text
stringlengths 0
61.5k
|
---|
ಶುಭ ಭಾವನೆ ಮತ್ತು ಶುಭ ಕಾಮನೆಯ ಸೂಕ್ಷ್ಮ ಸೇವೆ |
ಇಂದು ವಿಶ್ವಕಲ್ಯಾಣಕಾರಿ ಬಾಪ್ದಾದಾ ತನ್ನ ವಿಶ್ವಕಲ್ಯಾಣಕಾರಿ ಜೊತೆಗಾರರನ್ನು ನೋಡುತ್ತಿದ್ದಾರೆ. ಎಲ್ಲಾ ಮಕ್ಕಳು ತಂದೆಯ ವಿಶ್ವಕಲ್ಯಾಣದ ಕಾರ್ಯದಲ್ಲಿ ನಿಮಿತ್ತರಾಗಿರುವ ಜೊತೆಗಾರರಾಗಿದ್ದಾರೆ. ಎಲ್ಲರ ಮನಸ್ಸಿನಲ್ಲಿ ಸದಾ ಇದೊಂದೇ ಸಂಕಲ್ಪವಿದೆ - ವಿಶ್ವದ ವ್ಯಾಕುಲರಾಗಿರುವ ಆತ್ಮರ ಕಲ್ಯಾಣವಾಗಲಿ. ನಡೆಯುತ್ತಾ-ತಿರುಗಾಡುತ್ತಾ ಯಾವುದೇ ಕಾರ್ಯ ಮಾಡುತ್ತಾ ಮನಸ್ಸಿನಲ್ಲಿ ಇದೇ ಶುಭ ಭಾವನೆಯಿದೆ. ಭಕ್ತಿಮಾರ್ಗದಲ್ಲಿಯೂ ಭಾವನೆಯಿರುತ್ತದೆ ಆದರೆ ಭಕ್ತಾತ್ಮರಿಗೆ ವಿಶೇಷ ಅಲ್ಪಕಾಲದ ಕಲ್ಯಾಣದ ಪ್ರತಿ ಭಾವನೆಯಿರುತ್ತದೆ. ತಾವು ಜ್ಞಾನಿ ಆತ್ಮ ಮಕ್ಕಳ ಜ್ಞಾನಯುಕ್ತ ಕಲ್ಯಾಣದ ಭಾವನೆಯು ಆತ್ಮರ ಪ್ರತಿ ಸದಾಕಾಲ ಮತ್ತು ಸರ್ವ ಕಲ್ಯಾಣಕಾರಿಯ ಭಾವನೆಯಿದೆ. ತಮಗೆ ವರ್ತಮಾನ ಮತ್ತು ಭವಿಷ್ಯಕ್ಕೋಸ್ಕರ ಇದೇ ಭಾವನೆಯಿದೆ - ಪ್ರತಿಯೊಂದು ಆತ್ಮನು ಅನೇಕ ಜನ್ಮಗಳಿಗಾಗಿ ಸುಖಿಯಾಗಲಿ, ಪ್ರಾಪ್ತಿಗಳಿಂದ ಸಂಪನ್ನರಾಗಿ ಬಿಡಲಿ ಏಕೆಂದರೆ ಅವಿನಾಶಿ ತಂದೆಯ ಮೂಲಕ ತಾವಾತ್ಮರಿಗೆ ಅವಿನಾಶಿ ಆಸ್ತಿಯು ಸಿಕ್ಕಿದೆ. ತಮ್ಮ ಭಾವನೆಯ ಫಲವು ವಿಶ್ವದ ಆತ್ಮರನ್ನು ಪರಿವರ್ತನೆ ಮಾಡುತ್ತಿದೆ ಮತ್ತು ಮುಂದೆ ಹೋದಂತೆ ಪ್ರಕೃತಿಯ ಸಹಿತ ಪರಿವರ್ತನೆ ಆಗಿಬಿಡುವುದು. ತಾವಾತ್ಮರ ಶ್ರೇಷ್ಠ ಭಾವನೆಯು ಇಷ್ಟೊಂದು ಶ್ರೇಷ್ಠ ಫಲವನ್ನು ಪ್ರಾಪ್ತಿ ಮಾಡಿಸುವಂತದ್ದಾಗಿದೆ ಆದ್ದರಿಂದ ಕಲ್ಯಾಣಕಾರಿ ಆತ್ಮರೆಂದು ನಿಮ್ಮ ಗಾಯನವಾಗುತ್ತದೆ. ತಮ್ಮ ಶುಭಭಾವನೆಯ ಇಷ್ಟು ಮಹತ್ವಿಕೆಯನ್ನು ಅರಿತುಕೊಂಡಿದ್ದೀರಾ? ತಮ್ಮ ಶುಭಭಾವನೆಯನ್ನು ಸಾಧಾರಣ ರೀತಿಯಿಂದ ಕಾರ್ಯದಲ್ಲಿ ತೊಡಗಿಸುತ್ತಾ ನಡೆಯುತ್ತಿದ್ದೀರೋ ಅಥವಾ ಮಹತ್ವಿಕೆಯನ್ನರಿತು ನಡೆಯುತ್ತೀರೋ? ಪ್ರಪಂಚದವರೂ ಸಹ ಶುಭಭಾವನೆಯ ಶಬ್ಧವನ್ನು ಹೇಳುತ್ತಾರೆ ಆದರೆ ನಿಮ್ಮ ಶುಭಭಾವನೆಯು ಕೇವಲ ಶುಭವಲ್ಲ, ಶಕ್ತಿಶಾಲಿಯೇ ಆಗಿದೆ ಏಕೆಂದರೆ ತಾವು ಸಂಗಮಯುಗೀ ಶ್ರೇಷ್ಠ ಆತ್ಮರಾಗಿದ್ದೀರಿ. ಸಂಗಮಯುಗಕ್ಕೆ ಡ್ರಾಮಾನುಸಾರ ಪ್ರತ್ಯಕ್ಷ ಫಲವು ಪ್ರಾಪ್ತಿಯಾಗುವ ವರದಾನವಿದೆ ಆದ್ದರಿಂದ ತಮ್ಮ ಶುಭಭಾವನೆಯ ಪ್ರತ್ಯಕ್ಷಫಲವು ಆತ್ಮರಿಗೆ ಪ್ರಾಪ್ತಿಯಾಗುತ್ತದೆ. ಯಾರೆಲ್ಲಾ ಆತ್ಮರು ತಮ್ಮ ಸಂಬಂಧ-ಸಂಪರ್ಕದಲ್ಲಿ ಬರುವರೋ ಅವರು ಅದೇ ಸಮಯದಲ್ಲಿಯೇ ಶಾಂತಿ ಮತ್ತು ಸ್ನೇಹದ ಫಲದ ಅನುಭೂತಿ ಮಾಡುತ್ತಾರೆ. |
ಶುಭಕಾಮನೆಯಿಲ್ಲದೆ ಶುಭಭಾವನೆಯಿರಲು ಸಾಧ್ಯವಿಲ್ಲ. ಪ್ರತಿಯೊಂದು ಆತ್ಮನ ಪ್ರತಿ ಸದಾ ಇದೇ ದಯೆಯ ಕಾಮನೆಯಿರುತ್ತದೆ - ಈ ಆತ್ಮನೂ ಸಹ ಆಸ್ತಿಗೆ ಅಧಿಕಾರಿಯಾಗಿ ಬಿಡಲಿ. ಪ್ರತಿಯೊಂದು ಆತ್ಮನ ಪ್ರತಿ ಇವರು ನಮ್ಮ ಈಶ್ವರೀಯ ಪರಿವಾರದವರೇ ಆಗಿದ್ದಾರೆ ಅಂದಮೇಲೆ ಇವರಿಂದ ವಂಚಿತರಾಗಿ ಏಕೆ ಉಳಿಯಬೇಕೆಂದು ದಯೆ ಬರುತ್ತದೆ, ಶುಭಕಾಮನೆ ಇರುತ್ತದೆಯಲ್ಲವೇ. ಶುಭಕಾಮನೆ ಮತ್ತು ಶುಭಭಾವನೆ ಇದು ಸೇವೆಯ ಫೌಂಡೇಷನ್ ಆಗಿದೆ. ಯಾವುದೇ ಸೇವೆಯನ್ನು ಮಾಡುತ್ತೀರಿ, ಒಂದುವೇಳೆ ತಮ್ಮಲ್ಲಿ ಶುಭಭಾವನೆ-ಶುಭಕಾಮನೆ ಇಲ್ಲವೆಂದರೆ ಆತ್ಮರಿಗೆ ಪ್ರತ್ಯಕ್ಷಫಲದ ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಒಂದು ಸೇವೆಯಾಗಿದೆ - ನೀತಿಯ ಪ್ರಮಾಣ ರೀತಿಯ ಪ್ರಮಾಣ ಸೇವೆ, ಏನು ಕೇಳಿರುವರೋ ಅದನ್ನು ತಿಳಿಸುವುದಾಗಿದೆ. ಎರಡನೆಯದು - ತಮ್ಮ ಶುಭಭಾವನೆ-ಶುಭಕಾಮನೆಯಿಂದ ಸೇವೆ ಮಾಡುವುದಾಗಿದೆ. ತಮ್ಮ ಶುಭಭಾವನೆಯು ಅವರಿಗೆ ತಂದೆಯಲ್ಲಿಯೂ ಭಾವನೆಯನ್ನು ತರಿಸುತ್ತದೆ ಮತ್ತು ತಂದೆಯ ಮೂಲಕ ಫಲದ ಪ್ರಾಪ್ತಿ ಮಾಡಿಸಲು ನಿಮಿತ್ತನಾಗಿಬಿಡುತ್ತದೆ. “ಶುಭ ಭಾವನೆ”ಯು ಎಲ್ಲಿಯೇ ದೂರ ಕುಳಿತಿರುವ ಯಾವುದೇ ಆತ್ಮನಿಗೂ ಸಹ ಫಲದ ಪ್ರಾಪ್ತಿ ಮಾಡಿಸಲು ನಿಮಿತ್ತನಾಗುತ್ತದೆ. ಹೇಗೆ ವಿಜ್ಞಾನದ ಸಾಧನಗಳು ದೂರದಲ್ಲಿ ಕುಳಿತೇ ಆತ್ಮರೊಂದಿಗೆ ಸಮೀಪ ಸಂಬಂಧ ಮಾಡಿಸಲು ನಿಮಿತ್ತನಾಗುತ್ತದೆ. ತಮ್ಮ ಶಬ್ಧವು ಅವರಿಗೆ ತಲುಪುತ್ತದೆ, ತಮ್ಮ ಸಂದೇಶವು ತಲುಪುತ್ತದೆ, ತಮ್ಮ ದೃಶ್ಯವು ತಲುಪುತ್ತದೆ ಅಂದಮೇಲೆ ವೈಜ್ಞಾನಿಕ ಶಕ್ತಿಯೇ ಅಲ್ಪಕಾಲಕ್ಕಾಗಿ ಸಮೀಪತೆಯ ಫಲ ಕೊಡಬಲ್ಲದು ಅಂದಮೇಲೆ ತಮ್ಮ ಶಾಂತಿಯಶಕ್ತಿ, ಶುಭಭಾವನೆಯು ದೂರ ಕುಳಿತಿದ್ದರೂ ಆತ್ಮರಿಗೆ ಫಲ ಕೊಡುವುದಿಲ್ಲವೇ? ಆದರೆ ಇದಕ್ಕೆ ಆಧಾರವಾಗಿದೆ - ತನ್ನಲ್ಲಿ ಇಷ್ಟು ಶಾಂತಿಯ ಶಕ್ತಿಯು ಜಮಾ ಇರಬೇಕು. ಶಾಂತಿಯ ಶಕ್ತಿಯು ಅಲೌಕಿಕ ಅನುಭವ ಮಾಡಿಸುತ್ತದೆ. ಮುಂದೆ ಹೋದಂತೆ ಈ ಪ್ರತ್ಯಕ್ಷ ಪ್ರಮಾಣವನ್ನು ಅನುಭವ ಮಾಡುತ್ತಾ ಇರುತ್ತೀರಿ. |
ಶುಭಭಾವನೆ ಅರ್ಥಾತ್ ಶಕ್ತಿಶಾಲಿ ಸಂಕಲ್ಪ. ಎಲ್ಲಾ ಶಕ್ತಿಗಳಿಗಿಂತ ಸಂಕಲ್ಪದ ಗತಿಯು ತೀವ್ರವಾಗಿದೆ. ಎಷ್ಟಾದರೂ ವಿಜ್ಞಾನವು ತೀವ್ರಗತಿಯ ಸಾಧನಗಳನ್ನು ತಯಾರಿಸಿರಬಹುದು ಆದರೆ ಅವೆಲ್ಲವುಗಳಿಗಿಂತಲೂ ಸಂಕಲ್ಪ ಶಕ್ತಿಯು ತೀವ್ರಗತಿಯದಾಗಿದೆ. ಯಾವುದೇ ಆತ್ಮನ ಪ್ರತಿ ಅಥವಾ ಬೇಹದ್ದಿನ ವಿಶ್ವದ ಆತ್ಮನ ಪ್ರತಿ ಶುಭಭಾವನೆಯನ್ನು ಇಡುತ್ತೀರಿ ಅರ್ಥಾತ್ ಶಕ್ತಿಶಾಲಿ ಶುಭ ಮತ್ತು ಶುದ್ಧ ಸಂಕಲ್ಪ ಮಾಡುತ್ತೀರಿ - ಈ ಆತ್ಮನ ಕಲ್ಯಾಣವಾಗಲಿ ಎಂದು. ಆಗ ತಮ್ಮ ಸಂಕಲ್ಪ ಅಥವಾ ಭಾವನೆಯು ಉತ್ಪನ್ನವಾಗುವುದು ಮತ್ತು ಆ ಆತ್ಮಕ್ಕೆ ನನಗೆ ಯಾರದೋ ವಿಶೇಷ ಸಹಯೋಗದಿಂದ ಶಕ್ತಿ ಹಾಗೂ ಶಾಂತಿಯು ಸಿಗುತ್ತಿದೆ ಎಂಬ ಅನುಭವವಾಗುತ್ತದೆ. ಹೇಗೆ ಈಗಲೂ ಸಹ ಕೆಲವು ಮಕ್ಕಳು ಇದೇ ಅನುಭವ ಮಾಡುತ್ತಾರೆ - ಕೆಲವು ಕಾರ್ಯಗಳಲ್ಲಿ ನನಗೆ ಅಷ್ಟು ಧೈರ್ಯ ಅಥವಾ ನನಗೆ ಅಷ್ಟು ಯೋಗ್ಯತೆಯಿರಲಿಲ್ಲ ಆದರೆ ಬಾಪ್ದಾದಾರವರ ಅಧಿಕ ಸಹಯೋಗದಿಂದ ಈ ಕಾರ್ಯವು ಸಹಜವಾಗಿ ಸಫಲವಾಯಿತು ಅಥವಾ ಈ ವಿಘ್ನವು ಸಮಾಪ್ತಿ ಆಯಿತೆಂದು ಹೇಳುತ್ತಾರೆ ಅದೇರೀತಿ ತಾವು ಮಾ|| ವಿಶ್ವಕಲ್ಯಾಣಕಾರಿ ಆತ್ಮರ ಸೂಕ್ಷ್ಮ ಸೇವೆಯನ್ನು ಪ್ರತ್ಯಕ್ಷ ರೂಪದಲ್ಲಿ ಅನುಭವ ಮಾಡುತ್ತಾರೆ. ಸಮಯವು ಕಡಿಮೆ ಮತ್ತು ಸಾಧನಗಳೂ ಕಡಿಮೆ. ಸಂಪತ್ತೂ ಕಡಿಮೆ ಹಿಡಿಸುತ್ತದೆ. ಇದಕ್ಕಾಗಿ ಮನಸ್ಸು ಮತ್ತು ಬುದ್ಧಿಯು ಸದಾ ಫ್ರೀ ಆಗಿರಬೇಕು. ಚಿಕ್ಕ-ಚಿಕ್ಕ ಮಾತುಗಳಲ್ಲಿ ಮನಸ್ಸು-ಬುದ್ಧಿಯನ್ನು ಬಹಳ ಬ್ಯುಜಿಯಾಗಿಟ್ಟುಕೊಳ್ಳುತ್ತೀರಿ ಆದ್ದರಿಂದ ಸೇವೆಯ ಸೂಕ್ಷ್ಮ ಗತಿಯ ಲೈನ್ ಸ್ಪಷ್ಟವಾಗಿರುವುದಿಲ್ಲ. ಸಾಧಾರಣ ಮಾತುಗಳಲ್ಲಿಯೂ ಸಹ ತಮ್ಮ ಮನಸ್ಸು-ಬುದ್ಧಿಯ ಮಾರ್ಗವನ್ನು ಬಹಳ ಬ್ಯುಜಿಯಾಗಿಟ್ಟುಕೊಳ್ಳುತ್ತೀರಿ ಆದ್ದರಿಂದ ಈ ಸೂಕ್ಷ ಸೇವೆಯು ತೀವ್ರ ಗತಿಯಿಂದ ನಡೆಯುತ್ತಿಲ್ಲ. ಇದಕ್ಕಾಗಿ ವಿಶೇಷ ಗಮನವಾಗಿದೆ - “ಏಕಾಂತ ಮತ್ತು ಏಕಾಗ್ರತೆ”. |
ಏಕಾಂತ ಪ್ರಿಯ ಆತ್ಮರು ಎಷ್ಟಾದರೂ ಬ್ಯುಜಿಯಾಗಿರಲಿ ಆದರೆ ಮಧ್ಯ-ಮಧ್ಯದಲ್ಲಿ ಒಂದು ಘಳಿಗೆ, ಎರಡು ಘಳಿಗೆಗಳನ್ನು ತೆಗೆದು ಏಕಾಂತದ ಅನುಭವ ಮಾಡುತ್ತಾರೆ. ಏಕಾಂತ ಪ್ರಿಯ ಆತ್ಮನು ಇಂತಹ ಶಕ್ತಿಶಾಲಿಗಳು ಆಗಿ ಬಿಡುತ್ತಾರೆ. ತಮ್ಮ ಸೂಕ್ಷ್ಮ ಶಕ್ತಿಗಳು ಮನಸ್ಸು-ಬುದ್ಧಿಯಿಂದ ಯಾವ ಸಮಯದಲ್ಲಿ ಬೇಕೋ, ಎಲ್ಲಿ ಬೇಕೋ ಏಕಾಗ್ರ ಮಾಡಲು ಸಾಧ್ಯವಾಗುತ್ತದೆ. ಹೊರಗಿನ ಪರಿಸ್ಥಿತಿಯು ಏರುಪೇರಿನದಾಗಿದ್ದರೂ ಸಹ ಏಕಾಂತ ಪ್ರಿಯ ಆತ್ಮನು ಒಬ್ಬರ ಅಂತ್ಯದಲ್ಲಿ (ಪ್ರೀತಿಯಲ್ಲಿ) ಸೆಕೆಂಡಿನಲ್ಲಿ ಏಕಾಗ್ರವಾಗಿ ಬಿಡುತ್ತಾರೆ. ಹೇಗೆ ಸಾಗರದ ಮೇಲೆ ಅಲೆಗಳ ಶಬ್ಧವು ಬಹಳ ಹೆಚ್ಚಾಗಿರುತ್ತದೆ. ಎಷ್ಟೊಂದು ಏರುಪೇರು ಇರುತ್ತದೆ ಆದರೆ ಸಾಗರದ ಆಳದಲ್ಲಿ ಏರುಪೇರುಗಳು ಇರುವುದಿಲ್ಲ ಅಂದಮೇಲೆ ಯಾವಾಗ ಒಬ್ಬರ ಅಂತ್ಯದಲ್ಲಿ, ಜ್ಞಾನಸಾಗರನ ಪ್ರೀತಿಯಲ್ಲಿ ಮುಳುಗಿ ಹೋಗುತ್ತೀರೊ ಆಗ ಏರುಪೇರು ಸಮಾಪ್ತಿಯಾಗಿ ಏಕಾಗ್ರವಾಗಿ ಬಿಡುತ್ತೀರಿ. ಸೂಕ್ಷ್ಮ ಸೇವೆ ಏನೆಂದು ತಿಳಿಯಿತೆ? “ಶುಭಭಾವನೆ”, “ಶುಭಕಾಮನೆ”- ಈ ಶಬ್ಧವನ್ನು ಎಲ್ಲರೂ ಹೇಳುತ್ತಿರುತ್ತಾರೆ ಆದರೆ ಇದರ ಮಹತ್ವಿಕೆಯನ್ನರಿತು ಪ್ರತ್ಯಕ್ಷ ರೂಪದಲ್ಲಿ ಬರುವುದರಿಂದ ಅನೇಕ ಆತ್ಮರಿಗೆ ಪ್ರತ್ಯಕ್ಷಫಲದ ಅನುಭೂತಿ ಮಾಡಿಸಲು ನಿಮಿತ್ತರಾಗುವಿರಿ. ಒಳ್ಳೆಯದು. |
ಟೀಚರ್ಸ್ನ ಕೆಲಸವೇ ಆಗಿದೆ - ಸೇವೆ. ಟೀಚರ್ಸ್ನ ಮಹತ್ವಿಕೆಯೇ ಸೇವೆಯಾಗಿದೆ. ಒಂದುವೇಳೆ ಸೇವೆಯ ಪ್ರತ್ಯಕ್ಷ ಪ್ರಮಾಣವು ಕಾಣುವುದಿಲ್ಲವೆಂದರೆ ಅವರನ್ನು ಯೋಗ್ಯ ಶಿಕ್ಷಕಿಯ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ. ಟೀಚರ್ಸ್ನ ಮಹಾನತೆಯೇ ಸೇವೆಯಾಯಿತಲ್ಲವೇ ಆದ್ದರಿಂದ ಸೇವೆಯ ಸೂಕ್ಷ್ಮ ರೂಪವನ್ನು ತಿಳಿಸಿದೆವು. ಮುಖದ (ವಾಚಾ) ಸೇವೆಯನ್ನಂತೂ ಮಾಡುತ್ತಲೇ ಇರುತ್ತೀರಿ ಆದರೆ ಮುಖ ಮತ್ತು ಮನಸ್ಸಿನ ಶುಭಭಾವನೆಯ ಸೇವೆಯು ಜೊತೆ ಜೊತೆಯಲ್ಲಿ ಇರಲಿ, ಮಾತು ಮತ್ತು ಭಾವನೆ ಡಬಲ್ ಕೆಲಸ ಮಾಡುತ್ತದೆ. ಈ ಸೂಕ್ಷ್ಮ ಸೇವೆಯ ಅಭ್ಯಾಸವು ಬಹಳ ಕಾಲ ಅರ್ಥಾತ್ ಈಗಿನಿಂದಲೇ ಬೇಕಾಗಿದೆ ಏಕೆಂದರೆ ಮುಂದೆ ಹೋದಂತೆ ಸೇವೆಯ ರೂಪರೇಖೆಯು ಬದಲಾಗಲೇಬೇಕಾಗಿದೆ ನಂತರ ಆ ಸಮಯದಲ್ಲಿ ಸೂಕ್ಷ್ಮ ಸೇವೆಯಲ್ಲಿ ತನ್ನನ್ನು ಬ್ಯುಜಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಹೊರಗಿನ ಪರಿಸ್ಥಿತಿಗಳು ಬುದ್ಧಿಯನ್ನು ಆಕರ್ಷಣೆ ಮಾಡುತ್ತದೆ ಅಂದಾಗ ಫಲಿತಾಂಶವೇನಾಗುವುದು? ನೆನಪು ಮತ್ತು ಸೇವೆಯ ಸಮತೋಲನೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಈಗಿನಿಂದಲೇ ತಮ್ಮ ಮನಸ್ಸು ಮತ್ತು ಬುದ್ಧಿಯ ಸೇವೆಯ ಮಾರ್ಗವನ್ನು ಪರಿಶೀಲನೆ ಮಾಡಿಕೊಳ್ಳಿ. ಟೀಚರ್ಸ್ಗೆ ಪರಿಶೀಲನೆ ಮಾಡಿಕೊಳ್ಳುವುದು ಬರುತ್ತದೆಯಲ್ಲವೇ. ಶಿಕ್ಷಕಿಯರು ಅನ್ಯರಿಗೆ ಕಲಿಸುತ್ತೀರಿ ಅಂದಮೇಲೆ ಅವಶ್ಯವಾಗಿ ಸ್ವಯಂ ತಿಳಿದುಕೊಂಡಿದ್ದೀರಿ ಆದ್ದರಿಂದಲೇ ಕಲಿಸುತ್ತೀರಲ್ಲವೆ. ಎಲ್ಲರೂ ಯೋಗ್ಯಶಿಕ್ಷಕಿಯರು ಆಗಿದ್ದೀರಲ್ಲವೆ. ಯೋಗ್ಯಶಿಕ್ಷಕನ ವಿಶೇಷತೆ ಏನೆಂದರೆ ನಿರಂತರ ಮನಸ್ಸಾ-ವಾಚಾ ಅಥವಾ ಕರ್ಮಣಾ ಸೇವೆಯಲ್ಲಿ ಸದಾ ಬ್ಯುಜಿಯಾಗಿರುವವರು. ಆಗ ಅನ್ಯ ಮಾತುಗಳಿಂದ ಸ್ವತಹ ಖಾಲಿಯಾಗಿ ಬಿಡುತ್ತೀರಿ. ಒಳ್ಳೆಯದು. |
ಕುಮಾರಿಯರೂ ಬಂದಿದ್ದಾರೆ. ಕುಮಾರಿಯರು ಅರ್ಥಾತ್ ಮುಂದೆ ಆಗಲಿರುವ ಟೀಚರ್ಸ್ ಆದ್ದರಿಂದಲೇ ಬ್ರಹ್ಮಾಕುಮಾರಿಯರೆಂದು ಹೇಳುತ್ತಾರೆ. ಒಂದುವೇಳೆ ಮುಂದೆ ಆಗಲಿರುವ ಸೇವಾಧಾರಿಗಳಲ್ಲವೆಂದರೆ ಅಂತಹವರು ಬಿಡುಗಾಸಿನ ಕುಮಾರಿಯರು. ಕುಮಾರಿಯರು ಏನು ಮಾಡುತ್ತಾರೆ? ಬಿಡುಗಾಸಿನ ಹಿಂದೆ ನೌಕರಿಯ ಬುಟ್ಟಿಯನ್ನು ಹೊತ್ತುಕೊಳ್ಳುತ್ತಾರಲ್ಲವೇ. ಬಾಪ್ದಾದಾರವರಿಗೆ ಕುಮಾರಿಯರ ಮೇಲೆ ಬಹಳ ನಗುಬರುತ್ತದೆ - ಬುಟ್ಟಿಯ ಹೊರೆಯನ್ನು ಹೊತ್ತುಕೊಳ್ಳಲು ತಯಾರಾಗಿ ಬಿಡುತ್ತಾರೆ ಆದರೆ ಭಗವಂತನ ಮನೆಯಲ್ಲಿ ಅರ್ಥಾತ್ ಸೇವಾಸ್ಥಾನಗಳಲ್ಲಿ ಇರಲು ಧೈರ್ಯವನ್ನು ಇಡುವುದಿಲ್ಲ. ಇಂತಹ ಬಲಹೀನ ಕುಮಾರಿಯರಂತೂ ಅಲ್ಲತಾನೇ. ಭಲೆ ಓದುತ್ತಿರಬಹುದು ಆದರೂ ಸಹ ನೌಕರಿ ಮಾಡುವುದೇ ಅಥವಾ ವಿಶ್ವ ಸೇವೆ ಮಾಡುವುದೇ ಎಂಬ ಲಕ್ಷ್ಯವನ್ನಂತು ಮೊದಲೇ ಇಟ್ಟುಕೊಳ್ಳಬೇಕಾಗಿದೆ. ನೌಕರಿ ಮಾಡುವುದು ಎಂದರೆ ತನ್ನನ್ನು ಪಾಲನೆ ಮಾಡಿಕೊಳ್ಳುವುದು, ಪಾಲನೆ ಮಾಡಲು ಮರಿ ಮಕ್ಕಳಂತೂ ಇಲ್ಲ. ಆರಾಮದಿಂದ ತನ್ನನ್ನು ಪಾಲನೆ ಮಾಡಿಕೊಳ್ಳಲು, ಆರಾಮದಿಂದ ನಡೆಯುವುದಕ್ಕಾಗಿ ನೌಕರಿ ಮಾಡುತ್ತಾರೆ ಆದರೆ ವಿಶ್ವದ ಆತ್ಮರಿಗೆ ತಂದೆಯ ಪಾಲನೆ ಕೊಡಬೇಕೆಂಬ ಲಕ್ಷ್ಯವನ್ನಿಟ್ಟುಕೊಳ್ಳಿ. ಯಾವಾಗ ಅನೇಕ ಆತ್ಮರಿಗೆ ನಿಮಿತ್ತರಾಗಬಲ್ಲಿರಿ ಅಂದರೆ ಕೇವಲ ತನ್ನನ್ನು ತಾನು ಪಾಲನೆ ಮಾಡಿಕೊಳ್ಳುವುದು ಅದರ ಮುಂದೆ ಏನಾಯಿತು? ಅನೇಕರ ಆಶೀರ್ವಾದಗಳನ್ನು ತೆಗೆದುಕೊಳ್ಳುವುದು ಎಷ್ಟು ದೊಡ್ಡ ಸಂಪಾದನೆಯಾಗಿದೆ. ಆ ಸಂಪಾದನೆಯಲ್ಲಿ 5000, 5 ಲಕ್ಷವಾದರೂ ಆಗಬಹುದು ಆದರೆ ಇಲ್ಲಿ ಅನೇಕ ಆತ್ಮರ ಆಶೀರ್ವಾದಗಳು ಎಷ್ಟು ದೊಡ್ಡ ಸಂಪಾದನೆಯಾಗಿದೆ ಮತ್ತು ಈ ಸಂಪಾದನೆಯು ಅನೇಕ ಜನ್ಮಗಳಿಗಾಗಿ ಜೊತೆ ಬರುವುದು. ಆ 5 ಲಕ್ಷಗಳೆಲ್ಲಿ ಜೊತೆ ಬರುತ್ತದೆ? ಮನೆಯಲ್ಲಿ ಅಥವಾ ಬ್ಯಾಂಕ್ನಲ್ಲಿ ಉಳಿದುಕೊಳ್ಳುತ್ತದೆ ಆದ್ದರಿಂದ ಸದಾ ಶ್ರೇಷ್ಠ ಲಕ್ಷ್ಯವನ್ನು ಇಟ್ಟುಕೊಳ್ಳಿ, ಸಾಧಾರಣವಲ್ಲ. ಸಂಗಮಯುಗದಲ್ಲಿ ಈಗಿನ ಈ ಒಂದು ಜನ್ಮದಲ್ಲಿ ಬೇಹದ್ದಿನ ಸೇವೆಯಲ್ಲಿ ನಿಮಿತ್ತರಾಗುವ ಸುವರ್ಣಾವಕಾಶವು ಸಿಗುತ್ತದೆ. ಸತ್ಯಯುಗದಲ್ಲಿಯೂ ಈ ಅವಕಾಶವು ಸಿಗುವುದಿಲ್ಲ. ನೌಕರಿಗಾಗಿಯೂ ಸಹ ಯಾವುದಾದರೂ ಅವಕಾಶ ಸಿಗಲಿ ಎಂದು ಪತ್ರಿಕೆಗಳನ್ನು ನೋಡುತ್ತಿರುತ್ತಾರಲ್ಲವೆ. ತಂದೆಯು ಸ್ವಯಂ ಸೇವೆಯ ಅವಕಾಶ ನೀಡುತ್ತಿದ್ದಾರೆ ಆದ್ದರಿಂದ ಯೋಗ್ಯ ಬಲಭುಜಗಳಾಗಿ. ಸಾಧಾರಣ ಬ್ರಹ್ಮಾಕುಮಾರಿಯೂ ಆಗಬಾರದು, ಯೋಗ್ಯ ಸೇವಾಧಾರಿಗಳಾಗಲಿಲ್ಲವೆಂದರೆ ಸೇವೆ ಮಾಡುವ ಬದಲು ಸೇವೆ ತೆಗೆದುಕೊಳ್ಳುತ್ತಿರುತ್ತಾರೆ. ಯೋಗ್ಯ ಸೇವಾಧಾರಿಗಳಾಗುವುದು ಯಾವುದೇ ಕಷ್ಟವಿಲ್ಲ. ಯಾವಾಗ ಯೋಗ್ಯ ಸೇವಾಧಾರಿಗಳಾಗುವುದಿಲ್ಲವೋ ಆಗ ಹೇಗಾಗುವುದೋ, ನಡೆಯಲಾಗುತ್ತದೆಯೋ ಇಲ್ಲವೋ ಎಂದು ಹೆದರುತ್ತೀರಿ. ಯೋಗ್ಯತೆಯಿರುವುದಿಲ್ಲ, ಭಯವೆನಿಸುತ್ತದೆ. ಯಾರು ಯೋಗ್ಯರಾಗಿರುವುದಿಲ್ಲವೋ ಅವರು “ನಿಶ್ಚಿಂತ ಚಕ್ರವರ್ತಿ” ಗಳಾಗಿರುತ್ತಾರೆ. ಸ್ಥೂಲ ಯೋಗ್ಯತೆಯಿರಬಹುದು, ಜ್ಞಾನದ ಯೋಗ್ಯತೆಯಿರಬಹುದು, ಮನುಷ್ಯನನ್ನು ಮೌಲ್ಯವಂತನನ್ನಾಗಿ ಮಾಡುತ್ತದೆ. ಯೋಗ್ಯತೆಯಿಲ್ಲವೆಂದರೆ ಬೆಲೆಯಿರುವುದಿಲ್ಲ. ಸೇವೆಯ ಯೋಗ್ಯತೆಯು ಎಲ್ಲದಕ್ಕಿಂತ ದೊಡ್ಡದಾಗಿದೆ, ಇಂತಹ ಯೋಗ್ಯ ಆತ್ಮನನ್ನು ಯಾವುದೇ ಮಾತು ತಡೆಯಲು ಸಾಧ್ಯವಿಲ್ಲ. ಯೋಗ್ಯರಾಗುವುದು ಎಂದರೆ ನನ್ನವರು ಒಬ್ಬ ತಂದೆಯ ವಿನಃ ಬೇರೆಯಾರೂ ಇಲ್ಲ. ಕುಮಾರಿಯರು ಕೇಳಿದಿರಾ? ಒಳ್ಳೆಯದು. |
ಕುಮಾರರೂ ಬಹಳ ಮಂದಿ ಬಂದಿದ್ದಾರೆ. ಕುಮಾರರು ಬಹಳ ವೇಗವಾಗಿ ಓಡುತ್ತಾರೆ. ಸೇವೆಯಲ್ಲಿಯೂ ಒಳ್ಳೆಯ ಉಮ್ಮಂಗದಿಂದ ಓಡುತ್ತಿರುತ್ತಾರೆ ಆದರೆ ಕುಮಾರರ ವಿಶೇಷತೆ ಮತ್ತು ಮಹಾನತೆಯು ಇದೇ ಆಗಿದೆ - ಆದಿಯಿಂದ ಇಲ್ಲಿಯವರೆಗೂ ನಿರ್ವಿಘ್ನ ಕುಮಾರರಾಗಿದ್ದೀರಾ? ಒಂದುವೇಳೆ ಕುಮಾರರು ನಿರ್ವಿಘ್ನ ಕುಮಾರರಾಗಿದ್ದರೆ ಇಂತಹವರು ಬಹಳ ಮಹಾನ್ ಎಂದು ಗಾಯನವಾಗುತ್ತದೆ ಏಕೆಂದರೆ ಪ್ರಪಂಚದವರೂ ಸಹ ಕುಮಾರಿಯರ ಬದಲು ಕುಮಾರರು ಯೋಗ್ಯರಾಗಿ ಬಿಡುವುದು ಬಹಳ ಕಷ್ಟವೆಂದು ತಿಳಿಯುತ್ತಾರೆ ಆದರೆ ಕುಮಾರರೇ ವಿಶ್ವಕ್ಕೆ ಚಾಲೆಂಜ್ ಮಾಡಬೇಕು - ತಾವಂತೂ ಅಸಂಭವವಂತೂ ಹೇಳುತ್ತೀರಿ, ನಾವಂತೂ ನಿರ್ವಿಘ್ನ ಕುಮಾರರಾಗಿದ್ದೇವೆ ಎಂದು. ಇಂತಹ ವಿಶ್ವಕ್ಕೆ ಮಾದರಿಯನ್ನು ತೋರಿಸುವ ಕುಮಾರರು ಮಹಾನ್ ಕುಮಾರರಾಗಿದ್ದಾರೆ. ಬಾಪ್ದಾದಾ ಇಂತಹ ಕುಮಾರರಿಗೆ ಸದಾ ಹೃದಯಪೂರ್ವಕ ಶುಭಾಷಯಗಳನ್ನೇ ಕೊಡುತ್ತೇನೆ. ತಿಳಿಯಿತೇ - ಈಗೀಗ ಬಹಳ ಒಳ್ಳೆಯ ಮಕ್ಕಳು ಈಗೀಗ ಯಾವುದೇ ವಿಘ್ನಗಳು ಬಂದರೆ ಏರಿಳಿತವಾಗಿ ಬಿಡುವುದಲ್ಲ. ಕುಮಾರರು ಅರ್ಥಾತ್ ಸಮಸ್ಯೆಯೂ ಆಗಬಾರದು ಮತ್ತು ಸಮಸ್ಯೆಯಲ್ಲಿ ಸೋಲಲೂಬಾರದು. ಕುಮಾರರು ಕುಮಾರಿಯರಿಗಿಂತಲೂ ಮುಂದೆ ಹೋಗಬಹುದು ಆದರೆ ನಿರ್ವಿಘ್ನ ಕುಮಾರರಾಗಬೇಕು ಏಕೆಂದರೆ ಕುಮಾರರಿಗೆ ಬಹುತೇಕವಾಗಿ ಇದೇ ವಿಘ್ನವು ಬರುತ್ತದೆ - ಯಾರೂ ಜೊತೆಗಾರರಿಲ್ಲ, ಯಾರಾದರೂ ಜೊತೆ ಬೇಕು, ಸಂಗಾತಿ ಬೇಕು ಎಂದು. ಆದ್ದರಿಂದ ಯಾವುದಾದರೊಂದು ರೀತಿಯಿಂದ ತನ್ನ ಸಂಗ ಮಾಡಿಕೊಳ್ಳುತ್ತಾರೆ. ಕೆಲಕೆಲವರು ಕುಮಾರರು ಸಂಗಾತಿಯನ್ನೂ ಮಾಡಿಕೊಳ್ಳುತ್ತಾರೆ ಮತ್ತು ಇನ್ನೂ ಕೆಲವರು ಕುಳಿತುಕೊಳ್ಳುವುದು, ಮಾತನಾಡುವುದು - ಇಂತಹ ಸಂಗದಲ್ಲಿ ಬರುತ್ತಾರೆ ಮತ್ತು ಸಂಗಾತಿಯನ್ನೂ ಮಾಡಿಕೊಳ್ಳುವ ಸಂಕಲ್ಪ ಬರುತ್ತದೆ ಆದರೆ ಕೆಲವರು ಇಂತಹ ಕುಮಾರರೂ ಇದ್ದಾರೆ ತಂದೆಯ ವಿನಃ ಮತ್ತ್ಯಾವುದೇ ಸಂಗವನ್ನೂ ಮಾಡಿಕೊಳ್ಳುವುದಿಲ್ಲ, ಸಂಗಾತಿಯನ್ನೂ ಮಾಡಿಕೊಳ್ಳುವುದಿಲ್ಲ. ಸದಾ ತಂದೆಯ ಸಂಗದಲ್ಲಿರುವ ಕುಮಾರರು ಸದಾ ಸುಖಿಯಾಗಿರುತ್ತಾರೆ ಅಂದಾಗ ತಾವೆಲ್ಲರೂ ಎಂತಹ ಕುಮಾರರಾಗಿದ್ದೀರಿ? ಸ್ವಲ್ಪ-ಸ್ವಲ್ಪ ಸಂಗವು ಬೇಕೇ? ಇಡೀ ಪರಿವಾರವು ಸಂಗವಾಗಿದೆಯೇ? ಹಾಗಿದ್ದರೆ ಸರಿ. ಆದರೆ ಇಬ್ಬರು ಮೂವರು ಅಥವಾ ಯಾರಾದರೊಬ್ಬರ ಸಂಗ ಬೇಕು ಎಂದು ಹೇಳುವುದು ತಪ್ಪಾಗಿದೆ. ಅಂದಾಗ ತಾವೆಲ್ಲರೂ ಯಾರಾಗಿದ್ದೀರಿ? ನಿರ್ವಿಘ್ನರಾಗಿದ್ದೀರಲ್ಲವೇ. ಹೊಸ ಕುಮಾರರು ಕಮಾಲ್ ಮಾಡಿ ತೋರಿಸುತ್ತೀರಿ. ಕೊನೆಗೂ ವಿಶ್ವವನ್ನು ತನ್ನ ಮುಂದೆ, ತಂದೆಯ ಮುಂದೆ ಬಾಗಿಸಬೇಕಲ್ಲವೆ ಆದ್ದರಿಂದ ಈ ಕುಮಾರರ ಚಮತ್ಕಾರವು ವಿಶ್ವವನ್ನೇ ಬಾಗಿಸುವುದು. ಕುಮಾರರದು ಚಮತ್ಕಾರವಾಗಿದೆ ಎಂದು ವಿಶ್ವವು ತಮ್ಮ ಗುಣಗಾಯನ ಮಾಡುವುದು. ಬಹುತೇಕವಾಗಿ ಕುಮಾರರು ಸೇವೆಯ ಸಂಗದಲ್ಲಿ ಇರುತ್ತಾರೆ ಆದರೆ ಕುಮಾರರಿಗೆ ಸ್ವಲ್ಪ ಸಂಗದ ಸಂಕಲ್ಪ ಬರುತ್ತದೆಯೆಂದರೆ ಪಾಂಡವ ಭವನವನ್ನು ಮಾಡಿಕೊಂಡು ಸಫಲರಾಗಿ ಇರಿ. ಈ ರೀತಿ ಯಾರಾದರೂ ಮಾಡಿ ತೋರಿಸಿ ಆದರೆ ಇಂದು ಪಾಂಡವಭವನವನ್ನು ಮಾಡಿ ನಾಳೆ ಪಾಂಡವರು ಒಬ್ಬರು ಪೂರ್ವಕ್ಕೆ ಹೊರಟು ಹೋಗುವುದು, ಇನ್ನೊಬ್ಬರು ಪಶ್ಚಿಮಕ್ಕೆ ಹೊರಟು ಹೋಗುವರು, ಇಂತಹ ಪಾಂಡವ ಭವನವನ್ನು ಮಾಡಬೇಡಿ. |
ಬಾಪ್ದಾದಾರವರಿಗೆ ಕುಮಾರರ ಮೇಲೆ ವಿಶೇಷ ಹೆಮ್ಮೆಯಿದೆ- ಒಂಟಿಯಾಗಿದ್ದರೂ ಸಹ ಪುರುಷಾರ್ಥದಲ್ಲಿ ನಡೆಯುತ್ತಿದ್ದಾರೆ. ಕುಮಾರರು ಪರಸ್ಪರ ಇಬ್ಬರು, ಮೂವರು ಜೊತೆಗಾರರಾಗಿ ಏಕೆ ನಡೆಯುವುದಿಲ್ಲ! ಸಂಗಾತಿಯು ಕೇವಲ ಸ್ತ್ರೀಯರೇ ಬೇಕಿಲ್ಲ, ಇಬ್ಬರು ಕುಮಾರರೂ ಸಹ ಇರಬಹುದು ಆದರೆ ಒಬ್ಬರು ಇನ್ನೊಬ್ಬರಿಗೆ ನಿರ್ವಿಘ್ನ ಜೊತೆಗಾರರಾಗಿ ಇರಬೇಕು. ಇನ್ನೂ ಆ ಶೌರ್ಯವನ್ನು ಯಾರೂ ತೋರಿಸಿಲ್ಲ. ಸಮಯದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಯೋಗಿಗಳಾದರೆ ಏನು ತಾನೆ ಸಾಧ್ಯವಿಲ್ಲ? ಅನ್ಯ ಮಾತುಗಳು ಬಂದುಬಿಡುತ್ತವೆ ಆದ್ದರಿಂದ ಬಾಪ್ದಾದಾ ಪಾಂಡವ ಭವನವನ್ನು ಮಾಡಲು ನಿರಾಕರಿಸುತ್ತಾರೆ ಆದರೆ ಯಾರಾದರೂ ಸ್ಯಾಂಪಲ್ ಮಾಡಿ ತೋರಿಸಿ. ಪಾಂಡವ ಭವನವನ್ನು ಮಾಡಿ ಮತ್ತೆ ನಿಮಿತ್ತ ದಾದಿ, ದೀದಿಯರ ಸಮಯವನ್ನು ತೆಗೆದುಕೊಳ್ಳುತ್ತಾ ಇರುವುದಲ್ಲ. ಪರಸ್ಪರ ನಿರ್ವಿಘ್ನವಾಗಿರಿ, ಒಬ್ಬರು ಇನ್ನೊಬ್ಬರಿಗಿಂತಲೂ ಯೋಗ್ಯ ಕುಮಾರರಾಗಿರಿ. ಆಗ ನೋಡಿ, ಎಷ್ಟು ಒಳ್ಳೆಯ ಹೆಸರು ಬರುತ್ತದೆ! ಕುಮಾರರು ಕೇಳಿಸಿಕೊಂಡಿರಾ, ಯೋಗ್ಯ ಕುಮಾರರಾಗಿರಿ, ನಿರ್ವಿಘ್ನ ಕುಮಾರರಾಗಿರಿ. ಸೇವಾಕ್ಷೇತ್ರದಲ್ಲಿ ತಾವೂ ಸಮಸ್ಯೆಯಾಗಬೇಡಿ, ಬದಲಾಗಿ ಸಮಸ್ಯೆಯನ್ನು ಪರಿಹರಿಸುವವರಾಗಿ. ನಂತರ ನೋಡಿ, ಕುಮಾರರಿಗೆ ಬಹಳ ಬೆಲೆಯಿರುವುದು ಏಕೆಂದರೆ ಕುಮಾರರಿಲ್ಲದೆ ಸೇವೆ ನಡೆಯುವುದಿಲ್ಲ ಅಂದರೆ ಕುಮಾರರು ಏನು ಮಾಡುತ್ತೀರಿ? ಎಲ್ಲರೂ ಹೇಳಿರಿ - “ನಿರ್ವಿಘ್ನ ಕುಮಾರರಾಗಿ ತೋರಿಸುತ್ತೇವೆ”. (ಕುಮಾರರು ಬಾಪ್ದಾದಾರವರ ಮುಂದೆ ನಿಂತು ಪ್ರತಿಜ್ಞೆ ಮಾಡಿದರು) ಈಗ ಎಲ್ಲರ ಭಾವಚಿತ್ರವನ್ನು ತೆಗೆಯಲಾಗಿದೆ. ನಾವು ಎದ್ದು ನಿಂತಾಗ ಯಾರೂ ನೋಡಲಿಲ್ಲ ಎಂದು ತಿಳಿದುಕೊಳ್ಳಬೇಡಿ, ನಿಮ್ಮ ಭಾವಚಿತ್ರವಿದೆ. ಚೆನ್ನಾಗಿದೆ - “ಸಾಹಸ ಮಕ್ಕಳದು, ಸಹಯೋಗ ತಂದೆಯದು”ಮತ್ತು ಇಡೀ ಪರಿವಾರವೇ ತಮ್ಮ ಜೊತೆಯಿದೆ. ಒಳ್ಳೆಯದು. |
ನಾಲ್ಕೂ ಕಡೆಯಲ್ಲಿನ ಸರ್ವ ಮಕ್ಕಳಿಗೆ ಸದಾ ಬಾಪ್ದಾದಾರವರು ತನ್ನ ಸ್ನೇಹದ, ಸಹಯೋಗದ ಛತ್ರಛಾಯೆಯ ಜೊತೆಗೆ ಹೃದಯದಿಂದ ಸೇವೆಗಳ ಶುಭಾಷಯಗಳನ್ನು ಕೊಡುತ್ತಿದ್ದಾರೆ. ದೇಶ-ವಿದೇಶದ ಸೇವೆಯ ಸಮಾಚಾರಗಳು ತಲುಪುತ್ತಿರುತ್ತವೆ. ಪ್ರತಿಯೊಬ್ಬ ಮಗುವು ತನ್ನ ಹೃದಯದ ಸಮಾಚಾರಗಳನ್ನೂ ತಿಳಿಸುತ್ತಿರುತ್ತಾರೆ. ವಿಶೇಷವಾಗಿ ಹೆಚ್ಚು ಪತ್ರಗಳು ವಿದೇಶದಿಂದ ಬರುತ್ತಿರುತ್ತವೆ. ಅಂದಾಗ ಸೇವಾ ಸಮಾಚಾರವನ್ನು ಕೊಡುವಂತಹ ಮಕ್ಕಳಿಗೆ ಶುಭಾಷಯಗಳೂ ಇದೆ ಮತ್ತು ಅದರ ಜೊತೆಗೆ ಸದಾ ಸ್ವ-ಸೇವೆ ಮತ್ತು ವಿಶ್ವ-ಸೇವೆಯಲ್ಲಿ `ಸಫಲತಾ ಭವ'ದ ವರದಾನವನ್ನು ಕೊಡುತ್ತಿದ್ದಾರೆ. ಸ್ವ-ಪುರುಷಾರ್ಥದ ಸಮಾಚಾರವನ್ನು ಕೊಡುವವರಿಗೆ ಬಾಪ್ದಾದಾರವರು ಇದೇ ವರದಾನವನ್ನು ಕೊಡುತ್ತಿದ್ದಾರೆ - ಹೇಗೆ ಸತ್ಯ ಹೃದಯದಿಂದ ತಂದೆಯನ್ನು ಖುಷಿ ಪಡಿಸುತ್ತೀರಿ, ಹಾಗೆಯೇ ಸದಾ ತಮ್ಮನ್ನು ತಾವೂ ಸಹ ತಮ್ಮ ಸಂಸ್ಕಾರಗಳಿಂದ ಸಂಘಟನೆಯಿಂದ ರಹಸ್ಯಯುಕ್ತ ಅರ್ಥಾತ್ ಖುಷಿಯಾಗಿರಿ. ಪರಸ್ಪರರ ಸಂಸ್ಕಾರಗಳ ರಹಸ್ಯವನ್ನೂ ತಿಳಿದುಕೊಳ್ಳಬೇಕು, ಪರಿಸ್ಥಿತಿಗಳನ್ನೂ ತಿಳಿದುಕೊಳ್ಳುವುದೇ ರಹಸ್ಯಯುಕ್ತ ಸ್ಥಿತಿಯಾಗಿದೆ. ಬಾಕಿ ಸತ್ಯ ಹೃದಯದಿಂದ ತಮ್ಮ ಲೆಕ್ಕವನ್ನು ಕೊಡಿ ಹಾಗೂ ಸ್ನೇಹದ ಆತ್ಮಿಕ ವಾರ್ತಾಲಾಪದ ಪತ್ರವನ್ನು ಬರೆಯುವುದು ಅರ್ಥಾತ್ ಹಿಂದಿನ ಲೆಕ್ಕವನ್ನು ಸಮಾಪ್ತಿ ಮಾಡುವುದು ಹಾಗೂ ಸ್ನೇಹದ ವಾರ್ತಾಲಾಪವು ಸದಾ ಸಮೀಪತೆಯ ಅನುಭೂತಿ ಮಾಡಿಸುತ್ತಿರುತ್ತದೆ. ಇದಾಯಿತು ಪತ್ರಗಳ ಪ್ರತ್ಯುತ್ತರ. |
ಪತ್ರವನ್ನು ಬರೆಯುವುದರಲ್ಲಿ ವಿದೇಶಿಗಳು ಬಹಳ ಬುದ್ಧಿವಂತರಿದ್ದಾರೆ. ಬಹಳ ಬೇಗನೆ ಬರೆದು ಬಿಡುತ್ತಾರೆ. ಭಾರತವಾಸಿಗಳೂ ಸಹ ಬಹಳ ಉದ್ದವಾದ ಪತ್ರಗಳನ್ನು ಕಳುಹಿಸುವುದು ಪ್ರಾರಂಭಿಸಬಾರದು. ಬಾಪ್ದಾದಾರವರು ಹೇಳಿದ್ದಾರೆ - ಎರಡು ಶಬ್ಧಗಳಲ್ಲಿಯೇ ಬರೆಯಿರಿ. ಓ.ಕೆ (ಸಂಪೂರ್ಣವಾಗಿ ಚೆನ್ನಾಗಿದ್ದೇನೆ). ಸೇವಾ ಸಮಾಚಾರಗಳಿದ್ದರೆ ಬರೆಯಿರಿ, ಇಲ್ಲದಿದ್ದರೆ ಕೇವಲ ಓ.ಕೆ. ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಇಂತಹ ಪತ್ರವನ್ನು ಓದುವುದು ಬಹಳ ಸಹಜವಾಗಿದೆ ಮತ್ತು ತಾವು ಬರೆಯುವುದಕ್ಕೂ ಸಹಜವಿದೆ. ಆದರೆ ಒಂದುವೇಳೆ ಓ.ಕೆ. ಇಲ್ಲದಿದ್ದರೆ ಓ.ಕೆ. ಎಂದು ಬರೆಯಬಾರದು. ಓ.ಕೆ. ಆದನಂತರ ಪತ್ರವನ್ನು ಬರೆಯಿರಿ. ಪೋಸ್ಟ್ ಮಾಡಿರುವುದನ್ನು ಓದುವುದಕ್ಕೂ ಸಮಯ ತೆಗೆದುಕೊಳ್ಳುತ್ತದೆ ಅಲ್ಲವೆ! ಯಾವುದೇ ಕಾರ್ಯವನ್ನು ಮಾಡುತ್ತೀರೆಂದರೆ ಸದಾ ಶಾರ್ಟ್ ಆಗಿರಲಿ ಮತ್ತು ಸ್ವೀಟ್ ಆಗಿರಲಿ. ಪತ್ರವನ್ನು ಯಾರೇ ಓದುತ್ತಾರೆಂದರೆ ಓದುವವರಿಗೂ ಖುಷಿಯಾಗಿ ಬಿಡಬೇಕು ಆದ್ದರಿಂದ ರಾಮ ಕಥೆಗಳನ್ನು ಬರೆದು ಕಳುಹಿಸಬಾರದು. ತಿಳಿಯಿತೇ! ಸಮಾಚಾರವನ್ನಂತು ಕೊಡಬೇಕು ಆದರೆ ಸಮಾಚಾರ ಕೊಡುವುದನ್ನೂ ಕಲಿಯಬೇಕಾಗಿದೆ. ಒಳ್ಳೆಯದು! |
ಸರ್ವ ಶುಭ ಭಾವನೆ ಮತ್ತು ಶುಭ ಕಾಮನೆಯ ಸೂಕ್ಷ್ಮ ಸೇವೆಯ ಮಹತ್ವಿಕೆಯನ್ನು ಅರಿತುಕೊಳ್ಳುವಂತಹ ಮಹಾನ್ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ಓಂ ಶಾಂತಿ. ಈ ಗೀತೆಯನ್ನು ಭಕ್ತಿಮಾರ್ಗದಲ್ಲಿ ಹಾಡಿದ್ದಾರೆ. ಕೊನೆಗೆ ಇವೆಲ್ಲವೂ ನಿಂತು ಹೋಗುತ್ತದೆ, ಇದರ ಅವಶ್ಯಕತೆಯಿಲ್ಲ. ಒಂದು ಸೆಕೆಂಡಿನಲ್ಲಿ ತಂದೆಯಿಂದ ಆಸ್ತಿ ಸಿಗುತ್ತದೆ ಎಂದು ಗಾಯನವಿದೆ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆ. ಜೀವನ್ಮುಕ್ತಿ ಅರ್ಥಾತ್ ಈ ದುಃಖಧಾಮದಿಂದ ಮುಕ್ತ, ಭ್ರಷ್ಟಾಚಾರಿತನದಿಂದ ಮುಕ್ತರಾಗಿ ನಂತರ ಏನಾಗುತ್ತೀರಿ? ಅದಕ್ಕಾಗಿ ಗುರಿ-ಧ್ಯೇಯವನ್ನು ಬಹಳ ಚೆನ್ನಾಗಿ ತಿಳಿಸಬೇಕು. ತಂದೆಯು ರಾತ್ರಿಯೂ ಸಹ ತಿಳಿಸಿದರು - ಯಾರಾದರೂ ಬರುತ್ತಾರೆಂದರೆ ಮೊದಲು ಸರ್ವಶ್ರೇಷ್ಠ ಭಗವಂತನ ಪರಿಚಯ ಕೊಡಿ. ಇಲ್ಲಿನ ಉದ್ದೇಶವೇನು ಎಂದು ಕೇಳುತ್ತಾರೆ. ಆಗ ಮೊಟ್ಟ ಮೊದಲು ಬೇಹದ್ದಿನ ತಂದೆಯ ಪರಿಚಯ ಕೊಡಬೇಕಾಗಿದೆ. ಈಗ ಆ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗುತ್ತೀರಿ. ಹೇ ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ ಅಂದಮೇಲೆ ತಂದೆಗೆ ಅವಶ್ಯವಾಗಿ ಯಾವುದೋ ಅಥಾರಿಟಿ ಇರಬೇಕಲ್ಲವೇ. ಯಾವುದೋ ಪಾತ್ರವು ಸಿಕ್ಕಿರಬೇಕಲ್ಲವೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯೆಂದು ಅವರಿಗೆ ಹೇಳುತ್ತಾರೆ. ಅವರು ಭಾರತದಲ್ಲಿಯೇ ಬರುತ್ತಾರೆ, ಬಂದು ಭಾರತವನ್ನೇ ಶ್ರೇಷ್ಠಾತಿ ಶ್ರೇಷ್ಠವನ್ನಾಗಿ ಮಾಡುತ್ತಾರೆ. ವೈಕುಂಠದ ಉಡುಗೊರೆಯನ್ನು ತರುತ್ತಾರೆ. ಮನುಷ್ಯ ಸೃಷ್ಟಿಯಲ್ಲಿ ಶ್ರೇಷ್ಠಾತಿ ಶ್ರೇಷ್ಠರು ದೇವಿ-ದೇವತೆಗಳು, ಸೂರ್ಯವಂಶಿ ಮನೆತನದವರಾಗಿದ್ದಾರೆ, ಅವರು ಸತ್ಯಯುಗದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಸತ್ಯಯುಗವನ್ನು ಸ್ಥಾಪನೆ ಮಾಡುವವರು ಸರ್ವಶ್ರೇಷ್ಠ ಭಗವಂತನೇ ಆಗಿದ್ದಾರೆ. ಅವರಿಗೇ ಸ್ವರ್ಗದ ರಚಯಿತನೆಂದು ಹೇಳುತ್ತಾರೆ. ಅವರು ತಂದೆಯಾಗಿದ್ದಾರೆ ಅಂದಮೇಲೆ ಅವರಿಗೆ ಸರ್ವವ್ಯಾಪಿ ಎಂದು ಹೇಳಲು ಸಾಧ್ಯವಿಲ್ಲ. ಸರ್ವವ್ಯಾಪಿ ಎಂದು ಹೇಳುವುದರಿಂದ ತಂದೆಯ ಆಸ್ತಿಯೇ ಮಾಯವಾಗುತ್ತದೆ. ಎಷ್ಟು ಮಧುರ ಮಾತುಗಳಾಗಿವೆ - ತಂದೆ ಎಂದರೆ ಆಸ್ತಿ. ಅವಶ್ಯವಾಗಿ ತಮ್ಮ ಮಕ್ಕಳಿಗೇ ಆಸ್ತಿಯನ್ನು ಕೊಡುತ್ತಾರೆ. ಎಲ್ಲಾ ಮಕ್ಕಳ ತಂದೆಯು ಒಬ್ಬರೇ ಆಗಿದ್ದಾರೆ. ಅವರು ಬಂದು ಸುಖ-ಶಾಂತಿಯ ಆಸ್ತಿಯನ್ನು ಕೊಡುತ್ತಾರೆ, ರಾಜಯೋಗವನ್ನು ಕಲಿಸುತ್ತಾರೆ. ಉಳಿದೆಲ್ಲಾ ಆತ್ಮರು ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹಿಂತಿರುಗಿ ಹೋಗುವರು. ಈಗ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಅದಕ್ಕಾಗಿಯೇ ಈ ಮಹಾಭಾರತ ಯುದ್ಧವಿದೆ, ಅನೇಕ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆಯಾಗುವುದು. ಬುದ್ಧಿಯೂ ಸಹ ಹೇಳುತ್ತದೆ, ಅವಶ್ಯವಾಗಿ ಕಲಿಯುಗದ ನಂತರ ಸತ್ಯಯುಗವೇ ಬರಬೇಕಾಗಿದೆ. ದೇವಿ-ದೇವತೆಗಳ ಚರಿತ್ರೆಯು ಪುನರಾವರ್ತನೆಯಾಗುವುದು. ಗಾಯನವೂ ಇದೆ- ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ. |
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದೊಂದು ಅಂತಿಮ ಜನ್ಮದಲ್ಲಿ ಪವಿತ್ರರಾಗಿರಿ. ಈಗ ಮೃತ್ಯುಲೋಕವು ಸಮಾಪ್ತಿಯಾಗಿ ಅಮರಲೋಕದ ಸ್ಥಾಪನೆಯಾಗಲಿದೆ. ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ಅಮರಕಥೆಯನ್ನು ಕೇಳುತ್ತಿದ್ದೀರಿ. ಸ್ತ್ರೀಯರು ಮತ್ತು ಪುರುಷರು ಇಬ್ಬರೂ ಅಮರರಾಗುತ್ತೀರಲ್ಲವೇ. ಇದಕ್ಕೆ ಅಮರಕಥೆಯೆಂದಾದರೂ ಹೇಳಿ, ಮೂರನೇ ನೇತ್ರದ ಕಥೆಯೆಂದಾದರೂ ಹೇಳಿ. ಬಹಳ ಮಟ್ಟಿಗೆ ಮಾತೆಯರೇ ಕಥೆಯನ್ನು ಕೇಳುತ್ತಾರೆ ಅಂದಮೇಲೆ ಅಮರಪುರಿಯಲ್ಲಿ ಪುರುಷರು ಇರುವುದಿಲ್ಲವೇ? ಇಬ್ಬರೂ ಇರುತ್ತಾರೆ. ಶಾಸ್ತ್ರವು ಏನು ಹೇಳುತ್ತದೆ ಮತ್ತು ತಂದೆಯು ಏನು ಹೇಳುತ್ತಾರೆ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಇದನ್ನೂ ಹೇಳುತ್ತಾರೆ - ಭಕ್ತಿಯ ಫಲವನ್ನು ಕೊಡಲು ಭಗವಂತನು ಬರುತ್ತಾರೆ ಎಂದು. ಅವಶ್ಯವಾಗಿ ಸತ್ಯಯುಗದಲ್ಲಿ ಈ ದೇವಿ-ದೇವತೆಗಳದೇ ವಿಶ್ವದ ಮೇಲೆ ರಾಜ್ಯಭಾರವಿತ್ತು, ಇವರಿಗೆ ಇಂತಹ ಫಲವನ್ನು ಯಾರು ಕೊಟ್ಟರು? ಯಾವುದೇ ಸಾಧು ಸನ್ಯಾಸಿ ಮೊದಲಾದವರಂತೂ ಕೊಡಲು ಸಾಧ್ಯವಿಲ್ಲ. ಇದನ್ನೂ ತಿಳಿದುಕೊಂಡಿದ್ದೀರಿ - ಎಲ್ಲರೂ ಒಂದೇ ರೀತಿ ಭಕ್ತಿ ಮಾಡುವುದಿಲ್ಲ. ಯಾರು ಬಹಳ ಭಕ್ತಿ ಮಾಡುವರೋ ಅವರಿಗೆ ಫಲವೂ ಸಹ ಅದೇ ರೀತಿ ಸಿಗುವುದು. ಯಾರು ಪೂಜ್ಯರಾಗಿದ್ದರೋ ಅವರೇ ಪೂಜಾರಿಗಳಾದರು, ಪುನಃ ಪೂಜ್ಯರಾಗುವರು. ಭಕ್ತಿಯ ಫಲವಂತೂ ಸಿಗುತ್ತದೆಯಲ್ಲವೆ. ಈ ಮಾತುಗಳೆಲ್ಲವನ್ನೂ ತಿಳಿಸಬೇಕಾಗಿದೆ. ಮೊಟ್ಟ ಮೊದಲು ತ್ರಿಮೂರ್ತಿಯ ಬಗ್ಗೆ ತಿಳಿಸಬೇಕು. ಮೊದಲು ಏಣಿಯ ಚಿತ್ರದೆಡೆಗೆ ಕರೆದುಕೊಂಡು ಹೋಗುವುದಲ್ಲ, ಇವು ವಿವರವಾದ ಮಾತುಗಳಾಗಿವೆ. ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ, ಅವರು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ ನಂತರ ಬ್ರಹ್ಮಾ-ವಿಷ್ಣು-ಶಂಕರ, ಅನಂತರ ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ತೋರಿಸಬೇಕಾಗಿದೆ. ಬಾಕಿ ಭಕ್ತಿಮಾರ್ಗದ ಚಿತ್ರಗಳಂತೂ ಬಹಳಷ್ಟಿವೆ. ಮೊಟ್ಟ ಮೊದಲು ಇದನ್ನು ತಿಳಿಸಿರಿ - ಬೇಹದ್ದಿನ ತಂದೆಯಾಗಿದ್ದಾರೆ, ಅವರಿಂದ ನಾವು ಬೇಹದ್ದಿನ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯನ್ನು ಕೊಡುತ್ತಾರೆ. ಭಾರತದಲ್ಲಿ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ ಅಂದಮೇಲೆ ಸ್ವರ್ಗದ ರಚಯಿತ ತಂದೆಯೇ ಬಂದು ಸ್ವರ್ಗ ಸ್ಥಾಪನೆ ಮಾಡಿರಬೇಕು. ತಂದೆಯೇ ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ ಮತ್ತೆ 5000 ವರ್ಷಗಳ ನಂತರ ನರಕವಾಗಿ ಬಿಡುತ್ತದೆ. ರಾಮನೂ ಬರಬೇಕಾಗುತ್ತದೆ ಮತ್ತು ಸಮಯದಲ್ಲಿ ರಾವಣನೂ ಬರಬೇಕಾಗುತ್ತದೆ. ರಾಮನು ಆಸ್ತಿಯನ್ನು ಕೊಡುತ್ತಾನೆ, ರಾವಣನು ಶಾಪವನ್ನು ಕೊಡುತ್ತಾನೆ. ಜ್ಞಾನ ಅರ್ಥಾತ್ ದಿನವು ಮುಕ್ತಾಯವಾಗಿ ದಿನವಾಗುತ್ತದೆ. ದಿನದಲ್ಲಿ ಕೇವಲ ಸೂರ್ಯವಂಶಿ-ಚಂದ್ರವಂಶಿಯರು. ಈ ಮಾತುಗಳನ್ನು ಸಾರದಲ್ಲಿ ತಿಳಿಸುವುದು ಬಹಳ ಸಹಜವಾಗುತ್ತದೆ. ಮೊಟ್ಟ ಮೊದಲು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಪರಿಚಯ ನೀಡಿ ಪಕ್ಕಾ ಮಾಡಿಸಬೇಕು. ಮೂಲ ಮಾತೇ ಇದಾಗಿದೆ. ಸತ್ಯಯುಗದಲ್ಲಿ ದೇವಿ-ದೇವತಾ ಮನೆತನವಿತ್ತು, ಸತೋಪ್ರಧಾನರಾಗಿದ್ದರು ನಂತರ ಸತೋ, ರಜೋ, ತಮೋದಲ್ಲಿ ಬಂದರು. ಇದು ಚಕ್ರವಾಗಿದೆ. ಒಂದೇ ವಸ್ತು ಶಾಶ್ವತವಾಗಿರುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಇದೇ ನೆನಪಿರಲಿ - ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ನೆನಪು ಮಾಡಬೇಕಾಗಿದೆ. ಈ ನೆನಪಿನಲ್ಲಿಯೇ ಮಕ್ಕಳು ಬಹಳ ಕಚ್ಚಾ ಇದ್ದಾರೆ. ತಂದೆಯೂ ಸಹ (ಬ್ರಹ್ಮಾ) ತಮ್ಮ ಅನುಭವವನ್ನು ತಿಳಿಸುತ್ತಾರೆ - ನೆನಪು ಪದೇ-ಪದೇ ಮರೆತುಹೋಗುತ್ತದೆ ಏಕೆಂದರೆ ಇವರಿಗೆ ಬಹಳ ವಿಚಾರಗಳಿರುತ್ತವೆ ಆದ್ದರಿಂದಲೇ ಯಾರಿಗೆ ಬಹಳ ಜವಾಬ್ದಾರಿಯಿರುವುದೋ ಅವರು ನೆನಪಿನಲ್ಲಿರಲು ಹೇಗೆ ಸಾಧ್ಯ! ತಂದೆಗೆ ಇಡೀ ದಿನ ವಿಚಾರಗಳು ನಡೆಯುತ್ತಿರುತ್ತವೆ. ಇವರ ಮುಂದೆ ಎಷ್ಟೊಂದು ಮಾತುಗಳು ಬರುತ್ತವೆ ಆದ್ದರಿಂದ ತಂದೆಗೆ ಮುಂಜಾನೆ ಎದ್ದು ಕುಳಿತುಕೊಳ್ಳಲು ಹೆಚ್ಚು ಮಜಾ ಬರುತ್ತದೆ. ನಶೆಯೂ ಇರುತ್ತದೆ - ಈ ಸ್ಥಾಪನೆಯಾದ ನಂತರ ನಾನು ಪುನಃ ವಿಶ್ವದ ಮಹಾರಾಜನಾಗುವೆನು ಎಂದು. ಹೇಗೆ ತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ – ಮೊಟ್ಟ ಮೊದಲ ಮುಖ್ಯ ಮಾತಾಗಿದೆ - ತಂದೆಯ ಪರಿಚಯ ಕೊಡುವುದು. ಅನ್ಯ ಯಾವುದೆಲ್ಲಾ ಮಾತುಗಳನ್ನು ಯಾರಾದರೂ ಹೇಳಲಿ, ತಿಳಿಸಿ- ಇದರಿಂದ ಯಾವುದೇ ಲಾಭವಿಲ್ಲ. ನಾವು ನಿಮಗೆ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಪರಿಚಯ ನೀಡುತ್ತೇವೆ. ಅವರೇ ವಿಶ್ವದ ಮಾಲೀಕರಾಗುವ ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯನ್ನು ಕೊಡುತ್ತಾರೆ. ಆರ್ಯ ಸಮಾಜಿಗಳು ದೇವತೆಗಳ ಚಿತ್ರಗಳನ್ನು ಒಪ್ಪುವುದಿಲ್ಲ, ನಿಮ್ಮ ಬಳಿ ಬಂದು ಚಿತ್ರಗಳನ್ನು ನೋಡಿದಾಗಲೇ ಮುಖ ತಿರುಗಿಸುತ್ತಾರೆ. ಯಾರು ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆಯೋ ಅವರು ಶಾಂತಿಯಿಂದ ಬಂದು ಕೇಳುತ್ತಾ ಇರುತ್ತಾರೆ. ಮುಖ್ಯ ಮಾತೇ ಒಂದಾಗಿದೆ – ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಪರಿಚಯ. ಬ್ರಹ್ಮಾ-ವಿಷ್ಣು-ಶಂಕರನಿಗೂ ಸಹ ಶ್ರೇಷ್ಠಾತಿ ಶ್ರೇಷ್ಠನೆಂದು ಹೇಳುವುದಿಲ್ಲ. ಶ್ರೇಷ್ಠಾತಿ ಶ್ರೇಷ್ಠ ತಂದೆಯಿಂದಲೇ ಆಸ್ತಿಯು ಸಿಗುತ್ತದೆ, ಅವರೇ ಪತಿತ-ಪಾವನನಾಗಿದ್ದಾರೆ, ಈ ಮಾತನ್ನು ಪಕ್ಕಾ ಮಾಡಿದ್ದೀರಿ - ಭಗವಂತನೊಬ್ಬನೇ ಆಗಿದ್ದಾರೆ. ತಂದೆ ಎಂದರೆ ಆಸ್ತಿ. ಭಾರತದಲ್ಲಿಯೇ ಬಂದು ಆಸ್ತಿಯನ್ನು ಕೊಡುತ್ತಾರೆ. ಬ್ರಹ್ಮಾರವರ ಮುಖಾಂತರ ಹೊಸ ಪ್ರಪಂಚದ ಸ್ಥಾಪನೆ, ಶಂಕರನ ಮೂಲಕ ವಿನಾಶ. ಈ ಮಹಾಭಾರತ ಯುದ್ಧದಿಂದಲೇ ಸ್ವರ್ಗದ ಬಾಗಿಲು ತೆರೆಯುತ್ತದೆ, ಪತಿತರಿಂದ ಪಾವನರಾಗುತ್ತೀರಿ. ಬೇಹದ್ದಿನ ತಂದೆಯಿಂದಲೇ ಭಾರತಕ್ಕೆ ಆಸ್ತಿಯು ಸಿಗುತ್ತಿದೆ. ಇಲ್ಲಿ ಒಂದೇ ಮಾತಾಗಿದೆ ಮತ್ತ್ಯಾವುದೇ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ತುಕ್ಕು ಬಿಟ್ಟು ಹೋಗುವುದು. ಈ ಒಂದು ಮಾತನ್ನು ಚೆನ್ನಾಗಿ ತಿಳಿದುಕೊಂಡಾಗ ಅನ್ಯ ಮಾತುಗಳನ್ನು ತಿಳಿಸಿರಿ. ನಾವು ಹೇಳುತ್ತೇವೆ, ಜ್ಞಾನಾಮೃತವನ್ನು ಕುಡಿದು ಪವಿತ್ರರಾಗಿ ಎಂದು. ಅದಕ್ಕೆ ಅವರು ವಿಷವೇ ಬೇಕೆಂದು ಹೇಳುತ್ತಾರೆ. ಇದನ್ನು ಕುರಿತು ಒಂದು ಚಿತ್ರವೂ ಇದೆ ಆದ್ದರಿಂದಲೇ ಅಮೃತವನ್ನು ಬಿಟ್ಟು ವಿಷವನ್ನೇಕೆ ಕುಡಿಯುವಿರಿ? ಎಂದು ಹೇಳುತ್ತಾರೆ. ಈ ಆತ್ಮಿಕ ಜ್ಞಾನವನ್ನು ಆತ್ಮಿಕ ತಂದೆಯೇ ಕೊಡುತ್ತಾರೆ ಅಂದಮೇಲೆ ಅವರು ಸರ್ವವ್ಯಾಪಿ ಹೇಗಾಗುವರು? ನೀವು ತಂದೆಯನ್ನು ಸರ್ವವ್ಯಾಪಿ ಎಂದು ಹೇಳುತ್ತೀರಿ, ಭಲೆ ನೀವು ಹಾಗೆಯೇ ತಿಳಿದುಕೊಳ್ಳಿ ಆದರೆ ನಾವೀಗ ಒಪ್ಪುವುದಿಲ್ಲ. ಮೊದಲು ನಾವು ಒಪ್ಪುತ್ತಿದ್ದೆವು ಆದರೆ ಈಗ ತಂದೆಯು ತಿಳಿಸಿದ್ದಾರೆ- ಸರ್ವವ್ಯಾಪಿ ಎಂದು ಹೇಳುವುದು ತಪ್ಪಾಗಿದೆ. ತಂದೆಯಿಂದ ಆಸ್ತಿಯು ಸಿಗುತ್ತದೆ. ಭಾರತವು ಈಗ ನರಕವಾಗಿದೆ. ಅದನ್ನು ಪುನಃ ನಾವು ಸ್ವರ್ಗ ಅರ್ಥಾತ್ ಪವಿತ್ರ ಗೃಹಸ್ಥ ಆಶ್ರಮವನ್ನಾಗಿ ಮಾಡುತ್ತೇವೆ. ಆದಿ ಸನಾತನ ದೇವಿ-ದೇವತೆಗಳದು ಪವಿತ್ರ ಗೃಹಸ್ಥಾಶ್ರಮವಾಗಿತ್ತು, ಈಗ ಅಪವಿತ್ರ ವಿಕಾರಿ ಪ್ರಪಂಚವಾಗಿದೆ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿರಿ, ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯು ರಚಯಿತನಾಗಿದ್ದಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಈಗ ಕಲಿಯುಗದಲ್ಲಿ ಅನೇಕ ಮನುಷ್ಯರಿದ್ದಾರೆ. ಸತ್ಯಯುಗದಲ್ಲಿ ಕೆಲವರೇ ಇರುವರು ಅಂದಮೇಲೆ ಆ ಸಮಯದಲ್ಲಿ ಉಳಿದೆಲ್ಲರೂ ಶಾಂತಿಧಾಮದಲ್ಲಿ ಇರುತ್ತಾರೆ ಆದ್ದರಿಂದ ಈಗ ಅವಶ್ಯವಾಗಿ ಯುದ್ಧವಾಗುವುದು, ಇದರಿಂದಲೇ ಎಲ್ಲರೂ ಮುಕ್ತಿಯಲ್ಲಿ ಹೋಗುವರು. ಇವೆಲ್ಲಾ ಮಾತುಗಳು ಮಕ್ಕಳ ಬುದ್ಧಿಯಲ್ಲಿ ಇರಬೇಕಾಗಿದೆ. ಮಕ್ಕಳು ಅವಶ್ಯವಾಗಿ ಸರ್ವೀಸ್ ಮಾಡಬೇಕಾಗಿದೆ. ಸರ್ವೀಸಿನಿಂದಲೇ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಪರಸ್ಪರ ಆಗದಿದ್ದರೆ ಶಿವ ತಂದೆಯನ್ನು ಮರೆತು ಬಿಡುವುದು ಅಥವಾ ಶಿವ ತಂದೆಯ ಸೇವೆ ಮಾಡುವುದನ್ನೇ ಬಿಟ್ಟು ಬಿಡುವುದಲ್ಲ. ಹಾಗೆ ಮಾಡಿದರೆ ಪದವಿ ಭ್ರಷ್ಟವಾಗುವುದು ನಂತರ ಸರ್ವೀಸ್ ಮಾಡುವ ಬದಲು ಡಿಸ್ಸರ್ವೀಸ್ ಮಾಡಿ ಬಿಡುತ್ತೀರಿ. ಪರಸ್ಪರ ಉಪ್ಪು ನೀರಾಗಿ ಸೇವೆಯನ್ನು ಬಿಟ್ಟು ಬಿಡುವುದು, ಇದರಂತಹ ಕೆಟ್ಟ ಕೆಲಸವು ಯಾವುದೂ ಇಲ್ಲ. ತಂದೆಯನ್ನು ನೆನಪು ಮಾಡಿರಿ, ಇದರಿಂದ ಸಂಪಾದನೆಯೂ ಆಗುವುದು. ಈಗ ಜ್ಞಾನವು ಸಿಕ್ಕಿದೆ - ಪವಿತ್ರರಾಗಿ ಮತ್ತು ತಂದೆಯನ್ನು ನೆನಪು ಮಾಡಿರಿ. ಜ್ಞಾನದ ಹೊಳಪಿಗೆ ದುರಿಯಾ ಎಂದು ಹೇಳಲಾಗುತ್ತದೆ. ಜ್ಞಾನ ಮತ್ತು ವಿಜ್ಞಾನವೆಂದು ಹೇಳುತ್ತಾರೆ. ವಿಜ್ಞಾನವು ಯೋಗವಾಗಿದೆ, ಜ್ಞಾನವು ಸೃಷ್ಟಿಚಕ್ರದ್ದಾಗಿದೆ. ಹೋಲಿ-ದುರಿಯಾ ಎಂದರೇನು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ, ತಂದೆಯನ್ನು ನೆನಪು ಮಾಡಬೇಕು ಮತ್ತು ಎಲ್ಲರಿಗೆ ಜ್ಞಾನವನ್ನು ತಿಳಿಸಬೇಕಾಗಿದೆ. ತಂದೆಯು ಮತ್ತೆ ಮತ್ತೆ ತಿಳಿಸುತ್ತಾರೆ – ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ಸರ್ವವ್ಯಾಪಿ ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಹೇಳುವುದಾದರೆ ಮತ್ತೆ ಯಾರನ್ನು ನೆನಪು ಮಾಡುತ್ತೀರಿ? ತಂದೆಯು ನನ್ನನ್ನು ನಿರಂತರ ನೆನಪು ಮಾಡಿರಿ ಎಂದು ತಿಳಿಸುತ್ತಾರೆ. ಆದರೆ ರಚಯಿತನನ್ನೇ ತಿಳಿದುಕೊಂಡಿಲ್ಲವೆಂದರೆ ಸಿಗುವುದಾದರೂ ಏನು! ತಿಳಿದುಕೊಳ್ಳದ ಕಾರಣ ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಆದ್ದರಿಂದ ಶ್ರೇಷ್ಠಾತಿ ಶ್ರೇಷ್ಠ ಎಂಬ ಮಾತನ್ನು ಸಿದ್ಧ ಮಾಡಿ ತಿಳಿಸಿರಿ ಆಗ ಸರ್ವವ್ಯಾಪಿ ಎಂಬ ಮಾತುಗಳು ಬುದ್ಧಿಯಿಂದ ಹೊರಟು ಹೋಗುತ್ತದೆ. ನಾವೆಲ್ಲರೂ ಸಹೋದರರಾಗಿದ್ದೇವೆ, ತಂದೆಯು ಪ್ರತೀ 5000 ವರ್ಷಗಳ ನಂತರ ಬಂದು ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ದೇವಿ-ದೇವತೆಗಳಿರುತ್ತಾರೆ, ಉಳಿದೆಲ್ಲರೂ ಮುಕ್ತಿಯಲ್ಲಿ ಹೋಗುತ್ತಾರೆ. ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡುತ್ತಾ ಇರಿ. ಕ್ರಿಸ್ತನನ್ನು ಪ್ರಾರ್ಥನೆ ಮಾಡುತ್ತಾರೆ, ಅವರಿಗೆ ತಿಳಿಸಿ - ಕ್ರಿಸ್ತನು ಎಲ್ಲರ ತಂದೆಯಂತೂ ಅಲ್ಲ, ಎಲ್ಲರ ತಂದೆಯು ನಿರಾಕಾರನಾಗಿದ್ದಾರೆ. ಅವರನ್ನೇ ಓ ಗಾಡ್ ಫಾದರ್ ಎಂದು ಆತ್ಮವು ಕರೆಯುತ್ತದೆ. ಕ್ರಿಸ್ತನೂ ಸಹ ಆ ಭಗವಂತನ ಪುತ್ರನೆಂದು ಗಾಯನವಿದೆ. ಅಂದಮೇಲೆ ಮಗನಿಂದ ಆಸ್ತಿಯು ಹೇಗೆ ಸಿಗುವುದು? ಕ್ರಿಸ್ತನು ರಚನೆಯಾಗಿದ್ದಾನೆ. ಕ್ರಿಸ್ತನನ್ನು ನೆನಪು ಮಾಡುವುದರಿಂದ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗುವುದು ಎಂದು ಯಾವುದೇ ಶಾಸ್ತ್ರಗಳಲ್ಲಿ ಬರೆದಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ಗೀತೆಯಲ್ಲಿ ಮಾತ್ರವೇ ಇದೆ. ಭಗವಂತನ ಶಾಸ್ತ್ರವೇ ಗೀತೆಯಾಗಿದೆ. ಕೇವಲ ತಂದೆಯ ಹೆಸರನ್ನು ಬದಲಾಯಿಸಿ ಕೃಷ್ಣನ ಹೆಸರನ್ನು ಬರೆದು ಬಿಟ್ಟಿದ್ದಾರೆ- ಈ ತಪ್ಪು ಮಾಡಿಬಿಟ್ಟಿದ್ದಾರೆ ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ. ಅವರೇ ಸುಖ-ಶಾಂತಿಯ ಆಸ್ತಿಯನ್ನು ಕೊಡುತ್ತಾರೆ. ಶಿವನ ಚಿತ್ರವನ್ನು ಎಲ್ಲರೂ ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿದೆ. ಶಿವ ತಂದೆಯು ಈ ಆಸ್ತಿಯನ್ನು ಕೊಡುತ್ತಾರೆ, ನಂತರ 84 ಜನ್ಮಗಳಲ್ಲಿ ಕಳೆದುಕೊಳ್ಳುತ್ತೀರಿ. ಏಣಿಯ ಚಿತ್ರದಲ್ಲಿ ತಿಳಿಸಬೇಕಾಗಿದೆ - ಪತಿತ-ಪಾವನ ತಂದೆಯೇ ಬಂದು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಕೃಷ್ಣ ಭಗವಾನುವಾಚ ಎಂದು ಮನುಷ್ಯರು ಹೇಳುತ್ತಾರೆ, ಶಿವ ಭಗವಾನುವಾಚ ಎಂದು ನೀವು ಹೇಳುತ್ತೀರಿ. ಫಸ್ಟ್ ಫ್ಲೋರ್ ನಲ್ಲಿ ಶ್ರೇಷ್ಠ ತಂದೆಯಿರುತ್ತಾರೆ, ನಂತರ ಸೆಕೆಂಡ್ ಫ್ಲೋರ್ ಸೂಕ್ಷ್ಮವತನ, ಇದು ಥರ್ಡ್ ಫ್ಲೋರ್ ಆಗಿದೆ. ಸೃಷ್ಟಿಯು ಇಲ್ಲಿದೆ, ಅಂತಿಮದಲ್ಲಿ ಸೂಕ್ಷ್ಮವತನಕ್ಕೆ ಹೋಗುತ್ತೀರಿ. ಅಲ್ಲಿ ಟ್ರಿಬ್ಯುನಲ್ (ಧರ್ಮರಾಜ ಪುರಿ) ಕುಳಿತುಕೊಳ್ಳುತ್ತದೆ, ಶಿಕ್ಷೆ ಸಿಗುತ್ತದೆ. ಶಿಕ್ಷೆಗಳನ್ನು ಅನುಭವಿಸಿ ಪವಿತ್ರರಾಗಿ ಮೇಲೆ ಹೊರಟು ಹೋಗುತ್ತೀರಿ. ತಂದೆಯು ಎಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಈಗ ಸಂಗಮವಾಗಿದೆ, ಇದಕ್ಕೇ ನೂರು ವರ್ಷಗಳು ಕೊಡಬೇಕು. ಬಾಬಾ, ಸ್ವರ್ಗದಲ್ಲಿ ಏನೇನಿರುವುದು ಎಂದು ಮಕ್ಕಳು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಅದನ್ನು ಮುಂದೆ ಹೋದಂತೆ ನೋಡುವಿರಿ. ಮೊದಲು ನೀವು ತಂದೆಯನ್ನು ತಿಳಿದುಕೊಳ್ಳಿ, ಪತಿತರಿಂದ ಪಾವನರಾಗುವ ಗುಂಗಿನಲ್ಲಿರಿ. ಸ್ವರ್ಗದಲ್ಲಿ ಏನಾಗಬೇಕಾಗಿದೆಯೋ ಅದು ಆಗುತ್ತಾ ಇರುವುದು. ನೀವು ಈ ರೀತಿ ಪಾವನರಾಗಿರಿ ತಂದೆಯಿಂದ ಹೊಸ ಪ್ರಪಂಚದ ಪೂರ್ಣ ಆಸ್ತಿಯು ಪ್ರಾಪ್ತಿಯಾಗಿದೆ. ಬಾಕಿ ಮಧ್ಯದಲ್ಲಿ ಏನಾಗುತ್ತದೆ ಎಂಬುದನ್ನು ಮುಂದೆ ಹೋಗಿ ನೋಡುವಿರಿ. ಅಂದಾಗ ಈ ಮಾತುಗಳೆಲ್ಲವನ್ನೂ ನೆನಪಿಟ್ಟುಕೊಳ್ಳಿ, ನೆನಪಿಲ್ಲದೇ ಇರುವ ಕಾರಣ ಸಮಯದಲ್ಲಿ ತಿಳಿಸುವುದಿಲ್ಲ, ಮರೆತು ಹೋಗುತ್ತೀರಿ. ನೀವು ಮಕ್ಕಳು ಒಳ್ಳೆಯ ಕರ್ಮವನ್ನೇ ಮಾಡಬೇಕಾಗಿದೆ. ತಂದೆಯ ನೆನಪಿನಲ್ಲಿದ್ದರೆ ಕೆಟ್ಟ ಕರ್ಮವಾಗುವುದೇ ಇಲ್ಲ. ಅನೇಕರು ಕೆಟ್ಟ ಕರ್ಮವನ್ನೂ ಮಾಡುತ್ತಾರೆ. ಈ ಬ್ರಾಹ್ಮಿಣಿಯಿದ್ದರೆ ನಮಗೆ ಚೆನ್ನಾಗಿರುತ್ತದೆ, ಅವರು ಹೋದರೆ ತಾನೂ ವಿದ್ಯೆಯನ್ನು ಓದುವುದನ್ನು ನಿಲ್ಲಿಸಿಬಿಡುತ್ತಾರೆ. ಬ್ರಾಹ್ಮಿಣಿಯ ಕಾರಣ ಜ್ಞಾನದಿಂದ ಸತ್ತು ಹೋಗುತ್ತಾರೆ ಅಂದರೆ ತಂದೆಯ ಆಸ್ತಿ ಪಡೆಯುವುದರಿಂದ ಸತ್ತು ಹೋದರು ಎಂದರ್ಥ. ಇದನ್ನೂ ದೌರ್ಭಾಗ್ಯವೆಂದೇ ಹೇಳಲಾಗುತ್ತದೆ. |
ಕೆಲವು ಮಕ್ಕಳು ಒಬ್ಬರಿನ್ನೊಬ್ಬರ ನಾಮ-ರೂಪದಲ್ಲಿ ಸಿಲುಕಿ ಸತ್ತು ಹೋಗುತ್ತಾರೆ. ಇಲ್ಲಿ ನಿಮ್ಮದು ದೈಹಿಕ ಪ್ರೀತಿಯಿರಬಾರದು, ನಿರಂತರ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾರೊಂದಿಗೂ ಲೇವಾದೇವಿ ಇರಬಾರದು. ತಾವು ತಿಳಿಸಿ, ನಮಗೆ ಏಕೆ ಕೊಡುತ್ತೀರಿ? ನಿಮ್ಮ ಯೋಗವು ಶಿವ ತಂದೆಯೊಂದಿಗೆ ಇದೆಯಲ್ಲವೇ. ಅಂದಮೇಲೆ ಯಾರು ಡೈರೆಕ್ಟ್ ಕೊಡುವುದಿಲ್ಲವೋ ಅವರದು ಶಿವ ತಂದೆಯ ಬಳಿ ಜಮಾ ಆಗುವುದಿಲ್ಲ. ಬ್ರಹ್ಮಾರವರ ಮೂಲಕ ಸ್ಥಾಪನೆಯಾಗುತ್ತದೆ ಅಂದಮೇಲೆ ಎಲ್ಲವನ್ನೂ ಅವರ ಮೂಲಕವೇ ಮಾಡಬೇಕಾಗಿದೆ. ಮಧ್ಯದಲ್ಲಿ ಯಾರಾದರೂ ತಿಂದು ಬಿಟ್ಟರೆ ಶಿವ ತಂದೆಯ ಬಳಿಯಂತೂ ಜಮಾ ಆಗಲಿಲ್ಲ. ಬ್ರಹ್ಮಾರವರ ಮುಖಾಂತರ ಶಿವ ತಂದೆಗೇ ಕೊಡಬೇಕಾಗಿದೆ. ಸೇವಾಕೇಂದ್ರವನ್ನೂ ಸಹ ಬ್ರಹ್ಮಾರವರ ಮುಖಾಂತರವೇ ತೆರೆಯಿರಿ, ತಾವೇ ಸೇವಾಕೇಂದ್ರವನ್ನು ತೆರೆಯುತ್ತೀರೆಂದರೆ ಅದು ಸೇವಾಕೇಂದ್ರವಾಯಿತೇ? ಬಾಪ್ದಾದಾ ಇಬ್ಬರು ಒಟ್ಟಿಗೆ ಇದ್ದಾರೆ. ಇವರ ಕೈಗೆ ಬಂದಿತೆಂದರೆ ಶಿವ ತಂದೆಯ ಕೈಯಲ್ಲಿ ಬಂದಿತೆಂದರ್ಥ. ಎಷ್ಟೊಂದು ಸೇವಾಕೇಂದ್ರಗಳಿವೆ, ಕೆಲವರದು ಯಾವುದೇ ಸಮಾಚಾರವೇ ಬರುವುದಿಲ್ಲ. ಬಾಬಾ, ಇದು ನಿಮ್ಮ ಸೆಂಟರಿನ ಲೆಕ್ಕ ಪತ್ರವೆಂದು ಬರೆದು ಕಳುಹಿಸಬೇಕು. ಸೇಟ್ನ ಬಳಿ ಲೆಕ್ಕ ಪತ್ರವು ಬರಬೇಕಲ್ಲವೇ. ಶಿವ ತಂದೆಯ ಬಳಿ ಅನೇಕರದು ಜಮಾ ಆಗುವುದೇ ಇಲ್ಲ. ಇಷ್ಟೂ ಬುದ್ಧಿಯಿಲ್ಲ. ಭಲೆ ಜ್ಞಾನವು ಬಹಳಷ್ಟಿದೆ ಆದರೆ ಯುಕ್ತಿ ಬರುವುದಿಲ್ಲ. ನಾವು ಸೇವಾಕೇಂದ್ರವನ್ನು ತೆರೆದೆವು ಎಂದು ಹೇಳುತ್ತಾರೆ. ನೀವು ಯಾರಿಗೆ ಕೊಟ್ಟಿರೋ ಅವರು ಸೇವಾಕೇಂದ್ರವನ್ನು ತೆರೆದರು, ಶಿವ ತಂದೆಯು ತೆರೆದಂತಾಯಿತೇ? ಅಂತಹ ಸೇವಾಕೇಂದ್ರವು ವೃದ್ಧಿಯೂ ಆಗುವುದಿಲ್ಲ. ಸೇವಾಕೇಂದ್ರವನ್ನು ತೆರೆಯುವುದಾದರೆ ಶಿವ ತಂದೆಯ ಮೂಲಕ ತೆರೆಯಿರಿ. ಬಾಬಾ, ನಾವು ಇದನ್ನು ಕೊಡುತ್ತೇವೆ, ಈ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ತಿಳಿಸಬೇಕು. ಮಕ್ಕಳು ಬಹಳಷ್ಟು ತಪ್ಪುಗಳನ್ನು ಮಾಡುತ್ತಾರೆ, ಯೋಗದಲ್ಲಿ ಬಹಳ ಕಚ್ಚಾ ಇದ್ದಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನದ ಜೊತೆ ಜೊತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಯುಕ್ತಿಯನ್ನು ಕಲಿಯಬೇಕಾಗಿದೆ. ಒಬ್ಬ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಯಾವುದೇ ದೇಹಧಾರಿಯ ಹಿಂದೆ ದುರಾದೃಷ್ಟವಂತರಾಗಬಾರದು. |
2. ಪರಸ್ಪರ ಯಾವುದೇ ಮಾತಿನ ಕಾರಣ ತಂದೆಯ ಸೇವೆಯನ್ನು ಬಿಡಬಾರದು. ಬೆಳಗ್ಗೆ-ಬೆಳಗ್ಗೆ ಎದ್ದು ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕು. ನೆನಪು ಮಾಡುವ ಪರಿಶ್ರಮ ಪಡಬೇಕಾಗಿದೆ. |
ಓಂ ಶಾಂತಿ. ಈ ಗೀತೆಯ ಸಾಲು ಮಕ್ಕಳನ್ನು ಜಾಗೃತ ಮಾಡಿ ಬಿಟ್ಟಿತು. ಏನು ಹೇಳಿತು? ಬುದ್ಧಿಯಲ್ಲಿ ಇದನ್ನು ನೆನಪಿಟ್ಟುಕೊಳ್ಳಬೇಕಾಗಿದೆ - ನಾವು ತೀರ್ಥ ಯಾತ್ರೆಯಲ್ಲಿ ಇದ್ದೇವೆ ಮತ್ತು ನಮ್ಮ ಈ ಯಾತ್ರೆಯು ಎಲ್ಲದಕ್ಕಿಂತ ಭಿನ್ನವಾಗಿದೆ. ಈ ಯಾತ್ರೆಯನ್ನು ಮರೆಯಬೇಡಿ. ಎಲ್ಲವೂ ಯಾತ್ರೆಯ ಮೇಲೆ ಆಧಾರಿತವಾಗಿದೆ. ಮತ್ತೆಲ್ಲರೂ ತೀರ್ಥ ಯಾತ್ರೆಗಳನ್ನು ಮಾಡಿ ಮತ್ತೆ ಹಿಂತಿರುಗಿ ಬರುತ್ತಾರೆ ಮತ್ತು ಜನ್ಮ-ಜನ್ಮಾಂತರ ಯಾತ್ರೆ ಮಾಡುತ್ತಲೇ ಬರುತ್ತಾರೆ. ನಮ್ಮ ತೀರ್ಥವು ಅದಲ್ಲ, ಅಮರನಾಥದಲ್ಲಿ ಹೋಗಿ ಮತ್ತೆ ಮೃತ್ಯುಲೋಕದಲ್ಲಿ ಬರುವುದಲ್ಲ. ಮತ್ತೆಲ್ಲರದೂ ಆ ಯಾತ್ರೆಗಳಾಗಿದೆ. ತೀರ್ಥ ಯಾತ್ರೆಗೆ ಹೋಗಿ ಸುತ್ತಾಡಿಕೊಂಡು ಮತ್ತೆ ಬಂದು ಪತಿತರಾಗುತ್ತಾರೆ, ಭಿನ್ನ-ಭಿನ್ನ ಪ್ರಕಾರದ ಯಾತ್ರೆಗಳಿದೆಯಲ್ಲವೆ. ದೇವಿಯ ಮಂದಿರಗಳೂ ಬಹಳಷ್ಟಿದೆ, ವಿಕಾರಿಗಳ ಜೊತೆ ಎಷ್ಟೊಂದು ಯಾತ್ರೆಗಳನ್ನು ಮಾಡುತ್ತಾರೆ, ನೀವು ಮಕ್ಕಳಂತೂ ನಿರ್ವಿಕಾರಿಯಾಗಿರುವ ಪಣ ತೊಟ್ಟಿದ್ದೀರಿ. ಇದು ನೀವು ನಿರ್ವಿಕಾರಿಗಳ ಯಾತ್ರೆಯಾಗಿದೆ. ನಿರ್ವಿಕಾರಿ ತಂದೆಯು ಯಾರು ಸದಾ ಪಾವನನಾಗಿದ್ದಾರೆಯೋ ಅವರನ್ನು ನೆನಪು ಮಾಡಬೇಕಾಗಿದೆ. ನೀರಿನ ಸಾಗರಕ್ಕೆ ವಿಕಾರಿ ಅಥವಾ ನಿರ್ವಿಕಾರಿ ಎಂದು ಹೇಳುವುದಿಲ್ಲ ಮತ್ತು ಅದರಿಂದ ಹೊರಟಿರುವ ನದಿಗಳೂ ಸಹ ನಿರ್ವಿಕಾರಿಯನ್ನಾಗಿ ಮಾಡುವುದಿಲ್ಲ. ಮನುಷ್ಯ ಮಾತ್ರರು ಇಷ್ಟು ಪತಿತರಾಗಿ ಬಿಟ್ಟಿದ್ದಾರೆ, ಏನನ್ನೂ ತಿಳಿದುಕೊಂಡಿಲ್ಲ. ಆ ತೀರ್ಥ ಯಾತ್ರೆಗಳು ಅಲ್ಪಕಾಲದ ಕ್ಷಣ ಭಂಗುರ ಯಾತ್ರೆಗಳಾಗಿವೆ, ಇದು ದೊಡ್ಡ ಯಾತ್ರೆಯಾಗಿದೆ. ನೀವು ಮಕ್ಕಳು ಏಳುತ್ತಾ-ಕುಳಿತುಕೊಳ್ಳುತ್ತಾ ಯಾತ್ರೆಯ ವಿಚಾರ ಮಾಡಬೇಕಾಗಿದೆ. ಯಾತ್ರೆಗೆ ಹೋಗುತ್ತಾರೆಂದರೆ ಗೃಹಸ್ಥ ವ್ಯವಹಾರ, ಉದ್ಯೋಗ-ವ್ಯಾಪಾರ ಎಲ್ಲವನ್ನೂ ಮರೆಯಲಾಗಿದೆ. ಕೇವಲ ಅಮರನಾಥನಿಗೆ ಜೈ ಎಂದು ಹೇಳುತ್ತಾ ಹೋಗುತ್ತಾರೆ. ಒಂದೆರಡು ತಿಂಗಳ ಕಾಲ ತೀರ್ಥ ಯಾತ್ರೆ ಮಾಡಿಕೊಂಡು ಬಂದ ನಂತರ ಕೆಸರಿನಲ್ಲಿ ಬೀಳುತ್ತಾರೆ. ಮತ್ತೆ ಗಂಗಾ ಸ್ನಾನ ಮಾಡಲು ಹೋಗುತ್ತಾರೆ. ನಾವು ನಿತ್ಯವೂ ಪತಿತರಾಗುತ್ತೇವೆ ಎಂಬುದು ಅವರಿಗೆ ತಿಳಿದೇ ಇಲ್ಲ. ಗಂಗಾ, ಜಮುನಾ ತೀರದಲ್ಲಿರುವವರೂ ಸಹ ನಿತ್ಯವೂ ಪತಿತರಾಗುತ್ತಾರೆ. ಪ್ರತಿನಿತ್ಯವೂ ಗಂಗೆಯಲ್ಲಿ ಹೋಗಿ ಸ್ನಾನ ಮಾಡುತ್ತಾರೆ. ಒಂದು ನಿಯಮವಿರುತ್ತದೆ, ಎರಡನೆಯದಾಗಿ ವಿಶೇಷ ದಿನಗಳಲ್ಲಿ ಹೋಗುತ್ತಾರೆ ಮತ್ತು ಗಂಗೆಯು ಪತಿತ-ಪಾವನಿ ಎಂದು ತಿಳಿಯುತ್ತಾರೆ ಅಂದಮೇಲೆ ವಿಶೇಷವಾಗಿ ಆ ಒಂದು ದಿನದಂದು ಗಂಗೆಯು ಪಾವನರನ್ನಾಗಿ ಮಾಡುವಂತದ್ದಾಗುತ್ತದೆ, ನಂತರ ಇರುವುದಿಲ್ಲ ಎಂದಲ್ಲ. ಯಾವ ದಿನದಂದು ಮೇಳವಾಗುತ್ತದೆಯೋ, ಆ ದಿನ ಪತಿತ-ಪಾವನಿಯಾಗಿ ಬಿಡುತ್ತದೆ ಎಂದಲ್ಲ, ಅದಂತೂ ಯಾವಾಗಲೂ ಇರುತ್ತದೆ. ನಿತ್ಯವೂ ಸ್ನಾನ ಮಾಡಲು ಹೋಗುತ್ತಾರೆ. ಮೇಳದಲ್ಲಿಯೂ ವಿಶೇಷ ದಿನಗಳಂದು ಹೋಗುತ್ತಾರೆ, ಇದರಲ್ಲಿ ಅರ್ಥವೇ ಇಲ್ಲ, ಗಂಗಾ-ಜಮುನಾ ನದಿಗಳಂತೂ ಅವೇ ಆಗಿದೆ. ಅದರಲ್ಲಿ ಶವಗಳನ್ನೂ ಸಹ ಹಾಕುತ್ತಾರೆ. |
ಈಗ ನೀವು ಮಕ್ಕಳು ಆತ್ಮಿಕ ಯಾತ್ರೆಯಲ್ಲಿರಬೇಕಾಗಿದೆ, ನಾವೀಗ ಮನೆಗೆ ಹೋಗುತ್ತೇವೆ. ಇದಕ್ಕಾಗಿ ಇಲ್ಲಿ ಗಂಗಾ ಸ್ನಾನ ಮಾಡುವ ಅಥವಾ ಶಾಸ್ತ್ರಗಳನ್ನು ಓದುವ ಮಾತಿಲ್ಲ. ತಂದೆಯು ಒಂದೇ ಬಾರಿ ಬರುತ್ತಾರೆ. ಇಡೀ ಪ್ರಪಂಚವೂ ಸಹ ಒಂದೇ ಬಾರಿ ಪಾವನವಾಗುತ್ತದೆ. ಇದನ್ನೂ ತಿಳಿದುಕೊಂಡಿದ್ದೀರಿ - ಸತ್ಯಯುಗವು ಹೊಸ ಪ್ರಪಂಚ, ಕಲಿಯುಗವು ಹಳೆಯ ಪ್ರಪಂಚವಾಗಿದೆ. ತಂದೆಯು ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶ ಮಾಡಲು ಅವಶ್ಯವಾಗಿ ಬರಬೇಕಾಗುತ್ತದೆ. ಇದು ಅವರದೇ ಕರ್ತವ್ಯವಾಗಿದೆ ಆದರೆ ಮಾಯೆಯು ಇಷ್ಟು ತಮೋಪ್ರಧಾನ ಬುದ್ಧಿಯವರನ್ನಾಗಿ ಮಾಡಿ ಬಿಟ್ಟಿದೆ, ಅವರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಪ್ರದರ್ಶನಿಯಲ್ಲಿ ಎಷ್ಟು ಮಂದಿ ಬರುತ್ತಾರೆ, ಸನ್ಯಾಸಿಗಳೂ ಸಹ ಬರುತ್ತಾರೆ ಆದರೂ ಕೋಟಿಯಲ್ಲಿ ಕೆಲವರೇ ತಿಳಿದುಕೊಳ್ಳುತ್ತಾರೆ. ನೀವು ಲಕ್ಷಾಂತರ, ಕೋಟ್ಯಾಂತರ ಜನರಿಗೆ ತಿಳಿಸುತ್ತೀರಿ ಆದರೂ ಕೆಲವರೇ ವಿರಳ ಬರುತ್ತಾರೆ. ಅನೇಕರಿಗೆ ತಿಳಿಸಬೇಕಾಗುವುದು. ಕೊನೆಗೆ ನಿಮ್ಮ ಈ ಜ್ಞಾನ ಮತ್ತು ಚಿತ್ರಗಳೆಲ್ಲವೂ ಪತ್ರಿಕೆಗಳಲ್ಲಿ ಬರುತ್ತವೆ, ಏಣಿಯ ಚಿತ್ರವೂ ಬರುತ್ತದೆ. ಇದಂತೂ ಭಾರತಕ್ಕಾಗಿ ಇದೆ, ಅನ್ಯ ಧರ್ಮದವರು ಎಲ್ಲಿ ಹೋಗುತ್ತಾರೆ ಎಂದು ಕೇಳುತ್ತಾರೆ, ಅಂತಿಮ ಸಮಯವೆಂದೂ ಗಾಯನವಿದೆ. ಅಂತಿಮ ಅರ್ಥಾತ್ ಹಿಂತಿರುಗಿ ಹೋಗುವ ಸಮಯವಾಗಿದೆ. ಹಳೆಯ ಪ್ರಪಂಚದ ವಿನಾಶ, ಹೊಸ ಪ್ರಪಂಚದ ಸ್ಥಾಪನೆಯಾಗುವುದು. ಅಂದಮೇಲೆ ಅವಶ್ಯವಾಗಿ ಎಲ್ಲರೂ ಹಿಂತಿರುಗಿ ಹೋಗುತ್ತಾರಲ್ಲವೆ, ಎಲ್ಲರ ವಿನಾಶವಾಗಲಿದೆ. ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ. ಈ ಮಾತುಗಳನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ನೀವು ತಿಳಿದುಕೊಂಡಿದ್ದೀರಿ - ನರಕವಾಸಿಗಳ ವಿನಾಶ, ಸ್ವರ್ಗವಾಸಿಗಳ ಸ್ಥಾಪನೆಯಾಗುತ್ತಿದೆ, ಕಲ್ಪ-ಕಲ್ಪವೂ ಇದೇ ರೀತಿ ಆಗುತ್ತದೆ. ಈಗ ಇರುವ ಸ್ವಲ್ಪವೇ ಸಮಯದಲ್ಲಿಯೂ ಅನೇಕರಿಗೆ ಈ ಜ್ಞಾನವು ಸಿಗುತ್ತಾ ಹೋಗುವುದು. ಮೇಳಗಳೂ ಆಗುತ್ತಾ ಇರುತ್ತವೆ. ಎಲ್ಲಾ ಕಡೆಯಿಂದ ನಾವು ಮೇಳ ಮಾಡಿದೆವು, ಪ್ರದರ್ಶನಿ ಇಟ್ಟಿದ್ದೆವು ಎಂದು ಪತ್ರ ಬರೆಯುತ್ತಾ ಇರುತ್ತಾರೆ ಆದರೆ ಅದರ ಜೊತೆ ಜೊತೆಗೆ ತಮ್ಮ ನೆನಪಿನ ಯಾತ್ರೆಯನ್ನೂ ಮರೆಯಬಾರದು. ಮಕ್ಕಳು ಬಹಳ ತಣ್ಣಗೆ ನಡೆಯುತ್ತಿದ್ದಾರೆ, ನೆನಪಿನ ಯಾತ್ರೆ ಈ ರೀತಿ ಮಾಡುತ್ತಾರೆ ಹೇಗೆ ವೃದ್ಧರು ಮಾಡಿದಂತೆ. ಶಕ್ತಿಯೇ ಇಲ್ಲವೇನೋ, ಏನೂ ತಿಂದಿಲ್ಲವೆನ್ನುವಂತೆ ಯಾತ್ರೆ ಮಾಡುತ್ತಾರೆ. ತಂದೆಗೆ ಎಷ್ಟೊಂದು ವಿಚಾರವು ನಡೆಯುತ್ತಿರುತ್ತದೆ. ವಿಚಾರ ಮಾಡುತ್ತಾ-ಮಾಡುತ್ತಾ ನಿದ್ರೆಯೇ ಹೊರಟು ಹೋಗುತ್ತದೆ. ವಿಚಾರ ಸಾಗರ ಮಂಥನವನ್ನು ಎಲ್ಲರೂ ಮಾಡಬೇಕಲ್ಲವೇ. ನಮಗೆ ಬೇಹದ್ದಿನ ತಂದೆಯು ಓದಿಸುತ್ತಾರೆಂದು ಮಕ್ಕಳಿಗೇ ತಿಳಿದಿದೆ ಅಂದಮೇಲೆ ಎಷ್ಟು ಅಪಾರ ಖುಷಿಯಿರಬೇಕು - ಈ ವಿದ್ಯೆಯಿಂದ ನಾವು ವಿಶ್ವದ ಮಾಲೀಕರಾಗುತ್ತೇವೆ. ಕೆಲಕೆಲವರ ಚಲನೆಯು ಈ ರೀತಿಯಿದೆ ಹೇಗೆ ಏಡಿಯಿದ್ದಂತೆ. ಏಡಿಗಳನ್ನು ತಂದೆಯು ದೇವತೆಗಳನ್ನಾಗಿ ಮಾಡುತ್ತಾರೆ ಆದರೂ ಸಹ ಕೆಲವರ ನಡವಳಿಕೆಯು ಸುಧಾರಣೆಯಾಗುವುದೇ ಇಲ್ಲ. ಈ ಏಣಿಯ ಚಿತ್ರದಲ್ಲಿ ಬಹಳ ಒಳ್ಳೆಯ ಜ್ಞಾನವಿದೆ, ಆದರೆ ಮಕ್ಕಳು ಇಷ್ಟು ಕೆಲಸವನ್ನೂ ಮಾಡುವುದಿಲ್ಲ. ಯಾತ್ರೆಯನ್ನೇ ಮಾಡುವುದಿಲ್ಲ, ತಂದೆಯನ್ನು ನೆನಪು ಮಾಡಿದರೆ ಬುದ್ಧಿಯ ಬೀಗವು ತೆರೆಯುವುದು. ಸತೋಪ್ರಧಾನ ಬುದ್ಧಿಯಾಗುತ್ತಾ ಹೋಗುವುದು. ನೀವು ಮಕ್ಕಳದು ಪಾರಸ ಬುದ್ಧಿಯಾಗಬೇಕು, ಅನೇಕರ ಕಲ್ಯಾಣ ಮಾಡಬೇಕು, ನೀವು ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೀರಿ, ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ ಆದ್ದರಿಂದ ನನ್ನನ್ನು ನೆನಪು ಮಾಡಿರಿ. ಕೃಷ್ಣನಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ, ಅವನಿಗೆ ಶ್ಯಾಮಸುಂದರನೆಂದು ಹೇಳುತ್ತಾರೆ. ತಂದೆಯು ಶ್ಯಾಮನಾದ ಆತ್ಮನಿಗೆ ಕುಳಿತು ತಿಳಿಸುತ್ತಾರೆ. ನನ್ನನ್ನು ತಂದೆಯು ವಿಶ್ವದ ಮಾಲೀಕನನ್ನಾಗಿ ಮಾಡುತ್ತಾರೆಂದು ಈ ಆತ್ಮಕ್ಕೆ ಗೊತ್ತಿದೆ, ಅಂದಮೇಲೆ ಬುದ್ಧಿಯು ಎಷ್ಟೊಂದು ಖುಷಿಯಲ್ಲಿ ತುಂಬಿರಬೇಕು. ಇದರಲ್ಲಿ ಯಾವುದೇ ಅಹಂಕಾರದ ಮಾತಿಲ್ಲ. ತಂದೆಯು ಎಷ್ಟು ನಿರಹಂಕಾರಿಯಾಗಿದೆ. ಬುದ್ಧಿಯಲ್ಲಿ ಎಷ್ಟೊಂದು ಖುಷಿಯಿರುತ್ತದೆ, ನಾಳೆ ನಾವು ವಜ್ರ ವೈಡೂರ್ಯಗಳ ಮಹಲುಗಳನ್ನು ಕಟ್ಟಿಸುತ್ತೇವೆ. ಹೊಸ ಪ್ರಪಂಚದಲ್ಲಿ ರಾಜ್ಯಭಾರವನ್ನು ನಡೆಸುತ್ತೇವೆ. ಇದಂತೂ ಸಂಪೂರ್ಣ ಪತಿತ ಪ್ರಪಂಚವಾಗಿದೆ. ಈ ಪ್ರಪಂಚದ ಮನುಷ್ಯರು ಏನೂ ಪ್ರಯೋಜನಕ್ಕಿಲ್ಲ. ಏನನ್ನೂ ತಿಳಿದುಕೊಂಡಿಲ್ಲ. ಇದನ್ನೂ ತೋರಿಸಬೇಕು - ವಜ್ರ ಸಮಾನ ಜೀವನವಿತ್ತು, ಅವರೇ ನಂತರ 84 ಜನ್ಮಗಳನ್ನು ತೆಗೆದುಕೊಂಡು ಕವಡೆಯಂತೆ ಆಗಿಬಿಡುತ್ತಾರೆ. ಈ ಏಣಿಯ ಚಿತ್ರವು ನಂಬರ್ವನ್ ಆಗಿದೆ ನಂತರ ಎರಡನೆಯದಾಗಿ ತ್ರಿಮೂರ್ತಿ ಚಿತ್ರವಿದೆ. |
ನಿಕಟ ಭವಿಷ್ಯದಲ್ಲಿ ಶ್ರೇಷ್ಠಾಚಾರಿ ಭಾರತವಾಗಿ ಬಿಡುವುದು, ಶ್ರೇಷ್ಠಾಚಾರಿ ಪ್ರಪಂಚದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ ಎಂದು ನೀವು ಹೇಳುತ್ತೀರಿ. ಈಗ ಎಷ್ಟೊಂದು ಜನಸಂಖ್ಯೆಯಿದೆ! ಮಹಾಭಾರತ ಯುದ್ಧವೂ ಸನ್ಮುಖದಲ್ಲಿದೆ. ಎಲ್ಲಾ ಆತ್ಮರು ಸೊಳ್ಳೆಗಳ ರೀತಿಯಲ್ಲಿ ಹೋಗುವರು. ಬೆಂಕಿಯು ಹತ್ತಿಕೊಳ್ಳುತ್ತಿದೆ. ಎಷ್ಟು ಸುಧಾರಣೆ ಮಾಡಲು ಪ್ರಯತ್ನ ಪಡುವರೋ ಅಷ್ಟೇ ಶತ್ರುಗಳಾಗುತ್ತಾ ಹೋಗುತ್ತಾರೆ. ತಂದೆಯು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಮಕ್ಕಳಿಗೆ ಎಷ್ಟೊಂದು ನಶೆ ತರಿಸುತ್ತಾರೆ. ಕೆಲಕೆಲವರಂತೂ ಇಲ್ಲಿಂದ ಹೋಗುತ್ತಿದ್ದಂತೆಯೇ ಇಡೀ ಜ್ಞಾನವು ಹಾರಿ ಹೋಗುತ್ತದೆ. ಸ್ಮೃತಿಯೇನೂ ಇರುವುದಿಲ್ಲ, ಇಲ್ಲದಿದ್ದರೆ ನಾವು ಹೋಗಿ ಸರ್ವೀಸ್ ಮಾಡಬೇಕೆಂಬ ಎಷ್ಟೊಂದು ಉಮ್ಮಂಗವಿರಬೇಕು! ತಂದೆಯೂ ಸಹ ಗುಣವನ್ನು ನೋಡಿ ಸರ್ವೀಸಿಗೆ ಕಳುಹಿಸುತ್ತಾರಲ್ಲವೇ. ಇದರಲ್ಲಿ ಬಹಳ ಹರ್ಷಿತರಾಗಿರುತ್ತಾರೆ, ಸರ್ವೀಸಿನಲ್ಲಿ ಖುಷಿಯಿರುತ್ತದೆ. ಒಳ್ಳೊಳ್ಳೆಯ ಹಳೆಯ ಮಕ್ಕಳು ಪರಸ್ಪರ ಚಿಕ್ಕ ಚಿಕ್ಕ ಮಾತಿಗೆ ಮುನಿಸಿಕೊಳ್ಳುತ್ತಾರೆ, ಈ ಮಾತುಗಳ ಕಾರಣ ನೀವು ಸರ್ವೀಸನ್ನು ಬಿಡುವುದೇ? ಸರ್ವೀಸನ್ನು ಖುಷಿಯಿಂದ ಮಾಡಬೇಕಾಗಿದೆ. ಯಾರ ಜೊತೆ ಆಗುವುದಿಲ್ಲವೋ ಅವರ ಮುಖವನ್ನು ನೋಡುತ್ತಿದ್ದಂತೆಯೇ ಸರ್ವೀಸಿನ ವಿಚಾರವೇ ಹಾರಿ ಹೋಗುತ್ತದೆ. ಸರ್ವೀಸಿನಲ್ಲಿ ಮನಸ್ಸಾಗದಿದ್ದರೆ ದೂರ ಸರಿಯುತ್ತಾರೆ. ಅಂದಮೇಲೆ ಅಂತಹ ಜ್ಞಾನಿಗಳು ಮತ್ತು ಅಜ್ಞಾನಿಗಳಲ್ಲಿ ಯಾವುದೇ ಅಂತರವಿಲ್ಲ. ದೇಹಾಭಿಮಾನದ ಗ್ರಹಚಾರವು ಬಂದು ಕುಳಿತುಕೊಳ್ಳುತ್ತದೆ. ಇದು ಮೊದಲನೇ ನಂಬರಿನ ಕಾಯಿಲೆಯಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಯಾಗಿರಿ. ಆತ್ಮವೇ ಎಲ್ಲವನ್ನೂ ಮಾಡುತ್ತದೆಯಲ್ಲವೇ. ಆತ್ಮವೇ ವಿಕಾರಿ ಮತ್ತು ನಿರ್ವಿಕಾರಿಯಾಗುತ್ತದೆ. ಸ್ವರ್ಗದಲ್ಲಿ ನಿರ್ವಿಕಾರಿಯಾಗಿತ್ತು, ರಾವಣ ರಾಜ್ಯದಲ್ಲಿ ಆತ್ಮವೇ ವಿಕಾರಿಯಾಗಿದೆ. ಇದೂ ಸಹ ಡ್ರಾಮಾದಲ್ಲಿ ಹೀಗೆ ಮಾಡಲ್ಪಟ್ಟಿದೆ, ಆದ್ದರಿಂದ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಯಾರು ನಿರ್ವಿಕಾರಿಯಾಗಿದ್ದರೋ ಅವರೇ ಪತಿತ, ವಿಕಾರಿಯಾಗಿದ್ದಾರೆ. ನಾವೇ ನಿರ್ವಿಕಾರಿಯಾಗಿದ್ದೆವು, ಈಗ ವಿಕಾರಿಯಾಗಿದ್ದೇವೆ. ನಾವಾತ್ಮರು ಮೂಲವತನದ ನಿವಾಸಿಗಳಾಗಿದ್ದೇವೆ, ಅಲ್ಲಿ ನಾವು ನಿರ್ವಿಕಾರಿಯಾಗಿರುತ್ತೇವೆ. ಇಲ್ಲಿ ಶರೀರದಲ್ಲಿ ಬಂದು ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ವಿಕಾರಿಯಾಗಿದ್ದೇವೆ ಎಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ, ಇದನ್ನು ತಂದೆಯೇ ತಿಳಿಸುತ್ತಾರೆ. ಆತ್ಮವು ಶಾಂತಿಧಾಮದಿಂದ ಬಂದಾಗ ಅವಶ್ಯವಾಗಿ ಪವಿತ್ರವಾಗಿರುತ್ತದೆ ನಂತರ ಅಪವಿತ್ರವಾಗಿದೆ. ಪವಿತ್ರ ಪ್ರಪಂಚದಲ್ಲಿ 9 ಲಕ್ಷ ಜನಸಂಖ್ಯೆಯಿರುತ್ತದೆ ಅಂದಮೇಲೆ ಇಷ್ಟೊಂದು ಆತ್ಮರು ಎಲ್ಲಿಂದ ಬಂದರು? ಅವಶ್ಯವಾಗಿ ಶಾಂತಿಧಾಮದಿಂದಲೇ ಬಂದಿರುವರು. ಅದು ನಿರಾಕಾರಿ ಪ್ರಪಂಚವಾಗಿದೆ, ಅಲ್ಲಿ ಎಲ್ಲಾ ಆತ್ಮರು ಪವಿತ್ರವಾಗಿರುತ್ತಾರೆ ನಂತರ ಪಾತ್ರವನ್ನಭಿನಯಿಸುತ್ತಾ ಅಭಿನಯಿಸುತ್ತಾ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಪಾವನರಿಂದ ಪತಿತರಾಗುವರು. ಮತ್ತೆ ತಂದೆಯು ಬಂದು ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರೆ, ಈ ನಾಟಕವು ನಡೆಯುತ್ತಲೇ ಇರುತ್ತದೆ. ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಆ ತಂದೆಯನ್ನು ಯಾರೂ ಅರಿತುಕೊಂಡಿಲ್ಲ. ಋಷಿ-ಮುನಿಗಳೂ ಸಹ ನಮಗೂ ಗೊತ್ತಿಲ್ಲವೆಂದು ಹೇಳಿ ಹೋದರು. ನಾವು ಭಗವಂತನನ್ನು ಮತ್ತು ಅವರ ರಚನೆಯನ್ನು ತಿಳಿದುಕೊಂಡಿಲ್ಲ ಎಂದು ಹೇಳುತ್ತಾರೆ. ಮತ್ತೆ ಪರಮಾತ್ಮನು ಜ್ಞಾನಪೂರ್ಣ ಎಂಬುದನ್ನೂ ಹೇಳುತ್ತಾರೆ, ಅವರು ಸರ್ವ ಆತ್ಮರ ತಂದೆ ಬೀಜ ರೂಪನಾಗಿದ್ದಾರೆ, ಅವರು ಆತ್ಮರ ಬೀಜ ರೂಪನಾಗಿದ್ದಾರೆ ಮತ್ತು ಪ್ರಜಾಪಿತನು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ. ಆ ನಿರಾಕಾರ ತಂದೆಯು ಇವರಲ್ಲಿ ಪ್ರವೇಶ ಮಾಡಿ ಮನುಷ್ಯರಿಗೆ ತಿಳಿಸುತ್ತಾರೆ, ಅವರಿಗೆ ಮನುಷ್ಯ ಸೃಷ್ಟಿಯ ಬೀಜರೂಪನೆಂದು ಹೇಳುವುದಿಲ್ಲ, ಅವರು ಆತ್ಮರ ಪಿತನಾಗಿದ್ದಾರೆ ಮತ್ತು ಈ ಬ್ರಹ್ಮಾರವರು ಮನುಷ್ಯ ಸೃಷ್ಟಿಯ ಪ್ರಜಾಪಿತನಾಗಿದ್ದಾರೆ. ಅವರ ಮೂಲಕ ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ. ಶರೀರವೇ ಬೇರೆ, ಆತ್ಮವೇ ಬೇರೆಯಾಗಿದೆಯಲ್ಲವೇ. ಮನ-ಬುದ್ಧಿಯು ಆತ್ಮದಲ್ಲಿಯೇ ಇದೆ, ಆತ್ಮವೇ ಬಂದು ಪಾತ್ರವನ್ನು ಅಭಿನಯಿಸಲು ಶರೀರದಲ್ಲಿ ಪ್ರವೇಶ ಮಾಡುತ್ತದೆ. |
ನೀವು ತಿಳಿದುಕೊಂಡಿದ್ದೀರಿ - ಯಾರಾದರೂ ಶರೀರ ಬಿಡುತ್ತಾರೆಂದರೆ ಹೋಗಿ ಇನ್ನೊಂದು ಪಾತ್ರವನ್ನು ಅಭಿನಯಿಸುತ್ತಾರೆ. ಇದರಲ್ಲಿ ಅಳುವುದರಿಂದ ಏನಾಗುವುದು! ಅವರು ಹೊರಟು ಹೋದರು ಅಂದಮೇಲೆ ಅವರು ಬಂದು ನಮ್ಮ ಚಿಕ್ಕಪ್ಪ, ದೊಡ್ಡಪ್ಪ, ಮಾವನಾಗುವರೇ? ಅಳುವುದರಿಂದ ಏನು ಲಾಭ! ಮಮ್ಮಾರವರೂ ಹೋದರು, ಡ್ರಾಮಾನುಸಾರ ಪಾತ್ರವನ್ನಭಿನಯಿಸುತ್ತಿದ್ದಾರೆ. ಹೀಗೆ ಅನೇಕರು ಹೋಗುತ್ತಾರೆ. ಎಲ್ಲಿಗೆ ಹೋಗಿ ಜನ್ಮ ತೆಗೆದುಕೊಳ್ಳುತ್ತಾರೆ. ಇದರಿಂದ ಅರ್ಥವಾಗುತ್ತದೆ - ಎಂತೆಂತಹ ಆಜ್ಞಾಕಾರಿ ಮಗುವಾಗಿರುವರೋ ಅಷ್ಟು ಒಳ್ಳೆಯ ಮನೆಯಲ್ಲಿ ಹೋಗಿ ಜನ್ಮ ಪಡೆಯುವರು. ಇಲ್ಲಿನವರು ಒಳ್ಳೆಯ ಮನೆಯಲ್ಲಿಯೇ ಹೋಗಿ ಜನ್ಮ ಪಡೆಯುತ್ತಾರೆ. ನಂಬರ್ವಾರಂತೂ ಇರುತ್ತಾರಲ್ಲವೆ. ಯಾರು ಯಾವ ಕರ್ಮವನ್ನು ಮಾಡುತ್ತಾರೆಯೋ ಅಂತಹ ಮನೆಯಲ್ಲಿ ಹೋಗುತ್ತಾರೆ. ಕೊನೆಯಲ್ಲಿ ನೀವು ಹೋಗಿ ರಾಜಧಾನಿಯಲ್ಲಿ ಜನ್ಮ ತೆಗೆದುಕೊಳ್ಳುತ್ತೀರಿ. ಯಾರು ರಾಜರ ಬಳಿ ಹೋಗುತ್ತಾರೆ ಎಂಬುದನ್ನು ಸ್ವಯಂ ತಿಳಿದುಕೊಳ್ಳಬಹುದು. ದೈವೀ ಸಂಸ್ಕಾರವನ್ನಂತೂ ತೆಗೆದುಕೊಂಡು ಹೋಗುತ್ತಾರಲ್ಲವೆ. ಇದರಲ್ಲಿ ಬಹಳ ವಿಶಾಲ ಬುದ್ಧಿಯಿಂದ ವಿಚಾರ ಸಾಗರ ಮಂಥನ ಮಾಡಲಾಗುತ್ತದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಮಕ್ಕಳೂ ಸಹ ಜ್ಞಾನ ಸಾಗರ ಆಗಬೇಕಾಗಿದೆ. ನಂಬರ್ವಾರಂತೂ ಇರುತ್ತಾರೆ. ಮುಂದೆ ಹೋದಂತೆ ಉನ್ನತಿಯಾಗುತ್ತಾ ಹೋಗುತ್ತಾರೆ ಎಂದು ತಿಳಿದುಕೊಳ್ಳಲಾಗುತ್ತದೆ. ಯಾರು ಇಂದು ಕೆಲಸ ಮಾಡುವುದಿಲ್ಲವೋ ಅವರೇ ನಾಳೆ ಎಲ್ಲರಿಗಿಂತಲೂ ತೀಕ್ಷ್ಣವಾಗಿ ಹೋಗಬಹುದು, ಅವರ ಗ್ರಹಚಾರವು ಕಳೆಯಬಹುದು. ಯಾರ ಮೇಲಾದರೂ ರಾಹುವಿನ ಗ್ರಹಚಾರ ಕುಳಿತುಕೊಳ್ಳುತ್ತದೆಯೆಂದರೆ ಅಂತಹವರು ಗುಣಿಗೆ ಬೀಳುತ್ತಾರೆ, ಮೂಳೆಗಳು ಪುಡಿ ಪುಡಿಯಾಗುತ್ತವೆ. ಬೇಹದ್ದಿನ ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ ನಂತರ ಬೀಳುತ್ತಾರೆಂದರೆ, ಧರ್ಮರಾಜನಿಂದ ಬಹಳ ಶಿಕ್ಷೆಗಳು ಬೀಳುತ್ತವೆ. ಇವರು ಬೇಹದ್ದಿನ ತಂದೆ, ಬೇಹದ್ದಿನ ಧರ್ಮರಾಜನಾಗಿದ್ದಾರೆ ಅಂದಮೇಲೆ ಬೇಹದ್ದಿನ ಶಿಕ್ಷೆ ಸಿಗುತ್ತದೆ. ಯಾವುದೇ ಮಾತಿನಲ್ಲಿ ನೆಪ ಹೇಳಿದರೆ ಅಥವಾ ಉಲ್ಟಾ ಕೆಲಸ ಮಾಡಿದರೆ ಅವಶ್ಯವಾಗಿ ಶಿಕ್ಷೆಯನ್ನು ಅನುಭವಿಸುತ್ತಾರೆ. ಇಷ್ಟೆಲ್ಲಾ ಮಾತುಗಳನ್ನು ತಂದೆಯು ತಿಳಿಸಿದರೂ ಸಹ ನಾವು ತಂದೆಯ ಉಲ್ಲಂಘನೆ ಮಾಡುತ್ತೇವೆ ಎಂಬುದನ್ನೇ ಅರ್ಥ ಮಾಡಿಕೊಳ್ಳುವುದಿಲ್ಲ. ಶ್ರೀಮತದಂತೆ ನಡೆಯಿರಿ, ಸೇವೆಯಲ್ಲಿ ಸಹಯೋಗಿಗಳಾಗಿರಿ, ನೆನಪಿನ ಯಾತ್ರೆಯಲ್ಲಿರಿ, ಚಿತ್ರಗಳಲ್ಲಿ ತಿಳಿಸುವ ಅಭ್ಯಾಸ ಮಾಡುತ್ತೀರೆಂದರೆ ಅದೇ ಹವ್ಯಾಸವಾಗಿ ಬಿಡುವುದು ಇಲ್ಲವೆಂದರೆ ಶ್ರೇಷ್ಠ ಪದವಿ ಹೇಗೆ ಸಿಗುವುದು? ಲೌಕಿಕದಲ್ಲಿ ಕೆಲ ಮಕ್ಕಳು ಸುಪುತ್ರರಾಗಿರುತ್ತಾರೆ, ಇನ್ನೂ ಕೆಲವರು ಕುಪುತ್ರರಾಗಿರುತ್ತಾರೆ. ಇಲ್ಲಿಯೂ ಸಹ ಕೆಲವರು ಕೂಡಲೇ ತಂದೆಯ ಸೇವೆಯನ್ನು ಮಾಡಿ ತೋರಿಸುತ್ತಾರೆ. ಆದ್ದರಿಂದ ಮಕ್ಕಳು ಬೇಹದ್ದಿನ ಸರ್ವೀಸ್ ಮಾಡಬೇಕಾಗಿದೆ, ಬೇಹದ್ದಿನ ಆತ್ಮರ ಕಲ್ಯಾಣ ಮಾಡಬೇಕಾಗಿದೆ. ಮನ್ಮನಾಭವದ ಸಂದೇಶ ಕೊಡಬೇಕಾಗಿದೆ - ತಂದೆಯನ್ನು ನೆನಪು ಮಾಡಿದರೆ ನಿಮ್ಮ ಬುದ್ಧಿಯು ತಮೋಪ್ರಧಾನದಿಂದ ಸತೋಪ್ರಧಾನವಾಗಿ ಬಿಡುತ್ತದೆ. ಈಗ ಕಲಿಯುಗೀ ತಮೋಪ್ರಧಾನ ಪ್ರಪಂಚದ ಅಂತ್ಯವಾಗಿದೆ, ಈಗ ಸತೋಪ್ರಧಾನರಾಗಬೇಕಾಗಿದೆ. ಆತ್ಮರದು ಅಲ್ಲಿ ನಂಬರ್ವಾರ್ ಪ್ರಪಂಚವಲ್ಲವೇ. ಅವರು ನಂಬರ್ವಾರ್ ಆಗಿ ಬಂದು ಪಾತ್ರವನ್ನು ಅಭಿನಯಿಸುತ್ತಾರೆ. ಬರುವುದೂ ಸಹ ನಂಬರ್ವಾರ್ ಡ್ರಾಮಾನುಸಾರ. ಈಗ ಎಲ್ಲಾ ಆತ್ಮರು ರಾವಣ ರಾಜ್ಯದಲ್ಲಿ ದುಃಖಿಯಾಗಿದ್ದಾರೆ ಆದರೂ ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ನೀವು ಪತಿತರಾಗಿದ್ದೀರಿ ಎಂದು ಯಾರಿಗಾದರೂ ಹೇಳಿದರೆ ಕೋಪಿಸಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಇದು ವಿಕಾರಿ ಪ್ರಪಂಚವಾಗಿದೆ, ನೀವು ತಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವಿರಿ. ಉಳಿದೆಲ್ಲರೂ ವಿನಾಶವಾಗಿ ಹಿಂತಿರುಗಿ ಹೊರಟು ಹೋಗುವರು. ಮಹಾಭಾರತ ಯುದ್ಧವಾಗುವುದು. ಇದರಿಂದ ಎಲ್ಲಾ ಆತ್ಮಗಳೂ ಸಮಾಪ್ತಿಯಾಗಿ ಒಂದು ಧರ್ಮ ಉಳಿಯುವುದೆಂದು ಗಾಯನವಿದೆ, ಈ ಯುದ್ಧದ ನಂತರವೇ ಸ್ವರ್ಗದ ಬಾಗಿಲು ತೆರೆಯುತ್ತದೆ. ಮಕ್ಕಳಿಗೆ ಎಷ್ಟು ಚೆನ್ನಾಗಿ ತಿಳಿಸುತ್ತಾರೆ, ಮುಂದೆ ಹೋದಂತೆ ನಿಮ್ಮ ಮಾತುಗಳನ್ನು ಅನೇಕರು ಕೇಳುತ್ತಾ ಇರುತ್ತಾರೆ, ಬರತೊಡಗುತ್ತಾರೆ. ಸೂರ್ಯವಂಶಿ ಚಂದ್ರವಂಶಿಯರು ಯಾರು ಪತಿತರಾಗಿ ಬಿಟ್ಟಿದ್ದಾರೆಯೋ ಅವರೇ ಬಂದು ನಂಬರ್ವಾರ್ ತಮ್ಮ ಆಸ್ತಿಯನ್ನು ತೆಗೆದುಕೊಳ್ಳುವರು. ಪ್ರಜೆಗಳಂತೂ ಬಹಳ ಮಂದಿ ಆಗುವರು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಎಂದೂ ಸಹ ಭಗವಂತನ ಆಜ್ಞೆಗಳ ಉಲ್ಲಂಘನೆ ಮಾಡಬಾರದು. ಬೇಹದ್ದಿನ ಸೇವೆಯಲ್ಲಿ ಸುಪುತ್ರ ಮಕ್ಕಳಾಗಿ ಸಹಯೋಗಿಗಳಾಗಬೇಕಾಗಿದೆ. |
2. ಜ್ಞಾನ ಧನದ ಗುಪ್ತ ಖುಷಿಯಿಂದ ಬುದ್ಧಿಯನ್ನು ಸಂಪನ್ನವಾಗಿ ಇಟ್ಟುಕೊಳ್ಳಬೇಕಾಗಿದೆ, ಪರಸ್ಪರ ಎಂದೂ ಮುನಿಸಿಕೊಳ್ಳಬಾರದು. |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳು ಹೇಳುತ್ತಾರೆ - ಯಾರಾದರೂ ನಮ್ಮನ್ನು ಸಂಶಯ ಬುದ್ಧಿಯವರನ್ನಾಗಿ ಮಾಡಲು ಏನಾದರೂ ಮಾಡಲಿ ಆದರೆ ನಾವು ಸಂಶಯ ಬುದ್ಧಿಯವರಾಗುವುದಿಲ್ಲ, ಭಲೆ ಎಷ್ಟೇ ಉಲ್ಟಾ ಸುಲ್ಟಾ ಮಾತುಗಳನ್ನು ತಿಳಿಸಿದರೂ ಸಹ ಸಂಶಯ ಬುದ್ಧಿಯವರಾಗುವುದಿಲ್ಲ, ಶ್ರೀಮತದಂತೆ ನಡೆಯುತ್ತಾ ಇರುತ್ತೇವೆ. ತಂದೆಯು ಪ್ರತಿನಿತ್ಯವೂ ಭಿನ್ನ-ಭಿನ್ನ ಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ಸತ್ಯಯುಗದಲ್ಲಿ 9 ಲಕ್ಷ ಜನಸಂಖ್ಯೆಯಿತ್ತು ಅಂದಮೇಲೆ ಉಳಿದ ಇಷ್ಟೆಲ್ಲಾ ಮನುಷ್ಯರು ವಿನಾಶವಾಗುತ್ತಾರೆ. ಯಾರು ಬುದ್ಧಿವಂತರಾಗಿರುವರೋ ಅವರು ಸನ್ನೆಯಿಂದಲೇ ತಿಳಿದುಕೊಳ್ಳುವರು. ಅವಶ್ಯವಾಗಿ ಈ ಯುದ್ಧದಿಂದಲೇ ಅನೇಕ ಧರ್ಮಗಳು ವಿನಾಶವಾಗಿ ಒಂದು ದೇವಿ-ದೇವತಾ ಧರ್ಮದ ಸ್ಥಾಪನೆಯಾಗುವುದು. ಯಾರು ಯೋಗ್ಯರಾಗುವರೋ ಅವರೇ ಮನುಷ್ಯರಿಂದ ದೇವತೆಯಾಗುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಮನುಷ್ಯರಿಂದ ದೇವತೆಯನ್ನಾಗಿ ಮಾಡಲು ಸಾಧ್ಯವಿಲ್ಲ ಅಂದಮೇಲೆ ಮಕ್ಕಳಿಗೆ ನಾವೀಗ ಮನೆಗೆ ಹೋಗಬೇಕೆಂದು ನೆನಪಿರಬೇಕು ಆದರೆ ಮಾಯೆಯು ಪದೇ ಪದೇ ಮರೆಸುತ್ತದೆ. ಇಲ್ಲಿಯೇ ತಂದೆಯನ್ನು ನೆನಪು ಮಾಡಿ ಸತೋಪ್ರಧಾನರಾಗಬೇಕಾಗಿದೆ, ಯಾವ ಸಮಯದಲ್ಲಾದರೂ ಯುದ್ಧವು ಹೆಚ್ಚಾಗಬಹುದು. ಇದಕ್ಕೆ ನಿಯಮವಿದೆಯೇ? ಬಹುಷಃ ದೊಡ್ಡ ಯುದ್ಧವು ನಿಲ್ಲದೇ ಇರುವಷ್ಟು ಹೆಚ್ಚಾಗಬಹುದು ಎಂಬುದನ್ನೂ ಹೇಳುತ್ತಾರೆ. ಎಲ್ಲರೂ ಪರಸ್ಪರ ಹೊಡೆದಾಡತೊಡಗುತ್ತಾರೆ ಅಂದಮೇಲೆ ನಾವು ವಿನಾಶಕ್ಕೆ ಮೊದಲೇ ತಂದೆಯ ನೆನಪಿನಲ್ಲಿದ್ದು ತಮೋಪ್ರಧಾನರಿಂದ ಸತೋಪ್ರಧಾನರಾಗುವ ಪುರುಷಾರ್ಥವನ್ನೇಕೆ ಮಾಡಬಾರದು! ನೆನಪಿನ ಯಾತ್ರೆಯಲ್ಲಿಯೇ ಮಾಯೆಯು ವಿಘ್ನ ಹಾಕುತ್ತದೆ. ಆದ್ದರಿಂದ ತಂದೆಯು ಪ್ರತೀ ದಿನ ಚಾರ್ಟ್ ಬರೆಯಿರಿ ಎಂದು ಹೇಳುತ್ತಾರೆ, ಆದರೆ ಕೇವಲ 2-4 ಮಂದಿಯಷ್ಟೇ ಬರೆಯುತ್ತಾರೆ. ಉಳಿದವರಂತೂ ತಮ್ಮ ಉದ್ಯೋಗ-ವ್ಯವಹಾರಗಳಲ್ಲಿಯೇ ಇಡೀ ದಿನ ಮುಳುಗಿರುತ್ತಾರೆ. ಅನೇಕ ಪ್ರಕಾರದ ವಿಘ್ನಗಳಲ್ಲಿ ಸಿಲುಕಿರುತ್ತಾರೆ. ಮಕ್ಕಳಿಗೆ ಇದಂತೂ ತಿಳಿದಿದೆ - ನಾವು ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ ಅಂದಮೇಲೆ ಎಲ್ಲಿಯೇ ಇದ್ದರೂ ಪುರುಷಾರ್ಥ ಮಾಡಬೇಕಾಗಿದೆ. ಮನುಷ್ಯರಿಗೆ ತಿಳಿಸುವುದಕ್ಕಾಗಿ ಚಿತ್ರಗಳನ್ನು ಮಾಡಿಸುತ್ತಾ ಇರುತ್ತೇವೆ ಏಕೆಂದರೆ ಈ ಸಮಯದಲ್ಲಿ ಮನುಷ್ಯರು 100% ತಮೋಪ್ರಧಾನರಾಗಿದ್ದಾರೆ. ಮೊದಲು ಮುಕ್ತಿಧಾಮದಿಂದ ಬಂದಾಗ ಸತೋಪ್ರಧಾನರಾಗಿರುತ್ತಾರೆ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾ-ಬರುತ್ತಾ ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಈಗ ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನದಿಂದ ಸತೋಪ್ರಧಾನರಾಗುವಿರಿ ಎಂದು ಎಲ್ಲರಿಗೆ ತಂದೆಯ ಸಂದೇಶ ಕೊಡಬೇಕಾಗಿದೆ. ವಿನಾಶವೂ ಸನ್ಮುಖದಲ್ಲಿದೆ. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು, ಆಗ ಉಳಿದೆಲ್ಲರೂ ನಿರ್ವಾಣ ಧಾಮದಲ್ಲಿದ್ದರು. ಮಕ್ಕಳು ಚಿತ್ರಗಳ ಮೇಲೆ ಗಮನ ಕೊಡಬೇಕಾಗಿದೆ. ಚಿತ್ರಗಳು ದೊಡ್ಡ ಗಾತ್ರದಲ್ಲಿದ್ದಾಗ ಸಹಜವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲರಿಗೆ ತಂದೆಯ ಸಂದೇಶ ಕೊಡಬೇಕಾಗಿದೆ. ಮನ್ಮನಾಭವದ ಅಕ್ಷರವು ಮುಖ್ಯವಾಗಿದೆ ಅಥವಾ ತಂದೆ ಮತ್ತು ಆಸ್ತಿ. ಇದನ್ನು ತಿಳಿಸುವುದರಲ್ಲಿ ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ತಿಳಿಸುವವರಲ್ಲಿಯೂ ಎಷ್ಟು ನಂಬರ್ವಾರ್ ಇದ್ದಾರೆ, ಬೇಹದ್ದಿನ ತಂದೆಯ ಜೊತೆ ಪ್ರೀತಿಯಿರಬೇಕಾಗಿದೆ. ಬುದ್ಧಿಯಲ್ಲಿ ಇದೇ ಇರಬೇಕು - ನಾವು ತಂದೆಯ ಸೇವೆ ಮಾಡುತ್ತಿದ್ದೇವೆ, ಈಶ್ವರೀಯ ಸೇವಾಧಾರಿಗಳಾಗಬೇಕಾಗಿದೆ. ಅವರು ಭಲೆ ಈಶ್ವರೀಯ ಸೇವಾಧಾರಿ ಎಂಬ ಪದವನ್ನು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ಮಕ್ಕಳ ಸೇವೆ ಮಾಡಲು ಬಂದಿದ್ದಾರೆ, ಎಷ್ಟು ಉತ್ತಮ ದೇವಿ-ದೇವತೆಗಳನ್ನಾಗಿ ಮಾಡಲು ಬಂದಿದ್ದಾರೆ! ಇಂದು ನಾವು ಎಷ್ಟು ಕಂಗಾಲಾಗಿದ್ದೇವೆ. ಸತ್ಯಯುಗದಲ್ಲಿ ಎಷ್ಟೊಂದು ಸರ್ವಗುಣ ಸಂಪನ್ನರಾಗಿ ಬಿಡುತ್ತೇವೆ, ಇಲ್ಲಾದರೆ ಪರಸ್ಪರ ಜಗಳವಾಡುತ್ತಾ ಕಲಹ ಮಾಡುತ್ತಾ ಇರುತ್ತಾರೆ. ವಿನಾಶವಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಶಾಂತವಾಗಿ ಬಿಡುವುದು ಎಂದು ತಿಳಿದುಕೊಳ್ಳುತ್ತಾರೆ. ಸಂಪೂರ್ಣ ಘೋರ ಅಂಧಕಾರದಲ್ಲಿ ಮುಳುಗಿದ್ದಾರೆ, ಈಗ ಅವರಿಗೆ ತಿಳಿಸುವವರು ಬೇಕಾಗಿದೆ. ವಿದೇಶದಲ್ಲಿಯೂ ಈ ಜ್ಞಾನವನ್ನು ತಿಳಿಸಬಹುದು. ಒಂದೇ ಮಾತನ್ನು ಸಭೆಯಲ್ಲಿ ಕುಳಿತು ತಿಳಿಸಿರಿ, ಈಗ ಕಲಿಯುಗದಲ್ಲಿ 600 ಕೋಟಿಗಿಂತಲೂ ಅಧಿಕ ಜನಸಂಖ್ಯೆಯಿದೆ, ಸತ್ಯಯುಗದಲ್ಲಿ ಕೇವಲ 9 ಲಕ್ಷವಿರುತ್ತದೆ. ಇದರಿಂದಲೇ ಸಿದ್ಧವಾಗುತ್ತದೆ - ವಿನಾಶವು ಅವಶ್ಯವಾಗಿ ಆಗುವುದು. ಮಹಾಭಾರಿ ಯುದ್ಧವು ಪ್ರಸಿದ್ಧವಾಗಿದೆ, ಪರಮಾತ್ಮನೂ ಇಲ್ಲಿದ್ದಾರೆ, ಅವರೇ ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡಿಸುತ್ತಿದ್ದಾರೆ, ಶಂಕರನ ಮೂಲಕ ಕಲಿಯುಗದ ವಿನಾಶವೂ ಆಗಬೇಕಾಗಿದೆ ಏಕೆಂದರೆ ಈಗ ಸಂಗಮವಾಗಿದೆ. ಪ್ರಾಕೃತಿಕ ವಿಕೋಪಗಳಾಗುವವು, ಮೂರನೇ ಮಹಾಯುದ್ಧವು ಅಂತಿಮ ಯುದ್ಧವೆಂದು ಹೇಳುತ್ತಾರೆ. ಅಂತಿಮ ವಿನಾಶವು ಖಂಡಿತ ಆಗಬೇಕಾಗಿದೆ, ಈಗ ಇದನ್ನು ಎಲ್ಲರಿಗೂ ಹೇಳಬೇಕಾಗಿದೆ - ಬೇಹದ್ದಿನ ತಂದೆಯನ್ನು ನೆನಪು ಮಾಡಿದರೆ ಮುಕ್ತಿಧಾಮದಲ್ಲಿ ಹೊರಟು ಹೋಗುವಿರಿ. ಭಲೆ ತಮ್ಮ ಧರ್ಮದಲ್ಲಿಯೇ ಇರಿ, ಆದರೂ ತಂದೆಯನ್ನು ನೆನಪು ಮಾಡಿದರೆ ತಮ್ಮ ಧರ್ಮದಲ್ಲಿ ಒಳ್ಳೆಯ ಪದವಿಯನ್ನು ಪಡೆಯಬಹುದು. |
ನೀವು ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯು ನಮಗೆ ಪ್ರಜಾಪಿತ ಬ್ರಹ್ಮಾರವರ ತನುವಿನ ಮೂಲಕ ಜ್ಞಾನವನ್ನು ತಿಳಿಸುತ್ತಿದ್ದಾರೆ, ನಾವು ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ. ಮನೆಯೇ ಮೊದಲ ಪಾಠಶಾಲೆ, ನೆರೆಹೊರೆಯವರೆಲ್ಲರಿಗೂ ಸಂದೇಶ ಕೊಡಬೇಕಾಗಿದೆ, ಅನ್ಯ ಧರ್ಮದವರಿಗೂ ಸಹ ತಂದೆಯ ಪರಿಚಯ ಕೊಡಬೇಕಾಗಿದೆ. ವಿದೇಶದವರಿಗೆ, ರಾಜರಿಗೂ ಸಹ ಜ್ಞಾನವನ್ನು ಕೊಡಬೇಕಾಗಿದೆ ಅದಕ್ಕಾಗಿ ತಯಾರಿ ಮಾಡಬೇಕು. ತಂದೆಯು ತಿಳಿಸುತ್ತಾರೆ - ತ್ರಿಮೂರ್ತಿ, ಗೋಲ, ಕಲ್ಪವೃಕ್ಷ ಯಾವ ಮುಖ್ಯ ಚಿತ್ರಗಳಿವೆಯೋ ಅದನ್ನು ಬಟ್ಟೆಯ ಮೇಲೆ ಮುದ್ರಿಸಿ ನೀವು ವಿದೇಶಕ್ಕೂ ತೆಗೆದುಕೊಂಡು ಹೋಗಬಹುದು. ಭಲೆ ದೊಡ್ಡ ಗಾತ್ರದಲ್ಲಿ ಸಾಧ್ಯವಾಗದಿದ್ದರೆ ಚಿಕ್ಕ ಗಾತ್ರದ ಎರಡು ಬಟ್ಟೆಗಳ ಮೇಲೆ ಮಾಡಿಸಿ. ಈ ಇಡೀ ಜ್ಞಾನವು ತ್ರಿಮೂರ್ತಿ, ಕಲ್ಪವೃಕ್ಷ, ಗೋಲದ ಚಿತ್ರದಲ್ಲಿದೆ. ಏಣಿಯ ಜ್ಞಾನವೂ ಸಹ ಗೋಲದಲ್ಲಿ ಬಂದು ಬಿಡುತ್ತದೆ. ಏಣಿಯ ಚಿತ್ರದಲ್ಲಿ ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ವಿವರವಾಗಿ ಮಾಡಿಸಲಾಗಿದೆ. ಚಕ್ರದಲ್ಲಿ ಎಲ್ಲಾ ಧರ್ಮದವರದೂ ಬಂದು ಬಿಡುತ್ತದೆ. ಏಣಿಯ ಚಿತ್ರದಲ್ಲಿ ಹೇಗೆ ಸತೋಪ್ರಧಾನರೇ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ, ಕೆಳಗಿಳಿಯುತ್ತಾರೆ ಎಂಬುದನ್ನು ತೋರಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ, ತಂದೆಗೆ ಇಡೀದಿನ ವಿಚಾರವು ನಡೆಯುತ್ತಿರುತ್ತದೆ ಆದ್ದರಿಂದ ಯಾರಾದರೂ ದೊಡ್ಡದಾದ ಹೊಸ ಮನೆಯನ್ನು ಕಟ್ಟಿಸಿದರೆ ಅದರಲ್ಲಿ ಗೋಡೆಯು ಇಷ್ಟು ದೊಡ್ಡದಾಗಿರಲಿ ಅದರಮೇಲೆ 6 ಅಡಿ ಗಾತ್ರದ ಚಿತ್ರವನ್ನು ಮಾಡಿಸುವಂತಿರಬೇಕು. 12 ಅಡಿಯ ಗೋಡೆಯಿರಲಿ. ಈ ಸಮಯದಲ್ಲಿ ಭಾಷೆಗಳೂ ಬಹಳಷ್ಟಿವೆ, ಎಲ್ಲಾ ಧರ್ಮದವರಿಗೆ ತಿಳಿಸಬೇಕೆಂದರೆ ಎಷ್ಟೊಂದು ಭಾಷೆಗಳಲ್ಲಿ ತಿಳಿಸಬೇಕಾಗುತ್ತದೆ. ಇಷ್ಟು ವಿಶಾಲ ಭಾವನೆಯಿಂದ ಯುಕ್ತಿಯನ್ನು ರಚಿಸಬೇಕು. ಸರ್ವೀಸಿನ ಉಮ್ಮಂಗವಿರಲಿ. ಖರ್ಚಂತೂ ಮಾಡಲೇಬೇಕಾಗಿದೆ ಬಾಕಿ ನೀವು ಯಾರಿಂದಲೂ ಭಿಕ್ಷೆ ಬೇಡುವ ಅವಶ್ಯಕತೆಯಿಲ್ಲ. ಭಂಡಾರವು ತಾನಾಗಿಯೇ ತುಂಬುವುದು, ಡ್ರಾಮಾದಲ್ಲಿ ನಿಗಧಿತವಾಗಿದೆ. ಮಕ್ಕಳು ಕೇವಲ ಬುದ್ಧಿಯನ್ನು ಓಡಿಸಬೇಕು ಆದರೆ ಸ್ವಲ್ಪ ಸೇವೆಯನ್ನು ಮಾಡುತ್ತಾರೆಂದರೆ ನಾವು ಬಹಳ ಬುದ್ಧಿವಂತರಾಗಿದ್ದೇವೆಂದು ಮಕ್ಕಳಿಗೆ ನಶೆಯೇರುತ್ತದೆ. ತಂದೆಯು ಹೇಳುತ್ತಾರೆ - ರೂಪಾಯಿಯಲ್ಲಿನ ನಾಲ್ಕಾಣೆಯಷ್ಟೂ ಕಲಿತಿಲ್ಲ, ಕೆಲವರು ಎರಡಾಣೆ, ಕೆಲವರು ಒಂದಾಣೆ, ಇನ್ನೂ ಕೆಲವರು ಒಂದು ಪೈಸೆಯಷ್ಟೂ ಕಲಿತಿರುವುದು ವಿರಳ, ಏನನ್ನೂ ತಿಳಿದುಕೊಂಡಿಲ್ಲ. ಮುರುಳಿಯನ್ನು ಓದುವ ಉಮ್ಮಂಗವೂ ಇಲ್ಲ. ಸಾಹುಕಾರ ಪ್ರಜೆ, ಬಡ ಪ್ರಜೆ ಎಲ್ಲರೂ ಇಲ್ಲಿಯೇ ಆಗಬೇಕಾಗಿದೆ. ಕೆಲವರಂತೂ ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ ನಂತರ ಮುಖವನ್ನು ಕಪ್ಪು ಮಾಡಿಕೊಳ್ಳುತ್ತಾರೆ. ತಂದೆಗೆ ಹೇಳುತ್ತಾರೆ - ಬಾಬಾ, ನಾವು ಸೋಲನ್ನು ಅನುಭವಿಸಿದೆವು. ತಂದೆಯು ಹೇಳುತ್ತಾರೆ - ನೀವಂತೂ ಕಾಲಾಳುಗಳಿಗೂ ಕಾಲಾಳುಗಳಾಗಿದ್ದೀರಿ, ಬಹಳ ಕನಿಷ್ಟರು. ಇಂತಹವರು ಯಾವ ಪದವಿಯನ್ನು ಪಡೆಯುವರು! ಈಗ ಸೂರ್ಯವಂಶಿ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಯಾರಿಗೆ ತಂದೆಯ ನೆನಪಿರುತ್ತದೆಯೋ ಅವರೇ ಖುಷಿಯಲ್ಲಿ ಇರುತ್ತಾರೆ. ಕೇವಲ ತಂದೆಯ ಮೂಲಕ ಯಾವ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂಬುದು ನೆನಪಿದ್ದರೂ ಸಹ ಬಹಳ ಲಾಭವಿದೆ. ಧಾರಣೆ ಮಾಡಿ ಮತ್ತೆ ಅನ್ಯರನ್ನೂ ತಮ್ಮ ಸಮಾನ ಮಾಡಬೇಕಾಗಿದೆ ಆದರೆ ಮಕ್ಕಳು ಸೇವೆಯನ್ನೇ ಮಾಡುವುದಿಲ್ಲ, ಸ್ವಲ್ಪ ಸೇವೆ ಮಾಡಿದರೆ ನಾವು ಉತ್ತೀರ್ಣರಾಗಿ ಬಿಟ್ಟೆವು ಎಂದು ತಿಳಿದುಕೊಳ್ಳುತ್ತಾರೆ. ದೇಹಾಭಿಮಾನದಲ್ಲಿ ಬಂದು ಬೀಳುತ್ತಾರೆ. ಒಂದುವೇಳೆ ಬ್ರಹ್ಮಾ ತಂದೆಗೆ ಅಗೌರವ ಮಾಡಿದರೆ ನನಗೆ ಅಗೌರವ ಮಾಡಿದಂತೆ ಎಂದು ಶಿವ ತಂದೆಯು ಹೇಳುತ್ತಾರೆ. ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದಾರಲ್ಲವೆ. ನಮಗಂತೂ ಶಿವ ತಂದೆಯೊಂದಿಗೆ ಸಂಬಂಧವಿದೆ ಎಂದಲ್ಲ, ಆಸ್ತಿಯಂತೂ ಇವರ ಮೂಲಕವೇ ಸಿಗುವುದಲ್ಲವೆ. ಇವರಿಗೆ ಹೃದಯದ ಸಮಾಚಾರವನ್ನು ತಿಳಿಸಬೇಕಾಗಿದೆ, ಸಲಹೆ ತೆಗೆದುಕೊಳ್ಳಬೇಕಾಗಿದೆ. ನಾನು ಸಾಕಾರ ತಂದೆಯ ಮೂಲಕ ಸಲಹೆ ಕೊಡುತ್ತೇನೆ ಎಂದು ಶಿವ ತಂದೆಯು ಹೇಳುತ್ತಾರೆ. ಬ್ರಹ್ಮನಿಲ್ಲದೆ ಶಿವ ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವಿರಿ! ಇವರಿಲ್ಲದೆ ಏನೂ ನಡೆಯುವುದಿಲ್ಲ ಆದ್ದರಿಂದ ಮಕ್ಕಳು ಬಹಳ-ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ಉಲ್ಟಾ ಅಹಂಕಾರದಲ್ಲಿ ಬಂದು ತಮಗೆ ನಷ್ಟ ಮಾಡಿಕೊಳ್ಳುತ್ತಾರೆ. ಸಾಕಾರ ತಂದೆಯ ಹೃದಯದಿಂದ ಇಳಿದರೆ ನಿರಾಕಾರ ತಂದೆಯ ಹೃದಯದಿಂದಲೂ ಇಳಿಯುತ್ತಾರೆ. ಇಂತಹವರೂ ಅನೇಕರಿದ್ದಾರೆ - ಎಂದೂ ಮುರುಳಿಯನ್ನು ಕೇಳುವುದಿಲ್ಲ, ಪತ್ರವನ್ನೂ ಬರೆಯುವುದಿಲ್ಲ ಅಂದಮೇಲೆ ತಂದೆಯು ಏನು ತಿಳಿದುಕೊಳ್ಳುವರು? ಗುರಿಯು ಬಹಳ ಉನ್ನತವಾಗಿದೆ ಆದ್ದರಿಂದ ಮಕ್ಕಳು ಸಮಯವನ್ನು ವ್ಯರ್ಥ ಮಾಡಬಾರದು. ಯಾರು ತಮ್ಮನ್ನು ಮಹಾರಥಿ ಎಂದು ತಿಳಿದುಕೊಳ್ಳುವರೋ ಅವರು ಶ್ರೇಷ್ಠ ಕಾರ್ಯದಲ್ಲಿ ಸಹಯೋಗ ನೀಡಬೇಕು ಆಗ ತಂದೆಯು ಖುಷಿಯಾಗಿ ಅವಕಾಶ ನೀಡಲಿ, ಇವರಿಂದ ಅನೇಕರ ಕಲ್ಯಾಣವಾಗುವುದು ಎಂದು. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ. ಪ್ರಜೆಗಳಂತೂ ಆಗುತ್ತಾರೆ. ತಂದೆಗೆ ಸೇವಾಧಾರಿ ಮಕ್ಕಳ ಕಡೆ ದೃಷ್ಟಿಯಿರುತ್ತದೆ. ಈ ಇಂದ್ರಸಭೆಯಲ್ಲಿ ಸೂರ್ಯವಂಶಿ ರಾಜ-ರಾಣಿಯಾಗುವವರು ಬರಬೇಕು ಯಾರು ಸೇವೆ ಮಾಡುವುದಿಲ್ಲವೋ ಅವರು ಯೋಗ್ಯರಲ್ಲ. ಮುಂದೆ ಹೋದಂತೆ ಯಾರು-ಯಾರು ಏನಾಗುವರು ಎಂಬುದೆಲ್ಲವೂ ಅರ್ಥವಾಗುವುದು. ಮಕ್ಕಳಿಗೆ ಬಹಳ-ಬಹಳ ನಶೆಯಿರಬೇಕು - ನಾವು ನಾಳೆ ಸ್ವರ್ಗದಲ್ಲಿ ರಾಜಕುಮಾರರಾಗುತ್ತೇವೆ. ಇಲ್ಲಿ ನೀವು ರಾಜಯೋಗವನ್ನು ಕಲಿಯಲು ಬಂದಿದ್ದೀರಿ, ಚೆನ್ನಾಗಿ ಓದದಿದ್ದರೆ ಕಡಿಮೆ ಪದವಿಯನ್ನು ಪಡೆಯುತ್ತೀರಿ. ತಂದೆಯ ಬಳಿ ಸರ್ವೀಸಿನ ಸಮಾಚಾರವು ಬರಬೇಕಾಗಿದೆ - ಬಾಬಾ, ಇಂದು ನಾನು ಈ ಸೇವೆ ಮಾಡಿದೆನು ಎಂದು. ಪತ್ರವನ್ನೇ ಬರೆಯದಿದ್ದರೆ ತಂದೆಯು ಏನು ತಿಳಿದುಕೊಳ್ಳುವರು? ಸತ್ತು ಹೋದರು ಅರ್ಥಾತ್ ಜ್ಞಾನವನ್ನು ಬಿಟ್ಟು ಹೋದರು ಎಂದು ತಿಳಿದುಕೊಳ್ಳುವರು. ಯಾರು ಸೇವೆಯಲ್ಲಿ ಇರುತ್ತಾರೆ, ತಂದೆಯ ಪರಿಚಯವನ್ನು ನೀಡುತ್ತಾ ಇರುತ್ತಾರೆಯೋ ಅಂತಹ ಮಕ್ಕಳೇ ತಂದೆಗೂ ನೆನಪಿರುತ್ತಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಬ್ರಹ್ಮಾಕುಮಾರ-ಕುಮಾರಿಯರಿಗೆ ಆಸ್ತಿಯನ್ನು ಕೊಡುತ್ತಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಬ್ರಾಹ್ಮಣರ ರಚನೆಯನ್ನು ರಚಿಸುತ್ತಾರೆ, ಈಗ ಮತ್ತೆಲ್ಲಾ ಧರ್ಮಗಳಿವೆ ಬಾಕಿ ದೇವಿ-ದೇವತಾ ಧರ್ಮ ಯಾವುದು ತಳಹದಿಯಾಗಿದೆಯೋ ಅದೇ ಮರೆಯಾಗಿದೆ. ಇದೆಲ್ಲಾ ಆಟವು ಮಾಡಲ್ಪಟ್ಟಿದೆ, ಏಣಿಯ ಚಿತ್ರದಲ್ಲಿ ಎಲ್ಲಾ ಧರ್ಮಗಳಿಲ್ಲ, ಗೋಲದಲ್ಲಿ ಸ್ಪಷ್ಟವಾಗಿದೆ ಆದ್ದರಿಂದ ಗೋಲದ ಚಿತ್ರದಲ್ಲಿ ತಿಳಿಸಬೇಕಾಗಿದೆ. ಇದನ್ನೂ ತಿಳಿಸಬೇಕು- ಸತ್ಯಯುಗದಲ್ಲಿ ದೇವಿ-ದೇವತೆಗಳು ಡಬಲ್ ಕಿರೀಟಧಾರಿಗಳಾಗಿದ್ದರು, ಈ ಸಮಯದಲ್ಲಿ ಪವಿತ್ರತೆಯ ಕಿರೀಟವು ಯಾರಿಗೂ ಇಲ್ಲ. ಪ್ರಕಾಶತೆಯ ಕಿರೀಟವನ್ನು ಕೊಡೋಣವೆಂದರೆ ಅದಕ್ಕೆ ಯಾರೊಬ್ಬರೂ ಯೋಗ್ಯರಿಲ್ಲ. ತನಗೂ (ಬ್ರಹ್ಮಾ) ಕೊಟ್ಟುಕೊಳ್ಳುವಂತಿಲ್ಲ. ನಾನೂ ಸಹ ಅದಕ್ಕಾಗಿಯೇ ಪುರುಷಾರ್ಥ ಮಾಡುತ್ತಿದ್ದೇನೆ, ಶರೀರವಂತೂ ಇಲ್ಲಿ ಪವಿತ್ರವಾಗಿಲ್ಲ. ಆತ್ಮವು ಯೋಗಬಲದಿಂದ ಪವಿತ್ರವಾಗುತ್ತಾ-ಆಗುತ್ತಾ ಅಂತಿಮದಲ್ಲಿ ಪವಿತ್ರವಾಗಿ ಬಿಡುವುದು. ಕಿರೀಟವಂತೂ ಸತ್ಯಯುಗದಲ್ಲಿ ಸಿಗುವುದು, ಸತ್ಯಯುಗದಲ್ಲಿ ಡಬಲ್ ಕಿರೀಟ, ಭಕ್ತಿಮಾರ್ಗದಲ್ಲಿ ಸಿಂಗಲ್ ಕಿರೀಟ, ಇಲ್ಲಂತೂ ಯಾವ ಕಿರೀಟವೂ ಇಲ್ಲ. ಈಗ ನಿಮಗೆ ಕೇವಲ ಪವಿತ್ರತೆಯ ಕಿರೀಟವನ್ನು ಎಲ್ಲಿ ತೋರಿಸುವುದು? ಲೈಟ್ನ್ನು ಎಲ್ಲಿಡುವುದು? ಜ್ಞಾನಿಗಳಂತೂ ಆಗಿದ್ದೀರಿ, ಯಾವಾಗ ಸಂಪೂರ್ಣ ಪವಿತ್ರರಾಗುತ್ತೀರೋ ಆಗ ಪವಿತ್ರತೆಯ ಪ್ರಕಾಶತೆಯಿರಬೇಕು ಅಂದಮೇಲೆ ಸೂಕ್ಷ್ಮವತನದಲ್ಲಿ ಅದನ್ನು ತೋರಿಸುವುದೇ? ಹೇಗೆ ಮಮ್ಮಾರವರು ಸೂಕ್ಷ್ಮವತನದಲ್ಲಿ ಪವಿತ್ರ ಫರಿಶ್ತೆಯಾಗಿದ್ದಾರಲ್ಲವೆ, ಅಲ್ಲಿ ಸಿಂಗಲ್ ಕಿರೀಟವಿದೆ ಆದರೆ ಈಗ ಲೈಟ್ನ ಕಿರೀಟವನ್ನು ಎಲ್ಲಿ ತೋರಿಸುವುದು? ಪವಿತ್ರರಾಗುವುದೇ ಕೊನೆಯಲ್ಲಿ. ಯೋಗ ಮುದ್ರೆಯಲ್ಲಿ ಇದ್ದಾಗ ಪ್ರಕಾಶತೆಯನ್ನು ತೋರಿಸುವುದೇ? ಇಂದು ಪವಿತ್ರತೆಯ ಕಿರೀಟವನ್ನು ಕೊಟ್ಟು ನಾಳೆ ಮತ್ತೆ ಪತಿತರಾಗಿ ಬಿಟ್ಟರೆ ಕಿರೀಟವೇ ಮಾಯವಾಗಿ ಬಿಡುತ್ತದೆ ಆದ್ದರಿಂದ ಅಂತ್ಯದಲ್ಲಿ ಕರ್ಮಾತೀತ ಸ್ಥಿತಿಯನ್ನು ಹೊಂದಿದಾಗಲೇ ಆ ಕಿರೀಟವಿರುತ್ತದೆ ಆದರೆ ನೀವು ಸಂಪೂರ್ಣರಾಗುತ್ತಿದ್ದಂತೆಯೇ ಸೂಕ್ಷ್ಮವತನಕ್ಕೆ ಹೊರಟು ಹೋಗುತ್ತೀರಿ. ಹೇಗೆ ಬುದ್ಧನನ್ನು, ಕ್ರೈಸ್ಟ್ ನ್ನು ತೋರಿಸುತ್ತಾರೆ ಮೊಟ್ಟ ಮೊದಲು ಪವಿತ್ರ ಆತ್ಮವು ಧರ್ಮ ಸ್ಥಾಪನೆ ಮಾಡಲು ಬರುತ್ತದೆ, ಅವರಿಗೆ ಪ್ರಕಾಶತೆಯನ್ನು ತೋರಿಸಬಹುದೇ ಹೊರತು ಕಿರೀಟವಲ್ಲ. ನೀವೂ ಸಹ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪವಿತ್ರರಾಗಿ ಬಿಡುತ್ತೀರಿ. ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ-ತಿರುಗಿಸುತ್ತಾ ನೀವು ರಾಜ್ಯ ಪದವಿಯನ್ನು ಪಡೆಯುತ್ತೀರಿ. ಅಲ್ಲಿ ಮಂತ್ರಿಗಳಿರುವುದಿಲ್ಲ, ಇಲ್ಲಾದರೆ ಅನೇಕರಿಂದ ಸಲಹೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ಎಲ್ಲರೂ ಸತೋಪ್ರಧಾನರಾಗಿರುತ್ತಾರೆ, ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬಾಪ್ದಾದಾರವರಿಂದ ಆಫ್ರೀನ್ ತೆಗೆದುಕೊಳ್ಳಲು ತಂದೆಯ ಶ್ರೇಷ್ಠ ಕಾರ್ಯದಲ್ಲಿ ಸಂಪೂರ್ಣ ಸಹಯೋಗಿಗಳಾಗಬೇಕಾಗಿದೆ. ತಂದೆಗೆ ತಮ್ಮ ಸೇವಾ ಸಮಾಚಾರವನ್ನು ತಿಳಿಸಬೇಕಾಗಿದೆ. |
2. ದೇಹಾಭಿಮಾನದಲ್ಲಿ ಬಂದು ಎಂದೂ ಅಗೌರವ ಮಾಡಬಾರದು. ಉಲ್ಟಾ ನಶೆಯಲ್ಲಿ ಬರಬಾರದು. ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಸರ್ವೀಸಿನ ಯುಕ್ತಿಗಳನ್ನು ರಚಿಸಬೇಕು, ಸೇವಾಧಾರಿಗಳಾಗಬೇಕಾಗಿದೆ. |
ಓಂ ಶಾಂತಿ. ಇದು ಒಬ್ಬ ತಂದೆಯ ಮಹಿಮೆಯಾಗಿದೆ ಆದರೆ ಭಕ್ತಿಮಾರ್ಗದಲ್ಲಿ ಕೇವಲ ಒಬ್ಬರ ಮಹಿಮೆಯನ್ನು ಹಾಡುವುದರಿಂದ ಭಕ್ತಿಯ ಶೋ ಇರುವುದಿಲ್ಲ. ಆದ್ದರಿಂದ ಭಕ್ತಿಯಲ್ಲಿ ಅನೇಕರ ಮಹಿಮೆಯನ್ನು ಹಾಡುತ್ತಾರೆ. ಅಲ್ಲಿ ಬಹಳ ಶಬ್ಧವೂ ಇರುತ್ತದೆ. ಗಂಟೆ, ಜಾಗಟೆ, ಗೀತೆ-ಭಜನೆ, ಅಳುವುದು-ಕರೆಯುವುದು, ಇದೆಲ್ಲವೂ ಭಕ್ತಿಮಾರ್ಗದಲ್ಲಿ ಎಷ್ಟೊಂದು ನಡೆಯುತ್ತದೆ! ಭಿನ್ನ-ಭಿನ್ನ ಪ್ರಕಾರದ ಶಬ್ಧ ಮಂತ್ರ-ತಂತ್ರ, ಸ್ತುತಿ ಇತ್ಯಾದಿಗಳಿರುತ್ತದೆ ಮತ್ತು ಜ್ಞಾನ ಮಾರ್ಗದಲ್ಲಿ ಶಾಂತಿಯಿದೆ. ಕೇವಲ ಸೂಚನೆ ನೀಡಲಾಗುತ್ತದೆ, ಶಬ್ಧವೇನೂ ಇಲ್ಲ. ಭಕ್ತಿಯಲ್ಲಿ ಎಷ್ಟೊಂದು ಆಡಂಬರವಿದೆ! ಎಲ್ಲದಕ್ಕಿಂತ ಹೆಚ್ಚಿನದಾಗಿ ಶಿವನ ಮಂದಿರದಲ್ಲಿಯೇ ಗಂಟೆಗಳು ಮೊಳಗುತ್ತವೆ. ಎಲ್ಲಿ ನೋಡಿದರೂ ಗಂಟೆಗಳೇ ಗಂಟೆಗಳಿರುತ್ತವೆ. ಯಾರನ್ನಾದರೂ ನಿದ್ರೆಯಿಂದ ಜಾಗೃತಗೊಳಿಸಲು ಯಾರೂ ಗಂಟೆಗಳನ್ನು ಹೊಡೆಯುವುದಿಲ್ಲ. ಶಿವ ತಂದೆಯು ಬಂದು ಮನುಷ್ಯರನ್ನು ಕುಂಭಕರ್ಣನ ಅಜ್ಞಾನ ನಿದ್ರೆಯಿಂದ ಏಳಿಸಿದ್ದಾರೆ ಆದರೆ ಗಂಟೆ ಹೊಡೆಯುವುದಿಲ್ಲ. ಸಂಪೂರ್ಣ ಶಾಂತಿಯಿಂದ ಎರಡು ಶಬ್ಧಗಳಲ್ಲಿಯೇ ತಿಳಿಸುತ್ತಾರೆ. ಯಾರು ಬುದ್ಧಿವಂತರಿರುವರೋ ಅವರು ಎರಡು ಶಬ್ಧಗಳಲ್ಲಿಯೇ ಅರ್ಥ ಮಾಡಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿರಿ. ಹೇ ಪತಿತ-ಪಾವನ ಬನ್ನಿ ಎಂದು ನೀವೇ ನನ್ನನ್ನು ಕರೆದಿರಿ. ನಾನೀಗ ಬಂದಿದ್ದೇನೆ, ನಿಮಗೆ ಮಾರ್ಗವನ್ನು ತಿಳಿಸುತ್ತೇನೆ. ನೀವು ಇನ್ನೂ ಪತಿತರಾಗಿ ಈ ಪ್ರಪಂಚದಲ್ಲಿಯೇ ಇರಬೇಕೇ! ನೀವಂತೂ ಪಾವನ ಪ್ರಪಂಚದಲ್ಲಿರಲು ಬಯಸುತ್ತೀರಲ್ಲವೆ! ಪಾವನ ಪ್ರಪಂಚವೆಂದು ಸ್ವರ್ಗಕ್ಕೆ ಹೇಳಲಾಗುತ್ತದೆ. ಪತಿತ-ಪಾವನ ಎಂದು ಹೇಳುತ್ತಾರೆ ಅಂದಮೇಲೆ ತಿಳಿದುಕೊಳ್ಳಬೇಕಾಗಿದೆ - ಪತಿತ-ಪಾವನನು ಬಂದು ಏನು ಮಾಡುವರು? ಅವಶ್ಯವಾಗಿ ನರಕದಿಂದ ಸ್ವರ್ಗದಲ್ಲಿ ಕರೆದುಕೊಂಡು ಹೋಗುವರು. ತಿಳಿದುಕೊಳ್ಳದೆ ಹಾಗೆಯೇ ಕರೆಯುತ್ತಿರುತ್ತಾರೆ. ಭಜನೆ ಮಾಡುತ್ತಿರುತ್ತಾರೆ ಆದರೆ ತಂದೆಯು ಬರುವರೆಂದರೆ ಏನು ಮಾಡುವರು ಎಂಬುದನ್ನು ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಇದು ಮನುಷ್ಯರಿಂದ ದೇವತೆಗಳಾಗುವ ವಿಶ್ವ ವಿದ್ಯಾಲಯವಾಗಿದೆ ಆದ್ದರಿಂದಲೇ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಎಂದು ಹಾಡುತ್ತಾರೆ, ಇದರಲ್ಲಿ ಶಾಸ್ತ್ರ ಇತ್ಯಾದಿಗಳೇನನ್ನೂ ಓದುವಂತಿಲ್ಲ. ಭಕ್ತಿಮಾರ್ಗದಲ್ಲಿ ಬಹಳ ಶಾಸ್ತ್ರ ಇತ್ಯಾದಿಗಳನ್ನು ಓದುತ್ತಾರೆ, ಅನೇಕ ಪ್ರವಚನಗಳಿರುತ್ತವೆ. ಒಂದೊಂದು ತಿಂಗಳವರೆಗೆ ಮಂಟಪವನ್ನು ಮಾಡಿ ಭಜನೆ ಮಾಡುತ್ತಾರೆ. ಇಲ್ಲಿ ಎಷ್ಟೊಂದು ಶಾಂತಿಯಲ್ಲಿ ತಂದೆಯು ತಿಳಿಸುತ್ತಾರೆ. ನೋಡಿ, ತಂದೆಯು ಬಂದು ನಿಮ್ಮನ್ನು ಪಾವನರನ್ನಾಗಿ ಮಾಡಿ ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಾರೆ. ವಿದ್ಯೆಯೂ ಸಹ ಎಷ್ಟು ಸಹಜವಾಗಿದೆ! ನೀವು ಮೊಟ್ಟ ಮೊದಲು ಪಾವನರಾಗಿದ್ದಿರಿ, ಸತ್ಯಯುಗದಲ್ಲಿದ್ದಿರಿ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕಲಿಯುಗದಲ್ಲಿ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ನೀವೀಗ ಸತೋಪ್ರಧಾನರಾಗಬೇಕಾಗಿದೆ ಆದ್ದರಿಂದ ನನ್ನನ್ನು ನೆನಪು ಮಾಡಿರಿ, ಅದು ನಿರಂತರವಾಗಿರಲಿ. ಹೇಗೆ ಕನ್ಯೆಗೆ ನಿಶ್ಚಿತಾರ್ಥವಾಗುತ್ತದೆ ಎಂದರೆ ಜಪಿಸುತ್ತಾಳೆಯೇ? ನೆನಪಿನಲ್ಲಿರುತ್ತಾಳೆಯೇ? ನೀವೇಲ್ಲರೂ ಪತ್ನಿಯರಾಗಿದ್ದೀರಿ, ಶಿವ ತಂದೆಯು ಪತಿಯರಿಗೂ ಪತಿಯಾಗಿದ್ದಾರೆ. ಪರಮಾತ್ಮನ ಜೊತೆ ನಿಮ್ಮದು ನಿಶ್ಚಿತಾರ್ಥವಾಗಿದೆ. ನಿಶ್ಚಿತಾರ್ಥ ಆಗಿ ಬಿಟ್ಟಿತೆಂದರೆ ಬುದ್ಧಿಯಲ್ಲಿ ನೆನಪು ಕುಳಿತು ಬಿಟ್ಟಿತು. ನಮಗೆ ನಿಶ್ಚಿತಾರ್ಥವಾಯಿತೆಂದು ನಿಶ್ಚಯವಾಯಿತು ನಂತರ ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾ ಇರುತ್ತಾರೆ. ನಿಮಗೂ ಸಹ ತಂದೆಯು ತಿಳಿಸುತ್ತಾರೆ - ನಾವು ಒಬ್ಬ ತಂದೆಯ ಮಕ್ಕಳು ಪರಸ್ಪರ ಸಹೋದರ-ಸಹೋದರರಾಗಿದ್ದೇವೆ ಎಂದು ನಿಶ್ಚಯಬುದ್ಧಿಯವರಾಗಿ ಬಿಟ್ಟಿರಿ. ಸಹೋದರರಿಗೆ ಒಬ್ಬ ತಂದೆಯಿಂದ ಆಸ್ತಿಯು ಸಿಗುತ್ತದೆ ಆದ್ದರಿಂದ ತಂದೆಯನ್ನು ಕರೆಯುತ್ತಾರೆ, ಭಲೆ ಮನುಷ್ಯರ ತನುವಿನಲ್ಲಿ ಬಂದು ಸಹೋದರ-ಸಹೋದರಿಯರಾಗುತ್ತೀರಿ ಆದರೆ ಕರೆಯುವುದು ಆತ್ಮವೇ ಅಲ್ಲವೆ! ಸಹೋದರ-ಸಹೋದರರು ಕರೆಯುತ್ತೀರಿ - ಹೇ ಪತಿತ-ಪಾವನ ತಂದೆಯೇ ಬನ್ನಿ ಎಂದು. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಪಾವನರಿಗೆ ಸತೋಪ್ರಧಾನರು, ಪತಿತರಿಗೆ ತಮೋಪ್ರಧಾನರೆಂದು ಹೇಳಲಾಗುತ್ತದೆ. ಈ ಮಾತುಗಳನ್ನು ತಂದೆಯು ಸಂಗಮಯುಗದಲ್ಲಿಯೇ ತಿಳಿಸುತ್ತಾರೆ. ಇದು ಗೀತಾ ಪಾಠಶಾಲೆಯಾಗಿದೆ, ಈ ಪಾಠಶಾಲೆಯಲ್ಲಿ ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ, ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಅಲ್ಲಾದರೆ ಶಿಕ್ಷಕರು ಸನ್ಮುಖದಲ್ಲಿ ಕುಳಿತು ಓದಿಸುತ್ತಾರೆ, ಕಣ್ಣಿಗೆ ಕಾಣಿಸುತ್ತಾರೆ ಆದರೆ ಇವರು ಗುಪ್ತವಾಗಿದ್ದಾರೆ ಅಂದಾಗ ಈ ಶಿಕ್ಷಕರನ್ನೂ ಸಹ ಬುದ್ಧಿಯಿಂದ ತಿಳಿದುಕೊಳ್ಳಬೇಕಾಗುತ್ತದೆ. ಇವರು ನಿರಾಕಾರ ಪತಿತ-ಪಾವನ ತಂದೆಯಾಗಿದ್ದಾರೆ. ಆ ತಂದೆಯೇ ಸ್ಮೃತಿ ತರಿಸುತ್ತಾರೆ - ಕಲ್ಪದ ಮೊದಲೂ ಸಹ ನಾನು ನಿಮಗೆ ರಾಜಯೋಗವನ್ನು ಕಲಿಸಿದ್ದೆನು, ಆದ್ದರಿಂದ ಮನ್ಮನಾಭವ, ಪವಿತ್ರರಾದರೆ ಈ ಲಕ್ಷ್ಮೀ-ನಾರಾಯಣರಂತೆ ಆಗಿ ಬಿಡುತ್ತೀರಿ ಎಂದು ಹೇಳಲಾಗುತ್ತದೆ. ಇದರಲ್ಲಿ ಗಂಟೆ, ಜಾಗಟೆ ಇತ್ಯಾದಿಗಳನ್ನು ಹೊಡೆಯುವ ಅವಶ್ಯಕತೆಯಿಲ್ಲ, ಸ್ವಯಂ ತಂದೆಯೇ ಬಂದು ಜಾಗೃತಗೊಳಿಸುತ್ತಾರೆ. ಮನ್ಮನಾಭವದ ಅರ್ಥವಾಗಿದೆ - ಶಾಂತಿ. ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿರಿ, ಸಾಕು. ನಾವೀಗ ಮನೆಗೆ ಹೋಗಬೇಕಾಗಿದೆ. ನಮ್ಮನ್ನು ದುಃಖದಿಂದ ಬಿಡಿಸಿ ಮುಕ್ತ ಮಾಡಿ ಎಂದು ಎಲ್ಲರೂ ತಂದೆಗೆ ಹೇಳುತ್ತಾರೆ. ಸನ್ಯಾಸಿಗಳು ಕೇವಲ ಬ್ರಹ್ಮನನ್ನು ನೆನಪು ಮಾಡುತ್ತಾರೆ, ಆದರೆ ಬ್ರಹ್ಮತತ್ವವಂತೂ ಮನೆಯಾಗಿದೆ. ಅವರು ಮನೆಯನ್ನು ನೆನಪು ಮಾಡುತ್ತಾರೆ, ಇಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಕೇವಲ ಮನೆಯನ್ನು ನೆನಪು ಮಾಡುತ್ತೀರೆಂದರೆ ಹೇಗೆ ಸನ್ಯಾಸಿಗಳಾಗಿ ಬಿಡುತ್ತೀರಿ. ಬ್ರಹ್ಮತತ್ವವು ಭಗವಂತನಲ್ಲ. |
ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಆಗ ನೀವು ನಿರ್ವಾಣಧಾಮದಲ್ಲಿ ಹೋಗುವಿರಿ ನಂತರ ಅಲ್ಲಿಂದ ಸ್ವರ್ಗದಲ್ಲಿ ಬರುತ್ತೀರಿ. ಇಲ್ಲಿಂದ ನಾನು ನೀವು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ನಿಮಗೆ ತಿಳಿದಿದೆ - ಹಕ್ಕಿಗಳ ಸಮೂಹವು ಎಷ್ಟು ದೊಡ್ಡದಾಗಿರುತ್ತದೆ, ಅವುಗಳಲ್ಲಿ ಪರಸ್ಪರ ಒಗ್ಗಟ್ಟು ಇರುತ್ತದೆ. ಮೊದಲು ಮುಂದಿನ ಹಕ್ಕಿಯು ಕುಳಿತು ಬಿಟ್ಟರೆ ಮತ್ತೆಲ್ಲವೂ ಕುಳಿತು ಬಿಡುತ್ತದೆ, ಜೇನು ನೊಣಗಳಲ್ಲಿಯೂ ಇದೇ ರೀತಿ ಆಗುತ್ತದೆ. ಅವುಗಳಲ್ಲಿ ರಾಣಿಯು ಮನೆಯನ್ನು ಬಿಟ್ಟಿತೆಂದರೆ ಎಲ್ಲವೂ ಅದರ ಹಿಂದೆ ಓಡುತ್ತದೆ. ಆ ರಾಣಿ ನೊಣವು ಹೇಗೆ ಆ ಎಲ್ಲಾ ನೊಣಗಳಿಗೂ ಪ್ರಿಯತಮನಿದ್ದಂತೆ. ಅವುಗಳಲ್ಲಿ ಮತ್ತೆ ಪ್ರಿಯತಮೆಯೂ ಸಹ ತನ್ನ ಜೊತೆಗಾರರ ಮೇಲೆ ರಾಜ್ಯ ಮಾಡುತ್ತದೆ. ಶಾಸ್ತ್ರಗಳಲ್ಲಿಯೂ ಇದೆ, ಆತ್ಮರೆಲ್ಲರೂ ಸೊಳ್ಳೆಗಳ ರೀತಿ ಹಾರಿ ಹೋಗುವರು ಎಂದು. ಅನೇಕ ಆತ್ಮರಿದ್ದಾರೆ, ಆ ನೊಣಗಳು ಪ್ರತೀ ಸೀಜನ್ನಿನಲ್ಲಿ ತಮ್ಮ ರಾಣಿಯ ಹಿಂದೆ ಓಡುತ್ತವೆ, ನೀವಂತೂ ಒಂದೇ ಬಾರಿ ಓಡಬೇಕಾಗಿದೆ. ಈಗ ಎಲ್ಲಾ ಆತ್ಮರು ಮೂಲವತನಕ್ಕೆ ಹೋಗಬೇಕಾಗಿದೆ. ನಿಮ್ಮದು ಶಬ್ಧವೇನೂ ಇಲ್ಲ ಆದ್ದರಿಂದ ತಂದೆಯು ಉದಾಹರಣೆ ಕೊಡುತ್ತಾರೆ. ಸಾಸಿವೆ ಕಾಳಿನ ತರಹ ಎಲ್ಲರ ಶರೀರಗಳು ಸಮಾಪ್ತಿಯಾಗುತ್ತವೆ. ತಂದೆಯು ಬಿಂದು, ಸಾಸಿವೆ ಕಾಳಿನ ಮಾದರಿಯಲ್ಲಿದ್ದಾರೆ. ಗಸಗಸೆಯ ಕಾಳೂ ಸಹ ಬಹಳ ಚಿಕ್ಕದಾಗಿರುತ್ತದೆ. ಪರಮಾತ್ಮನೂ ಬಿಂದುವಾಗಿದ್ದಾರೆ, ಅವರನ್ನು ದಿವ್ಯ ದೃಷ್ಟಿಯ ವಿನಃ ನೋಡಲು ಸಾಧ್ಯವಿಲ್ಲ. ಬಹಳ ಸೂಕ್ಷ್ಮ ನಕ್ಷತ್ರ ಮಾದರಿಯಾಗಿದ್ದಾರೆ. ಗೀತೆಯಲ್ಲಿ ತೋರಿಸಿದ್ದಾರೆ - ಅಖಂಡ ಜ್ಯೋತಿಯ ಸಾಕ್ಷಾತ್ಕಾರವಾಯಿತು ಎಂದು. ಆದ್ದರಿಂದ ಇಲ್ಲಿಯೂ ಸಹ ಅಖಂಡ ಜ್ಯೋತಿಯ ಸಾಕ್ಷಾತ್ಕಾರವಾದಾಗಲೇ ಓಹೋ ಸಾಕ್ಷಾತ್ಕಾರವಾಯಿತೆಂದು ತಿಳಿದುಕೊಳ್ಳುತ್ತಾರೆ. ಒಂದುವೇಳೆ ಬಿಂದುವಿನ ಸಾಕ್ಷಾತ್ಕಾರವಾದರೆ ಇವರು ಪರಮಾತ್ಮನಲ್ಲ ಎಂದು ತಿಳಿದುಕೊಳ್ಳುತ್ತಾರೆ ಏಕೆಂದರೆ ಅರ್ಜುನನಿಗೆ ಬಹಳ ತೇಜೋಮಯ ರೂಪದಲ್ಲಿ ಸಾಕ್ಷಾತ್ಕಾರವಾಯಿತು ಎಂದು ಗೀತೆಯಲ್ಲಿ ಬರೆದಿದ್ದಾರೆ. ಆ ಭಕ್ತಿಯ ಮಾತುಗಳೇ ಬುದ್ಧಿಯಲ್ಲಿ ಕುಳಿತುಕೊಂಡಿವೆ. ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗದಲ್ಲಿ ರಾತ್ರಿ-ಹಗಲಿನ ಅಂತರವಿದೆ. ನೀವು ತಿಳಿದುಕೊಂಡಿದ್ದೀರಿ - ನಾವು 63 ಜನ್ಮಗಳು ಶರೀರದ ಮೂಲಕ ಎಷ್ಟೊಂದು ನರ್ತನ ಮಾಡುತ್ತೇವೆ. 63 ಜನ್ಮಗಳಲ್ಲಿ ಭಕ್ತಿಮಾರ್ಗದ ಕಥೆಯನ್ನು ನೋಡುತ್ತೇವೆ, ಅದರಲ್ಲಿಯೂ ಮೊದಲು ಸತೋಪ್ರಧಾನ ಭಕ್ತಿಯಿದ್ದಾಗ ಒಬ್ಬ ಶಿವ ತಂದೆಯ ಭಕ್ತಿ ಮಾಡುತ್ತಿದ್ದರು. ಈ ಗಂಗಾ ಸ್ನಾನ ಇತ್ಯಾದಿಗಳೆಲ್ಲವೂ ನಂತರದಲ್ಲಿ ಆರಂಭವಾಗುತ್ತದೆ. ಮೊದಲು ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ ವೃದ್ಧಿಯಾಗುತ್ತದೆ. ಇಲ್ಲಂತೂ ಸಂಪೂರ್ಣ ಶಾಂತಿಯ ವಾತಾವರಣವೇ ನೆಲೆಸಿದೆ. ಕವಡೆಯಿಲ್ಲದಿದ್ದರೂ ನೀವು ವಿಶ್ವದ ಮಾಲೀಕರಾಗುತ್ತೀರಿ. ಮಮ್ಮಾರವರು ಕವಡೆಯೂ ಇಲ್ಲದೆ ಬಂದರು ಮತ್ತು ವಿಶ್ವ ಮಹಾರಾಣಿ ಆಗಿ ಬಿಟ್ಟರು ಇವರು ಸಾಧಾರಣವಾಗಿದ್ದರು, ಬಹಳ ಬಡವರ ಮನೆಯವರು ಕವಡೆಯೂ ಖರ್ಚಿಲ್ಲದೆ ನೋಡಿ, ಹೇಗಾಗುತ್ತಾರೆ! ಮಮ್ಮಾರವರು ಬಹಳ ಸರ್ವೀಸ್ ಮಾಡುತ್ತಿದ್ದರು, ಹೋಗಿ ಅನ್ಯರಿಗೂ ತಿಳಿಸುತ್ತಿದ್ದರು - ತಂದೆಯು ಹೇಳುತ್ತಾರೆ, ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಸತೋಪ್ರಧಾನರಾಗಿಬಿಡುತ್ತೀರಿ. ಇದರಲ್ಲಿ ಯಾವುದೇ ಖರ್ಚಿನ ಮಾತಿಲ್ಲ. ಒಂದುವೇಳೆ ಯಾರಾದರೂ ಖರ್ಚು ಮಾಡಿದರೂ ಸಹ ತನಗಾಗಿ ಮಾಡುತ್ತಾರೆ. ಹೇಗೆ ಭೂಮಿಯಲ್ಲಿ ಎರಡು ಹಿಡಿ ಕಾಳನ್ನು ಬಿತ್ತಿದರೆ ಅದರಿಂದ ಎಷ್ಟೊಂದು ಫಲ ಬರುತ್ತದೆ! ಎಷ್ಟು ದೊಡ್ಡ ತೋಟವಾಗುತ್ತದೆ. ಇಲ್ಲಿಯೂ ಸಹ 21 ಜನ್ಮಗಳಿಗಾಗಿ ನಿಮ್ಮದು ಎಷ್ಟೊಂದು ಸಂಪಾದನೆಯಾಗುತ್ತದೆ. ಮನುಷ್ಯರಿಂದ ದೇವತೆಗಳಾಗುವುದು ಎಷ್ಟು ಸಹಜವಾಗಿದೆ! ಒಂದು ಸೆಕೆಂಡಿನ ಮಾತಾಗಿದೆ ಆದರೆ ಎಷ್ಟು ಸಾಧಾರಣವಾಗಿ ಕುಳಿತಿದ್ದೀರಿ. ಒಂದುವೇಳೆ ಯಾರಾದರೂ ಕುಳಿತುಕೊಳ್ಳಲು ಆಗದಿದ್ದರೆ ಅಂತಹವರಿಗೆ ತಂದೆಯು ತಿಳಿಸುತ್ತಾರೆ- ಭಲೆ ಮಲಗಿಕೊಂಡೇ ಮುರುಳಿಯನ್ನು ಕೇಳಿರಿ, ಇದು ಧಾರಣೆಯ ಮಾತಾಗಿದೆ. ಆಂತರ್ಯದಲ್ಲಿ ತಂದೆ ಮತ್ತು ಚಕ್ರವನ್ನು ನೆನಪು ಮಾಡುತ್ತಾ ಇರಿ. ನೆನಪು ಮಾಡುತ್ತಾ-ಮಾಡುತ್ತಲೇ ಶರೀರವನ್ನು ಬಿಡಬೇಕಾಗಿದೆ. ಬಾಕಿ ಬಾಯಲ್ಲಿ ಗಂಗಾಜಲವನ್ನು ಹಾಕುವ ಮಾತಿಲ್ಲ. ಗುರು ಗೋಸಾಯಿಗಳು ಬಹಳ ಹೆದರಿಸುತ್ತಾರೆ - ನೀವು ಈ ನಿಯಮಗಳನ್ನು ಬಿಡುತ್ತೀರಿ, ಭಕ್ತಿ ಮಾಡುವುದಿಲ್ಲವೆಂದರೆ ಈ ರೀತಿಯಾಗುವುದು ಎಂದು. ಉದಾಹರಣೆಗೆ ಯಾರಿಗಾದರೂ ಕಾಲು ಕತ್ತರಿಸಿ ಹೋಗುತ್ತದೆ ಅಥವಾ ನಷ್ಟವಾಯಿತೆಂದರೆ ನೀವು ಭಕ್ತಿಯನ್ನು ಬಿಟ್ಟಿರಿ ಆದ್ದರಿಂದಲೇ ಇಂತಹ ಗತಿಯಾಯಿತು ಎಂದು ಹೇಳಿದ ಕೂಡಲೇ ಹೆದರುತ್ತಾರೆ. ಇಲ್ಲಂತೂ ಏನನ್ನೂ ಮಾಡಬೇಕಾಗಿಲ್ಲ, ತಂದೆಯ ನೆನಪು ತರಿಸಬೇಕಾಗಿದೆ, ಚಕ್ರದ ರಹಸ್ಯವನ್ನು ತಿಳಿಸಬೇಕಾಗಿದೆ. ಈಗ ಕಲಿಯುಗದ ನಂತರ ಸತ್ಯಯುಗವು ಬರಲಿದೆ, ಅವಶ್ಯವಾಗಿ ವಿನಾಶವಾಗಲಿದೆ ಆದ್ದರಿಂದಲೇ ಈ ಮಹಾಭಾರಿ ಯುದ್ಧವು ನಿಂತಿದೆ. ಭಗವಂತನು ಬಂದು ರಾಜಯೋಗವನ್ನು ಕಲಿಸಿ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಇದು ರಾಜಯೋಗವಾಗಿದೆ, ಪ್ರಜಾಯೋಗವಲ್ಲ. ಶುಭವನ್ನೇ ನುಡಿಯಬೇಕು, ಮಕ್ಕಳು ಬಹಳ ಮಧುರರಾಗಬೇಕಾಗಿದೆ. ತಂದೆಯು ಮಧುರವಾಗಿದ್ದಾರಲ್ಲವೆ! ಕ್ರೋಧ ಇತ್ಯಾದಿಗಳೆಲ್ಲವನ್ನೂ ದಾನದಲ್ಲಿ ತೆಗೆದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಪ್ರೀತಿಯ ಸಾಗರನಾಗಿದ್ದೇನೆ. ನೀವೂ ಸಹ ಆಗಿರಿ, ಬಹಳ ಪ್ರೀತಿಯಿಂದ ತಿಳಿಸುತ್ತಾರೆ. ಇಲ್ಲದಿದ್ದರೆ ಮಕ್ಕಳು ಬಹಳ ಏರುಪೇರು ಮಾಡುತ್ತಾರೆ ಏಕೆಂದರೆ ಮಾಯೆಯು ತಲೆ ಕೆಡಿಸಿ ಬಿಡುತ್ತದೆ. ಆದ್ದರಿಂದ ವಿಚಾರವು ಬರುತ್ತದೆ - ಎಂದೂ ಯಾರಿಗೂ ಏನನ್ನೂ ಹೇಳಬಾರದು, ಪ್ರೀತಿಯಿಂದ ತಿಳಿಸಬೇಕು. ರೋಷದಿಂದ ನೋಡುವುದು, ಬಿಸಿಯಾಗುವುದು, ಜೋರಾಗಿ ಮಾತನಾಡುವುದು - ಇದರ ಅವಶ್ಯಕತೆಯಿಲ್ಲ. ಇದರಿಂದ ಕೆಲಸವು ಕೆಡುತ್ತದೆ. ಶಾಂತವಾಗಿರುವುದು ಒಳ್ಳೆಯದಾಗಿದೆ. ವಿಕಾರಗಳ ದಾನವನ್ನು ಕೊಟ್ಟು ಮತ್ತೆ ಪಡೆಯುತ್ತೀರೆಂದರೆ ತಮ್ಮ ಪದವಿಯನ್ನು ಕಳೆದುಕೊಳ್ಳುತ್ತೀರಿ. ತಂದೆಯ ಮಕ್ಕಳಾದಿರಿ ಎಂದರೆ ಪಂಚ ವಿಕಾರಗಳ ದಾನ ಮಾಡಿದಿರಿ. ದಾನ ಕೊಟ್ಟರೆ ಗ್ರಹಣ ಬಿಡುವುದು ಎಂದು ಹೇಳುತ್ತಾರೆ. ತಂದೆಯು ಮಾರ್ಗದರ್ಶಕನಲ್ಲವೆ. ಬ್ರಾಹ್ಮಣರು ಮಾರ್ಗದರ್ಶಕರಾಗಿರುತ್ತಾರೆ, ಶಿವ ತಂದೆಯೂ ಸಹ ಆತ್ಮಿಕ ಮಾರ್ಗದರ್ಶಕನಾಗಿದ್ದಾರೆ. ನೀವೂ ಸಹ ಆಗಿದ್ದೀರಿ. ತಂದೆಯು ಬ್ರಹ್ಮನ ತನುವಿನಲ್ಲಿ ಬರುತ್ತಾರೆ ಅಂದಮೇಲೆ ಇವರೂ ಬ್ರಾಹ್ಮಣರಾದರು. ತಂದೆಯು ಇವರಲ್ಲಿ ಕುಳಿತಿದ್ದಾರೆ, ಅವರ ಮಹಿಮೆಯನ್ನು ಹಾಡುತ್ತಾರೆ - ನೀವು ಮಾತಾಪಿತಾ..... ಮತ್ತ್ಯಾರಿಗೂ ಈ ಮಹಿಮೆಯಿಲ್ಲ. ಅವರ ಕರ್ತವ್ಯವೂ ಅದೇರೀತಿ ಇದೆ. ಇದು ಪಾಠಶಾಲೆಯಾಗಿದೆ, ತಂದೆಯು ಓದಿಸುತ್ತಾರೆ - ಇದು ಮಕ್ಕಳಿಗೆ ನೆನಪಿರಲಿ. ವಿಶ್ವದ ರಾಜ್ಯಭಾಗ್ಯವನ್ನು ಪಡೆಯುವುದೇ ಗುರಿ-ಧ್ಯೇಯವಾಗಿದೆ. ಅಂದಮೇಲೆ ಈ ರೀತಿ ಓದಿಸುವವರನ್ನು ಬಹಳ ಚೆನ್ನಾಗಿ ನೆನಪು ಮಾಡಬೇಕು. ಶಾಲೆಯಿಂದ ವಿದ್ಯಾರ್ಥಿಯು ಒಳ್ಳೆಯ ಅಂಕಗಳಲ್ಲಿ ತೇರ್ಗಡೆಯಾದರು, ಪ್ರತೀ ವರ್ಷವು ಶಿಕ್ಷಕರಿಗೆ ಉಡುಗೊರೆಯನ್ನು ಕಳುಹಿಸುತ್ತಾರೆ, ಈ ಹಬ್ಬ ಇತ್ಯಾದಿಗಳೆಲ್ಲವೂ ಈ ಸಮಯದ್ದಾಗಿದೆ ಆದರೆ ಇದರ ಮಹತ್ವವನ್ನು ಯಾರೂ ತಿಳಿದುಕೊಂಡಿಲ್ಲ. |
ತಂದೆಯು ಜ್ಞಾನಪೂರ್ಣನಾಗಿದ್ದಾರೆ, ಅವರು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುವುದಕ್ಕಾಗಿಯೇ ಬರುತ್ತಾರೆ. ಕಲ್ಲು-ಮುಳ್ಳಿನಲ್ಲಿ ಹೇಗೆ ಬರುತ್ತಾರೆ. ಒಬ್ಬ ವೈದ್ಯರು ಪ್ರತಿಯೊಂದು ವಸ್ತುವಿನಲ್ಲಿ ಆತ್ಮವಿದೆ ಎಂದು ಸಿದ್ಧ ಮಾಡಿದ್ದರು, ಪರಮಾತ್ಮನಿದ್ದಾರೆಂದು ಹೇಳಲಿಲ್ಲ ಆದರೆ ಇಲ್ಲಂತೂ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಆ ವೈದ್ಯರು ಕೇವಲ ಎಲ್ಲರಲ್ಲಿ ಆತ್ಮನಿದೆ ಎಂದು ಹೇಳಿದರು ಆದರೆ ಸನ್ಯಾಸಿಗಳು ಎಲ್ಲರಲ್ಲಿ ಪರಮಾತ್ಮನೇ ಇದ್ದಾರೆಂದು ಹೇಳಿಬಿಟ್ಟರು. ಎಷ್ಟು ರಾತ್ರಿ-ಹಗಲಿನ ಅಂತರವಿದೆ! ಅವರು ಬೇಹದ್ದಿನ ತಂದೆಯಾಗಿದ್ದಾರೆ, ಎಲ್ಲರಿಂದ ಬುದ್ಧಿಯೋಗವನ್ನು ತೆಗೆಸಿ ತಮ್ಮ ಜೊತೆ ಜೋಡಣೆ ಮಾಡಿಸುತ್ತಾರೆ. ಆತ್ಮವು ಸಾಗರದಿಂದ ಹೊರಬಂದ ನೀರಿನ ಗುಳ್ಳೆಯಾಗಿದೆ ಅದು ಮತ್ತೆ ಸಾಗರದಲ್ಲಿಯೇ ಲೀನವಾಗುವುದು ಎಂದು ಅವರು ತಿಳಿದುಕೊಳ್ಳುತ್ತಾರೆ. ಚಿಕ್ಕ ಜ್ಯೋತಿಯು ದೊಡ್ಡ ಜ್ಯೋತಿಯಲ್ಲಿ ಲೀನವಾಗಿ ಬಿಡುವುದು ನಂತರ ಹೊಸ-ಹೊಸದಾಗಿ ಉತ್ಪತ್ತಿಯಾಗುವುದು ಎಂದು ಬ್ರಹ್ಮ ಜ್ಞಾನಿಗಳು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಭಕ್ತಿಯದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ನಾನೂ ಸಹ ಡ್ರಾಮಾನುಸಾರ ನೀವು ಮಕ್ಕಳಿಗೇ ಬಂದು ತಿಳಿಸುತ್ತೇನೆ. 84 ಜನ್ಮಗಳ ಚಕ್ರವನ್ನು ಸುತ್ತುವುದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ಏನೆಲ್ಲವೂ ನಡೆಯುತ್ತದೆಯೋ ಎಲ್ಲವೂ ನಿಗಧಿತವಾಗಿದೆ. ಕೆಲವರು ಗಾಯನವನ್ನೂ ಮಾಡುತ್ತಾರೆ, ಕೆಲವರು ವಿಘ್ನವನ್ನೂ ಹಾಕುತ್ತಾರೆ. |
ನೀವು ಮಕ್ಕಳು ಶಿವ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಅವರು ಬರುವುದೇ ಎಲ್ಲಾ ಆತ್ಮರನ್ನೂ ಕರೆದುಕೊಂಡು ಹೋಗಲು, ಶರೀರದ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ. ಶರೀರ ಸಹಿತವಾಗಿ ಯಾರನ್ನಾದರೂ ಕರೆದುಕೊಂಡು ಹೋಗಲು ಬಂದಿದ್ದೇನೆಯೇ? ನನ್ನನ್ನೇ ಕರೆಯುತ್ತಾರೆ - ಹೇ ಮುಕ್ತಿದಾತ ಬನ್ನಿ, ನಮ್ಮನ್ನು ದುಃಖದಿಂದ ಬಿಡಿಸಿ. ಎಲ್ಲಿಯಾದರೂ ಇಂತಹ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಲ್ಲಿ ಸುಖ-ಶಾಂತಿ-ನೆಮ್ಮದಿಯನ್ನು ಪಡೆಯುವೆವು. ಅಂದಮೇಲೆ ಎಲ್ಲರ ಶರೀರಗಳನ್ನು ಇಲ್ಲಿಯೇ ಬಿಡಿಸಿ ಆತ್ಮರನ್ನು ಕರೆದುಕೊಂಡು ಹೋಗುತ್ತೇನೆ ಅಂದಮೇಲೆ ಕಾಲರ ಕಾಲ ಮಹಾಕಾಲ ಆದರಲ್ಲವೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಎಷ್ಟು ಅದ್ಭುತ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಯಾವುದೇ ಮಾತು ಅರ್ಥವಾಗದಿದ್ದರೆ ತಿಳಿಸಿರಿ - ಈ ಮಾತನ್ನು ತಂದೆಯು ನಮಗೆ ಇನ್ನೂ ತಿಳಿಸಿಲ್ಲ. ಯಾವಾಗ ತಿಳಿಸುವರೋ ಆಗ ನಿಮಗೆ ತಿಳಿಸುತ್ತೇನೆ, ಹೀಗೆ ತಮ್ಮನ್ನು ಬಿಡಿಸಿಕೊಳ್ಳಬೇಕು. ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಜ್ಞಾನ ಸಾಗರನಾಗಿದ್ದಾರೆ, ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸುವವರು ರಚಯಿತ ತಂದೆಯಾಗಿದ್ದಾರೆ. ಅವರೇ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ನೀವು ಲೈಟ್ಹೌಸ್ ಆಗಿದ್ದೀರಿ, ಸ್ವದರ್ಶನ ಚಕ್ರಧಾರಿಗಳೂ ಆಗಿದ್ದೀರಿ ಆದರೆ ಮಾಯೆಯು ಮರೆಸಿ ಬಿಡುತ್ತದೆ ಆಗ ಗುಟುಕರಿಸುತ್ತಾರೆ. ಯಾವುದಾದರೊಂದು ಅಲೆಯು ಬಂದು ಬಿಡುತ್ತದೆ. ಕರ್ಮಗಳ ಲೆಕ್ಕಾಚಾರವಿದೆಯಲ್ಲವೆ. ಎಲ್ಲಿಯವರೆಗೆ ಕರ್ಮಾತೀತ ಸ್ಥಿತಿ ಆಗುವುದಿಲ್ಲವೋ ಅಲ್ಲಿಯವರೆಗೆ ಒಂದಲ್ಲ ಒಂದು ಆಗುತ್ತಲೇ ಇರುತ್ತದೆ. ಲೆಕ್ಕಾಚಾರವು ಸಮಾಪ್ತಿಯಾಯಿತೆಂದರೆ ಶರೀರವನ್ನು ಬಿಟ್ಟು ಬಿಡುತ್ತೀರಿ ಮತ್ತು ಯುದ್ಧವೂ ಆರಂಭವಾಗುವುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ವಿಕಾರಗಳ ದಾನವನ್ನು ಕೊಟ್ಟು ಹಿಂತೆಗೆದುಕೊಳ್ಳಬಾರದು. ಬಾಯಿಂದ ಶುಭವನ್ನು ನುಡಿಯಬೇಕು. ಬಹಳ ಮಧುರರಾಗಬೇಕಾಗಿದೆ. ತಂದೆಯ ಸಮಾನ ಪ್ರೀತಿಯ ಸಾಗರರಾಗಿ ಇರಬೇಕಾಗಿದೆ. |
2. ಶಾಂತಿಯಲ್ಲಿದ್ದು ಕವಡೆಯೂ ಖರ್ಚಿಲ್ಲದೆ ವಿಶ್ವದ ರಾಜ್ಯಭಾಗ್ಯವನ್ನು ಪಡೆಯಬೇಕಾಗಿದೆ. ಎರಡು ಹಿಡಿ ಬೀಜವನ್ನು ಬಿತ್ತಿ 21 ಜನ್ಮಗಳ ಸಂಪಾದನೆ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯ ಅರ್ಥವನ್ನು ತಿಳಿದುಕೊಂಡಿದ್ದೀರಿ. ತಂದೆಯು ಭಕ್ತಿಯೆಂಬ ರಾತ್ರಿಯನ್ನು ವಿನಾಶ ಮಾಡಿ, ದಿನದ ಸ್ಥಾಪನೆ ಮಾಡಲು ಬಂದಿದ್ದಾರೆ ಏಕೆಂದರೆ ಹೇ ಪತಿತ-ಪಾವನ ಬನ್ನಿ ಎಂದು ತಂದೆಯನ್ನೇ ಕರೆಯುತ್ತಾರಲ್ಲವೇ. ಯಾವುದೋ ಸಮಯದಲ್ಲಿ ನಾವು ಪಾವನರಾಗಿದ್ದೆವು, ಈಗ ಪತಿತರಾಗಿದ್ದೇವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಮೊದಲು ಏನಿತ್ತು, ಈಗ ಅದನ್ನೇ ಬೇಕು ಎಂದು ಬೇಡಲಾಗುತ್ತದೆ. ನೀವು ಮಕ್ಕಳಿಗೆ ಗೊತ್ತಿದೆ - ಮೊದಲು ಪವಿತ್ರ ದೇವಿ-ದೇವತೆಗಳ ರಾಜಧಾನಿಯಿತ್ತು, ಜ್ಞಾನ ಜ್ಞಾನೇಶ್ವರಿಯೇ ನಂತರ ರಾಜ ರಾಜೇಶ್ವರಿಯಾಗುವರು. ಹೇಗೆ ಜಗದಂಬೆ ಮತ್ತು ಲಕ್ಷ್ಮಿಯು ಬೇರೆ-ಬೇರೆ ಆಗಿದ್ದಾರೆ. ಲಕ್ಷ್ಮಿಯನ್ನೆಂದಿಗೂ ಜಗದಂಬೆ ಎಂದು ಹೇಳುವುದಿಲ್ಲ, ಲಕ್ಷ್ಮಿಯನ್ನು ಅವರ ಇಬ್ಬರು ಮಕ್ಕಳೇ ಮಾತೇಶ್ವರಿ ಎಂದು ಕರೆಯುತ್ತಾರೆ. ಇಲ್ಲಿ ಜಗದಂಬೆಯನ್ನು ಎಲ್ಲಾ ಭಾರತವಾಸಿಗಳು, ಯಾರೆಲ್ಲಾ ಧಾರ್ಮಿಕ ವ್ಯಕ್ತಿಗಳಿದ್ದಾರೆಯೋ ಎಲ್ಲರೂ ಅಂಬೆ ಎಂದು ಕರೆಯುತ್ತಾರೆ. ದೇವಿ-ದೇವತೆಗಳ ಮಂದಿರದಲ್ಲಿ ಹೋಗಿ ಭಕ್ತಿ ಮಾಡುತ್ತಾರೆ. ಈಗ ನಿಮಗೆ ಅರ್ಥವಾಗಿದೆ - ನಾವು ಬಹಳ ಭಕ್ತಿ ಮಾಡಿದ್ದೇವೆ. ದಾನ-ಪುಣ್ಯ ಇತ್ಯಾದಿಗಳನ್ನು ನೀವು ಎಷ್ಟು ಮಾಡಿದ್ದೀರೋ ಅಷ್ಟು ಮತ್ತ್ಯಾರೂ ಮಾಡಿರುವುದಿಲ್ಲ. ನೀವೇ ಎಲ್ಲರಿಗಿಂತ ಹೆಚ್ಚಿನದಾಗಿ ಭಕ್ತಿ ಮಾಡಿದ್ದೀರಿ. ನೀವೀಗ ಜೀವಿಸಿದ್ದಂತೆಯೇ ತಮ್ಮ ನೆನಪಾರ್ಥವನ್ನು ನೋಡಿದ್ದೀರಿ. ಆದಿ ದೇವ ಮತ್ತು ಆದಿ ದೇವಿಯಿದ್ದಾರೆ, ಅವರಿಗೆ ಜಗದಂಬೆಯೆಂದು ಹೇಳುತ್ತಾರೆ. ಈಗ ನಿಮಗೆ ತಿಳಿದಿದೆ - ಜಗದಂಬೆಯು ಧನವಂತರಾಗುತ್ತಾರೆ, ನೀವು ಅವರ ಮಕ್ಕಳಾಗಿದ್ದೀರಲ್ಲವೆ. ಈಗ ನೀವು ಓದುತ್ತಿದ್ದೀರಿ, ಜಗದಂಬೆಯು ವಿದ್ಯಾದೇವಿಯಾಗಿದ್ದಾರೆ. ಲೌಕಿಕ ಜ್ಞಾನದಿಂದ ಎಂದಿಗೂ ರಾಜ-ರಾಣಿಯಾಗುವುದಿಲ್ಲ. ನಿಮಗೆ ತಿಳಿದಿದೆ - ಆತ್ಮರೆಲ್ಲರೂ ಶಿವ ತಂದೆಯ ಮಕ್ಕಳಾಗಿದ್ದಾರೆ ಮತ್ತು ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಶಿವ ತಂದೆಯು ಇವರ ಮೂಲಕ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಿದ್ದಾರೆ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಗಾಯನವಿದೆ, ಇದನ್ನು ಚೆನ್ನಾಗಿ ತಿಳಿದುಕೊಂಡು ಧಾರಣೆ ಮಾಡಬೇಕಾಗಿದೆ. ಸಿಂಹದ ಹಾಲಿಗೆ ಚಿನ್ನದ ಪಾತ್ರೆಯು ಬೇಕು ಎಂದು ಹೇಳುತ್ತಾರಲ್ಲವೇ. ಈ ಜ್ಞಾನವು ಸರ್ವಶಕ್ತಿವಂತ ಪರಮಪಿತ ಪರಮಾತ್ಮನದಾಗಿದೆ. ಈ ಜ್ಞಾನಕ್ಕಾಗಿ ಬುದ್ಧಿರೂಪಿ ಪಾತ್ರೆಯು ಚಿನ್ನದ ಸಮಾನವಾಗಬೇಕು. ಹೊಸ ಪ್ರಪಂಚದಲ್ಲಿ ಆತ್ಮ ಮತ್ತು ಶರೀರವು ಎರಡೂ ಚಿನ್ನದ ಸಮಾನ ಆಗುತ್ತವೆ. ಈಗ ನಿಮ್ಮ ಆತ್ಮವು ಕಲ್ಲಿನ ಪಾತ್ರೆಯಾಗಿದೆ ಆದ್ದರಿಂದ ಶರೀರವೂ ಸಹ ಅಂತಹುದೇ ಆಗಿದೆ. ಭಾರತದಲ್ಲಿಯೇ ಶ್ಯಾಮ ಮತ್ತು ಸುಂದರ, ಪತಿತ ಮತ್ತು ಪಾವನರೆಂದು ಹೇಳುತ್ತಾರೆ. ನಾವು ಪತಿತರನ್ನು ಪಾವನರನ್ನಾಗಿ ಮಾಡಿ ಎಂದು ಮತ್ತ್ಯಾವುದೇ ಖಂಡಗಳಲ್ಲಿ ಈ ರೀತಿ ಹೇಳುವುದಿಲ್ಲ. ದುಃಖದಿಂದ ಬಿಡಿಸಿ ಶಾಂತಿಯಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ವಿವೇಕವೂ ಹೇಳುತ್ತದೆ - ನಾವು ಭಾರತವಾಸಿಗಳು ಪಾವನರಾಗಿದ್ದೆವು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಭಲೆ ಎಷ್ಟು ದೊಡ್ಡ ವ್ಯಕ್ತಿಗಳೇ ಇರಬಹುದು, ಅವರೂ ಸಹ ಗುರುವಿನ ಕಾಲಿಗೆ ಬೀಳುತ್ತಾರೆ ಏಕೆಂದರೆ ಗುರುವು ಸನ್ಯಾಸತ್ವವನ್ನು ಧಾರಣೆ ಮಾಡಿದ್ದಾರೆ, ಪಂಚ ವಿಕಾರಗಳನ್ನು ಬಿಟ್ಟಿದ್ದಾರೆ ಎಂದು ವಿಕಾರಿಗಳು ನಿರ್ವಿಕಾರಿಗಳಿಗೆ ಮಾನ್ಯತೆಯನ್ನು ಕೊಡುತ್ತಾರೆ. ಪವಿತ್ರತೆಗೆ ಮಾನ್ಯತೆಯಿದೆ. ದ್ವಾಪರದಿಂದ ರಾಜ-ರಾಣಿ ಮತ್ತು ಮಂತ್ರಿಗಳಿರುತ್ತಾರೆ. ಸತ್ಯಯುಗದ ರಾಜ-ರಾಣಿಗೆ ಮಂತ್ರಿಗಳಿರುವುದಿಲ್ಲ. ಯಾವಾಗ ರಾಜ-ರಾಣಿಯು ಪತಿತರಾಗುತ್ತಾರೆಯೋ ಆಗಲೇ ಒಬ್ಬ ಮಂತ್ರಿಯನ್ನು ಇಟ್ಟುಕೊಳ್ಳುತ್ತಾರೆ. ಈಗಂತೂ ಬಹಳ ಪತಿತರಾಗಿರುವ ಕಾರಣ ನೂರಾರು ಮಂತ್ರಿಗಳನ್ನು ಇಟ್ಟುಕೊಳ್ಳುತ್ತಾರೆ - ಇದು ಡ್ರಾಮಾದಲ್ಲಿ ನೊಂದಣಿಯಾಗಿದೆ. ತಂದೆಯು ತಿಳಿಸುತ್ತಾರೆ - ಡ್ರಾಮಾದ ಪೂರ್ವ ನಿಶ್ಚಿತವು ಹೇಗೆ ಮಾಡಲ್ಪಟ್ಟಿದೆ! ಮೊದಲು ಭಾರತವಷ್ಟೇ ಇತ್ತು, ನಂತರ ಅನ್ಯ ಧರ್ಮದವರು ಬಂದರು. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ನೀವು ಜ್ಞಾನ ಜ್ಞಾನೇಶ್ವರಿ ಆಗಿದ್ದೀರಿ, ಜಗದಂಬೆಯು ಬ್ರಹ್ಮನ ಮಗಳು ವಿದ್ಯಾ ಸರಸ್ವತಿಯಾಗಿದ್ದಾರೆ. ಜಗದಂಬೆಯು ಜ್ಞಾನವಂತಳಾಗಿದ್ದಾರೆ, ಅವರೇ ಇನ್ನೊಂದು ಜನ್ಮದಲ್ಲಿ ಧನಲಕ್ಷ್ಮಿಯಾಗುತ್ತಾರೆ. ಈಗ ನಿಮಗೆ ತಂದೆಯು ಜ್ಞಾನವನ್ನು ಕಲಿಸುತ್ತಿದ್ದಾರೆ, ನಿಮಗೆ ತಿಳಿದಿದೆ - ನಾವು ಅಲ್ಲಿ ಧನವಂತರಾಗುತ್ತೇವೆ. ಈ ಲಕ್ಷ್ಮೀ-ನಾರಾಯಣರು ಹೇಗೆ ಧನವಂತರಾದರು ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಬ್ರಹ್ಮಾ-ಸರಸ್ವತಿಯೇ ಲಕ್ಷ್ಮೀ-ನಾರಾಯಣರಾದರು. ಬ್ರಹ್ಮನು ಜಗತ್ಪಿತನಾಗಿದ್ದಾರೆ ಅಂದಮೇಲೆ ಬ್ರಾಹ್ಮಣ-ಬ್ರಾಹ್ಮಿಣಿಯರು ಅನೇಕರಿರುವರು. ನೀವು ಬ್ರಾಹ್ಮಣ-ಬ್ರಾಹ್ಮಿಣಿಯರು ಎಷ್ಟೊಂದು ಮಂದಿ ಇದ್ದೀರಿ, ನಾವು ಈ ಜ್ಞಾನದಿಂದ ಭವಿಷ್ಯದಲ್ಲಿ ಇಂತಹ ಧನವಂತರಾಗುತ್ತೇವೆಂದು ನಿಮಗೆ ತಿಳಿದಿದೆ. ಒಮ್ಮೆಲೆ ಧನ ಲಕ್ಷ್ಮಿ ಆಗುತ್ತೀರಿ, ಇದಕ್ಕಿಂತ ಹೆಚ್ಚಿನ ಐಶ್ವರ್ಯವು ಮತ್ತ್ಯಾರ ಬಳಿಯೂ ಇರುವುದಿಲ್ಲ ಆದ್ದರಿಂದಲೇ ಜ್ಞಾನವು ಆದಾಯದ ಮೂಲವೆಂದು ಹೇಳಲಾಗುತ್ತದೆ. ಜಡ್ಜ್, ಬ್ಯಾರಿಸ್ಟರ್ ಇತ್ಯಾದಿ ಜ್ಞಾನದಿಂದಲೇ ಆಗುತ್ತಾರಲ್ಲವೆ ಅಂದಮೇಲೆ ಇದೂ ಆದಾಯವಾಯಿತಲ್ಲವೆ. ಕೆಲಕೆಲವು ವೈದ್ಯರಿಗೆ ಒಬ್ಬ ರೋಗಿಯಿಂದಲೇ ಲಕ್ಷಾಂತರ ರೂಪಾಯಿಗಳು ಸಿಗುತ್ತವೆ, ಯಾರಾದರೂ ರಾಜ-ರಾಣಿ ಅಥವಾ ರಾಜಕುಮಾರರು ಕಾಯಿಲೆಗೊಳಗಾದರೆ ವೈದ್ಯರು ಆ ರೋಗದಿಂದ ಮುಕ್ತಗೊಳಿಸಿದರೆ ಅವರಿಗೆ ಖುಷಿಯಾಗಿ ದೊಡ್ಡ-ದೊಡ್ಡ ಮನೆಗಳನ್ನು ಕಟ್ಟಿಸಲು ಹಣವನ್ನು ಕೊಟ್ಟು ಬಿಡುತ್ತಾರೆ ಅಂದಮೇಲೆ ಎಷ್ಟೊಂದು ಆದಾಯವಾಯಿತು! ವಿದ್ಯೆಯಿಂದಲೇ ಪದವಿಯನ್ನು ಪಡೆಯುತ್ತಾರಲ್ಲವೇ. ನಿಮ್ಮದು ಇದು ವಿದ್ಯೆಯೂ ಆಗಿದೆ, ವ್ಯಾಪಾರವೂ ಆಗಿದೆ. |
ನೀವು ಮಧುರ ಮಕ್ಕಳು ಈಗ ವ್ಯಾಪಾರ ಮಾಡಲು ಬಂದಿದ್ದೀರಿ. ನಿಮ್ಮ ಬಳಿ ಕೆಲಸಕ್ಕೆ ಬರದಿರುವಂತಹದ್ದನ್ನು ಕೊಟ್ಟು ಲಕ್ಷದಷ್ಟು ಸಂಪಾದಿಸುತ್ತೀರಿ. ತಂದೆಯು ಅವಿನಾಶಿ ಸರ್ಜನ್ ಆಗಿದ್ದಾರೆ. ಸದಾ ಆರೋಗ್ಯವಂತರಾಗಲು ತಂದೆಯು ಯೋಗವನ್ನು ಕಲಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಗ್ಯಾರಂಟಿ ಕೊಡುತ್ತೇನೆ, ನೀವು 21 ಜನ್ಮಗಳಿಗಾಗಿ ಸದಾ ಆರೋಗ್ಯವಂತರಾಗುತ್ತೀರಿ ಅಂದಮೇಲೆ ಇಂತಹ ಸರ್ಜನ್ನ ಶ್ರೀಮತದಂತೆ ಏಕೆ ನಡೆಯಬಾರದು! ತಂದೆಯ ಮತವನ್ನು ಪಾಲಿಸಿರಿ, ನನ್ನನ್ನು ನೆನಪು ಮಾಡಿರಿ. ಹೇಳುತ್ತಾರಲ್ಲವೆ - ಸ್ಮರಣೆ ಮಾಡಿ ಮಾಡಿ ಸುಖ ಪಡೆಯಿರಿ, ಇದರಿಂದ ತನುವಿನ ಕಲಹ-ಕ್ಲೇಷಗಳು ಕಳೆಯುವವು. ಭಕ್ತಿಮಾರ್ಗದಲ್ಲಿ ಯಾವುದೇ ಕಲಹ-ಕ್ಲೇಷಗಳು ಕಳೆಯುವುದಿಲ್ಲ. ಅನೇಕ ಸನ್ಯಾಸಿಗಳೂ ಸಹ ಕಾಯಿಲೆಯಲ್ಲಿ ನರಳುತ್ತಿರುತ್ತಾರೆ. ಹೇಗೆ ಹುಚ್ಛರಾಗಿ ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯ ಶ್ರೀಮತದಂತೆ ನಡೆದರೆ ನಾವು ಸದಾ ಆರೋಗ್ಯವಂತರಾಗುತ್ತೇವೆ, ಅಲ್ಲಿ ಆಯಸ್ಸು 125 ರಿಂದ 150 ವರ್ಷಗಳವರೆಗೆ ಇರುತ್ತದೆ. ದ್ವಾಪರದಲ್ಲಿಯೂ ಆಯಸ್ಸು ಒಮ್ಮೆಲೆ 35 ವರ್ಷಗಳಿಗೆ ಇಳಿದು ಬಿಡುವುದಿಲ್ಲ, ದ್ವಾಪರದ ಆರಂಭದಲ್ಲಿಯೂ ಸಹ 100-125 ವರ್ಷಗಳಿರುತ್ತವೆ ನಂತರ 70-80ಕ್ಕೆ ಇಳಿಯುತ್ತದೆ. ಈಗಂತೂ 35-40 ವರ್ಷಗಳಿಗೆ ಇಳಿದಿದೆ. ಕೆಲವರು ಬಾಲ್ಯದಲ್ಲಿಯೇ ಶರೀರ ಬಿಡುತ್ತಾರೆ ಏಕೆಂದರೆ ಭೋಗಿಗಳಾಗಿದ್ದಾರೆ. ನಿಮಗೆ ತಿಳಿದಿದೆ - ಈಗ ಭೋಗಿಯಿಂದ ಯೋಗಿ ಆಗುತ್ತಿದ್ದೀರಿ. ಅಲ್ಲಿ ಇಷ್ಟೊಂದು ಧೀರ್ಘಾಯಸ್ಸು ಇರುವುದು, ಎಂದೂ ಅಕಾಲಮೃತ್ಯು ಆಗುವುದಿಲ್ಲ. ತಂದೆಯು ಸ್ಮೃತಿ ತರಿಸುತ್ತಾರೆ, ನಿಮಗೆ ಎಷ್ಟೊಂದು ರಾಜ್ಯಭಾಗ್ಯವಿತ್ತು. ಈಗ ರಾವಣನು ಲೂಟಿ ಮಾಡಿದ್ದಾನೆ. ಅಲ್ಲಿ ಈ ಮಂದಿರ ಇತ್ಯಾದಿಗಳಿರುವುದಿಲ್ಲ. ನಿಮ್ಮ ಘೋಷಣಾ ವಾಕ್ಯಗಳೂ ಇವೆ, ಭಾರತದ ಆದಿ ಸನಾತನ ದೇವಿ-ದೇವತಾ ಧರ್ಮಕ್ಕೆ ಜಿಂದಾಬಾದ್, ಉಳಿದೆಲ್ಲವೂ ಮುರ್ದಾಬಾದ್ ಅರ್ಥಾತ್ ಅನೇಕ ಧರ್ಮಗಳ ವಿನಾಶ. ಅಲ್ಲಿ ಕೇವಲ ಒಂದೇ ಭಾರತ ಖಂಡವಿತ್ತು, ಒಂದು ಖಂಡದಲ್ಲಿ ಮನುಷ್ಯರೂ ಸಹ ಕೆಲವರೇ ಇರುವರು. ನೀವು ಬರೆಯಬಹುದು - ಸ್ವಲ್ಪವೇ ಸಮಯದಲ್ಲಿ ಭಾರತದ ಜನ ಸಂಖ್ಯೆಯು 9 ಲಕ್ಷವಾಗುವುದು. ಮತ್ತೆಲ್ಲರೂ ಸಮಾಪ್ತಿಯಾಗುವರು. ಈಗ ಒಂದು ಧರ್ಮದ ಸ್ಥಾಪನೆಯಾಗುತ್ತಿದೆ, ಹೊಸ ದೈವೀ ರಾಜ್ಯದಲ್ಲಿ ಒಂದೇ ಭಾಷೆ, ಒಂದೇ ರೀತಿ-ನೀತಿ ಇರುವುದು. ಇಲ್ಲಿ ಪ್ರತಿಯೊಬ್ಬರ ರೀತಿ-ನೀತಿಯೇ ಬೇರೆಯಾಗಿದೆ, ಅಲ್ಲಿ ಒಂದು ರಾಜ್ಯ, ಒಂದು ಮತವಿತ್ತು - ನೀವು ಇಂತಹ ಘೋಷಣಾ ವಾಕ್ಯಗಳನ್ನು ಪತ್ರಿಕೆಗಳಲ್ಲಿಯೂ ಹಾಕಿಸಬಹುದು. ಕೆಲವರು ಸಲಹೆಯನ್ನು ಕೇಳುತ್ತಾರೆ - ಬಾಬಾ, ಹಣವನ್ನು ಖರ್ಚು ಮಾಡಿ ಪತ್ರಿಕೆಗಳಲ್ಲಿ ಹಾಕಿಸುವುದೇ? ತಂದೆಯು ತಿಳಿಸುತ್ತಾರೆ - ಭಲೆ ಹಾಕಿಸಿರಿ, ಏನು ನಡೆಯುತ್ತಿದೆ ಎಂಬುದು ಮನುಷ್ಯರಿಗೆ ಅರ್ಥವಾಗಲಿ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ಸೂರ್ಯವಂಶಿ ದೇವಿ-ದೇವತೆಗಳದು ಒಂದು ಧರ್ಮ, ಒಂದು ಮತವಿತ್ತು ಎಂಬುದನ್ನೂ ಹೇಳುತ್ತಾರೆ. ಈ ಮಹಾಭಾರತ ಯುದ್ಧದ ನಂತರ ಸ್ವರ್ಗದ ದ್ವಾರಗಳು ತೆರೆದಿತ್ತು. ಪತ್ರಿಕೆಗಳಲ್ಲಿ ಹಾಕಿಸುವಾಗ ಹೆಸರು ಬ್ರಹ್ಮಾಕುಮಾರ-ಕುಮಾರಿ ಎಂದು ಇರಬಾರದು ಆದರೆ ಯಾವಾಗ ಪವಿತ್ರರಾಗಿರುತ್ತೀರಿ ಆಗಲೇ ಬಿ.ಕೆ. ಎಂದು ಕರೆಸಿಕೊಳ್ಳಲಾಗುತ್ತದೆ. ತಂದೆಯನ್ನು ಕರೆದಿದ್ದೀರಿ, ಈಗ ತಂದೆಯು ಬಂದಿದ್ದಾರೆ ಅಂದಮೇಲೆ ತಂದೆಯೊಂದಿಗೆ ಪ್ರತಿಜ್ಞೆ ಮಾಡಿರಿ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಅಲೆದಾಡಿದಿರಿ! ಯಜ್ಞ, ತಪ, ದಾನ-ಪುಣ್ಯಗಳನ್ನು ಮಾಡಿದಿರಿ. ಮೊದಲು ಒಬ್ಬ ಶಿವನ ಭಕ್ತಿ ಮಾಡುತ್ತಿದ್ದಿರಿ ನಂತರ ದೇವತೆಗಳಿಗೆ ಭಕ್ತಿ ಮಾಡಿದಿರಿ. ಈಗ ವ್ಯಭಿಚಾರಿ ಭಕ್ತಿಯಾಗಿ ಬಿಟ್ಟಿದೆ. ತಂದೆಯು ನಿಮ್ಮನ್ನು ಈಗ ಎಲ್ಲಾ ದುಃಖಗಳಿಂದ ಬಿಡುಗಡೆ ಮಾಡುತ್ತಾರೆ. ತಂದೆಯು ನೀವು ಮಕ್ಕಳಿಗೇ ಜ್ಞಾನವನ್ನು ಕೊಟ್ಟು ಎಷ್ಟು ಶ್ರೇಷ್ಠ, ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಿ ನಿಮ್ಮ ಬಳಿ ಎಲ್ಲವೂ ಚಿನ್ನದ್ದೇ ಇರುವುದು. ತಂದೆಯು ನಿಮಗೆ ಶ್ರೀಮತವನ್ನು ಕೊಟ್ಟು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ನೀವು ಶ್ರೀಮತದಂತೆ ಏಕೆ ನಡೆಯುವುದಿಲ್ಲ! ತಂದೆಯು ಯಮ ಪಾಶದಿಂದ ಬಿಡಿಸುತ್ತಾರೆ, ಗರ್ಭಜೈಲಿನ ಶಿಕ್ಷೆಗಳಿಂದ ಬಿಡಿಸುತ್ತಾರೆ. ನೀವು ಸ್ವರ್ಗದಲ್ಲಿ ಗರ್ಭ ಮಹಲಿನಲ್ಲಿ ಇರುತ್ತೀರಿ. ಇಲ್ಲಿ ಜೈಲಾಗಿದೆ ಏಕೆಂದರೆ ಮನುಷ್ಯರು ಪಾಪ ಕರ್ಮ ಮಾಡುತ್ತಾರೆ. ಅಲ್ಲಿ ಪಂಚ ವಿಕಾರಗಳೇ ಇರುವುದಿಲ್ಲ, ಆದರೂ ಸಹ ರಾಜ-ರಾಣಿ ಮತ್ತು ಪ್ರಜೆಗಳ ಪದವಿಯಲ್ಲಿ ಅಂತಹವರಂತೂ ಇರುತ್ತಾರೆಯಲ್ಲವೇ. ಹಣ ಸಂಪಾದಿಸಲು ಮನುಷ್ಯರು ಪರಿಶ್ರಮ ಪಡುತ್ತಾರಲ್ಲವೇ. ಅಲ್ಲಿ ಮಂತ್ರಿಗಳಿರುವುದಿಲ್ಲ ಏಕೆಂದರೆ ನೀವು ಇಲ್ಲಿನ ಪ್ರಾಲಬ್ಧವನ್ನು ಪಡೆಯುತ್ತೀರಿ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಶ್ರೀಮತದಂತೆ ನಡೆಯಿರಿ, ನಾನು ದೂರ ದೇಶದಿಂದ ಪತಿತ ರಾಜ್ಯದಲ್ಲಿ ಪತಿತ ಶರೀರದಲ್ಲಿ ಬಂದಿದ್ದೇನೆ. ಇದು ರಾವಣನ ದೇಶವಾಗಿದೆ, ನಾನು ಬಂದು ನೀವು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತೇನೆ. ಇಂತಹ ತಂದೆಯ ಆಜ್ಞೆಯನ್ನು ಪಾಲಿಸದಿದ್ದರೆ ಅಂತಹವರು ಕುಪುತ್ರರಾದರು. ವಿಕಾರದ ಹಿಂದೆ ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕೆ? ತಂದೆಯು ತಿಳಿಸುತ್ತಾರೆ - ಈ ವಿಕಾರವು ದುಃಖ ಕೊಡುವಂತದ್ದಾಗಿದೆ, ಪತಿತರನ್ನು ಪಾವನ ಮಾಡುವುದು ನನ್ನ ಕರ್ತವ್ಯವಾಗಿದೆ. ತಂದೆಯು ಎಷ್ಟು ಪ್ರೀತಿಯಿಂದ ತಿಳಿಸುತ್ತಾರೆ - ತಿನ್ನಿರಿ, ಕುಡಿಯಿರಿ. ಸುಖಿಯಾಗಿ ಇರಿ ಆದರೆ ನಾವು ಶಿವ ತಂದೆಯ ಬಳಿ ಬಂದಿದ್ದೇವೆ, ಅವರಿಂದ ನಮ್ಮ ಪಾಲನೆಯಾಗುತ್ತಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಒಂದುವೇಳೆ ಮಿತ್ರ ಸಂಬಂಧಿ ಮೊದಲಾದವರ ವಸ್ತುಗಳನ್ನು ಧರಿಸುತ್ತೀರೆಂದರೆ ಅವರೇ ನೆನಪಿಗೆ ಬರುತ್ತಾರೆ, ಪದವಿಯು ಭ್ರಷ್ಟವಾಗುತ್ತದೆ. ಇಲ್ಲಿ ಶಿವ ತಂದೆಯ ಭಂಡಾರದಿಂದ, ಪತಿತ-ಪಾವನ ತಂದೆಯ ಯಜ್ಞದಿಂದ ಪಾಲನೆಯಾಗಬೇಕಾಗಿದೆ, ಪತಿತ ಮನೆಯಿಂದಲ್ಲ. ಯಾರಾದರೂ ಕೊಟ್ಟಿರುವ ವಸ್ತುವಿದ್ದರೆ ಅವರೇ ನೆನಪಿಗೆ ಬರುತ್ತಾರೆ. ಅದಕ್ಕಾಗಿಯೇ ಗಾಯನವಿದೆ - ಯಾರು ಅಂತ್ಯಕಾಲದಲ್ಲಿ ಸ್ತ್ರೀಯನ್ನು ಸ್ಮರಣೆ ಮಾಡಿದರೋ ಅವರಿಗೆ...... ಎಷ್ಟು ಒಳ್ಳೆಯ ಸ್ಥಿತಿಯಿರಬೇಕು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಬುದ್ಧಿಯಿಂದ ತಿಳಿದುಕೊಳ್ಳಿ- ಇವರೆಲ್ಲರೂ ಸಮಾಪ್ತಿಯಾಗಿ ಬಿಟ್ಟಿದ್ದಾರೆ. ನನ್ನವರು ಒಬ್ಬ ತಂದೆಯಾಗಿದ್ದಾರೆ. ಈಗ ತಂದೆಯ ಮಾಲೆಯ ಸ್ಮರಣೆ ಮಾಡುತ್ತೀರಾ? ನಾನು ನೀವು ಮಕ್ಕಳಿಗೆ ಸ್ಮೃತಿ ತರಿಸುತ್ತೇನೆ - ನನ್ನನ್ನು ನೆನಪು ಮಾಡಿರಿ ನಿಮಗೆ ಬಹಳ ಶಕ್ತಿ ಸಿಗುವುದು, ವಿಕರ್ಮಗಳು ವಿನಾಶವಾಗುತ್ತವೆ. ನೀವು ಬಲಶಾಲಿಗಳಾಗಿ ಬಿಡುತ್ತೀರಿ. ಈ ಲಕ್ಷ್ಮೀ-ನಾರಾಯಣರು ಬಲಶಾಲಿಗಳಲ್ಲವೆ, ಯಾರು ಬಲಶಾಲಿಗಳಾಗುವರೋ ಅವರೇ ರಾಜ್ಯವನ್ನು ಪಡೆಯುತ್ತಾರೆ. ಬ್ರಹ್ಮಾ ತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ - ನಾನು 12 ಮಂದಿ ಗುರುಗಳನ್ನು ಮಾಡಿಕೊಂಡೆನು, ಗುರುಗಳು ಹೇಳಿದರು - ಮುಂಜಾನೆ ಎದ್ದು ಸಾವಿರ ಮಾಲೆಗಳನ್ನು ಜಪಿಸಿರಿ. ಮತ್ತ್ಯಾವುದಾದರೂ ಸಮಯವನ್ನು ತಿಳಿಸಿ ಎಂದು ನಾವು (ಬ್ರಹ್ಮಾ) ಹೇಳುತ್ತಿದ್ದೆವು, ಇಡೀ ದಿನ ಉದ್ಯೋಗ-ವ್ಯವಹಾರಗಳಿಂದ ಸುಸ್ತಾಗಿ ಬಿಡುತ್ತೇವೆ ಎಂದು ನಾವು ಹೇಳುತ್ತಿದ್ದೆವು. ಹೇಗೆ ನೀವೂ ಸಹ ಬಾಬಾ, ಅಮೃತವೇಳೆ ಏಳಲು ಆಗುವುದಿಲ್ಲ ಎಂದು ಹೇಳುತ್ತೀರಿ. ನಾವು ಪವಿತ್ರರಾಗಿರಲು ಆಗುವುದಿಲ್ಲ, ನೆನಪಿನಲ್ಲಿರಲು ಆಗುವುದಿಲ್ಲ ಎಂದು ಹೇಳಬಾರದು. ತಂದೆಯು ತಿಳಿಸುತ್ತಾರೆ - ನೆನಪು ಮಾಡದಿದ್ದರೆ ವಿಕರ್ಮಗಳು ಹೇಗೆ ವಿನಾಶವಾಗುತ್ತವೆ! ನೀವು ಅವಶ್ಯವಾಗಿ ತಮೋಪ್ರಧಾನರಿಂದ ಸತೋಪ್ರಧಾನರು ಆಗಬೇಕಾಗಿದೆ. ಇದು ನಿಮ್ಮ ಅಂತಿಮ ಜನ್ಮವಾಗಿದೆ ಆದ್ದರಿಂದ ಅವಶ್ಯವಾಗಿ ಪವಿತ್ರರಾಗಬೇಕು. ತಂದೆಯ ಶ್ರೀಮತದಂತೆ ನಡೆಯದಿದ್ದರೆ ಪದವಿಯನ್ನೇನು ಪಡೆಯುತ್ತೀರಿ! ಅರ್ಧ ಕಲ್ಪದಿಂದ ನನ್ನನ್ನು ಕರೆದಿರಿ, ಈಗ ಹೇಳುತ್ತೇವೆ - ಪಾವನರಾಗಿ ನನ್ನನ್ನು ನೆನಪು ಮಾಡಿರಿ, ಅನ್ಯರಿಗೂ ಈ ಮಾರ್ಗವನ್ನು ತಿಳಿಸುತ್ತಿರಿ. ಸಂದೇಶವನ್ನು ಕೊಡಿ, ಮನ್ಮನಾಭವ. ಮೃತ್ಯುವು ಸನ್ಮುಖದಲ್ಲಿ ನಿಂತಿದೆ, ನಿಮಗೇ ಸಂದೇಶವಾಹಕರೆಂದು ಹೇಳಲಾಗುತ್ತದೆ. ನೀವು ಬ್ರಾಹ್ಮಣರಲ್ಲದೇ ಮತ್ತ್ಯಾರೂ ಸಂದೇಶವಾಹಕರಾಗಲು ಸಾಧ್ಯವಿಲ್ಲ. ಪತಿತ-ಪಾವನ ಶಿವ ತಂದೆಯು ಬರುತ್ತಾರೆ. ಯಾರಲ್ಲಿ ಪ್ರವೇಶ ಮಾಡುತ್ತಾರೆ ಎಂಬುದನ್ನೂ ಬರೆಯಲಾಗಿದೆ - ಬ್ರಹ್ಮನ ಮೂಲಕ ಸ್ಥಾಪನೆ. ಆದರೆ ಇದನ್ನು ತಿಳಿದುಕೊಳ್ಳುತ್ತಾರೆಯೇ! ಸೂಕ್ಷ್ಮವತನದಲ್ಲಿ ಪ್ರಜಾಪಿತ ಬ್ರಹ್ಮನಿರುವರೇ? ಇಲ್ಲಿಯೇ ಪತಿತರಿಂದ ಪಾವನರಾಗುತ್ತಾರೆ, ಶಾಂತಿಯ ಬಲದಿಂದ ಸ್ಥಾಪನೆಯಾಗುತ್ತದೆ. ವಿಜ್ಞಾನದ ಬಲದಿಂದ ವಿನಾಶವಾಗುತ್ತದೆ. ಶಾಂತಿಯು ಹೇಗೆ ಸಿಗುವುದು ಎಂದು ಎಲ್ಲರೂ ಕೇಳುತ್ತಾರೆ. ಆತ್ಮವಂತೂ ಶಾಂತ ಸ್ವರೂಪನಾಗಿದೆ, ಇಲ್ಲಿಗೆ ಪಾತ್ರವನ್ನು ಅಭಿನಯಿಸಲು ಬಂದಿದ್ದಾರೆ. ಇಲ್ಲಿ ಸಂಪೂರ್ಣ ಶಾಂತವಾಗಿರಲು ಹೇಗೆ ಸಾಧ್ಯ! ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿಯೇ ಸಿಗುವುದು, ಇಲ್ಲಂತೂ ದುಃಖವೇ ಸಿಗುತ್ತದೆ. ಸತ್ಯಯುಗದಲ್ಲಿ ಸುಖ-ಶಾಂತಿ ಎರಡೂ ಇರುತ್ತದೆ. |
ಈಗ ನೀವು ಮಕ್ಕಳಿಲ್ಲಿ ಸನ್ಮುಖದಲ್ಲಿ ಕೇಳುತ್ತೀರಿ, ತಂದೆಯು ತಿಳಿಸುತ್ತಾರೆ - ಎಂದಿಗೂ ಪತಿತರು ನನ್ನೊಂದಿಗೆ ಮಿಲನವಾಗುವಂತಿಲ್ಲ. ಈ ರೀತಿಯಿಲ್ಲದಿದ್ದರೆ ಕರೆದುಕೊಂಡು ಬರುವಂತಹ ಬ್ರಾಹ್ಮಣಿಯರ ಮೇಲೆ ಪಾಪವೇರುವುದು. (ಇಂಧ್ರ ಸಭೆಯ ಪರಿಶ್ತೆಯ ಉದಾಹರಣೆ) ವಾಸ್ತವದಲ್ಲಿ ಇಂದ್ರ ಸಭೆಯು ಇದಾಗಿದೆ. ಇವರೆಲ್ಲರೂ ಜ್ಞಾನ ದೇವತೆಗಳಾಗಿದ್ದಾರೆ ಅಂದಮೇಲೆ ಇಲ್ಲಿ ಇನ್ನೂ ಪೆಟ್ಟು ಬೀಳುತ್ತದೆ, ತಂದೆಯು ಕಡ್ಡಾಯವಾಗಿ ನಿಷೇಧಿಸುತ್ತಾರೆ. ಯಾರೂ ಪತಿತರನ್ನು ಕರೆ ತರುವಂತಿಲ್ಲ. ಮೊದಲು ತಂದೆಯು ಯಾವಾಗಲೂ ಕೇಳುತ್ತಿದ್ದರು - ಪ್ರತಿಜ್ಞೆ ಮಾಡಿದ್ದೀರಾ? ಇನ್ನೂ ಪುರುಷಾರ್ಥ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದರು. ಯಾವಾಗ ಪಕ್ಕಾ ನಿಶ್ಚಯವಾಗುವುದೋ ಆಗ ಮಿಲನ ಮಾಡಿರಿ. ಒಂದುವೇಳೆ ಮಿಲನ ಮಾಡಿಕೊಂಡು ಹೋದ ನಂತರ ವಿಕಾರದಲ್ಲಿ ಬೀಳುತ್ತಾರೆಂದರೆ ನೂರು ಪಟ್ಟು ಪಾಪವಾಗುವುದು. ಬಹುಷಃ ಇವರ ಅದೃಷ್ಠದಲ್ಲಿ ಇಲ್ಲವೆಂದು ತಂದೆಯು ತಿಳಿದುಕೊಳ್ಳುವರು. ತಂದೆಯು ಅದೃಷ್ಠವನ್ನು ರೂಪಿಸುವುದಕ್ಕಾಗಿ ಪುರುಷಾರ್ಥ ಮಾಡಿಸುತ್ತಾರೆ. ಇಂತಹ ತಂದೆಯ ಮಾತನ್ನೇ ಪಾಲಿಸದಿದ್ದರೆ ಅಂತಹವರ ಗತಿಯೇನಾಗುವುದು! ತಂದೆಗೆ ದಯೆ ಬರುತ್ತದೆ, ತಂದೆಯು ತಿಳಿಸುತ್ತಾರೆ - ತಮ್ಮನ್ನು ಪರಿವರ್ತನೆ ಮಾಡಿಕೊಳ್ಳುತ್ತಾ ಹೋಗಿರಿ. ಪರಿವರ್ತನೆಯಾಗದೆ ಹಾಗೆಯೇ ನಡೆಯುತ್ತಾ-ನಡೆಯುತ್ತಾ ಶರೀರ ಬಿಡುವಂತಾಗಬಾರದು. ನಾವು ತಂದೆಯನ್ನು ನೆನಪು ಮಾಡಿ ಪಾಪಗಳ ಹೊರೆಯನ್ನು ಇಳಿಸಿಕೊಳ್ಳಬೇಕೆಂಬ ಭಯವಿರಲಿ. ಒಳ್ಳೆಯದು. |
ಎಲ್ಲರ ಸದ್ಗತಿ ಮಾಡುವವರು ಒಬ್ಬರೇ ಶಿವ ತಂದೆಯಾಗಿದ್ದಾರೆ. ಅವರ ಭಾವಚಿತ್ರವನ್ನು ತೆಗೆಯಲು ಸಾಧ್ಯವಿಲ್ಲ, ಅವರನ್ನು ದಿವ್ಯ ದೃಷ್ಟಿಯಿಂದಲೇ ನೋಡಬಹುದಾಗಿದೆ ಆದರೆ ಅವರನ್ನು ಅನುಭವ ಮಾಡಬಹುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಅಂತ್ಯ ಕಾಲದಲ್ಲಿ ಒಬ್ಬ ತಂದೆಯ ನೆನಪೇ ಬರಲಿ - ಅಂತಹ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ. ಮತ್ತ್ಯಾರೂ ನೆನಪಿಗೆ ಬರಬಾರದು. ಬುದ್ಧಿಯಲ್ಲಿರಲಿ - ಇದೆಲ್ಲವೂ ವಿನಾಶವಾಗಲಿದೆ. |
2. ತಮ್ಮನ್ನು ತಾವು ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ಈ ಅಂತಿಮ ಜನ್ಮದಲ್ಲಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ನನ್ನಿಂದ ಯಾವುದೇ ಪಾಪ ಕರ್ಮವಾಗಬಾರದು ಎಂಬ ಭಯವಿರಲಿ. |
ಓಂ ಶಾಂತಿ. ಯಾರೆಲ್ಲರೂ ಮಕ್ಕಳು ಕುಳಿತಿದ್ದೀರಿ, ಅವರು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯ ಅಥವಾ ಸ್ವದರ್ಶನ ಚಕ್ರವನ್ನು ನೆನಪು ಮಾಡುತ್ತೀರಿ. ತಂದೆಯು ಮಕ್ಕಳಿಗೆ ಜ್ಞಾನವನ್ನು ನೀಡಿದ್ದಾರೆ - ಮಕ್ಕಳೇ, ಸ್ವದರ್ಶನ ಚಕ್ರಧಾರಿಗಳಾಗಿರಿ. ಸ್ವದರ್ಶನ ಚಕ್ರಧಾರಿಗಳಾಗುವುದು ನೀವು ಬ್ರಾಹ್ಮಣ ಮಕ್ಕಳ ಉದ್ದೇಶವಾಗಿದೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ, 84 ಜನ್ಮಗಳ ಚಕ್ರವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಬೇರೆಲ್ಲಾ ಮಾತುಗಳನ್ನು ಬುದ್ಧಿಯಿಂದ ತೆಗೆದುಹಾಕಬೇಕಾಗಿದೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ - ಅವಶ್ಯವಾಗಿ ತಂದೆಯು ನಮ್ಮನ್ನು ಸೂರ್ಯವಂಶಿ-ಚಂದ್ರವಂಶಿಯನ್ನಾಗಿ ಮಾಡಿದ್ದರು, ನಂತರ 84 ಜನ್ಮಗಳನ್ನು ತೆಗೆದುಕೊಂಡೆವು. ನಡೆಯುತ್ತಾ-ತಿರುಗಾಡುತ್ತಾ, ಏಳುತ್ತಾ-ಕುಳಿತುಕೊಳ್ಳುತ್ತಾ ಆತ್ಮನಿಗೆ ತಂದೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಿರುತ್ತದೆ. ಈಗ ನಿಮ್ಮನ್ನು ಶಿವ ತಂದೆಯು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿದ್ದಾರೆ. ನೀವು 84 ಜನ್ಮಗಳ ಚಕ್ರದ ಆಟವನ್ನು ಯಾವರೀತಿ ಆಡುತ್ತೀರಿ ಎಂಬುದನ್ನು ತಂದೆಯು ತಿಳಿಸಿದ್ದಾರೆ. ಮೊಟ್ಟ ಮೊದಲು ನಾವು ಬ್ರಾಹ್ಮಣರಾಗಿದ್ದೇವೆ, ನಾವು ಬ್ರಾಹ್ಮಣರನ್ನು ರಚಿಸುವವರು ಬ್ರಹ್ಮನ ಮೂಲಕ ಶಿವ ತಂದೆಯಾಗಿದ್ದಾರೆ. ರಚಯಿತ ಮತ್ತು ರಚನೆಯ ಜ್ಞಾನದಿಂದಲೇ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ಈ ಜ್ಞಾನವನ್ನು ಬುದ್ಧಿಯಲ್ಲಿ ಸ್ಥಿರವಾಗಿ ಇಟ್ಟುಕೊಳ್ಳಬೇಕಾಗಿದೆ. ಮುಂಜಾನೆಯೆದ್ದು ಸ್ವದರ್ಶನ ಚಕ್ರಧಾರಿಗಳಾಗಿ ಕುಳಿತುಕೊಳ್ಳಬೇಕು. ನಾವು ನಮ್ಮ 84 ಜನ್ಮಗಳ ಚಕ್ರವನ್ನು ಅರಿತುಕೊಂಡಿದ್ದೇವೆ. ನಾವೆಲ್ಲಾ ಆತ್ಮರ ರಚಯಿತನು ಒಬ್ಬ ತಂದೆಯೇ ಆಗಿದ್ದಾರೆ, ನಾವೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಎಂದು ತಿಳಿಸಿದ್ದಾರೆ. ನಮ್ಮ ತಂದೆಯು ಆ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಪರಮಧಾಮ ನಿವಾಸಿಯಾಗಿದ್ದಾರೆ. ನಾವೂ ಸಹ ಅಲ್ಲಿಯೇ ಇದ್ದೆವು. ಅವರು ನಮ್ಮ ತಂದೆಯಾಗಿದ್ದಾರೆ, ಬಾಬಾ ಎಂಬ ಶಬ್ಧವು ಬಹಳ ಪ್ರಿಯವಾಗಿದೆ. ಶಿವ ತಂದೆಯ ಮಂದಿರದಲ್ಲಿ ಹೋಗಿ ಎಷ್ಟೊಂದು ಪೂಜೆ ಮಾಡುತ್ತಾರೆ, ಬಹಳ ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಮನುಷ್ಯರಿಂದ ದೇವತೆ, ತುಚ್ಛ ಬುದ್ಧಿಯವರಿಂದ ಸ್ವಚ್ಛ ಬುದ್ಧಿಯವರನ್ನಾಗಿ ಮಾಡುತ್ತೇನೆ. ತುಚ್ಛ ಬುದ್ಧಿ ಅರ್ಥಾತ್ ಶೂದ್ರ ಬುದ್ಧಿಯಿಂದ ಸ್ವಚ್ಛ ಬುದ್ಧಿಯವರನ್ನಾಗಿ ಮಾಡಿದ್ದೆನು ಅರ್ಥಾತ್ ಶ್ರೇಷ್ಠ ಬುದ್ಧಿ ಪುರುಷೋತ್ತಮ ಬುದ್ಧಿಯವರನ್ನಾಗಿ ಮಾಡಿದ್ದೆನು. ಸ್ತ್ರೀ-ಪುರುಷರೆಲ್ಲರೂ ಈ ಲಕ್ಷ್ಮೀ-ನಾರಾಯಣರಿಗೆ ನಮಸ್ಕಾರ ಮಾಡುತ್ತಾರೆ. ಆದರೆ ಇವರು ಯಾರು, ಯಾವಾಗ ಬಂದರು, ಏನು ಮಾಡಿದರು ಎಂದು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಈ ಭಾರತವು ಅವಿನಾಶಿ ಖಂಡವಾಗಿದೆ ಏಕೆಂದರೆ ಅವಿನಾಶಿ ತಂದೆಯಾದ ಪರಮಪಿತ ಪರಮಾತ್ಮನ ಜನ್ಮಭೂಮಿಯಾಗಿದೆ, ಪತಿತ-ಪಾವನ, ಸರ್ವರ ಸದ್ಗತಿದಾತನ ಜನ್ಮಸ್ಥಾನವಾಗಿದೆ ಅಂದಮೇಲೆ ಇದು ಬಹಳ ದೊಡ್ಡ ತೀರ್ಥ ಸ್ಥಾನವಾಯಿತು ಆದರೆ ಇದು ಪರಮಪಿತ ಪರಮಾತ್ಮನ, ಸರ್ವರ ಸದ್ಗತಿದಾತನ ಜನ್ಮಭೂಮಿಯಾಗಿದೆ ಎಂಬ ನಶೆಯು ಯಾರಿಗಾದರೂ ಇದೆಯೇ!! ಪತಿತ-ಪಾವನ ತಂದೆಯ ಜಯಂತಿಯು ಭಾರತದಲ್ಲಿಯೇ ಆಗಿದೆ, ಶಿವ ಜಯಂತಿಯನ್ನೂ ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಶಿವನ ಜನ್ಮವು ಇಲ್ಲಿಯೇ ಆಗುತ್ತದೆ. ಈ ಭಾರತವು ದೊಡ್ಡ ತೀರ್ಥ ಸ್ಥಾನವಾಗಿದೆ. ಆದರೆ ಇದು ನಮ್ಮ ಪರಮಪಿತ ಅಥವಾ ಮಾತಾಪಿತ, ಪತಿತ-ಪಾವನ, ಸರ್ವರ ಸದ್ಗತಿದಾತ ತಂದೆಯ ಜನ್ಮ ಸ್ಥಾನವಾಗಿದೆ ಡ್ರಾಮಾನುಸಾರ ಯಾರಿಗೂ ಗೊತ್ತಿಲ್ಲ. ಆದ್ದರಿಂದಲೇ ಭಾರತ ಭೂಮಿಯನ್ನು ವಂದೇ ಮಾತರಂ ಎಂದು ಹೇಳುತ್ತಾರೆ ಅರ್ಥಾತ್ ಈ ಭೂಮಿಯ ಮೇಲೆ ಈ ಕನ್ಯೆಯರು ಶ್ರೀಮತದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಅವರಿಗೆ ಈ ನಶೆಯಿರಬೇಕು - ಶ್ರೀಮತದಂತೆ ನಾವು ಕಲ್ಪ-ಕಲ್ಪವೂ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ. ಯಾರೆಷ್ಟು ಶ್ರೀಮತದಂತೆ ನಡೆಯುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಭಾರತವಾಸಿಗಳು ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ನಿಮಗೆ ತಿಳಿದಿದೆ - ಈ ಭಾರತವು ತಂದೆಯ ಜನ್ಮಸ್ಥಾನವಾಗಿದೆ, ಆ ತಂದೆಯು ಯಾವ ಧರ್ಮ ಸ್ಥಾಪನೆ ಮಾಡಿದರೋ, ಅದರ ಧರ್ಮ ಗ್ರಂಥವಾಗಿದೆ – ಗೀತೆ (ಭಗವದ್ಗೀತೆ), ಗೀತೆಯನ್ನು ಯಾರು ತಿಳಿಸಿದರು ಎಂಬುದನ್ನೇ ಭಾರತವಾಸಿಗಳು ಮರೆತು ಹೋಗಿದ್ದಾರೆ! ಎಷ್ಟೊಂದು ಅಂತರವಾಗಿ ಬಿಟ್ಟಿದೆ! ನಿರಾಕಾರ ಶಿವನೆಲ್ಲಿ ಮತ್ತು ಶ್ರೀಕೃಷ್ಣನೆಲ್ಲಿ! ನಿಮಗೆ ತಿಳಿದಿದೆ - ಕೃಷ್ಣನ ಆತ್ಮವೇ ಸುಂದರವಾಗಿತ್ತು, ಈಗ ಆ ಆತ್ಮವು ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿ ತಮೋಪ್ರಧಾನವಾಗಿ ಬಿಟ್ಟಿದೆ. ಪುನಃ ಇವರಲ್ಲಿ(ಬ್ರಹ್ಮಾ) ಶಿವ ತಂದೆಯು ಪ್ರವೇಶ ಮಾಡಿ, ಇವರನ್ನೇ ಸುಂದರ ಶ್ರೀಕೃಷ್ಣನನ್ನಾಗಿ ಮಾಡುತ್ತಿದ್ದಾರೆ ಆದ್ದರಿಂದ ಕೃಷ್ಣನಿಗೆ ಶ್ಯಾಮ ಮತ್ತು ಸುಂದರನೆಂದು ಹೇಳುತ್ತಾರೆ. ಕೃಷ್ಣನು ಸತ್ಯಯುಗದ ಮೊದಲನೇ ಸುಂದರ ರಾಜಕುಮಾರನಾಗಿದ್ದನು. ಮರ್ಯಾದಾ ಪುರುಷೋತ್ತಮ, ಅಹಿಂಸಾ ಪರಮೋಧರ್ಮಿ ಎಂದು ಮಹಿಮೆಯಿದೆ. ಭಾರತವಾಸಿಗಳಿಗೆ ರಾಧೆ-ಕೃಷ್ಣ ಮತ್ತು ಲಕ್ಷ್ಮೀ-ನಾರಾಯಣರ ಪರಸ್ಪರ ಸಂಬಂಧವೇನು ಎಂಬುದೂ ಸಹ ತಿಳಿದಿಲ್ಲ. ತಂದೆಯು ಹೇಳುತ್ತಾರೆ - ಇಲ್ಲಿಯವರೆಗೆ ಏನೆಲ್ಲವನ್ನೂ ಓದುತ್ತಾ ಬಂದಿದ್ದೀರೋ ಅದರಲ್ಲಿ ಯಾವುದೇ ಸಾರವಿಲ್ಲ. ಈಗ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ - ತಂದೆಯು 5000 ವರ್ಷಗಳ ನಂತರ ನಮಗೆ ಪುನಃ ರಾಜಯೋಗದ ಶಿಕ್ಷಣ ಕೊಡುತ್ತಿದ್ದಾರೆ. ಕೃಷ್ಣನು ಗೀತೆಯನ್ನು ಹೇಳಿದನೆಂದು ಇಡೀ ಪ್ರಪಂಚವು ಹೇಳುತ್ತದೆ. ತಂದೆಯು ಹೇಳುತ್ತಾರೆ - ಕೃಷ್ಣನಲ್ಲಿ ಸೃಷ್ಠಿಯ ಆದಿ-ಮಧ್ಯ-ಅಂತ್ಯದ ಜ್ಞಾನವೇ ಇಲ್ಲ. ಕೃಷ್ಣನ ಆತ್ಮವೂ ಸಹ ತನ್ನ ಹಿಂದಿನ ಜನ್ಮದಲ್ಲಿ ಈ ಜ್ಞಾನವನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಈ ಕಲ್ಪದಲ್ಲಿ ಈಗ ಪುನಃ ಪ್ರಾಪ್ತಿ ಮಾಡಿಕೊಳ್ಳುತ್ತಿದ್ದಾರೆ, ಇವರಿಗೆ ನಾನು ಬ್ರಹ್ಮಾ ಎಂದು ಹೆಸರನ್ನು ಇಟ್ಟಿದ್ದೇನೆ. ಅವರ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ, ನೀವು ಮರುಜೀವಿಗಳಾಗಿದ್ದೀರಲ್ಲವೆ. ಆದಿಯಲ್ಲಿ ಕೆಲವರಿಗೆ ಅವ್ಯಕ್ತ ಹೆಸರುಗಳನು ಇಡಲಾಗುತ್ತಿತ್ತು, ಈಗ ಇಡುವುದಿಲ್ಲ ಏಕೆಂದರೆ ಅನೇಕರು ವಿಚ್ಛೇದನವನ್ನು ಕೊಟ್ಟು ಬಿಟ್ಟರು, ತಂದೆಯ ಮಕ್ಕಳಾಗಿ ಹೆಸರನ್ನು ಇಟ್ಟ ನಂತರದಲ್ಲಿಯೂ ಜ್ಞಾನವನ್ನು ಬಿಟ್ಟು ಹೋಗುವುದು ಶೋಭಿಸುವುದಿಲ್ಲ ಆದ್ದರಿಂದ ಹೆಸರಿಡುವುದನ್ನು ನಿಲ್ಲಿಸಲಾಯಿತು. ನೀವೀಗ ಬ್ರಾಹ್ಮಣರಾಗಿದ್ದೀರಿ, ಪ್ರಜಾಪಿತ ಬ್ರಹ್ಮನ ಮಕ್ಕಳು ಶಿವ ತಂದೆಯ ಮೊಮ್ಮಕ್ಕಳಾಗಿದ್ದೀರಿ. ತಂದೆಯು ಹೇಳುತ್ತಾರೆ - ನೀವು ಆಸ್ತಿಯನ್ನು ನನ್ನಿಂದಲೇ ತೆಗೆದುಕೊಳ್ಳಬೇಕಾಗಿದೆ ಆದ್ದರಿಂದ ನನ್ನನ್ನೇ ನೆನಪು ಮಾಡಿರಿ. ಈ ಬ್ರಹ್ಮಾರವರದು ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ, ಸೂಕ್ಷ್ಮವತನದಲ್ಲಿ ಯಾವ ಬ್ರಹ್ಮನನ್ನು ತೋರಿಸುತ್ತಾರೆಯೋ ಅವರು ಪಾವನನಾಗಿದ್ದಾರೆ. ವಾಸ್ತವದಲ್ಲಿ ಪ್ರಜಾಪಿತನು ಸೂಕ್ಷ್ಮವತನದಲ್ಲಿರಲು ಸಾಧ್ಯವಿಲ್ಲ ಅಂದರೆ ವ್ಯಕ್ತ ಬ್ರಹ್ಮನೇ ಪುರುಷಾರ್ಥ ಮಾಡಿ ಅವ್ಯಕ್ತ ಬ್ರಹ್ಮನಾಗುತ್ತಾರೆ. ಇವರು ವ್ಯಕ್ತ ಬ್ರಹ್ಮನಾಗಿದ್ದಾರೆ, ಪವಿತ್ರ ಫರಿಶ್ತೆಯಾಗುವುದಕ್ಕಾಗಿ ಇವರು ಮಾನವ ವಂಶ ವೃಕ್ಷದ ತುದಿಯಲ್ಲಿ ನಿಂತಿದ್ದಾರೆ ಮತ್ತು ಕೆಳಗೆ ಮಕ್ಕಳ ಜೊತೆ ತಪಸ್ಸಿನಲ್ಲಿ ಕುಳಿತಿದ್ದಾರೆ ಆದ್ದರಿಂದ ಇವರನ್ನು ಸೂಕ್ಷ್ಮವತನದಲ್ಲಿ ತೋರಿಸಬೇಕಾಗುತ್ತದೆ. ಇಲ್ಲಿಯೂ ಸಹ ಪ್ರಜಾಪಿತನು ಅವಶ್ಯವಾಗಿ ಬೇಕಾಗಿದ್ದಾರೆ. ಸೂಕ್ಷ್ಮವತನದಲ್ಲಿ ಅವ್ಯಕ್ತ ಬ್ರಹ್ಮಾ, ಇಲ್ಲಿ ವ್ಯಕ್ತ ಬ್ರಹ್ಮಾ. ನೀವೂ ಸಹ ಫರಿಶ್ತೆಗಳಾಗಲು ಬಂದಿದ್ದೀರಿ, ಇದರಲ್ಲಿಯೇ ಮನುಷ್ಯರು ತಬ್ಬಿಬ್ಬಾಗುತ್ತಾರೆ ಏಕೆಂದರೆ ಇದು ಸಂಪೂರ್ಣವಾಗಿ ಹೊಸ ಜ್ಞಾನವಾಗಿದೆ. ಯಾವುದೇ ಶಾಸ್ತ್ರಗಳಲ್ಲಿ ಈ ಜ್ಞಾನವಿಲ್ಲ. ಭಗವಂತನು ಒಬ್ಬರೇ ಸರ್ವಶ್ರೇಷ್ಠ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಅವರ ನಿವಾಸ ಸ್ಥಾನವು ಪರಮಧಾಮವಾಗಿದೆ. ಅವರನ್ನು ಎಲ್ಲರೂ ಹೀಗೆ ನೆನಪು ಮಾಡುತ್ತಾರೆ - ನಮ್ಮ ಮೇಲೆ ಮಾಯೆಯ ನೆರಳು ಬಿದ್ದಿದೆ, ಪತಿತರಾಗಿ ಬಿಟ್ಟಿದ್ದೇವೆ ಆದ್ದರಿಂದ ಬನ್ನಿ. ಈ ಮಾತುಗಳು ಹೊಸಬರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನೀವೀಗ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಬಹಳ ಕೆಲವರೇ ರಾಜ್ಯಭಾರ ಮಾಡುತ್ತಿದ್ದರು, ಅಲ್ಲಿ ಅಧರ್ಮದ ಮಾತೇ ಇರುವುದಿಲ್ಲ. ಶಾಸ್ತ್ರಗಳಲ್ಲಿ ಎಷ್ಟೊಂದು ಮಾತುಗಳನ್ನು ಬರೆದು ಬಿಟ್ಟಿದ್ದಾರೆ ಆದರೆ ಅದರಲ್ಲಿ ಯಾವುದೇ ಸಾರವಿಲ್ಲ. ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಈಗ ಅಂತ್ಯದಲ್ಲಿ ಬಂದು ಪತಿತರಾಗಿದ್ದೀರಿ. ನೀವೀಗ ಮೇಲೇರುತ್ತೀರಿ. ಇಳಿಯುವುದರಲ್ಲಿ 84 ಜನ್ಮಗಳು ಹಿಡಿಸಿತು, ಈಗ ಸೆಕೆಂಡಿನಲ್ಲಿ ಮೇಲೇರುತ್ತೀರಿ. |
ನೀವು ಮಕ್ಕಳು ಈಗ ರಾಜಯೋಗವನ್ನು ಕಲಿಯುತ್ತಿದ್ದೀರಿ ನಂತರ ಶಾಂತಿಧಾಮದಲ್ಲಿ ಹೋಗಿ ಸುಖಧಾಮದಲ್ಲಿ ಬರುತ್ತೀರಿ. ಇದು ದುಃಖಧಾಮವಾಗಿದೆ. ಮೊದಲು ನೀವೇ ಬಂದಿದ್ದೀರಿ ಆದ್ದರಿಂದ ತಂದೆಯೂ ಸಹ ಮೊಟ್ಟ ಮೊದಲು ನಿಮ್ಮೊಂದಿಗೆ ಬಂದು ಮಿಲನ ಮಾಡುತ್ತಾರೆ. ಇಲ್ಲಿ ತಂದೆ ಮತ್ತು ಮಕ್ಕಳು, ಆತ್ಮರು ಮತ್ತು ಪರಮಾತ್ಮನ ಮೇಳವಾಗುತ್ತದೆ. ಲೆಕ್ಕವಿದೆಯಲ್ಲವೆ - ನಾವು ತಂದೆಯಿಂದ ವಿದಾಯಿಯನ್ನು ಪಡೆದು 5000 ವರ್ಷಗಳಾಯಿತು, ಮೊಟ್ಟ ಮೊದಲೇ ಸ್ವರ್ಗದಲ್ಲಿ ಪಾತ್ರವನ್ನು ಅಭಿನಯಿಸಿದೆವು. ಅಲ್ಲಿಂದ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಕೆಳಗಿಳಿದು ಬಂದಿದ್ದೇವೆ. ಈಗ ತಂದೆಯ ಬಳಿ ಬಂದು ಬಿಟ್ಟಿದ್ದೇವೆ. ಇನ್ನು ಅಲ್ಪಸ್ವಲ್ಪ ಯಾರೆಲ್ಲರೂ ಪರಮಧಾಮದಲ್ಲಿ ಉಳಿದಿದ್ದಾರೆಯೋ ಅವರೂ ಬಂದು ಬಿಡುತ್ತಾರೆ ಅನಂತರ ವಿದ್ಯಾಭ್ಯಾಸ ಸಮಾಪ್ತಿಯಾಗುವುದು. ಎಲ್ಲರೂ ಇಲ್ಲಿಗೆ ಬರಬೇಕಾಗಿದೆ. ಯಾವಾಗ ಪರಮಧಾಮದಲ್ಲಿ ಖಾಲಿಯಾಗಿ ಬಿಡುವುದೋ ಆಗ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುವರು. ಇದು ತಿಳಿದುಕೊಳ್ಳುವ ಮಾತುಗಳಾಗಿವೆ. ಇಲ್ಲಿ ಓದಬೇಕಾಗಿದೆ. ಶಾಲೆಗೆ ಕೆಲವೊಮ್ಮೆ ಹೋಗುವುದು, ಕೆಲವೊಮ್ಮೆ ಹೋಗದೇ ಇರುವುದು - ಈ ಕಾಯಿದೆ ಇಲ್ಲ. ತಂದೆಯು ವಿದ್ಯಾಭ್ಯಾಸಕ್ಕಾಗಿ ಅನೇಕ ಪ್ರಬಂಧಗಳನ್ನು ನೀಡಿದ್ದಾರೆ. ವಾಸ್ತವದಲ್ಲಿ ಲೌಕಿಕ ವಿದ್ಯೆಯು ಎಂದೂ ಯಾರ ಬಳಿಯೂ ಅಂಚೆಯ ಮೂಲಕ ಹೋಗುವುದಿಲ್ಲ ಆದರೆ ಈ ಬೇಹದ್ದಿನ ತಂದೆಯ ವಿದ್ಯೆಯು (ಮುರುಳಿ) ಅಂಚೆಯ ಮೂಲಕ ಹೋಗುತ್ತದೆ, ಎಷ್ಟೊಂದು ಕಾಗದಗಳು ಮುದ್ರಿತವಾಗುತ್ತದೆ, ಎಲ್ಲೆಲ್ಲಿಗೆ ಹೋಗುತ್ತದೆ! ಏಳು ದಿನಗಳ ಕೋರ್ಸ್ ತೆಗೆದುಕೊಂಡು ನಂತರ ಎಲ್ಲಿ ಬೇಕಾದರೂ ಓದುತ್ತಾ ಇರಿ. ಈ ಸಮಯದಲ್ಲಿ ಎಲ್ಲರೂ ಅರ್ಧಕಲ್ಪದ ರೋಗಿಗಳಾಗಿದ್ದಾರೆ ಆದ್ದರಿಂದ ಏಳು ದಿನಗಳ ಕಾಲ ಭಟ್ಟಿಯಲ್ಲಿ ಇರಬೇಕಾಗುತ್ತದೆ. ಈ ಪಂಚ ವಿಕಾರಗಳ ಕಾಯಿಲೆಯು ಇಡೀ ಪ್ರಪಂಚದಲ್ಲಿ ಹರಡಿದೆ. ಸತ್ಯಯುಗದಲ್ಲಿ ನಿಮ್ಮ ಕಾಯವು ನಿರೋಗಿಯಾಗಿತ್ತು, ಸದಾ ಆರೋಗ್ಯವಂತರು, ಐಶ್ವರ್ಯವಂತರಾಗಿದ್ದಿರಿ, ಈಗಂತೂ ಸ್ಥಿತಿಯೇನಾಗಿ ಬಿಟ್ಟಿದೆ? ಇಡೀ ಆಟವು ಭಾರತದ ಮೇಲಿದೆ. ನಿಮಗೆ ಈಗ 84 ಜನ್ಮಗಳ ಸ್ಮೃತಿ ಬಂದಿದೆ. ಕಲ್ಪ-ಕಲ್ಪವೂ ನೀವೇ ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ ಮತ್ತು ಚಕ್ರವರ್ತಿ ರಾಜರೂ ಆಗುತ್ತೀರಿ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಅದರಲ್ಲಿ ನಂಬರ್ವಾರ್ ಪದವಿಗಳಿರುತ್ತವೆ. ಪ್ರಜೆಗಳೂ ಸಹ ಅನೇಕ ಪ್ರಕಾರದವರು ಬೇಕು. ಹೃದಯದಿಂದ ಕೇಳಿಕೊಳ್ಳಿರಿ - ನಾವು ಎಷ್ಟು ಜನರನ್ನು ನಮ್ಮ ಸಮಾನ ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡುತ್ತೇವೆ? ಯಾರು ಎಷ್ಟು ಜನರನ್ನು ಮಾಡುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುವರು. ತಂದೆಯು ನಿಮಗೆ ಮಾಯೆಯೊಂದಿಗೆ ಯುದ್ಧ ಮಾಡುವುದನ್ನು ಕಲಿಸುತ್ತಾರೆ ಆದ್ದರಿಂದ ಅವರ ಹೆಸರನ್ನು ಯುಧಿಷ್ಠಿರ ಎಂದು ಇಟ್ಟಿದ್ದಾರೆ. ಮಾಯೆಯ ಮೇಲೆ ಜಯ ಗಳಿಸುವ ಯುದ್ಧವನ್ನು ಕಲಿಸುತ್ತಾರೆ. ಯುಧಿಷ್ಠಿರ ಮತ್ತು ಧೃತರಾಷ್ಟ್ರನನ್ನೂ ತೋರಿಸುತ್ತಾರೆ. ಮಾಯಾಜೀತರೇ ಜಗಜ್ಜೀತರೆಂದು ಗಾಯನವಿದೆ, ಎಷ್ಟು ಸಮಯ ನಿಮ್ಮ ಜಯವು ಸ್ಥಿರವಾಗಿತ್ತು ನಂತರ ಎಷ್ಟು ಸಮಯ ಸೋಲನ್ನು ಅನುಭವಿಸುತ್ತೀರಿ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಇದು ಸ್ಥೂಲ ಯುದ್ಧವಲ್ಲ, ದೇವತೆಗಳು ಮತ್ತು ಅಸುರರ ಯುದ್ಧವೂ ಆಗಲಿಲ್ಲ. ಕೌರವರು ಮತ್ತು ಪಾಂಡವರ ಯುದ್ಧವೂ ಇಲ್ಲ. ಸುಳ್ಳು ಮಾಯೆ ಸುಳ್ಳುಕಾಯ... ಈ ಭಾರತವು ಅಸತ್ಯಖಂಡವಾಗಿದೆ. ಸತ್ಯಖಂಡವಿತ್ತು, ಯಾವಾಗಿನಿಂದ ರಾವಣರಾಜ್ಯವು ಆರಂಭವಾಯಿತೋ ಆಗಿನಿಂದ ಅಸತ್ಯಖಂಡವಾಯಿತು. ಈಶ್ವರನಪ್ರತಿ ಎಷ್ಟೊಂದು ಸುಳ್ಳು ಹೇಳುತ್ತಾರೆ, ಎಷ್ಟೊಂದು ಕಳಂಕವನ್ನು ಹಾಕುತ್ತಾರೆ, ಕಳಂಗೀ ಅವತಾರವೆಂದು ಗಾಯನವಿದೆ, ಎಲ್ಲರಿಗಿಂತ ಹೆಚ್ಚು ಕಳಂಕವನ್ನು ತಂದೆಗೆ ಹೊರಿಸುತ್ತಾರೆ. ಅವರಿಗೆ ಮೀನು, ಮೊಸಳೆ ಅವತಾರವೆಂದು, ಕಲ್ಲು-ಮುಳ್ಳಿನಲ್ಲಿ ಈಶ್ವರನಿದ್ದಾನೆಂದು ಎಷ್ಟೊಂದು ನಿಂದನೆ ಮಾಡುತ್ತಾರೆ ಅಂದಮೇಲೆ ಇದು ಸಭ್ಯತೆಯೇ? ಈಗ ನಿಮಗೆ ಪ್ರಕಾಶತೆಯು ಸಿಕ್ಕಿದೆ, ನೀವು ತಿಳಿದುಕೊಂಡಿದ್ದೀರಿ- ತಂದೆಯು ನಮಗೆ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಿದ್ದಾರೆ. ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ, ತಂದೆಯೇ ಸದ್ಗತಿದಾತನಾಗಿದ್ದಾರೆ. ತಂದೆಯ ಜ್ಞಾನದಿಂದ ಎಲ್ಲರ ಸದ್ಗತಿಯಾಗುತ್ತದೆ. ಬಾಕಿ ಯಾರು ಸ್ವಯಂ ದುರ್ಗತಿಯಲ್ಲಿದ್ದಾರೆಯೋ ಅವರು ಅನ್ಯರ ಸದ್ಗತಿಯನ್ನು ಹೇಗೆ ಮಾಡುವರು! ನಾನು ಬಂದು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ, ನೀವೇ ಪವಿತ್ರ ಪೂಜ್ಯರಾಗಿದ್ದಿರಿ ಈಗ ಬಂದು ಪೂಜಾರಿಗಳಾಗಿದ್ದೀರಿ. ಅಪವಿತ್ರ ರಾಜರು ಪವಿತ್ರರಾಜರಿಗೆ ಪೂಜೆ ಮಾಡುತ್ತಾರೆ. ಸತ್ಯಯುಗದಲ್ಲಿ ಡಬಲ್ ಕಿರೀಟಧಾರಿಗಳಿದ್ದರು, ವಿಕಾರಿ ರಾಜರಾದಾಗ ಒಂದು ಕಿರೀಟವಿರುತ್ತದೆ. ಅವರೂ ಸಹ ಮಹಾರಾಜ-ಮಹಾರಾಣಿ. ಆದರೆ ಪವಿತ್ರರಿಗೆ ಅಪವಿತ್ರರು ಹೋಗಿ ತಲೆಬಾಗುತ್ತಾರೆ. ಭಾರತವಾಸಿ ಪವಿತ್ರ ಪ್ರವೃತ್ತಿ ಮಾರ್ಗದವರೇ ನಂತರ ಪತಿತ ಪ್ರವೃತ್ತಿ ಮಾರ್ಗದವರಾಗುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನಿಮ್ಮದು ಈ ಮೃತ್ಯುಲೋಕದಲ್ಲಿ ಅಂತಿಮ ಜನ್ಮವಾಗಿದೆ, ನಾನೀಗ ನಿಮ್ಮನ್ನು ಪುನಃ ಸತ್ಯಯುಗದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಈ ಅಣು ಬಾಂಬುಗಳ ಯುದ್ಧವು 5000 ವರ್ಷಗಳ ಮೊದಲೂ ಸಹ ಆಗಿತ್ತು, ಈ ಹಳೆಯ ಪ್ರಪಂಚವು ಸಮಾಪ್ತಿ ಆಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಬೇಕಾಗಿದೆ. ಕಮಲಪುಷ್ಫ ಸಮಾನರು ನೀವು ಬ್ರಾಹ್ಮಣರಾಗುತ್ತೀರಿ ಆದರೆ ಈ ಅಲಂಕಾರವನ್ನು ವಿಷ್ಣುವಿಗೆ ತೋರಿಸಿದ್ದಾರೆ ಏಕೆಂದರೆ ನೀವು ಬ್ರಾಹ್ಮಣರು ಸದಾ ಏಕರಸವಾಗಿರುವುದಿಲ್ಲ, ಮೊದಲು ಕಮಲಪುಷ್ಫ ಸಮಾನರಾಗುತ್ತೀರಿ, ಎರಡು ವರ್ಷಗಳ ನಂತರ ಮತ್ತೆ ಪತಿತರಾಗಿ ಬಿಡುತ್ತೀರಿ ಆದ್ದರಿಂದ ನಿಮಗೆ ಅಲಂಕಾರಗಳನ್ನು ತೋರಿಸುವುದಿಲ್ಲ. |
ನಿಮ್ಮದು ಇದು ಸರ್ವೋತ್ತಮ ಕುಲವಾಗಿದೆ. ನೀವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಶೂದ್ರರಿಂದ ಕೂಡಲೇ ದೇವತೆಗಳಾಗಿ ಬಿಡುವುದಿಲ್ಲ. ಬ್ರಾಹ್ಮಣರು ಅವಶ್ಯವಾಗಿ ಬೇಕು. ಈಗ ಬ್ರಾಹ್ಮಣರಿಗೆ ತಂದೆಯು ಓದಿಸುತ್ತಿದ್ದಾರೆ ಅಂದಮೇಲೆ ಇಂತಹ ತಂದೆಗೆ ವಿಚ್ಛೇದನ ಕೊಡುವುದೇ! ತಂದೆಯು ತಿಳಿಸುತ್ತಾರೆ - ಆಶ್ಚರ್ಯವೆನಿಸುವಂತೆ ನನ್ನವರಾಗುತ್ತಾರೆ, ಜ್ಞಾನವನ್ನು ಕೇಳುತ್ತಾರೆ ಆದರೂ ಮತ್ತೆ ಹೋಗಿ ಮಾಯೆಗೆ ವಶರಾಗುತ್ತಾರೆ. ವಿರೋಧಿಗಳಾಗಿ ನನ್ನ ನಿಂದನೆ ಮಾಡಿಸುತ್ತಾರೆ, ಅಂತಹ ಸದ್ಗುರುವಿನ ನಿಂದಕರಿಗೆ ಸ್ವರ್ಗದಲ್ಲಿ ನೆಲೆಯಿಲ್ಲವೆಂದು ಹೇಳಲಾಗುತ್ತದೆ. ಇದನ್ನು ಸಾಮಾನ್ಯ ಗುರುಗಳಿಗೆ ಹೇಳಿ ಬಿಟ್ಟಿದ್ದಾರೆ ಆದರೆ ಅವರಂತೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಅವರು ಸದ್ಗತಿದಾತರಲ್ಲ. ಎಲ್ಲಾ ಆತ್ಮರ ತಂದೆ, ಶಿಕ್ಷಕ, ಸದ್ಗುರು ಒಬ್ಬರೇ ನಿರಾಕಾರ ತಂದೆಯಾಗಿದ್ದಾರೆ, ಅವರೇ ಎಲ್ಲರ ಉದ್ಧಾರ ಮಾಡಲು ಬಂದಿದ್ದಾರೆ. ಮುಂದೆ ಹೋದಂತೆ ತಿಳಿದುಕೊಳ್ಳುವರು ನಂತರ ಟೂಲೇಟ್ ಆಗಿ ಬಿಡುವುದು. ಅವರು ಮತ್ತೆ ತಮ್ಮ ಧರ್ಮದಲ್ಲಿಯೇ ಹೊರಟು ಹೋಗುವರು. ಶ್ರೇಷ್ಠಾತಿ ಶ್ರೇಷ್ಠವಾದುದು ದೇವಿ-ದೇವತಾ ಧರ್ಮವಾಗಿದೆ, ಅದಕ್ಕಿಂತಲೂ ಶ್ರೇಷ್ಠರು ನೀವು ಬ್ರಾಹ್ಮಣರಾಗಿದ್ದೀರಿ. ತಂದೆಯ ಜೊತೆಯಲ್ಲಿ ಕುಳಿತಿದ್ದೀರಿ. ನಿಮಗೆ ಓದಿಸುವವರು ವಿಚಿತ್ರ ಮತ್ತು ವಿದೇಹಿಯಾಗಿದ್ದಾರೆ. ಆ ತಂದೆಯು ತಿಳಿಸುತ್ತಾರೆ - ನನಗೆ ದೇಹವಿಲ್ಲ, ನನಗೆ ಶಿವನೆಂದು ಹೇಳುತ್ತೀರಿ, ನನ್ನ ಹೆಸರು ಬದಲಾಗುವುದಿಲ್ಲ. ಮತ್ತೆಲ್ಲರ ಶರೀರಗಳ ಹೆಸರು ಬದಲಾಗುತ್ತದೆ. ನಾನು ಪರಮ ಆತ್ಮನಾಗಿದ್ದೇನೆ, ನನ್ನ ಜನನ ಪತ್ರವನ್ನು ಯಾರೂ ಬರೆಯಲು ಸಾಧ್ಯವಿಲ್ಲ. ಯಾವಾಗ ಬೇಹದ್ದಿನ ರಾತ್ರಿಯಾಗುವುದೋ ಆಗ ನಾನು ದಿನವನ್ನಾಗಿ ಮಾಡಲು ಬರುತ್ತೇನೆ. ಈಗ ಸಂಗಮವಾಗಿದೆ, ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಂಡು ನಂತರ ಧಾರಣೆ ಮಾಡಿಕೊಳ್ಳಬೇಕು, ಸ್ಮೃತಿಯಲ್ಲಿ ತರಬೇಕಾಗಿದೆ. ಇಲ್ಲಿ ನೀವು ಮಕ್ಕಳು ಬರುತ್ತೀರೆಂದರೆ ಬಿಡುವು ಸಿಗುತ್ತದೆ. ಇಲ್ಲಿ ಬಹಳ ಚೆನ್ನಾಗಿ ವಿಚಾರ ಸಾಗರ ಮಂಥನ ಮಾಡಬಹುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಗೃಹಸ್ಥ ವ್ಯವಹಾರದಲ್ಲಿದ್ದರೂ ತಮ್ಮ ಸರ್ವೋತ್ತಮ ಕುಲದ ಸ್ಮೃತಿಯಿಂದ ಕಮಲ ಪುಷ್ಫ ಸಮಾನ ಪವಿತ್ರರಾಗಬೇಕಾಗಿದೆ. ಎಂದಿಗೂ ಸದ್ಗುರುವಿನ ನಿಂದನೆ ಮಾಡಿಸಬಾರದು. |
2. ಶ್ರೀಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯನ್ನು ಮಾಡಬೇಕಾಗಿದೆ. ಸ್ವದರ್ಶನ ಚಕ್ರಧಾರಿಗಳಾಗಬೇಕು ಮತ್ತು ಅನ್ಯರನ್ನೂ ಮಾಡಬೇಕಾಗಿದೆ. ಸಮಯ ಸಿಕ್ಕಿದರೆ ಅವಶ್ಯವಾಗಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. |
ವರದಾತನನ್ನು ರಾಜಿ ಮಾಡಿಕೊಳ್ಳುವ ಸಹಜ ವಿಧಿ |
ಇಂದು ವರದಾತ ತಂದೆಯು ತನ್ನ ವರದಾನೀ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ವರದಾತನ ಮಕ್ಕಳು ಎಲ್ಲರೂ ವರದಾನಿಗಳಾಗಿದ್ದಾರೆ ಆದರೆ ನಂಬರ್ವಾರ್ ಇದ್ದಾರೆ. ವರದಾತನು ಎಲ್ಲಾ ಮಕ್ಕಳಿಗೂ ವರದಾನಗಳ ಜೋಳಿಗೆಯನ್ನು ತುಂಬಿಸಿ ಕೊಡುತ್ತಾರೆ ಆದರೂ ನಂಬರ್ವಾರ್ ಏಕೆ? ವರದಾತನು ಕೊಡುವುದರಲ್ಲಿ ನಂಬರ್ವಾರ್ ಕೊಡುವುದಿಲ್ಲ ಏಕೆಂದರೆ ವರದಾತನ ಬಳಿ ಅಕೂಟ ವರದಾನಗಳಿವೆ. ತೆರೆದ ಭಂಡಾರವಿದೆ, ಯಾರೆಷ್ಟು ಬೇಕಾದರೂ ತೆಗೆದುಕೊಳ್ಳಬಹುದು. ಇಂತಹ ತೆರೆದ ಭಂಡಾರದಿಂದ ಕೆಲವು ಮಕ್ಕಳು ಸರ್ವ ವರದಾನಗಳಿಂದ ಸಂಪನ್ನರಿರುತ್ತಾರೆ, ಇನ್ನೂ ಕೆಲವರು ಯಥಾಶಕ್ತಿ ಸಂಪನ್ನರಾಗುತ್ತಾರೆ. ಎಲ್ಲರಿಗಿಂತ ಹೆಚ್ಚು ಜೋಳಿಗೆಯನ್ನು ತುಂಬಿಸಿ ಕೊಡುವುದರಲ್ಲಿ ಭೋಲಾನಾಥನು ‘ವರದಾತನ ರೂಪವೇ ಆಗಿದ್ದಾರೆ’ ಮೊದಲು ತಿಳಿಸಿದ್ದೇವೆ - ದಾತ, ಭಾಗ್ಯವಿದಾತ ಮತ್ತು ವರದಾತ. ಮೂರರಲ್ಲಿ ವರದಾತನ ರೂಪದಿಂದ ಭೋಲಾ ಭಗವಂತನೆಂದು ಹೇಳಲಾಗುತ್ತದೆ ಏಕೆಂದರೆ ವರದಾತನು ಬಹು ಬೇಗನೆ ರಾಜಿಯಾಗಿ ಬಿಡುತ್ತಾರೆ. ಕೇವಲ ರಾಜಿ ಮಾಡಿಕೊಳ್ಳುವ ವಿಧಿಯನ್ನು ಅರಿತುಕೊಳ್ಳುತ್ತೀರೆಂದರೆ ಸಿದ್ಧಿ ಅರ್ಥಾತ್ ವರದಾನಗಳ ಜೋಳಿಗೆಯಿಂದ ಸಂಪನ್ನರಾಗಿರುವುದು ಬಹಳ ಸಹಜವಾಗುತ್ತದೆ. ವರದಾತನನ್ನು ರಾಜಿ ಮಾಡಿಕೊಳ್ಳುವ ಎಲ್ಲದಕ್ಕಿಂತ ಸಹಜ ವಿಧಿಯನ್ನು ತಿಳಿದುಕೊಂಡಿದ್ದೀರಾ? ಅವರಿಗೆ ಯಾರು ಎಲ್ಲರಿಗಿಂತ ಪ್ರಿಯರೆನಿಸುತ್ತಾರೆ? ಅವರಿಗೆ ‘ಒಂದು’ (ಏಕ) ಶಬ್ಧವು ಎಲ್ಲದಕ್ಕಿಂತ ಪ್ರಿಯವೆನಿಸುತ್ತದೆ. ಯಾವ ಮಕ್ಕಳು ಇಲ್ಲಿಯವರೆಗೂ ಏಕವ್ರತದಿಂದ ಇದ್ದಾರೆಯೋ ಅವರೇ ವರದಾತನಿಗೆ ಅತೀ ಪ್ರಿಯರಾಗಿದ್ದಾರೆ. |
ಏಕವ್ರತ ಅರ್ಥಾತ್ ಕೇವಲ ಪತಿವ್ರತೆಯಲ್ಲ, ಎಲ್ಲಾ ಸಂಬಂಧದಿಂದಲೂ ಏಕವ್ರತಸ್ಥರು. ಸಂಕಲ್ಪ, ಸ್ವಪ್ನದಲ್ಲಿಯೂ ಇನ್ನೊಂದು ವ್ರತವಿರಬಾರದು. ಮೊದಲನೆ ವ್ರತ ಅರ್ಥಾತ್ ಸದಾ ವೃತ್ತಿಯಲ್ಲಿ ಒಬ್ಬರೇ ಇರಬೇಕು. ಎರಡನೆಯದು - ಸದಾ ನನ್ನವರು ಒಬ್ಬ ತಂದೆಯ ವಿನಃ ಬೇರೆ ಯಾರೂ ಇಲ್ಲ. ಈ ರೀತಿ ಪಕ್ಕಾ ವ್ರತವನ್ನು ತೆಗೆದುಕೊಂಡಿರಬೇಕು. ಕೆಲವು ಮಕ್ಕಳು ಏಕವ್ರತರಾಗುವುದರಲ್ಲಿ ಬಹಳ ಚತುರತೆ ಮಾಡುತ್ತಾರೆ. ಯಾವ ಚತುರತೆ? ತಂದೆಗೇ ಮಧುರ ಮಾತುಗಳನ್ನು ತಿಳಿಸುತ್ತಾರೆ - ತಂದೆ, ಶಿಕ್ಷಕ, ಸದ್ಗುರುವಿನ ಮುಖ್ಯ ಸಂಬಂಧವಂತೂ ತಮ್ಮ ಜೊತೆಯಿದೆ. ಆದರೆ ಸಾಕಾರ ಶರೀರಧಾರಿಗಳಾಗಿರುವ ಕಾರಣ, ಸಾಕಾರಿ ಪ್ರಪಂಚದಲ್ಲಿ ನಡೆಯುವ ಕಾರಣ, ಯಾರಾದರೂ ಸಾಕಾರಿ ಸಖ ಅಥವಾ ಸಖಿಯು ಸಹಯೋಗಕ್ಕಾಗಿ, ಸೇವೆಗಾಗಿ, ಸಲಹೆಗಾಗಿ ಸಾಕಾರದಲ್ಲಿ ಅವಶ್ಯವಾಗಿ ಬೇಕು ಏಕೆಂದರೆ ತಂದೆಯಂತೂ ನಿರಾಕಾರ ಮತ್ತು ಆಕಾರಿಯಾಗಿದ್ದಾರೆ ಆದ್ದರಿಂದ ಸೇವೆಯ ಜೊತೆಗಾರರು ಬೇಕಾಗಿದೆ. ಮತ್ತೇನೂ ಇಲ್ಲ ಏಕೆಂದರೆ ನಿರಾಕಾರಿ, ಆಕಾರಿ ಮಿಲನವನ್ನು ಆಚರಿಸಲು ಸ್ವಯಂ ಕೂಡಾ ನಿರಾಕಾರಿ ಆಕಾರಿ ಸ್ಥಿತಿಯಲ್ಲಿ ಸ್ಥಿತರಾಗಬೇಕಾಗುತ್ತದೆ. ಅದು ಕೆಲಕೆಲವೊಮ್ಮೆ ಕಷ್ಟವೆನಿಸುತ್ತದೆ ಆದ್ದರಿಂದ ಸಮಯಕ್ಕಾಗಿ ಸಾಕಾರದಲ್ಲಿ ಯಾರಾದರೂ ಜೊತೆಗಾರರು ಬೇಕೆಂದು ಹೇಳುತ್ತಾರೆ. ಯಾವಾಗ ಬುದ್ಧಿಯಲ್ಲಿ ಬಹಳಷ್ಟು ಮಾತುಗಳು ತುಂಬುತ್ತವೆಯೋ ಆಗ ಏನು ಮಾಡುವುದು? ಕೇಳುವುದಕ್ಕಾಗಿ ಯಾರಾದರೂ ಬೇಕಲ್ಲವೆ! ಆದರೆ ಏಕವ್ರತಸ್ಥ ಆತ್ಮನ ಬಳಿ ಬೇರೆಯವರಿಗೆ ತಿಳಿಸಬೇಕಾಗುವಂತಹ ಹೊರೆಯ ಮಾತುಗಳ ಸಂಗ್ರಹಣೆ ಇರುವುದಿಲ್ಲ. ಒಂದು ಕಡೆ ಬಾಬಾ, ತಾವೇ ನನ್ನ ಜೊತೆಯಿರುತ್ತೀರಿ, ಸದಾ ತಂದೆಯು ನನ್ನ ಜೊತೆಯಿದ್ದಾರೆಂದು ತಂದೆಯನ್ನು ಬಹಳ ಖುಷಿ ಪಡಿಸುತ್ತೀರಿ. ಜೊತೆಗಾರನಿದ್ದಾರೆ, ಅಂದಮೇಲೆ ಆ ಸಮಯದಲ್ಲಿ ಅವರು ಎಲ್ಲಿ ಹೊರಟು ಹೋಗುತ್ತಾರೆ? ತಂದೆಯು ಹೊರಟುಹೋಗುತ್ತಾರೆಯೋ ಅಥವಾ ತಾವೇ ಅವರನ್ನು ಬಿಟ್ಟುಹೋಗುತ್ತೀರೋ? ಸದಾ ಜೊತೆಯಿದ್ದಾರೆಯೋ ಅಥವಾ 6-8 ಗಂಟೆಗಳ ಕಾಲ ಜೊತೆ ಇರುತ್ತಾರೆಯೋ? ಪ್ರತಿಜ್ಞೆ ಏನಾಗಿದೆ? ಜೊತೆಯಲ್ಲಿಯೇ ಇರುತ್ತೇವೆ, ಜೊತೆಯಲ್ಲಿಯೇ ನಡೆಯುತ್ತೇವೆ, ಜೊತೆಯಲ್ಲಿಯೇ ಇದ್ದೇವೆ - ಈ ಪ್ರತಿಜ್ಞೆಯು ಪಕ್ಕಾ ಇದೆಯಲ್ಲವೆ. ಬ್ರಹ್ಮಾ ತಂದೆಯೊಂದಿಗೆ ಇಷ್ಟೊಂದು ಪ್ರತಿಜ್ಞೆಯಿದೆ - ಇಡೀ ಚಕ್ರದಲ್ಲಿ ಜೊತೆಯಲ್ಲಿಯೇ ಪಾತ್ರವನ್ನು ಅಭಿನಯಿಸುತ್ತೇವೆ! ಎಂದು. ಯಾವಾಗ ಇಷ್ಟು ಶಕ್ತಿಶಾಲಿ ಪ್ರತಿಜ್ಞೆಯಿದೆ ಆದರೂ ಸಹ ಸಾಕಾರದಲ್ಲಿ ಯಾರಾದರೂ ವಿಶೇಷ ಜೊತೆಗಾರರು ಬೇಕೇ? |
ಬಾಪ್ದಾದಾರವರ ಬಳಿ ಎಲ್ಲರ ಜನ್ಮಪತ್ರಿಯಿರುತ್ತದೆ. ತಂದೆಯ ಮುಂದೆ ಎಲ್ಲರೂ ಹೇಳುತ್ತಾರೆ - ತಾವೇ ಜೊತೆಗಾರರಾಗಿದ್ದೀರಿ ಎಂದು. ಯಾವಾಗ ಪರಿಸ್ಥಿತಿ ಬರುತ್ತದೆಯೋ ಆಗ ತಂದೆಗೆ ಹೇಳತೊಡಗುತ್ತಾರೆ - ಇದಂತೂ ಆಗಿಯೇ ಆಗುತ್ತದೆ, ಇಷ್ಟಾದರೂ ಬೇಕೇ ಬೇಕು.....ಇದಕ್ಕೆ ಏಕವ್ರತವೆಂದು ಹೇಳುವರೇ? ಜೊತೆಗಾರರೆಂದರೆ ಎಲ್ಲರೂ ಜೊತೆಗಾರರೆ, ಯಾರೂ ವಿಶೇಷವಲ್ಲ. ಇದಕ್ಕೇ ಏಕವ್ರತವೆಂದು ಹೇಳುತ್ತಾರೆ. ಆದ್ದರಿಂದ ವರದಾತನಿಗೆ ಇಂತಹ ಏಕವ್ರತಸ್ಥ ಮಕ್ಕಳು ಅತಿ ಪ್ರಿಯರಾಗಿದ್ದಾರೆ. ಇಂತಹ ಮಕ್ಕಳ ಪ್ರತೀ ಸಮಯದ ಜವಾಬ್ದಾರಿಗಳನ್ನು ವರದಾತ ತಂದೆಯು ಸ್ವಯಂ ತಾವೇ ನಿಭಾಯಿಸುತ್ತಾರೆ. ಇಂತಹ ವರದಾನೀ ಆತ್ಮಗಳು ಪ್ರತೀ ಸಮಯ, ಪ್ರತಿ ಪರಿಸ್ಥಿತಿಯಲ್ಲಿ ವರದಾನಗಳ ಪ್ರಾಪ್ತಿ ಸಂಪನ್ನ ಸ್ಥಿತಿಯ ಅನುಭವ ಮಾಡುತ್ತಾರೆ ಮತ್ತು ಸದಾ ಸಹಜವಾಗಿ ಪಾರು ಮಾಡುತ್ತಾರೆ, ಪಾಸ್-ವಿತ್-ಆನರ್ ಆಗುತ್ತಾರೆ. ಯಾವಾಗ ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ಸ್ವಯಂ ವರದಾತನೇ ಸದಾ ಸಿದ್ಧನಾಗಿದ್ದಾರೆ ಅಂದಮೇಲೆ ನೀವೇಕೆ ಜವಾಬ್ದಾರಿಯ ಹೊರೆಯನ್ನು ಹೊತ್ತುಕೊಳ್ಳುತ್ತೀರಿ? ಇದು ನನ್ನ ಜವಾಬ್ದಾರಿಯೆಂದು ತಿಳಿದುಕೊಳ್ಳುತ್ತೀರಿ ಆಗಲೇ ಪರಿಸ್ಥಿತಿಗಳಲ್ಲಿ ಪಾಸ್-ವಿತ್-ಆನರ್ ಆಗುವುದಿಲ್ಲ, ಬಹಳ ಕಷ್ಟದಿಂದ ತೇರ್ಗಡೆಯಾಗುತ್ತೀರಿ. ಯಾರ ಜೊತೆಯ ಸಹಯೋಗವಾದರೂ ಬೇಕಾಗುತ್ತದೆ. ಒಂದುವೇಳೆ ಬ್ಯಾಟರಿಯು ಪೂರ್ಣಚಾರ್ಜ್ ಆಗಿಲ್ಲವೆಂದರೆ ಕಾರನ್ನು ತಳ್ಳಿ ನಡೆಸುತ್ತಾರೆ. ಅಂದಾಗ ಒಬ್ಬರೇ ತಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ ಆದ್ದರಿಂದ ನಂಬರ್ವಾರ್ ಆಗಿ ಬಿಡುತ್ತಾರೆ ಅಂದಾಗ ವರದಾತನಿಗೆ ಒಂದು ಶಬ್ಧವು ಪ್ರಿಯವಾಗಿದೆ - ‘ಏಕವ್ರತ’. ಒಂದು ಬಲ ಒಂದು ಭರವಸೆ. ಒಬ್ಬರ ಭರವಸೆ, ಇನ್ನೊಬ್ಬರ ಬಲ ಎಂದು ಹೇಳುವುದಿಲ್ಲ. ಒಂದು ಬಲ, ಒಂದು ಭರವಸೆ ಎಂದೇ ಗಾಯನವಿದೆ. ಜೊತೆ ಜೊತೆಗೆ ಏಕಮತ. ಮನಮತ, ಪರಮತವಲ್ಲ ಮತ್ತು ಏಕರಸ ಅರ್ಥಾತ್ ಮತ್ತ್ಯಾವುದೇ ವ್ಯಕ್ತಿಯೂ ಇಲ್ಲ, ವೈಭವದ ರಸವೂ ಇಲ್ಲ ಹಾಗೆಯೇ ಜೊತೆಗೆ ಏಕತೆ, ಏಕಾಂತ ಪ್ರಿಯ ಅಂದಾಗ ಒಂದು ಶಬ್ಧವೇ ಪ್ರಿಯವಾಯಿತಲ್ಲವೆ. ಇದೇ ರೀತಿ ಇನ್ನೂ ಪಟ್ಟಿ ತೆಗೆಯಿರಿ. |
ತಂದೆಯು ಇಷ್ಟೊಂದು ಭೋಲಾ ಆಗಿದ್ದಾರೆ ಅವರು ಒಂದರಲ್ಲಿಯೇ ರಾಜಿಯಾಗಿ ಬಿಡುತ್ತಾರೆ. ಇಂತಹ ಭೋಲಾನಾಥ ವರದಾತನನ್ನು ರಾಜಿ ಮಾಡಿಕೊಳ್ಳುವುದು ಕಷ್ಟವೇ? ಕೇವಲ ಒಂದರ ಪಾಠವನ್ನು ಪಕ್ಕಾ ಮಾಡಿಕೊಳ್ಳಿ, 5-7 ರಲ್ಲಿ ಹೋಗುವ ಅವಶ್ಯಕತೆಯಿಲ್ಲ. ವರದಾತನನ್ನು ರಾಜಿ ಮಾಡಿಕೊಳ್ಳುವವರು ಅಮೃತವೇಳೆಯಿಂದ ರಾತ್ರಿಯವರೆಗೆ ಪ್ರತೀ ದಿನಚರಿಯ ಕರ್ಮದಲ್ಲಿ ವರದಾನಗಳಿಂದಲೇ ಬೆಳೆಯುತ್ತಾರೆ, ನಡೆಯುತ್ತಾರೆ ಮತ್ತು ಹಾರುತ್ತಾರೆ. ಇಂತಹ ವರದಾನಿ ಆತ್ಮರಿಗೆ ಮನಸ್ಸಿನಿಂದಾಗಲಿ, ಸಂಬಂಧ-ಸಂಪರ್ಕದಿಂದಾಗಲಿ ಎಂದೂ ಯಾವುದೇ ಕಷ್ಟದ ಅನುಭವವಾಗುವುದಿಲ್ಲ. ಪ್ರತೀ ಸಂಕಲ್ಪ, ಪ್ರತೀ ಸೆಕೆಂಡ್, ಪ್ರತೀ ಕರ್ಮ, ಪ್ರತೀ ಹೆಜ್ಜೆಯಲ್ಲಿ ವರದಾತ ಮತ್ತು ವರದಾನವು ಸದಾ ಸಮೀಪ, ಸನ್ಮುಖ ಸಾಕಾರ ರೂಪದಲ್ಲಿ ಅನುಭವವಾಗುವುದು. ಅವರು ಹೇಗೆ ಸಾಕಾರದಲ್ಲಿ ಮಾತನಾಡುತ್ತಿದ್ದಾರೆ ಎನ್ನುವಂತೆ ಅನುಭವವಾಗುತ್ತದೆ, ಅವರಿಗೆ ಪರಿಶ್ರಮದ ಅನುಭವವಾಗುವುದಿಲ್ಲ. ಇಂತಹ ವರದಾನಿ ಆತ್ಮನಿಗೆ ಈ ವಿಶೇಷ ವರದಾನವು ಪ್ರಾಪ್ತಿಯಾಗುತ್ತದೆ ಅವರು ನಿರಾಕಾರ, ಆಕಾರನನ್ನು ಹೇಗೆ ಸಾಕಾರದ ಅನುಭವ ಮಾಡಬಲ್ಲರು! ಇಂತಹ ವರದಾನಗಳ ಮುಂದೆ ಹಜೂರ್ ತಂದೆಯು ಸದಾ ಹಾಜರಾಗುತ್ತಾರೆ, ಕೇಳಿದಿರಾ? ವರದಾತನನ್ನು ರಾಜಿ ಮಾಡಿಕೊಳ್ಳುವ ವಿಧಿ ಮತ್ತು ಸಿದ್ಧಿ - ಸೆಕೆಂಡಿನಲ್ಲಿ ಮಾಡಬಲ್ಲಿರಾ? ಕೇವಲ ಒಂದರಲ್ಲಿ. ಇದಕ್ಕೆ ಬದಲಾಗಿ ಎರಡನ್ನು ಸೇರಿಸಬೇಡಿ, ಒಂದರ ಪಾಠದ ವಿಸ್ತಾರವನ್ನು ಮತ್ತೆಂದಾದರೂ ತಿಳಿಸುತ್ತೇವೆ. |
ಬಾಪ್ದಾದಾರವರ ಬಳಿ ಎಲ್ಲಾ ಮಕ್ಕಳ ಚರಿತ್ರೆಯೂ ಇದೆ ಮತ್ತು ಚತುರತೆಯೂ ಇದೆ. ಫಲಿತಾಂಶವೆಲ್ಲವೂ ಬಾಪ್ದಾದಾರವರ ಬಳಿಯಿದೆಯಲ್ಲವೆ. ಚತುರತೆಯ ಮಾತೂ ಸಹ ಬಹಳಷ್ಟಿದೆ. ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ. ಅದನ್ನು ಕೇಳಿಸಿಕೊಳ್ಳುತ್ತಾ ಇರುತ್ತೇನೆ. ಕೇವಲ ಬಾಪ್ದಾದಾ ಹೆಸರನ್ನು ಹೇಳುವುದಿಲ್ಲ ಆದ್ದರಿಂದ ತಂದೆಗೆ ಏನು ತಿಳಿಯುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಆದರೂ ಸಹ ಅವಕಾಶ ಕೊಡುತ್ತಾ ಇರುತ್ತೇವೆ. ತಂದೆಯು ತಿಳಿದುಕೊಳ್ಳುತ್ತಾರೆ - ಮಕ್ಕಳೇ, ರಿಯಲ್ ತಿಳುವಳಿಕೆಯಿಂದ ಭೋಲಾ ಆಗಿದ್ದಾರೆ ಆದರೆ ಇಂತಹ ಭೋಲಾ ಆಗಬೇಡಿ. ಒಳ್ಳೆಯದು. |
ಮಕ್ಕಳು ವಿದೇಶವನ್ನು ಸುತ್ತಿಕೊಂಡು ಹಿಂತಿರುಗಿ ಬಂದಿದ್ದಾರೆ (ಜಾನಕಿ ದಾದಿ, ಡಾ|| ನಿರ್ಮಲ ಬೆಹೆನ್, ಜಗದೀಶ್ ಭಾಯಿ, ವಿದೇಶಕ್ಕೆ ಹೋಗಿ ಬಂದಿದ್ದಾರೆ) |
ಒಳ್ಳೆಯ ಫಲಿತಾಂಶವಿದೆ ಮತ್ತು ಸದಾ ಸೇವೆಯ ಸಫಲತೆಯಲ್ಲಿ ವೃದ್ಧಿಯಾಗಲೇಬೇಕಾಗಿದೆ. ಇಂಗ್ಲೆಂಡಿನದೂ ಸಹ ವಿಶೇಷ ಸೇವಾ ಕಾರ್ಯದಲ್ಲಿ ಸಂಬಂಧವಿದೆ. ಹೆಸರು ಅವರದು, ಕೆಲಸವು ತಮ್ಮದು ನಡೆಯುತ್ತಿದೆ. ಆತ್ಮಗಳಿಗೆ ಸಹಜವಾಗಿ ಸಂದೇಶವು ತಲುಪಲಿ, ತಮ್ಮ ಈ ಸೇವೆಯು ನಡೆಯುತ್ತಿದೆ. ಅಂದಾಗ ಅಲ್ಲಿನ ಕಾರ್ಯಕ್ರಮವು ಚೆನ್ನಾಗಿ ಆಯಿತು, ರಷ್ಯಾ ಉಳಿದುಕೊಂಡಿತ್ತು, ಅದೂ ಸಹ ಬರಲೇಬೇಕಾಗಿತ್ತು. ಬಾಪ್ದಾದಾ ಮೊದಲೇ ಸಫಲತೆಯ ನೆನಪು, ಪ್ರೀತಿಯನ್ನು ಕೊಟ್ಟು ಬಿಟ್ಟಿದ್ದೆವು, ಭಾರತದ ರಾಯಭಾರಿಯಾಗಿ ಹೋಗಿದ್ದರಿಂದ ಭಾರತದ ಹೆಸರು ಪ್ರಸಿದ್ಧವಾಯಿತಲ್ಲವೆ. ಚಕ್ರವರ್ತಿಯಾಗಿ ಚಕ್ಕರ್ ಹಾಕುವುದರಲ್ಲಿ ಮಜಾ ಬರುತ್ತದೆಯಲ್ಲವೆ. ಎಷ್ಟೊಂದು ಆಶೀರ್ವಾದಗಳನ್ನು ಜಮಾ ಮಾಡಿಕೊಂಡು ಬಂದಿರಿ. ಈ ನಿರ್ಮಲರವರೂ ಸಹ ಚಕ್ಕರ್ ಹಾಕುತ್ತಲೇ ಇರುತ್ತಾರೆ. ಹಾಗೆ ನೋಡಿದರೆ ಎಲ್ಲರೂ ಸೇವೆಯಲ್ಲಿ ತೊಡಗಿದ್ದಾರೆ ಆದರೆ ಸಮಯ ಪ್ರಮಾಣ ವಿಶೇಷ ಸೇವೆಯಾಗುತ್ತಿದೆ ಆದ್ದರಿಂದ ವಿಶೇಷ ಸೇವೆಯ ಶುಭಾಷಯಗಳನ್ನು ಕೊಡುತ್ತೇವೆ. ಸೇವೆಯಿಲ್ಲದೆ ಇರಲು ಸಾಧ್ಯವಿಲ್ಲ. ಲಂಡನ್, ಅಮೇರಿಕಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾ - ತಾವು ಈ ನಾಲ್ಕೂ ಜೋನ್ಗಳನ್ನು ಮಾಡಿದ್ದೀರಲ್ಲವೆ. 5ನೇಯದು ಭಾರತವಾಗಿದೆ. ಭಾರತದವರಿಗೆ ಮಿಲನ ಮಾಡಲು ಮೊದಲವಕಾಶ ಸಿಕ್ಕಿದೆ. ಯಾವುದನ್ನು ಮಾಡಿ ಬಂದಿದ್ದೀರಿ ಮತ್ತು ಮುಂದೆ ಏನು ಮಾಡುತ್ತೀರಿ ಎಲ್ಲವೂ ಒಳ್ಳೆಯದೇ ಆಗಿದೆ. ಮತ್ತು ಸದಾ ಒಳ್ಳೆಯದೇ ಆಗಿರುತ್ತದೆ. ನಾಲ್ಕೂ ಜೋನ್ಗಳ ಎಲ್ಲಾ ಡಬಲ್ ವಿದೇಶಿ ಮಕ್ಕಳಿಗೆ ಇಂದು ವಿಶೇಷ ನೆನಪು-ಪ್ರೀತಿಯನ್ನು ಕೊಡುತ್ತಿದ್ದೇವೆ. ರಷ್ಯಾ ಸಹ ಏಷ್ಯಾದಲ್ಲಿ ಬಂದು ಬಿಡುತ್ತದೆ. ಸೇವೆಯ ಪ್ರತಿಫಲ ಚೆನ್ನಾಗಿ ಸಿಗುತ್ತಿದೆ, ಸಾಹಸವೂ ಚೆನ್ನಾಗಿದೆ ಆದ್ದರಿಂದ ಸಹಯೋಗವೂ ಸಿಗುತ್ತಿದೆ ಮತ್ತು ಸಿಗುತ್ತಾ ಇರುತ್ತದೆ. ಭಾರತದಲ್ಲಿಯೂ ಸಹ ಈಗ ವಿಶಾಲ ಕಾರ್ಯಕ್ರಮಗಳನ್ನು ಮಾಡುವ ಯೋಜನೆ ಮಾಡುತ್ತಿದ್ದಾರೆ. ಒಬ್ಬೊಬ್ಬರಿಗೂ ಸಹ ವಿಶೇಷತೆ ಮತ್ತು ಸೇವೆಯ ಲಗನ್ನ್ನಲ್ಲಿ ಮಗ್ನರಾಗಿರುವ ಶುಭಾಷಯಗಳು ಮತ್ತು ನೆನಪು, ಪ್ರೀತಿ. ಒಳ್ಳೆಯದು. |
ಸರ್ವ ಮಕ್ಕಳಿಗೆ ಸದಾ ಸಹಜವಾಗಿ ನಡೆಯುವ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಯಾವ ಸಹಜ ಯುಕ್ತಿಯನ್ನು ತಿಳಿಸಿದೆವೋ ಇದೇ ವಿಧಿಯನ್ನು ಸದಾ ಪ್ರಯೋಗದಲ್ಲಿ ತರುವಂತಹ ಪ್ರಯೋಗಿ ಮತ್ತು ಸಹಜಯೋಗಿ, ಸದಾ ವರದಾತನ ವರದಾನಗಳಿಂದ ಸಂಪನ್ನ ವರದಾನೀ ಮಕ್ಕಳಿಗೆ ಸದಾ ಒಂದರ ಪಾಠವನ್ನು ಪ್ರತಿ ಹೆಜ್ಜೆಯಲ್ಲಿ ಸಾಕಾರ ಸ್ವರೂಪದಲ್ಲಿ ತರುವಂತಹ ಸದಾ ನಿರಾಕಾರ, ಆಕಾರ ತಂದೆಯನ್ನು ಜೊತೆಯ ಅನುಭೂತಿಯಿಂದ ಸದಾ ಸಾಕಾರ ಸ್ವರೂಪದಲ್ಲಿ ಪ್ರತ್ಯಕ್ಷ ಅನುಭವ ಮಾಡುವಂತಹ ಸದಾ ವರದಾನಿ ಮಕ್ಕಳಿಗೆ ಬಾಪ್ದಾದಾರವರ ದಾತ, ಭಾಗ್ಯವಿದಾತ ಮತ್ತು ವರದಾತನ ನೆನಪು, ಪ್ರೀತಿ ಹಾಗೂ ನಮಸ್ತೆ. |
ದಾದಿ ಜಾನಕಿಯವರೊಂದಿಗೆ ವಾರ್ತಾಲಾಪ: |
ಎಲ್ಲರಿಗೂ ತಂದೆಯ ಪ್ರೀತಿಯನ್ನು ಎಷ್ಟು ಹಂಚುವಿರಿ, ಅಷ್ಟೇ ಪ್ರೀತಿಯ ಭಂಡಾರವು ವೃದ್ಧಿಯಾಗುತ್ತಿರುತ್ತದೆ. ಹೇಗೆ ಪ್ರತೀ ಸಮಯದಲ್ಲಿ ಪ್ರೀತಿಯ ಸುರಿಮಳೆ ಆಗುತ್ತಿದೆ ಎಂಬಂತೆ ಅನುಭವ ಆಗುತ್ತದೆಯಲ್ಲವೆ! ಒಂದು ಹೆಜ್ಜೆಯಲ್ಲಿ ಪ್ರೀತಿಯನ್ನು ಕೊಡಿ ಮತ್ತು ಮತ್ತೆ-ಮತ್ತೆ ಪ್ರೀತಿ ಪಡೆಯಿರಿ. ಎಲ್ಲರಿಗೂ ಸಹ ಪ್ರೀತಿಯೇ ಬೇಕಾಗಿದೆ, ಜ್ಞಾನವನ್ನಂತು ಕೇಳಿದ್ದಾರಲ್ಲವೆ! ಅಂದಾಗ ಒಂದು ಪ್ರಕಾರದ ಮಕ್ಕಳಿದ್ದಾರೆ ಅವರಿಗೆ ಪ್ರೀತಿ ಬೇಕು ಮತ್ತು ಇನ್ನೊಂದು ಪ್ರಕಾರದವರಿಗೆ ಶಕ್ತಿ ಬೇಕು. ಹಾಗಾದರೆ ಯಾವ ಸೇವೆ ಮಾಡಿದಿರಿ? ಇದೇ ಸೇವೆಯನ್ನು ಮಾಡಿದಿರಲ್ಲವೆ - ಕೆಲವರಿಗೆ ತಂದೆಯ ಮೂಲಕ ಪ್ರೀತಿಯನ್ನು ಕೊಟ್ಟಿರಿ ಹಾಗೂ ಕೆಲವರಿಗೆ ತಂದೆಯಿಂದ ಶಕ್ತಿಯನ್ನು ಕೊಡಿಸಿದಿರಿ. ಜ್ಞಾನದ ರಹಸ್ಯಗಳನ್ನಂತು ತಿಳಿದಿದ್ದಾರೆ, ಈಗ ಅವರಲ್ಲಿ ಸದಾಕಾಲದ ಒಲವು-ಉತ್ಸಾಹವು ಇರಬೇಕಾಗಿದೆ, ಅದೇ ಏರುಪೇರಾಗುತ್ತದೆ, ಆದರೂ ಬಾಪ್ದಾದಾರವರು ಡಬಲ್ ವಿದೇಶಿ ಮಕ್ಕಳಿಗೆ ಶಭಾಷ್ ಕೊಡುತ್ತಾರೆ. ಏಕೆಂದರೆ ಭಿನ್ನ ಧರ್ಮಗಳಲ್ಲಿಂದ ಹೊರಟು ಬಂದು ಬಿಟ್ಟರಲ್ಲವೆ! ದೇಶವೂ ಬೇರೆ, ಪದ್ಧತಿಗಳೂ ಸಹ ಭಿನ್ನವಾಗಿದ್ದರೂ ಇದರಲ್ಲಿ ನಡೆಯುತ್ತಿದ್ದಾರೆ, ಹಾಗೆಯೇ ಕೆಲವರಂತು ವಾರಸುಧಾರರೂ ಬಂದಿದ್ದಾರೆ. ಒಳ್ಳೆಯದು. |
ಮಹಾರಾಷ್ಟ್ರ-ಪೂನಾ ಗ್ರೂಪ್: |
ಎಲ್ಲರೂ ಮಹಾನ್ ಆತ್ಮರಾಗಿದ್ದೀರಲ್ಲವೆ! ಮುಂಚೆ ತಮ್ಮನ್ನು ಕೇವಲ ಮಹಾರಾಷ್ಟ್ರದ ನಿವಾಸಿಯೆಂದು ಹೇಳಿಕೊಳ್ಳುತ್ತಿದ್ದಿರಿ, ಈಗ ಸ್ವಯಂ ಮಹಾನರಾಗಿದ್ದೀರಿ. ತಂದೆಯು ಪ್ರತಿಯೊಂದು ಮಗುವನ್ನೂ ಮಹಾನರನ್ನಾಗಿ ಮಾಡಿ ಬಿಟ್ಟರು. ವಿಶ್ವದಲ್ಲಿ ಇನ್ಯಾರಾದರೂ ತಮಗಿಂತ ಮಹಾನರಿದ್ದಾರೆಯೇ? ಎಲ್ಲರಿಗಿಂತಲೂ ಕೆಳಗೆಂದರೆ ಭಾರತವಾಸಿಗಳೇ ಬಿದ್ದರು ಮತ್ತು ಅದರಲ್ಲಿಯೂ ಯಾರು 84 ಜನ್ಮಗಳನ್ನು ತೆಗೆದುಕೊಳ್ಳುವಂತಹ ಬ್ರಾಹ್ಮಣ ಆತ್ಮರಿದ್ದಾರೆ, ಅವರು ಕೆಳಗೆ ಬಿದ್ದರು. ಅಂದಾಗ ಎಷ್ಟು ಕೆಳಗೆ ಬಿದ್ದರೋ ಅಷ್ಟೇ ಈಗ ಶ್ರೇಷ್ಠ ಮಟ್ಟಕ್ಕೆ ಹೋಗಿದ್ದಾರೆ ಆದ್ದರಿಂದ ಹೇಳುತ್ತಾರೆ - ಬ್ರಾಹ್ಮಣರು ಅಂದರೆ ಶ್ರೇಷ್ಠ ಶಿಖೆಯಲ್ಲಿ ಇರುವವರು. ಅತಿ ಎತ್ತರದ ಸ್ಥಾನವು ಯಾವುದಿರುತ್ತದೆಯೋ ಅದನ್ನೇ ಶಿಖೆ ಎಂದು ಹೇಳಲಾಗುತ್ತದೆ. ಪರ್ವತಗಳ ತುತ್ತ ತುದಿಯನ್ನು ಶಿಖೆಯೆಂದು ಹೇಳುತ್ತಾರೆ ಅಂದಮೇಲೆ ನಾವು ಎಂತಹವರಿಂದ ಏನಾಗಿ ಬಿಟ್ಟೆವು ಎನ್ನುವ ಖುಷಿಯಿದೆ. ಪಾಂಡವರಿಗೆ ಹೆಚ್ಚು ಖುಷಿಯಿದೆಯೋ ಅಥವಾ ಶಕ್ತಿಯರಿಗೆ ಇದೆಯೇ? (ಶಕ್ತಿಯರಿಗೆ) ಏಕೆಂದರೆ ಶಕ್ತಿಯರನ್ನು ಬಹಳ ಕೆಳಮಟ್ಟಕ್ಕೆ ಬೀಳಿಸಲಾಗಿತ್ತು. ದ್ವಾಪರದಿಂದಲೂ ಪುರುಷ ತನುವಿರುವವರೇ ಯಾವುದಾದರೊಂದು ಪದವಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಧರ್ಮದಲ್ಲಿಯೂ ಈಗೀಗ ಸ್ತ್ರೀಯರನ್ನೂ ಮಹಾಮಂಡಲೇಶ್ವರಿ ಮಾಡಿದ್ದಾರೆ, ಇಲ್ಲದಿದ್ದರೆ ಮಹಾಮಂಡಲೇಶ್ವರ ಎಂದೇ ಗಾಯನವಾಗುತ್ತಿತ್ತು. ಯಾವಾಗಿನಿಂದ ತಂದೆಯವರು ಮಾತೆಯರನ್ನು ಮುಂದಿಟ್ಟರು, ಆಗಿನಿಂದ ಅವರು 2-4 ಮಹಾಮಂಡಲೇಶ್ವರಿಯನ್ನಾಗಿ ಮಾಡಿಟ್ಟಿದ್ದಾರೆ. ಇಲ್ಲದಿದ್ದರೆ ಧರ್ಮದ ಕಾರ್ಯಗಳಲ್ಲಿ ಮಾತೆಯರಿಗೆಂದಿಗೂ ಆಸನವನ್ನು ಕೊಡುತ್ತಿರಲಿಲ್ಲ ಆದ್ದರಿಂದ ಮಾತೆಯರಿಗೆ ಹೆಚ್ಚಿನದಾಗಿ ಖುಷಿಯಿದೆ ಮತ್ತು ಪಾಂಡವರದೂ ಗಾಯನವಿದೆ. ಪಾಂಡವರು ವಿಜಯವನ್ನು ಪ್ರಾಪ್ತಿ ಮಾಡಿಕೊಂಡರು, ಹೆಸರಂತು ಪಾಂಡವರಿಗೇ ಬರುತ್ತದೆ ಆದರೆ ಪೂಜೆಯೂ ಹೆಚ್ಚಾಗಿ ಶಕ್ತಿಯರದಾಗುತ್ತದೆ. ಮುಂಚೆ ಗುರುಗಳ ಪೂಜೆಯನ್ನಂತು ಬಹಳ ಮಾಡಿದ್ದಾರೆ, ಈಗ ಶಕ್ತಿಯರ ಪೂಜೆ ಮಾಡುತ್ತಾರೆ. ಜಾಗರಣೆಯನ್ನು ಗಣೇಶ ಅಥವಾ ಹನುಮಂತನಿಗಾಗಿ ಮಾಡುವುದಿಲ್ಲ, ಶಕ್ತಿಯರಿಗಾಗಿ ಮಾಡುತ್ತಾರೆ ಏಕೆಂದರೆ ಶಕ್ತಿಯರೀಗ ಸ್ವಯಂ ಜಾಗೃತರಾಗಿ ಬಿಟ್ಟಿದ್ದಾರೆ. ಅಂದಾಗ ಶಕ್ತಿಯರು ತಮ್ಮ ಶಕ್ತಿರೂಪದಲ್ಲಿ ಇರುತ್ತೀರಲ್ಲವೆ! ಅಥವಾ ಕೆಲವೊಮ್ಮೆ ಬಲಹೀನರು ಆಗಿ ಬಿಡುತ್ತೀರಾ? ಮಾತೆಯರಲ್ಲಿ ದೇಹದ ಸಂಬಂಧದ ಮೋಹವು ಬಲಹೀನರನ್ನಾಗಿ ಮಾಡುತ್ತದೆ. ಸ್ವಲ್ಪ-ಸ್ವಲ್ಪ ಮೊಮ್ಮಕ್ಕಳಲ್ಲಿ, ಮರಿ ಮಕ್ಕಳಲ್ಲಿ ಮೋಹವಿರುತ್ತದೆ ಮತ್ತು ಪಾಂಡವರಲ್ಲಿ ಯಾವ ಮಾತು ಬಲಹೀನರನ್ನಾಗಿ ಮಾಡುತ್ತದೆ? ಪಾಂಡವರಲ್ಲಿ ಅಹಂಕಾರದ ಕಾರಣ ಬೇಗನೆ ಕ್ರೋಧ ಬರುತ್ತದೆ, ಆದರೆ ಈಗಂತು ವಿಜಯವನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಲ್ಲವೆ! ಈಗಂತು ಶಾಂತ ಸ್ವರೂಪ ಪಾಂಡವರಾಗಿದ್ದೀರಿ ಮತ್ತು ಮಾತೆಯರೂ ಸಹ ನಿರ್ಮೋಹಿ ಆಗಿ ಬಿಟ್ಟಿದ್ದಾರೆ. ಪ್ರಪಂಚದವರು ಹೇಳುವರು - ಮಾತೆಯರಲ್ಲಿ ಮೋಹವಿರುತ್ತದೆ, ಹಾಗಾದರೆ ತಾವು ಚಾಲೆಂಜ್ ಮಾಡಿರಿ- ನಾವು ಮಾತೆಯರು ನಿರ್ಮೋಹಿ ಆಗಿದ್ದೇವೆ. ಅದೇರೀತಿ ಪಾಂಡವರೂ ಸಹ ಶಾಂತ ಸ್ವರೂಪರಾಗಿದ್ದೇವೆ, ಅದರಲ್ಲಿ ಅಂಶದಷ್ಟೂ ಕ್ರೋಧವು ಕಾಣಿಸುವುದಿಲ್ಲ. ಚಲನೆ-ವಲನೆಯವರೆಗೂ ಬರಬಾರದು. ಕೆಲವರು ಹೀಗೂ ಹೇಳುತ್ತಾರೆ - ಕ್ರೋಧವಂತು ಬರುವುದಿಲ್ಲ, ಸ್ವಲ್ಪ ಆವೇಶ ಬರುತ್ತದೆ ಅಂದಾಗ ಅದೇನಾಯಿತು! ಅದೂ ಸಹ ಕ್ರೋಧದ ಅಂಶವೇ ಆಯಿತಲ್ಲವೆ. ಹಾಗಾದರೆ ಪಾಂಡವರು ವಿಜಯಿ ಅಂದರೆ ಸಂಪೂರ್ಣವಾಗಿ ಸಂಕಲ್ಪದಲ್ಲಿಯೂ ಶಾಂತ, ಮಾತು ಮತ್ತು ಕರ್ಮದಲ್ಲಿಯೂ ಶಾಂತ ಸ್ವರೂಪರು. ಮಾತೆಯರು ಇಡೀ ವಿಶ್ವದ ಮುಂದೆ ತಮ್ಮ ನಿರ್ಮೋಹಿ ಸ್ವರೂಪವನ್ನು ತೋರಿಸಿರಿ. ಜನರಂತು ಇದು ಅಸಂಭವವೆಂದು ತಿಳಿಯುವರು ಮತ್ತು ತಾವು ಹೇಳಿರಿ - ಸಂಭವವೂ ಆಗುತ್ತದೆ ಮತ್ತು ಬಹಳ ಸಹಜವೂ ಇದೆ. ಲಕ್ಷ್ಯವನ್ನು ಇಟ್ಟುಕೊಳ್ಳುತ್ತೀರೆಂದರೆ ಅವಶ್ಯವಾಗಿ ಲಕ್ಷಣವೂ ಬರುತ್ತದೆ. ಸ್ಮೃತಿಯಂತೆ ಸ್ಥಿತಿಯಾಗುತ್ತದೆ. ಧರಣಿಯಲ್ಲಿ ಮಾತಾಪಿತರ ಪ್ರೇಮಜಲವು ಉತ್ಪನ್ನವಾಗಿದೆ ಆದ್ದರಿಂದ ಫಲವು ಸಹಜವಾಗಿ ಹೊರ ಬರುತ್ತಿದೆ. ಬಾಪ್ದಾದಾರವರು ಸೇವೆ ಮತ್ತು ಸ್ವ-ಉನ್ನತಿ - ಇವೆರಡನ್ನೂ ನೋಡಿ ಖುಷಿಯಾಗುತ್ತದೆ, ಕೇವಲ ಸೇವೆಯನ್ನೇ ನೋಡಿ ಖುಷಿಯಾಗುವುದಿಲ್ಲ. ಸೇವೆಯಲ್ಲಿ ತಾವೆಷ್ಟು ವೃದ್ಧಿ ಮಾಡುತ್ತೀರಿ, ಅಷ್ಟು ಸ್ವ-ಉನ್ನತಿಯಲ್ಲಿಯೂ ಇರಲಿ, ಎರಡೂ ಒಟ್ಟೊಟ್ಟಿಗೆ ಆಗುತ್ತಿರಲಿ ಮತ್ತು ಯಾವುದೇ ಇಚ್ಛೆಯಿರಬಾರದು. ಯಾವಾಗ ಸ್ವತಹವಾಗಿಯೇ ಎಲ್ಲವೂ ಸಿಗುತ್ತದೆಯೆಂದರೆ ಇಚ್ಛೆಯನ್ನೇಕೆ ಇಟ್ಟುಕೊಳ್ಳುವುದು. ಕೇಳದೆ, ಬೇಡದೇ ಇಷ್ಟೊಂದು ಸಿಕ್ಕಿದೆ, ಇದಕ್ಕಾಗಿ ಬೇಡುವ ಇಚ್ಛೆಯ ಅವಶ್ಯಕತೆಯೂ ಇಲ್ಲ ಅಂದಮೇಲೆ ಇಷ್ಟು ಸಂತುಷ್ಟವಾಗಿ ಇದ್ದೀರಲ್ಲವೇ! ತಮ್ಮ ಸ್ಮೃತಿಯಲ್ಲಿ ಈ ಟೈಟಲ್ನ್ನು ಇಟ್ಟುಕೊಳ್ಳಿರಿ - ಸಂತುಷ್ಟರಿದ್ದೇವೆ ಮತ್ತು ಸರ್ವರನ್ನೂ ಸಂತುಷ್ಟ ಪಡಿಸಿ, ಪ್ರಾಪ್ತಿ ಸ್ವರೂಪರನ್ನಾಗಿ ಮಾಡುವವರು ಆಗಿದ್ದೇವೆ. ಅಂದಮೇಲೆ ‘ಸಂತುಷ್ಟವಾಗಿರುವುದು ಮತ್ತು ಸಂತುಷ್ಟ ಪಡಿಸುವುದು’ ಇದೇ ವಿಶೇಷವಾದ ವರದಾನವಾಗಿದೆ. ಅಸಂತುಷ್ಟತೆಯ ಹೆಸರು-ಚಿಹ್ನೆಯೂ ಇರಬಾರದು. ಒಳ್ಳೆಯದು. |
ಗುಜರಾತ್ ಗ್ರೂಪ್: |
ಅಂತಿಮ ಜನ್ಮವಾಗಿರುವ ಕಾರಣ ಈ ಬ್ರಾಹ್ಮಣ ಜೀವನದಲ್ಲಿ ಭಲೆ ಶರೀರದಿಂದ ಎಷ್ಟೇ ಬಲಹೀನವಾಗಿರಬಹುದು ಅಥವಾ ರೋಗಗಳಿರಬಹುದು, ನಡೆಯಬಹುದು ಅಥವಾ ಇಲ್ಲದೆಯೂ ಇರಬಹುದು ಆದರೆ ಮನಸ್ಸಿನ ಹಾರುವಿಕೆಗಾಗಿ ರೆಕ್ಕೆಗಳನ್ನಂತು ಕೊಡಲಾಗಿದೆ, ಶರೀರ ನಡೆಯದಿರಬಹುದು ಆದರೆ ಮನಸ್ಸಿನಿಂದಂತು ಹಾರಬಹುದಲ್ಲವೆ! ಏಕೆಂದರೆ ಬಾಪ್ದಾದಾರವರಿಗೆ ಗೊತ್ತಿದೆ - 63 ಜನ್ಮಗಳಿಂದ ಅಲೆದಾಡುತ್ತಾ-ಹುಡುಕಾಡುತ್ತಾ ಬಲಹೀನವಾಗಿದೆ. ಶರೀರವು ತಮೋಗುಣಿ ಆಗಿರುವ ಕಾರಣ ಬಲಹೀನ, ರೋಗಿಯಾಗಿ ಬಿಟ್ಟಿದೆ. ಆದರೆ ಎಲ್ಲರ ಮನಸ್ಸು ಆರೋಗ್ಯದಿಂದ ಕೂಡಿದೆ. ಶರೀರದಲ್ಲಿ ರೋಗವಿರಬಹುದು ಆದರೆ ಮನಸ್ಸಿನಲ್ಲಂತು ಯಾವುದೇ ರೋಗವಿಲ್ಲ ಅಲ್ಲವೇ. ಎಲ್ಲರ ಮನಸ್ಸು ರೆಕ್ಕೆಗಳಿಂದ ಹಾರಿ ಬಿಡುತ್ತದೆ, ಶಕ್ತಿಶಾಲಿ ಮನಸ್ಸಿನ ಲಕ್ಷಣವು ಇದೇ ಆಗಿರುತ್ತದೆ - ಸೆಕೆಂಡಿನಲ್ಲಿ ಎಲ್ಲಿಗೆ ಬೇಕು ಅಲ್ಲಿಗೆ ತಲುಪಿ ಬಿಡುತ್ತದೆ. ಇದೇರೀತಿ ಶಕ್ತಿಶಾಲಿ ಆಗಿದ್ದೀರಾ ಅಥವಾ ಕೆಲವೊಮ್ಮೆ ಬಲಹೀನರಾಗುತ್ತೀರಾ. ಮನಸ್ಸಿಗೆ ಯಾವಾಗ ಹಾರುವುದು ಬಂದು ಬಿಡುತ್ತದೆ ಅಥವಾ ಅಭ್ಯಾಸವಾಗುತ್ತದೆಯೋ ಆಗ ಸೆಕೆಂಡಿನಲ್ಲಿಯೇ ಎಲ್ಲಿಗೆ ಬೇಕೋ ಅಲ್ಲಿಗೆ ತಲುಪಿ ಬಿಡಬಹುದು. ಈಗೀಗ ಸಾಕಾರ ವತನದಲ್ಲಿ, ಈಗೀಗ ಪರಮಧಾಮದಲ್ಲಿಯೂ ಒಂದು ಸೆಕೆಂಡಿನಲ್ಲಿ ತಲುಪುವ ತೀವ್ರತೆಯಿದೆ. ಅಂದಾಗ ಇಷ್ಟು ತೀವ್ರ ಗತಿಯಿದೆಯೇ? ಸದಾ ತಮ್ಮ ಭಾಗ್ಯದ ಹಾಡನ್ನು ಹಾಡುತ್ತಾ ಹಾರುತ್ತಿರಿ. ಅನೇಕ ಪ್ರಕಾರದ ಭಾಗ್ಯವು ಸಿಕ್ಕಿರುತ್ತದೆ, ಅನೇಕ ಪ್ರಕಾರದ ಪ್ರಾಪ್ತಿಗಳಾಗಿವೆ, ಅಂದಮೇಲೆ ಸದಾ ಅಮೃತವೇಳೆಯಲ್ಲಿ ತಮ್ಮ ಭಾಗ್ಯದ ಯಾವುದಾದರೊಂದು ಮಾತಿನ ಸ್ಮೃತಿಯನ್ನು ಇಟ್ಟುಕೊಳ್ಳಿ. ಕೆಲವೊಮ್ಮೆ ಯಾವುದಾದರೊಂದು ಪ್ರಾಪ್ತಿಯನ್ನು, ಕೆಲವೊಮ್ಮೆ ಕೆಲವು ಪ್ರಾಪ್ತಿಯನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತೀರೆಂದರೆ, ಬಹಳ ರಮಣೀಕ ಪುರುಷಾರ್ಥವಿರುತ್ತದೆ. ತಾವು ಪುರುಷಾರ್ಥವನ್ನೆಂದಿಗೂ ಬೇಸರವೆಂದು ತಿಳಿಯದೇ, ನವೀನತೆಯ ಅನುಭವವನ್ನು ಮಾಡುವಿರಿ ಅಲ್ಲವೇ. ಹೀಗಿಲ್ಲದಿದ್ದರೆ ಕೆಲವು ಮಕ್ಕಳು ಹೇಳುತ್ತಾರೆ - ನಾನಾತ್ಮ, ಶಿವ ತಂದೆಯ ಮಗುವಾಗಿದ್ದೇನೆ, ಇದನ್ನಂತು ಸದಾ ಹೇಳುತ್ತಾ ಇರುತ್ತೇವೆ. ಆದರೆ ನಾನಾತ್ಮನಿಗೆ ತಂದೆಯು ಎಂತೆಂತಹ ಭಾಗ್ಯವನ್ನು ರೂಪಿಸಿದ್ದಾರೆ, ಯಾವ-ಯಾವ ಬಿರುದುಗಳನ್ನು ಕೊಟ್ಟಿದ್ದಾರೆ, ಯಾವ-ಯಾವ ಖಜಾನೆಗಳನ್ನು ಕೊಟ್ಟಿದ್ದಾರೆ, ಈ ರೀತಿಯಲ್ಲಿ ಭಿನ್ನ-ಭಿನ್ನವಾದ ಸ್ಮೃತಿಯನ್ನು ಇಟ್ಟುಕೊಳ್ಳಿರಿ, ಅದಕ್ಕಾಗಿ ಪಟ್ಟಿಯನ್ನು ಮಾಡಿರಿ. ಸ್ಮೃತಿಗಳ ಬಹಳ ದೊಡ್ಡ ಪಟ್ಟಿಯೇ ಇದೆ! ಕೆಲವೊಮ್ಮೆ ಖಜಾನೆಗಳ ಸ್ಮೃತಿಯಲ್ಲಿರಿ, ಕೆಲವೊಮ್ಮೆ ಶಕ್ತಿಗಳ ಸ್ಮೃತಿಯಲ್ಲಿರಿ, ಕೆಲವೊಮ್ಮೆ ಗುಣಗಳ, ಕೆಲವೊಮ್ಮೆ ಜ್ಞಾನದ ಸ್ಮೃತಿ, ಕೆಲವೊಮ್ಮೆ ತಮ್ಮ ಬಿರುದುಗಳ ಸ್ಮೃತಿಯನ್ನು ಇಟ್ಟುಕೊಳ್ಳಿರಿ. ವಿಧ-ವಿಧವಾದ ಸ್ಮೃತಿಗಳಲ್ಲಿ ಮನೋರಂಜನೆಯಾಗುವುದು. ಎಲ್ಲಾದರೂ ಮನೋರಂಜನೆ(ಸಾಂಸ್ಕೃತಿಕ) ಕಾರ್ಯಕ್ರಮವಾದರೆ, ಅಲ್ಲಿ ವಿಧ-ವಿಧವಾದ ನೃತ್ಯಗಳಿರುತ್ತವೆ, ವಿಧ-ವಿಧವಾದ ತಿನಿಸುಗಳಿರುತ್ತವೆ, ವಿಧ-ವಿಧವಾದ ಜನರೊಂದಿಗೆ ಭೇಟಿಯಾಗುವುದು, ಇದರಿಂದಲೇ ಮನೋರಂಜನೆಯಾಗುವುದಲ್ಲವೇ. ಅಂದಮೇಲೆ ಇದರಲ್ಲಿಯೂ ಸದಾ ಮನೋರಂಜನೆಯಲ್ಲಿ ಇರುವುದಕ್ಕಾಗಿ ವಿಧ-ವಿಧವಾದ ಮಾತುಗಳನ್ನು ಚಿಂತನೆ ಮಾಡಿರಿ. ಒಳ್ಳೆಯದು! |
ಓಂ ಶಾಂತಿ. ತೋಟದ ಮಾಲೀಕ ತಂದೆಯು ಕುಳಿತು ತಮ್ಮ ಹೂಗಳನ್ನು ನೋಡುತ್ತಾರೆ ಏಕೆಂದರೆ ಮತ್ತೆಲ್ಲ ಸೇವಾಕೇಂದ್ರಗಳಲ್ಲಂತೂ ಹೂಗಳು ಮಾತ್ತು ಮಾಲಿಗಳಿರುತ್ತಾರೆ, ಇಲ್ಲಿ ನೀವು ತೋಟದ ಮಾಲಿಕನ ಬಳಿ ತಮ್ಮ ಸುಗಂಧವನ್ನು ಬೀರಲು ಬರುತ್ತೀರಿ. ನೀವು ಹೂಗಳಾಗಿದ್ದೀರಿಲ್ಲವೆ! ನೀವು ತಿಳಿದುಕೊಂಡಿದ್ದೀರಿ, ತಂದೆಗೂ ಗೊತ್ತಿದೆ - ಮುಳ್ಳುಗಳ ಕಾಡಿನ ಬೀಜ ರೂಪ ರಾವಣನಾಗಿದ್ದಾನೆ. ಹಾಗೆ ನೋಡಿದರೆ ಇಡೀ ತೋಟದ ಬೀಜವು ಒಂದೇ ಆಗಿದೆ ಆದರೆ ಹೂಗಳ ತೋಟವನ್ನು ಮುಳ್ಳಿನ ಕಾಡನ್ನಾಗಿ ಮಾಡುವವರು ಅವಶ್ಯ ಇದ್ದಾರೆ. ಅವನೇ ರಾವಣ. ಅಂದ ಮೇಲೆ ನಿರ್ಣಯ ಮಾಡಿ - ತಂದೆ ಸರಿಯಾದ ಮಾತನ್ನು ತಿಳಿಸುತ್ತಾರೆ ಅಲ್ಲವೆ. ದೇವತಾ ರೂಪಿ ತೋಟದ ಬೀಜ ರೂಪ ತಂದೆ ಆಗಿದ್ದಾರೆ. ನೀವೀಗ ದೇವಿ ದೇವತೆ ಆಗುತ್ತಿದ್ದೀರಿ ಅಲ್ಲವೆ. ಇದು ಪ್ರತಿಯೊಬ್ಬರಿಗೂ ತಿಳಿದಿದೆ- ನಾವು ಯಾವ ಪ್ರಕಾರದ ಹೂ ಆಗಿದ್ದೇವೆ. ಹೂಗಳನ್ನು ನೋಡಲು ಮಾಲೀಕರು ಇಲ್ಲಿಯೇ ಬರುತ್ತಾರೆ. ಅವರೆಲ್ಲರೂ ಮಾಲಿಗಳಾಗಿದ್ದಾರೆ (ಸೇವಾಕೇಂದ್ರಗಳಲ್ಲಿ). ಅವರಲ್ಲಿಯೂ ಅನೇಕ ಪ್ರಕಾರದ ಮಾಲಿಗಳಿದ್ದಾರೆ. ಹೇಗೆ ತೋಟದಲ್ಲಿ ಭಿನ್ನ ಭಿನ್ನ ಪ್ರಕಾರದ ಮಾಲಿಗಳಿರುತ್ತಾರೆ. ಕೆಲವರಿಗೆ 5000 ರೂಪಾಯಿ ಸಂಬಳವಿರುತ್ತದೆ ಕೆಲವರಿಗೆ 1000, ಇನ್ನೂ ಕೆಲವರಿಗೆ 5000 ರೂಪಾಯಿಗಳಿರುತ್ತವೆ. ಕೆಲವರಿಗೆ 500 ರೂಪಾಯಿಗಳಿರುತ್ತವೆ. ಮೊಗಲ್ ಗಾರ್ಡನ್ನ ಮಾಲಿ ಅವಶ್ಯವಾಗಿ ಬಹಳ ಬುದ್ಧಿವಂತನಿರುತ್ತಾನೆ. ಅವನ ಸಂಬಳವೂ ಹೆಚ್ಚಿರುತ್ತದೆ. ಇದು ಬೇಹದ್ದಿನ ಅತಿ ದೊಡ್ಡ ಹೂದೋಟವಾಗಿದೆ. ಅದರಲ್ಲಿಯೂ ಅನೇಕ ಪ್ರಕಾರದ ನಂಬರವಾರ್ ಮಾಲಿಗಳಿದ್ದಾರೆ. ಯಾರು ಬಹಳ ಒಳ್ಳೆಯ ಮಾಲಿಗಳಿರುತ್ತಾರೆ ಅವರು ಹೂದೋಟವನ್ನು ಬಹಳ ಶೋಭಾಯಮಾನವಾಗಿಡುತ್ತಾರೆ, ಒಳ್ಳೊಳ್ಳೆಯ ಹೂಗಿಡಗಳನ್ನಿಡುತ್ತಾರೆ. ಹೇಗೆ ಗವರ್ನಮೆಂಟ್ ಹೌಸನ ಮೊಗಲ್ ಗಾರ್ಡನ್ ಎಷ್ಟು ಚೆನ್ನಾಗಿದೆ, ಹಾಗೆಯೇ ಇದೂ ಬೇಹದ್ದಿನ ಹೂದೋಟವಾಗಿದೆ. ಒಬ್ಬರಲೊ ತೋಟದ ಮಾಲೀಕರಾಗಿದ್ದಾರೆ. ಈಗ ಮುಳ್ಳುಗಳ ಕಾಡಿನ ಬೀಜ ರಾವಣ ಆಗಿದ್ದಾನೆ ಮತ್ತು ಹೂತೋಟದ ಬೀಜ ಶಿವತಂದೆಯಾಗಿದ್ದಾರೆ. ಆಸ್ತಿಯು ತಂದೆಯಿಂದ ಸಿಗುತ್ತದೆ. ರಾವಣನಿಂದ ಅಸ್ತಿ ಸಿಗುವುದಿಲ್ಲ. ರಾವಣನು ಶಾಪ ಕೊಡುತ್ತಾನೆ. ಯಾವಾಗ ಶಾಪಿತರಾಗುತ್ತಾರೆ ಆಗ ಸುಖ ಕೊಡುವವರನ್ನು ನೆನಪು ಮಾಡುತ್ತಾರೆ ಏಕೆಂದರೆ ಅವರು ಸುಖ ದಾತಾ, ಸದಾ ಸುಖ ನೀಡುವವರಾಗಿದ್ದಾರೆ. ಮಾಲಿಗಳೂ ಕೂಡ ಭಿನ್ನ ಭಿನ್ನ ಪ್ರಕಾರದವರಿರುತ್ತಾರೆ. ತೋಟದಮಾಲಿಕ ಬಂದು ಮಾಲಿಗಳನ್ನು ನೋಡುತ್ತಾರೆ ಎಂತಹ ಚಿಕ್ಕ ಪುಟ್ಟ ಹೂದೋಟವನ್ನು ಮಾಡಿದ್ದಾರೆ. ಯಾವ ಯಾವ ಹೂಗಳಿವೆ ಎಂದು ವಿಚಾರ ಮಾಡುತ್ತಾರೆ. ಕೆಲವೊಮ್ಮೆ ಬಹಳ ಒಳ್ಳೊಳ್ಳೆಯ ಮಾಲಿಗಳು ಬರುತ್ತಾರೆ. ಅಂತಹವರ ಹೂಗುಚ್ಛವೂ ಸಹ ಬಹಳ ಚೆನ್ನಾಗಿಯೇ ಇರುತ್ತದೆ. ಆಗ ಮಾಲೀಕನಿಗೂ ಖುಷಿಯಾಗುತ್ತದೆ – ಓಹೋ! ಈ ಮಾಲಿಯು ಬಹಳ ಒಳ್ಳೆಯವರಾಗಿದ್ದಾರೆ, ಒಳ್ಳೊಳ್ಳೆಯ ಹೂಗಳನ್ನು ತಂದಿದ್ದಾರೆ. ಇವರು ಬೇಹದ್ದಿನ ತಂದೆಯಾಗಿದ್ದಾರೆ ಮತ್ತು ಇವರದು ಬೇಹದ್ದಿನ ಮಾತುಗಳಾಗಿವೆ, ನೀವು ಮಕ್ಕಳು ಮನಸ್ಸಿನಲ್ಲಿ ತಿಳಿಯುತ್ತೀರಿ ತಂದೆಯು ಸಂಪೂರ್ಣವಾಗಿ ಸತ್ಯವನ್ನೇ ಹೇಳುತ್ತಾರೆ. ಅರ್ಧ ಕಲ್ಪ ರಾವಣನ ರಾಜ್ಯ ನಡೆಯುತ್ತದೆ, ಹೂದೋಟವನ್ನು ಮುಳ್ಳಿನ ಕಾಡನ್ನಾಗಿ ರಾವಣನೇ ಮಾಡುತ್ತಾನೆ. ಕಾಡಿನಲ್ಲಿ ಬರೀ ಮುಳ್ಳುಗಳೇ ಇರುತ್ತವೆ. ಬಹಳ ದುಃಖ ಕೊಡುತ್ತವೆ. ಹೂತೋಟದ ಮಧ್ಯೆ ಮುಳ್ಳುಗಳಿರುತ್ತವೆಯೇ, ಒಂದೂ ಇರುವುದಿಲ್ಲ. ಮಕ್ಕಳಿಗೆ ಗೊತ್ತಿದೆ, ರಾವಣನು ದೇಹಾಭಿಮಾನದಲ್ಲಿ ತರುತ್ತಾನೆ. ಅತಿ ದೊಡ್ಡ ಮುಳ್ಳು ದೇಹಾಭಿಮನವಾಗಿದೆ. |
ತಂದೆಯು ರಾತ್ರಿಯೂ ತಿಳಿಸಿದ್ದರು – ಕೆಲವರದು ಕಾಮಿ ದೃಷ್ಟಿಯಿರುತ್ತದೆ, ಇನ್ನು ಕೆಲವರದು ಸ್ವಲ್ಪ ಕಾಮಿ ದೃಷ್ಟಿಯಿರುತ್ತದೆ. ಕೆಲವರು ಹೊಸ ಹೊಸಬರು ಬರುತ್ತಾರೆ ಅವರು ಮೊದಲು ಬಹಳ ಚೆನ್ನಾಗಿ ನಡೆಯುತ್ತಾರೆ. ವಿಕಾರದಲ್ಲೆಂದೂ ಹೋಗುವುದಿಲ್ಲ, ಪವಿತ್ರರಾಗಿರುತ್ತೇವೆಂದು ತಿಳಿಯುತ್ತಾರೆ, ಆ ಸಮಯದಲ್ಲಿ ಸ್ಮಶಾನ ವೈರಾಗ್ಯ ಬರುತ್ತದೆ. ಮತ್ತೆ ಮನೆಗೆ ಹೋದಾಗ ಕೊಳಕಾಗುತ್ತಾರೆ. ದೃಷ್ಟಿಯೂ ಕೊಳಕಾಗಿಬಿಡುತ್ತದೆ. ಇಲ್ಲಿ ಯಾರನ್ನು ಒಳ್ಳೆಯ ಹೂಗಳೆಂದು ತಿಳಿದು ಮಾಲೀಕನ ಬಳಿ ಕರೆದುಕೊಂಡು ಬರುತ್ತಾರೆ, ಬಾಬಾ, ಇವರು ಬಹಳ ಒಳ್ಳೆಯ ಹೂವಾಗಿದ್ದಾರೆ. ಇನ್ನೂ ಕೆಲವರು ಇವರು ಎಂತಹ ಹೂವಾಗಿದ್ದಾರೆಂದು ಬಂದು ಕಿವಿಯಲ್ಲಿ ಹೇಳುತ್ತಾರೆ. ಮಾಲಿಯಂತೂ ಅವಶ್ಯವಾಗಿ ತಿಳಿಸುತ್ತಾರೆ ಅಲ್ಲವೆ. ತಂದೆಯು ಅಂತರ್ಯಾಮಿಯಾಗಿದ್ದಾರೆಂದಲ್ಲ ಮಾಲಿಯು ಪ್ರತಿಯೊಬ್ಬರ ಚಲನ ವಲನಗಳನ್ನು ತಿಳಿಸುತ್ತಾರೆ - ಬಾಬಾ, ಇವರ ದೃಷ್ಟಿ ಚೆನ್ನಾಗಿಲ್ಲ, ಇವರ ಚಲನೆ ಶ್ರೇಷ್ಠವಾಗಿಲ್ಲ. ಇವರು 10-20% ಸುಧಾರಣೆಯಾಗಿದ್ದಾರೆ. ಮೂಲ ಕಣ್ಣುಗಳು ಇವು ಬಹಳ ಮೋಸ ಮಾಡುತ್ತವೆ. ಮಾಲಿಯು ಬಂದು ಮಾಲಿಕನಿಗೆ ಎಲ್ಲವನ್ನೂ ತಿಳಿಸುತ್ತಾರೆ. ತಂದೆಯು ಪ್ರತಿಯೊಬ್ಬರನ್ನೂ ಕೇಳುತ್ತಾರೆ - ಹೇಳಿ ನೀವು ಎಂತಹ ಹೂಗಳನ್ನು ತಂದಿದ್ದೀರಿ? ಕೆಲವರು ಗುಲಾಬಿ ಹೂಗಳಾಗಿರುತ್ತಾರೆ, ಸೇವಂತಿಯ ಹೂವಾಗಿರುತ್ತಾರೆ, ಕೆಲವರು ಎಕ್ಕದ ಹೂಗಳಂತಿರುವವರನ್ನೂ ಕರೆತರುತ್ತಾರೆ. ಇಲ್ಲಿ ಬಹಳ ಎಚ್ಚರದಿಂದ ಇರುತ್ತಾರೆ. ಕಾಡಿಗೆ ಹೋದ ನಂತರ ಬಾಡಿ ಹೋಗುತ್ತಾರೆ. ಇವರು ಯಾವ ಪ್ರಕಾರದ ಹೂವನ್ನುವುದನ್ನು ನೋಡುತ್ತಾರೆ. ಮಾಯೆಯೂ ಸಹ ಈ ರೀತಿ ಇದೆ, ಅದು ಮಾಲಿಗಳಿಗೂ ಸಹ ಜೋರಾಗಿ ಏಟನ್ನು ಕೊಡುತ್ತದೆ. ಅದರಿಂದ ಮಾಲಿಗಳೂ ಸಹ ಮುಳ್ಳುಗಳಂತಾಗುತ್ತಾರೆ. ಮಾಲೀಕನು ಬಂದಾಗ ಮೊಟ್ಟ ಮೊದಲು ಹೂದೋಟವನ್ನು ನೋಡುತ್ತಾರೆ, ಮತ್ತೆ ಕುಳಿತು ಅದನ್ನು ಶೃಂಗಾರ ಮಾಡುತ್ತಾರೆ - ಮಕ್ಕಳೇ, ಎಚ್ಚರದಿಂದಿರಿ ದೋಷಗಳನ್ನು ತೆಗೆಯಿರಿ ಇಲ್ಲವಾದರೆ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ. ತಂದೆಯು ಲಕ್ಷ್ಮೀ ನಾರಾಯಣರನ್ನಾಗಿ ಮಾಡಲು ಬಂದಿದ್ದಾರೆ ಅಂದ ಮೇಲೆ ದೇವತೆಗಳಾಗುವ ಬದಲು ನೌಕರಾರುಗುವುದೇ! ನಾವು ಅಂತಹ ಶ್ರೇಷ್ಠರು, ಯೋಗ್ಯರಾಗುತ್ತೀದ್ದೇವೆಯೇ ಎಂದು ಪರಿಶೀಲನೆ ಮಾಡಿಕೊಳ್ಳಬೇಕು. ಇದಂತೂ ಮಕ್ಕಳಿಗೆ ತಿಳಿದಿದೆ - ಮುಳ್ಳುಗಳ ಕಾಡಿನ ಬೀಜ ರಾವಣ ಆಗಿದ್ದಾರೆ, ಹೂದೋಟದ ಬೀಜ ರಾಮನಾಗಿದ್ದಾನೆ. ಇವೆಲ್ಲ ಮಾತುಗಳನ್ನು ತಂದೆ ತಿಳಿಸುತ್ತಾರೆ. ಆದರೂ ಸಹ ತಂದೆ ಶಾಲೆಯ ವಿದ್ಯಾಭ್ಯಾಸದ ಮಹಿಮೆ ಮಾಡುತ್ತಾರೆ. ಈ ವಿದ್ಯೆಯು ಒಳ್ಳೆಯದಾಗಿದೆ ಏಕೆಂದರೆ ಅದು ಆದಾಯದ ಮೂಲವಾಗಿದೆ. ಗುರಿ-ಉದ್ದೇಶವಿರುವುದಿಲ್ಲ. ನಿಮ್ಮದು ನರನಿಂದ ನಾರಾಯಣರಾಗುವ ಒಂದೇ ಗುರಿಯಾಗಿದೆ. ಭಕ್ತಿ ಮಾರ್ಗದಲ್ಲಿ ಸತ್ಯನಾರಾಯನನ ಕಥೆ ಬಹಳ ಕೇಳುತ್ತಾರೆ. ಪ್ರತೀ ತಿಂಗಳು ಬ್ರಾಹ್ಮಣರನ್ನು ಕರೆಸುತ್ತಾರೆ, ಬ್ರಾಹ್ಮಣರು ಗೀತೆಯನ್ನು ತಿಳಿಸುತ್ತಾರೆ. ಇತ್ತೀಚೆಗಂತೂ ಎಲ್ಲರೂ ಗೀತೆಯನ್ನು ಹೇಳುತ್ತಾರೆ. ಸತ್ಯ ಬ್ರಾಹ್ಮಣರು ಯಾರೂ ಇಲ್ಲ. ತಾವು ಸತ್ಯಸತ್ಯ ಬ್ರಾಹ್ಮಣರಾಗಿದ್ದೀರಿ, ಸತ್ಯ ತಂದೆಯ ಮಕ್ಕಳಾಗಿದ್ದೀರಿ. ನೀವು ಸತ್ಯ ಸತ್ಯವಾದ ಕಥೆಯನ್ನು ತಿಳಿಸುತ್ತೀರಿ. ಇದು ಸತ್ಯನಾರಾಯಣನ ಕಥೆಯಾಗಿದೆ, ಅಮರ ಕಥೆಯೂ ಆಗಿದೆ, ಮೂರನೇ ನೇತ್ರದ ಕಥೆಯೂ ಆಗಿದೆ. ಭಗವಾನುವಾಚ - ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ, ಅವರಂತೂ ಗೀತೆಯನ್ನು ತಿಳಿಸುತ್ತಲೇ ಬಂದಿದ್ದಾರೆ ಆದರೆ ಯಾರು ರಾಜರಾದರು? ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ, ನಾನಂತೂ ಆಗುವುದಿಲ್ಲ ಎಂದು ಹೇಳುವವರು ಯಾರಾದರೂ ಇದ್ದಾರೆಯೇ? ಈ ರೀತಿ ಎಂದಾದರೂ ಕೇಳಿದ್ದೀರಾ? ಇವರೊಬ್ಬರೇ ತಂದೆಯಾಗಿದ್ದಾರೆ ಕುಳಿತು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಮಕ್ಕಳಿಗೆ ಗೊತ್ತಿದೆ, ಇಲ್ಲಿ ಮಾಲೀಕನ ಬಳಿ ರಿಫ್ರೆಶ್ ಆಗಲು ಬರುತ್ತೇವೆ. ಮಾಲಿಗಳೂ ಆಗುತ್ತಾರೆ, ಹೂಗಳೂ ಆಗುತ್ತಾರೆ. ಮಾಲಿಗಳಂತೂ ಅವಶ್ಯ ಆಗಬೇಕು. ಭಿನ್ನ ಭಿನ್ನ ಪ್ರಕಾರದ ಮಾಲಿಗಳಿದ್ದಾರೆ. ಸೇವೆ ಮಾಡದಿದ್ದರೆ ಒಳ್ಳೆಯ ಹೂ ಹೇಗೆ ಆಗುತ್ತಾರೆ? ಪ್ರತಿಯೊಬ್ಬರೂ ತಮ್ಮ ಹೃದಯವನ್ನು ಕೇಳಿಕೊಳ್ಳಿ - ನಾನು ಯಾವ ಪ್ರಕಾರದ ಹೂ ಆಗಿದ್ದೇನೆ? ಯಾವ ಪ್ರಕಾರದ ಮಾಲಿ ಆಗಿದ್ದೇನೆ? ಮಕ್ಕಳು ವಿಚಾರ ಸಾಗರ ಮಂಥನ ಮಾಡಬೇಕು. ಬ್ರಾಹ್ಮಣಿಯರಿಗೆ ಗೊತ್ತಿದೆ, ಭಿನ್ನ ಭಿನ್ನ ಪ್ರಕಾರದ ಮಾಲಿಗಳಿದ್ದಾರೆ. ಕೆಲವರು ಒಳ್ಳೊಳ್ಳೆಯ ಮಾಲಿಗಳು ಬರುತ್ತಾರೆ. ಅವರದು ಬಹಳ ಒಳ್ಳೆಯ ಹೂದೋಟವಿರುತ್ತದೆ. ಹೇಗೆ ಒಳ್ಳೆಯ ಮಾಲಿಯು ಹೂದೋಟವನ್ನು ಚೆನ್ನಾಗಿಯೇ ಇಟ್ಟುಕೊಳ್ಳುತ್ತಾರೆ. ಒಳ್ಳೊಳ್ಳೆಯ ಹೂಗಳನ್ನು ಕರೆತರುತ್ತಾರೆ. ಅವರನ್ನು ನೋಡಿ ಮನಸ್ಸಿಗೆ ಖುಷಿಯಾಗುತ್ತದೆ. ಕೆಲವರಂತೂ ಸುಗಂಧವಿಲ್ಲದ ಹೂಗಳನ್ನು ಕರೆತರುತ್ತಾರೆ ಅವರನ್ನು ನೋಡಿ ಇವರೇನು ಪದವಿ ಪಡೆಯುತ್ತಾರೆಂದು ಮಾಲೀಕ ತಿಳಿಯುತ್ತಾರೆ, ಇನ್ನೂ ಸಮಯವಿದೆ, ಒಂದೊಂದು ಮುಳ್ಳನ್ನು ಹೂವನ್ನಾಗಿ ಮಾಡುವುದರಲ್ಲಿ ಪರಿಶ್ರಮವಿರುತ್ತದೆ. ಕೆಲವರಂತೂ ಹೂವಾಗಲು ಇಚ್ಛಿಸುವುದೇ ಇಲ್ಲ. ಮುಳ್ಳುಗಳನ್ನೇ ಇಚ್ಛಿಸುತ್ತಾರೆ. ಕಣ್ಣುಗಳ ವೃತ್ತಿಯು ಬಹಳ ಕೊಳಕಾಗಿರುತ್ತದೆ. ಇಲ್ಲಿ ಬಂದಾಗಲೂ ಅವರಿಂದ ಸುಗಂಧ ಬರುವುದಿಲ್ಲ. ಮಾಲೀಕರು ಬಯಸುತ್ತಾರೆ, ನನ್ನ ಮುಂದೆ ಹೂಗಳು ಕುಳಿತರೆ ಒಳ್ಳೆಯದು ಚೆನ್ನಾಗಿರುತ್ತದೆ, ಅವರನ್ನು ನೋಡಿ ಖುಷಿಪಡುತ್ತೇನೆ. ಒಂದು ವೇಳೆ ಇವರ ವೃತ್ತಿ ಹೀಗಿದೆ ಎಂದು ನೋಡಿದಾಗ ಅವರ ಕಡೆ ದೃಷ್ಟಿಯನ್ನೂ ಹರಿಸುವುದಿಲ್ಲ. ಆದ್ದರಿಂದ ಈ ನನ್ನ ಹೂಗಳು ಯಾವ ಪ್ರಕಾರದವರಾಗಿರುತ್ತಾರೆ, ಎಷ್ಟು ಸುಗಂಧ ಬೀರುತ್ತಾರೆ? ಮುಳ್ಳುಗಳಿಂದ ಹೂಗಳಾಗಿದ್ದಾರೆಯೇ ಅಥವಾ ಇಲ್ಲವೆ ಎಂದು ತಂದೆಯು ಪ್ರತಿಯೊಬ್ಬರನ್ನೂ ನೋಡುತ್ತಾರೆ? ತಾವೂ ಸಹ ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬಹುದು. ನಾವು ಎಲ್ಲಿಯವರೆಗೆ ಹೂಗಳಾಗಿದ್ದೇವೆ? ಪುರುಷಾರ್ಥ ಮಾಡುತ್ತೇವೆಯೇ? ಪದೇ ಪದೇ ಹೇಳುತ್ತಾರೆ - ಬಾಬಾ, ನಾವು ತಮ್ಮನ್ನು ಮರೆತುಬಿಡುತ್ತೇವೆ, ಯೋಗದಲ್ಲಿರಲು ಆಗುವುದಿಲ್ಲ. ಅರೆ! ನೆನಪು ಮಾಡದಿದ್ದರೆ ಹೂಗಳು ಹೇಗಾಗುತ್ತೀರಿ. ನೆನಪು ಮಾಡಿದರೆ ಪಾಪವು ತುಂಡಾಗುತ್ತದೆ. ಆಗ ಹೂಗಳಾಗಿ ಅನ್ಯರನ್ನೂ ಹೂವನ್ನಾಗಿ ಮಾಡುತ್ತೀರಿ. ಆಗ ಮಾಲಿ ಎಂದು ಹೆಸರಿಡಬಹುದು. ತಂದೆಗೆ ಮಾಲಿಯ ಅವಶ್ಯಕತೆ ಇದೆ, ಯಾರಾದರೂ ಮಾಲಿಗಳಿದ್ದೀರಾ? ಮಾಲಿಗಳಾಗಲು ಏಕೆ ಸಾಧ್ಯವಿಲ್ಲ? ಬಂಧನವನ್ನಂತೂ ಬಿಡಬೇಕು. ಒಳಗೆ ಇಚ್ಛೆಯು ಬರಬೇಕು. ಸೇವೆಯ ಉಲ್ಹಾಸವಿರಬೇಕು. ತಮ್ಮ ರೆಕ್ಕೆಗಳನ್ನು ಶಕ್ತಿಶಾಲಿ ಮಾಡಲು ಶ್ರಮಪಡಬೇಕು. ಯಾರಲ್ಲಿ ಪ್ರೀತಿಯಿದೆಯೋ ಅವರನ್ನು ಬಿಡಲಾಗುತ್ತದೆಯೇ? ತಂದೆಯ ಸೇವೆಗಾಗಿ ಎಲ್ಲಿಯವರೆಗೆ ಹೂವಾಗಿ ಅನ್ಯರನ್ನು ಮಾಡಲಿಲ್ಲವೋ ಅಲ್ಲಿಯವರೆಗೆ ಶ್ರೇಶ್ಠ ಪದವಿಯನ್ನು ಪಡೆಯಲು ಹೇಗೆ ಸಾಧ್ಯ? ಇದು 21 ಜನ್ಮಗಳಿಗೆ ಶ್ರೇಷ್ಠ ಪದವಿಯಾಗಿದೆ. ಮಹಾರಾಜರು, ರಾಜರು, ದೊಡ್ಡ ದೊಡ್ಡ ಸಾಹುಕಾರರು ಇದ್ದಾರೆ. ಮತ್ತೆ ನಂಬರ್ವಾರಾಗಿ ಕಡಿಮೆ ಸಾಹುಕಾರರೂ ಇದ್ದಾರೆ, ಪ್ರಜೆಗಳೂ ಇದ್ದಾರೆ. ಹಾಗಾದರೆ ನಾವು ಏನಾಗಬೇಕು? ಯಾರು ಈಗ ಪುರುಷಾರ್ಥ ಮಾಡುವರೋ ಅವರು ಕಲ್ಪ ಕಲ್ಪಾಂತರವೂ ಆಗುತ್ತಾರೆ. ಈಗ ಪೂರ್ಣ ಒತ್ತು ಕೊಟ್ಟು ಪುರುಷಾರ್ಥ ಮಾಡಬೇಕು. ನರನಿಂದ ನಾರಾಯಣನಾಗಬೇಕು, ಯಾರು ಒಳ್ಳೆಯ ಪುರುಷಾರ್ಥಿಗಳಿರುವರೋ ಅವರು ಕಾರ್ಯದಲ್ಲಿ ತರುತ್ತಾರೆ. ಪ್ರತಿನಿತ್ಯದ ಲಾಭ ನಷ್ಟವನ್ನು ನೋಡಬೇಕಾಗುತ್ತದೆ. 12 ತಿಂಗಳಿನ ಮಾತಲ್ಲ ನಿತ್ಯವೂ ತಮ್ಮ ಲಾಭ ನಷ್ಟಗಳನ್ನು ತೆಗೆಯಬೇಕು. ನಷ್ಟಕ್ಕೊಳಗಾಗಬಾರದು, ಇಲ್ಲದಿದ್ದರೆ ಮೂರನೇಯ ದರ್ಜೆಯವರಾಗಿಬಿಡುತ್ತೀರಿ. ಶಾಲೆಯಲ್ಲಿಯೂ ಸಹ ನಂಬರವಾರ್ ಇರುತ್ತಾರಲ್ಲವೆ! |
ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ - ನಮ್ಮ ಬೀಜವು ವೃಕ್ಷಪತಿಯಾಗಿದ್ದಾರೆ, ಅವರ ಬರುವಿಕೆಯಿಂದ ನಮ್ಮ ಮೇಲೆ ಬೃಹಸ್ಪತಿಯ ದೆಶೆ ಬರುತ್ತದೆ. ನಂತರ ರಾವಣ ರಾಜ್ಯ ಬಂದಾಗ ರಾಹು ದೆಶೆ ಕುಳಿತುಕೊಳ್ಳುತ್ತದೆ. ಅದು ಅತ್ಯಂತ ಶ್ರೇಷ್ಠ, ಇದು ಅತ್ಯಂತ ಕನಿಷ್ಠ. ಒಮ್ಮೆಲೆ ಶಿವಾಲಯದಿಂದ ವೇಶ್ಯಾಲಯವನ್ನಾಗಿ ಮಾಡಿಬಿಡುತ್ತಾರೆ. ಈಗ ನೀವು ಮಕ್ಕಳ ಮೇಲೆ ಬೃಹಸ್ಪತಿಯ ದೆಶೆಯಿದೆ. ಹೊಸ ವೃಕ್ಷವಾಗಿರುತ್ತದೆ ನಂತರ ಅರ್ಧದಿಂದ ಹಳೆಯದು ಪ್ರಾರಂಭ ಆಗುತ್ತದೆ. ಪ್ರತಿಯೊಬ್ಬ ಮಾಲಿಯೂ ಹೂವನ್ನು ಕರೆತರುತ್ತಾರೆ. ಕೆಲವರಂತೂ ತಂದೆಯ ಬಳಿ ಹೋಗಬೇಕು ಎಂದು ಚಡಪಡಿಸುವಂತಹ ಹೂಗಳನ್ನು ಕರೆದುಕೊಂಡು ಬರುತ್ತಾರೆ. ಎಂತೆಂತಹ ಯುಕ್ತಿಗಳಿಂದ ಮಕ್ಕಳು ಬರುತ್ತಾರೆ! ಬಹಳ ಒಳ್ಳೆಯ ಹೂಗಳನ್ನು ತಂದಿದ್ದಾರೆ ಎಂದು ತಂದೆಯು ಹೇಳುತ್ತಾರೆ. ಭಲೆ! ಮಾಲಿಯ ಎರಡನೇಯ ದರ್ಜೆಯವರಾಗಿದ್ದಾರೆ, ಮಾಲಿಗಿಂತ ಹೂಗಳು ಒಳ್ಳೆಯವರಿರುತ್ತಾರೆ. ನಮ್ಮನ್ನು ಇಷ್ಟು ಶ್ರೇಷ್ಠ ವಿಶ್ವದ ಮಾಲೀಕರನ್ನಾಗಿ ಮಾಡುವ ತಂದೆಯ ಬಳಿ ಹೋಗಬೇಕೆಂದು ಚಡಪಡಿಸುತ್ತಾರೆ. ಮನೆಯಲ್ಲಿ ಪೆಟ್ಟು ತಿಂದರೂ ಸಹ ಶಿವಬಾಬಾ ನಮ್ಮ ರಕ್ಷಣೆ ಮಾಡಿರೆಂದು ಹೇಳುತ್ತಾರೆ. ಅವರನ್ನೇ ಸತ್ಯ ದ್ರೌಪದಿಯರೆಂದು ಹೇಳಲಾಗುತ್ತದೆ. ಯಾವುದು ಕಳೆದುಹೋಗಿದೆ ಅದು ಪುನರಾವರ್ತನೆಯಾಗಬೇಕಾಗಿದೆ. ನೆನ್ನೆ ಕರೆದಿರಲ್ಲವೆ ಆದ್ದರಿಂದ ತಂದೆ ಇಂದು ರಕ್ಷಣೆ ಮಾಡಲು ಬಂದಿದ್ದಾರೆ. ಹೀಗೆ ಜ್ಞಾನದ ಧ್ವನಿ ಮಾಡಿರಿ ಎಂದು ಯುಕ್ತಿಗಳನ್ನು ತಿಳಿಸುತ್ತಾರೆ. ನೀವು ಭ್ರಮರಿಗಳಾಗಿದ್ದೀರಿ, ಅವರು ಕೀಟಗಳಾಗಿದ್ದಾರೆ. ಅವರಿಗೆ ಜ್ಞಾನದ ಧ್ವನಿ ಮಾಡುತ್ತಿರಿ. ಭಗವಾನುವಾಚ - ಕಾಮ ಮಹಾಶತ್ರುವಾಗಿದೆ ಅದನ್ನು ಜಯಿಸುವುದರಿಂದ ವಿಶ್ವದ ಮಾಲೀಕರಾಗುತ್ತೀರಿ. ಕೆಲವು ಸಮಯದಲ್ಲಿ ಅಬಲೆಯರ ಮಾತು ನಾಟುತ್ತದೆ ಆಗ ತಣ್ಣಗಾಗುತ್ತಾರೆ. ಒಳ್ಳೆಯದು - ಭಲೇ ಹೋಗಿ. ಈ ರೀತಿ ಮಾಡುವವರ ಬಳಿ ಭಲೇ ಹೋಗಿ, ನನ್ನ ಅದೃಷ್ಟದಲ್ಲಿ ಅಂತೂ ಇಲ್ಲ. ನೀವಾದರೂ ಹೋಗಿ ಎಂದು ಹೇಳುತ್ತಾರೆ. ಹೀಗೆ ದ್ರೌಪದಿಯರು ಕೂಗುತ್ತಾರೆ. ತಂದೆಯು ಬರೆಯುತ್ತಾರೆ- ಮಕ್ಕಳೇ ಜ್ಞಾನದ ಭೂ ಭೂ ಮಾಡಿ, ಕೆಲವು ಸ್ತ್ರೀಯರು ಎಂತೆಂತಹವರು ಇರುತ್ತಾರೆ ಎಂದರೆ ಅವರಿಗೆ ಶೂರ್ಪನಖಿ, ಪೂತನಿ ಎಂದು ಹೇಳಬೇಕಾಗುತ್ತದೆ. ಪುರುಷರು ಅವರಿಗೆ ಭೂ ಭೂ ಮಾಡುತ್ತಾರೆ, ಅವರು ಇನ್ನೂ ಕೀಟಗಳಾಗಿಬಿಡುತ್ತಾರೆ, ವಿಕಾರವಿಲ್ಲದೇ ಇರುವುದಕ್ಕೆ ಆಗುವುದಿಲ್ಲ. ಹೂದೋಟದ ಮಾಲೀಕನ ಬಳಿ ಭಿನ್ನ ಭಿನ್ನ ಪ್ರಕಾರದವರು ಬರುತ್ತಾರೆ, ಮಾತೇ ಕೇಳಬೇಡಿ. ಕೆಲವರು ಕನ್ಯೆಯರೂ ಸಹ ಮುಳ್ಳುಗಳಾಗುತ್ತಾರೆ, ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮ ಜನ್ಮ ಪತ್ರಿಯನ್ನು ತಿಳಿಸಿ. ತಂದೆಗೆ ತಿಳಿಸುವುದೇ ಇಲ್ಲ. ಮುಚ್ಚಿಡುತ್ತಾರೆಂದರೆ ಅದು ವೃದ್ಧಿಯಾಗುತ್ತದೆ. ಇಲ್ಲಿ ಅಸತ್ಯವು ನಡೆಯಲು ಸಾಧ್ಯವಿಲ್ಲ. ನಿಮ್ಮ ವೃತ್ತಿಯು ಇನ್ನೂ ಹಾಳಾಗುತ್ತಲೇ ಹೋಗುವುದು. ತಂದೆಗೆ ತಿಳಿಸುವುದರಿಂದ ಪಾರಾಗುತ್ತೀರಿ. ವಿಕಾರಿಗಳಾಗುವವರ ಮುಖ ಕಪ್ಪಾಗುತ್ತದೆ. ಪತಿತರೆಂದರೆ ಕಪ್ಪು ಮುಖ, ಕೃಷ್ಣನಿಗೂ ಶ್ಯಾಮ ಸುಂದರ ಎಂದು ಹೇಳುತ್ತಾರೆ. ಕೃಷ್ಣನನ್ನು ಕಪ್ಪಾಗಿ ಮಾಡಿದ್ದಾರೆ, ನಾರಾಯಣನನ್ನೂ ಕಪ್ಪಾಗಿ ತೋರಿಸುತ್ತಾರೆ, ಅರ್ಥವೇನೆಂದು ತಿಳಿದುಕೊಂಡಿಲ್ಲ. ನಿಮ್ಮ ಬಳಿಯಂತೂ ನಾರಾಯಣನ ಚಿತ್ರ ಸುಂದರವಾಗಿದೆ. ನಿಮ್ಮ ಗುರಿ ಧ್ಯೇಯವೇ ಇದಾಗಿದೆ - ನೀವು ಕಪ್ಪು ನಾರಾಯಣರಾಗಬೇಕೇನು? ಮಂದಿರಗಳಲ್ಲಿ ಹೇಗೆ ಮಾಡಿದ್ದಾರೆ ಆ ರೀತಿಯಂತೂ ಇರಲಿಲ್ಲ. ವಿಕಾರದಲ್ಲಿ ಬೀಳುವ ಕಾರಣ ಮುS ಕಪ್ಪಾಗುತ್ತದೆ. ಆತ್ಮವು ಕಪ್ಪಾಗಿದೆ. ಕಬ್ಬಿಣಯುಗದಿಂದ ಸ್ವರ್ಣಿಮ ಯುಗಕ್ಕೆ ಹೋಗಬೇಕಾಗಿದೆ, ಚಿನ್ನದ ಪಕ್ಷಿಗಳಾಗಬೇಕು. ಕಲ್ಕತ್ತೆಯ ಕಾಳಿಯೆಂದು ಕರೆಯುತ್ತಾರೆ, ಎಷ್ಟು ಭಯಂಕರ ಮುಖ ಕಾಣಿಸುತ್ತದೆ ಕೇಳಲೇಬೇಡಿ, ತಂದೆ ಹೇಳುತ್ತಾರೆ ಮಕ್ಕಳೇಇದೆಲ್ಲವೂ ಭಕ್ತಿಮಾರ್ಗವಾಗಿದೆ, ಈಗಂತೂ ನಿಮಗೆಲ್ಲ ಜ್ಞಾನ ಸಿಕ್ಕಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತ-ಪಿತ ಬಾಪ್ದಾದಾ ಅವರ ನೆನಪು ಪೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಮ್ಮ ರೆಕ್ಕೆಗಳನ್ನು ಸ್ವತಂತ್ರಗೊಳಿಸಲು ಶ್ರಮ ಪಡಬೇಕು. ಬಂಧನಗಳಿಂದ ಮುಕ್ತರಾಗಿ ಬುದ್ಧಿವಂತ ಮಾಲಿಗಳಾಗಬೇಕು. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. |
2. ತಮ್ಮನ್ನು ತಾವು ನೋಡಿಕೊಳ್ಳಬೇಕು - ನಾನು ಎಷ್ಟು ಸುಗಂಧ ಭರಿತ ಹೂವಾಗಿದ್ದೇನೆ? ನನ್ನ ವೃತ್ತಿಯು ಶುದ್ಧವಾಗಿದೆಯೇ? ಕಣ್ಣುಗಳು ಮೋಸ ಮಾಡುವುದಿಲ್ಲ ತಾನೆ? ತಮ್ಮ ನಡೆ-ನುಡಿಯ ಚಾರ್ಟ್ನ್ನಿಟ್ಟು ಕೊರತೆಗಳನ್ನು ತೆಗೆಯಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಇದನ್ನು ಯಾರು ಹೇಳಿದರು? ತಂದೆಯು ಮಕ್ಕಳಿಗೆ ಹೇಳಿದರು - ಮಕ್ಕಳೇ, ಗೀತೆಯನ್ನು ಕೇಳಿದಿರಾ? ಯಾವಾಗ ಅತೀ ದುಃಖವಾಗುತ್ತದೆಯೋ ಆಗ ಕರೆಯುತ್ತಾರೆ. ಮಕ್ಕಳಿಗೆ ತಿಳಿದಿದೆ - ತಂದೆಯೇ ಸುಖಧಾಮ ಅಥವಾ ಪಾವನ ಪ್ರಪಂಚವನ್ನು ರಚಿಸುತ್ತಾರೆ. ಭಗವಾನ್-ಭಗವತಿಯ ರಾಜ್ಯವನ್ನು ಸ್ಥಾಪನೆ ಮಾಡಿಸುತ್ತಾರೆ. ಭಗವಾನ್-ಭಗವತಿಯು ಸ್ವರ್ಗದ ಮಾಲೀಕರಾದರು. ನೀವು ನೋಡುತ್ತೀರಿ - ಲಕ್ಷ್ಮೀ-ನಾರಾಯಣರು ಎಷ್ಟು ಧನವಂತರಾಗಿದ್ದರು, ಎಷ್ಟು ದೊಡ್ಡ ರಾಜಧಾನಿಯಿತ್ತು! ಅವರ ರಾಜಧಾನಿಯಲ್ಲಿ ಎಂದೂ ಯಾವುದೇ ಉಪದ್ರವಗಳಾಗುವುದಿಲ್ಲ. ತಂದೆಯು ಮಕ್ಕಳಿಗೆ ಇಂತಹ ಆಸ್ತಿಯನ್ನು ಕೊಡುತ್ತಾರೆ ಅಂದಮೇಲೆ ಎಷ್ಟೊಂದು ಖುಷಿಯಲ್ಲಿರಬೇಕು ಆದರೆ ನಂಬರ್ವಾರ್ ಪುರುಷಾರ್ಥದ ಅನುಸಾರವಂತೂ ಇದ್ದೇ ಇರುತ್ತಾರೆ. ಕೆಲಕೆಲವರು ಜ್ಞಾನವನ್ನು ಪೂರ್ಣ ತೆಗೆದುಕೊಳ್ಳದೆ ಇರುವ ಕಾರಣ ಅಲ್ಲಿನ (ಕಲಿಯುಗ) ಖುಷಿಯಲ್ಲಿಯೂ ಇರುವುದಿಲ್ಲ ಮತ್ತು ಇಲ್ಲಿನ (ಸಂಗಮಯುಗದ) ಖುಷಿಯಲ್ಲಿಯೂ ಇರುವುದಿಲ್ಲ. ಅವರನ್ನು ಎರಡೂ ಲೋಕಗಳಿಂದ ಹೋದರು ಎಂದು ಹೇಳುತ್ತಾರೆ ಏಕೆಂದರೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗೆ ಬೀಳುತ್ತಾರೆ. ಭಗವಂತನು ಬಂದು ಸ್ವರ್ಗ ಸ್ಥಾಪನೆ ಮಾಡುತ್ತಿದ್ದಾರೆ ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಏಕೆಂದರೆ ಅವರು ಗುಪ್ತ ರೂಪದಲ್ಲಿ ಬರುತ್ತಾರೆ. ಅವಶ್ಯವಾಗಿ ಭಗವಂತನು ಈ ಸಮಯದಲ್ಲಿ ಇರಬೇಕು ಎಂದು ಹೇಳುತ್ತಾರೆ. ಏಕೆಂದರೆ ಎಲ್ಲರೂ ಘೋರ ಅಂಧಕಾರದಲ್ಲಿದ್ದಾರೆ. ರಾತ್ರಿ 12 ಗಂಟೆಯಾದರೆ ಅದಕ್ಕೆ ಘೋರ ಅಂಧಕಾರವೆಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ಘೋರ ಅಂಧಕಾರ, ದಿನದಲ್ಲಿ ಘೋರ ಪ್ರಕಾಶವಿರುತ್ತದೆ. ಮಕ್ಕಳಿಗೆ ತಿಳಿದಿದೆ - ಈಗ ಭಕ್ತಿಮಾರ್ಗದ ರಾತ್ರಿಯು ಮುಕ್ತಾಯವಾಗುತ್ತದೆ, ಇದರಲ್ಲಿ ದುಃಖವೇ ದುಃಖವಿದೆ, ಭಕ್ತಿಯ ನಂತರ ಭಗವಂತ ಸಿಗುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ತಂದೆಯೇ ಬಂದು ನಮ್ಮೆಲ್ಲರ ಸದ್ಗತಿ ಮಾಡುತ್ತಾರೆ, ನೀವು ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ, ಕೆಲವರಿಗೆ ಖುಷಿಯ ನಶೆಯೇರಿರುತ್ತದೆ. ಖುಷಿಯಿಂದ ಪರಿಶ್ರಮ ಪಡುತ್ತಾರೆ. ಯಾರಿಗಾದರೂ ಹೋಗಿ ತಿಳಿಸಬೇಕು ಎಂದು ಸರ್ವೀಸಿನ ಉಮ್ಮಂಗವಿರುತ್ತದೆ. ಆದ್ದರಿಂದ ತಂದೆಯು ಪ್ರದರ್ಶನಿ, ಮೇಳಗಳ ಪ್ರಬಂಧ ರಚಿಸುತ್ತಾ ಇರುತ್ತಾರೆ, ಅನ್ಯರಿಗೆ ತಿಳಿಸುವುದರಿಂದ ಖುಷಿಯ ನಶೆಯೇರಲಿ ಎಂದು. ಯಾರ ಬಳಿ ಹಣವಿದೆಯೋ ಅವರು ನಾವು ಸ್ವರ್ಗದಲ್ಲಿ ಕುಳಿತಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ಅವರು ಜ್ಞಾನವನ್ನು ತೆಗೆದುಕೊಳ್ಳುವುದೇ ಕಷ್ಟವಾಗುತ್ತದೆ, ಆದ್ದರಿಂದಲೇ ಗಾಯನವಿದೆ - ಕೋಟಿಯಲ್ಲಿ ಕೆಲವರೇ ಬುದ್ಧಿವಂತರಾಗಿ ತಂದೆಯ ಆಸ್ತಿಗೆ ಅಧಿಕಾರಿಗಳಾಗುತ್ತಾರೆ. ಫಾಲೋ ಫಾದರ್ ಎಂದು ಗಾಯನವಿದೆ, ಅಂದಮೇಲೆ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಯಾರು ಚೆನ್ನಾಗಿ ಶ್ರೀಮತದಂತೆ ನಡೆಯುವರೋ ಅವರನ್ನು ಫಾಲೋ ಮಾಡಬೇಕು. ಹೇಗೆ ಈ ಬ್ರಹ್ಮಾರವರು ಚೆನ್ನಾಗಿ ನಡೆಯುತ್ತಿದ್ದಾರೆ. ಲೌಕಿಕ ಮಕ್ಕಳು ತನ್ನ ಸಲಹೆಯಂತೆ ನಡೆಯಲಿಲ್ಲ ಆದ್ದರಿಂದ ನೀವು ತಮ್ಮ ಮಾರ್ಗವನ್ನು ನೋಡಿಕೊಳ್ಳಿ ಎಂದು ಹೇಳಿ ಬಿಟ್ಟರು. ರಾವಣನ ಮತದಂತೆ ನಡೆಯುವವರು ಮತ್ತು ರಾಮನ ಮತದಂತೆ ನಡೆಯುವವರು ಒಟ್ಟಿಗೆ ಇರಲು ಸಾಧ್ಯವಿಲ್ಲ. |
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಭಾರತದಲ್ಲಿಯೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಅವರು 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದಾರೆ ಆದ್ದರಿಂದಲೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇನ್ನು ಕೆಲವೇ ದಿನಗಳಿದೆ, ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ಸಮಯ ಹಿಡಿಸುತ್ತದೆ. ಇದು ಗುಪ್ತವಾಗಿದೆ. ಇದರಲ್ಲಿ ಯುದ್ಧದ ಮಾತಿಲ್ಲ. ಯುದ್ಧ ಮಾಡಿ ರಾಜ್ಯವನ್ನು ತೆಗೆದುಕೊಳ್ಳುತ್ತಾರೆ ಎಂದಲ್ಲ. ಇಲ್ಲಂತೂ ತಂದೆಯು ಬಂದು ರಾಜರಿಗೂ ರಾಜರನ್ನಾಗಿ ಮಾಡುತ್ತಾರೆ. ಯಾವ ತಂದೆಯನ್ನು ದುಃಖಹರ್ತ-ಸುಖಕರ್ತ ಬನ್ನಿ ಎಂದು ನೆನಪು ಮಾಡುತ್ತಾರೆ. ಸನ್ಯಾಸಿ ಗುರುಗಳು ದುಃಖಹರ್ತರಾಗಲು ಸಾಧ್ಯವೇ? ಅವರದ್ದು ಹದ್ದಿನ ಸನ್ಯಾಸವಾಗಿದೆ, ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ, ಇದರಲ್ಲಿ ಬೇಹದ್ದಿನ ಖುಷಿಯಿರುತ್ತದೆ. ಈ ಲಕ್ಷ್ಮೀ-ನಾರಾಯಣ ಭಗವಾನ್-ಭಗವತಿಗೂ ಸಹ ಬೇಹದ್ದಿನ ಖುಷಿಯಿದೆಯಲ್ಲವೆ. ಪತಿತ ಮನುಷ್ಯರಿಗೆ ಏನು ಬಂದರೆ ಅದನ್ನು ಹೇಳುತ್ತಾರೆ, ನೀವಂತೂ ಒಂದೊಂದು ಶಬ್ಧವನ್ನೂ ಅರ್ಥ ಸಹಿತವಾಗಿ ಹೇಳುತ್ತೀರಿ. ಹೊಸ ಪ್ರಪಂಚದಲ್ಲಿ ಒಂದೇ ಧರ್ಮವಿರುತ್ತದೆ, ಅದನ್ನು ಯಾವುದರೊಂದಿಗೂ ಹೋಲಿಕೆ ಮಾಡಲು ಆಗುವುದಿಲ್ಲ. ಹಳೆಯ ಪ್ರಪಂಚದಲ್ಲಿ ಹೋಲಿಕೆ ಮಾಡಲಾಗುತ್ತದೆ. ಹೊಸ ಪ್ರಪಂಚದಲ್ಲಿದ್ದಾಗ ಹಳೆಯ ಪ್ರಪಂಚದಲ್ಲಿ ಏನಿರುತ್ತದೆ ಎಂಬುದು ತಿಳಿದಿರುವುದೇ ಇಲ್ಲ. ಅಲ್ಲಿ ಎಲ್ಲವೂ ಮರೆತು ಹೋಗುತ್ತದೆ. ಇಲ್ಲಿ ನಿಮಗೆ ಹೊಸ ಪ್ರಪಂಚವು ಯಾವಾಗ ಸ್ಥಾಪನೆಯಾಗುವುದು, ಹಳೆಯ ಪ್ರಪಂಚವು ಯಾವಾಗ ವಿನಾಶವಾಗುವುದು ಎಂಬುದೆಲ್ಲವನ್ನೂ ತಿಳಿಸಲಾಗುತ್ತದೆ. ನಿಮಗೆ ಎಲ್ಲಾ ಜ್ಞಾನವಿದೆ. ಈಗ ನಿಮಗೆ ಸ್ವರ್ಗ ಸ್ಥಾಪನೆ ಮಾಡುವಂತಹ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಅವರಿಂದ ಚೆನ್ನಾಗಿ ಆಸ್ತಿಯನ್ನು ತೆಗೆದುಕೊಳ್ಳಬೇಕು. ಯಾರು ಕಲ್ಪದ ಮೊದಲು ಚೆನ್ನಾಗಿ ಪುರುಷಾರ್ಥ ಮಾಡಿದ್ದರೋ ಅವರಿಗೆ ಆಸ್ತಿಯು ಸಿಗುವುದು. ಅವರಲ್ಲಿಯೂ ನಂಬರ್ವಾರ್ ಇದ್ದಾರೆ. ಇದು ಮುಳ್ಳುಗಳ ಪ್ರಪಂಚವಾಗಿದೆ. ಮೊದಲನೇ ನಂಬರಿನ ಮುಳ್ಳಂತೂ ಎಲ್ಲರಲ್ಲಿಯೂ ಇದೆ, ಹಳೆಯ ಪ್ರಪಂಚವು ಛೀ ಛೀ ಆಗಿದೆ, ಹೊಸ ಪ್ರಪಂಚವು ಚೆನ್ನಾಗಿರುತ್ತದೆ. ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಇಂತಹವರು ಸ್ವರ್ಗವಾಸಿಯಾದರು ಎಂದು ಹೇಳಿ ಬಿಡುತ್ತಾರೆ. ಸ್ವರ್ಗವಾಸಿಯಾಗಲು ಈಗ ಸ್ವರ್ಗವಾದರೂ ಎಲ್ಲಿದೆ! |
ನೀವು ತಿಳಿದುಕೊಂಡಿದ್ದೀರಿ - ಸ್ವರ್ಗವೂ ಈ ಭಾರತದಲ್ಲಿಯೇ ಇತ್ತು, ನರಕವೂ ಭಾರತದಲ್ಲಿಯೇ ಇದೆ. ಆದ್ದರಿಂದ ಈ ಅಕ್ಷರವನ್ನು ಅವರು ಹಿಡಿದುಕೊಂಡು ಸ್ವರ್ಗ-ನರಕ ಇಲ್ಲಿಯೇ ಇದೆ, ಯಾರಿಗೆ ಬಹಳ ಹಣವಿದೆಯೋ ಅವರು ಸ್ವರ್ಗದಲ್ಲಿದ್ದಾರೆಂದು ಹೇಳಿ ಬಿಡುತ್ತಾರೆ ಆದರೆ ಈ ರೀತಿ ಇಲ್ಲ. ಭಾರತವು ಹೊಸದಾಗಿದ್ದಾಗ ಸತ್ಯಯುಗವಾಗಿತ್ತು, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈಗ ಪತಿತ ಪ್ರಪಂಚ ನರಕವಾಗಿದೆ. ಪ್ರಪಂಚವಂತೂ ಒಂದೇ ಆಗಿದೆ, ಹೊಸ ಪ್ರಪಂಚದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಹಳೆಯ ಪ್ರಪಂಚದಲ್ಲಿ ರಾವಣ ರಾಜ್ಯವಿದೆ. ಭಗವಾನುವಾಚ - ನಾನು ನಿಮಗೆ 84 ಜನ್ಮಗಳ ರಹಸ್ಯವನ್ನು ತಿಳಿಸುತ್ತೇನೆ, ಈ ರಾಜಯೋಗದಿಂದ ನಿಮ್ಮನ್ನು ರಾಜಾಧಿರಾಜರು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಅಂದಮೇಲೆ ನರಕದ ವಿನಾಶವು ಅವಶ್ಯವಾಗಿ ಆಗಬೇಕಾಗಿದೆ, ಶಾಸ್ತ್ರಗಳಲ್ಲಿ ಕೃಷ್ಣನ ಹೆಸರನ್ನು ಹಾಕಿ ಯುದ್ಧವನ್ನು ತೋರಿಸಿ ಬಿಟ್ಟಿದ್ದಾರೆ. ಪಾಂಡವರದು ಯಾವುದೇ ಸೇನೆಯಿಲ್ಲ, ಇತ್ತೀಚೆಗೆ ಕನ್ಯೆಯರು ಮಾತೆಯರನ್ನು ಪರಿವರ್ತನೆ ಮಾಡಿ ಅವರಿಗೆ ಬಂದೂಕು ಇತ್ಯಾದಿ ನಡೆಸುವುದನ್ನು ಕಲಿಸುತ್ತಾರೆ. ಇಲ್ಲಿ ನಿಮ್ಮ ಕೈಯಲ್ಲಿ ಬಂದೂಕು ಇತ್ಯಾದಿಗಳೇನೂ ಇಲ್ಲ. ಶಿವಶಕ್ತಿ ಸೇನೆ ಯಾವುದಾಗಿದೆ ಎಂಬುದು ಅವರಿಗೇನು ಗೊತ್ತಿದೆ? ಶಿವ ತಂದೆಯು ಎಂದೂ ಹಿಂಸೆ ಮಾಡಿಸುವುದಿಲ್ಲ, ಯುದ್ಧದ ಮಾತೇ ಇಲ್ಲ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯದು ಆತ್ಮಿಕ ಸೈನ್ಯವಾಗಿದೆ. ಶಿವ ತಂದೆಯು ನಮ್ಮನ್ನು ಡಬಲ್ ಅಹಿಂಸಕರನ್ನಾಗಿ ಮಾಡುತ್ತಾರೆ, ಅವರಿಗೆ 100% ಅಹಿಂಸಕರೆಂದು ಹೇಳಲಾಗುತ್ತದೆ. ಇವರು 100% ಹಿಂಸಕರಾಗಿದ್ದಾರೆ. ಒಂದೇ ಬಾಂಬಿನಿಂದ ಎಷ್ಟೊಂದು ಜನರ ವಿನಾಶ ಮಾಡುತ್ತಾರೆ. ಬೇಹದ್ದಿನ ಅಹಿಂಸೆ ಮತ್ತು ಹಿಂಸೆಯಲ್ಲಿ ಎಷ್ಟೊಂದು ಅಂತರವಿದೆ. ನೀವೀಗ ಈ ಸಮಯದಲ್ಲಿ ಬೇಹದ್ದಿನ ಶಾಂತಿಯಲ್ಲಿದ್ದೀರಿ, ಒಂದುಕಡೆ ಎಷ್ಟೊಂದು ಯುದ್ಧದ ತಯಾರಿ ಆಗುತ್ತಾ ಹೋಗುತ್ತಿದೆಯೋ ಅಷ್ಟೇ ಗಲಾಟೆಯು ಹೆಚ್ಚುತ್ತಾ ಹೋಗುತ್ತದೆ. ವಿನಾಶದಲ್ಲಿ ಎಷ್ಟೊಂದು ಹೊಡೆದಾಟವಾಗುತ್ತದೆ. ಸ್ಥಾಪನೆಯಲ್ಲಿ ನೀವು ಎಷ್ಟೊಂದು ಶಾಂತಿಯಲ್ಲಿ ಕುಳಿತಿದ್ದೀರಿ, ಯಾವುದೇ ಹಿಂಸೆಯ ಮಾತಿಲ್ಲ. ನಿಮ್ಮದು ಈಗ ಪ್ರತ್ಯಕ್ಷ ಜೀವನವಾಗಿದೆ. ತಂದೆಯಿಂದ ಯೋಗಬಲದ ಮೂಲಕ ಆಸ್ತಿಯನ್ನು ಪಡೆಯುತ್ತೀರಿ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದರಿಂದ ಸ್ವರ್ಗದ ರಾಜ್ಯಭಾಗ್ಯ ಸಿಗುತ್ತದೆ, ಎಷ್ಟು ಸಹಜವಾಗಿದೆ! ತಂದೆಯು ಎಷ್ಟು ಪ್ರಿಯಾತಿ ಪ್ರಿಯರಾಗಿದ್ದಾರೆ. ಎಷ್ಟು ದೂರ ದೇಶದಿಂದ ಬರುತ್ತಾರೆ, ಹೇಗೆ ವಿದೇಶದಿಂದ ಯಾರ ತಂದೆಯಾದರೂ ಬರುತ್ತಾರೆಂದರೆ ಮಕ್ಕಳು ಬಹಳ ಖುಷಿಯಾಗುತ್ತಾರೆ - ನಮ್ಮ ತಂದೆಯು ನಮಗಾಗಿ ಒಳ್ಳೊಳ್ಳೆಯ ಉಡುಗೊರೆ ತರುತ್ತಾರೆ ಎಂದು. ಈ ಬೇಹದ್ದಿನ ತಂದೆಯಂತೂ ಒಂದೇ ಬಾರಿ ಬರುತ್ತಾರೆ, ಯಾವ ಉಡುಗೊರೆಯನ್ನು ತರುತ್ತಾರೆ? ನಾನು ನಿಮಗಾಗಿ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದೇನೆ ಎಂದು ಹೇಳುತ್ತಾರೆ. ಹೇಗೆ ಹನುಮಂತನು ಸಂಜೀವಿನಿ ಮೂಲಿಕೆಯ ಪರ್ವತವನ್ನೇ ತಂದೆನೆಂದು ಹೇಳುತ್ತಾರೆ, ಈಗ ಪರ್ವತವನ್ನಂತೂ ಎತ್ತಲು ಯಾರಿಂದಲೂ ಸಾಧ್ಯವಿಲ್ಲ ಹಾಗೆಯೇ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದೇನೆಂದು ಹೇಳುತ್ತಾರೆ. ಆದರೆ ಸ್ವರ್ಗವನ್ನು ಅಂಗೈಯಲ್ಲಿ ಎತ್ತಲು ಸಾಧ್ಯವಿಲ್ಲ. ಇದು ಕೇವಲ ತಿಳಿದುಕೊಳ್ಳುವ ಮಾತುಗಳಾಗಿವೆ, ತಂದೆಯು ನಮಗಾಗಿ ನಂಬರ್ವನ್ ಉಡುಗೊರೆಯನ್ನು ತಂದಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ ಅಂದಮೇಲೆ ನೀವು ಪಾವನರಾಗಬೇಕಾಗುತ್ತದೆ, ಇದು ರಾಜಯೋಗವಲ್ಲವೆ. ಭಾರತದ ಪ್ರಾಚೀನ ರಾಜಯೋಗವನ್ನು ಗೀತೆಯ ಭಗವಂತನೇ ಕಲಿಸಿದ್ದರು ಮತ್ತು ರಾಜ್ಯಭಾಗ್ಯವನ್ನೂ ನೀಡಿದ್ದರು, ಈಗ ಪುನಃ ರಾಜಯೋಗವನ್ನು ಕಲಿಸುತ್ತಿದ್ದಾರೆ. ನಾವು ಸ್ವರ್ಗದ ಸ್ಥಾಪನೆ ಮಾಡುವಂತಹ ತಂದೆಯ ಮಕ್ಕಳಾಗಿದ್ದೇವೆ ಎಂದು ನೀವು ಹೇಳುತ್ತೀರಿ. ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆಂದರೆ ಅವಶ್ಯವಾಗಿ ಯಾರಿಗೋ ರಾಜ್ಯಭಾಗ್ಯವು ಸಿಕ್ಕಿರಬೇಕಲ್ಲವೆ. ಕೇವಲ ಸ್ವರ್ಗದಲ್ಲಿ ಇರುವವರಿಗೇ ತಂದೆಯು ಕೊಟ್ಟಿರುವರು ಎಂದಲ್ಲ, ಮತ್ತೆಲ್ಲರಿಗೂ ತಂದೆಯು ಕೊಡುತ್ತಾರಲ್ಲವೆ. ಉಳಿದೆಲ್ಲರಿಗೆ ಡ್ರಾಮಾನುಸಾರ ಮುಕ್ತಿಯ ಪಾತ್ರವು ಸಿಕ್ಕಿದೆ, ಎಲ್ಲರೂ ಮುಕ್ತರಾಗಿ ಬಿಡುತ್ತಾರೆ. ಒಬ್ಬ ತಂದೆಯೇ ಸರ್ವರ ಸದ್ಗತಿದಾತನಾಗಿದ್ದಾರೆ ಮತ್ತ್ಯಾರೂ ಅಲ್ಲ. ನಿಮ್ಮ ಬಳಿ ಪ್ರದರ್ಶನಿಯಲ್ಲಿ ಯಾರು ಪ್ರಸಿದ್ಧ ವ್ಯಕ್ತಿಗಳು ಬರುತ್ತಾರೆಯೋ ಅವಶ್ಯವಾಗಿ ಗೀತೆಯ ಭಗವಂತನು ಶ್ರೀಕೃಷ್ಣನಲ್ಲ, ಶಿವನಾಗಿದ್ದಾರೆ ಎಂಬುದನ್ನು ಒಪ್ಪುತ್ತಾರೆಯೋ ಅವರಿಂದ ಅಭಿಪ್ರಾಯವನ್ನು ಬರೆಸಿಕೊಳ್ಳಬೇಕಾಗಿದೆ. ದೊಡ್ಡ ವ್ಯಕ್ತಿಗಳ ಮಾತನ್ನೇ ಕೇಳುತ್ತಾರೆ, ಬಡವರ ಮಾತನ್ನು ಯಾರೂ ಕೇಳುವುದಿಲ್ಲ ಆದ್ದರಿಂದ ಪ್ರದರ್ಶನಿಯಲ್ಲಿ ಪ್ರಯತ್ನ ಮಾಡಿ. ಇದನ್ನು ಬರೆಸಿಕೊಳ್ಳಿ - ಗೀತೆಯ ಭಗವಂತ ಒಬ್ಬರೇ ಆಗಿದ್ದಾರೆ, ಅವರು ಎಲ್ಲರ ತಂದೆಯಾಗಿದ್ದಾರೆ. ಇಂದಿಗೆ 5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗಂತೂ ಇಡೀ ವಿಶ್ವದಲ್ಲಿ ರಾವಣನ ರಾಜ್ಯವಿದೆ, ರಾವಣನೇ ಎಲ್ಲರ ಶತ್ರುವಾಗಿದ್ದಾನೆ ಯಾರನ್ನು ವರ್ಷ-ವರ್ಷವೂ ಸುಡುತ್ತಾರೆ ಆದರೂ ಸಾಯುವುದಿಲ್ಲ. ಈಗ ಭಾರತದ ದೊಡ್ಡ ಶತ್ರು ಈ ರಾವಣನಾಗಿದ್ದಾನೆ. ಈ ಮಾತನ್ನು ಕೇವಲ ನೀವು ತಿಳಿದುಕೊಂಡಿದ್ದೀರಿ. ಈಗ ರಾಮನಾದ ಪರಮಪಿತ ಪರಮಾತ್ಮನು ರಾವಣನ ಮೇಲೆ ಜಯ ಪ್ರಾಪ್ತಿ ಮಾಡಿಸುತ್ತಾರೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪವು ನಾಶವಾಗುತ್ತದೆ ಎಂದು ಹೇಳುತ್ತಾರೆ, ನೀವು ಯೋಗ್ಯರಾಗುತ್ತೀರೆಂದರೆ ಮತ್ತೆ ನಿಮಗಾಗಿ ಹೊಸ ಪ್ರಪಂಚ ಬೇಕು, ಅವಶ್ಯವಾಗಿ ಹಳೆಯ ಪ್ರಪಂಚದ ವಿನಾಶವೂ ಆಗಿತ್ತು ಅದು ಪುನಃ ಆಗುವುದು. ಯಾವಾಗ ರಾವಣ ರಾಜ್ಯವು ವಿನಾಶವಾಗಿ ರಾಮ ರಾಜ್ಯವು ಸ್ಥಾಪನೆಯಾಗುತ್ತದೆಯೋ ಆಗಲೇ ಮಹಾಭಾರತ ಯುದ್ಧವಾಗುತ್ತದೆ. ರಾವಣ ರಾಜ್ಯದಲ್ಲಿಯೇ ಆಹಾಕಾರವು ಆರಂಭವಾಗುತ್ತದೆ. ಆಹಾಕಾರದ ನಂತರ ಜಯ ಜಯಕಾರವಾಗುತ್ತದೆ. ಪ್ರಪಂಚವು ಪರಿವರ್ತನೆಯಾಗುತ್ತದೆ. ಹೇಗೆ ಹಳೆಯ ಮನೆಯನ್ನು ಬಿಟ್ಟು ಹೊಸ ಮನೆಯನ್ನು ಕಟ್ಟಿಸಲಾಗುತ್ತದೆ ನಂತರ ಅದನ್ನು ಬೀಳಿಸಲಾಗುತ್ತದೆ ಹಾಗೆಯೇ ಇದು ಸ್ಥಾಪನೆಯಾಗುತ್ತಿದೆ. ಬಾಂಬುಗಳನ್ನು ಮಾಡುತ್ತಲೇ ಇರುತ್ತಾರೆ, ತಯಾರಿಗಳು ನಡೆಯುತ್ತಿದೆ. ಈಗ ದಶಹರಾ ಆಯಿತು, ರಾವಣನ ಪ್ರತಿಮೆಯನ್ನು ಮಾಡಿಸಿದ್ದರು, ನಿಮ್ಮದು ಬೇಹದ್ದಿನ ಮಾತಾಗಿದೆ. ಇವರೇನು ಮಾಡುತ್ತಾರೆ ಎಂದು ಈಗ ನಿಮ್ಮ ಬುದ್ಧಿಯಲ್ಲಿ ಬರುತ್ತದೆ. ನೀವು ಯಾವಾಗ ತಿಳಿಸುತ್ತೀರೋ ಆಗಲೇ ನಾವು ಏನು ಮಾಡುತ್ತಿದ್ದೇವೆ ಎಂಬುದು ಅರ್ಥವಾಗುತ್ತದೆ. ನಗು ಬರುತ್ತದೆ. ಯಾರಿಗಾದರೂ ತಿಳಿಸಬಲ್ಲಿರಿ - ಇಷ್ಟು ದೊಡ್ಡ ರಾವಣನಂತೂ ಇರುವುದೇ ಇಲ್ಲ, ಈಗ ತಂದೆಯು ಹೇಳುತ್ತಾರೆ - ನೀವು ರಾಮ ರಾಜ್ಯವನ್ನು ತೆಗೆದುಕೊಳ್ಳಿ, ಐದು ವಿಕಾರಗಳ ದಾನವನ್ನು ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದು. ತಂದೆಯು ಬಂದು ತಿಳಿಸುತ್ತಾರೆ - ಇಡೀ ಪ್ರಪಂಚಕ್ಕೆ ಈ ಐದು ವಿಕಾರಗಳ ಗ್ರಹಣ ಹಿಡಿದಿದೆ. ಸಂಪೂರ್ಣ ಕಪ್ಪಾಗಿ ಬಿಡುತ್ತಾರೆ, ನೀವು ಮಕ್ಕಳಿಗೆ ಅಪಾರ ಖುಷಿಯಿರಬೇಕು - ಇನ್ನು ಕೆಲವೇ ದಿನಗಳಿವೆ. |
ನೀವೀಗ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿಗಳು, ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ಈಗ ನಿಮ್ಮದು ಸ್ವಚ್ಛ ಬುದ್ಧಿಯಾಗಿದೆ. ನೀವು ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ಸ್ವರ್ಗದಲ್ಲಿ ಕಳುಹಿಸುತ್ತಾರೆ. ಜ್ಞಾನವು ಆದಾಯದ ಮೂಲವೆಂದು ಹೇಳಲಾಗುತ್ತದೆ, ಇದು ಆತ್ಮಿಕ ಜ್ಞಾನವಾಗಿದೆ, ಇದನ್ನು ತಂದೆಯೇ ತಿಳಿಸುತ್ತಾರೆ. ಮನುಷ್ಯರು ಮನುಷ್ಯರಿಗೆ ತಿಳಿಸಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಎಲ್ಲರೂ ಮನುಷ್ಯರು ಮನುಷ್ಯರಿಗೆ ಜ್ಞಾನವನ್ನು ತಿಳಿಸುತ್ತಾರೆ. ಇಲ್ಲಿ ನಿಮಗೆ ಪರಮಾತ್ಮನೇ ಬಂದು ಜ್ಞಾನವನ್ನು ತಿಳಿಸುತ್ತಾರೆ ಉಳಿದೆಲ್ಲರೂ ಭಕ್ತಿಮಾರ್ಗದ ದಂತ ಕಥೆಗಳನ್ನು ತಿಳಿಸುವವರಾಗಿದ್ದಾರೆ. ಸತ್ಯ ನಾರಾಯಣನ ಕಥೆ, ರಾಮಾಯಣದ ಕಥೆ.... ಯಾವುದು ಕಳೆದು ಹೋಗಿದೆಯೋ ಅವನ್ನು ಒಂದಲ್ಲ ಒಂದು ರಚಿಸುತ್ತಾ ಇರುತ್ತಾರೆ. ಇದು ವಿದ್ಯೆಯಾಗಿದೆ, ವಿದ್ಯೆಯಲ್ಲಿ ಚರಿತ್ರೆ-ಭೂಗೋಳವನ್ನು ತಿಳಿಸಲಾಗುತ್ತದೆ, ಇದು ವಿಶ್ವದ ಚರಿತ್ರೆ-ಭೂಗೋಳವಾಗಿದೆ. ನೀವು ತಿಳಿಸುತ್ತೀರಿ - ತಂದೆಯು 5000 ವರ್ಷಗಳ ಮೊದಲೂ ಸಹ ತಿಳಿಸಿದ್ದರು, ಆ ಗೀತೆಯನ್ನು ಓದುವವರು ಏನನ್ನೂ ತಿಳಿದುಕೊಂಡಿಲ್ಲ. ಕೌರವರು, ಪಾಂಡವರು ಯಾದವರು ಎಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನು ನೀವು ಪ್ರತ್ಯಕ್ಷದಲ್ಲಿ ನೋಡುತ್ತೀರಿ. ಯುರೋಪಿಯನ್ ಯಾದವರು ಅಣ್ವಸ್ತ್ರಗಳನ್ನು ಕಂಡುಹಿಡಿದರು ವಿನಾಶವಾಯಿತು, ವಿನಾಶದ ನಂತರ ಏನಾಯಿತು ಅದೇನನ್ನೂ ತೋರಿಸಿಲ್ಲ. ಪ್ರಳಯವಾಯಿತೆಂದು ತಿಳಿದುಕೊಳ್ಳುತ್ತಾರೆ. ನೀವು ಶಾಸ್ತ್ರಗಳನ್ನು ಒಪ್ಪುವುದಿಲ್ಲವೆಂದು ಅವರು ಹೇಳುತ್ತಾರೆ ಆಗ ಹೇಳಿರಿ, ಹೌದು ನಾವು ಶಾಸ್ತ್ರಗಳನ್ನು ತಿಳಿದುಕೊಂಡಿದ್ದೇವೆ ನಂಬುತ್ತೇವೆ - ಇವೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಜ್ಞಾನವನ್ನು ಒಬ್ಬ ತಂದೆಯೇ ತಿಳಿಸುತ್ತಾರೆ. ಅವರು ಜ್ಞಾನಸಾಗರನಾಗಿದ್ದಾರೆ. ಈಗ ಭಕ್ತಿಯು ಸಮಾಪ್ತಿಯಾಗಿ ಜ್ಞಾನದ ವಿಜಯವಾಗುತ್ತಿದೆ. ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ, ನತಿಂಗ್ನ್ಯೂ. ನಮ್ಮ ಪ್ರೀತಿಯು ತಂದೆಯೊಂದಿಗೆ ಇದೆ, ನಾವು ಅನ್ಯ ಸಂಗಗಳನ್ನು ಬಿಟ್ಟು ಒಬ್ಬರ ಸಂಗವನ್ನು ಸೇರುತ್ತೇವೆ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನನ್ನ ಜೊತೆ ಬುದ್ಧಿಯೋಗವನ್ನು ಜೋಡಿಸಿ, ಇದಕ್ಕೆ ಪ್ರಾಚೀನ ಯೋಗವೆಂದು ಹೇಳಲಾಗುತ್ತದೆ ಅದನ್ನು ತಂದೆಯೇ ಕಲಿಸುತ್ತಾರೆ. ಕೃಷ್ಣನ ಆತ್ಮವೂ ಸಹ ಈ ಸಮಯದಲ್ಲಿ ಅಂತಿಮ ಜನ್ಮದಲ್ಲಿದ್ದಾರೆ. ಇವರಿಗೂ ಹೇಳುತ್ತಾರೆ - ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ಇದು ನಿಮ್ಮ ಬಹಳ ಜನ್ಮಗಳ ಅಂತಿಮವಾಗಿದೆ ಆದ್ದರಿಂದ ನಾನು ಪ್ರವೇಶ ಮಾಡಿದ್ದೇನೆ. ಇವರಲ್ಲಿ ಕುಳಿತು ನೀವು ಮಕ್ಕಳನ್ನು ಬ್ರಹ್ಮಾಮುಖವಂಶಾವಳಿಯನ್ನಾಗಿ ಮಾಡಿ ರಾಜ್ಯಭಾಗ್ಯವನ್ನು ಕೊಡುತ್ತೇನೆ. ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ, ಇದನ್ನು ಸ್ವಯಂ ತಂದೆಯೇ ಈ ಮುಖದ ಮೂಲಕ ತಿಳಿಸುತ್ತಿದ್ದಾರೆ. ಈ ತಂದೆಯೂ ಸಹ ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ, ನೀವೂ ತಿಳಿದುಕೊಂಡಿರಲಿಲ್ಲ. ಭಾರತವಾಸಿಗಳಿಗೇ ತಿಳಿಸಬೇಕಾಗಿದೆ. 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ, ಇದು ಅದೇ ಕಲ್ಪದ ಹಿಂದಿನ ಯುದ್ಧವು ನಿಂತಿದೆ ಯಾವುದರಿಂದ ಸ್ವರ್ಗದ ಬಾಗಿಲು ತೆರೆದಿತ್ತು. ತಂದೆಯು ಬಂದು ರಾಜಯೋಗವನ್ನು ಕಲಿಸಿ ಮನುಷ್ಯರನ್ನು ದೇವತೆಯನ್ನಾಗಿ ಮಾಡಿದ್ದರು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯಾರು ಚೆನ್ನಾಗಿ ಶ್ರೀಮತದಂತೆ ನಡೆಯುತ್ತಾರೆಯೋ ಅವರನ್ನೇ ಫಾಲೋ ಮಾಡಬೇಕಾಗಿದೆ. ಬೇಹದ್ದಿನ ಖುಷಿಯಲ್ಲಿರಲು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ. |
2. ಪ್ರೀತಿ ಬುದ್ಧಿಯವರಾಗಿ ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬ ತಂದೆಯ ಸಂಗ ಮಾಡಬೇಕಾಗಿದೆ. ಡಬಲ್ ಅಹಿಂಸಕರಾಗಿ ಶಾಂತಿಯಲ್ಲಿ ಕುಳಿತು ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆ. |
ಓಂ ಶಾಂತಿ. ಮೇಳ ಹಾಗೂ ಪ್ರದರ್ಶನಿಗಳಲ್ಲಿ ಮಕ್ಕಳು ತಿಳಿಸುತ್ತೀರೆಂದರೆ ಯಾವ ಮಾತುಗಳು ತಿಳಿಸಲು ಯೋಗ್ಯವಾಗಿದೆಯೋ ಅವನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಈ ಮಾತನ್ನಂತೂ ಅವಶ್ಯವಾಗಿ ತಿಳಿಸಬೇಕಾಗಿದೆ - ಎಲ್ಲಾ ಆತ್ಮರ ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ಭಾರತದ ಆದಿ ಸನಾತನ ಧರ್ಮ ಯಾವುದಾಗಿದೆ? ಎಂಬುದನ್ನೂ ಸಹ ಕೇಳಬೇಕಾಗಿದೆ. ಮನುಷ್ಯರಂತೂ ಆದಿ ಸನಾತನ ಧರ್ಮವನ್ನು ಹಿಂದೂ ಧರ್ಮವೆಂದೇ ತಿಳಿದುಕೊಳ್ಳುತ್ತಾರೆ. ಇಸ್ಲಾಮಿ, ಬೌದ್ಧ, ಕ್ರಿಶ್ಚಿಯನ್ ಮೊದಲಾದವರಿಗೆ ನಮ್ಮ ಧರ್ಮವನ್ನು ಯಾರು ಮತ್ತು ಯಾವಾಗ ಸ್ಥಾಪನೆ ಮಾಡಿದರೆಂಬುದು ತಿಳಿದಿದೆ ಆದರೆ ಭಾರತವಾಸಿಗಳದು ಹಿಂದೂ ಧರ್ಮವೇ ಅಥವಾ ದೇವಿ-ದೇವತಾ ಧರ್ಮವೇ? ಇದನ್ನು ಯಾರು ಮತ್ತು ಯಾವಾಗ ಸ್ಥಾಪನೆ ಮಾಡಿದರು? ಇದನ್ನು ಭಾರತವಾಸಿಗಳು ಸ್ವಲ್ಪವೂ ತಿಳಿದುಕೊಂಡಿಲ್ಲ. ಇದು ಖಂಡಿತವಾಗಿಯೂ ತಿಳಿಸುವ ಮಾತಾಗಿದೆ. ಇದು ಯಾರ ಗಮನದಲ್ಲಿಯೂ ಬರುವುದಿಲ್ಲ. ಭಾರತ ದೇಶವನ್ನು ಪ್ರಾಚೀನ ಎಂದು ಹೇಳಲಾಗುತ್ತದೆ ಆದರೆ ನಮ್ಮದು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಹಿಂದೂ ಎಂಬುದು ಯಾವುದೇ ಧರ್ಮವಲ್ಲ ಎಂದು ಅವರಿಗೆ ತಿಳಿದೇ ಇಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, 5000 ವರ್ಷಗಳ ಮೊದಲು ದೇವಿ-ದೇವತಾ ಧರ್ಮವಿತ್ತು, ಆ ಸಮಯದಲ್ಲಿ ಲಕ್ಷ್ಮೀ-ನಾರಾಯಣರು ರಾಜ್ಯಭಾರ ಮಾಡುತ್ತಿದ್ದರು, ಅವರು ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಿರಲಿಲ್ಲ. ಒಳ್ಳೆಯದು. ಹಿಂದೂ ಧರ್ಮಕ್ಕೂ ಯಾವುದಾದರೂ ಸಂವತ್ಸರ ಇರಬೇಕಲ್ಲವೇ. ವಿಕ್ರಮ ಸಂವತ್ಸರವೆಂದು ಯಾವುದನ್ನು ಹೇಳುತ್ತಾರೆ, ಯಾವಾಗಿನಿಂದ ದೇವತೆಗಳು ವಾಮ ಮಾರ್ಗದಲ್ಲಿ ಹೋದರೋ ಆಗಿನಿಂದ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳಲು ಆರಂಭಿಸುತ್ತಾರೆ. ಭಲೆ ಆಗಿನಿಂದ ವಿಕ್ರಮ ಸಂವತ್ಸರವೆಂದು ಹೇಳಬಹುದಾಗಿದೆ ಅಂದಮೇಲೆ ಅರ್ಧ-ಅರ್ಧ ಭಾಗ ಆಯಿತಲ್ಲವೆ. ಆ ಸಮಯದಲ್ಲಿ ಅವರನ್ನು ಆದಿ ಸನಾತನ ದೇವಿ-ದೇವತೆಗಳೆಂದು ಹೇಳುವುದಿಲ್ಲ. ಧರ್ಮ ಸ್ಥಾಪನೆಯಾದಾಗ ಸಂವತ್ಸರವೆಂದು ಹೇಳಲಾಗುತ್ತದೆ, ಅದನ್ನು ಯಾರು ಸ್ಥಾಪನೆ ಮಾಡಿದರು? ವಿಕರ್ಮ ಸಂವತ್ಸರವನ್ನು ರಾವಣನು ಸ್ಥಾಪನೆ ಮಾಡಿದನು. ಆ ಸಮಯದಲ್ಲಿ ಎಲ್ಲರ ಕರ್ಮಗಳು ವಿಕರ್ಮಗಳಾಗುತ್ತಾ ಹೋಯಿತು. ಕರ್ಮ-ಅಕರ್ಮ-ವಿಕರ್ಮ ಎಂಬ ಹೆಸರುಗಳಂತೂ ಇವೆಯಲ್ಲವೆ ಅಂದಾಗ ವಿಕ್ರಮ ರಾಜನ ಸಂವತ್ಸರವೂ ನಡೆಯುತ್ತದೆ. ಅದಂತೂ ಅರ್ಧ ಸಮಯ ಆಗಿ ಹೋಯಿತು. ಈ ವಿಕ್ರಮ ಸಂವತ್ಸರವು ಹಿಂದೂಗಳ ಸಂವತ್ಸರವಂತೂ ಅಲ್ಲ, ಅಂದಮೇಲೆ ಇದನ್ನು ಕೇಳಬೇಕು - ಭಾರತದ ಆದಿ ಸನಾತನ ದೇವಿ-ದೇವತಾ ಧರ್ಮವು ಯಾವಾಗ ಸ್ಥಾಪನೆಯಾಯಿತು? ಅರ್ಥವಾಗಬೇಕಲ್ಲವೆ. ಇವು ಬಹಳ ನಾಜೂಕು ಮಾತುಗಳಾಗಿವೆ. ಯಾವಾಗ ಇದು ಅರ್ಥವಾಗುವುದೋ ಆಗ ಲೆಕ್ಕ ಮಾಡಬಹುದು - ಹೊಸ ಪ್ರಪಂಚವು ಇತ್ತು ಮತ್ತೆ ದಿನದಿಂದ ಅವಶ್ಯವಾಗಿ ರಾತ್ರಿಯಾಗುತ್ತದೆ. ಅವಶ್ಯವಾಗಿ ಅರ್ಧ-ಅರ್ಧ ಭಾಗವಿರುತ್ತದೆ. ಇದೊಂದು ಈಶ್ವರೀಯ ಕಾಯಿದೆಯಾಗಿದೆ. ಇದನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಇಂತಹ ಸಮಾಚಾರವನ್ನು ಎಂದೂ ಯಾರೂ ಕಳುಹಿಸಿಲ್ಲ. ಕ್ರಿಶ್ಚಿಯನ್ನರದೂ ಸಹ ಅರ್ಧ ಸುಖ, ಅರ್ಧ ದುಃಖದ ಪಾತ್ರವು ನಡೆಯುವುದು. ನಾವು ತಿಳಿಸುವುದರಲ್ಲಿ ಇಡೀ ಚರಿತ್ರೆ-ಭೂಗೋಳವೇ ಬಂದು ಬಿಡುತ್ತದೆ. ಮನುಷ್ಯರು ಯಾರೆಲ್ಲರೂ ಬರುತ್ತಾರೆಯೋ ಅವರಿಗೆ ದುಃಖ-ಸುಖದ ಪಾತ್ರವು ಸಿಕ್ಕಿದೆ. ಒಂದೆರಡು ಜನ್ಮಗಳಿಗಾಗಿ ಬಂದರೂ ಸಹ ಅದರಲ್ಲಿಯೇ ಅರ್ಧ ಸುಖ-ಅರ್ಧ ದುಃಖವಿರುವುದು. ಇದು ಒಂದು ಈಶ್ವರೀಯ ಕಾಯಿದೆಯಾಗಿದೆ. ಪ್ರದರ್ಶನಿಯಲ್ಲಿ ಕೇಳುವಾಗ ಚೆನ್ನಾಗಿದೆ, ಚೆನ್ನಾಗಿದೆ ಎಂದು ಹೇಳುತ್ತಾರೆ. ಹೊರಗಡೆ ಹೋಗುತ್ತಿದ್ದಂತೆಯೇ ಮರೆತು ಹೋಗುತ್ತಾರೆ. ಕೆಲವರೇ ವಿರಳ ಗಮನ ಕೊಡುತ್ತಾರೆ, ಕೆಲವರು ಒಂದು ತಿಂಗಳವರೆಗೆ ಬಂದು ಮಾಯವಾಗಿ ಬಿಡುತ್ತಾರೆ. ಕೆಲವರು ಹತ್ತು ನಿಮಿಷ ತಿಳಿದುಕೊಳ್ಳುತ್ತಾರೆ, ಇನ್ನೂ ಕೆಲವರು ಒಂದು ಘಂಟೆ, ಇನ್ನೂ ಕೆಲವರು ಸ್ವಲ್ಪ ಸಮಯ ಬಂದು ನಡೆಯುತ್ತಾ-ನಡೆಯುತ್ತಾ ಈ ಮಾರ್ಗದಲ್ಲಿ ಸುಸ್ತಾಗಿ ಬಿಡುತ್ತಾರೆ. ಸೇವಾಕೇಂದ್ರಗಳಲ್ಲಿ ಇದು ನಡೆಯುತ್ತಾ ಇರುತ್ತದೆ. ಹೇಗೆ ದೈವೀ ಸಂಪ್ರದಾಯವು ಸ್ಥಾಪನೆಯಾಗುತ್ತಿದೆ! ಇದೂ ಸಹ ಅದ್ಭುತವಾಗಿದೆ - ಹೊಸ ಪ್ರಪಂಚದ ಧರ್ಮವು ಹಳೆಯ ಪ್ರಪಂಚದಲ್ಲಿ ಸ್ಥಾಪನೆಯಾಗುತ್ತಿದೆ, ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿಯೇ ಬರುತ್ತದೆ. ತಂದೆಯ ಮೂಲಕ ನೀವು ತಮ್ಮ 84 ಜನ್ಮಗಳನ್ನು ಅರಿತುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು 84 ಜನ್ಮಗಳ ಕಥೆಯನ್ನು ತಿಳಿಸಲು ಬರುತ್ತೇನೆ ಅಂದಮೇಲೆ ಅಂತಿಮದಲ್ಲಿಯೇ ಬಂದು ತಿಳಿಸುತ್ತಾರಲ್ಲವೆ. ದ್ವಾಪರದ ಮಧ್ಯದಲ್ಲಂತೂ ತಿಳಿಸಲು ಸಾಧ್ಯವಿಲ್ಲ, ಇನ್ನೂ ಕೊನೆಯವರು ಜನ್ಮವೇ ಪಡೆದಿಲ್ಲವೆಂದರೆ ಹೇಗೆ ತಿಳಿಸುವರು! ರಾಜಯೋಗದ ಜ್ಞಾನವು ದ್ವಾಪರದಲ್ಲಿ ಸಿಗಲು ಸಾಧ್ಯವಿಲ್ಲ. ಮಹಾಭಾರತ ಯುದ್ಧವೂ ಸಹ ದ್ವಾಪರದಲ್ಲಿ ಆಗಲು ಸಾಧ್ಯವಿಲ್ಲ. ಮಹಾಭಾರತ ಯುದ್ಧದ ನಂತರವೇ ಸತ್ಯಯುಗವು ಸ್ಥಾಪನೆಯಾಗುತ್ತದೆ ಅರ್ಥಾತ್ ದೇವಿ-ದೇವತಾ ಧರ್ಮವು ಸ್ಥಾಪನೆಯಾಗುತ್ತದೆ, ಅದಕ್ಕೆ ಮೊದಲು ಬ್ರಾಹ್ಮಣ ಧರ್ಮವು ಸ್ಥಾಪನೆಯಾಗುತ್ತದೆ ಅಂದಮೇಲೆ ಅವಶ್ಯವಾಗಿ ಬ್ರಹ್ಮನ ಮುಖಾಂತರ ಸ್ಥಾಪನೆ ಮಾಡುತ್ತಾರೆ. ಆದ್ದರಿಂದ ಬ್ರಾಹ್ಮಣರು ಜನ್ಮ ಪಡೆಯುತ್ತಾರಲ್ಲವೆ. ವಿರಾಟ ರೂಪದಲ್ಲಿ ಶಿವನನ್ನು ತೋರಿಸಿಲ್ಲ ಮತ್ತು ಶಿಖೆಗೆ ಸಮಾನರಾದ ಬ್ರಾಹ್ಮಣರನ್ನೂ ತೋರಿಸಿಲ್ಲ. ಪ್ರದರ್ಶನಿಯಲ್ಲಿಯೂ ವಿರಾಟ ರೂಪದ ಚಿತ್ರವನ್ನು ಅವಶ್ಯವಾಗಿ ಇಡಬೇಕಾಗಿದೆ. ಬ್ರಹ್ಮನ ಮೂಲಕ ಮೊದಲು ಬ್ರಾಹ್ಮಣರನ್ನು ರಚಿಸುತ್ತಾರೆ. ಮತ್ತೆ ಆ ಬ್ರಾಹ್ಮಣರನ್ನು ಯಾವಾಗ ಮತ್ತು ಎಲ್ಲಿ ರಚಿಸುತ್ತಾರೆ? ಬ್ರಾಹ್ಮಣರದು ಸಂಗಮವಾಗಿದೆ, ಶೂದ್ರರದು ಕಲಿಯುಗವಾಗಿದೆ. ನೀವೀಗ ತಮ್ಮನ್ನು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ. ಪ್ರಜೆಗಳೆಂದರೆ ಮನುಷ್ಯ ಸೃಷ್ಟಿಯಾಗಿದೆ. ಅಂದಮೇಲೆ ಅವಶ್ಯವಾಗಿ ಬ್ರಾಹ್ಮಣರೇ ಇರುತ್ತಾರೆ. ಕ್ರೈಸ್ಟನ್ನು ಕ್ರೈಸ್ತ ಧರ್ಮದ ಪಿತನೆಂದು ಹೇಳುತ್ತಾರೆ. ಇಲ್ಲಿ ಇವರು ಪ್ರಜಾಪಿತನಾಗಿದ್ದಾರೆ. ಭಗವಂತನು ಬ್ರಹ್ಮಾರವರ ಮೂಲಕ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ, ಕ್ರೈಸ್ಟ್ನ ಮೂಲಕ, ಬೌದ್ಧಿಯರ ಮೂಲಕ ರಚಿಸುತ್ತಾರೆ ಎಂದಲ್ಲ. ಮನುಷ್ಯ ಸೃಷ್ಟಿಯು ಬ್ರಹ್ಮನಿಂದಲೇ ಪ್ರಾರಂಭವಾಗುತ್ತದೆ ಅಂದಮೇಲೆ ಅವಶ್ಯವಾಗಿ ಮೊಟ್ಟ ಮೊದಲು ಬ್ರಾಹ್ಮಣರೇ ರಚಿಸಲ್ಪಡುತ್ತಾರೆ. ಬ್ರಾಹ್ಮಣರನ್ನೇ ನಂತರ ದೇವತೆಗಳನ್ನಾಗಿ ಮಾಡುತ್ತಾರೆ. ವಿರಾಟ ರೂಪವನ್ನು ಭಾರತದಲ್ಲಿಯೇ ತೋರಿಸುತ್ತಾರೆ. ಅನ್ಯ ಧರ್ಮದವರು ವಿರಾಟ ರೂಪವನ್ನು ತೋರಿಸಲು ಸಾಧ್ಯವಿಲ್ಲ. ಈ ಹೊಸ, ಹೊಸ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಹೊಸ ಮಾತುಗಳು ಬರುತ್ತಾ ಇರುತ್ತವೆ ಮತ್ತು ಹಳೆಯ ಮಾತುಗಳೂ ಬರುತ್ತಿರುತ್ತವೆ ಏಕೆಂದರೆ ಹೊಸ-ಹೊಸ ಮಕ್ಕಳಿಗೂ ಸಹ ತಿಳಿದುಕೊಳ್ಳಲು ಕೆಲವು ಹೊಸ ಮಾತುಗಳು, ಕೆಲವು ಹಳೆಯ ಮಾತುಗಳು ಸಿಗಬೇಕಲ್ಲವೆ. ತಂದೆ ಮತ್ತು ಆಸ್ತಿಯ ಬಗ್ಗೆ ಬುದ್ಧಿಯಲ್ಲಿ ಇಲ್ಲವೆಂದರೆ ಇನ್ನೇನು ತಿಳಿದುಕೊಳ್ಳುವರು? ನಿಮಗೆ ತಿಳಿದಿದೆ, ತಂದೆ ಮತ್ತು ಆಸ್ತಿಯ ಬಗ್ಗೆ ತಿಳಿಸಿ ಕೊಡುವುದು ಬಹಳ ಸಹಜವಾಗುತ್ತದೆ. ಎಲ್ಲರಿಗೂ ಒಬ್ಬರೇ ತಂದೆಯಾಗಿದ್ದಾರೆ, ಅವರು ಅವಶ್ಯವಾಗಿ ಬರುತ್ತಾರೆ. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ ಆದರೆ ಶಿವ ಜಯಂತಿ ಎಂದರೇನು ಎಂಬುದು ಭಾರತವಾಸಿಗಳಿಗೆ ತಿಳಿದಿಲ್ಲ. ಬ್ರಹ್ಮಾ-ವಿಷ್ಣು-ಶಂಕರನನ್ನು ಕುರಿತಾಗಲಿ, ಶ್ರೀಕೃಷ್ಣನ ಬಗ್ಗೆಯಾಗಲೀ ಗೊತ್ತಿಲ್ಲ. ಶ್ರೀ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತೆಂಬುದೂ ತಿಳಿದಿಲ್ಲ. ಕ್ರೈಸ್ಟ್ ಬಂದು ಹೋದರು, ಅವರ ಪೋಪರದು ದೊಡ್ಡ ಪಟ್ಟಿಯೇ ಇದೆ ಆದರೆ ಭಾರತವಾಸಿಗಳಿಗೆ ಈ ಲಕ್ಷ್ಮೀ-ನಾರಾಯಣರೂ ಸಹ ಭಾರತದಲ್ಲಿ ರಾಜ್ಯಭಾರ ಮಾಡಿ ಹೋಗಿದ್ದಾರೆಂಬುದೇ ಗೊತ್ತಿಲ್ಲ. ಯಾವುದೆಲ್ಲಾ ಚಿತ್ರಗಳನ್ನು ಮಾಡಿಸುತ್ತಾರೆ, ಪೂಜೆ ಮಾಡುತ್ತಾರೆಯೋ ಅವರ ಪರಿಚಯವನ್ನೇ ತಿಳಿದುಕೊಂಡಿಲ್ಲ. ದೇವತೆಗಳಿಂದ ನಂತರ ಕ್ಷತ್ರಿಯರು ರಾಜ್ಯವನ್ನು ಹೇಗೆ ಪಡೆದುಕೊಂಡರು? ಯುದ್ಧ ಮಾಡಿದರೇ? ರಾಜ್ಯಾಡಳಿತವು ಬದಲಾಗುತ್ತದೆ ಎಂದರೆ ಅವಶ್ಯವಾಗಿ ಯಾರಾದರೂ ವಿಜಯವನ್ನು ಪಡೆದರು ಎಂದರ್ಥ. ಆದರೆ ಅಲ್ಲಿ ಈ ಮಾತೇ ಇರುವುದಿಲ್ಲ. ಅಲ್ಲಂತೂ ಒಬ್ಬರು ಇನ್ನೊಬ್ಬರಿಗೆ ಬಹಳ ಒಳ್ಳೆಯ ರೂಪದಲ್ಲಿ ರಾಜ್ಯವನ್ನು ಕೊಟ್ಟು ಹೋಗುತ್ತಾರೆ. ಮನುಷ್ಯರು ಈಗ ಎಷ್ಟೊಂದು ಅಂಧಕಾರದಲ್ಲಿದ್ದಾರೆ. ನಿಮಗೆ ಎಷ್ಟೊಂದು ಪ್ರಕಾಶತೆಯು ಸಿಗುತ್ತಿದೆ. ಎಲ್ಲಾ ಮಾತುಗಳು ಎಲ್ಲರಿಗೂ ನೆನಪಿರುತ್ತದೆ ಎಂದಲ್ಲ. ಇಲ್ಲದಿದ್ದರೆ ತಂದೆಯು ಏನೆಲ್ಲಾ ಮಾತುಗಳನ್ನು ತಿಳಿಸಿದ್ದಾರೆಯೋ ಅದೆಲ್ಲವನ್ನೂ ಪ್ರದರ್ಶನಿಯಲ್ಲಿ ತಿಳಿಸಬೇಕಿತ್ತು. ಪ್ರದರ್ಶನಿಯಲ್ಲಿ ಒಂದು ದಿನ ಬರುತ್ತಾರೆ, ಇನ್ನೊಂದು ದಿನ ಬರುವುದೇ ಇಲ್ಲ. ತಿಳಿದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದೇ ಅರ್ಥವಾಗುವುದಿಲ್ಲ. ನಮಗೆ ದೇವಿ-ದೇವತಾ ಧರ್ಮವು ಎಲ್ಲಿ ಹೋಯಿತು ಎಂಬುದೇ ಮೊದಲು ತಿಳಿದಿರಲಿಲ್ಲ, ಈಗ ಅರ್ಥವಾಯಿತು ಎಂಬ ಮಾತನ್ನು ಅಭಿಪ್ರಾಯದಲ್ಲಿ ಬರೆಸಿಕೊಳ್ಳಬೇಕು. ಅವರಿಗೆ ಸಂವತ್ಸರವನ್ನೂ ತಿಳಿಸಿರಿ. ಹಿಂದೂ ಧರ್ಮವು ಯಾವಾಗಿನಿಂದ ಆರಂಭವಾಯಿತು? ಪ್ರತಿಯೊಬ್ಬರೂ ಹೇಗೇಗೆ ತಿಳಿಸುತ್ತಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಅಭಿಪ್ರಾಯವನ್ನು ಬರೆಸಿಕೊಳ್ಳುವವರು ಬೇಕು. ನೀವು ಸಿದ್ಧ ಮಾಡಿ ತಿಳಿಸುತ್ತೀರಿ - ಇದು 5000 ವರ್ಷಗಳ ಚಕ್ರವಾಗಿದೆ ಎಂಬುದನ್ನು ಬರೆಯಿರಿ. ಸಂವತ್ಸರ ಇತ್ಯಾದಿಗಳ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಮಾತುಗಳನ್ನು ಯಾವುದಾದರೂ ಶಾಸ್ತ್ರಗಳಲ್ಲಿ ಕೇಳಿದ್ದೀರಾ? ಮತ್ತೆ ನಾವು ಎಲ್ಲಿಂದ ಕಲಿತೆವು? ಅಂದಮೇಲೆ ನಮಗೆ ಕಲಿಸುವವರು ಅವಶ್ಯವಾಗಿ ಭಗವಂತನಾಗಿದ್ದಾರೆ. ಭಗವಂತನಲ್ಲದೆ ಈ ಮಾತುಗಳನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಅವರೂ ಸಹ ಅವಶ್ಯವಾಗಿ ಯಾರದೋ ತನುವಿನಲ್ಲಿ ಬರುತ್ತಾರೆ. ಪರಮಾತ್ಮನು ಜ್ಞಾನಸಾಗರನಾಗಿದ್ದಾರೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆ. ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ಅವರ ಹೆಸರಾಗಿದೆ - ಶಿವ. ಭಕ್ತಿಮಾರ್ಗದಲ್ಲಿ ಅವರಿಗೆ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಕನಿಷ್ಠ ಒಂದುವರೆ ಲಕ್ಷ ಹೆಸರುಗಳನ್ನು ತಮ್ಮ-ತಮ್ಮ ಭಾಷೆಗಳಲ್ಲಿ ಇಡುತ್ತಾರೆ. ಮಕ್ಕಳಿಗೆ ಪ್ರತಿನಿತ್ಯವೂ ಎಷ್ಟೊಂದು ತಿಳಿಸುತ್ತೇನೆ ಆದರೆ ಬಹುಷಃ ಇನ್ನೂ ಶುದ್ಧ ಬುದ್ಧಿ ಆಗಿಲ್ಲ. ಪುರುಷಾರ್ಥ ಮಾಡುತ್ತಾ ಇದ್ದಾಗ ತುಕ್ಕು ಬಿಟ್ಟು ಹೋಗುವುದು. ಇಲ್ಲಿಯವರೆಗೆ ಮಕ್ಕಳು ಸತೋದವರೆಗೂ ವಿರಳ ತಲುಪಿದ್ದಾರೆ. ಅದರಲ್ಲಿಯೂ ಕೆಲವರು ತಮೋ, ಕೆಲವರು ಸತೋಪ್ರಧಾನ, ಸತೋ, ರಜೋ, ತಮೋ ಇದರಲ್ಲಿಯೂ ನಂಬರ್ವಾರ್ ಇದ್ದಾರೆ. ಪ್ರತಿಯೊಬ್ಬರ ಪುರುಷಾರ್ಥವು ಬೇರೆ-ಬೇರೆಯಾಗಿದೆ. ಈ ಸಮಯದಲ್ಲಿ ಮನುಷ್ಯರದು ವಿನಾಶಕಾಲೇ ವಿಪರೀತ ಬುದ್ಧಿಯಾಗಿದೆ. ಕೇವಲ ಪಾಂಡವರದು ಪ್ರೀತಿ ಬುದ್ಧಿಯಾಗಿತ್ತು, ಅವರದು ವಿಜಯವಾಯಿತು. ಅಸುರರು ಮತ್ತು ದೇವತೆಗಳು, ಇಬ್ಬರೂ ಮನುಷ್ಯರೇ ಆಗಿದ್ದಾರೆ. ಅಸುರರದು ಭಯಾನಕ ರೂಪವಿರುತ್ತದೆ ಎಂದಲ್ಲ, ಮನುಷ್ಯರಂತೂ ಯುದ್ಧದಲ್ಲಿ ಬಾಂಬುಗಳು, ಮದ್ದು-ಗುಂಡುಗಳಿಂದ ಬಚಾವ್ ಆಗಲು ಅಂತಹ ಉಡುಪುಗಳನ್ನು ಧರಿಸುತ್ತಾರೆ. ಅವರು ಆಸುರೀ ಸಂಪ್ರದಾಯದವರು, ನೀವು ರಾಮನ ಸಂಪ್ರದಾಯದವರಾಗಿದ್ದೀರಿ ಏಕೆಂದರೆ ನೀವು ಐದು ವಿಕಾರಗಳನ್ನು ಬಿಟ್ಟಿದ್ದೀರಿ. ಪವಿತ್ರರಾಗಿ ನೀವು ಇಡೀ ವಿಶ್ವದ ಮೇಲೆ ರಾಜ್ಯಭಾರ ಮಾಡುತ್ತೀರಿ. ನಿಮ್ಮದು ಯಾರ ಜೊತೆಯೂ ಯುದ್ಧವಿಲ್ಲ. ತಂದೆಯು ಎಷ್ಟೊಂದು ಮಾತುಗಳನ್ನು ತಿಳಿಸುತ್ತಾರೆ. ಕೆಲವರು ಒಂದೆರಡು ತಿಂಗಳವರೆಗೆ ಬಂದು ಬಿಟ್ಟು ಬಿಡುತ್ತಾರೆ. ಅವರ ಅದೃಷ್ಟದಲ್ಲಿಲ್ಲವೆಂದು ತಿಳಿಯಲಾಗುತ್ತದೆ, ಅಂತಹವರು ಸಾಧಾರಣ ಪ್ರಜೆಗಳಲ್ಲಿ ಬರುತ್ತಾರೆ. ಪ್ರಜೆಗಳಂತೂ ಅನೇಕರು ತಯಾರಾಗುವರು, ಈಗಲೂ ನೋಡಿ ಎಷ್ಟೊಂದು ಪ್ರಜೆಗಳಿದ್ದಾರೆ. ಕೆಲವೊಂದು ಕಡೆ ಆಹಾರದ ಕೊರತೆಯಾಗುವ ಕಾರಣ ಮನುಷ್ಯರು ಹಸಿವಿನಿಂದ ಸಾಯುತ್ತಾರೆ, ಮತ್ತೊಂದು ಕಡೆ ಮಳೆಯಾಗದೇ ಇರುವ ಕಾರಣ ಬರಗಾಲವಾಗುತ್ತದೆ. ಇದರಲ್ಲಿ ಸರ್ಕಾರವೇನು ಮಾಡುತ್ತದೆ! ಇವಂತೂ ಪ್ರಾಕೃತಿಕ ವಿಕೋಪಗಳಾಗಿವೆ. ಇನ್ನು ಮುಂದೆ ಬೆಂಕಿ ಮಳೆ ಸುರಿಯುವುದು, ವಿನಾಶವಾಗಲೇಬೇಕಾಗಿದೆ. ನೀವು ಯಾವುದನ್ನು ಸಾಕ್ಷಾತ್ಕಾರದಲ್ಲಿ ನೋಡಿದ್ದೀರೋ ಅದೆಲ್ಲವೂ ಪ್ರತ್ಯಕ್ಷದಲ್ಲಿ ಆಗುವುದು. ಸಾಕ್ಷಾತ್ಕಾರದಲ್ಲಿ ಕೇವಲ ಒಬ್ಬ ಕೃಷ್ಣನ ಮಹಲನ್ನು ನೋಡುತ್ತೀರಿ, ಎಲ್ಲವನ್ನೂ ನೋಡಲು ಸಾಧ್ಯವಿಲ್ಲ. ವಿನಾಶವಾಯಿತು ಎಂಬುದನ್ನು ನೋಡುತ್ತೀರಿ ನಂತರ ಶರೀರ ಬಿಟ್ಟರೆ ಎಲ್ಲವೂ ಮರೆತು ಹೋಗುತ್ತದೆ. ಇಡೀ ಪ್ರಪಂಚವೇ ಸಮಾಪ್ತಿಯಾಗಲಿದೆ ನಂತರ ಪ್ರಪಂಚವೇ ಬದಲಾಗುವುದು, ನಿಮಗೆ ಎಲ್ಲವೂ ಮರೆತು ಹೋಗುವುದು. ಈಗ ನಿಮ್ಮಲ್ಲಿ ಆರಂಭದಿಂದ ಅಂತ್ಯದವರೆಗೆ ಎಲ್ಲಾ ಜ್ಞಾನವಿದೆ, ಮೂಲವತನ, ಸೂಕ್ಷ್ಮವತನದ ಚಕ್ರವು ಹೇಗೆ ಸುತ್ತುತ್ತದೆ ಎಂಬುದೆಲ್ಲಾ ಜ್ಞಾನವನ್ನು ತಂದೆಯು ತಿಳಿಸಿದ್ದಾರೆ. ಯಾರಲ್ಲಿ ಎಷ್ಟು ಹೆಚ್ಚು ಜ್ಞಾನವಿರುವುದೋ ಅಷ್ಟು ಹೆಚ್ಚು ನಶೆಯಿರುತ್ತದೆ. ನಾವೀಗ ಮಾ|| ಜ್ಞಾನಪೂರ್ಣರಾಗಿ ಬಿಟ್ಟೆವು ನಂತರ ವಿನಾಶವಾದಾಗ ನಮ್ಮ ಶರೀರವು ಸಮಾಪ್ತಿ ಆಗುವುದು. ಈ ಜನ್ಮದವರೆಗೇ ಜ್ಞಾನವಿರುತ್ತದೆ, ಅಂದಮೇಲೆ ಬುದ್ಧಿಯಲ್ಲಿ ಇಷ್ಟೊಂದು ನಶೆಯಿರಲಿ - ನಾವು ಈ ಶರೀರವನ್ನು ಬಿಟ್ಟು ಹೋಗಿ ರಾಜಕುಮಾರ-ಕುಮಾರಿಯರಾಗುತ್ತೇವೆ. ಮನುಷ್ಯರಾದರೆ ಓದಿ ತಮ್ಮ-ತಮ್ಮ ಸಂಪಾದನೆ ಮಾಡಿಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ- ನಾನಂತೂ ಯಾವುದೇ ಸಂಪಾದನೆ ಮಾಡುವುದಿಲ್ಲ, ನಾನು ನಿಮಗೆ ಕಲಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ. ನೀವು ಸಂಪಾದನೆ ಮಾಡುತ್ತೀರಿ ಮತ್ತು ಕಳೆದುಕೊಳ್ಳುತ್ತೀರಿ, ನಿಮಗೆ ಇಡೀ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ, ತಂದೆಗೂ ಜ್ಞಾನವಿದೆ. ಪಾತ್ರದನುಸಾರ ಅದನ್ನು ಕುಳಿತು ತಿಳಿಸುತ್ತಾರೆ ಮತ್ತೆ ತಂದೆಯೂ ಸಹ ನಿರ್ವಾಣ ಧಾಮಕ್ಕೆ ಹೊರಟು ಹೋಗುತ್ತಾರೆ. ಎಲ್ಲಾ ಆತ್ಮರೂ ಹೊರಟು ಹೋಗುತ್ತೇವೆ. ನಂತರ ಅಲ್ಲಿ ಯಾರ ಪಾತ್ರವಿರುವುದೋ ಅವರು ರಾಜಧಾನಿಯಲ್ಲಿ ಬರತೊಡಗುತ್ತಾರೆ. ಉಳಿದ ಸಮಯ ಶಾಂತಿಧಾಮದಲ್ಲಿ ಇರುತ್ತಾರೆ. ಮಕ್ಕಳಿಗೆ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಎಷ್ಟೊಂದು ಜ್ಞಾನವು ಸಿಗುತ್ತಿದೆ, ಹೊಸಬರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಕೇವಲ ಜ್ಞಾನವು ಬಹಳ ಚೆನ್ನಾಗಿದೆ ಎಂದಷ್ಟೇ ಹೇಳುತ್ತಾರೆ ನಂತರ ತಮ್ಮ-ತಮ್ಮ ಉದ್ಯೋಗ-ವ್ಯಾಪಾರಗಳಲ್ಲಿ ಹೊರಟು ಹೋಗುತ್ತಾರೆ. ಹೊರಗಡೆ ಹೋಗುತ್ತಿದ್ದಂತೆಯೇ ಮಾಯೆಯು ಮರೆಸಿ ಬಿಡುತ್ತದೆ, ಬುದ್ಧಿಗೆ ಬೀಗ ಹಾಕುತ್ತದೆ. ಕೆಲವು ಮಕ್ಕಳದು ಇಂತಹ ಸ್ಥಿತಿಯೂ ಆಗುತ್ತದೆ, ಪೂರ್ಣ ಧಾರಣೆಯೂ ಆಗುವುದಿಲ್ಲ. ಮೊದಲು ಒಳಗ ಯಾರೇ ಬಂದರೂ ಸಹ ತಿಳಿಸಿರಿ, ಇವರೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಿದ್ದಾರೆ. ಈಗ ಕಲಿಯುಗದ ಅಂತ್ಯವಾಗಿದೆ, ನಂತರ ಸತ್ಯಯುಗವು ಬರುವುದು ಅಂದಾಗ ಬ್ರಹ್ಮನ ಮಕ್ಕಳು ಎಲ್ಲರೂ ಬ್ರಹ್ಮಾಕುಮಾರರಾಗಿದ್ದಾರೆ. ಅವರೇ ನಂತರ ದೇವತೆಗಳಾಗುವರು. ಇಂತಹ ಸೇವಾ ಸಮಾಚಾರವನ್ನು ತಂದೆಗೆ ತಿಳಿಸುತ್ತಾ ಇದ್ದಾಗ ತಂದೆಯೂ ಸಹ ಸಲಹೆ ನೀಡುವರು. ಆದರೆ ಯಾರು ತಂದೆಗೆ ಪೂರ್ಣ ಸಮಾಚಾರ ತಿಳಿಸುವುದಿಲ್ಲ, ಅನೇಕರ ಮೇಲೆ ಗ್ರಹಚಾರವು ಕುಳಿತುಕೊಳ್ಳುತ್ತದೆ. ಈಗೀಗ ನೋಡಿದರೆ ಬಹಳ ಚೆನ್ನಾಗಿ ನಡೆಯುತ್ತಾರೆ, ನಾಳೆ ನೋಡಿದರೆ ಬಹಳ ಕನಿಷ್ಠರಾಗಿ ಬಿಡುತ್ತಾರೆ. ಗ್ರಹಚಾರವು ಇಲ್ಲದಿದ್ದರೆ ಆಶ್ಚರ್ಯವೆನಿಸುವಂತೆ ಏಕೆ ಹೊರಟು ಹೋಗುತ್ತಾರೆ? ಯಾವ ಮಕ್ಕಳು ಪ್ರದರ್ಶನಿಯಲ್ಲಿ ಹೋಗಿ ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ, ಅವರು ತಮ್ಮ ಸಮಯವನ್ನು ಸಫಲ ಮಾಡಿಕೊಳ್ಳುತ್ತಾರೆ. ಬಾಪ್ದಾದಾರವರನ್ನು ಎಂದೂ ಬಿಡಬಾರದು. ತಂದೆಯೂ ಮಕ್ಕಳಿಗೆ ಏನಾದರೂ ಶಿಕ್ಷಣ ಕೊಟ್ಟರೂ ಸಹ ಮತ್ತೆ ಕೂಡಲೇ ಪ್ರೀತಿ ಮಾಡುವರು. ತಂದೆಯ ಹೃದಯದಲ್ಲಿ ಮಕ್ಕಳ ಪ್ರತಿ ಏನೂ ಇರುವುದಿಲ್ಲ. ಕೇವಲ ಶಿಕ್ಷಣ ಕೊಡುವುದಕ್ಕಾಗಿ ಕಲಿಸುತ್ತಾರೆ. |
ಇಲ್ಲಿ ಮಕ್ಕಳಿಗೆ ಟೋಲಿ ತಿನ್ನಿಸಲಾಗುತ್ತದೆ ಏಕೆಂದರೆ ಇವರು ಬೇಹದ್ದಿನ ತಂದೆಯಲ್ಲವೆ. ಲೌಕಿಕ ತಂದೆಯು ಪೇಟೆಯಿಂದ ಬರುತ್ತಾರೆಂದರೆ ಮಕ್ಕಳು ಅವಶ್ಯವಾಗಿ ನೆನಪಿಗೆ ಬರುತ್ತಾರೆ. ಮಕ್ಕಳಿಗಾಗಿ ಏನಾದರೂ ಟೋಲಿಯನ್ನು ತೆಗೆದುಕೊಂಡು ಬರುತ್ತಾರೆ. ಹೊರಗಿನ ಸೇವಾಕೇಂದ್ರದಲ್ಲಿ ಟೋಲಿಯು ಸಿಗುವುದಿಲ್ಲ. ಇಲ್ಲಿ ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ, ಆದ್ದರಿಂದ ಟೋಲಿಯನ್ನು ತಿನ್ನಿಸುತ್ತಾರೆ. ತಂದೆಯು ಎಲ್ಲವನ್ನೂ ಮಕ್ಕಳಿಗೆ ತಿಳಿಸುತ್ತಾರೆ. ದ್ವಾಪರದಿಂದ ಋಷಿ ಮುನಿಗಳು ಯಾರು ಸತೋಪ್ರಧಾನರಾಗಿದ್ದರೋ, ಯಾರ ಬುದ್ಧಿಗೆ ಬೀಗ ಹಾಕಿರಲಿಲ್ಲವೋ ಅವರೂ ಸಹ ಇದನ್ನು ಸತ್ಯವಾಗಿ ಹೇಳುತ್ತಿದ್ದರು - ರಚಯಿತ ಮತ್ತು ರಚನೆಯನ್ನು ನಾವು ತಿಳಿದುಕೊಂಡಿಲ್ಲ ಎಂದು. ಇಂದು ಕಲಿಯುಗದಲ್ಲಿ ಎಲ್ಲರ ಬುದ್ಧಿಗೆ ಬೀಗ ಹಾಕಲ್ಪಟ್ಟಿದೆ ಅಂದಮೇಲೆ ಇವರು ಹೇಗೆ ಅರಿತುಕೊಳ್ಳುವರು! ಶಾಸ್ತ್ರಗಳನ್ನು ಆ ಋಷಿ ಮುನಿಗಳೂ ಓದುತ್ತಿದ್ದರು, ನಿಮಗೆ ತಿಳಿಸುವುದಕ್ಕಾಗಿ ಬಹಳಷ್ಟು ಅಂಶಗಳು ಸಿಗುತ್ತವೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಭಗವಂತನು ನಮಗೆ ಓದಿಸಿ ಭಗವಾನ್-ಭಗವತಿಯನ್ನಾಗಿ ಮಾಡುತ್ತಾರೆ - ಇದೇ ಖುಷಿ ಹಾಗೂ ನಶೆಯಲ್ಲಿ ಇರಬೇಕಾಗಿದೆ. ರಚಯಿತ ಮತ್ತು ರಚನೆಯ ಜ್ಞಾನವನ್ನು ಬುದ್ಧಿಯಲ್ಲಿ ಇಟ್ಟುಕೊಂಡು ಅನ್ಯರಿಗೆ ತಿಳಿಸಬೇಕಾಗಿದೆ. |
2. ಹೇಗೆ ತಂದೆಯು ಯಾವುದೇ ಮಗುವಿನ ಮಾತನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ಅದೇರೀತಿ ಯಾರದೇ ಮಾತನ್ನು ಚಿತ್ತದಲ್ಲಿ ಇಟ್ಟುಕೊಳ್ಳಬಾರದು. |
ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ ಏಕೆಂದರೆ ನೀವೀಗ ಧನಿಕರು ಅರ್ಥಾತ್ ಸನಾಥರಾಗಿದ್ದೀರಿ, ಉಳಿದೆಲ್ಲಾ ಮನುಷ್ಯ ಮಾತ್ರರು ಅನಾಥರಾಗಿದ್ದಾರೆ. ಮಾಲೀಕ ಅಥವಾ ದಣಿ ಎಂದು ಒಬ್ಬ ತಂದೆಗೇ ಹೇಳಲಾಗುತ್ತದೆ. ಮನೆಯಲ್ಲಿ ಯಾರಾದರೂ ಜಗಳವಾಡುತ್ತಾರೆಂದರೆ ನಿಮಗೆ ಯಾರೂ ದಣಿ-ದೋಣಿ ಇಲ್ಲವೆ? ಎಂದು ಕೇಳುತ್ತಾರೆ. ಈಗ ಇಡೀ ಪ್ರಪಂಚದ ಮನುಷ್ಯ ಮಾತ್ರರು ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ಒಬ್ಬರು ಇನ್ನೊಬ್ಬರನ್ನು ಕೊಲೆಯೂ ಮಾಡಿ ಬಿಡುತ್ತಾರೆ. ತಂದೆಯೇ ಬಂದು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ, ಇದರಿಂದಲೇ ಎಲ್ಲರೂ ಆದಿ-ಮಧ್ಯ-ಅಂತ್ಯ ದುಃಖ ಪಡೆಯುತ್ತಾರೆ. ನಾವೀಗ ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆಯುತ್ತಿದ್ದೇವೆಂದು ನೀವು ಮಕ್ಕಳಿಗೆ ತಿಳಿದಿದೆ. ನಮಗೆ ಶಾಂತಿ ಬೇಕೆಂದು ಮನುಷ್ಯರು ಭಲೆ ಹೇಳುತ್ತಾರೆ ಆದರೆ ಶಾಂತಿ ಎಂದರೇನು? ಎಲ್ಲಿಂದ ಸಿಗುತ್ತದೆ? ಕಾಡಿಗೆ ಹೋದರೆ ಶಾಂತಿ ಸಿಗುತ್ತದೆಯೇ? ಸುಖ-ಶಾಂತಿಯನ್ನು ಯಾವಾಗ ಮತ್ತು ಯಾರು ಕೊಡುತ್ತಾರೆ? ತೀರ್ಥ ಯಾತ್ರೆಗಳನ್ನು ಏಕೆ ಮಾಡುತ್ತಾರೆ? ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಕೇವಲ ಭಕ್ತಿ ಮಾಡಿದರೆ ಭಗವಂತ ಸಿಗುವರು ಎಂದು ಕೇಳಿರುತ್ತಾರೆ ಆದರೆ ಭಗವಂತನನ್ನು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಬಂದು ನೀವು ಮಕ್ಕಳಿಗೆ ಸುಖ-ಶಾಂತಿಯನ್ನು ಕೊಡುತ್ತೇನೆ. ಈಗ ಸುಖ-ಶಾಂತಿ-ಸಂಪತ್ತು ಯಾರ ಬಳಿಯೂ ಇಲ್ಲ. ಅದನ್ನು ಕೊಡುವವರನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು ತಿಳಿಸುತ್ತಾರೆ - ದುಃಖಹರ್ತ-ಸುಖಕರ್ತನೆಂದು ನೀವು ಹಾಡುತ್ತೀರಿ. ಗಾಂಧೀಜಿಯೂ ಸಹ ಹೇ ಪತಿತ-ಪಾವನ ಬಂದು ಪಾವನ ಮಾಡಿ ಎಂದು ಕರೆಯುತ್ತಿದ್ದರು. ಪತಿತ-ಪಾವನ ಸೀತಾರಾಂ ಎಂದು ಹಾಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಭಕ್ತಿಯನ್ನೇಕೆ ಮಾಡುತ್ತಾರೆ? ಅದರಿಂದ ಏನು ಸಿಗುವುದು? ಏನೂ ಗೊತ್ತಿಲ್ಲ. ಭಕ್ತಿ ಮಾಡುವುದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ದ್ವಾಪರದಿಂದ ರಾವಣ ರಾಜ್ಯವು ಆರಂಭವಾಗುತ್ತದೆ. ಆದರೆ ರಾವಣನೆಂದರೆ ಯಾರು, ರಾವಣನನ್ನು ಎಲ್ಲಿಯವರೆಗೆ ಸುಡುತ್ತಾ ಇರುತ್ತಾರೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ರಾವಣನ ಜನ್ಮವು ಯಾವಾಗ ಆಯಿತು ಎಂಬುದೂ ತಿಳಿದಿಲ್ಲ. ರಾವಣನ ಪ್ರತಿಮೆ ಮಾಡಿ ಸುಡುತ್ತಾರೆ. ಆತ್ಮವು ಎಂದೂ ಸುಡುವುದಿಲ್ಲ, ಇವೆಲ್ಲಾ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಇಂದಿಗೆ 5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು. ಈ ಲಕ್ಷ್ಮೀ-ನಾರಾಯಣರಿಗೇ ಭಗವಾನ್-ಭಗವತಿ ಎಂದು ಹೇಳುತ್ತಾರೆ ನಂತರ ತ್ರೇತಾಯುಗದಲ್ಲಿ ರಾಮನ ರಾಜ್ಯವಿತ್ತು, ಅವರಿಗೆ ಈ ರಾಜ್ಯವು ಹೇಗೆ ಸಿಕ್ಕಿತು? ನಂತರ ಆ ರಾಜ್ಯವು ಎಲ್ಲಿ ಹೋಯಿತು ಎಂಬುದು ಯಾರಿಗೂ ಗೊತ್ತಿಲ್ಲ ಅರ್ಥಾತ್ ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಈ ಜ್ಞಾನದಿಂದ ಸ್ವರ್ಗದ ಮಾಲೀಕರಾಗುತ್ತೀರಿ. ಶಾಲೆಯಲ್ಲಿ ವಿದ್ಯೆಯಿಂದ ಯಾರಾದರೂ ವಕೀಲರು, ನ್ಯಾಯಾಧೀಶರಾಗಬಹುದೇ ಹೊರತು ಲಕ್ಷ್ಮೀ-ನಾರಾಯಣರಾಗುವುದಿಲ್ಲ ಅಂದಮೇಲೆ ಈ ದೇವಿ-ದೇವತೆಗಳು ಯಾವ ವಿದ್ಯೆಯಿಂದ ಇಂತಹ ಪದವಿ ಪಡೆದರು! ಎಂಬುದು ಯಾರಿಗೂ ತಿಳಿದಿಲ್ಲ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ನಾನು ನಿಮ್ಮನ್ನು ಈ ರೀತಿ ಮಾಡುತ್ತೇನೆಂದು ಹೇಳುವವರು ಮತ್ತ್ಯಾರೂ ಇಲ್ಲ. ನೀವು ಮಕ್ಕಳಿಗೆ ತಿಳಿದಿದೆ - ಈ ಲಕ್ಷ್ಮೀ- ನಾರಾಯಣರ ರಾಜಧಾನಿಯು ಈ ವಿದ್ಯೆಯಿಂದಲೇ ಸ್ಥಾಪನೆಯಾಗಿದೆ. ಪ್ರಪಂಚದವರಿಗೆ ಈ ಮಾತುಗಳು ಗೊತ್ತಿಲ್ಲ. ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ ಅಂದಮೇಲೆ ಲಕ್ಷ್ಮೀ-ನಾರಾಯಣರು ಎಲ್ಲಿ ಹೋದರು ಎಂಬುದು ಅವರಿಗೇನು ಗೊತ್ತಿದೆ? ಭಾರತದಲ್ಲಿಯೇ ಲಕ್ಷ್ಮೀ-ನಾರಾಯಣರ ಬಹಳ ಚಿತ್ರಗಳಿವೆ, ಅನೇಕ ಮಂದಿರಗಳಾಗಿವೆ, ಇದನ್ನೂ ನೋಡುತ್ತಿದ್ದಾರೆ. ಇವರಿಂದ ನಮಗೆ ಧನ ಸಿಗುವುದು ಎಂದು ತಿಳಿದುಕೊಳ್ಳುತ್ತಾರೆ. ಮಹಾಲಕ್ಷ್ಮಿಯನ್ನು ಪ್ರತೀ ದೀಪಾವಳಿಯಂದು ಧನ ಕೇಳುತ್ತಾರೆ ಆದರೆ ಜೊತೆಯಲ್ಲಿ ಅವಶ್ಯವಾಗಿ ನಾರಾಯಣನೂ ಇರುವರು. ದೀಪಾವಳಿಯಂದು ಪೂಜೆ ಮಾಡುತ್ತಾರೆ, ನಂತರ ಅವರ ಅಲ್ಪಕಾಲದ ಸುಖದ ಭಾವನೆಯು ಈಡೇರುತ್ತದೆಯೆಂದರೆ ಲಕ್ಷ್ಮಿಯಿಂದ ಧನ ಸಿಗುತ್ತದೆ ಎಂದು ತಿಳಿಯುತ್ತಾರೆ. ವಾಸ್ತವದಲ್ಲಿ ಲಕ್ಷ್ಮೀ-ನಾರಾಯಣ ಇಬ್ಬರೂ ಇದ್ದಾರೆ. ಲಕ್ಷ್ಮಿ, ಮಹಾಲಕ್ಷ್ಮಿ ಬೇರೆ-ಬೇರೆಯಲ್ಲ. ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ, ತಂದೆಯೇ ತಿಳಿಸುತ್ತಾರೆ. ಈಗಿನ ಮನುಷ್ಯರಂತೂ ಈಶ್ವರನು ಕಲ್ಲು-ಮುಳ್ಳು ಎಲ್ಲದರಲ್ಲಿಯೂ ಇದ್ದಾರೆಂದು ಹೇಳಿ ಬಿಡುತ್ತಾರೆ. ತಂದೆಯು ಹೇಳುತ್ತಾರೆ - ಎಲ್ಲರೂ ಕಲ್ಲು ಬುದ್ಧಿಯವರಾಗಿದ್ದಾರೆ, ಪಾರಸ ಬುದ್ಧಿಯವರು ಸತ್ಯಯುಗದಲ್ಲಿರುತ್ತಾರೆ. ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ವಜ್ರ ವೈಡೂರ್ಯಗಳ ಮಹಲುಗಳಿತ್ತು, ಇದು 5000 ವರ್ಷಗಳ ಮಾತಾಗಿದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ತಂದೆಯು ಹೇಳುತ್ತಾರೆ - ಈ ಭಕ್ತಿಮಾರ್ಗದಿಂದ ಏಣಿಯನ್ನು ಕೆಳಗಿಳಿಯಬೇಕಾಗುತ್ತದೆ. ಡ್ರಾಮಾನುಸಾರ ಯಾವಾಗ ದುರ್ಗತಿಯನ್ನು ಹೊಂದುವರೋ ಆಗ ನಾನು ಬಂದು ಪುನಃ ಹೊಸ ಪ್ರಪಂಚವನ್ನಾಗಿ ಮಾಡುವೆನು. ಈಗ ನೀವು ಮಕ್ಕಳು ಹೊಸ ಪ್ರಪಂಚದ ಮಾಲೀಕರಾಗಲು ರಾಜಯೋಗವನ್ನು ಕಲಿಯುತ್ತಿದ್ದೀರಿ. ನಿಮಗೆ ತಿಳಿದಿದೆ, ಈ ಮಹಾಭಾರತ ಯುದ್ಧದಿಂದ ಹಳೆಯ ಪ್ರಪಂಚದ ವಿನಾಶವಾಗುವುದು. ಈ ನಾಟಕವು ಮಾಡಿ-ಮಾಡಲ್ಪಟ್ಟಿದೆ. ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಅದಕ್ಕೆ 5000 ವರ್ಷಗಳಾಯಿತು. 2500 ವರ್ಷಗಳ ಕಾಲ ಸೂರ್ಯವಂಶಿ, ಚಂದ್ರವಂಶಿಯರ ರಾಜಧಾನಿಯು ನಡೆಯಿತು ನಂತರ ದ್ವಾಪರದಿಂದ ರಾವಣ ರಾಜ್ಯವು ಆರಂಭವಾಯಿತು. ಮನುಷ್ಯರು ಪತಿತರಾಗುತ್ತಲೇ ಹೋಗುತ್ತಾರೆ ಆದರೆ ನಮ್ಮನ್ನು ಪತಿತರನ್ನಾಗಿ ಯಾರು ಮಾಡಿದರು? ನಾವು ಪಾವನರಾಗಿದ್ದೆವು, ನಂತರ ಹೇಗೆ ಪತಿತರಾದೆವು ಎಂಬುದು ಮನುಷ್ಯರಿಗೆ ತಿಳಿದಿಲ್ಲ, ತಂದೆಯೇ ಬಂದು ತಿಳಿಸುತ್ತಾರೆ. ರಾವಣ ರಾಜ್ಯವು ಆರಂಭವಾದಾಗಿನಿಂದ ನೀವು ಪತಿತರಾಗತೊಡಗುತ್ತೀರಿ. ರಾವಣನ ಜನ್ಮವಾಗಿ 2500 ವರ್ಷಗಳಾಯಿತು, ಶಿವ ತಂದೆಯ ಜನ್ಮವಾಗಿ 5000 ವರ್ಷಗಳಾಯಿತು. ತಂದೆಗೆ ರಾಮನೆಂತಲೂ, ಅದಕ್ಕೆ ರಾಮ ರಾಜ್ಯವೆಂತಲೂ, ದ್ವಾಪರ-ಕಲಿಯುಗಕ್ಕೆ ರಾವಣ ರಾಜ್ಯವೆಂತಲೂ ಹೇಳಲಾಗುತ್ತದೆ. ವಾಸ್ತವದಲ್ಲಿ ರಾಮನೆಂದು ಹೇಳಬಾರದು ಏಕೆಂದರೆ ಇತ್ತೀಚಿನ ಮನುಷ್ಯರು ರಾಮ ಚಂದ್ರ, ಕೃಷ್ಣ ಚಂದ್ರ ಎಂದು ಹೆಸರಿಟ್ಟುಕೊಳ್ಳುತ್ತಾರೆ. 5000 ವರ್ಷಗಳ ಮೊದಲು ಭಾರತವು ಚಿನ್ನದ ಪಕ್ಷಿಯಾಗಿತ್ತು, ಅದಕ್ಕೆ ಸ್ವರ್ಣಿಮ ಯುಗವೆಂದು ಹೇಳಲಾಗುತ್ತದೆ. ವೈಕುಂಠವಿತ್ತು ಆದರೆ ಎಲ್ಲಿತ್ತು ಎಂಬುದು ಗೊತ್ತಿಲ್ಲ. ಆತ್ಮವೆಂದರೇನು, ಪರಮಾತ್ಮ ಯಾರು, ಸೃಷ್ಟಿಚಕ್ರವೆಂದರೇನು ಎಂಬುದನ್ನು ತಿಳಿದುಕೊಂಡಿಲ್ಲ. ಆದ್ದರಿಂದಲೇ ಅವರಿಗೆ ತುಚ್ಛ ಬುದ್ಧಿಯವರೆಂದು ಹೇಳಲಾಗುತ್ತದೆ. ಋಷಿ-ಮುನಿಗಳೂ ಸಹ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ಆದ್ದರಿಂದಲೇ ನಮಗೂ ಗೊತ್ತಿಲ್ಲ, ತಂದೆ ಮತ್ತು ಆಸ್ತಿಯನ್ನು ತಿಳಿದುಕೊಂಡಿಲ್ಲ ಎಂದು ಹೇಳುತ್ತಾರೆ. ತಂದೆಯ ಮೂಲಕ ವಿಶ್ವದ ರಾಜ್ಯ ಪದವಿಯ ಯಾವ ಆಸ್ತಿಯು ಸಿಗುತ್ತದೆಯೋ ಅದನ್ನೂ ತಿಳಿದುಕೊಂಡಿಲ್ಲ. ನೀವೀಗ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ ಅಂದಮೇಲೆ ನೀವು ಡಬಲ್ ಆಸ್ತಿಕರಾದಿರಿ. ಶಾಂತಿಯು ಯಾರಿಂದ ಮತ್ತು ಎಲ್ಲಿ ಸಿಗುವುದು ಎಂಬುದೂ ಸಹ ಮನುಷ್ಯರಿಗೆ ಗೊತ್ತಿಲ್ಲ. ಸನ್ಯಾಸಿಗಳ ಬಳಿ ಹೋಗಿ ನಮಗೆ ಶಾಂತಿ ಬೇಕು ಎಂದು ಹೇಳುತ್ತಾರೆ. ನಮಗೆ ಇಲ್ಲಿ ಶಾಂತಿಯು ಎಲ್ಲಿಂದ ಬರಲು ಸಾಧ್ಯ? ಕರ್ಮವನ್ನಂತೂ ಮಾಡಲೇಬೇಕಲ್ಲವೆ. ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿಯೇ ಸಿಗುವುದು, ಒಂದುವೇಳೆ ಮನೆಯಲ್ಲಿ ಒಬ್ಬರು ಅಶಾಂತರಾದರೂ ಸಹ ಇಡೀ ಮನೆಯನ್ನೇ ಅಶಾಂತಗೊಳಿಸುವರು. ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿಯೇ ಸಿಗುವುದು. ಅಲ್ಲಿಂದ ತಂದೆಯು ನಾವಾತ್ಮರನ್ನು ಪಾತ್ರವನ್ನುಅಭಿನಯಿಸಲು ಹೊಸ ಪ್ರಪಂಚಕ್ಕೆ ಕಳುಹಿಸುತ್ತಾರೆ. ತಂದೆಯು ನರಕದಲ್ಲಿ ಕಳುಹಿಸುವರೇ! ಶಾಂತಿಧಾಮದಿಂದ ಸುಖಧಾಮದಲ್ಲಿ ಕಳುಹಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಇದು ಭಗವಂತನ ಪಾಠಶಾಲೆಯಾಗಿದೆ, ಇದು ಯಾವುದೇ ಸತ್ಸಂಗವಲ್ಲ. ಇಲ್ಲಿ ಭಗವಾನುವಾಚವು ಮಕ್ಕಳಪ್ರತಿ ಆಗಿದೆ. ನಿರಾಕಾರ ಶಿವ ತಂದೆಯು ಶರೀರದಲ್ಲಿ ಪ್ರವೇಶ ಮಾಡಿ ನೀವು ಮಕ್ಕಳೊಂದಿಗೆ ಮಾತನಾಡುತ್ತಾರೆ. ಆತ್ಮವು ಶರೀರದಲ್ಲಿ ಇದೆಯಲ್ಲವೆ! ಆತ್ಮಕ್ಕೆ ಕರ್ಮೇಂದ್ರಿಯಗಳು ಸಿಕ್ಕಿದಾಗಲೇ ಮಾತನಾಡುತ್ತದೆ, ಕೇಳಿಸಿಕೊಳ್ಳುತ್ತದೆ, ಆತ್ಮರಿಗೆ ತಂದೆಯೇ ಕುಳಿತು ಓದಿಸುತ್ತಾರೆ. ಹೇ ಪತಿತ-ಪಾವನ, ಹೇ ಸದ್ಗತಿದಾತ, ಮುಕ್ತಿದಾತ, ಮಾರ್ಗದರ್ಶಕನೆಂದು ಪರಮಾತ್ಮನನ್ನು ಕರೆಯುತ್ತಾರೆ ಆದರೆ ಅವರು ಹೇಗೆ ಬಿಡುಗಡೆ ಮಾಡಿ ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆಂದು ತಿಳಿದುಕೊಂಡಿಲ್ಲ. ಕೇವಲ ಕೂಗುತ್ತಾ ಇರುತ್ತಾರೆ. ಈಗ ಆ ತಂದೆಯು ಬಂದಿದ್ದಾರೆ, ನೀವು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾರೆ. ತಂದೆಯು ನಿಮ್ಮನ್ನು ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ ನಂತರ ನೀವು ಸುಖಧಾಮದಲ್ಲಿ ಬಂದು ಬಿಡುತ್ತೀರಿ. ತಂದೆಯು ಒಂದೇ ಬಾರಿ ಬಂದು ಎಲ್ಲರಿಗೆ ಮಾರ್ಗದರ್ಶಕ ಆಗುತ್ತಾರೆ ನಂತರ ಹೊಸ ಪ್ರಪಂಚದಲ್ಲಿ ತಂದೆಯು ಮಾರ್ಗದರ್ಶನ ನೀಡುವುದಿಲ್ಲ. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಪತಿತರಾಗಿರುವ ಕಾರಣ ನಾವು ಮನೆಗೆ ಹೇಗೆ ಹಿಂತಿರುಗಿ ಹೋಗುವುದು ಎಂಬುದನ್ನು ತಿಳಿದುಕೊಂಡಿಲ್ಲ. ಹಾರಲು ಸಾಧ್ಯವಾಗುತ್ತಿಲ್ಲ. ಅಲ್ಲಿಗೆ ಹೋಗುವುದಕ್ಕಾಗಿ ಬಹಳ ಭಕ್ತಿ ಮಾಡುತ್ತಾರೆ ಆದರೆ ನಾವು ಪತಿತರಾಗಿದ್ದೇವೆ ಆದ್ದರಿಂದಲೇ ಹೋಗಲು ಆಗುತ್ತಿಲ್ಲ, ಪತಿತ-ಪಾವನ ತಂದೆಯು ಬಂದು ಪಾವನರನ್ನಾಗಿ ಮಾಡಿದಾಗಲೇ ನಾವು ಹೋಗಲು ಸಾಧ್ಯ ಎಂಬುದನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ನಿಮಗೆ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಎಲ್ಲರೂ ಪತಿತರು ಮತ್ತು ಪಾವನರಾಗಲೇಬೇಕಾಗಿದೆ. ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರಬೇಕಾಗಿದೆ. ಈಗ ಎಷ್ಟೊಂದು ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ದೇವತೆಗಳ ರಾಜ್ಯವಿದ್ದಾಗ ಹೊಸ ವೃಕ್ಷದಲ್ಲಿ ಕೇವಲ 9 ಲಕ್ಷ ಮಂದಿ ಇರುತ್ತಾರೆ. ಮೊದಲಿಗೆ ಕೆಲವೇ ಎಲೆಗಳು ಇರುತ್ತವೆಯಲ್ಲವೇ. ನಂತರ ವೃಕ್ಷವು ದೊಡ್ಡದಾಗುತ್ತಾ ಹೋಗುತ್ತದೆ. ಮೊದಲು ಒಂದೇ ಧರ್ಮದವರಿರುತ್ತಾರೆ. ನೀವೀಗ ತಮ್ಮನ್ನು ನರಕವಾಸಿಗಳೆಂದು ತಿಳಿದುಕೊಳ್ಳುವುದಿಲ್ಲ, ಉಳಿದೆಲ್ಲರೂ ನರಕವಾಸಿಗಳಾಗಿದ್ದಾರೆ ಆದರೆ ತಮ್ಮನ್ನು ತಿಳಿದುಕೊಳ್ಳುವುದಿಲ್ಲ. ಈ ಸಮಯದಲ್ಲಿ ಎಲ್ಲರ ಚಹರೆಯಂತೂ ಮನುಷ್ಯರದಾಗಿದೆ ಆದರೆ ಗುಣಗಳು ಮಂಗನದಾಗಿದೆ. ದೊಡ್ಡ-ದೊಡ್ಡ ರಾಜರೂ ಸಹ ಲಕ್ಷ್ಮೀ-ನಾರಾಯಣರ ಚರಣಗಳಿಗೆ ಬಾಗುತ್ತಾರೆ. ಆದರೆ ಲಕ್ಷ್ಮೀ-ನಾರಾಯಣರು ಪತಿತರನ್ನು ಪಾವನ ಮಾಡುವವರಲ್ಲ ಅಥವಾ ಯಾರಾದರೂ ದುಃಖಿಯಾದಾಗ ಅವರ ಮೇಲೆ ದಯೆ ತೋರಿಸಲು ಅವರೇನೂ ದಯಾಹೃದಯಿಗಳಲ್ಲ. ದಯಾಹೃದಯಿ ತಂದೆಯು ಒಬ್ಬರೇ ಆಗಿದ್ದಾರೆ, ತಂದೆಯೇ ಬಂದು ಕಲ್ಲು ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ. ನೀವೀಗ ದೇವತೆಗಳಾಗುತ್ತಿದ್ದೀರಿ. ಇದು ನರನಿಂದ ನಾರಾಯಣನಾಗುವ ಪಾಠಶಾಲೆಯಾಗಿದೆ, ರಾಜಯೋಗವಾಗಿದೆ. ಗೀತೆಯ ರಾಜಯೋಗವನ್ನು ಯಾರು ಕಲಿಸಿದರು ಎಂಬುದು ಋಷಿ ಮುನಿಗಳಿಗೂ ಗೊತ್ತಿಲ್ಲ. ಗೀತೆಯನ್ನು ಖಂಡನೆ ಮಾಡಿ ಬಿಟ್ಟಿದ್ದಾರೆ. ಕೃಷ್ಣನು ರಾಜಯೋಗವನ್ನು ಕಲಿಸಿದ್ದನೆಂದು ತಿಳಿಯುತ್ತಾರೆ. ಕೃಷ್ಣ ಭಗವಾನುವಾಚ - ಮನ್ಮನಾಭವ ಎಂದು ಹೇಳುತ್ತಾರೆ ಆದರೆ ಕೃಷ್ಣನಂತೂ ಪರಮಾತ್ಮನಲ್ಲ, ಸತ್ಯಯುಗದ ರಾಜಕುಮಾರನಾಗಿದ್ದಾನೆ. ಕೃಷ್ಣನೂ ಸಹ ಸಂಗಮಯುಗದಲ್ಲಿ ರಾಜಯೋಗವನ್ನು ಕಲಿತು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾನೆ ಆದರೆ ಅವನನ್ನೇ ಭಗವಂತನನ್ನಾಗಿ ಮಾಡಿ ಬಿಟ್ಟಿದ್ದಾರೆ. ಅನೇಕರು ಗೀತೆಯನ್ನು ಕೇಳುತ್ತಾರೆ ಆದರೆ ಗೀತೆಯ ಭಗವಂತ ಶಿವನಾಗಿದ್ದಾರೆ, ಕೃಷ್ಣನಲ್ಲ ಎಂಬುದು ಯಾರೊಬ್ಬರಿಗೂ ತಿಳಿದಿಲ್ಲ. ಎಲ್ಲರೂ ಒಂದೇ ಎಂದು ಹೇಳಿ ಬಿಡುತ್ತಾರೆ. ಈ ರೀತಿಯ ಮನುಷ್ಯರೊಂದಿಗೂ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಕೃಷ್ಣನು ಭಗವಂತನಾಗಿದ್ದಾನೆ, ದ್ವಾಪರದಿಂದ ಶಾಸ್ತ್ರಗಳು ರಚನೆಯಾಗಿದೆ ಎಂದು 63 ಜನ್ಮಗಳಿಂದಲೂ ತಿಳಿದುಕೊಳ್ಳುತ್ತಾ ಬಂದಿದ್ದಾರೆ ಅಂದಮೇಲೆ ಅವಶ್ಯವಾಗಿ ಮೊಟ್ಟ ಮೊದಲು ಗೀತೆಯೇ ರಚನೆಯಾಗಿರಬೇಕು. ಈ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಜ್ಞಾನಮಾರ್ಗದ ಶಾಸ್ತ್ರವು ಒಂದೂ ಇಲ್ಲ, ಗೀತೆಯು ನಂಬರ್ವನ್ ಆಗಿದೆ ನಂತರದಲ್ಲಿ ಈ ವೇದ-ಉಪನಿಷತ್ತುಗಳು ಆಗಿವೆ. ಅವೂ ಸಹ ಗೀತೆಯ ಮರಿ ಮಕ್ಕಳಾಗಿವೆ. ಮನುಷ್ಯರು ಇವನ್ನು ಓದುತ್ತಾ-ಓದುತ್ತಾ ಕೆಳಗಿಳಿದು ಬಂದಿದ್ದಾರೆ. ಈಗ 84 ಜನ್ಮಗಳು ಮುಗಿಯಿತು, ಮತ್ತೆ ಮೊದಲ ನಂಬರಿಗೆ ಹೋಗಬೇಕಾಗಿದೆ. ನೀವೀಗ ಪುನಃ ಸತ್ಯಯುಗೀ ಲಕ್ಷ್ಮೀ-ನಾರಾಯಣರಾಗುವುದಕ್ಕಾಗಿ ಓದಲು ಇಲ್ಲಿಗೆ ಬಂದಿದ್ದೀರಿ, ಎಲ್ಲರೂ ಲಕ್ಷ್ಮೀ-ನಾರಾಯಣ ಆಗುವುದಿಲ್ಲ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಆದರೆ ಯಾರು ರಾಜಧಾನಿಯನ್ನು ಸ್ಥಾಪನೆ ಮಾಡಿದರು ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಕಲಿಯುಗದಲ್ಲಿ ಇಷ್ಟೊಂದು ಮನುಷ್ಯರಿದ್ದಾರೆ, ಈಗ ತಿನ್ನುವುದಕ್ಕಾಗಿ ಆಹಾರವೂ ಸಿಗುವುದಿಲ್ಲ ನಂತರ ಸತ್ಯಯುಗದಲ್ಲಿ ಕೇವಲ ಲಕ್ಷ್ಮೀ-ನಾರಾಯಣರ ರಾಜಧಾನಿಯಿರುವುದು. ಇಲ್ಲಿ ನೋಡಿ ಎಷ್ಟೊಂದು ಧರ್ಮಗಳಿವೆ! ಸನ್ಮುಖದಲ್ಲಿ ಮಹಾಭಾರಿ ಮಹಾಭಾರತ ಯುದ್ಧವೂ ನಿಂತಿದೆ. ಆದರೂ ಮನುಷ್ಯರ ಕಣ್ಣುಗಳು ತೆರೆಯುತ್ತಿಲ್ಲ. ಈ ಮಹಾಭಾರಿ ಯುದ್ಧವು ಕಲ್ಪದ ಮೊದಲೂ ಆಗಿತ್ತು, ಅದರ ನಂತರ ಏನಾಯಿತು ಎಂಬುದನ್ನು ತಿಳಿದುಕೊಂಡಿಲ್ಲ. ಇವೆಲ್ಲಾ ಮಾತುಗಳನ್ನು ನೀವು ಬ್ರಾಹ್ಮಣ-ಬ್ರಾಹ್ಮಣಿಯರೇ ತಿಳಿದುಕೊಂಡಿದ್ದೀರಿ. ನಿಮ್ಮನ್ನು ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆ. ಭಗವಂತನು ನಿಮಗೇ ಓದಿಸಿ ಈ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ ಅಂದಮೇಲೆ ಚೆನ್ನಾಗಿ ಓದಬೇಕಾಗಿದೆ. ಕೇವಲ ತಂದೆ ಮತ್ತು ಹೊಸ ಪ್ರಪಂಚವನ್ನು ನೆನಪು ಮಾಡಿರಿ ಆಗ ನೀವು ಹೊಸ ಪ್ರಪಂಚದಲ್ಲಿ ಹೊರಟು ಹೋಗುವಿರಿ. ಒಂದುವೇಳೆ ಚೆನ್ನಾಗಿ ಓದಿ-ಓದಿಸಿದ್ದೇ ಆದರೆ ರಾಜ-ರಾಣಿಯರಾಗಬಹುದು. ಯಾರೆಷ್ಟು ಆತ್ಮಿಕ ಸೇವೆ ಮಾಡುವರೋ ಅಷ್ಟು ಪಡೆಯುವರು. ನೀವು ಆತ್ಮಿಕ ಸಮಾಜ ಸೇವಕರಾಗಿದ್ದೀರಿ, ಇಡೀ ಪ್ರಪಂಚದವರು ದೈಹಿಕ ಸಮಾಜ ಸೇವಕರಾಗಿದ್ದಾರೆ. ನೀವಾತ್ಮರಿಗೇ ತಂದೆಯು ಪ್ರತಿನಿತ್ಯವೂ ಜ್ಞಾನವನ್ನು ತಿಳಿಸುತ್ತಾರೆ, ಆತ್ಮರ ಸೇವೆ ಮಾಡುತ್ತಾರಲ್ಲವೆ. ಇದಕ್ಕೆ ಆತ್ಮರ ಸೇವೆ ಎಂದು ಹೇಳಲಾಗುತ್ತದೆ, ಇದನ್ನು ಆತ್ಮಿಕತಂದೆಯೇ ಕಲಿಸುತ್ತಾರೆ. ಇದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಪಾಠಶಾಲೆಯಾಗಿದೆ. ಅವಶ್ಯವಾಗಿ ದೇವತೆಗಳಾಗುವಿರಿ, ಯಾವಾಗ ನೀವು ಓದಿ ತಯಾರಾಗಿ ಬಿಡುವಿರೋ ಆಗ ವಿನಾಶವು ಆರಂಭವಾಗುವುದು ನಂತರ ನೀವೂ ಸಹ ಹೊರಟು ಹೋಗುತ್ತೀರಿ. ರಾಮನೂ ಹೋದ, ರಾವಣನೂ ಹೋದ.... ಎಂದು ಹೇಳುತ್ತಾರಲ್ಲವೆ. ಕೇವಲ ಕೆಲವರೇ ಉಳಿದುಕೊಳ್ಳುತ್ತಾರೆ. ಅವರೂ ಸಹ ನಂತರ ಅದಲು-ಬದಲಾಗುತ್ತಾ ಇರುತ್ತಾರೆ. ಅನಂತರ ನೀವು ಸ್ವರ್ಗದಲ್ಲಿ ಬರುತ್ತೀರಿ, ನಿಮಗಾಗಿ ಈಗ ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ. ನೀವು ಸ್ವರ್ಗವಾಸಿಗಳಾಗಲು ಓದುತ್ತಿದ್ದೀರಿ. ಇದು ನರಕವಾಗಿದೆ, ನೀವೀಗ ಸಂಗಮದಲ್ಲಿದ್ದೀರಿ. ನೀವೀಗ ಬ್ರಾಹ್ಮಣ-ಬ್ರಾಹ್ಮಣಿಯರಾಗದಿದ್ದರೆ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆಸ್ತಿಯು ಬ್ರಾಹ್ಮಣರಿಗೇ ಸಿಗುತ್ತದೆ, ಯಾರು ಒಬ್ಬ ತಂದೆಯ ವಿನಃ ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡುವುದಿಲ್ಲ. ಉಳಿದವರು ಯಾರು ಅಲ್ಪಸ್ವಲ್ಪ ಕೇಳಿರುವರೋ ಅವರು ಪ್ರಜೆಗಳಲ್ಲಿ ಬರುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಆತ್ಮೀಯ ಸಮಾಜ ಸೇವಕರಾಗಿ ಓದಬೇಕು ಮತ್ತು ಓದಿಸಬೇಕಾಗಿದೆ. ತಂದೆಯ ಜೊತೆ ಜೊತೆಗೆ ಬರಲಿರುವ ಹೊಸ ಪ್ರಪಂಚವನ್ನೂ ನೆನಪು ಮಾಡಬೇಕಾಗಿದೆ. |
2. ತಂದೆಯ ಸಮಾನ ದಯಾಹೃದಯಿಗಳಾಗಿ ಎಲ್ಲರನ್ನೂ ಪಾರಸ ಬುದ್ಧಿಯವರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. |
ಓಂ ಶಾಂತಿ. ಯಾರು ತಂದೆಯ ಜೊತೆಯಿದ್ದಾರೆಯೋ.... ಈಗ ಪ್ರಪಂಚದಲ್ಲಿ ತಂದೆಯರಂತೂ ಅನೇಕರಿದ್ದಾರೆ. ಅವರೆಲ್ಲರಿಗೂ ತಂದೆ ರಚಯಿತನು ಒಬ್ಬರೇ ಆಗಿದ್ದಾರೆ. ಅವರು ಜ್ಞಾನ ಸಾಗರನಾಗಿದ್ದಾರೆ, ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಯಾವಾಗ ಸತ್ಯಯುಗದ ಸ್ಥಾಪನೆಯಾಗುವುದೋ ಆಗಲೇ ಮನುಷ್ಯನ ಸದ್ಗತಿಯೂ ಆಗುತ್ತದೆ. ತಂದೆಯನ್ನೇ ಸದ್ಗತಿದಾತನೆಂದು ಹೇಳಲಾಗುತ್ತದೆ. ಯಾವಾಗ ಸಂಗಮದ ಸಮಯವು ಬರುವುದೋ ಆಗ ಜ್ಞಾನಸಾಗರನು ಬಂದು ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಈ ಸಮಯದಲ್ಲಿ ಎಲ್ಲರದೂ ದುರ್ಗತಿಯಾಗಿದೆ. ಎಲ್ಲರ ದುರ್ಗತಿಯೂ ಸಹ ಒಂದೇರೀತಿ ಆಗುವುದಿಲ್ಲ. ಎಲ್ಲದಕ್ಕಿಂತ ಪ್ರಾಚೀನವಾದುದು ಭಾರತವಾಗಿದೆ. ಭಾರತವಾಸಿಗಳದೇ 84 ಜನ್ಮಗಳೆಂದು ಗಾಯನವಿದೆ ಅಂದಮೇಲೆ ಅವಶ್ಯವಾಗಿ ಯಾರು ಮೊಟ್ಟ ಮೊದಲು ಮನುಷ್ಯರಿರುವರೋ ಅವರೇ 84 ಜನ್ಮಗಳಿಗೆ ಯೋಗ್ಯರಾಗುತ್ತಾರೆ. ದೇವತೆಗಳದು 84 ಜನ್ಮಗಳೆಂದರೆ ಬ್ರಾಹ್ಮಣರದೂ 84 ಜನ್ಮಗಳಾಗಿದೆ. ಮುಖ್ಯವಾದವರನ್ನೇ ಎಣಿಕೆ ಮಾಡಲಾಗುತ್ತದೆ. ತಂದೆಯು ಬ್ರಹ್ಮಾರವರ ಮೂಲಕ ಹೊಸ ಸೃಷ್ಟಿಯನ್ನು ರಚಿಸುವುದಕ್ಕಾಗಿ ಮೊದಲು ಸೂಕ್ಷ್ಮ ಲೋಕವನ್ನು ರಚಿಸುತ್ತಾರೆ ನಂತರ ಹೊಸ ಸೃಷ್ಟಿಯು ಸ್ಥಾಪನೆಯಾಗುತ್ತದೆ. ತ್ರಿಲೋಕಿನಾಥನು ಒಬ್ಬ ತಂದೆಯಾಗಿದ್ದಾರೆ, ಅವರ ಮಕ್ಕಳೂ ಸಹ ತಮ್ಮನ್ನು ತ್ರಿಲೋಕಿನಾಥನೆಂದು ಹೇಳಿಕೊಳ್ಳಬಹುದು. ಇಲ್ಲಂತೂ ಮನುಷ್ಯರ ಹೆಸರನ್ನೂ ಸಹ ತ್ರಿಲೋಕಿನಾಥನೆಂದು ಇಟ್ಟುಕೊಂಡಿದ್ದಾರೆ, ಡಬಲ್ ದೇವತೆಗಳ ಹೆಸರುಗಳನ್ನೂ ಇಟ್ಟುಕೊಂಡಿದ್ದಾರೆ – ಗೌರಿ ಶಂಕರ, ರಾಧಾ ಶ್ಯಾಮ..... ವಾಸ್ತವದಲ್ಲಿ ರಾಧಾಕೃಷ್ಣನು ಬೇರೆ-ಬೇರೆ ರಾಜ್ಯದವರಾಗಿದ್ದರು, ಯಾರು ಒಳ್ಳೆಯ ಮಕ್ಕಳಿದ್ದಾರೆಯೋ ಅವರ ಬುದ್ಧಿಯಲ್ಲಿ ಬಹಳ ಒಳ್ಳೆಯ ಮಾತುಗಳ ಧಾರಣೆಯಿರುತ್ತದೆ. ಹೇಗೆ ಬುದ್ಧಿವಂತ ವೈದ್ಯರ ಬುದ್ಧಿಯಲ್ಲಿ ಅನೇಕ ಔಷಧಿಗಳ ಜ್ಞಾನವಿರುತ್ತದೆ. ಇಲ್ಲಿಯೂ ಸಹ ಪ್ರತಿನಿತ್ಯವೂ ಹೊಸ-ಹೊಸ ಮಾತುಗಳು ಬರುತ್ತಿರುತ್ತವೆ. ಯಾರಿಗೆ ಒಳ್ಳೆಯ ಅಭ್ಯಾಸವಿರುವುದೋ ಅವರು ಹೊಸ ಹೊಸ ಮಾತುಗಳನ್ನು ಧಾರಣೆ ಮಾಡಿಕೊಳ್ಳುತ್ತಾರೆ. ಯಾರು ಧಾರಣೆ ಮಾಡಿಕೊಳ್ಳುವುದಿಲ್ಲವೋ ಅವರಿಗೆ ಮಹಾರಥಿಯೆಂದು ಹೇಳಲಾಗುವುದಿಲ್ಲ. ಎಲ್ಲವೂ ಬುದ್ಧಿಯ ಮೇಲೆ ಆಧಾರಿತವಾಗಿದೆ ಮತ್ತು ಅದೃಷ್ಟದ ಮಾತಾಗಿದೆ. ಇದೂ ಸಹ ಡ್ರಾಮಾ ಆಗಿದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ನಾವಾತ್ಮರು ಶರೀರ ಧಾರಣೆ ಮಾಡಿ ಪಾತ್ರವನ್ನು ಅಭಿನಯಿಸುತ್ತೇವೆಂದು ತಿಳಿದುಕೊಳ್ಳುತ್ತಾರೆ ಆದರೆ ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಲಿಲ್ಲವೆಂದರೆ ಏನೂ ಅರಿತಿಲ್ಲವೆಂದರ್ಥ. ನೀವಂತೂ ತಿಳಿದುಕೊಳ್ಳಬೇಕಾಗಿದೆ. ಅನ್ಯರಿಗೆ ತಂದೆಯ ಪರಿಚಯ ಕೊಡುವುದು ಮಕ್ಕಳ ಕರ್ತವ್ಯವಾಗಿದೆ. ಇಡೀ ಪ್ರಪಂಚಕ್ಕೆ ತಿಳಿಸಬೇಕಾಗಿದೆ, ನಂತರ ನಮಗೆ ತಿಳಿಯಲೇ ಇಲ್ಲವೆಂದು ಯಾರೂ ಹೇಳುವಂತಾಗದಿರಲಿ. ವಿದೇಶದಿಂದಲೂ ಅನೇಕರು ಬರುವರು. ಅವರೆಲ್ಲರಿಗಾಗಿ ಬಾಂಬೆಯಲ್ಲಿ ಪ್ರಬಂಧ ಮಾಡುವರು, ಅವರಂತೂ ಸಮರ್ಥರೂ ಆಗಿದ್ದಾರೆ, ಅವರಬಳಿ ಹಣವು ಬಹಳಷ್ಟಿದೆ. ಶಿವನನ್ನು ತಮ್ಮ ದೊಡ್ಡ ಗುರುವೆಂದು ಒಪ್ಪುತ್ತಾರಲ್ಲವೆ. ಆದ್ದರಿಂದ ತಿಳಿಸಲಾಗಿದೆ - ಈ ಧರ್ಮಪಿತರದು ಸ್ವಲ್ಪ ಪಾತ್ರವಿದೆ, ಆದಿಯಲ್ಲಿ ಮಕ್ಕಳು ಸಾಕ್ಷಾತ್ಕಾರದಲ್ಲಿ ನೋಡಿದ್ದರು - ಕೊನೆಗೆ ಈ ಕ್ರೈಸ್ಟ್, ಇಬ್ರಾಹಿಂ ಮೊದಲಾದವರೆಲ್ಲರೂ ಮಿಲನ ಮಾಡಲು ಬರುತ್ತಾರೆ ಅಂದಮೇಲೆ ಅದಕ್ಕಾಗಿ ಮೈದಾನ ಮಾಡಬೇಕು, ಎಲ್ಲಾ ಪ್ರವಾಸಿಗರು ಬಾಂಬೆಗೆ ಬರುತ್ತಾ ಇರುತ್ತಾರೆ. ಭಾರತವು ಎಲ್ಲರನ್ನೂ ಬಹಳ ಆಕರ್ಷಿಸುತ್ತದೆ. ಮೂಲತಃ ಭಾರತವು ತಂದೆಯ ಜನ್ಮಸ್ಥಾನವಾಗಿದೆ. ಎಲ್ಲರಲ್ಲಿ ಭಗವಂತನು ಇದ್ದಾರೆಂದು ಹೇಳಿರುವ ಕಾರಣ ಬೇಹದ್ದಿನ ತಂದೆಯ ಮಹತ್ವವನ್ನೇ ಮರೆ ಮಾಡಿ ಬಿಟ್ಟಿದ್ದಾರೆ. ನೀವೀಗ ತಿಳಿಸುತ್ತೀರಿ - ಭಾರತವು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ಬಾಕಿ ಎಲ್ಲಾ ಪೈಗಂಬರರು ತಮ್ಮ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ, ಅವರ ಹಿಂದೆ ಮತ್ತೆ ಅವರ ಧರ್ಮದವರೂ ಬರುತ್ತಾರೆ. ಈಗ ಅಂತ್ಯವಾಗಿದೆ, ನಾವು ಹಿಂತಿರುಗಿ ಹೋಗಬೇಕೆಂದು ಪ್ರಯತ್ನ ಪಡುತ್ತಾರೆ ಆದರೆ ಕೇಳಿರಿ - ನಿಮ್ಮನ್ನು ಇಲ್ಲಿಗೆ ಕರೆ ತಂದವರು ಯಾರು? ಕ್ರಿಸ್ತನು ಕ್ರಿಶ್ಚಿಯನ್ ಧರ್ಮದ ಸ್ಥಾಪನೆ ಮಾಡಿದನು ಅಂದಮೇಲೆ ಕ್ರಿಸ್ತನೇ ನಿಮ್ಮನ್ನು ಇಲ್ಲಿಗೆ ಕರೆತಂದನೇ? ಈಗ ಹಿಂತಿರುಗಿ ಹೋಗುವುದಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ, ಎಲ್ಲರೂ ಬರುವುದೇ ಪಾತ್ರವನ್ನು ಅಭಿನಯಿಸಲು. ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಕೊನೆಗೆ ದುಃಖದಲ್ಲಿ ಬರಲೇಬೇಕಾಗಿದೆ ಮತ್ತೆ ದುಃಖದಿಂದ ಬಿಡಿಸಿ ಮತ್ತೆ ಸುಖದಲ್ಲಿ ಕರೆದುಕೊಂಡು ಹೋಗುವುದು ತಂದೆಯದೇ ಕರ್ತವ್ಯವಾಗಿದೆ. ಭಾರತವು ತಂದೆಯ ಜನ್ಮಭೂಮಿಯಾಗಿದೆ, ಇಷ್ಟು ಮಹತ್ವವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಯಾರು ತಿಳಿದುಕೊಂಡಿದ್ದಾರೆಯೋ ಅವರಿಗೆ ನಶೆಯೇರಿದೆ, ಕಲ್ಪ-ಕಲ್ಪವೂ ತಂದೆಯು ಭಾರತದಲ್ಲಿಯೇ ಬರುತ್ತಾರೆ, ಇದನ್ನು ಎಲ್ಲರಿಗೂ ತಿಳಿಸಬೇಕು, ನಿಮಂತ್ರಣ ಕೊಡಬೇಕಾಗಿದೆ. ರಚನೆಯ ಜ್ಞಾನವನ್ನು ಯಾರೂ ತಿಳಿದುಕೊಂಡಿಲ್ಲ ಅಂದಮೇಲೆ ಇಂತಹ ಸೇವಾಧಾರಿಗಳಾಗಿ ತಮ್ಮ ಹೆಸರನ್ನು ಪ್ರಸಿದ್ಧ ಮಾಡಿಕೊಳ್ಳಿ. ಎಲ್ಲಾ ಕಡೆ ಈ ಮೇಳಗಳು ನಡೆಯುವುದು. ಯಾರು ತೀಕ್ಷ್ಣವಾದ ಮಕ್ಕಳಿದ್ದಾರೆಯೋ ಅವರ ಸಹಯೋಗವನ್ನು ಎಲ್ಲರೂ ಕೇಳುತ್ತಿರುತ್ತಾರೆ. ಅವರ ಹೆಸರನ್ನು ಜಪಿಸುತ್ತಾ ಇರುತ್ತಾರೆ. ಮೊದಲನೆಯದಾಗಿ ಶಿವ ತಂದೆಯನ್ನು ಜಪಿಸುತ್ತಾರೆ, ಎರಡನೆಯದಾಗಿ ಬ್ರಹ್ಮಾ ತಂದೆಯನ್ನು, ಮೂರನೆಯದಾಗಿ ಕುಮಾರಿಕಾ (ದಾದಿಯರು), ಗಂಗೆ, ಮನೋಹರ್, ಇವರನ್ನು ಜಪಿಸುತ್ತಾರೆ. ಭಕ್ತಿಮಾರ್ಗದಲ್ಲಿ ಕೈಯಲ್ಲಿ ಮಾಲೆಯನ್ನು ಜಪಿಸುತ್ತಾರೆ, ಈಗ ಬಾಯಿಂದ ಹೆಸರನ್ನು ಜಪಿಸುತ್ತಾರೆ, ಇಂತಹವರು ಬಹಳ ಸೇವಾಧಾರಿಯಾಗಿದ್ದಾರೆ ನಿರಹಂಕಾರಿಯಾಗಿದ್ದಾರೆ ಮಧುರರಾಗಿದ್ದಾರೆ, ದೇಹಾಭಿಮಾನವಿಲ್ಲ ಎಂದು. ಸ್ನೇಹ ಕೊಟ್ಟರೆ ಸ್ನೇಹ ಸಿಗುವುದೆಂದು ಹೇಳುತ್ತಾರಲ್ಲವೆ. ಈಗ ತಂದೆಯು ತಿಳಿಸುತ್ತಾರೆ- ನೀವು ದುಃಖಿಯಾಗಿದ್ದೀರಿ, ನೀವು ನನ್ನನ್ನು ನೆನಪು ಮಾಡುತ್ತೀರೆಂದರೆ ನಾನೂ ಸಹ ಸಹಯೋಗ ನೀಡುತ್ತೇನೆ. ನೀವು ತಿರಸ್ಕಾರ ಮಾಡುತ್ತೀರೆಂದರೆ ಇದು ತಮ್ಮ ಮೇಲೆ ತಿರಸ್ಕಾರ ಮಾಡಿಕೊಂಡಂತೆ, ಪದವಿಯೂ ಸಿಗುವುದಿಲ್ಲ. ಎಷ್ಟು ಅಪಾರವಾದ ಸಿಗುವುದೋ, ಯಾರಿಗಾದರೂ ಲಾಟರಿ ಹೊಡದರೆ ಎಷ್ಟು ಖುಷಿಯಾಗುವುದು! ಅದರಲ್ಲಿಯೂ ಎಷ್ಟೊಂದು ಬಹುಮಾನಗಳು ಸಿಗುತ್ತವೆ ಮತ್ತು ಎರಡನೆ, ಮೂರನೇ ಬಹುಮಾನವೂ ಸಿಗುತ್ತದೆ ಹಾಗೆಯೇ ಇದೂ ಸಹ ಈಶ್ವರೀಯ ಸ್ಪರ್ಧೆಯಾಗಿದೆ, ಜ್ಞಾನ ಮತ್ತು ಯೋಗದ ಸ್ಪರ್ಧೆಯಾಗಿದೆ. ಯಾರು ಇದರಲ್ಲಿ ತೀಕ್ಷ್ಣವಾಗಿ ಮುಂದೆ ಹೋಗುವರೋ ಅವರೇ ಕೊರಳಿನ ಹಾರವಾಗುತ್ತಾರೆ ಮತ್ತು ಸಿಂಹಾಸನದಲ್ಲಿ ಸಮೀಪ ಕುಳಿತುಕೊಳ್ಳುತ್ತಾರೆ. |
ನೀವೆಲ್ಲರೂ ಕರ್ಮಯೋಗಿಗಳಾಗಿದ್ದೀರಿ. ತಮ್ಮ ಮನೆಯನ್ನೂ ಸಂಭಾಲನೆ ಮಾಡಿ ಶಾಲೆಯಲ್ಲಿ ಒಂದು ಗಂಟೆ ಓದಬೇಕಾಗಿದೆ ಮತ್ತೆ ಮನೆಗೆ ಹೋಗಿ ರಿವೈಜ್ ಮಾಡಬೇಕಾಗಿದೆ. ಶಾಲೆಯಲ್ಲಿಯೂ ಇದೇ ರೀತಿ ಮಾಡುತ್ತಾರಲ್ಲವೆ. ಓದಿ ಮತ್ತೆ ಮನೆಗೆ ಹೋಗಿ ರಿವೈಜ್ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಒಂದು ಘಳಿಗೆ ಅರ್ಧ ಘಳಿಗೆ ದಿನದಲ್ಲಿ 8 ಗಂಟೆಗಳಿರುತ್ತವೆ, ಅದರಲ್ಲಿಯೂ ಒಂದು ಗಂಟೆ, ಅರ್ಧ ಗಂಟೆ ಅಥವಾ 15-20 ನಿಮಿಷಗಳಾದರೂ ತರಗತಿಯಲ್ಲಿ ಓದಿ ಧಾರಣೆ ಮಾಡಿಕೊಂಡು ಮತ್ತೆ ತಮ್ಮ ಉದ್ಯೋಗ-ವ್ಯವಹಾರಗಳಲ್ಲಿ ತೊಡಗಿರಿ ಎಂದು ತಂದೆಯು ತಿಳಿಸುತ್ತಾರೆ. ಆದಿಯಲ್ಲಿ ನಿಮ್ಮನ್ನು ತಂದೆಯು ನೆನಪಿನಲ್ಲಿ ಕುಳಿತುಕೊಳ್ಳಿ, ಸ್ವದರ್ಶನ ಚಕ್ರವನ್ನು ತಿರುಗಿಸಿ ಎಂದು ಕೂರಿಸುತ್ತಿದ್ದರಲ್ಲವೆ. ನೆನಪಿನ ಜ್ಞಾನವಂತೂ ಇತ್ತಲ್ಲವೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ, ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ನಿದ್ರೆಯು ಬಂದಾಗ ಮಲಗಿ ಬಿಡಿ. ಇದರಿಂದ ಅಂತ್ಯ ಮತಿ ಸೋ ಗತಿಯಾಗುವುದು. ಮತ್ತೆ ಮುಂಜಾನೆ ಏಳುವಾಗಲೂ ಸಹ ಅದೇ ಮಾತುಗಳು ನೆನಪಿಗೆ ಬರುತ್ತಾ ಇರುವವು, ಇಂತಹ ಅಭ್ಯಾಸ ಮಾಡುತ್ತಾ-ಮಾಡುತ್ತಾ ನೀವು ನಿದ್ರೆಯನ್ನು ಜಯಿಸುವವರಾಗಿ ಬಿಡುತ್ತೀರಿ. ಯಾರು ಮಾಡುವರೋ ಅವರು ಪಡೆಯುವರು. ಮಾಡುವವರದು ಎಲ್ಲರಿಗೂ ಕಂಡು ಬರುತ್ತದೆ, ಚಲನೆಯು ಪ್ರಸಿದ್ಧವಾಗುತ್ತದೆ. ನೋಡಲಾಗುತ್ತದೆ - ಇವರು ವಿಚಾರ ಸಾಗರ ಮಂಥನ ಮಾಡುತ್ತಾರೆಯೇ? ಧಾರಣೆ ಮಾಡುತ್ತಾರೆಯೇ? ಯಾವುದೇ ಲೋಭವಿಲ್ಲವೆ ಎಂದು. ಈ ಶರೀರವು ಹಳೆಯದಾಗಿದೆ. ಇದರ ಬಗ್ಗೆಯೂ ಹೆಚ್ಚು ಆಲೋಚನೆ ಮಾಡಬಾರದು. ಯಾವಾಗ ಜ್ಞಾನ-ಯೋಗದ ಪೂರ್ಣ ಧಾರಣೆ ಇರುವುದೋ ಆಗ ಇದೂ ಸರಿಯಾಗಿರುವುದು. ಧಾರಣೆಯಿಲ್ಲದಿದ್ದರೆ ಶರೀರವು ಇನ್ನೂ ಕುಗ್ಗುತ್ತಾ ಹೋಗುವುದು. ಕುಗ್ಗುತ್ತಾ-ಕುಗ್ಗುತ್ತಾ ಸಂಪೂರ್ಣ ಸ್ಮಶಾನಕ್ಕೆ ಯೋಗ್ಯವಾಗಿ ಬಿಡುವುದು ಮತ್ತೆ ಭವಿಷ್ಯದಲ್ಲಿ ಹೊಸ ಶರೀರ ಸಿಗಬೇಕಾಗಿದೆ ಆದ್ದರಿಂದ ಆತ್ಮವನ್ನು ಪವಿತ್ರ ಮಾಡಿಕೊಳ್ಳಬೇಕಾಗಿದೆ. ಇದಂತೂ ಹಳೆಯ, ಮೈಲಿಗೆ ಶರೀರವಾಗಿದೆ, ಇದಕ್ಕೆ ಎಷ್ಟಾದರೂ ಪೌಡರ್ ಹಚ್ಚಿದರೂ ಸಹ ಇದು ಕಾಸಿನ ಬೆಲೆಯದ್ದಾಗಿದೆ. ಈಗ ನಿಮ್ಮೆಲ್ಲರ ನಿಶ್ಚಿತಾರ್ಥವು ಶಿವ ತಂದೆಯೊಂದಿಗೆ ಆಗಿದೆ, ವಿವಾಹದ ದಿನದಂದು ಹಳೆಯ ವಸ್ತ್ರಗಳನ್ನು ಧರಿಸುತ್ತಾರೆ, ಹಾಗೆಯೇ ಈ ಶರೀರದ ಸ್ಥೂಲ ಶೃಂಗಾರವನ್ನು ಹೆಚ್ಚು ಮಾಡಿಕೊಳ್ಳಬಾರದು. ಜ್ಞಾನ, ಯೋಗದಿಂದ ನಿಮ್ಮನ್ನು ಶೃಂಗರಿಸುತ್ತೀರೆಂದರೆ ದೇವತೆಗಳಾಗಿ ಬಿಡುತ್ತೀರಿ. ಇದು ಜ್ಞಾನ ಮಾನಸ ಸರೋವರವಾಗಿದೆ, ಇದರಲ್ಲಿ ಜ್ಞಾನ ಸ್ನಾನ ಮಾಡುತ್ತಾ ಇರಿ ಆಗ ನೀವು ಸ್ವರ್ಗದ ಪರಿಗಳಾಗಿ ಬಿಡುತ್ತೀರಿ. ಪ್ರಜೆಗಳಿಗೆ ಪರಿಗಳೆಂದು ಹೇಳುವುದಿಲ್ಲ, ಕೃಷ್ಣನು ಪಟ್ಟದ ರಾಣಿಯರನ್ನಾಗಿ ಮಾಡಿಕೊಳ್ಳಲು ಓಡಿಸಿಕೊಂಡು ಹೋದನೆಂದು ಹೇಳುತ್ತಾರೆ. ಓಡಿಸಿಕೊಂಡು ಹೋಗಿ ಪ್ರಜೆಗಳಲ್ಲಿ ಚಂಡಾಲರನ್ನಾಗಿ ಮಾಡಿದನೆಂದು ಹೇಳುವುದಿಲ್ಲ. ನೀವೂ ಸಹ ಇಂತಹ ಪುರುಷಾರ್ಥ ಮಾಡಬೇಕಾಗಿದೆ. ಏನು ಸಿಕ್ಕಿದರೆ ಅದೇ ಸಾಕು ಎಂದಲ್ಲ, ಇದು ಪಾಠಶಾಲೆಯಾಗಿದೆ, ಇಲ್ಲಿ ಮುಖ್ಯವಾದುದು ವಿದ್ಯೆಯಾಗಿದೆ. ಅನೇಕ ಗೀತಾಪಾಠಶಾಲೆಗಳನ್ನು ಮಾಡುತ್ತಾರೆ, ಅಲ್ಲಿ ಕುಳಿತು ಗೀತೆಯನ್ನು ತಿಳಿಸುತ್ತಾರೆ, ಕಂಠಪಾಠ ಮಾಡುತ್ತಾರೆ. ಯಾರಾದರೊಬ್ಬರು ಶ್ಲೋಕವನ್ನು ತೆಗೆದುಕೊಂಡು ಅದನ್ನು ವಿಸ್ತಾರವಾಗಿ ತಿಳಿಸುತ್ತಾರೆ. ಕೆಲವರು ಹಾಗೆಯೇ ಕೇವಲ ಓದುತ್ತಾರೆ, ಇನ್ನೂ ಕೆಲವರು ಒಂದು ಶ್ಲೋಕವನ್ನು ಅರ್ಧ ಮುಕ್ಕಾಲು ಗಂಟೆ ಭಾಷಣ ಮಾಡುತ್ತಾರೆ ಆದರೆ ಅದರಿಂದ ಲಾಭವೇನೂ ಇಲ್ಲ. ಇಲ್ಲಂತೂ ತಂದೆಯು ಓದಿಸುತ್ತಾರೆ, ಗುರಿ-ಧ್ಯೇಯವು ಸ್ಪಷ್ಟವಾಗಿದೆ, ಮತ್ತ್ಯಾವುದೇ ವೇದಶಾಸ್ತ್ರಗಳನ್ನು ಓದುವುದರಲ್ಲಿ ಗುರಿ-ಧ್ಯೇಯವಿಲ್ಲ. ಪುರುಷಾರ್ಥ ಮಾಡುತ್ತಾ ಇರಿ. ಆದರೆ ಸಿಗುವುದೇನು? ಯಾವಾಗ ಬಹಳ ಭಕ್ತಿ ಮಾಡುವರೋ ಆಗ ಭಗವಂತನು ಸಿಗುತ್ತಾರೆ, ಅದು ರಾತ್ರಿಯ ನಂತರ ಅವಶ್ಯವಾಗಿ ದಿನವಾಗುವುದು. ಕಲ್ಪದ ಆಯಸ್ಸನ್ನು ಕೆಲಕೆಲವರು ಕೆಲವೊಂದು ರೀತಿ ತಿಳಿಸುತ್ತಾರೆ. ತಿಳಿಸುವುದಕ್ಕೂ ಬಲ ಬೇಕಲ್ಲವೆ. ಯೋಗಬಲದಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಒಂದುವೇಳೆ ಮಾಡಲು ಸಾಧ್ಯವಾಗದಿದ್ದರೆ ಶಕ್ತಿಯಿಲ್ಲ, ಯೋಗವಿಲ್ಲವೆಂದರ್ಥ. ಯಾರು ಯೋಗಯುಕ್ತ ಮಕ್ಕಳಿದ್ದಾರೆಯೋ ಅವರಿಗೆ ತಂದೆಯೂ ಸಹ ಸಹಯೋಗ ನೀಡುತ್ತಾರೆ. ಡ್ರಾಮಾದಲ್ಲಿ ಏನಿದೆಯೋ ಅದೇ ಪುನರಾವರ್ತನೆಯಾಗುತ್ತದೆ, ಕ್ಷಣ ಕ್ಷಣವು ಕಳೆಯುತ್ತಾ ಹೋಗುತ್ತದೆ. ಟಿಕ್ ಟಿಕ್ ಎಂದು ಕಳೆಯುತ್ತಾ ಹೋಗುತ್ತದೆ. ನಾವು ಶ್ರೀಮತದಿಂದ ಪಾತ್ರದಲ್ಲಿ ಬರುತ್ತೇವೆ, ಶ್ರೀಮತದಂತೆ ನಡೆಯದಿದ್ದರೆ ಶ್ರೇಷ್ಠರಾಗುವುದಿಲ್ಲ. ನಂಬರ್ವಾರಂತೂ ಇದ್ದಾರಲ್ಲವೆ. ನಾವು ಒಂದಾಗಬೇಕೆಂದು ಅವರು ತಿಳಿಯುತ್ತಾರೆ ಆದರೆ ಅರ್ಥವೇ ಗೊತ್ತಿಲ್ಲ. ಒಂದಾಗುವುದು ಎಂದರೆ ಎಲ್ಲರೂ ತಂದೆಯವರಾಗುವುದೇ ಅಥವಾ ಎಲ್ಲರೂ ಸಹೋದರರಾಗುವುದೇ? ಒಂದುವೇಳೆ ಸಹೋದರರೆಂದು ಹೇಳಿದರೂ ಸರಿಯೇ, ಶ್ರೀಮತದಿಂದಲೇ ನಾವು ಒಂದಾಗಲು ಸಾಧ್ಯ. ನೀವೆಲ್ಲರೂ ಒಂದು ಮತದಂತೆ ನಡೆಯುತ್ತೀರಿ. ನಿಮ್ಮ ತಂದೆ, ಶಿಕ್ಷಕ, ಗುರು ಒಬ್ಬರೇ ಆಗಿದ್ದಾರೆ, ಯಾರು ಪೂರ್ಣ ಶ್ರೀಮತದಂತೆ ನಡೆಯುವುದಿಲ್ಲವೋ ಅವರು ಶ್ರೇಷ್ಠರಾಗಲು ಸಾಧ್ಯವಿಲ್ಲ. ಒಂದುವೇಳೆ ನಡೆಯುವುದೇ ಇಲ್ಲವೆಂದರೆ ಅವರು ಸಮಾಪ್ತಿಯಾಗುತ್ತಾರೆ, ಸ್ಪರ್ಧೆಯಲ್ಲಿ ಯಾರು ಬುದ್ಧಿವಂತ ಯೋಗ್ಯರಾಗಿರುವರೋ ಅವರನ್ನೇ ಇಡುತ್ತಾರೆ, ದೊಡ್ಡ ಸ್ಪರ್ಧೆಯಲ್ಲಿ ಒಳ್ಳೊಳ್ಳೆಯ ಕುದುರೆಗಳನ್ನೇ ಬಿಡುತ್ತಾರೆ ಏಕೆಂದರೆ ದೊಡ್ಡ ಲಾಟರಿಯನ್ನು ಇಡುತ್ತಾರೆ. ಇದೂ ಸಹ ಶರೀರರೂಪಿ ಅಶ್ವದ ಸ್ಪರ್ಧೆಯಾಗಿದೆ. ಹುಸೇನನ ಕುದುರೆಯನ್ನು ತೋರಿಸುತ್ತಾರೆ. ಹಿಂಸೆಯು ಎರಡು ಪ್ರಕಾರವಾಗಿರುತ್ತದೆ, ನಂಬರ್ವನ್ ಹಿಂಸೆಯು ಕಾಮ ಕಟಾರಿಯಾಗಿದೆ, ಇದರಿಂದಲೇ ಅರ್ಧ ಕಲ್ಪದಿಂದ ತನ್ನನ್ನು ಮತ್ತು ಅನ್ಯರನ್ನೂ ಕೊಲೆ ಮಾಡಿಕೊಳ್ಳುತ್ತಾ ಬಂದರು. ಈ ಹಿಂಸೆಯನ್ನು ಯಾರೂ ತಿಳಿದುಕೊಂಡಿಲ್ಲ. ಸನ್ಯಾಸಿಗಳೂ ಸಹ ಈ ರೀತಿ ತಿಳಿದುಕೊಳ್ಳುವುದಿಲ್ಲ, ಕೇವಲ ಇದು ವಿಕಾರವೆಂದು ಹೇಳಿ ಬಿಡುತ್ತಾರೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಕಾಮವು ಮಹಾಶತ್ರುವಾಗಿದೆ, ಆದಿ-ಮಧ್ಯ-ಅಂತ್ಯ ದುಃಖ ಕೊಡುವಂತದ್ದಾಗಿದೆ, ಇದನ್ನೂ ಸಿದ್ಧ ಮಾಡಿ ತಿಳಿಸಬೇಕಾಗಿದೆ - ನಮ್ಮದು ಪ್ರವೃತ್ತಿ ಮಾರ್ಗ ರಾಜಯೋಗವಾಗಿದೆ, ನಿಮ್ಮದು ಹಠಯೋಗವಾಗಿದೆ. ನೀವು ಶಂಕರಾಚಾರ್ಯರಿಂದ ಹಠಯೋಗವನ್ನು ಕಲಿಯುತ್ತೀರಿ, ನಾವು ಶಿವಾಚಾರ್ಯರಿಂದ ರಾಜಯೋಗವನ್ನು ಕಲಿಯುತ್ತೇವೆ. ಮುಂದೆ ಹೋದಂತೆ ನಿಮ್ಮದು ಖಂಡಿತ ಪ್ರತ್ಯಕ್ಷತೆಯಾಗುವುದು. ಕೆಲವರು ಪ್ರಶ್ನೆ ಕೇಳುತ್ತಾರೆ. ದೇವತೆಗಳದು 5000 ವರ್ಷಗಳಲ್ಲಿ 84 ಜನ್ಮಗಳಾಯಿತು, ಅಂದಮೇಲೆ ಕ್ರಿಶ್ಚಿಯನ್ನರದು ಎಷ್ಟಾಯಿತು? ಕ್ರಿಸ್ತನಿಗೆ 2000 ವರ್ಷಗಳಾಯಿತು, ಈಗ ಲೆಕ್ಕ ಮಾಡಿ, ಅವರದು ಅಂದಾಜು ಎಷ್ಟು ಜನ್ಮಗಳಿರಬಹುದು? 30 ಅಥವಾ 32. ಇದಂತೂ ಸ್ಪಷ್ಟವಾಗಿದೆ. ಯಾರು ಬಹಳ ಸುಖವನ್ನು ನೋಡುತ್ತಾರೆಯೋ ಅವರು ಬಹಳ ದುಃಖವನ್ನೂ ನೋಡುತ್ತಾರೆ. ಅನ್ಯ ಧರ್ಮದವರಿಗೆ ಸುಖವೂ ಕಡಿಮೆ, ದುಃಖವೂ ಕಡಿಮೆ ಸಿಗುತ್ತದೆ, ಅಂದಾಜು ಲೆಕ್ಕವನ್ನು ತೆಗೆಯಬೇಕಾಗಿದೆ. ಯಾರು ಮುಖ್ಯ ಧರ್ಮಪಿತರಿದ್ದಾರೆಯೋ ಅವರ ಜನ್ಮಗಳನ್ನು ತೆಗೆಯಿರಿ. ಯಾರು ಕೊನೆಯಲ್ಲಿ ಬರುತ್ತಾರೆಯೋ ಅವರದು ಕೆಲವೇ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಬುದ್ಧಿ, ಇಬ್ರಾಹಿಂನ ಲೆಕ್ಕವನ್ನು ತೆಗೆಯಬಹುದು. ಭಲೆ ಅವರದು ಒಂದೆರಡು ಜನ್ಮಗಳ ಅಂತರವಾಗಬಹುದು. ನಿಖರವಾಗಿ ತಿಳಿಸಲು ಸಾಧ್ಯವಿಲ್ಲ. ಅಂದಾಜಿನಲ್ಲಿ ತಿಳಿಸಬಹುದು, ಇವೆಲ್ಲವೂ ವಿಚಾರ ಸಾಗರ ಮಂಥನ ಮಾಡುವ ಮಾತುಗಳಾಗಿವೆ. ಯಾರಾದರೂ ಕೇಳಿದರೆ ಏನು ತಿಳಿಸುವಿರಿ? ಮೊದಲು ತಂದೆಯನ್ನು ನೆನಪು ಮಾಡಿರಿ ಏಕೆಂದರೆ ತಂದೆಯಿಂದ ಆಸ್ತಿ ತೆಗೆದುಕೊಳ್ಳಬೇಕೆಂದು ತಿಳಿಸಿರಿ. ಎಷ್ಟು ಜನ್ಮಗಳನ್ನು ತೆಗೆದುಕೊಂಡಿರುವರೋ ಅಷ್ಟೇ ತೆಗೆದುಕೊಳ್ಳುವರು. ಮೊದಲು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ ಎಂದು ಚೆನ್ನಾಗಿ ತಿಳಿಸಬೇಕಾಗಿದೆ. ಇದು ಪರಿಶ್ರಮದ ಕೆಲಸವಾಗಿದೆ. |
ಮಕ್ಕಳು ಬಾಂಬೆಯಲ್ಲಿ ಬಹಳ ಪರಿಶ್ರಮ ಪಡುತ್ತಿದ್ದಾರೆ ಏಕೆಂದರೆ ಅವರು ಬಹಳ ಸಫಲರಾಗಬೇಕಾಗಿದೆ, ಇದರಲ್ಲಿ ಬುದ್ಧಿಯೂ ಬೇಕು, ತಂದೆಯ ಹಣದೊಂದಿಗೆ ಬಹಳ ಪ್ರೀತಿಯೂ ಬೇಕು. ಕೆಲವರಂತೂ ಹಣ ತೆಗೆದುಕೊಳ್ಳುವುದಿಲ್ಲ, ಅರೆ! ಜ್ಞಾನರತ್ನಗಳನ್ನು ತೆಗೆದುಕೊಳ್ಳಿ, ಧಾರಣೆ ಮಾಡಿಕೊಳ್ಳಿ ಎಂದು ಹೇಳಿದರೆ ನಾವೇನು ಮಾಡುವುದು, ನಮಗೆ ಅರ್ಥವಾಗುವುದಿಲ್ಲವೆಂದು ಹೇಳುತ್ತಾರೆ. ತಿಳಿದುಕೊಳ್ಳದಿದ್ದರೆ ಅದು ನಿಮ್ಮಿಷ್ಟ. ಒಳ್ಳೆಯದು. |
Subsets and Splits
No community queries yet
The top public SQL queries from the community will appear here once available.