತದೆ – ಓಹೋ! ಈ ಮಾಲಿಯು ಬಹಳ ಒಳ್ಳೆಯವರಾಗಿದ್ದಾರೆ, ಒಳ್ಳೊಳ್ಳೆಯ ಹೂಗಳನ್ನು ತಂದಿದ್ದಾರೆ. ಇವರ�� ಬೇಹದ್ದಿನ ತಂದೆಯಾಗಿದ್ದಾರೆ ಮತ್ತು ಇವರದು ಬೇಹದ್ದಿನ ಮಾತುಗಳಾಗಿವೆ, ನೀವು ಮಕ್ಕಳು ಮನಸ್ಸಿನಲ್ಲಿ ತಿಳಿಯುತ್ತೀರಿ ತಂದೆಯು ಸಂಪೂರ್ಣವಾಗಿ ಸತ್ಯವನ್ನೇ ಹೇಳುತ್ತಾರೆ. ಅರ್ಧ ಕಲ್ಪ ರಾವಣನ ರಾಜ್ಯ ನಡೆಯುತ್ತದೆ, ಹೂದೋಟವನ್ನು ಮುಳ್ಳಿನ ಕಾಡನ್ನಾಗಿ ರಾವಣನೇ ಮಾಡುತ್ತಾನೆ. ಕಾಡಿನಲ್ಲಿ ಬರೀ ಮುಳ್ಳುಗಳೇ ಇರುತ್ತವೆ. ಬಹಳ ದುಃಖ ಕೊಡುತ್ತವೆ. ಹೂತೋಟದ ಮಧ್ಯೆ ಮುಳ್ಳುಗಳಿರುತ್ತವೆಯೇ, ಒಂದೂ ಇರುವುದಿಲ್ಲ. ಮಕ್ಕಳಿಗೆ ಗೊತ್ತಿದೆ, ರಾವಣನು ದೇಹಾಭಿಮಾನದಲ್ಲಿ ತರುತ್ತಾನೆ. ಅತಿ ದೊಡ್ಡ ಮುಳ್ಳು ದೇಹಾಭಿಮನವಾಗಿದೆ.
|
2 |
+
ತಂದೆಯು ರಾತ್ರಿಯೂ ತಿಳಿಸಿದ್ದರು – ಕೆಲವರದು ಕಾಮಿ ದೃಷ್ಟಿಯಿರುತ್ತದೆ, ಇನ್ನು ಕೆಲವರದು ಸ್ವಲ್ಪ ಕಾಮಿ ದೃಷ್ಟಿಯಿರುತ್ತದೆ. ಕೆಲವರು ಹೊಸ ಹೊಸಬರು ಬರುತ್ತಾರೆ ಅವರು ಮೊದಲು ಬಹಳ ಚೆನ್ನಾಗಿ ನಡೆಯುತ್ತಾರೆ. ವಿಕಾರದಲ್ಲೆಂದೂ ಹೋಗುವುದಿಲ್ಲ, ಪವಿತ್ರರಾಗಿರುತ್ತೇವೆಂದು ತಿಳಿಯುತ್ತಾರೆ, ಆ ಸಮಯದಲ್ಲಿ ಸ್ಮಶಾನ ವೈರಾಗ್ಯ ಬರುತ್ತದೆ. ಮತ್ತೆ ಮನೆಗೆ ಹೋದಾಗ ಕೊಳಕಾಗುತ್ತಾರೆ. ದೃಷ್ಟಿಯೂ ಕೊಳಕಾಗಿಬಿಡುತ್ತದೆ. ಇಲ್ಲಿ ಯಾರನ್ನು ಒಳ್ಳೆಯ ಹೂಗಳೆಂದು ತಿಳಿದು ಮಾಲೀಕನ ಬಳಿ ಕರೆದುಕೊಂಡು ಬರುತ್ತಾರೆ, ಬಾಬಾ, ಇವರು ಬಹಳ ಒಳ್ಳೆಯ ಹೂವಾಗಿದ್ದಾರೆ. ಇನ್ನೂ ಕೆಲವರು ಇವರು ಎಂತಹ ಹೂವಾಗಿದ್ದಾರೆಂದು ಬಂದು ಕಿವಿಯಲ್ಲಿ ಹೇಳುತ್ತಾರೆ. ಮಾಲಿಯಂತೂ ಅವಶ್ಯವಾಗಿ ತಿಳಿಸುತ್ತಾರೆ ಅಲ್ಲವೆ. ತಂದೆಯು ಅಂತರ್ಯಾಮಿಯಾಗಿದ್ದಾರೆಂದಲ್ಲ ಮಾಲಿಯು ಪ್ರತಿಯೊಬ್ಬರ ಚಲನ ವಲನಗಳನ್ನು ತಿಳಿಸುತ್ತಾರೆ - ಬಾಬಾ, ಇವರ ದೃಷ್ಟಿ ಚೆನ್ನಾಗಿಲ್ಲ, ಇವರ ಚಲನೆ ಶ್ರೇಷ್ಠವಾಗಿಲ್ಲ. ಇವರು 10-20% ಸುಧಾರಣೆಯಾಗಿದ್ದಾರೆ. ಮೂಲ ಕಣ್ಣುಗಳು ಇವು ಬಹಳ ಮೋಸ ಮಾಡುತ್ತವೆ. ಮಾಲಿಯು ಬಂದು ಮಾಲಿಕನಿಗೆ ಎಲ್ಲವನ್ನೂ ತಿಳಿಸುತ್ತಾರೆ. ತಂದೆಯು ಪ್ರತಿಯೊಬ್ಬರನ್ನೂ ಕೇಳುತ್ತಾರೆ - ಹೇಳಿ ನೀವು ಎಂತಹ ಹೂಗಳನ್ನು ತಂದಿದ್ದೀರಿ? ಕೆಲವರು ಗುಲಾಬಿ ಹೂಗಳಾಗಿರುತ್ತಾರೆ, ಸೇವಂತಿಯ ಹೂವಾಗಿರುತ್ತಾರೆ, ಕೆಲವರು ಎಕ್ಕದ ಹೂಗಳಂತಿರುವವರನ್ನೂ ಕರೆತರುತ್ತಾರೆ. ಇಲ್ಲಿ ಬಹಳ ಎಚ್ಚರದಿಂದ ಇರುತ್ತಾರೆ. ಕಾಡಿಗೆ ಹೋದ ನಂತರ ಬಾಡಿ ಹೋಗುತ್ತಾರೆ. ಇವರು ಯಾವ ಪ್ರಕಾರದ ಹೂವನ್ನುವುದನ್ನು ನೋಡುತ್ತಾರೆ. ಮಾಯೆಯೂ ಸಹ ಈ ರೀತಿ ಇದೆ, ಅದು ಮಾಲಿಗಳಿಗೂ ಸಹ ಜೋರಾಗಿ ಏಟನ್ನು ಕೊಡುತ್ತದೆ. ಅದರಿಂದ ಮಾಲಿಗಳೂ ಸಹ ಮುಳ್ಳುಗಳಂತಾಗುತ್ತಾರೆ. ಮಾಲೀಕನು ಬಂದಾಗ ಮೊಟ್ಟ ಮೊದಲು ಹೂದೋಟವನ್ನು ನೋಡುತ್ತಾರೆ, ಮತ್ತೆ ಕುಳಿತು ಅದನ್ನು ಶೃಂಗಾರ ಮಾಡುತ್ತಾರೆ - ಮಕ್ಕಳೇ, ಎಚ್ಚರದಿಂದಿರಿ ದೋಷಗಳನ್ನು ತೆಗೆಯಿರಿ ಇಲ್ಲವಾದರೆ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ. ತಂದೆಯು ಲಕ್ಷ್ಮೀ ನಾರಾಯಣರನ್ನಾಗಿ ಮಾಡಲು ಬಂದಿದ್ದಾರೆ ಅಂದ ಮೇಲೆ ದೇವತೆಗಳಾಗುವ ಬದಲು ನೌಕರಾರುಗುವುದೇ! ನಾವು ಅಂತಹ ಶ್ರೇಷ್ಠರು, ಯೋಗ್ಯರಾಗುತ್ತೀದ್ದೇವೆಯೇ ಎಂದು ಪರಿಶೀಲ��ೆ ಮಾಡಿಕೊಳ್ಳಬೇಕು. ಇದಂತೂ ಮಕ್ಕಳಿಗೆ ತಿಳಿದಿದೆ - ಮುಳ್ಳುಗಳ ಕಾಡಿನ ಬೀಜ ರಾವಣ ಆಗಿದ್ದಾರೆ, ಹೂದೋಟದ ಬೀಜ ರಾಮನಾಗಿದ್ದಾನೆ. ಇವೆಲ್ಲ ಮಾತುಗಳನ್ನು ತಂದೆ ತಿಳಿಸುತ್ತಾರೆ. ಆದರೂ ಸಹ ತಂದೆ ಶಾಲೆಯ ವಿದ್ಯಾಭ್ಯಾಸದ ಮಹಿಮೆ ಮಾಡುತ್ತಾರೆ. ಈ ವಿದ್ಯೆಯು ಒಳ್ಳೆಯದಾಗಿದೆ ಏಕೆಂದರೆ ಅದು ಆದಾಯದ ಮೂಲವಾಗಿದೆ. ಗುರಿ-ಉದ್ದೇಶವಿರುವುದಿಲ್ಲ. ನಿಮ್ಮದು ನರನಿಂದ ನಾರಾಯಣರಾಗುವ ಒಂದೇ ಗುರಿಯಾಗಿದೆ. ಭಕ್ತಿ ಮಾರ್ಗದಲ್ಲಿ ಸತ್ಯನಾರಾಯನನ ಕಥೆ ಬಹಳ ಕೇಳುತ್ತಾರೆ. ಪ್ರತೀ ತಿಂಗಳು ಬ್ರಾಹ್ಮಣರನ್ನು ಕರೆಸುತ್ತಾರೆ, ಬ್ರಾಹ್ಮಣರು ಗೀತೆಯನ್ನು ತಿಳಿಸುತ್ತಾರೆ. ಇತ್ತೀಚೆಗಂತೂ ಎಲ್ಲರೂ ಗೀತೆಯನ್ನು ಹೇಳುತ್ತಾರೆ. ಸತ್ಯ ಬ್ರಾಹ್ಮಣರು ಯಾರೂ ಇಲ್ಲ. ತಾವು ಸತ್ಯಸತ್ಯ ಬ್ರಾಹ್ಮಣರಾಗಿದ್ದೀರಿ, ಸತ್ಯ ತಂದೆಯ ಮಕ್ಕಳಾಗಿದ್ದೀರಿ. ನೀವು ಸತ್ಯ ಸತ್ಯವಾದ ಕಥೆಯನ್ನು ತಿಳಿಸುತ್ತೀರಿ. ಇದು ಸತ್ಯನಾರಾಯಣನ ಕಥೆಯಾಗಿದೆ, ಅಮರ ಕಥೆಯೂ ಆಗಿದೆ, ಮೂರನೇ ನೇತ್ರದ ಕಥೆಯೂ ಆಗಿದೆ. ಭಗವಾನುವಾಚ - ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ, ಅವರಂತೂ ಗೀತೆಯನ್ನು ತಿಳಿಸುತ್ತಲೇ ಬಂದಿದ್ದಾರೆ ಆದರೆ ಯಾರು ರಾಜರಾದರು? ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ, ನಾನಂತೂ ಆಗುವುದಿಲ್ಲ ಎಂದು ಹೇಳುವವರು ಯಾರಾದರೂ ಇದ್ದಾರೆಯೇ? ಈ ರೀತಿ ಎಂದಾದರೂ ಕೇಳಿದ್ದೀರಾ? ಇವರೊಬ್ಬರೇ ತಂದೆಯಾಗಿದ್ದಾರೆ ಕುಳಿತು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಮಕ್ಕಳಿಗೆ ಗೊತ್ತಿದೆ, ಇಲ್ಲಿ ಮಾಲೀಕನ ಬಳಿ ರಿಫ್ರೆಶ್ ಆಗಲು ಬರುತ್ತೇವೆ. ಮಾಲಿಗಳೂ ಆಗುತ್ತಾರೆ, ಹೂಗಳೂ ಆಗುತ್ತಾರೆ. ಮಾಲಿಗಳಂತೂ ಅವಶ್ಯ ಆಗಬೇಕು. ಭಿನ್ನ ಭಿನ್ನ ಪ್ರಕಾರದ ಮಾಲಿಗಳಿದ್ದಾರೆ. ಸೇವೆ ಮಾಡದಿದ್ದರೆ ಒಳ್ಳೆಯ ಹೂ ಹೇಗೆ ಆಗುತ್ತಾರೆ? ಪ್ರತಿಯೊಬ್ಬರೂ ತಮ್ಮ ಹೃದಯವನ್ನು ಕೇಳಿಕೊಳ್ಳಿ - ನಾನು ಯಾವ ಪ್ರಕಾರದ ಹೂ ಆಗಿದ್ದೇನೆ? ಯಾವ ಪ್ರಕಾರದ ಮಾಲಿ ಆಗಿದ್ದೇನೆ? ಮಕ್ಕಳು ವಿಚಾರ ಸಾಗರ ಮಂಥನ ಮಾಡಬೇಕು. ಬ್ರಾಹ್ಮಣಿಯರಿಗೆ ಗೊತ್ತಿದೆ, ಭಿನ್ನ ಭಿನ್ನ ಪ್ರಕಾರದ ಮಾಲಿಗಳಿದ್ದಾರೆ. ಕೆಲವರು ಒಳ್ಳೊಳ್ಳೆಯ ಮಾಲಿಗಳು ಬರುತ್ತಾರೆ. ಅವರದು ಬಹಳ ಒಳ್ಳೆಯ ಹೂದೋಟವಿರುತ್ತದೆ. ಹೇಗೆ ಒಳ್ಳೆಯ ಮಾಲಿಯು ಹೂದೋಟವನ್ನು ಚೆನ್ನಾಗಿಯೇ ಇಟ್ಟುಕೊಳ್ಳುತ್ತಾರೆ. ಒಳ್ಳೊಳ್ಳೆಯ ಹೂಗಳನ್ನು ಕರೆತರುತ್ತಾರೆ. ಅವರನ್ನು ನೋಡಿ ಮನಸ್ಸಿಗೆ ಖುಷಿಯಾಗುತ್ತದೆ. ಕೆಲವರಂತೂ ಸುಗಂಧವಿಲ್ಲದ ಹೂಗಳನ್ನು ಕರೆತರುತ್ತಾರೆ ಅವರನ್ನು ನೋಡಿ ಇವರೇನು ಪದವಿ ಪಡೆಯುತ್ತಾರೆಂದು ಮಾಲೀಕ ತಿಳಿಯುತ್ತಾರೆ, ಇನ್ನೂ ಸಮಯವಿದೆ, ಒಂದೊಂದು ಮುಳ್ಳನ್ನು ಹೂವನ್ನಾಗಿ ಮಾಡುವುದರಲ್ಲಿ ಪರಿಶ್ರಮವಿರುತ್ತದೆ. ಕೆಲವರಂತೂ ಹೂವಾಗಲು ಇಚ್ಛಿಸುವುದೇ ಇಲ್ಲ. ಮುಳ್ಳುಗಳನ್ನೇ ಇಚ್ಛಿಸುತ್ತಾರೆ. ಕಣ್ಣುಗಳ ವೃತ್ತಿಯು ಬಹಳ ಕೊಳಕಾಗಿರುತ್ತದೆ. ಇಲ್ಲಿ ಬಂದಾಗಲೂ ಅವರಿಂದ ಸುಗಂಧ ಬರುವುದಿಲ್ಲ. ಮಾಲೀಕ��ು ಬಯಸುತ್ತಾರೆ, ನನ್ನ ಮುಂದೆ ಹೂಗಳು ಕುಳಿತರೆ ಒಳ್ಳೆಯದು ಚೆನ್ನಾಗಿರುತ್ತದೆ, ಅವರನ್ನು ನೋಡಿ ಖುಷಿಪಡುತ್ತೇನೆ. ಒಂದು ವೇಳೆ ಇವರ ವೃತ್ತಿ ಹೀಗಿದೆ ಎಂದು ನೋಡಿದಾಗ ಅವರ ಕಡೆ ದೃಷ್ಟಿಯನ್ನೂ ಹರಿಸುವುದಿಲ್ಲ. ಆದ್ದರಿಂದ ಈ ನನ್ನ ಹೂಗಳು ಯಾವ ಪ್ರಕಾರದವರಾಗಿರುತ್ತಾರೆ, ಎಷ್ಟು ಸುಗಂಧ ಬೀರುತ್ತಾರೆ? ಮುಳ್ಳುಗಳಿಂದ ಹೂಗಳಾಗಿದ್ದಾರೆಯೇ ಅಥವಾ ಇಲ್ಲವೆ ಎಂದು ತಂದೆಯು ಪ್ರತಿಯೊಬ್ಬರನ್ನೂ ನೋಡುತ್ತಾರೆ? ತಾವೂ ಸಹ ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬಹುದು. ನಾವು ಎಲ್ಲಿಯವರೆಗೆ ಹೂಗಳಾಗಿದ್ದೇವೆ? ಪುರುಷಾರ್ಥ ಮಾಡುತ್ತೇವೆಯೇ? ಪದೇ ಪದೇ ಹೇಳುತ್ತಾರೆ - ಬಾಬಾ, ನಾವು ತಮ್ಮನ್ನು ಮರೆತುಬಿಡುತ್ತೇವೆ, ಯೋಗದಲ್ಲಿರಲು ಆಗುವುದಿಲ್ಲ. ಅರೆ! ನೆನಪು ಮಾಡದಿದ್ದರೆ ಹೂಗಳು ಹೇಗಾಗುತ್ತೀರಿ. ನೆನಪು ಮಾಡಿದರೆ ಪಾಪವು ತುಂಡಾಗುತ್ತದೆ. ಆಗ ಹೂಗಳಾಗಿ ಅನ್ಯರನ್ನೂ ಹೂವನ್ನಾಗಿ ಮಾಡುತ್ತೀರಿ. ಆಗ ಮಾಲಿ ಎಂದು ಹೆಸರಿಡಬಹುದು. ತಂದೆಗೆ ಮಾಲಿಯ ಅವಶ್ಯಕತೆ ಇದೆ, ಯಾರಾದರೂ ಮಾಲಿಗಳಿದ್ದೀರಾ? ಮಾಲಿಗಳಾಗಲು ಏಕೆ ಸಾಧ್ಯವಿಲ್ಲ? ಬಂಧನವನ್ನಂತೂ ಬಿಡಬೇಕು. ಒಳಗೆ ಇಚ್ಛೆಯು ಬರಬೇಕು. ಸೇವೆಯ ಉಲ್ಹಾಸವಿರಬೇಕು. ತಮ್ಮ ರೆಕ್ಕೆಗಳನ್ನು ಶಕ್ತಿಶಾಲಿ ಮಾಡಲು ಶ್ರಮಪಡಬೇಕು. ಯಾರಲ್ಲಿ ಪ್ರೀತಿಯಿದೆಯೋ ಅವರನ್ನು ಬಿಡಲಾಗುತ್ತದೆಯೇ? ತಂದೆಯ ಸೇವೆಗಾಗಿ ಎಲ್ಲಿಯವರೆಗೆ ಹೂವಾಗಿ ಅನ್ಯರನ್ನು ಮಾಡಲಿಲ್ಲವೋ ಅಲ್ಲಿಯವರೆಗೆ ಶ್ರೇಶ್ಠ ಪದವಿಯನ್ನು ಪಡೆಯಲು ಹೇಗೆ ಸಾಧ್ಯ? ಇದು 21 ಜನ್ಮಗಳಿಗೆ ಶ್ರೇಷ್ಠ ಪದವಿಯಾಗಿದೆ. ಮಹಾರಾಜರು, ರಾಜರು, ದೊಡ್ಡ ದೊಡ್ಡ ಸಾಹುಕಾರರು ಇದ್ದಾರೆ. ಮತ್ತೆ ನಂಬರ್ವಾರಾಗಿ ಕಡಿಮೆ ಸಾಹುಕಾರರೂ ಇದ್ದಾರೆ, ಪ್ರಜೆಗಳೂ ಇದ್ದಾರೆ. ಹಾಗಾದರೆ ನಾವು ಏನಾಗಬೇಕು? ಯಾರು ಈಗ ಪುರುಷಾರ್ಥ ಮಾಡುವರೋ ಅವರು ಕಲ್ಪ ಕಲ್ಪಾಂತರವೂ ಆಗುತ್ತಾರೆ. ಈಗ ಪೂರ್ಣ ಒತ್ತು ಕೊಟ್ಟು ಪುರುಷಾರ್ಥ ಮಾಡಬೇಕು. ನರನಿಂದ ನಾರಾಯಣನಾಗಬೇಕು, ಯಾರು ಒಳ್ಳೆಯ ಪುರುಷಾರ್ಥಿಗಳಿರುವರೋ ಅವರು ಕಾರ್ಯದಲ್ಲಿ ತರುತ್ತಾರೆ. ಪ್ರತಿನಿತ್ಯದ ಲಾಭ ನಷ್ಟವನ್ನು ನೋಡಬೇಕಾಗುತ್ತದೆ. 12 ತಿಂಗಳಿನ ಮಾತಲ್ಲ ನಿತ್ಯವೂ ತಮ್ಮ ಲಾಭ ನಷ್ಟಗಳನ್ನು ತೆಗೆಯಬೇಕು. ನಷ್ಟಕ್ಕೊಳಗಾಗಬಾರದು, ಇಲ್ಲದಿದ್ದರೆ ಮೂರನೇಯ ದರ್ಜೆಯವರಾಗಿಬಿಡುತ್ತೀರಿ. ಶಾಲೆಯಲ್ಲಿಯೂ ಸಹ ನಂಬರವಾರ್ ಇರುತ್ತಾರಲ್ಲವೆ!
|
3 |
+
ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ - ನಮ್ಮ ಬೀಜವು ವೃಕ್ಷಪತಿಯಾಗಿದ್ದಾರೆ, ಅವರ ಬರುವಿಕೆಯಿಂದ ನಮ್ಮ ಮೇಲೆ ಬೃಹಸ್ಪತಿಯ ದೆಶೆ ಬರುತ್ತದೆ. ನಂತರ ರಾವಣ ರಾಜ್ಯ ಬಂದಾಗ ರಾಹು ದೆಶೆ ಕುಳಿತುಕೊಳ್ಳುತ್ತದೆ. ಅದು ಅತ್ಯಂತ ಶ್ರೇಷ್ಠ, ಇದು ಅತ್ಯಂತ ಕನಿಷ್ಠ. ಒಮ್ಮೆಲೆ ಶಿವಾಲಯದಿಂದ ವೇಶ್ಯಾಲಯವನ್ನಾಗಿ ಮಾಡಿಬಿಡುತ್ತಾರೆ. ಈಗ ನೀವು ಮಕ್ಕಳ ಮೇಲೆ ಬೃಹಸ್ಪತಿಯ ದೆಶೆಯಿದೆ. ಹೊಸ ವೃಕ್ಷವಾಗಿರುತ್ತದೆ ನಂತರ ಅರ್ಧದಿಂದ ಹಳೆಯದು ಪ್ರಾರಂಭ ಆಗುತ್ತದ���. ಪ್ರತಿಯೊಬ್ಬ ಮಾಲಿಯೂ ಹೂವನ್ನು ಕರೆತರುತ್ತಾರೆ. ಕೆಲವರಂತೂ ತಂದೆಯ ಬಳಿ ಹೋಗಬೇಕು ಎಂದು ಚಡಪಡಿಸುವಂತಹ ಹೂಗಳನ್ನು ಕರೆದುಕೊಂಡು ಬರುತ್ತಾರೆ. ಎಂತೆಂತಹ ಯುಕ್ತಿಗಳಿಂದ ಮಕ್ಕಳು ಬರುತ್ತಾರೆ! ಬಹಳ ಒಳ್ಳೆಯ ಹೂಗಳನ್ನು ತಂದಿದ್ದಾರೆ ಎಂದು ತಂದೆಯು ಹೇಳುತ್ತಾರೆ. ಭಲೆ! ಮಾಲಿಯ ಎರಡನೇಯ ದರ್ಜೆಯವರಾಗಿದ್ದಾರೆ, ಮಾಲಿಗಿಂತ ಹೂಗಳು ಒಳ್ಳೆಯವರಿರುತ್ತಾರೆ. ನಮ್ಮನ್ನು ಇಷ್ಟು ಶ್ರೇಷ್ಠ ವಿಶ್ವದ ಮಾಲೀಕರನ್ನಾಗಿ ಮಾಡುವ ತಂದೆಯ ಬಳಿ ಹೋಗಬೇಕೆಂದು ಚಡಪಡಿಸುತ್ತಾರೆ. ಮನೆಯಲ್ಲಿ ಪೆಟ್ಟು ತಿಂದರೂ ಸಹ ಶಿವಬಾಬಾ ನಮ್ಮ ರಕ್ಷಣೆ ಮಾಡಿರೆಂದು ಹೇಳುತ್ತಾರೆ. ಅವರನ್ನೇ ಸತ್ಯ ದ್ರೌಪದಿಯರೆಂದು ಹೇಳಲಾಗುತ್ತದೆ. ಯಾವುದು ಕಳೆದುಹೋಗಿದೆ ಅದು ಪುನರಾವರ್ತನೆಯಾಗಬೇಕಾಗಿದೆ. ನೆನ್ನೆ ಕರೆದಿರಲ್ಲವೆ ಆದ್ದರಿಂದ ತಂದೆ ಇಂದು ರಕ್ಷಣೆ ಮಾಡಲು ಬಂದಿದ್ದಾರೆ. ಹೀಗೆ ಜ್ಞಾನದ ಧ್ವನಿ ಮಾಡಿರಿ ಎಂದು ಯುಕ್ತಿಗಳನ್ನು ತಿಳಿಸುತ್ತಾರೆ. ನೀವು ಭ್ರಮರಿಗಳಾಗಿದ್ದೀರಿ, ಅವರು ಕೀಟಗಳಾಗಿದ್ದಾರೆ. ಅವರಿಗೆ ಜ್ಞಾನದ ಧ್ವನಿ ಮಾಡುತ್ತಿರಿ. ಭಗವಾನುವಾಚ - ಕಾಮ ಮಹಾಶತ್ರುವಾಗಿದೆ ಅದನ್ನು ಜಯಿಸುವುದರಿಂದ ವಿಶ್ವದ ಮಾಲೀಕರಾಗುತ್ತೀರಿ. ಕೆಲವು ಸಮಯದಲ್ಲಿ ಅಬಲೆಯರ ಮಾತು ನಾಟುತ್ತದೆ ಆಗ ತಣ್ಣಗಾಗುತ್ತಾರೆ. ಒಳ್ಳೆಯದು - ಭಲೇ ಹೋಗಿ. ಈ ರೀತಿ ಮಾಡುವವರ ಬಳಿ ಭಲೇ ಹೋಗಿ, ನನ್ನ ಅದೃಷ್ಟದಲ್ಲಿ ಅಂತೂ ಇಲ್ಲ. ನೀವಾದರೂ ಹೋಗಿ ಎಂದು ಹೇಳುತ್ತಾರೆ. ಹೀಗೆ ದ್ರೌಪದಿಯರು ಕೂಗುತ್ತಾರೆ. ತಂದೆಯು ಬರೆಯುತ್ತಾರೆ- ಮಕ್ಕಳೇ ಜ್ಞಾನದ ಭೂ ಭೂ ಮಾಡಿ, ಕೆಲವು ಸ್ತ್ರೀಯರು ಎಂತೆಂತಹವರು ಇರುತ್ತಾರೆ ಎಂದರೆ ಅವರಿಗೆ ಶೂರ್ಪನಖಿ, ಪೂತನಿ ಎಂದು ಹೇಳಬೇಕಾಗುತ್ತದೆ. ಪುರುಷರು ಅವರಿಗೆ ಭೂ ಭೂ ಮಾಡುತ್ತಾರೆ, ಅವರು ಇನ್ನೂ ಕೀಟಗಳಾಗಿಬಿಡುತ್ತಾರೆ, ವಿಕಾರವಿಲ್ಲದೇ ಇರುವುದಕ್ಕೆ ಆಗುವುದಿಲ್ಲ. ಹೂದೋಟದ ಮಾಲೀಕನ ಬಳಿ ಭಿನ್ನ ಭಿನ್ನ ಪ್ರಕಾರದವರು ಬರುತ್ತಾರೆ, ಮಾತೇ ಕೇಳಬೇಡಿ. ಕೆಲವರು ಕನ್ಯೆಯರೂ ಸಹ ಮುಳ್ಳುಗಳಾಗುತ್ತಾರೆ, ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮ ಜನ್ಮ ಪತ್ರಿಯನ್ನು ತಿಳಿಸಿ. ತಂದೆಗೆ ತಿಳಿಸುವುದೇ ಇಲ್ಲ. ಮುಚ್ಚಿಡುತ್ತಾರೆಂದರೆ ಅದು ವೃದ್ಧಿಯಾಗುತ್ತದೆ. ಇಲ್ಲಿ ಅಸತ್ಯವು ನಡೆಯಲು ಸಾಧ್ಯವಿಲ್ಲ. ನಿಮ್ಮ ವೃತ್ತಿಯು ಇನ್ನೂ ಹಾಳಾಗುತ್ತಲೇ ಹೋಗುವುದು. ತಂದೆಗೆ ತಿಳಿಸುವುದರಿಂದ ಪಾರಾಗುತ್ತೀರಿ. ವಿಕಾರಿಗಳಾಗುವವರ ಮುಖ ಕಪ್ಪಾಗುತ್ತದೆ. ಪತಿತರೆಂದರೆ ಕಪ್ಪು ಮುಖ, ಕೃಷ್ಣನಿಗೂ ಶ್ಯಾಮ ಸುಂದರ ಎಂದು ಹೇಳುತ್ತಾರೆ. ಕೃಷ್ಣನನ್ನು ಕಪ್ಪಾಗಿ ಮಾಡಿದ್ದಾರೆ, ನಾರಾಯಣನನ್ನೂ ಕಪ್ಪಾಗಿ ತೋರಿಸುತ್ತಾರೆ, ಅರ್ಥವೇನೆಂದು ತಿಳಿದುಕೊಂಡಿಲ್ಲ. ನಿಮ್ಮ ಬಳಿಯಂತೂ ನಾರಾಯಣನ ಚಿತ್ರ ಸುಂದರವಾಗಿದೆ. ನಿಮ್ಮ ಗುರಿ ಧ್ಯೇಯವೇ ಇದಾಗಿದೆ - ನೀವು ಕಪ್ಪು ನಾರಾಯಣರಾಗಬೇಕೇನು? ಮಂದಿರಗಳಲ್ಲಿ ಹೇಗೆ ಮಾಡಿದ್ದಾರೆ ಆ ರೀತಿಯಂತೂ ಇರಲಿಲ್��. ವಿಕಾರದಲ್ಲಿ ಬೀಳುವ ಕಾರಣ ಮುS ಕಪ್ಪಾಗುತ್ತದೆ. ಆತ್ಮವು ಕಪ್ಪಾಗಿದೆ. ಕಬ್ಬಿಣಯುಗದಿಂದ ಸ್ವರ್ಣಿಮ ಯುಗಕ್ಕೆ ಹೋಗಬೇಕಾಗಿದೆ, ಚಿನ್ನದ ಪಕ್ಷಿಗಳಾಗಬೇಕು. ಕಲ್ಕತ್ತೆಯ ಕಾಳಿಯೆಂದು ಕರೆಯುತ್ತಾರೆ, ಎಷ್ಟು ಭಯಂಕರ ಮುಖ ಕಾಣಿಸುತ್ತದೆ ಕೇಳಲೇಬೇಡಿ, ತಂದೆ ಹೇಳುತ್ತಾರೆ ಮಕ್ಕಳೇಇದೆಲ್ಲವೂ ಭಕ್ತಿಮಾರ್ಗವಾಗಿದೆ, ಈಗಂತೂ ನಿಮಗೆಲ್ಲ ಜ್ಞಾನ ಸಿಕ್ಕಿದೆ. ಒಳ್ಳೆಯದು.
|
4 |
+
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾ ಅವರ ನೆನಪು ಪೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
5 |
+
ಧಾರಣೆಗಾಗಿ ಮುಖ್ಯಸಾರ:
|
6 |
+
1. ತಮ್ಮ ರೆಕ್ಕೆಗಳನ್ನು ಸ್ವತಂತ್ರಗೊಳಿಸಲು ಶ್ರಮ ಪಡಬೇಕು. ಬಂಧನಗಳಿಂದ ಮುಕ್ತರಾಗಿ ಬುದ್ಧಿವಂತ ಮಾಲಿಗಳಾಗಬೇಕು. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
|
7 |
+
2. ತಮ್ಮನ್ನು ತಾವು ನೋಡಿಕೊಳ್ಳಬೇಕು - ನಾನು ಎಷ್ಟು ಸುಗಂಧ ಭರಿತ ಹೂವಾಗಿದ್ದೇನೆ? ನನ್ನ ವೃತ್ತಿಯು ಶುದ್ಧವಾಗಿದೆಯೇ? ಕಣ್ಣುಗಳು ಮೋಸ ಮಾಡುವುದಿಲ್ಲ ತಾನೆ? ತಮ್ಮ ನಡೆ-ನುಡಿಯ ಚಾರ್ಟ್ನ್ನಿಟ್ಟು ಕೊರತೆಗಳನ್ನು ತೆಗೆಯಬೇಕಾಗಿದೆ.
|
BKMurli/BKMurli/page_1040.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಇದನ್ನು ಯಾರು ಹೇಳಿದರು? ತಂದೆಯು ಮಕ್ಕಳಿಗೆ ಹೇಳಿದರು - ಮಕ್ಕಳೇ, ಗೀತೆಯನ್ನು ಕೇಳಿದಿರಾ? ಯಾವಾಗ ಅತೀ ದುಃಖವಾಗುತ್ತದೆಯೋ ಆಗ ಕರೆಯುತ್ತಾರೆ. ಮಕ್ಕಳಿಗೆ ತಿಳಿದಿದೆ - ತಂದೆಯೇ ಸುಖಧಾಮ ಅಥವಾ ಪಾವನ ಪ್ರಪಂಚವನ್ನು ರಚಿಸುತ್ತಾರೆ. ಭಗವಾನ್-ಭಗವತಿಯ ರಾಜ್ಯವನ್ನು ಸ್ಥಾಪನೆ ಮಾಡಿಸುತ್ತಾರೆ. ಭಗವಾನ್-ಭಗವತಿಯು ಸ್ವರ್ಗದ ಮಾಲೀಕರಾದರು. ನೀವು ನೋಡುತ್ತೀರಿ - ಲಕ್ಷ್ಮೀ-ನಾರಾಯಣರು ಎಷ್ಟು ಧನವಂತರಾಗಿದ್ದರು, ಎಷ್ಟು ದೊಡ್ಡ ರಾಜಧಾನಿಯಿತ್ತು! ಅವರ ರಾಜಧಾನಿಯಲ್ಲಿ ಎಂದೂ ಯಾವುದೇ ಉಪದ್ರವಗಳಾಗುವುದಿಲ್ಲ. ತಂದೆಯು ಮಕ್ಕಳಿಗೆ ಇಂತಹ ಆಸ್ತಿಯನ್ನು ಕೊಡುತ್ತಾರೆ ಅಂದಮೇಲೆ ಎಷ್ಟೊಂದು ಖುಷಿಯಲ್ಲಿರಬೇಕು ಆದರೆ ನಂಬರ್ವಾರ್ ಪುರುಷಾರ್ಥದ ಅನುಸಾರವಂತೂ ಇದ್ದೇ ಇರುತ್ತಾರೆ. ಕೆಲಕೆಲವರು ಜ್ಞಾನವನ್ನು ಪೂರ್ಣ ತೆಗೆದುಕೊಳ್ಳದೆ ಇರುವ ಕಾರಣ ಅಲ್ಲಿನ (ಕಲಿಯುಗ) ಖುಷಿಯಲ್ಲಿಯೂ ಇರುವುದಿಲ್ಲ ಮತ್ತು ಇಲ್ಲಿನ (ಸಂಗಮಯುಗದ) ಖುಷಿಯಲ್ಲಿಯೂ ಇರುವುದಿಲ್ಲ. ಅವರನ್ನು ಎರಡೂ ಲೋಕಗಳಿಂದ ಹೋದರು ಎಂದು ಹೇಳುತ್ತಾರೆ ಏಕೆಂದರೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗೆ ಬೀಳುತ್ತಾರೆ. ಭಗವಂತನು ಬಂದು ಸ್ವರ್ಗ ಸ್ಥಾಪನೆ ಮಾಡುತ್ತಿದ್ದಾರೆ ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಏಕೆಂದರೆ ಅವರು ಗುಪ್ತ ರೂಪದಲ್ಲಿ ಬರುತ್ತಾರೆ. ಅವಶ್ಯವಾಗಿ ಭಗವಂತನು ಈ ಸಮಯದಲ್ಲಿ ಇರಬೇಕು ಎಂದು ಹೇಳುತ್ತಾರೆ. ಏಕೆಂದರೆ ಎಲ್ಲರೂ ಘೋರ ಅಂಧಕಾರದಲ್ಲಿದ್ದಾರೆ. ರಾತ್ರಿ 12 ಗಂಟೆಯಾದರೆ ಅದಕ್ಕೆ ಘೋರ ಅಂಧಕಾರವೆಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ಘೋರ ಅಂಧಕಾರ, ದಿನದಲ್ಲಿ ಘೋರ ಪ್ರಕಾಶವಿರುತ್ತದೆ. ಮಕ್ಕಳಿಗೆ ತಿಳಿದಿದೆ - ಈಗ ಭಕ್ತಿಮಾರ್ಗದ ರಾತ್ರಿಯು ಮುಕ್ತಾಯವಾಗುತ್ತದೆ, ಇದರಲ್ಲಿ ದುಃಖವೇ ದುಃಖವಿದೆ, ಭಕ್ತಿಯ ನಂತರ ಭಗವಂತ ಸಿಗುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ತಂದೆಯೇ ಬಂದು ನಮ್ಮೆಲ್ಲರ ಸದ್ಗತಿ ಮಾಡುತ್ತಾರೆ, ನೀವು ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ, ಕೆಲವರಿಗೆ ಖುಷಿಯ ನಶೆಯೇರಿರುತ್ತದೆ. ಖುಷಿಯಿಂದ ಪರಿಶ್ರಮ ಪಡುತ್ತಾರೆ. ಯಾರಿಗಾದರೂ ಹೋಗಿ ತಿಳಿಸಬೇಕು ಎಂದು ಸರ್ವೀಸಿನ ಉಮ್ಮಂಗವಿರುತ್ತದೆ. ಆದ್ದರಿಂದ ತಂದೆಯು ಪ್ರದರ್ಶನಿ, ಮೇಳಗಳ ಪ್ರಬಂಧ ರಚಿಸುತ್ತಾ ಇರುತ್ತಾರೆ, ಅನ್ಯರಿಗೆ ತಿಳಿಸುವುದರಿಂದ ಖುಷಿಯ ನಶೆಯೇರಲಿ ಎಂದು. ಯಾರ ಬಳಿ ಹಣವಿದೆಯೋ ಅವರು ನಾವು ಸ್ವರ್ಗದಲ್ಲಿ ಕುಳಿತಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ಅವರು ಜ್ಞಾನವನ್ನು ತೆಗೆದುಕೊಳ್ಳುವುದೇ ಕಷ್ಟವಾಗುತ್ತದೆ, ಆದ್ದರಿಂದಲೇ ಗಾಯನವಿದೆ - ಕೋಟಿಯಲ್ಲಿ ಕೆಲವರೇ ಬುದ್ಧಿವಂತರಾಗಿ ತಂದೆಯ ಆಸ್ತಿಗೆ ಅಧಿಕಾರಿಗಳಾಗುತ್ತಾರೆ. ಫಾಲೋ ಫಾದರ್ ಎಂದು ಗಾಯನವಿದೆ, ಅಂದಮ���ಲೆ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಯಾರು ಚೆನ್ನಾಗಿ ಶ್ರೀಮತದಂತೆ ನಡೆಯುವರೋ ಅವರನ್ನು ಫಾಲೋ ಮಾಡಬೇಕು. ಹೇಗೆ ಈ ಬ್ರಹ್ಮಾರವರು ಚೆನ್ನಾಗಿ ನಡೆಯುತ್ತಿದ್ದಾರೆ. ಲೌಕಿಕ ಮಕ್ಕಳು ತನ್ನ ಸಲಹೆಯಂತೆ ನಡೆಯಲಿಲ್ಲ ಆದ್ದರಿಂದ ನೀವು ತಮ್ಮ ಮಾರ್ಗವನ್ನು ನೋಡಿಕೊಳ್ಳಿ ಎಂದು ಹೇಳಿ ಬಿಟ್ಟರು. ರಾವಣನ ಮತದಂತೆ ನಡೆಯುವವರು ಮತ್ತು ರಾಮನ ಮತದಂತೆ ನಡೆಯುವವರು ಒಟ್ಟಿಗೆ ಇರಲು ಸಾಧ್ಯವಿಲ್ಲ.
|
2 |
+
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಭಾರತದಲ್ಲಿಯೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಅವರು 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದಾರೆ ಆದ್ದರಿಂದಲೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇನ್ನು ಕೆಲವೇ ದಿನಗಳಿದೆ, ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ಸಮಯ ಹಿಡಿಸುತ್ತದೆ. ಇದು ಗುಪ್ತವಾಗಿದೆ. ಇದರಲ್ಲಿ ಯುದ್ಧದ ಮಾತಿಲ್ಲ. ಯುದ್ಧ ಮಾಡಿ ರಾಜ್ಯವನ್ನು ತೆಗೆದುಕೊಳ್ಳುತ್ತಾರೆ ಎಂದಲ್ಲ. ಇಲ್ಲಂತೂ ತಂದೆಯು ಬಂದು ರಾಜರಿಗೂ ರಾಜರನ್ನಾಗಿ ಮಾಡುತ್ತಾರೆ. ಯಾವ ತಂದೆಯನ್ನು ದುಃಖಹರ್ತ-ಸುಖಕರ್ತ ಬನ್ನಿ ಎಂದು ನೆನಪು ಮಾಡುತ್ತಾರೆ. ಸನ್ಯಾಸಿ ಗುರುಗಳು ದುಃಖಹರ್ತರಾಗಲು ಸಾಧ್ಯವೇ? ಅವರದ್ದು ಹದ್ದಿನ ಸನ್ಯಾಸವಾಗಿದೆ, ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ, ಇದರಲ್ಲಿ ಬೇಹದ್ದಿನ ಖುಷಿಯಿರುತ್ತದೆ. ಈ ಲಕ್ಷ್ಮೀ-ನಾರಾಯಣ ಭಗವಾನ್-ಭಗವತಿಗೂ ಸಹ ಬೇಹದ್ದಿನ ಖುಷಿಯಿದೆಯಲ್ಲವೆ. ಪತಿತ ಮನುಷ್ಯರಿಗೆ ಏನು ಬಂದರೆ ಅದನ್ನು ಹೇಳುತ್ತಾರೆ, ನೀವಂತೂ ಒಂದೊಂದು ಶಬ್ಧವನ್ನೂ ಅರ್ಥ ಸಹಿತವಾಗಿ ಹೇಳುತ್ತೀರಿ. ಹೊಸ ಪ್ರಪಂಚದಲ್ಲಿ ಒಂದೇ ಧರ್ಮವಿರುತ್ತದೆ, ಅದನ್ನು ಯಾವುದರೊಂದಿಗೂ ಹೋಲಿಕೆ ಮಾಡಲು ಆಗುವುದಿಲ್ಲ. ಹಳೆಯ ಪ್ರಪಂಚದಲ್ಲಿ ಹೋಲಿಕೆ ಮಾಡಲಾಗುತ್ತದೆ. ಹೊಸ ಪ್ರಪಂಚದಲ್ಲಿದ್ದಾಗ ಹಳೆಯ ಪ್ರಪಂಚದಲ್ಲಿ ಏನಿರುತ್ತದೆ ಎಂಬುದು ತಿಳಿದಿರುವುದೇ ಇಲ್ಲ. ಅಲ್ಲಿ ಎಲ್ಲವೂ ಮರೆತು ಹೋಗುತ್ತದೆ. ಇಲ್ಲಿ ನಿಮಗೆ ಹೊಸ ಪ್ರಪಂಚವು ಯಾವಾಗ ಸ್ಥಾಪನೆಯಾಗುವುದು, ಹಳೆಯ ಪ್ರಪಂಚವು ಯಾವಾಗ ವಿನಾಶವಾಗುವುದು ಎಂಬುದೆಲ್ಲವನ್ನೂ ತಿಳಿಸಲಾಗುತ್ತದೆ. ನಿಮಗೆ ಎಲ್ಲಾ ಜ್ಞಾನವಿದೆ. ಈಗ ನಿಮಗೆ ಸ್ವರ್ಗ ಸ್ಥಾಪನೆ ಮಾಡುವಂತಹ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಅವರಿಂದ ಚೆನ್ನಾಗಿ ಆಸ್ತಿಯನ್ನು ತೆಗೆದುಕೊಳ್ಳಬೇಕು. ಯಾರು ಕಲ್ಪದ ಮೊದಲು ಚೆನ್ನಾಗಿ ಪುರುಷಾರ್ಥ ಮಾಡಿದ್ದರೋ ಅವರಿಗೆ ಆಸ್ತಿಯು ಸಿಗುವುದು. ಅವರಲ್ಲಿಯೂ ನಂಬರ್ವಾರ್ ಇದ್ದಾರೆ. ಇದು ಮುಳ್ಳುಗಳ ಪ್ರಪಂಚವಾಗಿದೆ. ಮೊದಲನೇ ನಂಬರಿನ ಮುಳ್ಳಂತೂ ಎಲ್ಲರಲ್ಲಿಯೂ ಇದೆ, ಹಳೆಯ ಪ್ರಪಂಚವು ಛೀ ಛೀ ಆಗಿದೆ, ಹೊಸ ಪ್ರಪಂಚವು ಚೆನ್ನಾಗಿರುತ್ತದೆ. ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಇಂತಹವರು ಸ್ವರ್ಗವಾಸಿಯಾದರು ಎಂದು ಹೇಳಿ ಬಿಡುತ್ತಾರೆ. ಸ್ವರ್ಗವಾಸಿಯಾಗಲು ಈಗ ಸ್ವರ್ಗವಾದರೂ ಎಲ್ಲಿದೆ!
|
3 |
+
ನೀವು ತಿಳಿದುಕೊಂಡಿದ್ದೀರಿ - ಸ್ವರ್ಗವೂ ಈ ಭಾರತದಲ್ಲಿಯೇ ಇತ್ತು, ನರಕವೂ ಭಾರತದಲ್ಲಿಯೇ ಇದೆ. ಆದ್ದರಿಂದ ಈ ಅಕ್ಷರವನ್ನು ಅವರು ಹಿಡಿದುಕೊಂಡು ಸ್ವರ್ಗ-ನರಕ ಇಲ್ಲಿಯೇ ಇದೆ, ಯಾರಿಗೆ ಬಹಳ ಹಣವಿದೆಯೋ ಅವರು ಸ್ವರ್ಗದಲ್ಲಿದ್ದಾರೆಂದು ಹೇಳಿ ಬಿಡುತ್ತಾರೆ ಆದರೆ ಈ ರೀತಿ ಇಲ್ಲ. ಭಾರತವು ಹೊಸದಾಗಿದ್ದಾಗ ಸತ್ಯಯುಗವಾಗಿತ್ತು, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈಗ ಪತಿತ ಪ್ರಪಂಚ ನರಕವಾಗಿದೆ. ಪ್ರಪಂಚವಂತೂ ಒಂದೇ ಆಗಿದೆ, ಹೊಸ ಪ್ರಪಂಚದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಹಳೆಯ ಪ್ರಪಂಚದಲ್ಲಿ ರಾವಣ ರಾಜ್ಯವಿದೆ. ಭಗವಾನುವಾಚ - ನಾನು ನಿಮಗೆ 84 ಜನ್ಮಗಳ ರಹಸ್ಯವನ್ನು ತಿಳಿಸುತ್ತೇನೆ, ಈ ರಾಜಯೋಗದಿಂದ ನಿಮ್ಮನ್ನು ರಾಜಾಧಿರಾಜರು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಅಂದಮೇಲೆ ನರಕದ ವಿನಾಶವು ಅವಶ್ಯವಾಗಿ ಆಗಬೇಕಾಗಿದೆ, ಶಾಸ್ತ್ರಗಳಲ್ಲಿ ಕೃಷ್ಣನ ಹೆಸರನ್ನು ಹಾಕಿ ಯುದ್ಧವನ್ನು ತೋರಿಸಿ ಬಿಟ್ಟಿದ್ದಾರೆ. ಪಾಂಡವರದು ಯಾವುದೇ ಸೇನೆಯಿಲ್ಲ, ಇತ್ತೀಚೆಗೆ ಕನ್ಯೆಯರು ಮಾತೆಯರನ್ನು ಪರಿವರ್ತನೆ ಮಾಡಿ ಅವರಿಗೆ ಬಂದೂಕು ಇತ್ಯಾದಿ ನಡೆಸುವುದನ್ನು ಕಲಿಸುತ್ತಾರೆ. ಇಲ್ಲಿ ನಿಮ್ಮ ಕೈಯಲ್ಲಿ ಬಂದೂಕು ಇತ್ಯಾದಿಗಳೇನೂ ಇಲ್ಲ. ಶಿವಶಕ್ತಿ ಸೇನೆ ಯಾವುದಾಗಿದೆ ಎಂಬುದು ಅವರಿಗೇನು ಗೊತ್ತಿದೆ? ಶಿವ ತಂದೆಯು ಎಂದೂ ಹಿಂಸೆ ಮಾಡಿಸುವುದಿಲ್ಲ, ಯುದ್ಧದ ಮಾತೇ ಇಲ್ಲ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯದು ಆತ್ಮಿಕ ಸೈನ್ಯವಾಗಿದೆ. ಶಿವ ತಂದೆಯು ನಮ್ಮನ್ನು ಡಬಲ್ ಅಹಿಂಸಕರನ್ನಾಗಿ ಮಾಡುತ್ತಾರೆ, ಅವರಿಗೆ 100% ಅಹಿಂಸಕರೆಂದು ಹೇಳಲಾಗುತ್ತದೆ. ಇವರು 100% ಹಿಂಸಕರಾಗಿದ್ದಾರೆ. ಒಂದೇ ಬಾಂಬಿನಿಂದ ಎಷ್ಟೊಂದು ಜನರ ವಿನಾಶ ಮಾಡುತ್ತಾರೆ. ಬೇಹದ್ದಿನ ಅಹಿಂಸೆ ಮತ್ತು ಹಿಂಸೆಯಲ್ಲಿ ಎಷ್ಟೊಂದು ಅಂತರವಿದೆ. ನೀವೀಗ ಈ ಸಮಯದಲ್ಲಿ ಬೇಹದ್ದಿನ ಶಾಂತಿಯಲ್ಲಿದ್ದೀರಿ, ಒಂದುಕಡೆ ಎಷ್ಟೊಂದು ಯುದ್ಧದ ತಯಾರಿ ಆಗುತ್ತಾ ಹೋಗುತ್ತಿದೆಯೋ ಅಷ್ಟೇ ಗಲಾಟೆಯು ಹೆಚ್ಚುತ್ತಾ ಹೋಗುತ್ತದೆ. ವಿನಾಶದಲ್ಲಿ ಎಷ್ಟೊಂದು ಹೊಡೆದಾಟವಾಗುತ್ತದೆ. ಸ್ಥಾಪನೆಯಲ್ಲಿ ನೀವು ಎಷ್ಟೊಂದು ಶಾಂತಿಯಲ್ಲಿ ಕುಳಿತಿದ್ದೀರಿ, ಯಾವುದೇ ಹಿಂಸೆಯ ಮಾತಿಲ್ಲ. ನಿಮ್ಮದು ಈಗ ಪ್ರತ್ಯಕ್ಷ ಜೀವನವಾಗಿದೆ. ತಂದೆಯಿಂದ ಯೋಗಬಲದ ಮೂಲಕ ಆಸ್ತಿಯನ್ನು ಪಡೆಯುತ್ತೀರಿ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದರಿಂದ ಸ್ವರ್ಗದ ರಾಜ್ಯಭಾಗ್ಯ ಸಿಗುತ್ತದೆ, ಎಷ್ಟು ಸಹಜವಾಗಿದೆ! ತಂದೆಯು ಎಷ್ಟು ಪ್ರಿಯಾತಿ ಪ್ರಿಯರಾಗಿದ್ದಾರೆ. ಎಷ್ಟು ದೂರ ದೇಶದಿಂದ ಬರುತ್ತಾರೆ, ಹೇಗೆ ವಿದೇಶದಿಂದ ಯಾರ ತಂದೆಯಾದರೂ ಬರುತ್ತಾರೆಂದರೆ ಮಕ್ಕಳು ಬಹಳ ಖುಷಿಯಾಗುತ್ತಾರೆ - ನಮ್ಮ ತಂದೆಯು ನಮಗಾಗಿ ಒಳ್ಳೊಳ್ಳೆಯ ಉಡುಗೊರೆ ತರುತ್ತಾರೆ ಎಂದು. ಈ ಬೇಹದ್ದಿನ ತಂದೆಯಂತೂ ಒಂದೇ ಬಾರಿ ಬರುತ್ತಾರೆ, ಯಾವ ಉಡುಗೊರೆಯನ್ನ�� ತರುತ್ತಾರೆ? ನಾನು ನಿಮಗಾಗಿ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದೇನೆ ಎಂದು ಹೇಳುತ್ತಾರೆ. ಹೇಗೆ ಹನುಮಂತನು ಸಂಜೀವಿನಿ ಮೂಲಿಕೆಯ ಪರ್ವತವನ್ನೇ ತಂದೆನೆಂದು ಹೇಳುತ್ತಾರೆ, ಈಗ ಪರ್ವತವನ್ನಂತೂ ಎತ್ತಲು ಯಾರಿಂದಲೂ ಸಾಧ್ಯವಿಲ್ಲ ಹಾಗೆಯೇ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದೇನೆಂದು ಹೇಳುತ್ತಾರೆ. ಆದರೆ ಸ್ವರ್ಗವನ್ನು ಅಂಗೈಯಲ್ಲಿ ಎತ್ತಲು ಸಾಧ್ಯವಿಲ್ಲ. ಇದು ಕೇವಲ ತಿಳಿದುಕೊಳ್ಳುವ ಮಾತುಗಳಾಗಿವೆ, ತಂದೆಯು ನಮಗಾಗಿ ನಂಬರ್ವನ್ ಉಡುಗೊರೆಯನ್ನು ತಂದಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ ಅಂದಮೇಲೆ ನೀವು ಪಾವನರಾಗಬೇಕಾಗುತ್ತದೆ, ಇದು ರಾಜಯೋಗವಲ್ಲವೆ. ಭಾರತದ ಪ್ರಾಚೀನ ರಾಜಯೋಗವನ್ನು ಗೀತೆಯ ಭಗವಂತನೇ ಕಲಿಸಿದ್ದರು ಮತ್ತು ರಾಜ್ಯಭಾಗ್ಯವನ್ನೂ ನೀಡಿದ್ದರು, ಈಗ ಪುನಃ ರಾಜಯೋಗವನ್ನು ಕಲಿಸುತ್ತಿದ್ದಾರೆ. ನಾವು ಸ್ವರ್ಗದ ಸ್ಥಾಪನೆ ಮಾಡುವಂತಹ ತಂದೆಯ ಮಕ್ಕಳಾಗಿದ್ದೇವೆ ಎಂದು ನೀವು ಹೇಳುತ್ತೀರಿ. ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆಂದರೆ ಅವಶ್ಯವಾಗಿ ಯಾರಿಗೋ ರಾಜ್ಯಭಾಗ್ಯವು ಸಿಕ್ಕಿರಬೇಕಲ್ಲವೆ. ಕೇವಲ ಸ್ವರ್ಗದಲ್ಲಿ ಇರುವವರಿಗೇ ತಂದೆಯು ಕೊಟ್ಟಿರುವರು ಎಂದಲ್ಲ, ಮತ್ತೆಲ್ಲರಿಗೂ ತಂದೆಯು ಕೊಡುತ್ತಾರಲ್ಲವೆ. ಉಳಿದೆಲ್ಲರಿಗೆ ಡ್ರಾಮಾನುಸಾರ ಮುಕ್ತಿಯ ಪಾತ್ರವು ಸಿಕ್ಕಿದೆ, ಎಲ್ಲರೂ ಮುಕ್ತರಾಗಿ ಬಿಡುತ್ತಾರೆ. ಒಬ್ಬ ತಂದೆಯೇ ಸರ್ವರ ಸದ್ಗತಿದಾತನಾಗಿದ್ದಾರೆ ಮತ್ತ್ಯಾರೂ ಅಲ್ಲ. ನಿಮ್ಮ ಬಳಿ ಪ್ರದರ್ಶನಿಯಲ್ಲಿ ಯಾರು ಪ್ರಸಿದ್ಧ ವ್ಯಕ್ತಿಗಳು ಬರುತ್ತಾರೆಯೋ ಅವಶ್ಯವಾಗಿ ಗೀತೆಯ ಭಗವಂತನು ಶ್ರೀಕೃಷ್ಣನಲ್ಲ, ಶಿವನಾಗಿದ್ದಾರೆ ಎಂಬುದನ್ನು ಒಪ್ಪುತ್ತಾರೆಯೋ ಅವರಿಂದ ಅಭಿಪ್ರಾಯವನ್ನು ಬರೆಸಿಕೊಳ್ಳಬೇಕಾಗಿದೆ. ದೊಡ್ಡ ವ್ಯಕ್ತಿಗಳ ಮಾತನ್ನೇ ಕೇಳುತ್ತಾರೆ, ಬಡವರ ಮಾತನ್ನು ಯಾರೂ ಕೇಳುವುದಿಲ್ಲ ಆದ್ದರಿಂದ ಪ್ರದರ್ಶನಿಯಲ್ಲಿ ಪ್ರಯತ್ನ ಮಾಡಿ. ಇದನ್ನು ಬರೆಸಿಕೊಳ್ಳಿ - ಗೀತೆಯ ಭಗವಂತ ಒಬ್ಬರೇ ಆಗಿದ್ದಾರೆ, ಅವರು ಎಲ್ಲರ ತಂದೆಯಾಗಿದ್ದಾರೆ. ಇಂದಿಗೆ 5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗಂತೂ ಇಡೀ ವಿಶ್ವದಲ್ಲಿ ರಾವಣನ ರಾಜ್ಯವಿದೆ, ರಾವಣನೇ ಎಲ್ಲರ ಶತ್ರುವಾಗಿದ್ದಾನೆ ಯಾರನ್ನು ವರ್ಷ-ವರ್ಷವೂ ಸುಡುತ್ತಾರೆ ಆದರೂ ಸಾಯುವುದಿಲ್ಲ. ಈಗ ಭಾರತದ ದೊಡ್ಡ ಶತ್ರು ಈ ರಾವಣನಾಗಿದ್ದಾನೆ. ಈ ಮಾತನ್ನು ಕೇವಲ ನೀವು ತಿಳಿದುಕೊಂಡಿದ್ದೀರಿ. ಈಗ ರಾಮನಾದ ಪರಮಪಿತ ಪರಮಾತ್ಮನು ರಾವಣನ ಮೇಲೆ ಜಯ ಪ್ರಾಪ್ತಿ ಮಾಡಿಸುತ್ತಾರೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪವು ನಾಶವಾಗುತ್ತದೆ ಎಂದು ಹೇಳುತ್ತಾರೆ, ನೀವು ಯೋಗ್ಯರಾಗುತ್ತೀರೆಂದರೆ ಮತ್ತೆ ನಿಮಗಾಗಿ ಹೊಸ ಪ್ರಪಂಚ ಬೇಕು, ಅವಶ್ಯವಾಗಿ ಹಳೆಯ ಪ್���ಪಂಚದ ವಿನಾಶವೂ ಆಗಿತ್ತು ಅದು ಪುನಃ ಆಗುವುದು. ಯಾವಾಗ ರಾವಣ ರಾಜ್ಯವು ವಿನಾಶವಾಗಿ ರಾಮ ರಾಜ್ಯವು ಸ್ಥಾಪನೆಯಾಗುತ್ತದೆಯೋ ಆಗಲೇ ಮಹಾಭಾರತ ಯುದ್ಧವಾಗುತ್ತದೆ. ರಾವಣ ರಾಜ್ಯದಲ್ಲಿಯೇ ಆಹಾಕಾರವು ಆರಂಭವಾಗುತ್ತದೆ. ಆಹಾಕಾರದ ನಂತರ ಜಯ ಜಯಕಾರವಾಗುತ್ತದೆ. ಪ್ರಪಂಚವು ಪರಿವರ್ತನೆಯಾಗುತ್ತದೆ. ಹೇಗೆ ಹಳೆಯ ಮನೆಯನ್ನು ಬಿಟ್ಟು ಹೊಸ ಮನೆಯನ್ನು ಕಟ್ಟಿಸಲಾಗುತ್ತದೆ ನಂತರ ಅದನ್ನು ಬೀಳಿಸಲಾಗುತ್ತದೆ ಹಾಗೆಯೇ ಇದು ಸ್ಥಾಪನೆಯಾಗುತ್ತಿದೆ. ಬಾಂಬುಗಳನ್ನು ಮಾಡುತ್ತಲೇ ಇರುತ್ತಾರೆ, ತಯಾರಿಗಳು ನಡೆಯುತ್ತಿದೆ. ಈಗ ದಶಹರಾ ಆಯಿತು, ರಾವಣನ ಪ್ರತಿಮೆಯನ್ನು ಮಾಡಿಸಿದ್ದರು, ನಿಮ್ಮದು ಬೇಹದ್ದಿನ ಮಾತಾಗಿದೆ. ಇವರೇನು ಮಾಡುತ್ತಾರೆ ಎಂದು ಈಗ ನಿಮ್ಮ ಬುದ್ಧಿಯಲ್ಲಿ ಬರುತ್ತದೆ. ನೀವು ಯಾವಾಗ ತಿಳಿಸುತ್ತೀರೋ ಆಗಲೇ ನಾವು ಏನು ಮಾಡುತ್ತಿದ್ದೇವೆ ಎಂಬುದು ಅರ್ಥವಾಗುತ್ತದೆ. ನಗು ಬರುತ್ತದೆ. ಯಾರಿಗಾದರೂ ತಿಳಿಸಬಲ್ಲಿರಿ - ಇಷ್ಟು ದೊಡ್ಡ ರಾವಣನಂತೂ ಇರುವುದೇ ಇಲ್ಲ, ಈಗ ತಂದೆಯು ಹೇಳುತ್ತಾರೆ - ನೀವು ರಾಮ ರಾಜ್ಯವನ್ನು ತೆಗೆದುಕೊಳ್ಳಿ, ಐದು ವಿಕಾರಗಳ ದಾನವನ್ನು ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದು. ತಂದೆಯು ಬಂದು ತಿಳಿಸುತ್ತಾರೆ - ಇಡೀ ಪ್ರಪಂಚಕ್ಕೆ ಈ ಐದು ವಿಕಾರಗಳ ಗ್ರಹಣ ಹಿಡಿದಿದೆ. ಸಂಪೂರ್ಣ ಕಪ್ಪಾಗಿ ಬಿಡುತ್ತಾರೆ, ನೀವು ಮಕ್ಕಳಿಗೆ ಅಪಾರ ಖುಷಿಯಿರಬೇಕು - ಇನ್ನು ಕೆಲವೇ ದಿನಗಳಿವೆ.
|
4 |
+
ನೀವೀಗ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿಗಳು, ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ಈಗ ನಿಮ್ಮದು ಸ್ವಚ್ಛ ಬುದ್ಧಿಯಾಗಿದೆ. ನೀವು ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ಸ್ವರ್ಗದಲ್ಲಿ ಕಳುಹಿಸುತ್ತಾರೆ. ಜ್ಞಾನವು ಆದಾಯದ ಮೂಲವೆಂದು ಹೇಳಲಾಗುತ್ತದೆ, ಇದು ಆತ್ಮಿಕ ಜ್ಞಾನವಾಗಿದೆ, ಇದನ್ನು ತಂದೆಯೇ ತಿಳಿಸುತ್ತಾರೆ. ಮನುಷ್ಯರು ಮನುಷ್ಯರಿಗೆ ತಿಳಿಸಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಎಲ್ಲರೂ ಮನುಷ್ಯರು ಮನುಷ್ಯರಿಗೆ ಜ್ಞಾನವನ್ನು ತಿಳಿಸುತ್ತಾರೆ. ಇಲ್ಲಿ ನಿಮಗೆ ಪರಮಾತ್ಮನೇ ಬಂದು ಜ್ಞಾನವನ್ನು ತಿಳಿಸುತ್ತಾರೆ ಉಳಿದೆಲ್ಲರೂ ಭಕ್ತಿಮಾರ್ಗದ ದಂತ ಕಥೆಗಳನ್ನು ತಿಳಿಸುವವರಾಗಿದ್ದಾರೆ. ಸತ್ಯ ನಾರಾಯಣನ ಕಥೆ, ರಾಮಾಯಣದ ಕಥೆ.... ಯಾವುದು ಕಳೆದು ಹೋಗಿದೆಯೋ ಅವನ್ನು ಒಂದಲ್ಲ ಒಂದು ರಚಿಸುತ್ತಾ ಇರುತ್ತಾರೆ. ಇದು ವಿದ್ಯೆಯಾಗಿದೆ, ವಿದ್ಯೆಯಲ್ಲಿ ಚರಿತ್ರೆ-ಭೂಗೋಳವನ್ನು ತಿಳಿಸಲಾಗುತ್ತದೆ, ಇದು ವಿಶ್ವದ ಚರಿತ್ರೆ-ಭೂಗೋಳವಾಗಿದೆ. ನೀವು ತಿಳಿಸುತ್ತೀರಿ - ತಂದೆಯು 5000 ವರ್ಷಗಳ ಮೊದಲೂ ಸಹ ತಿಳಿಸಿದ್ದರು, ಆ ಗೀತೆಯನ್ನು ಓದುವವರು ಏನನ್ನೂ ತಿಳಿದುಕೊಂಡಿಲ್ಲ. ಕೌರವರು, ಪಾಂಡವರು ಯಾದವರು ಎಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನು ನೀವು ಪ್ರತ್ಯಕ್ಷದಲ್ಲಿ ನೋಡುತ್ತೀರಿ. ಯುರೋಪಿಯನ್ ಯಾದವರು ಅಣ್ವಸ್ತ್ರಗಳನ್ನು ಕಂಡುಹಿಡಿದರು ವಿನಾಶವಾಯಿತು, ವಿನಾಶದ ನಂತರ ಏನಾಯಿತು ಅದೇನನ್ನೂ ತೋರಿಸಿಲ್ಲ. ಪ್ರಳಯವಾಯಿತೆಂದು ತಿಳಿದುಕೊಳ್ಳುತ್ತಾರೆ. ನೀವು ಶಾಸ್ತ್ರಗಳನ್ನು ಒಪ್ಪುವುದಿಲ್ಲವೆಂದು ಅವರು ಹೇಳುತ್ತಾರೆ ಆಗ ಹೇಳಿರಿ, ಹೌದು ನಾವು ಶಾಸ್ತ್ರಗಳನ್ನು ತಿಳಿದುಕೊಂಡಿದ್ದೇವೆ ನಂಬುತ್ತೇವೆ - ಇವೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಜ್ಞಾನವನ್ನು ಒಬ್ಬ ತಂದೆಯೇ ತಿಳಿಸುತ್ತಾರೆ. ಅವರು ಜ್ಞಾನಸಾಗರನಾಗಿದ್ದಾರೆ. ಈಗ ಭಕ್ತಿಯು ಸಮಾಪ್ತಿಯಾಗಿ ಜ್ಞಾನದ ವಿಜಯವಾಗುತ್ತಿದೆ. ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ, ನತಿಂಗ್ನ್ಯೂ. ನಮ್ಮ ಪ್ರೀತಿಯು ತಂದೆಯೊಂದಿಗೆ ಇದೆ, ನಾವು ಅನ್ಯ ಸಂಗಗಳನ್ನು ಬಿಟ್ಟು ಒಬ್ಬರ ಸಂಗವನ್ನು ಸೇರುತ್ತೇವೆ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನನ್ನ ಜೊತೆ ಬುದ್ಧಿಯೋಗವನ್ನು ಜೋಡಿಸಿ, ಇದಕ್ಕೆ ಪ್ರಾಚೀನ ಯೋಗವೆಂದು ಹೇಳಲಾಗುತ್ತದೆ ಅದನ್ನು ತಂದೆಯೇ ಕಲಿಸುತ್ತಾರೆ. ಕೃಷ್ಣನ ಆತ್ಮವೂ ಸಹ ಈ ಸಮಯದಲ್ಲಿ ಅಂತಿಮ ಜನ್ಮದಲ್ಲಿದ್ದಾರೆ. ಇವರಿಗೂ ಹೇಳುತ್ತಾರೆ - ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ಇದು ನಿಮ್ಮ ಬಹಳ ಜನ್ಮಗಳ ಅಂತಿಮವಾಗಿದೆ ಆದ್ದರಿಂದ ನಾನು ಪ್ರವೇಶ ಮಾಡಿದ್ದೇನೆ. ಇವರಲ್ಲಿ ಕುಳಿತು ನೀವು ಮಕ್ಕಳನ್ನು ಬ್ರಹ್ಮಾಮುಖವಂಶಾವಳಿಯನ್ನಾಗಿ ಮಾಡಿ ರಾಜ್ಯಭಾಗ್ಯವನ್ನು ಕೊಡುತ್ತೇನೆ. ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ, ಇದನ್ನು ಸ್ವಯಂ ತಂದೆಯೇ ಈ ಮುಖದ ಮೂಲಕ ತಿಳಿಸುತ್ತಿದ್ದಾರೆ. ಈ ತಂದೆಯೂ ಸಹ ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ, ನೀವೂ ತಿಳಿದುಕೊಂಡಿರಲಿಲ್ಲ. ಭಾರತವಾಸಿಗಳಿಗೇ ತಿಳಿಸಬೇಕಾಗಿದೆ. 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ, ಇದು ಅದೇ ಕಲ್ಪದ ಹಿಂದಿನ ಯುದ್ಧವು ನಿಂತಿದೆ ಯಾವುದರಿಂದ ಸ್ವರ್ಗದ ಬಾಗಿಲು ತೆರೆದಿತ್ತು. ತಂದೆಯು ಬಂದು ರಾಜಯೋಗವನ್ನು ಕಲಿಸಿ ಮನುಷ್ಯರನ್ನು ದೇವತೆಯನ್ನಾಗಿ ಮಾಡಿದ್ದರು. ಒಳ್ಳೆಯದು.
|
5 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
6 |
+
ಧಾರಣೆಗಾಗಿ ಮುಖ್ಯಸಾರ:
|
7 |
+
1. ಯಾರು ಚೆನ್ನಾಗಿ ಶ್ರೀಮತದಂತೆ ನಡೆಯುತ್ತಾರೆಯೋ ಅವರನ್ನೇ ಫಾಲೋ ಮಾಡಬೇಕಾಗಿದೆ. ಬೇಹದ್ದಿನ ಖುಷಿಯಲ್ಲಿರಲು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ.
|
8 |
+
2. ಪ್ರೀತಿ ಬುದ್ಧಿಯವರಾಗಿ ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬ ತಂದೆಯ ಸಂಗ ಮಾಡಬೇಕಾಗಿದೆ. ಡಬಲ್ ಅಹಿಂಸಕರಾಗಿ ಶಾಂತಿಯಲ್ಲಿ ಕುಳಿತು ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆ.
|
BKMurli/BKMurli/page_1041.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ಮೇಳ ಹಾಗೂ ಪ್ರದರ್ಶನಿಗಳಲ್ಲಿ ಮಕ್ಕಳು ತಿಳಿಸುತ್ತೀರೆಂದರೆ ಯಾವ ಮಾತುಗಳು ತಿಳಿಸಲು ಯೋಗ್ಯವಾಗಿದೆಯೋ ಅವನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಈ ಮಾತನ್ನಂತೂ ಅವಶ್ಯವಾಗಿ ತಿಳಿಸಬೇಕಾಗಿದೆ - ಎಲ್ಲಾ ಆತ್ಮರ ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ಭಾರತದ ಆದಿ ಸನಾತನ ಧರ್ಮ ಯಾವುದಾಗಿದೆ? ಎಂಬುದನ್ನೂ ಸಹ ಕೇಳಬೇಕಾಗಿದೆ. ಮನುಷ್ಯರಂತೂ ಆದಿ ಸನಾತನ ಧರ್ಮವನ್ನು ಹಿಂದೂ ಧರ್ಮವೆಂದೇ ತಿಳಿದುಕೊಳ್ಳುತ್ತಾರೆ. ಇಸ್ಲಾಮಿ, ಬೌದ್ಧ, ಕ್ರಿಶ್ಚಿಯನ್ ಮೊದಲಾದವರಿಗೆ ನಮ್ಮ ಧರ್ಮವನ್ನು ಯಾರು ಮತ್ತು ಯಾವಾಗ ಸ್ಥಾಪನೆ ಮಾಡಿದರೆಂಬುದು ತಿಳಿದಿದೆ ಆದರೆ ಭಾರತವಾಸಿಗಳದು ಹಿಂದೂ ಧರ್ಮವೇ ಅಥವಾ ದೇವಿ-ದೇವತಾ ಧರ್ಮವೇ? ಇದನ್ನು ಯಾರು ಮತ್ತು ಯಾವಾಗ ಸ್ಥಾಪನೆ ಮಾಡಿದರು? ಇದನ್ನು ಭಾರತವಾಸಿಗಳು ಸ್ವಲ್ಪವೂ ತಿಳಿದುಕೊಂಡಿಲ್ಲ. ಇದು ಖಂಡಿತವಾಗಿಯೂ ತಿಳಿಸುವ ಮಾತಾಗಿದೆ. ಇದು ಯಾರ ಗಮನದಲ್ಲಿಯೂ ಬರುವುದಿಲ್ಲ. ಭಾರತ ದೇಶವನ್ನು ಪ್ರಾಚೀನ ಎಂದು ಹೇಳಲಾಗುತ್ತದೆ ಆದರೆ ನಮ್ಮದು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಹಿಂದೂ ಎಂಬುದು ಯಾವುದೇ ಧರ್ಮವಲ್ಲ ಎಂದು ಅವರಿಗೆ ತಿಳಿದೇ ಇಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, 5000 ವರ್ಷಗಳ ಮೊದಲು ದೇವಿ-ದೇವತಾ ಧರ್ಮವಿತ್ತು, ಆ ಸಮಯದಲ್ಲಿ ಲಕ್ಷ್ಮೀ-ನಾರಾಯಣರು ರಾಜ್ಯಭಾರ ಮಾಡುತ್ತಿದ್ದರು, ಅವರು ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಿರಲಿಲ್ಲ. ಒಳ್ಳೆಯದು. ಹಿಂದೂ ಧರ್ಮಕ್ಕೂ ಯಾವುದಾದರೂ ಸಂವತ್ಸರ ಇರಬೇಕಲ್ಲವೇ. ವಿಕ್ರಮ ಸಂವತ್ಸರವೆಂದು ಯಾವುದನ್ನು ಹೇಳುತ್ತಾರೆ, ಯಾವಾಗಿನಿಂದ ದೇವತೆಗಳು ವಾಮ ಮಾರ್ಗದಲ್ಲಿ ಹೋದರೋ ಆಗಿನಿಂದ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳಲು ಆರಂಭಿಸುತ್ತಾರೆ. ಭಲೆ ಆಗಿನಿಂದ ವಿಕ್ರಮ ಸಂವತ್ಸರವೆಂದು ಹೇಳಬಹುದಾಗಿದೆ ಅಂದಮೇಲೆ ಅರ್ಧ-ಅರ್ಧ ಭಾಗ ಆಯಿತಲ್ಲವೆ. ಆ ಸಮಯದಲ್ಲಿ ಅವರನ್ನು ಆದಿ ಸನಾತನ ದೇವಿ-ದೇವತೆಗಳೆಂದು ಹೇಳುವುದಿಲ್ಲ. ಧರ್ಮ ಸ್ಥಾಪನೆಯಾದಾಗ ಸಂವತ್ಸರವೆಂದು ಹೇಳಲಾಗುತ್ತದೆ, ಅದನ್ನು ಯಾರು ಸ್ಥಾಪನೆ ಮಾಡಿದರು? ವಿಕರ್ಮ ಸಂವತ್ಸರವನ್ನು ರಾವಣನು ಸ್ಥಾಪನೆ ಮಾಡಿದನು. ಆ ಸಮಯದಲ್ಲಿ ಎಲ್ಲರ ಕರ್ಮಗಳು ವಿಕರ್ಮಗಳಾಗುತ್ತಾ ಹೋಯಿತು. ಕರ್ಮ-ಅಕರ್ಮ-ವಿಕರ್ಮ ಎಂಬ ಹೆಸರುಗಳಂತೂ ಇವೆಯಲ್ಲವೆ ಅಂದಾಗ ವಿಕ್ರಮ ರಾಜನ ಸಂವತ್ಸರವೂ ನಡೆಯುತ್ತದೆ. ಅದಂತೂ ಅರ್ಧ ಸಮಯ ಆಗಿ ಹೋಯಿತು. ಈ ವಿಕ್ರಮ ಸಂವತ್ಸರವು ಹಿಂದೂಗಳ ಸಂವತ್ಸರವಂತೂ ಅಲ್ಲ, ಅಂದಮೇಲೆ ಇದನ್ನು ಕೇಳಬೇಕು - ಭಾರತದ ಆದಿ ಸನಾತನ ದೇವಿ-ದೇವತಾ ಧರ್ಮವು ಯಾವಾಗ ಸ್ಥಾಪನೆಯಾಯಿತು? ಅರ್ಥವಾಗಬೇಕಲ್ಲವೆ. ಇವು ಬಹಳ ನಾಜೂಕು ಮಾತುಗಳಾಗಿವೆ. ಯಾವಾಗ ಇದು ಅರ್ಥವಾಗುವುದೋ ಆಗ ಲೆಕ್ಕ ಮಾಡಬಹುದು - ಹೊಸ ಪ್ರಪಂಚವು ಇತ್ತು ಮತ್ತೆ ದಿನದಿಂದ ಅವಶ್ಯವಾಗಿ ರಾತ್ರಿಯಾಗುತ್ತದೆ. ಅವಶ್ಯವಾಗಿ ಅರ್ಧ-ಅರ್ಧ ಭಾಗವಿರುತ್ತದೆ. ಇದೊಂದು ಈಶ್ವರ��ಯ ಕಾಯಿದೆಯಾಗಿದೆ. ಇದನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಇಂತಹ ಸಮಾಚಾರವನ್ನು ಎಂದೂ ಯಾರೂ ಕಳುಹಿಸಿಲ್ಲ. ಕ್ರಿಶ್ಚಿಯನ್ನರದೂ ಸಹ ಅರ್ಧ ಸುಖ, ಅರ್ಧ ದುಃಖದ ಪಾತ್ರವು ನಡೆಯುವುದು. ನಾವು ತಿಳಿಸುವುದರಲ್ಲಿ ಇಡೀ ಚರಿತ್ರೆ-ಭೂಗೋಳವೇ ಬಂದು ಬಿಡುತ್ತದೆ. ಮನುಷ್ಯರು ಯಾರೆಲ್ಲರೂ ಬರುತ್ತಾರೆಯೋ ಅವರಿಗೆ ದುಃಖ-ಸುಖದ ಪಾತ್ರವು ಸಿಕ್ಕಿದೆ. ಒಂದೆರಡು ಜನ್ಮಗಳಿಗಾಗಿ ಬಂದರೂ ಸಹ ಅದರಲ್ಲಿಯೇ ಅರ್ಧ ಸುಖ-ಅರ್ಧ ದುಃಖವಿರುವುದು. ಇದು ಒಂದು ಈಶ್ವರೀಯ ಕಾಯಿದೆಯಾಗಿದೆ. ಪ್ರದರ್ಶನಿಯಲ್ಲಿ ಕೇಳುವಾಗ ಚೆನ್ನಾಗಿದೆ, ಚೆನ್ನಾಗಿದೆ ಎಂದು ಹೇಳುತ್ತಾರೆ. ಹೊರಗಡೆ ಹೋಗುತ್ತಿದ್ದಂತೆಯೇ ಮರೆತು ಹೋಗುತ್ತಾರೆ. ಕೆಲವರೇ ವಿರಳ ಗಮನ ಕೊಡುತ್ತಾರೆ, ಕೆಲವರು ಒಂದು ತಿಂಗಳವರೆಗೆ ಬಂದು ಮಾಯವಾಗಿ ಬಿಡುತ್ತಾರೆ. ಕೆಲವರು ಹತ್ತು ನಿಮಿಷ ತಿಳಿದುಕೊಳ್ಳುತ್ತಾರೆ, ಇನ್ನೂ ಕೆಲವರು ಒಂದು ಘಂಟೆ, ಇನ್ನೂ ಕೆಲವರು ಸ್ವಲ್ಪ ಸಮಯ ಬಂದು ನಡೆಯುತ್ತಾ-ನಡೆಯುತ್ತಾ ಈ ಮಾರ್ಗದಲ್ಲಿ ಸುಸ್ತಾಗಿ ಬಿಡುತ್ತಾರೆ. ಸೇವಾಕೇಂದ್ರಗಳಲ್ಲಿ ಇದು ನಡೆಯುತ್ತಾ ಇರುತ್ತದೆ. ಹೇಗೆ ದೈವೀ ಸಂಪ್ರದಾಯವು ಸ್ಥಾಪನೆಯಾಗುತ್ತಿದೆ! ಇದೂ ಸಹ ಅದ್ಭುತವಾಗಿದೆ - ಹೊಸ ಪ್ರಪಂಚದ ಧರ್ಮವು ಹಳೆಯ ಪ್ರಪಂಚದಲ್ಲಿ ಸ್ಥಾಪನೆಯಾಗುತ್ತಿದೆ, ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿಯೇ ಬರುತ್ತದೆ. ತಂದೆಯ ಮೂಲಕ ನೀವು ತಮ್ಮ 84 ಜನ್ಮಗಳನ್ನು ಅರಿತುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು 84 ಜನ್ಮಗಳ ಕಥೆಯನ್ನು ತಿಳಿಸಲು ಬರುತ್ತೇನೆ ಅಂದಮೇಲೆ ಅಂತಿಮದಲ್ಲಿಯೇ ಬಂದು ತಿಳಿಸುತ್ತಾರಲ್ಲವೆ. ದ್ವಾಪರದ ಮಧ್ಯದಲ್ಲಂತೂ ತಿಳಿಸಲು ಸಾಧ್ಯವಿಲ್ಲ, ಇನ್ನೂ ಕೊನೆಯವರು ಜನ್ಮವೇ ಪಡೆದಿಲ್ಲವೆಂದರೆ ಹೇಗೆ ತಿಳಿಸುವರು! ರಾಜಯೋಗದ ಜ್ಞಾನವು ದ್ವಾಪರದಲ್ಲಿ ಸಿಗಲು ಸಾಧ್ಯವಿಲ್ಲ. ಮಹಾಭಾರತ ಯುದ್ಧವೂ ಸಹ ದ್ವಾಪರದಲ್ಲಿ ಆಗಲು ಸಾಧ್ಯವಿಲ್ಲ. ಮಹಾಭಾರತ ಯುದ್ಧದ ನಂತರವೇ ಸತ್ಯಯುಗವು ಸ್ಥಾಪನೆಯಾಗುತ್ತದೆ ಅರ್ಥಾತ್ ದೇವಿ-ದೇವತಾ ಧರ್ಮವು ಸ್ಥಾಪನೆಯಾಗುತ್ತದೆ, ಅದಕ್ಕೆ ಮೊದಲು ಬ್ರಾಹ್ಮಣ ಧರ್ಮವು ಸ್ಥಾಪನೆಯಾಗುತ್ತದೆ ಅಂದಮೇಲೆ ಅವಶ್ಯವಾಗಿ ಬ್ರಹ್ಮನ ಮುಖಾಂತರ ಸ್ಥಾಪನೆ ಮಾಡುತ್ತಾರೆ. ಆದ್ದರಿಂದ ಬ್ರಾಹ್ಮಣರು ಜನ್ಮ ಪಡೆಯುತ್ತಾರಲ್ಲವೆ. ವಿರಾಟ ರೂಪದಲ್ಲಿ ಶಿವನನ್ನು ತೋರಿಸಿಲ್ಲ ಮತ್ತು ಶಿಖೆಗೆ ಸಮಾನರಾದ ಬ್ರಾಹ್ಮಣರನ್ನೂ ತೋರಿಸಿಲ್ಲ. ಪ್ರದರ್ಶನಿಯಲ್ಲಿಯೂ ವಿರಾಟ ರೂಪದ ಚಿತ್ರವನ್ನು ಅವಶ್ಯವಾಗಿ ಇಡಬೇಕಾಗಿದೆ. ಬ್ರಹ್ಮನ ಮೂಲಕ ಮೊದಲು ಬ್ರಾಹ್ಮಣರನ್ನು ರಚಿಸುತ್ತಾರೆ. ಮತ್ತೆ ಆ ಬ್ರಾಹ್ಮಣರನ್ನು ಯಾವಾಗ ಮತ್ತು ಎಲ್ಲಿ ರಚಿಸುತ್ತಾರೆ? ಬ್ರಾಹ್ಮಣರದು ಸಂಗಮವಾಗಿದೆ, ಶೂದ್ರರದು ಕಲಿಯುಗವಾಗಿದೆ. ನೀವೀಗ ತಮ್ಮನ್ನು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ. ಪ್ರಜೆಗಳೆಂದರೆ ಮನುಷ್ಯ ಸೃಷ್ಟಿಯಾಗಿದೆ. ಅಂದಮೇಲೆ ಅವ��್ಯವಾಗಿ ಬ್ರಾಹ್ಮಣರೇ ಇರುತ್ತಾರೆ. ಕ್ರೈಸ್ಟನ್ನು ಕ್ರೈಸ್ತ ಧರ್ಮದ ಪಿತನೆಂದು ಹೇಳುತ್ತಾರೆ. ಇಲ್ಲಿ ಇವರು ಪ್ರಜಾಪಿತನಾಗಿದ್ದಾರೆ. ಭಗವಂತನು ಬ್ರಹ್ಮಾರವರ ಮೂಲಕ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ, ಕ್ರೈಸ್ಟ್ನ ಮೂಲಕ, ಬೌದ್ಧಿಯರ ಮೂಲಕ ರಚಿಸುತ್ತಾರೆ ಎಂದಲ್ಲ. ಮನುಷ್ಯ ಸೃಷ್ಟಿಯು ಬ್ರಹ್ಮನಿಂದಲೇ ಪ್ರಾರಂಭವಾಗುತ್ತದೆ ಅಂದಮೇಲೆ ಅವಶ್ಯವಾಗಿ ಮೊಟ್ಟ ಮೊದಲು ಬ್ರಾಹ್ಮಣರೇ ರಚಿಸಲ್ಪಡುತ್ತಾರೆ. ಬ್ರಾಹ್ಮಣರನ್ನೇ ನಂತರ ದೇವತೆಗಳನ್ನಾಗಿ ಮಾಡುತ್ತಾರೆ. ವಿರಾಟ ರೂಪವನ್ನು ಭಾರತದಲ್ಲಿಯೇ ತೋರಿಸುತ್ತಾರೆ. ಅನ್ಯ ಧರ್ಮದವರು ವಿರಾಟ ರೂಪವನ್ನು ತೋರಿಸಲು ಸಾಧ್ಯವಿಲ್ಲ. ಈ ಹೊಸ, ಹೊಸ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಹೊಸ ಮಾತುಗಳು ಬರುತ್ತಾ ಇರುತ್ತವೆ ಮತ್ತು ಹಳೆಯ ಮಾತುಗಳೂ ಬರುತ್ತಿರುತ್ತವೆ ಏಕೆಂದರೆ ಹೊಸ-ಹೊಸ ಮಕ್ಕಳಿಗೂ ಸಹ ತಿಳಿದುಕೊಳ್ಳಲು ಕೆಲವು ಹೊಸ ಮಾತುಗಳು, ಕೆಲವು ಹಳೆಯ ಮಾತುಗಳು ಸಿಗಬೇಕಲ್ಲವೆ. ತಂದೆ ಮತ್ತು ಆಸ್ತಿಯ ಬಗ್ಗೆ ಬುದ್ಧಿಯಲ್ಲಿ ಇಲ್ಲವೆಂದರೆ ಇನ್ನೇನು ತಿಳಿದುಕೊಳ್ಳುವರು? ನಿಮಗೆ ತಿಳಿದಿದೆ, ತಂದೆ ಮತ್ತು ಆಸ್ತಿಯ ಬಗ್ಗೆ ತಿಳಿಸಿ ಕೊಡುವುದು ಬಹಳ ಸಹಜವಾಗುತ್ತದೆ. ಎಲ್ಲರಿಗೂ ಒಬ್ಬರೇ ತಂದೆಯಾಗಿದ್ದಾರೆ, ಅವರು ಅವಶ್ಯವಾಗಿ ಬರುತ್ತಾರೆ. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ ಆದರೆ ಶಿವ ಜಯಂತಿ ಎಂದರೇನು ಎಂಬುದು ಭಾರತವಾಸಿಗಳಿಗೆ ತಿಳಿದಿಲ್ಲ. ಬ್ರಹ್ಮಾ-ವಿಷ್ಣು-ಶಂಕರನನ್ನು ಕುರಿತಾಗಲಿ, ಶ್ರೀಕೃಷ್ಣನ ಬಗ್ಗೆಯಾಗಲೀ ಗೊತ್ತಿಲ್ಲ. ಶ್ರೀ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತೆಂಬುದೂ ತಿಳಿದಿಲ್ಲ. ಕ್ರೈಸ್ಟ್ ಬಂದು ಹೋದರು, ಅವರ ಪೋಪರದು ದೊಡ್ಡ ಪಟ್ಟಿಯೇ ಇದೆ ಆದರೆ ಭಾರತವಾಸಿಗಳಿಗೆ ಈ ಲಕ್ಷ್ಮೀ-ನಾರಾಯಣರೂ ಸಹ ಭಾರತದಲ್ಲಿ ರಾಜ್ಯಭಾರ ಮಾಡಿ ಹೋಗಿದ್ದಾರೆಂಬುದೇ ಗೊತ್ತಿಲ್ಲ. ಯಾವುದೆಲ್ಲಾ ಚಿತ್ರಗಳನ್ನು ಮಾಡಿಸುತ್ತಾರೆ, ಪೂಜೆ ಮಾಡುತ್ತಾರೆಯೋ ಅವರ ಪರಿಚಯವನ್ನೇ ತಿಳಿದುಕೊಂಡಿಲ್ಲ. ದೇವತೆಗಳಿಂದ ನಂತರ ಕ್ಷತ್ರಿಯರು ರಾಜ್ಯವನ್ನು ಹೇಗೆ ಪಡೆದುಕೊಂಡರು? ಯುದ್ಧ ಮಾಡಿದರೇ? ರಾಜ್ಯಾಡಳಿತವು ಬದಲಾಗುತ್ತದೆ ಎಂದರೆ ಅವಶ್ಯವಾಗಿ ಯಾರಾದರೂ ವಿಜಯವನ್ನು ಪಡೆದರು ಎಂದರ್ಥ. ಆದರೆ ಅಲ್ಲಿ ಈ ಮಾತೇ ಇರುವುದಿಲ್ಲ. ಅಲ್ಲಂತೂ ಒಬ್ಬರು ಇನ್ನೊಬ್ಬರಿಗೆ ಬಹಳ ಒಳ್ಳೆಯ ರೂಪದಲ್ಲಿ ರಾಜ್ಯವನ್ನು ಕೊಟ್ಟು ಹೋಗುತ್ತಾರೆ. ಮನುಷ್ಯರು ಈಗ ಎಷ್ಟೊಂದು ಅಂಧಕಾರದಲ್ಲಿದ್ದಾರೆ. ನಿಮಗೆ ಎಷ್ಟೊಂದು ಪ್ರಕಾಶತೆಯು ಸಿಗುತ್ತಿದೆ. ಎಲ್ಲಾ ಮಾತುಗಳು ಎಲ್ಲರಿಗೂ ನೆನಪಿರುತ್ತದೆ ಎಂದಲ್ಲ. ಇಲ್ಲದಿದ್ದರೆ ತಂದೆಯು ಏನೆಲ್ಲಾ ಮಾತುಗಳನ್ನು ತಿಳಿಸಿದ್ದಾರೆಯೋ ಅದೆಲ್ಲವನ್ನೂ ಪ್ರದರ್ಶನಿಯಲ್ಲಿ ತಿಳಿಸಬೇಕಿತ್ತು. ಪ್ರದರ್ಶನಿಯಲ್ಲಿ ಒಂದು ದಿನ ಬರುತ್ತಾರೆ, ಇನ್ನೊಂದು ದಿನ ಬರುವುದೇ ಇಲ್ಲ. ತಿಳಿದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದೇ ಅರ್ಥವಾಗುವುದಿಲ್ಲ. ನಮಗೆ ದೇವಿ-ದೇವತಾ ಧರ್ಮವು ಎಲ್ಲಿ ಹೋಯಿತು ಎಂಬುದೇ ಮೊದಲು ತಿಳಿದಿರಲಿಲ್ಲ, ಈಗ ಅರ್ಥವಾಯಿತು ಎಂಬ ಮಾತನ್ನು ಅಭಿಪ್ರಾಯದಲ್ಲಿ ಬರೆಸಿಕೊಳ್ಳಬೇಕು. ಅವರಿಗೆ ಸಂವತ್ಸರವನ್ನೂ ತಿಳಿಸಿರಿ. ಹಿಂದೂ ಧರ್ಮವು ಯಾವಾಗಿನಿಂದ ಆರಂಭವಾಯಿತು? ಪ್ರತಿಯೊಬ್ಬರೂ ಹೇಗೇಗೆ ತಿಳಿಸುತ್ತಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಅಭಿಪ್ರಾಯವನ್ನು ಬರೆಸಿಕೊಳ್ಳುವವರು ಬೇಕು. ನೀವು ಸಿದ್ಧ ಮಾಡಿ ತಿಳಿಸುತ್ತೀರಿ - ಇದು 5000 ವರ್ಷಗಳ ಚಕ್ರವಾಗಿದೆ ಎಂಬುದನ್ನು ಬರೆಯಿರಿ. ಸಂವತ್ಸರ ಇತ್ಯಾದಿಗಳ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಮಾತುಗಳನ್ನು ಯಾವುದಾದರೂ ಶಾಸ್ತ್ರಗಳಲ್ಲಿ ಕೇಳಿದ್ದೀರಾ? ಮತ್ತೆ ನಾವು ಎಲ್ಲಿಂದ ಕಲಿತೆವು? ಅಂದಮೇಲೆ ನಮಗೆ ಕಲಿಸುವವರು ಅವಶ್ಯವಾಗಿ ಭಗವಂತನಾಗಿದ್ದಾರೆ. ಭಗವಂತನಲ್ಲದೆ ಈ ಮಾತುಗಳನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಅವರೂ ಸಹ ಅವಶ್ಯವಾಗಿ ಯಾರದೋ ತನುವಿನಲ್ಲಿ ಬರುತ್ತಾರೆ. ಪರಮಾತ್ಮನು ಜ್ಞಾನಸಾಗರನಾಗಿದ್ದಾರೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆ. ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ಅವರ ಹೆಸರಾಗಿದೆ - ಶಿವ. ಭಕ್ತಿಮಾರ್ಗದಲ್ಲಿ ಅವರಿಗೆ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಕನಿಷ್ಠ ಒಂದುವರೆ ಲಕ್ಷ ಹೆಸರುಗಳನ್ನು ತಮ್ಮ-ತಮ್ಮ ಭಾಷೆಗಳಲ್ಲಿ ಇಡುತ್ತಾರೆ. ಮಕ್ಕಳಿಗೆ ಪ್ರತಿನಿತ್ಯವೂ ಎಷ್ಟೊಂದು ತಿಳಿಸುತ್ತೇನೆ ಆದರೆ ಬಹುಷಃ ಇನ್ನೂ ಶುದ್ಧ ಬುದ್ಧಿ ಆಗಿಲ್ಲ. ಪುರುಷಾರ್ಥ ಮಾಡುತ್ತಾ ಇದ್ದಾಗ ತುಕ್ಕು ಬಿಟ್ಟು ಹೋಗುವುದು. ಇಲ್ಲಿಯವರೆಗೆ ಮಕ್ಕಳು ಸತೋದವರೆಗೂ ವಿರಳ ತಲುಪಿದ್ದಾರೆ. ಅದರಲ್ಲಿಯೂ ಕೆಲವರು ತಮೋ, ಕೆಲವರು ಸತೋಪ್ರಧಾನ, ಸತೋ, ರಜೋ, ತಮೋ ಇದರಲ್ಲಿಯೂ ನಂಬರ್ವಾರ್ ಇದ್ದಾರೆ. ಪ್ರತಿಯೊಬ್ಬರ ಪುರುಷಾರ್ಥವು ಬೇರೆ-ಬೇರೆಯಾಗಿದೆ. ಈ ಸಮಯದಲ್ಲಿ ಮನುಷ್ಯರದು ವಿನಾಶಕಾಲೇ ವಿಪರೀತ ಬುದ್ಧಿಯಾಗಿದೆ. ಕೇವಲ ಪಾಂಡವರದು ಪ್ರೀತಿ ಬುದ್ಧಿಯಾಗಿತ್ತು, ಅವರದು ವಿಜಯವಾಯಿತು. ಅಸುರರು ಮತ್ತು ದೇವತೆಗಳು, ಇಬ್ಬರೂ ಮನುಷ್ಯರೇ ಆಗಿದ್ದಾರೆ. ಅಸುರರದು ಭಯಾನಕ ರೂಪವಿರುತ್ತದೆ ಎಂದಲ್ಲ, ಮನುಷ್ಯರಂತೂ ಯುದ್ಧದಲ್ಲಿ ಬಾಂಬುಗಳು, ಮದ್ದು-ಗುಂಡುಗಳಿಂದ ಬಚಾವ್ ಆಗಲು ಅಂತಹ ಉಡುಪುಗಳನ್ನು ಧರಿಸುತ್ತಾರೆ. ಅವರು ಆಸುರೀ ಸಂಪ್ರದಾಯದವರು, ನೀವು ರಾಮನ ಸಂಪ್ರದಾಯದವರಾಗಿದ್ದೀರಿ ಏಕೆಂದರೆ ನೀವು ಐದು ವಿಕಾರಗಳನ್ನು ಬಿಟ್ಟಿದ್ದೀರಿ. ಪವಿತ್ರರಾಗಿ ನೀವು ಇಡೀ ವಿಶ್ವದ ಮೇಲೆ ರಾಜ್ಯಭಾರ ಮಾಡುತ್ತೀರಿ. ನಿಮ್ಮದು ಯಾರ ಜೊತೆಯೂ ಯುದ್ಧವಿಲ್ಲ. ತಂದೆಯು ಎಷ್ಟೊಂದು ಮಾತುಗಳನ್ನು ತಿಳಿಸುತ್ತಾರೆ. ಕೆಲವರು ಒಂದೆರಡು ತಿಂಗಳವರೆಗೆ ಬಂದು ಬಿಟ್ಟು ಬಿಡುತ್ತಾರೆ. ಅವರ ಅದೃಷ್ಟದಲ್ಲಿಲ್ಲವೆಂದು ತಿಳಿಯಲಾಗುತ್ತದೆ, ಅಂತಹವರು ಸಾಧಾರಣ ಪ್ರಜೆಗಳಲ್ಲಿ ಬರುತ್ತಾರೆ. ಪ್ರಜೆಗಳಂತೂ ಅನೇಕರು ತಯಾರಾಗುವರು, ಈಗಲೂ ನೋಡಿ ಎಷ್ಟೊಂದು ಪ್ರಜೆಗಳಿದ್ದಾರೆ. ಕೆಲವೊಂದು ಕಡೆ ಆಹಾರದ ಕೊರತೆಯಾಗುವ ಕಾರಣ ಮನುಷ್ಯರು ಹಸಿವಿನಿಂದ ಸಾಯುತ್ತಾರೆ, ಮತ್ತೊಂದು ಕಡೆ ಮಳೆಯಾಗದೇ ಇರುವ ಕಾರಣ ಬರಗಾಲವಾಗುತ್ತದೆ. ಇದರಲ್ಲಿ ಸರ್ಕಾರವೇನು ಮಾಡುತ್ತದೆ! ಇವಂತೂ ಪ್ರಾಕೃತಿಕ ವಿಕೋಪಗಳಾಗಿವೆ. ಇನ್ನು ಮುಂದೆ ಬೆಂಕಿ ಮಳೆ ಸುರಿಯುವುದು, ವಿನಾಶವಾಗಲೇಬೇಕಾಗಿದೆ. ನೀವು ಯಾವುದನ್ನು ಸಾಕ್ಷಾತ್ಕಾರದಲ್ಲಿ ನೋಡಿದ್ದೀರೋ ಅದೆಲ್ಲವೂ ಪ್ರತ್ಯಕ್ಷದಲ್ಲಿ ಆಗುವುದು. ಸಾಕ್ಷಾತ್ಕಾರದಲ್ಲಿ ಕೇವಲ ಒಬ್ಬ ಕೃಷ್ಣನ ಮಹಲನ್ನು ನೋಡುತ್ತೀರಿ, ಎಲ್ಲವನ್ನೂ ನೋಡಲು ಸಾಧ್ಯವಿಲ್ಲ. ವಿನಾಶವಾಯಿತು ಎಂಬುದನ್ನು ನೋಡುತ್ತೀರಿ ನಂತರ ಶರೀರ ಬಿಟ್ಟರೆ ಎಲ್ಲವೂ ಮರೆತು ಹೋಗುತ್ತದೆ. ಇಡೀ ಪ್ರಪಂಚವೇ ಸಮಾಪ್ತಿಯಾಗಲಿದೆ ನಂತರ ಪ್ರಪಂಚವೇ ಬದಲಾಗುವುದು, ನಿಮಗೆ ಎಲ್ಲವೂ ಮರೆತು ಹೋಗುವುದು. ಈಗ ನಿಮ್ಮಲ್ಲಿ ಆರಂಭದಿಂದ ಅಂತ್ಯದವರೆಗೆ ಎಲ್ಲಾ ಜ್ಞಾನವಿದೆ, ಮೂಲವತನ, ಸೂಕ್ಷ್ಮವತನದ ಚಕ್ರವು ಹೇಗೆ ಸುತ್ತುತ್ತದೆ ಎಂಬುದೆಲ್ಲಾ ಜ್ಞಾನವನ್ನು ತಂದೆಯು ತಿಳಿಸಿದ್ದಾರೆ. ಯಾರಲ್ಲಿ ಎಷ್ಟು ಹೆಚ್ಚು ಜ್ಞಾನವಿರುವುದೋ ಅಷ್ಟು ಹೆಚ್ಚು ನಶೆಯಿರುತ್ತದೆ. ನಾವೀಗ ಮಾ|| ಜ್ಞಾನಪೂರ್ಣರಾಗಿ ಬಿಟ್ಟೆವು ನಂತರ ವಿನಾಶವಾದಾಗ ನಮ್ಮ ಶರೀರವು ಸಮಾಪ್ತಿ ಆಗುವುದು. ಈ ಜನ್ಮದವರೆಗೇ ಜ್ಞಾನವಿರುತ್ತದೆ, ಅಂದಮೇಲೆ ಬುದ್ಧಿಯಲ್ಲಿ ಇಷ್ಟೊಂದು ನಶೆಯಿರಲಿ - ನಾವು ಈ ಶರೀರವನ್ನು ಬಿಟ್ಟು ಹೋಗಿ ರಾಜಕುಮಾರ-ಕುಮಾರಿಯರಾಗುತ್ತೇವೆ. ಮನುಷ್ಯರಾದರೆ ಓದಿ ತಮ್ಮ-ತಮ್ಮ ಸಂಪಾದನೆ ಮಾಡಿಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ- ನಾನಂತೂ ಯಾವುದೇ ಸಂಪಾದನೆ ಮಾಡುವುದಿಲ್ಲ, ನಾನು ನಿಮಗೆ ಕಲಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ. ನೀವು ಸಂಪಾದನೆ ಮಾಡುತ್ತೀರಿ ಮತ್ತು ಕಳೆದುಕೊಳ್ಳುತ್ತೀರಿ, ನಿಮಗೆ ಇಡೀ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ, ತಂದೆಗೂ ಜ್ಞಾನವಿದೆ. ಪಾತ್ರದನುಸಾರ ಅದನ್ನು ಕುಳಿತು ತಿಳಿಸುತ್ತಾರೆ ಮತ್ತೆ ತಂದೆಯೂ ಸಹ ನಿರ್ವಾಣ ಧಾಮಕ್ಕೆ ಹೊರಟು ಹೋಗುತ್ತಾರೆ. ಎಲ್ಲಾ ಆತ್ಮರೂ ಹೊರಟು ಹೋಗುತ್ತೇವೆ. ನಂತರ ಅಲ್ಲಿ ಯಾರ ಪಾತ್ರವಿರುವುದೋ ಅವರು ರಾಜಧಾನಿಯಲ್ಲಿ ಬರತೊಡಗುತ್ತಾರೆ. ಉಳಿದ ಸಮಯ ಶಾಂತಿಧಾಮದಲ್ಲಿ ಇರುತ್ತಾರೆ. ಮಕ್ಕಳಿಗೆ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಎಷ್ಟೊಂದು ಜ್ಞಾನವು ಸಿಗುತ್ತಿದೆ, ಹೊಸಬರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಕೇವಲ ಜ್ಞಾನವು ಬಹಳ ಚೆನ್ನಾಗಿದೆ ಎಂದಷ್ಟೇ ಹೇಳುತ್ತಾರೆ ನಂತರ ತಮ್ಮ-ತಮ್ಮ ಉದ್ಯೋಗ-ವ್ಯಾಪಾರಗಳಲ್ಲಿ ಹೊರಟು ಹೋಗುತ್ತಾರೆ. ಹೊರಗಡೆ ಹೋಗುತ್ತಿದ್ದಂತೆಯೇ ಮಾಯೆಯು ಮರೆಸಿ ಬಿಡುತ್ತದೆ, ಬುದ್ಧಿಗೆ ಬೀಗ ಹಾಕುತ್ತದೆ. ಕೆಲವು ಮಕ್ಕಳದು ಇಂತಹ ಸ್ಥಿತಿಯೂ ಆಗುತ್ತದೆ, ಪೂರ್ಣ ಧಾರಣೆಯೂ ಆಗುವುದಿಲ್ಲ. ಮೊದಲು ಒಳಗ ಯಾರೇ ಬಂದರೂ ಸಹ ತಿಳಿಸಿರಿ, ಇವರೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಿದ್ದಾರೆ. ಈಗ ಕಲಿಯುಗದ ಅಂತ್ಯವಾಗಿದೆ, ನಂತರ ಸತ್ಯಯುಗವು ಬರುವುದು ಅಂದಾಗ ಬ್ರಹ್ಮನ ಮಕ್ಕಳು ಎಲ್ಲರೂ ಬ್ರಹ್ಮಾಕುಮಾರರಾಗಿದ್ದಾರೆ. ಅವರೇ ನಂತರ ದೇವತೆಗಳಾಗುವರು. ಇಂತಹ ಸೇವಾ ಸಮಾಚಾರವನ್ನು ತಂದೆಗೆ ತಿಳಿಸುತ್ತಾ ಇದ್ದಾಗ ತಂದೆಯೂ ಸಹ ಸಲಹೆ ನೀಡುವರು. ಆದರೆ ಯಾರು ತಂದೆಗೆ ಪೂರ್ಣ ಸಮಾಚಾರ ತಿಳಿಸುವುದಿಲ್ಲ, ಅನೇಕರ ಮೇಲೆ ಗ್ರಹಚಾರವು ಕುಳಿತುಕೊಳ್ಳುತ್ತದೆ. ಈಗೀಗ ನೋಡಿದರೆ ಬಹಳ ಚೆನ್ನಾಗಿ ನಡೆಯುತ್ತಾರೆ, ನಾಳೆ ನೋಡಿದರೆ ಬಹಳ ಕನಿಷ್ಠರಾಗಿ ಬಿಡುತ್ತಾರೆ. ಗ್ರಹಚಾರವು ಇಲ್ಲದಿದ್ದರೆ ಆಶ್ಚರ್ಯವೆನಿಸುವಂತೆ ಏಕೆ ಹೊರಟು ಹೋಗುತ್ತಾರೆ? ಯಾವ ಮಕ್ಕಳು ಪ್ರದರ್ಶನಿಯಲ್ಲಿ ಹೋಗಿ ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ, ಅವರು ತಮ್ಮ ಸಮಯವನ್ನು ಸಫಲ ಮಾಡಿಕೊಳ್ಳುತ್ತಾರೆ. ಬಾಪ್ದಾದಾರವರನ್ನು ಎಂದೂ ಬಿಡಬಾರದು. ತಂದೆಯೂ ಮಕ್ಕಳಿಗೆ ಏನಾದರೂ ಶಿಕ್ಷಣ ಕೊಟ್ಟರೂ ಸಹ ಮತ್ತೆ ಕೂಡಲೇ ಪ್ರೀತಿ ಮಾಡುವರು. ತಂದೆಯ ಹೃದಯದಲ್ಲಿ ಮಕ್ಕಳ ಪ್ರತಿ ಏನೂ ಇರುವುದಿಲ್ಲ. ಕೇವಲ ಶಿಕ್ಷಣ ಕೊಡುವುದಕ್ಕಾಗಿ ಕಲಿಸುತ್ತಾರೆ.
|
2 |
+
ಇಲ್ಲಿ ಮಕ್ಕಳಿಗೆ ಟೋಲಿ ತಿನ್ನಿಸಲಾಗುತ್ತದೆ ಏಕೆಂದರೆ ಇವರು ಬೇಹದ್ದಿನ ತಂದೆಯಲ್ಲವೆ. ಲೌಕಿಕ ತಂದೆಯು ಪೇಟೆಯಿಂದ ಬರುತ್ತಾರೆಂದರೆ ಮಕ್ಕಳು ಅವಶ್ಯವಾಗಿ ನೆನಪಿಗೆ ಬರುತ್ತಾರೆ. ಮಕ್ಕಳಿಗಾಗಿ ಏನಾದರೂ ಟೋಲಿಯನ್ನು ತೆಗೆದುಕೊಂಡು ಬರುತ್ತಾರೆ. ಹೊರಗಿನ ಸೇವಾಕೇಂದ್ರದಲ್ಲಿ ಟೋಲಿಯು ಸಿಗುವುದಿಲ್ಲ. ಇಲ್ಲಿ ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ, ಆದ್ದರಿಂದ ಟೋಲಿಯನ್ನು ತಿನ್ನಿಸುತ್ತಾರೆ. ತಂದೆಯು ಎಲ್ಲವನ್ನೂ ಮಕ್ಕಳಿಗೆ ತಿಳಿಸುತ್ತಾರೆ. ದ್ವಾಪರದಿಂದ ಋಷಿ ಮುನಿಗಳು ಯಾರು ಸತೋಪ್ರಧಾನರಾಗಿದ್ದರೋ, ಯಾರ ಬುದ್ಧಿಗೆ ಬೀಗ ಹಾಕಿರಲಿಲ್ಲವೋ ಅವರೂ ಸಹ ಇದನ್ನು ಸತ್ಯವಾಗಿ ಹೇಳುತ್ತಿದ್ದರು - ರಚಯಿತ ಮತ್ತು ರಚನೆಯನ್ನು ನಾವು ತಿಳಿದುಕೊಂಡಿಲ್ಲ ಎಂದು. ಇಂದು ಕಲಿಯುಗದಲ್ಲಿ ಎಲ್ಲರ ಬುದ್ಧಿಗೆ ಬೀಗ ಹಾಕಲ್ಪಟ್ಟಿದೆ ಅಂದಮೇಲೆ ಇವರು ಹೇಗೆ ಅರಿತುಕೊಳ್ಳುವರು! ಶಾಸ್ತ್ರಗಳನ್ನು ಆ ಋಷಿ ಮುನಿಗಳೂ ಓದುತ್ತಿದ್ದರು, ನಿಮಗೆ ತಿಳಿಸುವುದಕ್ಕಾಗಿ ಬಹಳಷ್ಟು ಅಂಶಗಳು ಸಿಗುತ್ತವೆ. ಒಳ್ಳೆಯದು.
|
3 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
4 |
+
ಧಾರಣೆಗಾಗಿ ಮುಖ್ಯಸಾರ:
|
5 |
+
1. ಭಗವಂತನು ನಮಗೆ ಓದಿಸಿ ಭಗವಾನ್-ಭಗವತಿಯನ್ನಾಗಿ ಮಾಡುತ್ತಾರೆ - ಇದೇ ಖುಷಿ ಹಾಗೂ ನಶೆಯಲ್ಲಿ ಇರಬೇಕಾಗಿದೆ. ರಚಯಿತ ಮತ್ತು ರಚನೆಯ ಜ್ಞಾನವನ್ನು ಬುದ್ಧಿಯಲ್ಲಿ ಇಟ್ಟುಕೊಂಡು ಅನ್ಯರಿಗೆ ತಿಳಿಸಬೇಕಾಗಿದೆ.
|
6 |
+
2. ಹೇಗೆ ತಂದೆಯು ಯಾವುದೇ ಮಗುವಿನ ಮಾತನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ಅದೇರೀತಿ ಯಾರದೇ ಮಾತನ್ನು ಚಿತ್ತದಲ್ಲಿ ಇಟ್ಟುಕೊಳ್ಳಬಾರದು.
|
BKMurli/BKMurli/page_1042.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ ಏಕೆಂದರೆ ನೀವೀಗ ಧನಿಕರು ಅರ್ಥಾತ್ ಸನಾಥರಾಗಿದ್ದೀರಿ, ಉಳಿದೆಲ್ಲಾ ಮನುಷ್ಯ ಮಾತ್ರರು ಅನಾಥರಾಗಿದ್ದಾರೆ. ಮಾಲೀಕ ಅಥವಾ ದಣಿ ಎಂದು ಒಬ್ಬ ತಂದೆಗೇ ಹೇಳಲಾಗುತ್ತದೆ. ಮನೆಯಲ್ಲಿ ಯಾರಾದರೂ ಜಗಳವಾಡುತ್ತಾರೆಂದರೆ ನಿಮಗೆ ಯಾರೂ ದಣಿ-ದೋಣಿ ಇಲ್ಲವೆ? ಎಂದು ಕೇಳುತ್ತಾರೆ. ಈಗ ಇಡೀ ಪ್ರಪಂಚದ ಮನುಷ್ಯ ಮಾತ್ರರು ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ಒಬ್ಬರು ಇನ್ನೊಬ್ಬರನ್ನು ಕೊಲೆಯೂ ಮಾಡಿ ಬಿಡುತ್ತಾರೆ. ತಂದೆಯೇ ಬಂದು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ, ಇದರಿಂದಲೇ ಎಲ್ಲರೂ ಆದಿ-ಮಧ್ಯ-ಅಂತ್ಯ ದುಃಖ ಪಡೆಯುತ್ತಾರೆ. ನಾವೀಗ ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆಯುತ್ತಿದ್ದೇವೆಂದು ನೀವು ಮಕ್ಕಳಿಗೆ ತಿಳಿದಿದೆ. ನಮಗೆ ಶಾಂತಿ ಬೇಕೆಂದು ಮನುಷ್ಯರು ಭಲೆ ಹೇಳುತ್ತಾರೆ ಆದರೆ ಶಾಂತಿ ಎಂದರೇನು? ಎಲ್ಲಿಂದ ಸಿಗುತ್ತದೆ? ಕಾಡಿಗೆ ಹೋದರೆ ಶಾಂತಿ ಸಿಗುತ್ತದೆಯೇ? ಸುಖ-ಶಾಂತಿಯನ್ನು ಯಾವಾಗ ಮತ್ತು ಯಾರು ಕೊಡುತ್ತಾರೆ? ತೀರ್ಥ ಯಾತ್ರೆಗಳನ್ನು ಏಕೆ ಮಾಡುತ್ತಾರೆ? ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಕೇವಲ ಭಕ್ತಿ ಮಾಡಿದರೆ ಭಗವಂತ ಸಿಗುವರು ಎಂದು ಕೇಳಿರುತ್ತಾರೆ ಆದರೆ ಭಗವಂತನನ್ನು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಬಂದು ನೀವು ಮಕ್ಕಳಿಗೆ ಸುಖ-ಶಾಂತಿಯನ್ನು ಕೊಡುತ್ತೇನೆ. ಈಗ ಸುಖ-ಶಾಂತಿ-ಸಂಪತ್ತು ಯಾರ ಬಳಿಯೂ ಇಲ್ಲ. ಅದನ್ನು ಕೊಡುವವರನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು ತಿಳಿಸುತ್ತಾರೆ - ದುಃಖಹರ್ತ-ಸುಖಕರ್ತನೆಂದು ನೀವು ಹಾಡುತ್ತೀರಿ. ಗಾಂಧೀಜಿಯೂ ಸಹ ಹೇ ಪತಿತ-ಪಾವನ ಬಂದು ಪಾವನ ಮಾಡಿ ಎಂದು ಕರೆಯುತ್ತಿದ್ದರು. ಪತಿತ-ಪಾವನ ಸೀತಾರಾಂ ಎಂದು ಹಾಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಭಕ್ತಿಯನ್ನೇಕೆ ಮಾಡುತ್ತಾರೆ? ಅದರಿಂದ ಏನು ಸಿಗುವುದು? ಏನೂ ಗೊತ್ತಿಲ್ಲ. ಭಕ್ತಿ ಮಾಡುವುದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ದ್ವಾಪರದಿಂದ ರಾವಣ ರಾಜ್ಯವು ಆರಂಭವಾಗುತ್ತದೆ. ಆದರೆ ರಾವಣನೆಂದರೆ ಯಾರು, ರಾವಣನನ್ನು ಎಲ್ಲಿಯವರೆಗೆ ಸುಡುತ್ತಾ ಇರುತ್ತಾರೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ರಾವಣನ ಜನ್ಮವು ಯಾವಾಗ ಆಯಿತು ಎಂಬುದೂ ತಿಳಿದಿಲ್ಲ. ರಾವಣನ ಪ್ರತಿಮೆ ಮಾಡಿ ಸುಡುತ್ತಾರೆ. ಆತ್ಮವು ಎಂದೂ ಸುಡುವುದಿಲ್ಲ, ಇವೆಲ್ಲಾ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಇಂದಿಗೆ 5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು. ಈ ಲಕ್ಷ್ಮೀ-ನಾರಾಯಣರಿಗೇ ಭಗವಾನ್-ಭಗವತಿ ಎಂದು ಹೇಳುತ್ತಾರೆ ನಂತರ ತ್ರೇತಾಯುಗದಲ್ಲಿ ರಾಮನ ರಾಜ್ಯವಿತ್ತು, ಅವರಿಗೆ ಈ ರಾಜ್ಯವು ಹೇಗೆ ಸಿಕ್ಕಿತು? ನಂತರ ಆ ರಾಜ್ಯವು ಎಲ್ಲಿ ಹೋಯಿತು ಎಂಬುದು ಯಾರಿಗೂ ಗೊತ್ತಿಲ್ಲ ಅರ್ಥಾತ್ ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಈ ಜ್ಞಾನದಿಂದ ಸ್ವ��್ಗದ ಮಾಲೀಕರಾಗುತ್ತೀರಿ. ಶಾಲೆಯಲ್ಲಿ ವಿದ್ಯೆಯಿಂದ ಯಾರಾದರೂ ವಕೀಲರು, ನ್ಯಾಯಾಧೀಶರಾಗಬಹುದೇ ಹೊರತು ಲಕ್ಷ್ಮೀ-ನಾರಾಯಣರಾಗುವುದಿಲ್ಲ ಅಂದಮೇಲೆ ಈ ದೇವಿ-ದೇವತೆಗಳು ಯಾವ ವಿದ್ಯೆಯಿಂದ ಇಂತಹ ಪದವಿ ಪಡೆದರು! ಎಂಬುದು ಯಾರಿಗೂ ತಿಳಿದಿಲ್ಲ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ನಾನು ನಿಮ್ಮನ್ನು ಈ ರೀತಿ ಮಾಡುತ್ತೇನೆಂದು ಹೇಳುವವರು ಮತ್ತ್ಯಾರೂ ಇಲ್ಲ. ನೀವು ಮಕ್ಕಳಿಗೆ ತಿಳಿದಿದೆ - ಈ ಲಕ್ಷ್ಮೀ- ನಾರಾಯಣರ ರಾಜಧಾನಿಯು ಈ ವಿದ್ಯೆಯಿಂದಲೇ ಸ್ಥಾಪನೆಯಾಗಿದೆ. ಪ್ರಪಂಚದವರಿಗೆ ಈ ಮಾತುಗಳು ಗೊತ್ತಿಲ್ಲ. ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ ಅಂದಮೇಲೆ ಲಕ್ಷ್ಮೀ-ನಾರಾಯಣರು ಎಲ್ಲಿ ಹೋದರು ಎಂಬುದು ಅವರಿಗೇನು ಗೊತ್ತಿದೆ? ಭಾರತದಲ್ಲಿಯೇ ಲಕ್ಷ್ಮೀ-ನಾರಾಯಣರ ಬಹಳ ಚಿತ್ರಗಳಿವೆ, ಅನೇಕ ಮಂದಿರಗಳಾಗಿವೆ, ಇದನ್ನೂ ನೋಡುತ್ತಿದ್ದಾರೆ. ಇವರಿಂದ ನಮಗೆ ಧನ ಸಿಗುವುದು ಎಂದು ತಿಳಿದುಕೊಳ್ಳುತ್ತಾರೆ. ಮಹಾಲಕ್ಷ್ಮಿಯನ್ನು ಪ್ರತೀ ದೀಪಾವಳಿಯಂದು ಧನ ಕೇಳುತ್ತಾರೆ ಆದರೆ ಜೊತೆಯಲ್ಲಿ ಅವಶ್ಯವಾಗಿ ನಾರಾಯಣನೂ ಇರುವರು. ದೀಪಾವಳಿಯಂದು ಪೂಜೆ ಮಾಡುತ್ತಾರೆ, ನಂತರ ಅವರ ಅಲ್ಪಕಾಲದ ಸುಖದ ಭಾವನೆಯು ಈಡೇರುತ್ತದೆಯೆಂದರೆ ಲಕ್ಷ್ಮಿಯಿಂದ ಧನ ಸಿಗುತ್ತದೆ ಎಂದು ತಿಳಿಯುತ್ತಾರೆ. ವಾಸ್ತವದಲ್ಲಿ ಲಕ್ಷ್ಮೀ-ನಾರಾಯಣ ಇಬ್ಬರೂ ಇದ್ದಾರೆ. ಲಕ್ಷ್ಮಿ, ಮಹಾಲಕ್ಷ್ಮಿ ಬೇರೆ-ಬೇರೆಯಲ್ಲ. ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ, ತಂದೆಯೇ ತಿಳಿಸುತ್ತಾರೆ. ಈಗಿನ ಮನುಷ್ಯರಂತೂ ಈಶ್ವರನು ಕಲ್ಲು-ಮುಳ್ಳು ಎಲ್ಲದರಲ್ಲಿಯೂ ಇದ್ದಾರೆಂದು ಹೇಳಿ ಬಿಡುತ್ತಾರೆ. ತಂದೆಯು ಹೇಳುತ್ತಾರೆ - ಎಲ್ಲರೂ ಕಲ್ಲು ಬುದ್ಧಿಯವರಾಗಿದ್ದಾರೆ, ಪಾರಸ ಬುದ್ಧಿಯವರು ಸತ್ಯಯುಗದಲ್ಲಿರುತ್ತಾರೆ. ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ವಜ್ರ ವೈಡೂರ್ಯಗಳ ಮಹಲುಗಳಿತ್ತು, ಇದು 5000 ವರ್ಷಗಳ ಮಾತಾಗಿದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ತಂದೆಯು ಹೇಳುತ್ತಾರೆ - ಈ ಭಕ್ತಿಮಾರ್ಗದಿಂದ ಏಣಿಯನ್ನು ಕೆಳಗಿಳಿಯಬೇಕಾಗುತ್ತದೆ. ಡ್ರಾಮಾನುಸಾರ ಯಾವಾಗ ದುರ್ಗತಿಯನ್ನು ಹೊಂದುವರೋ ಆಗ ನಾನು ಬಂದು ಪುನಃ ಹೊಸ ಪ್ರಪಂಚವನ್ನಾಗಿ ಮಾಡುವೆನು. ಈಗ ನೀವು ಮಕ್ಕಳು ಹೊಸ ಪ್ರಪಂಚದ ಮಾಲೀಕರಾಗಲು ರಾಜಯೋಗವನ್ನು ಕಲಿಯುತ್ತಿದ್ದೀರಿ. ನಿಮಗೆ ತಿಳಿದಿದೆ, ಈ ಮಹಾಭಾರತ ಯುದ್ಧದಿಂದ ಹಳೆಯ ಪ್ರಪಂಚದ ವಿನಾಶವಾಗುವುದು. ಈ ನಾಟಕವು ಮಾಡಿ-ಮಾಡಲ್ಪಟ್ಟಿದೆ. ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಅದಕ್ಕೆ 5000 ವರ್ಷಗಳಾಯಿತು. 2500 ವರ್ಷಗಳ ಕಾಲ ಸೂರ್ಯವಂಶಿ, ಚಂದ್ರವಂಶಿಯರ ರಾಜಧಾನಿಯು ನಡೆಯಿತು ನಂತರ ದ್ವಾಪರದಿಂದ ರಾವಣ ರಾಜ್ಯವು ಆರಂಭವಾಯಿತು. ಮನುಷ್ಯರು ಪತಿತರಾಗುತ್ತಲೇ ಹೋಗುತ್ತಾರೆ ಆದರೆ ನಮ್ಮನ್ನು ಪತಿತರನ್ನಾಗಿ ಯಾರು ಮಾಡಿದರು? ನಾವು ಪಾವನರಾಗಿದ್ದೆವ��, ನಂತರ ಹೇಗೆ ಪತಿತರಾದೆವು ಎಂಬುದು ಮನುಷ್ಯರಿಗೆ ತಿಳಿದಿಲ್ಲ, ತಂದೆಯೇ ಬಂದು ತಿಳಿಸುತ್ತಾರೆ. ರಾವಣ ರಾಜ್ಯವು ಆರಂಭವಾದಾಗಿನಿಂದ ನೀವು ಪತಿತರಾಗತೊಡಗುತ್ತೀರಿ. ರಾವಣನ ಜನ್ಮವಾಗಿ 2500 ವರ್ಷಗಳಾಯಿತು, ಶಿವ ತಂದೆಯ ಜನ್ಮವಾಗಿ 5000 ವರ್ಷಗಳಾಯಿತು. ತಂದೆಗೆ ರಾಮನೆಂತಲೂ, ಅದಕ್ಕೆ ರಾಮ ರಾಜ್ಯವೆಂತಲೂ, ದ್ವಾಪರ-ಕಲಿಯುಗಕ್ಕೆ ರಾವಣ ರಾಜ್ಯವೆಂತಲೂ ಹೇಳಲಾಗುತ್ತದೆ. ವಾಸ್ತವದಲ್ಲಿ ರಾಮನೆಂದು ಹೇಳಬಾರದು ಏಕೆಂದರೆ ಇತ್ತೀಚಿನ ಮನುಷ್ಯರು ರಾಮ ಚಂದ್ರ, ಕೃಷ್ಣ ಚಂದ್ರ ಎಂದು ಹೆಸರಿಟ್ಟುಕೊಳ್ಳುತ್ತಾರೆ. 5000 ವರ್ಷಗಳ ಮೊದಲು ಭಾರತವು ಚಿನ್ನದ ಪಕ್ಷಿಯಾಗಿತ್ತು, ಅದಕ್ಕೆ ಸ್ವರ್ಣಿಮ ಯುಗವೆಂದು ಹೇಳಲಾಗುತ್ತದೆ. ವೈಕುಂಠವಿತ್ತು ಆದರೆ ಎಲ್ಲಿತ್ತು ಎಂಬುದು ಗೊತ್ತಿಲ್ಲ. ಆತ್ಮವೆಂದರೇನು, ಪರಮಾತ್ಮ ಯಾರು, ಸೃಷ್ಟಿಚಕ್ರವೆಂದರೇನು ಎಂಬುದನ್ನು ತಿಳಿದುಕೊಂಡಿಲ್ಲ. ಆದ್ದರಿಂದಲೇ ಅವರಿಗೆ ತುಚ್ಛ ಬುದ್ಧಿಯವರೆಂದು ಹೇಳಲಾಗುತ್ತದೆ. ಋಷಿ-ಮುನಿಗಳೂ ಸಹ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ಆದ್ದರಿಂದಲೇ ನಮಗೂ ಗೊತ್ತಿಲ್ಲ, ತಂದೆ ಮತ್ತು ಆಸ್ತಿಯನ್ನು ತಿಳಿದುಕೊಂಡಿಲ್ಲ ಎಂದು ಹೇಳುತ್ತಾರೆ. ತಂದೆಯ ಮೂಲಕ ವಿಶ್ವದ ರಾಜ್ಯ ಪದವಿಯ ಯಾವ ಆಸ್ತಿಯು ಸಿಗುತ್ತದೆಯೋ ಅದನ್ನೂ ತಿಳಿದುಕೊಂಡಿಲ್ಲ. ನೀವೀಗ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ ಅಂದಮೇಲೆ ನೀವು ಡಬಲ್ ಆಸ್ತಿಕರಾದಿರಿ. ಶಾಂತಿಯು ಯಾರಿಂದ ಮತ್ತು ಎಲ್ಲಿ ಸಿಗುವುದು ಎಂಬುದೂ ಸಹ ಮನುಷ್ಯರಿಗೆ ಗೊತ್ತಿಲ್ಲ. ಸನ್ಯಾಸಿಗಳ ಬಳಿ ಹೋಗಿ ನಮಗೆ ಶಾಂತಿ ಬೇಕು ಎಂದು ಹೇಳುತ್ತಾರೆ. ನಮಗೆ ಇಲ್ಲಿ ಶಾಂತಿಯು ಎಲ್ಲಿಂದ ಬರಲು ಸಾಧ್ಯ? ಕರ್ಮವನ್ನಂತೂ ಮಾಡಲೇಬೇಕಲ್ಲವೆ. ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿಯೇ ಸಿಗುವುದು, ಒಂದುವೇಳೆ ಮನೆಯಲ್ಲಿ ಒಬ್ಬರು ಅಶಾಂತರಾದರೂ ಸಹ ಇಡೀ ಮನೆಯನ್ನೇ ಅಶಾಂತಗೊಳಿಸುವರು. ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿಯೇ ಸಿಗುವುದು. ಅಲ್ಲಿಂದ ತಂದೆಯು ನಾವಾತ್ಮರನ್ನು ಪಾತ್ರವನ್ನುಅಭಿನಯಿಸಲು ಹೊಸ ಪ್ರಪಂಚಕ್ಕೆ ಕಳುಹಿಸುತ್ತಾರೆ. ತಂದೆಯು ನರಕದಲ್ಲಿ ಕಳುಹಿಸುವರೇ! ಶಾಂತಿಧಾಮದಿಂದ ಸುಖಧಾಮದಲ್ಲಿ ಕಳುಹಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಇದು ಭಗವಂತನ ಪಾಠಶಾಲೆಯಾಗಿದೆ, ಇದು ಯಾವುದೇ ಸತ್ಸಂಗವಲ್ಲ. ಇಲ್ಲಿ ಭಗವಾನುವಾಚವು ಮಕ್ಕಳಪ್ರತಿ ಆಗಿದೆ. ನಿರಾಕಾರ ಶಿವ ತಂದೆಯು ಶರೀರದಲ್ಲಿ ಪ್ರವೇಶ ಮಾಡಿ ನೀವು ಮಕ್ಕಳೊಂದಿಗೆ ಮಾತನಾಡುತ್ತಾರೆ. ಆತ್ಮವು ಶರೀರದಲ್ಲಿ ಇದೆಯಲ್ಲವೆ! ಆತ್ಮಕ್ಕೆ ಕರ್ಮೇಂದ್ರಿಯಗಳು ಸಿಕ್ಕಿದಾಗಲೇ ಮಾತನಾಡುತ್ತದೆ, ಕೇಳಿಸಿಕೊಳ್ಳುತ್ತದೆ, ಆತ್ಮರಿಗೆ ತಂದೆಯೇ ಕುಳಿತು ಓದಿಸುತ್ತಾರೆ. ಹೇ ಪತಿತ-ಪಾವನ, ಹೇ ಸದ್ಗತಿದಾತ, ಮುಕ್ತಿದಾತ, ಮಾರ್ಗದರ್ಶಕನೆಂದು ಪರಮಾತ್ಮನನ್ನು ಕರೆಯುತ್ತಾರೆ ಆದರೆ ಅವರು ಹೇಗೆ ಬಿಡುಗಡೆ ಮಾಡಿ ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆಂದು ತಿಳಿದುಕೊಂಡಿಲ್ಲ. ಕೇವಲ ಕೂಗುತ್ತಾ ಇರುತ್ತಾರೆ. ಈಗ ಆ ತಂದೆಯು ಬಂದಿದ್ದಾರೆ, ನೀವು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾರೆ. ತಂದೆಯು ನಿಮ್ಮನ್ನು ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ ನಂತರ ನೀವು ಸುಖಧಾಮದಲ್ಲಿ ಬಂದು ಬಿಡುತ್ತೀರಿ. ತಂದೆಯು ಒಂದೇ ಬಾರಿ ಬಂದು ಎಲ್ಲರಿಗೆ ಮಾರ್ಗದರ್ಶಕ ಆಗುತ್ತಾರೆ ನಂತರ ಹೊಸ ಪ್ರಪಂಚದಲ್ಲಿ ತಂದೆಯು ಮಾರ್ಗದರ್ಶನ ನೀಡುವುದಿಲ್ಲ. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಪತಿತರಾಗಿರುವ ಕಾರಣ ನಾವು ಮನೆಗೆ ಹೇಗೆ ಹಿಂತಿರುಗಿ ಹೋಗುವುದು ಎಂಬುದನ್ನು ತಿಳಿದುಕೊಂಡಿಲ್ಲ. ಹಾರಲು ಸಾಧ್ಯವಾಗುತ್ತಿಲ್ಲ. ಅಲ್ಲಿಗೆ ಹೋಗುವುದಕ್ಕಾಗಿ ಬಹಳ ಭಕ್ತಿ ಮಾಡುತ್ತಾರೆ ಆದರೆ ನಾವು ಪತಿತರಾಗಿದ್ದೇವೆ ಆದ್ದರಿಂದಲೇ ಹೋಗಲು ಆಗುತ್ತಿಲ್ಲ, ಪತಿತ-ಪಾವನ ತಂದೆಯು ಬಂದು ಪಾವನರನ್ನಾಗಿ ಮಾಡಿದಾಗಲೇ ನಾವು ಹೋಗಲು ಸಾಧ್ಯ ಎಂಬುದನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ನಿಮಗೆ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಎಲ್ಲರೂ ಪತಿತರು ಮತ್ತು ಪಾವನರಾಗಲೇಬೇಕಾಗಿದೆ. ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರಬೇಕಾಗಿದೆ. ಈಗ ಎಷ್ಟೊಂದು ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ದೇವತೆಗಳ ರಾಜ್ಯವಿದ್ದಾಗ ಹೊಸ ವೃಕ್ಷದಲ್ಲಿ ಕೇವಲ 9 ಲಕ್ಷ ಮಂದಿ ಇರುತ್ತಾರೆ. ಮೊದಲಿಗೆ ಕೆಲವೇ ಎಲೆಗಳು ಇರುತ್ತವೆಯಲ್ಲವೇ. ನಂತರ ವೃಕ್ಷವು ದೊಡ್ಡದಾಗುತ್ತಾ ಹೋಗುತ್ತದೆ. ಮೊದಲು ಒಂದೇ ಧರ್ಮದವರಿರುತ್ತಾರೆ. ನೀವೀಗ ತಮ್ಮನ್ನು ನರಕವಾಸಿಗಳೆಂದು ತಿಳಿದುಕೊಳ್ಳುವುದಿಲ್ಲ, ಉಳಿದೆಲ್ಲರೂ ನರಕವಾಸಿಗಳಾಗಿದ್ದಾರೆ ಆದರೆ ತಮ್ಮನ್ನು ತಿಳಿದುಕೊಳ್ಳುವುದಿಲ್ಲ. ಈ ಸಮಯದಲ್ಲಿ ಎಲ್ಲರ ಚಹರೆಯಂತೂ ಮನುಷ್ಯರದಾಗಿದೆ ಆದರೆ ಗುಣಗಳು ಮಂಗನದಾಗಿದೆ. ದೊಡ್ಡ-ದೊಡ್ಡ ರಾಜರೂ ಸಹ ಲಕ್ಷ್ಮೀ-ನಾರಾಯಣರ ಚರಣಗಳಿಗೆ ಬಾಗುತ್ತಾರೆ. ಆದರೆ ಲಕ್ಷ್ಮೀ-ನಾರಾಯಣರು ಪತಿತರನ್ನು ಪಾವನ ಮಾಡುವವರಲ್ಲ ಅಥವಾ ಯಾರಾದರೂ ದುಃಖಿಯಾದಾಗ ಅವರ ಮೇಲೆ ದಯೆ ತೋರಿಸಲು ಅವರೇನೂ ದಯಾಹೃದಯಿಗಳಲ್ಲ. ದಯಾಹೃದಯಿ ತಂದೆಯು ಒಬ್ಬರೇ ಆಗಿದ್ದಾರೆ, ತಂದೆಯೇ ಬಂದು ಕಲ್ಲು ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ. ನೀವೀಗ ದೇವತೆಗಳಾಗುತ್ತಿದ್ದೀರಿ. ಇದು ನರನಿಂದ ನಾರಾಯಣನಾಗುವ ಪಾಠಶಾಲೆಯಾಗಿದೆ, ರಾಜಯೋಗವಾಗಿದೆ. ಗೀತೆಯ ರಾಜಯೋಗವನ್ನು ಯಾರು ಕಲಿಸಿದರು ಎಂಬುದು ಋಷಿ ಮುನಿಗಳಿಗೂ ಗೊತ್ತಿಲ್ಲ. ಗೀತೆಯನ್ನು ಖಂಡನೆ ಮಾಡಿ ಬಿಟ್ಟಿದ್ದಾರೆ. ಕೃಷ್ಣನು ರಾಜಯೋಗವನ್ನು ಕಲಿಸಿದ್ದನೆಂದು ತಿಳಿಯುತ್ತಾರೆ. ಕೃಷ್ಣ ಭಗವಾನುವಾಚ - ಮನ್ಮನಾಭವ ಎಂದು ಹೇಳುತ್ತಾರೆ ಆದರೆ ಕೃಷ್ಣನಂತೂ ಪರಮಾತ್ಮನಲ್ಲ, ಸತ್ಯಯುಗದ ರಾಜಕುಮಾರನಾಗಿದ್ದಾನೆ. ಕೃಷ್ಣನೂ ಸಹ ಸಂಗಮಯುಗದಲ್ಲಿ ರಾಜಯೋಗವನ್ನು ಕಲಿತು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾನೆ ಆದರೆ ಅವನನ್ನೇ ಭಗವಂತನನ��ನಾಗಿ ಮಾಡಿ ಬಿಟ್ಟಿದ್ದಾರೆ. ಅನೇಕರು ಗೀತೆಯನ್ನು ಕೇಳುತ್ತಾರೆ ಆದರೆ ಗೀತೆಯ ಭಗವಂತ ಶಿವನಾಗಿದ್ದಾರೆ, ಕೃಷ್ಣನಲ್ಲ ಎಂಬುದು ಯಾರೊಬ್ಬರಿಗೂ ತಿಳಿದಿಲ್ಲ. ಎಲ್ಲರೂ ಒಂದೇ ಎಂದು ಹೇಳಿ ಬಿಡುತ್ತಾರೆ. ಈ ರೀತಿಯ ಮನುಷ್ಯರೊಂದಿಗೂ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಕೃಷ್ಣನು ಭಗವಂತನಾಗಿದ್ದಾನೆ, ದ್ವಾಪರದಿಂದ ಶಾಸ್ತ್ರಗಳು ರಚನೆಯಾಗಿದೆ ಎಂದು 63 ಜನ್ಮಗಳಿಂದಲೂ ತಿಳಿದುಕೊಳ್ಳುತ್ತಾ ಬಂದಿದ್ದಾರೆ ಅಂದಮೇಲೆ ಅವಶ್ಯವಾಗಿ ಮೊಟ್ಟ ಮೊದಲು ಗೀತೆಯೇ ರಚನೆಯಾಗಿರಬೇಕು. ಈ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಜ್ಞಾನಮಾರ್ಗದ ಶಾಸ್ತ್ರವು ಒಂದೂ ಇಲ್ಲ, ಗೀತೆಯು ನಂಬರ್ವನ್ ಆಗಿದೆ ನಂತರದಲ್ಲಿ ಈ ವೇದ-ಉಪನಿಷತ್ತುಗಳು ಆಗಿವೆ. ಅವೂ ಸಹ ಗೀತೆಯ ಮರಿ ಮಕ್ಕಳಾಗಿವೆ. ಮನುಷ್ಯರು ಇವನ್ನು ಓದುತ್ತಾ-ಓದುತ್ತಾ ಕೆಳಗಿಳಿದು ಬಂದಿದ್ದಾರೆ. ಈಗ 84 ಜನ್ಮಗಳು ಮುಗಿಯಿತು, ಮತ್ತೆ ಮೊದಲ ನಂಬರಿಗೆ ಹೋಗಬೇಕಾಗಿದೆ. ನೀವೀಗ ಪುನಃ ಸತ್ಯಯುಗೀ ಲಕ್ಷ್ಮೀ-ನಾರಾಯಣರಾಗುವುದಕ್ಕಾಗಿ ಓದಲು ಇಲ್ಲಿಗೆ ಬಂದಿದ್ದೀರಿ, ಎಲ್ಲರೂ ಲಕ್ಷ್ಮೀ-ನಾರಾಯಣ ಆಗುವುದಿಲ್ಲ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಆದರೆ ಯಾರು ರಾಜಧಾನಿಯನ್ನು ಸ್ಥಾಪನೆ ಮಾಡಿದರು ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಕಲಿಯುಗದಲ್ಲಿ ಇಷ್ಟೊಂದು ಮನುಷ್ಯರಿದ್ದಾರೆ, ಈಗ ತಿನ್ನುವುದಕ್ಕಾಗಿ ಆಹಾರವೂ ಸಿಗುವುದಿಲ್ಲ ನಂತರ ಸತ್ಯಯುಗದಲ್ಲಿ ಕೇವಲ ಲಕ್ಷ್ಮೀ-ನಾರಾಯಣರ ರಾಜಧಾನಿಯಿರುವುದು. ಇಲ್ಲಿ ನೋಡಿ ಎಷ್ಟೊಂದು ಧರ್ಮಗಳಿವೆ! ಸನ್ಮುಖದಲ್ಲಿ ಮಹಾಭಾರಿ ಮಹಾಭಾರತ ಯುದ್ಧವೂ ನಿಂತಿದೆ. ಆದರೂ ಮನುಷ್ಯರ ಕಣ್ಣುಗಳು ತೆರೆಯುತ್ತಿಲ್ಲ. ಈ ಮಹಾಭಾರಿ ಯುದ್ಧವು ಕಲ್ಪದ ಮೊದಲೂ ಆಗಿತ್ತು, ಅದರ ನಂತರ ಏನಾಯಿತು ಎಂಬುದನ್ನು ತಿಳಿದುಕೊಂಡಿಲ್ಲ. ಇವೆಲ್ಲಾ ಮಾತುಗಳನ್ನು ನೀವು ಬ್ರಾಹ್ಮಣ-ಬ್ರಾಹ್ಮಣಿಯರೇ ತಿಳಿದುಕೊಂಡಿದ್ದೀರಿ. ನಿಮ್ಮನ್ನು ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆ. ಭಗವಂತನು ನಿಮಗೇ ಓದಿಸಿ ಈ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ ಅಂದಮೇಲೆ ಚೆನ್ನಾಗಿ ಓದಬೇಕಾಗಿದೆ. ಕೇವಲ ತಂದೆ ಮತ್ತು ಹೊಸ ಪ್ರಪಂಚವನ್ನು ನೆನಪು ಮಾಡಿರಿ ಆಗ ನೀವು ಹೊಸ ಪ್ರಪಂಚದಲ್ಲಿ ಹೊರಟು ಹೋಗುವಿರಿ. ಒಂದುವೇಳೆ ಚೆನ್ನಾಗಿ ಓದಿ-ಓದಿಸಿದ್ದೇ ಆದರೆ ರಾಜ-ರಾಣಿಯರಾಗಬಹುದು. ಯಾರೆಷ್ಟು ಆತ್ಮಿಕ ಸೇವೆ ಮಾಡುವರೋ ಅಷ್ಟು ಪಡೆಯುವರು. ನೀವು ಆತ್ಮಿಕ ಸಮಾಜ ಸೇವಕರಾಗಿದ್ದೀರಿ, ಇಡೀ ಪ್ರಪಂಚದವರು ದೈಹಿಕ ಸಮಾಜ ಸೇವಕರಾಗಿದ್ದಾರೆ. ನೀವಾತ್ಮರಿಗೇ ತಂದೆಯು ಪ್ರತಿನಿತ್ಯವೂ ಜ್ಞಾನವನ್ನು ತಿಳಿಸುತ್ತಾರೆ, ಆತ್ಮರ ಸೇವೆ ಮಾಡುತ್ತಾರಲ್ಲವೆ. ಇದಕ್ಕೆ ಆತ್ಮರ ಸೇವೆ ಎಂದು ಹೇಳಲಾಗುತ್ತದೆ, ಇದನ್ನು ಆತ್ಮಿಕತಂದೆಯೇ ಕಲಿಸುತ್ತಾರೆ. ಇದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಪಾಠಶಾಲೆಯಾಗಿದೆ. ಅವಶ್ಯವಾಗಿ ದೇವತೆಗಳಾಗುವಿರಿ, ಯಾವಾಗ ನೀ���ು ಓದಿ ತಯಾರಾಗಿ ಬಿಡುವಿರೋ ಆಗ ವಿನಾಶವು ಆರಂಭವಾಗುವುದು ನಂತರ ನೀವೂ ಸಹ ಹೊರಟು ಹೋಗುತ್ತೀರಿ. ರಾಮನೂ ಹೋದ, ರಾವಣನೂ ಹೋದ.... ಎಂದು ಹೇಳುತ್ತಾರಲ್ಲವೆ. ಕೇವಲ ಕೆಲವರೇ ಉಳಿದುಕೊಳ್ಳುತ್ತಾರೆ. ಅವರೂ ಸಹ ನಂತರ ಅದಲು-ಬದಲಾಗುತ್ತಾ ಇರುತ್ತಾರೆ. ಅನಂತರ ನೀವು ಸ್ವರ್ಗದಲ್ಲಿ ಬರುತ್ತೀರಿ, ನಿಮಗಾಗಿ ಈಗ ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ. ನೀವು ಸ್ವರ್ಗವಾಸಿಗಳಾಗಲು ಓದುತ್ತಿದ್ದೀರಿ. ಇದು ನರಕವಾಗಿದೆ, ನೀವೀಗ ಸಂಗಮದಲ್ಲಿದ್ದೀರಿ. ನೀವೀಗ ಬ್ರಾಹ್ಮಣ-ಬ್ರಾಹ್ಮಣಿಯರಾಗದಿದ್ದರೆ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆಸ್ತಿಯು ಬ್ರಾಹ್ಮಣರಿಗೇ ಸಿಗುತ್ತದೆ, ಯಾರು ಒಬ್ಬ ತಂದೆಯ ವಿನಃ ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡುವುದಿಲ್ಲ. ಉಳಿದವರು ಯಾರು ಅಲ್ಪಸ್ವಲ್ಪ ಕೇಳಿರುವರೋ ಅವರು ಪ್ರಜೆಗಳಲ್ಲಿ ಬರುತ್ತಾರೆ. ಒಳ್ಳೆಯದು.
|
2 |
+
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
|
3 |
+
ಧಾರಣೆಗಾಗಿ ಮುಖ್ಯಸಾರ:
|
4 |
+
1. ಆತ್ಮೀಯ ಸಮಾಜ ಸೇವಕರಾಗಿ ಓದಬೇಕು ಮತ್ತು ಓದಿಸಬೇಕಾಗಿದೆ. ತಂದೆಯ ಜೊತೆ ಜೊತೆಗೆ ಬರಲಿರುವ ಹೊಸ ಪ್ರಪಂಚವನ್ನೂ ನೆನಪು ಮಾಡಬೇಕಾಗಿದೆ.
|
5 |
+
2. ತಂದೆಯ ಸಮಾನ ದಯಾಹೃದಯಿಗಳಾಗಿ ಎಲ್ಲರನ್ನೂ ಪಾರಸ ಬುದ್ಧಿಯವರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
|