text
stringlengths 0
61.5k
|
---|
1. ಸಂಗಮಯುಗದಲ್ಲಿ ಸ್ವಯಂ ಅನ್ನು ಟ್ರಾನ್ಸ್ ಫರ್ ಮಡಿಕೊಳ್ಳಬೇಕು. ವಿಧ್ಯೆ ಮತ್ತು ಪವಿತ್ರತೆಯ ಧಾರಣೆಯಿಂದ ತಮ್ಮ ಚಾರಿತ್ರ್ಯೆ ಸುದಾರಣೆ ಮಾಡಿಕೊಳ್ಳಬೇಕು. ಟ್ರಾನ್ಸ್ ಮುಂತಾದುವುಗಳಲ್ಲಿ ಹೋಗುವ ಆಸೆ ಇಟ್ಟುಕೊಳ್ಳಬಾರದು. |
2. ಶರೀರ ನಿರ್ವಾಹಾರ್ಥ ಕರ್ಮವನ್ನೂ ಮಾಡಬೇಕು, ನಿದ್ರೆಯೂ ಮಾಡಬೇಕು, ಹಠಯೋಗವಲ್ಲ, ಆದರೆ ನೆನಪಿನ ಯಾತ್ರೆಯನ್ನು ಎಂದೂ ಮರೆಯಬಾರದು. ಯೋಗಯುಕ್ತರಾಗಿ ಇಂತಹ ಶುದ್ದ ಭೋಜನವನ್ನು ತಯಾರಿಸಿ ಮತ್ತು ಬಡಿಸಿ ಯಾರು ತಿನ್ನುತ್ತಾರೆ ಅವರ ಹೃದಯ ಶುದ್ಧವಾಗಿ ಬಿಡಬೇಕು. |
ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಾರೆ - ಒಂದುವೇಳೆ ಶಿವ ಭಗವಾನುವಾಚ ಎಂದು ಹೇಳಿದರೂ ಸಹ ಇಂದು ಅನೇಕ ಮನುಷ್ಯರು ಶಿವ ಎಂದು ಹೆಸರನ್ನು ಇಟ್ಟುಕೊಂಡಿರುತ್ತಾರೆ ಆದ್ದರಿಂದ ಈ ರೀತಿ ಹೇಳಬೇಕಾಗುತ್ತದೆ - ಆತ್ಮಿಕ ತಂದೆಯು ಆತ್ಮಿಕ ಮಕ್ಕಳ ಪ್ರತಿ ಮೊಟ್ಟ ಮೊದಲು ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಮುಂಜಾನೆ ಮೊದಲು ಗುಡ್ಮಾರ್ನಿಂಗ್ ಹೇಳಲಾಗುತ್ತದೆ. ನೀವೂ ಸಹ ಗುಡ್ಮಾರ್ನಿಂಗ್ ಹೇಳಿದಿರಿ. ಬೆಳಗ್ಗೆ-ಬೆಳಗ್ಗೆ ಬಂದು ಯಾರು ಬಂದು ಗುಡ್ಮಾರ್ನಿಂಗ್ ಹೇಳುತ್ತಾರೆ? ಮುಂಜಾನೆ ತಂದೆಯೇ ಬರುತ್ತಾರೆ. ಇದು ಬೇಹದ್ದಿನ ಬೆಳಗ್ಗೆ ಮತ್ತು ರಾತ್ರಿಯಾಗಿದೆ, ಇದನ್ನು ಯಾವುದೇ ಮನುಷ್ಯರೂ ತಿಳಿದುಕೊಂಡಿಲ್ಲ. ಮಕ್ಕಳಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಭಲೆ ಮಕ್ಕಳಾಗಿರಬಹುದು ಆದರೆ ಮುಂಜಾನೆಯೆದ್ದು ತಂದೆಯನ್ನು ನೆನಪು ಮಾಡುವುದಿಲ್ಲ. ಮುಂಜಾನೆ ಎದ್ದು ಮೊಟ್ಟ ಮೊದಲು ಶಿವ ತಂದೆಯೊಂದಿಗೆ ಗುಡ್ಮಾರ್ನಿಂಗ್ ಹೇಳುವುದು ಅರ್ಥಾತ್ ನೆನಪು ಮಾಡುವುದರಿಂದ ಬಹಳ ಖುಷಿಯಿರುವುದು ಆದರೆ ಬಹಳ ಮಕ್ಕಳು ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡುವುದೇ ಇಲ್ಲ. ಭಕ್ತಿಮಾರ್ಗದಲ್ಲಿಯೂ ಮನುಷ್ಯರು ಮುಂಜಾನೆಯೆದ್ದು ಭಕ್ತಿ ಮಾಡುತ್ತಾರೆ, ಪೂಜೆ ಮಾಡುತ್ತಾರೆ. ಮಂತ್ರವನ್ನು ಜಪಿಸುತ್ತಾರೆ. ಅವರು ಸಾಕಾರದ ಭಕ್ತಿ ಮಾಡುತ್ತಾರೆ. ಆಗ ಅವರಿಗೆ ಮೂರ್ತಿಯ ನೆನಪು ಬಂದು ಬಿಡುತ್ತದೆ. ಶಿವನ ಪೂಜಾರಿಯಾಗಿದ್ದರೆ ಅವರು ಶಿವನನ್ನು ದೊಡ್ಡ ಲಿಂಗದ ರೂಪದಲ್ಲಿ ಮಾಡುತ್ತಾರೆ. ಆ ಲಿಂಗವೇ ನೆನಪಿಗೆ ಬರುತ್ತದೆ. ಅದೂ ಸಹ ತಪ್ಪಾಗಿದೆ. ಈಗಂತೂ ನೀವು ಮಕ್ಕಳು ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಬೇಕು ಮತ್ತು ಮುಂಜಾನೆಯೆದ್ದು ತಂದೆಯೊಂದಿಗೆ ಮಾತನಾಡಿರಿ - ಬಾಬಾ, ಗುಡ್ಮಾರ್ನಿಂಗ್. ಆದರೆ ಈ ಅಭ್ಯಾಸವು ಯಾರಿಗೂ ಇಲ್ಲವೆಂದು ತಂದೆಗೆ ಗೊತ್ತಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮ್ಮ ತಲೆಯ ಮೇಲೆ ಅರ್ಧಕಲ್ಪ ಹೊರೆಯಿದೆ, ಅದು ಇಳಿಯುವುದೇ ಇಲ್ಲ ಏಕೆಂದರೆ ನೆನಪು ಮಾಡುವುದಿಲ್ಲ. ಕೆಲಕೆಲವರಿಗೆ ಪಾಪವು ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಹೇಗೆ ಇಲಿಯೂ ಗಾಳಿ ಬಿಟ್ಟು ನಂತರ ಕಚ್ಚುತ್ತದೆಯೋ ಹಾಗೆಯೇ ಮಾಯೆಯೂ ಸಹ ಇಲಿಯಂತೆ ಕಚ್ಚುತ್ತಾ ಇರುತ್ತದೆ. ತಲೆಯ ಕೂದಲನ್ನು ಕತ್ತರಿಸಿ ಬಿಡುತ್ತದೆ, ಅದು ಅರ್ಥವಾಗುವುದೇ ಇಲ್ಲ. ಭಲೆ ಯಾರಾದರೂ ತಮ್ಮನ್ನು ಜ್ಞಾನಿಗಳೆಂದು ತಿಳಿದುಕೊಳ್ಳಬಹುದು ಆದರೆ ನೆನಪಿನಲ್ಲಿ ಬಹಳ ಕಚ್ಚಾ ಇದ್ದಾರೆ ಎಂದು ತಂದೆಯು ಚೆನ್ನಾಗಿ ತಿಳಿದುಕೊಂಡಿದ್ದಾರೆ. ತಮ್ಮ ಹೃದಯದಲ್ಲಿ ಕೇಳಿಕೊಳ್ಳಿ - ನಾನು ಮುಂಜಾನೆಯೆದ್ದು ತಂದೆಯನ್ನು ನೆನಪು ಮಾಡುತ್ತೇನೆಯೇ? ಬೇಹದ್ದಿನ ತಂದೆಯು ನಿಮಗೆ ಬೇಹದ್ದಿನ ಮುಂಜಾನೆಯಲ್ಲಿ ಬಂದು ಸಿಕ್ಕಿದ್ದಾರೆ. ಸನ್ಯಾಸಿಗಳೂ ಸಹ ಎದ್ದು ಬ್ರಹ್ಮ್ತತ್ವವನ್ನು ನೆನಪು ಮಾಡುತ್ತಾರೆ. ಮನುಷ್ಯರಂತೂ ಏಳುತ್ತಿದ್ದಂತೆಯೇ ಮಿತ್ರ ಸಂಬಂಧಿ, ತಮ್ಮ ಜೊತೆಗಾರ ಮೊದಲಾದವರನ್ನು ನೆನಪು ಮಾಡುತ್ತಾರೆ. ಭಕ್ತರಾಗಿದ್ದಾರೆ ತಮ್ಮ ದೇವತೆಗಳನ್ನು ನೆನಪು ಮಾಡುತ್ತಾರೆ. ಪಾಪಾತ್ಮರು ಪಾಪಾತ್ಮರಿಗೇ ಗುಡ್ಮಾರ್ನಿಂಗ್ ಹೇಳುತ್ತಾರೆ ಅಥವಾ ನೆನಪು ಮಾಡುತ್ತಾರೆ. ನೆನಪು ಮುಂಜಾನೆ ಮಾಡಲಾಗುತ್ತದೆ, ಭಕ್ತಿಯೂ ಸಹ ಮುಂಜಾನೆಯ ಸಮಯದಲ್ಲಿಯೇ ಮಾಡುತ್ತಾರೆ ಆದರೆ ಭಗವಂತನ ಭಕ್ತಿಯನ್ನು ಯಾರೂ ಮಾಡುವುದಿಲ್ಲ ಏಕೆಂದರೆ ಭಗವಂತನನ್ನು ಅರಿತುಕೊಂಡಿಲ್ಲ. ಭಲೆ ಭಕ್ತಿಯ ಫಲವನ್ನು ಕೊಡುವವರು ಭಗವಂತನೇ ಆಗಿದ್ದಾರೆಂದು ಹೇಳುತ್ತಾರೆ, ಓ ಗಾಡ್ಫಾದರ್ ಎಂದೂ ಹೇಳುತ್ತಾರೆ. ಇದನ್ನು ಆತ್ಮವೇ ಹೇಳುತ್ತದೆ ಆದರೆ ಪರಮಾತ್ಮನನ್ನು ಯಾರೂ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಯಾವಾಗ ಸ್ವಯಂ ಭಗವಂತನೇ ಬಂದು ತಮ್ಮ ಪರಿಚಯ ಕೊಡುವರೋ ಆಗಲೇ ಇದನ್ನು ತಿಳಿದುಕೊಳ್ಳಲು ಸಾಧ್ಯ. ಇಲ್ಲವೆಂದರೆ ಎಲ್ಲರೂ ನೇತಿ-ನೇತಿ ಅರ್ಥಾತ್ ಗೊತ್ತಿಲ್ಲ ಗೊತ್ತಿಲ್ಲ ಎಂದೇ ಹೇಳುತ್ತಾರೆ ಆದ್ದರಿಂದ ಪರಮಾತ್ಮನು ಈ ಸಮಯದಲ್ಲಿಯೇ ಬಂದು ನಾನು ಯಾರು ಎಂಬುದನ್ನು ತಿಳಿಸುತ್ತಾರೆ ಆದರೆ ಬಹಳ ಮಕ್ಕಳಲ್ಲಿಯೂ ಅರ್ಥಾತ್ ದೊಡ್ಡ-ದೊಡ್ಡ ಮಹಾರಥಿಗಳೂ ಸಹ ತಂದೆಯನ್ನು ಪೂರ್ಣ ಅರಿತುಕೊಂಡಿಲ್ಲ. ಪ್ರೀತಿಯಿಂದ ತಂದೆಯನ್ನು ನೆನಪು ಮಾಡುವುದಿಲ್ಲ. ಮುಂಜಾನೆ ಎದ್ದು ಪ್ರೀತಿಯಿಂದ ಗುಡ್ಮಾರ್ನಿಂಗ್ ಹೇಳುವುದು, ಜ್ಞಾನದ ಚಿಂತನೆಯಲ್ಲಿ ಇರುವುದನ್ನೂ ಮಾಡುವುದಿಲ್ಲ. ನೆನಪು ಮಾಡಿದಾಗಲೇ ಖುಷಿಯ ನಶೆಯಿರುವುದು ಆದರೆ ಆ ನಶೆಯೇರಲು ಮಾಯೆಯು ಬಿಡುವುದಿಲ್ಲ. ಒಂದುವೇಳೆ ಎಲ್ಲಿಯಾದರೂ ತಂದೆಗೆ ಅಗೌರವ ಮಾಡಿದರೆ ಮಾಯೆಯು ಒಮ್ಮೆಲೇ ಬುದ್ಧಿಯೋಗವನ್ನು ತುಂಡರಿಸಿ ಬಿಡುತ್ತದೆ ನಂತರ ವ್ಯರ್ಥ ಮಾತುಗಳಲ್ಲಿಯೇ ಬುದ್ಧಿಯು ತೊಡಗಿರುತ್ತದೆ. ಸ್ವರ್ಗದ ಮಾಲೀಕರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಪ್ರಜೆಗಳಾಗುವುದಂತೂ ಸಹಜವಾಗಿದೆ, ಮುಂದೆ ಹೋದಂತೆ ನೋಡುತ್ತೀರಿ, 30-40 ವರ್ಷದಿಂದ ಇರುವವರೂ ಸಹ ಜ್ಞಾನವನ್ನು ಬಿಟ್ಟು ಹೋಗುತ್ತಾರೆ. ಮಾಯೆಯು ಹಾರಿಸಿ ಬಿಡುತ್ತದೆ. ರಾಜ್ಯ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಮೊದಲೇ ಸತ್ತು ಹೋಗುತ್ತಾರೆ (ಜ್ಞಾನ ಬಿಟ್ಟು ಹೋಗುತ್ತಾರೆ) ಅಂದಮೇಲೆ ರಾಜ್ಯಭಾಗ್ಯವು ಹೇಗೆ ಸಿಗುವುದು! ತಂದೆಯು ಈ ರಹಸ್ಯವನ್ನು ತೆರೆಯುವುದಿಲ್ಲ. ಮಾಯೆಯೂ ಸಹ ನೋಡುತ್ತದೆ - ನಾನು ಅರ್ಧಕಲ್ಪ ರಾಜ್ಯ ಮಾಡುವವನಾಗಿದ್ದೇನೆ, ಇವರು ನನ್ನಮೇಲೆ ಜಯ ಗಳಿಸುತ್ತಾರೆ ಎಂದು. ಮತ್ತೆ ಶಿವ ತಂದೆಯನ್ನು ಒಮ್ಮೆಲೆ ಮರೆತು ಹೋಗುತ್ತಾರೆ. ಕೆಲವೊಂದೆಡೆ ಇವರ (ಬ್ರಹ್ಮಾ ತಂದೆಯ) ನಾಮ-ರೂಪದಲ್ಲಿ ಸಿಲುಕುತ್ತಾರೆ. ಶಿವ ತಂದೆಯನ್ನು ನೆನಪು ಮಾಡುವುದಿಲ್ಲ, ಯಾರಲ್ಲಿ ಕ್ರೋಧ, ಲೋಭ, ಮೋಹದ ಭೂತವಿರುವುದೋ ಅವರೇನು ತಂದೆಯನ್ನು ನೆನಪು ಮಾಡುವರು! ಇಷ್ಟು ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅದರ ಮಾತೇ ಕೇಳಬೇಡಿ. ದೇಹಾಭಿಮಾನದಲ್ಲಿ ಸಿಲುಕುತ್ತಾರೆ, ಶಿವ ತಂದೆಯು ತಿಳಿಸುತ್ತಾರೆ - ಗೃಹಸ್ಥದಲ್ಲಿದ್ದು ಪ್ರಿಯತಮನಾದ ನನ್ನನ್ನು ನೆನಪು ಮಾಡುತ್ತಾ ಇರಿ ಆಗ ಕರ್ಮಾತೀತ ಸ್ಥಿತಿಯಾಗುವುದು. ಮೂಲಮಾತು ನೆನಪು ಮಾಡುವುದಾಗಿದೆ, ಇದರಲ್ಲಿಯೇ ಪರಿಶ್ರಮವಿದೆ. ನೆನಪು ಮಾಡದೆ ಸತೋಪ್ರಧಾನರಾಗಲು ಸಾಧ್ಯವಿಲ್ಲ, ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕೂ ಸಾಧ್ಯವಿಲ್ಲ, ಬುದ್ಧಿಯೋಗ ಬೇರೆ ಕಡೆ ಅಲೆಯುತ್ತಾ ಇರುವುದು. ಕೆಲವು ಮಕ್ಕಳಂತೂ ಬಹಳ ಪ್ರೀತಿಯಿಂದ, ಅಂತರಾಳದಿಂದ ತಂದೆಯನ್ನು ನೆನಪು ಮಾಡುತ್ತಾರೆ. ತಂದೆಗೆ ಗುಡ್ಮಾರ್ನಿಂಗ್ ಹೇಳಿದ ನಂತರ, ಬಾಬಾ ನಾವು ನಿಮ್ಮ ನೆನಪಿನಲ್ಲಿರುತ್ತೇವೆ ಏಕೆಂದರೆ ತಲೆಯ ಮೇಲೆ ಬಹಳಷ್ಟು ಪಾಪಗಳ ಹೊರೆಯಿದೆ ಎಂದು ಹೇಳಬೇಕು. ಒಂದುವೇಳೆ ತಂದೆಯ ನೆನಪಿನಲ್ಲಿ ಇಲ್ಲದಿದ್ದರೆ ಪಾಪಗಳ ಹೊರೆಯು ಹೇಗೆ ಕಳೆಯುವುದು! ಅರ್ಧಕಲ್ಪದ ದೇಹಾಭಿಮಾನವಿರುವ ಕಾರಣ ಅದು ಹೋಗುವುದೇ ಇಲ್ಲ. ಅಲ್ಲಿ ದೇವತೆಗಳು ಆತ್ಮಾಭಿಮಾನಿಯಾಗಿರುತ್ತಾರೆ. ಭಲೆ ಪರಮಾತ್ಮನನ್ನು ತಿಳಿದುಕೊಂಡಿರುವುದಿಲ್ಲ ಆದರೆ ಇದಂತೂ ತಿಳಿದಿರುತ್ತದೆ - ನಾನಾತ್ಮನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ. ಒಂದುವೇಳೆ ರಚಯಿತನನ್ನು ಅರಿತುಕೊಂಡರೆ ರಚನೆ, ತಂದೆಯ ಆಸ್ತಿಯನ್ನೂ ಅರಿತುಕೊಳ್ಳುವರು. ಅಲ್ಲಿ ಈ ಜ್ಞಾನವಿರುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಈ ಜ್ಞಾನವನ್ನು ತಿಳಿಸುತ್ತೇನೆ, ನಂತರ ಇದು ಪ್ರಾಯಲೋಪವಾಗಿ ಬಿಡುತ್ತದೆ ಮತ್ತೆ ಈ ಜ್ಞಾನವು ಪರಂಪರೆಯಾಗಿ ನಡೆಯುವುದಿಲ್ಲ. ಮನುಷ್ಯರು ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ತಿಳಿದುಕೊಂಡಿಲ್ಲ. ಎಲ್ಲಾ ಆತ್ಮರಿಗೆ ತಮ್ಮ-ತಮ್ಮ ಪಾತ್ರವು ಹೇಗೆ ಸಿಕ್ಕಿದೆಯೆಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ನೀವು ಬಹಳ ಒಳ್ಳೆಯ ಪಾತ್ರಧಾರಿಗಳಾಗಿದ್ದೀರಿ. ಈ ಸಮಯದಲ್ಲಿ ನೀವು ವಿಶ್ವವನ್ನು ತಮ್ಮ ರಾಜ್ಯವನ್ನಾಗಿ ಮಾಡಿಕೊಳ್ಳುತ್ತೀರಿ. ನಿಮ್ಮದು ಹೀರೋ ಮತ್ತು ಹೀರೋಯಿನ್ ಪಾತ್ರವಾಗಿದೆ, ಮೂಲ ಮಾತು ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಗೆ ಗೊತ್ತಿದೆ - ಪ್ರದರ್ಶನಿಯಲ್ಲಿ ಬಹಳ ಮಕ್ಕಳು ಚೆನ್ನಾಗಿ ಸರ್ವೀಸ್ ಮಾಡುತ್ತಾರೆ ಆದರೆ ನೆನಪಿನಲ್ಲಿ ಬಹಳ ನಿರ್ಬಲರಾಗಿದ್ದಾರೆ. ಮುಂಜಾನೆಯೆದ್ದು ತಂದೆಯೊಂದಿಗೆ ಹೇಗೆ ಗುಡ್ಮಾರ್ನಿಂಗ್ ಹೇಳಬೇಕು ಎಂಬ ಬುದ್ಧಿಯೂ ಇಲ್ಲ. ಭಲೆ ವಿಷಯದ ಮೇಲೆ ಬಹಳ ಚೆನ್ನಾಗಿ ಮಂಥನ ಮಾಡುತ್ತಾರೆ. ಅದು ಸಾಮಾನ್ಯ ಮಾತಾಗಿದೆ. ಪ್ರತಿನಿತ್ಯ ಹೊಸ-ಹೊಸ ಭಾಷಣದ ವಿಷಯಗಳನ್ನು ತೆಗೆದುಕೊಂಡು ತಿಳಿಸಬಹುದು ಆದರೆ ಮುಖ್ಯ ಮಾತು ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿದಾಗಲೇ ಪಾಪವು ಕಳೆಯುವುದು. |
ತಂದೆಗೆ ಗೊತ್ತಿದೆ - ಮಕ್ಕಳಿಗೆ ಇನ್ನೂ ಆ ಸ್ಥಿತಿಯು ಬಂದಿಲ್ಲ, ತಂದೆಯು ಹೆಸರನ್ನು ಹೇಳುವುದಿಲ್ಲ. ಒಂದುವೇಳೆ ತಂದೆಯು ಹೆಸರನ್ನು ತಿಳಿಸಿ ಬಿಟ್ಟರೆ ಈಗ ಪೈಸೆಯಷ್ಟು ಯಾವ ಸ್ಥಿತಿಯಿದೆಯೋ ತಿಳಿದ ನಂತರ ಅದೂ ಸಹ ಕಡಿಮೆಯಾಗುವುದು. ಈ ಜ್ಞಾನದಲ್ಲಿ ತಿಳುವಳಿಕೆ ಇರಬೇಕಾಗಿದೆ. ಯಾರಾದರೂ ನೋಡಿ ನೀವು ಸಪ್ಪೆಯಾಗಿ ಕಾಣಿಸುತ್ತೀರಿ, ಆರೋಗ್ಯ ಸರಿಯಿಲ್ಲವೆ ಎಂದು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದಂತೆಯೇ ಜ್ವರ ಬಂದು ಬಿಡಬಾರದು. ಇಷ್ಟು ಕಚ್ಚಾ ಆಗಬಾರದು, ಧೈರ್ಯವಿರಬೇಕು. ಸೇವಾಧಾರಿ ಮಕ್ಕಳು ಎಂದೂ ಬಿಟ್ಟು ಹೋಗುವುದಿಲ್ಲ. ಅವರು ತಮ್ಮ ನಶೆಯಲ್ಲಿರುತ್ತಾರೆ. ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾ ತಂದೆಯ ನೆನಪು ಮಾಡಬೇಕಾಗಿದೆ, ತಂದೆಗೆ ಗುಡ್ಮಾರ್ನಿಂಗ್ ಹೇಳುತ್ತಿರಬೇಕು - ಇದು ಉನ್ನತ ಗುರಿಯಾಗಿದೆ. ರಾಜ್ಯ ಪದವಿಯನ್ನು ಪಡೆಯಬೇಕೆಂದರೆ ಪರಿಶ್ರಮ ಪಡಬೇಕಾಗಿದೆ. ಯಾರು ಕಲ್ಪದ ಹಿಂದೆ ಆಗಿದ್ದರೋ ಅವರಿಗೆ ಮುಂದೆ ಹೋದಂತೆ ಅರ್ಥವಾಗುತ್ತಾ ಹೋಗುವುದು. ಯಾರನ್ನೂ ಬಚ್ಚಿಡಲು ಸಾಧ್ಯವಿಲ್ಲ. ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಿಳಿದುಕೊಂಡಿರುತ್ತಾರೆ ಮತ್ತು ರಿಜಿಸ್ಟರ್ ಇಟ್ಟುಕೊಂಡಿರುತ್ತಾರೆ, ಅದರಿಂದಲೂ ಅರ್ಥವಾಗುತ್ತದೆ. ಅದರಲ್ಲಿ ಮುಖ್ಯವಾಗಿ ಭಾಷೆಯ ಸಬ್ಜೆಕ್ಟ್ ಇರುತ್ತದೆ, ಇಲ್ಲಿ ನೆನಪಿನ ಸಬ್ಜೆಕ್ಟ್ ಮುಖ್ಯವಾಗಿದೆ. ಜ್ಞಾನವಂತೂ ಸಹಜವಾಗಿದೆ, ಇದನ್ನು ಮಕ್ಕಳೂ ತಿಳಿಸಬಲ್ಲರು. ಬಾಲ್ಯದಲ್ಲಿ ಧಾರಣೆ ಮಾಡಿಕೊಳ್ಳಲು ಬುದ್ಧಿಯು ತೀಕ್ಷ್ಣವಾಗಿರುತ್ತದೆ, ವೃದ್ಧರು ಇಷ್ಟೊಂದು ತಿಳಿಸಲು ಸಾಧ್ಯವಿಲ್ಲ. ಇಲ್ಲಿಯೂ ಸಹ ತಂದೆಯು ಕುಮಾರಿಯರಿಗೇ ಹೆಚ್ಚು ಮಾನ್ಯತೆ ಕೊಡುತ್ತಾರೆ, ಕೇವಲ ನಾಮ-ರೂಪದಲ್ಲಿ ಸಿಲುಕಿ ಎಲ್ಲಿಯೂ ತಲೆ ಕೆಳಕಾಗಬಾರದು. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಗೂಬೆಯಂತೆ ತಲೆ ಕೆಳಕಾಗಿ ಬಿಟ್ಟಿದ್ದಾರೆ ಮತ್ತೆ ಅವರನ್ನು ಸರಿ ಪಡಿಸುವುದರಿಂದ ಅಲ್ಲಾನ ಮಕ್ಕಳಾಗಿ ಬಿಡುತ್ತಾರೆ. ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳಿರುವುದರಿಂದಲೇ ಎಲ್ಲಾ ಮನುಷ್ಯರು ಪರಮಾತ್ಮನಿಂದ ವಿಮುಖರಾಗಿ ಬಿಟ್ಟಿದ್ದಾರೆ. ಸನ್ಯಾಸಿಗಳು ತಮ್ಮ ಪೂಜೆಯನ್ನೂ ಮಾಡಿಸಿಕೊಳ್ಳುತ್ತಾರೆ, ವಾಸ್ತವದಲ್ಲಿ ನೀವು ನಮಗೇಕೆ ಹೂಗಳನ್ನು ಹಾಕುತ್ತೀರಿ ಎಂದು ಹೇಳಬೇಕಲ್ಲವೆ ಆದರೆ ಹೇಳುವುದಿಲ್ಲ. ಅವರನ್ನು ಎಲ್ಲರೂ ತಮ್ಮ ಗುರುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಅವರು ಸನ್ಯಾಸಿಗಳು ಇವರು ಗೃಹಸ್ಥಿಗಳು ಅಂದಮೇಲೆ ಅವರ ಅನುಯಾಯಿಗಳಾಗಲು ಹೇಗೆ ಸಾಧ್ಯ! ಯಾವಾಗ ಸನ್ಯಾಸಿಗಳಂತೆ ಇವರೂ ಸಹ ಸನ್ಯಾಸಿಗಳಾದಾಗಲೇ ಅನುಯಾಯಿಗಳೆಂದು ಹೇಳಬಹುದು. ಆದರೆ ನೀವು ತಮ್ಮನ್ನು ಅನುಯಾಯಿಗಳೆಂದು ಹೇಳಿಕೊಳ್ಳಬೇಡಿ ಎಂದು ಯಾರೂ ಸಹ ತಿಳಿಸುವುದಕ್ಕೂ ಸಾಧ್ಯವಿಲ. ನೀವು ಅನುಯಾಯಿಗಳಾಗಿದ್ದೀರಿ ಎಂದು ತಂದೆಯು ಯಾರಿಗೂ ಹೇಳಲು ಸಾಧ್ಯವಿಲ್ಲ. ಯಾವಾಗ ಪಾವನರಾಗುವ ಪ್ರತಿಜ್ಞೆ ಮಾಡುವರೋ ಆಗಲೇ ಅನುಯಾಯಿಗಳೆಂದು ಹೇಳಿಕೊಳ್ಳಬಹುದು. ಪ್ರತಿಜ್ಞೆ ಮಾಡಿದಾಗ ಸ್ವಯಂ ಬರೆದು ಕಳುಹಿಸುತ್ತಾರೆ ಆದರೆ ಯಾವಾಗ ಬಿದ್ದು ಮುಖ ಕಪ್ಪು ಮುಖ ಮಾಡಿಕೊಳ್ಳುತ್ತಾರೆಯೋ ಆಗ ಬರೆಯುವುದಿಲ್ಲ ಏಕೆಂದರೆ ಸಂಕೋಚವಾಗುತ್ತದೆ. |
ಇದು ಅತಿ ದೊಡ್ಡ ಪೆಟ್ಟಾಗಿದೆ, ನಂತರ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಲು ಸಾಧ್ಯವಿಲ್ಲ. ಪತಿತರನ್ನು ನಾನು ತಿರಸ್ಕರಿಸುತ್ತೇನೆ, ವಿಷ ಕುಡಿಯುವವರು ಬಹಳ ಕೆಟ್ಟವರಾಗಿದ್ದಾರೆ. ಪವಿತ್ರರಾಗುವುದು ಬಹಳ ಒಳ್ಳೆಯದಲ್ಲವೆ. ನಾನು ಪವಿತ್ರ ಪ್ರಪಂಚವನ್ನಾಗಿ ಮಾಡಿಯೇ ತೋರಿಸುತ್ತೇನೆ, ಬಂದು ಪವಿತ್ರರನ್ನಾಗಿ ಮಾಡುವ ಕಾಂಟ್ರಾಕ್ಟ್ನ್ನು ತೆಗೆದುಕೊಳ್ಳುತ್ತೇನೆ. ಕಲ್ಪ-ಕಲ್ಪವೂ ಕಾಂಟ್ರಾಕ್ಟರ್ ಆದ ನನ್ನನ್ನೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಮತ್ತ್ಯಾರೂ ನನ್ನಂತಹ ಕಾಂಟ್ರಾಕ್ಟರ್ ಇರುವುದಿಲ್ಲ, ನನ್ನೊಬ್ಬನಿಗೇ ಕಾಂಟ್ರಾಕ್ಟ್ ಸಿಕ್ಕಿದೆ, ನಾನೇ ಪಾವನ ಪ್ರಪಂಚವನ್ನಾಗಿ ಮಾಡುವೆನು. ಕಲ್ಪ-ಕಲ್ಪವೂ ಜ್ಞಾನವಂತೂ ಈ ಕಾಂಟ್ರಾಕ್ಟನ್ನು ಪೂರ್ಣಗೊಳಿಸುತ್ತೇನೆ. ಸನ್ಯಾಸಿಗಳು ಪವಿತ್ರರಾಗಿದ್ದು ಭಾರತವನ್ನು ತಣಿಸುವ ಕಾಂಟ್ರಾಕ್ಟ್ ಸಿಕ್ಕಿದೆ ಏಕೆಂದರೆ ಭಾರತವೇ ಪವಿತ್ರವಾಗಿತ್ತು, ಅದನ್ನು ಸ್ವರ್ಗವೆಂದು ಹೇಳಲಾಗುತ್ತದೆ. ಅಲ್ಲಿನ ದೇವತೆಗಳು ಸರ್ವಗುಣ ಸಂಪನ್ನರು, ಸಂಪೂರ್ಣ ನಿರ್ವಿಕಾರಿಗಳಾಗಿದ್ದರು. ಅವರ ಮಹಿಮೆಯನ್ನು ಹಾಡುತ್ತಾರೆ, ಈ ಗಾಯನವು ಅನ್ಯ ದೇಶಗಳಲ್ಲಿ ಇಲ್ಲ, ಅಲ್ಲಿ ಚಿತ್ರಗಳೂ ಇಲ್ಲ, ಇವರು ಸ್ವರ್ಗದ ಮಾಲೀಕರಾಗಿದ್ದರು, ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿಯೆಂದು ಹೇಳುತ್ತಾರೆ. ಬಹಳ ಪ್ರೀತಿಯಿಂದ ಹಳೆಯ ಚಿತ್ರಗಳನ್ನು ಖರೀದಿಸುತ್ತಾರೆ, ದೇವತೆಯಾದ ಕೃಷ್ಣನ ಚಿತ್ರವನ್ನು ತರಿಸುತ್ತಾರೆ. ಎಲ್ಲರಿಗಿಂತ ಹೆಚ್ಚಿನದಾಗಿ ಕೃಷ್ಣನನ್ನು ಪ್ರೀತಿ ಮಾಡುತ್ತಾರೆ. |
ನೀವು ಮಕ್ಕಳು ಇದೇ ಚಿಂತೆಯನ್ನು ಇಟ್ಟುಕೊಳ್ಳಬೇಕಾಗಿದೆ - ನಾವು ಸತೋಪ್ರಧಾನರಾಗಬೇಕಾಗಿದೆ. ಮಾಯೆಯು ಬಹಳ ಅಲೆದಾಡಿಸುತ್ತದೆ. ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ, ಶಿವ ತಂದೆಯನ್ನು ನೆನಪೇ ಮಾಡುವುದಿಲ್ಲ. ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ - ನಮಗೆ ಶಿವ ತಂದೆಯು ತಿಳಿಸುತ್ತಿದ್ದಾರೆ, ಈ ಬ್ರಹ್ಮಾರವರು ಏನೂ ಹೇಳುವುದಿಲ್ಲವೆಂದು ಸದಾ ತಿಳಿದುಕೊಳ್ಳಿ. ಆದರೂ ಸಹ ಶಿವ ತಂದೆಯನ್ನು ಮರೆತು ನಾಮ-ರೂಪವನ್ನು ನೆನಪು ಮಾಡುತ್ತಾ ಇರುತ್ತಾರೆಯೋ ಅಂತಹವರು ಯಾವ ಪದವಿಯನ್ನು ಪಡೆಯುವರು! ಮೊದಲು ಶ್ರೀಮತದಂತೆ ನಡೆಯಬೇಕಾಗಿದೆ, ಶಿವ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಭೂತಗಳನ್ನು ಓಡಿಸಿರಿ. ದೇಹಾಭಿಮಾನವನ್ನು ಓಡಿಸಿರಿ. ನಾವಾತ್ಮರಾಗಿದ್ದೇವೆ ಮತ್ತು ಬಹಳ ಮಧುರರಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ – ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆಯುತ್ತಾ ಹೋಗಿ, ನನ್ನನ್ನು ನೆನಪು ಮಾಡಿ. ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ನನ್ನನ್ನು ನೆನಪು ಮಾಡಲಿ. ನಾನು ಬಹಳ ಹಳೆಯ ಪ್ರಿಯತಮನಾಗಿದ್ದೇನೆ, ಈ ರೀತಿ ಮತ್ತ್ಯಾರಿಗೂ ತಿಳಿಸಲು ಬರುವುದಿಲ್ಲ. ತಂದೆಯೇ ಈ ಸಮಯದಲ್ಲಿ ಬಂದು ನಿಮ್ಮನ್ನು ಆತ್ಮಿಕ ಪ್ರಿಯತಮೆಯರನ್ನಾಗಿ ಮಾಡಿಕೊಳ್ಳುತ್ತಾರೆ. ಈಗ ನಮ್ಮ ಪ್ರಿಯತಮನಾದ ಶಿವ ತಂದೆಯು ಬಂದಿದ್ದಾರೆಂದು ನೀವಾತ್ಮರಿಗೆ ತಿಳಿದಿದೆ. ಅವರಿಂದ ಸ್ವರ್ಗದ ಆಸ್ತಿಯನ್ನು ಪಡೆಯಬೇಕಾಗಿದೆ. ಇಂತಹ ಶಿವ ತಂದೆಗೆ ಬೆಳಗ್ಗೆ-ಬೆಳಗ್ಗೆ ಎದ್ದು ಗುಡ್ಮಾರ್ನಿಂಗ್ ಹೇಳಬೇಕು, ನೆನಪು ಮಾಡಬೇಕು. ಎಷ್ಟು ನೆನಪು ಮಾಡುತ್ತೀರಿ ಅಷ್ಟು ಪಾಪಗಳೂ ಸಹ ಕಳೆಯುವುದು, ದೇಹಾಭಿಮಾನವು ಕಳೆಯುವುದು. ಇಂತಹ ಅಭ್ಯಾಸ ಮಾಡುತ್ತಾ-ಮಾಡುತ್ತಾ ಸ್ಥಿತಿಯು ಪಕ್ಕಾ ಆಗಿ ಬಿಡುತ್ತದೆ. ನೆನಪಿನಲ್ಲಿ ಕುಳಿತುಕೊಂಡಿರುತ್ತೀರಿ, ಗ್ರಾಹಕರು ಬಂದರೂ ಸಹ ಅವರಕಡೆ ಗಮನ ಹೋಗುವುದಿಲ್ಲ. ಗ್ರಾಹಕರಿಗೆ ಬೇಕಾದುದನ್ನು ಕೊಟ್ಟ ನಂತರ ಮತ್ತೆ ತಂದೆಯ ನೆನಪಿನಲ್ಲಿರಬೇಕು. ಈ ರೀತಿ ನೀವು ಕರ್ಮಾತೀತರಾಗುವ ಪುರುಷಾರ್ಥ ಮಾಡಬೇಕಾಗಿದೆ. ತಂದೆಯು ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ಇವರ (ಬ್ರಹ್ಮಾ) ಮೇಲಂತೂ ಬಹಳ ಜವಾಬ್ದಾರಿಯಿದೆ, ಇವರಿಗಿಂತಲೂ ಹೆಚ್ಚಿನದಾಗಿ ನೆನಪು ಮಾಡುವ ಅವಕಾಶವು ನಿಮಗೆ ಸಿಗುತ್ತದೆ. ಬ್ರಹ್ಮಾ ತಂದೆಯು ಉದಾಹರಣೆಯನ್ನು ತಿಳಿಸುತ್ತಾರೆ- ಭೋಜನದ ಸಮಯದಲ್ಲಿ ಶಿವ ತಂದೆಯನ್ನು ನೆನಪು ಮಾಡಿ. ನಾವಿಬ್ಬರೂ (ಬಾಬಾ ಮತ್ತು ದಾದಾ) ಒಟ್ಟಿಗೆ ತಿನ್ನೋಣವೆಂದು ಕುಳಿತುಕೊಳ್ಳುತ್ತೇನೆ ಆದರೆ ಮತ್ತೆ ಮರೆತು ಹೋಗುತ್ತೇನೆ. ಎಲ್ಲರಿಗಿಂತ ಹೆಚ್ಚಿನ ಜಂಜಾಟವು ಈ ತಂದೆಯ ಮೇಲಿರುತ್ತದೆ. ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ರಾತ್ರಿ 12 ಗಂಟೆಯ ನಂತರ ಎ.ಎಂ ಆರಂಭವಾಗುತ್ತದೆ. ರಾತ್ರಿಯಲ್ಲಿ ಬೇಗನೆ ಮಲಗಿ, ಮುಂಜಾನೆ ಬೇಗನೆ ಎದ್ದು ನೆನಪು ಮಾಡಬೇಕು. ಏಳುತ್ತಿದ್ದಂತೆಯೇ “ಬಾಬಾ ಗುಡ್ಮಾರ್ನಿಂಗ್” ಎಂದು ಹೇಳಿ, ಮತ್ತೆ ಬೇರೆ ಕಡೆ ಬುದ್ಧಿಯು ಹೋಗಬಾರದು. ತಂದೆಯಂತೂ ಪ್ರತಿಯೊಬ್ಬ ಮಗುವನ್ನೂ ತಿಳಿದುಕೊಂಡಿದ್ದಾರೆ. ನಿಮ್ಮದು ಭವಿಷ್ಯಕ್ಕಾಗಿ ಬಹಳ ಸಂಪಾದನೆಯಿದೆ. ಕಲ್ಪ-ಕಲ್ಪಾಂತರವೂ ಈ ಸಂಪಾದನೆಯು ಕೆಲಸಕ್ಕೆ ಬರುವುದು ಆದ್ದರಿಂದ ಯಾವುದೇ ಭೂತವು ಬರಬಾರದು. ಕ್ರೋಧವೂ ಕಡಿಮೆಯಿಲ್ಲ, ಮೋಹವೂ ಸಹ ಕೆಟ್ಟದ್ದಾಗಿದೆ. ಎಷ್ಟು ಸಾಧ್ಯವೋ ತಂದೆಯ ನೆನಪಿನಲ್ಲಿ ಕುಳಿತು ಪಾವನರಾಗಬೇಕಾಗಿದೆ. ಹೇಗೆ ತಂದೆಯು ಜ್ಞಾನಸಾಗರನಾಗಿದ್ದಾರೆಯೋ ಅದೇರೀತಿ ಮಕ್ಕಳೂ ಆಗಬೇಕಾಗಿದೆ ಆದರೆ ಸಾಗರವು ಒಂದೇ ಇರುತ್ತದೆಯಲ್ಲವೆ. ಉಳಿದೆಲ್ಲವುಗಳಿಗೆ ನದಿಯೆಂದು ಹೇಳುತ್ತಾರೆ. ಕ್ರೋಧವು ಎರಡನೇ ನಂಬರಿನ ಶತ್ರುವಾಗಿದೆ, ಬಹಳ ನಷ್ಟವನ್ನುಂಟು ಮಾಡುತ್ತದೆ. ಒಬ್ಬರು ಇನ್ನೊಬ್ಬರ ಪ್ರಾಣವನ್ನೇ ತೆಗೆಯುತ್ತಾರೆ. ಲೋಭಿಯೂ ಸಹ ಒಬ್ಬರು ಇನ್ನೊಬ್ಬರ ಪ್ರಾಣವನ್ನು ಹಿಂಡುತ್ತಾರೆ. ಮೋಹದ ಭೂತವಂತೂ ಸತ್ಯನಾಶ ಮಾಡಿ ಬಿಡುತ್ತದೆ. ಮೋಹದ ಕಾರಣ ಶಿವ ತಂದೆಯ ನೆನಪನ್ನು ಮರೆತು ತಮ್ಮ ಮಕ್ಕಳನ್ನು ನೆನಪು ಮಾಡುತ್ತಾ ಇರುತ್ತಾರೆ. ನಷ್ಟಮೋಹಿಗಳು ಅಡೋಲ ಸ್ಥಿತಿಯಲ್ಲಿರುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಚೆನ್ನಾಗಿ ಸರ್ವೀಸ್ ಮಾಡುವ ಜೊತೆ ಜೊತೆಗೆ ಅಂತರಾಳದಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ಮುಂಜಾನೆ ಏಳುತ್ತಿದ್ದಂತೆಯೇ ಪ್ರೀತಿಯಿಂದ “ಬಾಬಾ ಗುಡ್ಮಾರ್ನಿಂಗ್” ಎಂದು ಹೇಳಬೇಕಾಗಿದೆ. ಕರ್ಮ ಮಾಡುತ್ತಿದ್ದರೂ ಸಹ ನೆನಪಿನ ಅಭ್ಯಾಸ ಮಾಡಬೇಕಾಗಿದೆ. |
2. ಯಾವುದೇ ದೇಹಧಾರಿಯು ನಾಮ-ರೂಪದಲ್ಲಿ ಸಿಲುಕಬಾರದು, ಜ್ಞಾನದ ಚಿಂತನೆಯಲ್ಲಿ ಇರಬೇಕಾಗಿದೆ, ವ್ಯರ್ಥ ಮಾತುಗಳನ್ನಾಡಬಾರದು. |
ಓಂ ಶಾಂತಿ. ಇದನ್ನು ಯಾರು ಹೇಳಿದರು? ಆತ್ಮವು ಹೇಳಿತು ಏಕೆಂದರೆ ಡ್ರಾಮಾ ಪ್ಲಾನನುಸಾರ ನೀವೀಗ ಆತ್ಮಾಭಿಮಾನಿಗಳಾಗುತ್ತಿದ್ದೀರಿ. ಅರ್ಧಕಲ್ಪ ದೇಹಾಭಿಮಾನಿಯಾಗುತ್ತೀರಿ, ಅರ್ಧಕಲ್ಪ ಆತ್ಮಾಭಿಮಾನಿಯಾಗುತ್ತೀರಿ. ನೀವೀಗ ಆತ್ಮಾಭಿಮಾನಿಗಳಾಗುವ ಅಭ್ಯಾಸ ಮಾಡಬೇಕಾಗಿದೆ, ತಂದೆಯು ಪದೇ-ಪದೇ ಹೇಳುತ್ತಾರೆ – ಅಶರೀರಿ ಭವ, ಆತ್ಮಾಭಿಮಾನಿ ಭವ. ನೀವು ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ಅವರು ದೂರ ಕುಳಿತಿದ್ದಾರೆ. ನಾವು ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದಾರೆ. ತಂದೆಯ ಶ್ರೀಮತದ ಅನುಸಾರವೇ ನಡೆಯಬೇಕಾಗಿದೆ, ಇದಕ್ಕೆ ಶ್ರೇಷ್ಠಾತಿ ಶ್ರೇಷ್ಠ ಮತವೆಂದು ಹೇಳಲಾಗುತ್ತದೆ. ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ಈಗ ತಂದೆಯು ತಿಳಿಸುತ್ತಾರೆ – ದೇಹ ಸಹಿತ ದೇಹದ ಎಲ್ಲಾ ಸಂಬಂಧವನ್ನು ಬಿಡಿ, ಆತ್ಮಾಭಿಮಾನಿಯಾಗುವ ಬಹಳ-ಬಹಳ ಅಭ್ಯಾಸ ಮಾಡಬೇಕಾಗಿದೆ. ಶರೀರವಂತೂ ವಿನಾಶವಾಗಲಿದೆ, ಆತ್ಮ ಅವಿನಾಶಿಯಾಗಿದೆ. ವಿನಾಶಿ ಶರೀರವನ್ನು ನೆನಪು ಮಾಡುವ ಕಾರಣ ಆತ್ಮವನ್ನು ಮರೆತು ಕುಳಿತಿದ್ದಾರೆ. ಆತ್ಮವೆಂದರೇನು ಎಂಬುದನ್ನೂ ಸಹ ಮಕ್ಕಳಿಗೆ ತಿಳಿಸಲಾಗುತ್ತದೆ. ಆತ್ಮವು ಚಿಕ್ಕ ನಕ್ಷತ್ರವಾಗಿದೆ ಎಂದು ಹೇಳುತ್ತಾರೆ. ಅದು ಈ ಕಣ್ಣುಗಳಿಗೆ ಕಾಣಿಸುವುದಿಲ್ಲ, ಅದನ್ನು ದಿವ್ಯ ದೃಷ್ಟಿಯಿಲ್ಲದೆ ನೋಡಲು ಸಾಧ್ಯವಿಲ್ಲ. ಆತ್ಮವನ್ನು ನೋಡಲು ಬಹಳ ಪ್ರಯತ್ನ ಪಡುತ್ತಾರೆ ಆದರೆ ನೋಡಲು ಸಾಧ್ಯವಿಲ್ಲ. ಭಲೆ ಯಾರಾದರೂ ದಿವ್ಯ ದೃಷ್ಟಿಯಿಂದ ನೋಡಲೂಬಹುದು ಆದರೆ ಇದೇನು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಆತ್ಮವು ದೊಡ್ಡ ವಸ್ತುವಲ್ಲ, ಚಿಕ್ಕ ನಕ್ಷತ್ರ ಮಾದರಿಯಾಗಿದೆ. ಎಷ್ಟು ಚಿಕ್ಕ ಬಿಂದುವಾಗಿದೆ, ಈ ಮಾತುಗಳು ಯಾರದೇ ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಬಹಳ ಕಷ್ಟವಿದೆ ಏಕೆಂದರೆ ಅರ್ಧಕಲ್ಪದಿಂದ ದೇಹಾಭಿಮಾನದಲ್ಲಿದ್ದಿರಿ. |
ತಂದೆಯು ತಿಳಿಸುತ್ತಾರೆ - ನಿಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ, ನಾವಾತ್ಮರು ಅಲ್ಲಿನ ನಿವಾಸಿಗಳಾಗಿದ್ದೇವೆ. ಈ ಶರೀರವನ್ನು ಇಲ್ಲಿಯೇ ತೆಗೆದುಕೊಳ್ಳಬೇಕಾಗಿದೆ, ಈ ಶರೀರವು ಪಂಚತತ್ವಗಳಿಂದಾಗಿದೆ. ಯಾವಾಗ ಪಿಂಡ(ಶರೀರ)ವು ತಯಾರಾಗುತ್ತದೆಯೋ ಆಗ ಸೂಕ್ಷ್ಮಆತ್ಮವು ಇದರಲ್ಲಿ ಪ್ರವೇಶ ಮಾಡುತ್ತದೆ, ಚೈತನ್ಯತೆ ಬರುತ್ತದೆ. ಆತ್ಮವು ಸತ್ಯ, ಚೈತನ್ಯವಾಗಿದೆ ಮತ್ತು ಪರಮಪಿತ ಪರಮಾತ್ಮನು ಸತ್ಯ, ಚೈತನ್ಯವಾಗಿದ್ದಾರೆ. ಪರಮ ಆತ್ಮನಾಗಿದ್ದಾರೆ. ಅವರು ದೊಡ್ಡ ಗಾತ್ರದಲ್ಲಿಲ್ಲ. ಆತ್ಮವು ಚಿಕ್ಕ ಬಿಂದುವಾಗಿದೆ. ಹೇಗೆ ಇವರಲ್ಲಿ ಜ್ಞಾನವಿದೆಯೋ ಹಾಗೆಯೇ ನೀವಾತ್ಮರಲ್ಲಿಯೂ ಜ್ಞಾನವಿದೆ. ಇಷ್ಟು ಚಿಕ್ಕಆತ್ಮನಲ್ಲಿ ಸಂಪೂರ್ಣ ಜ್ಞಾನವಿದೆ, ಇದು ಬಹಳ ಅದ್ಭುತವಾಗಿದೆ. ಆದರೆ ಮಕ್ಕಳು ಪದೇ-ಪದೇ ಈ ಮಾತುಗಳನ್ನು ಮರೆತು ಹೋಗುತ್ತಾರೆ, ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಈಗ ನೀವಾತ್ಮರು ಈ ಶರೀರದ ಮೂಲಕ ವಿಶ್ವದ ಮಾಲೀಕರಾಗುತ್ತೀರಿ ಅರ್ಥಾತ್ ದೇವಿ-ದೇವತೆಗಳಾಗುತ್ತೀರಿ. ತಂದೆಯಂತೂ ಭಗವಂತನಾಗಿದ್ದಾರೆ ಆದರೆ ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿಯೆಂದು ಹೇಳುತ್ತಾರೆ ಏಕೆಂದರೆ ತಂದೆಯೇ ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಈ ಜ್ಞಾನದಿಂದ ನೋಡಿ, ಹೇಗಾಗಿ ಬಿಡುತ್ತಾರೆ. ಯಾರು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವರೋ ಅವರು ಒಳ್ಳೆಯ ಸಂಪಾದನೆ ಮಾಡುತ್ತಾರೆ. ಹೇಗೆ ಪ್ರಪಂಚದಲ್ಲಿ ಯಾರಾದರೂ ಬಹಳ ಸುಂದರವಾಗಿದ್ದರೆ ಅವರಿಗೆ ಬಹಳ ಬಹುಮಾನವು ಸಿಗುತ್ತದೆ. ಮಿಸ್ ಇಂಡಿಯಾ, ಮಿಸ್ ಅಮೇರಿಕಾ ಎಂದು ಹೇಳುತ್ತಾರೆ. ಶರೀರದ ಜೊತೆ ಅವರು ಎಷ್ಟು ಪರಿಶ್ರಮ ಪಡುತ್ತಾರೆ! ಸತ್ಯಯುಗದಲ್ಲಂತೂ ಆಕರ್ಷಣೆ ಮಾಡುವಂತಹ ಸ್ವಾಭಾವಿಕ ಸೌಂದರ್ಯವಿರುತ್ತದೆ, ಶರೀರವು ಸತೋಪ್ರಧಾನ ಪ್ರಕೃತಿಯಿಂದ ಆಗುತ್ತದೆಯಲ್ಲವೆ. ಅವರು ಎಷ್ಟು ಆಕರ್ಷಿಸುತ್ತದೆ. ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣರ ಚಿತ್ರಗಳು ಎಲ್ಲರನ್ನು ಎಷ್ಟು ಮನ ಸೆಳೆಯುತ್ತದೆ. ವಾಸ್ತವದಲ್ಲಿ ಇಲ್ಲಿ ಅವರದೂ ಸಹ ಆಕ್ಯೂರೇಟ್ ಚಿತ್ರವಾಗುವುದಿಲ್ಲ. ಅಲ್ಲಂತೂ ಸತೋಪ್ರಧಾನರಾಗಿರುತ್ತಾರೆ ಆದ್ದರಿಂದ ಸ್ವಾಭಾವಿಕ ಸೌಂದರ್ಯವಿರುತ್ತದೆ. ಇದೆಲ್ಲವನ್ನೂ ತಂದೆಯೇ ತಿಳಿಸುತ್ತಾರೆ. ಅವರಂತೂ ಹೇ ಪತಿತ-ಪಾವನ ಎಂದು ಹಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಹೇಗೆ ಬುದ್ಧಿ ಇಲ್ಲದವರಂತೆ ಕೂಗುತ್ತಾರೆ. ಹೇ ಭಗವಂತ ದಯೆ ತೋರಿಸಿ ಎಂದು. ಆದರೆ ಭಗವಂತ ಯಾರು ಎಂಬುದನ್ನು ತಿಳಿದುಕೊಂಡಿಲ್ಲ. ತಂದೆಯನ್ನು ಅರಿತಾಗಲೇ ರಚನೆಯನ್ನೇ ಅರಿತುಕೊಳ್ಳುವರು ಆದ್ದರಿಂದ ಋಷಿ-ಮುನಿ ಮೊದಲಾದವರೆಲ್ಲರೂ ನಮಗೂ ಗೊತ್ತಿಲ್ಲ ಎಂದು ಹೇಳುತ್ತಾ ಹೋದರು. ಇದಂತೂ ಪೂರ್ಣ ಸತ್ಯವಾಗಿದೆ. ರಚಯಿತ ಮತ್ತು ರಚನೆಯನ್ನು ಯಾರೂ ಅರಿತುಕೊಂಡಿಲ್ಲ. ಒಂದುವೇಳೆ ಅರಿತುಕೊಂಡರೆ ವಿಶ್ವದ ಮಾಲೀಕರಾಗಿ ಬಿಡುವರು. |
ನೀವೀಗ ತಿಳಿದುಕೊಂಡಿದ್ದೀರಿ - ಈ ಲಕ್ಷ್ಮೀ-ನಾರಾಯಣರನ್ನೂ ಸಹ ಈ ರೀತಿ ಮಾಡುವವರು ತಂದೆಯೇ ಆಗಿದ್ದಾರೆ. ನೀವೀಗ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ ಆದರೆ ಅರ್ಧಕಲ್ಪ ದೇಹಾಭಿಮಾನದಲ್ಲಿರುವ ಕಾರಣ ಇಷ್ಟು ಗೌರವ ಕೊಡುವುದಿಲ್ಲ. ಆತ್ಮಾಭಿಮಾನಿಯಾಗುವುದೇ ಇಲ್ಲ. ದೇಹೀ-ಅಭಿಮಾನಿಗಳಾಗುವುದರಿಂದ ದಿನ ಪ್ರತಿದಿನ ನಿಮ್ಮ ಗೌರವವು ಹೆಚ್ಚುತ್ತಾ ಹೋಗುವುದು. ಯಾವಾಗ ಪೂರ್ಣ ದೇಹೀ-ಅಭಿಮಾನಿಗಳಾಗುವಿರೋ ಆಗ ಗೌರವವನ್ನು ಇಡುತ್ತೀರಿ. ಸ್ಥಿತಿಯು ಸುಧಾರಣೆಯಾಗುತ್ತಾ ಹೋಗುವುದು, ಖುಷಿಯೂ ಇರುವುದು. ನಂಬರ್ವಾರಂತೂ ಇರುತ್ತಾರಲ್ಲವೆ. ಹೇಗೆ ತಂದೆಯು ನಿಮಗೆ ತಿಳಿಸುತ್ತಾರೆಯೋ ಹಾಗೆಯೇ ನೀವೂ ಸಹ ಅನ್ಯರಿಗೆ ಯುಕ್ತಿಯಿಂದ ತಿಳಿಸುತ್ತಾ ಇರಿ - ತಮ್ಮನ್ನು ಆತ್ಮನೆಂದು ತಿಳಿಯಿರಿ. ಈಗ ನಿಮ್ಮ 84 ಜನ್ಮಗಳ ಚಕ್ರವು ಪೂರ್ಣವಾಯಿತು, ಹಿಂತಿರುಗಿ ಹೋಗಬೇಕಾಗಿದೆ. ನಾವಾತ್ಮರು ಮನೆಯಿಂದ ಇಲ್ಲಿ ಬಂದು ಶರೀರ ಧಾರಣೆ ಮಾಡಿ ಪಾತ್ರವನ್ನು ಅಭಿನಯಿಸುತ್ತಿದ್ದೇವೆ. ಇಲ್ಲಿ ಎಷ್ಟು ಜನ್ಮಗಳನ್ನು ತೆಗೆದುಕೊಂಡೆವು ಎಂಬುದೂ ಸಹ ಬುದ್ಧಿಯಲ್ಲಿ ಜ್ಞಾನವಿದೆ. ದೇಹೀ-ಅಭಿಮಾನಿಗಳು ಆಗುವುದರಲ್ಲಿಯೇ ಪರಿಶ್ರಮವಿದೆ. ಪದೇ-ಪದೇ ಮಾಯೆಯು ದೇಹಾಭಿಮಾನಿಗಳನ್ನಾಗಿ ಮಾಡುತ್ತದೆ, ನೀವೀಗ ಮಾಯೆಯ ಮೇಲೆ ಜಯ ಗಳಿಸಿ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಏಕಾಂತದಲ್ಲಿ ಕುಳಿತು ವಿಚಾರ ಮಾಡಿ - ನಾವಾತ್ಮರಾಗಿದ್ದೇವೆ, ತಂದೆಯು ತಿಳಿಸಿದ್ದಾರೆ, ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಈ ದೇಹದಲ್ಲಿಯೂ ಮೋಹವನ್ನು ಇಟ್ಟುಕೊಳ್ಳಬೇಡಿ, ನಾವಾತ್ಮರು ಅವಿನಾಶಿಯಾಗಿದ್ದೇವೆ. ನಾವು ಸಹೋದರರಲ್ಲಿಯೂ ಬುದ್ಧಿಯೋಗವನ್ನು ಇಡಬಾರದು. ಸಹೋದರನಿಗೆ ಆಸ್ತಿಯು ಸಿಗುತ್ತದೆಯೇ! ಯಾವುದೇ ಆತ್ಮನನ್ನಾಗಲಿ, ಸಹೋದರ ಶರೀರವನ್ನಾಗಲಿ ನೆನಪು ಮಾಡಬಾರದು. ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಆಸ್ತಿಯು ತಂದೆಯಿಂದಲೇ ಸಿಗುವುದು. ನಾವಾತ್ಮರು ನಮ್ಮ ಮನೆಗೆ ಹೋಗುತ್ತೇವೆ, ನಂತರ ಸತ್ಯಯುಗದಲ್ಲಿ ಬಂದು ನಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ಅಲ್ಲಿ ಆತ್ಮಾಭಿಮಾನಿ ಆಗಿರುತ್ತೇವೆ. ಇಲ್ಲಿ ಮಾಯಾ ರಾವಣನು ದೇಹಾಭಿಮಾನಿಗಳನ್ನಾಗಿ ಮಾಡಿ ಬಿಡುತ್ತಾನೆ. ನೀವೀಗ ಪುನಃ ಆತ್ಮಾಭಿಮಾನಿಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತಾ ಇರಿ, ಇಲ್ಲಿ ಚಿತ್ರಗಳ ಮುಂದೆ ಬಂದು ಕುಳಿತುಕೊಳ್ಳಿ. ಹೇಗೆ ಸೈನಿಕರಿಗೆ ಮೈದಾನದಲ್ಲಿ ಅಭ್ಯಾಸ ಮಾಡಿಸಲಾಗುತ್ತದೆಯಲ್ಲವೆ. ಈಗ ನೀವು ಆತ್ಮಾಭಿಮಾನಿಗಳಾಗಿ ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನೀವಂತೂ ನನ್ನ ಮಕ್ಕಳಾಗಿದ್ದೀರಲ್ಲವೆ. ದೇಹಾಭಿಮಾನಿಗಳಾಗಿದ್ದರಿಂದ ನೀವು ಮಾಯೆಗೆ ವಶವಾಗಿ ಬಿಟ್ಟಿದ್ದೀರಿ. ಹೇ ಪತಿತ-ಪಾವನ, ಜ್ಞಾನ ಸಾಗರ ಎಂದು ಕರೆಯುತ್ತೀರಿ ಅಂದಮೇಲೆ ಉಳಿದೆಲ್ಲರೂ ಭಕ್ತಿಯ ಸಾಗರರಾಗಿದ್ದಾರೆ. ಭಕ್ತಿಮಾರ್ಗದ ಎಷ್ಟೊಂದು ವಿಸ್ತಾರವಿದೆ. ತಂದೆಯು ಬರುವುದೇ ಸುಳ್ಳು ಪ್ರಪಂಚದಲ್ಲಿ, ಅದರಲ್ಲಿಯೂ ಸಾಧಾರಣ ರೂಪದಲ್ಲಿ. ಡ್ರಾಮಾದಲ್ಲಿ ಇದೇ ರೀತಿ ನಿಗಧಿತವಾಗಿದೆ. ಪತಿತ ಶರೀರದಲ್ಲಿಯೇ ತಂದೆಯು ಬರುತ್ತಾರೆ, ಲಕ್ಷ್ಮೀ-ನಾರಾಯಣರ ಶರೀರದಲ್ಲಿ ಬರುವುದಿಲ್ಲ. ಅವರಿಗಂತೂ ರಾಜ್ಯಭಾಗ್ಯವು ಸಿಕ್ಕಿದೆ ಅಂದಮೇಲೆ ಅವರಲ್ಲಿ ನಾನು ಹೇಗೆ ಬರಲಿ! ಸಾಧಾರಣ ರೂಪದಲ್ಲಿರುವ ಕಾರಣ ನನ್ನನ್ನು ಗುರುತಿಸುವುದೇ ಇಲ್ಲ. ಕರೆಯುತ್ತಾರೆ ಆದರೆ ಅವಶ್ಯವಾಗಿ ಯಾವುದೋ ಶರೀರದಲ್ಲಿ ಬರುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ನನ್ನ ರೂಪವು ನಿರಾಕಾರ ಬಿಂದು ಸ್ವರೂಪವಾಗಿದೆ ಅಂದಮೇಲೆ ಅವಶ್ಯವಾಗಿ ಪ್ರಜಾಪಿತ ಬ್ರಹ್ಮನ ತನುವಿನಲ್ಲಿಯೇ ಬರುತ್ತೇನೆ. ಪ್ರಜಾಪಿತನು ಅವಶ್ಯವಾಗಿ ಇಲ್ಲಿಯೇ ಬೇಕು ಮತ್ತು ಹಳೆಯ ತನುವೇ ಬೇಕಾಗಿದೆ. ಈ ಬ್ರಹ್ಮಾರವರು ಹಳೆಯ ರೂಪದಲ್ಲಿ ಮತ್ತು ಇವರ ಪಕ್ಕದಲ್ಲಿಯೇ ಹೊಸ ರೂಪದಲ್ಲಿ ವಿಷ್ಣು ನಿಂತಿದ್ದಾರೆ. ತ್ರಿಮೂರ್ತಿಯ ಚಿತ್ರದಲ್ಲಿ ಎಷ್ಟೊಂದು ಜ್ಞಾನವಿದೆ. |
ನೀವು ಮಕ್ಕಳು ಮೊದಲು ಈ ದೇವತೆಗಳನ್ನು ಕರೆಯುತ್ತಿದ್ದಿರಿ. ಶ್ರೀನಾರಾಯಣನ ಎಷ್ಟೊಂದು ಭಕ್ತಿ ಮಾಡುತ್ತಿದ್ದಿರಿ. ಆಶ್ಚರ್ಯವಲ್ಲವೆ. ನಾನೂ ಸಹ ನಾರಾಯಣನನ್ನು ಎಷ್ಟೊಂದು ಪ್ರೀತಿ ಮಾಡುತ್ತಿದ್ದೆನು, ಶ್ರೀನಾರಾಯಣನು ಬಂದಿದ್ದಾರೆ ಇವರಿಗೆ ತಿನ್ನಿಸಿ, ಕುಡಿಸಿರಿ... ಈಗಂತೂ ನಾನೇ ಈ ರೀತಿಯಾಗುತ್ತಿದ್ದೇನೆ ಎಂದು ಆಂತರ್ಯದಲ್ಲಿ ತಿಳಿದುಕೊಳ್ಳುತ್ತೇನೆ. ಏನು ಆಗಿದ್ದೆನೋ ಅದಕ್ಕೆ ಅವಶ್ಯವಾಗಿ ಖಾತರಿ ಮಾಡುತ್ತೇನೆ ಅಂದರೆ ನಾನು ನನ್ನದೇ ಮೂರ್ತಿಗೆ ಖಾತರಿ ಮಾಡುತ್ತೇನೆ. ತಂದೆಯೂ ಸಹ ಹೇಳುತ್ತಿದ್ದರು - ತಮ್ಮ ಖಾತರಿ ಮಾಡಿಕೊಳ್ಳುತ್ತೀರಿ ಎಂದು. ನೀವು ಮಕ್ಕಳು ನೋಡಿದ್ದೀರಲ್ಲವೆ - ಇವು ಬಹಳ ಅದ್ಭುತ ಮಾತುಗಳಾಗಿವೆ. ಇವನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನೀವೇ ತಿಳಿಸಬಲ್ಲಿರಿ, ಇದು ಸಂಪೂರ್ಣ ಹೊಸ ಜ್ಞಾನವಾಗಿದೆ. ತಂದೆಯು ತಿಳಿಸುತ್ತಾರೆ- ನಾನು ಪುನಃ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ಆದಿಯಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಮಧ್ಯದಲ್ಲಿ ರಾವಣ ರಾಜ್ಯವಿದೆ. ಈಗ ಅಂತ್ಯವಾಗಿದೆ, ಅಂತಿಮದಲ್ಲಿ ಸ್ವಯಂ ತಂದೆಯು ಬರುತ್ತಾರೆ. ಈಗ ನೀವು ಮಕ್ಕಳು ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಇನ್ನು ಸ್ವಲ್ಪ ಸಮಯದಲ್ಲಿಯೇ ಏನೇನು ಆಗುವುದಿದೆ, ವಿನಾಶವೂ ಅವಶ್ಯವಾಗಿ ಆಗುವುದು. ಮಹಾಭಾರತ ಯುದ್ಧವಾಗಿತ್ತು, ಈಗ ಪುನಃ ಆಗುವುದೆಂದು ಹೇಳುತ್ತಾರೆ. ಈ ಸಮಯದಲ್ಲಿ ಇದು ಯಾರಿಗೂ ಗೊತ್ತಿಲ್ಲ. ಪತಿತ-ಪಾವನನು ಒಬ್ಬ ತಂದೆಯೇ ಆಗಿದ್ದಾರೆ. ಅವರು ಬಂದಿದ್ದಾರೆ, ಅಂದಮೇಲೆ ಇನ್ನೆಷ್ಟು ಸಮಯ ಇರಬಹುದು. ಶ್ರೀಕೃಷ್ಣನಂತೂ ಇಲ್ಲಿ ಬರಲು ಸಾಧ್ಯವಿಲ್ಲ. ಶ್ರೀಕೃಷ್ಣನು ಸತ್ಯಯುಗದಲ್ಲಿ ಒಂದು ಜನ್ಮ ತೆಗೆದುಕೊಂಡನು. ಕೃಷ್ಣನ ಹೆಸರಿನಿಂದ ನಂತರ ಹೆಸರು, ರೂಪ ಬದಲಾಗುತ್ತಾ ಹೋಯಿತು. ಶರೀರದ ಲಕ್ಷಣಗಳೇ ಬದಲಾಗುತ್ತಾ ಹೋಗುತ್ತವೆ. ತಂದೆಯು ತಿಳಿಸಿದ್ದಾರೆ - ನೀವೇ ಯಾರು ಪೂಜ್ಯರಾಗಿದ್ದಿರೋ ಅವರೇ ನಂತರ ಪೂಜಾರಿಗಳಾಗಿದ್ದೀರಿ. 84 ಜನ್ಮಗಳನ್ನು ಹೇಗೆ ತೆಗೆದುಕೊಂಡಿದ್ದೀರಿ ಎಂಬುದನ್ನು ತಿಳಿಸಿದ್ದಾರೆ ಮತ್ತು ಹೇಳುತ್ತಾರೆ, ನೀವು ಅರ್ಧಕಲ್ಪ ದೇಹಾಭಿಮಾನದಲ್ಲಿದ್ದಿರಿ, ಈಗ ದೇಹೀ-ಅಭಿಮಾನಿಯಾಗಿ. ನೀವು ಆತ್ಮರಾಗಿದ್ದೀರಿ, ನಾನು ನಿಮ್ಮ ತಂದೆ ಪರಮಪಿತ ಪರಮಾತ್ಮನಾಗಿದ್ದೇನೆ. ನಾನು ಅಶರೀರಿಯಾಗಿದ್ದೇನೆ ಮತ್ತು ಮಕ್ಕಳಿಗೆ ನನ್ನ ಪರಿಚಯವನ್ನು ಕೊಡುತ್ತೇನೆ. ಅತೀಂದ್ರಿಯ ಸುಖವನು ಗೋಪ-ಗೋಪಿಕೆಯರಿಂದ ಕೇಳಿ ಎಂಬ ಯಾವ ಗಾಯನವಿದೆಯೋ ಇದು ಅಂತ್ಯದ ಮಾತಾಗಿದೆ ಯಾವಾಗ ಪರೀಕ್ಷೆಯ ಫಲಿತಾಂಶವು ಸಮೀಪ ಬರುತ್ತದೆ. ಯಾವ ಮಕ್ಕಳು ಹೆಚ್ಚು ಸರ್ವೀಸ್ ಮಾಡುವರೋ ಅವರು ಅವಶ್ಯವಾಗಿ ಎಲ್ಲರಿಗೆ ಪ್ರಿಯರಾಗುತ್ತಾರೆ. ಪ್ರದರ್ಶನಿ ಮೊದಲಾದುವುಗಳಲ್ಲಿಯೂ ಮೊದಲು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಇಂತಹವರನ್ನು ಕಳುಹಿಸಿಕೊಡಿ ಎಂದು ಪತ್ರ ಬರೆಯುತ್ತಾರೆ. ಇದರ ಅರ್ಥವೇನೆಂದರೆ ಇವರು ನಮಗಿಂತಲೂ ಬುದ್ಧಿವಂತರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ ಆದರೆ ದೇಹಾಭಿಮಾನವು ಬಹಳ ಇದೆ. ನಮ್ಮ ಹಿರಿಯ ಸಹೋದರ ಅಥವಾ ಸಹೋದರಿಯರಿದ್ದರೆ ಅವರಿಗೆ ಗೌರವ ಕೊಡಬೇಕು. ಇಂತಹವರು ನಮಗಿಂತಲೂ ನೂರು ಪಟ್ಟು ಒಳ್ಳೆಯವರೆಂದು ಎಂದಿಗೂ ಹೇಳುವುದಿಲ್ಲ. ಅನ್ಯರಿಗೆ ಗೌರವ ಕೊಡುವಷ್ಟು ತಿಳುವಳಿಕೆಯೂ ಇಲ್ಲ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದರಂತೆ ನಡೆಯದಿದ್ದರೆ ಅವರ ಗತಿಯೇನಾಗುವುದು! ದೇಹಾಭಿಮಾನವು ಬಾಡಿಸಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ದೇಹೀ-ಅಭಿಮಾನಿಯಾಗಿರಿ. ಮುಂಜಾನೆಯೆದ್ದು ಶಿವ ತಂದೆಯನ್ನು ನೆನಪು ಮಾಡಿರಿ ಆದರೆ ಅದನ್ನೂ ಮಾಡುವುದಿಲ್ಲ, ಒಳ್ಳೊಳ್ಳೆಯ ಮಕ್ಕಳೂ ಸಹ ಯೋಗದಲ್ಲಿ ಬಹಳ ಕಡಿಮೆಯಿರುತ್ತಾರೆ. ಜ್ಞಾನವನ್ನಂತೂ ಚಿಕ್ಕ ಮಕ್ಕಳೂ ತಿಳಿಸಬಲ್ಲರು ಆದರೆ ಅದು ಗಿಳಿಯ ಪಾಠದಂತಾಗಿ ಬಿಡುತ್ತದೆ. ಇದರಲ್ಲಿ ಯೋಗದಲ್ಲಿದ್ದು ಧಾರಣೆಯೂ ಇದ್ದಾಗ ಖುಷಿಯಿರುವುದು. ಯೋಗವಿಲ್ಲದೆ ವಿಕರ್ಮಗಳು ವಿನಾಶವಾಗಲು ಸಾಧ್ಯವಿಲ್ಲ. ಪವಿತ್ರ ವಸ್ತು(ತಂದೆ)ವನ್ನು ನೆನಪು ಮಾಡಲಾಗುತ್ತದೆ ಅಂದಮೇಲೆ ಅವರ ಜೊತೆ ಪ್ರೀತಿಯೂ ಬಹಳ ಇರಬೇಕು. ಪದೇ-ಪದೇ ತಿಳಿಸಲಾಗುತ್ತದೆ - ಮನ್ಮನಾಭವ. ಅರ್ಧಕಲ್ಪ ದೇಹಾಭಿಮಾನಿಯಾಗಿದ್ದಿರಿ ಆದ್ದರಿಂದ ಈಗ ದೇಹೀ-ಅಭಿಮಾನಿಯಾಗಿರುವುದು ಕಷ್ಟವೆನಿಸುತ್ತದೆ. ಬಹಳ ಪರಿಶ್ರಮವಾಗುತ್ತದೆ. ದೇಹೀ-ಅಭಿಮಾನಿ ಸ್ಥಿತಿಯನ್ನು ಹೊಂದುವುದರಲ್ಲಿ ಎಷ್ಟು ವರ್ಷಗಳು ಹಿಡಿಸುತ್ತದೆ. ತನ್ನನ್ನು ಚಿಕ್ಕ ಆತ್ಮವೆಂದು ತಿಳಿದು ತಂದೆಯನ್ನೂ ಬಿಂದುವೆಂದು ತಿಳಿದು ನೆನಪು ಮಾಡುವುದರಲ್ಲಿ ಪರಿಶ್ರಮವಿದೆ. ಯಾರು ಸತ್ಯವಾಗಿರುವರೋ ಅವರು ನಾವು ಎಷ್ಟು ತಂದೆಯನ್ನು ನೆನಪು ಮಾಡುತ್ತೇವೆ ಎಂದು ಆಂತರ್ಯದಲ್ಲಿ ಕೇಳಿಕೊಳ್ಳುತ್ತಾ ಇರುತ್ತಾರೆ. ಇದು ಬಹಳ ಕಠಿಣ ಅಭ್ಯಾಸವಾಗಿದೆ. 21 ಜನ್ಮಗಳಿಗಾಗಿ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುವುದು ಕಡಿಮೆ ಮಾತೇನು! ನೀವು ತಿಳಿದುಕೊಂಡಿದ್ದೀರಿ - ನಾವು ಅತಿ ಚಿಕ್ಕ ಆತ್ಮರಲ್ಲಿ 84 ಜನ್ಮಗಳ ಪಾತ್ರವು ನಿಗಧಿತವಾಗಿದೆ. ಆತ್ಮವೇ ಮುಖ್ಯ ಪಾತ್ರಧಾರಿಯಾಗುತ್ತದೆ. ಆತ್ಮವೇ ಎಲ್ಲವೂ ಆಗುತ್ತದೆ ಆದರೆ ದೇಹಾಭಿಮಾನದ ಕಾರಣ ಅತ್ಮಾಭಿಮಾನವು ಮಾಯವಾಗಿ ಬಿಟ್ಟಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಇದೇ ಅಭ್ಯಾಸ ಮಾಡಬೇಕಾಗಿದೆ - ಈ ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ, ಇದೇ ಗೀತೆಯಾಗಿದೆ. ಕೇವಲ ಅದರಲ್ಲಿ ನಿರಾಕಾರನ ಹೆಸರನ್ನು ಬಿಟ್ಟು ದೇಹಧಾರಿ ದೇವತೆಯ ಹೆಸರನ್ನು ಬರೆದು ಬಿಟ್ಟಿದ್ದಾರೆ. |
ತಂದೆಯು ತಿಳಿಸುತ್ತಾರೆ - ಯಾರು ಆದಿಯಿಂದ ಹಿಡಿದು ಅಂತ್ಯದವರೆಗೆ ಬಹಳ ಭಕ್ತಿ ಮಾಡಿದ್ದಾರೆಯೋ ಅವರೇ ನಂಬರ್ವನ್ ಮೇಲೆ ಹೋಗುತ್ತಾರೆ. ನೀವೂ ಸಹ ಬಹಳ ಭಕ್ತಿ ಮಾಡಿದ್ದೀರಿ ಅಂದಮೇಲೆ ನೀವು ಮಕ್ಕಳಿಗೂ ಸಹ ಎಷ್ಟೊಂದು ಖುಷಿಯಿರಬೇಕು - ನಮಗೆ ತಂದೆಯು ಸಿಕ್ಕಿದ್ದಾರೆ, ತಂದೆಯು ನಮಗೆ ಓದಿಸುತ್ತಿದ್ದಾರೆ, ನಾವು ಈ ವಿದ್ಯೆಯಿಂದ ವಿಶ್ವದ ಮಾಲೀಕರಾಗುತ್ತೇವೆ. ಈಗ ತಂದೆಯ ಮತದಂತೆ ಅವಶ್ಯವಾಗಿ ನಡೆಯಬೇಕು. ತಂದೆಯು ಯಾವ ಆದೇಶವನ್ನು ಕೊಡುತ್ತಾರೆಯೋ ಅದರಿಂದ ಒಂದುವೇಳೆ ಏನಾದರೂ ತಪ್ಪಾಗಿ ಬಿಟ್ಟರೂ ಸಹ ಅವರೇ ಅದನ್ನು ಸರಿ ಪಡಿಸುತ್ತಾರೆ. ಸಲಹೆ ನೀಡುತ್ತಾರೆಂದರೆ ಅದಕ್ಕೆ ಜವಾಬ್ದಾರನೂ ಅವರೇ ಆಗಿದ್ದಾರೆ. ಅವರ ಸಲಹೆಯಂತೆ ಮಾಡಿದಾಗ ಪದೇ-ಪದೇ ಆ ಶಿವ ತಂದೆಯ ನೆನಪೇ ಬರುತ್ತಿರುವುದು ಆದ್ದರಿಂದ ಈ ಬ್ರಹ್ಮಾ ತಂದೆಯೂ ಸಹ ಸದಾ ನಿಮಗೆ ಶಿವ ತಂದೆಯು ತಿಳಿಸುತ್ತಾರೆಂದೇ ಹೇಳುತ್ತಾರೆ. ನಾನೂ ಸಹ ಅವರಿಂದಲೇ ಕೇಳುತ್ತೇನೆ, ಈ ಸಲಹೆ ನೀಡುವವರು ಶಿವ ತಂದೆಯಾಗಿದ್ದಾರೆ. ನಾನು ಅವರ ಆದೇಶದಂತೆ ನಡೆಯುತ್ತೇನೆ. ನೀವೂ ಸಹ ಅವರನ್ನು ನೆನಪು ಮಾಡುತ್ತೀರಿ, ಇವರೂ ಸಹ ಅವರನ್ನೇ ನೆನಪು ಮಾಡುತ್ತಾರೆ. ದೇಹಾಭಿಮಾನವನ್ನು ಬಿಟ್ಟು ಬಿಡಿ, ನೀವು ಯಾವುದೇ ವಜ್ರ ವ್ಯಾಪಾರಿ ದಾದಾರವರ ಬಳಿ ಬಂದಿಲ್ಲ, ನೀವು ಶಿವ ತಂದೆಯ ಬಳಿ ಬಂದಿದ್ದೀರಿ. ಜ್ಞಾನಸಾಗರನಂತೂ ಅವರೇ ಅಲ್ಲವೆ, ನೀವು ಶಿವ ತಂದೆಯಿಂದ ಜ್ಞಾನಾಮೃತವನ್ನು ಕುಡಿಯಲು ಬಂದಿದ್ದೀರಿ. ಈಗಲೂ ಸಹ ಜ್ಞಾನಾಮೃತವನ್ನು ಕುಡಿಯುತ್ತಾ ಇರುತ್ತೀರಿ. ಪ್ರತಿನಿತ್ಯವು ಜ್ಞಾನ ಸಾಗರ ತಂದೆಯು ತಿಳಿಸುತ್ತಾ ಇರುತ್ತಾರೆ - ಅವರನ್ನೇ ನೆನಪು ಮಾಡಬೇಕಾಗಿದೆ. ತಂದೆಯು ಭಕ್ತಿಯನ್ನು ಬಿಡಿ ಎಂದು ಹೇಳುವುದಿಲ್ಲ, ಯಾವಾಗ ಜ್ಞಾನದ ಪರಾಕಾಷ್ಠತೆ ಬರುವುದೋ ಆಗ ಅದು ಭಕ್ತಿ, ಇದು ಜ್ಞಾನವಾಗಿದೆ ಎಂಬುದನ್ನು ತಾವಾಗಿಯೇ ಅರ್ಥ ಮಾಡಿಕೊಳ್ಳುವರು. ಅರ್ಧಕಲ್ಪ ನೀವು ಭಕ್ತಿ ಮಾಡಿದ್ದೀರಿ, ಇದರಿಂದ ಯಾರೂ ಹಿಂತಿರುಗಿ ಹೋಗಲಿಲ್ಲ, ಕರೆದುಕೊಂಡು ಹೋಗುವವರು ಒಬ್ಬ ತಂದೆಯೇ ಆಗಿದ್ದಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯು ಯಾವ ಸಲಹೆ ನೀಡಿದ್ದಾರೆಯೋ ಅದನ್ನು ಶಿವ ತಂದೆಯ ಶ್ರೀಮತವೆಂದು ತಿಳಿದು ನಡೆಯಬೇಕಾಗಿದೆ. ಜ್ಞಾನಾಮೃತವನ್ನು ಕುಡಿಯಬೇಕು ಮತ್ತು ಕುಡಿಸಬೇಕಾಗಿದೆ. |
2. ಎಲ್ಲರಿಗೆ ಗೌರವ ನೀಡುತ್ತಾ ಸರ್ವೀಸಿನಲ್ಲಿ ತತ್ಪರರಾಗಿರಬೇಕು. ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿರುವ ಅಭ್ಯಾಸ ಮಾಡಬೇಕಾಗಿದೆ. |
ಓಂ ಶಾಂತಿ. ಶಿವ ತಂದೆಯು ಬ್ರಹ್ಮಾರವರ ತನುವಿನಿಂದ ಮಧುರಾತಿ ಮಧುರ ಅನನ್ಯ ಆತ್ಮಿಕ ಮಕ್ಕಳ ಪ್ರತಿ ಗುಹ್ಯ ರಹಸ್ಯ ಅಥವಾ ಜ್ಞಾನವನ್ನು ತಿಳಿಸುತ್ತಿದ್ದಾರೆ. ಒಂದಂತು ಮಕ್ಕಳು ಗೀತೆಯನ್ನು ಕೇಳಿದಿರಿ, ಭಲೆ ಎಷ್ಟಾದರೂ ದುಃಖವನ್ನು ಸಹನೆ ಮಾಡಬೇಕಾಗಲಿ, ಬಾಬಾ ನಾವು ನಿಮ್ಮ ಮೇಲೆ ಬಲಿಹಾರಿಯಾಗುತ್ತೇವೆ ಎಂದು. ದುಃಖವು ಏಕೆ ಆಗುತ್ತದೆ? ಏಕೆಂದರೆ ಮನುಷ್ಯರಿಗೆ ವಿಷ(ವಿಕಾರ)ವು ಸಿಗುವುದಿಲ್ಲ. ಇದಂತೂ ಮಕ್ಕಳಿಗೆ ಗೊತ್ತಿದೆ, ನಾವು ಆತ್ಮನನ್ನಾಗಲಿ ಪರಮಾತ್ಮನನ್ನಾಗಲಿ ತಿಳಿದುಕೊಂಡಿರಲಿಲ್ಲ. ತಮ್ಮನ್ನು ತಾವು ಮತ್ತು ತಂದೆಯನ್ನು ಅರಿತಿರಲಿಲ್ಲ ಆದ್ದರಿಂದ ಹೇಗೆ ಪ್ರಾಣಿ ಬುದ್ಧಿಯವರಾಗಿದ್ದೆವು, ಲೌಕಿಕ ಸಂಬಂಧದಲ್ಲಂತೂ ತಮ್ಮನ್ನು ತಿಳಿದುಕೊಂಡಿರುತ್ತಾರೆ. ಲೌಕಿಕ ತಂದೆಯನ್ನೂ ತಿಳಿದುಕೊಂಡಿರುತ್ತಾರೆ. ಈ ಸಮಯದ ಮನುಷ್ಯರು ತನ್ನನ್ನು ಮತ್ತು ಪಾರಲೌಕಿಕ ತಂದೆಯನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ. ಪರಮಾತ್ಮನಿಗೆ ಯಾವುದೇ ನಾಮ, ರೂಪ, ದೇಶ, ಕಾಲ ಇಲ್ಲವೇ ಇಲ್ಲ ಎಂದು ಹೇಳಿ ಬಿಡುತ್ತಾರೆ ಅಂದಮೇಲೆ ಆತ್ಮಕ್ಕೂ ಇರಬಾರದು. ಆತ್ಮವನ್ನೂ ಸಹ ಅವರು ತಿಳಿದುಕೊಂಡಿಲ್ಲ. ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ನೀವೀಗ ಅರಿತುಕೊಂಡಿದ್ದೀರಿ, ಅವರು ಕೇವಲ ನಾಮ ಮಾತ್ರಕ್ಕೆ ಆತ್ಮ ಮತ್ತು ಜೀವ ಎಂದು ಹೇಳಿ ಬಿಡುತ್ತಾರೆ. ಆತ್ಮ ಅವಿನಾಶಿಯಾಗಿದೆ, ಜೀವವು ವಿನಾಶಿಯಾಗಿದೆ. ಆತ್ಮವೆಂದರೇನು? ಅದರ ರಂಗು-ರೂಪವೇನಾಗಿದೆ? ಹೆಸರಂತೂ ಆತ್ಮವೆಂದು ಗೊತ್ತಿದೆ ಆದರೆ ಅದು ಹೇಗಿದೆ, ಏನು ಮಾಡುತ್ತದೆ? ಹೇಗೆ ಪಾತ್ರವನ್ನು ಅಭಿನಯಿಸುತ್ತದೆ? ಎಷ್ಟು ಸಮಯ ಪಾತ್ರವನು ಅಭಿನಯಿಸುತ್ತದೆ? ಈ ಆತ್ಮದ ಜ್ಞಾನದ ವರ್ಣನೆಯನ್ನು ಯಾರೂ ಮಾಡಲು ಸಾಧ್ಯವಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಆತ್ಮವು ಚಿಕ್ಕ ನಕ್ಷತ್ರವಾಗಿದೆ. ಆತ್ಮದಲ್ಲಿ ಇಡೀ 84 ಜನ್ಮಗಳ ಅವಿನಾಶಿ ಪಾತ್ರವು ನಿಗಧಿತವಾಗಿದೆ. ಶಂಕರಾಚಾರ್ಯರ ಆತ್ಮವೂ ಸಹ ತಮ್ಮ ಪಾತ್ರವನ್ನು ಅಭಿನಯಿಸುತ್ತಿದೆ. ಆತ್ಮವು ಹೇಗೆ ಸತೋಪ್ರಧಾನತೆಯಿಂದ ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆಯೆಂದು ಯಾರೂ ತಿಳಿದುಕೊಂಡಿಲ್ಲ. ಕೇವಲ ಭೃಕುಟಿಯ ನಡುವೆ ಹೊಳೆಯುವ ನಕ್ಷತ್ರವೆಂದು ಹೇಳಿ ಬಿಡುತ್ತಾರೆ, ಮತ್ತೇನೂ ತಿಳಿದುಕೊಂಡಿಲ್ಲ. ಆತ್ಮವನ್ನು ತಿಳಿಯದಿದ್ದರೆ ಪರಮಾತ್ಮನನ್ನು ತಿಳಿದುಕೊಳ್ಳಲಿಲ್ಲ ಎಂದರ್ಥ. ಈ ಸಮಯದಲ್ಲಿ ಇದು ಮುಳ್ಳುಗಳ ಕಾಡಾಗಿದೆ, ಎಲ್ಲರೂ ಮುಳ್ಳುಗಳಾಗಿದ್ದಾರೆ. ರಚಯಿತ ಪರಮಪಿತ ಪರಮಾತ್ಮನನ್ನಾಗಲಿ, ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲಿ ತಿಳಿದುಕೊಂಡಿಲ್ಲ. ನೀವು ಮಕ್ಕಳು ಆತ್ಮ ಮತ್ತು ಪರಮಾತ್ಮನನ್ನು ತಿಳಿದುಕೊಂಡಿದ್ದೀರಿ, ಅದು ನಂಬರ್ವಾರ್ ಪುರುಷಾರ್ಥದ ಅನುಸಾರ. ಬಹಳ ಮಕ್ಕಳು ಯಥಾರ್ಥ ರೀತಿಯಿಂದ ತಿಳಿದುಕೊಂಡಿಲ್ಲ. ದೇಹಾಭಿಮಾನವಿರುವ ಕಾರಣ ಸಂಪೂರ್ಣ ಧಾರಣೆಯಾಗುವುದಿಲ್ಲ. ನಂಬರ್ವಾರಂತೂ ಇರುತ್ತಾರಲ್ಲವೆ! ಬಾಬಾ ಹೀಗೇಕೆ ಎಂದು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಇದರಲ್ಲಿ ಎಲ್ಲಾ ಪ್ರಕಾರದವರೂ ಬೇಕು. ಕಲ್ಲು ಬುದ್ಧಿಯವರೇ ಕನಿಷ್ಟ ಪದವಿ ಪಡೆಯುವರು. ಒಂದುವೇಳೆ ತಾನು ಅರಿತುಕೊಂಡರೂ ಅನ್ಯರಿಗೂ ತಿಳಿಸುವರು. ಮುಂದೆ ಹೋದಂತೆ ತಿಳಿಸತೊಡಗುತ್ತೇವೆಂದು ನೀವು ಹೇಳುತ್ತೀರಿ ಆದರೆ ಇಂತಹವರೂ ಸಹ ಯಾರಾದರೂ ಬೇಕು ಆಗಲೇ ಕಡಿಮೆ ಪದವಿ ಸಿಗುವುದಲ್ಲವೆ. ರಾಜನೆಲ್ಲಿ! ಪ್ರಜೆಗಳೆಲ್ಲಿ! ಎಷ್ಟೊಂದು ಅಂತರವಿದೆ. ಇಲ್ಲಂತೂ ರಾಜಾ, ಪ್ರಜೆ ಎಲ್ಲರಿಗೂ ದುಃಖವಿದೆ. ಸತ್ಯಯುಗದಲ್ಲಿ ರಾಜನಿಗಾಗಲಿ, ಪ್ರಜೆಗಳಿಗಾಗಲಿ ದುಃಖವಿರುವುದಿಲ್ಲ ಆದರೆ ಪದವಿಗಳಲ್ಲಿ ಅಂತರವಿರುತ್ತದೆ. ಪೂರ್ಣ ಧಾರಣೆಯಿಲ್ಲದ ಕಾರಣ ಯಾರಿಗೂ ತಿಳಿಸಲು ಸಾಧ್ಯವಾಗುವುದಿಲ್ಲ. ಆಗ ಯಾವುದಾದರೊಂದು ಮುಳ್ಳು ಚುಚ್ಚುತ್ತಾ ಇರುತ್ತದೆ, ಕೆಲವೊಮ್ಮೆ ಲೋಭ, ಕೆಲವೊಮ್ಮೆ ಮೋಹ..... ಭೂತಗಳು ಪ್ರವೇಶವಾಗುತ್ತಾ ಇರುವುದು. ಇದೂ ಸಹ ಅವಶ್ಯವಾಗಿ ಆಗಬೇಕಾಗಿದೆ. |
ನೀವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯಾಗಿದ್ದೀರಿ. ಪ್ರಜಾಪಿತನ ತಂದೆ ಯಾರು? ಶಿವಬಾಬಾ. ಬಾಕಿ ಶಿವನಿಗೆ ಯಾರೂ ತಂದೆಯಿಲ್ಲ. ಈ ಬ್ರಹ್ಮಾ-ವಿಷ್ಣು-ಶಂಕರನೂ ಸಹ ಶಿವನ ರಚನೆಯಾಗಿದ್ದಾರೆ ಅಂದಮೇಲೆ ಎಲ್ಲರೂ ಆತ್ಮರಾಗಿ ಬಿಟ್ಟರು. ಪರಮಪಿತ ಪರಮಾತ್ಮನು ಒಬ್ಬರೇ ಆಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರ ಅಥವಾ ಲಕ್ಷ್ಮೀ-ನಾರಾಯಣ ಮೊದಲಾದ ಯಾವುದೇ ತ್ಮರಿಂದ ಮನುಷ್ಯಾತ್ಮರಿಂದ ಎಂದೂ ಗತಿ-ಸದ್ಗತಿಯ ಆಸ್ತಿ ಸಿಗಲು ಸಾಧ್ಯವಿಲ್ಲ. ಮನುಷ್ಯರು ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಒಬ್ಬ ಪರಮಪಿತ ಪರಮಾತ್ಮನೇ ಆತ್ಮಾನುಭೂತಿ ಮಾಡಿಸಬಲ್ಲರು. ಜ್ಞಾನದಿಂದ ಸದ್ಗತಿಯಾಗುತ್ತದೆ, ಜ್ಞಾನವನ್ನು ಒಬ್ಬ ತಂದೆಯೇ ಕೊಡುತ್ತಾರೆ. ಕೆಲವು ಮಕ್ಕಳು ಯಜ್ಞದ ಸ್ಥೂಲ ಸೇವೆಯನ್ನು ಬಹಳ ಮಾಡುತ್ತಾರೆ, ಈ ಸಬ್ಜೆಕ್ಟ್ನಿಂದಲೂ ಅಂಕಗಳು ಬಹಳ ಸಿಗುತ್ತವೆ, ಈಗ ನೀವು ಮಕ್ಕಳಿಗೆ ತಂದೆಯು ಅಮರ ಕಥೆ, ಮೂರನೇ ನೇತ್ರದ ಕಥೆಯನ್ನು ತಿಳಿಸುತ್ತಾರೆ. ಇದು ವಾಸ್ತವದಲ್ಲಿ ಕಥೆಯಲ್ಲ, ಇದು ಆತ್ಮಿಕ ಜ್ಞಾನವಾಗಿದೆ, ಸ್ವಯಂನ್ನು ಅರಿತುಕೊಳ್ಳುವುದಾಗಿದೆ. ಅವರಂತೂ ಹೇಗೆ ನೀರಿನಿಂದ ಗುಳ್ಳೆಯು ಹೊರಬರುತ್ತದೆ ಮತ್ತೆ ಅದರಲ್ಲಿಯೇ ಸೇರಿ ಹೋಗುತ್ತದೆ ಎಂದು ಹೇಳುತ್ತಾರೆ. ನಾವು ಬ್ರಹ್ಮತತ್ವದಿಂದ ಹುಟ್ಟಿ ಪಾತ್ರವನ್ನು ಅಭಿನಯಿಸಿ ಮತ್ತೆ ಬ್ರಹ್ಮ್ದಲ್ಲಿಯೇ ಲೀನವಾಗಿ ಬಿಡುತ್ತೇವೆ ಅಥವಾ ಬ್ರಹ್ಮವೇ ಆಗಿಬಿಡುತ್ತೇವೆಂದು ಹೇಳಿ ಬಿಡುತ್ತಾರೆ. ರಚನೆ ಮತ್ತು ರಚಯಿತನ ಜ್ಞಾನವೇ ಇಲ್ಲ. ಜ್ಞಾನವನ್ನು ತಂದೆಯೇ ಬಂದು ತಿಳಿಸುತ್ತಾರೆ, ಅವರ ಹೆಸರಾಗಿದೆ - ಶಿವ. ಮತ್ತೆ ಅವರಿಗೆ ಕೆಲವರು ರುದ್ರನೆಂದೂ ಹೇಳುತ್ತಾರೆ, ಕೆಲವರು ಪಾಪ ಕಟೇಶ್ವರನೆಂದೂ ಹೇಳುತ್ತಾರೆ. ಅನೇಕ ಹೆಸರುಗಳನ್ನು ಇಟ್ಟು ಪೂಜಾ ಸಾಮಗ್ರಿಯನ್ನು ಹೆಚ್ಚಿಸಿ ಬಿಟ್ಟಿದ್ದಾರೆ. ಪರಮಾತ್ಮನು ಯಾವ-ಯಾವ ಕರ್ತವ್ಯವನ್ನು ಮಾಡಿದ್ದಾರೆಯೋ ಅದರಂತೆಯೇ ಭಿನ್ನ-ಭಿನ್ನ ಹೆಸರುಗಳನ್ನಿಟ್ಟು ಬಹಳ ಮಂದಿರಗಳನ್ನು ಕಟ್ಟಿಸಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಇದು ಮುಳ್ಳುಗಳ ಪ್ರಪಂಚ, ವಿಷದ ಸಾಗರವಾಗಿದೆ. ಈಶ್ವರ ಸರ್ವವ್ಯಾಪಿಯಲ್ಲ ಎಂಬುದನ್ನೂ ಸಹ ಎಲ್ಲರಿಂದ ಬರೆಸಬೇಕಾಗಿದೆ. ತಂದೆಯು ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಇದರಿಂದ ಇಡೀ ಪ್ರಪಂಚವು ಸ್ವರ್ಗವಾಗಿ ಬಿಡುತ್ತದೆ, ಇದೂ ಸಹ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಶಾಸ್ತ್ರಗಳೆಲ್ಲವೂ ಭಕ್ತಿಯದಾಗಿದೆ ಬಾಕಿ ಪ್ರತಿಯೊಬ್ಬರಿಗೆ ತಮ್ಮ-ತಮ್ಮ ಕೆಲಸದ ಜ್ಞಾನವಿದೆ. ಬಡಿಗನಿಗೆ ಅದರದ್ದೇ ಜ್ಞಾನವಿರುತ್ತದೆ, ವೈದ್ಯರಿಗೆ ವೈದ್ಯಕೀಯ ಜ್ಞಾನವಿರುತ್ತದೆ ಆದರೆ ಇದು ಆತ್ಮಿಕ ಜ್ಞಾನವಾಗಿದೆ. ಅದನ್ನು ಒಬ್ಬ ಪರಮಾತ್ಮನೇ ಬಂದು ಕೊಡುತ್ತಾರೆ. ಯಾರಿಗೆ ಪರಮಾತ್ಮನೆಂದು ಹೇಳಲಾಗುತ್ತದೆ ಎಂಬುದು ಮನುಷ್ಯರಿಗೆ ಗೊತ್ತೇ ಇಲ್ಲ. ಗೀತೆಯಲ್ಲಿ ಶ್ರೀಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಮುಖ್ಯ ಮಾತೇ ಇದಾಗಿದೆ. ಮೂಲ ತಾಯಿಯನ್ನೇ ಖಂಡನೆ ಮಾಡಿ ಬಿಟ್ಟಿದ್ದಾರೆ ಅಂದಮೇಲೆ ಉಳಿದೆಲ್ಲಾ ಶಾಸ್ತ್ರಗಳೆಲ್ಲವೂ ಸುಳ್ಳಾಯಿತು. ನಕಲಿ ವಜ್ರಗಳ ಗಣಿಗಳಿರುತ್ತವೆ ಹಾಗೆಯೇ ಇವೂ ಸಹ ನಕಲಿ ವಜ್ರಗಳಾಗಿವೆ. ಪಾರಸ ಬುದ್ಧಿಯವರು ಪಾರಸಪುರಿ ಸತ್ಯಯುಗದಲ್ಲಿ ಇರುತ್ತಾರೆ, ಇದಂತೂ ನರಕವಾಗಿದೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಅವಶ್ಯವಾಗಿ ಪತಿತವಾಗಿದ್ದಾರೆ. ನರಕ ಮತ್ತು ಸ್ವರ್ಗ ಎರಡೂ ಭಾರತದಲ್ಲಿಯೇ ಇದೆ. ಯಾರಾದರೂ ಶರೀರ ಬಿಟ್ಟರೆ ಸ್ವರ್ಗಸ್ಥರಾದರೆಂದು ಹೇಳುತ್ತಾರೆ ಆದರೆ ಸ್ವರ್ಗವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಪರಮಾತ್ಮನು ಸ್ವರ್ಗಸ್ಥಾಪನೆ ಮಾಡುತ್ತಾರೆ, ನರಕದ್ದಲ್ಲ ಎಂಬುದು ಬುದ್ಧಿಯಲ್ಲಿ ಬರುವುದಿಲ್ಲ. ರಾವಣ ರಾಜ್ಯವು ಯಾವಾಗಿನಿಂದ ಆರಂಭವಾಗುತ್ತದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಭಲೆ ಬಹಳ ಶಾಸ್ತ್ರಗಳನ್ನು ಓದುತ್ತಾರೆ, ಬ್ರಹ್ಮಚರ್ಯದಲ್ಲಿಯೂ ಇರುತ್ತಾರೆ ಆದರೆ ಜನ್ಮವಂತೂ ವಿಕಾರದಿಂದ ಆಗುತ್ತದೆಯಲ್ಲವೆ. ಸಾಧು-ಸಂತರೂ ಸಹ ಸಾಧನೆ ಮಾಡುತ್ತಾರೆ, ತಂದೆಯಿಂದ ಮುಕ್ತಿಯನ್ನು ಕೇಳುತ್ತಾರೆ ಏಕೆಂದರೆ ಛೀ ಛೀ ಪ್ರಪಂಚದಲ್ಲಿರಲು ಇಷ್ಟವಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಮೊದಲು ಆತ್ಮವು ಹೇಗೆ ಜನನ-ಮರಣದಲ್ಲಿ ಬರುತ್ತದೆ, ಹೇಗೆ ಸತ್ಯ ಚಿನ್ನದಲ್ಲಿ ತುಕ್ಕು ಸೇರುತ್ತದೆ, ಹೇಗೆ 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತದೆ ಎಂದು ಆತ್ಮದ ಜ್ಞಾನ ತಿಳಿಯಬೇಕಾಗಿದೆ. ಎಲ್ಲರಿಗಿಂತ ಹೆಚ್ಚು ಪಾತ್ರವು ನಿಮ್ಮದಾಗಿದೆ. ನೀವು ದೇವಿ-ದೇವತೆಗಳಾಗಿದ್ದವರು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಲಕ್ಷ್ಮೀ-ನಾರಾಯಣರು ರಾಜ್ಯಭಾರ ಮಾಡಿದರು ನಂತರ ಎಲ್ಲಿ ಹೋದರು? ಅವರ ಆತ್ಮವಂತೂ ಅವಶ್ಯವಾಗಿ ಜನ್ಮ ತೆಗೆದುಕೊಂಡಿರುತ್ತದೆಯಲ್ಲವೆ. ಈಗ ಅವರು ಎಲ್ಲಿದ್ದಾರೆ? ಯಾರೂ ತಿಳಿದುಕೊಂಡಿಲ್ಲ. ಕ್ರಿಶ್ಚಿಯನ್ನರು ತಿಳಿದುಕೊಂಡಿರುತ್ತಾರೆ - ಕ್ರೈಸ್ಟ್ ಈ ಸಮಯದಲ್ಲಿ ಯಾವುದೇ ಕನಿಷ್ಠ ಪಾತ್ರದಲ್ಲರುವರು. ನೀವಂತೂ ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ, ಲಕ್ಷ್ಮೀ-ನಾರಾಯಣರು ಯಾರು ಸ್ವರ್ಗದ ಮಾಲೀಕರಾಗಿದ್ದರೋ ಅವರೇ ಪುನರ್ಜನ್ಮ ತೆಗೆದುಕೊಂಡು 84 ಜನ್ಮಗಳನ್ನು ಪೂರ್ಣ ಮಾಡಬೇಕಾಗಿದೆ. ಎಲ್ಲಾ ಆತ್ಮರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಯೋಗದಲ್ಲಿ ಇಲ್ಲದಿದ್ದರೆ ಮುಳ್ಳುಗಳಿಂದ ಹೂಗಳಾಗಲು ಸಾಧ್ಯವಿಲ್ಲ. ಯೋಗದಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಸತೋಪ್ರಧಾನ ಹೂಗಳಾಗುತ್ತೀರಿ. ಎಲ್ಲಯವರೆಗೆ ಇಲ್ಲಿರುತ್ತೀರೋ ಅಲ್ಲಿಯವರೆಗೆ ಒಂದಲ್ಲಒಂದು ಮುಳ್ಳಿನ ಅಂಶವಿರುತ್ತದೆ. ಹೂಗಳಾಗಿ ಬಿಟ್ಟರೆ ಮತ್ತೆ ನೀವು ಇಲ್ಲಿರಲು ಸಾಧ್ಯವಿಲ್ಲ. ಸತ್ಯಯುಗಕ್ಕೆ ಹೂದೋಟವೆಂದು ಹೇಳಲಾಗುತ್ತದೆ. ನೀವೀಗ ಮುಳ್ಳುಗಳ ಕಾಡು ಅಥವಾ ರಾವಣ ರಾಜ್ಯದಲ್ಲಿದ್ದೀರಿ. ಎಲ್ಲರೂ ಮುಳ್ಳುಗಳಾಗಿದ್ದಾರೆ. ಯಾರು ಅನೇಕ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆಯೋ ಅವರಿಗೇ ಸತ್ಯ ಸುಗಂಧಭರಿತ ಹೂವು ಎಂದು ಹೇಳಲಾಗುತ್ತದೆ. ಒಂದು ಹೂವಿನ ರಾಜನಿರುತ್ತದೆ, ಅದು ಶ್ವೇತ ಬಣ್ಣದಿಂದ ಕೂಡಿರುತ್ತದೆ. ಅದನ್ನು ಟೇಬಲ್ನ ಮೇಲೆ ಇಡುತ್ತಾರೆ, ಅದು ಅರಳುತ್ತಾ ಇರುತ್ತದೆ. ಪರಿಮಳವು ಹೆಚ್ಚುತ್ತಾ ಇರುತ್ತದೆ. ಇಂತಹ ಹೂಗಳು ಯಾರೂ ಆಗುವುದಿಲ್ಲ. ಈಗ ರಾಜಾ ಹೂ ಇದೆಯೆಂದರೆ ರಾಣಿಹೂ ಇರಬೇಕು (ರಾತ್ರಿ ರಾಣಿ). ಗುಲಾಬಿ, ಸಂಪಿಗೆ ಇತ್ಯಾದಿ ಒಳ್ಳೊಳ್ಳೆಯ ಹೂಗಳಿವೆ, ಪುಷ್ಫ ಪ್ರದರ್ಶನವನ್ನು ತೋರಿಸುತ್ತಾರೆ. ಅಲ್ಲಿ ಎಲ್ಲಾ ಒಳ್ಳೊಳ್ಳೆಯ ಹೂಗಳನ್ನು ತೆಗೆದುಕೊಂಡು ಬರುತ್ತಾರೆ, ಯಾರು ಒಳ್ಳೊಳ್ಳೆಯ ಹೂಗಳನ್ನು ತರುವರೋ ಅವರಿಗೆ ಬಹುಮಾನವು ಸಿಗುತ್ತದೆ. ನೀವೂ ಸಹ ಈಗ ಹೂದೋಟವನ್ನು ಮಾಡುತ್ತೀರಲ್ಲವೆ. ಶಿವನ ಮೇಲೆ ಹೂಗಳನ್ನು ಅರ್ಪಿಸುತ್ತಾರೆ, ಸುಗಂಧರಾಜ ಮತ್ತು ಎಕ್ಕದ ಹೂಗಳನ್ನೂ ಅರ್ಪಿಸುತ್ತಾರೆ. ತಂದೆಯು ತಿಳಿಸಿದ್ದಾರೆ- ನಾನು ಇಲ್ಲಿ ನೀವು ಮಕ್ಕಳನ್ನು ಹೂಗಳನ್ನಾಗಿ ಮಾಡುವ ಪಾತ್ರವನ್ನು ಅಭಿನಯಿಸುತ್ತೇನೆ. ಯಾರು ಗುಲಾಬಿ ಹೂವಾಗಿದ್ದಾರೆ, ಯಾರು ಸಂಪಿಗೆಯಾಗಿದ್ದಾರೆ ಮತ್ತು ಯಾರು ಚೆಂಡು ಮಲ್ಲಿಗೆಯಾಗಿದ್ದಾರೆ, ಯಾರು ಎಕ್ಕದ ಹೂವಾಗಿದ್ದಾರೆ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ. ಎಲ್ಲದಕ್ಕಿಂತ ಕನಿಷ್ಟವಾಗಿದೆ – ಎಕ್ಕದ ಹೂ. ಅದರ ಚಲನೆಯೇ ಮುಳ್ಳಗಳಂತೆ ಇರುತ್ತದೆ. ಕೆಲಕೆಲವರು ಬಹಳ ತೀಕ್ಷ್ಣ ಮುಳ್ಳುಗಳಾಗಿದ್ದಾರೆ, ಕ್ರೋಧವೂ ಸಹ ಒಂದು ಮುಳ್ಳಾಗಿದೆ. ಅನೇಕರಿಗೆ ದುಃಖವನ್ನು ಕೊಡುತ್ತದೆ, ನೀವೀಗ ಮುಳ್ಳುಗಳ ಪ್ರಪಂಚದಿಂದ ದೂರವಿದ್ದೀರಿ, ಸಂಗಮದಲ್ಲಿದ್ದೀರಿ. ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ. ಹೇಗೆ ಮಾಲಿಯು ಮುಳ್ಳುಗಳನ್ನು ತೆಗೆದು ಹೂಗಳನ್ನು ಬೇರೆ ಕುಂಡದಲ್ಲಿ ಇಡುತ್ತಾರೆ ಹಾಗೆಯೇ ತಂದೆಯೂ ಸಹ ತಮ್ಮನ್ನು ಬೇರ್ಪಡಿಸಿದ್ದಾರೆ. ನೀವು ಸಂಗಮದಲ್ಲಿದ್ದೀರಿ, ನಿಮ್ಮದು ರಿಪೇರಿಯಾಗುತ್ತಾ ಇರುತ್ತದೆ ಆದರೂ ಸಹ ಮಾಯೆಯು ಮುಳ್ಳನ್ನಾಗಿ ಮಾಡಿ ಬಿಡುತ್ತದೆ. ಒಂದೇ ಸಾರಿ ನನ್ನವರಾಗಿ ಬಿಟ್ಟರಲ್ಲವೆ ಆದ್ದರಿಂದ ಮಾಯೆಯ ವಿಘ್ನವೂ ಸಹ ಒಂದು ದಿನ ಸಮಾಪ್ತಿಯಾಗುತ್ತವೆ ನಂತರ ಈ ಕುಂಡದಲ್ಲಿ ಹಾಕಿರುವ ಹೂಗಳೆಲ್ಲರೂ ಸ್ವರ್ಗದಲ್ಲಿ ಹೋಗುವಿರಿ. ಕಲಿಯುಗೀ ಮುಳ್ಳುಗಳು ಭಸ್ಮವಾಗುತ್ತಾರೆ. ನೀವು ಕೆಲವರೇ ಹೂಗಳಾಗಿರುತ್ತೀರಿ, ನಿಮ್ಮನ್ನು ಸಂಗಮಯುಗೀ ಹೂ ಕುಂಡದಲ್ಲಿ ಹಾಕಲಾಗಿದೆ, ಬೀಜವು ಬಿತ್ತನೆಯಾಗಿದೆ. ಮಾಯೆಯ ಬಿರುಗಾಳಿ ಬಂದರೆ ಬಾಡಿಸುತ್ತದೆ, ಆದರೂ ಬಿತ್ತನೆ ಮಾಡಿರುವ ಜ್ಞಾನದ ಅವಿನಾಶಿ ಬೀಜವೆಂದೂ ವಿನಾಶವಾಗುವುದಿಲ್ಲ. |
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ನೀವು ಮಕ್ಕಳು ಬಹಳ-ಬಹಳ ನಿರ್ಭಯರಾಗಬೇಕಾಗಿದೆ. ಇದನ್ನು ಬರೆಯಿರಿ - ಪ್ರತೀ 5000 ವರ್ಷಗಳ ನಂತರ ಈ ಮೇಳ-ಪ್ರದರ್ಶನಿಯನ್ನು ನಾವು ಸಂಗಮದಲ್ಲಿ ತೋರಿಸಲು ಬಂದಿದ್ದೇವೆ. ಇದನ್ನೂ ಸಹ ಬರೆಯಬೇಕಾಗಿದೆ - ಈ ಯುದ್ಧವು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು, ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವ ಸಲುವಾಗಿ ಪ್ರತೀ 5000 ವರ್ಷಗಳ ನಂತರ ನಡೆಯುತ್ತದೆ. ತಂದೆಯು ಅನೇಕ ಸೂಚನೆಗಳನ್ನು ತಿಳಿಸುತ್ತಾರೆ. ಬಹಳ ಸಹಜ ಯುಕ್ತಿಗಳನ್ನು ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡಿರಿ ಮತ್ತು ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಿರಿ. ಮನುಷ್ಯರಂತೂ ನೀರಿನಲ್ಲಿ ಮುಳುಗುತ್ತಾ ಇರುತ್ತಾರೆ, ಸಾಗರದಲ್ಲಿ ಹೋಗಬೇಕಲ್ಲವೆ. ನದಿಗಳು ಸಾಗರದಿಂದ ಹುಟ್ಟುತ್ತವೆ, ನದಿಗಳ ತಂದೆಯು ಸಾಗರನಲ್ಲವೆ. ಅಲ್ಲಿಗೆ ಹೋಗಿ ಸ್ನಾನ ಮಾಡಿರಿ ಆದರೆ ಅದು ಉಪ್ಪು ನೀರಾಗಿರುತ್ತದೆ ಆದ್ದರಿಂದ ಸಿಹಿ ನೀರಿನ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ನೀವೀಗ ಜ್ಞಾನ ಸಾಗರನ ಮಕ್ಕಳಾಗಿದ್ದೀರಿ, ಜ್ಞಾನ ಸಾಗರ, ಪತಿತ-ಪಾವನನು ತಂದೆಯಾಗಿದ್ದಾರೆ. ನೀವು ಅವರ ಮಕ್ಕಳು ಯಾರು ಹೆಚ್ಚು ಸರ್ವೀಸ್ ಮಾಡುತ್ತೀರೋ ಅವರು ಒಳ್ಳೆಯ ಹೂವೆಂದು ತಿಳಿಯಲಾಗುತ್ತದೆ. ಪ್ರದರ್ಶನಿಯಲ್ಲಿಯೂ ಪದೇ-ಪದೇ ಒಳ್ಳೆಯ ಹೂ ತಂದವರನ್ನು ಕರೆಯುತ್ತಾರೆ. ಇವರು ನಮಗಿಂತಲೂ ಬುದ್ಧಿವಂತರೆಂದು ತಿಳಿಯುತ್ತಾರೆ ಆದರೆ ಬುದ್ಧಿವಂತಿಕೆಗೆ ಗೌರವವನ್ನೂ ಕೊಡಬೇಕು. ತಂದೆಯು ಸದಾ ತಿಳಿಸುತ್ತಾರೆ - ಎಂದೂ ಕ್ರೋಧ ಮಾಡಬೇಡಿ, ಪ್ರೀತಿಯಿಂದ ತಿಳಿಸಿ. ಯಾರಾದರೂ ಕ್ರೋಧ ಮಾಡುತ್ತಾರೆಂದರೆ ಇವರಲ್ಲಿ ಕ್ರೂರವಾದ ಭೂತವಿದೆಯೆಂದು ತಂದೆಯು ತಿಳಿಯುತ್ತಾರೆ. ತಂದೆ-ತಾಯಿಯ ಮೇಲೂ ಕ್ರೋಧ ಮಾಡಲು ಹಿಂಜರಿಯುವುದಿಲ್ಲ. ಇನ್ನೂ ದುರ್ಗತಿಯನ್ನು ಹೊಂದುತ್ತಾರೆ. ಬಡವರ ಬಂಧು ಎಂದಾದರೂ ಬಡವರ ಮೇಲೆ ಕ್ರೋಧ ಮಾಡುತ್ತಾರೆಯೇ? ಬಡವರಬಂಧು ತಂದೆ ಬಂದಿರುವುದೇ ಬಡವರನ್ನು ಸಾಹುಕಾರರನ್ನಾಗಿ ಮಾಡಲು. ಇಲ್ಲಿ ಯಾರು ಪದಮಾಪತಿಗಳಿದ್ದಾರೆಯೋ ಅವರು ಇನ್ನೊಂದು ಜನ್ಮದಲ್ಲಿ ನೌಕರ-ಚಾಕರರಾಗಿರುತ್ತಾರೆ. ಬಡವರು ಯಾರು ಚೆನ್ನಾಗಿ ಓದುವರೋ ಅವರು ಹೋಗಿ ರಾಜ-ರಾಣಿಯಾಗುತ್ತಾರೆ, ಯಾರು ಈಶ್ವರೀಯ ಸೇವೆಗೆ ಏನನ್ನೂ ಕೊಡುವುದಿಲ್ಲ. ಇಂತಹವರೂ ಸೇವಾಕೇಂದ್ರಕ್ಕೆ ಬರುತ್ತಾರೆ ಸ್ವಲ್ಪ ಬೀಜಬಿತ್ತಿದರೂ ನಮ್ಮ ಭವಿಷ್ಯವು ಎಷ್ಟು ಶ್ರೇಷ್ಠವಾಗುವುದು ಎಂಬುದು ಅವರಿಗೆ ಗೊತ್ತೇ ಇಲ್ಲ. ಸುಧಾಮನ ಉದಾಹರಣೆಯಿದೆಯಲ್ಲವೆ. ಈಶ್ವರಾರ್ಥವಾಗಿ ದಾನ ಮಾಡುತ್ತಾರೆ, ಇನ್ನೊಂದು ಜನ್ಮದಲ್ಲಿ ಫಲ ಸಿಗುತ್ತದೆಯೆಂದು ತಿಳಿಯುತ್ತಾರೆ. ತಂದೆಯಂತೂ ಬರೆದು ಕಳುಹಿಸುತ್ತಾರೆ - ಮಕ್ಕಳೇ, ನಿಮಗೆ ಒಂದು ಇಟ್ಟಿಗೆಯ ಬದಲು ಮಹಲು ಸಿಗುತ್ತದೆ. ಇಲ್ಲಿ ಕವಡೆಗಳನ್ನು ಕೊಡುತ್ತೀರೆಂದರೆ ಅಲ್ಲಿ ವಜ್ರಗಳಾಗುತ್ತವೆ ಆದ್ದರಿಂದ ಒಂದು ಹಿಡಿ ಅವಲಕ್ಕಿಯ ಗಾಯನವಿದೆ. ಗುರುನಾನಕರ ಮಂದಿರಕ್ಕೆ ಹೋಗುತ್ತಾರೆ. ಒಂದಲ್ಲ ಒಂದನ್ನು ಅವಶ್ಯವಾಗಿ ಇಡುತ್ತಾರೆ ಆದರೆ ಇಲ್ಲಂತೂ ತಂದೆಯು ದಾತನಲ್ಲವೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬಹಳ-ಬಹಳ ನಿರ್ಭಯರಾಗಿ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಎಲ್ಲರಲ್ಲಿ ಅವಿನಾಶಿ ಬೀಜವನ್ನು ಬಿತ್ತನೆ ಮಾಡಬೇಕಾಗಿದೆ. |
2. ಕ್ರೋಧವು ಬಹಳ ದೊಡ್ಡ ಮುಳ್ಳಾಗಿದೆ, ಅದನ್ನು ಬಿಟ್ಟು ಬಹಳ-ಬಹಳ ಪ್ರಿಯರಾಗಬೇಕಾಗಿದೆ. ಪ್ರೀತಿಯಿಂದ ಸರ್ವೀಸ್ ಮಾಡಬೇಕಾಗಿದೆ. ಸೇವಾಧಾರಿಗಳಿಗೆ ಗೌರವ ಕೊಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಎರಡು ಶಬ್ಧಗಳನ್ನು ಕೇಳಿದಿರಿ. ಈಗ ಮಕ್ಕಳು ಇದರ ಅರ್ಥವನ್ನು ತಿಳಿದುಕೊಂಡು ಬಿಟ್ಟಿದ್ದೀರಿ - ತಂದೆಯು ಇಲ್ಲಿಯೇ ಇದ್ದಾರೆ. ತಂದೆಯು ಸರಿಯಾದ ಮಾತನ್ನು ತಿಳಿಸುತ್ತಾರೆ, ಏಕೆಂದರೆ ಜ್ಞಾನದ ಬಗ್ಗೆಯಿರಲಿ ಅಥವಾ ಈಶ್ವರನ ಜೊತೆ ಮಿಲನ ಮಾಡುವ ವಿಷಯದಲ್ಲಿ, ಪ್ರತಿಯೊಂದು ಮಾತನ್ನು ಮನುಷ್ಯರೇನು ಹೇಳುತ್ತಾರೆಯೋ ಅದು ತಪ್ಪಾಗಿದೆ. ಈಗ ಆಕಾಶ ಸಿಂಹಾಸನವನ್ನು ಬಿಟ್ಟು ಬಾ.... ಎಂದು ಗೀತೆಯ ಅಕ್ಷರವನ್ನು ಕೇಳಿದಿರಿ ಆದರೆ ಆಕಾಶ ಸಿಂಹಾಸನವೆಂದರೇನು ಎಂಬುದು ಯಾರಿಗೂ ತಿಳಿದಿಲ್ಲ. ಪತಿತ-ಪಾವನನಂತೂ ಬರಲೇಬೇಕಾಗಿದೆ. ಕೆಲವರು ಭಗವಂತನೇ ಇಲ್ಲವೆಂದು ಹೇಳುತ್ತಾರೆ. ಇನ್ನೂ ಕೆಲವರು ಎಲ್ಲರೂ ಭಗವಂತನೇ ಆಗಿದ್ದಾರೆ ಅಂದಾಗ ಏಕೆ ಬರುವರು ಎಂದು ಹೇಳುತ್ತಾರೆ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ. ಆದ್ದರಿಂದ ಗಾಯನ ಇತ್ಯಾದಿ ಏನೆಲ್ಲವೂ ಭಕ್ತಿಮಾರ್ಗದಲ್ಲಿ ಇದೆಯೋ ಅದನ್ನು ಕೇಳಲು ಇಷ್ಟವಾಗುವುದಿಲ್ಲ. ಪತಿತ-ಪಾವನನೇ ಬಂದು ತನ್ನ ಪರಿಚಯವನ್ನು ಕೊಟ್ಟು, ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಪ್ರಪಂಚದಲ್ಲಿ ಇರುವವರು ಯಾರೂ ಸಹ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಇಲ್ಲಿಯೂ ಎಷ್ಟೊಂದು ಮತದ ವ್ಯಕ್ತಿಗಳಿದ್ದಾರೆ. ಮನುಷ್ಯರು ಪವಿತ್ರವಾಗಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ ಅಂದಾಗ ಅವಶ್ಯವಾಗಿ ಎಲ್ಲಿಯವರೆಗೆ ಭಗವಂತನು ಬರುವುದಿಲ್ಲವೋ ಅಲ್ಲಿಯವರೆಗೆ ಪವಿತ್ರರಾಗಲು ಹೇಗೆ ಸಾಧ್ಯ! ಪರಮಾತ್ಮನೇ ಬಂದು ಶಿಕ್ಷಣ ಕೊಡುತ್ತಾರೆ ಮತ್ತು ಇದರಲ್ಲಿ ಎಷ್ಟು ಪ್ರಾಪ್ತಿ ಇದೆಯೆಂದು ಒತ್ತುಕೊಟ್ಟು ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು ಹೇಳುತ್ತಾರೆ - ನನ್ನವರಾಗಿ ಶ್ರೀಮತದಂತೆ ನಡೆಯದಿದ್ದರೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಹೇಗೆ ತಂದೆಯು ಮಕ್ಕಳ ಚಲನೆಯು ಸರಿ ಇಲ್ಲದಿರುವುದನ್ನು ನೋಡುತ್ತಾರೆಂದರೆ ಪೆಟ್ಟು ಕೊಡುತ್ತಾರೆ. ಈ ತಂದೆಯಂತೂ ಪೆಟ್ಟು ಕೊಡುವುದಿಲ್ಲ ಕೇವಲ ತಿಳಿಸುತ್ತಾರೆ, ರಕ್ತದಿಂದಲೂ ಸಹ ಬರೆದು ಪ್ರತಿಜ್ಞೆ ಮಾಡುತ್ತಾರೆ ಆದರೂ ಸೋಲನ್ನು ಅನುಭವಿಸುತ್ತಾರೆ. ಪವಿತ್ರರಾಗುವುದರಿಂದ ಏನು ಸಿಗುತ್ತದೆ, ಪತಿತರೆಂದು ಯಾರಿಗೆ ಹೇಳಲಾಗುತ್ತದೆ ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ. ತಂದೆಯು ತಿಳಿಸುತ್ತಾರೆ - ಯಾರು ವಿಕಾರದಲ್ಲಿ ಹೋಗುತ್ತಾರೆಯೋ ಅವರು ಪತಿತರಾಗಿದ್ದಾರೆ, ವಿಕಾರವನ್ನು ಬಿಡುವುದು ಅಸಾಧ್ಯವೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಆದ್ದರಿಂದ ತಿಳಿಸಿರಿ, ದೇವಿ-ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿದ್ದರು, ಚಿತ್ರಗಳನ್ನು ತೋರಿಸಬೇಕು. ಇದು ನಿರ್ವಿಕಾರಿ ಪ್ರಪಂಚವಾಗಿತ್ತಲ್ಲವೆ. ಪವಿತ್ರತೆಯಿದ್ದಾಗ ಭಾರತವು ಎಷ್ಟೊಂದು ಸಾಹುಕಾರನಾಗಿತ್ತು, ಶಿವಾಲಯವಾಗಿತ್ತು. ವಿಕಾರವಿಲ್ಲದೆ ಪ್ರಪಂಚವು ಹೇಗೆ ವೃದ್ಧಿಯಾಗುವುದು ಎಂದು ಮನುಷ್ಯರಿಗೆ ಚಿಂತೆಯಿರುತ್ತದೆ. ಅರೆ! ಜನಸಂಖ್ಯೆಯು ಕಡಿಮೆಯಾಗಲಿ ಎಂದು ಸರ್ಕಾರವೂ ಸಹ ಈ ವಿಷಯದಲ್ಲಿ ಬೇಸತ್ತು ಹೋಗಿದೆ. ಆದರೂ ಸಹ ಪ್ರತೀ ವರ್ಷವು ಜನಸಂಖ್ಯೆಯು ಎಷ್ಟೊಂದು ಹೆಚ್ಚುತ್ತಿರುತ್ತದೆ. ಕಡಿಮೆ ಆಗುವುದಂತೂ ಬಹಳ ಪರಿಶ್ರಮವಿದೆ. ಇಲ್ಲಿ ಬೇಹದ್ದಿನ ತಂದೆಯು ತಿಳಿಸುತ್ತಾರೆ - ಒಂದುವೇಳೆ ನೀವು ಪವಿತ್ರರಾಗದಿದ್ದರೆ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ, ಬಹಳ ಭಾರಿ ಆದಾಯವಿದೆ. ಮಕ್ಕಳಿಗೆ ಗೊತ್ತಿದೆ, ಅವಶ್ಯವಾಗಿ ಮಾಯಾಜೀತರಾದಾಗಲೇ ನಾವು ಜಗಜ್ಜೀತರಾಗುವೆವು. ರಾವಣನನ್ನು ಜಯಿಸಿ ರಾಮ ರಾಜ್ಯವನ್ನು ಪಡೆಯುತ್ತೀರಿ, ಅಲ್ಲಿ ಈ ವಿಕಾರವೇ ಇರುವುದಿಲ್ಲ. ಅದನ್ನು ನೀವು ಜಯಿಸಿದಿರಲ್ಲವೆ. ಈ ಮಾತುಗಳನ್ನು ತಿಳಿದುಕೊಳ್ಳುವವರು ಕೆಲವರೇ ವಿರಳ. ವಿಕಾರವಿಲ್ಲದೆ ಪ್ರಪಂಚವು ಹೇಗೆ ನಡೆಯುತ್ತದೆ ಎಂದು ಹೇಳುತ್ತಾರೆ, ಹೀಗೆ ಯಾರು ಮಾತನಾಡುವರೋ ಅವರು ಈ ಆದಿ ಸನಾತನ ಧರ್ಮದವರಲ್ಲ ಎಂದು ತಿಳಿದುಕೊಳ್ಳಿ. ಎಲ್ಲಿಯಾದರೂ ನೀವು ಭಾಷಣ ಮಾಡುತ್ತೀರೆಂದರೆ ನೀವು ಹೇಳಿ, ಭಗವಾನುವಾಚ - ಭಗವಂತನು ತಿಳಿಸುತ್ತಾರೆ ಕಾಮ ಮಹಾಶತ್ರುವಾಗಿದೆ, ಅದರ ಮೇಲೆ ಜಯ ಗಳಿಸಿದರೆ ನೀವು ಜಗಜ್ಜೀತರಾಗುತ್ತೀರಿ. ಇದು ಬಹಳ ನೇರ ಮಾತಾಗಿದೆ ಆದರೂ ಸಹ ಅವರು ತಿಳಿದುಕೊಳ್ಳುವುದಿಲ್ಲ ಅಥವಾ ತಿಳಿಸುವವರಲ್ಲಿ ಬುದ್ಧಿವಂತಿಕೆಯಿಲ್ಲ. ತಂದೆಯಂತೂ ತಿಳಿದುಕೊಳ್ಳುತ್ತಾರೆ, ಮಕ್ಕಳು ರೂಪಾಯಿಯಲ್ಲಿ ಐದು ಆಣೆಯಷ್ಟೂ ಕಲಿತಿಲ್ಲ ಅಥವಾ ಸ್ವಯಂ ಪೂರ್ಣ ಯೋಗಿಯಾಗಿಲ್ಲ ಆದ್ದರಿಂದಲೇ ಶಕ್ತಿ ಸಿಗುವುದಿಲ್ಲ. ನೆನಪಿನಿಂದಲೇ ಶಕ್ತಿಯು ಸಿಗುತ್ತದೆ. ತಂದೆಯು ಸರ್ವಶಕ್ತಿವಂತನಲ್ಲವೆ! ಯೋಗವಿದ್ದಾಗಲೇ ಶಕ್ತಿಯೂ ಸಿಗುವುದು. ಅನೇಕ ಮಕ್ಕಳಲ್ಲಿ ಯೋಗವು ಬಹಳ ಕಡಿಮೆಯಿದೆ, ಯಾರು ಸತ್ಯವಾಗಿ ಬರೆಯುವುದಿಲ್ಲವೋ ನೆನಪಿನ ಚಾರ್ಟ್ ಬರೆಯುವುದೂ ಸಹ ಬಹಳ ವಿರಳ. ಶಿಕ್ಷಕಿಯರೇ ಚಾರ್ಟ್ ಇಡಲಿಲ್ಲವೆಂದರೆ ವಿದ್ಯಾರ್ಥಿಗಳು ಹೇಗೆ ಇಡುವರು! ಅನೇಕ ವಿದ್ಯಾರ್ಥಿಗಳು ಯೋಗದಲ್ಲಿ ಬಹಳ ತೀಕ್ಷ್ಣವಾಗಿದ್ದಾರೆ, ಮುಖ್ಯ ಮಾತು ತಂದೆಯನ್ನು ನೆನಪು ಮಾಡಬೇಕಾಗಿದೆ. ಯೋಗ ಶಬ್ಧವು ಶಾಸ್ತ್ರಗಳಿಂದ ಬಂದಿದೆ, ಮನುಷ್ಯರು ಕೇಳಿ ತಬ್ಬಿಬ್ಬಾಗುತ್ತಾರೆ. ಯೋಗವನ್ನು ಕಲಿಸಿ ಎಂದು ಹೇಳುತ್ತಾರೆ. ಅರೆ! ಯೋಗವನ್ನು ಕಲಿಸಲಾಗುತ್ತದೆಯೇ? ಮುಂಜಾನೆ ಎದ್ದು ತಾವೇ ನೆನಪು ಮಾಡಬೇಕಾಗಿದೆ. ಇದರಲ್ಲಿ ಶಿಕ್ಷಕರೇ ಕುಳಿತು ಕಲಿಸಿ ಕೊಡುವ ಅವಶ್ಯಕತೆಯೇನಿದೆ? ಆದ್ದರಿಂದ ನೆನಪು ಶಬ್ಧವು ಸರಿಯಾಗಿದೆ, ಯೋಗವೆಂಬುದು ಕಲಿಯುವ ಮಾತಲ್ಲ, ಈ ಹವ್ಯಾಸ ಮಾಡಿಕೊಳ್ಳಬಾರದು. ತಂದೆಯು ತಿಳಿಸುತ್ತಾರೆ - ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ. ಅಮೃತವೇಳೆ ನೆನಪು ಮಾಡುವುದು ಒಳ್ಳೆಯದಾಗಿದೆ. ಭಕ್ತಿಯನ್ನೂ ಸಹ ಮುಂಜಾನೆ ಎದ್ದು ಮಾಡುತ್ತಾರೆ. ಇದೂ ಸಹ ತಂದೆಯನ್ನು ನೆನಪು ಮಾಡಿದಂತೆ. ಏಕೆ ನೆನಪು ಮಾಡುತ್ತಾರೆ? ಏಕೆಂದರೆ ತಂದೆಯಿಂದ ಆಸ್ತಿ ಸಿಗಬೇಕಾಗಿದೆ. ಭಲೆ ಭಕ್ತಿಮಾರ್ಗದಲ್ಲಿ ಶಿವನನ್ನು ನೆನಪು ಮಾಡುತ್ತಾರೆ ಆದರೆ ಶಿವನಿಂದ ಏನು ಸಿಗುವುದು ಎಂಬುದು ಅವರಿಗೆ ತಿಳಿದಿಲ್ಲ. ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಈಗ ತಂದೆಯು ಶ್ರೀಮತ ಕೊಡುತ್ತಾರೆ - ತಮ್ಮ ಕಲ್ಯಾಣಕ್ಕಾಗಿ ನನ್ನನ್ನು ನೆನಪು ಮಾಡಿರಿ, ನೆನಪಿನಿಂದಲೇ ಶಕ್ತಿ ಬರುತ್ತದೆ. ಶಕ್ತಿಯಿಂದ ವಿಕರ್ಮಗಳು ವಿನಾಶವಾಗುತ್ತವೆ, ಜ್ಞಾನದಿಂದ ವಿಕರ್ಮಗಳು ವಿನಾಶವಾಗುವುದಿಲ್ಲ. ಜ್ಞಾನದಿಂದ ಪದವಿಯು ಸಿಗುವುದು. ನೆನಪಿನಿಂದಲೇ ಪತಿತರಿಂದ ಪಾವನರಾಗುತ್ತೀರಿ. ಅನೇಕ ಮಕ್ಕಳು ಇದರಲ್ಲಿ ಅನುತ್ತೀರ್ಣರಾಗಿದ್ದಾರೆ. ಬಹಳ ಒಳ್ಳೊಳ್ಳೆಯ ಮಕ್ಕಳೂ ಸಹ ಐದಾಣೆಯಷ್ಟೂ ವಿರಳ ನೆನಪು ಮಾಡುತ್ತಾರೆ. ಕೆಲವರಂತೂ ಒಂದು ಪೈಸೆಯಷ್ಟೂ ನೆನಪು ಮಾಡುವುದಿಲ್ಲ. ಇದರಲ್ಲಿ ಬಹಳ ಪರಿಶ್ರಮವಿದೆ. ಜ್ಞಾನವನ್ನು ಬಹು ಬೇಗನೆ ಕಲಿಯುತ್ತಾರೆ ಆದರೆ ನೆನಪಿನಲ್ಲಿದ್ದಾಗಲೇ ದೋಣಿಯು ಪಾರಾಗುವುದು. ಆಗಲೇ ಜನ್ಮ-ಜನ್ಮಾಂತರದ ವಿಕರ್ಮಗಳು ವಿನಾಶವಾಗುತ್ತವೆ. ನಂತರ ಪುಣ್ಯಾತ್ಮರಾಗಿ ಬಿಡುತ್ತೀರಿ. ನಮ್ಮನ್ನು ಪತಿತರಿಂದ ಪಾವನ ಮಾಡಿ ಎಂದು ತಂದೆಯನ್ನು ಕರೆಯುತ್ತಾರೆ. ಪಾವನರಂತೂ ಅನೇಕರಾಗುತ್ತಾರೆ ಆದರೆ ಯಾರು ಚೆನ್ನಾಗಿ ನೆನಪಿನಲ್ಲಿರುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುವರು. ನಿಮಗಿಂತಲೂ ಬಂಧನದಲ್ಲಿ ಇರುವವರು ಹೆಚ್ಚು ನೆನಪು ಮಾಡುತ್ತಾರೆ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಪವಿತ್ರರಾಗಿರುವುದು ಅಸಂಭವವೆಂದು ಯಾರಾದರೂ ಹೇಳಿದರೆ ಅಂತಹವರೊಂದಿಗೆ ಮಾತನಾಡಲೂಬಾರದು. ನಿರ್ವಿಕಾರಿ ಭಾರತವಿದ್ದಾಗ ಸತೋಪ್ರಧಾನವಾಗಿತ್ತು ಆದರೆ ಸಾಹುಕಾರರ ಬುದ್ಧಿಯಲ್ಲಿ ಈ ಜ್ಞಾನ ಕುಳಿತುಕೊಳ್ಳುವುದು ಅಸಂಭವವಾಗಿದೆ ಏಕೆಂದರೆ ನೆನಪಿನಲ್ಲಿಯೇ ಪರಿಶ್ರಮವಿದೆ. |
ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಅವರೊಂದಿಗೂ ಸಂಬಂಧವನ್ನು ನಿಭಾಯಿಸಿರಿ. ವಾಸ್ತವದಲ್ಲಿ ಕಾಯಿದೆಗಳು ಬಹಳ ಕಠಿಣವಾಗಿದೆ, ನೀವು ಜನ್ಮ-ಜನ್ಮಾಂತರವಂತೂ ಪಾಪಾತ್ಮರಿಗೆ ದಾನ ಮಾಡುತ್ತಾ ಪಾಪಾತ್ಮರಾಗುತ್ತಾ ಬಂದಿರಿ. ನೀವೀಗ ಪಾಪಾತ್ಮರಿಗೆ ಹಣವನ್ನು ಕೊಡುವಂತಿಲ್ಲ ಆದರೆ ತಾತನ ಆಸ್ತಿಯಾಗಿದ್ದರೆ ಕೊಡಲೇಬೇಕಾಗುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ - ಮೊದಲು ಎಲ್ಲಾ (ಲೌಕಿಕದ) ಕರ್ತವ್ಯಗಳನ್ನು ಮುಗಿಸಿ ನಂತರ ಸಮರ್ಪಣೆಯಾಗಿ ಬಿಡಿ. ಇಂತಹವರು ಕೋಟಿಯಲ್ಲಿ ಕೆಲವರೇ ಇರುತ್ತಾರೆ. ಬಹಳ ದೊಡ್ಡ ಗುರಿಯಾಗಿದೆ, ತಂದೆಯನ್ನು ಫಾಲೋ ಮಾಡಬೇಕಾಗಿದೆ. ನಷ್ಟಮೋಹಿಗಳಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಬಹಳ ಪರಿಶ್ರಮವಿದೆ. ವಿಶ್ವದ ಮಾಲೀಕರಾಗುವುದು ಎಷ್ಟು ದೊಡ್ಡ ಪ್ರಾಪ್ತಿಯಾಗಿದೆ! ಕಲ್ಪ-ಕಲ್ಪವೂ ಯಾರು ವಿಶ್ವದ ಮಾಲೀಕರಾದರೋ ಅವರೇ ಆಗುವರು. ಡ್ರಾಮಾದ ರಹಸ್ಯವು ಕೆಲವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುತ್ತದೆ, ಸಾಹುಕಾರರಂತೂ ಜ್ಞಾನವನ್ನು ಕೇಳುವುದು ಬಹಳ ವಿರಳ. ಬಡವರಂತೂ ಬಾಬಾ ಇದೆಲ್ಲವೂ ತಮ್ಮದಾಗಿದೆ ಎಂದು ಕೂಡಲೇ ಹೇಳಿ ಬಿಡುತ್ತಾರೆ ಮತ್ತೆ ಅವರು ಸೇವೆಯನ್ನೂ ಮಾಡಬೇಕಾಗಿದೆ. ಪಾವನರಾಗುವುದಕ್ಕಾಗಿ ನೆನಪೂ ಬೇಕು, ಇಲ್ಲದಿದ್ದರೆ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಶಿಕ್ಷೆಯನ್ನು ಅನುಭವಿಸಿದರೆ ಪದವಿಯೂ ಕಡಿಮೆಯಾಗುವುದು, ಯಾರು ನೆನಪು ಮಾಡುವುದಿಲ್ಲವೋ ಅವರು ಶಿಕ್ಷೆಯನ್ನು ಅನುಭವಿಸುತ್ತಾರೆ. ಜ್ಞಾನವನ್ನು ಎಷ್ಟಾದರೂ ತಿಳಿದುಕೊಳ್ಳಲಿ ಅದರಿಂದ ವಿಕರ್ಮಗಳು ವಿನಾಶವಾಗುವುದಿಲ್ಲ. ಪೆಟ್ಟು ತಿಂದಮೇಲೆ ಅಲ್ಪಸ್ವಲ್ಪ ಪದವಿಯನ್ನು ಪಡೆಯುವುದು ಆಸ್ತಿಯಾಯಿತೇ? ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ತಂದೆಗೆ ಆಜ್ಞಾಕಾರಿಗಳಾಗಬೇಕು. ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಹಾವಾಕ್ಯಗಳನ್ನು ಶಿರಸಾವಹಿಸಿ ಮಾಡಬೇಕು. ಕೃಷ್ಣನ ಆತ್ಮವೂ ಸಹ ಈ ಸಮಯದಲ್ಲಿ ಆಸ್ತಿಯನ್ನು ತೆಗೆದುಕೊಳ್ಳುತ್ತಿದೆ. ಈ ಲಕ್ಷ್ಮೀ-ನಾರಾಯಣರ ಬಹಳ ಜನ್ಮಗಳ ಅಂತಿಮದಲ್ಲಿ ನಾನು ಪುನಃ ಅವರಿಗೆ ಓದಿಸಿ ಆಸ್ತಿಯನ್ನು ಕೊಡುತ್ತೇನೆ. ನಿಮ್ಮಲ್ಲಿಯೂ ರಾಜಕುಮಾರ-ಕುಮಾರಿಯರಾಗುವವರಿದ್ದೀರಲ್ಲವೆ. ರಾಯಲ್ ಮನೆತನದವರ ಚಲನೆಯು ಬಹಳ ತಾಳ್ಮೆಯಿಂದ ಕೂಡಿರುತ್ತದೆ, ಗುಪ್ತ ನಶೆಯಿರುತ್ತದೆ. ತಂದೆಯು ಎಷ್ಟು ಸಾಧಾರಣವಾಗಿರುತ್ತಾರೆ, ಅವರಿಗೆ ಗೊತ್ತಿದೆ- ಇನ್ನು ಸ್ವಲ್ಪವೇ ಸಮಯವಿದೆ. ನಾನು ಹೋಗಿ ವಿಶ್ವ ಮಹಾರಾಜ ಆಗಬೇಕಾಗಿದೆ, ಇವರೂ ಸಹ ಪತಿತನಾಗಿದ್ದರು, ಇವರು ತಂದೆಯ ರಥವಾಗಿದ್ದಾರೆ ಆದ್ದರಿಂದ ಇಲ್ಲಿ ಗದ್ದುಗೆಯ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ತಂದೆಯು ಎಲ್ಲಿ ಕುಳಿತುಕೊಳ್ಳುವುದು! ಇವರೂ ಸಹ ನಿಮ್ಮ ಹಾಗೆಯೇ ವಿದ್ಯಾರ್ಥಿಯಾಗಿದ್ದಾರೆ, ಓದುತ್ತಾರೆ. ಬಹಳ ಮಂದಿ ಮಕ್ಕಳು ತಂದೆಯನ್ನು ಅರಿತುಕೊಂಡಿಲ್ಲ. ತಂದೆಯ ಜೊತೆ ಧರ್ಮರಾಜನೂ ಇದ್ದಾರೆ. ತಂದೆಯು ಹೇಳುತ್ತಾರೆ - ನನ್ನ ಆಜ್ಞೆಯನ್ನು ಪಾಲಿಸಲಿಲ್ಲ, ನನ್ನ ನಿಂದನೆ ಮಾಡಿದಿರೆಂದರೆ ಧರ್ಮರಾಜನು ಬಹಳ ಶಿಕ್ಷೆಗಳನ್ನು ಕೊಡುವರು. ಡೈರೆಕ್ಟ್ ನನ್ನ ಅಥವಾ ನನ್ನ ಮಕ್ಕಳಿಗೆ ನೀವು ಉಲ್ಲಂಘನೆ ಮಾಡುತ್ತೀರಿ ಎಂದರ್ಥ. ತಂದೆಗೆ ಇವರೊಬ್ಬರೇ ಬಹಳ ಅನನ್ಯ ಮಗುವಾಗಿದ್ದಾರೆ. ಪ್ರೀತಿಯಂತೂ ಇದೆಯಲ್ಲವೆ, ಇವರಿಗೆ ನಿಂದನೆ ಮಾಡುತ್ತೀರೆಂದರೆ ಎಷ್ಟೊಂದು ಶಿಕ್ಷೆಗಳನ್ನು ಅನುಭವಿಸಬೇಕಾಗುವುದು! ಸ್ವಲ್ಪ ಆಪತ್ತುಗಳು ಬರಲಿ ಆಗ ನೋಡಿ, ಎಷ್ಟು ಮಂದಿ ಓಡಿ ಬರುತ್ತಾರೆ. ನೀವೆಲ್ಲರೂ ಓಡಿ ಬಂದಿದ್ದೀರಲ್ಲವೆ. ಇವರು ಯಾವುದೇ ಜಾದು ಇತ್ಯಾದಿಗಳನ್ನು ಮಾಡಲಿಲ್ಲ, ಜಾದೂಗಾರನು ಶಿವ ತಂದೆಯಾಗಿದ್ದಾರೆ. ಇವರಲ್ಲಿ ಶಿವ ತಂದೆಯು ಬರುತ್ತಾರೆ ಎಂಬುದೂ ಸಹ ಅನೇಕರಿಗೆ ಗಮನವಿರುವುದಿಲ್ಲ. ಶಿವ ತಂದೆಯ ಮುಂದೆ ನಾವು ಏನಾದರೂ ಉಲ್ಟಾ ಮಾಡಿ ಬಿಟ್ಟರೆ ಇವರು ಅಯೋಗ್ಯ ಮಗುವೆಂದು ತಂದೆಯು ಹೇಳುವರು. ಇವರಲ್ಲಿ ಡಬಲ್ ಇದ್ದಾರಲ್ಲವೆ ಆದ್ದರಿಂದ ಪತ್ರದಲ್ಲಿ ಬಾಪ್ದಾದಾ ಎಂದು ಬರೆಯುತ್ತಾರೆ ಆದರೆ ಬಾಪ್ದಾದಾ ಹೇಗೆ ಒಟ್ಟಿಗೆ ಇದ್ದಾರೆ ಎಂಬುದನ್ನೂ ಸಹ ಮಕ್ಕಳು ತಿಳಿದುಕೊಳ್ಳುವುದಿಲ್ಲ. ತಂದೆಯು ದಾದಾರವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ತಾವಾಗಿಯೇ ಮಾತನಾಡಿಸಬೇಕು - ನೀವು ತಿಳಿದುಕೊಂಡಿದ್ದೀರಾ - ಬಾಪ್ದಾದಾ ಯಾರು ಎಂದು. ಭಲೆ ಯಾರಾದರೂ ನೀವು ಯಾರಿಗೆ ಬಾಪ್ದಾದಾ ಎಂದು ಹೇಳುತ್ತೀರಿ ಎಂದು ಕೇಳಿದರೆ ಬಾಪ್ದಾದಾ ಎಂದು ಒಬ್ಬರಿಗೆ ಹೆಸರಿರಲು ಸಾಧ್ಯವಿಲ್ಲ ಆದ್ದರಿಂದ ಮಕ್ಕಳು ಯುಕ್ತಿಯಿಂದ ತಿಳಿಸಬೇಕು. ಯಾವಾಗ ನೀವು ಅವರಿಗೆ ತಿಳಿಸುವಿರೋ ಆಗಲೇ ಶಿವ ತಂದೆಯು ದಾದಾರವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ಈಗ ವಿನಾಶವಾಗಲಿದೆ ಎಂಬುದು ಅವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ಅವರಿಂದ ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ಈಗ ತಾವು ಕಲಿಯಿರಿ, ಅರ್ಧಕಲ್ಪ ಯಾವ ತಂದೆಯನ್ನು ಕರೆದೆವೋ ಆ ತಂದೆಯು ಜ್ಞಾನವನ್ನು ಕೊಡಲು ಬಂದಿದ್ದಾರೆ ಎಂದು ತಿಳಿಸಿರಿ, ಆಗಲೂ ಸಹ ನಮಗೆ ತಿಳಿದುಕೊಳ್ಳಲು ಬಿಡುವಿಲ್ಲವೆಂದು ಹೇಳುತ್ತಾರೆ. ಆಗ ತಾವು ದೇವಿ-ದೇವತಾ ಧರ್ಮದವರಲ್ಲ, ಸ್ವರ್ಗದ ಸುಖವು ನಿಮ್ಮ ಅದೃಷ್ಟದಲ್ಲಿ ಇಲ್ಲವೆಂದು ಹೇಳಿರಿ ಬಾಕಿ ಇಲ್ಲಿ ತಲೆ ಬಾಗುವಂತಿಲ್ಲ. ಸನ್ಯಾಸಿಗಳ ಮುಂದೆ ಚರಣಗಳಿಗೆ ತಲೆ ಬಾಗುತ್ತಾರೆ. ಇಲ್ಲಿ ತಂದೆಯಂತೂ ಗುಪ್ತವಾಗಿದ್ದಾರಲ್ಲವೆ. ಮುಂದೆ ಹೋದಂತೆ ಬಹಳ ಪ್ರಭಾವ ಬೀರುವುದು, ಆ ಸಮಯದಲ್ಲಿ ಬಹಳ ಜನಸಂದಣಿ ಆಗುವುದು. ಜನಸಂದಣಿಯಲ್ಲಿ ಎಷ್ಟೊಂದು ಮನುಷ್ಯರು ಸತ್ತುಹೋಗುತ್ತಾರೆ. ಪ್ರಧಾನಮಂತ್ರಿ ಮೊದಲಾದವರ ದರ್ಶನ ಮಾಡುವುದಕ್ಕಾಗಿ ಎಷ್ಟೊಂದು ಸಾಲು ನಿಲ್ಲುತ್ತದೆ. ಇಲ್ಲಿ ಮಕ್ಕಳ ಜೊತೆ ತಂದೆಯೂ ಎಷ್ಟು ಗುಪ್ತವಾಗಿ ಕುಳಿತಿದ್ದಾರೆ. ಇಲ್ಲಿ ಯಾರನ್ನು ನೋಡುತ್ತಾರೆ? ಇವರು ವಜ್ರ ವ್ಯಾಪಾರಿಯಾಗಿದ್ದರು ಎಂದು ಇವರ ಬಗ್ಗೆ ತಿಳಿದುಕೊಂಡಿದ್ದಾರೆ. ಬ್ರಹ್ಮಾರವರ ಮೂಲಕ ಮನುಷ್ಯ ಸೃಷ್ಟಿಯನ್ನು ಹೇಗೆ ರಚಿಸಿದರೆಂದು ಶಾಸ್ತ್ರಗಳಲ್ಲಿಯೂ ಇದೆ. ತಂದೆಯು ತಿಳಿಸುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡಿ ರಚಿಸುತ್ತೇನೆ. ಇದೂ ಸಹ ಬರವಣಿಗೆಯಿದೆ ಆದರೆ ಕಲ್ಲು ಬುದ್ಧಿಯವರಾಗಿರುವ ಕಾರಣ ತಿಳಿದುಕೊಳ್ಳುವುದಿಲ್ಲ. ತಂದೆಯು ಬಂದು ಮಕ್ಕಳನ್ನು ಪತಿತರಿಂದ ಪಾವನರನ್ನಾಗಿ ಮಾಡಿ ವರ್ಗಾವಣೆ ಮಾಡುತ್ತಾರೆ ಬಾಕಿ ಯಾವುದೇ ಹೊಸ ರಚನೆಯನ್ನು ರಚಿಸುವುದಿಲ್ಲ. ಇದು ಪತಿತರನ್ನು ಪಾವನರನ್ನಾಗಿ ಮಾಡುವ ಯುಕ್ತಿಯಾಗಿದೆ. ವಿರಾಟ ರೂಪದ ಚಿತ್ರವು ಅವಶ್ಯವಾಗಿ ಇರಬೇಕು. ಚಿತ್ರವು ದೊಡ್ಡದಾಗಿದ್ದರೆ ತಿಳಿಸುವುದರಲ್ಲಿಯೂ ಸಹಜವಾಗುವುದು. ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರನ್ನಾಗಿ ಮಾಡುವುದು ಸಹಜ ಮಾತೇನಲ್ಲ. ಕೆಲವರಂತೂ ತವೆಯಂತೆ ನೋಡಿ ಹೊರಟು ಹೋಗುತ್ತಾರೆ. ಪ್ರಜೆಗಳಾಗುವುದಿದ್ದರೆ ಅವರ ಬುದ್ಧಿಯಲ್ಲಿ ಅಲ್ಪಸ್ವಲ್ಪವಾದರೂ ಕುಳಿತುಕೊಳ್ಳುವುದು. ನಾವೆ ಬ್ರಾಹ್ಮಣರು, ಬ್ರಾಹ್ಮಣರಿಂದ ದೇವತೆಗಳು. ಇಲ್ಲಿ ಹಮ್ ಸೋ ಸೋ ಹಮ್ನ ಅರ್ಥವನ್ನು ತಂದೆಯು ಎಷ್ಟು ಚೆನ್ನಾಗಿ ತಿಳಿಸಿದ್ದಾರೆ. ಸನ್ಯಾಸಿಗಳು ಆತ್ಮವೇ ಪರಮಾತ್ಮನೆಂದು ಹೇಳುತ್ತಾರೆ. ಇಲ್ಲಿ ನೀವು ತಿಳಿದುಕೊಂಡಿದ್ದೀರಿ, ನಾವು ಆತ್ಮರಾಗಿದ್ದೇವೆ, ನಾವಾತ್ಮರು ಮೊದಲು ಬ್ರಾಹ್ಮಣರು ನಂತರ ದೇವತೆಗಳು ಮತ್ತೆ ನಾವೇ ಕ್ಷತ್ರಿಯರು.... ಆಗುತ್ತೇವೆ. ನಾವು ಎಷ್ಟೊಂದು ವರ್ಣಗಳಲ್ಲಿ ಬರುತ್ತೇವೆ, 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ ಬಾಕಿ ಯಾರು ಕೊನೆಯಲ್ಲಿ ಬರುತ್ತಾರೆಯೋ ಅವರದು ಎಷ್ಟು ಜನ್ಮಗಳಿರಬಹುದು ಎಂಬ ಲೆಕ್ಕವನ್ನು ನೀವು ತೆಗೆಯಬಹುದು. ತಂದೆಗೆ ಪ್ರಿಯವಾದ ಚಿತ್ರಗಳನ್ನು ಮಡಿಸಬೇಕು. ಇಬ್ಬರು ನಾಲ್ಕು ಮಂದಿ ಒಳ್ಳೆಯ ಮಕ್ಕಳು ಚಿತ್ರಗಳನ್ನು ಮಾಡಿಸುವುದರಲ್ಲಿ ಸಹಯೋಗ ನೀಡಬೇಕು. ತಂದೆಯು ಖರ್ಚು ಮಾಡುವುದಕ್ಕಾಗಿ ತಯಾರಿದ್ದಾರೆ ಮತ್ತೆ ತಂದೆಯು ತಾವಾಗಿಯೇ ಹುಂಡಿಯನ್ನು ತುಂಬಿಸುವರು ಆದ್ದರಿಂದ ತಂದೆಯು ಹೇಳುತ್ತಾರೆ- ಮುಖ್ಯ ಚಿತ್ರಗಳನ್ನು ಟ್ರಾನ್ಸ್ಲೈಟ್ನಿಂದ ಮಾಡಿಸಬೇಕು. ಮನುಷ್ಯರು ನೋಡಿ ಖುಷಿ ಪಡುತ್ತಾರೆ, ಇಡೀ ಪ್ರದರ್ಶನಿಯು ಈ ರೀತಿಯಾಗಬೇಕು ಆದರೆ ಮಕ್ಕಳನ್ನು ನಿಲ್ಲಿಸುವುದಕ್ಕಾಗಿ ತಂದೆಯೂ ಪರಿಶ್ರಮ ಪಡಬೇಕಾಗುತ್ತದೆ. |
ತಂದೆಯ ನೆನಪು ಮುಖ್ಯವಾಗಿದೆ, ನೆನಪಿನಿಂದಲೇ ನೀವು ಪತಿತರಿಂದ ಪಾವನ ಸೃಷ್ಟಿಯ ಮಾಲೀಕರಾಗಿ ಬಿಡುತ್ತೀರಿ ಮತ್ತ್ಯಾವುದೇ ಉಪಾಯವಿಲ್ಲ. ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿರಿ, ಚಕ್ರವನ್ನು ನೆನಪು ಮಾಡಬೇಕು. ನಿಮ್ಮ ಸ್ವಭಾವವು ಬಹಳ ಘನತೆಯಿಂದ ಕೂಡಿರಲಿ. ನಡೆಯುತ್ತಾ-ನಡೆಯುತ್ತಾ ಕೆಲವರನ್ನು ಲೋಭವು, ಕೆಲವರನ್ನು ಮೋಹವು ಹಿಡಿದುಕೊಳ್ಳುತ್ತದೆ. ಇನ್ನೂ ಕೆಲವರು ತಮಗೆ ಪ್ರಿಯವಾದ ವಸ್ತುಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅದು ಸಿಗದಿದ್ದರೆ ರೋಗಿಯಾಗಿ ಬಿಡುತ್ತಾರೆ. ಆದ್ದರಿಂದ ಯಾವುದೇ ಹವ್ಯಾಸಾವನ್ನು ಇಟ್ಟುಕೊಳ್ಳಬಾರದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಮ್ಮ ಕಲ್ಯಾಣ ಮಾಡಿಕೊಳ್ಳುವುದಕ್ಕಾಗಿ ತಂದೆಯ ಆಜ್ಞೆಯನ್ನು ಪಾಲಿಸಬೇಕಾಗಿದೆ. ಬಾಪ್ದಾದಾರವರಿಗೆ ಎಂದೂ ಉಲ್ಲಂಘನೆ ಮಾಡಬಾರದು. ಯಾವುದೇ ಲೋಭ, ಮೋಹದ ಹವ್ಯಾಸವನ್ನು ಇಟ್ಟುಕೊಳ್ಳಬಾರದು. |
2. ತಮ್ಮ ಸ್ವಭಾವವನ್ನು ಬಹಳ ರಾಯಲ್ ಮಾಡಿಕೊಳ್ಳಬೇಕಾಗಿದೆ. ಬೆಳಗ್ಗೆ-ಬೆಳಗ್ಗೆ ಅಮೃತವೇಳೆ ಎದ್ದು ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. |
ಓಂ ಶಾಂತಿ. ತಂದೆಯ ನೆನಪಿನಲ್ಲಂತು ಮಕ್ಕಳು ತಾವಾಗಿಯೇ ಇರುತ್ತೀರಿ. ಗಳಿಗೆ-ಗಳಿಗೆಗೆ ಹೇಳುವ ಅವಶ್ಯಕತೆಯೂ ಇರುವುದಿಲ್ಲ. ತಂದೆಯ ಡೈರೆಕ್ಷನ್ ಆಗಿದೆ - ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನು ನೆನಪು ಮಾಡುತ್ತೀರೆಂದರೆ, ಯಾವ ರಾವಣ ನಿಮ್ಮನ್ನು ಪತಿತರನ್ನಾಗಿ ಮಾಡಿಬಿಟ್ಟಿದ್ದಾನೆ, ಅದರ ಮೇಲೆ ವಿಜಯವನ್ನು ಪಡೆಯುತ್ತೀರಿ. ನಿಮಗೆ ಯಾವುದೇ ಅಸ್ತ್ರ ಮುಂತಾದವುಗಳನ್ನು ಕೊಡುವುದಿಲ್ಲ, ಕೇವಲ ಯೋಗಬಲದಿಂದ ನೀವು ರಾವಣನ ಮೇಲೆ ವಿಜಯವನ್ನು ಪಡೆಯುತ್ತೀರಿ. ಅವಶ್ಯವಾಗಿ ವಿಜಯ ಪಡೆಯಬೇಕು ಮತ್ತು ಸಂಗಮದಲ್ಲಿಯೇ ಪಡೆಯುತ್ತೀರಿ, ಆಗ ರಾವಣ ರಾಜ್ಯವು ಸಮಾಪ್ತಿಯಾಗಿ ರಾಮ ರಾಜ್ಯದ ಸ್ಥಾಪನೆಯಾಗಬೇಕು. ತಂದೆಯಂತು ಹಿಂಸೆಯನ್ನೆಂದಿಗೂ ಕಲಿಸಲು ಸಾಧ್ಯವಿಲ್ಲ. ದೇವತೆಗಳಂತು ಅಹಿಂಸಾ ಪರಮೋಧರ್ಮಿ ಆಗಿಯೇ ಇದ್ದಾರೆ. ಅಲ್ಲಿ ಕಾಮ ಕಟಾರಿಯ ಹಿಂಸೆ ಆಗುವುದಿಲ್ಲವೆಂದು ಪ್ರಪಂಚದವರು ತಿಳಿದುಕೊಂಡಿಲ್ಲ. ಯಾರು ಕಲ್ಪದ ಮೊದಲು ನಿರ್ವಿಕಾರಿಗಳಾಗಿದ್ದರು, ಅವರೇ ನಿಮ್ಮ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ. ಈಗ ನೀವು ಯುದ್ಧದ ಮೈದಾನದಲ್ಲಿದ್ದೀರಿ. ಗಾಯನವಿದೆ - ಶಿವಶಕ್ತಿ ಸೇನೆ ಎಂದು. ನೀವು ಗುಪ್ತ ಯೋಧರಾಗಿದ್ದೀರಿ, ಪ್ರತಿಯೊಬ್ಬರೂ ತನಗಾಗಿ ಮಾಡುತ್ತಿದ್ದೀರಿ. ಮಾಯಾಜೀತ್ ಜಗತ್ಜೀತ್ ಆಗಬೇಕಾಗಿದೆ. ನೀವು ತಮಗಾಗಿ ಮಾಡುತ್ತೀರಿ ಅಂದರೆ ತಮ್ಮ ಭಾರತ ದೇಶಕ್ಕಾಗಿ ಮಾಡುತ್ತೀರಿ. ಇದರಲ್ಲಿ ಯಾರು ಚೆನ್ನಾಗಿ ಪುರುಷಾರ್ಥ ಮಾಡುತ್ತಾಎರ್ ಅವರು ಪಡೆಯುತ್ತಾರೆ. ಯಾರು 5 ವಿಕಾರಗಳ ಮೇಲೆ ವಿಜಯವನ್ನು ಪಡೆಯುತ್ತಾರೆ ಅವರೇ ಜಗತ್ಜೀತರಾಗುತ್ತಾರೆ, ಮತ್ತ್ಯಾವುದೇ ವಸ್ತುವಿನ ಮೇಲೆ ವಿಜಯ ಪಡೆಯುವುದಲ್ಲ. ನಿಮ್ಮದಿರುವುದೇ ರಾವಣ ರಾಜ್ಯದ ಮೇಲೆ ವಿಜಯ ಪಡೆಯುವುದು ಅರ್ಥಾತ್ ದೈವೀ ಗುಣಗಳನ್ನು ಧಾರಣೆ ಮಾಡುವುದು. ದೈವೀ ಗುಣಗಳ ಧಾರಣೆ ಮಾಡದೇ ಸತ್ಯಯುಗದಲ್ಲಿ ಹೋಗಲು ಸಾಧ್ಯವಿಲ್ಲ. ಅಂದಮೇಳೆ ತಮ್ಮೊಂದಿಗೆ ಕೇಳಿಕೊಳ್ಳಿ - ನಾವು ಎಲ್ಲಿಯವರಗೆ ದೈವೀ ಗುಣಗಳ ಧಾರಣೆ ಮಾಡಿದ್ದೇವೆ? ದೈವೀ ಗುಣಗಳ ಧಾರಣೆ ಮಾಡುವುದು ಎಂದರೆ ರಾವಣನ ಮೇಲೆ ವಿಜಯ ಪಡೆಯುವುದು. ರಾಮ ರಾಜ್ಯವಿತ್ತು ಎಂದು ಹೇಳಲಾಗುತ್ತದೆ ಅಂದಮೇಲೆ ಒಬ್ಬ ರಾಮನಂತು ರಾಜ್ಯಾಡಳಿತ ಮಾಡಿರುವುದಿಲ್ಲ? ಪ್ರಜೆಗಳಂತು ಇರುತ್ತಾರೆ. ಇಲ್ಲಿ ರಾಜ, ರಾಣಿ ಹಾಗೂ ಪ್ರಜೆಗಳೆಲ್ಲರೂ ರಾವಣನ ಮೇಲೆ ವಿಜಯವನ್ನು ಪಡೆಯುತ್ತಿದ್ದಾರೆ. ದೈವೀ ಗುಣಗಳನ್ನು ಧಾರಣೆ ಮಾಡುತ್ತಿದ್ದಾರೆ. ದೈವೀ ಗುಣಗಳಲ್ಲಿ ಆಹಾರ-ಪಾನೀಯ, ಮಾತನಾಡುವುದು - ಎಲ್ಲವೂ ಶುದ್ಧ ಪವಿತ್ರವಾಗುತ್ತದೆ. ಪ್ರತಿಯೊಂದು ಮಾತಿನಲ್ಲಿ ಸತ್ಯವನ್ನು ಹೇಳಬೇಕಾಗಿದೆ. ತಂದೆಯ ಸತ್ಯವೇ ಆಗಿದ್ದಾರೆ ಅಂದಾಗ ಇಂತಹ ತಂದೆಯ ಜೊತೆ ಎಷ್ಟು ಸತ್ಯವಾಗಿರಬೇಕು! ಒಂದುವೇಳೆ ಸತ್ಯವಾಗಿರುವುದಿಲ್ಲವೆಂದರೆ ಎಷ್ಟು ದುರ್ಗತಿಯಾಗುತ್ತದೆ! ಗತಿಯಂತು ಶ್ರೇಷ್ಠವಾಗಿರುವುದನ್ನು ಪಡೆಯಬೇಕಾಗಿದೆ. ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿ ಆಗಬೇಕಾಗಿದೆ. ಹೇಳಲಾಗುತ್ತದೆ - ನಿಮ್ಮ ಗತಿ ಮತ ನೀವೇ ತಿಳಿದಿದ್ದೀರಿ ಎಂದು. ತಂದೆಯು ಯಾವ ಮತವನ್ನು ಕೊಡುತ್ತಾರೆ, ಅದರಿಂದ ಎಂತಹ ಶ್ರೇಷ್ಠ ಗತಿಯಾಗುತ್ತದೆ. ಸರ್ವ ಶ್ರೇಷ್ಠ ತಂದೆಯು ಸರ್ವ ಶ್ರೇಷ್ಠ ಗತಿಯನ್ನು ಪಾಪ್ತಿ ಮಾಡಿಸುತ್ತಾರೆ ಅಂದಮೇಲೆ ಈಗ ಶ್ರೀಮತದಂತೆ ನಡೆದು ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಜನ್ಮ-ಜನ್ಮಾಂತರದ ಪಾಪವನ್ನು ಯೋಗಬಲವಿಲ್ಲದೆ ತುಂಡಾಗುವುದಿಲ್ಲ ಇದಕ್ಕಾಗಿ ನೆನಪಿನ ಯಾತ್ರೆಯು ಬಹಳ ಚೆನ್ನಾಗಿ ಮಾಡಬೇಕು. ಅಮೃತವೇಳೆ ನೆನಪು ಚೆನ್ನಾಗಿರುತ್ತದೆ. ಆ ಸಮಯದ ವಾಯುಮಂಡಲವು ಚೆನ್ನಾಗಿರುತ್ತದೆ. ದಿನದಲ್ಲಿ ಭಲೆ ಎಷ್ಟೇ ಸಮಯ ಕುಳಿತುಕೊಳ್ಳಿ ಆದರೆ ಅಮೃತವೇಳೆಯಂತಹ ಸಮಯವಿಲ್ಲ. ತಮ್ಮ ಮಾತುಗಳು ಗುಪ್ತವಾಗಿದೆ. ಆಂಗ್ಲಭಾಷೆಯಲ್ಲಿ ಹೇಳುತ್ತಾರೆ - “ವಿ ಆರ್ ಅಟ್ ವಾರ್” (ನಾವು ಯುದ್ಧದ ಮೈದಾನದಲ್ಲಿದ್ದೇವೆ) ನಮ್ಮ ಯುದ್ಧ ರಾವಣನೊಂದಿಗೆ ಇದೆ. ರಾವಣನು ನಂಬರ್ವನ್ ಶತ್ರುವಾಗಿದ್ದಾನೆ. ಶ್ರೀಮತದಿಂದ ರಾಮನ ಸಂಪ್ರದಾಯದವರು ರಾವಣ ಸಂಪ್ರದಾಯದವರ ಮೇಲೆ ವಿಜಯ ಪಡೆದರು. ತಂದೆಯು ಸರ್ವಶಕ್ತಿವಂತನಾಗಿದ್ದಾರಲ್ಲವೆ. ಪ್ರಪಂಚವಂತು ಪಾಪ! ಈ ಸಮಯದಲ್ಲಿ ಘೋರ ಅಂಧಕಾರದಲ್ಲಿದೆ. ನಾವು ಸೋತಿದ್ದೇವೆಂದರೆ ಅವರಿಗೆ ತಿಳಿದೇ ಇಲ್ಲ. ಮಾಯೆಯೊಂದಿಗೆ ಸೋಲುವುದೇ ಸೋಲು, ಮಾಯೆಯೆಂದು ಯಾವುದಕ್ಕೆ ಹೇಳಲಾಗುತ್ತದೆ- ಇದೂ ಸಹ ಯಾರೂ ತಿಳಿದಿಲ್ಲ. ಇಡೀ ಲಂಕೆಯ ಮೇಲೆ ರಾವಣನ ರಾಜ್ಯವಿತ್ತು. ಶಾಸ್ತ್ರಗಳಲ್ಲಿ ಭಕ್ತಿಮಾರ್ಗದಲ್ಲಿ ಎಷ್ಟೊಂದು ದಂತಕಥೆಗಳನ್ನು ಬರೆದಿದ್ದಾರೆ, ಅದನ್ನು ಜನ್ಮ-ಜನ್ಮಾಂತರದಿಂದ ಓದಿದ್ದೀರಿ. ಈಗ ಹೇಳುತ್ತಾರೆ- ಶಾಸ್ತ್ರಗಳನ್ನಂತು ಅವಶ್ಯವಾಗಿ ಓದಬೇಕು ಎಂದು. ಯಾರು ಓದುವುದಿಲ್ಲ ಅವರಿಗೆ ನಾಸ್ತಿಕರೆಂದು ಹೇಳಲಾಗುತ್ತದೆ ಮತ್ತು ತಂದೆಯು ತಿಳಿಸುತ್ತಾರೆ- ಶಾಸ್ತ್ರಗಳನ್ನು ಓದುತ್ತಾ-ಓದುತ್ತಾ ಎಲ್ಲರೂ ನಾಸ್ತಿಕರಾಗಿ ಬಿಟ್ಟಿದ್ದಾರೆ. ಈ ಮಾತುಗಳನ್ನು ಮಕ್ಕಳಿಗೆ ಚೆನ್ನಾಗಿ ತಿಳಿಸಬೇಕು- ಭಾರತವು ಯಾವಾಗ ಸತೋಪ್ರಧಾನವಿತ್ತು ಆಗ ಅದನ್ನು ಸ್ವರ್ಗವೆಂದು ಹೇಳಲಾಗುತ್ತಿತ್ತು. ಅದೇ ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತ-ತಮೋಪ್ರಧಾನರಾದರು. ಈಗ ಮತ್ತೆ ಪಾವನರಾಗುವುದು ಹೇಗೆ! ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದ್ದೇ ಆದರೆ ಸತೋಪ್ರಧಾನ ಪಾವನರಾಗಿ ಬಿಡುತ್ತೀರಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಯಾರನ್ನೂ ಗುರುಗಳನ್ನಾಗಿ ಮಾಡಿಕೊಳ್ಳಬೇಡಿ. ಹೇಳಲಾಗುತ್ತದೆ- ಗುರುವಿಲ್ಲದೆ ಘೋರ ಅಂಧಕಾರ. ಬಹಳಷ್ಟು ಮಂದಿ ಗುರುಗಳಿದ್ದಾರೆ ಆದರೆ ಎಲ್ಲರೂ ಅಂಧಕಾರದಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ- ಯಾವಾಗ ಜ್ಞಾನಸೂರ್ಯನು ಬರುವನು ಆಗ ಘೋರ ಅಂಧಕಾರವು ದೂರವಾಗುವುದು. ಭಲೆ ಸನ್ಯಾಸಿಗಳು ಪಾವನರಾಗುತ್ತಾರೆ ಆದರೆ ಜನ್ಮವಂತು ವಿಕಾರದಿಂದಲೇ ತೆಗೆದುಕೊಳ್ಳುತ್ತಾರಲ್ಲವೆ. ದೇವಿ-ದೇವತೆಗಳಂತು ವಿಕಾರದಿಂದ ಜನಿಸುವುದಿಲ್ಲ. ಇಲ್ಲಿ ಎಲ್ಲರ ಶರೀರ ಕೊಳಕಾಗಿದೆ. ತಂದೆಯು ಈ ರೀತಿ ಕೊಳಕಾಗಿರುವ ವಸ್ತ್ರಗಳನ್ನು ಸ್ವಚ್ಛ ಮಾಡುತ್ತಾರೆ. ಆತ್ಮವು ಪವಿತ್ರವಾಯಿತೆಂದರೆ ಶರೀರವು ಚೆನ್ನಾಗಿರುವುದು ಸಿಗುತ್ತದೆ. ಇದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಪರಿಶೀಲನೆಯನ್ನು ಇಡಬೇಕು- ನನ್ನಿಂದ ಯಾವುದೇ ಕೆಟ್ಟ ಕೆಲಸವಂತು ಆಗುತ್ತಿಲ್ಲವೇ. ಈಶ್ವರೀಯ ಕಾಯಿದೆಯು ಕಠಿಣವಾಗಿದೆ. ಯಾವುದೇ ಕೆಟ್ಟ ಕೆಲಸ ಮಾಡುತ್ತೀರೆಂದರೆ ಅದರ ಶಿಕ್ಷೆಯು ಬಹಳ ಕಠಿಣವಾಗಿದೆ. ಈಗ ಅಂತಿಮ ಸಮಯವಾಗಿದೆ, ಎಲ್ಲಾ ಲೆಕ್ಕಾಚಾರಗಳನ್ನು ಯೋಗಬಲದಿಂದ ಸಮಾಪ್ತಿ ಮಾಡಬೇಕಾಗಿದೆ. ಒಂದುವೇಳೆ ಸಮಾಪ್ತಿ ಮಾಡಲಿಲ್ಲವೆಂದರೆ ತುಂಡು ರೊಟ್ಟಿ (ಚಿಕ್ಕ ಪದವಿ) ಯನ್ನು ತಿನ್ನಬೇಕಾಗುತ್ತದೆ. ನಂತರ ಮಾನಿ ಮತ್ತು ಮೋಚ್ರಾ (ಶಿಕ್ಷೆಯನ್ನು ಅನುಭವಿಸಿ ಮತ್ತೆ ಪದವಿ ಭ್ರಷ್ಟವಾಗುವುದು) ಎಂದು ಹೇಳಲಾಗುತ್ತದೆ. ಮಾನಿ(ತುಂಡು ರೊಟ್ಟಿ)ಯಂತು ಎಲ್ಲರಿಗೂ ಸಿಗುತ್ತದೆ. ಮುಕ್ತಿ ಮತ್ತು ಜೀವನ್ಮುಕ್ತಿಯ ರೊಟ್ಟಿಯಂತು ಎಲ್ಲರಿಗೂ ಕೊಡುತ್ತಾರೆ. ಕೆಲವರು ಪಾಸ್-ವಿತ್-ಆನರ್, ಕೆಲವರಿಗೆ ಶಿಕ್ಷೆ ಸಿಗುತ್ತದೆ ನಂತರ ಅಪಮಾನದಿಂದ ಸ್ವಲ್ಪ ತುಂಡು ರೊಟ್ಟಿ ಸಿಗುತ್ತದೆ. ಸಿಂಹಾಸನದಲ್ಲಂತು ಕುಳಿತುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕೆಟ್ಟ ಕೆಲಸ ಮಾಡಿದರೆಂದರೆ ಅಪಮಾನವಾಗುತ್ತದೆ, ಅದೂ ತಂದೆಯ ಮುಂದೆ. ಶಿವ ತಂದೆಯು ಕುಳಿತಿದ್ದಾರಲ್ಲವೆ. ನಿಮಗೆ ಸಾಕ್ಷಾತ್ಕಾರ ಮಾಡಿಸುತ್ತೇವೆ- ನಾವು ಇದರಲ್ಲಿದ್ದೆವು, ನಿಮಗೆ ಎಷ್ಟೊಂದು ತಿಳಿಸುತ್ತಿದ್ದೆವು. ಈಗ ನಾನು ಸಂಪೂರ್ಣ(ಬ್ರಹ್ಮ)ನಲ್ಲಿ ಇದ್ದೇನೆ. ನೀವು ಮಕ್ಕಳು ಸಂಪೂರ್ಣ ತಂದೆಯ ಬಳಿ ಹೋಗುತ್ತೀರಿ. ಅವರ ಮೂಲಕ ಶಿವ ತಂದೆಯು ಡೈರೆಕ್ಷನ್ ಮುಂತಾದುದನ್ನು ಕೊಡುತ್ತಾರಲ್ಲವೆ. ತಂದೆಯು ನಿಮಗೆ ಸಾಕ್ಷಾತ್ಕಾರ ಮಾಡಿಸುತ್ತಾರೆ – ದೈವೀ ಗುಣಗಳನ್ನು ಧಾರಣೆ ಮಾಡಿ ಸೇವೆ ಮಾಡಿ, ಯಾರದೇ ನಿಂದನೆಯನ್ನು ಮಾಡಬೇಡಿ ಎಂದು ಇವರಲ್ಲಿ ಕುಳಿತು ನಿಮಗೆ ಎಷ್ಟು ಓದಿಸುತ್ತಿದ್ದೆವು, ತಿಳಿಸುತ್ತಿದ್ದೆವು, ಆದರೂ ನೀವು ಇದೇ ಕೆಲಸ ಮಾಡಿದಿರಿ, ಈಗ ಶಿಕ್ಷೆಯನ್ನು ಅನುಭವಿಸಿ. ಎಷ್ಟೆಷ್ಟು ಪಾಪ ಮಾಡಿರುತ್ತೀರಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಕೆಲವರು ಬಹಳ ಶಿಕ್ಷೆಯನ್ನು ಅನುಭವಿಸುತ್ತಾರೆ, ಕೆಲವರು ಕಡಿಮೆ. ಅವರಲ್ಲಿಯೂ ನಂಬರ್ವಾರ್, ಎಷ್ಟು ಸಾಧ್ಯವೊ ಯೋಗಬಲದಿಂದ ವಿಕರ್ಮಗಳನ್ನು ತುಂಡರಿಸುತ್ತಿರಬೇಕು. ಮಕ್ಕಳು ಎಲ್ಲದಕ್ಕಿಂತ ದೊಡ್ಡ ಚಿಂತೆ ಇದನ್ನೇ ಇಟ್ಟುಕೊಳ್ಳಬೇಕು- ನಾವು ಹೇಗೆ ಸಂಪೂರ್ಣ ಅಪ್ಪಟ ಚಿನ್ನವಾಗುವುದು? ಏಳುತ್ತಾ-ಕುಳಿತುಕೊಳ್ಳುತ್ತಾ ಇದೇ ಬುದ್ಧಿಯಲ್ಲಿರಲಿ, ಎಷ್ಟು ನೆನಪು ಮಾಡುತ್ತೀರಿ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಮಾಯೆಯ ಬಿರುಗಾಳಿಗಳ ಚಿಂತೆ ಮಾಡಬಾರದು, ಎಷ್ಟು ಸಮಯ ಸಿಗುತ್ತದೆಯೋ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾನು ತಮೋಪ್ರಧಾನದಿಂದ ಸತೋಪ್ರಧಾನನಾಗಬೇಕಾಗಿದೆ ಎಂದು. ತಂದೆಯನ್ನು ನೆನಪು ಮಾಡುತ್ತೀರೆಂದರೆ ಪಾಪಗಳು ತುಂಡಾಗುತ್ತವೆ. ಯಾವುದೇ ಪಾಪ ಮಾಡಬಾರದು. ಇಲ್ಲವೆಂದರೆ ನೂರು ಪಟ್ಟಾಗುವುದು. ಕ್ಷಮೆ ಕೇಳಲಿಲ್ಲವೆಂದರೆ ನಂತರ ವೃದ್ಧಿಯಾಗುತ್ತಾ-ಆಗುತ್ತಾ ಸತ್ಯನಾಶವಾಗಿ ಬಿಡುತ್ತದೆ. ಮಾಯೆಯು ಪಾಪದ ಹಿಂದೆ ಪಾಪವನ್ನು ಮಾಡಿಸುತ್ತಿರುತ್ತದೆ. ಬೇಹದ್ದಿನ ತಂದೆಯೊಂದಿಗೆ ಅವಿನಯಿಗಳಾಗಿ ಬಿಡುತ್ತೀರಿ. ಇದೂ ಸಹ ಅನೇಕರಿಗೆ ಗೊತ್ತಾಗುವುದಿಲ್ಲ. ತಂದೆಯು ಸದಾ ತಿಳಿಸುತ್ತಾರೆ- ಶಿವ ತಂದೆಯು ಮುರುಳಿಯನ್ನು ನುಡಿಸುತ್ತಿದ್ದಾರೆ ಎಂದು ತಿಳಿಯಿರಿ. ಶಿವ ತಂದೆಯು ಡೈರೆಕ್ಷನ್ ಕೊಡುತ್ತಿದ್ದಾರೆಂದರೆ ನೆನಪೂ ಸಹ ಇರಲಿ, ಭಯವೂ ಇರಲಿ. ಬಹಳ ಪಾಪ ಮಾಡುತ್ತಿರುತ್ತೀರಿ, ಸತ್ಯವನ್ನು ತಿಳಿಸಬೇಕು - ಬಾಬಾ ನಮ್ಮಿಂದ ಈ ತಪ್ಪಾಯಿತು. ತಂದೆಯು ತಿಳಿಸುತ್ತಾರೆ - ಪಾಪಗಳ ಹೊರೆಯು ತಲೆಯ ಮೇಲೆ ಬಹಳ ಇದೆ. ಏನೆಲ್ಲಾ ಮಾಡಿದಿರಿ ಅದನ್ನು ತಿಳಿಸಿ. ಸತ್ಯವನ್ನು ತಿಳಿಸುವುದರಿಂದ ಅರ್ಧ ಕಡಿಮೆಯಾಗಿ ಬಿಡುತ್ತದೆ. |
ತಂದೆಯು ತಿಳಿಸುತ್ತಾರೆ- ಯಾರು ನಂಬರ್ವನ್ ಪುಣ್ಯಾತ್ಮನಾಗುತ್ತಾರೆ, ನಂತರ ಅವರೇ ಪಾಪತ್ಮನೂ ಸಹ ನಂಬರ್ವನ್ನಲ್ಲಿ ಆಗುತ್ತಾರೆ. ಬಾಬಾ ಸ್ವಯಂ ಹೇಳುತ್ತಾರೆ- ನಿಮ್ಮ ಬಹಳ ಜನ್ಮಗಳಲ್ಲಿಯೂ ಅಂತಿಮ ಜನ್ಮವಾಗಿದೆ. ನೀವು ಪುಣ್ಯಾತ್ಮನಾಗಿದ್ದಿರಿ, ಈಗ ಪಾಪಾತ್ಮನಾಗಿದ್ದೀರಿ ನಂತರ ಪುಣ್ಯಾತ್ಮನಾಗಬೇಕಾಗಿದೆ. ತನ್ನ ಕಲ್ಯಾಣವನ್ನಂತು ಮಾಡಿಕೊಳ್ಳಬೇಕಾಗಿದೆ. ಇಲ್ಲಿ ನೀವು ತಲೆ ಮುಂತಾದನ್ನು ಬಾಗಿಸುವ ಅವಶ್ಯಕತೆಯಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಭಲೆ ಇವರೂ (ಬ್ರಹ್ಮ) ವೃದ್ಧನಾಗಿದ್ದಾರೆ, ನಮಸ್ತೆ ಮಾಡುತ್ತಾರೆ. ಮನೆಯಲ್ಲಿ ಮಕ್ಕಳು ಗಳಿಗೆ-ಗಳಿಗೆ ನಮಸ್ತೆ ಮಾಡುತ್ತಾರೆಯೇ! ಒಂದು ಬಾರಿ ನಮಸ್ತೆ ಮಾಡಿದರು ನಂತರ ಪ್ರತ್ಯುತ್ತರದಲ್ಲಿಯೂ ಮಾಡಲಾಗುತ್ತದೆ. ತಂದೆಯು ತಿಳಿಸುತ್ತಾರೆ- ನೀವು ನನ್ನನ್ನು ದೊಡ್ಡವರೆಂದು ತಿಳಿದು ನಮಸ್ತೆ ಮಾಡುತ್ತೀರಿ, ಮತ್ತೆ ನಾನು ನಿಮ್ಮನ್ನು ವಿಶ್ವದ ಮಾಲೀಕರೆಂದು ತಿಳಿದು ನಮಸ್ತೆ ಮಾಡುತ್ತೇನೆ. ಅರ್ಥವಿದೆಯಲ್ಲವೆ. ಮನುಷ್ಯರಂತು ರಾಮ-ರಾಮ ಎಂದು ಹೇಳಿ ಬಿಡುತ್ತಾರೆ ಆದರೆ ಅರ್ಥವನ್ನೇನೂ ತಿಳಿಯುವುದಿಲ್ಲ. ವಾಸ್ತವದಲ್ಲಿ ರಾಮ ಎಂದರೆ ಶಿವ ತಂದೆ. ರಾಮ ಆ ರಘುಪತಿ ಅಲ್ಲ, ಈ ರಾಮ ನಿರಾಕಾರನಾಗಿದ್ದಾರೆ. ಅವರ ಹೆಸರು ಶಿವ ತಂದೆ ಎಂದಾಗಿದೆ. ಶಿವನ ಮುಂದೆ ಈ ರೀತಿ ಯಾರೂ ಹೇಳುವುದಿಲ್ಲ- ನಾನು ರಾಮನ ಪೂಜೆಯನ್ನು ಮಾಡುತ್ತೇನೆ. ಈಗ ತಂದೆಯು ತಿಳಿಸುತ್ತಾರೆ- ನೀವು ಮಂದಿರಗಳಲ್ಲಿ ಹೋಗಿ ತಿಳಿಸಿ, ಇವರೂ ಸಹ ಮನುಷ್ಯನಾಗಿದ್ದರು. ನೀವು ಇವರ ಮುಂದೆ ಹೋಗಿ ಮಹಿಮೆ ಹಾಡುತ್ತೀರಿ- ತಾವು ನಿರ್ವಿಕಾರಿ, ಸರ್ವಗುಣ ಸಂಪನ್ನ, ನಾವು ಪಾಪಿ-ನೀಚರಾಗಿದ್ದೇವೆ. ಈ ತನುವೂ ಸಹ ಮನುಷ್ಯನದಾಗಿದೆ ಮತ್ತು ಆ ತನುವೂ ಸಹ ಮನುಷ್ಯನದಾಗಿದೆ ಆದರೆ ಅವರಲ್ಲಿ ದೈವೀ ಗುಣಗಳಿದೆ ಆದ್ದರಿಂದ ದೇವತೆಯಾಗಿದ್ದಾರೆ. ನೀವು ಸ್ವಯಂ ಹೇಳುತ್ತೀರಿ- ನಮ್ಮಲ್ಲಿ ಆಸುರೀ ಗುಣಗಳಿವೆ ಆದ್ದರಿಂದ ಮಂಗನಾಗಿದ್ದೇವೆ. ಚಹರೆಯಂತು ಇಬ್ಬರದೂ ಒಂದೇ ಆಗಿದೆ. ಲಕ್ಷಣದಲ್ಲಿ ವ್ಯತ್ಯಾಸವಿದೆ. ಭಾರತವಾಸಿಗಳೇ ಕಿರೀಟಧಾರಿಯಾಗಿದ್ದರು, ಈಗ ನೋ ತಾಜ್(ಕಿರೀಟವಿಲ್ಲ), ಬಡವರೂ ಸಹ ಭಾರತವಾಸಿಗಳೇ ಆಗಿದ್ದಾರೆ. ತಂದೆಯು ಸಹ ಭಾರತದಲ್ಲಿಯೇ ಬರುತ್ತಾರೆ, ಎಲ್ಲಿ ಸ್ವರ್ಗವಾಗಬೇಕಾಗಿದೆ ಅಲ್ಲಿ ತಂದೆಯು ಬರುತ್ತಾರಲ್ಲವೆ. ಕಳಿಂಗನ ಅವತಾರವೆಂದು ಹೇಳಲಾಗುತ್ತದೆ, ಎಷ್ಟು ಕಳಂಕಗಳನ್ನು ಹಾಕಲಾಗಿದೆ. ಒಂದುವೇಳೆ ಅನ್ಯ ಧರ್ಮದವರಿಗೆ ಸ್ವಲ್ಪ ತಿಳಿದರೆ ಅವರೂ ಸಹ ಭಾರತವಾಸಿಗಳನ್ನು ಫಾಲೋ ಮಾಡುತ್ತಾರೆ. ಕಲ್ಲು ಬುದ್ಧಿಯವರಾಗಿರುವ ಕಾರಣ ನನ್ನನ್ನೂ ಕಲ್ಲು-ಮಣ್ಣಿನಲ್ಲಿ ಇದ್ದಾರೆಂದು ಹೇಳಿ ಬಿಡುತ್ತಾರೆ. ತಂದೆಯನ್ನು ತಿಳಿದೇ ಇಲ್ಲ- ತಂದೆಯು ಇವರಲ್ಲಿ ಪ್ರವೇಶ ಮಾಡಿ ಭಾರತವನ್ನು ಎಂತಹ ಕಿರೀಟಧಾರಿಯನ್ನಾಗಿ ಮಾಡುತ್ತಾರೆ. ಭಾರತದ ಸೇವೆಯನ್ನು ಎಷ್ಟೊಂದು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ- ನೀವು ನನ್ನ ಗ್ಲಾನಿ ಮಾಡುತ್ತೀರಿ, ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ನೀವು ಎಷ್ಟೊಂದು ಅಪಕಾರ ಮಾಡುತ್ತೀರಿ, ರಾವಣನು ನಿಮ್ಮ ಮತವನ್ನು ಸಾಯಿಸಿ ಬಿಟ್ಟಿದ್ದಾನೆ. ಕೆಟ್ಟ ಗತಿಯಾಗಿ ಬಿಟ್ಟಿದೆ, ಆದ್ದರಿಂದ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ತಿಳುವಳಿಕೆ ಎಷ್ಟು ಸಹಜವಾಗಿ ಸಿಗುತ್ತಿದೆ ಆದರೂ ಕೆಲವು ಮಕ್ಕಳು ಮರೆತು ಹೋಗುತ್ತಾರೆ. ಯೋಗವಿಲ್ಲವೆಂದರೆ ಧಾರಣೆಯೂ ಆಗುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ಬಂಧನದಲ್ಲಿ ಇರುವವರು ಎಲ್ಲರಿಗಿಂತ ಹೆಚ್ಚು ನೆನಪು ಮಾಡುತ್ತಾರೆ. ಶಿವ ತಂದೆಯ ನೆನಪಿನಲ್ಲಿ ಸಹನೆಯನ್ನೂ ಮಾಡುತ್ತಾರೆ. ಭಾರತವಾಸಿಗಳಲ್ಲಿ ಯಾರು ದೇವಿ-ದೇವತೆಗಳು ಆಗುವಂತಹವರಿದ್ದಾರೆ ಅವರೇ ಇಲ್ಲಿಗೆ ಬರುತ್ತಾರೆ. ಆರ್ಯ ಸಮಾಜಿಗಳಂತು ದೇವತೆಗಳ ಮೂರ್ತಿಗಳನ್ನು ಒಪ್ಪುವುದೇ ಇಲ್ಲ. ವೃಕ್ಷದ ಅಂತ್ಯದಲ್ಲಿ ರೆಂಬೆಯಿದೆ, ಹೆಚ್ಚೆಂದರೆ 2-3 ಜನ್ಮಗಳೂ ಸಹ ವಿರಳವಾಗಿ ಪಡೆಯುತ್ತಾರೆ. |
ಬಹಳ ಮಂದಿ ತಿಳಿಯುತ್ತಾರೆ - ವಿಕಾರವಿಲ್ಲದೆ ಪ್ರಪಂಚವು ಹೇಗೆ ನಡೆಯುವುದು. ಅರೆ! ದೇವತೆಗಳನ್ನು ಸಂಪೂರ್ಣ ನಿರ್ವಿಕಾರಿ ಎಂದು ಹೇಳಲಾಗುತ್ತದೆ ಅಲ್ಲವೆ. ಇದೂ ಸಹ ಯಾರಿಗೂ ತಿಳಿದಿಲ್ಲ- ಅಲ್ಲಿ ವಿಕಾರವಿರುವುದೇ ಇಲ್ಲ ಎಂದು. ಕಲ್ಪದ ಮೊದಲಿನವರು ತಕ್ಷಣ ತಿಳಿದು ಬಿಡುತ್ತಾರೆ. ಗಾಯನವೂ ಇದೆ, ಭಗವಾನುವಾಚ- ಕಾಮ ಮಹಾಶತ್ರುವಾಗಿದೆ. ಆದರೆ ಭಗವಂತನು ಯಾವಾಗ ಹೇಳಿದ್ದರು ಎಂಬುದು ಯಾರೂ ತಿಳಿದಿಲ್ಲ. ಈಗ ನೀವು ಮಕ್ಕಳು ಜಗತ್ಜೀತ್ ಆಗುತ್ತಿದ್ದೀರಿ ಆದರೆ ಶ್ರೇಷ್ಠ ಪದವಿಯನ್ನು ಪಡೆಯಲು ಪರಿಶ್ರಮ ಪಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಗೃಹಸ್ಥ ವ್ಯವಹಾರದಲ್ಲಿರುತ್ತಾ ಕೇವಲ ಬುದ್ಧಿಯೋಗವನ್ನು ನನ್ನೊಂದಿಗೆ ತೊಡಗಿಸಿ. ಯಾವಾಗ ತಂದೆಯ ಮಕ್ಕಳಾಗಿ ಬಿಟ್ಟಿರಿ ಅಂದಮೇಲೆ ತಂದೆಯೊಂದಿಗೆ ಪ್ರೀತಿಯುಂಟಾಗಬೇಕು. ಉಳಿದಂತೆ ಅನ್ಯರ ಜೊತೆ ಕಾರ್ಯವನ್ನು ಮಾಡಿಸಲು ಪ್ರೀತಿಯನ್ನು ಇಡಬೇಕು. ಬುದ್ಧಿಯಲ್ಲಿ ಈ ವಿಚಾರವನ್ನು ಇಟ್ಟುಕೊಳ್ಳಬೇಕು- ಪಾಪ ಇವರನ್ನು ಸ್ವರ್ಗವಾಸಿಯನ್ನಾಗಿ ಹೇಗೆ ಮಾಡುವುದು. ಸತ್ಯ ಯಾತ್ರೆಯಲ್ಲಿ ನಡೆಯುವ ಯುಕ್ತಿಯನ್ನು ತಿಳಿಸಿ. ಅದು ಶಾರೀರಿಕ ಯಾತ್ರೆಯಾಗಿದೆ, ಅದನ್ನು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ. ಇದೊಂದೇ ನೆನಪಿನ ಯಾತ್ರೆಯಾಗಿದೆ. ಈಗ ನಮ್ಮ 84 ಜನ್ಮಗಳ ಪೂರ್ಣವಾಯಿತು ಮತ್ತೆ ಸತ್ಯಯುಗದ ಇತಿಹಾಸವು ಪುನರಾವರ್ತನೆಯಾಗುವುದು. ಪತಿತರಂತು ಮನೆ(ಪರಮಧಾಮ)ಗೆ ಹೋಗಲು ಸಾಧ್ಯವಿಲ್ಲ. ಪಾವನರನ್ನಾಗಿ ಮಾಡಲು ಪತಿತ-ಪಾವನ ತಂದೆಯು ಬೇಕಾಗಿದೆ. ಭಲೆ ಸನ್ಯಾಸಿಗಳು ಪಾವನರಾಗುತ್ತಾರೆ ಆದರೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರನ್ನು ಕರೆದುಕೊಂಡು ಹೋಗುವವರು ತಂದೆಯೇ ಆಗಿದ್ದಾರೆ. ತಂದೆಯು ಬಂದು ಎಲ್ಲರನ್ನು ರಾವಣನಿಂದ ಬಿಡಿಸಿ ಮುಕ್ತ ಮಾಡಿ ಬಿಡುತ್ತಾರೆ. ಸತ್ಯಯುಗದಲ್ಲಿ ದುಃಖ ಕೊಡುವಂತಹ ಯಾವುದೇ ವಸ್ತುವಿರುವುದಿಲ್ಲ. ಹೆಸರೇ ಸುಖಧಾಮವಾಗಿದೆ. ಇದಾಗಿದೆ ದುಃಖಧಾಮ. ಅದು ಕ್ಷೀರಸಾಗರ, ಇದು ವಿಷದ ಸಾಗರ ಆಗಿದೆ. |
ಈಗ ನೀವು ತಿಳಿದಿದ್ದೀರಿ - ಸ್ವರ್ಗದಲ್ಲಿ ಎಷ್ಟು ಸುಖದಿಂದ ವಿಶ್ರಾಂತಿಯಿಂದ ಇರುತ್ತೀರಿ. ಕ್ಷೀರ ಸಾಗರದಿಂದ ಹೊರಬಂದು ವಿಷದ ಸಾಗರದಲ್ಲಿ ಹೇಗೆ ಬರುತ್ತಾರೆ, ಇದು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ- ಶ್ರೀಮತದಂತೆ ನಡೆಯಬೇಕು ನಂತರ ಅವರು ಜವಾಬ್ದಾರನಾಗಿದ್ದಾರೆ. ಶ್ರೀಮತವು ಹೇಳುತ್ತದೆ- ಭಲೆ ಹೋಗಿ, ಮಕ್ಕಳನ್ನು ಸಂಭಾಲನೆ ಮಾಡಿ. ಅವರಿಗೆ ಜ್ಞಾನದ ಧ್ವನಿ ಮಾಡುತ್ತೀರೆಂದರೆ ಸ್ವಲ್ಪವಾದರೂ ಕಲ್ಯಾಣವಾಗಿ ಬಿಡುತ್ತದೆ. ಸ್ವರ್ಗದಲ್ಲಂತು ಬಂದು ಬಿಡುತ್ತಾರೆ. ತಂದೆಯು ಬಂದು ನರಕವಾಸಿಗಳಿಂದ ಸ್ವರ್ಗವಾಸಿಯನ್ನಾಗಿ 21 ಜನ್ಮಗಳಿಗಾಗಿ ಮಾಡುತ್ತಾರೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ. ಮನುಷ್ಯರಂತು ಏನನ್ನೂ ತಿಳಿದುಕೊಂಡಿಲ್ಲ. ಇದೂ ಸಹ ಮೊದಲು ತಿಳಿದಿರಲಿಲ್ಲ - ಹೇಗೆ ಇವರ 84 ಜನ್ಮಗಳ ಕಥೆಯಾಗಿದೆ - “ತತ್ತ್ವಂ” ಇವರೂ ಸಹ ರಾಜಯೋಗ ಕಲಿಯುತ್ತಿದ್ದಾರೆ. ನೀವು ರಾಜಋಷಿಯಾಗಿದ್ದೀರಿ. ಅವರು ಹಠಯೋಗಿ ಋಷಿಗಳಾಗಿದ್ದಾರೆ. ನೀವು ಗೃಹಸ್ಥ ವ್ಯವಹಾರದಲ್ಲಿದ್ದು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ. ನೀವೆಲ್ಲರೂ ಶರಣಾಗತಿಯಾಗಲು ಬಂದಿದ್ದೀರಲ್ಲವೆ. ಈಗ ನಾವು ಸ್ವರ್ಗದಲ್ಲಿ ಕುಳಿತಿದ್ದೇವೆಂದು ತಿಳಿಯುತ್ತೀರಿ. ಪ್ರಪಂಚದಲ್ಲಿ ಮಾಯೆಯ ಆಡಂಬರವಿದೆ. ಎಲ್ಲಿಯವರೆಗೆ ನರಕದ ವಿನಾಶವಾಗುವುದಿಲ್ಲ ಅಲ್ಲಿಯವರೆಗೆ ಸ್ವರ್ಗವಾಗಲು ಹೇಗೆ ಸಾಧ್ಯ! ಮಾಯಾವೀ ಮನುಷ್ಯರು ಇದಕ್ಕೇ ಸ್ವರ್ಗವೆಂದು ತಿಳಿದು ಕುಳಿತಿದ್ದಾರೆ. ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ತಂದೆಗೆ ಎಷ್ಟೊಂದು ಪರಿಶ್ರಮವೆನಿಸುತ್ತದೆ. ಪೂರ್ಣ ನರಕವಾಸಿಯಾಗಿದ್ದಾರೆ. ಸ್ವರ್ಗವಾಸಿಗಳಾಗುವುದೇ ಇಲ. ತಂದೆಯು ಎಷ್ಟೊಂದು ಪ್ರೀತಿಯಿಂದ ತಿಳಿಸುತ್ತಾರೆ. ಒಳ್ಳೆಯದು- ಮಧುರಾತಿ ಮಧುರ ಮಕ್ಕಳು ರಾವಣನ ಮೇಲೆ ವಿಜಯವನ್ನು ಪಡೆಯುವುದರಿಂದಲೇ ನೀವು ಜಗತ್ಜೀತರಾಗುವಿದಿ. ಅದಕ್ಕಾಗಿ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮರ್ಯಾದೆ ಹೋಗುವ ರೀತಿ ಯಾವುದೇ ಕಾರ್ಯವನ್ನು ಮಾಡಬೇಡಿ. ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ. ಮಾಯೆಯ ಬಿರುಗಾಳಿಯನ್ನು ಲೆಕ್ಕಿಸದೇ, ಎಷ್ಟು ಸಮಯ ಸಿಗುತ್ತದೋ ಅಷ್ಟು ಸಮಯ ತಂದೆಯನ್ನು ನೆನಪು ಮಾಡಬೇಕಾಗಿದೆ. |
2. ತಮ್ಮ ಶ್ರೇಷ್ಠ ಗತಿಯನ್ನು ಮಾಡಿಕೊಳ್ಳಲು ಸತ್ಯ ತಂದೆಯ ಜೊತೆ ಸತ್ಯವಾಗಿರಬೇಕು. ಯಾವುದೇ ಮಾತನ್ನು ಮುಚ್ಚಿಡಬಾರದು. |
ಸ್ವಮಾನದಿಂದಲೇ ಸನ್ಮಾನದ ಪ್ರಾಪ್ತಿ |
ಇಂದು ಬಾಪ್ದಾದಾ ನಾಲ್ಕಾರು ಕಡೆಯ ಸ್ವಮಾನಧಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಸ್ವಮಾನಧಾರಿ ಮಕ್ಕಳಿಗೇ ಇಡೀ ದಿನ ಸನ್ಮಾನವಾಗುತ್ತದೆ. ಒಂದು ಜನ್ಮ ಸ್ವಮಾನಧಾರಿಗಳು, ಇಡೀ ಕಲ್ಪ ಸನ್ಮಾನಧಾರಿಗಳಾಗುವಿರಿ. ತಮ್ಮ ರಾಜ್ಯದಲ್ಲಿಯೂ ರಾಜ್ಯಾಧಿಕಾರಿಗಳಾಗುವ ಕಾರಣ ಪ್ರಜೆಗಳ ಮೂಲಕ ಸನ್ಮಾನವು ಪ್ರಾಪ್ತಿಯಾಗುತ್ತದೆ ಮತ್ತು ಅರ್ಧಕಲ್ಪ ಭಕ್ತರ ಮೂಲಕ ಸನ್ಮಾನ ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಈಗ ತಮ್ಮ ಅಂತಿಮ ಜನ್ಮದಲ್ಲಿಯೇ ಭಕ್ತರ ಮೂಲಕ ದೇವಾತ್ಮ ಅಥವಾ ಶಕ್ತಿಯ ರೂಪದ ಸನ್ಮಾನವನ್ನು ನೋಡುತ್ತಿದ್ದೀರಿ ಮತ್ತು ಕೇಳುತ್ತಿದ್ದೀರಿ. ಎಷ್ಟು ಪ್ರೇಮದಿಂದ ಈಗಲೂ ಸನ್ಮಾನ ನೀಡುತ್ತಿದ್ದಾರೆ! ಇಷ್ಟು ಶ್ರೇಷ್ಠ ಭಾಗ್ಯವನ್ನು ಹೇಗೆ ಪ್ರಾಪ್ತಿ ಮಾಡಿಕೊಂಡಿರಿ! ಮುಖ್ಯವಾಗಿ ಕೇವಲ ಒಂದು ಮಾತಿನ ತ್ಯಾಗದ ಕಾರಣ ಈ ಭಾಗ್ಯವಿದೆ, ಯಾವುದರ ತ್ಯಾಗ ಮಾಡಿದಿರಿ? ದೇಹಾಭಿಮಾನದ ತ್ಯಾಗ ಮಾಡಿದಿರಿ ಏಕೆಂದರೆ ದೇಹಾಭಿಮಾನದ ತ್ಯಾಗವಿಲ್ಲವೆಂದರೆ ಸ್ವಮಾನದಲ್ಲಿ ಸ್ಥಿತರಾಗಲು ಸಾಧ್ಯವೇ ಇಲ್ಲ. ಈ ತ್ಯಾಗಕ್ಕೆ ಪ್ರತಿಫಲವಾಗಿ ಭಾಗ್ಯವಿದಾತ ಭಗವಂತನು ಈ ಭಾಗ್ಯದ ವರದಾನ ನೀಡಿದ್ದಾರೆ. ಎರಡನೇ ಮಾತೇನೆಂದರೆ - ಸ್ವಯಂ ತಂದೆಯು ತಾವು ಮಕ್ಕಳಿಗೆ ಸ್ವಮಾನ ಕೊಟ್ಟಿದ್ದಾರೆ. ತಂದೆಯು ಮಕ್ಕಳನ್ನು ಚರಣಗಳ ದಾಸ ಹಾಗೂ ದಾಸಿಯಾಗುವುದರಿಂದ ಬಿಡಿಸಿ ತನ್ನ ತಲೆಯ ಕಿರೀಟವನ್ನಾಗಿ ಮಾಡಿಕೊಂಡರು. ಎಷ್ಟು ದೊಡ್ಡ ಸ್ವಮಾನವನ್ನು ಕೊಟ್ಟರು! ಇಂತಹ ಸ್ವಮಾನವನ್ನು ಪ್ರಾಪ್ತಿ ಮಾಡಿಕೊಳ್ಳುವ ಮಕ್ಕಳ ಪ್ರತಿ ತಂದೆಯೂ ಸನ್ಮಾನ ಇಡುತ್ತಾರೆ. ತಂದೆಯು ಮಕ್ಕಳನ್ನು ಸದಾ ತನಗಿಂತಲೂ ಮುಂದಿಡುತ್ತಾರೆ, ಸದಾ ಮಕ್ಕಳ ಗುಣಗಾನ ಮಾಡುತ್ತಾರೆ. ಪ್ರತೀದಿನ ಬಹಳ ಪ್ರೀತಿಯಿಂದ ನೆನಪು, ಪ್ರೀತಿಯನ್ನು ಕೊಡಲು ಪರಮಧಾಮದಿಂದ ಸಾಕಾರವತನಕ್ಕೆ ಬರುತ್ತಾರೆ. ಅಲ್ಲಿಂದಲೇ ಕಳುಹಿಸುವುದಿಲ್ಲ ಆದರೆ ಇಲ್ಲಿ ಬಂದು ಕೊಡುತ್ತಾರೆ. ನಿತ್ಯವೂ ನೆನಪು ಪ್ರೀತಿ ಸಿಗುತ್ತಿದೆಯಲ್ಲವೆ, ಇಷ್ಟು ಶ್ರೇಷ್ಠ ಸನ್ಮಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಸ್ವಯಂ ತಂದೆಯೇ ಸನ್ಮಾನ ನೀಡಿದ್ದಾರೆ ಆದ್ದರಿಂದ ಅವಿನಾಶಿ ಸನ್ಮಾನಕ್ಕೆ ಅಧಿಕಾರಿಗಳಾಗಿದ್ದೀರಿ. ಇಂತಹ ಶ್ರೇಷ್ಠತೆಯ ಅನುಭವ ಮಾಡುತ್ತೀರಾ? ಸ್ವಮಾನ ಮತ್ತು ಸನ್ಮಾನ - ಎರಡಕ್ಕೂ ಪರಸ್ಪರ ಸಂಬಂಧವಿದೆ. |
ಸ್ವಮಾನಧಾರಿಗಳು ತಮಗೆ ಪ್ರಾಪ್ತಿಯಾಗಿರುವ ಸ್ವಮಾನದಲ್ಲಿರುತ್ತಾ ಸ್ವಮಾನದ ಸನ್ಮಾನದಲ್ಲಿಯೂ ಇರುತ್ತಾರೆ ಮತ್ತು ಅನ್ಯರನ್ನೂ ಸನ್ಮಾನದಿಂದ ನೋಡುತ್ತಾರೆ, ಮಾತನಾಡುತ್ತಾರೆ ಹಾಗೂ ಸಂಪರ್ಕದಲ್ಲಿ ಬರುತ್ತಾರೆ. ಸ್ವ-ಸನ್ಮಾನದ ಅರ್ಥವೇ ಆಗಿದೆ - ಸ್ವಯಂಗೆ ಸನ್ಮಾನ ಕೊಡುವುದು. ಹೇಗೆ ತಂದೆಯು ವಿಶ್ವದ ಸರ್ವ ಆತ್ಮರ ಮೂಲಕ ಸನ್ಮಾನವನ್ನು ಪ್ರಾಪ್ತಿ ಮಾಡಿಕೊಳ್ಳುವವರಾಗಿದ್ದಾರೆ, ಪ್ರತಿಯೊಬ್ಬರೂ ಸನ್ಮಾನ ಕೊಡುತ್ತಾರೆ ಆದರೆ ಎಷ್ಟು ತಂದೆಗೆ ಸನ್ಮಾನ ಸಿಗುವುದೋ ಅಷ್ಟೇ ಎಲ್ಲಾ ಮಕ್ಕಳಿಗೂ ಸನ್ಮಾನ ಕೊಡುತ್ತಾರೆ. ಅವರು ಕೊಡುವುದಿಲ್ಲವೆಂದರೆ ಅವರು ದೇವತೆಗಳಾಗುವುದಿಲ್ಲ. ಅನೇಕ ಜನ್ಮಗಳು ದೇವತೆಗಳಾಗುತ್ತೀರಿ ಮತ್ತು ಅನೇಕ ಜನ್ಮಗಳು ದೇವತಾ ರೂಪದ ಪೂಜೆಯು ನಡೆಯುತ್ತದೆ. ಒಂದು ಜನ್ಮ ಬ್ರಾಹ್ಮಣರಾಗುತ್ತೀರಿ ಆದರೆ ಅನೇಕ ಜನ್ಮಗಳು ದೇವತಾ ರೂಪದಲ್ಲಿ ರಾಜ್ಯ ಮಾಡುತ್ತೀರಿ ಹಾಗೂ ಪೂಜ್ಯರಾಗುತ್ತೀರಿ. ದೇವತೆ ಅರ್ಥಾತ್ ಕೊಡುವವರು. ಒಂದುವೇಳೆ ಈ ಜನ್ಮದಲ್ಲಿ ಈ ಸನ್ಮಾನ ಕೊಡಲಿಲ್ಲವೆಂದರೆ ಹೇಗೆ ದೇವತೆಗಳಾಗುವಿರಿ, ಅನೇಕ ಜನ್ಮಗಳಲ್ಲಿ ಸನ್ಮಾನವನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳುವಿರಿ? ಫಾಲೋ ಫಾದರ್, ಸಾಕಾರ ಸ್ವರೂಪದಲ್ಲಿ ಬ್ರಹ್ಮಾ ತಂದೆಯನ್ನು ನೋಡಿದಿರಿ, ಸದಾ ಸ್ವಯಂನ್ನು ವಿಶ್ವ ಸೇವಾಧಾರಿ ಎಂದು ಕರೆಸಿಕೊಂಡರು, ಮಕ್ಕಳ ಸೇವಕನೆಂದು ಕರೆಸಿಕೊಂಡರು ಮತ್ತು ಮಕ್ಕಳನ್ನು ಮಾಲೀಕರನ್ನಾಗಿ ಮಾಡಿದರು. ಸದಾ ಮಾಲೀಕನಿಗೆ ವಂದನೆ ಮಾಡಿದರು. ಸದಾ ಚಿಕ್ಕಮಕ್ಕಳಿಗೂ ಸಹ ಸನ್ಮಾನದ ಸ್ನೇಹ ಕೊಟ್ಟರು. ಭವಿಷ್ಯದಲ್ಲಿ ಆಗಲಿರುವ ವಿಶ್ವ ಕಲ್ಯಾಣಕಾರಿಗಳೆಂಬ ರೂಪದಿಂದ ನೋಡಿದರು, ಕುಮಾರ-ಕುಮಾರಿಯರನ್ನು ಯುವ ಸ್ಥಿತಿಯಲ್ಲಿ ಇರುವವರನ್ನು ಸದಾ ವಿಶ್ವದ ಪ್ರಸಿದ್ಧ ಮಹಾನ್ ಆತ್ಮರಿಗೆ ಛಾಲೆಂಜ್ ಮಾಡುವವರು, ಅಸಂಭವವನ್ನು ಸಂಭವ ಮಾಡುವವರು, ಮಹಾತ್ಮರ ತಲೆಯನ್ನೂ ಬಾಗಿಸುವವರು ಎಂಬ ಪವಿತ್ರ ಆತ್ಮರ ಸನ್ಮಾನದಿಂದ ನೋಡಿದರು. ಸದಾ ತನಗಿಂತಲೂ ಕಮಾಲ್ ಮಾಡುವ ಮಹಾನ್ ಆತ್ಮರೆಂದು ತಿಳಿದು ಸನ್ಮಾನ ನೀಡಿದರಲ್ಲವೆ! ಹಾಗೆಯೇ ವೃದ್ಧರನ್ನೂ ಸಹ ಸದಾ ಅನುಭವಿ ಆತ್ಮರು, ಜೊತೆಗಾರರ ಸನ್ಮಾನದಿಂದ ನೋಡಿದರೆ ಬಂಧನದಲ್ಲಿ ಇರುವವರನ್ನು ನಿರಂತರ ನೆನಪಿನಲ್ಲಿ ನಂಬರ್ವನ್ ಆಗುವ ಸನ್ಮಾನದಿಂದ ನೋಡಿದರು ಆದ್ದರಿಂದ ನಂಬರ್ವನ್ ಅವಿನಾಶಿ ಸನ್ಮಾನಕ್ಕೆ ಅಧಿಕಾರಿಯಾದರು. ರಾಜ್ಯ ಸನ್ಮಾನದಲ್ಲಿಯೂ ನಂಬರ್ವನ್ ವಿಶ್ವ ಮಹಾರಾಜನ್ ಮತ್ತು ಪೂಜ್ಯ ರೂಪದಲ್ಲಿಯೂ ತಂದೆಯ ಪೂಜೆಯ ನಂತರ ಮೊದಲ ಪೂಜ್ಯರು ಲಕ್ಷ್ಮೀ-ನಾರಾಯಣರೇ ಆಗುತ್ತಾರೆ ಅಂದಾಗ ರಾಜ್ಯ ಸನ್ಮಾನ ಮತ್ತು ಪೂಜ್ಯ ಸನ್ಮಾನ ಎರಡರಲ್ಲಿಯೂ ನಂಬರ್ವನ್ ಆಗಿ ಬಿಟ್ಟರು ಏಕೆಂದರೆ ಸರ್ವರಿಗೆ ಸ್ವಮಾನ-ಸನ್ಮಾನ ನೀಡಿದರು. ಸನ್ಮಾನ ಕೊಟ್ಟರೆ ನಾನು ಕೊಡುವೆನು ಎಂದು ಯೋಚಿಸಲಿಲ್ಲ, ಸನ್ಮಾನ ಕೊಡುವವರು ನಿಂಧಕರನ್ನೂ ತಮ್ಮ ಮಿತ್ರರೆಂದು ತಿಳಿದುಕೊಳ್ಳುತ್ತಾರೆ. ಕೇವಲ ಸನ್ಮಾನ ಕೊಡುವವರನ್ನು ತನ್ನವರೆಂದು ತಿಳಿದುಕೊಳ್ಳುವುದಿಲ್ಲ, ನಿಂದನೆ ಮಾಡುವವರನ್ನೂ ಸಹ ತನ್ನವರೆಂದು ತಿಳಿದುಕೊಳ್ಳುತ್ತಾರೆ ಏಕೆಂದರೆ ಇಡೀ ಪ್ರಪಂಚವೇ ತನ್ನ ಪರಿವಾರವಾಗಿದೆ. ಸರ್ವ ಆತ್ಮರಿಗೆ ಬುನಾದಿಯು ತಾವು ಬ್ರಾಹ್ಮಣರಾಗಿದ್ದೀರಿ. ಎಲ್ಲಾ ಶಾಖೆಗಳು ಅರ್ಥಾತ್ ಭಿನ್ನ-ಭಿನ್ನ ಧರ್ಮದ ಆತ್ಮರೂ ಸಹ ಮೂಲ ಬೇರಿನಿಂದಲೇ ಬಂದಿದ್ದಾರೆ ಅಂದಾಗ ಎಲ್ಲರೂ ತಮ್ಮವರಾದರಲ್ಲವೆ. ಇಂತಹ ಸ್ವಮಾನಧಾರಿಗಳು ಸದಾ ತಮ್ಮನ್ನು ಮಾ|| ರಚಯಿತನೆಂದು ತಿಳಿದು ಸರ್ವರ ಪ್ರತಿ ಸನ್ಮಾನದಾತರಾಗುತ್ತಾರೆ. ಸದಾ ತಮ್ಮನ್ನು ಆದಿ ದೇವ ಬ್ರಹ್ಮನ ಆದಿ ರತ್ನಗಳೇ ಆದಿ ಪಾತ್ರಧಾರಿ ಅತ್ಮರೆಂದು ತಿಳಿಯುತ್ತೀರಾ? ಇಷ್ಟೊಂದು ನಶೆಯಿದೆಯೇ? ಎಲ್ಲರೂ ಕೇಳಿಸಿಕೊಂಡಿರಾ? ಮಕ್ಕಳಿಗೇನು ಸನ್ಮಾನವಿದೆ, ವೃದ್ಧರ ಸನ್ಮಾನವೇನಾಗಿದೆ, ಯುವಕರಿಗೇನಿದೆ? ಆದಿಪಿತ ಬ್ರಹ್ಮನು ನಮ್ಮನ್ನು ಇಷ್ಟು ಸನ್ಮಾನದಿಂದ ನೋಡಿದರು, ಎಷ್ಟೊಂದು ನಶೆಯಿರಬೇಕು! ಸದಾ ಇದನ್ನು ಸ್ಮೃತಿ ಇಟ್ಟುಕೊಳ್ಳಿ- ಆದಿಆತ್ಮನು ಯಾವ ಶ್ರೇಷ್ಠ ದೃಷ್ಠಿಯಿಂದ ನೋಡಿದರೆ ಅದೇರೀತಿ ಶ್ರೇಷ್ಠ ಸ್ಥಿತಿಯ ಸೃಷ್ಟಿಯಲ್ಲಿರುತ್ತೇವೆ. ಹೀಗೆ ತಮ್ಮೊಂದಿಗೆ ಪ್ರತಿಜ್ಞೆ ಮಾಡಿ. ಪ್ರತಿಜ್ಞೆಯಂತೂ ಮಾಡುತ್ತಿರುತ್ತೀರಲ್ಲವೆ? ಮಾತಿನಿಂದಲೂ ಪ್ರತಿಜ್ಞೆ ಮಾಡುತ್ತೀರಿ, ಮನಸ್ಸಿನಿಂದಲೂ ಮಾಡುತ್ತೀರಿ ಮತ್ತು ಬರೆದೂ ಮಾಡುತ್ತೀರಿ ಆದರೂ ಮರೆತು ಹೋಗುತ್ತೀರಿ. ಆದ್ದರಿಂದ ಪ್ರತಿಜ್ಞೆಯ ಲಾಭವನ್ನು ಪಡೆಯುವುದಿಲ್ಲ. ನೆನಪಿಟ್ಟುಕೊಂಡರೂ ಸಹ ಲಾಭವನ್ನು ತೆಗೆದುಕೊಳ್ಳುವರು. ಎಲ್ಲರೂ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ – ಎಷ್ಟು ಬಾರಿ ಪ್ರತಿಜ್ಞೆ ಮಾಡಿದ್ದೇವೆ ಮತ್ತು ಎಷ್ಟು ಬಾರಿ ನಿಭಾಯಿಸಿದ್ದೇವೆ? ನಿಭಾಯಿಸುವುದು ಬರುತ್ತದೆಯೇ ಅಥವಾ ಕೇವಲ ಪ್ರತಿಜ್ಞೆ ಮಾಡುವುದು ಬರುತ್ತದೆಯೇ? ಅಥವಾ ಬದಲಾಗುತ್ತಾ ಇರುತ್ತೀರಾ? ಕೆಲವೊಮ್ಮೆ ಪ್ರತಿಜ್ಞೆ ಮಾಡುವವರು, ಕೆಲವೊಮ್ಮೆ ನಿಭಾಯಿಸುವವರಾಗಿದ್ದೀರಾ? |
ಟೀಚರ್ಸ್ ಏನು ತಿಳಿದುಕೊಳ್ಳುತ್ತೀರಿ? ನಿಭಾಯಿಸುವವರ ಪಟ್ಟಿಯಲ್ಲಿದ್ದೀರಲ್ಲವೆ. ಶಿಕ್ಷಕಿಯರನ್ನು ಬಾಪ್ದಾದಾ ಸದಾ ಸಹ ಶಿಕ್ಷಕರೆಂದು ಹೇಳುತ್ತಾರೆ. ಅಂದಮೇಲೆ ಜೊತೆಗಾರರ ವಿಶೇಷತೆಯೇನಿರುತ್ತದೆ? ಜೊತೆಗಾರರು ಸಮಾನರಾಗಿರುತ್ತಾರೆ. ತಂದೆಯು ಎಂದಾದರೂ ಬದಲಾಗುತ್ತಾರೆಯೇ? ಶಿಕ್ಷಕಿಯರೂ ಸಹ ಪ್ರತಿಜ್ಞೆ ಮತ್ತು ಅದರ ಲಾಭ ಎರಡರ ಸಮತೋಲನೆಯನ್ನು ಇಟ್ಟುಕೊಳ್ಳುವವರಾಗಿದ್ದಾರೆ. ಪ್ರತಿಜ್ಞೆ ಹೆಚ್ಚು ಲಾಭ ಕಡಿಮೆ - ಈ ಬ್ಯಾಲೆನ್ಸ್ ಇರುವುದಿಲ್ಲ. ಯಾರು ಎರಡನ್ನೂ ಬ್ಯಾಲೆನ್ಸ್ ಇಟ್ಟುಕೊಳ್ಳುವರೋ ಅವರಿಗೆ ವರದಾತ ತಂದೆಯ ಮೂಲಕ ಈ ವರದಾನ ಅಥವಾ ಬ್ಲೆಸ್ಸಿಂಗ್ ಸಿಗುತ್ತದೆ. ಅವರು ಸದಾ ಧೃಡ ಸಂಕಲ್ಪದಿಂದ ಕರ್ಮದಲ್ಲಿ ಸಫಲತಾ ಮೂರ್ತಿಗಳಾಗುತ್ತಾರೆ. ಸಹ ಶಿಕ್ಷಕರದು ಇದೇ ವಿಶೇಷ ಕರ್ಮವಾಗಿದೆ - ಸಂಕಲ್ಪ ಮತ್ತು ಕರ್ಮ ಸಮಾನವಾಗಿರಲಿ. ಸಂಕಲ್ಪ ಶ್ರೇಷ್ಠ ಮತ್ತು ಕರ್ಮ ಸಾಧಾರಣವಾದರೆ ಇದಕ್ಕೆ ಸಮಾನತೆಯೆಂದು ಹೇಳುವುದಿಲ್ಲ. ಆದ್ದರಿಂದ ಸದಾ ಟೀಚರ್ಸ್ ತಮ್ಮನ್ನು “ಸಹ ಶಿಕ್ಷಕರು” ಅರ್ಥಾತ್ “ತಂದೆಯ ಸಮಾನ ಶಿಕ್ಷಕರು” ಎಂದು ತಿಳಿದು ಈ ಸ್ಮೃತಿಯಲ್ಲಿ ಸಮರ್ಥರಾಗಿ ನಡೆಯಿರಿ. ಬಾಪ್ದಾದಾರವರಿಗೆ ಟೀಚರ್ಸ್ನ ಧೈರ್ಯವನ್ನು ನೋಡಿ ಖುಷಿಯಾಗುತ್ತದೆ. ಧೈರ್ಯವನ್ನಿಟ್ಟು ಸೇವೆಗೆ ನಿಮಿತ್ತರಾಗಿ ಬಿಟ್ಟಿದ್ದೀರಲ್ಲವೆ ಆದರೆ ಈಗ ಸದಾ ಈ ಸ್ಲೋಗನ್ ಸದಾ ನೆನಪಿಟ್ಟುಕೊಳ್ಳಿ - “ಧೈರ್ಯಶಾಲಿ ಶಿಕ್ಷಕಿಯರು ತಂದೆಗೆ ಸಮಾನ” ಇದನ್ನೆಂದೂ ಮರೆಯಬೇಡಿ. ಆಗ ಸ್ವತಹವಾಗಿ ಸಮಾನರಾಗುವ ಲಕ್ಷ್ಯವು “ಬಾಪ್ದಾದಾ ತಮ್ಮ ಸನ್ಮುಖದಲ್ಲಿರುವರು ಅರ್ಥಾತ್ ಜೊತೆಯಿರುವರು” ಒಳ್ಳೆಯದು. |
ನಾಲ್ಕಾರು ಕಡೆಯ ಸ್ವಮಾನಧಾರಿ ಸೋ ಸನ್ಮಾನಧಾರಿ ಮಕ್ಕಳಿಗೆ, ಬಾಪ್ದಾದಾ ನಯನಗಳ ಸನ್ಮುಖದಲ್ಲಿ ನೋಡುತ್ತಾ ಸನ್ಮಾನದ ದೃಷ್ಟಿಯಿಂದ ನೆನಪು, ಪ್ರೀತಿಯನ್ನು ಕೊಡುತ್ತಿದ್ದೇವೆ. ಸದಾ ರಾಜ್ಯ ಸನ್ಮಾನ ಮತ್ತು ಪೂಜ್ಯ ಸನ್ಮಾನದ ಸಮಾನ ಜೊತೆಗಾರ ಮಕ್ಕಳಿಗೆ ನೆನಪು, ಪ್ರೀತಿ ಹಾಗೂ ನಮಸ್ತೆ. |
ಬಿಹಾರ್ ಗ್ರೂಪ್ : |
ಎಲ್ಲರೂ ತಮ್ಮನ್ನು ಸ್ವರಾಜ್ಯ ಅಧಿಕಾರಿ ಎಂದು ತಿಳಿಯುವಿರಾ? ಸ್ವಯಂನ ರಾಜ್ಯವು ಸಿಕ್ಕಿದೆಯೇ ಅಥವಾ ಇನ್ನೂ ಸಿಗಬೇಕಿದೆಯೇ? ಸ್ವರಾಜ್ಯದ ಪರಿಭಾಷೆ ಆಗಿದೆ - ಯಾವಾಗ ಬೇಕು, ಹೇಗೆ ಬೇಕೋ ಹಾಗೆಯೇ ಕರ್ಮೇಂದ್ರಿಯಗಳ ಮೂಲಕ ಕರ್ಮ ಮಾಡಿಸಲು ಸಾಧ್ಯವಾಗಬೇಕು. ಕರ್ಮೇಂದ್ರಿಯಜೀತರು ಅರ್ಥಾತ್ ಸ್ವರಾಜ್ಯ ಅಧಿಕಾರಿ ಎಂದು. ಇಂತಹ ಸ್ವರಾಜ್ಯ ಅಧಿಕಾರಿ ಆಗಿರುವಿರಾ ಅಥವಾ ಕೆಲವೊಮ್ಮೆ ತಮ್ಮನ್ನೇ ಕರ್ಮೇಂದ್ರಿಗಳು ನಡೆಸುತ್ತದೆಯೇ? ಕೆಲವೊಮ್ಮೆ ತಮ್ಮನ್ನು ಮನಸ್ಸು ನಡೆಸುತ್ತದೆಯೇ ಅಥವಾ ತಾವು ಮನಸ್ಸನ್ನು ನಡೆಸುವಿರಾ? ಕೆಲವೊಮ್ಮೆ ಮನಸ್ಸು ವ್ಯರ್ಥ ಸಂಕಲ್ಪವನ್ನು ಮಾಡುತ್ತದೆಯೇ ಅಥವಾ ಇಲ್ಲವೇ? ಒಂದುವೇಳೆ ಕೆಲವೊಮ್ಮೆ ಮಾಡುತ್ತದೆ ಎಂದರೆ, ಆ ಸಮಯದಲ್ಲಿ ಸ್ವರಾಜ್ಯ ಅಧಿಕಾರಿ ಎಂದು ಹೇಳುವುದೇ? ಸ್ವರಾಜ್ಯವು ಬಹಳ ದೊಡ್ಡ ಶಕ್ತಿಯಾಗಿದೆ. ರಾಜ್ಯ ಶಕ್ತಿಯನ್ನು ಭಲೆ ಯಾರಾದರೂ ನಿರ್ವಹಣೆ ಮಾಡಬಹುದು, ಹೇಗೆ ನಡೆಸಬೇಕೆಂದು ತಿಳಿಯುವರೋ ಹಾಗೆಯೇ ನಡೆಸಬಹುದು, ಈ ಮನಸ್ಸು-ಬುದ್ಧಿ-ಸಂಸ್ಕಾರವಂತು ಆತ್ಮನ ಶಕ್ತಿಗಳಾಗಿವೆ. ಆತ್ಮವು ಈ ಮೂರರ ಮಾಲೀಕನಾಗಿದೆ. ಒಂದುವೇಳೆ ಕೆಲವೊಮ್ಮೆ ಸಂಸ್ಕಾರವು ತನ್ನ ಕಡೆಗೆ ಸೆಳೆಯುತ್ತದೆಯೆಂದರೆ ಮಾಲೀಕರೆಂದು ಹೇಳಲಾಗುತ್ತದೆಯೇ? ಹಾಗಾದರೆ ಸ್ವರಾಜ್ಯ-ಶಕ್ತಿ ಅರ್ಥಾತ್ ಕರ್ಮೇಂದ್ರಿಯಜೀತರು. ಯಾರು ಹೀಗೆ ಕರ್ಮೇಂದ್ರಿಯಜೀತರಾಗಿದ್ದಾರೆಯೋ ಅವರೇ ವಿಶ್ವದ... ರಾಜ್ಯ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಾಗುವುದು. ಸ್ವರಾಜ್ಯ ಅಧಿಕಾರಿಯೇ ವಿಶ್ವ-ರಾಜ್ಯಾಧಿಕಾರಿ ಆಗುವನು. ಅಂದಮೇಲೆ ತಾವು ಬ್ರಾಹ್ಮಣ ಆತ್ಮರ ಸ್ಲೋಗನ್ ಇದೇ ಆಗಿದೆ- `ಸ್ವರಾಜ್ಯವು ಬ್ರಾಹ್ಮಣ ಜೀವನದ ಜನ್ಮ-ಸಿದ್ಧ ಅಧಿಕಾರವಾಗಿದೆ'. ಸ್ವರಾಜ್ಯ ಅಧಿಕಾರಿಯ ಸ್ಥಿತಿಯು ಸದಾ ಮಾಸ್ಟರ್ ಸರ್ವಶಕ್ತಿವಂತನದಾಗಿರುತ್ತದೆ, ಯಾವುದೇ ಶಕ್ತಿಯ ಕೊರತೆಯಿರುವುದಿಲ್ಲ. ಸ್ವರಾಜ್ಯ ಅಧಿಕಾರಿಯು ಸದಾ ಧರ್ಮ ಅರ್ಥಾತ್ ಧಾರಣಾ ಮೂರ್ತಿಯೂ ಆಗಿರುತ್ತಾನೆ ಮತ್ತು ರಾಜ್ಯ ಅರ್ಥಾತ್ ಶಕ್ತಿಶಾಲಿಯೂ ಆಗಿರುವನು. ಈಗ ರಾಜ್ಯದಲ್ಲಿ ಯಾವುದಾದರೊಂದು ಏರುಪೇರುಗಳಿವೆ ಏಕೆ? ಏಕೆಂದರೆ ಧರ್ಮ ಶಕ್ತಿಯು ಬೇರ್ಪಟ್ಟಿದೆ ಮತ್ತು ಸ್ವರಾಜ್ಯ ಶಕ್ತಿಯು ಬೇರ್ಪಟ್ಟಿದೆ ಆದ್ದರಿಂದ ಅಂಗವಿಕಲನಾಗಿದೆಯಲ್ಲವೆ! ಒಂದು ಶಕ್ತಿಯಿದೆಯಲ್ಲವೆ ಆದ್ದರಿಂದ ಏರುಪೇರುಗಳಿವೆ. ಇದೇರೀತಿ ತಮ್ಮಲ್ಲಿಯೂ ಸಹ ಒಂದುವೇಳೆ ಧರ್ಮ ಮತ್ತು ರಾಜ್ಯ - ಇವೆರಡೂ ಶಕ್ತಿಗಳಿಲ್ಲದಿದ್ದರೆ ವಿಘ್ನಗಳು ಬರುತ್ತವೆ, ಏರುಪೇರುಗಳಲ್ಲಿ ತರುತ್ತದೆ, ಯುದ್ಧ ಮಾಡಬೇಕಾಗುತ್ತದೆ. ಎರಡೂ ಶಕ್ತಿಗಳಿದ್ದರೆ ಸದಾಕಾಲವೂ ನಿಶ್ಚಿಂತ ಚಕ್ರವರ್ತಿಯಾಗಿರುತ್ತೀರಿ, ತಮ್ಮಬಳಿ ಯಾವುದೇ ವಿಘ್ನಗಳು ಬರಲು ಸಾಧ್ಯವಿಲ್ಲ. ಅಂದಮೇಲೆ ಈ ರೀತಿಯಾಗಿ ನಿಶ್ಚಿಂತ ಚಕ್ರವರ್ತಿಯಾಗಿದ್ದೀರಾ? ಅಥವಾ ಸ್ವಲ್ಪ-ಸ್ವಲ್ಪ ಶರೀರದ ಕಡೆ, ಸಂಬಂಧದ ಕಡೆ.... ಚಿಂತೆಯಿರುತ್ತದೆಯೇ? ಪಾಂಡವರಲ್ಲಿ ಸಂಪಾದಿಸುವ ಚಿಂತೆಯಿರುತ್ತದೆ. ಪರಿವಾರವನ್ನು ನಡೆಸಬೇಕೆಂಬ ಚಿಂತೆಯಿರುತ್ತದೆಯೇ ಅಥವಾ ನಿಶ್ಚಿಂತರಾಗಿ ಇರುತ್ತೀರಾ? ನಡೆಸುವವರು ನಡೆಸುತ್ತಿದ್ದಾರೆ, ಮಾಡಿಸುವವರು ಮಾಡಿಸುತ್ತಿದ್ದಾರೆ - ಈ ರೀತಿಯಾಗಿ ನಿಮಿತ್ತವಾಗಿದ್ದು ಮಾಡುವವರೇ ನಿಶ್ಚಿಂತ ಚಕ್ರವರ್ತಿಗಳಾಗುವರು. ``ನಾನು ಮಾಡುತ್ತಿದ್ದೇನೆ'' ಇಂತಹ ಪರಿವೆಯಲ್ಲಿ ಬರುತ್ತೀರೆಂದರೆ ನಿಶ್ಚಿಂತವಾಗಿರಲು ಸಾಧ್ಯವಿಲ್ಲ. ಆದರೆ `ತಂದೆಯ ಮೂಲಕ ನಿಮಿತ್ತವಾಗಿ ಇರುವೆನು' ಎಂಬ ಸ್ಮೃತಿಯಲ್ಲಿದ್ದರೆ ನಿಶ್ಚಿಂತತೆ ಅಥವಾ ನಿಶ್ಚಿಂತ ಜೀವನದ ಅನುಭವ ಮಾಡುವಿರಿ, ಯಾವುದೇ ಚಿಂತೆಗಳಿರುವುದಿಲ್ಲ. ನಾಳೆ ಏನಾಗುವುದೋ ಎಂಬ ಚಿಂತೆಯೂ ಇರುವುದಿಲ್ಲ. ಕೆಲವೊಮ್ಮೆಗಾದರೂ ಇಂತಹ ಚಿಂತೆಯಿರುತ್ತದೆಯೇ - ನಾಳೆ ಏನಾಗುವುದೋ, ಹೇಗಾಗುವುದೋ? ಗೊತ್ತಿಲ್ಲ ವಿನಾಶವು ಯಾವಾಗ ಆಗುವುದೋ, ಏನಾಗುವುದೋ? ಮಕ್ಕಳ ಭವಿಷ್ಯವು ಏನಾಗುವುದೋ? ಮೊಮ್ಮಕ್ಕಳದೇನಾಗುವುದೋ ಎಂಬ ಚಿಂತೆಯಿರುತ್ತದೆಯೇ? ನಿಶ್ಚಿಂತ ಚಕ್ರವರ್ತಿಗಳಲ್ಲಿ ಸದಾ ಈ ನಿಶ್ಚಯವಿರುತ್ತದೆ- ಏನಾಗುತ್ತಿದೆಯೋ ಅದು ಒಳ್ಳೆಯದಾಗುತ್ತಿದೆ, ಮತ್ತು ಏನಾಗುವುದೋ ಅದು ಇನ್ನಷ್ಟು ಬಹಳ ಒಳ್ಳೆಯದಾಗಿರುತ್ತದೆ ಏಕೆಂದರೆ ಮಾಡಿಸುವವರು ಸರ್ವ ಶ್ರೇಷ್ಠನಾಗಿದ್ದಾರಲ್ಲವೆ! ಇಂತಹವರಿಗೆ ನಿಶ್ಚಯ ಬುದ್ಧಿ ವಿಜಯಿಗಳೆಂದು ಹೇಳಲಾಗುವುದು. ಈ ರೀತಿ ಆಗಿದ್ದೀರಾ ಅಥವಾ ಚಿಂತಿಸುತ್ತಿದ್ದೀರಾ? ಆಗಲೇಬೇಕಲ್ಲವೆ! ಇಷ್ಟು ಶ್ರೇಷ್ಠ ರಾಜ್ಯವೇ ಸಿಕ್ಕಿದೆ ಅಂದಮೇಲೆ ಚಿಂತಿಸುವ ಮಾತೇನಿದೆ? ಯಾರಾದರೂ ತನ್ನ ಅಧಿಕಾರವನ್ನು ಬಿಡುವರೇ? ಗುಡಿಸಿಲಿನಲ್ಲಿಯೇ ಇರಬಹುದು, ಆ ಸ್ವಲ್ಪ ಆಸ್ತಿಯನ್ನೂ ಸಹ ಬಿಡುವುದಿಲ್ಲ. ಇದಂತು ಎಷ್ಟೊಂದು ಶ್ರೇಷ್ಠವಾದ ಪ್ರಾಪ್ತಿಯಾಗಿದೆ. ಅಂದಮೇಲೆ ಇದು ನನ್ನ ಅಧಿಕಾರವಾಗಿದೆ ಎಂಬ ಸ್ಮೃತಿಯಿಂದ, ಸದಾ ಅಧಿಕಾರಿಯಾಗಿದ್ದು ಹಾರುತ್ತಿರಿ. ಈ ವರದಾನವನ್ನು ಸದಾ ನೆನಪಿಟ್ಟುಕೊಳ್ಳಿರಿ - ``ಸ್ವರಾಜ್ಯ ನಮ್ಮ ಜನ್ಮ-ಸಿದ್ಧ ಅಧಿಕಾರವಾಗಿದೆ''. ಪರಿಶ್ರಮ ಪಡುವವರಲ್ಲ, ಅಧಿಕಾರಿಯಾಗಿದ್ದೇವೆ. ಒಳ್ಳೆಯದು! ಬಿಹಾರ್ ಎಂದರೆ ಸದಾ ವಸಂತ ಋತುವಿನಲ್ಲಿ (ಶಾಂತಿಯಲ್ಲಿ) ಇರುವವರು, ಎಲೆ ಉದುರುವ ಕಾಲದಲ್ಲಿ ಹೋಗಬಾರದು. ಕೆಲವೊಮ್ಮೆಗೂ ಬಿರುಗಾಳಿಗಳು ಬರಬಾರದು, ಸದಾ ವಸಂತ ಋತುವಿರಲಿ. ಒಳ್ಳೆಯದು. |
2. ಆತ್ಮಿಕ ದೃಷ್ಟಿಯಿಂದ ಸೃಷ್ಟಿಯನ್ನೇ ಪರಿವರ್ತಿಸುವವರು ಎಂದು ತಮ್ಮಿಂದ ಅನುಭವ ಮಾಡುವಿರಾ? ದೃಷ್ಟಿಯಿಂದ ಸೃಷ್ಟಿಯು ಪರಿವರ್ತನೆ ಆಗಿ ಬಿಡುತ್ತದೆ ಎಂದು ಕೇಳುತ್ತಿದ್ದೆವು ಆದರೀಗ ಆತ್ಮಿಕ ದೃಷ್ಟಿಯಿಂದ ಸೃಷ್ಟಿಯ ಪರಿವರ್ತನೆ ಆಗಿ ಬಿಟ್ಟಿತಲ್ಲವೆ! ಇದರ ಅನುಭವಿ ಆಗಿ ಬಿಟ್ಟಿದ್ದೀರಿ. ತಮಗಂತು ಈಗ ತಂದೆಯ ಪ್ರಪಂಚವಾಗಿದ್ದಾರೆ, ಅಂದಮೇಲೆ ಸೃಷ್ಟಿಯು ಬದಲಾಯಿತು. ಹಿಂದಿನ ಜಗತ್ತು ಅರ್ಥಾತ್ ಪ್ರಪಂಚಕ್ಕೂ, ಮತ್ತು ಈಗಿನ ಪ್ರಪಂಚದಲ್ಲಿ ಇರುವುದಕ್ಕೂ ಅಂತರವಾಗಿ ಬಿಟ್ಟಿತಲ್ಲವೆ! ಮುಂಚೆ ಇದ್ದಂತಹ ಪ್ರಪಂಚದಲ್ಲಿ ಬುದ್ಧಿಯು ಅಲೆದಾಡುತ್ತಿತ್ತು ಹಾಗೆಯೇ ಈಗ ತಂದೆಯೇ ಪ್ರಪಂಚವಾಗಿ ಬಿಟ್ಟರು. ಅದರಿಂದ ಬುದ್ಧಿಯ ಅಲೆದಾಟವು ಬಂಧ್ ಆಯಿತು ಮತ್ತು ಏಕಾಗ್ರವಾಗಿ ಬಿಟ್ಟಿತು. ಏಕೆಂದರೆ ಮುಂಚೆ ಇದ್ದಂತಹ ಜೀವನದಲ್ಲಿ ಕೆಲವೊಮ್ಮೆ ದೇಹದ ಸಂಬಂಧದಲ್ಲಿ, ಕೆಲವೊಮ್ಮೆ ದೇಹದ ಪದಾರ್ಥದಲ್ಲಿ.... ಅನೇಕದರ ಕಡೆ ಬುದ್ಧಿಯು ಹೋರಟು ಹೋಗುತ್ತಿತ್ತು. ಈಗ ಇದೆಲ್ಲವೂ ಬದಲಾಗಿ ಬಿಟ್ಟಿತು. ಈಗಲೂ ದೇಹದ ನೆನಪಿರುತ್ತದೆಯೇ ಅಥವಾ ದೇಹಿಯ ನೆನಪಿರುವುದೇ? ಒಂದುವೇಳೆ ದೇಹದ ಕಡೆ ಬುದ್ಧಿಯು ಹೋಗುತ್ತದೆಯೆಂದರೆ, ಇದು ತಪ್ಪು ಎಂದು ತಿಳಿಯುತ್ತೀರಲ್ಲವೆ! ನಂತರ ದೇಹದ ಬದಲಾಗಿ ತಮ್ಮನ್ನು ದೇಹೀ ಎಂದು ತಿಳಿದುಕೊಳ್ಳುವ ಅಭ್ಯಾಸವನ್ನು ಮಾಡುತ್ತೀರಿ. ಹಾಗಾದರೆ ತಮ್ಮ ಪ್ರಪಂಚವೇ ಬದಲಾಯಿತಲ್ಲವೆ! ಮತ್ತು ಸ್ವಯಂ ತಾವೂ ಬದಲಾಗಿ ಬಿಟ್ಟಿರಿ. ತಂದೆಯವರೇ ತಮ್ಮ ಪ್ರಪಂಚವೇ ಅಥವಾ ಈಗಲೂ ಸ್ಥೂಲ ಜಗತ್ತಿನಲ್ಲೇನಾದರೂ ಉಳಿದಿದೆಯೇ? ವಿನಾಶಿ ಧನ ಅಥವಾ ವಿನಾಶಿ ಸಂಬಂಧದ ಕಡೆಗಂತು ಬುದ್ಧಿಯು ಹೋಗುವುದಿಲ್ಲವೇ? ಈಗ ನನ್ನದೇನೂ ಇಲ್ಲ, ``ನನ್ನ ಬಳಿ ಬಹಳಷ್ಟು ಹಣವಿದೆ'' ಎಂಬ ಈ ಸಂಕಲ್ಪ ಅಥವಾ ಸ್ವಪ್ನದಲ್ಲಿಯೂ ಇರುವುದಿಲ್ಲ ಏಕೆಂದರೆ ಎಲ್ಲವನ್ನೂ ತಂದೆಗೆ ಸಮರ್ಪಣೆ ಮಾಡಿದ್ದೇವೆ. ನನ್ನದನ್ನು ನಿನ್ನದೆಂದು ಸಮರ್ಪಿಸಿದ್ದೀರಲ್ಲವೆ! ಅಥವಾ ನನ್ನದೂ ಸಹ ನನ್ನದೆ ಹಾಗೂ ತಂದೆಯದೂ ನನ್ನದಾಗಿದೆ - ಈ ರೀತಿಯಾಗಿ ತಿಳಿಯುವುದಿಲ್ಲವೇ? ಈ ವಿನಾಶಿ ತನು-ಮನ, ಹಳೆಯ ಮನಸ್ಸು ನನ್ನದಲ್ಲ, ತಂದೆಯವರಿಗೆ ಕೊಟ್ಟಿದ್ದೇವೆ. ಪರಿವರ್ತನೆಯಾಗಲು ಮೊಟ್ಟ ಮೊದಲು `ಸರ್ವಸ್ವವೂ ನಿನ್ನದು' ಎಂಬ ಸಂಕಲ್ಪವನ್ನೇ ಮಾಡಿದಿರಿ, ನಿನ್ನದು ಎಂದು ಹೇಳುವುದರಲ್ಲಿಯೇ ಲಾಭವಿದೆ, ಇದರಲ್ಲಿ ತಂದೆಗೇನೂ ಲಾಭವಿಲ್ಲ, ತಮಗೇ ಲಾಭವಿದೆ. ಏಕೆಂದರೆ ನನ್ನದು ಎನ್ನುವುದರಿಂದ ಬಂಧನಕ್ಕೆ ಒಳಗಾಗುವಿರಿ, ಹೊರೆ ಇರುವವರಾಗುತ್ತೀರಿ ಮತ್ತು ನಿನ್ನದು ಎನ್ನುವುದರಿಂದ ನಿರ್ಲಿಪ್ತರಾಗುತ್ತೀರಿ, ಡಬಲ್ಲೈಟ್ ``ಟ್ರಸ್ಟಿ''(ನಿಮಿತ್ತ) ಆಗಿ ಬಿಡುತ್ತೀರಿ. ಅಂದಮೇಲೆ ಯಾವುದು ಒಳ್ಳೆಯದು! ಹಗುರರಾಗುವುದು ಒಳ್ಳೆಯದೇ ಅಥವಾ ಹೊರೆಯನ್ನು ಹೊರುವುದು ಒಳ್ಳೆಯದೇ? ವರ್ತಮಾನ ಸಮಯದಲ್ಲಿ ಕೆಲವರು ಶರೀರದಿಂದಲೂ ದಪ್ಪಗಿರುತ್ತಾರೆಂದರೆ ಇಷ್ಟವಾಗುವುದಿಲ್ಲ. ಎಲ್ಲರೂ ಸಹ ತನ್ನನ್ನು ಹಗುರವಾಗಿಡುವ ಪ್ರಯತ್ನವನ್ನೇ ಮಾಡುತ್ತಾರೆ ಏಕೆಂದರೆ ಹೊರೆ(ಶರೀರದ ತೂಕ ಹೆಚ್ಚಾಗುವುದು)ಯಾಗುವುದು ಎಂದರೆ ನಷ್ಟವಾಗುವುದು ಎಂದರ್ಥ ಮತ್ತು ಇದರಿಂದ ಲಾಭವಿದೆ. ಇದೇರೀತಿ ನನ್ನದು-ನನ್ನದು ಎನ್ನುವುದರಿಂದ ಬುದ್ಧಿಯ ಮೇಲೆ ಹೊರೆಯುಂಟಾಗುತ್ತದೆ, ನಿನ್ನದು-ನಿನ್ನದು ಎನ್ನುವುದರಿಂದ ಬುದ್ಧಿಯು ಹಗುರವಾಗಿ ಬಿಡುತ್ತದೆ. ಎಲ್ಲಿಯವರೆಗೆ ಹಗುರವಾಗುವುದಿಲ್ಲವೋ ಅಲ್ಲಿಯವರೆಗೆ ಶ್ರೇಷ್ಠ ಸ್ಥಿತಿಯವರೆಗೆ ತಲುಪಲು ಸಾಧ್ಯವಿಲ್ಲ. ಹಾರುವ ಕಲೆಯೇ ಆನಂದದ ಅನುಭೂತಿಯನ್ನು ಮಾಡಿಸುತ್ತದೆ, ಹಗುರವಾಗಿ ಇರುವುದರಲ್ಲಿಯೇ ಆನಂದವಿದೆ. ಒಳ್ಳೆಯದು! |
ಯಾವಾಗ ತಂದೆಯೇ ಸಿಕ್ಕಿದರೆಂದಾಗ, ಅವರ ಮುಂದೆ ಮಾಯೆಯೇನಾಗಿದೆ? ಮಾಯೆಯು ದುಃಖಿಯನ್ನಾಗಿ ಮಾಡುವಂತದ್ದು ಮತ್ತು ತಂದೆಯವರು ಆಸ್ತಿಯನ್ನು ಕೊಡುವವರು, ಪ್ರಾಪ್ತಿ ಮಾಡಿಸುವವರು. ಇಂತಹ ಪ್ರಾಪ್ತಿ ಮಾಡಿಸುವ ತಂದೆಯಂತು ಇಡೀ ಕಲ್ಪದಲ್ಲಿಯೂ ಸಿಗುವುದಿಲ್ಲ! ಸ್ವರ್ಗದಲ್ಲಿಯ್ತೂ ಸಿಗುವುದಿಲ್ಲ. ಹಾಗಾದರೆ ಇದನ್ನು ಒಂದು ಸೆಕೆಂಡಿಗಾಗಿಯೂ ಮರೆಯಬಾರದು, ಅಲ್ಪಕಾಲದ ಪ್ರಾಪ್ತಿಯನ್ನು ಮಾಡಿಸುವವರನ್ನೇ ಮರೆಯುವುದಿಲ್ಲ ಅಂದಾಗ ಬೇಹದ್ದಿನ ಪ್ರಾಪ್ತಿ ಮಾಡಿಸುವಂತಹ ತಂದೆಯನ್ನು ಮರೆಯಲು ಸಾಧ್ಯವೇ! ಅಂದಾಗ ಸದಾ ಇದನ್ನೇ ನೆನಪಿಟ್ಟುಕೊಳ್ಳಿರಿ - ನಾವು ಟ್ರಸ್ಟಿ ಆಗಿದ್ದೇವೆ. ಜೀವನದಲ್ಲಿ ಮತ್ತೇನು ಬೇಕು! ಆನಂದ, ಸಂಗೀತ ಮತ್ತು ಹಾರುವುದು- ಯಾವಾಗ ಪ್ರಾಪ್ತಿಯಾಗುವುದೋ ಆಗಲೇ ಆನಂದವು ಉಂಟಾಗುತ್ತದೆಯಲ್ಲವೆ! ಇಲ್ಲದಿದ್ದರೆ ದುಃಖಿಯಾಗುವುದೇ ಇರುತ್ತದೆ. ಆದ್ದರಿಂದ ಈ ವರದಾನವು ಸ್ಮೃತಿಯಲ್ಲಿರಲಿ - ನಾವು ಆನಂದವಾಗಿರುತ್ತಾ, ಹಾಡುತ್ತಾ, ಹಾರುವವರಾಗಿದ್ದೇವೆ, ಸದಾಕಾಲವೂ ತಂದೆಯವರ ಪ್ರಪಂಚದಲ್ಲಿಯೇ ಇರುವವರು ಆಗಿದ್ದೇವೆ. ಎಲ್ಲಾದರೂ ಬುದ್ಧಿ ಹೋಗುತ್ತದೆ ಎನ್ನುವುದಕ್ಕೇ ಇನ್ನೇನೂ ಬೇಕಾಗಿಯೇ ಇಲ್ಲ. ಸ್ವಪ್ನದಲ್ಲಿಯೂ ಅಳಬಾರದು, ಮಾಯೆಯು ದುಃಖಿಯನ್ನಾಗಿ ಮಾಡಿದರೂ ಅಳಬಾರದು. ಕೇವಲ ಕಣ್ಣುಗಳಿಂದಲೇ ಅಳುವುದಿರುವುದಿಲ್ಲ, ಮನಸ್ಸಿನ ಅಳು (ದುಃಖ) ಸಹ ಇರುತ್ತದೆ. ಅಂದರೆ ಮಾಯೆಯು ದುಃಖಿ ಮಾಡುತ್ತದೆ ಮತ್ತು ತಂದೆಯವರು ಆನಂದದಲ್ಲಿ ಇಡುತ್ತಾರೆ. ಬಿಹಾರ್ ಎಂದರೆ ಸದಾ ಖುಷಿಯಾಗಿ ಇರುವವರು ಎಂದು ಮತ್ತು ಬಂಗಾಳ ಎಂದರೆ ಸದಾ ಸಿಹಿಯಾಗಿರುವವರು. ಬಂಗಾಳದಲ್ಲಿನ ಮಿಠಾಯಿ ಬಹಳ ಚೆನ್ನಾಗಿರುತ್ತದೆ ಅಲ್ಲವೆ, ವಿಧ-ವಿಧವಾದ ಮಿಠಾಯಿ ಮಾಡುತ್ತಾರೆ ಅಂದಮೇಲೆ ಎಲ್ಲಿ ಮಧುರತೆ ಅಥವಾ ಸಿಹಿಯಿರುತ್ತದೆಯೋ ಅಲ್ಲಿ ಪವಿತ್ರತೆಯಿದೆ. ಪವಿತ್ರತೆಯಿಲ್ಲದೆ ಮಧುರತೆ ಬರಲು ಸಾಧ್ಯವೇ ಇಲ್ಲ. ಹಾಗಾದರೆ ತಾವು ಸದಾ ಮಧುರವ ಮತ್ತು ಖುಷಿಯಾಗಿ ಇರುವವರು. ಒಳ್ಳೆಯದು! ಟೀಚರ್ಸ್ ಸಹ ಆನಂದಿತರನ್ನು ನೋಡಿ ಸದಾ ಆನಂದವಾಗಿಯೇ ಇರುತ್ತೀರಲ್ಲವೆ. ಒಳ್ಳೆಯದು! |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮನುಷ್ಯರು ಯಾವುದೆಲ್ಲಾ ಗೀತೆ ಇತ್ಯಾದಿಗಳನ್ನು ಬರೆಯುತ್ತಾರೆ, ಶಾಸ್ತ್ರಗಳನ್ನು ತಿಳಿಸುತ್ತಾರೆ ಆದರೆ ಅವರು ಏನನ್ನೂ ತಿಳಿದುಕೊಂಡಿಲ್ಲ. ಏನೆಲ್ಲವನ್ನು ಓದುತ್ತಾ ಬಂದಿದ್ದಾರೆಯೋ ಅದರಿಂದ ಯಾರದೇ ಕಲ್ಯಾಣವಾಗಲಿಲ್ಲ, ಇನ್ನೂ ಅಕಲ್ಯಾಣವಾಗುತ್ತಾ ಬಂದಿದೆ. ಸರ್ವರ ಕಲ್ಯಾಣಕಾರಿಯು ಈಶ್ವರನೊಬ್ಬರೇ ಆಗಿದ್ದಾರೆ, ನೀವು ತಿಳಿದುಕೊಂಡಿದ್ದೀರಿ - ನಮ್ಮ ಕಲ್ಯಾಣ ಮಾಡುವವರು ಈಗ ಬಂದಿದ್ದಾರೆ, ಕಲ್ಯಾಣದ ಮಾರ್ಗವನ್ನು ತಿಳಿಸುತ್ತಿದ್ದಾರೆ. ವಿಶೇಷವಾಗಿ ನೀವು ಭಾರತವಾಸಿಗಳ ಮತ್ತು ಇಡೀ ಪ್ರಪಂಚದ ಕಲ್ಯಾಣ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ, ಸತ್ಯಯುಗದಲ್ಲಿ ಎಲ್ಲರ ಕಲ್ಯಾಣವಾಗಿತ್ತು, ನೀವೆಲ್ಲರೂ ಸುಖಧಾಮದಲ್ಲಿದ್ದಿರಿ ಆಗ ಉಳಿದ ಆತ್ಮರು ಶಾಂತಿಧಾಮದಲ್ಲಿದ್ದರು. ಇದು ಮಕ್ಕಳ ಬುದ್ಧಿಯಲ್ಲಿದೆ ಆದರೆ ಜ್ಞಾನದ ಅಂಶವು ಜಾರಿ ಹೋಗುತ್ತದೆ. ಪೂರ್ಣ ಧಾರಣೆ ಮಾಡುವುದಿಲ್ಲ. ಒಂದುವೇಳೆ ಒಂದು ಮಾತಿನ ಮೇಲೆ ವಿಚಾರ ಮಾಡುತ್ತಾ ಇದ್ದರೆ ಈ ರೀತಿ ಆಗುವುದಿಲ್ಲ. ಪ್ರಾಣಿಗಳಲ್ಲಿಯೂ ಎಷ್ಟೊಂದು ಬುದ್ಧಿಯಿದೆ ಆದರೆ ಈಗಿನ ಬುದ್ಧಿಯಲ್ಲಿ ಅಷ್ಟು ಬುದ್ಧಿಯಿಲ್ಲ. ಪ್ರಾಣಿಗಳು (ಹಸು) ಹುಲ್ಲನ್ನು ತಿನ್ನುತ್ತದೆಯೆಂದರೆ ಮೆಲುಕು ಹಾಕುತ್ತಾ ಇರುತ್ತವೆ. ನಿಮಗೂ ಸಹ ಭೋಜನ ಸಿಗುತ್ತದೆ ಆದರೆ ನೀವು ಇಡೀದಿನ ಅದನ್ನು ಮೆಲುಕು ಹಾಕುವುದಿಲ್ಲ, ಪ್ರಾಣಿಗಳಂತೂ ಇಡೀದಿನ ಮೆಲುಕು ಹಾಕುತ್ತಿರುತ್ತದೆ. ಇಲ್ಲಿ ನಿಮಗೆ ಜ್ಞಾನದ ಹುಲ್ಲು ಸಿಗುತ್ತದೆ - ಯೋಗ ಮತ್ತು ಜ್ಞಾನ. ದಿನವಿಡೀ ಇದರಮೇಲೆ ವಿಚಾರ ಸಾಗರ ಮಂಥನ ನಡೆಯುತ್ತಿರಬೇಕು. ಯಾರಿಗೆ ಸರ್ವೀಸಿನ ಉಮ್ಮಂಗ ಇಲ್ಲವೋ ಅವರು ವಿಚಾರ ಸಾಗರ ಮಂಥನ ಮಾಡಿ ಏನು ಮಾಡುವರು! ಉಮ್ಮಂಗ ಇಲ್ಲದಿದ್ದರೆ ಮಾಡುವುದೂ ಇಲ್ಲ. ಕೆಲಕೆಲವರಿಗೆ ಜ್ಞಾನ ಧನವನ್ನು ದಾನ ಮಾಡುವ ಉಮ್ಮಂಗವಿರುತ್ತದೆ, ಗೋಶಾಲೆಯಲ್ಲಿ ಮನುಷ್ಯರು ಹೋಗಿ ಗೋವುಗಳಿಗೆ ಹುಲ್ಲನ್ನು ಕೊಡುತ್ತಾರೆ, ಅದೂ ಪುಣ್ಯವೆಂದು ತಿಳಿಯುತ್ತಾರೆ. ತಂದೆಯು ನಿಮಗೆ ಜ್ಞಾನದ ಹುಲ್ಲನ್ನು ತಿನ್ನಿಸುತ್ತಾರೆ. ಇದರಮೇಲೆ ವಿಚಾರ ಸಾಗರ ಮಂಥನ ಮಾಡುತ್ತಾ ಇದ್ದರೆ ಖುಷಿಯಲ್ಲಿರುತ್ತೀರಿ ಮತ್ತು ಸರ್ವೀಸಿನ ಉಮ್ಮಂಗವೂ ಇರುವುದು. ಕೆಲವರು ಒಂದು ಬೊಗಸೆಯಷ್ಟು ತುಂಬಿಸಿಕೊಳ್ಳುತ್ತಾರೆ ಅಥವಾ ಒಂದು ಹನಿಯನ್ನು ತೆಗೆದುಕೊಂಡರೂ ಸಹ ಸ್ವರ್ಗದಲ್ಲಿ ಬರುತ್ತಾರೆ. ಸ್ವರ್ಗದ ಬಾಗಿಲು ತೆರೆಯುವುದು. ವಾಸ್ತವದಲ್ಲಿ ಜ್ಞಾನ ಸಾಗರವನ್ನೇ ನುಂಗಿ ಬಿಡಬೇಕು. ಕೆಲವರಂತೂ ಎಲ್ಲವನ್ನೂ ಗ್ರಹಿಸಿ ಬಿಡುತ್ತಾರೆ, ಇನ್ನೂ ಕೆಲವರು ಒಂದು ಹನಿಯಷ್ಟು ತೆಗೆದುಕೊಳ್ಳುತ್ತಾರೆ. ಆದರೂ ಸಹ ಸ್ವರ್ಗದಲ್ಲಿ ಬರುತ್ತಾರೆ ಆದರೆ ಎಷ್ಟೆಷ್ಟು ಧಾರಣೆ ಮಾಡುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಬಾಕಿ ಸ್ವರ್ಗದಲ್ಲಿ ಒಂದು ಹನಿಯಷ್ಟು ತೆಗೆದುಕೊಂಡಿದ್ದರೂ ಸಹ ಬಂದು ಬಿಡುತ್ತಾರೆ. ಮನುಷ್ಯರು ಶರೀರ ಬಿಡುವಾಗ ಅವರಿಗೆ ಗಂಗಾಜಲವನ್ನು ಹಾಕುತ್ತಾರೆ. ಕೆಲಕೆಲವರ ಮನೆಯಲ್ಲಿ ಗಂಗಾಜಲವನ್ನೇ ಕುಡಿಯುತ್ತಾರೆ, ಎಷ್ಟು ಕುಡಿಯಬಹುದು? ಗಂಗೆಯಂತೂ ಹರಿಯುತ್ತಿರುತ್ತದೆ. ಅದನ್ನು ಯಾರೂ ಪೂರ್ಣ ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ನಿಮಗಾಗಿ ಗಾಯನವಿದೆ - ಇಡೀ ಸಾಗರವನ್ನೇ ನುಂಗಿ ಬಿಟ್ಟರು ಎಂದು. ಯಾರು ಜ್ಞಾನ ಸಾಗರನ ಬಳಿಗೆ ಬರುತ್ತಾರೆಯೋ, ಹೆಚ್ಚು ಸರ್ವೀಸ್ ಮಾಡುವರೋ ಅವರೇ ರುದ್ರ ಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ. ಯಾರು ಎಷ್ಟೆಷ್ಟು ಗ್ರಹಿಸುವರೋ ಮತ್ತು ಅನ್ಯರ ಕಲ್ಯಾಣ ಮಾಡುವರೋ ಅವರು ಪದವಿಯನ್ನೂ ಪಡೆಯುತ್ತಾರೆ. ಎಷ್ಟು ಧಾರಣೆ ಮಾಡುವರೋ ಅಷ್ಟು ಖುಷಿಯೂ ಇರುತ್ತದೆ. ಧನವಂತರಿಗೆ ಖುಷಿ ಇರುತ್ತದೆಯಲ್ಲವೇ. ಯಾರ ಬಳಿಯಾದರೂ ಬಹಳ ಧನವಿರುತ್ತದೆ ಎಂದರೆ ದಾನ ಮಾಡುತ್ತಾರೆ. ಕಾಲೇಜು, ಧರ್ಮಶಾಲೆ, ಮಂದಿರ ಇತ್ಯಾದಿ ಕಟ್ಟಿಸುತ್ತಾರೆಂದರೆ ಅವರಿಗೆ ಅಷ್ಟು ಖುಷಿಯೂ ಇರುವುದು. ಇಲ್ಲಂತೂ ಅವಿನಾಶಿ ಜ್ಞಾನರತ್ನಗಳು ಸಿಗುತ್ತಿವೆ, ಇದು 21 ಜನ್ಮಗಳಿಗಾಗಿ ಅವಿನಾಶಿ ಖಜಾನೆಯಾಗಿದೆ. ಯಾರು ಇದನ್ನು ಚೆನ್ನಾಗಿ ಧಾರಣೆ ಮಾಡಿಕೊಂಡು ದಾನ ಮಾಡುವರೋ ಅವರಿಗೆ ಒಳ್ಳೆಯ ಪದವಿ ಸಿಗುತ್ತದೆ. ಬಾಬಾ, ನಮಗೆ ನೌಕರಿಯನ್ನು ಬಿಟ್ಟು ಈ ಆತ್ಮಿಕ ಸೇವೆಯಲ್ಲಿ ತೊಡಗೋಣವೆಂದು ಮನಸಾಗುತ್ತದೆ, ಪ್ರೋಜೆಕ್ಟರ್ ಪ್ರದರ್ಶನಿಯನ್ನು ತೆಗೆದುಕೊಂಡು ಹೋಗಿ ಎಲ್ಲಾ ಕಡೆ ಸರ್ವೀಸ್ ಮಾಡೋಣ ಎನಿಸುತ್ತದೆ ಎಂದು ಕೆಲ ಕೆಲವು ಮಕ್ಕಳು ಬರೆಯುತ್ತಾರೆ. ಯಾರಿಗಾದರೂ ಒಂದು ಹನಿ ಸಿಕ್ಕಿದರೂ ಸಹ ಕಲ್ಯಾಣವಾಗಿ ಬಿಡುವುದು. ಸರ್ವೀಸಿನ ಬಹಳ ಉಮ್ಮಂಗವಿರುತ್ತದೆ. ಬಾಕಿ ಪ್ರತಿಯೊಬ್ಬರ ಸ್ಥಿತಿಯನ್ನು ತಂದೆಯು ತಿಳಿದುಕೊಂಡಿದ್ದಾರೆ. ಸರ್ವೀಸಿನ ಜೊತೆಗೆ ಗುಣಗಳೂ ಇರಬೇಕು. ಕ್ರೋಧವಿರಬಾರದು, ಯಾವುದೇ ಉಲ್ಟಾ-ಸುಲ್ಟಾ ಸಂಕಲ್ಪಗಳು ಬರಬಾರದು. ವಿಕಾರಗಳ ಯಾವುದೇ ಕಾಯಿಲೆಯಿರಬಾರದು. ಆರೋಗ್ಯವು ಚೆನ್ನಾಗಿರಬೇಕು. ಯಾರಲ್ಲಿ ವಿಕಾರಗಳು ಕಡಿಮೆಯಿದೆಯೋ ಅವರೇ ಆರೋಗ್ಯವಂತರೆಂದು ತಂದೆಯು ಹೇಳುತ್ತಾರೆ. ತಂದೆಯು ಮಹಿಮೆ ಮಾಡುತ್ತಾರಲ್ಲವೇ. ಯಾರು-ಯಾರು ಒಳ್ಳೆಯ ಮಹಾರಥಿಗಳೆಂದು ಗಾಯನವೂ ಆಗುತ್ತದೆ, ಇದನ್ನು ಅವರು ಅಸುರರು ಮತ್ತು ದೇವತೆಗಳ ಯುದ್ಧವೆಂದು ತೋರಿಸಿದ್ದಾರೆ. ದೇವತೆಗಳ ಜಯವಾಯಿತು ಎಂದು ಹೇಳುತ್ತಾರೆ. ಈಗ ನಮ್ಮದು ಪಂಚ ವಿಕಾರರೂಪಿ ಅಸುರರೊಂದಿಗೆ ಯುದ್ಧವಿದೆ, ಮತ್ತ್ಯಾವುದೇ ಪ್ರಕಾರದ ಆಸುರೀ ಮನುಷ್ಯರಿರುವುದಿಲ್ಲ. ಯಾರಲ್ಲಿ ಆಸುರೀ ಸ್ವಭಾವವಿದೆಯೋ ಅವರಿಗೆ ಅಸುರರೆಂದು ಹೇಳಲಾಗುತ್ತದೆ. ನಂಬರ್ವನ್ ಅಸುರೀ ಸ್ವಭಾವವಾಗಿದೆ – ಕಾಮ ವಿಕಾರ. ಆದ್ದರಿಂದ ಸನ್ಯಾಸಿಗಳೂ ಸಹ ಇದನ್ನು ಬಿಟ್ಟು ಹೊರಟು ಹೋಗುತ್ತಾರೆ. ಈ ಆಸುರೀ ಗುಣಗಳನ್ನು ಬಿಡುವುದರಲ್ಲಿ ಪರಿಶ್ರಮವಾಗುತ್ತದೆ. ಗೃಹಸ್ಥದಲ್ಲಿಯೇ ಇರಬೇಕಾಗಿದೆ ಆದರೆ ಆಸುರೀ ಸ್ವಭಾವವನ್ನು ಬಿಡಬೇಕಾಗಿದೆ. ಪವಿತ್ರವಾಗುವುದರಿಂದ ಮುಕ್ತಿ-ಜೀವನ್ಮುಕ್ತಿಯು ಸಿಗುತ್ತದೆ. ಎಷ್ಟೊಂದು ಪ್ರಾಪ್ತಿಯಿದೆ! ಅವರಂತೂ ಮನೆ-ಮಠವನ್ನು ಬಿಟ್ಟು ಹೊರಟು ಹೋಗುತ್ತಾರೆ, ಪ್ರಾಪ್ತಿಯೇನೂ ಇಲ್ಲ. ಈ ಚಿತ್ರಗಳಲ್ಲಿ ತಿಳಿದುಕೊಳ್ಳುವ ಎಷ್ಟು ಒಳ್ಳೊಳ್ಳೆಯ ಮಾತುಗಳಿವೆ. ಅವರಂತೂ ಕೇವಲ ಚಿತ್ರಗಳ ಶೋ ಮಾಡುತ್ತಾರೆ. ಕೇವಲ ಚಿತ್ರಗಳನ್ನು ನೋಡುವುದಕ್ಕಾಗಿ ಎಷ್ಟೊಂದು ಮಂದಿ ಹೋಗುತ್ತಾರೆ ಆದರೆ ಲಾಭವೇನೂ ಇಲ್ಲ. ಇಲ್ಲಿ ಈ ಚಿತ್ರಗಳಲ್ಲಿ ಎಷ್ಟೊಂದು ಜ್ಞಾನವಿದೆ, ಇದರಿಂದ ಬಹಳಷ್ಟು ಲಾಭವಾಗುತ್ತದೆ. ಇಲ್ಲಿ ಈ ಚಿತ್ರಗಳಲ್ಲಿ ಎಷ್ಟೊಂದು ಜ್ಞಾನವಿದೆ, ಇದರಿಂದ ಬಹಳ ಲಾಭವಾಗುತ್ತದೆ. ಇದರಲ್ಲಿ ಕಲೆ ಇತ್ಯಾದಿಗಳು ಯಾವುದೇ ಮಾತಿಲ್ಲ ಅಥವಾ ಅದನ್ನು ಬರೆಯುವವರ ಬುದ್ಧಿವಂತಿಕೆಯ ಮಾತೂ ಇಲ್ಲ. ಅವರಾದರೆ ಚಿತ್ರಗಳ ಮೇಲೆ ಅದನ್ನು ರಚಿಸಿರುವವರ ಹೆಸರು ಬರೆದಿರುತ್ತಾರೆ. ಚಿತ್ರಕಾರರಿಗೂ ಬಳುವಳಿ ಸಿಗುತ್ತದೆ. ಕೆಲವರು ಇಷ್ಟನ್ನು ತಿಳಿದುಕೊಳ್ಳುತ್ತಾರೆ - ಹಾ! ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕು. ಇಷ್ಟು ಹೇಳಿದರೂ ಸಹ ಪ್ರಜೆಗಳಾಗುವರು. ಪ್ರಜೆಗಳಂತೂ ಅನೇಕರು ತಯಾರಾಗುವರು. ನಾನು ಜ್ಞಾನಸಾಗರನಾಗಿದ್ದೇನೆ, ಯಾರಿಗಾದರೂ ಒಂದು ಹನಿ ಸಿಕ್ಕಿದರೂ ಸ್ವರ್ಗದಲ್ಲಿ ಬಂದು ಬಿಡುತ್ತಾರೆ. |
ನೀವು ತಿಳಿದುಕೊಂಡಿದ್ದೀರಿ - ಪ್ರದರ್ಶನಿ, ಮೇಳಗಳಿಂದ ಅನೇಕರ ಕಲ್ಯಾಣವಾಗುತ್ತದೆ. ಈಶ್ವರನು ಕಲ್ಯಾಣಕಾರಿಯಾಗಿದ್ದಾರಲ್ಲವೇ. ನಿಮ್ಮದೂ ಕಲ್ಯಾಣವಾಗುತ್ತಿದೆ ಆದರೆ ಇದರಲ್ಲಿ ತಮ್ಮ ವಿಚಾರ ಸಾಗರ ಮಂಥನ ಮಾಡುತ್ತಾ ಇರಿ. ಸ್ಮೃತಿಯಲ್ಲಿ ತಂದುಕೊಳ್ಳುತ್ತಾ ಇರಿ ಆಗ ಬಹಳ ಲಾಭವಾಗುವುದು. ಉಲ್ಟಾ-ಸುಲ್ಟಾ ಮಾತುಗಳನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡಬೇಕು. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಬಹಳ ಒಳ್ಳೆಯ ಮಾತುಗಳನ್ನು ತಿಳಿಸುತ್ತೇನೆ. ನಂಬರ್ವನ್ ಮುಖ್ಯ ಮಾತು ಒಂದೇ ಆಗಿದೆ - ಯಾರಿಗೇ ಇರಲಿ ತಂದೆಯ ಪರಿಚಯ ಕೊಡಿ. ಕೇವಲ ಒಬ್ಬ ತಂದೆಯನ್ನು ನೆನಪು ಮಾಡಿರಿ ಅವರೇ ಸರ್ವಸ್ವವಾಗಿದ್ದಾರೆ. ಭಕ್ತಿಮಾರ್ಗದಲ್ಲಿ ಇಂತಹವರು ಅನೇಕರಿರುತ್ತಾರೆ, ಅವರಿಗೆ ತಿಳಿಸಿರಿ, ತಾವಂತೂ ಬಹಳ ಚೆನ್ನಾಗಿ ಮಾಡುತ್ತೀರಿ. ಎಲ್ಲವನ್ನೂ ಪರಮಾತ್ಮ ಮಾಡಿಸುತ್ತಾರೆಂದು ಬೆರಳನ್ನು ಮೇಲೆ ಮಾಡಿ ಹೇಳುತ್ತಾರೆ. ಅವರು ಎಲ್ಲರ ಕಲ್ಯಾಣಕಾರಿ ಮೇಲಿರುತ್ತಾರೆ. ನೀವಾತ್ಮರೂ ಸಹ ಅಲ್ಲಿಯೇ ಇರುತ್ತೀರಿ. ಇದೆಲ್ಲಾ ಜ್ಞಾನದ ಮಾತುಗಳನ್ನು ನೀವು ಈಗ ತಿಳಿದುಕೊಂಡಿದ್ದೀರಿ. |
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ನಿಮ್ಮ ಈ ಶರೀರವು ಹಳೆಯದಾಗಿ ಬಿಟ್ಟಿದೆ. ಸತ್ಯ-ತ್ರೇತಾಯುಗದಲ್ಲಿ ಎಷ್ಟು ಒಳ್ಳೆಯ ವಸ್ತ್ರವಿತ್ತು, ಈಗ ಈ ಸವೆದು ಹೋಗಿರುವ ವಸ್ತ್ರವನ್ನು ಎಲ್ಲಿಯವರೆಗೆ ಧರಿಸುತ್ತೀರಿ! ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಂದೆಯು ಬಂದು ತಿಳಿಸಿದಾಗಲೇ ತಿಳಿದುಕೊಳ್ಳುವರು. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಜ್ಞಾನವನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರು ಸಾಗರನಾಗಿದ್ದಾರೆ. ಯಾರು ಸಾಗರವನ್ನು ಗ್ರಹಿಸುವರೋ ಅವರೇ ವಿಜಯಮಾಲೆಯ ಮಣಿಯಾಗುತ್ತಾರೆ. ಅವರೇ ಸದಾ ಸರ್ವೀಸಿನಲ್ಲಿ ತತ್ಫರರಾಗಿರುತ್ತಾರೆ. ತಂದೆಯು ರುದ್ರ ಮಾಲೆಯನ್ನು ಮಾಡುವುದಕ್ಕಾಗಿಯೇ ಬಂದಿದ್ದಾರೆ. ಈಗ ಮರಳಿ ಹೋಗಬೇಕಾಗಿದೆ. ಎಲ್ಲಿಂದ ಬಂದಿದ್ದೇವೆಯೋ ಅಲ್ಲಿಗೇ ನಂಬರ್ವಾರ್ ಹೋಗುತ್ತೇವೆ. ಹಿಂದೆ-ಮುಂದೆ ಹೋಗಲು ಸಾಧ್ಯವಿಲ್ಲ. ನಾಟಕದಲ್ಲಿ ಪಾತ್ರಧಾರಿಗಳ ಪಾತ್ರವು ಸಮಯದಲ್ಲಿ ಇರುತ್ತದೆಯಲ್ಲವೇ. ಇದರಲ್ಲಿಯೂ ಯಾರು ಪಾತ್ರಧಾರಿಗಳಿದ್ದಾರೆಯೋ ಅವರು ನಂಬರ್ವಾರ್ ತಮ್ಮ-ತಮ್ಮ ಸಮಯದಲ್ಲಿ ಬರತೊಡಗುತ್ತಾರೆ. ಈ ಬೇಹದ್ದಿನ ನಾಟಕವು ಮಾಡಲ್ಪಟ್ಟಿದೆ. ಬ್ರಹ್ಮತತ್ವದಲ್ಲಿ ನಾವಾತ್ಮರು ಬಿಂದು ರೂಪದಲ್ಲಿರುತ್ತೇವೆ. ಅಲ್ಲಿ ಮತ್ತೇನೂ ಇರುವುದಿಲ್ಲ. ಒಂದು ಆತ್ಮ ಬಿಂದುವೆಲ್ಲಿ! ಇಷ್ಟು ದೊಡ್ಡ ಶರೀರವೆಲ್ಲಿ! ಆತ್ಮವು ಎಷ್ಟು ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ, ಬ್ರಹ್ಮಮಹಾತತ್ವವು ಎಷ್ಟು ದೊಡ್ಡದಾಗಿದೆ. ಹೇಗೆ ಆಕಾಶಕ್ಕೆ ಅಂತ್ಯವಿಲ್ಲವೋ ಹಾಗೆಯೇ ಬ್ರಹ್ಮತತ್ವಕ್ಕೂ ಅಂತ್ಯವಿಲ್ಲ. ಅಂತ್ಯವನ್ನು ಮುಟ್ಟಲು ಎಷ್ಟೊಂದು ಪ್ರಯತ್ನ ಪಡುತ್ತಾರೆ ಆದರೆ ತಲುಪಲು ಸಾಧ್ಯವಿಲ್ಲ. ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾ ಇರುತ್ತಾರೆ ಆದರೆ ಅಂತ್ಯವನ್ನು ಮುಟ್ಟಲು ಅಥವಾ ಅದನ್ನು ಹಿಡಿಯಲು ಅದು ಯಾವುದೇ ವಸ್ತುವಲ್ಲ. ವಿಜ್ಞಾನದ ಅಭಿಮಾನವು ಎಷ್ಟೊಂದಿದೆ, ಏನೂ ಲಾಭವಿಲ್ಲ. ಆಕಾಶವೇ ಆಕಾಶ, ಪಾತಾಳವೇ ಪಾತಾಳ ಎಂಬ ಶಬ್ಧವನ್ನು ಕೇಳಿರುವ ಕಾರಣ ಚಂದ್ರ ಗ್ರಹದಲ್ಲಿಯೂ ಪ್ರಪಂಚವಿರಬಹುದು ಎಂದು ತಿಳಿಯುತ್ತಾರೆ. ಡ್ರಾಮಾದಲ್ಲಿ ಅವರದೂ ಪಾತ್ರವಿದೆ, ಲಾಭವೇನೂ ಇಲ್ಲ. ತಂದೆಯು ಬಂದು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಎಷ್ಟೊಂದು ಲಾಭವಿದೆ! ಬಾಕಿ ಚಂದ್ರ ಗ್ರಹದಲ್ಲಾದರೂ ಹೋಗಲಿ, ಛೂ ಮಂತ್ರದಿಂದ ಭಸ್ಮವನ್ನಾದರೂ ತೆಗೆಯಲಿ..... ಇದರಿಂದೇನು ಲಾಭ! ಈಗಂತೂ ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಕಲ್ಪ-ಕಲ್ಪವೂ ತೆಗೆದುಕೊಳ್ಳುತ್ತಾ ಬಂದಿದ್ದೇವೆ, ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ. ಈ ಚಕ್ರವು ಸುತ್ತುತ್ತಾ ಇರುತ್ತದೆ. ಪ್ರಪಂಚದಲ್ಲಿ ಮೊದಲು ಸ್ವರ್ಣೀಮ ಭಾರತವೇ ಇತ್ತು, ಭಾರತವಾಸಿಗಳೇ ವಿಶ್ವದ ಮಾಲೀಕರಾಗಿದ್ದರು. ಅಲ್ಲಿ ದೇವತೆಗಳಿಗೆ ಯಾವುದೇ ಖಂಡದ ಬಗ್ಗೆ ತಿಳಿದಿರುವುದಿಲ್ಲ. ಇವಂತೂ ನಂತರದಲ್ಲಿ ವೃದ್ಧಿಯಾಗಿದೆ. ಹೊಸ-ಹೊಸ ಧರ್ಮ ಸ್ಥಾಪಕರು ಬಂದು ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ ಆದರೆ ಅವರು ಯಾರದೇ ಸದ್ಗತಿ ಮಾಡುವುದಿಲ್ಲ, ಕೇವಲ ಧರ್ಮ ಸ್ಥಾಪನೆ ಮಾಡುತ್ತಾರೆ. ಅವರಿಗೇನು ಗಾಯನವಿರುವುದು! ಮುಕ್ತಿಧಾಮದಿಂದ ಪಾತ್ರವನ್ನು ಅಭಿನಯಿಸಲು ಬರುತ್ತಾರೆ, ಮನುಷ್ಯರಿಂದ ಮೋಕ್ಷದಲ್ಲಿಯೇ ಕುಳಿತಿರಬೇಕು - ಈ ಆವಾಗಮನದ ಚಕ್ರದಲ್ಲಿ ಬರುವುದಾದರೂ ಏಕೆ ಎಂದು ಹೇಳುತ್ತಾರೆ ಆದರೆ ಇದರಲ್ಲಿ ಬರಲೇಬೇಕಾಗಿದೆ. ಪುನರ್ಜನ್ಮವನ್ನು ತೆಗೆದುಕೊಳ್ಳಲೇ ಬೇಕಾಗಿದೆ. ಪುನಃ ಹಿಂತಿರುಗಿ ಹೋಗಬೇಕಾಗಿದೆ, ಇದು ಮಾಡಿ-ಮಾಡಲ್ಪಟ್ಟ ಡ್ರಾಮಾದ ಚಕ್ರವಾಗಿದೆ. ಲಕ್ಷಾಂತರ ವರ್ಷಗಳ ನಾಟಕವು ಯಾವುದೂ ಇರುವುದಿಲ್ಲ. ಇದು ಸ್ವಾಭಾವಿಕ ಅನಾದಿ ನಾಟಕವಾಗಿದೆ, ಇದಕ್ಕೆ ಈಶ್ವರೀಯ ಲೀಲೆಯೆಂದು ಹೇಳಲಾಗುತ್ತದೆ. ರಚಯಿತ ಮತ್ತು ರಚನೆಯ ಯಾವ ಲೀಲೆಯಿದೆಯೋ ಅದನ್ನು ಅರಿತುಕೊಳ್ಳಬೇಕಾಗಿದೆ. ಸೃಷ್ಟಿಚಕ್ರವನ್ನು ಅರಿತುಕೊಳ್ಳುವ ಪುರುಷಾರ್ಥ ಮಾಡುವ ಮನುಷ್ಯರು ಯಾರೂ ಇಲ್ಲ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬ ವಿಚಾರ ಯಾರಿಗೂ ಇರುವುದೇ ಇಲ್ಲ. ಎಲ್ಲದಕ್ಕಿಂತ ಹಳೆಯ ಚಿತ್ರವು ಶಿವಲಿಂಗದ್ದಾಗಿದೆ. ಖುದನು ಬಂದಿದ್ದಾರೆ ಆದ್ದರಿಂದಲೇ ನಂತರ ಅವರದು ನೆನಪಾರ್ಥವನ್ನು ಮಾಡುತ್ತಾರೆ. ಮೊದಲು ಶಿವನ ಪೂಜೆಯು ಆರಂಭವಾದಾಗ ವಜ್ರದ ಲಿಂಗವನ್ನು ಮಾಡಿಸುತ್ತಾರೆ. ಯಾವಾಗ ಭಕ್ತಿಯು ರಜೋ, ತಮೋ ಆಗಿ ಬಿಡುತ್ತದೆಯೋ ಆಗ ಕಲ್ಲಿನ ಲಿಂಗವನ್ನೂ ಮಾಡಿಸುತ್ತಾರೆ. |
ಶಿವ ತಂದೆಯು ವಜ್ರದಿಂದ ಕೂಡಿಲ್ಲ ಅವರು ಒಂದು ಬಿಂದುವಾಗಿದ್ದಾರೆ. ಪೂಜೆಗಾಗಿ ಅವರನ್ನು ಎಷ್ಟು ದೊಡ್ಡದಾಗಿ ತೋರಿಸುತ್ತಾರೆ, ನಾವು ವಜ್ರದ ಶಿವಲಿಂಗವನ್ನು ಮಾಡಿಸಬೇಕೆಂದು ತಿಳಿಯುತ್ತಾರೆ. ಸೋಮನಾಥನ ಎಷ್ಟು ದೊಡ್ಡ ಮಂದಿರದಲ್ಲಿ ಕೇವಲ ಒಂದು ಬಿಂದುವನ್ನು ಇಟ್ಟರೆ ಅದು ಅರ್ಥವಾಗುವುದಿಲ್ಲ. ಭಕ್ತಿಮಾರ್ಗದಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ವಿಜ್ಞಾನಿಗಳು ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾರೆ, ಒಳ್ಳೊಳ್ಳೆಯ ವಸ್ತುಗಳನ್ನು ಕಂಡು ಹಿಡಿಯುತ್ತಾ ಇರುತ್ತಾರೆ, ವಿನಾಶಕ್ಕಾಗಿಯೇ ತಯಾರಿಸುತ್ತಾರೆ. ಮೊದಲು ಈ ವಿದ್ಯುತ್ ಇರಲಿಲ್ಲ, ಮಣ್ಣಿನ ದೀಪಗಳನ್ನು ಇಡುತ್ತಿದ್ದರು. |
ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಸ್ವಲ್ಪದರಲ್ಲಿಯೇ ಖುಷಿಯಾಗಿ ಬಿಡಬೇಡಿ, ಚೆನ್ನಾಗಿ ಧಾರಣೆ ಮಾಡಿಕೊಂಡು ಸಾಗರವನ್ನೇ ಗ್ರಹಿಸಿರಿ. ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಯೋ ಅವರು ಒಳ್ಳೆಯ ಪದವಿ ಪಡೆಯುತ್ತಾರೆ. ಇಡೀ ದಿನ ಖುಷಿಯ ನಶೆಯೇರಿರಬೇಕು. ಇದಂತೂ ಛೀ ಛೀ ಪ್ರಪಂಚವಾಗಿದೆ, ಈಗ ಇಲ್ಲಿಂದ ಹೋಗುತ್ತೀರಿ. ಹಳೆಯ ಪ್ರಪಂಚವು ಸಮಾಪ್ತಿಯಾಗಲೇಬೇಕು ಅದಕ್ಕಾಗಿ ತಯಾರಿಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಿದೆ, ಅದರಲ್ಲಿಯೂ ಎಷ್ಟೊಂದು ಸರ್ವೀಸ್ ಮಾಡಬೇಕಾಗಿದೆ. ಇಡೀ ಭಾರತದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲಿ ಎಲ್ಲಾ ಕಡೆಯೂ ಸುತ್ತಬೇಕಾಗಿದೆ. ಪತ್ರಿಕೆಗಳ ಮುಖಾಂತರ ವಿದೇಶದ ಮೂಲೆ-ಮೂಲೆಯವರೆಗೂ ಇದು ಅರ್ಥವಾಗಲಿ, ಈ ಏಣಿಯ ಚಿತ್ರದಿಂದ ಕೂಡಲೇ ಅರ್ಥ ಮಾಡಿಕೊಳ್ಳುವರು. ತಂದೆಯು ಬರುವುದೇ ಮಕ್ಕಳನ್ನು ಪುನಃ ಸ್ವರ್ಗವಾಸಿಗಳನ್ನಾಗಿ ಮಾಡಲು. ಅವಶ್ಯವಾಗಿ ಲಕ್ಷ್ಮೀ-ನಾರಾಯಣರು ಭಾರತದಲ್ಲಿಯೇ ರಾಜ್ಯ ಮಾಡಿ ಹೋಗಿದ್ದಾರೆ. ಭಾರತವು ಪ್ರಾಚೀನ ದೇಶವಾಗಿದೆ ಎಂದು ಬಹಳ ಮಹಿಮೆ ಮಾಡುತ್ತಾರೆ. ಭಾರತವು ಹೇಗಿತ್ತು, ಭಾರತದಲ್ಲಿ ಇಂತಹ ಪವಿತ್ರ ದೇವಿಯರಿದ್ದರು ಎಂದು ಬಹಳ ಮಹಿಮೆ ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ತಂದೆಯಿಂದ ನಾವು 21 ಜನ್ಮಗಳ ಪ್ರಾಲಬ್ಧವನ್ನು ಪಡೆಯುತ್ತೇವೆ. ತಂದೆಯು ಬಹಳ ಸಹಜವಾಗಿ ಓದಿಸುತ್ತಾರೆ. ಅಲ್ಲಿ ದ್ರೌಪದಿಯ ಕಾಲನ್ನು ಒತ್ತಿದರು ಎಂದು ತೋರಿಸುತ್ತಾರೆ. ಅದೇನೂ ಇಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಭಕ್ತಿ ಮಾರ್ಗದಲ್ಲಿ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದೀರಿ, ನಾನೀಗ ನಿಮ್ಮ ದಣಿವನ್ನು ದೂರ ಮಾಡುತ್ತೇನೆ. ನೀವು ಮೋಸ ಹೋಗುತ್ತಾ ಪತಿತರಾಗಿ ಬಿಟ್ಟಿದ್ದೀರಿ. ನಾನು ನಿಮ್ಮ ದಣಿವನ್ನು ದೂರ ಮಾಡುತ್ತಿದ್ದೇನೆ, ಮತ್ತೆಂದೂ ನೀವು ದುಃಖವನ್ನು ನೋಡುವುದಿಲ್ಲ. ಸ್ವಲ್ಪವೂ ದುಃಖದ ಹೆಸರಿರುವುದಿಲ್ಲ ಬಾಕಿ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಒಳ್ಳೆಯ ಪದವಿಯನ್ನು ಪಡೆದರೆ ಇವರು ಹಿಂದಿನ ಜನ್ಮದಲ್ಲಿ ಒಳ್ಳೆಯ ಕರ್ಮ ಮಾಡಿದ್ದಾರೆಂದು ಹೇಳುತ್ತಾರಲ್ಲವೇ! ಗಾಯನವಂತೂ ಆಗುತ್ತದೆಯಲ್ಲವೇ. ಆದರೆ ಇವರು ಯಾವಾಗ ಪುರುಷಾರ್ಥ ಮಾಡಿ ಈ ಪದವಿಯನ್ನು ಪಡೆದರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಈಗ ತಂದೆಯು ನಿಮಗೆ ಇಂತಹ ಕರ್ಮವನ್ನು ಕಲಿಸುತ್ತಾರೆ, ಒಳ್ಳೆಯ ಕರ್ಮ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಿರಿ ಎಂದು ನಿಮಗೂ ಹೇಳುತ್ತಾರೆ. ಇಲ್ಲಿ ಮನುಷ್ಯರ ಕರ್ಮವು ವಿಕರ್ಮವಾಗುತ್ತದೆ. ಅಲ್ಲಂತೂ ಸ್ವರ್ಗವಿರುತ್ತದೆ, ಆದ್ದರಿಂದ ಕರ್ಮವು ಅಕರ್ಮವಾಗುತ್ತದೆ. ಅಲ್ಲಿ ಈ ಜ್ಞಾನವಿರುವುದಿಲ್ಲ, ತಂದೆಯು ತಿಳಿಸುತ್ತಾರೆ - ನಾನು ಕರ್ಮಗಳ ಗುಹ್ಯಗತಿಯನ್ನು ಅರಿತುಕೊಂಡಿದ್ದೇನೆ, ಈ ಸಮಯದಲ್ಲಿ ಯಾರು ಒಳ್ಳೆಯ ಕರ್ಮ ಮಾಡುವರೋ ಅವರು ಒಳ್ಳೆಯ ಫಲವನ್ನು ಪಡೆಯುತ್ತಾರೆ. ಇದು ಕರ್ಮ ಕ್ಷೇತ್ರವಾಗಿದೆ. ಕೆಲವರು ಬಹಳ ಒಳ್ಳೆಯ ಕರ್ಮ ಮಾಡುತ್ತಾರೆ, ಕೆಲವರಿಗೆ ಸೇವೆಯದೇ ಚಿಂತನೆಯಿರುತ್ತದೆ. ಬಾಬಾ, ನನ್ನಲ್ಲಿ ಯಾವುದೇ ಕೊರತೆಯಿದೆಯೇ ಎಂದು ಕೇಳುತ್ತಾರೆ. ಸೇವೆಯನ್ನಂತೂ ಎಷ್ಟು ಮಾಡಲು ಸಾಧ್ಯವಿದೆಯೋ ಅಷ್ಟೂ ಮಾಡಿರಿ, ಸೇವೆಯು ವೃದ್ಧಿಯಾಗುತ್ತಾ ಇರುವುದು. ಸೇವೆ ಮಾಡುವವರು ತಯಾರಾಗುತ್ತಾ ಹೋಗುತ್ತಾರೆ. ಮನಸ್ಸಿನಲ್ಲಿ ಇದೇ ಧೈರ್ಯವಿದೆ - ಇನ್ನು ಕೆಲವೇ ದಿನಗಳಿದೆ. ಈಗ ಇಂತಹ ಪುರುಷಾರ್ಥ ಮಾಡಬೇಕು, ಇದರಿಂದ ಅಲ್ಲಿಯೂ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ತಂದೆಯು ಈ ಜ್ಞಾನದ ಹುಲ್ಲನ್ನು ತಿನ್ನಿಸುತ್ತಾರೆ. ತಿಳಿಸುತ್ತಾರೆ, ಇದನ್ನು ಮೆಲುಕು ಹಾಕುತ್ತಾ ಇರಿ ಆಗ ಧಾರಣೆಯು ಪಕ್ಕಾ ಆಗಿರುವುದು ಮತ್ತು ಖುಷಿಯ ನಶೆಯೇರುವುದು. ಬಹಳ ಸರ್ವೀಸ್ ಮಾಡಬೇಕಾಗಿದೆ, ಅನೇಕರಿಗೆ ಸಂದೇಶ ಕೊಡಬೇಕಾಗಿದೆ. ನೀವು ಪೈಗಂಬರನ ಮಕ್ಕಳು ಪೈಗಂಬರರಾಗಿದ್ದೀರಿ. ಒಂದು ದಿನ ದೊಡ್ಡ ಪತ್ರಿಕೆಗಳಲ್ಲಿಯೂ ನಿಮ್ಮ ಚಿತ್ರಗಳು ಬರುತ್ತವೆ, ವಿದೇಶದವರೆಗೂ ಪತ್ರಿಕೆಗಳು ಹೋಗುತ್ತವೆಯಲ್ಲವೇ. ಇದು ಪರಮಾತ್ಮನ ಜ್ಞಾನ ಎಂದು ಚಿತ್ರಗಳಿಂದ ತಿಳಿದುಕೊಳ್ಳುತ್ತಾರೆ ಬಾಕಿ ನೆನಪಿನದೇ ಪರಿಶ್ರಮವಿದೆ. ಅದನ್ನು ಭಾರತವಾಸಿಗಳೇ ಪರಿಶ್ರಮ ಪಡುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
2. ಯಾವುದೇ ಆಸುರೀ ಸ್ವಭಾವವಿದೆಯೆಂದರೆ ಅದನ್ನು ಬಿಡಬೇಕಾಗಿದೆ. ತಂದೆಯು ಯಾವ ಜ್ಞಾನದ ಹುಲ್ಲನ್ನು(ಮುರುಳಿ) ತಿನ್ನಿಸುತ್ತಾರೆ, ಅದನ್ನು ಮೆಲುಕು ಹಾಕುತ್ತಿರಬೇಕು. |
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಪ್ರತಿನಿತ್ಯವೂ ತಿಳಿಸುತ್ತಾರೆ ಆದರೂ ಸಹ ಕೆಲವು ಮಾತುಗಳು ಮರೆತು ಹೋಗುತ್ತವೆ. ಮಕ್ಕಳು ಇದನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ - ಇದು ಸಂಗಮಯುಗವಾಗಿದೆ, ನಾವು ಸಂಗಮಯುಗದಲ್ಲಿದ್ದೇವೆ. ತಂದೆಯು ಸಂಗಮದಲ್ಲಿಯೇ ಬರುತ್ತಾರೆ, ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಸಂಗಮವೆಂದು ಗಾಯನವಿದೆ, ಕರೆಯುವುದು ಈ ಸಮಯದಲ್ಲಿಯೇ. ಕಲಿಯುಗದ ಅಂತ್ಯಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ ಆದ್ದರಿಂದ ಮತ್ತ್ಯಾವುದೇ ಸಮಯದಲ್ಲಿ ಕರೆಯುವುದಿಲ್ಲ, ತಂದೆಯು ಬರುವುದೂ ಇಲ್ಲ. ಯಾವಾಗ ಕಲಿಯುಗದ ಅಂತ್ಯವಾಗುವುದೋ ಆಗಲೇ ಬಾಬಾ, ನಾವು ಪತಿತರನ್ನು ಪಾವನ ಮಾಡಲು ಬನ್ನಿ, ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯಲ್ಲಿ ಬನ್ನಿ ಎಂದು ನನ್ನನ್ನು ಕರೆಯುತ್ತಾರೆ ಆದರೆ ಕಲ್ಪದ ಆಯಸ್ಸು ಎಷ್ಟು ಎಂಬುದು ಅವರಿಗೆ ತಿಳಿದಿಲ್ಲ. ಭಕ್ತಿ ಮಾಡುತ್ತಾ ಮಾಡುತ್ತಾ ತಿರುಗಾಡುತ್ತಾ-ತಿರುಗಾಡುತ್ತಾ ಕೊನೆಗೂ ಭಗವಂತ ಅವಶ್ಯವಾಗಿ ಸಿಗುವರು ಎಂದು ತಿಳಿದುಕೊಳ್ಳುತ್ತಾರೆ. ಯಾವಾಗ ಕಲ್ಪದ ಅಂತ್ಯವಾಗುವುದು ಎಂಬುದನ್ನು ತಿಳಿದುಕೊಂಡಿಲ್ಲ. ಕಲಿಯುಗದ ಅಂತ್ಯವು ಬಂದಾಗಲೇ ಎಲ್ಲರೂ ನೆನಪು ಮಾಡುತ್ತಾರೆ, ಸತ್ಯ-ತ್ರೇತಾಯುಗದಲ್ಲಿ ಅಪಾರ ಸುಖವಿರುತ್ತದೆ. ದ್ವಾಪರದಲ್ಲಿಯೂ ಇಷ್ಟು ದುಃಖವಿರುವುದಿಲ್ಲ, ಕಲಿಯುಗದಲ್ಲಿ ಮನುಷ್ಯರು ಯಾವಾಗ ದುಃಖಿಯಾಗುವರೋ ಆಗ ತಂದೆಯನ್ನು ಕರೆಯಲು ಆರಂಭಿಸುತ್ತಾರೆ. ತಮೋಪ್ರಧಾನರೆಂದರೆ ದುಃಖಿಗಳು ಆದ್ದರಿಂದಲೇ ಕರೆಯುತ್ತಾರಲ್ಲವೇ - ಹೇ ದುಃಖಹರ್ತ-ಸುಖಕರ್ತ ಬನ್ನಿರಿ ಎಂದು. ದುಃಖದ ಬಂಧನವು ಬಹಳಷ್ಟಿದೆ, ದುಃಖದ ಸಮಯದಲ್ಲಿ ಬಂದು ನಮ್ಮನ್ನು ಬಿಡಿಸಿ ಎಂದು ಭಗವಂತನನ್ನು ಕರೆಯುತ್ತಾರೆ. ಯಾವುದೇ ಮಾರ್ಗ ಸಿಗಲಿಲ್ಲವೆಂದರೆ ಬಹಳ ಜೋರಾಗಿ ಕರೆಯುತ್ತಾರೆ ಆದರೂ ಪಡೆಯುವುದಿಲ್ಲ. ಹೇಗೆ ಚಕ್ರವ್ಯೂಹವಿರುತ್ತದೆಯಲ್ಲವೇ, ಎಲ್ಲಿಂದ ಹೋದರೂ ಮಾರ್ಗ ಸಿಗುವುದಿಲ್ಲ. ಯಾವಾಗ ಸುಸ್ತಾಗಿ ಬಿಡುವರೋ ಆಗ ಜೋರಾಗಿ ಚೀರಾಡುತ್ತಾರೆ, ಇಲ್ಲಿಯೂ ಸಹ ಮನುಷ್ಯರು ಬಹಳ ದುಃಖಿಯಾದಾಗ ಹೇ ದುಃಖಹರ್ತ-ಸುಖಕರ್ತ ಅಂಧರಿಗೆ ಊರುಗೋಲಾದ ತಂದೆಯೇ ಎಂದು ಕೂಗುತ್ತಾರೆ. ಈ ಸಮಯದಲ್ಲಿಯೇ ತಂದೆಗೆ ಅಂಧರಿಗೆ ಊರುಗೋಲು ಎಂದು ಕರೆಯುತ್ತಾರೆ. |
ನೀವೀಗ ಸಂಗಮದಲ್ಲಿದ್ದೀರಿ, ಒಂದು ಕಡೆ ಪಾಂಡವರು, ಇನ್ನೊಂದು ಕಡೆ ಕೌರವರಿದ್ದಾರೆ. ಯಾರು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೋ ಅವರಿಗೆ ಅಂಧರೆಂದು ಹೇಳಲಾಗುತ್ತದೆ. ತಂದೆಯ ಮೂಲಕ ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿರುವವರಿಗೆ ಕಣ್ಣಿರುವವರೆಂದು ಹೇಳಲಾಗುತ್ತದೆ. ನೀವು ತಿಳಿಸುತ್ತೀರಿ - ನಮಗೆ ರಾಜ್ಯಭಾಗ್ಯವು ಸಿಕ್ಕಿದೆ ಆದ್ದರಿಂದಲೇ ಚಿತ್ರಗಳನ್ನು ತೋರಿಸುತ್ತೇವೆ. ಸತ್ಯಯುಗವು ಶಿವ ತಂದೆಯು ಸ್ಥಾಪನೆ ಮಾಡಿರುವುದಾಗಿದೆ ಆದ್ದರಿಂದ ಅದಕ್ಕೆ ಶಿವಾಲಯವೆಂದು ಹೆಸರು ಬಂದಿತು ನಂತರ ವಿಕಾರಿಗಳಾದಾಗ ವಾಮಮಾರ್ಗದ ಸ್ಥಾಪನೆಯಾಗುತ್ತದೆ. ಆದ್ದರಿಂದ ಇದಕ್ಕೆ ವೇಶ್ಯಾಲಯವೆಂದು ಹೇಳಲಾಗುತ್ತದೆ. ಸತ್ಯಯುಗವು ಶಿವಾಲಯವಾಗಿರುತ್ತದೆ, ಕಲಿಯುಗವು ವೇಶ್ಯಾಲಯವಾಗಿದೆ. ನೀವು ಸಂಗಮಯುಗೀ ಬ್ರಾಹ್ಮಣರಿಗೆ ಇದು ಅರ್ಥವಾಗಿದೆ - ನಾವೀಗ ವೇಶ್ಯಾಲಯದಲ್ಲಿಯೂ ಇಲ್ಲ, ಶಿವಾಲಯದಲ್ಲಿಯೂ ಇಲ್ಲ. ನಾವು ಶಿವಾಲಯದಲ್ಲಿ ಹೋಗುತ್ತಿದ್ದೇವೆ, ಈಗ ವೇಶ್ಯಾಲಯ, ವಿಕಾರಿ ಸಂಬಂಧಗಳಿಂದ ನಮ್ಮ ಮಮತೆಯು ಹೊರಟುಹೋಗಿದೆ, ಈಗ ನಮ್ಮದು ಭವಿಷ್ಯದ ಸಂಬಂಧಗಳೊಂದಿಗೆ ಮಮತೆಯಿದೆ, ನಾವೀಗ ರಾಜಯೋಗಿಗಳಾಗಿದ್ದೇವೆ. ಅವರು ಯೋಗಿಗಳಾಗಿದ್ದಾರೆ, ಅವರೊಂದಿಗೆ ನಮಗೆ ಸಂಬಂಧವೇನಿದೆ! ಆದರೂ ಸಹ ಸಂಬಂಧವನ್ನು ನಿಭಾಯಿಸುವುದಕ್ಕಾಗಿ ತಮ್ಮ ಮನೆಯಲ್ಲಿಯೇ ಇರಬೇಕಾಗಿದೆ. ಆದರೂ ಬ್ರಾಹ್ಮಣರೊಂದಿಗೆ ಹೆಚ್ಚು ಸಂಬಂಧವಿರುತ್ತದೆ ಏಕೆಂದರೆ ಬ್ರಾಹ್ಮಣರಷ್ಟು ಶ್ರೇಷ್ಠ ಸೇವೆಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಆತ್ಮಿಕ ಸೇವೆ ಮಾಡಲು ತಂದೆಯೇ ನಿಮಿತ್ತರಾಗುತ್ತಾರೆ, ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ. ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವಾಗಿದ್ದಾರೆ, ಸತ್ಯಕ್ಕೆ ಸುಪ್ರೀಂ ಎಂದು ಹೇಳುತ್ತಾರೆ. ಅವರ ಮೂಲಕ ನಮಗೆ ಆಸ್ತಿ ಸಿಗುತ್ತಿದೆ, ಇದು ನೆನಪಿದ್ದರೆ ಪ್ರತೀ ಸಮಯ ಎಷ್ಟೊಂದು ಖುಷಿಯಿರುವುದು ಮತ್ತೆ ಅನ್ಯರಿಗೂ ತಿಳಿಸುವುದಕ್ಕಾಗಿ ಪುರುಷಾರ್ಥ ಮಾಡಲಾಗುತ್ತದೆ. ಮೊಟ್ಟ ಮೊದಲು ಅವರು ಪಾರಲೌಕಿಕ ತಂದೆಯಾಗಿದ್ದಾರೆ. ಅವರು ಸತ್ಯ ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ, ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ ಆದ್ದರಿಂದ ಅವರಿಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಮೊಟ್ಟ ಮೊದಲು ಅವರ ಮಹಿಮೆ ಮಾಡಬೇಕಾಗಿದೆ. ಅವರು ಸತ್ಯತಂದೆ, ಸತ್ಯ ಶಿಕ್ಷಕ, ಸದ್ಗುರುವಾಗಿದ್ದಾರೆ, ಸತ್ಯಧರ್ಮದ ಸ್ಥಾಪನೆ ಮಾಡುತ್ತಾರೆ. ಒಂದು ರಾಜ್ಯವಿರಲಿ ಎಂದು ಬಯಸುತ್ತಾರಲ್ಲವೇ, ಅದು ಸತ್ಯಯುಗದಲ್ಲಿಯೇ ಇರುತ್ತದೆ, ಇಲ್ಲಂತೂ ಇರಲು ಸಾಧ್ಯವಿಲ್ಲ. ಒಂದು ವಿಶ್ವವಿರಲಿ, ಏಕತೆಯಿರಲಿ ಎಂದು ಮನುಷ್ಯರು ಹೇಳುತ್ತಾರೆ. ವಿಶ್ವವಂತೂ ಒಂದೇ ಇರುತ್ತದೆ, ಕೇವಲ ವಿಶ್ವದಲ್ಲಿ ಒಂದು ರಾಜ್ಯವಿರಲಿ ಎಂಬುದು ಸರಿಯಾಗಿದೆ, ದೇವತೆಗಳ ರಾಜ್ಯವಿತ್ತು ಅಲ್ಲಿ ಮತ್ತ್ಯಾವುದೇ ಏರುಪೇರಿನ ಮಾತೇ ಇರಲಿಲ್ಲ. ಬೇಹದ್ದಿನ ತಂದೆಯು ಬಂದು ರಾಜಧಾನಿಯ ಸ್ಥಾಪನೆ ಮಾಡುತ್ತಾರೆ, ಇದನ್ನೂ ನೀವು ಈಗ ತಿಳಿದುಕೊಂಡಿದ್ದೀರಿ. ತಂದೆಯೇ ರಾಜಯೋಗವನ್ನು ಕಲಿಸುತ್ತಾರೆ, ಶ್ರೀಕೃಷ್ಣನಲ್ಲ, ಅವರು ಕೃಷ್ಣನೆಂದು ತಿಳಿದುಕೊಂಡಿದ್ದಾರೆ. ಯಾವಾಗ ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆಯೋ ಆಗಲೇ ರಾಜಯೋಗವನ್ನು ಕಲಿಸಿದರು ಬಾಕಿ ಶಾಸ್ತ್ರಗಳಲ್ಲಿ ಕೇವಲ ಮಹಿಮೆಯಿದೆ. ಮಹಿಮೆ ಮಾಡುವುದರಿಂದ ರಾಜಯೋಗವನ್ನು ಕಲಿತಂತಾಯಿತೇ! ಅವರು ಯಾವ ಗೀತೆ ಇತ್ಯಾದಿಗಳನ್ನು ತಿಳಿಸುತ್ತಾರೆಯೋ ಅವರು ರಾಜಯೋಗವನ್ನು ಕಲಿಸುತ್ತಾರೆಯೇ? ಗೀತೆಯನ್ನು ತಿಳಿಸುತ್ತಾರೆ, ಅದು ಕೇವಲ ಯಾರು ಬಿದ್ದು ಹೋಗಿದ್ದಾರೆಯೋ ಅವರ ಮಹಿಮೆ ಮಾಡುತ್ತಾರೆ. ಭಗವಂತನು ಯಾರಿಗೆ ತಿಳಿಸಿದರೋ ಅವರೇ ರಾಜ್ಯ ಪದವಿಯನ್ನು ಪಡೆದರು. ಬಾಕಿ ಈ ಹಬ್ಬಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಮುಖ್ಯವಾದುದು ಸಂಗಮಯುಗದ ಮಾತಾಗಿದೆ. ಶಿವ ತಂದೆಯು ಬರುತ್ತಾರೆ, ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುತ್ತದೆ. ಶಿವ ತಂದೆಯು ಬಂದ ನಂತರ ಅವಶ್ಯವಾಗಿ ಹೊಸ ಪ್ರಪಂಚವು ಸ್ಥಾಪನೆಯಾಗುವುದು. ಕೃಷ್ಣನಂತೂ ಸತ್ಯಯುಗದ ಮಾಲೀಕನಾಗಿದ್ದಾನೆ, ಶಿವ ತಂದೆಯು ಬಂದು ಕೃಷ್ಣನನ್ನು ಈ ರೀತಿ ಮಾಡಿದರು. ಕೇವಲ ಒಬ್ಬ ಕೃಷ್ಣನಿಗೇ ಜ್ಞಾನವನ್ನು ಕೊಟ್ಟಿರುವರೇ? ಕೃಷ್ಣಪುರಿಯನ್ನೂ ಸ್ಥಾಪನೆ ಮಾಡಿರುವರು. ಆತ್ಮವನ್ನೇ ತಮೋಪ್ರಧಾನದಿಂದ ಸತೋಪ್ರಧಾನವನ್ನಾಗಿ ಮಾಡಿಕೊಳ್ಳಲು ಯೋಗವನ್ನು ಕಲಿಸಿದ್ದಾರೆ. ನೀವೇ ಮತ್ತೆ ಸತೋ, ರಜೋ, ತಮೋದಲ್ಲಿ ಬರುತ್ತೀರಲ್ಲವೇ. ನೀವು ಸತ್ಯಯುಗದಲ್ಲಿಯೇ ಕುಳಿತುಬಿಡಬೇಕು ಎಂದಲ್ಲ, 84 ಜನ್ಮಗಳ ಲೆಕ್ಕವೂ ಇದೆ. ಸತ್ಯಯುಗದ ನಂತರ ತ್ರೇತಾ, ದ್ವಾಪರ.... ಅವಶ್ಯವಾಗಿ ಬರಲೇಬೇಕಾಗಿದೆ. ದಿನದ ನಂತರ ರಾತ್ರಿಯಾಗಲೇಬೇಕಾಗಿದೆ. ಸತ್ಯಯುಗದ ಸ್ಥಾಪನೆಯನ್ನು ಯಾರು ಮಾಡುತ್ತಾರೆ, ಹೇಗೆ ಮಾಡುತ್ತಾರೆ? ಏಕೆಂದರೆ ಸತ್ಯಯುಗವು ಹೊಸ ಪ್ರಪಂಚವಾಗಿದೆ. ನಾನು ಹಳೆಯ ಪ್ರಪಂಚವನ್ನು ಪರಿವರ್ತಿಸುತ್ತೇನೆಂದು ತಂದೆಯು ಹೇಳುತ್ತಾರೆ. ಇದು ಮಹಾಭಾರತದ ಅದೇ ಅಣ್ವಸ್ತ್ರಗಳ ಯುದ್ಧವಾಗಿದೆ. ಅಲ್ಲಿ ಪಾಂಡವರೂ ಇದ್ದರು, ಪಾಂಡವರ ಜಯವಾಯಿತು, ಸ್ವರಾಜ್ಯವು ಸಿಕ್ಕಿತೆಂದು ಹೇಳುತ್ತಾರೆ. ಅಂದಾಗ ಸ್ವರಾಜ್ಯದಲ್ಲಿ ಬರುತ್ತೀರಲ್ಲವೇ. ಭಲೆ ಎಲ್ಲಿಯಾದರೂ ಶರೀರ ಬಿಡಲಿ, ರಾಜ್ಯದಲ್ಲಂತೂ ಬರಬೇಕಾಗಿದೆ. ಕಾಯಿದೆಯು ಹೇಳುತ್ತದೆ - ಹಿಮಾಲಯ ಪರ್ವತಗಳಲ್ಲಿ ಯಾರೂ ಶರೀರ ಬಿಡುವುದಿಲ್ಲ. ಯೋಗವನ್ನು ಇಲ್ಲಿಯೇ ಕಲಿಯುತ್ತಾರೆ, ಯೋಗಬಲದಿಂದಲೇ ಶರೀರ ಬಿಡಬೇಕಾಗಿದೆ. ಪರ್ವತಗಳಲ್ಲಿ ಹಿಮಗಡ್ಡೆಗಳಲ್ಲಿ ಶರೀರ ಬಿಡಲು ಅವರಿಗೇನಾಗಿದೆ? ಇದೆಲ್ಲವೂ ವಾಸ್ತವಿಕತೆಯಲ್ಲ, ಹೇಗೆ ಸರ್ಪವು ಹಳೆಯ ಪೋರೆಯನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತದೆ ಹಾಗೆಯೇ ಆತ್ಮವೂ ಸಹ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಶಾಂತಿಧಾಮದಲ್ಲಿ ಹೋಗಿ ನಂತರ ಸತ್ಯಯುಗದಲ್ಲಿ ಬರುತ್ತೀರಿ. ತಂದೆಯು ತಿಳಿಸುತ್ತಾರೆ- ಸತ್ಯಯುಗದಲ್ಲಿ ಶರೀರ ಬಿಟ್ಟರೆ ತಮ್ಮ ಸಮಯದಲ್ಲಿ ಯಾವಾಗ ಶರೀರವು ಹಳೆಯದಾಗುತ್ತದೆಯೋ ಆಗ ತಾವಾಗಿಯೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಅಲ್ಲಂತೂ ಹಿಂತಿರುಗಿ ಶಾಂತಿಧಾಮಕ್ಕೆ ಹೋಗುವುದಿಲ್ಲ. ಶಾಂತಿಧಾಮಕ್ಕೆ ಈಗಲೇ ಹೋಗಬೇಕಾಗಿದೆ. ಈಗ ಆ ಅಭ್ಯಾಸವನ್ನು ಮಾಡಲಾಗುತ್ತದೆ, ಆ ನಿಮ್ಮ ಅಭ್ಯಾಸವು ಅವಿನಾಶಿಯಾಗಿ ಬಿಡುತ್ತದೆ. ಇಲ್ಲಂತೂ ಏಕೆ ಅಭ್ಯಾಸ ಮಾಡಿಸುತ್ತಾರೆಂದರೆ ಈ ಹಳೆಯ ಪ್ರಪಂಚವನ್ನೇ ಬಿಡಬೇಕಾಗಿದೆ, ಅಲ್ಲಂತೂ ಹೊಸ ಪ್ರಪಂಚವಿರುತ್ತದೆ. ಸ್ವರ್ಗವಾಸಿಗಳು ಶರೀರ ಬಿಟ್ಟರೆ ಸ್ವರ್ಗದಲ್ಲಿಯೇ ಬರುತ್ತಾರೆ. ನರಕವಾಸಿಗಳು ಶರೀರ ಬಿಟ್ಟರೆ ನರಕದಲ್ಲಿಯೇ ಇರುತ್ತಾರೆ, ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ರಾಜ-ಮಹಾರಾಜ ಎಂಬ ಬಿರುದು ಇಲ್ಲಿಯೂ ಸಿಗುತ್ತದೆ. ಭಲೆ ಇನ್ನೊಂದು ಪದವಿ ಸಿಗುತ್ತದೆ ಆದರೂ ಸಹ ಹೆಸರು ಅದೇ ನಡೆದು ಬರುತ್ತದೆ, ಮರೆಯುವುದಿಲ್ಲ. ಕೆಲಕೆಲವರ ಬಿರುದನ್ನು ಖಾಯಂ ಮಾಡಿ ಬಿಡುತ್ತಾರೆ. ಅದನ್ನು ಹಣ ಕೊಟ್ಟು ಬಿರುದನ್ನು ತೆಗೆದುಕೊಳ್ಳುತ್ತಾರೆ. ಹಿಂದೆ ಒಂದೆರಡು ಲಕ್ಷಗಳನ್ನು ಕೊಟ್ಟರೆ ಬಿರುದು ಸಿಗುತ್ತಿತ್ತು. ಈ ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ ಅವರಿಗೆ ಆತ್ಮಿಕ ತಂದೆಯೆಂದು ಹೇಳಲಾಗುತ್ತದೆ. ಅವರನ್ನೇ ಹೇ ತಂದೆಯೇ ಬಂದು ನಮ್ಮನ್ನು ಪತಿತರಿಂದ ಪಾವನ ಮಾಡಿರಿ, ಇಲ್ಲಿ ಬಹಳ ದುಃಖವಿದೆ, ನಮ್ಮನ್ನು ರಾಮ ರಾಜ್ಯದಲ್ಲಿ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಡ್ರಾಮಾನುಸಾರ 5000 ವರ್ಷಗಳ ಮೊದಲೂ ಸಹ ಇದೇ ರೀತಿ ಹೇಳಿದ್ದರು. ಪರಮಪಿತ ಪರಮಾತ್ಮನು ಬರಲೇಬೇಕಾಗಿದೆ, ಈ ಚಕ್ರವು ಸುತ್ತುತ್ತಿರುತ್ತದೆ. ನಾನು ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆಂದು ತಂದೆಯು ಹೇಳುತ್ತಾರೆ. ಈ ಅಕ್ಷರವನ್ನು ಅವಶ್ಯವಾಗಿ ಹಾಕಬೇಕಾಗಿದೆ, ನಾನು ಡ್ರಾಮಾ ಪ್ಲಾನನುಸಾರ ಬರುತ್ತೇನೆ, ಈ ಡ್ರಾಮಾ ಶಬ್ಧವನ್ನು ಬರೆಯಬೇಕಾಗಿದೆ, ಇದರಿಂದ ಮನುಷ್ಯರಿಗೆ ಅರ್ಥವಾಗಲಿ - ಇದು 5000 ವರ್ಷಗಳ ನಾಟಕವಾಗಿದೆ ಎಂದು. |
ಈಗ ಎಲ್ಲಾ ಮನುಷ್ಯ ಮಾತ್ರರು ಪತಿತರಾಗಿದ್ದಾರೆ ಆದ್ದರಿಂದ ನಾವು ಪಾಪಿಯಾಗಿದ್ದೇವೆ, ನೀಚರಾಗಿದ್ದೇವೆ ಎಂದು ಸ್ವಯಂ ಹೇಳುತ್ತಾರೆ. ಅವಶ್ಯವಾಗಿ ವೇಶ್ಯಾಲಯವೂ ಆಗಿದೆ, ವಿಷಯಸಾಗರ ಆಗಿದೆಯಲ್ಲವೇ. ವಿಷ್ಣುಪುರಿಯು ಕ್ಷೀರಸಾಗರವಾಗಿತ್ತು ಅಲ್ಲಿ ಲಕ್ಷ್ಮೀ-ನಾರಾಯಣ ಇಬ್ಬರೂ ಇದ್ದರು, ಕ್ಷೀರಸಾಗರವೆಂದು ಹೋಲಿಕೆಯಲ್ಲಿ ಹೇಳಲಾಗುತ್ತದೆ. ಬಾಕಿ ಸ್ಥೂಲವಾಗಿ ಯಾವುದೇ ಕ್ಷೀರಸಾಗರ ಇರುವುದಿಲ್ಲ. ಸಾಗರವು ಸತ್ಯಯುಗದಲ್ಲಿಯೂ ಇದೇ ಇರುತ್ತದೆ, ಕಲಿಯುಗದಲ್ಲಿಯೂ ಇದೆ. ಸತ್ಯಯುಗದಲ್ಲಿ ಇಡೀ ಸಾಗರಕ್ಕೆ ನೀವು ಮಾಲೀಕರಾಗಿರುತ್ತೀರಿ, ಆಕಾಶ ಭೂಮಿ ಎಲ್ಲದಕ್ಕೂ ನೀವು ಮಾಲೀಕರಾಗಿದ್ದೀರಿ. ಈಗಂತೂ ತುಂಡು-ತುಂಡಾಗಿ ಬಿಟ್ಟಿದೆ. ಈಗ ಇದು ಸಂಗಮಯುಗವಾಗಿದೆ. ಸಂಗಮಯುಗವು ನೆನಪಿಗೆ ಬಂದಾಗಲೇ ಈಗ ಸತ್ಯಯುಗದಲ್ಲಿ ಹೋಗುತ್ತೇವೆ ಎಂಬುದು ಅರ್ಥವಾಗುತ್ತದೆ. ಸಂಗಮವಾಗಿದೆಯೆಂದ ಮೇಲೆ ತಂದೆಯು ಅವಶ್ಯವಾಗಿ ಇರುವರು, ಅವರು ಈ ಪ್ರಪಂಚವನ್ನು ಬದಲಾಯಿಸುವವರಾಗಿದ್ದಾರೆ. ಸ್ಥಾಪನೆಯಂತೂ ಬ್ರಹ್ಮಾರವರ ಮೂಲಕ ಇಲ್ಲಿಯೇ ಆಗುತ್ತದೆ, ನೀವೀಗ ಚಿತ್ರವನ್ನು ಮಾಡಿಸುತ್ತೀರಿ. ತಂದೆಯು ಶಕ್ತಿ ಮತ್ತು ಬೆಳಕಿನ ಬಿಂದುವಾಗಿದ್ದಾರೆ. ನೀವಾತ್ಮರೂ ಬಿಂದುವಾಗಿದ್ದೀರಿ. ಈಗ ನಿಮಗೆ ಪ್ರಕಾಶತೆಯನ್ನು ಎಲ್ಲಿ ತೋರಿಸುವುದು! ಆದ್ದರಿಂದ ನಿಮ್ಮ ತಲೆಯಲ್ಲಿ ಬಿಂದುವನ್ನು ತೋರಿಸಿದ್ದಾರೆ. ಆತ್ಮಕ್ಕೆ ಪ್ರಕಾಶವನ್ನು ಹೇಗೆ ತೋರಿಸುವುದು! ಲೈಟ್ನ್ನು ತೋರಿಸಿದರೆ ಅದು ದೊಡ್ಡದಾಗಿ ಬಿಡುತ್ತದೆ, ಅವರು ದೊಡ್ಡ ಲೈಟನ್ನೇ ಪೂಜಿಸುತ್ತಾರೆ ಆದರೆ ಮನುಷ್ಯರು ಪರಮಾತ್ಮನನ್ನೇ ಜ್ಯೋತಿ ಸ್ವರೂಪನೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ಪ್ರಕಾಶತೆಯು ಪವಿತ್ರತೆಯ ಚಿಹ್ನೆಯಾಗಿದೆ. ಜ್ಯೋತಿ ಸ್ವರೂಪವೆಂದು ಮನುಷ್ಯರು ತಿಳಿಯುತ್ತಾರೆ, ಒಂದುವೇಳೆ ಬಿಂದುವಿಗೆ ಆ ಪ್ರಕಾಶವನ್ನು ಚಿಕ್ಕದಾಗಿ ಕೊಟ್ಟರೆ ಪೂಜೆ ಮಾಡಲು ಆಗುವುದಿಲ್ಲ ಆದ್ದರಿಂದ ದೊಡ್ಡ ಗಾತ್ರದಲ್ಲಿ ಮಾಡಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಪರಮ ಆತ್ಮನಾಗಿದ್ದೇನೆ, ನನ್ನನ್ನು ನೀವು ಪರಮಾತ್ಮನೆಂದು ಹೇಳುತ್ತೀರಿ ಆದರೆ ಚಿಕ್ಕ ಬಿಂದುವಿಗೆ ಹೇಗೆ ಪೂಜೆ ಮಾಡುವುದು! ಹೇಗೆ ಪ್ರಭಾವಳಿಯನ್ನು ತೋರಿಸುವುದು? ಕೆಲವರು ಲಿಂಗ ಪೂಜೆಯನ್ನು ಮಾಡುತ್ತಾರೆ, ಸಾಹುಕಾರರಾಗಿದ್ದರೆ ವಜ್ರದಿಂದ ಲಿಂಗಾಕಾರವಾಗಿ ಮಾಡಿಸಿ ಅದರ ಪೂಜೆ ಮಾಡುತ್ತಾರೆ, ಹೆಸರನ್ನಂತೂ ಶಿವಲಿಂಗವೆಂದೇ ಇಡುತ್ತಾರೆ. ತಂದೆಯು ಬಿಂದುವಲ್ಲವೇ ಮತ್ತೇನೂ ಅಲ್ಲ. ಇವು ತಿಳಿದುಕೊಳ್ಳುವ ಗುಹ್ಯ ಮಾತುಗಳಾಗಿವೆ. ಆತ್ಮವು ಚಿಕ್ಕದು, ದೊಡ್ಡದಾಗಿರುವುದಿಲ್ಲ. ಇಲ್ಲದಿದ್ದರೆ ಅದು ಕುಳಿತುಕೊಳ್ಳುವುದು ಹೇಗೆ? ನೀವೀಗ ಹೇಗೆ ತಮ್ಮ ಆತ್ಮವನ್ನು ತಿಳಿದುಕೊಂಡಿದ್ದೀರೋ ಹಾಗೆಯೇ ತಂದೆಯನ್ನೂ ತಿಳಿದುಕೊಂಡಿದ್ದೀರಿ, ಆತ್ಮವು ತಂದೆಯನ್ನೇ ಕರೆಯುತ್ತದೆ ಅಂದಾಗ ನೋಡಿದ್ದೀರಾ? ಪರಮಾತ್ಮನನ್ನು ಹೇಗೆ ನೋಡುತ್ತೀರಿ? ಹಾ! ದಿವ್ಯದೃಷ್ಟಿಯಿಂದ ನೋಡಬಹುದಾಗಿದೆ, ಅದರಲ್ಲಿಯೂ ನೀವೀಗ ಯಥಾರ್ಥವಾಗಿ ಅರಿತುಕೊಂಡಿದ್ದೀರಿ ಅಂದಮೇಲೆ ನೋಡುವುದರಿಂದ ಏನು ಲಾಭ! ಇಲ್ಲಂತೂ ವಿದ್ಯೆಯನ್ನು ಓದಬೇಕಾಗಿದೆ, ಇದರಿಂದ ಮನುಷ್ಯರು ದೇವತೆಯಾಗುತ್ತಾರೆ. ಇದು ಭವಿಷ್ಯ ಹೊಸ ಪ್ರಪಂಚಕ್ಕಾಗಿ ವಿದ್ಯೆಯಾಗಿದೆ. ಈ ಲಕ್ಷ್ಮೀ-ನಾರಾಯಣರು ಇಂತಹ ಕರ್ಮವನ್ನು ಎಲ್ಲಿಂದ ಕಲಿತರು? ಸಂಗಮಯುಗದಲ್ಲಿ. ತಂದೆಯು ತಿಳಿಸುತ್ತಾರೆ - ನಾನು ಸಂಗಮದಲ್ಲಿಯೇ ಬಂದು ನಿಮಗೆ ಹೊಸ ಪ್ರಪಂಚಕ್ಕಾಗಿ ವಿದ್ಯೆಯನ್ನು ಓದಿಸುತ್ತೇನೆ. ತಂದೆಯು ಪ್ರದರ್ಶನಿಯಲ್ಲಿ ಪತ್ರವನ್ನು ಕೊಡುತ್ತಾರೆ, ಅದರಲ್ಲಿ ಇದನ್ನೂ ಬರೆಯಬೇಕಾಗಿದೆ - ಇದು ಸಂಗಮಯುಗವಾಗಿದೆ. ತಂದೆಯು ಹೇಳುತ್ತಾರೆ, ನೀವು ನನ್ನಿಂದ ಭವಿಷ್ಯ 21 ಜನ್ಮಗಳಿಗಾಗಿ ಜನ್ಮಸಿದ್ಧ ಅಧಿಕಾರವನ್ನು ತೆಗೆದುಕೊಳ್ಳಬಹುದು, ಈ ಸಂಗಮಯುಗ ಶಬ್ಧವನ್ನು ಅವಶ್ಯವಾಗಿ ಬರೆಯಬೇಕಾಗಿದೆ. ಯಾವ ಪತ್ರವು ಸರಿಯಾಗಿ ತಲುಪುತ್ತದೆಯೋ ಅದರ ಕಾಪಿಯನ್ನು ಅಲ್ಲಿ ಅಂಟಿಸಬೇಕು. ದೊಡ್ಡ ಅಕ್ಷರಗಳಲ್ಲಿ ಬರೆಯಬೇಕಾಗಿದೆ. ದಿನ-ಪ್ರತಿದಿನ ಸ್ಪಷ್ಟವಾಗುತ್ತಾ ಹೋಗುತ್ತದೆ. ಕೆಳಗೆ ಬಾಪ್ದಾದಾ ಎಂದು ಬರೆಯುತ್ತಾರೆ. ಶಿವ ತಂದೆಯು ಯಾರು ಆತ್ಮರ ತಂದೆಯಾಗಿದ್ದಾರೆಯೋ ಅವರು ಪ್ರಜಾಪಿತ ಬ್ರಹ್ಮನ ಮೂಲಕ ಕಲಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನನಗೆ ಶರೀರದ ಆಧಾರವಂತೂ ಬೇಕಲ್ಲವೆ, ಶಿವ ನಿರಾಕಾರನಾಗಿದ್ದಾರೆ. ಅವರಿಗೆ ತಮ್ಮದೇ ಆದ ಶರೀರವಿಲ್ಲ. ಬ್ರಹ್ಮಾ-ವಿಷ್ಣು-ಶಂಕರನಂತೂ ಸೂಕ್ಷ್ಮ ಆಕಾರಿಯಾಗಿದ್ದಾರೆ, ಉಳಿದೆಲ್ಲರಿಗೂ ಶರೀರವಿದೆ. ತಂದೆಯು ತಿಳಿಸುತ್ತಾರೆ- ನನಗೆ ಶರೀರವೆಲ್ಲಿದೆ? ಆದರೆ ನಾನು ನಾಮ-ರೂಪದಿಂದ ಭಿನ್ನವೆಂದಲ್ಲ, ಬಹಳ ಸ್ಪಷ್ಟವಾಗಿ ಮಕ್ಕಳಿಗೆ ತಿಳಿಸುತ್ತಾರೆ- ನಾನು ನಿರಾಕಾರನಾಗಿದ್ದೇನೆ ಆದರೆ ನಾನು ಬರುತ್ತೇನೆಂದರೆ ಅವಶ್ಯವಾಗಿ ನನಗೆ ಶರೀರ ಬೇಕು, ನಾನು ಗರ್ಭದಲ್ಲಿ ಬರುವುದಿಲ್ಲ. ನಾನೇ ಸ್ವಯಂ ತಿಳಿಸುತ್ತೇನೆ - ನಾನು ಈ ಸಾಧಾರಣ ತನುವಿನಲ್ಲಿ ಬರುತ್ತೇನೆ. ಇವರು ಮೊದಲು ಪೂಜ್ಯನಾಗಿದ್ದರು, ಈಗ ಪೂಜಾರಿಯಾಗಿದ್ದಾರೆ. ಮಾಲೆಯಲ್ಲಿ ಮೊದಲು ಶಿವ ತಂದೆ ನಂತರ ಎರಡು ಮಣಿಗಳಿವೆ, ಪ್ರವೃತ್ತಿ ಮಾರ್ಗವಿದೆಯಲ್ಲವೇ, ಈಗ ನಿಮಗೆ ತಿಳಿದಿದೆ - ಪ್ರವೃತ್ತಿ ಮಾರ್ಗದವರದೇ ಮಾಲೆಯಿದೆ, ಯಾರು ಪ್ರವೃತ್ತಿ ಮಾರ್ಗದಲ್ಲಿ ಪತಿತರಾಗಿದ್ದರು, ಈಗ ಶಿವ ತಂದೆಯ ಮತದಿಂದ ಪಾವನರಾಗಿ ಸೃಷ್ಟಿಯನ್ನು ಪಾವನ ಮಾಡಿದ್ದಾರೆ ಆದ್ದರಿಂದಲೇ ಅವರ ನೆನಪಾರ್ಥವಾಗಿ ಮಾಲೆಯು ಮಾಡಲ್ಪಟ್ಟಿದೆ. ರುದ್ರಮಾಲೆ ಮತ್ತು ವಿಷ್ಣುವಿನ ವೈಜಯಂತಿ ಮಾಲೆಯಿದೆ, ಬ್ರಾಹ್ಮಣರ ಮಾಲೆಯಾಗುವುದಿಲ್ಲ. ಬ್ರಾಹ್ಮಣರ ಮಾಲೆ ಮಾಡಲು ಪ್ರಯತ್ನ ಪಟ್ಟೆವು ಆದರೆ ಆಗಲಿಲ್ಲ. ಆದ್ದರಿಂದ ಮಾಲೆಯಾಗುವುದು, ಅವ್ಯಕ್ತ ಹೆಸರುಗಳನ್ನು ಇಡುವುದನ್ನು ಬಿಟ್ಟು ಬಿಟ್ಟೆವು. ಇಲ್ಲಿ ಯಾವ ಹೆಸರುಗಳನ್ನು ಇಡಲಾಗಿತ್ತೋ ಅವನ್ನು ಇಲ್ಲಿಯೇ ಬಿಟ್ಟು ಮತ್ತೆ ಅದೇ ತಮ್ಮ ಹಳೆಯ ಹೆಸರನ್ನು ಇಟ್ಟುಕೊಂಡು ಹೊರಟು ಹೋಗುತ್ತಾರೆ. ಅವರನ್ನು ಆ ಹೊಸ ಹೆಸರಿನಿಂದ ಯಾರೂ ಕರೆಯುವುದಿಲ್ಲ. ಅಂದಾಗ ತಂದೆಯು ನಮ್ಮ ತಂದೆ, ಶಿಕ್ಷಕ, ಗುರುವಾಗಿದ್ದಾರೆ, ಇಂತಹ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ ಆದರೆ ಮಾಯೆಯು ಹೀಗಿದೆ ಅದು ಮರೆಸಿ ಬಿಡುತ್ತದೆ ಆದ್ದರಿಂದ ಸ್ಥಿತಿಯು ಡೋಲಾಯಮಾನವಾಗುತ್ತದೆ. ಬಹಳ ಬೇಸರದ ಅನುಭವವಾಗುತ್ತದೆ. ಶಿವ ತಂದೆಯ ನೆನಪಿನಿಂದ ಮತ್ತೆ ಎದ್ದು ನಿಲ್ಲುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ವಿಕಾರೀ ಸಂಬಂಧಗಳಿಂದ ಮಮತೆಯನ್ನು ತೆಗೆಯಬೇಕು, ಭವಿಷ್ಯದ ಹೊಸ ಸಂಬಂಧಗಳೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ. |
2. ಅನ್ಯರಿಗೆ ತಿಳಿಸುವುದಕ್ಕಾಗಿ ಪ್ರತಿ ಸಮಯ ಖುಷಿಯಲ್ಲಿ ಇರಬೇಕಾಗಿದೆ. ಸತ್ಯ ತಂದೆ, ಸತ್ಯ ಶಿಕ್ಷಕ ಮತ್ತು ಸತ್ಗುರುವಿನ ಶ್ರೀಮತದಂತೆ ನಡೆದು ಅಂಧರಿಗೆ ಊರುಗೋಲಾಗಬೇಕಾಗಿದೆ. |
ಓಂ ಶಾಂತಿ. ಮಕ್ಕಳು ಗೀತೆಯ ಎರಡು ಸಾಲನ್ನು ಕೇಳಿದಿರಿ, ಅವರಂತೂ ಗೀತೆಯನ್ನೇ ಮಾಡಿ ಬಿಟ್ಟಿದ್ದಾರೆ. ಹೇಗೆ ಯಾರದೇ ನಿಶ್ಚಿತಾರ್ಥವಾಗುತ್ತದೆಯೆಂದರೆ ಇದು ಪಕ್ಕಾ ಆಗಿ ಬಿಡುತ್ತದೆ, ಸ್ತ್ರೀ-ಪುರುಷರು ಒಬ್ಬರಿನ್ನೊಬ್ಬರನ್ನು ಬಿಡುವುದೇ ಇಲ್ಲ. ಪರಸ್ಪರ ಆಗದೇ ಬಿಟ್ಟು ಬಿಡುವವರು ಕೆಲವರೇ ವಿರಳ. ಇಲ್ಲಿ ನೀವು ಮಕ್ಕಳು ಯಾರ ಜೊತೆ ಪ್ರತಿಜ್ಞೆ ಮಾಡುತ್ತೀರಿ? ಈಶ್ವರನ ಜೊತೆ. ಅವರ ಜೊತೆ ನೀವು ಮಕ್ಕಳ ಅರ್ಥಾತ್ ಪ್ರಿಯತಮೆಯರ ನಿಶ್ಚಿತಾರ್ಥವಾಗಿದೆ ಆದರೆ ಯಾರು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನೂ ಸಹ ಬಿಟ್ಟು ಬಿಡುತ್ತಾರೆ. ಇಲ್ಲಿ ನೀವು ಮಕ್ಕಳು ಕುಳಿತಿದ್ದೀರಿ, ನಿಮಗೆ ತಿಳಿದಿದೆ - ಈಗ ಬೇಹದ್ದಿನ ಬಾಪ್ದಾದಾ ಬಂದರು ಎಂದರೆ ಬಂದು ಬಿಟ್ಟರು. ಈ ಸ್ಥಿತಿಯು ಇಲ್ಲಿರುವಾಗಲೇ ನಿಮಗೆ ಇರುತ್ತದೆ, ಹೊರಗಿನ ಸೇವಾಕೇಂದ್ರಗಳಲ್ಲಿ ಇರುವುದಿಲ್ಲ. ಬಾಪ್ದಾದಾ ಬಂದರು ಎಂದರೆ ಬಂದು ಬಿಟ್ಟರು ಎಂದು ನೀವು ಇಲ್ಲಿ ತಿಳಿದುಕೊಳ್ಳುತ್ತೀರಿ. ಹೊರಗಿನ ಸೇವಾಕೇಂದ್ರಗಳಲ್ಲಿ ತಂದೆಯು ನುಡಿಸಿರುವ ಮುರುಳಿಯು ಬಂದಿತು ಎಂದು ತಿಳಿದುಕೊಳ್ಳುತ್ತಾರೆ. ಇಲ್ಲಿ ಮತ್ತು ಅಲ್ಲಿಗೆ ಬಹಳ ಅಂತರವಿರುತ್ತದೆ ಏಕೆಂದರೆ ಇಲ್ಲಿ ಬೇಹದ್ದಿನ ಬಾಪ್ದಾದಾರವರ ಸನ್ಮುಖದಲ್ಲಿ ನೀವು ಕುಳಿತಿದ್ದೀರಿ, ಅಲ್ಲಿ ನೀವು ಸನ್ಮುಖದಲ್ಲಿ ಇರುವುದಿಲ್ಲ. ಸನ್ಮುಖದಲ್ಲಿ ಹೋಗಿ ಮುರುಳಿ ಕೇಳಬೇಕೆಂದು ಬಯಸುತ್ತೀರಿ. ಇಲ್ಲಿ ಮಕ್ಕಳ ಬುದ್ಧಿಯಲ್ಲಿ ಬಂದಿತು, ತಂದೆಯು ಬಂದರು ಎಂದರೆ ಬಂದು ಬಿಟ್ಟರು. ಹೇಗೆ ಅನ್ಯಸತ್ಸಂಗಗಳಲ್ಲಿ ಇಂತಹ ಸ್ವಾಮೀಜಿಯು ಬರುವರು ಎಂದು ತಿಳಿದುಕೊಳ್ಳುತ್ತಾರೆ ಆದರೆ ಈ ವಿಚಾರವೂ ಸಹ ಎಲ್ಲರಿಗೆ ಏಕರಸವಾಗಿ ಇರುವುದಿಲ್ಲ. ಕೆಲವರಿಗೆ ಸಂಬಂಧಿಗಳು ನೆನಪಿಗೆ ಬರುವರು, ಬುದ್ಧಿಯು ಒಬ್ಬ ಗುರುವಿನ ಜೊತೆಯೂ ನಿಲ್ಲುವುದಿಲ್ಲ. ಸ್ವಾಮಿಯ ನೆನಪಿನಲ್ಲಿ ಕುಳಿತಿರುವವರು ಕೆಲವರೇ ವಿರಳ. ಇಲ್ಲಿಯೂ ಹಾಗೆಯೇ. ಎಲ್ಲರೂ ಶಿವ ತಂದೆಯ ನೆನಪಿನಲ್ಲಿ ಕುಳಿತಿರುವುದಿಲ್ಲ, ಬುದ್ಧಿಯು ಓಡುತ್ತಾ ಇರುತ್ತದೆ. ಮಿತ್ರ ಸಂಬಂಧಿಗಳು ನೆನಪಿಗೆ ಬರುತ್ತಾರೆ, ಇಡೀ ಸಮಯ ಒಬ್ಬ ಶಿವ ತಂದೆಯ ಸನ್ಮುಖದಲ್ಲಿದ್ದರೆ ಅಹೋ ಸೌಭಾಗ್ಯ! ಸ್ಥಿರವಾಗಿ ನೆನಪಿನಲ್ಲಿ ಕೆಲವರೇ ವಿರಳ ಇರುತ್ತಾರೆ. ಇಲ್ಲಿ ಶಿವ ತಂದೆಯ ಸನ್ಮುಖ ಇರುವುದರಲ್ಲಿ ಬಹಳ ಖುಷಿಯಿರಬೇಕು. ಅತೀಂದ್ರಿಯ ಸುಖವನ್ನೂ ಗೋಪಿವಲ್ಲಭನ ಗೋಪ-ಗೋಪಿಕೆಯರಿಂದ ಕೇಳಿರಿ, ಇದು ಇಲ್ಲಿನ ಗಾಯನವಾಗಿದೆ. ಇಲ್ಲಿ ನೀವು ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ, ನಾವೀಗ ಈಶ್ವರನ ಮಕ್ಕಳಾಗಿದ್ದೇವೆ ನಂತರ ದೇವತೆಗಳ ಮಡಿಲಿಗೆ ಹೋಗುತ್ತೇವೆಂದು ನಿಮಗೆ ತಿಳಿದಿದೆ. ಭಲೆ ಕೆಲವರ ಬುದ್ಧಿಯಲ್ಲಿ ಸರ್ವೀಸಿನ ವಿಚಾರಗಳು ನಡೆಯುತ್ತವೆ - ಈ ಚಿತ್ರದಲ್ಲಿ ಇದನ್ನು ತಿದ್ದುಪಡಿ ಮಾಡಬೇಕು, ಇದನ್ನು ಬರೆಯಬೇಕು ಎಂದು. ಆದರೆ ಒಳ್ಳೆಯ ಮಕ್ಕಳು ಇದನ್ನೇ ತಿಳಿದುಕೊಳ್ಳುತ್ತಾರೆ- ಈಗಂತೂ ತಂದೆಯಿಂದಲೇ ಕೇಳಬೇಕಾಗಿದೆ, ಮತ್ತ್ಯಾವುದೇ ಸಂಕಲ್ಪಗಳು ಬರಲು ಬಿಡುವುದಿಲ್ಲ. ತಂದೆಯು ಜ್ಞಾನರತ್ನಗಳಿಂದ ಜೋಳಿಗೆಯನ್ನು ತುಂಬಿಸಲು ಬಂದಿದ್ದಾರೆ ಅಂದಮೇಲೆ ತಂದೆಯೊಂದಿಗೆ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ. ನಂಬರ್ವಾರ್ ಧಾರಣೆ ಮಾಡಿಕೊಳ್ಳುವವರಂತೂ ಇದ್ದೇ ಇರುತ್ತಾರೆ. ಕೆಲವರು ಚೆನ್ನಾಗಿ ಧಾರಣೆ ಮಾಡಿಕೊಳ್ಳುತ್ತಾರೆ, ಕೆಲವರು ಕಡಿಮೆ ಧಾರಣೆ ಮಾಡುತ್ತಾರೆ. ಬುದ್ಧಿಯೋಗ ಮತ್ತೊಂದು ಕಡೆ ಓಡುತ್ತಾ ಇರುತ್ತದೆ, ಧಾರಣೆಯಾಗುವುದಿಲ್ಲ, ಕಚ್ಚಾ ಆಗಿಬಿಡುತ್ತಾರೆ. ಒಂದೆರಡು ಬಾರಿ ಮುರುಳಿಯನ್ನು ಕೇಳಿ ಧಾರಣೆಯಾಗಲಿಲ್ಲವೆಂದರೆ ಅದೇ ಹವ್ಯಾಸವು ಪಕ್ಕಾ ಆಗಿ ಬಿಡುತ್ತದೆ. ಮತ್ತೆ ಎಷ್ಟಾದರೂ ಮುರುಳಿಯನ್ನು ಕೇಳುತ್ತಾ ಇರಲಿ ಧಾರಣೆಯಾಗುವುದೇ ಇಲ್ಲ, ಯಾರಿಗೂ ತಿಳಿಸುವುದಕ್ಕೂ ಸಾಧ್ಯವಿಲ್ಲ. ಯಾರಿಗೆ ಧಾರಣೆಯಾಗಿರುವುದೋ ಅವರಿಗೆ ಸರ್ವೀಸಿನ ಉಮ್ಮಂಗವಿರುವುದು. ಅವರು ಸರ್ವೀಸಿಗಾಗಿ ಓಡುತ್ತಾ ಇರುವರು. ಹೋಗಿ ಧನ ದಾನ ಮಾಡಲೇ? ಎಂದು. ಏಕೆಂದರೆ ಈ ಧನವು ಒಬ್ಬ ತಂದೆಯ ವಿನಃ ಮತ್ತ್ಯಾರ ಬಳಿಯೂ ಇಲ್ಲ. ತಂದೆಗೆ ಇದೂ ಗೊತ್ತಿದೆ - ಎಲ್ಲರಿಗೆ ಧಾರಣೆಯಾಗಲು ಸಾಧ್ಯವಿಲ್ಲ. ಎಲ್ಲರೂ ಏಕರಸವಾಗಿ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಬುದ್ಧಿಯು ಬೇರೆ ಕಡೆ ಅಲೆಯುತ್ತಾ ಇರುತ್ತದೆ. ಭವಿಷ್ಯ ಅದೃಷ್ಟವು ಅಷ್ಟು ಶ್ರೇಷ್ಠವಾಗುವುದಿಲ್ಲ. ಇನ್ನೂ ಕೆಲವರು ಸ್ಥೂಲ ಸೇವೆಯಲ್ಲಿ ತಮ್ಮ ಮೂಳೆಗಳನ್ನು ಸವೆಸುತ್ತಾರೆ, ಎಲ್ಲರನ್ನೂ ಖುಷಿ ಪಡಿಸುತ್ತಾರೆ, ಹೇಗೆ ಭೋಜನವನ್ನು ತಯಾರಿಸುತ್ತಾರೆ, ಉಣಬಡಿಸುತ್ತಾರೆಂದರೆ ಇದೂ ಸಹ ಸಬ್ಜೆಕ್ಟ್ ಅಲ್ಲವೆ. ಯಾರಿಗೆ ಸೇವೆಯ ಉಮ್ಮಂಗವಿರುವುದೋ ಅವರು ಬಾಯಿಂದ ಅನ್ಯರಿಗೆ ಹೇಳದೇ ಇರುವುದೇ ಇಲ್ಲ. ಎಲ್ಲಿಯೂ ದೇಹಾಭಿಮಾನವು ಇಲ್ಲವೆ? ಹಿರಿಯರಿಗೆ ಗೌರವ ಕೊಡುತ್ತಾರೆಯೇ? ಎಂದು ಮತ್ತೆ ತಂದೆಯೂ ನೋಡುತ್ತಾರೆ. ದೊಡ್ಡ ಮಹಾರಥಿಗಳಿಗೆ ಗೌರವ ಕೊಡಬೇಕಾಗಿದೆ. ಹಾ! ಕೆಲವರು ಚಿಕ್ಕವರೂ ಸಹ ಬಹಳ ಬುದ್ಧಿವಂತರಾಗಿ ಬಿಡುತ್ತಾರೆಂದರೆ ಅವರಿಗೆ ದೊಡ್ಡವರೂ ಸಹ ಗೌರವ ಕೊಡಬೇಕಾಗಿದೆ ಏಕೆಂದರೆ ಅವರ ಬುದ್ಧಿಯು ಚೆನ್ನಾಗಿ ಕೆಲಸ ಮಾಡುತ್ತದೆ. ಸರ್ವೀಸಿನ ಉಮ್ಮಂಗವನ್ನು ನೋಡಿ ತಂದೆಯೂ ಖುಷಿಯಾಗುತ್ತಾರಲ್ಲವೆ - ಇವರು ಒಳ್ಳೆಯ ಸರ್ವೀಸ್ ಮಾಡುತ್ತಾರೆ ಎಂದು. ಇಡೀ ದಿನ ಪ್ರದರ್ಶನಿಯಲ್ಲಿ ತಿಳಿಸುವ ಅಭ್ಯಾಸ ಮಾಡಿಕೊಳ್ಳಬೇಕು- ಪ್ರಜೆಗಳು ಅನೇಕರು ತಯಾರಾಗುವರು. ಲಕ್ಷಾಂತರ ಮಂದಿ ಪ್ರಜೆಗಳು ಬೇಕಾಗಿದೆ, ಮತ್ತ್ಯಾವುದೇ ಉಪಾಯವಿಲ್ಲ. ಸೂರ್ಯವಂಶಿ, ಚಂದ್ರವಂಶಿ, ರಾಜ-ರಾಣಿ, ಪ್ರಜೆ ಎಲ್ಲರೂ ಇಲ್ಲಿಯೇ ತಯಾರಾಗುವರು. ಅಂದಮೇಲೆ ಎಷ್ಟೊಂದು ಸರ್ವೀಸ್ ಮಾಡಬೇಕಾಗಿದೆ! ನಾವೀಗ ಬ್ರಾಹ್ಮಣರಾಗಿದ್ದೇವೆಂದು ಮಕ್ಕಳ ಬುದ್ಧಿಯಲ್ಲಿದೆ. ಗೃಹಸ್ಥದಲ್ಲಿ ಇರುವುದರಿಂದ ಪ್ರತಿಯೊಬ್ಬರ ಸ್ಥಿತಿಯು ಭಿನ್ನ-ಭಿನ್ನವಾಗಿ ಇರುತ್ತದೆಯಲ್ಲವೆ. ಗೃಹಸ್ಥವನ್ನಂತೂ ಬಿಡುವಂತಿಲ್ಲ. ತಂದೆಯು ತಿಳಿಸುತ್ತಾರೆ - ಭಲೆ ಮನೆಯಲ್ಲಿಯೇ ಇರಿ ಆದರೆ ಬುದ್ಧಿಯಲ್ಲಿ ಈ ನಿಶ್ಚಯವಿರಲಿ - ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಬಿಟ್ಟಿದೆ, ನಮಗೆ ಈಗ ತಂದೆಯೊಂದಿಗೆ ಕೆಲಸವಿದೆ. ಇದನ್ನೂ ತಿಳಿದುಕೊಂಡಿದ್ದೀರಿ, ಕಲ್ಪದ ಮೊದಲು ಯಾರು ಈ ಜ್ಞಾನವನ್ನು ತೆಗೆದುಕೊಂಡಿದ್ದರೋ ಅವರೇ ತೆಗೆದುಕೊಳ್ಳುವರು. ಕ್ಷಣ, ಪ್ರತಿಕ್ಷಣವು ಕಲ್ಪದ ಹಿಂದಿನಂತೆ ಪುನರಾವರ್ತನೆಯಾಗುತ್ತಿದೆ, ಆತ್ಮದಲ್ಲಿ ಜ್ಞಾನವಿದೆಯಲ್ಲವೆ. ತಂದೆಯ ಬಳಿಯೂ ಜ್ಞಾನವಿದೆ, ನೀವು ಮಕ್ಕಳೂ ಸಹ ತಂದೆಯ ಸಮಾನರಾಗಬೇಕಾಗಿದೆ. ಜ್ಞಾನವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ, ಎಲ್ಲಾ ಮಾತುಗಳನ್ನು ಒಂದೇಸಲ ತಿಳಿಸಲಾಗುವುದಿಲ್ಲ. ಲಕ್ಷ್ಯವನ್ನು ಪಕ್ಕಾ ಇಟ್ಟುಕೊಳ್ಳಬೇಕಾಗುತ್ತದೆ. ವಿನಾಶವು ಸನ್ಮುಖದಲ್ಲಿ ನಿಂತಿದೆ, ಇದು ಅದೇ ವಿನಾಶವಾಗಿದೆ, ಸತ್ಯ-ತ್ರೇತಾಯುಗದಲ್ಲಿ ಯಾವುದೇ ಯುದ್ಧವಾಗುವುದಿಲ್ಲ ನಂತರ ಯಾವಾಗ ಬಹಳ ಧರ್ಮಗಳಾಗುವವೋ ಸೇನೆಯು ದೊಡ್ಡದಾಗುವುದು ಆಗ ಯುದ್ಧವು ಆರಂಭವಾಗುತ್ತದೆ. ಮೊಟ್ಟ ಮೊದಲು ಆತ್ಮರು ಸತೋಪ್ರಧಾನತೆಯಿಂದ ಇಳಿಯುತ್ತಾ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಹೇಗೆ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂಬುದೆಲ್ಲವನ್ನೂ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಇಲ್ಲಿ ಕುಳಿತಿದ್ದರೂ ಇದೇ ಬುದ್ಧಿಯಲ್ಲಿರಲಿ – ಶಿವ ತಂದೆಯು ಬಂದು ನಮಗೆ ಖಜಾನೆಯನ್ನು ಕೊಡುತ್ತಾರೆ, ಅದನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಳ್ಳೊಳ್ಳೆಯ ಮಕ್ಕಳು ಅಂಶಗಳನ್ನು ಬರೆದುಕೊಳ್ಳುತ್ತಾರೆ. ಇದು ಒಳ್ಳೆಯದಾಗಿದೆ ಏಕೆಂದರೆ ಬುದ್ಧಿಯಲ್ಲಿ ಅನೇಕ ವಿಚಾರಗಳು ಬರುವುದು, ಇಂದು ಈ ವಿಷಯದ ಬಗ್ಗೆ ತಿಳಿಸೋಣ ಎಂದು. ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಎಷ್ಟೊಂದು ಖಜಾನೆಯನ್ನು ಕೊಟ್ಟಿದ್ದೆನು, ಸತ್ಯ-ತ್ರೇತಾಯುಗದಲ್ಲಿ ನಿಮ್ಮ ಬಳಿ ಅಪಾರ ಹಣವಿತ್ತು ನಂತರ ವಾಮ ಮಾರ್ಗದಲ್ಲಿ ಇಳಿದ ಕಾರಣ ಕಡಿಮೆಯಾಗುತ್ತಾ ಹೋಯಿತು, ಖುಷಿಯೂ ಕಡಿಮೆಯಾಗುತ್ತಾ ಹೋಯಿತು. ಒಂದಲ್ಲ ಒಂದು ವಿಕರ್ಮಗಳಾಗತೊಡಗಿತು, ಇಳಿಯುತ್ತಾ-ಇಳಿಯುತ್ತಾ ಕಲೆಗಳು ಕಡಿಮೆಯಾಗುತ್ತವೆ. ಸತೋಪ್ರಧಾನ, ಸತೋ, ರಜೋ, ತಮೋ ಹಂತಗಳಿರುತ್ತವೆಯಲ್ಲವೆ. ಸತೋದಿಂದ ರಜೋದಲ್ಲಿ ಬರುತ್ತಾರೆ ಅಂದರೆ ಒಮ್ಮೆಲೆ ಬಂದು ಬಿಡುತ್ತಾರೆ ಎಂದಲ್ಲ. ತಮೋಪ್ರಧಾನತೆಯಲ್ಲಿಯೂ ನಿಧಾನ-ನಿಧಾನವಾಗಿ ಇಳಿಯುತ್ತಾರೆ. ಅದರಲ್ಲಿಯೂ ಸತೋ, ರಜೋ, ತಮೋ ಹಂತಗಳು ಬರುತ್ತವೆ. ಕೂಡಲೇ ತಮೋಪ್ರಧಾನ ಆಗಿ ಬಿಡುವುದಿಲ್ಲ. ನಿಧಾನ-ನಿಧಾನವಾಗಿ ಏಣಿಯನ್ನು ಇಳಿಯುತ್ತಾ ಹೋಗುತ್ತಾರೆ, ಕಲೆಗಳು ಕಡಿಮೆಯಾಗುತ್ತವೆ. ಈಗ ಮೇಲೇರಬೇಕಾಗಿದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಇದಕ್ಕಾಗಿ ಸಮಯವು ಬಹಳ ಕಡಿಮೆಯಿದೆ, ಏರಿದರೆ ವೈಕುಂಠ ರಸ ಎಂದು ಗಾಯನವೂ ಇದೆ. ಕಾಮದ ಪೆಟ್ಟು ಬಿದ್ದರೆ ಒಮ್ಮೆಲೆ ಪುಡಿ ಪುಡಿಯಾಗುತ್ತಾರೆ, ಮೂಳೆಗಳು ಪುಡಿಯಾಗುತ್ತವೆ. ಹೇಗೆ ಕೆಲವು ಮನುಷ್ಯರು ತಮ್ಮ ಜೀವಘಾತ ಮಾಡಿಕೊಳ್ಳುತ್ತಾರೆ, ಆತ್ಮಘಾತವಲ್ಲ ಜೀವಘಾತವಾಗಿದೆ. ಹಾಗೆಯೇ ಇಲ್ಲಿಯೂ ಆತ್ಮದ ಘಾತವಾಗಿ ಬಿಡುತ್ತದೆ ಅಂದರೆ ಮಾಡಿಕೊಂಡಿರುವ ಸಂಪಾದನೆಯೆಲ್ಲವೂ ಸಮಾಪ್ತಿಯಾಗುತ್ತದೆ. ಇಲ್ಲಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ, ತಂದೆಯನ್ನು ನೆನಪು ಮಾಡಬೇಕಾಗಿದೆ ಏಕೆಂದರೆ ತಂದೆಯಿಂದ ರಾಜ್ಯಭಾಗ್ಯ ಸಿಗುತ್ತದೆ ಅಂದಮೇಲೆ ತಮ್ಮೊಂದಿಗೆ ಕೇಳಿಕೊಳ್ಳಿ - ನಾನು ತಂದೆಯನ್ನು ನೆನಪು ಮಾಡಿ ಭವಿಷ್ಯಕ್ಕಾಗಿ ಎಷ್ಟು ಸಂಪಾದನೆ ಮಾಡಿಕೊಂಡೆನು? ಎಷ್ಟು ಜನ ಕುರುಡರಿಗೆ ಊರುಗೋಲಾದೆನು? ಮನೆ-ಮನೆಗೂ ಸಂದೇಶ ಕೊಡಬೇಕಾಗಿದೆ - ಈ ಹಳೆಯ ಪ್ರಪಂಚವು ಬದಲಾಗುತ್ತಿದೆ, ತಂದೆಯು ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಸುತ್ತಿದ್ದಾರೆ. ಏಣಿಚಿತ್ರದಲ್ಲಿ ತೋರಿಸಿದ್ದಾರೆ, ಈ ಚಿತ್ರಗಳನ್ನು ಮಾಡಿಸುವುದರಲ್ಲಿ ಪರಿಶ್ರಮವಾಗುತ್ತದೆ. ಮನುಷ್ಯರಿಗೆ ತಿಳಿದುಕೊಳ್ಳುವುದರಲ್ಲಿ ಸಹಜವಾಗಲು ಹೇಗೆ ಮಾಡಿಸುವುದು ಎಂದು ಇಡೀ ದಿನ ವಿಚಾರ ನಡೆಯುತ್ತಾ ಇರುತ್ತದೆ. ಇಡೀ ಪ್ರಪಂಚದವರಂತೂ ಬರುವುದಿಲ್ಲ, ದೇವಿ-ದೇವತಾ ಧರ್ಮದವರೇ ಬರುತ್ತಾರೆ. ನಿಮ್ಮ ಸೇವೆಯು ಬಹಳ ನಡೆಯುವುದಿದೆ. ನಿಮಗೆ ತಿಳಿದಿದೆ, ನಮ್ಮ ತರಗತಿಯು ಎಲ್ಲಿಯವರೆಗೆ ನಡೆಯುವುದು ಎಂದು. ಅವರಂತೂ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ತಿಳಿದುಕೊಳ್ಳುತ್ತಾರೆ ಆದ್ದರಿಂದ ಶಾಸ್ತ್ರ ಇತ್ಯಾದಿಗಳನ್ನು ತಿಳಿಸುತ್ತಲೇ ಇರುತ್ತಾರೆ. ಯಾವಾಗ ಅಂತ್ಯವಾಗುವುದೋ ಆಗ ಎಲ್ಲರ ಸದ್ಗತಿದಾತನು ಬರುವರು ನಂತರ ನಮ್ಮ ಯಾವ ಶಿಷ್ಯರಿರುವರೋ ಅವರಿಗೂ ಗತಿ ಸಿಗುವುದು ನಂತರ ನಾವು ಹೋಗಿ ಜ್ಯೋತಿಯಲ್ಲಿ ಸಮಾವೇಶವಾಗುತ್ತೇವೆ ಎಂದು ತಿಳಿಯುತ್ತಾರೆ. ಆದರೆ ಈ ರೀತಿಯಿಲ್ಲ, ನೀವು ತಿಳಿದುಕೊಂಡಿದ್ದೀರಿ - ನಾವು ಅಮರ ತಂದೆಯ ಮೂಲಕ ಸತ್ಯ-ಸತ್ಯವಾದ ಅಮರ ಕಥೆಯನ್ನು ಕೇಳುತ್ತಿದ್ದೇವೆ ಅಂದಮೇಲೆ ಅಮರ ತಂದೆಯು ಏನು ಹೇಳುತ್ತಾರೆಯೋ ಅದನ್ನು ಪಾಲಿಸಬೇಕು, ಕೇವಲ ಇಷ್ಟೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ. ಇಲ್ಲದಿದ್ದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು, ಪದವಿಯೂ ಕಡಿಮೆ ಸಿಗುವುದು. ಸರ್ವೀಸಿನಲ್ಲಿ ಪರಿಶ್ರಮ ಪಡಬೇಕಾಗಿದೆ. ಹೇಗೆ ಸೇವೆಯಲ್ಲಿ ತಮ್ಮ ಮೂಳೆ-ಮೂಳೆಗಳನ್ನು ಅರ್ಪಿಸಿದರು ಎಂದು ದಧೀಚಿ ಋಷಿಯ ಉದಾಹರಣೆಯಿದೆ, ತಮ್ಮ ಶರೀರದ ವಿಚಾರವನ್ನೂ ಮಾಡದೆ ಸರ್ವೀಸಿನಲ್ಲಿ ಇರಬೇಕಾಗಿದೆ. ಇದಕ್ಕೆ ಮೂಳೆಮೂಳೆಗಳನ್ನು ತೊಡಗಿಸುವುದು ಎಂದು ಹೇಳಲಾಗುತ್ತದೆ ಮತ್ತು ಇನ್ನೊಂದು ಆತ್ಮಿಕ ಅವಿಶ್ರಾಂತ ಸೇವೆಯಾಗಿದೆ, ಆತ್ಮಿಕ ಸೇವಾಧಾರಿಗಳು ಆತ್ಮಿಕ ಜ್ಞಾನವನ್ನೇ ತಿಳಿಸುತ್ತಾ ಇರುತ್ತಾರೆ. ಜ್ಞಾನಧನವನ್ನು ದಾನ ಮಾಡುತ್ತಾ ಖುಷಿಯಲ್ಲಿ ನರ್ತಿಸುತ್ತಾ ಇರುತ್ತಾರೆ. ಪ್ರಪಂಚದಲ್ಲಿ ಮನುಷ್ಯರು ಯಾವ ಸೇವೆ ಮಾಡುವರೋ ಅದು ದೈಹಿಕ ಸೇವೆಯಾಗಿದೆ. ಶಾಸ್ತ್ರಗಳನ್ನು ತಿಳಿಸುತ್ತಾರೆ, ಅದು ಆತ್ಮಿಕ ಸೇವೆಯಲ್ಲ. ಆತ್ಮಿಕ ಸೇವೆಯನ್ನು ಕೇವಲ ತಂದೆಯೇ ಕಲಿಸುತ್ತಾರೆ, ಆತ್ಮಿಕ ತಂದೆಯೇ ಆತ್ಮರಿಗೆ ಓದಿಸುತ್ತಾರೆ, ನೀವೀಗ ಸತ್ಯಯುಗ ಹೊಸ ಪ್ರಪಂಚದಲ್ಲಿ ಹೋಗುವುದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಅಲ್ಲಿ ನಿಮ್ಮಿಂದ ಯಾವುದೇ ವಿಕರ್ಮವಾಗುವುದಿಲ್ಲ, ಅದು ರಾಮ ರಾಜ್ಯವಾಗಿದೆ. ಅಲ್ಲಿ ಕೆಲವರೇ ಇರುತ್ತಾರೆ. ಆ ಕೆಲವರೇ ಈಗ ಇಲ್ಲಿ ಬಂದು ಓದುತ್ತಾರೆ, ಈಗಂತೂ ರಾವಣ ರಾಜ್ಯದಲ್ಲಿ ಎಲ್ಲರೂ ದುಃಖಿಯಾಗಿದ್ದಾರಲ್ಲವೆ. ಈ ಇಡೀ ಜ್ಞಾನವೇ ನಂಬರ್ವಾರ್ ಪುರುಷಾರ್ಥದನುಸಾರ ನಿಮ್ಮ ಬುದ್ಧಿಯಲ್ಲಿದೆ. ಏಣಿಯ ಚಿತ್ರದಲ್ಲಿಯೇ ಎಲ್ಲಾ ಜ್ಞಾನವು ಬಂದು ಬಿಡುತ್ತದೆ. ಈ ಚಿತ್ರಗಳನ್ನು ಮಾಡಿಸುವುದಕ್ಕಾಗಿ ಮೆಷಿನರಿ ಬೇಕಾಗಿದೆ. ಆ ಸರ್ಕಾರದ ಪತ್ರಿಕೆಗಳು ಪ್ರತಿನಿತ್ಯವೂ ಎಷ್ಟೊಂದು ಮುದ್ರಿತವಾಗುತ್ತದೆ, ಎಷ್ಟೊಂದು ಕಾರೋಬಾರ್ ನಡೆಯುತ್ತದೆ, ಇಲ್ಲಂತೂ ಎಲ್ಲವನ್ನೂ ಕೈಯಿಂದ ಮಾಡಬೇಕಾಗುತ್ತದೆ. |
ತಂದೆಯು ತಿಳಿಸುತ್ತಾರೆ - ಈ ಅಂತಿಮ ಜನ್ಮ ಪವಿತ್ರರಾಗಿರಿ, ಇದರಿಂದ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಈ ಜ್ಞಾನವು ಯಾರ ಬಳಿಯೂ ಇಲ್ಲ, ಏಣಿಯ ಚಿತ್ರದಲ್ಲಿ ಅನ್ಯ ಧರ್ಮಗಳ ಸಮಾಚಾರವೆಲ್ಲಿದೆ ಎಂದು ಕೇಳುತ್ತಾರೆ. ಅದೂ ಸಹ ಈ ಗೋಲದ ಚಿತ್ರದಲ್ಲಿ ಮಾಡಿಸಲಾಗಿದೆ. ಅವರಂತೂ ಹೊಸ ಪ್ರಪಂಚದಲ್ಲಿ ಬರುವುದೇ ಇಲ್ಲ, ಅವರಿಗೆ ಶಾಂತಿ ಸಿಗುತ್ತದೆ. ಭಾರತವಾಸಿಗಳೇ ಸ್ವರ್ಗದಲ್ಲಿದ್ದಾರಲ್ಲವೆ. ಭಾರತದಲ್ಲಿಯೇ ತಂದೆಯು ರಾಜಯೋಗವನ್ನು ಕಲಿಸಲು ಬರುತ್ತಾರೆ ಆದ್ದರಿಂದ ಭಾರತದ ಪ್ರಾಚೀನ ರಾಜಯೋಗವನ್ನು ಎಲ್ಲರೂ ಇಚ್ಛಿಸುತ್ತಾರೆ. ಈ ಚಿತ್ರದಿಂದ ತಾವೇ ಅರ್ಥ ಮಾಡಿಕೊಳ್ಳುತ್ತಾರೆ, ಅವಶ್ಯವಾಗಿ ಹೊಸ ಪ್ರಪಂಚದಲ್ಲಿ ಕೇವಲ ಭಾರತವೇ ಇತ್ತು ಎಂದು. ತಮ್ಮ ಧರ್ಮವನ್ನು ತಿಳಿದುಕೊಳ್ಳುತ್ತಾರೆ, ಹೇಗೆ ಕ್ರೈಸ್ಟ್ ಧರ್ಮ ಸ್ಥಾಪನೆ ಮಾಡಲು ಬಂದರು. ಈ ಸಮಯದಲ್ಲಿ ಅವರೂ ಸಹ ಭಿಕಾರಿ ರೂಪದಲ್ಲಿದ್ದಾರೆ, ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಈ ರಚಯಿತ ಮತ್ತು ರಚನೆಯ ಎಷ್ಟು ದೊಡ್ಡ ಜ್ಞಾನವಿದೆ! ನೀವು ಹೇಳಬಹುದು - ನಮಗೆ ಯಾರದೇ ಹಣದ ಅವಶ್ಯಕತೆಯಿಲ್ಲ, ನಾವು ಹಣವನ್ನೇನು ಮಾಡಬೇಕು! ನೀವು ಇದನ್ನು ಕೇಳಿರಿ ಮತ್ತು ಅನ್ಯರಿಗೆ ತಿಳಿಸುವುದಕ್ಕಾಗಿ ಈ ಚಿತ್ರಗಳನ್ನು ಮುದ್ರಣ ಮಾಡಿಸಿರಿ. ಈ ಚಿತ್ರಗಳಿಂದಲೇ ಕೆಲಸ ತೆಗೆದುಕೊಳ್ಳಬೇಕಾಗಿದೆ. ಹಾಲ್ನ್ನು ಮಾಡಿಸಿ, ಅಲ್ಲಿ ಈ ಜ್ಞಾನವನ್ನು ತಿಳಿಸಬಹುದು. ಬಾಕಿ ನಾವು ಹಣವನ್ನು ಏನು ಮಾಡುವುದು? ನಿಮ್ಮದೇ ಮನೆಯ ಕಲ್ಯಾಣವಾಗುವುದು, ನೀವು ಕೇವಲ ಪ್ರಬಂಧ ಮಾಡಿರಿ. ಅನೇಕರು ಬಂದು ಕೇಳುತ್ತಾರೆ. ರಚಯಿತ ಮತ್ತು ರಚನೆಯ ಜ್ಞಾನವು ಬಹಳ ಚೆನ್ನಾಗಿದೆ. ಇದನ್ನು ಮನುಷ್ಯರೇ ತಿಳಿದುಕೊಳ್ಳಬೇಕಾಗಿದೆ. ವಿದೇಶದವರು ಈ ಜ್ಞಾನವನ್ನು ಕೇಳಿ ಬಹಳ ಇಷ್ಟ ಪಡುತ್ತಾರೆ, ಬಹಳ ಖುಷಿಯಾಗುತ್ತಾರೆ ಮತ್ತು ತಿಳಿದುಕೊಳ್ಳುತ್ತಾರೆ, ನಾವೂ ಸಹ ತಂದೆಯ ಜೊತೆ ಯೋಗವನ್ನು ಇಟ್ಟರೆ ವಿಕರ್ಮಗಳು ವಿನಾಶವಾಗುತ್ತವೆ. ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಈ ಜ್ಞಾನವನ್ನು ಪರಮಪಿತನ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲವೆಂದು ಆಗ ಅವರಿಗೆ ಅರ್ಥವಾಗುವುದು. ಖುದಾನು ಬಹಿಶ್ತ್ನ್ನು ಸ್ಥಾಪನೆ ಮಾಡಿದನೆಂದು ಹೇಳುತ್ತಾರೆ ಆದರೆ ಅವರು ಹೇಗೆ ಬರುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ನಿಮ್ಮ ಮಾತುಗಳನ್ನು ಕೇಳಿ ಬಹಳ ಖುಷಿಯಾಗುತ್ತಾರೆ, ನಂತರ ಪುರುಷಾರ್ಥ ಮಾಡಿ ಯೋಗವನ್ನು ಕಲಿಯುತ್ತಾರೆ. ತಮೋಪ್ರಧಾನರಿಂದ ಸತೋಪ್ರಧಾನರು ಆಗುವುದಕ್ಕಾಗಿಯೂ ಪುರುಷಾರ್ಥ ಮಾಡುತ್ತಾರೆ. ಸರ್ವೀಸಿಗಾಗಿ ಬಹಳ ವಿಚಾರಗಳನ್ನು ಮಾಡಬೇಕು. ಭಾರತದಲ್ಲಿ ಕಲೆಯನ್ನು ತೋರಿಸಿದಾಗ ಅವರು ವಿದೇಶಕ್ಕೂ ಕಳುಹಿಸುವರು. ಇದನ್ನು ಮನುಷ್ಯರು ತಿಳಿದುಕೊಳ್ಳುತ್ತಾರೆ, ಹೊಸ ಪ್ರಪಂಚವು ಸ್ಥಾಪನೆಯಾಗುವುದರಲ್ಲಿ ತಡವಾಗುತ್ತದೆಯೇ? ಎಲ್ಲಿಯಾದರೂ ಭೂಕಂಪವಾದರೆ 2-3 ವರ್ಷಗಳಲ್ಲಿ ಹೊಸ-ಹೊಸ ಮನೆಗಳು ತಯಾರಾಗಿ ಬಿಡುತ್ತವೆ. ಎಷ್ಟು ಮಂದಿ ಕಾರ್ಮಿಕರಿರುವರೋ ಅಷ್ಟು ಬೇಗನೆ ಮನೆಯಾಗುತ್ತದೆ. ಒಂದು ತಿಂಗಳಿನಲ್ಲಿಯೂ ಮನೆಯನ್ನು ಕಟ್ಟಿಸುತ್ತಾರೆ. ಕಾರ್ಮಿಕರು ಸಾಮಾನು ಇತ್ಯಾದಿಗಳೆಲ್ಲವೂ ತಯಾರಿದ್ದರೆ ಮತ್ತೆ ಮನೆಯು ಕಟ್ಟಿಸುವುದರಲ್ಲಿ ತಡವಾಗುವುದಿಲ್ಲ. ವಿದೇಶದಲ್ಲಿ ಮನೆಗಳು ಹೇಗೆ ತಯಾರಾಗುತ್ತವೆ - ಮಿನಿಟ್ ಮೋಟಾರು. ಅಂದಮೇಲೆ ಸ್ವರ್ಗದಲ್ಲಿ ಇನ್ನೆಷ್ಟು ಬೇಗನೆ ಆಗಬಹುದು! ಚಿನ್ನ, ಬೆಳ್ಳಿ ಬಹಳಷ್ಟು ನಿಮಗೆ ಸಿಗುತ್ತದೆ. ಗಣಿಗಳಿಂದ ಚಿನ್ನ, ಬೆಳ್ಳಿ, ವಜ್ರಗಳನ್ನು ತೆಗೆದುಕೊಂಡು ಬರುತ್ತಾರೆ. ಕಲೆ ಎಲ್ಲವನ್ನೂ ಕಲಿಯುತ್ತಿದ್ದಾರೆ. ವಿಜ್ಞಾನದ ಅಭಿಮಾನವು ಎಷ್ಟಿದೆ! ಇದೇ ವಿಜ್ಞಾನವು ಮತ್ತೆ ಸತ್ಯಯುಗದಲ್ಲಿಯೂ ಕೆಲಸಕ್ಕೆ ಬರುತ್ತದೆ. ಇಲ್ಲಿ ಕಲಿಯುವವರು ಅಲ್ಲಿ ಇನ್ನೊಂದು ಜನ್ಮವನ್ನು ತೆಗೆದುಕೊಂಡು ಕೆಲಸಕ್ಕೆ ಬರುತ್ತಾರೆ. ಆ ಸಮಯದಲ್ಲಿ ಎಲ್ಲವೂ ಹೊಸ ಪ್ರಪಂಚವಾಗಿ ಬಿಡುತ್ತದೆ. ರಾವಣ ರಾಜ್ಯವೇ ಸಮಾಪ್ತಿಯಾಗುತ್ತದೆ. ಪಂಚತತ್ವಗಳೂ ಸಹ ಆದೇಶದ ಅನುಸಾರ ಸೇವೆ ಮಾಡುತ್ತದೆ, ಸ್ವರ್ಗವಾಗಿ ಬಿಡುತ್ತದೆ. ಅಲ್ಲಿ ಯಾವುದೇ ಉಪದ್ರವಗಳಾಗುವುದಿಲ್ಲ, ರಾವಣ ರಾಜ್ಯವೇ ಇರುವುದಿಲ್ಲ. ಎಲ್ಲರೂ ಸತೋಪ್ರಧಾನರಾಗುತ್ತಾರೆ. ಎಲ್ಲದಕ್ಕಿಂತ ಒಳ್ಳೆಯ ಮಾತಾಗಿದೆ - ತಂದೆಯೊಂದಿಗೆ ಬಹಳ ಪ್ರೀತಿಯಿರಬೇಕು. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಬೇಕು ಮತ್ತು ಅನ್ಯರಿಗೆ ದಾನ ಮಾಡಬೇಕಾಗಿದೆ. ಎಷ್ಟು ದಾನ ಮಾಡುವಿರೋ ಅಷ್ಟು ಒಟ್ಟುಗೂಡುತ್ತಾ ಹೋಗುವುದು, ಸೇವೆಯನ್ನೇ ಮಾಡದಿದ್ದರೆ ಧಾರಣೆ ಹೇಗಾಗುವುದು! ಸರ್ವೀಸಿನಲ್ಲಿ ಬುದ್ಧಿಯನ್ನು ಓಡಿಸಬೇಕು. ಸರ್ವೀಸ್ ಬಹಳಷ್ಟು ಆಗುತ್ತದೆ. ಯಾರಾದರೂ ಮಾಡುತ್ತಾ ಇರಿ, ದಿನ-ಪ್ರತಿದಿನ ಉನ್ನತಿಯನ್ನು ಪಡೆಯಬೇಕಾಗಿದೆ. ತಮ್ಮ ಉನ್ನತಿಯನ್ನೂ ಮಾಡಿಕೊಳ್ಳಬೇಕಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಗೌರವ ಕೊಡಬೇಕಾಗಿದೆ. ಸರ್ವೀಸಿನ ಬಹಳ-ಬಹಳ ಉಮ್ಮಂಗವನ್ನು ಇಟ್ಟುಕೊಳ್ಳಬೇಕು. ಜ್ಞಾನರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ಅದರ ದಾನ ಮಾಡಬೇಕಾಗಿದೆ. |
2. ಒಬ್ಬ ತಂದೆಯಿಂದಲೇ ಕೇಳುವ ಸಂಕಲ್ಪವನ್ನು ಇಡಬೇಕಾಗಿದೆ. ಅನ್ಯ ವಿಚಾರಗಳಲ್ಲಿ ಬುದ್ಧಿಯನ್ನು ಅಲೆದಾಡಿಸಬಾರದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ, ಈಗ ಇವೆರಡು ಸಾಲಿನ ಅರ್ಥವನ್ನು ಯಾರು ತಿಳಿದುಕೊಂಡಿದ್ದೀರಿ, ಅವರು ಕೈಯನ್ನೆತ್ತಿರಿ? ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆಂದು ಯಾರು ಹೇಳಿದರು? ಆತ್ಮ. ನಾನು ಅದೃಷ್ಟವನ್ನು ರೂಪಿಸಿಕೊಂಡು ಬಂದಿದ್ದೇನೆ ಎಂದು ಎಲ್ಲಾ ಆತ್ಮರು ಹೇಳುತ್ತಾರೆ ಅಂದಾಗ ಯಾವ ಅದೃಷ್ಟ? ಹೊಸ ಪ್ರಪಂಚದಲ್ಲಿ ಹೋಗುವ ಅದೃಷ್ಟವಾಗಿದೆ. ಹೊಸ ಪ್ರಪಂಚವು ಸ್ವರ್ಗವಾಗಿದೆ, ಈ ಹಳೆಯ ಪ್ರಪಂಚವು ನರಕವಾಗಿದೆ ಆದ್ದರಿಂದ ಇದನ್ನು ಎಲ್ಲಾ ಆತ್ಮರೂ ಹೇಳುತ್ತಾರೆ. ಆತ್ಮಕ್ಕೆ ಶರೀರವಿದ್ದಾಗಲೇ ಮಾತನಾಡಲು ಸಾಧ್ಯವಾಗುವುದು. ನಾವು ಶಾಲೆಯಲ್ಲಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆಂದು ಜೀವಾತ್ಮರು ಹೇಳುತ್ತಾರೆ. ಇಲ್ಲಿ ಓದಿಸುವವರು ಯಾರು? ಶಿವ ತಂದೆ, ಜ್ಞಾನ ಸಾಗರ. ಮನುಷ್ಯನನ್ನು ದೇವತೆ ಅಥವಾ ಪತಿತರನ್ನು ಪಾವನ, ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವವರು ಅವರೊಬ್ಬರೇ ಆಗಿದ್ದಾರೆ. ಈ ನರಕಕ್ಕೆ ಬೆಂಕಿ ಬೀಳಲಿದೆ. ಪ್ರಪಂಚದಲ್ಲಿ ನಾವು ಬೇಹದ್ದಿನ ತಂದೆಯ ಬಳಿ ಬಂದಿದ್ದೇವೆ ಎಂದು ಹೇಳುವಂತಹ ಶಾಲೆಯು ಯಾವುದೂ ಇಲ್ಲ ಅಥವಾ ನಾನು ತಂದೆಯೂ ಆಗಿದ್ದೇನೆ, ಶಿಕ್ಷಕನೂ ಆಗಿದ್ದೇನೆ, ಗುರುವೂ ಆಗಿದ್ದೇನೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಈ ಬ್ರಹ್ಮಾರವರೂ ಸಹ ಹೇಳಲು ಸಾಧ್ಯವಿಲ್ಲ. ನಾನು ಎಲ್ಲರ ತಂದೆ, ಶಿಕ್ಷಕ, ಗುರುವಾಗಿದ್ದೇನೆಂದು ಒಬ್ಬ ಶಿವ ತಂದೆಯೇ ಹೇಳುತ್ತಾರೆ. ಅವರೇ ಕುಳಿತು ಓದಿಸುತ್ತಾರೆ ಅಂದಮೇಲೆ ಈಗ ಮಕ್ಕಳು ಅದೃಷ್ಟವನ್ನು ರೂಪಿಸಿಕೊಳ್ಳಬೇಕಾಗಿದೆ. ಮಕ್ಕಳು ಹೇಳುತ್ತೀರಿ - ನಾವು ಹೊಸ ಪ್ರಪಂಚದ ರಾಜಧಾನಿಯ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆ. ನಮಗೆ ತಿಳಿದಿದೆ, ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ತಂದೆಯು ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ನೀವು 21 ಜನ್ಮಗಳ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಲು ಓದುತ್ತೀರೆಂದರೆ, ರಾಜ್ಯ ಪದವಿಯ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ಇಲ್ಲಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ಈ ಹಾಡುಗಳನ್ನು ಭಲೆ ಆ ನಾಟಕದವರು ಬರೆದಿದ್ದಾರೆ ಆದರೆ ಇದರ ಅರ್ಥವನ್ನು ಈಗ ತಿಳಿಸಬೇಕಾಗಿದೆ. ಹೇಗೆ ತಂದೆಯು ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಭಕ್ತಿಯಿದೆ. ಸತ್ಯಯುಗದಲ್ಲಿ ಭಕ್ತಿ, ಮಂದಿರ ಇತ್ಯಾದಿಗಳಿರುವುದಿಲ್ಲ. ನೀವು ಅರ್ಧಕಲ್ಪ ಭಕ್ತಿ ಮಾಡಿದ್ದೀರಿ. ಈಗಂತೂ ಭಗವಂತ ಸಿಕ್ಕಿ ಬಿಟ್ಟಿದ್ದಾರೆ. ಭಾರತದಲ್ಲಿ ಮೊಟ್ಟ ಮೊದಲು ಈ ದೇವಿ-ದೇವತೆಗಳ ರಾಜ್ಯವಿತ್ತು ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಅದೃಷ್ಟವು ಕೆಟ್ಟು ಹೋಗಿದೆ, ಈಗ ಪುನಃ ಅದೃಷ್ಟವನ್ನು ರೂಪಿಸುತ್ತಾರೆ, ತಂದೆಯು ಅದೃಷ್ಟವನ್ನು ರೂಪಿಸುವುದಕ್ಕಾಗಿಯೇ ಬಂದಿದ್ದಾರೆ. ಮಕ್ಕಳೇ, ನನ್ನನ್ನು ನೆನಪು ಮಾಡಿರಿ, ನೀವು ಬಹಳ ಪಾಪಾತ್ಮರಾಗಿ ಬಿಟ್ಟಿದ್ದೀರಿ ಎಂದು ಹೇಳುತ್ತಾರೆ. ಮೊಟ್ಟ ಮೊದಲು ಶಿವ ತಂದೆಯ ಭಕ್ತಿಯು ನಡೆಯುತ್ತದೆ, ಅದು ಅವ್ಯಭಿಚಾರಿ ಭಕ್ತಿಯಾಗಿದೆ ನಂತರ ಭಕ್ತಿಯೂ ಸಹ ವ್ಯಭಿಚಾರಿಯಾಗಿ ಬಿಡುತ್ತದೆ ಅಂದಾಗ ಮಕ್ಕಳಿಗೆ ಮೊಟ್ಟ ಮೊದಲು ಈ ನಿಶ್ಚಯವಿರಲಿ - ಯಾರಿಗೆ ಭಗವಂತನೆಂದು ಹೇಳಲಾಗುತ್ತದೆಯೋ ಅವರೇ ನಮಗೆ ಓದಿಸುತ್ತಾರೆ. ಅವರಿಗೆ ಯಾವುದೇ ಶರೀರವಿಲ್ಲ. ಅವರು ಈ ಶರೀರದಲ್ಲಿ (ಬ್ರಹ್ಮಾ) ಕುಳಿತು ಮಾತನಾಡುತ್ತಾರೆ. ಹೇಗೆ ನಿಮ್ಮ ಆತ್ಮವು ಈ ಶರೀರದಲ್ಲಿ ಬಂದಾಗ ಮಾತನಾಡತೊಡಗುತ್ತದೆ. ಕೆಲಕೆಲವೊಮ್ಮೆ ಮನುಷ್ಯರು ಸತ್ತು ಹೋಗುತ್ತಾರೆ, ನಂತರ ಯಾವಾಗ ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆಯೋ ಆಗ ಅರ್ಧದಲ್ಲಿಯೇ ಅಲುಗಾಡುತ್ತಾರೆ, ಆತ್ಮವು ಹೊರಟು ಹೋಗಿ ಮತ್ತೆ ಬಂದಿತೆಂದಲ್ಲ, ಆತ್ಮವು ಬಹಳ ಸೂಕ್ಷ್ಮವಾಗಿದೆಯಲ್ಲವೇ ಆದ್ದರಿಂದ ಎಲ್ಲಿಯೋ ಬಚ್ಚಿಟ್ಟುಕೊಂಡಿರುತ್ತದೆ ಆದ್ದರಿಂದ ಈ ರೀತಿ ಹೇಳಬಹುದು – ಮೂರ್ಛಿತರಾಗಿ ಬಿಟ್ಟರು, ಅದು ಯಾರಿಗೂ ಅರ್ಥವಾಗಲಿಲ್ಲ. ಹೀಗೆ ಕೆಲಕೆಲವೊಮ್ಮೆ ಆಗಿ ಬಿಡುತ್ತದೆ. ಚಿತೆಯಿಂದಲೂ ಎದ್ದು ಕುಳಿತುಕೊಳ್ಳುತ್ತಾರೆ ಮತ್ತೆ ಅವರನ್ನು ಮೇಲೇತ್ತುತ್ತಾರೆ. ಇದೇನಾಯಿತು? ಆತ್ಮವು ಶರೀರದಲ್ಲಿಯೇ ಎಲ್ಲಿಯೋ ಪಕ್ಕಕ್ಕೆ ಸರಿದಿರುತ್ತದೆ. ಮತ್ತೆ ತನ್ನ ಸ್ಥಾನಕ್ಕೆ ಬಂದು ಬಿಡುತ್ತದೆ. ಆತ್ಮವಿಲ್ಲದಿದ್ದರೆ ಶರೀರವು ಒಮ್ಮೆಲೆ ಜಡವಾಗಿ ಬಿಡುತ್ತದೆ. ಅಂದಾಗ ಆತ್ಮರ ದೇಶವು ಪರಮಧಾಮವಾಗಿದೆ, ನೀವು ತಿಳಿದುಕೊಂಡಿದ್ದೀರಿ - ನಾವು ಆ ಮನೆಯ ನಿವಾಸಿಗಳಾಗಿದ್ದೇವೆ ಮೊಟ್ಟ ಮೊದಲು ನಾವಾತ್ಮರು ಮನೆಯಿಂದ ಸತ್ಯಯುಗದಲ್ಲಿ ಬಂದೆವು. ಭಾರತವಾಸಿಗಳು ಯಾರು ದೇವಿ-ದೇವತೆಗಳಾಗಿದ್ದರೋ ಅವರೇ ಬಂದು ಬಿಟ್ಟರು. ವಾಸ್ತವದಲ್ಲಿ ಯಾರು-ಯಾರು ಧರ್ಮ ಸ್ಥಾಪನೆ ಮಾಡುತ್ತಾರೆಯೋ ಅವರ ಧರ್ಮವು ಕೊನೆಯವರೆಗೂ ಸ್ಥಿರವಾಗಿರುತ್ತದೆ. ಬುದ್ಧನ ಧರ್ಮವು ಸ್ಥಿರವಾಗಿದೆ, ಕ್ರೈಸ್ಟ್ನ ಧರ್ಮವೂ ಸ್ಥಿರವಾಗಿದೆ. ಕೇವಲ ದೇವಿ-ದೇವತಾ ಧರ್ಮದವರು ಯಾರು ರಾಜ್ಯ ಮಾಡುತ್ತಿದ್ದರೋ ಅವರ ಹೆಸರೇ ಮರೆಯಾಗಿದೆ. ತಮ್ಮನ್ನು ದೇವಿ-ದೇವತಾ ಧರ್ಮದವರೆಂದು ಹೇಳಿಕೊಳ್ಳುವವರು ಯಾರೂ ಇಲ್ಲ. |
ತಂದೆಯು ತಿಳಿಸುತ್ತಾರೆ - ಭಾರತವಾಸಿಗಳು ತಮ್ಮ ಧರ್ಮವನ್ನೇ ಮರೆತು ಹೋಗಿದ್ದಾರೆ - ನಮ್ಮ ಗೃಹಸ್ಥ ಧರ್ಮವು ಪವಿತ್ರವಾಗಿತ್ತು, ಸಂಪೂರ್ಣ ನಿರ್ವಿಕಾರಿ ಮಹಾರಾಜ-ಮಹಾರಾಣಿಯ ರಾಜ್ಯವಿತ್ತು. ಅವರಿಗೆ ಭಗವತಿ ಲಕ್ಷ್ಮಿ ಮತ್ತು ಭಗವಾನ್ ನಾರಾಯಣನೆಂದು ಹೇಳುತ್ತಾರೆ. ವಾಸ್ತವದಲ್ಲಿ ಭಗವಂತನು ಒಬ್ಬರೇ ಆಗಿದ್ದಾರೆ, ಅವರಿಗೇ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಈ ಲಕ್ಷ್ಮೀ-ನಾರಾಯಣರಲ್ಲಿ ಯಾವುದೇ ಜ್ಞಾನವಿಲ್ಲ, ಜ್ಞಾನಸಾಗರನು ಒಬ್ಬ ಶಿವ ತಂದೆಯೇ ಆಗಿದ್ದಾರೆ. ಅವರು ಕುಳಿತು ನೀವು ಮಕ್ಕಳಿಗೇ ಜ್ಞಾನವನ್ನು ಕೊಡುತ್ತಾರೆ. ನೀವೀಗ ಓದುತ್ತಿದ್ದೀರಿ, ಈ ವಿದ್ಯೆಯನ್ನು ಸತ್ಯಯುಗದಲ್ಲಿ ಮರೆತು ಹೋಗುತ್ತೀರಿ. ಈಗ ನೀವು ಪ್ರತಿಯೊಬ್ಬರೂ ತಿಳಿದುಕೊಂಡಿದ್ದೀರಿ - ನಾವಾತ್ಮರಲ್ಲಿ 84 ಜನ್ಮಗಳ ರೆಕಾರ್ಡ್ ತುಂಬಲ್ಪಟ್ಟಿದೆ. ಆತ್ಮವೇ ಈಗ ಜ್ಞಾನವನ್ನು ತೆಗೆದುಕೊಳ್ಳುತ್ತಿದೆ, ನಂತರ ಸತ್ಯಯುಗದಲ್ಲಿ ಹೋಗಿ ತನ್ನ ರಾಜ್ಯಭಾರ ಮಾಡುವುದು. ನೀವು ಹೇಳುತ್ತೀರಿ - ನಾವು 84 ಜನ್ಮಗಳ ಚಕ್ರವನ್ನು ಸುತ್ತಿದೆವು, ಈಗ ತಂದೆಯಿಂದ ನಾವು ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರೂ ಆ ತಾತನಿಂದಲೇ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಆದರೆ ತಮ್ಮ-ತಮ್ಮ ಪುರುಷಾರ್ಥದನುಸಾರ. ಇದರಲ್ಲಿ ಭಾಗವನ್ನು ಹಂಚಲಾಗುವುದಿಲ್ಲ, ಲೌಕಿಕದಲ್ಲಿ ಹಂಚಲಾಗುತ್ತದೆಯಲ್ಲವೇ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ನಾನು ವೈಕುಂಠ ಸ್ಥಾಪನೆ ಮಾಡುತ್ತೇನೆ, ಅದರಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವುದು ನಿಮ್ಮ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತದೆ, ಪವಿತ್ರರಾಗುತ್ತೀರಿ. ಚಿನ್ನವನ್ನು ಭಟ್ಟಿಯಲ್ಲಿ ಹಾಕಲಾಗುತ್ತದೆಯಲ್ಲವೇ. ಆಗ ಅದರಿಂದ ತುಕ್ಕು ಬಿಟ್ಟುಹೋಗಿ ಅಪ್ಪಟ ಚಿನ್ನದಂತೆ ಗಟ್ಟಿಯಾಗಿ ಬಿಡುತ್ತದೆ. ಈ ಆತ್ಮವೂ ಸಹ ಸತ್ಯ ಚಿನ್ನವಾಗಿತ್ತು ನಂತರ ಇಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತದೆ. ಮೊದಲು ಸತೋಪ್ರಧಾನವಾಗಿರುತ್ತದೆ ನಂತರ ಅದರಲ್ಲಿ ಬೆಳ್ಳಿಯ ಬೆರಕೆಯಾಗುತ್ತದೆ, ಆತ್ಮವು ಸ್ವಲ್ಪ ಅಪವಿತ್ರವಾಗುತ್ತದೆ. ನಂತರ ನಿಧಾನ-ನಿಧಾನವಾಗಿ ಹಳೆಯದಾಗುತ್ತಾ ಹೋಗುತ್ತದೆ. ಮನೆಯೂ ಸಹ ಮೊದಲು ಹೊಸದಾಗಿರುತ್ತದೆ ನಂತರ ಹಳೆಯದಾಗತೊಡಗುತ್ತದೆ. 100 ವರ್ಷಗಳ ನಂತರ ಅದಕ್ಕೆ ಹಳೆಯದೆಂದೇ ಹೇಳುತ್ತಾರೆ. ಹಾಗೆಯೇ ಪ್ರಪಂಚವೂ ಸಹ ಹೊಸದು ಮತ್ತು ಹಳೆಯದಾಗುತ್ತದೆ. ಇಂದಿಗೆ 5000 ವರ್ಷಗಳ ಮೊದಲು ಹೊಸದಾಗಿತ್ತು, ಈ ದೇವಿ-ದೇವತೆಗಳ ರಾಜ್ಯವಿತ್ತು ಅದು ಎಲ್ಲಿ ಹೋಯಿತು? 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಹಳೆಯದಾಗಿ ಬಿಟ್ಟಿದೆ. ಆತ್ಮವೂ ಸಹ ಮೈಲಿಗೆ ಮತ್ತು ಶರೀರವೂ ಮೈಲಿಗೆಯಾಗಿ ಬಿಟ್ಟಿತು. ಪಾವನರಿಂದ ಪತಿತರಾಗಿ ಬಿಟ್ಟಿರಿ. ಕೃಷ್ಣನೂ ಸಹ ಶ್ಯಾಮ ಮತ್ತು ಸುಂದರನೆಂದು ತೋರಿಸುತ್ತಾರಲ್ಲವೇ. ಕಾಲು ನರಕದ ಕಡೆ ಮುಖವನ್ನು ಸ್ವರ್ಗದ ಕಡೆ ತೋರಿಸಬೇಕಾಗಿದೆ. ನೀವೂ ಸಹ ಆ ಕುಲದವರಾಗಿದ್ದೀರಿ, ನಿಮ್ಮದು ಕಾಲು ನರಕದ ಕಡೆ ಮುಖವು ಸ್ವರ್ಗದ ಕಡೆಯಿದೆ. ನೀವೀಗ ಮೊದಲು ನಿರ್ವಾಣಧಾಮದಲ್ಲಿ ಹೋಗಿ ನಂತರ ಸ್ವರ್ಗದಲ್ಲಿ ಬರುತ್ತೀರಿ. ಕಲಿಯುಗಕ್ಕೆ ಬೆಂಕಿ ಬೀಳುವುದು. ಅಣ್ವಸ್ತ್ರಗಳ ಮಳೆ, ಬೆಂಕಿ, ಭೂಕಂಪ ಇತ್ಯಾದಿಗಳಾಗುವುದು. ಪತಿತ ಆತ್ಮರೆಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿ ಮನೆಗೆ ಹೊರಟು ಹೋಗುವರು. ಇನ್ನು ಕೆಲವರೇ ಉಳಿಯುತ್ತಾರೆ. ಪವಿತ್ರ ಆತ್ಮರು ಬರತೊಡಗುತ್ತಾರೆ. ಈಗಂತೂ ಎಲ್ಲರೂ ಮುಳ್ಳುಗಳಾಗಿದ್ದಾರೆ. ಕಾಮ ಕಟಾರಿಯನ್ನು ನಡೆಸುವುದು ಮುಳ್ಳು ಚುಚ್ಚುವುದಾಗಿದೆ. ಇಲ್ಲಂತೂ ತಂದೆಯು ತಿಳಿಸುತ್ತಾರೆ - ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ. ನನ್ನನ್ನು ನೆನಪು ಮಾಡಿರಿ, ನಾನು ನಿಮಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತೇನೆ, ನೀವು ಪವಿತ್ರರಾಗಿ ಬಿಡುತ್ತೀರಿ. ನೀವು ಪಾವನರಾಗಿದ್ದಾಗ ಗೃಹಸ್ಥ ವ್ಯವಹಾರವೂ ಪವಿತ್ರವಾಗಿತ್ತು, ನೀವೀಗ ಪತಿತರಾಗಿದ್ದೀರಿ ಆದ್ದರಿಂದ ಗೃಹಸ್ಥ ವ್ಯವಹಾರವೂ ಸಹ ಅಪವಿತ್ರ ವಿಕಾರಿಯಾಗಿದೆ. ಸತ್ಯಯುಗದಲ್ಲಿ ವ್ಯಾಪಾರ ವ್ಯವಹಾರವೂ ಸಹ ಸತ್ಯತೆಯಿಂದ ನಡೆಯುತ್ತದೆ. ಅಲ್ಲಿ ಅಸತ್ಯ ಹೇಳುವ ಅವಶ್ಯಕತೆಯೇ ಇರುವುದಿಲ್ಲ. ಯಾವಾಗ ಹೆಚ್ಚು ಹಣವನ್ನು ಸಂಪಾದಿಸುವ ಲೋಭವಿರುತ್ತದೆಯೋ ಆಗಲೇ ಸುಳ್ಳು ಹೇಳಲಾಗುತ್ತದೆ. ಅಲ್ಲಂತೂ ಅಪಾರ ಧನವಿರುತ್ತದೆ, ಆಹಾರ ಧಾನ್ಯಗಳಿಗೆ ಬೆಲೆ ಕಟ್ಟುವುದಿಲ್ಲ. ಅಲ್ಲಿ ಯಾರೂ ಬಡವರಿರುವುದೇ ಇಲ್ಲ. ಯಾರು ಚೆನ್ನಾಗಿ ಪುರುಷಾರ್ಥ ಮಾಡುವರೋ ಅವರು ಮಹಾರಾಜನಾಗುವರು. ವಜ್ರ ವೈಢೂರ್ಯಗಳ ಮಹಲುಗಳು ಸಿಗುತ್ತವೆ. ಸಂಪೂರ್ಣ ಪುರುಷಾರ್ಥ ಮಾಡದಿದ್ದರೆ ಪ್ರಜೆಗಳಲ್ಲಿ ಹೋಗುವರು. ರಾಜಾ-ರಾಣಿ ಮತ್ತೆ ರಾಜಕುಮಾರ-ರಾಜಕುಮಾರಿ ಇಡೀ ಮನೆತನ ಇರುತ್ತದೆಯಲ್ಲವೇ. ಮತ್ತೆ ಪ್ರಜೆಗಳಲ್ಲಿಯೂ ಸಹ ನಂಬರ್ವಾರ್ ಸಾಹುಕಾರರು ಮತ್ತು ಬಡ ಪ್ರಜೆಗಳಾಗುತ್ತಾರೆ. ಅಲ್ಲಂತೂ ಎಲ್ಲರೂ ಪವಿತ್ರರಾಗಿರುತ್ತಾರೆ. ರಾಜಾ-ರಾಣಿ ಮತ್ತು ಒಬ್ಬರೇ ಮಂತ್ರಿ. ಅಲ್ಲಿ ಅನೇಕ ಮಂತ್ರಿಗಳು ಇರುವುದಿಲ್ಲ ರಾಜನಲ್ಲಿಯೇ ರಾಜ್ಯ ನಡೆಸುವ ಬಲವಿರುತ್ತದೆ ಅಂದಾಗ ತಂದೆಯು ಹೇಗೆ ತಿಳಿಸುತ್ತಾರೆಯೋ ಹಾಗೆಯೇ ಮಕ್ಕಳೂ ತಿಳಿಸಬೇಕಾಗಿದೆ - ನಾವು ಭಾರತವಾಸಿ ದೇವಿ-ದೇವತೆಗಳಾಗಿದ್ದೆವು. ಸತ್ಯಯುಗದಲ್ಲಿ ನಮ್ಮ ರಾಜ್ಯವಿತ್ತು, ಗೃಹಸ್ಥ ವ್ಯವಹಾರದಲ್ಲಿ ನಾವು ಪವಿತ್ರರಾಗಿದ್ದೆವು, ಸ್ವರ್ಗವಾಸಿಗಳಾಗಿದ್ದೆವು ನಂತರ ಪತಿತರಾಗುತ್ತಾ ಆಗುತ್ತಾ ನರಕವಾಸಿಗಳಾಗಿದ್ದೇವೆ ಮತ್ತೆ ಸ್ವರ್ಗವಾಸಿಗಳಾಗುತ್ತೇವೆ. ಈ ಆಟವು ಮಾಡಲ್ಪಟ್ಟಿದೆ. ಒಂದು ಜನ್ಮದಲ್ಲಿಯೇ ಸ್ವರ್ಗವಾಸಿಗಳಾಗುತ್ತೀರಿ ಮತ್ತೆ ನರಕವಾಸಿಗಳಾಗುವುದರಲ್ಲಿ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಣಿಯ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿ ತೋರಿಸಲಾಗಿದೆ. ನಾವು ಹೋಗಿ ಸ್ವರ್ಗದಲ್ಲಿ ರಾಜ್ಯಭಾರ ಮಾಡುತ್ತೇವೆ, ಈಗ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂದು ಬುದ್ಧಿಯಲ್ಲಿ ಬಂದಿದೆ. ತಂದೆಯೇ ಸತ್ಯವನ್ನು ತಿಳಿಸಿ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಮನುಷ್ಯರು ಯಾರು ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಾರೆಯೋ ಅವರು ಯಾರೂ ನರನಿಂದ ನಾರಾಯಣನಾಗುವುದಿಲ್ಲ ಅಂದಮೇಲೆ ಆ ಕಥೆಯು ಅಸತ್ಯವಾಯಿತಲ್ಲವೇ.ಇಲ್ಲಿ ನೀವು ನರನಿಂದ ನಾರಾಯಣನಾಗುವುದಕ್ಕಾಗಿ ಕುಳಿತಿದ್ದೀರಿ. ಅಲ್ಲಿ ಯಾರೂ ಸಹ ಪವಿತ್ರರಾಗಿ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುವುದಿಲ್ಲ, ಹುಣ್ಣಿಮೆಯ ದಿನ ಸತ್ಯನಾರಾಯಣನ ಕಥೆಯನ್ನು ಹೇಳುತ್ತಾರೆ, ಈಗ ಈ ಸಮಯದಲ್ಲಿ ಸಂಪೂರ್ಣ ಚಂದ್ರಮನಿಗೆ ಹುಣ್ಣಿಮೆಯೆಂದು ಹೇಳಲಾಗುತ್ತದೆ. ನಂತರ ಕೊನೆಯಲ್ಲಿ ಯಾವಾಗ ಚಂದ್ರನಲ್ಲಿ ಒಂದು ಗೆರೆಯಷ್ಟು ಉಳಿಯುತ್ತದೆಯೋ ಅದಕ್ಕೆ ಅಮಾವಾಸ್ಯೆ ಎಂದು ಹೇಳಲಾಗುತ್ತದೆ. ಅಮಾವಾಸ್ಯೆ ಎಂದರೆ ಅಂಧಕಾರ ರಾತ್ರಿ, ಸತ್ಯ-ತ್ರೇತಾಯುಗಕ್ಕೆ ದಿನವೆಂತಲೂ, ದ್ವಾಪರ-ಕಲಿಯುಗಕ್ಕೆ ರಾತ್ರಿಯೆಂತಲೂ ಹೇಳಲಾಗುತ್ತದೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ, ಇದನ್ನು ಶಿವ ತಂದೆಯೇ ಓದಿಸುತ್ತಾರೆ ಅವರು ತಂದೆಯೂ ಆಗಿದ್ದಾರೆ, ಶಿಕ್ಷಕ ಮತ್ತು ಸದ್ಗುರುವೂ ಆಗಿದ್ದಾರೆ, ಇವರಲ್ಲಿ ಪ್ರವೇಶ ಮಾಡಿ ಆತ್ಮರಿಗೆ ತಿಳಿಸುತ್ತಾರೆ. |
ತಂದೆಯು ತಿಳಿಸುತ್ತಾರೆ - ಹೇಗೆ ಇವರ ಆತ್ಮವು (ಬ್ರಹ್ಮ) ಭೃಕುಟಿಯ ಮಧ್ಯದಲ್ಲಿ ಕುಳಿತಿದೆಯೋ ಹಾಗೆಯೇ ನಾನೂ ಸಹ ಬಂದು ಇಲ್ಲಿ ಕುಳಿತುಕೊಳ್ಳುತ್ತೇನೆ, ನಿಮಗೆ ತಿಳಿಸುತ್ತೇನೆ. ನೀವು ಮೊದಲು ಪಾವನರಾಗಿದ್ದಿರಿ ನಂತರ ಪತಿತರಾಗುತ್ತೀರಿ. ಈಗ ತಂದೆಯಾದ ನನ್ನನ್ನು ನೆನಪು ಮಾಡಿರಿ, ಪವಿತ್ರರಾಗದೇ ಮನೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪವಿತ್ರರಾದಾಗಲೇ ಹಾರುವಿರಿ. ಹೇ ಪತಿತ-ಪಾವನ ಬನ್ನಿ, ಪಾವನರನ್ನಾಗಿ ಮಾಡಿ, ಆಗಲೇ ನಾವು ಹಾರುವೆವು, ನಮ್ಮ ಮನೆಯಾದ ಮುಕ್ತಿಧಾಮದಲ್ಲಿ ಹೋಗುವೆವು ಎಂದು ಎಲ್ಲರೂ ಕರೆಯುತ್ತಾರೆ. ಅದು ನಾವಾತ್ಮರ ಮನೆಯಾಗಿದೆ, ಪತಿತರ ಮನೆಗೆ ಹೋಗಲು ಸಾಧ್ಯವಿಲ್ಲ. ಶಿಕ್ಷಣವನ್ನು ಯಾರು ಚೆನ್ನಾಗಿ ಧಾರಣೆ ಮಾಡಿಕೊಳ್ಳುವರೋ ಅವರು ಬೇಗನೆ ಸ್ವರ್ಗದಲ್ಲಿ ಬರುತ್ತಾರೆ, ಇಲ್ಲದಿದ್ದರೆ ತಡವಾಗಿ ಬರುತ್ತಾರೆ. ಹೊಸ ಮನೆಯಲ್ಲಿ ಬರಬೇಕಲ್ಲವೇ. ಹೊಸ ಮನೆಯಲ್ಲಿಯೇ ಮಜಾ ಬರುತ್ತದೆಯಲ್ಲವೇ. ಸತ್ಯಯುಗದಲ್ಲಿ ಮೊಟ್ಟ ಮೊದಲಿಗೆ ಬರಬೇಕಾಗಿದೆ. ಮಮ್ಮಾ-ಬಾಬಾರವರು ಸತ್ಯಯುಗದಲ್ಲಿ ಬರುತ್ತಾರೆ ಅಂದಮೇಲೆ ನಾವೇಕೆ ತಡವಾಗಿ ಬರಬೇಕು! ನೀವೂ ಸಹ ಬ್ರಹ್ಮಾರವರನ್ನು ಫಾಲೋ ಮಾಡಿರಿ, ತಂದೆಯನ್ನು ನೆನಪು ಮಾಡುತ್ತಾ ಇರಿ. ಯಾವುದೇ ಮಾತಿನಲ್ಲಿ ಕಷ್ಟವಾದರೆ ಶಿವ ತಂದೆಯನ್ನು ಕೇಳಿರಿ, ಶ್ರೀಮತದಿಂದಲೇ ಶ್ರೇಷ್ಠರಾಗುತ್ತೀರಿ. ಹಳೆಯ ಪ್ರಪಂಚದಲ್ಲಿ ಪಂಚ ವಿಕಾರರೂಪಿ ರಾವಣನ ಮತದಂತೆ ನಡೆಯುತ್ತಾ ಬಂದಿದ್ದೀರಿ. ಮೊಟ್ಟ ಮೊದಲನೆಯದು ದೇಹಾಭಿಮಾನವಾಗಿದೆ. ಈಗ ನೀವು ಮಕ್ಕಳು ದೇಹೀ-ಅಭಿಮಾನಿಗಳಾಗಬೇಕಾಗಿದೆ. ನಾನಾತ್ಮನು ಪರಮಧಾಮ ನಿವಾಸಿಯಾಗಿದ್ದೇನೆ, ಅದಕ್ಕೆ ಶಾಂತಿಧಾಮವೆಂದು ಹೇಳಲಾಗುತ್ತದೆ. ಇಂತಹ ಮಾತುಗಳನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ, ತಂದೆಯೇ ತಿಳಿಸುತ್ತಾರೆ. ನಿಮ್ಮ ಆತ್ಮವು ಈ ಕರ್ಮೇಂದ್ರಿಯಗಳಿಂದ ಕೇಳಿಸಿಕೊಳ್ಳುತ್ತದೆ. ಸತ್ಯಯುಗದಲ್ಲಿ ಎಂದೂ ಶರೀರವು ರೋಗಿಯಾಗುವುದಿಲ್ಲ. ಇಲ್ಲಂತೂ ಅಕಾಲಮೃತ್ಯು ಆಗಿ ಬಿಡುತ್ತದೆ. ಸತ್ಯಯುಗದಲ್ಲಿ ಅಂತಹ ಮಾತೇ ಇರುವುದಿಲ್ಲ, ಅದಕ್ಕೆ ಹೆವೆನ್ ಸ್ವರ್ಗ, ಪ್ಯಾರಡೈಸ್ ಎಂದು ಹೇಳಲಾಗುತ್ತದೆ ನಂತರ ನಾವು ಚಕ್ರವನ್ನು ಸುತ್ತಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ 84 ಜನ್ಮಗಳನ್ನು ಪೂರ್ಣಗೊಳಿಸಿದ್ದೇವೆ. ಪುನಃ ತಂದೆಯು ಬಂದು ಮಕ್ಕಳನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ, ನೀವೀಗ ಹೊಸ ಪ್ರಪಂಚಕ್ಕೆ ಯೋಗ್ಯರಾಗುತ್ತಿದ್ದೀರಿ. ಈಗಂತೂ ನರಕವಾಗಿದೆ, ನೀವೀಗ ನರಕವಾಸಿಗಳಿಂದ ಸ್ವರ್ಗವಾಸಿಗಳಾಗುವ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ನಾವು ಶಿವ ತಂದೆಯ ಬಳಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆ, ಕಲ್ಪ-ಕಲ್ಪವೂ ಪ್ರತೀ 5000 ವರ್ಷಗಳ ನಂತರ ನಾವು ಅದೃಷ್ಟವನ್ನು ರೂಪಿಸಿಕೊಳ್ಳುತ್ತೇವೆಂದು ಹೇಳುತ್ತೀರಿ. ಈಗ ಸ್ವರ್ಗವಾಸಿಗಳಾಗುತ್ತೀರಿ ನಂತರ ರಾವಣ ರಾಜ್ಯವು ಆರಂಭವಾಗುವುದರಿಂದ ವಿಕಾರಿಗಳಾಗಿ ಬಿಡುತ್ತೀರಿ. ಈಗ ಎಲ್ಲರೂ ವಿಕಾರಿ ಪತಿತರಾಗಿದ್ದಾರೆ. ಆದ್ದರಿಂದ ತಂದೆಯು ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ಹೊಸ ಪ್ರಪಂಚದಲ್ಲಿ ಕೇವಲ ನೀವು ಮಕ್ಕಳೇ ಇರುತ್ತೀರಿ, ಉಳಿದೆಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಮೇಲೆ ಆತ್ಮಗಳ ವೃಕ್ಷವಿದೆ, ನಂತರ ತಮ್ಮ-ತಮ್ಮ ಸಮಯದಲ್ಲಿ ಅಲ್ಲಿಂದ ಬರುತ್ತೇವೆ. ಯಾವಾಗ ನಮ್ಮ ರಾಜ್ಯವಿರುವುದೋ ಅಲ್ಲಿ ಮತ್ತ್ಯಾವ ಧರ್ಮದವರೂ ಇರುವುದಿಲ್ಲ, ದ್ವಾಪರದಲ್ಲಿ ರಾವಣ ರಾಜ್ಯವು ಆರಂಭವಾಗುತ್ತದೆ. ಇದೆಲ್ಲಾ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಇಲ್ಲಿ ನರಕವಾಸಿಗಳಿಂದ ಸ್ವರ್ಗವಾಸಿಗಳಾಗಬೇಕಾಗಿದೆ. ನರಕವಾಸಿ ಮನುಷ್ಯರನ್ನು ಅಸುರರೆಂತಲೂ ಸ್ವರ್ಗವಾಸಿ ಮನುಷ್ಯರನ್ನು ದೇವತೆಗಳೆಂತಲೂ ಹೇಳುತ್ತಾರೆ. ಈಗ ಎಲ್ಲರೂ ಆಸುರೀ ಸ್ವಭಾವದವರಾಗಿದ್ದಾರೆ. ಈಗ ತಂದೆಯು ಕುಳಿತು ಪುರುಷಾರ್ಥ ಮಾಡಿಸುತ್ತಾರೆ. ತಂದೆಯು ಹೇಳುತ್ತಾರೆ - ಪವಿತ್ರರಾಗಿರಿ, ಪ್ರತಿಯೊಂದು ಮಾತಿನಲ್ಲಿ ಕೇಳುತ್ತಾ ಇರಿ. ಬಾಬಾ, ವ್ಯಾಪಾರದಲ್ಲಿ ಸುಳ್ಳು ಹೇಳಬೇಕಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಸುಳ್ಳು ಹೇಳುವುದರಿಂದ ಸ್ವಲ್ಪ ಪಾಪವಾಗುವುದು, ಅದು ಮತ್ತೆ ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ಪಾಪವು ಕಳೆಯುತ್ತಾ ಹೋಗುತ್ತದೆ. ಈಗಿನ ಪ್ರಪಂಚದಲ್ಲಿ ಎಲ್ಲರೂ ಪಾಪ ಮಾಡುತ್ತಾ ಇರುತ್ತಾರೆ, ಎಷ್ಟೊಂದು ಲಂಚವನ್ನು ತಿನ್ನುತ್ತಿರುತ್ತಾರೆ. ಈ ಪ್ರದರ್ಶನಿ ಚಿತ್ರಗಳು ನಕ್ಷೆಗಳಾಗಿವೆ, ಇಂತಹ ನಕ್ಷೆಗಳು ಎಲ್ಲಿಯೂ ಇಲ್ಲ. ಒಂದುವೇಳೆ ಯಾರಾದರೂ ನೋಡಿ ಕಾಪಿ ಮಾಡಬಹುದು ಆದರೆ ಅದರ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರದರ್ಶನಿ, ಮೇಳಗಳಲ್ಲಿ ಅನೇಕರು ಬರುತ್ತಾರೆ ಆಗ ಹೇಳಲಾಗುತ್ತದೆ - ಏಳು ದಿನಗಳ ಕಾಲ ತಿಳಿದುಕೊಳ್ಳಲು ಬನ್ನಿರಿ. ಅದರಿಂದ ನೀವು ಸ್ವರ್ಗವಾಸಿಗಳಾಗಲು ಯೋಗ್ಯರಾಗಿ ಬಿಡುತ್ತೀರಿ, ಈಗ ನರಕವಾಸಿಗಳಾಗಿದ್ದೀರಿ. ಏಣಿ ಚಿತ್ರದಲ್ಲಿ ನೋಡಿ ಎಷ್ಟು ಸ್ಪಷ್ಟವಾಗಿದೆ! ಇದು ಪತಿತ ಪ್ರಪಂಚವಾಗಿದೆ, ಪಾವನ ಪ್ರಪಂಚವು ಮೇಲ್ಭಾಗದಲ್ಲಿದೆ. |
ಈಗ ನೀವು ಮಕ್ಕಳು ಶಿವ ತಂದೆಯೊಂದಿಗೆ ಬಾಬಾ ನಾವು ನರಕವಾಸಿಗಳಿಂದ ಸ್ವರ್ಗವಾಸಿಗಳು ಅವಶ್ಯವಾಗಿ ಆಗುತ್ತೇವೆಂದು ಪ್ರತಿಜ್ಞೆ ಮಾಡುತ್ತೀರಿ, ನೀವೀಗ ಶಿವಾಲಯದಲ್ಲಿ ಹೋಗಲು ತಯಾರಾಗುತ್ತಿದ್ದೀರಿ ಆದ್ದರಿಂದ ವಿಕಾರದಲ್ಲಿ ಎಂದೂ ಹೋಗಬಾರದು. ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ ಆದರೆ ಪತಿತರಾಗಬಾರದು. ಪತಿತರಾಗುವುದರಿಂದ ದೊಡ್ಡ ತಪ್ಪಾಗಿ ಬಿಡುವುದು ಮತ್ತೆ ಧರ್ಮರಾಜನ ಬಳಿ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮನುಷ್ಯರಿಂದ ದೇವತೆಗಳಾಗಬೇಕೆಂದರೆ ಯಾವುದೆಲ್ಲಾ ಅಸುರೀ ಸ್ವಭಾವ ಇದೆಯೋ ಸುಳ್ಳು ಹೇಳುವ ಹವ್ಯಾಸವಿದೆಯೋ ಅದನ್ನು ತ್ಯಾಗ ಮಾಡಬೇಕಾಗಿದೆ. ದೈವೀ ಸ್ವಭಾವವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. |
2. ಮನೆಗೆ ಹೋಗುವುದಕ್ಕಾಗಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಮಾಯೆಯ ಬಿರುಗಾಳಿಗಳು ಬಂದರೂ ಸಹ ಕರ್ಮೇಂದ್ರಿಯಗಳಿಂದ ಎಂದೂ ಯಾವುದೇ ವಿಕರ್ಮ ಮಾಡಬಾರದು. |
ಓಂ ಶಾಂತಿ. ಹೇಗೆ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆ ಪ್ರಿಯವಾಗಿರುವಂತೆ ಆತ್ಮಿಕ ತಂದೆಗೆ ಆತ್ಮಿಕ ಮಕ್ಕಳೂ ಪ್ರಿಯವಾಗಿರುತ್ತಾರೆ ಏಕೆಂದರೆ ಶ್ರೀಮತದನುಸಾರ ಇಡೀ ವಿಶ್ವದ ಕಲ್ಯಾಣ ಮಾಡುತ್ತಿದ್ದೀರಿ ಕಲ್ಯಾಣಕಾರಿ ಗಳೆಲ್ಲರೂ ಪ್ರಿಯರಾಗುತ್ತಾರೆ. ನೀವೂ ಸಹ ಪರಸ್ಪರ ಸಹೋದರ ಸಹೋದರರಾಗಿದ್ದೀರಿ ಅಂದಾಗ ಅವಶ್ಯವಾಗಿ ನೀವು ಒಬ್ಬರು ಇನ್ನೊಬ್ಬರಿಗೆ ಪ್ರಿಯರಾಗುತ್ತೀರಿ. ಎಷ್ಟು ಈ ತಂದೆಯ ಮಕ್ಕಳಲ್ಲಿ ಪರಸ್ಪರ ಪ್ರೀತಿ ಇರುವುದೋ ಅಷ್ಟು ಹೊರಗಿನವರೊಂದಿಗೆ ಇರುವುದಿಲ್ಲ. ನಿಮ್ಮಲ್ಲಿಯೂ ಪರಸ್ಪರ ಬಹಳ ಪ್ರೀತಿಯಿರಬೇಕು. ಒಂದು ವೇಳೆ ಸಹೋದರ ಸಹೋದರರೇ ಇಲ್ಲಿ ಹೊಡೆದಾಡಿದರೆ, ಜಗಳವಾಡಿದರೆ, ಅಥವಾ ಪ್ರೀತಿ ಮಾಡದಿದ್ದರೆ ಅವರು ಸಹೋದರರೇ ಅಲ್ಲ. ನಿಮ್ಮಲ್ಲಿ ಪರಸ್ಪರ ಪ್ರೀತಿ ಇರಬೇಕು. ತಂದೆಗೆ ಆತ್ಮಗಳ ಜೊತೆ ಪ್ರೀತಿಯಿದೆಯಲ್ಲವೆ! ಅಂದಮೇಲೆ ನೀವಾತ್ಮರಿಗೆ ಪರಸ್ಪರ ಬಹಳ ಪ್ರೀತಿಯಿರಬೇಕು. ಸತ್ಯಯುಗದಲ್ಲಿ ಎಲ್ಲ ಆತ್ಮಗಳು ಒಬ್ಬರು ಇನ್ನೊಬ್ಬರಿಗೆ ಪ್ರಿಯವಾಗಿರುತ್ತಾರೆ ಏಕೆಂದರೆ ಶರೀರದ ಅಭಿಮಾನವಿರುವುದಿಲ್ಲ. ನೀವು ಸಹೋದರ ಸಹೋದರರು ಒಬ್ಬ ತಂದೆಯ ನೆನಪಿನಿಂದ ಇಡೀ ವಿಶ್ವದ ಕಲ್ಯಾಣ ಮಾಡುತ್ತೀರಿ, ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತೀರಿ ಅಂದ ಮೇಲೆ ನಿಮ್ಮ ಸಹೋದರರ ಕಲ್ಯಾಣ ಮಾಡಬೇಕು. ಆದ್ದರಿಂದ ತಂದೆಯು ದೇಹಾಭಿಮಾನದಿಂದ ದೇಹೀ ಅಭಿಮಾನಿಯನ್ನಾಗಿ ಮಾಡುತ್ತಿದ್ದಾರೆ. ಆ ಲೌಕಿಕ ಸಹೋದರಂತೂ ಪರಸ್ಪರ ಹಣಕ್ಕಾಗಿ, ಪಾಲಿಗಾಗಿ ಹೊಡೆದಾಡುತ್ತಾರೆ. ಆದರೆ ಇಲ್ಲಿ ಹೊಡೆದಾಡುವ ಜಗಳವಾಡುವ ಮಾತಿಲ್ಲ, ಪ್ರತಿಯೊಬ್ಬರೂ ನೇರ ಸಂಬಂಧವನ್ನಿಟ್ಟುಕೊಳ್ಳಬೇಕಾಗುತ್ತದೆ. ಇದು ಬೇಹದ್ದಿನ ಮಾತಾಗಿದೆ. ಯೋಗಬಲದಿಂದ ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ಹೇಗೆ ಲೌಕಿಕ ತಂದೆಯಿಂದ ಸ್ಥೂಲ ಆಸ್ತಿಯನ್ನು ಪಡೆಯುತ್ತಾರೆ, ಇದಂತೂ ಆತ್ಮಿಕ ತಂದೆಯಿಂದ ಆತ್ಮಿಕ ಮಕ್ಕಳಿಗೆ ಆತ್ಮಿಕಆಸ್ತಿಯಾಗಿದೆ. ಪ್ರತಿಯೊಬ್ಬರೂ ನೇರವಾಗಿ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಎಷ್ಟೆಷ್ಟು ವ್ಯಕ್ತಿಗತವಾಗಿ ತಂದೆಯನ್ನು ನೆನಪು ಮಾಡುತ್ತೀರಿ ಅಷ್ಟು ಆಸ್ತಿಯು ಸಿಗುವುದು. ತಂದೆಯು ನೋಡುತ್ತಾರೆ - ಪರಸ್ಪರ ಹೊಡೆದಾಡಿದರೆ ತಂದೆಯು ಹೇಳುತ್ತಾರೆ ನೀವು ನಿರ್ಧನಿಕರೇನು? ಆತ್ಮೀಯ ಸಹೋದರರು ಜಗಳಾಡಬಾರದು, ಒಂದು ವೇಳೆ ಸಹೋದರರಾಗಿಯೂ ಜಗಳವಾಡಿದರೆ, ಪ್ರೀತಿಯಿಲ್ಲವೆಂದರೆ ರಾವಣನ ಮಕ್ಕಳಾದಂತೆ. ಅವರೆಲ್ಲರೂ ಆಸುರೀ ಸಂತಾನರು, ಮತ್ತೆ ದೈವೀ ಸಂತಾನರಲ್ಲಿ ಮತ್ತು ಆಸುರೀ ಸಂತಾನರಲ್ಲಿ ವ್ಯತ್ಯಾಸವೇ ಇಲ್ಲದಂತಾಗುತ್ತದೆ ಏಕೆಂದರೆ ದೇಹಾಭಿಮಾನಿಯಾಗುವುದರಿಂದಲೇ ಹೊಡೆದಾಡುತ್ತಾರೆ. ಆತ್ಮವು ಆತ್ಮನೊಂದಿಗೆ ಹೊಡೆದಾಡುವುದಿಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಪರಸ್ಪರ ಉಪ್ಪುನೀರಾಗಬೇಡಿ. ಆಗುತ್ತಾರೆ ಆದ್ದರಿಂದಲೇ ತಿಳಿಸುತ್ತಾರೆ - ಅಂತಹವರಿಗೆ ತಂದೆಯೂ ಹೇಳುತ್ತಾರೆ - ಇವರು ದೇಹಾಭಿಮಾನಿ ಮಕ್ಕಳಾಗಿದ್ದಾರೆ, ರಾವಣನ ಮಕ್ಕಳಾಗಿದ್ದಾರೆ ನನ್ನ ಮಕ್ಕಳಂತೂ ಅಲ್ಲ ಏಕೆಂದರೆ ಪರಸ್ಪರ ಉಪ್ಪು ನೀರಾಗಿ ಇರುತ್ತಾರೆ. ನೀವು 21 ಜನ್ಮಗಳಲ್ಲಿ ಕ್ಷೀರಖಂಡವಾಗಿ ಇರುತ್ತೀರಿ, ಅಂದಾಗ ಈ ಸಮಯದಲ್ಲಿ ದೇಹೀ ಅಭಿಮಾನಿಗಳಾಗಿರಿ. ಒಂದು ವೇಳೆ ಪರಸ್ಪರ ಆಗುವುದಿಲ್ಲವೆಂದರೆ ಆ ಸಮಯದಲ್ಲಿ ನಾವು ರಾವಣನ ಸಂಪ್ರದಾಯದವರೆಂದು ತಿಳಿಯಬೇಕು. ಪರಸ್ಪರ ಉಪ್ಪು ನೀರಾಗಿರುವುದರಿಂದ ತಂದೆಯ ಗೌರವ ಕಳೆಯುತ್ತಾರೆ. ಈಶ್ವರೀಯ ಸಂತಾನರೆಂದು ಹೇಳಿಕೊಂಡರೂ ಅವರಲ್ಲಿ ಆಸುರೀ ಗುಣಗಳಿದ್ದರೆ ಅವರು ದೇಹಾಭಿಮಾನಿಗಳು ಎಂದರ್ಥ. ದೇಹೀ ಅಭಿಮಾನಿಗಳಲ್ಲಿ ಈಶ್ವರೀಯ ಗುಣಗಳಿರುತ್ತವೆ. ಇಲ್ಲಿ ನೀವು ಈಶ್ವರೀಯ ಗುಣಗಳನ್ನು ಧಾರಣೆ ಮಾಡಿದಾಗಲೇ ತಂದೆಯ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಮತ್ತೆ ಅದೇ ಸಂಸ್ಕಾರವು ಜೊತೆಯಲ್ಲಿ ಇರುತ್ತದೆ. ತಂದೆಗೆ ತಿಳಿಯುತ್ತದೆ - ಮಕ್ಕಳು ದೇಹಾಭಿಮಾನದಲ್ಲಿ ಬಂದು ಉಪ್ಪು ನೀರಾಗುತ್ತಾರೆ ಅಂತಹವರು ಈಶ್ವರನ ಮಕ್ಕಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ತಮಗೆ ಎಷ್ಟೊಂದು ನಷ್ಟ ಮಾಡಿಕೊಳ್ಳುತ್ತಾರೆ, ಮಾಯೆಗೆ ವಶರಾಗುತ್ತಾರೆ, ಪರಸ್ಪರ ಉಪ್ಪು ನೀರಾಗುತ್ತಾರೆ(ಮತಭೇದ). ಹಾಗೆ ಹೇಳುವುದಾದರೆ ಇಡೀ ಪ್ರಪಂಚವೇ ಉಪ್ಪು ನೀರಾಗಿದೆ ಆದರೆ ಒಂದು ವೇಳೆ ಈಶ್ವರೀಯ ಸಂತಾನರೂ ಸಹ ಉಪ್ಪು ನೀರಾದರೆ ವ್ಯತ್ಯಾಸವೇನಾಯಿತು? ಅವರಂತೂ ತಂದೆಯ ನಿಂದನೆ ಮಾಡಿಸುತ್ತಾರೆ. ತಂದೆಯ ನಿಂದನೆ ಮಾಡಿಸುವವರು, ಉಪ್ಪು ನೀರಾಗಿ ವರ್ತಿಸುವವರು, ಪದವಿ ಪಡೆಯಲು ಸಾಧ್ಯವಿಲ್ಲ. ಅವರನ್ನು ನಾಸ್ತಿಕರು ಎಂದು ಹೇಳಬಹುದು. ಆಸ್ತಿಕರಾಗುವ ಮಕ್ಕಳು ಎಂದೂ ಹೊಡೆದಾಡುವುದಿಲ್ಲ. ನೀವು ಪರಸ್ಪರ ಜಗಳವಾಡಬಾರದು. ಪ್ರೇಮದಿಂದ ಇರುವುದನ್ನು ಇಲ್ಲಿಂದಲೇ ಕಲಿಯಬೇಕು. ಇದರಿಂದ ಮುಂದೆ 21 ಜನ್ಮಗಳು ಪರಸ್ಪರ ಪ್ರೇಮ ಇರುತ್ತದೆ. ತಂದೆಯ ಮಕ್ಕಳು ಎಂದು ಕರೆಸಿಕೊಂಡ ಮೇಲೂ ಸಹೋದರ ಸಹೋದರಾಗುವುದಿಲ್ಲವೆಂದರೆ ಅವರು ಆಸುರೀ ಸಂತಾನರು. ತಂದೆಯು ಮಕ್ಕಳಿಗೆ ತಿಳಿಸಲು ಮುರಳಿ ನುಡಿಸುತ್ತಾರೆ ಆದರೆ ದೇಹಾಭಿಮಾನದ ಕಾರಣ ಬಾಬಾ ನಮಗೋಸ್ಕರ ಹೇಳುತ್ತಾರೆ ಎನ್ನುವುದೂ ತಿಳಿಯುವುದಿಲ್ಲ. ಮಾಯೆ ಬಹಳ ತೀಕ್ಷ್ಣವಾಗಿದೆ ಹೇಗೆ ಇಲಿ ಕಚ್ಚಿದಾಗ ಗೊತ್ತಾಗುವುದಿಲ್ಲ ಹಾಗೆ ಮಾಯೆಯೂ ಸಹ ಬಹಳ ಮಧುರವಾಗಿ ಕಚ್ಚುತ್ತದೆ ಅದು ಗೊತ್ತಾಗುವುದೇ ಇಲ್ಲ. ಪರಸ್ಪರ ಮುನಿಸಿಕೊಳ್ಳುವುದು ಆಸುರೀ ಸಂಪ್ರದಾಯದವರ ಕೆಲಸವಾಗಿದೆ. ಬಹಳ ಸೇವಾಕೇಂದ್ರಗಳಲ್ಲಿ ಉಪ್ಪು ನೀರಾಗಿ ವರ್ತಿಸುತ್ತಾರೆ, ಇನ್ನೂ ಯಾರೂ ಸಂಪೂರ್ಣರಾಗಿಲ್ಲ. ಮಾಯೆ ಯುದ್ಧ ಮಾಡುತ್ತಿರುತ್ತದೆ. ಮಾಯೆ ಹೀಗೆ ತಲೆ ತಿರುಗಿಸುತ್ತದೆ, ಅದು ತಿಳಿಯುವುದೇ ಇಲ್ಲ. ತಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ - ನಮ್ಮಲ್ಲಿ ಪರಸ್ಪರ ಪ್ರೇಮವಿದೆಯೇ ಅಥವಾ ಇಲ್ಲವೆ? ಪ್ರೇಮ ಸಾಗರನ ಮಕ್ಕಳಾಗಿದ್ದೀರಿ ಅಂದ ಮೇಲೆ ಪ್ರೇಮದಿಂದ ತುಂಬಿದ ಗಂಗೆಯಾಗಿರಬೇಕು. ಹೊಡೆದಾಡುವುದು- ಜಗಳಾಡುವುದು, ಅಲ್ಲ ಸಲ್ಲದ ಮಾತನಾಡುವುದುದಕ್ಕಿಂತ ಮಾತನಾಡದಿರುವುದು ಒಳ್ಳೆಯದು. ಕೆಟ್ಟದ್ದನ್ನು ಕೇಳಬೇಡಿ. . . . ಒಂದು ವೇಳೆ ಯಾರಲ್ಲಿಯಾದರೂ ಕ್ರೋಧದ ಅಂಶವಿದ್ದರೆ ಆ ಪ್ರೀತಿಯಿರುವುದಿಲ್ಲ. ಆದ್ದರಿಂದ ತಂದೆ ತಿಳಿಸುತ್ತಾರೆ - ಪ್ರತಿನಿತ್ಯವೂ ತಮ್ಮ ಚಾರ್ಟ್ನ್ನು ನೋಡಿಕೊಳ್ಳಿ. ಆಸುರೀ ಚಲನೆಯು ಸುಧಾರಣೆಯಾಗದಿದ್ದರೆ ಮತ್ತೆ ಅದೃಷ್ಟವೇನಾಗಬಹುದು? ಯಾವ ಪದವಿಯನ್ನು ಪಡೆಯುತ್ತೀರಿ? ತಂದೆ ತಿಳಿಸುತ್ತಾರೆ ಏನೂ ಸೇವೆ ಮಾಡದಿದ್ದರೆ ಅವರ ಸ್ಥಿತಿಯೇನಾಗಬಹುದು? ಪದವಿ ಕಡಿಮೆಯಾಗುವುದು. ಸಕ್ಷಾತ್ಕಾರವಂತೂ ಎಲ್ಲರಿಗೂ ಆಗಲೇ ಬೇಕು. ನಿಮಗೂ ನಿಮ್ಮ ವಿದ್ಯಾಭ್ಯಾಸದ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರವಾದ ನಂತರವೇ ನೀವು ವರ್ಗಾವಣೆಯಾಗುತ್ತೀರಿ. ವರ್ಗವಾಗಿ ನೀವು ಹೊಸ ಪ್ರಪಂಚದಲ್ಲಿ ಬರುತ್ತೀರಿ. ಅಂತ್ಯದಲ್ಲಿ ಯಾರು ಎಷ್ಟು ಅಂಕಗಳಿಂದ ತೇರ್ಗಡೆ ಆಗಿದ್ದಾರೆಂದು ಸಾಕ್ಷಾತ್ಕಾರ ಆಗುತ್ತದೆ. ಆ ಸಮಯದಲ್ಲಿ ಅಳುತ್ತಾರೆ, ದುಃಖಿಸುತ್ತಾರೆ, ಶಿಕ್ಷೆಯನ್ನೂ ಅನುಭವಿಸುತ್ತಾರೆ. ನಾವು ತಂದೆ ಹೇಳಿದ್ದನ್ನು ಪಾಲಿಸಲಿಲ್ಲವೆಂದು ಪಶ್ಚಾತ್ತಾಪ ಪಡುತ್ತಾರೆ. ತಂದೆಯಂತೂ ಪದೇ ಪದೇ ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಆಸುರೀ ಗುಣವಿರಬಾರದು. ಯಾರಲ್ಲಿ ದೈವೀ ಗುಣಗಳಿವೆ ಅವರು ತಮ್ಮ ಸಮಾನ ಮಾಡಿಕೊಳ್ಳಬೇಕು. ತಂದೆಯನ್ನು ನೆನಪು ಮಾಡುವುದಂತೂ ಬಹಳ ಸಹಜ. ಅಲ್ಫ್ ಮತ್ತು ಬೇ. ಅಲ್ಫ್ ಎಂದರೆ ತಂದೆ ಮತ್ತು ಬೇ ಅಂದರೆ ಬಾದಶಾಹಿ. ಅಂದಾಗ ಮಕ್ಕಳಿಗೆ ನಶೆಯಿರಬೇಕು. ಒಂದು ವೇಳೆ ಪರಸ್ಪರ ಉಪ್ಪು ನೀರಾದರೆ ಈಶ್ವರೀಯ ಸಂತಾನರೆಂದು ಹೇಗೆ ತಿಳಿಯುತ್ತೀರಿ! ಇವರು ಆಸುರೀ ಸಂತಾನರು, ಮಾಯೆ ಇವರ ಮೂಗು ಹಿಡಿದುಕೊಂಡಿದೆ ಎಂದು ತಂದೆಯು ತಿಳಿಯುತ್ತಾರೆ. ಇದು ಅವರಿಗೆ ತಿಳಿಯುವುದಿಲ್ಲ. ಅವರ ಸ್ಥಿತಿಯೇ ಏರುಪೇರಾಗುತ್ತದೆ, ಪದವಿಯೂ ಕಡಿಮೆಯಾಗುತ್ತದೆ. ನೀವು ಮಕ್ಕಳು ಅಂತಹವರಿಗೆ ಪ್ರೇಮದಿಂದ ಕಲಿಸಲು ಪ್ರಯತ್ನ ಮಾಡಬೇಕು. ಪ್ರೇಮದ ದೃಷ್ಟಿಯಿರಬೇಕು. ತಂದೆಯು ಪ್ರೇಮದಸಾಗರ ಆಗಿದ್ದಾರೆ ಆದ್ದರಿಂದ ಮಕ್ಕಳನ್ನು ಸೆಳೆಯುತ್ತಾರಲ್ಲವೆ ಅಂದಾಗ ನೀವೂ ಸಹ ಪ್ರೇಮದ ಸಾಗರರಾಗಬೇಕು. |
ತಂದೆ ಮಕ್ಕಳಿಗೆ ಬಹಳ ಪ್ರೀತಿಯಿಂದ ತಿಳಿಸುತ್ತಾರೆ, ಒಳ್ಳೆಯ ಮತವನ್ನು ಕೊಡುತ್ತಾರೆ. ಈಶ್ವರೀಯ ಮತ ಸಿಗುವುದರಿಂದ ನೀವು ಹೂಗಳಾಗುತ್ತೀರಿ, ಎಲ್ಲ ಗುಣಗಳನ್ನು ಕೊಡುತ್ತಾರೆ. ದೇವತೆಗಳಲ್ಲಿ ಪ್ರೀತಿಯಿರುತ್ತದೆ ಅಲ್ಲವೆ, ಅಂದಾಗ ಆ ಸ್ಥಿತಿಯನ್ನು ನೀವು ಇಲ್ಲಿಯೇ ರೂಪಿಸಿಕೊಳ್ಳಬೇಕು. ಈ ಸಮಯದಲ್ಲಿನಿಮಗೆ ಜ್ಞಾನವಿದೆ, ನಂತರ ದೇವತೆಗಳಾದಿರೆಂದರೆ ಜ್ಞಾನವು ಇರುವುದಿಲ್ಲ, ಅಲ್ಲಿ ದೈವೀ ಪ್ರೀತಿಯಿರುತ್ತದೆ ಆದ್ದರಿಂದ ತಾವು ಮಕ್ಕಳು ದೈವೀ ಗುಣಗಳನ್ನು ಧಾರಣೆ ಮಾಡಬೇಕು. ಈಗ ನೀವು ಪೂಜ್ಯರಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ನೀವು ಮಕ್ಕಳೂ ಸಹ ನಂಬರ್ವಾರ್ ಪುರುಷಾರ್ಥನುಸಾರ ತಿಳಿದುಕೊಂಡಿದ್ದೀರಿ. ಯಾರು ತಿಳಿದುಕೊಂಡಿಲ್ಲವೋ ಅವರು ಅನ್ಯರಿಗೂ ತಿಳಿಸಲು ಆಗುವುದಿಲ್ಲ. ಮತ್ತು ಪದವಿಯೂ ಕಡಿಮೆಯಾಗುತದೆ. ಶಾಲೆಯಲ್ಲಿ ಓದುವವರಲ್ಲಿ ಕೆಲವರ ಚಲನೆ ಕೆಟ್ಟುಹೋಗುತ್ತದೆ, ಇನ್ನೂ ಕೆಲವರದು ಸದಾ ಒಳ್ಳೆಯ ನಡವಳಿಕೆಯಿರುತ್ತದೆ, ಕೆಲವರು ಹಾಜರಾದರೆ, ಕೆಲವರು ಗೈರುಹಾಜರಿಯಾಗಿರುತ್ತಾರೆ. ಇಲ್ಲಿ ಯಾರು ಸದಾ ತಂದೆಯನ್ನು ನೆನಪು ಮಾಡುತ್ತಾರೆ ಸ್ವದರ್ಶನ ಚಕ್ರತಿರುಗಿಸುತ್ತಾರೆ ಅವರ ಹಾಜರಿಯಿರುತ್ತದೆ. ತಂದೆ ತಿಳಿಸುತ್ತಾರೆ - ಏಳುತ್ತಾ-ಕುಳಿತುಕೊಳ್ಳುತ್ತಾ ತಮ್ಮನ್ನು ಸ್ವದರ್ಶನ ಚಕ್ರಧಾರಿ ಎಂದು ತಿಳಿಯಿರಿ. ಮರೆತರೆ ಗೈರುಹಾಜರಿಯಾಗುತ್ತದೆ. ಯಾವಾಗ ಸದಾ ಹಾಜರಿರುತ್ತೀರಿ ಆಗ ಶ್ರೇಷ್ಠ ಪದವಿ ಪಡೆಯುತ್ತೀರಿ. ಮರೆತರೆ ಕಡಿಮೆ ಪದವಿ ಪಡೆಯುತ್ತೀರಿ. ತಂದೆಗೆ ಗೊತ್ತಿದೆ, ಇನ್ನೂ ಸಮಯವಿದೆ, ಶ್ರೇಷ್ಠ ಪದವಿಯನ್ನು ಪಡೆಯುವವರ ಬುದ್ಧಿಯಲ್ಲಿ ಈ ಚಕ್ರವು ತಿರುಗುತ್ತಿರಬಹುದು. ಶಿವ ತಂದೆಯ ನೆನಪಿರಲಿ, ಮುಖದಲ್ಲಿ ಜ್ಞಾನಾಮೃತವಿರಲಿ ಆಗ ಪ್ರಾಣ ತನುವನ್ನು ಬಿಟ್ಟು ಹೋಗಲಿ ಎಂದು ಹೇಳುತ್ತಾರೆ. ಯಾವುದೇ ವಸ್ತುವಿನೊಂದಿಗೆ ಪ್ರೀತಿಯಿದ್ದರೆ ಅಂತ್ಯ ಕಾಲದಲ್ಲಿ ಅದೇ ನೆನಪಿಗೆ ಬರುತ್ತದೆ. ತಿನ್ನುವ ಲೋಭವಿದ್ದರೆ ಸಾಯುವ ಸಮಯುದಲ್ಲಿ ಅದನ್ನು ತಿನ್ನಬೇಕೆಂದು ಆ ಪದಾರ್ಥವೇ ನೆನಪಿಗೆ ಬರುತ್ತದೆ. ಮತ್ತೆ ಪದವಿಭ್ರಷ್ಟರಾಗುತ್ತಾರೆ. ತಂದೆಯಂತೂ ಹೇಳುತ್ತಾರೆ - ಮಕ್ಕಳೇ, ಸ್ವದರ್ಶನಚಕ್ರಧಾರಿಗಳಾಗಿ ಶರೀರ ಬಿಡಿ, ಮತ್ತೇನೂ ನೆನಪಿಗೆ ಬರಬಾರದು. ಯಾವುದೇ ಸಂಬಂಧವಿಲ್ಲದೆ ಹೇಗೆ ಆತ್ಮವು ಒಂಟಿಯಾಗಿ ಬಂದಿದೆಯೋ ಹಾಗೆಯೇ ಹೋಗಬೇಕು. ಲೋಭವೂ ಕಡಿಮೆಯಿಲ್ಲ. ಲೋಭವಿದ್ದರೆ ಅಂತಿಮ ಸಮಯದಲ್ಲಿ ಅದೇ ನೆನಪಿಗೆ ಬರುತ್ತದೆ. ಅದು ಸಿಗಲಿಲ್ಲವೆಂದರೆ ಅದರ ಆಸೆಯಲ್ಲಿಯೇ ಶರೀರ ಬಿಡುತ್ತಾರೆ. ಆದ್ದರಿಂದ ನೀವು ಮಕ್ಕಳಲ್ಲಿ ಲೋಭ ಇರಬಾರದು. ತಂದೆ ತಿಳಿಸುತ್ತಾರೆ - ಅನೇಕರಿದ್ದಾರೆ ಆದರೆ ಇದನ್ನು ತಿಳಿದುಕೊಳ್ಳುವವರೇ ತಿಳಿದುಕೊಳ್ಳುತ್ತಾರೆ. ತಂದೆಯ ನೆನಪನ್ನು ಹೃದಯದಲ್ಲಿಟ್ಟುಕೊಳ್ಳಿ - ಬಾಬಾ, ಓಹೋ ಬಾಬಾ! ಕೇವಲ ಮುಖದಿಂದ ಬಾಬಾ, ಬಾಬಾ ಎಂದು ಹೇಳುವುದಲ್ಲ ಅಜಪಾಜಪವಾಗಿ ನಡೆಯುತ್ತಿರಲಿ. ತಂದೆಯ ನೆನಪಿನಲ್ಲಿ, ಕರ್ಮಾತೀತ ಸ್ಥಿತಿಯಲ್ಲಿ ಶರೀರ ಬಿಟ್ಟರೆ ಆಗ ಶ್ರೇಷ್ಠ ಪದವಿಯನ್ನು ಪಡೆಯಬಹುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪ್ರೇಮದಿಂದ ತುಂಬಿದ ಗಂಗೆಯಾಗಬೇಕು. ಎಲ್ಲರ ಪ್ರತಿ ಪ್ರೇಮದ ದೃಷಿ ಇಟ್ಟುಕೊಳ್ಳಬೇಕು. ಎಂದೂ ಬಾಯಿಂದ ಅಲ್ಲ ಸಲ್ಲದ ಮಾತುಗಳನ್ನುಆಡಬಾರದು. |
2. ಯಾವುದೇ ಪದಾರ್ಥದಲ್ಲಿ ಲೋಭವನ್ನಿಡಬಾರದು. ಸ್ವದರ್ಶನ ಚಕ್ರಧಾರಿಯಾಗಿರಬೇಕು. ಅಭ್ಯಾಸ ಮಾಡಬೇಕು ಅಂತ್ಯದ ಸಮಯದಲ್ಲಿ ಯಾವುದೇ ಪದಾರ್ಥವು ನೆನಪಾಗಬಾರದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೊಂದಿಗೆ ತಂದೆಯು ಸನ್ಮುಖದಲ್ಲಿ ಮಾತನಾಡುತ್ತಿದ್ದಾರೆ. ಮಕ್ಕಳೂ ಸಹ ತಿಳಿದುಕೊಂಡಿರುತ್ತೀರಿ - ನಮ್ಮ ಜೊತೆ ಬೇಹದ್ದಿನ ತಂದೆಯು ಮಾತನಾಡುತ್ತಿದ್ದಾರೆ, ಅವರು ಎಲ್ಲರಿಗಿಂತ ಅತಿ ಮಧುರವಾಗಿದ್ದಾರೆ. ತಂದೆಯು ಮಧುರರಾಗಿರುತ್ತಾರೆ, ಶಿಕ್ಷಕರು ಮಧುರರಾಗಿರುತ್ತಾರೆ ಏಕೆಂದರೆ ಇಬ್ಬರಿಂದಲೂ ಆಸ್ತಿಯು ಸಿಗುತ್ತದೆ. ಗುರುವಿನಿಂದ ಭಕ್ತಿಯ ಆಸ್ತಿಯು ಸಿಗುತ್ತದೆ. ಇಲ್ಲಂತೂ ಒಬ್ಬರಲ್ಲಿಯೇ ಮೂವರು ಸಿಗುತ್ತಾರೆ, ಖುಷಿಯೂ ಇರುತ್ತದೆ. ನೀವು ಅವರ ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆ ಯಾರಿಗೆ ಪತಿತ-ಪಾವನನೆಂದು ಹೇಳಲಾಗುತ್ತದೆಯೋ ಅವರೇ ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ, ಆ ಬೀಜವು ಜಡವಾಗಿರುತ್ತದೆ ಇವರು ಚೈತನ್ಯವಾಗಿದ್ದಾರೆ. ಇವರಿಗೆ ಸತ್ಚಿತ್ ಆನಂದ ಸ್ವರೂಪನೆಂದು ಹೇಳಲಾಗುತ್ತದೆ ಮತ್ತೆ ಅವರಿಗೆ ಮಹಿಮೆಯೂ ಇದೆ. ಅವರು ಜ್ಞಾನ ಸಾಗರನಾಗಿದ್ದಾರೆ ಆದರೆ ಅವರಿಂದ ಯಾವ ಜ್ಞಾನವು ಸಿಗುತ್ತದೆಯೆಂಬುದು ಯಾರಿಗೂ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ, ಯಾರಿಗೆ ತಂದೆಯು ಜ್ಞಾನವನ್ನು ಕೊಡುತ್ತಿದ್ದಾರೆಯೋ ಅವರೇ ಭಕ್ತಿಮಾರ್ಗದಲ್ಲಿ ಇವರ ಮಂದಿರ, ಶಾಸ್ತ್ರ ಇತ್ಯಾದಿಗಳನ್ನು ರಚಿಸುತ್ತಾರೆ. ಇದನ್ನೂ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಪ್ರತೀ 5000 ವರ್ಷಗಳ ನಂತರ ಈ ಕಲ್ಪದ ಸಂಗಮವು ಬರುತ್ತದೆ. ಇದಕ್ಕೆ ಆತ್ಮಿಕ ಅವಿನಾಶಿ ಪುರುಷೋತ್ತಮ ಸಂಗಮಯುಗವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಉತ್ತಮ ಪುರುಷರು ಅನೇಕರಿರುತ್ತಾರೆ ಆದರೆ ಅವರು ಒಂದು ಜನ್ಮದಲ್ಲಿ ಉತ್ತಮ ಪುರುಷಾಗಿರುತ್ತಾರೆ ನಂತರ ಮಧ್ಯಮ, ಕನಿಷ್ಠರಾಗಿ ಬಿಡುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನು ನೋಡಿ, ಎಷ್ಟು ಉತ್ತಮ ಪುರುಷರಾಗಿದ್ದಾರೆ! ಇವರು ಪುರುಷೋತ್ತಮ ಮತ್ತು ಪುರುಷೋತ್ತಮೆ ಆಗಿದ್ದಾರೆ. ಇಬ್ಬರನ್ನೂ ಇಷ್ಟು ಉತ್ತಮರನ್ನಾಗಿ ಯಾರು ಮಾಡಿದರು! ಶ್ರೇಷ್ಠಾತಿ ಶ್ರೇಷ್ಠರು ಭಗವಂತನಾಗಿದ್ದಾರೆಂದು ಗಾಯನವಿದೆ, ಅವರು ಪರಮಧಾಮದಲ್ಲಿ ಇರುತ್ತಾರೆ. ಮನುಷ್ಯ ಸೃಷ್ಟಿಯಲ್ಲಿ ಶ್ರೇಷ್ಠಾತಿ ಶ್ರೇಷ್ಠರು ಈ ವಿಶ್ವ ಮಹಾರಾಜ -ಮಹಾರಾಣಿಯಾಗಿದ್ದಾರೆ. ಇವರು ಶ್ರೇಷ್ಠಾತಿ ಶ್ರೇಷ್ಠ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರು ಈ ರಾಜ್ಯವನ್ನು ಹೇಗೆ ಪಡೆದರು! ಇದು ಯಾರಿಗೂ ತಿಳಿದಿಲ್ಲ. ತಂದೆಯು ನಿಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರು ಎಷ್ಟು ಪ್ರಿಯರೆನಿಸಬೇಕು! ಅವರ ಮತದಂತೆ ನಡೆಯಬೇಕಾಗಿದೆ. ಇಷ್ಟು ಶ್ರೇಷ್ಠ ವಿಶ್ವದ ಮಾಲೀಕರನ್ನಾಗಿ ಮಾಡುವಂತಹ ತಂದೆಯು ಎಷ್ಟು ಸಾಧಾರಣ ರೀತಿಯಿಂದ ಓದಿಸುತ್ತಾರೆ! ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯು ಭಾರತದಲ್ಲಿ ಬರುತ್ತಾರೆ. ಇಲ್ಲಿ ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಈಗ ಸ್ಮೃತಿ ಬಂದಿದೆ - ನಾವು ಸ್ವರ್ಗವಾಸಿಗಳು 84 ಜನ್ಮಗಳನ್ನು ಪಡೆದು ನರಕವಾಸಿಗಳಾಗಿದ್ದೇವೆ. ಪುನಃ ಸ್ವರ್ಗವಾಸಿಗಳನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗುವುದು. ಸತೋಪ್ರಧಾನರಾಗದೇ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಶಿಕ್ಷೆಯೂ ಸಹ ಆತ್ಮಕ್ಕೇ ಸಿಗುತ್ತದೆಯಲ್ಲವೆ. ಗರ್ಭ ಜೈಲಿನಲ್ಲಿ ಶರೀರ ಧಾರಣೆ ಮಾಡಿಸಿ ನಂತರ ಶಿಕ್ಷೆ ಕೊಡುತ್ತಾರೆ. ಮಕ್ಕಳೇ, ಬಹಳ ದುಃಖವನ್ನು ಅನುಭವಿಸಬೇಕಾಗುತ್ತದೆ. ತ್ರಾಹಿ ತ್ರಾಹಿ ಎನ್ನುತ್ತಾರೆ, ಮತ್ತೆಂದೂ ನಾನು ಪಾಪ ಮಾಡುವುದಿಲ್ಲ ಎಂದು ಹೇಳುತ್ತಾರೆ. ನೀವು ಮಕ್ಕಳು ಗರ್ಭ ಜೈಲಿನಲ್ಲಿ ಹೋಗಬಾರದು, ಅಲ್ಲಿ ಗರ್ಭವು ಮಹಲಿನಂತಿರುತ್ತದೆ ಏಕೆಂದರೆ ಪಾಪವಿರುವುದಿಲ್ಲ. ಇಲ್ಲಿ ರಾವಣ ರಾಜ್ಯದಲ್ಲಿ ಪಾಪವಾಗುತ್ತದೆ ಆದ್ದರಿಂದ ರಾಮ ರಾಜ್ಯ ಬೇಕೆಂದು ಬಯಸುತ್ತಾರೆ ಆದರೆ ರಾವಣ ರಾಜ್ಯವೆಂದರೇನು ಎಂಬುದನ್ನು ತಿಳಿದುಕೊಂಡಿಲ್ಲ. ರಾವಣನನ್ನು ಒಂದು ಸಲ ಸುಟ್ಟರೆ ಸಮಾಪ್ತಿಯಾಗಬೇಕು ಆದರೆ ಮತ್ತೆ-ಮತ್ತೆ ಸುಡುತ್ತಾರೆ. ಅಂದಮೇಲೆ ಇನ್ನೂ ಸತ್ತಿಲ್ಲವೆಂದರ್ಥ. ಮತ್ತೆ ಇದೆಲ್ಲವನ್ನೂ ಮಾಡುವುದರಿಂದ ಏನು ಲಾಭ? ಅವರಂತೂ ಹೋಗಿ ಲಂಕೆಯನ್ನು ಲೂಟಿ ಮಾಡಿ ಬರುತ್ತಾರೆ. ವಾಸ್ತವದಲ್ಲಿ ನೀವು ಈ ಸಮಯದಲ್ಲಿ ರಾವಣನ ಮೇಲೆ ಜಯ ಗಳಿಸುತ್ತೀರಿ ಮತ್ತು ಸತ್ಯಯುಗದ ಮಾಲೀಕರಾಗುತ್ತೀರಿ. ಅಜ್ಮೀರಿನಲ್ಲಿ ವೈಕುಂಠದ ಮಾದರಿಯನ್ನು ತೋರಿಸಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ, ತಂದೆಯು ಮಕ್ಕಳನ್ನು ಪುನಃ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ, ನಾವು ವಜ್ರ-ವೈಡೂರ್ಯಗಳ ಮಹಲುಗಳಲ್ಲಿ ರಾಜ್ಯಭಾರ ಮಾಡುತ್ತೇವೆ. |
ಈಗ ನೀವು ಮಕ್ಕಳು ಯೋಗಬಲದಿಂದ ನಿರ್ವಿಕಾರಿ, ಸತೋಪ್ರಧಾನರಾಗುತ್ತೀರಿ. ಆತ್ಮವು ಸಂಪೂರ್ಣ ನಿರ್ವಿಕಾರಿಯಾಗಿ ಮತ್ತೆ ಶಾಂತಿಧಾಮಕ್ಕೆ ಹೊರಟು ಹೋಗುವುದು. ಅಲ್ಲಿ ದುಃಖದ ಮಾತಿಲ್ಲ. ತಂದೆಯು ತಿಳಿಸಿದ್ದಾರೆ- ಈ ನಾಟಕದಲ್ಲಿ ನಿಮ್ಮದು ಎಲ್ಲರಿಗಿಂತ ಮುಖ್ಯವಾದುದು ಹೀರೋ-ಹೀರೋಯಿನ್ ಪಾತ್ರವಾಗಿದೆ. ರಾಜ್ಯವನ್ನು ಪಡೆಯುವುದು ಮತ್ತು ಕಳೆದುಕೊಳ್ಳುವುದು ಇದು ಆಟವಾಗಿದೆ. ನೀವು ಹೀರೋ-ಹೀರೋಯಿನ್ ಆಗಿದ್ದೀರಿ, ಹೀರೋ ಅಂದರೆ ಮುಖ್ಯ ಪಾತ್ರಧಾರಿಗಳಾಗಿದ್ದೀರಿ. ನೀವು ಸತ್ಯಯುಗದಲ್ಲಿ ಪವಿತ್ರ ಗೃಹಸ್ಥ ಆಶ್ರಮದಲ್ಲಿದ್ದಿರಿ, ಕಲಿಯುಗದಲ್ಲಿ ಅಪವಿತ್ರ ಗೃಹಸ್ಥ ವ್ಯವಹಾರವಾಗಿದೆ. ಈಗ ತಂದೆಯು ಸತ್ಯಯುಗದಲ್ಲಿ ಕರೆದುಕೊಂಡು ಹೋಗುವರು, ಅಲ್ಲಿ ಲಕ್ಷ್ಮೀ-ನಾರಾಯಣ ಸೂರ್ಯವಂಶಿಯರ ರಾಜ್ಯವಿರುವುದು. ಅವರು ಪುನರ್ಜನ್ಮವನ್ನು ತೆಗೆದುಕೊಂಡು ಚಂದ್ರವಂಶದಲ್ಲಿ ಬರುತ್ತಾರೆ, ವೃದ್ಧಿಯಾಗುತ್ತಾ ಇರುತ್ತದೆ. ಈಗ ಎಷ್ಟೊಂದು ಕೋಟಿಗಳಷ್ಟು ಜನಸಂಖ್ಯೆಯಾಗಿ ಬಿಟ್ಟಿದೆ! ಸಂತಾನ ನಿಯಂತ್ರಣವಾಗಬೇಕೆಂದು ಹೇಳುತ್ತಾರೆ, ಯಾರಿಗೆ ಒಂದೆರಡು ಮಕ್ಕಳಾಗುವವೋ ಅವರು ನಿಲ್ಲಿಸುತ್ತಾರೆಯೇ? ಈಗ ನೀವು ಇದನ್ನು ಸಿದ್ಧ ಮಾಡಿ ತಿಳಿಸಬಹುದು - ಜನಸಂಖ್ಯೆಯನ್ನು ಕಡಿಮೆ ಮಾಡುವುದು ತಂದೆಯ ಮೇಲಿದೆ. ತಂದೆಗೆ ಗೊತ್ತಿದೆ - ಹೆಚ್ಚು ಮನುಷ್ಯರಿದ್ದರೆ ಸಾಯುವರು, ನಾನು ಎಲ್ಲರನ್ನೂ ಸಮಾಪ್ತಿ ಮಾಡಿ ಒಂದು ಧರ್ಮದ ಸ್ಥಾಪನೆ ಮಾಡಲು ಬಂದಿದ್ದೇನೆ. ಅಲ್ಲಿ ಕೇವಲ 9 ಲಕ್ಷ ಮಂದಿ ಇರುತ್ತಾರೆ, ಛೂ ಮಂತ್ರವಾಯಿತಲ್ಲವೆ. ಕಲಿಯುಗರೂಪಿ ರಾತ್ರಿಯು ಮುಕ್ತಾಯವಾಗಿ ದಿನವು ಆರಂಭವಾಗುವುದು. ಸಂತಾನ ನಿಯಂತ್ರಣಕ್ಕಾಗಿ ಎಷ್ಟೊಂದು ಖರ್ಚು ಮಾಡುತ್ತಾರೆ, ತಂದೆಗೆ ಯಾವುದೇ ಖರ್ಚಿಲ್ಲ, ಪ್ರಾಕೃತಿಕ ವಿಕೋಪಗಳಾಗುವವು ಆಗ ಎಲ್ಲರೂ ಸಮಾಪ್ತಿಯಾಗುವರು. ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಅವರು ಯಾವ ಯೋಜನೆಗಳನ್ನು ಮಾಡುತ್ತಿದ್ದಾರೆಯೋ ಅದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ಯುರೋಪಿಯನ್ ಯಾದವರು, ಭಾರತವಾಸಿ ಕೌರವರು ಮತ್ತು ಪಾಂಡವರು. ಅವರೆಲ್ಲರೂ ಒಂದು ಕಡೆ, ಇನ್ನೊಂದು ಕಡೆ ಇವರಿಬ್ಬರೂ ಸಹೋದರರಿದ್ದಾರೆ. ಭಾರತದಲ್ಲಿ ಸಹೋದರ-ಸಹೋದರರಿದ್ದಾರೆ. ಯಾರು ಈಗ ಕಲಿಯುಗದಲ್ಲಿ ಸಹೋದರ-ಸಹೋದರರಿದ್ದಾರೆಯೋ ಅವರಿಂದ ನೀವೀಗ ಸಂಗಮಕ್ಕೆ ಹೊರ ಬಂದಿದ್ದೀರಿ. ಕೌರವರು ಮತ್ತು ಪಾಂಡವರು ಒಂದೇ ಮನೆಯವರಾಗಿದ್ದರು, ಆತ್ಮರು ಮೂಲತಃ ಸಹೋದರ-ಸಹೋದರರಾಗಿದ್ದಾರೆ. ತಂದೆಯು ಮೊಟ್ಟಮೊದಲು ನೀವಾತ್ಮರೊಂದಿಗೇ ಮಿಲನ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಯಾರು ಮೊಟ್ಟ ಮೊದಲು ಹೋಗುತ್ತಾರೆಯೋ ಅವರು ಬಹುಮಾನ ತೆಗೆದುಕೊಳ್ಳುತ್ತಾರೆ. ನಿಮ್ಮದು ಇದು ನೆನಪಿನ ಸ್ಪರ್ಧೆಯಾಗಿದೆ, ಇದು ಯಾವುದೇ ಶಾಸ್ತ್ರದಲ್ಲಿಲ್ಲ. ತಂದೆಯು ತಿಳಿಸುತ್ತಾರೆ - ನನ್ನ ಜೊತೆ ಯೋಗವನ್ನು ಇಡಿ. ಯೋಗದ ಯಾತ್ರೆಯು ಈ ಸಮಯದಲ್ಲಿಯೇ ನಡೆಯುತ್ತದೆ. ಈ ಯಾತ್ರೆಯನ್ನು ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಆತ್ಮಿಕ ಯೋಗವಾಗಲಿ, ಶಾರೀರಿಕ ಯೋಗವಾಗಲಿ ಇರುವುದಿಲ್ಲ. ಅಲ್ಲಿ ಅವಶ್ಯಕತೆಯೇ ಇಲ್ಲ. ಇದು ಈ ಸಮಯದಲ್ಲಿ ನಿಮ್ಮ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಡ್ರಾಮಾದಲ್ಲಿ ಒಂದೊಂದು ಸೆಕೆಂಡಿನ ಪಾತ್ರವನ್ನು ತಿಳಿಸಿದ್ದಾರೆ, ಇದಕ್ಕೆ ಸ್ವದರ್ಶನ ಚಕ್ರವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಈಗ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ, ನಿಮಗೆ 84 ಜನ್ಮಗಳ ಅಥವಾ ಸೃಷ್ಟಿಚಕ್ರದ ಜ್ಞಾನವಿದೆ. ಸ್ವ ಎಂದರೆ ಆತ್ಮ. ಆತ್ಮಕ್ಕೆ ಈ ಜ್ಞಾನವಿದೆ ಆದ್ದರಿಂದ ಈಗ ನೀವು ಮಕ್ಕಳು ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ನಾನು ನಿಮಗೆ ಆತ್ಮಿಕ ಮಕ್ಕಳೇ ಎಂದು ಹೇಳುತ್ತೇನೆ. ಸ್ವದರ್ಶನ ಚಕ್ರಧಾರಿ ಬ್ರಾಹ್ಮಣ ಕುಲಭೂಷಣರಾಗಿದ್ದೀರಿ. ಈ ಪದಗಳ ಅರ್ಥವು ಹೊಸಬರಿಗೆ ಅರ್ಥವಾಗುವುದಿಲ್ಲ. ಈ ಅಲಂಕಾರಗಳನ್ನು ನಿಮಗೆ ಕೊಡುವುದಿಲ್ಲ ಏಕೆಂದರೆ ನಿಮ್ಮಲ್ಲಿ ಕೆಲವರು ಜ್ಞಾನವನ್ನು ಬಿಟ್ಟು ಹೊರಟು ಹೋಗುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ 84 ಜನ್ಮಗಳ ಚಕ್ರವಿದೆ, ಈಗ ನಂಬರ್ವನ್ನಲ್ಲಿ ಹೋಗುತ್ತೀರಿ. ಮೊದಲು ಮನೆಗೆ ಹೋಗಿ ನಂತರ ದೇವತೆಗಳಾಗುತ್ತೀರಿ. ಅನಂತರ ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಎಷ್ಟು ತಿಳುವಳಿಕೆಯ ಮಾತಾಗಿದೆ. ಯಾರಾದರೂ ಇಷ್ಟು ನೆನಪು ಮಾಡಿದರೂ ಸಹ ಸೌಭಾಗ್ಯವೇ! ಇನ್ನು ಸ್ವಲ್ಪವೇ ಸಮಯವಿದೆ ನಂತರ ನಾವು ಸ್ವರ್ಗದಲ್ಲಿ ಹೋಗುತ್ತೇವೆ. ಬಾಕಿ ಶಾಸ್ತ್ರಗಳಲ್ಲಿ ಅನೇಕ ದಂತ ಕಥೆಗಳನ್ನು ಬರೆದಿದ್ದಾರೆ, ಕೃಷ್ಣನೊಂದಿಗೆ ಎಲ್ಲರಿಗೂ ಪ್ರೀತಿಯಿದೆ ಆದರೆ ಕೃಷ್ಣನಿಗೆ ಸರ್ಪವು ಕಚ್ಚಿತು, ಹೀಗಾಯಿತು, ಹಾಗಾಯಿತು.... ಎಂದು ಬರೆದು ಬಿಟ್ಟಿದ್ದಾರೆ. ಕೃಷ್ಣನು ರಾಧೆಗಿಂತಲೂ ಪ್ರಿಯನಾಗಿದ್ದಾನೆ ಏಕೆಂದರೆ ಮುರುಳಿಯನ್ನು ನುಡಿಸಿದ್ದಾನೆ. ಅದು ವಾಸ್ತವದಲ್ಲಿ ಜ್ಞಾನದ ಮಾತಾಗಿದೆ. ನೀವು ಈ ಸಮಯದಲ್ಲಿ ಜ್ಞಾನ ಜ್ಞಾನೇಶ್ವರಿಯರಾಗಿದ್ದೀರಿ ನಂತರ ಓದಿ ರಾಜ ರಾಜೇಶ್ವರಿಯರಾಗುತ್ತೀರಿ. ಇದು ಗುರಿ-ಧ್ಯೇಯವಾಗಿದೆ. ಇಲ್ಲಿನ ಉದ್ದೇಶವೇನೆಂದು ಯಾರಾದರೂ ನಿಮ್ಮೊಂದಿಗೆ ಕೇಳಿದರೆ ಹೇಳಿರಿ, ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ನಾವೇ ದೇವತೆಗಳಾಗಿದ್ದೆವು, 84 ಜನ್ಮಗಳ ನಂತರ ಶೂದ್ರರಾದೆವು, ಈಗ ಬ್ರಾಹ್ಮಣರಾಗಿದ್ದೇವೆ ನಂತರ ದೇವತೆಗಳಾಗುತ್ತೇವೆ. ಓದಿಸುವವರು ಜ್ಞಾನ ಸಾಗರ ಪರಮಾತ್ಮನಾಗಿದ್ದಾರೆ, ಕೃಷ್ಣನಲ್ಲ. ಈ ರಾಜಯೋಗವನ್ನು ಯಾರೂ ಕಲಿಸಲು ಸಾಧ್ಯವಿಲ್ಲ. ಬಾಬಾ, ನಾವು ಕಲ್ಪ-ಕಲ್ಪವೂ ಬಂದು ತಮ್ಮಿಂದ ರಾಜ್ಯಭಾಗ್ಯವನ್ನು ಪಡೆಯುತ್ತೇವೆಂದು ನೀವು ಹೇಳುತ್ತೀರಿ, ಇದನ್ನು ನೀವೇ ತಿಳಿದುಕೊಂಡಿದ್ದೀರಿ. ಈ ಮಹಾಭಾರಿ ಯುದ್ಧದಿಂದಲೇ ಸ್ವರ್ಗದ ಬಾಗಿಲು ತೆರೆಯುವುದು. ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ ಅಂದಮೇಲೆ ಸ್ವರ್ಗವು ಅವಶ್ಯವಾಗಿ ಬೇಕು, ನರಕವು ಸಮಾಪ್ತಿಯಾಗಬೇಕು. ಈ ಮಹಾಭಾರಿ ಯುದ್ಧವು ಶಾಸ್ತ್ರಗಳಲ್ಲಿದೆ. |
(ಕೆಮ್ಮು ಬಂದಿತು) ಇದು ಯಾರಿಗೆ ಬರುತ್ತದೆ? ಶಿವ ತಂದೆಗೋ ಅಥವಾ ಬ್ರಹ್ಮಾ ತಂದೆಗೋ? (ಬ್ರಹ್ಮಾ ತಂದೆಗೆ) ಇದು ಕರ್ಮಭೋಗವಾಗಿದೆ. ಅಂತ್ಯದವರೆಗೂ ಆಗುತ್ತಾ ಇರುವುದು. ಸಂಪೂರ್ಣರಾಗಿ ಬಿಟ್ಟರೆ ಮತ್ತೆ ಈ ಶರೀರವೂ ಇರುವುದಿಲ್ಲ ಅಲ್ಲಿಯವರೆಗೂ ಇದಕ್ಕೆ ಏನಾದರೊಂದು ಆಗುತ್ತಾ ಇರುವುದು, ಇದಕ್ಕೆ ಕರ್ಮಭೋಗವೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಕರ್ಮಭೋಗವಿರುವುದಿಲ್ಲ, ಯಾವುದೇ ಕಾಯಿಲೆ ಇತ್ಯಾದಿಗಳು ಬರುವುದಿಲ್ಲ. ನಾವು ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತೇವೆ, ಸದಾ ಹರ್ಷಿತರಾಗಿರುತ್ತೇವೆ ಏಕೆಂದರೆ ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ ಮತ್ತೆ ಅರ್ಧಕಲ್ಪದ ನಂತರ ದುಃಖವು ಆರಂಭವಾಗುತ್ತದೆ. ಅದರಲ್ಲಿಯೂ ಯಾವಾಗ ಭಕ್ತಿಯು ವ್ಯಭಿಚಾರಿಯಾಗಿ ಬಿಡುತ್ತದೆಯೋ ಆಗ ಹೆಚ್ಚು ದುಃಖವಾಗುತ್ತದೆ ಆಗಲೇ ತ್ರಾಹಿ ತ್ರಾಹಿ ಎನ್ನುತ್ತಾರೆ ಮತ್ತೆ ವಿನಾಶವಾಗುತ್ತದೆ. ಈಗ ನೀವು ಸನ್ಮುಖದಲ್ಲಿ ಕೇಳುತ್ತೀರಿ ಆದ್ದರಿಂದ ಎಷ್ಟೊಂದು ಮಜಾ ಬರುತ್ತದೆ. ನಿಮಗೆ ತಿಳಿದಿದೆ, ಇವರು ನಮ್ಮ ಸತ್ಯ ತಂದೆ, ಸತ್ಯ ಶಿಕ್ಷಕ, ಸತ್ಯ ಸದ್ಗುರುವಾಗಿದ್ದಾರೆ, ಈ ಮಹಿಮೆಯು ಒಬ್ಬ ನಿರಾಕಾರ ತಂದೆಯದೇ ಆಗಿದೆ, ಅವರು ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ಆ ತಂದೆಯನ್ನು ನೆನಪು ಮಾಡಿದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಇಲ್ಲಿ ಯಾವುದೇ ಸಾಧು-ಸಂತ, ಮಹಾತ್ಮರು ಗದ್ದುಗೆಯ ಮೇಲೆ ಕುಳಿತುಕೊಳ್ಳುವುದಿಲ್ಲ, ಎಂದೂ ಕಾಲಿಗೆ ಬೀಳುವುದಕ್ಕೂ ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ, ನನಗೆ ಕಾಲುಗಳಾದರೂ ಎಲ್ಲಿದೆ? ನೀವು ಯಾವುದಕ್ಕೆ ತಲೆ ಬಾಗುತ್ತೀರಿ? ಅನೇಕ ಗುರುಗಳಿಗೆ ತಲೆಬಾಗುತ್ತಾ-ಬಾಗುತ್ತಾ ನಿಮ್ಮ ಹಣೆಯೇ ಸವೆದು ಹೋಗಿದೆ. ಯಾವುದು ಭಕ್ತಿಮಾರ್ಗದಲ್ಲಿ ಇರುತ್ತದೆಯೋ ಅದು ಜ್ಞಾನ ಮಾರ್ಗದಲ್ಲಿರಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ಹೇ ರಾಮನೇ..... ಎಂದು ಹೇಳುತ್ತಾರೆ. ಇಲ್ಲಿ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಶಬ್ಧ ಮಾಡುವಂತಿಲ್ಲ. ತಮ್ಮನ್ನು ಆತ್ಮನೆಂದು ತಿಳಿದು ಗುಪ್ತವಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಹೇ ಶಿವ.... ಎಂದೂ ಹೇಳುವಂತಿಲ್ಲ. ನೀವು ಶಬ್ಧದಿಂದ ದೂರ ಹೋಗಬೇಕಾಗಿದೆ. ಮಗುವಿಗೆ ಆಂತರ್ಯದಲ್ಲಿ ತಂದೆಯ ನೆನಪಿರುತ್ತದೆ, ಇವರು ನಮ್ಮ ತಂದೆಯಾಗಿದ್ದಾರೆಂದು ಆತ್ಮಕ್ಕೆ ಗೊತ್ತಿದೆ. ನೀವು ಒಳಗೆ ಗುಪ್ತವಾಗಿ ನೆನಪು ಮಾಡಬೇಕಾಗಿದೆ, ಇದಕ್ಕೆ ಅಜಪಾಜಪ ನೆನಪು ಎಂದು ಹೇಳಲಾಗುತ್ತದೆ ಅಂದರೆ ಜಪ ಮಾಡಬೇಕಾಗಿಲ್ಲ, ಮಾಲೆಯನ್ನು ಆಂತರ್ಯದಲ್ಲಾದರೂ ಜಪಿಸಿ ಅಥವಾ ಹೊರಗಡೆಯಾದರೂ ಜಪಿಸಿರಿ ಒಂದೇ ಮಾತಾಗಿದೆ. ಆಂತರ್ಯದಲ್ಲಿ ಜಪಿಸುವುದು ಯಾವುದೇ ಗುಪ್ತವಲ್ಲ. ಗುಪ್ತ ಮಾತು ಯಾವುದೆಂದರೆ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಅವರು ಶಿವ ತಂದೆ, ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಶೃಂಗಾರ ಮಾಡುವುದಕ್ಕಾಗಿ ನಿಮಗೆ ಡಬಲ್ ಇಂಜಿನ್ ಸಿಗುತ್ತದೆ, ಇವರ ಆತ್ಮವೂ ಶೃಂಗರಿತವಾಗುತ್ತದೆ ನಂತರ ಎಲ್ಲರೂ ತಂದೆಯ ಮನೆಗೆ ಹೋಗುತ್ತೀರಿ, ಅಲ್ಲಿಂದ ಮತ್ತೆ ಮಾವನ ಮನೆಯಾದ ಕೃಷ್ಣ ಪುರಿಯಲ್ಲಿ ಬರುತ್ತೀರಿ. ಇದು ಡಬಲ್ ತಂದೆಯ ಮನೆಯಾಗಿದೆ, ಈ ಅಲೌಕಿಕ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ ಆದ್ದರಿಂದಲೇ ಈ ದಾದಾರವರನ್ನು ಏಕೆ ತೋರಿಸಿದ್ದೀರಿ ಎಂದು ಕೇಳುತ್ತಾರೆ ಆದರೆ ಇವರ ತನುವಿನಲ್ಲಿ ಪರಮಾತ್ಮ ಓದಿಸುತ್ತಾರೆಂದು ಯಾರಿಗೂ ತಿಳಿದಿಲ್ಲ. ಇವರು ಬಹಳ ಜನ್ಮಗಳ ಅಂತಿಮದಲ್ಲಿ ಪೂಜ್ಯರಿಂದ ಪೂಜಾರಿಯಾಗಿದ್ದಾರೆ, ರಾಜನಿಂದ ಪ್ರಜೆಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಇವರ ತನುವಿನಲ್ಲಿ ಪ್ರವೇಶ ಮಾಡುತ್ತೇನೆ ಎಂದು. ಆದರೂ ಸಹ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಮಂದಿರಗಳಲ್ಲಿ ನಂದಿಯನ್ನು ತೋರಿಸಿದ್ದಾರೆ. ಶಂಕರನಂತು ಸೂಕ್ಷ್ಮವತನವಾಸಿ ಆಗಿದ್ದಾರೆ, ಸೂಕ್ಷ್ಮವತನದಲ್ಲಿ ನಂದಿ ಇತ್ಯಾದಿಗಳಿರುವುದಿಲ್ಲ, ನಂದಿ ಅರ್ಥಾತ್ ಪುರುಷ. ಭಗೀರಥನನ್ನು ಪುರುಷನಂತೆ ತೋರಿಸುತ್ತಾರೆ, ಮನುಷ್ಯರು ಸಂಪೂರ್ಣ ಬುದ್ಧಿಹೀನರಾಗಿ ಬಿಟ್ಟಿದ್ದಾರೆ. ರಾವಣನು ಬುದ್ಧಿಹೀನರನ್ನಾಗಿ ಮಾಡಿದ್ದಾನೆ. ರಾಮ ರಾಜ್ಯ ಬೇಕೆಂದು ತಾವೇ ಹೇಳುತ್ತಾರೆ ಆದರೆ ರಾಮ ರಾಜ್ಯವಂತೂ ಸತ್ಯಯುಗದಲ್ಲಿರುತ್ತದೆ. ಕಲಿಯುಗದಲ್ಲಿ ರಾವಣ ರಾಜ್ಯವಿದೆ. ರಾಮ ಮತ್ತು ರಾವಣನು ಭಾರತದಲ್ಲಿಯೇ ಇರುತ್ತಾರೆ. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ. ರಾವಣನ ಜಯಂತಿಯನ್ನು ಆಚರಿಸುವುದಿಲ್ಲ ಏಕೆಂದರೆ ಶತ್ರುವಾಗಿದ್ದಾನೆ. ಯಾರು ಸುಖ ಕೊಡುತ್ತಾರೆಯೋ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಈಗ ಶಿವ ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ ಮತ್ತು ರಾವಣನಿಂದ ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ರಾವಣನೆಂದರೆ ಯಾರು? ಯಾವಾಗ ಬರುತ್ತಾನೆ? ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಅಕ್ಯೂರೇಟ್ ಲೆಕ್ಕವನ್ನು ತಿಳಿಸಲಾಗುತ್ತದೆ, ಈ ಮಾತುಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಿ, ಮರೆಯಬೇಡಿ. ಜ್ಞಾನ ಸಾಗರನ ಬಳಿಗೆ ಮೋಡಗಳಾಗಿ ಬಂದಿದ್ದೀರಿ ಅಂದಮೇಲೆ ತುಂಬಿಸಿಕೊಂಡು ಹೋಗಿ ಮಳೆ ಸುರಿಸಬೇಕು. ಧಾರಣೆಯು ಚೆನ್ನಾಗಿರಬೇಕಾಗಿದೆ. ಇಲ್ಲಿ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ, ನಾವು ಬೇಹದ್ದಿನ ತಂದೆಯ ಸನ್ಮುಖದಲ್ಲಿ ಮನೆಯಲ್ಲಿ ಕುಳಿತಿದ್ದೇವೆಂದು ಭಾಸವಾಗುತ್ತದೆ. ಬ್ರಾಹ್ಮಣ ಕುಲಭೂಷಣರೂ ಇದ್ದಾರೆ, ಮಮ್ಮಾ-ಬಾಬಾರವರೂ ಇದ್ದಾರೆ. ತಂದೆಯು ನಮಗೆ ಶಿಕ್ಷಕನ ರೂಪದಲ್ಲಿ ಓದಿಸುತ್ತಿದ್ದಾರೆ. ಸದ್ಗುರುವಿನ ರೂಪದಲ್ಲಿ ಜೊತೆ ಕರೆದುಕೊಂಡು ಹೋಗುತ್ತಾರೆ. ಆ ಗುರುಗಳು ಕರೆದುಕೊಂಡು ಹೋಗುವುದಿಲ್ಲ. ಗುರುವಿನ ಕೆಲಸವಾಗಿದೆ - ಅನುಯಾಯಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು. ವಾಸ್ತವದಲ್ಲಿ ಅವರು ಅನುಯಾಯಿಗಳೂ ಅಲ್ಲ ಏಕೆಂದರೆ ಅವರು ಸನ್ಯಾಸಿಗಳು ಇವರು ಗೃಹಸ್ಥಿಗಳು ಅಂದಮೇಲೆ ಅನುಯಾಯಿಗಳು ಹೇಗಾದರು! ನೀವು ಶಿವ ತಂದೆಯನ್ನು ಅನುಸರಿಸುತ್ತೀರಿ ಮತ್ತು ಬ್ರಹ್ಮಾ ತಂದೆಯನ್ನೂ ಅನುಸರಿಸುತ್ತೀರಿ. ಹೇಗೆ ಇವರು ಆಗುತ್ತಾರೆಯೋ ನೀವೂ ಆಗುತ್ತೀರಿ. ನೀವಾತ್ಮರು ಪವಿತ್ರರಾಗಿ ತಂದೆಯಬಳಿ ಹೊರಟು ಹೋಗುತ್ತೀರಿ. ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ, ನೀವು ಸತ್ಯ-ಸತ್ಯವಾದ ಅನುಯಾಯಿಗಳಾಗಿದ್ದೀರಿ. |
ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ, ನೀವೀಗ ಜ್ಞಾನ ಚಿತೆಯ ಮೇಲೆ ಕುಳಿತುಕೊಂಡರೆ ಕರೆದುಕೊಂಡು ಹೋಗುತ್ತೇನೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಆ ಸಮಯದಲ್ಲಿ ಮತ್ತೆಲ್ಲಾ ಧರ್ಮದವರು ಶಾಂತಿಧಾಮದಲ್ಲಿದ್ದರು, ಇವು ಬಹಳ ಸಹಜ ಮಾತುಗಳಾಗಿವೆ. ತಂದೆಗೆ ಅನುಯಾಯಿಗಳಾಗಿರಿ. ಎಷ್ಟು ಪವಿತ್ರರಾಗುತ್ತೀರೋ ಅಷ್ಟು ಒಳ್ಳೆಯ ಪದವಿಯನ್ನು ಪಡೆಯುತ್ತೀರಿ ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಹೋಗುವುದಂತೂ ನಿಶ್ಚಿತವಾಗಿದೆ, 21 ಜನ್ಮಗಳ ಆಸ್ತಿಯು ಸಿಗುತ್ತದೆ ಅಂದಮೇಲೆ ಪರಿಶ್ರಮವನ್ನು ಏಕೆ ಪಡಬಾರದು! ಈಗ ಪರಿಶ್ರಮ ಪಡದಿದ್ದರೆ ಕಲ್ಪ-ಕಲ್ಪಾಂತರವೂ ಮಾಡುವುದಿಲ್ಲ ಅಂದಮೇಲೆ ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುತ್ತೀರಿ! ಇದು ಬೇಹದ್ದಿನ ತರಗತಿಯಾಗಿದೆ. ಒಂದೇ ಪರೀಕ್ಷೆಯಿದೆ- ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಒಬ್ಬ ತಂದೆಗೆ ಸತ್ಯ-ಸತ್ಯವಾದ ಅನುಯಾಯಿಗಳಾಗಿ ಸಂಪೂರ್ಣ ಪವಿತ್ರರಾಗಬೇಕಾಗಿದೆ. 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ. |
2. ಬಾಯಿಂದ ಎಂದೂ ಹೇ ಶಿವ ತಂದೆಯೇ ಎಂದು ಹೇಳಬಾರದು, ಶಬ್ಧದಿಂದ ದೂರ ಹೋಗಬೇಕಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ಆಂತರ್ಯದಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ. |
ಓಂ ಶಾಂತಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ಮಕ್ಕಳೊಂದಿಗೆ ಕೇಳುತ್ತಿದ್ದಾರೆ - ಮಕ್ಕಳೇ, ನೀವು ಇಲ್ಲಿ ಮುಂಜಾನೆಯಿಂದ ಕುಳಿತು ಏನು ಮಾಡುತ್ತಿದ್ದೀರಿ? ನೀವು ವಿದ್ಯಾರ್ಥಿಗಳಾಗಿಯೇ ಇದ್ದೀರಿ ಅಂದಮೇಲೆ ಅವಶ್ಯವಾಗಿ ಇಲ್ಲಿ ಕುಳಿತು ಈ ವಿಚಾರ ಮಾಡುತ್ತಾ ಇರುತ್ತೀರಿ - ನಮಗೆ ಓದಿಸಲು ಶಿವ ತಂದೆಯು ಬಂದಿದ್ದಾರೆ. ಈ ವಿದ್ಯೆಯಿಂದ ನಾವು ಸೂರ್ಯವಂಶಿಯರಾಗುತ್ತೇವೆ ಏಕೆಂದರೆ ನೀವು ರಾಜಯೋಗವನ್ನು ಕಲಿಯುತ್ತಿದ್ದೀರಿ ವಿಷ್ಣುಪುರಿಯ ಮಾಲೀಕರಾಗುವುದಕ್ಕಾಗಿ, ಈ ವಿಚಾರದಲ್ಲಿ ಕುಳಿತಿದ್ದೀರೋ ಅಥವಾ ಯಾವುದಾದರೂ ಜವಾಬ್ದಾರಿ, ಮಕ್ಕಳು-ಮರಿ, ಉದ್ಯೋಗ-ವ್ಯವಹಾರ ಇತ್ಯಾದಿಗಳು ನೆನಪಿಗೆ ಬರುತ್ತಿದೆಯೇ? ಇದೇ ಬುದ್ಧಿಯಲ್ಲಿ ಇರಬೇಕಾಗಿದೆ - ಇದು ಗೀತಾಪಾಠಶಾಲೆಯಾಗಿದೆ, ನಮಗೆ ಭಗವಂತ ಓದಿಸುತ್ತಾರೆ ಮತ್ತು ನಾವು ಲಕ್ಷ್ಮೀ-ನಾರಾಯಣ ಅಥವಾ ಅವರ ಕುಟುಂಬದ ಸದಸ್ಯರಾಗುತ್ತೇವೆ. ಇದು ರಾಜಯೋಗವಾಗಿದೆ, ಮಕ್ಕಳ ಬುದ್ಧಿಯಲ್ಲಿ ಇದೇ ಇರಲಿ - ನಾವು ತಂದೆಯಿಂದ ಡೈರೆಕ್ಟ್ ಕೇಳಿ ಸೂರ್ಯವಂಶಿ ಮನೆತನದವರಾಗುತ್ತೇವೆ. ಲಕ್ಷ್ಮೀ-ನಾರಾಯಣರ ಚಿತ್ರವು ಸನ್ಮುಖದಲ್ಲಿದೆ, ನಮ್ಮ ರಾಜ್ಯವಿರುವುದು, ಹೇಗೆ ಕಾಂಗ್ರೆಸ್ಸಿನವರೂ ಸಹ ತಿಳಿದುಕೊಳ್ಳುತ್ತಾರೆ. ಬ್ರಾಹ್ಮಣರಲ್ಲಿಯೂ ಸಹ ಸ್ವರ್ಗವೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದು ಕೆಲವರಿಗೆ ಗೊತ್ತೇ ಇಲ್ಲ, ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನಾವು ತಂದೆಯಿಂದ ಸ್ವರ್ಗದ ಸ್ವರಾಜ್ಯವಿದ್ಯೆಯನ್ನು ಕಲಿಯುತ್ತಿದ್ದೇವೆ. ನಾವೇ ಸ್ವರ್ಗದ ಮಾಲೀಕರಾಗುತ್ತೇವೆ. ಇದನ್ನು ಆಂತರ್ಯದಲ್ಲಿ ಸ್ಮರಣೆ ಮಾಡಬೇಕಾಗಿದೆ. ಹೇಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ಬುದ್ಧಿಯಲ್ಲಿರುತ್ತದೆ - ನಾವು ಬ್ಯಾರಿಸ್ಟರ್, ಇಂಜಿನಿಯರ್ ಆಗುವುದಕ್ಕಾಗಿ ಓದುತ್ತಿದ್ದೇವೆ ಆದರೆ ನಿಮಗೆ ಇಷ್ಟಾದರೂ ನೆನಪಿರುತ್ತದೆಯೋ ಅಥವಾ ಮರೆತು ಹೋಗುತ್ತೀರೋ? ನೀವು ಶ್ರೇಷ್ಠಾತಿ ಶ್ರೇಷ್ಠ ಭಗವಂತನ ವಿದ್ಯಾರ್ಥಿಗಳಾಗಿದ್ದೀರಿ, ನಿಮ್ಮನ್ನು ಶ್ರೇಷ್ಠಾತಿ ಶ್ರೇಷ್ಠ ದೇವತೆಗಳನ್ನಾಗಿ ಮಾಡಲು ತಂದೆಯು ಓದಿಸುತ್ತಿದ್ದಾರೆ, ನೀವು ಅವರ ಮಕ್ಕಳಾಗಿದ್ದೀರಿ. ಆತ್ಮವು ಈ ಶರೀರದ ಮೂಲಕ ತಮ್ಮ ಭವಿಷ್ಯ ಪದವಿಯನ್ನು ನೆನಪು ಮಾಡಿಕೊಳ್ಳುತ್ತಿದ್ದೀರಿ ಅಥವಾ ಶರೀರದ ಸಂಬಂಧಿ, ಶರೀರದ ಸಂಪತ್ತು, ಉದ್ಯೋಗ-ವ್ಯವಹಾರವನ್ನು ನೆನಪು ಮಾಡುತ್ತೀರಾ? ಇಲ್ಲಿಗೆ ಬರುತ್ತೀರೆಂದರೆ ಇದನ್ನು ತಿಳಿದುಕೊಳ್ಳಿ - ಬೇಹದ್ದಿನ ತಂದೆಯು ನಮ್ಮನ್ನು ಬೇಹದ್ದಿನ ಮಾಲೀಕರನ್ನಾಗಿ ಮಾಡಲು ಓದಿಸಲು ಬರುತ್ತಾರೆ. ಈ ವಿದ್ಯೆಯಿಂದ ನೀವು ರಾಜ-ರಾಣಿಯಾದರೂ ಆಗಿರಿ, ಪ್ರಜೆಗಳಾದರೂ ಆಗಿರಿ. ಮಾಲೀಕರಂತೂ ಆಗುತ್ತೀರಲ್ಲವೇ. ಹೊಸ ಪ್ರಪಂಚದಲ್ಲಿಯೇ ಸೂರ್ಯವಂಶಿ ಮನೆತನವಿರುತ್ತದೆ, ನಾವು ನಮ್ಮ ರಾಜ್ಯಭಾರ ಮಾಡುತ್ತೇವೆ ಎಂಬುದನ್ನಂತೂ ತಿಳಿದುಕೊಳ್ಳುತ್ತೀರಲ್ಲವೇ. |
ತಂದೆಗೆ ಗೊತ್ತಿದೆ - ಮಕ್ಕಳು ಹೊರಗಡೆ ಇರುತ್ತಾ ಮನೆ ಮಠ, ಹೊಲ ಗದ್ದೆಗಳಲ್ಲಿರುತ್ತಾ ಇಷ್ಟೊಂದು ತಂದೆಯ ನೆನಪಿರಲು ಸಾಧ್ಯವಿಲ್ಲ ಆದ್ದರಿಂದ ಇಲ್ಲಿಗೆ ಮಿಲನ ಮಾಡಲು ಬರುತ್ತೀರೆಂದರೆ ಎಲ್ಲಾ ಆಲೋಚನೆಗಳನ್ನು ಬಿಟ್ಟು ಬನ್ನಿರಿ. ನೀವೀಗ ಆ ಕಲಿಯುಗೀ ಪ್ರಪಂಚದಲ್ಲಿ ಇಲ್ಲವೇ ಇಲ್ಲ, ನೀವು ಸಂಗಮದಲ್ಲಿದ್ದೀರಿ. ಕಲಿಯುಗವನ್ನು ಬಿಟ್ಟು ಬಿಟ್ಟಿದ್ದೀರಿ. ಹೊರಗಡೆ ಕಲಿಯುಗವಿದೆ, ವಿಶೇಷವಾಗಿ ಈ ಮಧುಬನವು ಸಂಗಮವಾಗಿದೆ ಆದ್ದರಿಂದ ಮಧುಬನದ ಗಾಯನವಿದೆ. ಇಲ್ಲಿ ಈ ಮುರುಳಿಯದೇ ಸ್ಮರಣೆ ಮಾಡಬೇಕಾಗಿದೆ. ನೀವು ಏನನ್ನು ಕೇಳುತ್ತೀರೋ ಅದನ್ನು ರಿಪೀಟ್ ಮಾಡಿರಿ ಮತ್ತು ವಿಚಾರ ಸಾಗರ ಮಂಥನ ಮಾಡಿ. ಸಮಯ ಸಿಕ್ಕಿದಾಗ ಚಿತ್ರಗಳ ಮುಂದೆ ಹೋಗಿ ಕುಳಿತುಕೊಳ್ಳಿ, ಇದನ್ನು ನೋಡುತ್ತಾ ಮತ್ತು ಓದುತ್ತಾ ಇರಿ. ಬ್ರಾಹ್ಮಣಿಯರು ಯಾರು ಕರೆದುಕೊಂಡು ಬರುತ್ತಾರೆಯೋ ಅವರ ಮೇಲೂ ಬಹಳ ಜವಾಬ್ದಾರಿಯಿದೆ. ಬಹಳ ಚಿಂತೆಯಿರಬೇಕು - ಹೇಗೆ ಶಿಕ್ಷಕರಿಗೆ ನಮ್ಮ ಶಾಲೆಯಿಂದ ಒಂದುವೇಳೆ ಕಡಿಮೆ ಜನ ತೇರ್ಗಡೆಯಾದರೆ ಗೌರವ ಕಳೆಯುವುದು ಎಂದು ಚಿಂತೆಯಿರುತ್ತದೆ. ಯಾವಾಗ ಶಾಲೆಯಿಂದ ಅನೇಕರು ಉತ್ತೀರ್ಣರಾಗುವರೋ ಆಗ ಅವರು ಒಳ್ಳೆಯ ಶಿಕ್ಷಕರೆಂದು ನಂಬಲಾಗುತ್ತದೆ. ಹಾಗೆಯೇ ಬ್ರಾಹ್ಮಣಿಯರು ವಿದ್ಯಾರ್ಥಿಗಳ ಮೇಲೆ ಗಮನ ಕೊಡಬೇಕಾಗಿದೆ. ನೀವು ಹೇಗೆ ಇಲ್ಲಿ ಸಂಗಮದಲ್ಲಿ ಬಂದಿದ್ದೀರಿ, ಇಲ್ಲಿ ಡೈರೆಕ್ಟ್ ತಂದೆಯೇ ತಿಳಿಸುತ್ತಾರೆ. ಇಲ್ಲಿನ ಪ್ರಭಾವವು ಬಹಳ ಚೆನ್ನಾಗಿರುತ್ತದೆ. ಒಂದುವೇಳೆ ಇಲ್ಲಿಯೂ ಸಹ ಮನೆ ಮಠ, ಉದ್ಯೋಗ-ವ್ಯವಹಾರಗಳು ನೆನಪಿಗೆ ಬಂದರೆ ಇವರು ಸಾಧಾರಣ ಪ್ರಜೆಯಾಗುವರೆಂದು ತಂದೆಯು ತಿಳಿದುಕೊಳ್ಳುತ್ತಾರೆ. ರಾಜರಾಗಲು ಬಂದಿದ್ದರು ಆದರೆ..... ವಾಸ್ತವದಲ್ಲಿ ಮಕ್ಕಳಿಗೆ ಬಹಳ ಖುಷಿಯಿರಬೇಕು. ಈ ಚಿತ್ರಗಳೂ ಸಹ ನಿಮಗೆ ಬಹಳ ಸಹಯೋಗ ನೀಡುತ್ತವೆ. ಮನುಷ್ಯರು ನೆನಪಿಗಾಗಿ ಅಷ್ಟ ದೇವತೆಗಳ ಮತ್ತು ಗುರುಗಳ ಚಿತ್ರಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಆದರೆ ಅವರನ್ನು ನೆನಪು ಮಾಡುವುದರಿಂದ ಸಿಗುವುದೇನೂ ಇಲ್ಲ. ಭಕ್ತಿಮಾರ್ಗದಲ್ಲಿ ಏನೆಲ್ಲವನ್ನೂ ಮಾಡುತ್ತಾ ಕೆಳಗಿಳಿದು ಬಂದಿದ್ದೀರಿ, ನೀವು ಮಕ್ಕಳು ಈಗ ಮೇಲೇರುವ ಪುರುಷಾರ್ಥ ಮಾಡಬೇಕಾಗಿದೆ. ಮನೆಯಲ್ಲಿ ಶಿವ ತಂದೆಯ ಚಿತ್ರವನ್ನಿಟ್ಟುಕೊಳ್ಳಿ ಆಗ ಪದೇ-ಪದೇ ನೆನಪಿಗೆ ಬರುವುದು. ಮೊದಲು ನೀವು ಹನುಮಂತನನ್ನೋ, ಕೃಷ್ಣನನ್ನೊ, ರಾಮನನ್ನೋ ನೆನಪು ಮಾಡುತ್ತಿದ್ದಿರಿ. ಈಗ ನನ್ನನ್ನು ನೆನಪು ಮಾಡಿರಿ ಎಂದು ಶಿವ ತಂದೆಯು ಸನ್ಮುಖದಲ್ಲಿ ಹೇಳುತ್ತಾರೆ. ತ್ರಿಮೂರ್ತಿಯ ಚಿತ್ರವು ಬಹಳ ಚೆನ್ನಾಗಿದೆ. ಈ ಚಿತ್ರವನ್ನು ಸದಾ ಪಾಕೆಟ್ನಲ್ಲಿ, ಜೇಬಿನಲ್ಲಿ ಇಟ್ಟುಕೊಂಡು ಪದೇ-ಪದೇ ನೋಡುತ್ತಾ ಇರಿ ಆಗ ನೆನಪಿರುವುದು. ಇವರು (ಬ್ರಹ್ಮಾ) ಭಕ್ತನಾಗಿದ್ದಾಗ ಲಕ್ಷ್ಮೀ-ನಾರಾಯಣರ ಚಿತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಗದ್ದುಗೆಯ ಕೆಳಗಡೆ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರು. ಅದರಿಂದ ಏನೂ ಸಿಗಲಿಲ್ಲ, ಈಗ ತಂದೆಯಿಂದ ಬಹಳ ಪ್ರಾಪ್ತಿಯಾಗುತ್ತಿದೆ. ಅವರನ್ನೇ ನೆನಪು ಮಾಡಬೇಕಾಗಿದೆ, ಇದರಲ್ಲಿ ಮಾಯೆಯು ಎದುರಿಸುತ್ತದೆ. ಜ್ಞಾನವನ್ನಂತೂ ಭಲೆ ಬಹಳ ಕೇಳುತ್ತಾರೆ, ಹೇಳುತ್ತಾರೆ. ಇದರಲ್ಲಿ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. 84 ಜನ್ಮಗಳ ಚಕ್ರವು ಮರೆತು ಹೋಗುತ್ತದೆ ಎಂದು ಹೇಳುವುದಿಲ್ಲ. ಇಲ್ಲಿರುವವರು ಹೆಚ್ಚು ನೆನಪು ಮಾಡುತ್ತಾರೆ ಎಂದಲ್ಲ, ಇಲ್ಲಿದ್ದರೂ ಸಹ ಕೆಲವರು ಮಣ್ಣು ಪಾಲಾಗುವುದನ್ನೇ ನೆನಪು ಮಾಡುತ್ತಿರುತ್ತಾರೆ. ಯಾವ ತಂದೆಯಿಂದ ನಾವು ಸುಂದರರಾಗಲು ಬಂದಿದ್ದೇವೆಯೋ ಅವರನ್ನೇ ತಿಳಿದುಕೊಂಡಿಲ್ಲ. ಮಾಯೆಯ ನೆರಳು ಬಹಳ ಬೀಳುತ್ತದೆ. ಮೂಲ ಮಾತು ನೆನಪಿನದಾಗಿದೆ, ತಂದೆಗೆ ಗೊತ್ತಿದೆ - ಬಹಳ ಒಳ್ಳೊಳ್ಳೆಯ ಮಕ್ಕಳೂ ಸಹ ನೆನಪಿನಲ್ಲಿರುವುದಿಲ್ಲ. ಯೋಗದಲ್ಲಿರುವುದರಿಂದಲೇ ದೇಹಾಭಿಮಾನವು ಕಡಿಮೆಯಾಗುವುದು. ಬಹಳ ಮಧುರರಾಗಿರುತ್ತೀರಿ. ದೇಹಾಭಿಮಾನವಿದ್ದರೆ ಮಧುರರಾಗುವುದಿಲ್ಲ, ಕೋಪಿಸಿಕೊಳ್ಳುತ್ತಾ ಇರುತ್ತಾರೆ. ತಂದೆಯು ಈ ಮಾತನ್ನು ಎಲ್ಲರಿಗೆ ಹೇಳುವುದಿಲ್ಲ. ಕೆಲವರು ಸುಪುತ್ರರೂ ಇದ್ದಾರೆ ಯಾರು ಯೋಗದಲ್ಲಿರುತ್ತಾರೆಯೋ ಅವರಿಗೆ ಸುಪುತ್ರರೆಂದು ಹೇಳಲಾಗುತ್ತದೆ. ಅವರಿಂದ ಯಾವುದೇ ಉಲ್ಟಾ-ಸುಲ್ಟಾ ಮಾತುಗಳು ಬರುವುದಿಲ್ಲ. ಮಿತ್ರ ಸಂಬಂಧಿ ಮೊದಲಾದವರೆಲ್ಲರನ್ನೂ ಮರೆತು ಹೋಗುತ್ತಾರೆ - ನಾವು ಅಶರೀರಿಯಾಗಿ ಬಂದಿದ್ದೇವೆ, ಈಗ ಅಶರೀರಿಯಾಗಿ ಮನೆಗೆ ಹೋಗಬೇಕಾಗಿದೆ. ಈಗ ನೀವು ಮಕ್ಕಳಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ, ಇದರಿಂದ ನೀವು ಮನೆಯನ್ನು ಮತ್ತು ರಾಜಧಾನಿಯನ್ನು ತಿಳಿದುಕೊಂಡಿದ್ದೀರಿ. ಇದೂ ಸಹ ನೀವು ಮಕ್ಕಳಿಗೆ ಗೊತ್ತಿದೆ, ಶಿವ ತಂದೆಯು ಕಪ್ಪು ಲಿಂಗವಾಗಿಲ್ಲ. ಮನುಷ್ಯರು ಕಪ್ಪಾಗಿ ತೋರಿಸುತ್ತಾರೆ ಆದರೆ ಅವರು ಬಿಂದುವಾಗಿದ್ದಾರೆ. ಇದನ್ನೂ ಸಹ ನಾವು ತಿಳಿದುಕೊಂಡಿದ್ದೇವೆ. ನಾವೀಗ ಮನೆಗೆ ಹೋಗುತ್ತೇವೆ, ಅಲ್ಲಿ ನಾವು ಅಶರೀರಿಯಾಗಿರುತ್ತೇವೆ. ನಾವೀಗ ಅಶರೀರಿಗಳಾಗಬೇಕಾಗಿದೆ. ತನ್ನನ್ನು ಆತ್ಮನೆಂದು ತಿಳಿದು ಪತಿತ-ಪಾವನ ತಂದೆಯನ್ನು ನೆನಪು ಮಾಡಬೇಕಾಗಿದೆ, ಇದನ್ನಂತೂ ತಿಳಿಸಲಾಗುತ್ತದೆ - ಆತ್ಮ ಅವಿನಾಶಿಯಾಗಿದೆ, ಅದರಲ್ಲಿ 84 ಜನ್ಮಗಳ ಪಾತ್ರವು ನಿಗಧಿತವಾಗಿದೆ. ಅದರ ಅಂತ್ಯವಾಗುವುದಿಲ್ಲ. ಸ್ವಲ್ಪ ಸಮಯ ಮುಕ್ತಿಧಾಮಕ್ಕೆ ಹೋಗಿ ಮತ್ತೆ ಪಾತ್ರದಲ್ಲಿ ಬರಬೇಕಾಗಿದೆ. ನೀವು ಸರ್ವತೋಮುಖ ಪಾತ್ರವನ್ನು ಅಭಿನಯಿಸುತ್ತೀರಿ, ಇದು ಸದಾ ನೆನಪಿರಲಿ. ನಾವೀಗ ಮನೆಗೆ ಹೋಗಬೇಕಾಗಿದೆ, ತಂದೆಯನ್ನು ನೆನಪು ಮಾಡುವುದರಿಂದ ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೇವೆ. ಇಲ್ಲಿ ಉದ್ಯೋಗ-ವ್ಯವಹಾರಗಳನ್ನು ನೆನಪು ಮಾಡಿಕೊಳ್ಳಬಾರದು. ಇಲ್ಲಿ (ಮಧುಬನ) ಪೂರ್ಣ ಸಂಗಮಯುಗದಲ್ಲಿದ್ದೀರಿ, ನೀವೀಗ ದೋಣಿಯಲ್ಲಿ ಕುಳಿತಿದ್ದೀರಿ. ಕೆಲವರು ಮಧ್ಯದಲ್ಲಿಯೇ ಇಳಿದು ಹೋಗುತ್ತಾರೆ, ನಂತರ ಸಿಕ್ಕಿ ಹಾಕಿಕೊಂಡು ಸಾಯುತ್ತಾರೆ. ಇದರ ಮೇಲೆ ಶಾಸ್ತ್ರಗಳಲ್ಲಿ ಒಂದು ಕಥೆಯೂ ಇದೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಆ ತೀರದೆಡೆಗೆ ಹೋಗುತ್ತಿದ್ದೇವೆ, ಅಂಬಿಗನು ಶಿವ ತಂದೆಯಾಗಿದ್ದಾರೆ. ಕೃಷ್ಣನಿಗೆ ಅಂಬಿಗ ಅಥವಾ ಮಾಲೀಕನೆಂದು ಹೇಳುವುದಿಲ್ಲ, ಶಿವ ಭಗವಾನುವಾಚ ಆಗಿದೆ. ಪತಿತ-ಪಾವನ ಶಿವ ತಂದೆಯಾಗಿದ್ದಾರೆ. ಕೃಷ್ಣನ ಕಡೆ ಬುದ್ಧಿಯು ಹೋಗಲು ಸಾಧ್ಯವಿಲ್ಲ. ಮನುಷ್ಯರ ಬುದ್ಧಿಯಂತೂ ಅಲೆಯುತ್ತಿರುತ್ತದೆ. ತಂದೆಯು ಬಂದು ಅಲೆಯುವುದರಿಂದ ಬಿಡಿಸುತ್ತಾರೆ, ಕೇವಲ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ ಆಗಲೇ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಈ ಮಾತುಗಳನ್ನು ಮರೆಯಬಾರದು. ನೀವು ಇಲ್ಲಿಂದ ಬಹಳ ರಿಫ್ರೆಷ್ ಆಗಿ ಹೋಗುತ್ತೀರಿ, ಅನುಭವವನ್ನೂ ತಿಳಿಸುತ್ತೀರಿ. ಬಾಬಾ, ನಾವು ಮತ್ತೆ ಹೇಗಿದ್ದವರು ಅದೇರೀತಿ ಆಗಿ ಬಿಡುತ್ತೇವೆ. ಮಿತ್ರ ಸಂಬಂಧಿ ಮೊದಲಾದವರ ಮುಖವನ್ನು ನೋಡುತ್ತಿದ್ದಂತೆಯೇ ಮತ್ತೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ನೀವು ಮಕ್ಕಳು ಪ್ರಿಯತಮೆಯರಾಗಿದ್ದೀರಿ, ಕೆಲಸ ಕಾರ್ಯಗಳನ್ನು ಮಾಡುತ್ತಾ ಪ್ರಿಯತಮನನ್ನು ನೆನಪು ಮಾಡಿರಿ ಆಗ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಒಂದುವೇಳೆ ಈಗ ಪುರುಷಾರ್ಥ ಮಾಡದಿದ್ದರೆ ಸಿಂಗಲ್ ಕಿರೀಟವೂ ಸಿಗುವುದಿಲ್ಲ, ನೀವು ಮಕ್ಕಳು ಇಲ್ಲಿಗೆ ಬರುತ್ತೀರೆಂದರೆ ಸಮಯವನ್ನು ವ್ಯರ್ಥ ಮಾಡಬಾರದು. ಇಲ್ಲಿ ನಿಮಗೆ ಮತ್ತೇನೂ ಇಲ್ಲ, ಕೇವಲ ನಿಮ್ಮ ನೆನಪಾರ್ಥ ದಿಲ್ವಾಡಾ ಮಂದಿರವಿದೆ, ಅದನ್ನು ನೋಡಬಹುದು. ಅದರಲ್ಲಿ ಮೇಲೆ ವೈಕುಂಠವಿದೆ, ನಿಮ್ಮ ವೃಕ್ಷದ ಚಿತ್ರವೂ ಸ್ಪಷ್ಟವಾಗಿದೆ, ಕೆಳಗೆ ರಾಜಯೋಗದಲ್ಲಿ ಕುಳಿತಿದ್ದೀರಿ. ಮೇಲೆ ರಾಜಧಾನಿಯು ನಿಂತಿದೆ. ಅದೇ ರೀತಿಯಲ್ಲಿ ದಿಲ್ವಾಡಾ ಮಂದಿರವು ಮಾಡಲ್ಪಟ್ಟಿದೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮಗೆ ಪುನಃ ಜ್ಞಾನವನ್ನು ತಿಳಿಸಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ಈ ಕಲಿಯುಗದ ವಿನಾಶವಾಗಲಿದೆ. ಈ ಆದಿದೇವ-ಆದಿನಾಥನು ಯಾರಾಗಿದ್ದಾರೆ, ನೀವು ಎಲ್ಲರ ಪರಿಚಯವನ್ನು ತಿಳಿದುಕೊಂಡಿದ್ದೀರಲ್ಲವೆ. ಈ ಸಮಯದ ಚರ್ಚೆಯು ನಂತರ ಭಕ್ತಿಮಾರ್ಗದಲ್ಲಿ ನಡೆಯುತ್ತದೆ. ಹಬ್ಬ, ವ್ರತ ಇತ್ಯಾದಿಗಳೆಲ್ಲವೂ ಈ ಸಮಯದ್ದಾಗಿದೆ. ಸತ್ಯವಾದ ವ್ರತವು ಮನ್ಮನಾಭವ ಆಗಿದೆ ಬಾಕಿ ನಿರ್ಜಲವಾಗಿರುವುದು, ಆಹಾರವನ್ನು ಸೇವಿಸದೇ ಇರುವುದು ಯಾವುದೇ ವ್ರತವಲ್ಲ. ಈ ಸಮಯದ ಪ್ರಪಂಚದಲ್ಲಿ ಮಾಯೆಯ ಬಹಳ ಆಡಂಬರವಿದೆ. ಮೊದಲು ಈ ವಿದ್ಯುತ್, ಗ್ಯಾಸ್ ಇತ್ಯಾದಿಗಳಿರಲಿಲ್ಲ. ಇವೆಲ್ಲವೂ 100 ವರ್ಷಗಳಲ್ಲಿ ಹೊರಬಂದಿವೆ. ಇದರಲ್ಲಿ ಮನುಷ್ಯರು ಸಿಕ್ಕಿ ಹಾಕಿಕೊಂಡಿದ್ದಾರೆ. ನಮಗಾಗಿ ಇಲ್ಲಿಯೇ ಸ್ವರ್ಗವಿದೆ ಎಂದು ಹೇಳುತ್ತಾರೆ, ಮಾಯೆಯ ಪ್ರಭಾವವು ಇಷ್ಟೊಂದಿದೆ ಮನುಷ್ಯರು ತಂದೆಯನ್ನೇ ನೆನಪು ಮಾಡುವುದಿಲ್ಲ. ನೀವು ಹೋಗಿ ನೋಡಿರಿ, ನಾವು ಸ್ವರ್ಗದಲ್ಲಿ ಕುಳಿತಿದ್ದೇವೆ ಎಂದು ಹೇಳುತ್ತಾರೆ. ಈಗ ಸ್ವರ್ಗದ ಮುಂದೆ ಇದೇನೂ ಇಲ್ಲ, ಸ್ವರ್ಗವೆಲ್ಲಿ! ಈ ನರಕವೆಲ್ಲಿ! ಸ್ವರ್ಗದ ಒಂದು ವಸ್ತುವೂ ಸಹ ಇಲ್ಲಿರಲು ಸಾಧ್ಯವಿಲ್ಲ. ಅಲ್ಲಿ ಪ್ರತೀ ವಸ್ತು ಸತೋಪ್ರಧಾನವಾಗಿರುವುದು. ಹಸುಗಳೂ ಸಹ ಸುಂದರವಾಗಿರುವುದು. ಸೂಕ್ಷ್ಮವತನದಲ್ಲಿ ಫಲಪುಷ್ಫಗಳನ್ನು ನೋಡಿಕೊಂಡು ಬರುತ್ತೀರಲ್ಲವೇ, ಅದಕ್ಕೆ ಶೂಬೀ ರಸವೆಂದು ಹೆಸರನ್ನು ಇಡುತ್ತಾರೆ. ಪ್ರಪಂಚದವರಿಗೆ ಸ್ವರ್ಗವೆಲ್ಲಿದೆ ಎಂಬುದೂ ಸಹ ತಿಳಿದಿಲ್ಲ. ಸ್ವರ್ಗದಲ್ಲಿ ಎಲ್ಲವೂ ಸತೋಪ್ರಧಾನವಾಗಿರುತ್ತದೆ, ಈ ಮಣ್ಣು ಇತ್ಯಾದಿಗಳೇನೂ ಅಲ್ಲಿ ಬೀಳುವುದಿಲ್ಲ. ದುಃಖದ ಯಾವುದೇ ಮಾತಿರುವುದಿಲ್ಲ ಆದರೆ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಈ ವಿದ್ಯೆಯನ್ನು ಓದಿಸುತ್ತಿದ್ದಾರೆ ಎಂಬುದು ಇನ್ನೂ ಅಷ್ಟು ನಶೆಯೇರುತ್ತಿಲ್ಲ. ಚಿತ್ರಗಳು ಎಷ್ಟು ಸ್ಪಷ್ಟವಾಗಿವೆ! ಚಿತ್ರಗಳನ್ನು ಮಾಡಿಸುವುದರಲ್ಲಿ ಸಮಯ ಹಿಡಿಸುತ್ತದೆ. ತಂದೆಯು ಎಲ್ಲವನ್ನೂ ಸೇವಾರ್ಥವಾಗಿ ಮಾಡಿಸುತ್ತಲೇ ಇರುತ್ತಾರೆ ಆದರೆ ಕೆಲವರಂತೂ ತಮ್ಮ ಉದ್ಯೋಗ-ವ್ಯವಹಾರಗಳಲ್ಲಿ ಇಷ್ಟೊಂದು ಸಿಲುಕಿದ್ದಾರೆ, ತಂದೆಯನ್ನು ನೆನಪು ಮಾಡುವುದಿಲ್ಲ. ಪ್ರದರ್ಶನಿಯ ಚಿತ್ರಗಳ ಪುಸ್ತಕವೂ ಇದೆ, ಅದನ್ನು ಓದಬೇಕು. ಗೀತಾಪಾಠಿಗಳು ಎಲ್ಲಿಯೇ ಹೋದರೂ ಸಹ ಗೀತೆಯನ್ನು ಅವಶ್ಯವಾಗಿ ಓದುತ್ತಾರೆ. ಈಗ ನಿಮಗೆ ಸತ್ಯಗೀತೆಯು ಚಿತ್ರಗಳ ಸಹಿತ ಸಿಕ್ಕಿದೆ, ಈಗ ಚೆನ್ನಾಗಿ ಪರಿಶ್ರಮ ಪಡಬೇಕಾಗಿದೆ, ಇಲ್ಲದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಯಾವಾಗ ಸಾಕ್ಷಾತ್ಕಾರವಾಗುವುದೋ ಆಗ ಅಯ್ಯೊ ಅಯ್ಯೊ ಎನ್ನಬೇಕು. ಪರೀಕ್ಷೆಯು ಪೂರ್ಣವಾಯಿತೆಂದರೆ ಮತ್ತೆ ಇನ್ನೊಂದು ತರಗತಿಯಲ್ಲಿ ನಂಬರ್ವಾರ್ ಕುಳಿತುಕೊಳ್ಳುತ್ತಾರೆ. ಇಲ್ಲಿಯೂ ಸಹ ಯಾವಾಗ ಸಾಕ್ಷಾತ್ಕಾರವಾಗುವುದೋ, ನಂಬರ್ವಾರ್ ರುದ್ರ ಮಾಲೆಯೇ ನಂತರ ವಿಜಯ ಮಾಲೆಯಲ್ಲಿ ಹೋಗುತ್ತಾರೆ. ಶಾಲೆಯಲ್ಲಿ ಮಕ್ಕಳು ಯಾರಾದರೂ ಅನುತ್ತೀರ್ಣರಾದರೆ ಎಷ್ಟೊಂದು ದುಃಖಿಯಾಗಿ ಬಿಡುತ್ತಾರೆ. ನಿಮ್ಮದು ಇದು ಕಲ್ಪ-ಕಲ್ಪಾಂತರದ ಆಟವಾಗಿದೆ. |
ಕೆಲವು ಮಕ್ಕಳು ಪೂರ್ಣ ಮ್ಯಾಗಜಿನ್ ಓದುವುದೇ ಇಲ್ಲ. ಮ್ಯಾಗಜಿನ್ ಓದಿ ಸರ್ವೀಸ್ ಮಾಡಬೇಕಾಗಿದೆ. ಬಾಬಾ, ಇಂತಹವರನ್ನು ಬದಲು ಮಾಡಿ ಒಳ್ಳೆಯ ಬ್ರಾಹ್ಮಿಣಿಯನ್ನು ಕಳುಹಿಸಿ ಎಂದು ಪತ್ರ ಬರೆಯುತ್ತಾರೆ. ಕೆಲಕೆಲವರು ಬ್ರಾಹ್ಮಿಣಿಯರ ಜೊತೆ ಇಷ್ಟೊಂದು ಪ್ರೀತಿಯುಂಟಾಗುತ್ತದೆ, ಬ್ರಾಹ್ಮಿಣಿಯು ಬದಲಾದರೆ ಇವರೂ ಸಹ ಕೆಳಗೆ ಬೀಳುತ್ತಾರೆ, ಸೇವಾಕೇಂದ್ರಕ್ಕೆ ಬರುವುದನ್ನು ಬಿಟ್ಟು ಬಿಡುತ್ತಾರೆ. ಯಾವುದೇ ಉಲ್ಟಾ ಕರ್ಮವಾದರೆ ಕೂಡಲೇ ಸತ್ಯತೆಯಿಂದ ತಂದೆಗೆ ಬರೆಯಬೇಕು ಆಗ ಪಾಪದ ಪ್ರಭಾವವು ಕಡಿಮೆಯಾಗುವುದು. ಇಲ್ಲದಿದ್ದರೆ ವೃದ್ಧಿಯಾಗುತ್ತಾ ಹೋಗುವುದು. ತಂದೆಯು ಸುಧಾರಣೆ ಮಾಡಿಕೊಳ್ಳುವುದಕ್ಕಾಗಿ ಹೇಳುತ್ತಾರೆ ಆದರೆ ಯಾರಾದರೂ ಸುಧಾರಣೆ ಆಗಲಿಲ್ಲವೆಂದರೆ ಪಾಪಕರ್ಮ ಮಾಡುವುದನ್ನು ಬಿಡುವುದೇ ಇಲ್ಲ. ಅದೃಷ್ಟದಲ್ಲಿ ಇಲ್ಲವೆಂದರೆ ತಂದೆಗೆ ಸತ್ಯ ಸಮಾಚಾರವನ್ನು ತಿಳಿಸುವುದಿಲ್ಲ. ತಂದೆಯ ಬಳಿ ರಿಪೋರ್ಟ್ ಬಂದರೆ ಅವರನ್ನು ಸುಧಾರಣೆ ಮಾಡುವ ಪ್ರಯತ್ನ ಪಡುವರು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಅಶರೀರಿಯಾಗುವ ಸಂಪೂರ್ಣ ಅಭ್ಯಾಸ ಮಾಡಬೇಕಾಗಿದೆ. ಯಾವುದೇ ಉಲ್ಟಾ ಸುಲ್ಟಾ ಮಾತನಾಡಬಾರದು. ಬಹಳ ಮಧುರರಾಗಬೇಕು. ಯಾವುದೇ ಮಾತಿನಲ್ಲಿ ಮುನಿಸಿಕೊಳ್ಳಬಾರದು. |
2. ಮುರುಳಿಯ ಸ್ಮರಣೆ ಮಾಡಬೇಕು. ಏನನ್ನು ಕೇಳುತ್ತೀರೋ ಅದನ್ನು ವಿಚಾರ ಸಾಗರ ಮಂಥನ ಮಾಡಬೇಕು. ಮನ್ಮನಾಭವದ ವ್ರತವನ್ನು ಇಟ್ಟುಕೊಳ್ಳಬೇಕಾಗಿದೆ. |
Subsets and Splits
No community queries yet
The top public SQL queries from the community will appear here once available.