be878fb874943fde39be8ea2a3be55588098bf0989600de68b73c2405352e2c4
Browse files- eesanje/url_47_201_1.txt +8 -0
- eesanje/url_47_201_10.txt +6 -0
- eesanje/url_47_201_11.txt +6 -0
- eesanje/url_47_201_12.txt +5 -0
- eesanje/url_47_201_2.txt +10 -0
- eesanje/url_47_201_3.txt +4 -0
- eesanje/url_47_201_4.txt +6 -0
- eesanje/url_47_201_5.txt +3 -0
- eesanje/url_47_201_6.txt +4 -0
- eesanje/url_47_201_7.txt +6 -0
- eesanje/url_47_201_8.txt +8 -0
- eesanje/url_47_201_9.txt +7 -0
- eesanje/url_47_202_1.txt +7 -0
- eesanje/url_47_202_10.txt +11 -0
- eesanje/url_47_202_11.txt +4 -0
- eesanje/url_47_202_12.txt +6 -0
- eesanje/url_47_202_2.txt +7 -0
- eesanje/url_47_202_3.txt +5 -0
- eesanje/url_47_202_4.txt +7 -0
- eesanje/url_47_202_5.txt +5 -0
- eesanje/url_47_202_6.txt +5 -0
- eesanje/url_47_202_7.txt +5 -0
- eesanje/url_47_202_8.txt +12 -0
- eesanje/url_47_202_9.txt +5 -0
- eesanje/url_47_203_1.txt +8 -0
- eesanje/url_47_203_10.txt +5 -0
- eesanje/url_47_203_11.txt +11 -0
- eesanje/url_47_203_12.txt +9 -0
- eesanje/url_47_203_2.txt +9 -0
- eesanje/url_47_203_3.txt +8 -0
- eesanje/url_47_203_4.txt +7 -0
- eesanje/url_47_203_5.txt +5 -0
- eesanje/url_47_203_6.txt +9 -0
- eesanje/url_47_203_7.txt +6 -0
- eesanje/url_47_203_8.txt +8 -0
- eesanje/url_47_203_9.txt +7 -0
- eesanje/url_47_204_1.txt +11 -0
- eesanje/url_47_204_10.txt +5 -0
- eesanje/url_47_204_11.txt +12 -0
- eesanje/url_47_204_12.txt +7 -0
- eesanje/url_47_204_2.txt +5 -0
- eesanje/url_47_204_3.txt +5 -0
- eesanje/url_47_204_4.txt +7 -0
- eesanje/url_47_204_5.txt +7 -0
- eesanje/url_47_204_6.txt +7 -0
- eesanje/url_47_204_7.txt +6 -0
- eesanje/url_47_204_8.txt +9 -0
- eesanje/url_47_204_9.txt +5 -0
- eesanje/url_47_205_1.txt +6 -0
- eesanje/url_47_205_10.txt +6 -0
eesanje/url_47_201_1.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ದುಷ್ಟಶಕ್ತಿಗಳ ವಿರುದ್ಧ ಹೊರಾಡಲು ಟಿಎಂಸಿ ಕಾರ್ಯಕರ್ತರಿಗೆ ದೀದಿ ಕರೆ
|
2 |
+
ಕೋಲ್ಕತ್ತಾ, ಜ.1 (ಪಿಟಿಐ) ಪಕ್ಷದ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟಿಎಂಸಿ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ, ಮಾತ್ರವಲ್ಲ, ಯಾವುದೇ ದುಷ್ಟ ಶಕ್ತಿಗಳನ್ನು ವಿರೋಧಿಸಲು ಮತ್ತು ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ನಡೆಯುತ್ತಿರುವ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.
|
3 |
+
ಟಿಎಂಸಿ ರಚನೆಯ ಮಹತ್ವದ ಕುರಿತು ಮಾತನಾಡಿದ ಅವರು, ಮಾತೃಭೂಮಿಯನ್ನು ಗೌರವಿಸಲು, ರಾಜ್ಯದ ಹಿತಾಸಕ್ತಿಗಳನ್ನು ಎತ್ತಿಹಿಡಿಯಲು ಮತ್ತು ಜನಸಾಮಾನ್ಯರಿಗೆ ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆಗಾಗಿ ನಮ್ಮ ಪಕ್ಷವನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು. ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಬೆಂಬಲಿಗರ ಸಮರ್ಪಣೆ ಮತ್ತು ಸ್ವಯಂ ತ್ಯಾಗವನ್ನು ನಾನು ವಿನಮ್ರವಾಗಿ ಗೌರವಿಸುತ್ತೇನೆ ಇಂದು ಟಿಎಂಸಿ ಕುಟುಂಬವು ಎಲ್ಲರ ಪ್ರೀತಿ ಮತ್ತು ಪ್ರೀತಿಯಿಂದ ಆಶೀರ್ವದಿಸಲ್ಪಟ್ಟಿದೆ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
|
4 |
+
ಅತ್ಯಾಚಾರ ಆರೋಪ: ಬಿಜೆಪಿಯಿಂದ ಕಮಲ್ರಾವತ್ ಉಚ್ಛಾಟನೆ
|
5 |
+
ನಿಮ್ಮ ಅವಿರತ ಬೆಂಬಲದ ಬಲದ ಮೇಲೆ ನಾವು ಈ ಮಹಾನ್ ಪ್ರಜಾಪ್ರಭುತ್ವದ ದೇಶದಲ್ಲಿ ಪ್ರತಿಯೊಬ್ಬರಿಗಾಗಿ ಹೋರಾಡುವುದನ್ನು ಮುಂದುವರಿಸುತ್ತೇವೆ. ಯಾವುದೇ ದುಷ್ಟ ಶಕ್ತಿಗೆ ಶರಣಾಗುವುದಿಲ್ಲ. ಎಲ್ಲಾ ಭಯೋತ್ಪಾದನೆಯನ್ನು ವಿರೋಧಿಸಿ ನಾವು ನಮ್ಮ ದೇಶದ ಸಾಮಾನ್ಯ ಜನರಿಗಾಗಿ ನಮ್ಮ ಜೀವಮಾನದ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.
|
6 |
+
1998 ರಲ್ಲಿ ಕಾಂಗ್ರೆಸ್ನಿಂದ ಹೊರಹೊಮ್ಮಿದ ಟಿಎಂಸಿ 2001 ಮತ್ತು 2006 ರಲ್ಲಿ ಎರಡು ವಿಫಲ ಪ್ರಯತ್ನಗಳ ನಂತರ 2011 ರಲ್ಲಿ ಎಡರಂಗದ ಆಡಳಿತವನ್ನು ಸೋಲಿಸುವ ಮೂಲಕ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿತ್ತು.
|
7 |
+
ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ ಮೋದಿ
|
8 |
+
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಬ್ಯಾನರ್ಜಿ ಅವರು 2021 ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿಯನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದರು, ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
|
eesanje/url_47_201_10.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಆಸ್ಕರ್ ಪ್ರಶಸ್ತಿ ಗೆದ್ದ ನಾಟು ನಾಟು ಸಾಂಗ್ ಮತ್ತು ಸಾಕ್ಷ್ಯಚಿತ್ರಕ್ಕೆ ಮೋದಿ ಮೆಚ್ಚುಗೆ
|
2 |
+
ನವದೆಹಲಿ, ಡಿ 31 (ಪಿಟಿಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು 2023 ರ ತಮ್ಮ ಕೊನೆಯ ಮನ್ ಕಿ ಬಾತ್ ಭಾಷಣದಲ್ಲಿ ಆಸ್ಕರ್ ಪ್ರಶಸ್ತಿಗೆ ಪಾತ್ರವಾದ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಮತ್ತು ದ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮನ್ ಕಿ ಬಾತ್ನ 108 ನೇ ಸಂಚಿಕೆಯಲ್ಲಿ, ಪ್ರಧಾನಮಂತ್ರಿ ಅವರು ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಮತ್ತು ಸಾಕ್ಷ್ಯ ಚಿತ್ರ ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಕೋಟ್ಯಂತರ ಭಾರತೀಯರ ಕನಸು ನನಸು ಮಾಡಿವೆ ಎಂದು ಗುಣಗಾನ ಮಾಡಿದ್ದಾರೆ.
|
3 |
+
ವಿಶ್ವವು ಭಾರತದ ಸೃಜನಶೀಲತೆಯನ್ನು ನೋಡಿದೆ ಮತ್ತು ಅದರ ಮನರಂಜನಾ ಉದ್ಯಮದ ಮೂಲಕ ಪರಿಸರದೊಂದಿಗೆ ದೇಶದ ಸಂಪರ್ಕವನ್ನು ಅರ್ಥಮಾಡಿಕೊಂಡಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.ಸ್ನೇಹಿತರೇ, ನಾಟು ನಾಟು ಹಾಡಿಗೆ ಆಸ್ಕರ್ ಸಿಕ್ಕಾಗ ಇಡೀ ದೇಶವೇ ಖುಷಿಯಿಂದ ಕುಣಿದು ಕುಪ್ಪಳಿಸಿತ್ತು. ದಿ ಎಲಿಫೆಂಟ್ ವಿಸ್ಪರರ್ಸ್ಗೆ ನೀಡಿದ ಗೌರವವನ್ನು ಕೇಳಿ ಯಾರಿಗೆ ಸಂತೋಷವಾಗಲಿಲ್ಲ? ಇವುಗಳ ಮೂಲಕ ಜಗತ್ತು ಭಾರತದ ಸೃಜನಶೀಲತೆಗೆ ಸಾಕ್ಷಿಯಾಯಿತು ಮತ್ತು ನಮ್ಮ ಸಂಬಂಧವನ್ನು ಅರ್ಥಮಾಡಿಕೊಂಡಿತು ಎಂದು ಮೋದಿ ಹೇಳಿದರು.
|
4 |
+
ಮುಂಬೈನಲ್ಲಿ ಸರಣಿ ಸ್ಪೋಟ ನಡೆಸುವುದಾಗಿ ಹುಸಿ ಕರೆ
|
5 |
+
ನೆಟ್ಫ್ಲಿಕ್ಸ್ನ ತಮಿಳು ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್ ಚೊಚ್ಚಲ ನಟ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ್ದಾರೆ ಮತ್ತು ಗುನೀತ್ ಮೊಂಗಾ ನಿರ್ಮಿಸಿದ್ದಾರೆ, ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಗೆದ್ದ ಮೊದಲ ಭಾರತೀಯ ಸಾಕ್ಷ್ಯಚಿತ್ರವಾಗಿದೆ. ಮನ್ ಕಿ ಬಾತ್ ಪ್ರಸಾರದ ಸಂದರ್ಭದಲ್ಲಿ ನಟ ಅಕ್ಷಯ್ ಕುಮಾರ್ ಕೂಡ ತಮ್ಮ ಫಿಟ್ನೆಸ್ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
|
6 |
+
ಫಿಲ್ಟರ್ ಲೈಫ್ ಬೇಡ ಫಿಟ್ಟರ್ ಲೈಫ್ ಎಂದು ಕುಮಾರ್ ಅವರು ದೈಹಿಕ ಕ್ಷಮತೆ ಹಾಗೂ ಒಟ್ಟಾರೆ ಯೋಗಕ್ಷೇಮದತ್ತ ಗಮನ ಹರಿಸುವಂತೆ ಕರೆ ನೀಡಿದ್ದಾರೆ.
|
eesanje/url_47_201_11.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಮುಂಬೈನಲ್ಲಿ ಸರಣಿ ಸ್ಪೋಟ ನಡೆಸುವುದಾಗಿ ಹುಸಿ ಕರೆ
|
2 |
+
ಮುಂಬೈ,ಡಿ.31- ವಾಣಿಜ್ಯ ರಾಜಧಾನಿಯಲ್ಲಿ ಸರಣಿ ಸ್ಪೋಟ ನಡೆಸುವುದಾಗಿ ಮುಂಬೈ ಪೊಲೀಸರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿರುವ ಪ್ರಕರಣ ನಡೆದಿದೆ. ಅನಾಮಧೇಯ ವ್ಯಕ್ತಿಯ ಕರೆಯ ನಂತರ ಎಚ್ಚೆತ್ತುಕೊಂಡ ಪೊಲೀಸರು ವ್ಯಾಪಕ ಶೋಧ ನಡೆಸಿದಾಗ ಆತ ಹುಸಿ ಕರೆ ಮಾಡಿದ್ಧಾನೆ ಎಂದು ತಿಳಿಯುತ್ತಿದ್ದಂತೆ ಮುಂಬೈ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
|
3 |
+
ಮುಂಬೈ ಪೊಲೀಸ್ ಕಂಟ್ರೋಲ್ ರೂಮ್ಗೆ ಶನಿವಾರ ಸಂಜೆ 6 ರ ಸುಮಾರಿಗೆ ಬೆದರಿಕೆ ಕರೆ ಬಂದಿತು. ಕರೆ ಮಾಡಿದ ವ್ಯಕ್ತಿ ನಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮುಂಬೈನಲ್ಲಿ ಸರಣಿ ಸ್ಪೋಟಗಳು ನಡೆಯಲಿವೆ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕಾರ್ಯಾಚರಣೆಗೆ ಇಳಿದರು ಮತ್ತು ನಗರದಾದ್ಯಂತ ಹಲವಾರು ಪ್ರಮುಖ ಸಾರ್ವಜನಿಕ ಸ್ಥಳಗಳು ಮತ್ತು ಸ್ಥಾಪನೆಗಳಲ್ಲಿ ಶೋಧ ನಡೆಸಿದರು. ಆದರೆ, ಯಾವುದೇ ಸ್ಪೋಟಕ ವಸ್ತುಗಳು ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
|
4 |
+
ಒಂದೇ ದಿನ ದೇಶದಲ್ಲಿ 841 ಮಂದಿಗೆ ಕೋವಿಡ್, ಮೂವರು ಬಲಿ
|
5 |
+
ಪ್ರಸ್ತುತ ಕರೆ ಮಾಡಿದವರ ವಿವರಗಳನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದರು, ಹೆಚ್ಚಿನ ತನಿಖೆ ನಡೆಯುತ್ತಿದೆ. ಇದಕ್ಕೂ ಮೊದಲು, ಡಿಸೆಂಬರ್ 27 ರಂದು, ಜೈಪುರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸುವವರ ಇಮೇಲ್ ಮೂಲಕ ವಿಮಾನ ನಿಲ್ದಾಣವನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು.
|
6 |
+
ಬೆದರಿಕೆ ಇಮೇಲ್ ಸ್ವೀಕರಿಸಿದ ನಂತರ, ಟರ್ಮಿನಲ್ ಮ್ಯಾನೇಜರ್ ಅನುರಾಗ್ ಗುಪ್ತಾ ಜೈಪುರ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಮಾನ ನಿಲ್ದಾಣ ಪ್ರಾಧಿಕಾರವು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಇತರ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಂತರ ವಿಮಾನ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.
|
eesanje/url_47_201_12.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಅಪ್ರಾಪ್ತೆ ಅಪಹರಿಸಿ ನಿರಂತರ ಅತ್ಯಾಚಾರ ಮಾಡಿದ್ದ ಆರೋಪಿ ಅರೆಸ್ಟ್
|
2 |
+
ಭದೋಹಿ,ಡಿ.31- ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿಯನ್ನು ಅಪಹರಿಸಿ 10 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ನಿರಂತರ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ರಕ್ಷಿಸಲಾಗಿದ್ದು, 30 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
|
3 |
+
ಡಿ.18ರಂದು ಬೆಳಗ್ಗೆ ಕಾಲೇಜಿಗೆಂದು ಮನೆಯಿಂದ ಹೊರಟ ಬಾಲಕಿ ವಾಪಸ್ ಬಂದಿರಲಿಲ್ಲ. ಆಕೆಯ ಸಹೋದರ ಡಿಸೆಂಬರ್ 19 ರಂದು ಪೊಲೀಸ್ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿಗಾಗಿ ಶೋಧ ನಡೆಸಿದಾಗ ಆಕೆಯನ್ನು ರಾಜೇಶ್ ದುಬೆ ಎಂಬಾತ ಅಪಹಸಿರುವ ಸುಳಿವು ಸಿಕ್ಕಿತ್ತು. ತಕ್ಷಣ ಕಾರ್ಯಚರಣೆಗಿಳಿದ ಪೆಪೊಲೀಸರು ಆರೋಪಿಯನ್ನು ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.
|
4 |
+
ಮುಂಬೈನಲ್ಲಿ 2.4 ಕೋಟಿ ರೂ ಮೌಲ್ಯದ ಕಳ್ಳಸಾಗಣೆ ಸಿಗರೇಟ್ ದಾಸ್ತಾನು ವಶಕ್ಕೆ
|
5 |
+
ಆತನ ವಶದಲ್ಲಿದ್ದ ಬಾಲಕಿಯನ್ನು ರಕ್ಷಿಸಿ ಆಕೆಯನ್ನು ಪೋಷಕರಿಗೆ ಒಪ್ಪಿಸಿರುವ ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 363 (ಅಪಹರಣ), 366 (ಮದುವೆಗೆ ಒತ್ತಾಯಿಸುವುದು), ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
|
eesanje/url_47_201_2.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಹೊಸ ವರ್ಷದ ದಿನವೇ ಸಿಹಿ ಸುದ್ದಿ: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ
|
2 |
+
ನವದೆಹಲಿ,ಜ.1- ಹೊಸ ವರ್ಷದ ಮೊದಲ ದಿನವೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿವೆ. ಜನವರಿ 1 ರಿಂದ ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ದೇಶದ ಕೆಲವು ನಗರಗಳಲ್ಲಿ ತುಸು ಕಡಿಮೆಯಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ.
|
3 |
+
19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಭಾಗಶಃ ಕಡಿಮೆ ಮಾಡಲಾಗಿದೆ. ಹೊಸ ವರ್ಷದ ಮೊದಲ ದಿನ ಕಂಪನಿಗಳು ಪ್ರತಿ ಸಿಲಿಂಡರ್ ಮೇಲೆ 1.50 ರೂ. ಕಡಿತವನ್ನು ಘೋಷಿಸಿದೆ. ಹೊಸ ಬೆಲೆಗಳು ಇಂದಿನಿಂದ ಅಂದರೆ 2024 ರ ಹೊಸ ವರ್ಷದ ಮೊದಲ ದಿನದಿಂದಲೇ ಅನ್ವಯವಾಗುತ್ತವೆ. ಅಂದ ಹಾಗೆ, ಅಡುಗೆ ಅನಿಲದ ಸಿಲಿಂಡರ್ನ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಅಡುಗೆ ಅನಿಲದ ಸಿಲಿಂಡರ್ ಹಳೆಯ ದರದಲ್ಲಿಯೇ ದೊರೆಯಲಿದೆ.
|
4 |
+
ಬೆಲೆ ಇಳಿಕೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 1,755.50 ರೂ. ಆಗಿದೆ. ಈ ಮೊದಲು ಈ ದರ 1,757 ರೂ. ಇತ್ತು. ಹೀಗಾಗಿ ದೆಹಲಿಯಲ್ಲಿ ಒಂದೂವರೆ ರೂಪಾಯಿಯಷ್ಟು ಬೆಲೆ ಇಳಿಕೆಯಾದಂತಾಗಿದೆ. ಚೆನ್ನೈನಲ್ಲಿ, ಎಲ್ಪಿಜಿ ಬೆಲೆಯನ್ನು 4.50 ರೂ ಕಡಿತಗೊಳಿಸಲಾಗಿದೆ ಮತ್ತು 19 ಕೆಜಿ ಸಿಲಿಂಡರ್ ಬೆಲೆ ಈಗ 1,924.50 ರೂ. ಆಗಿದೆ.
|
5 |
+
ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ ಮೋದಿ
|
6 |
+
ಮುಂಬೈನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 1.50 ರೂಪಾಯಿ ಇಳಿದು 1,708.50 ರೂಪಾಯಿಗೆ ತಲುಪಿದೆ. ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ ಇಂದು 50 ಪೈಸೆ ಏರಿಕೆಯಾಗಿದ್ದು, 1,869 ರೂ.ಗೆ ಆಗಿದೆ.ಭಾರತೀಯ ತೈಲ ಕಂಪನಿಗಳು ಈ ಹಿಂದೆ ಡಿಸೆಂಬರ್ 22 ರಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದ್ದವು. ಅದಕ್ಕೂ ಮುನ್ನ ಡಿಸೆಂಬರ್ 1ರಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳು ಅಗ್ಗವಾಗಿದ್ದವು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಣೆ ಮಾಡುತ್ತವೆ.
|
7 |
+
ಆದರೆ ಗೃಹ ಬಳಕೆಯ 14 ಕೆಜಿ ಗ್ಯಾಸ್ ಸಿಲಿಂಡರ್ ದರ ಸ್ಥಿರವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಗೃಹಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು ಮುಂಬೈನಲ್ಲಿ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಬೆಲೆ 902.50 ರೂ., ದೆಹಲಿಯಲ್ಲಿ 903 ರೂ., ಚೆನ್ನೈನಲ್ಲಿ 918.50 ರೂ. ಕೋಲ್ಕತ್ತಾದಲ್ಲಿ 929 ರೂ. ಆಗಿದೆ.
|
8 |
+
ಜನವರಿ 1, 2019 ರಂದು, 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿತ್ತು. ಇಂಡಿಯನ್ ಆಯಿಲ್ನ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಎಲ್ಪಿಜಿ ದರವು ಡಿಸೆಂಬರ್ 1, 2018 ರಂದು ರೂ 809.5 ಆಗಿತ್ತು, ಇದು ಜನವರಿ 1, 2019 ರಂದು 689 ರೂಪಾಯಿಗೆ ಇಳಿದಿತ್ತು. ಅದೇ ರೀತಿ ಎಲ್ಲಾ ಮೆಟ್ರೋ ನಗರಗಳಲ್ಲಿ ಬೆಲೆ ಇಳಿಕೆಯಾಗ���ತ್ತು. ಅಂದರೆ ಆ ವರ್ಷ ಪ್ರತಿ ಸಿಲಿಂಡರ್ ಬೆಲೆ 120 ರೂ.ಗಳಷ್ಟು ಅಗವಾಗಿತ್ತು.
|
9 |
+
ಏಕದಿನ ಕ್ರಿಕೆಟ್ಗೆ ಡೇವಿಡ್ ವಾರ್ನರ್ ಗುಡ್ಬೈ
|
10 |
+
ವಿಮಾನ ಪ್ರಯಾಣ ಅಗ್ಗವಾಗಲಿದೆ!ಒಎಂಸಿ ಅಂದರೆ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಕೂಡಾ ಇಂದು ಹೊಸ ವರ್ಷದ ಸಂದರ್ಭದಲ್ಲಿ ವಿಮಾನ ಇಂಧನದ ಬೆಲೆಯನ್ನು ಇಳಿಸಿವೆ. ಪ್ರತಿ ಕಿಲೋ ಲೀಟರ್ಗೆ ಸುಮಾರು 4162.50 ರೂ.ಗಳಷ್ಟು ಇಳಿಕೆಯಾಗಿದೆ. ಸತತ ಮೂರನೇ ಕಡಿತದೊಂದಿಗೆ ವಿಮಾನ ದರಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿವೆ.
|
eesanje/url_47_201_3.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ಅತ್ಯಾಚಾರ ಆರೋಪ: ಬಿಜೆಪಿಯಿಂದ ಕಮಲ್ರಾವತ್ ಉಚ್ಛಾಟನೆ
|
2 |
+
ಚಂಪಾವತ್,ಜ.1-ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಜೆಪಿ ಉಚ್ಚಾಟಿತ ನಾಯಕ ಕಮಲ್ ರಾವತ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾವತ್ ಅವರನ್ನು ಚಂಪಾವತ್ನಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಯೋಗೇಶ್ ಉಪಾಧ್ಯಾಯ ತಿಳಿಸಿದ್ದಾರೆ.
|
3 |
+
ನಿತೀಶ್ಕುಮಾರ್ ಆಸ್ತಿ ಮೌಲ್ಯ 1.64 ಕೋಟಿ
|
4 |
+
ಈ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ಸರ್ಕಾರದ ಪ್ರತಿಕೃತಿ ದಹಿಸಿತು. ಪೊಲೀಸರು ರಾವತ್ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾವತ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿಯ ಚಂಪಾವತ್ ಜಿಲ್ಲಾಧ್ಯಕ್ಷ ನಿರ್ಮಲ್ ಮೆಹ್ರಾ ಹೇಳಿದ್ದಾರೆ.
|
eesanje/url_47_201_4.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ನಿತೀಶ್ಕುಮಾರ್ ಆಸ್ತಿ ಮೌಲ್ಯ 1.64 ಕೋಟಿ
|
2 |
+
ಪಾಟ್ನಾ, ಜ.1 (ಪಿಟಿಐ) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಸ್ತಿ ಮೌಲ್ಯ ಕೇವಲ 1.64 ಕೋಟಿ ರೂಪಾಯಿಯಂತೆ. ಸಂಪುಟ ಸಚಿವಾಲಯದ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳ ಪ್ರಕಾರ, ನಿತೀಶ್ ಅವರ ಬಳಿ 22,552 ರೂ ನಗದು ಮತ್ತು ವಿವಿಧ ಬ್ಯಾಂಕ್ ಖಾತೆಗಳಲ್ಲಿ 49,202 ರೂ.ಗಳನ್ನು ಹೊಂದಿದ್ದಾರೆ.
|
3 |
+
ಅವರು 11.32 ಲಕ್ಷ ಮೌಲ್ಯದ ಫೋರ್ಡ್ ಇಕೋಸ್ಪೋರ್ಟ್ ಕಾರು, 1.28 ಲಕ್ಷ ಮೌಲ್ಯದ ಎರಡು ಚಿನ್ನದ ಉಂಗುರಗಳು ಮತ್ತು ಬೆಳ್ಳಿಯ ಉಂಗುರ ಮತ್ತು 1.45 ಲಕ್ಷ ಮೌಲ್ಯದ 13 ಹಸುಗಳು ಮತ್ತು 10 ಕರುಗಳು, ಟ್ರೆಡ್ ಮಿಲ, ವ್ಯಾಯಾಮ ಸೈಕಲ್ ಮತ್ತು ಮೈಕ್ರೋವೇವ್ ಓವನ್ ಸೇರಿದಂತೆ ಇತರ ಚರ ಆಸ್ತಿಗಳನ್ನು ಹೊಂದಿದ್ದಾರೆ.
|
4 |
+
ಕಳೆದ ವರ್ಷ ಕುಮಾರ್ ಒಟ್ಟು ಆಸ್ತಿ 75.53 ಲಕ್ಷ ಎಂದು ಘೋಷಿಸಿದ್ದರು. ಇದೀಗ ಅವರ ಆಸ್ತಿ ಮೌಲ್ಯದಲ್ಲಿನ ಜಿಗಿತವು ಪ್ರಾಥಮಿಕವಾಗಿ ಅವರ ದೆಹಲಿಯ ಅಪಾರ್ಟ್ಮೆಂಟ್ ಮೌಲ್ಯದ ಏರಿಕೆಯಿಂದಾಗಿ ಆಗಿದೆ.ಕುಮಾರ್ ಅವರ ಸರ್ಕಾರವು ಪ್ರತಿ ಕ್ಯಾಲೆಂಡರ್ ವರ್ಷದ ಕೊನೆಯ ದಿನದಂದು ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿದೆ.
|
5 |
+
ಏಕದಿನ ಕ್ರಿಕೆಟ್ಗೆ ಡೇವಿಡ್ ವಾರ್ನರ್ ಗುಡ್ಬೈ
|
6 |
+
ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರು 2022-23ನೇ ಹಣಕಾಸು ವರ್ಷದಲ್ಲಿ ಒಟ್ಟು 4.74 ಲಕ್ಷ ರೂ. ರಾಜ್ಯ ಸರ್ಕಾರದಲ್ಲಿ ಸಚಿವರೂ ಆಗಿರುವ ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಅವರ ಆಸ್ತಿ 3.58 ಕೋಟಿ ರೂ.ಗಳಾಗಿದೆ.
|
eesanje/url_47_201_5.txt
ADDED
@@ -0,0 +1,3 @@
|
|
|
|
|
|
|
|
|
1 |
+
ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ ಮೋದಿ
|
2 |
+
ನವದೆಹಲಿ, ಜ 1 (ಪಿಟಿಐ) ಹೊಸ ವರ್ಷದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಸಮೃದ್ಧಿ, ಶಾಂತಿ ಮತ್ತು ಅದ್ಭುತ ಆರೋಗ್ಯವನ್ನು ಹಾರೈಸಿದ್ದಾರೆ. ಎಲ್ಲರಿಗೂ 2024 ರ ಭವ್ಯವಾದ ಶುಭಾಶಯಗಳು! ಈ ವರ್ಷ ಎಲ್ಲರಿಗೂ ಸಮೃದ್ಧಿ, ಶಾಂತಿ ಮತ್ತು ಅದ್ಭುತ ಆರೋಗ್ಯವನ್ನು ತರಲಿ ಎಂದು ಅವರು ಎಕ್ಸ್ ಮಾಡಿದ್ದಾರೆ.
|
3 |
+
ವರ್ಷದ ತಮ್ಮ ಕೊನೆಯ ಮನ್ ಕಿ ಬಾತ್ ರೇಡಿಯೋ ಪ್ರಸಾರದಲ್ಲಿ, ಪ್ರಧಾನಿಯವರು 2024 ರಲ್ಲೂ ಸ್ವಾವಲಂಬನೆಯ ಮನೋಭಾವವನ್ನು ಕಾಪಾಡಿಕೊಳ್ಳುವಂತೆ ದೇಶವಾಸಿಗಳನ್ನು ಒತ್ತಾಯಿಸಿದ್ದರು.
|
eesanje/url_47_201_6.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ರೇವ್ಪಾರ್ಟಿ ಮೇಲೆ ದಾಳಿ, ಡ್ರಗ್ಸ್ ಸೇವಿಸಿದ್ದ 80 ಮಂದಿ ಬಂಧನ
|
2 |
+
ಥಾಣೆ,ಡಿ.31- ಮಹಾರಾಷ್ಟ್ರದ ಥಾಣೆಯಲ್ಲಿ ನಿನ್ನೆ ತಡರಾತ್ರಿ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಸುಮಾರು 80 ಮಂದಿಯನ್ನು ಬಂಧಿಸಿದ್ದಾರೆ. ಪಾರ್ಟಿಯಲ್ಲಿ ಅಕ್ರಮವಾಗಿ ಡ್ರಗ್ಸ್ ಸೇವಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.
|
3 |
+
ಆಸ್ಕರ್ ಪ್ರಶಸ್ತಿ ಗೆದ್ದ ನಾಟು ನಾಟು ಸಾಂಗ್ ಮತ್ತು ಸಾಕ್ಷ್ಯಚಿತ್ರಕ್ಕೆ ಮೋದಿ ಮೆಚ್ಚುಗೆ
|
4 |
+
ರೇವ್ ಪಾರ್ಟಿಯಿಂದ ಎಲ್ಎಸ್ಡಿ, ಚರಸ್, ಎಕ್ಸ್ಟಾಸಿ ಮಾತ್ರೆಗಳು ಮತ್ತು ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರೇವ್ ಪಾರ್ಟಿಗಾಗಿ ನೂರಾರು ಯುವಕರಿಗೆ ಆಹ್ವಾನವನ್ನು ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ. ಪಾರ್ಟಿಯ ಇಬ್ಬರು ಸಂಘಟಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
|
eesanje/url_47_201_7.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಬಿಜೆಪಿ ಸೇರಿದ ಕೇರಳದ 50 ಕ್ರೈಸ್ತ ಕುಟುಂಬಗಳು
|
2 |
+
ತಿರುವನಂತಪುರಂ, ಡಿ.31 (ಪಿಟಿಐ) – ಕೇರಳದಲ್ಲಿ ಕೆಲ ದಿನಗಳಿಂದ ಕ್ರೈಸ್ತ ಸಮುದಾಯವನ್ನು ಓಲೈಸುತ್ತಿರುವ ಬಿಜೆಪಿ ಪಕ್ಷವು ರಾಜ್ಯದಲ್ಲಿ ಪಾದ್ರಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಸುಮಾರು 50 ಕುಟುಂಬಗಳು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.
|
3 |
+
ದಕ್ಷಿಣ ಕೇರಳದ ಪಥನಂತಿಟ್ಟ ಜಿಲ್ಲೆಯ ಆರ್ಥೊಡಾಕ್ಸ್ ಚರ್ಚ್ ನಿಲಕ್ಕಲ್ ಭದ್ರಾಸನಂನ ಕಾರ್ಯದರ್ಶಿ ಫಾದರ್ ಶೈಜು ಕುರಿಯನ್ ಸೇರಿದಂತೆ ಸುಮಾರು 50 ಕ್ರಿಶ್ಚಿಯನ್ ಕುಟುಂಬಗಳು ಕೇಂದ್ರ ಸಚಿವ ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿವೆ ಎಂದು ಕೇಸರಿ ಪಕ್ಷವು ಫೇಸ್ಬುಕ್ ಪೋಸ್ಟ್ ನಲ್ಲಿ ತಿಳಿಸಿದೆ.
|
4 |
+
ಮಧ್ಯ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಕೇರಳ ಕಾಂಗ್ರೆಸ್ (ಜೇಕಬï) ಬಣದ ಹಲವು ಮಂದಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಾಯಕತ್ವದಲ್ಲಿ ಅಭಿವೃದ್ಧಿಯ ದೂರದೃಷ್ಟಿಯ ವಿಧಾನಕ್ಕೆ ಅಲ್ಪಸಂಖ್ಯಾತರು ತನ್ನ ಶ್ರೇಣಿಗೆ ಸೇರಲು ಮನವಿಯನ್ನು ಪಕ್ಷವು ಕಾರಣವಾಗಿದೆ.
|
5 |
+
ಆಸ್ಕರ್ ಪ್ರಶಸ್ತಿ ಗೆದ್ದ ನಾಟು ನಾಟು ಸಾಂಗ್ ಮತ್ತು ಸಾಕ್ಷ್ಯಚಿತ್ರಕ್ಕೆ ಮೋದಿ ಮೆಚ್ಚುಗೆ
|
6 |
+
ಕಳೆದ ದಶಕದಲ್ಲಿ ಮೋದಿ ಸರ್ಕಾರವು ಅಭಿವೃದ್ಧಿಗೆ ಬಲವಾದ ಸಮರ್ಪಣೆಯನ್ನು ತೋರಿಸಿದೆ. ಇದು ಅಲ್ಪಸಂಖ್ಯಾತರನ್ನು ಬೆಂಬಲಿಸಲು ಮತ್ತು ಬಿಜೆಪಿಗೆ ಸೇರಲು ಪ್ರೇರೇಪಿಸುವ ಮಹತ್ವದ ಅಂಶವಾಗಿದೆ ಎಂದು ಪಕ್ಷವು ಹೇಳಿದೆ. ಸುಳ್ಳು ಪ್ರಚಾರದಿಂದ ಅಲ್ಪಸಂಖ್ಯಾತರನ್ನು ಪಕ್ಷದಿಂದ ದೂರವಿಡಬಹುದು ಎಂಬ ಕಲ್ಪನೆಯನ್ನು ಬಿಜೆಪಿ ಹೊರಹಾಕುತ್ತಿದೆ ಎಂದು ಹೇಳಿಕೊಳ್ಳಲಾಗಿದೆ.
|
eesanje/url_47_201_8.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಹೊಸ ವರ್ಷದಲ್ಲಿ ಭಾರಿ ಏರಿಕೆಯಾಗಲಿದೆಯಂತೆ ಚಿನ್ನದ ಬೆಲೆ..!
|
2 |
+
ಮುಂಬೈ, ಡಿ 31 (ಪಿಟಿಐ) ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಯ ನಿಧಾನಗತಿಯ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 70,000 ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
|
3 |
+
ಡಿಸೆಂಬರ್ ಆರಂಭದಲ್ಲಿ ಮಧ್ಯಪ್ರಾಚ್ಯದಲ್ಲಿ ಜಾಗತಿಕ ಉದ್ವಿಗ್ನತೆಗಳಿಂದಾಗಿ ಹಳದಿ ಲೋಹದ ಬೆಲೆಗಳು ಮತ್ತೆ ಗಗನಕ್ಕೇರಿದವು ಈ ವರ್ಷ ಚಿನ್ನದ ಬೆಲೆ ಅಸ್ಥಿರವಾಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಮೇ 4 ರಂದು ಪ್ರತಿ 10 ಗ್ರಾಂಗೆ ರೂ 61,845 ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಔನ್ಸ್ 2,083 ಅಮೆರಿಕನ್ ಡಾಲರ್ಗೆ ತಲುಪಿತ್ತು. ನಂತರ, ಹಳದಿ ಲೋಹವು ನವೆಂಬರ್ 16 ರಂದು 10 ಗ್ರಾಂಗೆ 61,914 ರೂ.ಗೆ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿತು ಎಂದು ಕಾಮ್ಟ್ರೆಂಡ್ಜ್ ಸಂಶೋಧನಾ ನಿರ್ದೇಶ ಕಜ್ಞಾನಶೇಖರ್ ತ್ಯಾಗರಾಜನ್ ಪಿಟಿಐಗೆ ತಿಳಿಸಿದರು.
|
4 |
+
ಅದರ ಸುರಕ್ಷಿತ-ಧಾಮದ ಮನವಿಯ ಪ್ರತಿಬಿಂಬದಲ್ಲಿ, ಡಿಸೆಂಬರ್ 4 ರಂದು ಚಿನ್ನದ ಬೆಲೆ 10 ಗ್ರಾಂಗೆ 64,063 ರೂ. ಮತ್ತು ಔನ್ಸ್ 2,140 ಡಾಲರ್ಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತು. ನಾವು 2024 ರಲ್ಲಿ ಮತ್ತೆ ಏರಿಕೆಯನ್ನು ನಿರೀಕ್ಷಿಸುತ್ತೇವೆ ಮತ್ತು ರೂಪಾಯಿ ಸ್ಥಿರವಾಗಿರಬೇಕಾದರೆ, ಚಿನ್ನವು ಸುಮಾರು 70,000 ರೂಪಾಯಿಗಳನ್ನು ತಲುಪುವ ಸಾಧ್ಯತೆಯಿದೆ.
|
5 |
+
ಭಾರತವು ಚುನಾವಣೆಗಳನ್ನು ಎದುರಿಸುತ್ತಿರುವಾಗ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರೀಕ್ಷೆಯಂತೆ ರೂಪಾಯಿ ದುರ್ಬಲಗೊಳ್ಳಬಹುದು. ತಮ್ಮ ಬಂಡವಾಳವನ್ನು ಹಗುರಗೊಳಿಸಿ, ಇದು ಚಿನ್ನದ ದೇಶೀಯ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಬಹುದು, ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
|
6 |
+
ಅಪ್ರಾಪ್ತೆ ಅಪಹರಿಸಿ ನಿರಂತರ ಅತ್ಯಾಚಾರ ಮಾಡಿದ್ದ ಆರೋಪಿ ಅರೆಸ್ಟ್
|
7 |
+
ಕೊಟಕ್ ಸೆಕ್ಯುರಿಟೀಸ್ ಉಪಾಧ್ಯಕ್ಷ ರವೀಂದ್ರ ರಾವ್ ಅವರು, ಚಿಲ್ಲರೆ ಆಭರಣ ಖರೀದಿಯು ಭಾರತ ಮತ್ತು ಚೀನಾದಲ್ಲಿನ ಹೆಚ್ಚಿನ ದೇಶೀಯ ಬೆಲೆಗಳಿಂದ ಹೆಡ್ವಿಂಡ್ಗಳನ್ನು ಎದುರಿಸಬಹುದು ಆದರೆ ಪ್ರಸ್ತುತ ಆವೇಗ ಮುಂದುವರಿದರೆ ಕೇಂದ್ರ ಬ್ಯಾಂಕ್ಗಳ ಬೇಡಿಕೆ ಕಳೆದ ವರ್ಷದ ದಾಖಲೆಯನ್ನು ಮೀರಬಹುದು ಎಂದಿದ್ದಾರೆ. ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು 22 ವರ್ಷಗಳ ಗರಿಷ್ಠಕ್ಕೆ ಏರಿಸಿದ್ದರಿಂದ, ಸಾಲಿಡ್ ಬಾರ್ ಮತ್ತು ನಾಣ್ಯ ಬೇಡಿಕೆಯೊಂದಿಗೆ ದೃಢವಾದ ಸೆಂಟ್ರಲ್ ಬ್ಯಾಂಕ್ ಖರೀದಿಯು ಬಾಂಡ್ ಇಳುವರಿ ಮತ್ತು ವರ್ಷವಿಡೀ ಬಲವಾದ ಅಮೆರಿಕ ಡಾಲರ್ ನಡುವೆ ಚಿನ್ನದ ಬೆಲೆಗೆ ಸಹಾಯ ಮಾಡಿತು ಎಂದು ರಾವ್ ಹೇಳಿದ್ದಾರೆ.
|
8 |
+
ದರಗಳು ಸ್ವಲ್ಪ ಸಮಯದವರೆಗೆ ಹೆಚ್ಚಿದ್ದರೂ ಸಹ, ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸರ, ನಿಧಾನಗತಿಯ ಜಾಗತಿಕ ಬೆಳವಣಿಗೆ ಮತ್ತು ಆರ್ಥಿಕ ಅನಿಶ್ಚಿತತೆಗಳು ಹಳದಿ ಲೋಹದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.
|
eesanje/url_47_201_9.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಹೊಸ ವರ್ಷದ ಆರಂಭದ ದಿನವೇ ಹೊಸ ಇತಿಹಾಸ ಬರೆಯಲು ಇಸ್ರೋ ಸಜ್ಜು
|
2 |
+
ಶ್ರೀಹರಿಕೋಟಾ, ಡಿ 31 (ಪಿಟಿಐ) ನಾಳೆ ಧ್ರುವೀಯ ಉಪಗ್ರಹ ಉಡಾವಣಾ ವಾಹನ ರಾಕೆಟ್ನಲ್ಲಿ ಕಪ್ಪು ಕುಳಿಗಳಂತಹ ಆಕಾಶ ವಸ್ತುಗಳ ಒಳನೋಟಗಳನ್ನು ನೀಡುವ ತನ್ನ ಮೊದಲ ಎಕ್ಸ್ -ರೇ ಪೋಲಾರಿಮೀಟರ್ ಉಪಗ್ರಹವನ್ನು ಉಡಾವಣೆ ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲು ಇಸ್ರೋ ಸಜ್ಜಾಗಿದೆ.
|
3 |
+
ಅಕ್ಟೋಬರ್ನಲ್ಲಿ ಗಗನ್ಯಾನ್ ಟೆಸ್ಟ್ ವೆಹಿಕಲ್ ಡಿ1 ಮಿಷನ್ ಯಶಸ್ವಿಯಾದ ನಂತರ ಈ ಉಡಾವಣೆಯಾಗುತ್ತಿರುವುದು ವಿಶೇಷವಾಗಿದೆ. ಪಿಎಸ್ಎಲ್ವಿ ಸಿ58 ರಾಕೆಟ್ ತನ್ನ 60 ನೇ ಕಾರ್ಯಾಚರಣೆಯಲ್ಲಿ, ಪ್ರಾಥಮಿಕ ಪೇಲೋಡ್ ಎಕ್ಸ್ಪೋ ಸ್ಯಾಟ್ ಮತ್ತು 10 ಇತರ ಉಪಗ್ರಹಗಳನ್ನು ಕಡಿಮೆ ಭೂಮಿಯ ಕಕ್ಷೆಯಲ್ಲಿ ನಿಯೋಜಿಸಲು ಸಾಗಿಸುತ್ತದೆ.
|
4 |
+
ಜನವರಿಯಲ್ಲಿ ಚೆನ್ನೈನಿಂದ ಪೂರ್ವಕ್ಕೆ 135 ಕಿಮೀ ದೂರದಲ್ಲಿರುವ ಈ ಬಾಹ್ಯಾಕಾಶ ಪೋರ್ಟ್ ಇಂದು ಬೆಳಿಗ್ಗೆ 8.10 ಕ್ಕೆ ಪಿಎಸ್ಎಲ್ವಿ -ಸಿ 58 ಗೆ ಕೌಂಟ್ಡೌನ್ ಪ್ರಾರಂಭವಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಎಕ್ಸ್ -ರೇ ಪೋಲಾರಿಮೀಟರ್ ಉಪಗ್ರಹವು ಬಾಹ್ಯಾಕಾಶದಲ್ಲಿ ತೀವ್ರವಾದ ಎಕ್ಸ್-ರೇ ಮೂಲಗಳ ಧ್ರುವೀಕರಣವನ್ನು ತನಿಖೆ ಮಾಡುವ ಗುರಿಯನ್ನು ಹೊಂದಿದೆ. ಇದು ಆಕಾಶ ಮೂಲದಿಂದ ಎಕ್ಸ್ -ರೇ ಹೊರಸೂಸುವಿಕೆಯ ಬಾಹ್ಯಾಕಾಶ-ಆಧಾರಿತ ಧ್ರುವೀಕರಣ ಮಾಪನಗಳಲ್ಲಿ ಸಂಶೋಧನೆಯನ್ನು ಕೈಗೊಳ್ಳುತ್ತಿರುವ ಮೊದಲ ವೈಜ್ಞಾನಿಕ ಉಪಗ್ರಹವಾಗಿದೆ ಎಂದು ಇಸ್ರೋ ಹೇಳಿದೆ.
|
5 |
+
ರಾಜಕೀಯ ಲಾಭಕ್ಕಾಗಿ ರಾಮನ ಹೆಸರು ದುರ್ಬಳಕೆ : ಸಚಿವ ಡಿ.ಸುಧಾಕರ್
|
6 |
+
ಇಸ್ರೋ ಜೊತೆಗೆ, ಯುಎಸ್ ಮೂಲದ ನ್ಯಾಷನಲ್ ಏರೋನಾಟಿಕ್ಸ್ ಸ್ಪೇಸ್ ಏಜೆನ್ಸಿ (ನಾಸಾ) ಇದೇ ರೀತಿಯ ಅಧ್ಯಯನವನ್ನು ನಡೆಸುತ್ತಿದೆ. ಇಮೇಜಿಂಗ್ ಮತ್ತು ಟೈಮ್ ಡೊಮೈನ್ ಅಧ್ಯಯನಗಳ ಮೇಲೆ ಕೇಂದ್ರೀಕರಿಸುವ ಬಾಹ್ಯಾಕಾಶ-ಆಧಾರಿತ ಎಕ್ಸ್ -ರೇ ಖಗೋಳಶಾಸ್ತ್ರವನ್ನು ಭಾರತದಲ್ಲಿ ಸ್ಥಾಪಿಸಲಾಗಿದೆ.
|
7 |
+
ನಾಳೆ ಮಿಷನ್ ವೈಜ್ಞಾನಿಕ ಭ್ರಾತೃತ್ವಕ್ಕೆ ಒಂದು ಪ್ರಮುಖ ಮೌಲ್ಯವರ್ಧನೆಯಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಎಕ್ಸ್ -ರೇ ಧ್ರುವೀಕರಣವು ಆಕಾಶ ಮೂಲಗಳ ವಿಕಿರಣ ಕಾರ್ಯವಿಧಾನ ಮತ್ತು ರೇಖಾಗಣಿತವನ್ನು ಪರೀಕ್ಷಿಸಲು ನಿರ್ಣಾಯಕ ರೋಗನಿರ್ಣಯ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.
|
eesanje/url_47_202_1.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಲಖ್ಬೀರ್ ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್
|
2 |
+
ನವದೆಹಲಿ, ಡಿ.31 (ಪಿಟಿಐ) ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ ನ್ಯಾಶನಲ್ನ ಕೆನಡಾ ಮೂಲದ ಕಾರ್ಯಕರ್ತ ಲಖ್ಬೀರ್ ಸಿಂಗ್ ಅಲಿಯಾಸ್ ಲಾಂಡಾ ಅವರನ್ನು ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಸರ್ಕಾರವು ವೈಯಕ್ತಿಕ ಭಯೋತ್ಪಾದಕ ಎಂದು ಘೋಷಿಸಿದೆ.
|
3 |
+
ಅಧಿಕೃತ ಅಧಿಸೂಚನೆಯ ಪ್ರಕಾರ, ಪಂಜಾಬ್ ಪೊಲೀಸ್ನ ಗುಪ್ತಚರ ಶಾಖೆಯ ಪ್ರಧಾನ ಕಛೇರಿಯ ಮೇಲೆ ಮೇ 2022 ರ ರಾಕೆಟ್ ಚಾಲಿತ ಗ್ರೆನೇಡ್ ದಾಳಿಯಲ್ಲಿ ಸಿಂಗ್ ಭಾಗಿಯಾಗಿದ್ದನು, ಜೊತೆಗೆ ದೇಶದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಗಡಿಯುದ್ದಕ್ಕೂ ಐಇಡಿಗಳು, ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಪೋಟಕಗಳನ್ನು ಪೂರೈಸಿದ್ದ ಎನ್ನಲಾಗಿದೆ.
|
4 |
+
ಸಿಂಗ್ ಪಂಜಾಬ್ನ ತರ್ನ್ ತರನ್ ಜಿಲ್ಲೆಯ ಹರಿಕೆಯಿಂದ ಬಂದವರು ಮತ್ತು ಪ್ರಸ್ತುತ ಕೆನಡಾದ ಆಲ್ಬರ್ಟಾದ ಎಡ್ಮಂಟನ್ನಲ್ಲಿ ನೆಲೆಸಿದ್ದಾರೆ. ಅವರು ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ ನ್ಯಾಶನಲ್ನ ಕಾರ್ಯಕರ್ತರಾಗಿದ್ದಾರೆ. ಭಯೋತ್ಪಾದನಾ ಘಟಕಗಳನ್ನು ಸಂಗ್ರಹಿಸುವುದು, ಸುಲಿಗೆ, ಹತ್ಯೆಗಳು, ಐಇಡಿಗಳನ್ನು ನೆಡುವುದು, ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಪಂಜಾಬ್ ಮತ್ತು ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಹಣ ಅಥವಾ ಆದಾಯವನ್ನು ಬಳಸುವುದಕ್ಕೆ ಸಂಬಂಧಿಸಿದ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಅವರು ಭಾಗಿಯಾಗಿದ್ದಾರೆ.
|
5 |
+
ಮುಂಬೈನಲ್ಲಿ 2.4 ಕೋಟಿ ರೂ ಮೌಲ್ಯದ ಕಳ್ಳಸಾಗಣೆ ಸಿಗರೇಟ್ ದಾಸ್ತಾನು ವಶಕ್ಕೆ
|
6 |
+
ಸಿಂಗ್ ಮತ್ತು ಅವರ ಸಹಚರರು ಭಾರತದ ವಿವಿಧ ಭಾಗಗಳಲ್ಲಿ ಉದ್ದೇಶಿತ ಹತ್ಯೆಗಳು, ಸುಲಿಗೆಗಳು ಮತ್ತು ಇತರ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವ ಮೂಲಕ ಪಂಜಾಬ್ನಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡಲು ಪಿತೂರಿ ನಡೆಸುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ. ಅವರ ವಿರುದ್ಧ ಮುಕ್ತ ವಾರಂಟ್ ಮತ್ತು ಲುಕ್ ಔಟ್ ಸುತ್ತೋಲೆಯನ್ನೂ ಹೊರಡಿಸಲಾಗಿದೆ.
|
7 |
+
ಲಖ್ಬೀರ್ ಸಿಂಗ್ ಲಾಂಡಾ ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ನಂಬುತ್ತದೆ ಮತ್ತು ಲಖ್ಬೀರ್ ಸಿಂಗ್ ಲಾಂಡಾ ಅವರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ನಾಲ್ಕನೇ ಶೆಡ್ಯೂಲ್ನಲ್ಲಿ ಭಯೋತ್ಪಾದಕ ಎಂದು ಸೇರಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
|
eesanje/url_47_202_10.txt
ADDED
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಶ್ರೀರಾಮನೂರಿನಲ್ಲಿ ಮೋದಿ ಮಿಂಚಿನ ಸಂಚಲನ
|
2 |
+
ಅಯೋಧ್ಯೆ (ಉತ್ತರ ಪ್ರದೇಶ),ಡಿ.30- ಹಿಂದೂಗಳ ಆರಾಧ್ಯದೈವ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ವಿವಿಧ ಅಭಿವೃದ್ಧಿ ಯೋಜನೆ ಗಳಿಗೆ ಚಾಲನೆ ನೀಡುವ ಮೂಲಕ ಲೋಕಸಭಾ ಚುನಾವಣೆಗೆ ಕಹಳೆ ಮೊಳಗಿಸಿದರು.
|
3 |
+
ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹಿಂದಿ ಹೃದಯ ಭಾಗಗಳಾದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಘಡದಲ್ಲಿ ಬಿಜೆಪಿ ಸ್ಪಷ್ಟ ಜನಾದೇಶ ಪಡೆದು ಅಕಾರ ಹಿಡಿದಿತ್ತು. ಇದೀಗ ದೇಶದ ರಾಜಕಾರಣದ ದಿಕ್ಕುದೆಸೆಯನ್ನು ನಿರ್ಧರಿಸುವ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಮೋದಿಯವರು ಮೆಗಾ ರೋಡ್ ಶೋ ನಡೆಸುವ ಮೂಲಕ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಿದರು.
|
4 |
+
ದೆಹಲಿಯಿಂದ ವಿಶೇಷ ವಿಮಾನದಲ್ಲಿ ನೂತನವಾಗಿ ನಿರ್ಮಿಸಿರುವ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಉತ್ತರಪ್ರದೇಶದ ರಾಜ್ಯಪಾಲರಾದ ಆನಂದಿ ಬಿನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಮತ್ತಿತರರು ಆತ್ಮೀಯವಾಗಿ ಬರಮಾಡಿಕೊಂಡರು.
|
5 |
+
ಭಾರತದ ಆಟಗಾರರ ಬರುವಿಕೆಯನ್ನು ಕಾಯುತ್ತದೆಯಂತೆ ಪಾಕ್
|
6 |
+
ವಿಮಾನ ನಿಲ್ದಾಣದಿಂದ ಸುಮಾರು 15 ಕಿ.ಮೀವರೆಗೂ ಮೋದಿಯವರು ಮೆಗಾ ರೋಡ್ ಶೋ ನಡೆಸಿದರು. ಪ್ರಧಾನಿಯವರನ್ನು ಕಣ್ತುಂಬಿಸಿಕೊಳ್ಳಲು ದೇಗುಲ ನಗರಿ ಅಯೋಧ್ಯೆಗೆ ಬೆಳಗಿನಿಂದಲೇ ಭಾರೀ ಪ್ರಮಾಣದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ರಸ್ತೆಯ ಇಕ್ಕೆಲಗಳಲ್ಲೂ ಬಿಜೆಪಿ ಬಾವುಟ ಮತ್ತು ಕೇಸರಿ ರುಮಾಲು ಧರಿಸಿದ್ದ ಕಾರ್ಯಕರ್ತರು ಮೋದಿ ಮೋದಿ ಎನ್ನುತ್ತಲೇ ಜಯಕಾರದ ಘೋಷಗಳನ್ನು ಮೊಳಗಿಸಿದರು.
|
7 |
+
15 ಕಿ.ಮೀವರೆಗೂ ಸಾಗಿಬಂದ ಮೆರವಣಿಗೆಯು ಪರೋಕ್ಷವಾಗಿ ಚುನಾವಣಾ ಅಖಾಡಕ್ಕೆ ಸಿದ್ದವಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸುವಂತಿತ್ತು. ಕಾರ್ಯಕರ್ತರು, ಅಭಿಮಾನಿಗಳು ಮೋದಿ ಅವರಿಗೆ ಅಭಿಮಾನದಿಂದ ಹೂಮಳೆ ಸುರಿಸಿದರು. ರೋಡ್ ಶೋ ಮುಗಿದ ನಂತರ ಮೋದಿ ಅವರು 15,000 ಕೋಟಿ ರೂ. ಮೊತ್ತದ ಹಲವು ಮೂಲ ಸೌಕರ್ಯ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.
|
8 |
+
ಪ್ರಧಾನಿ ಮೋದಿ ಅವರ ಆಗಮನದ ಮೂಲಕ ಅಯೋಧ್ಯಾ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಅಂತಿಮ ಸಿದ್ದತೆಗಳಿಗೆ ಶರವೇಗ ಸಿಕ್ಕಂತಾಗಿದೆ. ಪ್ರಧಾನಿ ಮೋದಿ ಅವರು ನವೀಕರಣಗೊಂಡಿರುವ ಹಾಗೂ ಅಯೋಧ್ಯಾ ಧಾಮ್ ಜಂಕ್ಷನ್ ಎಂದು ಮರು ನಾಮಕರಣಗೊಂಡಿರುವ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಿದರು.
|
9 |
+
ಇದೇ ವೇಳೆ ಅಮೃತ ಭಾರತ್ ಮತ್ತು ¾ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಅಯೋಧ್ಯೆಯಲ್ಲಿ ನೂತನವಾಗಿ 1450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಯೋಧ್ಯಾ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಈ ವಿಮಾನ ನಿಲ್ದಾಣದ ಟರ್ಮಿನಲ್ 6,500 ಚದರ ಮೀ���ರ್ ಇದ್ದು, ಅಯೋಧ್ಯಾ ಶ್ರೀರಾಮ ಮಂದಿರವನ್ನೇ ಹೋಲುವಂತಿದೆ. ಎಲ್ಇಡಿ ಲೈಟಿಂಗ್, ಮಳೆ ನೀರು ಕೊಯ್ಲು ಸೇರಿದಂತೆ ಹಲವು ಸೌಲಭ್ಯಗಳಿವೆ.
|
10 |
+
ಜರ್ಮನ್ ಆರೈಕೆಯಲ್ಲಿರುವ ಅರಿಹಾ ಶಾ ಜತೆ ದೀಪಾವಳಿ ಆಚರಿಸಿದ ಭಾರತೀಯ ಅಧಿಕಾರಿಗಳು
|
11 |
+
240 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಿಸಿರುವ ಅಯೋಧ್ಯಾ ಧಾಮ ರೈಲು ನಿಲ್ದಾಣ ಉದ್ಘಾಟನೆ. ಈ ರೈಲು ನಿಲ್ದಾಣ 3 ಮಹಡಿಗಳನ್ನು ಹೊಂದಿದ್ದು, ಲಿಫ್ಟ್, ಎಸ್ಕಲೇಟರ್, ಫುಡ್ ಕೋರ್ಟ್ ಸೇರಿದಂತೆ ಹಲವು ಸೌಲಭ್ಯಗಳಿವೆ. ಅಲ್ಲದೇ ಅಯೋಧ್ಯೆಯಲ್ಲಿ ನವೀಕರಣ ಮಾಡಲಾದ 4 ರಸ್ತೆಗಳು, ಮೆಡಿಕಲ್ ಕಾಲೇಜು, ತ್ಯಾಜ್ಯ ಸಂಸ್ಕರಣಾ ಘಟಕಗಳ ಉದ್ಘಾಟನೆಯನ್ನು ನೆರವೇರಿಸಿದರು. 2180 ಕೋಟಿ ರೂ. ವೆಚ್ಚದ ಗ್ರೀನ್ ಫೀಲ್ಡ್ ಟೌನ್ ಶಿಪ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ, 300 ಕೋಟಿ ರೂ. ವೆಚ್ಚದ ವಶಿಷ್ಟ್ಯ ಕುಂಜ ವಸತಿ ಯೋಜನೆಗೂ ಪ್ರಧಾನಿ ಮೋದಿ ಅಡಿಗಲ್ಲು ಹಾಕಿದರು.
|
eesanje/url_47_202_11.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ವಿಶ್ವಮಾನ್ಯ ನಗರವಾಗಲಿದೆ ಶ್ರೀರಾಮನ ಅಯೋಧ್ಯೆ : ಮೋದಿ
|
2 |
+
ನವದೆಹಲಿ,ಡಿ.30- ಅಯೋಧ್ಯೆ ನಗರದಲ್ಲಿ ವಿಶ್ವ ದರ್ಜೆಯ ಮೂಲ ಸೌಕರ್ಯಗಳನ್ನು ನಿರ್ಮಿಸಲು ತಮ್ಮ ಸರ್ಕಾರ ತೀರ್ಮಾನಿಸಿದ್ದು, ಆ ವಿಚಾರದಲ್ಲಿ ಬದ್ಧವಾಗಿದೆ ಎಂದು ಅಯೋಧ್ಯೆ ಭೇಟಿಗೂ ಮುನ್ನ ಮೋದಿ ತಿಳಿಸಿದ್ದಾರೆ. ನಮ್ಮ ಸರ್ಕಾರವು ವಿಶ್ವ ದರ್ಜೆಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಸಂಪರ್ಕವನ್ನು ಸುಧಾರಿಸಲು ಮತ್ತು ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ನಿರ್ಧರಿಸಿದ್ದು ಅದಕ್ಕೆ ಬದ್ಧವಾಗಿದೆ ಎಂದರು.
|
3 |
+
ಹೊಸ ವರ್ಷದಲ್ಲೂ ಮುಂದುವರೆಯಲಿದೆಯಂತೆ ಇಸ್ರೇಲ್-ಹಮಾಸ್ ಯುದ್ಧ
|
4 |
+
ಈ ದಿಸೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿಮಾನ ನಿಲ್ದಾಣ ಹಾಗೂ ಮರು ಅಭಿವೃದ್ಧಿ ಪಡಿಸಿದ ರೈಲು ನಿಲ್ದಾಣವನ್ನು ನಾಳೆ ಉದ್ಘಾಟಿಸಲಿದ್ದೇನೆ. ಇದರೊಂದಿಗೆ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವ ಭಾಗ್ಯ ನನ್ನದಾಗಿದೆ. ಇದು ಅಯೋಧ್ಯೆ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿರುವ ನನ್ನ ಕುಟುಂಬ ಸದಸ್ಯರ ಜೀವನವನ್ನು ಸುಲಭಗೊಳಿಸಲಿದೆ ಎಂದು ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಉಲ್ಲೇಖಿಸಿದ್ದಾರೆ.
|
eesanje/url_47_202_12.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ನಕಲಿ ಎಂಬಿಎ ಕೋರ್ಸ್ ಬಗ್ಗೆ ಇರಲಿ ಎಚ್ಚರ
|
2 |
+
ನವದೆಹಲಿ,ಡಿ.30- ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ದೇಶದಲ್ಲಿ ನಡೆಯುತ್ತಿರುವ ನಕಲಿ ಎಂಬಿಎ ಕಾರ್ಯಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡುವ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ನಿಯಂತ್ರಣ ಸಂಸ್ಥೆಯಿಂದ ಸರಿಯಾದ ಅನುಮೋದನೆಯಿಲ್ಲದೆ 10 ದಿನಗಳ ಎಂಬಿಎ ಕೋರ್ಸ್ಗಳನ್ನು ನೀಡುತ್ತಿರುವ ಪ್ರೇರಕ ಭಾಷಣಕಾರರು ಮತ್ತು ಪ್ರಭಾವಿಗಳ ವಿರುದ್ಧ ತಾಂತ್ರಿಕ ಸಂಸ್ಥೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.
|
3 |
+
ಸ್ನಾತಕೋತ್ತರ ಪದವಿಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಎಐಸಿಟಿಇ ಎರಡು ವರ್ಷಗಳ ಪದವಿಯಾಗಿದ್ದು, ಉನ್ನತ ಕೌಶಲ್ಯ ಹೊಂದಿರುವ ವಿದ್ಯಾರ್ಥಿಗಳನ್ನು ತಯಾರಿಸಲು ವಿನ್ಯಾಸಗೊಳಿಸಲಾಗಿದೆ, ಮಧ್ಯಸ್ಥಗಾರರನ್ನು ಜಾಗರೂಕರಾಗಿರಲು ಕೇಳಿಕೊಂಡಿದೆ. ಕೆಲವು ಪ್ರೇರಕ ಭಾಷಣಕಾರರು ಮತ್ತು ಪ್ರಭಾವಿಗಳು 10-ದಿನಗಳ ಕ್ರ್ಯಾಶ್ ಕೋರ್ಸ್ ಅನ್ನು ನೀಡುತ್ತಿದ್ದಾರೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಗಮನಕ್ಕೆ ಬಂದಿದೆ. ಇಂತಹ ಕ್ರ್ಯಾಶ್ ಕೋರ್ಸ್ ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ ಎಂದು ಎಐಸಿಟಿಇ ತಿಳಿಸಿದೆ.
|
4 |
+
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಯಾವುದೇ ಸಂಸ್ಥೆ, ವಿಶ್ವವಿದ್ಯಾಲಯಗಳು ಎಂಬಿಎ ಅಥವಾ ಮ್ಯಾನೇಜ್ಮೆಂಟ್ ಕೋರ್ಸ್ಗಳು (ಸ್ನಾತಕೋತ್ತರ ಪದವಿಗೆ ದಾರಿ) ಸೇರಿದಂತೆ ಎಐಸಿಟಿಇಯಿಂದ ಅನುಮೋದನೆ ಪಡೆಯದೆ ತಾಂತ್ರಿಕ ಕೋರ್ಸ್ಗಳನ್ನು ನಡೆಸುವಂತಿಲ್ಲ.
|
5 |
+
ರಾಮಮಂದಿರ ಉದ್ಘಾಟನೆಯಿಂದ ದೇಶದಲ್ಲಿ 50,000 ಕೋಟಿ ರೂ. ವಹಿವಾಟು : ಸಿಎಐಟಿ
|
6 |
+
ಎಂಬಿಎ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಕೋರ್ಸ್ ಆಗಿದ್ದು, ವ್ಯವಹಾರ ಮತ್ತು ನಿರ್ವಹಣೆಯ ವಿವಿಧ ಅಂಶಗಳಲ್ಲಿ ಸುಧಾರಿತ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವ ವ್ಯಕ್ತಿಗಳನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಅಧಿಸೂಚನೆಯನ್ನು ಸೇರಿಸಲಾಗಿದೆ. ಕೇವಲ 10 ದಿನಗಳಲ್ಲಿ ಅದನ್ನು ಪೂರ್ಣಗೊಳಿಸಲಾಗುವುದಿಲ್ಲ. ಆದ್ದರಿಂದ, ಅಂತಹ ವ್ಯಕ್ತಿಗಳು ಮತ್ತು ಸಂಸ್ಥೆಗಳು ನೀಡುವ ಎಂಬಿಎಗೆ ಮಾನ್ಯತೆ ಇಲ್ಲ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ.
|
eesanje/url_47_202_2.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ದೇಶಿಯ ತಿಂಡಿಗೆ ಮನಸೋತ ಜಪಾನ್ ರಾಯಭಾರಿ
|
2 |
+
ನವದೆಹಲಿ,ಡಿ.31- ದೇಶಿಯ ತಿಂಡಿ ತಿನಿಸುಗಳಿಗೆ ಮನ ಸೋಲದವರಿಲ್ಲ. ದೇಶ ವಿದೇಶಗಳ ಗಣ್ಯರಿಗ ಭಾರತೀಯರ ಭಕ್ಷ್ಯ ಭೋಜನವೆಂದರೆ ಎಲ್ಲಿಲ್ಲದ ಪ್ರೀತಿ. ಇದೀಗ ಅಂತಹ ಗಣ್ಯರ ಸಾಲಿಗೆ ಭಾರತದ ಜಪಾನ್ ರಾಯಭಾರಿ ಹಿರೋಷಿ ಸುಜುಕಿ ಸೇರ್ಪಡೆಗೊಂಡಿದ್ದಾರೆ.
|
3 |
+
ಹಿರೋಷಿ ಸುಜುಕಿ, ಅವರು ಭಾರತೀಯ ಭಕ್ಷ್ಯಗಳನ್ನು ಆನಂದಿಸುತ್ತ ಅವರು ವಾರಣಾಸಿಯಲ್ಲಿ ಬೀದಿ ಆಹಾರ ಸೇವಿಸುತ್ತಿರುವ ಎರಡು ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಾರಣಾಸಿಯಲ್ಲಿ ಸ್ಟ್ರೀಟ್ ಫುಡ್ ಎಂಜಾಯ್ ಮಾಡುತ್ತಿದ್ದೇನೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿರುವ ಅವರು ನಗರದ ಜನನಿಬಿಡ ಲೇನ್ನಲ್ಲಿ ಕಚೋರಿ ಮತ್ತು ಜಿಲೇಬಿ ಸೇವಿಸುತ್ತಿರುವುದನ್ನು ಕಾಣಬಹುದಾಗಿದೆ.
|
4 |
+
!../
|
5 |
+
ನಾನು ವಾರಣಾಸಿಯಲ್ಲಿ ಕಚೋರಿಯನ್ನು ಸವಿಯುತ್ತಿದ್ದೇನೆ, ಎಂದು ಕಚೋರಿ ಬಾಯಿಗಿಡುವ ಮೊದಲು ಹೇಳಿರುವ ಅವರು ತಿಂದ ನಂತರ ಇದು ತುಂಬಾ ಚೆನ್ನಾಗಿದೆ ಎಂದು ಹೇಳಿಕೊಂಡಿದ್ದಾರೆ. ಎರಡನೇ ವೀಡಿಯೋದಲ್ಲಿ, ಆಮೇಲೆ ನಾನು ಕೂಡ ಜಿಲೇಬಿಯನ್ನು ಸವಿಯುತ್ತೇನೆ ಎಂದು ಘೋಷಿಸಿಕೊಂಡಿರುವುದು ಇದೀಗ ಭಾರಿ ವೈರಲ್ ಆಗಿದೆ.
|
6 |
+
ಇಬ್ಬರ ಸಾವಿಗೆ ಕಾರಣನಾಗಿದ್ದ ವಾಟರ್ ಟ್ಯಾಂಕ್ ಚಾಲಕನಿಗೆ 1 ವರ್ಷ ಜೈಲು
|
7 |
+
ಅವರು ತಮ್ಮ ಪತ್ನಿ ಐಕೊ ಸುಜುಕಿ ಅವರೊಂದಿಗೆ ಎಕ್ಸ್ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದು, ನಾವು ವಾರಣಾಸಿಯಲ್ಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.
|
eesanje/url_47_202_3.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಬಿಜೆಪಿಯ ಸುಳ್ಳುಗಳು ಪ್ರಬಲವಾಗಿವೆ : ಖರ್ಗೆ
|
2 |
+
ನವದೆಹಲಿ, ಡಿ 31 (ಪಿಟಿಐ) – 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಗಳ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದು, ಬಿಜೆಪಿಯ ಸುಳ್ಳುಗಳು ಪ್ರಬಲವಾಗಿವೆ ಎಂದು ಆರೋಪಿಸಿದ್ದಾರೆ.
|
3 |
+
ಎಕ್ಸ್ನಲ್ಲಿ ಹಿಂದಿಯಲ್ಲಿ ಬರೆದಿರುವ ಪೋಸ್ಟ್ನಲ್ಲಿ ಖರ್ಗೆ ಅವರು, ನರೇಂದ್ರ ಮೋದಿ ಜಿ, ಇಂದು 2023 ರ ಕೊನೆಯ ದಿನ. ನೀವು 2022 ರವರೆಗೆ ಪ್ರತಿ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಹೇಳಿದ್ದೀರಿ. ಪ್ರತಿಯೊಬ್ಬ ಭಾರತೀಯನಿಗೆ ಮನೆ ಮತ್ತು ದಿನದ 24 ಗಂಟೆ ವಿದ್ಯುತ್ ಇರುತ್ತದೆ. ಆರ್ಥಿಕತೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿ ಪರಿವರ್ತನೆಯಾಗಲಿದೆ ಎಂದು ಭರವಸೆ ನೀಡಿದ್ದೀರಾ ಆದರೆ, ಇದೆಲ್ಲ ನಡೆಯಲಿಲ್ಲ ಬಿಜೆಪಿಯ ಸುಳ್ಳುಗಳು ಅತ್ಯಂತ ಪ್ರಬಲವೆಂದು ಪ್ರತಿಯೊಬ್ಬ ಭಾರತೀಯರಿಗೂ ತಿಳಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
|
4 |
+
ಇಬ್ಬರ ಸಾವಿಗೆ ಕಾರಣನಾಗಿದ್ದ ವಾಟರ್ ಟ್ಯಾಂಕ್ ಚಾಲಕನಿಗೆ 1 ವರ್ಷ ಜೈಲು
|
5 |
+
ಆರ್ಥಿಕತೆ ಮತ್ತು ರೈತರ ಬಗ್ಗೆ ಅದರ ನೀತಿಗಳ ಬಗ್ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ದಶವಾರ್ಷಿಕ ಜನಗಣತಿ ನಡೆಸದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜನಗಣತಿ ವಿಳಂಬದ ಕುರಿತು ಪೋಸ್ಟ್ಗೆ ಪ್ರತಿಕ್ರಿಯಿಸಿದ ರಮೇಶ್, 2021 ಕ್ಕೆ ಕೊನೆಯದಾಗಿ ದಶವಾರ್ಷಿಕ ಜನಗಣತಿಯನ್ನು ನಡೆಸುವಲ್ಲಿನ ಅತಿಯಾದ ವಿಳಂಬವು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದು ಕೇವಲ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದೆ ಅಲ್ಲ. ನಿಸ್ಸಂದೇಹವಾಗಿ ಇದರ ಹಿಂದೆ ಹುನ್ನಾರವಿದೆ ಎಂದಿದ್ದಾರೆ.
|
eesanje/url_47_202_4.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಕೂಲ್ ಕೂಲ್ ಕಾಶ್ಮೀರ
|
2 |
+
ಶ್ರೀನಗರ, ಡಿ 31 (ಪಿಟಿಐ) ಕಣಿವೆಯಾದ್ಯಂತ ಕನಿಷ್ಠ ತಾಪಮಾನವು ಘನೀಕರಿಸುವ ಹಂತಕ್ಕಿಂತ ಹಲವಾರು ಡಿಗ್ರಿಗಳಷ್ಟು ಕಡಿಮೆ ಇರುವುದರಿಂದ ಕಾಶ್ಮೀರವು ಇಂದು ಶೀತ ಅಲೆಯ ಪರಿಸ್ಥಿತಿಯಲ್ಲಿ ತತ್ತರಿಸಿ ಹೋಗಿದೆ. ಬೇಸಿಗೆಯ ರಾಜಧಾನಿ ಶ್ರೀನಗರದಲ್ಲಿ ಕನಿಷ್ಠ ತಾಪಮಾನವು ಹಿಂದಿನ ರಾತ್ರಿಯ ಮೈನಸ್ 2.8 ಡಿಗ್ರಿ ಸೆಲ್ಸಿಯಸ್ನಿಂದ ಮೈನಸ್ 3.4 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
|
3 |
+
ವಾರ್ಷಿಕ ಅಮರನಾಥ ಯಾತ್ರೆಯ ಮೂಲ ಶಿಬಿರವಾಗಿ ಕಾರ್ಯನಿರ್ವಹಿಸುವ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಕನಿಷ್ಠ ತಾಪಮಾನ ಮೈನಸ್ 3.4 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ, ಹಿಂದಿನ ರಾತ್ರಿಯ ಮೈನಸ್ 4.1 ಡಿಗ್ರಿ ಸೆಲ್ಸಿಯಸ್ನಿಂದ ಹೆಚ್ಚಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
|
4 |
+
ಬಾರಾಮುಲ್ಲಾದ ಪ್ರಸಿದ್ಧ ಸ್ಕೀ-ರೆಸಾರ್ಟ್ ಗುಲ್ಮಾರ್ಗ್ನಲ್ಲಿ ಮೈನಸ್ 3.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಹಿಂದಿನ ರಾತ್ರಿ ಮೈನಸ್ 2.5 ಡಿಗ್ರಿ ಸೆಲ್ಸಿಯಸ್ನಿಂದ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಖಾಜಿಗುಂಡ್ನಲ್ಲಿ ಕನಿಷ್ಠ ಮೈನಸ್ 2.6 ಡಿಗ್ರಿ ಸೆಲ್ಸಿಯಸ್, ಕೊಕರ್ನಾಗ್ ಪಟ್ಟಣದಲ್ಲಿ ಮೈನಸ್ 1.4 ಡಿಗ್ರಿ ಸೆಲ್ಸಿಯಸ್ ಮತ್ತು ಕುಪ್ವಾರದಲ್ಲಿ ಮೈನಸ್ 3.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
|
5 |
+
ಇಬ್ಬರ ಸಾವಿಗೆ ಕಾರಣನಾಗಿದ್ದ ವಾಟರ್ ಟ್ಯಾಂಕ್ ಚಾಲಕನಿಗೆ 1 ವರ್ಷ ಜೈಲು
|
6 |
+
ಡಿಸೆಂಬರ್ನಲ್ಲಿ ಕಾಶ್ಮೀರದಲ್ಲಿ ಕೆಲವು ಹಿಮಪಾತಗಳು ಮತ್ತು ಮಳೆಗಳು ಸಂಭವಿಸಿದವು, ಇದರ ಪರಿಣಾಮವಾಗಿ ದೀರ್ಘಕಾಲದ ಶೀತ ಅಲೆಯ ಪರಿಸ್ಥಿತಿಗಳು ಉಂಟಾಗಿವೆ ಎಂದು ಅಕಾರಿಗಳು ಮಾಹಿತಿ ನೀಡಿದ್ದಾರೆ.ಕಾಶ್ಮೀರವು 40 ದಿನಗಳ ಕಠಿಣ ಚಳಿಗಾಲದ ಚಿಲ್ಲಾ-ಇ-ಕಲನ್ ಹಿಡಿತದಲ್ಲಿದೆ. ಈ ಅವಧಿಯಲ್ಲಿ ಹಿಮಪಾತದ ಸಾಧ್ಯತೆಗಳು ಅತ್ಯಕವಾಗಿರುತ್ತವೆ ಮತ್ತು ಹೆಚ್ಚಿನ ಪ್ರದೇಶಗಳು, ವಿಶೇಷವಾಗಿ ಎತ್ತರದ ಪ್ರದೇಶಗಳು ಭಾರೀ ಹಿಮವನ್ನು ಪಡೆಯುತ್ತವೆ. ಚಿಲ್ಲಾ-ಇ-ಕಲನ ಜನವರಿ 31 ರಂದು ಕೊನೆಗೊಳ್ಳಲಿದೆ.
|
7 |
+
ಆದಾಗ್ಯೂ, 20 ದಿನಗಳ ಚಿಲ್ಲಾ-ಇ-ಖುರ್ದ್ ಮತ್ತು 10-ದಿನಗಳ ಚಿಲ್ಲಾ-ಇ-ಬಚ್ಚಾ ದ ನಂತರವೂ ಶೀತದ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಗಳಿವೆ.
|
eesanje/url_47_202_5.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಅಗ್ನಿ ಅವಘಡದಲ್ಲಿ 6 ಮಂದಿ ಸಜೀವ ದಹನ
|
2 |
+
ಮುಂಬೈ,ಡಿ.31- ಮಹಾರಾಷ್ಟ್ರದ ಗ್ಲೌಸ್ ಫ್ಯಾಕ್ಟರಿಯಲ್ಲಿ ತಡರಾತ್ರಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಮುಂಜಾನೆ 2.15ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಾಗ ಕಾರ್ಖಾನೆ ಮುಚ್ಚಿದ್ದು, ಆವರಣದೊಳಗೆ ಮಲಗಿದ್ದ ಆರು ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ ಎಂದು ವರದಿಯಾಗಿದೆ.
|
3 |
+
ನಮಗೆ 2. 15 ಗಂಟೆಗೆ ಕರೆ ಬಂದಿತು. ನಾವು ಸ್ಥಳಕ್ಕೆ ತಲುಪಿದಾಗ, ಇಡೀ ಕಾರ್ಖಾನೆ ಬೆಂಕಿಯಲ್ಲಿತ್ತು. ನಮ್ಮ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಆರು ಜನರ ಶವಗಳು ಪತ್ತೆಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿ ಮೋಹನ್ ಮುಂಗ್ಸೆ ತಿಳಿಸಿದ್ದಾರೆ.
|
4 |
+
ಇಬ್ಬರ ಸಾವಿಗೆ ಕಾರಣನಾಗಿದ್ದ ವಾಟರ್ ಟ್ಯಾಂಕ್ ಚಾಲಕನಿಗೆ 1 ವರ್ಷ ಜೈಲು
|
5 |
+
ಕಾರ್ಖಾನೆಯಲ್ಲಿ ಗ್ಲೌಸ್ ತಯಾರಿಕೆಗೆ ಬಳಸುವ ಬಟ್ಟೆಗೆ ಬೆಂಕಿ ತಗುಲಿ ಈ ದುರಂತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಕಿ ಕೆನ್ನಾಲಿಗೆಗೆ ಇಡಿ ಕಟ್ಟಡ ಸುಟ್ಟು ಹೋಗಿದ್ದು, ಇನ್ನು ಕೆಲವರು ಸಾವಿಗಿಡಾಗಿರಬಹುದು ಎಂದು ಶಂಕಿಸಲಾಗಿದೆ.
|
eesanje/url_47_202_6.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಒಂದೇ ದಿನ ದೇಶದಲ್ಲಿ 841 ಮಂದಿಗೆ ಕೋವಿಡ್, ಮೂವರು ಬಲಿ
|
2 |
+
ನವದೆಹಲಿ, ಡಿ 31 (ಪಿಟಿಐ) ದೇಶದಲ್ಲಿ 841 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ, ಇದು 227 ದಿನಗಳಲ್ಲಿ ಅತಿ ಹೆಚ್ಚು, ಆದರೆ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 4,309 ಕ್ಕೆ ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್ನಿಂದಾಗಿ ಮೂರು ಹೊಸ ಸಾವುಗಳು ಸಂಭವಿಸಿದ್ದು, ಕೇರಳ, ಕರ್ನಾಟಕ ಮತ್ತು ಬಿಹಾರದಿಂದ ತಲಾ ಒಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
|
3 |
+
ಡಿಸೆಂಬರ್ 5 ರವರೆಗೆ ದೈನಂದಿನ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದಿದೆ, ಆದರೆ ಹೊಸ ರೂಪಾಂತರ ಮತ್ತು ಶೀತ ಹವಾಮಾನದ ನಂತರ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. 2020 ರ ಆರಂಭದಲ್ಲಿ ಪ್ರಾರಂಭವಾದ ಸಾಂಕ್ರಾಮಿಕ ರೋಗದ ಉತ್ತುಂಗದಲ್ಲಿ ದೈನಂದಿನ ಸಂಖ್ಯೆಗಳು ಲಕ್ಷಗಳಲ್ಲಿವೆ ಮತ್ತು ಸುಮಾರು ನಾಲ್ಕು ವರ್ಷಗಳಲ್ಲಿ ದೇಶಾದ್ಯಂತ 4.5 ಕೋಟಿಗೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 5.3 ಲಕ್ಷಕ್ಕೂ ಹೆಚ್ಚು ಸಾವುಗಳನ್ನು ಸಂಭವಿಸಿವೆ.
|
4 |
+
ಮುಂಬೈನಲ್ಲಿ 2.4 ಕೋಟಿ ರೂ ಮೌಲ್ಯದ ಕಳ್ಳಸಾಗಣೆ ಸಿಗರೇಟ್ ದಾಸ್ತಾನು ವಶಕ್ಕೆ
|
5 |
+
ಸಚಿವಾಲಯದ ವೆಬ್ಸೈಟ್ ಪ್ರಕಾರ, ರೋಗದಿಂದ ಚೇತರಿಸಿಕೊಂಡ ಜನರ ಸಂಖ್ಯೆ 4.4 ಕೋಟಿಗೂ ಹೆಚ್ಚು ರಾಷ್ಟ್ರೀಯ ಚೇತರಿಕೆ ದರ 98.81 ಪ್ರತಿಶತದಷ್ಟಿದೆ. ದೇಶದಲ್ಲಿ ಇದುವರೆಗೆ 220.67 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
|
eesanje/url_47_202_7.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಮುಂಬೈನಲ್ಲಿ 2.4 ಕೋಟಿ ರೂ ಮೌಲ್ಯದ ಕಳ್ಳಸಾಗಣೆ ಸಿಗರೇಟ್ ದಾಸ್ತಾನು ವಶಕ್ಕೆ
|
2 |
+
ಮುಂಬೈ,ಡಿ.31-ಇಲ್ಲಿನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಏರ್ ಕಾರ್ಗೋ ಕಾಂಪ್ಲೆಕ್ಸ್ನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 2.4 ಕೋಟಿ ರೂ ಮೌಲ್ಯದ ಸಿಗರೇಟ್ಗಳನ್ನು ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.
|
3 |
+
ಏರ್ ಕಾರ್ಗೋ ಮಾರ್ಗದ ಮೂಲಕ ದುಬೈನಿಂದ ಬಂದ ಸರಕುಗಳನ್ನು ಪರಿಶೀಲಿಸಿದಾಗ ಬೆಡ್ಶೀಟ್ಗಳು ಮತ್ತು ಡ್ರೆಸ್ ಮೆಟೀರಿಯಲ್ಗಳಲ್ಲಿ ಆಡಗಿಸಿಟ್ಟಿದ್ದ ಸಿಗರೇಟ್ ವಶಕ್ಕೆ ಪಡೆಯಲಾಗಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ. ಪರೀಕ್ಷೆಯ ಸಮಯದಲ್ಲಿ, ಸಿಗರೇಟ್ ಪೆಟ್ಟಿಗೆಗಳನ್ನು ಮರೆಮಾಡಲಾಗಿದೆ ಮತ್ತು ಬಟ್ಟೆಗಳ ಬಾಕ್ಸ್ಗಳಲ್ಲಿ ಅಂದವಾಗಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|
4 |
+
ಇಬ್ಬರ ಸಾವಿಗೆ ಕಾರಣನಾಗಿದ್ದ ವಾಟರ್ ಟ್ಯಾಂಕ್ ಚಾಲಕನಿಗೆ 1 ವರ್ಷ ಜೈಲು
|
5 |
+
ಕಳ್ಳಸಾಗಣೆಯಾದ ದಾಸ್ತಾನಲ್ಲಿ ಕೆಲವು ಜನಪ್ರಿಯ ಬ್ರಾಂಡ್ಗಳ 15,86,960 ಸಿಗರೇಟ್ ಪತ್ರಯಾಗಿದ್ದು ಇದರ ಮಾರುಕಟ್ಟೆ ಮೌಲ್ಯ ಸುಮಾರು 2.4 ಕೋಟಿ ರೂಪಾಯಿ ಎಂದು ಹೇಳಿದರು. ತನಿಖೆಯ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯನ್ನು ಕಳ್ಳಸಾಗಣೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ತಿಳಿದುಬಂದು ಆತನನ್ನು ಬಂಧಿಸಲಾಗಿದೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು
|
eesanje/url_47_202_8.txt
ADDED
@@ -0,0 +1,12 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಪದವೀಧರ, ಶಿಕ್ಷಕರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ
|
2 |
+
ಬೆಂಗಳೂರು,ಡಿ.30- ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಮೂರು ವಿಧಾನಪರಿಷತ್ ಹಾಗೂ ನಾಲ್ಕು ಪದವೀಧರ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಆಯೋಗ ಪ್ರಕಟಿಸಿದೆ. 1-11-2023ನ್ನು ಅರ್ಹತಾ ದಿನಾಂಕವೆಂದು ಉಲ್ಲೇಖಿಸಿ ಪರಿಷತ್ನಲ್ಲಿ ಖಾಲಿ ಇರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ತೆರವಾಗಲಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
|
3 |
+
ಆಯೋಗ ಪ್ರಕಟಿಸಿರುವ ಪಟ್ಟಿಯಂತೆ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 1,50,184 ಮತದಾರರು ಇದ್ದಾರೆ. 95,104 ಪುರುಷರು, 55,061 ಮಹಿಳೆಯರು ಮತ್ತು 19 ಇತರೆ ಮತದಾರರು ಇದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ 74,118 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. 38,051 ಪುರುಷರು, 36,162 ಮಹಿಳೆಯರು, ಇತರೆ 5 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ.
|
4 |
+
ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 1,00,100 ಈ ಬಾರಿ ಮತ ಚಲಾಯಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿದ್ದಾರೆ. 45,236 ಪುರುಷರ ಮತದಾರರು ಇದ್ದರೆ, 51,852 ಮಹಿಳೆಯರು, ಇತರ 12 ಮಂದಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
|
5 |
+
ಇನ್ನು ಶಿಕ್ಷಕರ ಕ್ಷೇತ್ರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ 23,565 ಮತದಾರರು ಮತ ಚಲಾಯಿಸಲಿದ್ದಾರೆ. ಇದರಲ್ಲಿ 14,714 ಪುರುಷರು, 8,851 ಮಹಿಳೆಯರು ಇದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 19,837 ಮತದಾರರು ಇದ್ದಾರೆ. 9,042 ಪುರಷರು, 10,795 ಮಹಿಳೆಯರು ಇದ್ದಾರೆ.
|
6 |
+
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 18,475 ಒಟ್ಟು ಮತದಾರರು ಇದ್ದರೆ, ಇದರಲ್ಲಿ 10,386 ಪುರಷರು ಹಾಗೂ 8,087 ಮಹಿಳಾ ಮತದಾರರು ಇದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 16,063 ಮತದಾರರು ಮತ ಚಲಾಯಿಸಲಿದ್ದು, 5,952 ಪುರುಷರು, 10,106 ಮಹಿಳಾ ಮತದಾರರು ಇದ್ದಾರೆ.
|
7 |
+
ಕನ್ನಡ ಹೋರಾಟಗಾರರನ್ನು ಬಿಡುಗಡೆಗೊಳಿಸದಿದ್ದರೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ
|
8 |
+
ಯಾರ್ಯಾರು ನಿವೃತ್ತಿ:ಕಳೆದ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಕೆಲವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
|
9 |
+
ಡಾ.ಚಂದ್ರಶೇಖರ್.ಬಿ ಪಾಟೀಲ್-ಈಶಾನ್ಯ ಪದವೀಧರ ಕ್ಷೇತ್ರಆಯನೂರು ಮಂಜುನಾಥ್- ನೈರುತ್ಯ ಪದವೀಧರ ಕ್ಷೇತ್ರಹಾಲಿ ಸದಸ್ಯರಾದ ಎ.ದೇವೇಗೌಡ – ಬೆಂಗಳೂರು ಪದವೀಧರ ಕ್ಷೇತ್ರಡಾ.ವೈ.ಎ.ನಾರಾಯಣಸ್ವಾಮಿ -ಆಗ್ನೇಯ ಶಿಕ್ಷಕರ ಕ್ಷೇತ್ರಎಸ್.ಎಲ್.ಭೋಜೇಗೌಡ – ನೈರುತ್ಯ ಶಿಕ್ಷಕರ ಕ್ಷೇತ್ರಮರಿತಿಬ್ಬೇಗೌಡ- ದಕ್ಷಿಣ ಶಿಕ್ಷಕರ ಕ್ಷೇತ್ರಇವರ ಅಧಿಕಾರಾವ 2024ರ ಜೂನ್ 21ಕ್ಕೆ ಕೊನೆಗೊಳ್ಳಲಿದೆ. ಬಿಜೆಪಿಯಿಂದ ಗೆದ್ದು ವಿಧಾನಪರಿಷತ್ ಸದಸ್ಯರಾಗಿದ್ದ ಪ��ಟ್ಟಣ ಅವರು ಪ್ರತಿನಿಧಿಸುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅವಧಿ 2026 ನವೆಂಬರ್ 11ಕ್ಕೆ ಕೊನೆಗೊಳ್ಳಲಿದೆ.
|
10 |
+
ಈಶಾನ್ಯ ಪದವೀಧರ ಕ್ಷೇತ್ರ- ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ನೈರುತ್ಯ ಪದವೀಧರ ಕ್ಷೇತ್ರ -ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ ತಾಲ್ಲೂಕು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡುಗು ಜಿಲ್ಲೆ.
|
11 |
+
ಹೊಸ ವರ್ಷದಲ್ಲೂ ಮುಂದುವರೆಯಲಿದೆಯಂತೆ ಇಸ್ರೇಲ್-ಹಮಾಸ್ ಯುದ್ಧ
|
12 |
+
ಬೆಂಗಳೂರು ಪದವೀಧರ- ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ.ಆಗ್ನೇಯ ಶಿಕ್ಷಕರ ಕ್ಷೇತ್ರ- ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, (ಹೊನ್ನಾಳಿ, ಚನ್ನಗಿರಿ) ಹೊರತುಪಡಿಸಿ.ನೈರುತ್ಯ ಶಿಕ್ಷಕರ ಕ್ಷೇತ್ರ- ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, (ಹೊನ್ನಾಳಿ, ಚನ್ನಗಿರಿ ಸೇರಿ)ದಕ್ಷಿಣ ಶಿಕ್ಷಕರ ಕ್ಷೇತ್ರ- ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನಬೆಂಗಳೂರು ಶಿಕ್ಷಕರ ಕ್ಷೇತ್ರ – ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ.
|
eesanje/url_47_202_9.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಭಗವಾನ್ ರಾಮನೇ ನಮ್ಮ ಅಭ್ಯರ್ಥಿ ಎನ್ನುವುದೊಂದೇ ಬಾಕಿ : ರಾವತ್ ಲೇವಡಿ
|
2 |
+
ಮುಂಬೈ,ಡಿ.30- ಚುನಾವಣೆಗೆ ಭಗವಾನ್ ರಾಮನೇ ನಮ್ಮ ಅಭ್ಯರ್ಥಿ ಎಂದು ಬಿಜೆಪಿಯಿಂದ ಘೋಷಿಸುವುದೊಂದೇ ಬಾಕಿ ಉಳಿದಿದೆ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಟೀಕಿಸಿದ್ದಾರೆ. ಅಯೋಧ್ಯೆಯ ರಾಮಜನ್ಮಭೂಮಿ ದೇಗುಲದ ಉದ್ಘಾಟನಾ ಸಮಾರಂಭದ ಆಹ್ವಾನದ ಕುರಿತು ಪ್ರತಿಕ್ರಿಯಿಸಿದ ಅವರು, ರಾಮನ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ಸದ್ಯ ಬಿಜೆಪಿಯವರು ರಾಮನೇ ನಮ್ಮ ಚುನಾವಣೆಯ ಅಭ್ಯರ್ಥಿ ಎಂದು ಹೇಳುವುದೊಂದೆ ಬಾಕಿಯಿರುವುದು ಎಂದು ಲೇವಡಿ ಮಾಡಿದ್ದಾರೆ.
|
3 |
+
ಇದೇ ವೇಳೆ ಕಾಂಗ್ರೆಸ್ ಝೀರೋದಿಂದ ಆರಂಭವಾಗಬೇಕು ಎಂಬ ತಮ್ಮ ಮೇಲಿನ ಆರೋಪದ ಕುರಿತು ಮಾತನಾಡಿ, ಕಾಂಗ್ರೆಸ್ ಶೂನ್ಯ ಎಂದು ನಾನು ಹೇಳಿಲ್ಲ. ಕಾಂಗ್ರೆಸ್ಗೆ ಮಹಾರಾಷ್ಟ್ರದಲ್ಲಿ ಒಬ್ಬನೇ ಒಬ್ಬ ಸಂಸದ ಇಲ್ಲ. ನಮ್ಮಲ್ಲಿ 18 ಸಂಸದರಿದ್ದು, ಅದರಲ್ಲಿ ಕೆಲವರು ಹೋಗಿದ್ದಾರೆ. ಈಗ ನಮ್ಮಲ್ಲಿ 6 ಸಂಸದರಿದ್ದಾರೆ ಎಂದರು.
|
4 |
+
ಹೊಸ ವರ್ಷದಲ್ಲೂ ಮುಂದುವರೆಯಲಿದೆಯಂತೆ ಇಸ್ರೇಲ್-ಹಮಾಸ್ ಯುದ್ಧ
|
5 |
+
ನಮ್ಮ ಮೈತ್ರಿ ಕಾಂಗ್ರೆಸ್ನೊಂದಿಗೆ ಇದೆ ಮತ್ತು ಮಹಾ ವಿಕಾಸ್ ಅಘಾಡಿ ಸುಮಾರು 40 ಸ್ಥಾನಗಳನ್ನು ಗೆಲ್ಲುತ್ತದೆ. ಇನ್ನು ಬಿಜೆಪಿಗೆ ಗೆಲ್ಲಲು ಇವಿಎಂ ಬೇಕು, ಅವರಿಗೆ ಒಂಟಿಯಾಗಿ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಇವಿಎಂ ಜೊತೆ ಅವರ ಮೈತ್ರಿ ಇದೆ ಎಂದು ಸಂಜಯ್ ರಾವತ್ ಟಾಂಗ್ ಕೊಟ್ಟಿದ್ದಾರೆ.
|
eesanje/url_47_203_1.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಜರ್ಮನ್ ಆರೈಕೆಯಲ್ಲಿರುವ ಅರಿಹಾ ಶಾ ಜತೆ ದೀಪಾವಳಿ ಆಚರಿಸಿದ ಭಾರತೀಯ ಅಧಿಕಾರಿಗಳು
|
2 |
+
ನವದೆಹಲಿ,ಡಿ.30- ಎರಡು ವರ್ಷಗಳಿಂದ ಜರ್ಮನಿಯ ರಾಜಧಾನಿಯಲ್ಲಿ ಪೋಷಕರ ಆರೈಕೆಯಲ್ಲಿ ವಾಸಿಸುತ್ತಿರುವ ಹೆಣ್ಣು ಮಗು ಅರಿಹಾ ಶಾ ಅವರೊಂದಿಗೆ ಬರ್ಲಿನ್ನಲ್ಲಿರುವ ಭಾರತೀಯ ಅಧಿಕಾರಿಗಳು ಕಳೆದ ತಿಂಗಳು ದೀಪಾವಳಿಯನ್ನು ಆಚರಿಸಿದರು.
|
3 |
+
ಏಳು ತಿಂಗಳ ಮಗು ಆಕಸ್ಮಿಕವಾಗಿ ಗಾಯಗೊಂಡ ನಂತರ ಅರಿಹಾಳನ್ನು ಕಳೆದ 2021ರಿಂದ ಜರ್ಮನಿಯ ಯುವ ಕಲ್ಯಾಣ ಕಚೇರಿ (ಜುಗೆಂಡಾಮ್ಟ) ವಶದಲ್ಲಿ ಇರಿಸಲಾಗಿದೆ. ಕಳೆದ ತಿಂಗಳ ಎರಡನೇ ವಾರದಲ್ಲಿ ಮಗುವಿಗೆ ಕಾನ್ಸುಲರ್ ಪ್ರವೇಶವನ್ನು ನೀಡಲಾಯಿತು ಮತ್ತು ಭಾರತೀಯ ರಾಯಭಾರಿ ಅಧಿಕಾರಿಗಳು ಅವಳೊಂದಿಗೆ ದೀಪಾವಳಿಯನ್ನು ಆಚರಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದರು. ಮಗು ತನ್ನ ಭಾಷಿಕ, ಧಾರ್ಮಿಕ, ಸಾಂಸ್ಕøತಿಕ ಮತ್ತು ಸಾಮಾಜಿಕ ಪರಿಸರದಲ್ಲಿ ಇರುವುದು ಮುಖ್ಯ ಎಂದು ವಾದಿಸುವ ಮೂಲಕ ಭಾರತಕ್ಕೆ ಆಕೆ ಬೇಗನೆ ಮರಳಲು ಭಾರತ ಒತ್ತಾಯಿಸುತ್ತಿದೆ.
|
4 |
+
ನಾವು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ… ನಾವು ಕಾನ್ಸುಲರ್ ಪ್ರವೇಶವನ್ನು ಹೊಂದಿದ್ದೇವೆ. ಮಗುವನ್ನು ಭಾರತೀಯ ಸಂಸ್ಕøತಿಯಲ್ಲಿ ಮುಳುಗಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವಳ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಖಚಿತಪಡಿಸಿಕೊಳ್ಳಲು ನಾವು ಮಕ್ಕಳ ವಸ್ತುಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು ಬಾಗ್ಚಿ ತನ್ನ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
|
5 |
+
ನಾವು ಮಗುವಿನ ಸಾಂಸ್ಕøತಿಕ ಮುಳುಗುವಿಕೆಯ ಕಡೆಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಭಾರತೀಯ ಹಬ್ಬಗಳು, ಪದ್ಧತಿಗಳು ಮತ್ತು ಆಚರಣೆಗಳಿಗೆ ಸಂಬಂಧಿಸಿದ ಸಂಪನ್ಮೂಲ ಸಾಮಗ್ರಿಗಳನ್ನು ಜರ್ಮನ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಬಾಗ್ಚಿ ಹೇಳಿದರು.
|
6 |
+
ರಾಮಮಂದಿರ ಉದ್ಘಾಟನೆಯಿಂದ ದೇಶದಲ್ಲಿ 50,000 ಕೋಟಿ ರೂ. ವಹಿವಾಟು : ಸಿಎಐಟಿ
|
7 |
+
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಬರ್ಲಿನ್ನಲ್ಲಿರುವ ಭಾರತದ ರಾಯಭಾರ ಕಚೇರಿ ಅರಿಹಾ ಶಾ ಭಾರತಕ್ಕೆ ಮರಳಲು ಸತತವಾಗಿ ಪ್ರತಿಪಾದಿಸುತ್ತಿದೆ. ಬಾಂಗ್ಲಾದೇಶದ ಚುನಾವಣೆ ಅದು ದೇಶೀಯ ವಿಷಯಗಳಾಗಿವೆ ಮತ್ತು ಬಾಂಗ್ಲಾದೇಶದ ಜನರು ತಮ್ಮ ಭವಿಷ್ಯವನ್ನು ನಿರ್ಧರಿಸುತ್ತಾರೆ ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದರು. ಬಾಂಗ್ಲಾದೇಶದ ನಿಕಟ ಸ್ನೇಹಿತ ಮತ್ತು ಪಾಲುದಾರರಾಗಿ, ನಾವು ಅಲ್ಲಿ ಶಾಂತಿಯುತ ಚುನಾವಣೆಗಳನ್ನು ನೋಡಲು ಬಯಸುತ್ತೇವೆ ಮತ್ತು ಶಾಂತಿಯುತ ಮತ್ತು ಪ್ರಗತಿಪರ ರಾಷ್ಟ್ರಕ್ಕಾಗಿ ನಾವು ಬಾಂಗ್ಲಾದೇಶವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.
|
8 |
+
ಚೀನಾದ ಸಂಶೋಧನಾ ನೌಕೆಯು ಶ್ರೀಲಂಕಾಕ್ಕೆ ಭೇಟಿ ನೀಡಿದ ವರದಿಗಳ ಬಗ್ಗೆ ಕೇಳಿದಾಗ ನಾವು ಯಾವಾಗಲೂ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುತ್ತೇವೆ ಮತ್ತು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
|
eesanje/url_47_203_10.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಹುಣಸೆ ಹಣ್ಣಿನೊಂದಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 5.77ಕೋಟಿ ಮೌಲ್ಯದ ಸಿಗರೇಟ್ ಪ್ಯಾಕೆಟ್ಗಳ ವಶ
|
2 |
+
ಮುಂಬೈ,ಡಿ.29 – ಸರಕು ಸಾಗಣೆ ಕಂಟೈನರ್ನಲ್ಲಿದ್ದ ಹುಣಸೆ ಹಣ್ಣಿನ ಜೊತೆ ಅಕ್ರಮವಾಗಿ ಸಾಗಿಸುತ್ತಿದ್ದ 5.77 ಕೋಟಿ ಮೌಲ್ಯದ ಸಿಗರೇಟ್ ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಮುಂಬೈನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
|
3 |
+
ಬಂದ ಗುಪ್ತಚರ ಮಾಹಿತಿ ಆಧಾರದ ಮೇಲೆ ಜವಾಹರಲಾಲ್ ನೆಹರು ಬಂದರಿಗೆ ಆಗಮಿಸಿದ 40ಅಡಿ ಉದ್ದದ ಶೈತ್ಯೀಕರಿಸಿದ ಕಂಟೈನರ್ ಪರಿಶೀಲಿಸಿದಾಗ ಅಕ್ರಮವಾಗಿ ಬಚ್ಚಿಟ್ಟಿದ್ದ 33.92.000 ಸಿಗರೇಟ್ಗಳು ಪತ್ತೆಯಾಗಿದೆ.ನ್ಹಾವಾ ಶೆವಾದಲ್ಲಿನ ಕಂಟೈನರ್ ಸರಕು ಸಾಗಣೆ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಯಿತು. ಆಗ ಹುಣಸೆಹಣ್ಣು ಹೊಂದಿರುವ ರಟ್ಟಿನ ಪೆಟ್ಟಿಗೆಗಳಲ್ಲಿ ಸಿಗರೇಟ್ ಪೆಟ್ಟಿಗೆಗಳನ್ನು ಜಾಣ್ಮೆಯಿಂದ ಮರೆಮಾಚಲಾಗಿರುವುದು ಬೆಳಕಿಗೆ ಬಂದಿದೆ.
|
4 |
+
ಭಾರತದೊಂದಿಗಿನ ಮಿಲಿಟರಿ ತೊಡಗಿಸಿಕೊಳ್ಳುವಿಕೆ ವ್ಯಾಪ್ತಿಯನ್ನು ಆಧುನಿಕರಿಸಿದ ಅಮೆರಿಕ
|
5 |
+
ಸಿಗರೇಟ್ ಪೆಟ್ಟಿಗೆಗಳನ್ನು ಹುಣಸೆ ಪೆಟ್ಟಿಗೆಯೊಳಗೆ ಇರಿಸಲಾಗಿತ್ತು ಮತ್ತು ಎಲ್ಲಾ ಕಡೆ ಹುಣಸೆಹಣ್ಣಿನಿಂದ ಜಾಣ್ಮೆಯಿಂದ ಮುಚ್ಚಲಾಗಿತ್ತು. ಕಳ್ಳಸಾಗಣೆ ಮಾಡಿರುವ 33,92,000 ಸಿಗರೇಟ್ಗಳ ಮಾರುಕಟ್ಟೆ ಮೌಲ್ಯ ಅಂದಾಜು 5.77 ಕೋಟಿ ರೂ.ಗಳಾಗಿವೆ ಎಂದು ಡಿಆರ್ಐ ಅಲ್ಲಾಕಾರಿಗಳು ತಿಳಿಸಿದ್ದಾರೆ.
|
eesanje/url_47_203_11.txt
ADDED
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಲೋಕಸಭೆ ಚುನಾವಣೆಗೂ ಮುನ್ನ 56 ರಾಜ್ಯಸಭಾ ಸದಸ್ಯರ ಅವಧಿ ಅಂತ್ಯ
|
2 |
+
ನವದೆಹಲಿ,ಡಿ.29- ಮುಂಬರುವ 2024ರ ಲೋಕಸಭಾ ಚುನಾವಣೆಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಇರುವ ಅನೇಕ ಕೇಂದ್ರ ಸಚಿವರ ರಾಜ್ಯಸಭಾ ಅಧಿಕಾರಾವಧಿಯು ಕೊನೆಗೊಳ್ಳಲಿದೆ. ಇದರಲ್ಲಿ ಮೋದಿ ಸರ್ಕಾರದ ಹಿರಿಯ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ಜ್ಯೋತಿರಾದಿತ್ಯ ಸಿಂಯಾ, ಪುರುಷೋತ್ತಮ್ ರೂಪಾಲಾ, ರಾಜೀವ್ ಚಂದ್ರಶೇಖರ್, ನಾರಾಯಣ ರಾಣೆ ಮತ್ತು ಅಶ್ವಿನಿ ವೈಷ್ಣವ್ ಅವರ ಹೆಸರುಗಳು ಸೇರಿವೆ.
|
3 |
+
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸುಶೀಲ್ ಕುಮಾರ್ ಮೋದಿ, ಪ್ರಕಾಶ್ ಜಾವಡೇಕರ್, ಸರೋಜ್ ಪಾಂಡೆ, ಅನಿಲ್ ಬಲುನಿ, ಸುಧಾಂಶು ತ್ರಿವೇದಿ, ಅನಿಲ್ ಜೈನ್, ಕಾಂತ ಕರ್ದಮ, ಸಕಲದೀಪ್ ರಾಜ್ಭರ್, ಜೆವಿಎಲ್ ನರಸಿಂಹ ರಾವ್ ಸೇರಿದಂತೆ ಹಲವು ಪ್ರಮುಖರು ಸೇರಿದ್ದಾರೆ.
|
4 |
+
ಹೊಸ ವರ್ಷದ ಆರಂಭದಲ್ಲಿ, ಲೋಕಸಭಾ ಚುನಾವಣೆಗೆ ಮುನ್ನ, ಬಿಜೆಪಿಯ 32 ರಾಜ್ಯಸಭಾ ಸಂಸದರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಈ ಹೆಚ್ಚಿನ ಸದಸ್ಯರ ಅಧಿಕಾರಾವಧಿಯು ಏಪ್ರಿಲ್ 2, 2024 ರಂದು ಕೊನೆಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಮೋದಿ ಸರ್ಕಾರದ ಈ ಸಚಿವರು ಏಪ್ರಿಲ್ 2, 2024 ರ ನಂತರ ರಾಜೀನಾಮೆ ನೀಡುತ್ತಾರಾ ಅಥವಾ ಅವರ ಸಚಿವ ಸ್ಥಾನಗಳು ಹಾಗೆಯೇ ಉಳಿಯುತ್ತವೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
|
5 |
+
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಪರಿಸರ ಸಚಿವ ಭೂಪೇಂದ್ರ ಯಾದವ್, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಡಾ.ಮನ್ಸುಖ್ ಮಾಂಡವಿಯಾ, ರೈಲ್ವೆ ಮತ್ತು ಟೆಲಿಕಾಂ ಅಶ್ವಿನಿ ವೈಷ್ಣವ್ ಮತ್ತು ಸಂವಹನ ಸಚಿವಾಲಯದ ಉಸ್ತುವಾರಿ ಹೊಂದಿರುವ ಪುರುಷೋತ್ತಮ್ ರೂಪಾಲಾ ಅವರು ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸಬಹುದು ಎಂದು ಹೇಳಲಾಗುತ್ತಿರುವ ಪ್ರಮುಖ ಹೆಸರುಗಳು.
|
6 |
+
ದೇಣಿಗೆ ಸಂಗ್ರಹಕ್ಕೆ ಬಾರ್ ಕೋಡ್ ಮೊರೆ ಹೋದ ಕಾಂಗ್ರೆಸ್
|
7 |
+
ಜೊತೆಗೆ ಬಿಜೆಪಿ ಮೂಲಗಳನ್ನು ನಂಬುವುದಾದರೆ, ಮನ್ಸುಖ್ ಮಾಂಡವಿಯಾ ಗುಜರಾತ್ನಿಂದ, ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದಿಂದ, ಭೂಪೇಂದ್ರ ಯಾದವ್ ಮತ್ತು ರಾಜಸ್ಥಾನದಿಂದ ಅಶ್ವಿನಿ ವೈಷ್ಣವ್ ಲೋಕಸಭೆ ಚುನಾವಣೆಗೆ ಸ್ರ್ಪಧಿಸಬಹುದು. ಇನ್ನು, ಧರ್ಮೇಂದ್ರ ಪ್ರಧಾನ್ ಒಡಿಶಾದಿಂದ ಲೋಕಸಭೆ ಚುನಾವಣೆಗೆ ಸ್ರ್ಪಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
|
8 |
+
ಹೊಸ ವರ್ಷದಲ್ಲಿ ರಾಜ್ಯಸಭೆಯ 69 ಸ್ಥಾನಗಳು ಖಾಲಿಯಾಗುತ್ತಿದ್ದು, ಈ ಪೈಕಿ 56 ಸ್ಥಾನಗಳು ಲೋಕಸಭೆ ಚುನಾವಣೆಗೆ ಮುನ್ನ ಅಂದರೆ ಏಪ್ರಿಲ-ಮೇ ವೇಳೆಗೆ ಖಾಲಿಯಾಗಲಿವೆ. ಇವರಲ್ಲಿ ಕಾಂಗ್ರೆಸ್, ಆರ್ಜೆಡಿ, ಜೆಡಿಯು, ಶಿವಸೇನೆ ಸೇರಿದಂತೆ ಹಲವು ಪಕ್ಷಗಳ ಸಂಸದರೂ ಇದ್ದಾರೆ. ಇದೇ ವೇಳೆ ಬಿಜೆಪಿಯ ಎಂಟು ಸಚಿವರ ಅವಧಿಯೂ ಇದೇ ಅವಧಿಯಲ್ಲಿ ಕೊನ���ಗೊಳ್ಳಲಿದೆ. ಆದರೆ, ಈ ಸಚಿವರ ಅಧಿಕಾರಾವಧಿ ಮುಗಿದ ಬಳಿಕ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಹಲವು ರಾಜ್ಯಸಭಾ ಸಂಸದರು ಹಾಗೂ ಸಚಿವರೂ ಲೋಕಸಭೆ ಚುನಾವಣೆಗೆ ಸ್ರ್ಪಧಿಸುತ್ತಿರುವ ಸಾಧ್ಯತೆ ಇದೆ.
|
9 |
+
ಮೋದಿ ಸಂಪುಟದ ಎಂಟು ಸಚಿವರು ತಮ್ಮ ಸಂಸದರ ಅವಧಿ ಮುಗಿದ ನಂತರವೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ನಿಯಮಗಳು ಹೇಳುತ್ತವೆ, ಏಕೆಂದರೆ ಸಂವಿಧಾನದ ಅಡಿಯಲ್ಲಿ ಯಾವುದೇ ವ್ಯಕ್ತಿ ಸಂಸತ್ತಿನ ಸದಸ್ಯನಾಗದೆ ಆರು ತಿಂಗಳ ಕಾಲ ಮಂತ್ರಿಯಾಗಿ ಉಳಿಯಬಹುದು. ಸಂವಿಧಾನದ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ಸಂಸತ್ತಿನ ಅಥವಾ ಶಾಸಕಾಂಗದ ಸದಸ್ಯರಾಗದೆಯೂ ಸಹ ಗರಿಷ್ಠ ಆರು ತಿಂಗಳವರೆಗೆ ಸಚಿವ ಸ್ಥಾನವನ್ನು ಹೊಂದಬಹುದು. ಆರು ತಿಂಗಳೊಳಗೆ ಸಂಸತ್ತಿನ ಅಥವಾ ಶಾಸಕಾಂಗದ ಸದಸ್ಯನಾಗದಿದ್ದರೆ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದರೆ ಮೋದಿ ಸರ್ಕಾರದ ಈ ಮಂತ್ರಿಗಳು ಸಚಿವ ಸ್ಥಾನ ಕಳೆದುಕೊಳ್ಳುವ ಅಪಾಯವಿಲ್ಲ.
|
10 |
+
ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ
|
11 |
+
ಸದ್ಯ ಹೊಸ ವರ್ಷದಲ್ಲಿ ರಾಜ್ಯಸಭೆಯ 69 ಸ್ಥಾನಗಳು ಖಾಲಿಯಾಗುತ್ತಿದ್ದು, ಈ ಪೈಕಿ 56 ಸ್ಥಾನಗಳು ಲೋಕಸಭೆ ಚುನಾವಣೆಗೆ ಮುನ್ನ ಅಂದರೆ ಏಪ್ರಿಲï-ಮೇ ವೇಳೆಗೆ ಖಾಲಿಯಾಗಲಿವೆ. ಈ ಬಗ್ಗೆ ಆಯಾ ಪಕ್ಷಗಳು ಏನು ಮಾಡುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.
|
eesanje/url_47_203_12.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ನಾಳೆ ಅಯೋಧ್ಯೆಗೆ ಮೋದಿ ಭೇಟಿ, 11,100 ಕೋಟಿ ರೂ. ಮೊತ್ತದ ಯೋಜನೆಗಳ ಉದ್ಘಾಟನೆ
|
2 |
+
ನವದೆಹಲಿ,ಡಿ.29- ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ನೂತನವಾಗಿ ನಿರ್ಮಿಸಿರುವ ವಿಮಾನ ನಿಲ್ದಾಣ ಮತ್ತು ಅಯೋಧ್ಯೆ ಧಾಮ್ ಜಂಕ್ಷನ್ ರೈಲು ನಿಲ್ದಾಣ ಸೇರಿದಂತೆ 11,100 ಕೋಟಿ ರೂ. ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಎರಡು ಹೊಸ ಅಮೃತ್ ಭಾರತ್ ರೈಲುಗಳು ಮತ್ತು ಆರು ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.
|
3 |
+
ರಾಮ ಮಂದಿರದ ಶಂಕು ಸ್ಥಾಪನೆ ಸಮಾರಂಭಕ್ಕೆ ವಾರಗಳ ಮೊದಲು, ಪ್ರಧಾನಿ ಮೋದಿ ಅವರು ದೇವಾಲಯದ ನಗರದಲ್ಲಿ ನಾಲ್ಕು ಹೊಸ ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ ಮೋದಿ ಅವರು ಅಯೋಧ್ಯೆಯಲ್ಲಿ ಗ್ರೀನ್ ಫೀಲ್ಡ ಟೌನ್ಶಿಪ್ಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ನಾಳೆ ಬೆಳಿಗ್ಗೆ 11.15 ಕ್ಕೆ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಮತ್ತು ಹೊಸ ಅಮೃತ್ ಭಾರತ್ ರೈಲುಗಳು ಮತ್ತು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರುವರು.
|
4 |
+
ನೂತನವಾಗಿ ನಿರ್ಮಿಸಲಾಗಿರುವ ಅಯೋಧ್ಯೆ ವಿಮಾನ ನಿಲ್ದಾಣವನ್ನು ಮಧ್ಯಾಹ್ನ 12.15ಕ್ಕೆ ಸಾರ್ವಜನಿಕರ ಸೇವೆಗೆ ಲೋರ್ಕಾಪಣೆ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 15,700 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೇರವೇರಿಸುವರು.
|
5 |
+
ದೇಣಿಗೆ ಸಂಗ್ರಹಕ್ಕೆ ಬಾರ್ ಕೋಡ್ ಮೊರೆ ಹೋದ ಕಾಂಗ್ರೆಸ್
|
6 |
+
ಅಯೋಧ್ಯೆಯಲ್ಲಿ ಆಧುನಿಕ ವಿಶ್ವ ದರ್ಜೆಯ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವುದು, ಸಂಪರ್ಕವನ್ನು ಸುಧಾರಿಸುವುದು ಮತ್ತು ನಗರದ ಶ್ರೀಮಂತ ಇತಿಹಾಸ ಮತ್ತು ಪರಂಪರೆಗೆ ಅನುಗುಣವಾಗಿ ಅದರ ನಾಗರಿಕ ಸೌಲಭ್ಯಗಳನ್ನು ನವೀಕರಿಸುವುದು ಪ್ರಧಾನಮಂತ್ರಿಯವರ ದೃಷ್ಟಿಯಾಗಿದೆ.
|
7 |
+
240 ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯೆ ರೈಲು ನಿಲ್ದಾಣದ ಮರು ಅಭಿವೃದ್ಧಿ ಕಾರ್ಯ ನಡೆದಿದೆ. ಇದು ಈಗ ಮೂರು ಅಂತಸ್ತಿನ ನಿಲ್ದಾಣವಾಗಿದ್ದು, ಲಿಫ್ಟ್ಗಳು, ಎಸ್ಕಲೇಟರ್ಗಳು, ಫುಡ್ ಪ್ಲಾಜಾಗಳು, ಕ್ಲೋಕ್ ರೂಮ್ಗಳು, ಮಕ್ಕಳ ಆರೈಕೆ ಕೊಠಡಿಗಳು, ವೇಟಿಂಗ್ ಹಾಲ್ಗಳು ಮುಂತಾದ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.ಸುಂದರವಾದ ಮತ್ತು ಆಕರ್ಷಕ ವಿನ್ಯಾಸದ ಆಸನಗಳು, ಉತ್ತಮ ಲಗೇಜ್ ರ್ಯಾಕ್, ಸೂಕ್ತವಾದ ಮೊಬೈಲ್ ಹೋಲ್ಡರ್ನೊಂದಿಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಲಇಡಿ ಲೈಟ್ಗಳು, ಸಿಸಿಟಿವಿ, ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ಹೊಂದಿರುವ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡುವರು.
|
8 |
+
ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ
|
9 |
+
ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್ಪ್ರೆಸ್ ಮತ್ತು ಮಾಲ್ಡಾ ಟೌನ್- ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ಸಿಗಲಿದೆ. ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್; ಅಮೃತಸರ-ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್; ಕೊಯಮತ್ತೂರು-ಬೆಂಗಳೂರು ಕ್ಯಾಂಟ್ ವಂದೇ ಭಾರತ್ ಎಕ್ಸ್ಪ್ರೆಸ್; ಮಂಗಳೂರು-ಮಡ್ಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್; ಜಲ್ನಾ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇರಿದಂತೆ ಒಟ್ಟು ಆರು ಹೊಸ ವಂದೇ ಭಾರತ್ ರೈಲುಗಳಿಗೂ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
|
eesanje/url_47_203_2.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಪಾಕ್ ಚುನಾವಣೆ : ಉಗ್ರ ಹಫೀಜ್ ಪಕ್ಷದ ಸ್ಪರ್ಧೆ ಮೇಲೆ ಭಾರತದ ನಿಗಾ
|
2 |
+
ನವದೆಹಲಿ,ಡಿ.30- ಪಾಕಿಸ್ತಾನದಲ್ಲಿ ಅಮೂಲಾಗ್ರ ಅಂಶಗಳ ಸಾಮಾನ್ಯೀಕರಣವು ಇಸ್ಲಾಮಾಬಾದ್ನ ರಾಜ್ಯ ನೀತಿಯ ಒಂದು ಭಾಗವಾಗಿದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬೆಂಬಲಿತ ರಾಜಕೀಯ ಪಕ್ಷವು ಚುನಾವಣೆಯಲ್ಲಿ ಸ್ರ್ಪಧಿಸುತ್ತಿರುವುದು ಗಂಭೀರ ಭದ್ರತಾ ಪರಿಣಾಮಗಳನ್ನು ಬೀರಲಿದೆ ಎಂದಿದೆ.ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಪ್ರತಿಯೊಂದು ಬೆಳವಣಿಗೆಯ ಮೇಲೆ ಹೊಸ ದೆಹಲಿ ನಿಗಾ ಇರಿಸುವುದನ್ನು ಮುಂದುವರೆಸಿದೆ ಎಂದು ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
|
3 |
+
ಪಾಕಿಸ್ತಾನದಲ್ಲಿ ಆಮೂಲಾಗ್ರ ಅಂಶಗಳ ಸಮಸ್ಯೆ ಸಾಮಾನ್ಯೀಕರಿಸಲ್ಪಟ್ಟಿದೆ ಮತ್ತು ಚುನಾವಣೆಯಲ್ಲಿ ಭಾಗವಹಿಸುತ್ತದೆ… ಇದು ಆಂತರಿಕ ವ್ಯವಹಾರವಾಗಿದೆ ಆದ್ದರಿಂದ ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಪಾಕಿಸ್ತಾನದಲ್ಲಿ ಮೂಲಭೂತವಾದಿ ಸಂಘಟನೆಗಳ ಮುಖ್ಯವಾಹಿನಿಯು ಹೊಸದೇನಲ್ಲ ಮತ್ತು ಅವರ ರಾಜ್ಯ ನೀತಿಯ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ.
|
4 |
+
ಇಂತಹ ಬೆಳವಣಿಗೆಗಳು ನಮ್ಮ ಪ್ರದೇಶದ ಭದ್ರತೆಗೆ ಗಂಭೀರವಾದ ಭದ್ರತಾ ಪರಿಣಾಮಗಳನ್ನು ಹೊಂದಿವೆ. ನಮ್ಮ ಪಾಲಿಗೆ, ನಮ್ಮ ರಾಷ್ಟ್ರೀಯ ಭದ್ರತೆಗೆ ಪರಿಣಾಮ ಬೀರುವ ಪ್ರತಿಯೊಂದು ಬೆಳವಣಿಗೆಯನ್ನು ನಾವು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.
|
5 |
+
ವಿಶ್ವಸಂಸ್ಥೆಯ ನಿಷೇಧಿತ ಭಯೋತ್ಪಾದಕನಾಗಿರುವ ಮುಹಮ್ಮದ್ ಹಫೀಜ್ ಸಯೀದ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್ಇಟಿ) ಸ್ಥಾಪಕ. ಮುಂಬೈನಲ್ಲಿ ನಡೆದ ಮಾರಣಾಂತಿಕ 26/11 ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಈತ ಹಲವಾರು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ.
|
6 |
+
ಏತನ್ಮಧ್ಯೆ, ಇಸ್ಲಾಮಾಬಾದ್ಗೆ ಭಾರೀ ಟೀಕೆಗೆ ಕಾರಣವಾದ ಬೆಳವಣಿಗೆಯಲ್ಲಿ, ಹಫೀಜ್ ಸಯೀದ್ ಸ್ಥಾಪಿಸಿದ ರಾಜಕೀಯ ಘಟಕವಾದ ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (ಪಿಎಂಎಂಎಲ) ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪಾಕಿಸ್ತಾನದಾದ್ಯಂತ ಪ್ರತಿ ರಾಷ್ಟ್ರೀಯ ಮತ್ತು ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
|
7 |
+
ರಾಮಮಂದಿರ ಉದ್ಘಾಟನೆಯಿಂದ ದೇಶದಲ್ಲಿ 50,000 ಕೋಟಿ ರೂ. ವಹಿವಾಟು : ಸಿಎಐಟಿ
|
8 |
+
ಹಫೀಜ್ ಸಯೀದ್ ಅವರ ಪುತ್ರ ತಲ್ಹಾ ಸಯೀದ್ ಅವರು ಲಾಹೋರ್ನ ನ್ಯಾಷನಲ್ ಅಸೆಂಬ್ಲಿಯ ಕ್ಷೇತ್ರ ದಿಂದ ಚುನಾವಣೆಗೆ ಸ್ರ್ಪಧಿಸಲು ನಿರ್ಧರಿಸಿದ್ದಾರೆ. ಇತರ ಆರೋಪಗಳಿಗಾಗಿ ಜುಲೈ 17, 2019 ರಿಂದ ಜೈಲಿನಲ್ಲಿರುವ ಸಯೀದ್ಗೆ 2022 ರ ಏಪ್ರಿಲ್ನಲ್ಲಿ ಪಾಕಿಸ್ತಾನದ ಲಾಹೋರ್ನಲ್ಲಿರುವ ವಿಶೇಷ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಭಯೋತ್ಪಾದನೆಗೆ ಹಣಕಾಸು ಒದಗಿಸುವುದಕ್ಕಾಗಿ 33 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಡಿಸೆಂಬರ್ 2008 ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಯೀದ್ನನ್ನು ಭಯೋತ್ಪಾದಕ ಎಂದು ಹೆಸರಿಸಿತ್ತು.
|
9 |
+
ಏತನ್ಮಧ್ಯೆ, ನಿರ್ದಿಷ್ಟ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಹಫೀಜ್ ಸಯೀದ್ನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಭಾರತವು ಪಾಕಿಸ್ತಾನ ಸರ್ಕಾರಕ್ಕೆ ಮನವಿಯನ್ನು ರವಾನಿಸಿದೆ. ಎಲ್ಲಾ ಸಂಬಂಧಿತ ಪೋಷಕ ದಾಖಲೆಗಳೊಂದಿಗೆ ನವದೆಹಲಿ ವಿನಂತಿಯನ್ನು ರವಾನಿಸಿದೆ ಎಂದು ಎಂಇಎ ಹೇಳಿದೆ.
|
eesanje/url_47_203_3.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಪೂರ್ಣಗೊಂಡ ರಾಮಲಲ್ಲಾ ಮೂರ್ತಿ ಆಯ್ಕೆ ಪ್ರಕ್ರಿಯೆ
|
2 |
+
ಅಯೋಧ್ಯೆ,ಡಿ.30- ರಾಮಲಲ್ಲಾ ಮೂರ್ತಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸರ್ವಾನುಮತದಿಂದ ಆಯ್ಕೆಯಾದ ಮೂರ್ತಿಯನ್ನು ಮುಂದಿನ ತಿಂಗಳು ಪ್ರಾಣ ಪ್ರತಿಷ್ಠಾನಕ್ಕೆ ತರಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ತಿಳಿಸಿದ್ದಾರೆ.
|
3 |
+
ಇಂದಿನ ಟ್ರಸ್ಟ್ ಸಭೆಯು ರಾಮ ಮಂದಿರಕ್ಕೆ ವಿಗ್ರಹವನ್ನು ಆಯ್ಕೆ ಮಾಡುವ ಬಗ್ಗೆ ಮತ್ತು ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆ ಹೊತ್ತುಕೊಂಡಿದೆ. ಮುಂದಿನ ತಿಂಗಳು ಭವ್ಯ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವ ಭಗವಾನ್ ರಾಮಲಲ್ಲಾ ವಿಗ್ರಹವನ್ನು ನಿರ್ಧರಿಸಲು ಮತದಾನವನ್ನು ಕೈಗೊಳ್ಳಲು ಟ್ರಸ್ಟ್ನ ಸಭೆ ನಿನ್ನೆ ನಡೆಯಿತು.
|
4 |
+
ಅಬುಧಾಬಿಯಲ್ಲಿ ಹಿಂದೂ ದೇವಾಲಯ ಉದ್ಘಾಟನೆಗೆ ಮೋದಿಗೆ ಆಹ್ವಾನ
|
5 |
+
ವಿಗ್ರಹ ಆಯ್ಕೆ ಪ್ರಕ್ರಿಯೆಯ ನಿಯತಾಂಕಗಳ ಬಗ್ಗೆ ಕೇಳಿದಾಗ, ಬಿಮ್ಲೇಂದ್ರ ಅವರು ವಿಗ್ರಹವು ನಿಮ್ಮೊಂದಿಗೆ ಮಾತನಾಡುತ್ತದೆ, ನೀವು ಅದನ್ನು ಒಮ್ಮೆ ನೋಡಿದಂತೆ, ನೀವು ಅದನ್ನು ನೋಡಿ ಮಂತ್ರಮುಗ್ಧರಾಗುತ್ತೀರಿ ಎಂದು ಹೇಳಿದರು. ಹಲವು ವಿಗ್ರಹಗಳನ್ನು ಒಟ್ಟಿಗೆ ಇರಿಸಿದರೂ, ಕಣ್ಣುಗಳು ಉತ್ತಮವಾದವುಗಳ ಮೇಲೆ ಕೇಂದ್ರೀಕರಿಸುತ್ತವೆ.
|
6 |
+
ಮತ್ತು ಕಾಕತಾಳೀಯವೆಂದರೆ ನಾನು ವಿಗ್ರಹವನ್ನು ಇಷ್ಟಪಟ್ಟೆ ಮತ್ತು ಅದಕ್ಕೆ ನನ್ನ ಮತವನ್ನು ನೀಡಿದ್ದೇನೆ. ಚಂಪತ್ ರೈ ಅವರು ಮುಂದೆ ನಿರ್ಧರಿಸುತ್ತಾರೆ. ಮತದಾನ ನಡೆಯಿತು. ವ್ಯವಸ್ಥೆ ಮತ್ತು ನಾವು ನಮ್ಮ ಆದ್ಯತೆಗಳನ್ನು ನೀಡಿದ್ದೇವೆ. ಸರ್ವಾನುಮತದಿಂದ ಆಯ್ಕೆಯಾದ ಮೂರ್ತಿಯನ್ನು ಪ್ರಾಣ ಪ್ರತಿಷ್ಠೆಗೆ ತರಲಾಗುವುದು, ಎಂದು ಅವರು ಹೇಳಿದರು.
|
7 |
+
ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ಮೂರು ವಿನ್ಯಾಸಗಳಲ್ಲಿ ಐದು ವರ್ಷದ ರಾಮ್ ಲಲ್ಲಾವನ್ನು ಪ್ರತಿಬಿಂಬಿಸುವ 51 ಇಂಚು ಎತ್ತರದ ರಾಮನ ವಿಗ್ರಹವನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು. ಏತನ್ಮಧ್ಯೆ, ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ರಾಮ ಜನ್ಮಭೂಮಿ ಪಥ ಮತ್ತು ಸಂಕೀರ್ಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಯ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
|
8 |
+
ಕೆಲಸವನ್ನು ತರಾತುರಿಯಲ್ಲಿ ಮಾಡಲಾಗುತ್ತಿಲ್ಲ, ಬದಲಿಗೆ ಸಾಕಷ್ಟು ಸಮಯವನ್ನು ಹೂಡಿಕೆ ಮಾಡುವ ಮೂಲಕ ಗುಣಾತ್ಮಕವಾಗಿ ಮಾಡಲಾಗುತ್ತಿದೆ ಎಂದು ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.
|
eesanje/url_47_203_4.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಭಯೋತ್ಪಾದಕ ಪಟ್ಟಿಗೆ ಲಖ್ಬೀರ್ ಸಿಂಗ್ ಲಾಂಡಾ ಸೇರ್ಪಡೆ
|
2 |
+
ನವದೆಹಲಿ,ಡಿ.30- ಕೆನಡಾ ಮೂಲದ 33 ವರ್ಷದ ದರೋಡೆಕೋರ ಲಖ್ಬೀರ್ ಸಿಂಗ್ ಲಾಂಡಾ ಅವರನ್ನು ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಭಯೋತ್ಪಾದಕ ಎಂದು ಗೃಹ ಸಚಿವಾಲಯ ಗುರುತಿಸಿದೆ. ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಇತರ ಭಯೋತ್ಪಾದಕ ಚಟುವಟಿಕೆಗಳ ಜೊತೆಗೆ 2021 ರಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಪ್ರಧಾನ ಕಛೇರಿಯ ಮೇಲೆ ರಾಕೆಟ್ ದಾಳಿಯಲ್ಲಿ ಲಾಂಡಾ ಭಾಗಿಯಾಗಿದ್ದರು.
|
3 |
+
1989 ರಲ್ಲಿ ಪಂಜಾಬ್ನ ತರ್ನ್ ತರನ್ ಜಿಲ್ಲೆಯಲ್ಲಿ ಜನಿಸಿದ ಲಾಂಡಾ ಅವರು 2017 ರಲ್ಲಿ ಕೆನಡಾಕ್ಕೆ ಓಡಿಹೋದರು. ಅವರನ್ನು ಕುಖ್ಯಾತ ಖಲಿಸ್ತಾನಿ ಗುಂಪಿನ ಬಬ್ಬರ್ ಖಾಲ್ಸಾ ಇಂಟರ್ನ್ಯಾಶನಲ್ ಸದಸ್ಯ ಎಂದು ಗುರುತಿಸಲಾಗುತ್ತಿದೆ. ಲಾಂಡಾ ಅವರು ಬಿಕೆಐ ಯೊಂದಿಗೆ ಸಹಕರಿಸಿದ ಪಾಕಿಸ್ತಾನ ಮೂಲದ ದರೋಡೆಕೋರ ರಿಂಡಾ ಎಂದೂ ಕರೆಯಲ್ಪಡುವ ಹರ್ವಿಂದರ್ ಸಿಂಗ್ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆಂದು ನಂಬಲಾಗಿದೆ.
|
4 |
+
ಅಬುಧಾಬಿಯಲ್ಲಿ ಹಿಂದೂ ದೇವಾಲಯ ಉದ್ಘಾಟನೆಗೆ ಮೋದಿಗೆ ಆಹ್ವಾನ
|
5 |
+
ಮೊಹಾಲಿಯಲ್ಲಿ ನಡೆದ ರಾಕೆಟ್ ದಾಳಿಗೆ ಲಾಂಡಾ ಹೊಣೆಗಾರನಾಗಿದ್ದು, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಘಟಕಗಳಿಗೆ ಸುಧಾರಿತ ಸ್ಪೋಟಕ ಸಾಧನಗಳು (ಐಇಡಿಗಳು), ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸ್ಪೋಟಕಗಳನ್ನು ಗಡಿಯಾಚೆಯಿಂದ ಸರಬರಾಜು ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ.
|
6 |
+
ಭಯೋತ್ಪಾದನಾ ಘಟಕಗಳ ರಚನೆ, ಸುಲಿಗೆ, ಹತ್ಯೆಗಳು, ಐಇಡಿಗಳನ್ನು ನೆಡುವುದು, ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಪಂಜಾಬ್ನಲ್ಲಿ ಮಾತ್ರವಲ್ಲದೆ ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಹಣವನ್ನು ಬಳಸುವುದಕ್ಕೆ ಸಂಬಂಧಿಸಿದ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಲಾಂಡಾ ಭಾಗಿಯಾಗಿದ್ದಾರೆ ಎಂದು ಗೃಹ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
|
7 |
+
ಲಾಂಡಾ ಅವರು ಕೆನಡಾ ಮೂಲದ ಹಲವಾರು ಖಲಿಸ್ತಾನಿ ಭಯೋತ್ಪಾದಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು, ಸಿಖ್ಸ್ ಫಾರ್ ಜಸ್ಟಿಸ್ನ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ನ ದಿವಂಗತ ಹರ್ದೀಪ್ ಸಿಂಗ್ ನಿಜ್ಜರ್ ಸೇರಿದಂತೆ ಇತರರು ಸೇರಿದ್ದಾರೆ.
|
eesanje/url_47_203_5.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಪೋಟ, ಅಪರಿಚಿತ ವ್ಯಕ್ತಿಗಳ ವಿರುದ್ದ ಎಫ್ಐಆರ್
|
2 |
+
ನವದೆಹಲಿ,ಡಿ.30- ಇಸ್ರೇಲಿ ರಾಯಭಾರಿ ಕಚೇರಿ ಬಳಿ ಕಡಿಮೆ ತೀವ್ರತೆಯ ಸ್ಪೋಟ ಸಂಭವಿಸಿದ ಕೆಲವೇ ದಿನಗಳ ನಂತರ, ದಿಲ್ಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 (ಸ್ಪೋಟಕ್ಕೆ ಜೀವ ಅಥವಾ ಆಸ್ತಿಗೆ ಅಪಾಯವನ್ನುಂಟುಮಾಡುವ ಶಿಕ್ಷೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
|
3 |
+
ಪೃಥ್ವಿರಾಜ್ ರಸ್ತೆಯಲ್ಲಿರುವ ಪ್ಲಾಟ್ ಸಂಖ್ಯೆ 4, ನಂದಾಸ್ ಹೌಸ್ ಮತ್ತು ಸೆಂಟ್ರಲ್ ಹಿಂದಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಪ್ಲಾಟ್ ಸಂಖ್ಯೆ 2 ಎ ನಲ್ಲಿರುವ ಮನೆಯ ಗಡಿ ಗೋಡೆಗಳ ನಡುವಿನ ಪ್ರದೇಶದಲ್ಲಿ ಮಂಗಳವಾರ ಸಂಜೆ ಸ್ಪೋಟ ಸಂಭವಿಸಿತ್ತು. ಈ ಪ್ರದೇಶದಲ್ಲಿ ಪೆಪೊದೆಗಳು, ಗಿಡಗಳು ಮತ್ತು ಮರಗಳು ಮತ್ತು ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದರಿಂದ ಆರೋಪಿಗಳ ಸುಳಿವು ಇದುವರೆಗೂ ಪತ್ತೆಯಾಗಿಲ್ಲ.
|
4 |
+
ಅಬುಧಾಬಿಯಲ್ಲಿ ಹಿಂದೂ ದೇವಾಲಯ ಉದ್ಘಾಟನೆಗೆ ಮೋದಿಗೆ ಆಹ್ವಾನ
|
5 |
+
ಇದು ಡಾ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯ ಹಿಂದೆ, ಪೃಥ್ವಿರಾಜ್ ರಸ್ತೆಗೆ ಸಮಾನಾಂತರವಾಗಿ ಚಲಿಸುತ್ತದೆ. ಸೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸೋಟದ ಸ್ಥಳದ ಬಳಿ ಪೊಲೀಸರು ಇಸ್ರೇಲಿ ರಾಯಭಾರಿಯನ್ನು ಉದ್ದೇಶಿಸಿ ನಿಂದನೀಯ ಪತ್ರವನ್ನು ಕಂಡುಕೊಂಡಿದ್ದಾರೆ.
|
eesanje/url_47_203_6.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
7ನೇ ಬಾರಿಗೆ ಜಾರ್ಖಂಡ್ ಸಿಎಂಗೆ ಇಡಿ ಸಮನ್ಸ್
|
2 |
+
ರಾಂಚಿ, ಡಿ 30 (ಪಿಟಿಐ) ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಲಭ್ಯವಾಗುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
|
3 |
+
ಸೊರೆನ್ ಅವರು ಪ್ರಕರಣದ ತನಿಖಾಧಿಕಾರಿಗೆ ಅವರ ಆಯ್ಕೆಯ ದಿನಾಂಕ, ಸ್ಥಳ ಮತ್ತು ಸಮಯದ ಬಗ್ಗೆ ತಿಳಿಸುವಂತೆ ಕೇಂದ್ರ ಸಂಸ್ಥೆ ಕೇಳಿದೆ, ಇದರಿಂದಾಗಿ ಅವರ ಹೇಳಿಕೆಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ದಾಖಲಿಸಬಹುದು ಎಂದು ಮೂಲಗಳು ಉಲ್ಲೇಖಿಸಿವೆ.
|
4 |
+
ಏಜೆನ್ಸಿಯು ಡಿಸೆಂಬರ್ 31 ರೊಳಗೆ ಮುಖ್ಯಮಂತ್ರಿಯಿಂದ ಪ್ರತಿಕ್ರಿಯೆಯನ್ನು ಕೇಳಿದೆ, ಅದು ವಿಫಲವಾದರೆ ಮನಿ ಲಾಂಡರಿಂಗ್ ವಿರೋಧಿ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಮುಂದಿನ ಕಾನೂನು ಕ್ರಮವನ್ನು ಪ್ರಾರಂಭಿಸುತ್ತದೆ.
|
5 |
+
ರಾಮಮಂದಿರ ಉದ್ಘಾಟನೆಯಿಂದ ದೇಶದಲ್ಲಿ 50,000 ಕೋಟಿ ರೂ. ವಹಿವಾಟು : ಸಿಎಐಟಿ
|
6 |
+
ಇದು ಸೋರೆನ್ಗೆ ನೀಡಲಾದ ಏಳನೇ ನೋಟಿಸ್ ಅಥವಾ ಸಮನ್ಸ್ ಆಗಿದೆ ಆದರೆ ಅವರು ಇಡಿ ಮುಂದೆ ಎಂದಿಗೂ ಹಾಜರಾಗಿಲ್ಲ. ಮೊದಲನೆಯದನ್ನು ಕಳೆದ ಆಗಸ್ಟ್ 14 ರಂದು ನೀಡಲಾಯಿತು. ಅವರು ಇಡಿ ಕ್ರಮದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್ ಮತ್ತು ನಂತರ ಜಾರ್ಖಂಡ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು ಮತ್ತು ಸಮನ್ಸ್ಗಳನ್ನು ಅನರ್ಜಿತ ಎಂದು ವಾದಿಸಿದ್ದರು ಆದರೆ, ಎರಡೂ ನ್ಯಾಯಾಲಯಗಳು ಅವರ ಅರ್ಜಿಯನ್ನು ವಜಾಗೊಳಿಸಿದ್ದವು.
|
7 |
+
ಜಾರ್ಖಂಡ್ನಲ್ಲಿ ರಾಜಕೀಯ ಅನಿಶ್ಚಿತತೆ ಮತ್ತು ಅಶಾಂತಿಯನ್ನು ಸೃಷ್ಟಿಸುವ ಏಕೈಕ ಉದ್ದೇಶದಿಂದ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದ್ದು, ದುರುದ್ದೇಶದಿಂದ ಸಮನ್ಸ್ ನೀಡಲಾಗಿದೆ ಎಂದು ಸೊರೆನ್ ಹೈಕೋರ್ಟ್ನಲ್ಲಿ ಆರೋಪಿಸಿದ್ದರು. ಇಡಿ ಪ್ರಕಾರ ಜಾರ್ಖಂಡ್ನಲ್ಲಿ ಮಾಫಿಯಾದಿಂದ ಭೂಮಿಯ ಮಾಲೀಕತ್ವದ ಅಕ್ರಮ ಬದಲಾವಣೆಯ ಬೃಹತ್ ದಂಧೆಗೆ ತನಿಖೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ 2011ರ ಬ್ಯಾಚ್ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಛಾವಿ ರಂಜನ್ ಸೇರಿದಂತೆ 14 ಜನರನ್ನು ಏಜೆನ್ಸಿ ಬಂಧಿಸಿದೆ, ಅವರು ಈ ಹಿಂದೆ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ಮತ್ತು ರಾಂಚಿಯ ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.
|
8 |
+
ಕನ್ನಡ ಹೋರಾಟಗಾರರ ಬಂಧನದಿಂದ ದುಃಖವಾಗಿದೆ: ಬೊಮ್ಮಾಯಿ
|
9 |
+
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕನನ್ನು ಕಳೆದ ವರ್ಷ ನವೆಂಬರ್ನಲ್ಲಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಮತ್ತೊಂದು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ಪ್ರಶ್ನಿಸಿತ್ತು.
|
eesanje/url_47_203_7.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಶಿವನಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ
|
2 |
+
ಪಣಜಿ, ಡಿ.30 (ಪಿಟಿಐ) – ಶಿವನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸನ್ಬರ್ನ್ ಇಡಿಎಂ ಉತ್ಸವದ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಒತ್ತಾಯಿಸಿವೆ. ಸನ್ಬರ್ನ್ ಸಂಘಟಕರ ವಿರುದ್ಧ ಕಾಂಗ್ರೆಸ್ ಮುಖಂಡ ವಿಜಯ್ ಭಿಕೆ ತಡರಾತ್ರಿ ಮಾಪುಸಾದಲ್ಲಿ ಪೊಲೀಸ್ ದೂರು ದಾಖಲಿಸಿದರೆ, ಎಎಪಿ ಗೋವಾ ಮುಖ್ಯಸ್ಥ ಅಮಿತ್ ಪಾಲೇಕರ್ ಅವರು ಸನಾತನ ಧರ್ಮ ವನ್ನು ನೋಯಿಸಿದಕ್ಕಾಗಿ ರಾಜ್ಯ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
|
3 |
+
ಸನ್ಬರ್ನ್ ಜನಪ್ರಿಯ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಫೆಸ್ಟಿವಲ್ ಡಿಸೆಂಬರ್ 28 ರಂದು ಉತ್ತರ ಗೋವಾದ ವಗಟೋರ್ನಲ್ಲಿ ಪ್ರಾರಂಭವಾಯಿತು ಮತ್ತು ಇಂದು ಮುಕ್ತಾಯಗೊಳ್ಳಲಿದೆ. ಹಬ್ಬದ ಸಂದರ್ಭದಲ್ಲಿ ಭಗವಾನ್ ಶಂಕರನ ಚಿತ್ರವನ್ನು ಬಳಸಿರುವುದನ್ನು ನಾವು ನೋಡಿದ್ದೇವೆ. ಜನರು ಕುಡಿದು ಕುಣಿದಾಡುತ್ತಿದ್ದಾಗ ಎಲ್ಇಡಿ ಪರದೆಯಲ್ಲಿ ಅದು ಮಿಂಚಿತ್ತು ಎಂದು ಪಾಲೇಕರ್ ಸುದ್ದಿಗಾರರಿಗೆ ತಿಳಿಸಿದರು.
|
4 |
+
ಅಬುಧಾಬಿಯಲ್ಲಿ ಹಿಂದೂ ದೇವಾಲಯ ಉದ್ಘಾಟನೆಗೆ ಮೋದಿಗೆ ಆಹ್ವಾನ
|
5 |
+
ನಮ್ಮ ಸನಾತನ ಧರ್ಮದ ಪಾವಿತ್ರ್ಯತೆಗೆ ಧಕ್ಕೆಯಾಗಿರುವುದರಿಂದ ಕ್ರಮ ಕೈಗೊಳ್ಳಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಎಎಪಿ ನಾಯಕ ಹೇಳಿದರು. ಮದ್ಯ ಬಡಿಸುವ ಇಡಿಎಂ ಹಬ್ಬದ ಉದ್ದೇಶಕ್ಕೆ ನಮ್ಮ ದೇವರ ಬಳಕೆ ಸರಿಯಲ್ಲ. ಸನ್ಬರ್ನ್ ಉತ್ಸವದ ಆಯೋಜಕರ ವಿರುದ್ಧ ಅಪರಾಧವನ್ನು ದಾಖಲಿಸುವಂತೆ ಒತ್ತಾಯಿಸಿ ನಾವು ಪೊಲೀಸ್ ಮಹಾನಿರ್ದೇಶಕರಿಗೆ ಕರೆ ಮಾಡಿದ್ದೇವೆ ಎಂದು ಅವರು ಹೇಳಿದರು.
|
6 |
+
ಮಾಪುಸಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಕಾಂಗ್ರೆಸ್ ನಾಯಕ ಭಿಕೆ ಅವರು ಆಯೋಜಕರು ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ, ಭಗವಾನ್ ಶಿವನು ಮದ್ಯಪಾನ, ನಿಷೇಧಿತ ಪದಾರ್ಥಗಳ ಸೇವನೆ ಮತ್ತು ಕಾರ್ಯಕ್ರಮದ ಸಮಯದಲ್ಲಿ ನಡೆಯುವ ಇತರ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ಬೆಂಬಲಿಸುತ್ತಾನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಿಂದ ದೂರು ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
|
eesanje/url_47_203_8.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ರಾಮಮಂದಿರ ಉದ್ಘಾಟನೆಯಿಂದ ದೇಶದಲ್ಲಿ 50,000 ಕೋಟಿ ರೂ. ವಹಿವಾಟು : ಸಿಎಐಟಿ
|
2 |
+
ಅಯೋಧ್ಯಾ :ಜನವರಿ 22 ರಂದು ಶ್ರೀ ರಾಮ ಮಂದಿರದ ಉದ್ಘಾಟನೆಯಿಂದ ದೇಶದಲ್ಲಿ 50,000 ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ನಡೆಯುವ ಅಂದಾಜಿದೆ ಎಂದು ಟ್ರೇಡ್ ಬಾಡಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ತಿಳಿಸಿದೆ. ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರ ಪ್ರಕಾರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ದಿನವು ಪ್ರತಿಯೊಂದು ವಿಷಯದಲ್ಲೂ ಐತಿಹಾಸಿಕವಾಗಿರುತ್ತದೆ, ಏಕೆಂದರೆ ದೇಶಾದ್ಯಂತ ಎಲ್ಲಾ ವರ್ಗಗಳ ಜನರಲ್ಲೂ ಅಪಾರ ಉತ್ಸಾಹವಿದೆ, ಇದು ಶ್ರೀರಾಮ ದೇವಾಲಯಕ್ಕೆ ಸಂಬಂಧಿಸಿದ ಉತ್ಪನ್ನಗಳ ಖರೀದಿಸಲು ಕಾರಣವಾಗುತ್ತದೆ ಎಂದಿದ್ದಾರೆ.
|
3 |
+
ರಾಷ್ಟ್ರವ್ಯಾಪಿ ವ್ಯಾಪಾರ ಅವಕಾಶಗಳ ಕುರಿತು ಮಾತನಾಡಿದ ಸಿಎಐಟಿಯ ಹಿರಿಯ ಸದಸ್ಯರು, ವಿಶೇಷ ಬಟ್ಟೆಯ ಹೂಮಾಲೆಗಳು, ಲಾಕೆಟ್ಗಳು, ಕೀಚೈನ್ಗಳು, ರಾಮ್ ದರ್ಬಾರ್ನ ಚಿತ್ರಗಳು, ರಾಮಮಂದಿರದ ಮಾದರಿಗಳು, ಶ್ರೀರಾಮ ಧ್ವಜ, ಶ್ರೀರಾಮ ಅಂಗವಸ್ತ್ರ ಇತ್ಯಾದಿಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ ಎಂದು ಹೇಳಿದರು.
|
4 |
+
ದೇಶಾದ್ಯಂತ ಮಾರುಕಟ್ಟೆಗಳಲ್ಲಿ ವಿಶೇಷವಾಗಿ ಶ್ರೀರಾಮ ಮಂದಿರದ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ಮಾದರಿಗಳನ್ನು ಹಾರ್ಡ್ಬೋರ್ಡ್, ಪೈನ್ವುಡ್, ಮರ ಇತ್ಯಾದಿಗಳಿಂದ ವಿವಿಧ ಗಾತ್ರಗಳಲ್ಲಿ ತಯಾರಿಸಲಾಗುತ್ತಿದೆ ಎಂದು ವ್ಯಾಪಾರ ಸಂಸ್ಥೆಯ ಇಬ್ಬರೂ ನಾಯಕರು ಹೇಳಿದರು. ಈ ಮಾದರಿಗಳನ್ನು ತಯಾರಿಸುವಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಉದ್ಯೋಗ ಪಡೆಯುತ್ತಿದ್ದಾರೆ, ಸ್ಥಳೀಯ ಕುಶಲಕರ್ಮಿಗಳು, ಕಲಾವಿದರು,ಕೆಲಸಗಾರರು ಎಲ್ಲಾ ರಾಜ್ಯಗಳಲ್ಲಿ ವ್ಯಾಪಾರ ಅವಕಾಶಗಳನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಹೊಸ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಹೇಳಿದರು.
|
5 |
+
ಶ್ರೀರಾಮ ಮಂದಿರದ ಮಾದರಿಗಳನ್ನು ಮುದ್ರಿಸಲಾಗಿರುವ ಕುರ್ತಾಗಳು, ಟೀ ಶರ್ಟ್ಗಳು ಮತ್ತು ಇತರ ಬಟ್ಟೆಗಳನ್ನು ಹೆಚ್ಚಾಗಿ ಸಿದ್ಧಪಡಿಸಲಾಗುತ್ತಿದೆ ಎಂದು ಇಬ್ಬರೂ ಹೇಳಿದರು. ಖಾದಿ ಬಟ್ಟೆಯನ್ನು ಕೈಯಿಂದ ಕಸೂತಿ ಮಾಡಲಾದ ಅಥವಾ ಮುದ್ರಿಸುವ ಕುರ್ತಾಗಳನ್ನು ತಯಾರಿಸಲು ಬಳಸಲಾಗುತ್ತಿದೆ ಎಂದು ಹೇಳಿದರು.
|
6 |
+
ಶ್ರೀ ರಾಮ ಮಂದಿರದ ಉದ್ಘಾಟನೆ ಸಂದರ್ಭಕ್ಕಾಗಿ ಹೆಚ್ಚುವರಿ ವ್ಯಾಪಾರದ ಬೇಡಿಕೆಯನ್ನು ಪೂರೈಸಲು ಎಲ್ಲಾ ರಾಜ್ಯಗಳ ವ್ಯಾಪಾರಿಗಳು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದರು, ಈ ಮಟ್ಟದ ವಹಿವಾಟು ಸನಾತನ ಆರ್ಥಿಕತೆಯ ಬೇರುಗಳು ಭಾರತದಲ್ಲಿ ಬಹಳ ಆಳವಾಗಿವೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
|
7 |
+
“ರಾಮ ರಾಜ್ಯ ದಿವಸ್” ಎಂದು ಘೋಷಿಸಿ :ಜನವರಿ 22 ಅನ್ನು “ರಾಮ ರಾಜ್ಯ ದಿವಸ್” ಎಂದು ಘೋಷಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರವೀಣ್ ಖಂಡೇಲ್ವಾಲ�� ಮತ್ತು ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ಟಿಯಾ ಅವರು ಮನವಿ ಮಾಡಿದ್ದಾರೆ, .
|
8 |
+
ದೇಶಾದ್ಯಂತ ದೀಪಾವಳಿ ಆಚರಿಸಲು ಕರೆ :ಜ.22ರಂದು ದೇಶಾದ್ಯಂತ ದೀಪಾವಳಿ ಆಚರಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಮಣ್ಣಿನ ದೀಪಗಳು, ರಂಗೋಲಿಗಾಗಿ ವಿವಿಧ ಬಣ್ಣಗಳು, ಅಲಂಕಾರಕ್ಕೆ ಹೂವುಗಳು, ದೀಪಾಲಂಕಾರಕ್ಕೆ ಬೇಕಾದ ಎಲೆಕ್ಟ್ರಿಕಲ್ ವಸ್ತುಗಳಿಗೆ ಭಾರಿ ಬೇಡಿಕೆ ಬರಲಿದೆ ಎಂದು ವರ್ತಕ ಸಂಘದ ಹಿರಿಯರು ತಿಳಿಸಿದ್ದಾರೆ. ಮಾರುಕಟ್ಟೆಗಳು ಮತ್ತು ಮನೆಗಳು. ಸೇವಾ ವಲಯವು ದೊಡ್ಡ ಉತ್ತೇಜನವನ್ನು ಪಡೆಯುವ ಸಾಧ್ಯತೆಯಿದೆ ಮತ್ತು ದೇಶಾದ್ಯಂತ ಹೋರ್ಡಿಂಗ್ಗಳು, ಪೋಸ್ಟರ್ಗಳು, ಬ್ಯಾನರ್ಗಳು, ಕರಪತ್ರಗಳು, ಇತರ ಸಾಹಿತ್ಯ, ಸ್ಟಿಕ್ಕರ್ಗಳು ಮುಂತಾದ ಪ್ರಚಾರ ಸಾಮಗ್ರಿಗಳ ತಯಾರಕರು ಸಹ ಗಣನೀಯ ವ್ಯವಹಾರಕ್ಕೆ ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಅಲ್ಲದೆ, ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯಿಂದ ದೇಶಾದ್ಯಂತ ಸಂಗೀತ ವ್ಯವಹಾರಕ್ಕೆ ಸಂಬಂಧಿಸಿದ ಜನರು ಸಹ ಪ್ರಯೋಜನ ಪಡೆಯುತ್ತಾರೆ ಎಂದು ಅವರು ಹೇಳಿದರು.
|
eesanje/url_47_203_9.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಅಬುಧಾಬಿಯಲ್ಲಿ ಹಿಂದೂ ದೇವಾಲಯ ಉದ್ಘಾಟನೆಗೆ ಮೋದಿಗೆ ಆಹ್ವಾನ
|
2 |
+
ನವದೆಹಲಿ,ಡಿ.29- ಮುಂಬರುವ 2024ರ ಫೆಬ್ರವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿಯಾದ ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ಉದ್ಘಾಟಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂದು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
|
3 |
+
ಸ್ವಾಮಿ ಈಶ್ವರ ಚರಣ ದಾಸ್ ಮತ್ತು ಬ್ರಹ್ಮವಿಹಾರಿ ದಾಸ್ ನೇತೃತ್ವದ ಬಿಎಪಿಎಸ್ ಸಂಘಟನೆಯ ಪ್ರತಿನಿಧಿಗಳು ನವದೆಹಲಿಯಲ್ಲಿರುವ ಪ್ರಧಾನಿಗಳ ನಿವಾಸಕ್ಕೆ ಭೇಟಿ ಕೊಟ್ಟು, ಫೆಬ್ರವರಿ 14ರಂದು ಆಗಮಿಸಿ, ನೂತನ ನಿರ್ಮಾಣದ ದೇವಾಲಯವನ್ನು ಉದ್ಘಾಟನೆ ಮಾಡುವಂತೆ ಆಹ್ವಾನ ನೀಡಿದ್ದಾರೆ.
|
4 |
+
ಅರಬ್ ದೇಶದಲ್ಲಿ ಸ್ಥಾಪನೆಗೊಂಡಿರುವ ದೊಡ್ಡ ಹಿಂದೂ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪ್ರಧಾನಿಗಳು ದಯೆಯಿಂದ ಸ್ವೀಕರಿಸಿದ್ದಾರೆ. ಐತಿಹಾಸಿಕ ಮತ್ತು ಸಾಂಪ್ರದಾಯಿಕ ದೇವಾಲಯಕ್ಕೆ ತಮ್ಮ ಉತ್ಸಾಹದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಬಿಎಪಿಎಸ್ ಸಂಸ್ಥೆ ಹೇಳಿದೆ.
|
5 |
+
ಚಿತ್ರದುರ್ಗ : ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿ ಪಂಜರಗಳು ಪತ್ತೆ
|
6 |
+
ಸುಮಾರು ಒಂದು ಗಂಟೆಗಳ ಕಾಲ ಪ್ರಧಾನಿಯೊಂದಿಗೆ ಕುಳಿತು ಚರ್ಚಿಸಿದ ಬಿಎಪಿಎಸ್ ನಿಯೋಗವು, ಜಾಗತಿಕ ಸಾಮರಸ್ಯಕ್ಕಾಗಿ ಅಬುಧಾಬಿ ದೇವಾಲಯದ ಮಹತ್ವ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಆಧ್ಯಾತ್ಮಿಕ ನಾಯಕತ್ವಕ್ಕಾಗಿ ಮೋದಿಯವರ ದೃಷ್ಟಿಕೋನದ ಬಗ್ಗೆ ಸಂವಾದ ನಡೆಸಿತು ಎಂದು ತಿಳಿಸಿದೆ.
|
7 |
+
ಅರಳುತ್ತಿರುವ ಕಮಲದ ಹೂವನ್ನು ಹೋಲುವಂತೆ ದೇವಾಲಯದ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ ಎಂದ ಸಂಸ್ಥೆ, ಈ ದೇವಾಲಯವು ಯುನೈಟೆಡ್ ಅರಬ್ ಎಮಿರೇಟ್ಸ್ನ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಎಂದು ಹೇಳಿದೆ.
|
eesanje/url_47_204_1.txt
ADDED
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು
|
2 |
+
ಲಕ್ನೋ,ಡಿ.29- ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್ ಎಂದು ಹೆಸರಿಡಲು ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಹೊಸ ವಿಮಾನ ನಿಲ್ದಾಣ ವನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದ ಆರಂಭಿಕ ಹಂತವು ಜನವರಿ 6 ರಿಂದ ವಿಮಾನ ಹಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.
|
3 |
+
ಜನವರಿ 22 ರಂದು ರಾಮಮಂದಿರ ಉದ್ಘಾಟನಾ ಸಮಾರಂಭದ ಮೊದಲು, ಪ್ರಧಾನಿ ಮೋದಿ ಹೊಸ ವಿಮಾನ ನಿಲ್ದಾಣ ಮತ್ತು ನವೀಕರಿಸಿದ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಈ ಹಿಂದೆ ವಿಮಾನ ನಿಲ್ದಾಣಕ್ಕೆ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯೆ ಎಂದು ಹೆಸರಿಡುವುದಾಗಿ ತೀರ್ಮಾನ ಮಾಡಲಾಗಿತ್ತು. ಆದರೆ ಇದೀಗ ಮಹರ್ಷಿ ವಾಲ್ಮೀಕಿ ಎಂದು ನಾಮಕರಣ ಮಾಡುವ ಸಾಧ್ಯತೆಗಳಿವೆ.
|
4 |
+
ಉದ್ಘಾಟನೆಯ ದಿನದಂದು ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ನಿಂದ ಮೊದಲ ವಿಮಾನಗಳು ಕಾರ್ಯನಿರ್ವಹಿಸಲಿವೆ. ಎರಡು ವಿಮಾನಯಾನ ಸಂಸ್ಥೆಗಳು ಕೂಡ ಈಗಾಗಲೇ ದೆಹಲಿ, ಮುಂಬೈ ಮತ್ತು ಅಹಮದಾಬಾದ್ನಿಂದ ಅಯೋಧ್ಯೆಗೆ ವಿಮಾನಗಳನ್ನು ಘೋಷಿಸಿದ್ದು, ಜನವರಿ 2024 ರಲ್ಲಿ ಹಾರಾಟ ಪ್ರಾರಂಭವಾಗುತ್ತದೆ.
|
5 |
+
ದೇಣಿಗೆ ಸಂಗ್ರಹಕ್ಕೆ ಬಾರ್ ಕೋಡ್ ಮೊರೆ ಹೋದ ಕಾಂಗ್ರೆಸ್
|
6 |
+
ವಿಮಾನ ನಿಲ್ದಾಣದ ಮೊದಲ ಹಂತದ ನಿರ್ಮಾಣಕ್ಕೆ ಅಂದಾಜು 1,450 ಕೋಟಿ ರೂ. ವೆಚ್ಚವಾಗಿದೆ. ಸುಮಾರು 6,500 ಚದರ ಮೀಟರ್ಗಳಷ್ಟು ವಿಸ್ತಾರವಾಗಿರುವ ಹೊಸ ಟರ್ಮಿನಲ್ ಕಟ್ಟಡವು ಪೀಕ್ ಅವರ್ನಲ್ಲಿ 600 ಮಂದಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವಂತೆ ನಿರ್ಮಾಣ ಮಾಡಲಾಗಿದೆ. ಇನ್ನು ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದೆ.
|
7 |
+
ಮೊದಲ ಹಂತದ ಅತ್ಯಾಧುನಿಕ ವಿಮಾನ ನಿಲ್ದಾಣವನ್ನು 1,450 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರ ಟರ್ಮಿನಲ್ ಕಟ್ಟಡವು 6,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುತ್ತದೆ, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಜ್ಜುಗೊಂಡಿದೆ.
|
8 |
+
ಎರಡನೇ ಹಂತದ ಅಭಿವೃದ್ಧಿಯಲ್ಲಿ 50,000 ಚದರ ಮೀಟರ್ನ ಹೊಸ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಲಾಗುವುದು. ಪೀಕ್ ಅವರ್ಗಳಲ್ಲಿ 3 ಸಾವಿರ ಮಂದಿ ಪ್ರಯಾಣಿಕರು ಹಾಗೂ ವಾರ್ಷಿಕ 60 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮಥ್ರ್ಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
|
9 |
+
ಪ್ರತಿಷ್ಠಾಪನೆಯ ನಂತರ ರಾಮ ಮಂದಿರಕ್ಕೆ ಪ್ರತಿದಿನದ ಸಂದರ್ಶಕರ ಒಳಹರಿವನ್ನು ಸರಿಹೊಂದಿಸಲು ಏರ್ಲೈನ್ಸ್ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳನ್ನು ಒದಗಿಸುತ್ತದೆ. ಕಟ್ಟಡದ ಮುಂಭಾಗವು ರಾಮ ���ಂದಿರದ ವಾಸ್ತುಶಿಲ್ಪವನ್ನು ಚಿತ್ರಿಸುತ್ತದೆ. ಒಳಭಾಗದಲ್ಲಿ ಸ್ಥಳೀಯ ಕಲೆ, ವರ್ಣಚಿತ್ರಗಳು ಮತ್ತು ಭಗವಾನ್ ರಾಮನ ಜೀವನವನ್ನು ಚಿತ್ರಿಸುವ ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ.
|
10 |
+
ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ
|
11 |
+
ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ, ಎಲïಇಡಿ ಲೈಟಿಂಗ್, ಮಳೆ-ನೀರು ಕೊಯ್ಲು, ಕಾರಂಜಿಗಳೊಂದಿಗೆ ಭೂದೃಶ್ಯ, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ಸೌರ ವಿದ್ಯುತ್ ಸ್ಥಾವರ ಮತ್ತು ಇತರ ಹಲವು ಸೌಲಭ್ಯಗಳಂತಹ ವಿವಿಧ ಸಮರ್ಥನೀಯ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸಲಿದ್ದು ಇದು ಪ್ರವಾಸೋದ್ಯಮ, ವ್ಯಾಪಾರ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶಗಳಲ್ಲಿ ಉತ್ತೇಜನಕ್ಕೆ ಕಾರಣವಾಗುತ್ತದೆ.
|
eesanje/url_47_204_10.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಪಾಕಿಸ್ತಾನದಿಂದ ಭಾರತದೊಳಗೆ ಹಾರಿಬಂತು ಜಿಪಿಎಸ್ ಕಟ್ಟಿದ ಹದ್ದು
|
2 |
+
ಶ್ರೀನಗರ,ಡಿ.28-ಜೈಸಲ್ಮೇರ್ ಜಿಲ್ಲೆಯ ಶಹಗಢ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತಕ್ಕೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ತರಬೇತಿ ಪಡೆದ ಹದ್ದು ಪಕ್ಷಿಯನ್ನುಗಡಿ ಭದ್ರತಾ ಪಡೆಯ () ಪಡೆಗಳಿಗೆ ಸಿಕ್ಕಿಬಿದ್ದಿದೆ.
|
3 |
+
ಹಕ್ಕಿಯ ಕಾಲುಗಳಿಗೆ ವಿಶೇಷ ರೀತಿಯ ಉಂಗುರವನ್ನು ಜೋಡಿಸಲಾಗಿದೆ, ಅದರ ಮೇಲೆ ಕೆಲವು ಸಂಖ್ಯೆಗಳನ್ನು ಬರೆಯಲಾಗಿದೆ. ಹದ್ದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ , ಉಂಗುರದ ಮೇಲೆ ಬರೆದಿರುವ ಸಂಖ್ಯೆಗಳ ಕುರಿತು ತನಿಖೆ ನಡೆಸುತ್ತಿದೆ.
|
4 |
+
ಯುವನಿಧಿ ಯೋಜನೆಗೆ ಯಾರು ಅರ್ಹರು..? ನೋಂದಣಿ ಹೇಗೆ..?
|
5 |
+
ವರದಿಯ ಪ್ರಕಾರ ಅರಬ್ನಲ್ಲಿ ಇಂತರ ತರಬೇತಿ ಹದ್ದುಗಳನ್ನುಬೇಟೆ ಹಾಗು ಇತರೆ ಕಾರ್ಯಗಳಿಗೆ ಬಳಸಲಾಗುತ್ತದೆ. ಇದಕ್ಕೆ ಟೈಲರ್ ಎಮದು ಕರೆಯುತ್ತಾರೆ ಗುಪ್ತ ಕಾರ್ಯಾಚರಣೆಗೂ ಬಳಸಲಾಗುತ್ತಿದ್ದು ಹೆಚ್ಚಿನ ತನಿಖೆಯಿಂದ ಹೆಚ್ಚಿ ಮಾಹಿತಿ ಸಿಗಬೇಕಿದೆ.
|
eesanje/url_47_204_11.txt
ADDED
@@ -0,0 +1,12 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಕೃಷಿ ಭೂಮಿ ಖರೀದಿ ಹಗರಣದಲ್ಲಿ ಪ್ರಿಯಾಂಕಾ ಗಾಂಧಿ ಹೆಸರು
|
2 |
+
ನವದೆಹಲಿ,ಡಿ.28- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆರೋಪಪಟ್ಟಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೆಸರನ್ನು ಉಲ್ಲೇಖಿಸಿದೆ. ಹರಿಯಾಣದ ಫರಿದಾಬಾದ್ನಲ್ಲಿ ಕೃಷಿ ಭೂಮಿ ಖರೀದಿಸುವಲ್ಲಿ ಅವರ ಪಾತ್ರವಿದೆ ಎಂದು ಆರೋಪಿಸಲಾಗಿದೆ.
|
3 |
+
2006ರಲ್ಲಿ ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್.ಎಲ್.ಪಹ್ವಾ ಅವರಿಂದ ಹರಿಯಾಣದ ಫರಿದಾಬಾದ್ನಲ್ಲಿ ಐದು ಎಕರೆ ಕೃಷಿ ಭೂಮಿ ಖರೀದಿಸಿ, ಅದೇ ಭೂಮಿಯನ್ನು ಫೆಬ್ರವರಿ, 2010 ರಲ್ಲಿ ಅವರಿಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ ಶೀಟ್ ನಲ್ಲಿ ಇಡಿ, ಪ್ರಿಯಾಂಕಾ ಗಾಂಧಿಯ ಹೆಸರು ಉಲ್ಲೇಖಿಸಿದೆ.
|
4 |
+
ನವದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್.ಎಲ್. ಪಹ್ವಾ ಅವರಿಂದ 2006 ರಲ್ಲಿ ಭೂಮಿ ಖರೀದಿಸಿ, ಫೆಬ್ರವರಿ 2010 ರಲ್ಲಿ ಅದೇ ಭೂಮಿಯನ್ನು ಅವರಿಗೆ ಮಾರಾಟ ಮಾಡುವಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಈ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಆರೋಪಿ ಎಂದು ಹೆಸರಿಸಲಾಗಿಲ್ಲ.
|
5 |
+
ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರು 2005-2006 ರ ನಡುವೆ 334 ಕನಾಲ್ (40.08 ಎಕರೆ) ಅಳತೆಯ ಮೂರು ತುಂಡು ಭೂಮಿಯನ್ನು ಖರೀದಿಸಿದ್ದಾರೆ ಮತ್ತು ಅದೇ ಭೂಮಿಯನ್ನು 2010ರಲ್ಲಿ ಮಾರಾಟ ಮಾಡಿದ್ದಾರೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಲಂಡನ್ ಮೂಲದ ಸಂಜಯ್ ಭಂಡಾರಿ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ.
|
6 |
+
ಫೆಲ್ಡಿಂಗ್ ವೇಳೆ ಕನ್ನಡಲ್ಲೇ ‘ಕೈಗೆ ಹಾಕಲೋ’ ಎಂದ ಕೆ.ಎಲ್.ರಾಹುಲ್ ವಿಡಿಯೋ ವೈರಲ್
|
7 |
+
ಈ ಪ್ರಕರಣದಲ್ಲಿ ಯುಎಇ ಮೂಲದ ಎನ್ಆರ್ಐ ಉದ್ಯಮಿ ಸಿಸಿ ಅಥವಾ ಚೆರುವತ್ತೂರು ಚಾಕುಟ್ಟಿ ಥಂಪಿ ಮತ್ತು ಯುಕೆ ಪ್ರಜೆ ಸುಮಿತ್ ಚಡ್ಡಾ ವಿರುದ್ಧ ಹೊಸ ಚಾರ್ಜ್ ಶೀಟ್ ಸಲ್ಲಿಸಿರುವುದಾಗಿ ಇಡಿ ಹೇಳಿಕೆ ನೀಡಿದೆ. ಇಡಿ ಪ್ರಕಾರ, ಫರಿದಾಬಾದ್ನ ಅಮಿಪುರ್ ಗ್ರಾಮದಲ್ಲಿ ಪಹ್ವಾ ಅವರಿಂದ ಭೂಮಿಯನ್ನು ಖರೀದಿಸಲಾಗಿದೆ.
|
8 |
+
ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಅವರು 2005-2006 ರಿಂದ ಅಮಿಪುರ್ ಗ್ರಾಮದಲ್ಲಿ 40.08 ಎಕರೆಯ ಮೂರು ತುಂಡು ಭೂಮಿಯನ್ನು ಖರೀದಿಸಿ ಅದನ್ನು ಡಿಸೆಂಬರ್, 2010 ರಲ್ಲಿ ಅವರಿಗೇ ಮಾರಾಟ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಪಹ್ವಾ ಅವರು ಎನ್ಆರ್ಐ ಉದ್ಯಮಿ ಸಿಸಿ ಥಂಪಿಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ.
|
9 |
+
ಈ ದೊಡ್ಡ ಪ್ರಕರಣವು ಪರಾರಿಯಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಯನ್ನು ಒಳಗೊಂಡಿದ್ದು, ಮನಿ ಲಾಂಡರಿಂಗ್, ವಿದೇಶಿ ವಿನಿಮಯ ಮತ್ತು ಕಪ್ಪು ಹಣದ ಕಾನೂನುಗಳ ಉಲ್ಲಂಘನೆ ಮತ್ತು ಅಕೃತ ರಹಸ್ಯ ಕಾಯಿದೆ ಅಡಿ ತನಿಖೆ ನಡೆಯುತ್ತಿದೆ.ಸಂಜಯ್ ಭಂಡಾರಿ 2016 ರಲ್ಲಿ ಭಾರತದಿಂದ ಯುಕೆಗೆ ಪಲಾಯನ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಸಿದಂತೆ ಇಡಿ ತನ್ನ ಹಿಂದಿನ ಆರೋಪಪಟ್ಟಿಯಲ್ಲಿ ರಾಬರ್ಟ್ ವಾದ್ರಾ ಅವರನ್ನು ಥಂಪಿಯ ಆಪ್ತ ಸಹಾಯಕ ಎಂದು ಹೆಸರಿಸಿದೆ.
|
10 |
+
ಹೊಸ ಆರೋಪಪಟ್ಟಿಯಲ್ಲಿ, ಪಹ್ವಾ ಅವರು ಭೂ ಸ್ವಾೀನದ ಉದ್ದೇಶಕ್ಕಾಗಿ ಹಣವನ್ನು ಪಡೆಯುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ರಾಬರ್ಟ್ ವಾದ್ರಾ ಅವರು ಪಹ್ವಾಗೆ ಸಂಪೂರ್ಣ ಮಾರಾಟದ ಹಣವನ್ನು ಪಾವತಿಸದಿರುವುದು ಗಮನಕ್ಕೆ ಬಂದಿದೆ ಎಂದು ಇಡಿ ಹೇಳಿದೆ.
|
11 |
+
ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾದ ಹೆಬ್ಬಾರ್ ಮತ್ತು ಸೋಮಶೇಖರ್
|
12 |
+
ಜನವರಿ 2020 ರಲ್ಲಿ ಈ ಪ್ರಕರಣದಲ್ಲಿ ಥಂಪಿ ಅವರನ್ನು ಬಂಸಲಾಯಿತು ಮತ್ತು ಇಡಿ ಅವರು ವಾದ್ರಾ ಅವರ ಆಪ್ತ ಎಂದು ಆರೋಪಿಸಿದೆ. ಚಾರ್ಜ್ ಶೀಟ್ನಲ್ಲಿ, ಎಚ್.ಎಲ್.ಪಹ್ವಾ ವಾದ್ರಾ ಮತ್ತು ಥಂಪಿ ಇಬ್ಬರಿಗೂ ಜಮೀನು ಮಾರಾಟ ಮಾಡಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಹರಿಯಾಣದಲ್ಲಿ ಜಮೀನು ಖರೀದಿಸಲು ಬೇನಾಮಿ ಹಣ ನೀಡಲಾಗಿದ್ದು, ವಾದ್ರಾ ಜಮೀನು ಮಾರಾಟಕ್ಕೆ ಸಂಪೂರ್ಣ ಹಣ ನೀಡಿಲ್ಲ ಎನ್ನಲಾಗಿದೆ.
|
eesanje/url_47_204_12.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ, ಖರ್ಗೆ ಧ್ವಜಾರೋಹಣ
|
2 |
+
ನವದೆಹಲಿ, ಡಿ. 28- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಯಲ್ಲಿ ಪಕ್ಷದ 139 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಧ್ವಜಾರೋಹಣ ಮಾಡಿದರು. ಸಂಸದ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸಂಸದ ರಾಜೀವ್ ಶುಕ್ಲಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಇತರರು ಇದ್ದರು.
|
3 |
+
ಕಾಂಗ್ರೆಸ್ ನಾಯಕ ಹಾಗೂ ಬಿಹಾರ ವಿಧಾನಸಭಾ ಮಾಜಿ ಸದಸ್ಯ ಶಕೀಲ್ ಅಹ್ಮದ್ ಮಾತನಾಡಿ, 1885ರ ಡಿಸೆಂಬರ್ 28ರಂದು ಕಾಂಗ್ರೆಸ್ ಸ್ಥಾಪನೆಯಾದಾಗ ಅದರ ತಳಹದಿಯ ಹಿಂದಿನ ಉದ್ದೇಶ ಇಂದಿಗೂ ಅದೇ ಆಗಿದೆ. ಬ್ರಿಟಿಷರು ಸಮಾಜದಲ್ಲಿ ದ್ವೇಷ ಹರಡಿ ಜನರನ್ನು ಪರಸ್ಪರ ತಿರುಗಿಸಲು ಯತ್ನಿಸುತ್ತಿದ್ದಾಗ ಕಾಂಗ್ರೆಸ್ ಸ್ಥಾಪನೆಯಾಯಿತು. ಸಮಾಜವನ್ನು ಒಗ್ಗೂಡಿಸುವ ಮತ್ತು ಬ್ರಿಟಿಷ್ ಆಡಳಿತದ ಹಿಡಿತದಿಂದ ಮುಕ್ತಗೊಳಿಸುವ ಉದ್ದೇಶವನ್ನು ಹೊಂದಿತ್ತು ಎಂದಿದ್ದಾರೆ.
|
4 |
+
ಇಂದಿಗೂ ಕಾಂಗ್ರೆಸ್ ಸಮಾಜದಲ್ಲಿ ಹರಡುತ್ತಿರುವ ದ್ವೇಷವನ್ನು ವಿರೋಧಿಸಲು ಪ್ರಯತ್ನಿಸುತ್ತಿದೆ, ಸಮಾಜದಲ್ಲಿನ ದ್ವೇಷವನ್ನು ಕೊನೆಗಾಣಿಸಲು ಮತ್ತು ಮೊಹಬ್ಬತ್ (ಪ್ರೇಮ) ಹರಡಲು ನಾವು ಸಿದ್ಧರಿದ್ದೇವೆ. ದೇಶವು ಒಗ್ಗೂಡಿದಾಗ ಮಾತ್ರ ಅದು ಅಭಿವೃದ್ಧಿ ಹೊಂದುತ್ತದೆ, ಇಲ್ಲದಿದ್ದರೆ ಯಾವುದೇ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.
|
5 |
+
ಫೆಲ್ಡಿಂಗ್ ವೇಳೆ ಕನ್ನಡಲ್ಲೇ ‘ಕೈಗೆ ಹಾಕಲೋ’ ಎಂದ ಕೆ.ಎಲ್.ರಾಹುಲ್ ವಿಡಿಯೋ ವೈರಲ್
|
6 |
+
ನಾಗ್ಪುರದಿಂದ ಪ್ರಾರಂಭವಾಗಲಿರುವ ಹೈ ತೈಯಾರ್ ಹಮï ರ್ಯಾಲಿ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವ ಅಂಬಿಕಾ ಸೋನಿ ಅವರು ರ್ಯಾಲಿಯಲ್ಲಿ ಪಕ್ಷವು ಮಹಾರಾಷ್ಟ್ರದಲ್ಲಿ ತನ್ನ ರಾಜಕೀಯ ನೆಲೆಯನ್ನು ಬಲಪಡಿಸಲು ಬಯಸುತ್ತದೆ ಎಂದು ಹೇಳಿದರು.ಮಹಾರಾಷ್ಟ್ರದಲ್ಲಿ ನಮಗೆ ದೊಡ್ಡ ರಾಜಕೀಯ ನೆಲೆಯಿದೆ. ಅದನ್ನು ಬಲಪ ಡಿಸಲು ನಾವು ಬಯಸುತ್ತೇವೆ.
|
7 |
+
ರಾಹುಲ್ ಗಾಂಧಿಯವರ ಪಾದಯಾತ್ರೆಯು ಮಣಿಪುರದಿಂದ ಮಹಾರಾಷ್ಟ್ರದವರೆಗೆ ನಡೆಯಲಿದೆ ಎಂದು ಅವರು ಹೇಳಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಡಿಸೆಂಬರ್ 28, 1885 ರಂದು ಬಾಂಬೆಯಲ್ಲಿ (ಮುಂಬೈ) ದಾಸ್ ತೇಜ್ಪಾಲ್ ಸಂಸ್ಕøತ ಕಾಲೇಜಿನಲ್ಲಿ 72 ಪ್ರತಿನಿಗಳ ಉಪಸ್ಥಿತಿಯಲ್ಲಿ ಸ್ಥಾಪಿಸಲಾಯಿತು.
|
eesanje/url_47_204_2.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ದರೋಡೆಕೊರನ ಸಹಚರನೆಂದು ನಂಬಿಸಿ 2 ಕೋಟಿ ನಗದು, 2 ಕೆಜಿ ಚಿನ್ನ ವಂಚಿಸಿದ್ದ ವ್ಯಾಪಾರಿ ಸೆರೆ
|
2 |
+
ಮುಂಬೈ,ಡಿ.29-ಕುಖ್ಯಾತ ದರೋಡೆಕೋರರೊಬ್ಬರ ಹೆಸರನ್ನು ಬಳಸಿಕೊಂಡು ಮತ್ತೊಬ್ಬ ಆಭರಣ ವ್ಯಾಪಾರಿಯಿಂದ 2 ಕೋಟಿ ರೂಪಾಯಿ ನಗದು ಮತ್ತು 2 ಕಿಲೋಗ್ರಾಂ ಚಿನ್ನವನ್ನು ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ದೆಹಲಿಯಲ್ಲಿ ಭಾರಿ ಸಾಲದಲ್ಲಿದ್ದ ಆಭರಣ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಸಂಗಮ್ ವಿಹಾರ್ನ ಕೆ-ಬ್ಲಾಕ್ನ ವಿಪಿನ್ ಗುಪ್ತಾ (35) ಬಂಧಿತ ಆರೋಪಿಯಾಗಿದ್ದಾನೆ.
|
3 |
+
ಈತ ದರೋಡೆಕೋರ ನೀರಜ್ ಬವಾನಾ ಸಹಚರನಂತೆ ನಟಿಸಿ ಸುಲಿಗೆ ಕರೆಗಳನ್ನು ಮಾಡಲು ಧ್ವನಿ ಮಾಡ್ಯುಲೇಶನ್ ಸಾಧನವನ್ನು ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಗುಪ್ತಾ ಅವರು ಪ್ರಸ್ತುತ ತಲೆಮರೆಸಿಕೊಂಡಿರುವ ತನ್ನ ಸ್ನೇಹಿತನೊಂದಿಗೆ ಸಂಚು ರೂಪಿಸಿ, ತನ್ನ ಸಾಲವನ್ನು ತೀರಿಸಲು ಆ ಪ್ರದೇಶದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವ ದಕ್ಷಿಣ ದೆಹಲಿ ಮೂಲದ ಇನ್ನೊಬ್ಬ ಆಭರಣ ವ್ಯಾಪಾರಿಯಿಂದ ನಗದು ಮತ್ತು ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
|
4 |
+
ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ
|
5 |
+
ಹೊಸ ವರ್ಷದ ಮುನ್ನಾದಿನದ ಮೊದಲು ಬೇಡಿಕೆಗಳನ್ನು ಈಡೇರಿಸದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ಬಲಿಪಶುವಿಗೆ ಬೆದರಿಕೆ ಹಾಕಿದ್ದಾರೆ ಎಂದು ಡಿಸಿಪಿ (ದಕ್ಷಿಣ) ಚಂದನ್ ಚೌಧರಿ ಹೇಳಿದ್ದಾರೆ.
|
eesanje/url_47_204_3.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಐಫೋನ್ ಹ್ಯಾಕ್ ಆರೋಪ ನಿರಾಕರಿಸಿದ ರಾಜೀವ್ ಚಂದ್ರಶೇಖರ್
|
2 |
+
ನವದೆಹಲಿ,ಡಿ.29- ಸರಕಾರಿ ಹ್ಯಾಕರ್ಗಳು ತಮ್ಮ ಐಫೋನ್ಗಳಿಗೆ ಕನ್ನ ಹಾಕಲು ಯತ್ನಿಸಿರುವ ಸಾಧ್ಯತೆ ಇದೆ ಎಂದು ಸ್ವತಂತ್ರ ಪತ್ರಕರ್ತರು ಮತ್ತು ವಿರೋಧ ಪಕ್ಷದ ರಾಜಕಾರಣಿಗಳಿಗೆ ಕಂಪನಿ ಎಚ್ಚರಿಕೆ ನೀಡಿದ ನಂತರ ಕೇಂದ್ರ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ.
|
3 |
+
ಸ್ವತಂತ್ರ ಭಾರತೀಯ ಪತ್ರಕರ್ತರು ಮತ್ತು ವಿರೋಧ ಪಕ್ಷದ ರಾಜಕಾರಣಿಗಳಿಗೆ ಅಕ್ಟೋಬರ್ನಲ್ಲಿ ಸರ್ಕಾರಿ ಹ್ಯಾಕರ್ಗಳು ಬಹುಶಃ ಅವರ ಐಜ್ಞಾನ್ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ಎಚ್ಚರಿಸಿದ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಧಿಕಾರಿಗಳು ತಕ್ಷಣವೇ ಆಪಲ್ ಸಂಸ್ಥೆ ವಿರುದ್ಧ ಕ್ರಮ ಕೈಗೊಂಡರು.
|
4 |
+
ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ
|
5 |
+
ಇದರ ನಂತರ, ಚಂದ್ರಶೇಖರ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಉಳಿದ ಕಥೆಯು ಆಪಲ್ನ ಪ್ರತಿಕ್ರಿಯೆಯನ್ನು ಒಳಗೊಂಡಿದೆ ಎಂದು ಎಕ್ಸ್ ಮಾಡಿದ್ದಾರೆ.ಸಂಸದರಿಗೆ ಐಫೋನ್ ಎಚ್ಚರಿಕೆಗಳ ಕುರಿತು ಆಪಲ್ ತಂಡವು ಈ ತಿಂಗಳು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲಿದೆ ಸಂಸದರಿಗೆ ಐಫೋನ್ ಎಚ್ಚರಿಕೆಗಳ ಕುರಿತು ಆಪಲ್ ತಂಡವು ಈ ತಿಂಗಳು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲು ತೀರ್ಮಾನಿಸಿದೆ.
|
eesanje/url_47_204_4.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಉಲ್ಫಾ ಉಗ್ರರೊಂದಿಗೆ ಶಾಂತಿ ಸಂಧಾನಕ್ಕೆ ಮುಂದಾದ ಕೇಂದ್ರ ಸರ್ಕಾರ
|
2 |
+
ಗುವಾಹಟಿ,ಡಿ.20-ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ ಜತೆಗಿನ ಶಾಂತಿ ಒಪ್ಪಂದಕ್ಕೆ ಇಂದು ಕೇಂದ್ರ ಸಹಿ ಹಾಕುವ ಮೂಲಕ ದಶಕಗಳಿಗೂ ಹಿಂದಿನ ಸಮಸ್ಯೆ ನಿವಾರಣೆಯತ್ತ ಗಮನಹರಿಸಿದೆ. ಸಹಿ ಮಾಡುವ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಉಪಸ್ಥಿತಿಯಲ್ಲಿ ಇಂದು ಸಂಜೆ ಉಲಾ ಉಗ್ರರೊಂದಿಗಿನ ಶಾಂತಿ ಮಾತುಕತೆಗೆ ಸಹಿ ಹಾಕಲಾಗುತ್ತಿದೆ.
|
3 |
+
ಒಂದು ದಶಕದಿಂದ ನಡೆದ ಮಾತುಕತೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಶ್ಲಾಘನೀಯ ಸಾಧನೆ ಇದಾಗಿದೆ ಎಂದು ಬಣ್ಣಿಸಲಾಗಿದೆ. ಆದರೆ, ಪರೇಶ್ ಬರುವಾ ನೇತೃತ್ವದ ಉಲಾ (ಸ್ವತಂತ್ರ) ಬಣವು ಮಾತುಕತೆಗಳನ್ನು ವಿರೋಧಿಸುತ್ತಿದೆ.
|
4 |
+
ಉಲ್ಪಾವನ್ನು ಅಸ್ಸಾಂನ ಸಾರ್ವಭೌಮತ್ವವನ್ನು ಮರುಸ್ಥಾಪಿಸುವ ಗುರಿಯೊಂದಿಗೆ ಏಪ್ರಿಲ್ 7, 1979 ರಂದು ರಚಿಸಲಾಯಿತು. ಈ ಗುಂಪು ತನ್ನ ನಾಲ್ಕು ದಶಕಗಳ ಅಸ್ತಿತ್ವದಲ್ಲಿ ಹಲವಾರು ದಾಳಿಗಳಿಗೆ ಕಾರಣವಾಗಿದೆ. ದಂಗೆಕೋರ ಗುಂಪು ಈಗ ಬಾಂಗ್ಲಾದೇಶ, ಭೂತಾನ್ ಮತ್ತು ಮ್ಯಾನ್ಮಾರ್ನಲ್ಲಿ ನೆಲೆಗಳನ್ನು ಹೊಂದಿದೆ. ಅದರ ಕೆಲವು ಕಾರ್ಯಕರ್ತರು ಚೀನಾ ಮತ್ತು ಪಾಕಿಸ್ತಾನದಲ್ಲಿ ತರಬೇತಿಯನ್ನೂ ಪಡೆದಿದ್ದಾರೆ. ಉಲ್ಪಾವನ್ನು ಎಲ್ಲಾ ಈಶಾನ್ಯ ಬಂಡುಕೋರ ಗುಂಪುಗಳಲ್ಲಿ ಅತ್ಯಂತ ಭಯಂಕರವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ ಮತ್ತು ಒಂದು ಹಂತದಲ್ಲಿ, ಆಗ್ನೇಯ ಏಷ್ಯಾದಲ್ಲಿ ಎಲ್ಟಿಟಿಇ ನಂತರ ಎರಡನೆಯದು ಎಂದು ಪರಿಗಣಿಸಲಾಗಿದೆ.
|
5 |
+
ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ
|
6 |
+
ಉಲ್ಪಾ ಅಸ್ಸಾಂ ಆಂದೋಲನಕ್ಕೆ ಮುಂಚಿನದು, ಅದರ ನಂತರ ವೇಗವನ್ನು ಪಡೆಯುತ್ತದೆ. ಅದರ ಅಸ್ತಿತ್ವದ ಉದ್ದಕ್ಕೂ, ಉನ್ನತ ನಾಯಕತ್ವದ ನಡುವಿನ ಆಂತರಿಕ ವ್ಯತ್ಯಾಸಗಳು ಸ್ಪಷ್ಟವಾಗಿವೆ.ರಾಜ್ಖೋವಾ ನೇತೃತ್ವದ ಉಲಾ ಬಣವು 2011 ರಲ್ಲಿ ಪರೇಶ್ ಬರುವಾ ನೇತೃತ್ವದ ಕಟ್ಟುನಿಟ್ಟಿನ ವಿಭಾಗದ ತೀವ್ರ ವಿರೋಧದ ಹೊರತಾಗಿಯೂ ಸರ್ಕಾರದೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿತು. ಇಂದು ಸಹಿ ಹಾಕಲಾಗುತ್ತಿರುವ ಶಾಂತಿ ಒಪ್ಪಂದದಿಂದ ದೂರ ಉಳಿಯುವ ನಿರ್ಧಾರವನ್ನು ಬರುವಾ ಅವರು ವ್ಯಕ್ತಪಡಿಸಿದ್ದಾರೆ ಮತ್ತು ನಂತರ ಉಲ್ಪಾ (ಸ್ವತಂತ್ರ) ರಚಿಸಿದ್ದಾರೆ.
|
7 |
+
ಶಾಂತಿ ಒಪ್ಪಂದವು ಸರ್ಕಾರದ ವಿಧಾನದಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ. 2005 ರಲ್ಲಿ, ಭಾರತ ಸರ್ಕಾರವು ಮೊದಲ ಬಾರಿಗೆ ಸಾರ್ವಭೌಮತ್ವ ಸೇರಿದಂತೆ ಉಲಾ ಎತ್ತಿದ ಪ್ರಮುಖ ವಿಷಯಗಳನ್ನು ಚರ್ಚಿಸಲು ಒಪ್ಪಿಕೊಂಡಿತು. ಈ ಒಪ್ಪಂದವು ದಂಗೆಗೆ ಪರಿಹಾರ ಮಾತ್ರವಲ್ಲದೆ ಅಸ್ಸಾಂನಲ್ಲಿ ಬಾಸುತ್ತಿರುವ ದೀರ್ಘಕಾಲದ ಕಳವಳಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.
|
eesanje/url_47_204_5.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ದೇಣಿಗೆ ಸಂಗ್ರಹಕ್ಕೆ ಬಾರ್ ಕೋಡ್ ಮೊರೆ ಹೋದ ಕಾಂಗ್ರೆಸ್
|
2 |
+
ನಾಗ್ಪುರ,ಡಿ.29- ಕುರ್ಚಿಗಳ ಹಿಂದೆ ಬಾರ್ ಕೋಡ್ ಹಾಕುವ ಮೂಲಕ ಚುನಾವಣಾ ದೇಣಿಗೆ ಸಂಗ್ರಹಕ್ಕೆ ಕಾಂಗ್ರೆಸ್ ಮುಂದಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಕ್ರೌಡ್ ಫಂಡಿಂಗ್ಗಾಗಿ ಕಾಂಗ್ರೆಸ್ ಬಾರ್ ಕೋಡ್ಗಳನ್ನು ಕುರ್ಚಿಗಳ ಹಿಂದೆ ಹಾಕಿತ್ತು.
|
3 |
+
ಈ ತಿಂಗಳ ಆರಂಭದಲ್ಲಿ ಪ್ರಾರಂಭಿಸಲಾದ ಕಾಂಗ್ರೆಸ್ ಕ್ರೌಡ್ಫಂಡಿಂಗ್ ಅಭಿಯಾನದ ಭಾಗವಾಗಿ ದೇಶಕ್ಕಾಗಿ ದೇಣಿಗೆ ಎಂಬ ಬರಹವಿದ್ದ ಬಾರ್ಕೋಡ್ಗಳನು ಮೈದಾನದ ಎಲ್ಲಾ ಕುರ್ಚಿಗಳ ಹಿಂದೆ ಅಂಟಿಸಲಾಗಿತ್ತು. ಮತ್ತು ಹೈನ್ ತೈಯಾರ್ ಹಮ ರ್ಯಾಲಿಯಲ್ಲಿ ಭಾಗವಹಿಸಿದವರಿಗೆ ದೇಣಿಗೆ ನೀಡುವಂತೆ ಒತ್ತಾಯಿಸಲಾಗಿದೆ. ಕುರ್ಚಿಗಳ ಹಿಂದಿರುವ ಕರಪತ್ರದಲ್ಲಿ ಬಾರ್ ಕೋಡ್ನೊಂದಿಗೆ ರಾಹುಲ್ ಗಾಂಧಿ ಅವರ ಚಿತ್ರವಿದೆ.
|
4 |
+
ಕರಪತ್ರದಲ್ಲಿ ಉತ್ತಮ ಭಾರತ ರಚನೆಗಾಗಿ 138 ವರ್ಷಗಳ ಈ ಹೋರಾಟದಲ್ಲಿ ಕಾಂಗ್ರೆಸ್ಗೆ ನಿಮ್ಮ ಅಗತ್ಯವಿದೆ. ಭಾರತಕ್ಕೆ ನಿಮ್ಮ ಅಗತ್ಯವಿದೆ. ದೇಣಿಗೆ ನೀಡಲು ಈಗಲೇ ಸ್ಕ್ಯಾನ್ ಮಾಡಿ ಎಂದು ಬರೆಯಲಾಗಿದೆ. ಎಲ್ಲಾ ದಾನಿಗಳ ಪೈಕಿ ಐದು ಅದೃಷ್ಟ ದಾನಿಗಳಿಗೆ ರಾಹುಲ್ ಗಾಂಧಿ ಅವರಿಂದ ದೇಣಿಗೆ ಮೆಚ್ಚುಗೆ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.
|
5 |
+
ಅನ್ಯಾಯಕ್ಕೆ ಹೆಸರಾದವರಿಂದ ನ್ಯಾಯ ಯಾತ್ರೆ : ಇರಾನಿ ವ್ಯಂಗ್ಯ
|
6 |
+
ಹೈ ತೈಯಾರ್ ಹಮ ರ್ಯಾಲಿಯಲ್ಲಿ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮಹಾರಾಷ್ಟ್ರ ಮತ್ತು ದೇಶದಾದ್ಯಂತ ಹಳೆಯ ಪಕ್ಷವು ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದು ಸಿದ್ಧಾಂತಗಳ ಹೋರಾಟ. ನಾವು ಒಟ್ಟಾಗಿ ಮಹಾರಾಷ್ಟ್ರ ಮತ್ತು ದೇಶದಲ್ಲಿ ಚುನಾವಣೆಗಳನ್ನು ಗೆಲ್ಲಲಿದ್ದೇವೆ ಎಂದು ಗಾಂಧಿ ಹೇಳಿದರು.
|
7 |
+
ಕಾಂಗ್ರೆಸ್ ನಾಯಕರು ತಮ್ಮ ಭಾಷಣದಲ್ಲಿ, ದೇಶದಲ್ಲಿ ಎರಡು ವಿರುದ್ಧ ಸಿದ್ಧಾಂತಗಳ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ದೇಶದಲ್ಲಿ ಸಿದ್ಧಾಂತಗಳ ಹೋರಾಟ ನಡೆಯುತ್ತಿದೆ, ಇದು ರಾಜಕೀಯ ಹೋರಾಟ, ಅಧಿಕಾರಕ್ಕಾಗಿ ಹೋರಾಟ ಎಂದು ಜನರು ಭಾವಿಸುತ್ತಾರೆ, ಆದರೆ ಈ ಹೋರಾಟದ ಅಡಿಪಾಯವು ಸಿದ್ಧಾಂತ, ಎರಡು ವಿರುದ್ಧವಾದ ಸಿದ್ಧಾಂತಗಳು. (ದೇಶ ಮೈ ವಿಚಾರಧಾರ ಕಿ ಲಡಾಯಿ ಚಲ್ ರಹೀ ಹೈ, ಲೋಗೋ ಕೋ ಲಗ್ತಾ ಹೈ ರಾಜನೀತಿಕ್ ಲಡಾಯಿ ಹೈ, ಸತ್ತಾ ಕಿ ಲಡಾಯಿ ಹೈ, ವೋ ಹೈ, ಮಗರ್ ಇಸ್ಸ್ ಲಡೈ ಕಿ ನೀವ್ ಜೋ ಹೈ ವೋ ವಿಚಾರಧಾರಾ ಹೈ, ದೋ ವಿಚಾರಧಾರಾ ಹೈ, ಎಂದು ರಾಹುಲ್ ಗಾಂಧಿ ಹೇಳಿದರು.
|
eesanje/url_47_204_6.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಮತಾಂತರಗೊಂಡು ಮುಸ್ಲಿಂ ಯುವತಿಯನ್ನು ಮದುವೆಯಾದ ಕಂದಾಯ ಅಧಿಕಾರಿ
|
2 |
+
ನವದೆಹಲಿ,ಡಿ.29- ತನ್ನ ಪತಿ ಆಶಿಶ್ ಗುಪ್ತಾ ಇಸ್ಲಾಂಗೆ ಮತಾಂತರಗೊಂಡು ಮೊಹಮ್ಮದ್ ಯೂಸುಫ್ ಎಂದು ಹೆಸರು ಬದಲಿಸಿಕೊಂಡು ಮುಸ್ಲಿಂ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂದು ಆರೋಪಿಸಿ ಕಂದಾಯ ಅಧಿಕಾರಿಯೊಬ್ಬರ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
|
3 |
+
ಕಳೆದ ಸೆಪ್ಟೆಂಬರ್ 2 ರಂದು ಆಶಿಶ್ ಗುಪ್ತಾ ಮೌದಾಹಾದಲ್ಲಿ ನಾಯಬ್ ತಹಸೀಲ್ದಾರ್ ಆಗಿದ್ದಾಗ ಪಟ್ಟಣದ ಕಚರಿಯಾ ಬಾಬಾ ಮಸೀದಿಯಲ್ಲಿ ದಿನಗಟ್ಟಲೆ ನಮಾಜ್ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದನ್ನು ಗಮನಿಸಿದವರು ಪ್ರಶ್ನಿಸಿದಾಗ ಆತ ತನ್ನನ್ನು ಕಾನ್ಪುರದ ಮಹಮದ್ ಯೂಸಫ್ ಎಂದು ಹೇಳಿಕೊಂಡಿದ್ದ. ಆದಾಗ್ಯೂ, ಹೆಚ್ಚಿನ ತನಿಖೆಯಿಂದ ಯೂಸುಫ್ ಬೇರೆ ಯಾರೂ ಅಲ್ಲ, ನಾಯಬ್ ತಹಸೀಲ್ದಾರ್ ಆಶಿಶ್ ಗುಪ್ತಾ ಎಂದು ತಿಳಿದುಬಂದಿದೆ.
|
4 |
+
ಇದೀಗ ಆತನ ಪತ್ನಿ ಆರತಿ ಯಜ್ಞಸೈನಿ ಅವರು ತನ್ನ ಪತಿ ಬಲವಂತದ ಧಾರ್ಮಿಕ ಮತಾಂತರಗೊಂಡಿದ್ದು ರುಕ್ಷಾರ್ ಎಂಬ ಮಹಿಳೆಯೊಂದಿಗೆ ಅನೈತಿಕ ವಿವಾಹ ಮಾಡಿಕೊಂಡಿದ್ದಾರೆ ಎಂದು ಪ್ರಕರಣವನ್ನು ದಾಖಲಿಸಿದ್ದಾರೆ.
|
5 |
+
ದೂರಿನ ಪ್ರಕಾರ ರುಖ್ಸಾರ್ ಅವರ ತಂದೆ, ಮುನ್ನಾ ಎಂದು ಗುರುತಿಸಲಾಗಿದೆ, ಮಸೀದಿಯ ಧರ್ಮಗುರು ಮತ್ತು ಹಲವಾರು ಇತರರೊಂದಿಗೆ ಡಿಸೆಂಬರ್ 24 ರಂದು ಗುಪ್ತಾ ಅವರಿಗೆ ಬಲವಂತದ ಮತಾಂತರ ಮಾಡಿಸಿ ನಂತರ ತಮ್ಮ ಮಗಳೊಂದಿಗೆ ವಿವಾಹ ಮಾಡಿಸಿದ್ದಾರೆ ಎಂದು ಆರೋಪಿಸಾಗಿದೆ.
|
6 |
+
ಸ್ಯಾಂಡಲ್ವುಡ್ಗೆ ಜ್ಯೂನಿಯರ್ ಎನ್ಟಿಆರ್ ಎಂಟ್ರಿ
|
7 |
+
ಗುಪ್ತಾ ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆಯೇ ಅಥವಾ ರುಕ್ಷಾರ್ ಜೊತೆಗಿನ ಸಂಬಂಧವನ್ನು ನ್ಯಾಯಸಮ್ಮತಗೊಳಿಸಲು ತನ್ನ ಸ್ವಂತ ಇಚ್ಛೆಯ ಮೇರೆಗೆ ಅದನ್ನು ಮಾಡಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ. ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
|
eesanje/url_47_204_7.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ
|
2 |
+
ಐಜ್ವಾಲï, ಡಿ 29 (ಪಿಟಿಐ) ರಾಜ್ಯದಲ್ಲಿನ ಅಪರಾಧಗಳ ತನಿಖೆಗೆ ಮಿಜೋರಾಂ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸಾಮಾನ್ಯ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರವು ಗೆಜೆಟ್ ಅಧಿಸೂಚನೆಯಲ್ಲಿ, ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ, 1946 ರ ಸೆಕ್ಷನ್ 6 ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ, ಮಿಜೋರಾಂ ಸರ್ಕಾರವು ಈ ಆದೇಶ ಹೊರಡಿಸಿದೆ.
|
3 |
+
ಮಿಜೋರಾಂ ರಾಜ್ಯದಲ್ಲಿನ ಅಪರಾಧಗಳ ಸಿಬಿಐ ತನಿಖೆಗೆ ಮಿಜೋರಾಂ ಸರ್ಕಾರವು ಒಪ್ಪಿಗೆ ನೀಡಿದೆ. ನಮ್ಮ ಸರ್ಕಾರವು ನಮ್ಮ ನಾಗರಿಕರ ಕಲ್ಯಾಣಕ್ಕಾಗಿ ಭ್ರಷ್ಟಾಚಾರವನ್ನು ತೊಡೆದುಹಾಕಲು ದೃಢಸಂಕಲ್ಪ ಹೊಂದಿದೆ ಎಂದು ಸಿಎಂ ಲಾಲ್ದುಹೋಮ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
|
4 |
+
ಕತಾರ್ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತದ ಮಾಜಿ ನೌಕಾಪಡೆ ಸಿಬ್ಬಂದಿಗಳಿಗೆ ಶಿಕ್ಷೆ ಕಡಿತ
|
5 |
+
ಡಿಸೆಂಬರ್ 8 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ, ಲಾಲ್ದುಹೋಮ ಅವರು ತಮ್ಮ ಜೋರಾಮ್ ಪೀಪಲ್ಸ ಮೂವ್ಮೆಂಟ್ ಸರ್ಕಾರವು ಭ್ರಷ್ಟಾಚಾರ ವಿರೋ ಕ್ರಮಗಳಿಗೆ ಆದ್ಯತೆ ನೀಡಲಿದೆ ಮತ್ತು ರಾಜ್ಯದಲ್ಲಿನ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಿಬಿಐ ಅನ್ನು ಆಹ್ವಾನಿಸುತ್ತದೆ ಎಂದು ಘೋಷಿಸಿದರು.
|
6 |
+
ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಡಿಎಸ್ಪಿಇ) ಕಾಯಿದೆ, 1946 ರ ಪ್ರಕಾರ, ಸಿಬಿಐ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಪಡೆಯಬೇಕು.
|
eesanje/url_47_204_8.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಜಾರ್ಖಂಡ್ : ಈ ವರ್ಷ 397 ನಕ್ಸಲರ ಬಂಧನ, ಒಂಬತ್ತು ಮಂದಿ ಹತ್ಯೆ
|
2 |
+
ರಾಂಚಿ, ಡಿ 29 (ಪಿಟಿಐ) ಈ ವರ್ಷ ರಾಜ್ಯದಾದ್ಯಂತ 397 ಮಾವೋವಾದಿಗಳನ್ನು ಬಂಧಿಸಲಾಗಿದೆ, ಒಂಬತ್ತು ಮಂದಿ ಕೊಲ್ಲಲ್ಪಟ್ಟರು ಮತ್ತು 26 ಮಂದಿ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ವಿಶೇಷ ಪ್ರದೇಶ ಸಮಿತಿ ಸದಸ್ಯ, ಪ್ರಾದೇಶಿಕ ಸಮಿತಿ ಸದಸ್ಯ, ಐದು ವಲಯ ಕಮಾಂಡರ್ಗಳು ಮತ್ತು 11 ಉಪ ವಲಯ ಕಮಾಂಡರ್ಗಳು ಸೇರಿದ್ದಾರೆ.
|
3 |
+
ಈ ವ್ಯಕ್ತಿಗಳ ತಲೆಯ ಮೇಲೆ ಒಟ್ಟು 1.01 ಕೋಟಿ ರೂ.ಗಳ ಬಹುಮಾನ ಘೋಷಿಸಲಾಗಿತ್ತು ಎನ್ನಲಾಗಿದೆ. ಕಳೆದ 12 ತಿಂಗಳ ಅವಧಿಯಲ್ಲಿ 27 ಪೊಲೀಸ್ ಶಸ್ತ್ರಾಸ್ತ್ರಗಳು, 10,350 ಮದ್ದುಗುಂಡುಗಳು ಮತ್ತು 244 ಸುಧಾರಿತ ಸ್ಪೋಟಕ ಸಾಧನಗಳು (ಐಇಡಿ) ಸೇರಿದಂತೆ 152 ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
|
4 |
+
ಹೇಮಂತ್ ಸೊರೆನ್ ಸರ್ಕಾರದ ನಾಲ್ಕು ವರ್ಷಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಪ್ರಧಾನ ಕಚೇರಿ ಈ ಡೇಟಾವನ್ನು ಬಿಡುಗಡೆ ಮಾಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ಸಿಪಿಐ (ಮಾವೋವಾದಿ), ಪೀಪಲ್ಸ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ಎಫ್ಐ), ತೃತೀಯಾ ಸಮ್ಮೇಳನದ ಪ್ರಸ್ತುತಿ ಸಮಿತಿ (ಟಿಎಸ್ಪಿಸಿ), ಮತ್ತು ಜಾರ್ಖಂಡ್ ಜನ ಮುಕ್ತಿ ಪರಿಷತ್ (ಜೆಜೆಎಂಪಿ) ನಂತಹ ನಿಷೇಧಿತ ಸಂಘಟನೆಗಳ ಸದಸ್ಯರು ಸೇರಿದಂತೆ 1,617 ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
|
5 |
+
ಕತಾರ್ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತದ ಮಾಜಿ ನೌಕಾಪಡೆ ಸಿಬ್ಬಂದಿಗಳಿಗೆ ಶಿಕ್ಷೆ ಕಡಿತ
|
6 |
+
ಜನವರಿ 1, 2020 ರಿಂದ, ಒಟ್ಟು 74 ಮಾವೋವಾದಿಗಳು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಮತ್ತು 158 ಪೊಲೀಸ್ ಶಸ್ತ್ರಾಸ್ತ್ರಗಳು ಸೇರಿದಂತೆ 792 ಶಸ್ತ್ರಾಸ್ತ್ರಗಳು ಮತ್ತು 1,882 ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ, ಭದ್ರತಾ ಪಡೆಗಳೊಂದಿಗಿನ ಎನ್ಕೌಂಟರ್ನಲ್ಲಿ 40 ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಅವರಿಂದ 160.81 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
|
7 |
+
ಈ ವರ್ಷ ಸೈಬರ್ ಅಪರಾಧಿಗಳ ವಿರುದ್ಧ ದೊಡ್ಡ ಶಿಸ್ತುಕ್ರಮವನ್ನು ಪ್ರಾರಂಭಿಸಿದೆ ಎಂದು ಇಲಾಖೆ ಹೇಳಿಕೊಂಡಿದೆ. ಜನವರಿ 1 ರಿಂದ, ಸೈಬರ್ ಅಪರಾಧದ ವಿರುದ್ಧ ಒಟ್ಟು 1,172 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಮತ್ತು ಅಂತಹ ಅಪರಾಧಗಳಿಗಾಗಿ 834 ವ್ಯಕ್ತಿಗಳನ್ನು ಬಂಧಿಸಲಾಗಿದೆ.
|
8 |
+
ಇದಲ್ಲದೆ, ಕಾರ್ಯಾಚರಣೆಗಳು 1,417 ಮೊಬೈಲ್ ಫೋನ್ಗಳು, 2,328 ಸಿಮ್ ಕಾರ್ಡ್ಗಳು, 470 ಎಟಿಎಂ ಕಾರ್ಡ್ಗಳು, 128 ಪಾಸ್ಬುಕ್ಗಳು, 23 ಲ್ಯಾಪ್ಟಾಪ್ಗಳು, 37 ಚೆಕ್ ಬುಕ್ಗಳು, ರೂ 54.31 ಲಕ್ಷ ಮತ್ತು 3,300 ತೈವಾನ್ ಡಾಲರ್ಗಳನ್ನು ವಶಪಡಿಸಿಕೊಂಡಿವೆ.
|
9 |
+
ಸಂಘಟಿತ ಅಪರಾಧಗಳ ವಿರುದ್ಧದ ಕ್ರಮಗಳ ಭಾಗವಾಗಿ, 248 ಅಪರಾಗಳನ್ನು ಬಂಧಿಸಲಾಗಿದೆ ಮತ್ತು 129 ಶಸ್ತ್ರಾಸ್ತ್ರಗಳು ಮತ್ತು 1,677 ಕಾಟ್ರ್ರಿಡ್ಜ್���ಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
|
eesanje/url_47_204_9.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಅನ್ಯಾಯಕ್ಕೆ ಹೆಸರಾದವರಿಂದ ನ್ಯಾಯ ಯಾತ್ರೆ : ಇರಾನಿ ವ್ಯಂಗ್ಯ
|
2 |
+
ಅಮೇಥಿ,ಡಿ.29- ಅನ್ಯಾಯಕ್ಕೆ ಹೆಸರಾದವರು ನ್ಯಾಯ ಕೊಡಿಸುವಂತೆ ನಟಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ನ್ಯಾಯ ಯಾತ್ರೆಯನ್ನು ಟೀಕಿಸಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಅವರು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಗಾಂಧಿ ಅವರ ಉದ್ದೇಶಿತ ಯಾತ್ರೆಯ ಕುರಿತಾದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
|
3 |
+
ಅನ್ಯಾಯಕ್ಕೆ ಹೆಸರಾದವರು ನ್ಯಾಯಕ್ಕಾಗಿ ಧೋಂಗ್ ಮಾಡುತ್ತಿದ್ದಾರೆ ಎಂದು ಅವರು ರಾಹುಲ್ಗಾಂಧಿ ಕಾಲೆಳೆದಿದ್ದಾರೆ. ಇರಾನಿ ತಮ್ಮ ಲೋಕಸಭಾ ಕ್ಷೇತ್ರ ಅಮೇಥಿಗೆ ಎರಡು ದಿನಗಳ ಭೇಟಿಯಲ್ಲಿದ್ದಾರೆ. ಗೌರಿಗಂಜ್ನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸಾಮಾಜಿಕ ಸಬಲೀಕರಣ ಶಿಬಿರದಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಪ್ರತಿ ವರ್ಷ 10 ಕೋಟಿ ಬಡ ಕುಟುಂಬಗಳಿಗೆ 5 ಲಕ್ಷದವರೆಗೆ ಆರ್ಥಿಕ ನೆರವು ನೀಡುತ್ತದೆ.
|
4 |
+
ಸ್ಯಾಂಡಲ್ವುಡ್ಗೆ ಜ್ಯೂನಿಯರ್ ಎನ್ಟಿಆರ್ ಎಂಟ್ರಿ
|
5 |
+
ಈ ಯೋಜನೆಯು ಬಡವರ ವೈದ್ಯಕೀಯ ಚಿಕಿತ್ಸೆಯನ್ನು ನೋಡಿಕೊಳ್ಳುವುದರಿಂದ ಅವರಿಗೆ ಪರಿಹಾರವನ್ನು ಒದಗಿಸಿದೆ ಎಂದು ಅವರು ಹೇಳಿದರು. ಇರಾನಿ ಅವರು ಅಮೇಥಿಯ ಮುಖ್ಯ ವೈದ್ಯಕೀಯ ಅಧಿಕಾರಿಯೊಂದಿಗೆ ಮಾತನಾಡಿದ್ದು, ಮುಂದಿನ ವಾರದಿಂದ ಅಮೇಥಿ ಪ್ರದೇಶದ ಎಲ್ಲಾ ನ್ಯಾಯ ಪಂಚಾಯತ್ಗಳಲ್ಲಿ ಅಂಗವಿಕಲರಿಗಾಗಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
|
eesanje/url_47_205_1.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ದೆಹಲಿ ಸರ್ಕಾರದ ಟ್ಯಾಬ್ಲೊ ಪ್ರದರ್ಶನಕ್ಕೆ ಬಿಜೆಪಿ ಕೊಕ್ಕೆ
|
2 |
+
ನವದೆಹಲಿ, ಡಿ 28 (ಪಿಟಿಐ) ಗಣರಾಜ್ಯೋತ್ಸವ ಪರೇಡ್ನಲ್ಲಿ ತನ್ನ ಆರೋಗ್ಯ ಮತ್ತು ಶಿಕ್ಷಣ ಮಾದರಿಗಳನ್ನು ಪ್ರದರ್ಶಿಸುವ ದೆಹಲಿ ಸರ್ಕಾರದ ಯೋಜನೆಗಳನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಬಣ್ಣ ಬಯಲು ಮಾಡಿಕೊಂಡಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
|
3 |
+
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮುಖ್ಯ ರಾಷ್ಟ್ರೀಯ ವಕ್ತಾರ ಪ್ರಿಯಾಂಕಾ ಕಕ್ಕರ್ ಅವರು, ತಮ್ಮ ಸರ್ಕಾರದ ಟ್ಯಾಬ್ಲೊ ತಿರಸ್ಕರಿಸಿರುವ ಕಾರಣವನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ. ಈ ನಿರ್ಧಾರವು ರಾಜಕೀಯದಿಂದ ನಡೆಸಲ್ಪಟ್ಟಿದೆ. ದೆಹಲಿ ಸರ್ಕಾರವು ಗಣರಾಜ್ಯೋತ್ಸವದ ಪರೇಡ್ನಲ್ಲಿ ತನ್ನ ಶಿಕ್ಷಣ ಮತ್ತು ಆರೋಗ್ಯ ಮಾದರಿಯನ್ನು ಪ್ರದರ್ಶಿಸಲು ಬಯಸಿದೆ. ಆದರೆ ದೆಹಲಿ ಮತ್ತು ಪಂಜಾಬ್ ಸರ್ಕಾರಗಳ ಟ್ಯಾಬ್ಲೋಗಳನ್ನು ಆಯ್ಕೆಯಿಂದ ಹೊರಗಿಡಲಾಗಿದೆ ಎಂದು ಅವರು ಆರೋಪಿಸಿದರು.
|
4 |
+
ಅಸ್ಸಾಂ, ಗುಜರಾತ್ ಮತ್ತು ಉತ್ತರ ಪ್ರದೇಶದಂತಹ ಬಿಜೆಪಿ ಆಡಳಿತದ ರಾಜ್ಯಗಳ ಕೋಷ್ಟಕಗಳು ಕಳೆದ ಐದು ವರ್ಷಗಳಿಂದ ನಿರಂತರವಾಗಿ ತಮ್ಮ ಕೋಷ್ಟಕಗಳನ್ನು ಪ್ರದರ್ಶಿಸಲು ಅವಕಾಶಗಳನ್ನು ನೀಡಲಾಗಿದೆ ಎಂದು ಕಕ್ಕರ್ ಹೇಳಿದ್ದಾರೆ.
|
5 |
+
ಮುಂಬರುವ ಚುನಾವಣೆಯಲ್ಲಿ ಮೋದಿ ಯಶಸ್ಸಿಗೆ ಹಾರೈಸಿದ ಪುಟಿನ್
|
6 |
+
ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯದ ಟ್ಯಾಬ್ಲೋವನ್ನು ಸೇರಿಸದ ಬಿಜೆಪಿಯನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟೀಕಿಸಿದ್ದಾರೆ, ಇದು ರಾಷ್ಟ್ರಗೀತೆಯಿಂದ ಪಂಜಾಬ್ ಪದವನ್ನು ತೆಗೆದುಹಾಕುವ ಒಂದು ಹೆಜ್ಜೆ ಎಂದು ಕರೆದಿದೆ. ಅವರು ತಮ್ಮ ಮಾರ್ಗವನ್ನು ಹೊಂದಿದ್ದರೆ ಅವರು ರಾಷ್ಟ್ರಗೀತೆಯಿಂದ ಪಂಜಾಬ ಪದವನ್ನು ತೆಗೆದುಹಾಕುತ್ತಾರೆ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
|
eesanje/url_47_205_10.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ದೀದಿ ಸರ್ಕಾರಕ್ಕಿಂತ ಎಡಪಕ್ಷಗಳ ಆಡಳಿತ ಉತ್ತಮವಾಗಿತ್ತು : ಅಮಿತ್ ಶಾ
|
2 |
+
ಕೋಲ್ಕತ್ತಾ,ಡಿ.27- ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಕ್ಕಿಂತ ಎಡಪಕ್ಷಗಳ ಆಡಳಿತ ಉತ್ತಮವಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾಗ್ದಾಳಿ ನಡೆಸಿದ್ದಾರೆ. ದೀದಿ ಅವರ ಆಡಳಿತ ಕೂನೆಗಾಣಿಸಲು ಬಂಗಾಳದಲ್ಲಿ ಬಿಜೆಪಿ ಗೆಲ್ಲಲೇಬೇಕು ಎಂದು ಈ ನಿಟ್ಟಿನಲ್ಲಿ ನೀವು ಕಾರ್ಯತಂತ್ರ ರೂಪಿಸಬೇಕು ಎಂದು ಅವರು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
|
3 |
+
1977-2011ರವರೆಗೆ ಪಶ್ಚಿಮ ಬಂಗಾಳದಲ್ಲಿ 34 ವರ್ಷಗಳ ಸಿಪಿಐ(ಎಂ) ಸರ್ಕಾರದ ಆಡಳಿತವನ್ನು ಉಲ್ಲೇಖಿಸಿ, ಬಂಗಾಳದಲ್ಲಿ ಕಮ್ಯುನಿಸ್ಟ್ ಆಳ್ವಿಕೆಯು ದೀದಿ ಆಳ್ವಿಕೆಗಿಂತ ಉತ್ತಮವಾಗಿತ್ತು. ಅದನ್ನೇ ಜನರು ಇಲ್ಲಿ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
|
4 |
+
ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ತೃಣಮೂಲದ ತವರು ರಾಜ್ಯವಾದ ಬಂಗಾಳದಲ್ಲಿ ಬಿಜೆಪಿ ಪ್ರಮುಖ ಲಾಭದತ್ತ ಕಣ್ಣಿಟ್ಟಿದೆ. ಈ ಬಾರಿ ಬಂಗಾಳದ 42 ಲೋಕಸಭಾ ಸ್ಥಾನಗಳ ಪೈಕಿ 35 ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
|
5 |
+
ಕುಸ್ತಿಪಟುಗಳನ್ನು ಭೇಟಿಯಾದ ರಾಹುಲ್ಗಾಂಧಿ
|
6 |
+
ಮುಂದಿನ ವಿಧಾನಸಭಾ ಚುನಾವಣೆಯ ನಂತರ ನಾವು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲು ಕೆಲಸ ಮಾಡಬೇಕಾಗಿದೆ. ಬಿಜೆಪಿ ಸರ್ಕಾರವು ಒಳನುಸುಳುವಿಕೆ, ಹಸು ಕಳ್ಳಸಾಗಣೆ ಮತ್ತು ಸಿಎಎ ಮೂಲಕ ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಜನರಿಗೆ ಪೌರತ್ವವನ್ನು ನೀಡುತ್ತದೆ ಎಂದು ಪಕ್ಷದ ಕಾರ್ಯಕ್ರಮದಲ್ಲಿ ಹೇಳಿದರು.
|